ಪುಟಗಳು

ಮಂಗಳವಾರ, ಆಗಸ್ಟ್ 1, 2017

ರೋಹಿಂಗ್ಯಾಗಳೇಕೆ ಬೇಕು? ನಾವು ಮಂಗ್ಯಾಗಳಾಗದಿದ್ದರೆ ಸಾಕು!

ರೋಹಿಂಗ್ಯಾಗಳೇಕೆ ಬೇಕು? ನಾವು ಮಂಗ್ಯಾಗಳಾಗದಿದ್ದರೆ ಸಾಕು!


             ಬರ್ಮಾದಿಂದ ಭಾರತದೊಳಕ್ಕೆ ನುಸುಳುವ ನಿರಾಶ್ರಿತ ರೋಹಿಂಗ್ಯಾಗಳು ನೇರವಾಗಿ ಕಾಲಿಡುವುದು ಕಾಶ್ಮೀರಕ್ಕೆ! ಎಲ್ಲಿಯ ಬ್ರಹ್ಮದೇಶ(ಬರ್ಮಾ) ಎಲ್ಲಿಯ ಕಾಶ್ಮೀರ? ಬರ್ಮಾದ ಜೊತೆ ಗಡಿಯನ್ನು ಹಂಚಿಕೊಂಡಿರುವುದು ಮಿಝೋರಾಂ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶಗಳೆಂಬ ಭಾರತದ ಈಶಾನ್ಯ ರಾಜ್ಯಗಳು. ಬರ್ಮಾದಿಂದ ಮೂರುಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರದಲ್ಲಿರುವ ಕಾಶ್ಮೀರಕ್ಕೇ ಈ ರೋಹಿಂಗ್ಯಾಗಳು ಬಂದಿಳಿಯಬೇಕಾದರೆ ಅದರ ಹಿಂದಿನ ಮರ್ಮವಾದರೂ ಏನು? ಅರೇ... ಕಾಶ್ಮೀರಿ ಪಂಡಿತರ ಕಗ್ಗೊಲೆ, ಅತ್ಯಾಚಾರ; ಪ್ರತ್ಯೇಕತಾವಾದ, ಸೇನೆಯ ಮೇಲೆ ಕಲ್ಲು ತೂರಾಟ; ಭಯೋತ್ಪಾದನೆ, ಪಾಕಿಸ್ತಾನ ಪರ ಘೋಷಣೆಗಳಿಂದಲೇ ನರಕವಾಗಿದ್ದ ಧರೆಯ ಮೇಲಿನ ಸ್ವರ್ಗದಲ್ಲಿ ಇದೇನಿದು ರೋಹಿಂಗ್ಯಾಗಳೆಂಬ ಹೊಸ ಸುದ್ದಿ? ಅಷ್ಟಕ್ಕೂ ಈ ರೋಹಿಂಗ್ಯಾಗಳೆಂದರೆ ಯಾರು? ಇದೆಲ್ಲಾ ತಿಳಿಯಬೇಕಾದರೆ ಗತಕಾಲಕ್ಕೋಡಬೇಕು.

           ಬಿಬಿಸಿಯಂತಹ ಸುದ್ದಿ ಮಾಧ್ಯಮಗಳು, ಇಸ್ಲಾಮಿನ ಪಾದ ನೆಕ್ಕುವ ಹುಸಿ ಜಾತ್ಯಾತೀತವಾದಿಗಳು ಹಾಗೂ ಅನ್ಯ ಭಾಗದ ಮುಸ್ಲಿಮರು ಬೊಬ್ಬಿರಿಯುವಂತೆ ರೋಹಿಂಗ್ಯಾಗಳು ಬರ್ಮಾದ ಮೂಲನಿವಾಸಿಗಳೂ ಅಲ್ಲ, ನಶಿಸುತ್ತಿರುವ ಬರ್ಮಾದ ಬುಡಕಟ್ಟು ಜನಾಂಗವೂ ಅಲ್ಲ. ಅವರೆಲ್ಲಾ ಹೊರಗಿನಿಂದ ವಲಸೆ ಬಂದವರು. ಬರ್ಮಾದ ಬೌದ್ಧರ ಈ ಮಾತುಗಳಲ್ಲಿ ಸುಳ್ಳೇನೂ ಇಲ್ಲ. 15ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ 24 ವರ್ಷ ಬಂಗಾಳದಲ್ಲಿ ಕಳೆದು ಬಳಿಕ ಮತ್ತೆ ರಾಜ್ಯ ಪಡೆದಾಗ ಆತನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ತೆರಳಿದರು. ಇದು ಆ ಬೌದ್ಧರ ನೆಲಕ್ಕೆ ಜಿಹಾದಿಗಳ ಮೊದಲ ಮುಕ್ತ ಪ್ರವೇಶ! ಬಂಗಾಳಕೊಲ್ಲಿಯ ಪೂರ್ವಭಾಗದ ರಖಾಯಿಂಗ್ ಎನ್ನುವ ಪ್ರದೇಶ ಐತಿಹಾಸಿಕ ಬೌದ್ಧ ನೆಲ. ಹೇರಳ ಪ್ರಾಕೃತಿಕ ಸಂಪನ್ಮೂಲಗಳಿಂದ ಕೂಡಿದ್ದ, ಆಯಕಟ್ಟಿನ ವ್ಯಾಪಾರ ಸ್ಥಳವಾಗಿದ್ದ ಅಖಂಡ ಭಾರತದ ಈ ಭೂಭಾಗ ಬ್ರಿಟಿಷರ ಕಣ್ಣು ಕುಕ್ಕಿತು. ಬ್ರಿಟೀಷ್ ಆಕ್ರಮಣವಾದೊಡನೆ ಕೇವಲ ರಖಾಯಿಂಗ್'ನ ಹೆಸರು ಅರಖಾನ್ ಎಂದು ಬದಲಾದುದು ಮಾತ್ರವಲ್ಲ, ಬರ್ಮಾದ ಸಂಪದ್ಭರಿತ ಅರಣ್ಯಗಳಲ್ಲಿದ್ದ ಬೆಲೆಬಾಳುವ ಮರಗಳು ಇದೇ ಅರಖಾನ್ ಮುಖಾಂತರ ಚಿತ್ತಗಾಂಗ್ ಸೇರಿ ಇಂಗ್ಲೆಂಡಿಗೆ ರವಾನೆಯಾಗಲಾರಂಭಿಸಿತು. ಬ್ರಿಟಿಷರ ಈ "ನಾಟಾ" ನಾಟಕಕ್ಕೆ ಮಾತ್ರವಲ್ಲದೆ ಬರ್ಮಾದ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದವರು ಬಂಗಾಳದ ಕೂಲಿ ಕಾರ್ಮಿಕರೇ! ಇವರಲ್ಲಿ ಚಿತ್ತಗಾಂಗಿನ ಮುಸಲ್ಮಾನರ ಸಂಖ್ಯೆಯೇ ಹೆಚ್ಚು. ಕೆಲವರು ಉದ್ಯೋಗದ ಅನುಕೂಲಕ್ಕಾಗಿ ಅಲ್ಲೇ ನೆಲೆ ನಿಂತರು. ಬೆರಳು ಕೊಟ್ಟರೆ ಹಸ್ತ ನುಂಗುವ ಬುದ್ಧಿಯ ಮುಸಲ್ಮಾನರು ಕ್ರಮೇಣ ಹಿಂಡುಹಿಂಡಾಗಿ ಬರ್ಮಾಕ್ಕೆ ವಲಸೆ ಹೋಗತೊಡಗಿದರು. ಈ ವಲಸೆಯ ಪ್ರಮಾಣ ಎಷ್ಟೊಂದು ತೀವ್ರವಾಗಿತ್ತೆಂದರೆ 1940ರ ದಶಕದಲ್ಲಿ “ದಿ ಸ್ಟೇಟ್ಸ್ ಮೆನ್” ಚಿತ್ತಗಾಂಗಿನ ಹತ್ತನೇ ಒಂದರಷ್ಟು ಜನ ಪ್ರತಿವರ್ಷ ಅರೆಖಾನ್'ಗೆ ವಲಸೆ ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿತ್ತು. ಬೌದ್ಧ ಎಷ್ಟೆಂದರೂ ಹಿಂದೂ ಧರ್ಮದ ಒಂದು ಪಂಥವೇ. ಬೌದ್ಧರಾದವರಿಗೆ ಹಿಂದೂ ಭೋಳೆ ಸ್ವಭಾವ ಬಿಟ್ಟು ಹೋಗಲು ಹೇಗೆ ಸಾಧ್ಯ. ಸಹಜವಾಗಿಯೇ ಅವರು ಸಹಾನುಭೂತಿಯಿಂದ ಮುಸ್ಲಿಮರ ಕಾಪಟ್ಯವನ್ನು ಅರಿಯದೇ, ಭವಿಷ್ಯದ ಕರಾಳತೆಯನ್ನು ಅರ್ಥೈಸದೇ ಬಂದವರಿಗೆ ಅನ್ನ ಕೊಟ್ಟರು, ಉಳಿವಿಗೆ ಜಾಗ ಕೊಟ್ಟರು. ಹೀಗೆ ಅಂದು ವಲಸೆ ಹೋದವರೇ ಈ ರೋಹಿಂಗ್ಯಾ ಮುಸಲ್ಮಾನರು.

           ಅಹಿಂಸೆಯನ್ನು ಪ್ರತಿಪಾದಿಸುವ ಜನರ ನಾಡೇನೋ ಆಶ್ರಯ ಕೊಟ್ಟಿತು. ಆದರೆ ಈ ಜನ ಅದನ್ನು ಉಳಿಸಿಕೊಳ್ಳಲಿಲ್ಲ. ಉಳಿಸಿಕೊಳ್ಳುವ ಮನಸ್ಸಿದ್ದರೂ ಅವರಿಗಂಟಿರುವ ಮತ ಬಿಡಬೇಕಲ್ಲ? ಕ್ರಮೇಣ ಅಲ್ಲಿ ಮಸೀದಿಗಳು ತಲೆಯೆತ್ತಲಾರಂಭಿಸಿದವು. ಎಷ್ಟೆಂದರೆ ನಲವತ್ತು ಜನರ ಸಣ್ಣ ಗುಂಪಿಗೂ ಒಂದು ಮಸೀದಿ! ಅಲ್ಲಿಂದ ದಿನ ಬೆಳಗಾದರೆ ಕಾಫಿರರನ್ನು ಕೊಲ್ಲಿರಿ ಎಂಬ ಸುಪ್ರಭಾತ ಕೇಳಿ ಬರಲಾರಂಭಿಸಿತು. ಯಾವ ಮಾಲಿಕ ಕೆಲಸ ಕೊಟ್ಟನೋ ಆತನ ಜಾಗವನ್ನೇ ಈ ರೋಹಿಂಗ್ಯಾಗಳು ತಮ್ಮದಾಗಿಸಿಕೊಂಡರು. ವಿರೋಧಿಸಿದ ಮಾಲಿಕನನ್ನು ಹತ್ಯೆಗೈದರು. ಆತನ ಪರಿವಾರದ ಹೆಂಗಳೆಯರ ಮೇಲೆ ಅತ್ಯಾಚಾರಗೈದರು. ಆತನ ಮಗಳನ್ನು ಹೊತ್ತೊಯ್ದರು. ಮುಸ್ಲಿಂ ರಾಷ್ಟ್ರೀಯವಾದ ಮೊಳೆಯಲಾರಂಭಿಸಿತು. ಜಿನ್ನಾನ ದ್ವಿರಾಷ್ಟ್ರವಾದ ಅವರಿಗೆ ಪ್ರಿಯವಾಯಿತು. ಭಾರತದ ವಿಭಜನೆಯ ಸಮಯದಲ್ಲಿ ಆದ ಇತಿಹಾಸದ ಬಹು ದೊಡ್ಡ ಭಯಾನಕ ಕಗ್ಗೊಲೆಯಲ್ಲೇ ಪಾತ್ರವಹಿಸಿ ಹಿಂದೂಗಳ ಜೀವ ತಿಂದರು. ಬರ್ಮಾ ಸ್ವಾತಂತ್ರ್ಯ ಹೊಂದುವ ಹೊಸ್ತಿಲಲ್ಲಿ ಇದೇ ರೋಹಿಂಗ್ಯಾಗಳು ಅರಖಾನ್ ಪ್ರಾಂತ್ಯವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಬೇಡಿಕೆಯಿಟ್ಟು ದಂಗೆಯನ್ನಾರಂಭಿಸಿದರು.  ಬರ್ಮಾ ಸರ್ಕಾರ ಒಲ್ಲೆ ಎಂದಾಗ ಜಿನ್ನಾನ ಜೊತೆ ಮಾತುಕತೆ ನಡೆಸಿ ಬರ್ಮಾ ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ಈ ಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಖಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದಿಂದ ಮತ್ತಷ್ಟು ಮುಸ್ಲಿಮರನ್ನು ಕರೆತರಲಾರಂಭಿಸಿದರು. ಹೀಗೆ ಆಶ್ರಯ ಬೇಡಿಕೊಂಡು ಹೋದವರು ಪ್ರತ್ಯೇಕ ದೇಶವನ್ನೇ ಕೇಳಲಾರಂಭಿಸಿದರು. ಪ್ರತ್ಯೇಕ ರೋಹಿಂಗ್ಯಾ ಚಳವಳಿಯಲ್ಲಿದ್ದ ಕೆಲವು ಯುವಕರು ತಾಲೀಬಾನಿನಲ್ಲೂ ಕಂಡುಬಂದರು. ಮುಂದೆ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಉಗ್ರರ ಜೊತೆ ನಂಟಿರುವುದೂ ಹೊರಬಂತು.

              ಯಾವಾಗ ರೋಹಿಂಗ್ಯಾಗಳು ಪ್ರತ್ಯೇಕ ದೇಶ ಕೇಳಲಾರಂಭಿಸಿದರೋ ಅಹಿಂಸಾವಾದಿ ಬೌದ್ಧರೂ ಎಚ್ಚೆತ್ತರು. ರಖಾಯಿಂಗ್ ಪ್ರಾಂತ್ಯದಿಂದ ಮೂಲನಿವಾಸಿಗಳಾದ ತಮ್ಮವರನ್ನು ರೋಹಿಂಗ್ಯಾಗಳು ಒದ್ದೋಡಿಸುತ್ತಿರುವ ಸುದ್ದಿಯನ್ನು ಪದೇ ಪದೇ ಕೇಳಿ ಬರ್ಮೀಯರು ರೊಚ್ಚಿಗೆದ್ದರು. ರೋಹಿಂಗ್ಯಾಗಳ ಕ್ರೌರ್ಯದ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಬರ್ಮಾ ಸರಕಾರ ಸೇನೆಯನ್ನು ಬಳಸಿಕೊಂಡು ರೋಹಿಂಗ್ಯಾಗಳನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ಅದು ರಕ್ತಬೀಜಾಸುರನ ವಂಶವಿರಬೇಕು. ಹಲವು ಬಾರಿ ಸೇನಾ ಕಾರ್ಯಾಚರಣೆ ನಡೆದರೂ ರೋಹಿಂಗ್ಯಾ ಪಡೆ ಮತ್ತೆ ಮತ್ತೆ ಹುಟ್ಟುತ್ತಲೇ ಬೆಳೆಯುತ್ತಲೇ ಸಾಗಿತು. ಈ ನಡುವೆ ರೋಹಿಂಗ್ಯಾಗಳು ತಮ್ಮ ಆರ್ಥಿಕ ಅಗತ್ಯಕ್ಕಾಗಿ ಗಡಿಯಲ್ಲಿ ಅಕ್ಕಿ, ಶಸ್ತ್ರಾಸ್ತ್ರ, ಮಾದಕವಸ್ತುಗಳ  ಕಳ್ಳಸಾಗಣೆಯನ್ನೂ ಆರಂಭಿಸಿದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ ರೋಹಿಂಗ್ಯಾಗಳು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಎಂಬ ಪಕ್ಷವನ್ನೇ ಹುಟ್ಟುಹಾಕಿದರು. ರೋಹಿಂಗ್ಯಾ ಭಯೋತ್ಪಾದಕರ ಪರ ಮಾತಾಡುವ ಭಾಷಣಕಾರರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಇವರಲ್ಲಿ ಪ್ರಮುಖರು. 1980ರ ಬಳಿಕ ರೋಹಿಂಗ್ಯಾಗಳಿಗೆ ವಿಶ್ವದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆಯಲಾರಂಭಿಸಿತು. ತಾಲಿಬಾನ್, ಅಲ್ ಖೈದಾಗಳಂತ ಭಯೋತ್ಪಾದಕ ಸಂಘಟನೆಗಳಲ್ಲದೆ ಹಲವು ಸಿರಿವಂತ ಮುಸ್ಲಿಂ ದೇಶಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಆದರೆ ಅಹಿಂಸಾ ಪ್ರತಿಪಾದಕರಾದರೂ ಬರ್ಮಾದ ಬೌದ್ಧರು ಇದಕ್ಕೆಲ್ಲಾ ಬೆದರಲಿಲ್ಲ. ಸುಮ್ಮನಿದ್ದೂ ಬಿಡಲಿಲ್ಲ. ಮುಗುಮ್ಮಾಗುಳಿಯಲು ಅವರೇನು ಭಾರತೀಯರೇ? ಬರ್ಮಾ ಸೈನ್ಯ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ರೋಹಿಂಗ್ಯಾಗಳಿಗೆ ಪೌರತ್ವ ಕೊಡಿ ಎಂದ ಯು.ಎನ್.ಓ ಮಾತಿಗೂ ಅದು ಸೊಪ್ಪು ಹಾಕಲಿಲ್ಲ. ಇಲ್ಲಿರಬೇಕಾದರೆ ಬಂಗಾಳಿ ಅಂತ ಗುರುತಿಸಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ರೋಹಿಂಗ್ಯಾಗಳಿಗೆ ಆಜ್ಞಾಪಿಸಿತು.

                 ಅನ್ನ ಕೊಟ್ಟ ಮನೆಗೆ ಕನ್ನ ಹಾಕಲು ಯತ್ನಿಸಿ ಪೆಟ್ಟು ತಿಂದ ಮೇಲೆ ಹತಾಶೆಗೊಂಡ ರೋಹಿಂಗ್ಯಾಗಳು ಈಗ ಅಕ್ಕಪಕ್ಕದ ದೇಶಗಳಿಗೆ ನುಗ್ಗಲಾರಂಭಿಸಿದ್ದಾರೆ. ಹದಿನೈದು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. 2016 ಕೊನೆಯ ಮೂರು ತಿಂಗಳಲ್ಲೇ 21000 ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ನುಗ್ಗಿದ್ದರೆಂದರೆ ರೋಹಿಂಗ್ಯಾಗಳ ವಲಸೆಯ ಪ್ರಮಾಣವನ್ನು ಊಹಿಸಬಹುದು. ಎಲ್ಲಾ ನಿರಾಶ್ರಿತರಿಗೂ ಆಪ್ಯಾಯಮಾನ ರಾಷ್ಟ್ರವಾಗಿರುವುದು ಭಾರತವೇ. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ! ಈಗ ರೋಹಿಂಗ್ಯಾಗಳೂ ಬಾಂಗ್ಲಾ ಮೂಲಕ ನುಸುಳಿಕೊಂಡು ಭಾರತದೊಳಗೆ ಬರುತ್ತಿದ್ದಾರೆ. ಈ ನುಸುಳುಕೋರರು ಈಗಾಗಲೇ ದೆಹಲಿ, ಜಮ್ಮು, ಬಂಗಾಲ, ಬಿಹಾರ, ತೆಲಂಗಾಣಗಳಲ್ಲಿ ಬೀಡು ಬಿಟ್ಟಿದ್ದಾರೆ. ಕಾಶ್ಮೀರದಿಂದ ಹೊರದಬ್ಬಿರುವ ಲಕ್ಷೋಪಲಕ್ಷ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳದೆ ರೋಹಿಂಗ್ಯಾ ಸಮುದಾಯಕ್ಕೆ ಜಮ್ಮುವಿನಲ್ಲಿ ವಸತಿಗಾಗಿ ಭೂಮಿಯನ್ನು ನೀಡಲಾಗಿದೆ. ಈಗಾಗಲೇ ಇವರಿಗೆ ಆಧಾರ್ ಹಾಗೂ ಮತದಾರ ಗುರುತಿನ ಚೀಟಿಯನ್ನು ಕೊಡಲಾಗಿದೆ. ಇದಕ್ಕೆ ಕಾರಣರಾರು ಎಂದು ನೋಡ ಹೊರಟರೆ ಆ ದೃಷ್ಟಿ ನೇರ ಅಬ್ದುಲ್ಲಾ ಕುಟುಂಬದತ್ತ ಹೊರಳುತ್ತದೆ. ಅಲ್ಲಿಗೆ ದೇಶದೊಳಕ್ಕೆ ನುಸುಳುವ ರೋಹಿಂಗ್ಯಾಗಳು ಕಾಶ್ಮೀರದಲ್ಲೇ ನೆಲೆ ನಿಲ್ಲುವುದೇಕೆ ಎನ್ನುವುದರ ಅರಿವಾಗಬಹುದು. ಜಮ್ಮು ಕಾಶ್ಮೀರದ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಜಮ್ಮುವಿಗೆ 5,700 ಹಾಗೂ ಲಡಾಕ್ ಗೆ 7,664 ರೊಹಿಂಗ್ಯಾಗಳು ವಲಸೆ ಬಂದಿದ್ದಾರೆ. ವಿಶ್ವಸಂಸ್ಥೆ ನಿರಾಶ್ರಿತ ರಾಷ್ಟ್ರಗಳ ಸಮಿತಿಯ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ರೊಹಿಂಗ್ಯಾಗಳು ನೆಲೆಸಿದ್ದಾರೆ. ಗೃಹ ಇಲಾಖೆಯ ವರದಿ ಪ್ರಕಾರ ಇವರ ಸಂಖ್ಯೆ 40 ಸಾವಿರಕ್ಕಿಂತಲೂ ಹೆಚ್ಚು. ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರಲ್ಲಿ ರೋಹಿಂಗ್ಯಾಗಳೂ ಇದ್ದರು. 2016ರ ಬುದ್ಧಗಯಾ ಸ್ಫೋಟದಲ್ಲಿ ಶಾಮೀಲಾಗಿರುವ, ಈಗಾಗಲೇ ಹಲವು ಉಗ್ರ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಈ ಜನಾಂಗಕ್ಕೆ ಆಶ್ರಯ ನೀಡುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆಯೇ. ಮೊದಲೇ ಭಯೋತ್ಪಾದಕತೆ, ಪ್ರತ್ಯೇಕತಾವಾದದಿಂದ ನರಳುತ್ತಿರುವ ಕಾಶ್ಮೀರಕ್ಕೆ ಇನ್ನೊಂದು ಉರುಳು ಬಿಗಿದಂತಾಯ್ತು! ಬಾಂಗ್ಲಾದೇಶೀ ನುಸುಳುಕೋರರ ಸಮಸ್ಯೆಯನ್ನೇ ಬಗೆಹರಿಸಲಾಗದ ಭಾರತ ರೋಹಿಂಗ್ಯಾಗಳನ್ನು ನಿಯಂತ್ರಿಸುತ್ತದೆಯೇ?

              ರೋಹಿಂಗ್ಯಾಗಳ ಹಿತರಕ್ಷಣೆಗಾಗಿರುವ ‘ಎ.ಆರ್.ಎನ್.ಓ’(ಅರೆಖಾನ್ ರೋಹಿಂಗ್ಯಾ ನ್ಯಾಷನಲ್ ಆರ್ಗನೈಸೇಷನ್) ಅಧ್ಯಕ್ಷ ನೂರುಲ್ ಇಸ್ಲಾಂ ‘ಸಾವಿರಾರು ರೋಹಿಂಗ್ಯಾಗಳು ಭಾರತದಲ್ಲೂ ಬದುಕುತ್ತಿದ್ದಾರೆ. ಭಾರತೀಯರು ಎಂದಿಗೂ ನಮ್ಮನ್ನು ಕೀಳಾಗಿ ಕಂಡಿಲ್ಲ. ನಮಗೆ ಭಾರತದ ಬಗ್ಗೆ ಕೃತಜ್ಞತೆ ತುಂಬಿದ ಗೌರವ ಭಾವನೆ ಇದೆ.’ ಎನ್ನುತ್ತಾರೆ. ಈ ಕೃತಜ್ಞತೆಯ ಭಾವನೆಯಿಂದಲೇ ರೋಹಿಂಗ್ಯಾಗಳು ಬುದ್ಧಗಯಾದಲ್ಲಿ ಸ್ಫೋಟ ಮಾಡಿದರೋ? ನಾವು ಕೀಳಾಗಿ ಕಂಡಿಲ್ಲವೆಂದೇ ರೋಹಿಂಗ್ಯಾಗಳು ಕಾಶ್ಮೀರ ಉಗ್ರರೊಡನೆ ಸೇರಿಕೊಂಡರೋ? ಬರ್ಮಾ ಸರ್ಕಾರ ತಮಗೆ ಮಾನವ ಹಕ್ಕುಗಳನ್ನು ಕೊಡುತ್ತಿಲ್ಲವೆಂದು ಆರೋಪಿಸುವ ಇದೇ ನೂರುಲ್ ಬರ್ಮಾದ ರಂಗೂನ್ ವಿವಿಯಲ್ಲಿ ಪದವಿ ಪಡೆಯಲು ಸಾಧ್ಯವಾದದ್ದಾದರೂ ಹೇಗೆ? ಆಸ್ಟ್ರೇಲಿಯಾ, ಲಂಡನ್ನುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಗಳ ಮೇಲೆ ಪದವಿ ಪಡೆಯಲು ಹೇಗೆ ಅವಕಾಶ ಸಿಕ್ಕಿತು? ಒಂದು ವೇಳೆ ಈಗ ಪರಿಸ್ಥಿತಿ ಬದಲಾಗಿದೆ ಎಂದರೂ ಅದಕ್ಕೆ ಉಪ್ಪು ತಿಂದ ಮನೆಗೆ ಎರಡು ಬಗೆಯ ಹೊರಟ ರೋಹಿಂಗ್ಯಾಗಳೇ ಕಾರಣರಲ್ಲವೇ? ಮೊದಲು ಆಶ್ರಯ ಕೊಟ್ಟವರನ್ನೇ ಹುರಿದು ಮುಕ್ಕಿ ತಿನ್ನಲು ಹೊರಟ ರೋಹಿಂಗ್ಯಾಗಳು ಭೋಳೆ ಸ್ವಭಾವದ ಭಾರತೀಯರನ್ನು ಬಿಟ್ಟಾರೆಯೇ? ಅಂದಹಾಗೆ, ನೂರುಲ್'ಗೆ ಅಲ್ಕೈದಾ ಮತ್ತಿತರ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂದು ‘ವಿಕಿಲೀಕ್ಸ್’  ವರದಿ ಹೇಳುತ್ತಿದೆ!

             ಬಂದವರಿಗೆಲ್ಲಾ ಮಣೆ ಹಾಕುವ ಭಾರತೀಯ ಬುದ್ಧಿ ಬದಲಾಗುವುದೆಂದು? ಬರ್ಮಾದಲ್ಲಿ ರೋಹಿಂಗ್ಯಾಗಳು ಕಡ್ಡಾಯವಾಗಿ ಕುಟುಂಬ ಯೋಜನೆ ಅನುಸರಿಸಬೇಕು. ಮದುವೆಗಳಿಗೆ ಗುರುತು ಪತ್ರ ತೋರಿಸಿ ಒಪ್ಪಿಗೆ ಪಡೆದು, ಸೈನ್ಯದ ಪ್ರತಿನಿಧಿಯೊಬ್ಬನ ಸಮ್ಮುಖದಲ್ಲಿ ವಿವಾಹವೇರ್ಪಡಿಸಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ. ಬರ್ಮಾವೇನೋ ನಿರ್ದಯವಾಗಿ ಕಾನೂನು ಪಾಲಿಸದವರನ್ನು, ಬರ್ಮಾವನ್ನು ತಮ್ಮ ದೇಶವೆಂದು ಒಪ್ಪಿಕೊಳ್ಳದವರನ್ನು ಹೊರಗಟ್ಟುತ್ತಿದೆ. ಅಂತಹ ಛಾತಿ ಭಾರತಕ್ಕಿದೆಯೇ? ಬರ್ಮಾದಲ್ಲಿ ಓಲೈಸುವ ರಾಜಕಾರಣಿಗಳಿಲ್ಲದಿರಬಹುದು. ಆದರೆ ಭಾರತದಲ್ಲಿ ಅದಕ್ಕಾಗಿ ಜೊಲ್ಲು ಸುರಿಸುವ ರಾಜಕೀಯ ಪಕ್ಷಗಳಿಗೇನು ಬರವೇ? ಬರ್ಮಾ ವಿರುದ್ಧ ನೂರುಲ್, ಮಲಾಲಳಂತಹ ಹೊರಗಿನ ಗಂಜಿ ಗಿರಾಕಿಗಳು ಮಾತನಾಡುತ್ತಿರಬಹುದು. ಆದರೆ ನಮ್ಮಲ್ಲಿ ಇದಕ್ಕಾಗಿಯೇ ಕರವಸ್ತ್ರ ಹಾಕಿ ಕುಳಿತುಬಿಟ್ಟ ಒಳಗಿನವರೇ ಎಷ್ಟಿಲ್ಲ? ಬರ್ಮಾದ ಕಾನೂನುಗಳನ್ನು ಅಲ್ಲಿನ ಕಟ್ಟುನಿಟ್ಟಿನ ಸನ್ನಿವೇಶದಲ್ಲೇ ಪಾಲನೆ ಮಾಡದವರು ಭಾರತದ 'ಉದಾರೀ" ಕಾನೂನುಗಳನ್ನು ಪಾಲಿಸುತ್ತಾರೆಯೇ? ಬಂದವರನ್ನೆಲ್ಲಾ ತುಂಬಿಕೊಳ್ಳುತ್ತಾ ಯೂರೋಪು ಯೂರೋಬಿಯಾ ಆಗುವತ್ತ ಸಾಗಿದೆ. ಅದೇ ರೀತಿ ಭಾರತವಾಗದಿದ್ದರೆ ಸಾಕು! ಮನೆಯಿಲ್ಲದವರಿಗೆ ಮನೆಯೊಳಗೆ ಆಶ್ರಯಕೊಡಬೇಕು. ಆದರೆ, ನಮ್ಮ ಮನೆಯನ್ನೇ ಬಿಟ್ಟುಕೊಡುವುದಲ್ಲ! ಅಂತಹಾ ಸ್ಥಿತಿಗೆ ಭಾರತ ಜಾರದಿರಲಿ!

ಅಂತಃಕಲಹವಲ್ಲ; ಸೂಫಿ ಸಂತನ ವಿದ್ರೋಹ ಭಾರತದ ಭವಿಷ್ಯವನ್ನು ಬದಲಿಸಿತು!

ಅಂತಃಕಲಹವಲ್ಲ; ಸೂಫಿ ಸಂತನ ವಿದ್ರೋಹ
ಭಾರತದ ಭವಿಷ್ಯವನ್ನು ಬದಲಿಸಿತು!

                       ಶ್ರೀಕೃಷ್ಣಾವತಾರದಲ್ಲಿ ಒಂದು ಕುತೂಹಲಕರ ಪ್ರಸಂಗ ನಡೆಯುತ್ತದೆ. ವಿದರ್ಭ ದೇಶದ ರಾಜ ಭೀಷ್ಮಕನ ಮಗಳು ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಆಕೆಯ ಸೋದರ ರುಕ್ಮಿಗೆ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿಸುವ ಧಾವಂತ. ರುಕ್ಮಿಣಿಯ ಹೆತ್ತವರಿಗೆ ಕೃಷ್ಣನೇ ಅಳಿಯನಾಗಲೆಂಬ ಆಸೆ. ಆದರೆ ಕಂಸ-ಜರಾಸಂಧ-ಶಿಶುಪಾಲ ಬಳಗದಲ್ಲಿದ್ದ ರುಕ್ಮಿಗೆ ಕೃಷ್ಣನ ಮೇಲೆ ದ್ವೇಷ. ರುಕ್ಮಿಣಿಯನ್ನು ವಿವಾಹವಾಗಲೆಂದು ರುಕ್ಮಿಯ ಆಹ್ವಾನದಂತೆ ಶಿಶುಪಾಲ ಬಂದಿದ್ದಾಗ ರುಕ್ಮಿಣಿಯ ಅಂತರಂಗವನ್ನು ಅರಿತ ಕೃಷ್ಣ ಆಕೆಯನ್ನು ಜೊತೆಗೆ ಕರೆದೊಯ್ಯುತ್ತಾನೆ. ಅಡ್ಡಗಟ್ಟಿದ ಜರಾಸಂಧ ಹಾಗವನ ಸಾಮಂತ ರಾಜರ ಸೈನ್ಯವನ್ನು ಕೃಷ್ಣ ಬಲರಾಮರು ಧೂಳೀಪಟ ಮಾಡುತ್ತಾರೆ. ನೈಜ ಪ್ರೇಮ ಎಂದರೆ ಇದು! ನಿಜಕ್ಕೂ ಅಮರ ಪ್ರೇಮಕ್ಕೆ ಲೈಲಾ-ಮಜನೂನ ಉದಾಹರಣೆಯನ್ನು ಕೊಡುವವರು ಎಚ್ಚೆತ್ತು ನೋಡಬೇಕಾದ ಘಟನೆ ಇದು. ತೇಜೋಮಹಾಲಯವನ್ನು ಧ್ವಂಸ ಮಾಡಿ ತನ್ನ ಹೆರಿಗೆಯಂತ್ರ-ಹದಿನಾಲ್ಕನೆಯ ಪತ್ನಿಯ ನೆನಪಿಗಾಗಿ ತಾಜ್ ಮಹಲಾಗಿ ಪರಿವರ್ತಿಸಿದ ವಿಕೃತಕಾಮಿ ಷಾಜಹಾನನನ್ನು ಅಮರ ಪ್ರೇಮಿ ಅನ್ನುವವರಿಗೆ ಈ ಪವಿತ್ರ ಪ್ರೇಮ ಬರಿಯ ಕಥೆಯಾಗಿ ಕಾಣದಿದ್ದೀತೇ? ಅವೆಷ್ಟೋ ಮುಚ್ಚಿಹೋದ ಭಾರತದ ಇತಿಹಾಸ ತಂತುಗಳಲ್ಲಿ ಇದೂ ಒಂದು ಎಂದು ಸುಮ್ಮನಾಗೋಣವೇ? ಆದರೆ ಇಂಥದ್ದೇ ಒಂದು ಅಮರ ಪ್ರೇಮ ಕಥೆ ಭಾರತ ವೀರನೊಬ್ಬನ ಇತಿಹಾಸವನ್ನೇ ಬದಲಿಸಿಬಿಟ್ಟಿತಲ್ಲಾ? ಆತನ ಹುಚ್ಚು ಪ್ರೇಮವೇ ಭಾರತವನ್ನು ಪರಕೀಯರು ಆಕ್ರಮಿಸಲು ನೆರವಾಯಿತು ಎಂಬ ಕಟ್ಟುಕಥೆ ಇಂದಿಗೂ ಚಾಲ್ತಿಯಲ್ಲಿದೆಯಲ್ಲಾ? ಒಂದು ಹೆಣ್ಣಿಗೋಸ್ಕರ ಸುತ್ತಲಿನ ರಾಜರ ಜೊತೆ ದ್ವೇಷ ಕಟ್ಟಿಕೊಂಡು ಸಾವಿರಾರು ಮಹಾವೀರರ ಸಾವಿಗೆ ಕಾರಣನಾದ ಎಂಬ ಪಟ್ಟವನ್ನು ನಮ್ಮ ಇತಿಹಾಸಕಾರರು ಕಟ್ಟಿಬಿಟ್ಟರಲ್ಲಾ? ಇವತ್ತಿಗೂ ನಮ್ಮ ಪಠ್ಯಪುಸ್ತಕಗಳಲ್ಲಿ ಅವನ ಬಗೆಗಿನ ನೈಜತೆ ಬಯಲಾಗದೇ ಉಳಿದಿದೆಯಲ್ಲಾ?


                ಪೃಥ್ವೀರಾಜ ರಾಸೋ. ಅದ್ಭುತ ಪ್ರೇಮಕಾವ್ಯ. ರಚಿಸಿದವನು ಪ್ರಥ್ವಿರಾಜನ ಗೆಳೆಯನೂ, ಆಸ್ಥಾನಕವಿಯೂ ಆಗಿದ್ದ ಚಾಂದ್ ಬರ್ದಾಯ್ ಅಥವಾ ಚಾಂದ್ ಭಟ್ಟ. ಅದರಲ್ಲಿರುವಂತೆ ಜಯಚಂದ್ರನ ಮಗಳಾಗಿದ್ದ ಸಂಯೋಗಿತ ಯಾ ಸಂಯುಕ್ತ ದೆಹಲಿಯ ದೊರೆ ಪೃಥ್ವೀರಾಜನನ್ನು ಪ್ರೀತಿಸುತ್ತಿದ್ದಳು. ಆದರೆ ಜಯಚಂದ್ರನಿಗೆ ಪೃಥ್ವೀರಾಜನನ್ನು ಕಂಡರಾಗುತ್ತಿಲ್ಲ. ಮಗಳ ಸ್ವಯಂವರ ಏರ್ಪಾಟು ಮಾಡಿದವ ಓರಗೆಯ ಅರಸರೆಲ್ಲರನ್ನು ಆಹ್ವಾನಿಸಿದರೂ ಪೃಥ್ವೀರಾಜನನ್ನು ಮಾತ್ರ ಕರೆಯಲಿಲ್ಲ. ಅಲ್ಲದೆ ಅವನಿಗೆ ಅವಮಾನ ಮಾಡಲೋಸುಗ ಅವನದೊಂದು ಪ್ರತಿಮೆಯನ್ನು ಮಾಡಿಸಿ ಬಾಗಿಲ ಬಳಿ ದ್ವಾರಪಾಲಕನಂತೆ ನಿಲ್ಲಿಸಿದ. ಸ್ವಯಂವರದ ಸಮಯದಲ್ಲಿ ವರಮಾಲೆ ಕೈಯಲ್ಲಿ ಹಿಡಿದು ಬಂದ ಸಂಯುಕ್ತಾ ಉಳಿದ ರಾಜಕುಮಾರರನ್ನು ಕತ್ತೆತ್ತಿಯೂ ನೋಡದೆ ಸರಸರನೆ ನಡೆದು ಪ್ರಥ್ವಿರಾಜನ ಮೂರ್ತಿಗೆ ಮಾಲೆ ಹಾಕಿದಳು. ಅದೇ ವೇಳೆ ಪ್ರತಿಮೆಯ ಹಿಂದೆ ಅಡಗಿದ್ದ ಪ್ರಥ್ವೀರಾಜ ಅವಳನ್ನು ಕುದುರೆಯ ಮೇಲೆ ಹತ್ತಿಸಿಕೊಂಡು ಅಡ್ಡ ಬಂದವರನ್ನು ಅಡ್ಡಡ್ಡ ಸಿಗಿದು ಗಾಂಧರ್ವ ಪದ್ದತಿಯಂತೆ ಅವಳನ್ನು ವಿವಾಹವಾದ. ಕೆಲವು ಕಥೆಗಳಲ್ಲಿ ಪ್ರಥ್ವೀರಾಜನ ಪ್ರತಿಮೆಗೆ ಮಾಲೆಹಾಕಿದುದರಿಂದ ಕುಪಿತನಾದ ಜಯಚಂದ್ರ ಆಕೆಯನ್ನು ಬಂಧಿಸಿದ. ಆ ಸಂಗತಿ ತಿಳಿದು ತನ್ನ ಮೇಲಿನ ರಾಜಕುಮಾರಿಯ ಪ್ರೇಮದ ಪರಿಯನ್ನರಿತು ಕನೌಜಿನ ಮೇಲೆ ದಂಡೆತ್ತಿ ಬಂದು ಸಂಯುಕ್ತಳನ್ನು ಗಾಂಧರ್ವ ವಿಧಿಯಂತೆ ವಿವಾಹವಾದ. ಅನಂತರ ಯುದ್ಧದಲ್ಲಿ ಶತ್ರು ಸೇನಾಪತಿ ಪ್ರಹಾರ ಮಾಡುತ್ತಿದ್ದಾಗ ಸಂಯುಕ್ತಾ ಖಡ್ಗ ಬೀಸಿ ಪತಿಯನ್ನುಳಿಸಿಕೊಂಡಳು ಎಂಬ ವರ್ಣನೆಯೂ ಇದೆ.

                  ಈ ಘಟನೆಯ ಬಳಿಕ ಜಯಚಂದ್ರ ಪ್ರಥ್ವಿರಾಜರ ನಡುವಣ ವೈರ ಮತ್ತಷ್ಟು ಹೆಚ್ಚಾಯಿತು. ಜಯಚಂದ್ರ ಪೃಥ್ವೀರಾಜನನ್ನು ಮಣಿಸಲು ಶಹಾಬುದ್ದೀನ್ ಘೋರಿಯೊಡನೆ ಕೈ ಜೋಡಿಸಿದ. ಇಷ್ಟಾದರೆ ಕಷ್ಟವಿಲ್ಲ. 1191ರಲ್ಲಿ ಮೊದಲ ತರೈನ್ ಯುದ್ಧದಲ್ಲಿ ಘೋರಿಯನ್ನು ಸಂಪೂರ್ಣ ಸೋಲಿಸಿದ ಪೃಥ್ವೀರಾಜ ಅವನಿಗೆ ಪ್ರಾಣಭಿಕ್ಷೆ ನೀಡಿದ. ಎರಡನೇ ತರೈನ್ ಯುದ್ಧದಲ್ಲಿ ಘೋರಿ, ಗುಜರಾತ್ ದೊರೆ ಹಾಗೂ ಜಯಚಂದ್ರನ ಸಹಾಯದಿಂದ ದಂಡೆತ್ತಿ ಬಂದು ಪ್ರಥ್ವಿರಾಜನನ್ನು ಸೋಲಿಸಿ ಆತನನ್ನು ಕೊಂದ ಎಂದೂ, ಸೋಲಿಸಿ ಬಂಧಿಸಿ ಕೆಲ ದಿನಗಳ ಬಳಿಕ ಕೊಂದನೆಂದು ಅನೇಕ ಕಥೆಗಳಿವೆ. ಆತನ ಕಣ್ಣು ಕೀಳಿಸಿ ತನ್ನ ಸೆರೆಯಲ್ಲಿಟ್ಟುಕೊಂಡನೆಂದು ಕೆಲ ಇತಿಹಾಸಕಾರರು ಬರೆದಿದ್ದಾರೆ. ಆದರೆ ಪೃಥ್ವೀರಾಜ್ ರಾಸೋದಲ್ಲಿ ಇರುವುದೇ ಬೇರೆ. ಪ್ರಥ್ವಿರಾಜನ ಕಣ್ಣು ಕೀಳಿಸಿದ ಘೋರಿ ಆತನನ್ನು ಅಫ್ಘಾನಿಸ್ತಾನಕ್ಕೆ ಕೊಂಡೊಯ್ದು ಅಲ್ಲಿ ಬಹುಕಾಲ ತನ್ನ ಸೆರೆಯಲ್ಲಿಟ್ಟುಕೊಂಡಿದ್ದ. ತನ್ನ ಗೆಳೆಯನನ್ನು ಹೇಗಾದರೂ ಸೆರೆಯಿಂದ ಬಿಡಿಸಬೇಕೆಂದು ಚಾಂದಭಟ್ಟ ಮಾರುವೇಷದಲ್ಲಿ ಘೋರಿಯ ಆಸ್ಥಾನ ಸೇರಿ ಆತನ ವಿಶ್ವಾಸ ಸಂಪಾದಿಸಿಕೊಂಡ. ಒಮ್ಮೆ ಘೋರಿಯೊಡನೆ ಮಾತನಾಡುತ್ತಾ ಪ್ರಥ್ವಿರಾಜ ಕುರುಡನಾದರೂ ಶಬ್ಧವೇಧೀ ವಿದ್ಯಾಪ್ರವೀಣನೆಂದು ಹೊಗಳಿದ. ಘೋರಿ ನೋಡಿಯೇ ಬಿಡೋಣವೆಂದು ಬಿಲ್ವಿದ್ಯಾ ಪ್ರದರ್ಶನ ಏರ್ಪಡಿಸಿದ. ಪ್ರಥ್ವಿರಾಜ ಅರಸನಾದ ತಾನು ಇನ್ನೊಬ್ಬ ಅರಸನನ್ನು ಹೊರತುಪಡಿಸಿ ಬೇರಾರಿಂದಲೂ ಆದೇಶ ಸ್ವೀಕರಿಸಲಾರೆ ಎಂದು ಘರ್ಜಿಸಿದ. ತೂಗು ಹಾಕಿದ ಕಂಚಿನ ಜಾಗಟೆಯ ಶಬ್ದವನ್ನು ಕೇಳಿ ಬಾಣ ಬಿಟ್ಟು ಛೇದಿಸುವಂತೆ ಸ್ವತಃ ಘೋರಿಯೇ ಬಾಯ್ಬಿಟ್ಟು ನಿರ್ದೇಶಿಸಿದ. ಅದೇ ಸಮಯಕ್ಕೆ ಚಾಂದಭಟ್ಟ ಘೋರಿ ನಿಂತ ಸ್ಥಳವನ್ನು ಪ್ರಥ್ವಿರಾಜನಿಗೆ ತಿಳಿಸಲು
"ಚಾರ್ ಬನ್ಸ್, ಚೌಬೀಸ್ ಗಜ್, ಅಂಗುಲ್ ಅಷ್ಟ ಪ್ರಮಾಣ್ |
ತಾ ಊಪರ್ ಹೈ ಸುಲ್ತಾನ್, ಚೂಕೇ ಮತ್ ಚೌಹಾನ್||"
ಎಂದೊಂದು ಹಾಡು ಕಟ್ಟಿದ. ಮೊದಲ ಬಾಣ ಸರಿಯಾಗಿ ಗುರಿಮುಟ್ಟಿತು. ಆಶ್ಚರ್ಯಗೊಂಡ ಘೋರಿ ಶಭಾಷ್ ಎಂದು ಉದ್ಗಾರ ತೆಗೆದ. ಪೃಥ್ವೀರಾಜನ ಮುಂದಿನ ಶರ ಶಬ್ಧ ಬಂದೆಡೆಯತ್ತ ಸಾಗಿತು . ಅದು ಘೋರಿಯ ಗಂಟಲನ್ನು ಸೀಳಿ ಹೊರಬಂತು.  ಶತ್ರುಗಳ ಕೈಯಲ್ಲಿ ಸಾಯಲು ಇಷ್ಟವಿಲ್ಲದೇ ಪ್ರಥ್ವಿರಾಜ ಮತ್ತು ಚಾಂದಭಟ್ಟ ಪರಸ್ಪರ ಕತ್ತಿಯಿಂದ ತಿವಿದುಕೊಂಡು ಸತ್ತರೆನ್ನುತ್ತದೆ ರಾಸೋ. ಈ ಕಥೆಯ ಕೊನೇ ಭಾಗವನ್ನು ಬರೆದವ ಚಾಂದನ ಮಗ.

           ಇದು ಶತಶತಮಾನಗಳಿಂದ ಪ್ರಚಾರದಲ್ಲಿರುವ ಪೃಥ್ವೀರಾಜನ ಕಥೆ, ಅಲ್ಲಲ್ಲಾ ಇತಿಹಾಸ! ಕಥೆಯ ಕೆಲ ಸನ್ನಿವೇಶಗಳಲ್ಲಿ ವ್ಯತ್ಯಾಸವಿದ್ದಾಗ್ಯೂ ಬಹುಪಾಲು ಜನರು ಒಪ್ಪುವ ಕಥೆ ಇದೇ. ಇದನ್ನೇ ಆಧರಿಸಿ ನೆಹರೂ ಕೂಡಾ ಪೃಥ್ವೀರಾಜನನ್ನು "ಶೋಧಿಸಿ"ಯೇ ಬಿಟ್ಟರು! ಪೃಥ್ವೀರಾಜ ಒಂದು ಹೆಣ್ಣಿನ ಪ್ರೇಮಪಾಶದಲ್ಲಿ ಸಿಲುಕಿ ರಾಜ್ಯವನ್ನು ಕಳೆದುಕೊಂಡು ಈ ದೇಶವನ್ನು ಪರಕೀಯರ ದಾಸ್ಯಕ್ಕೆ ದೂಡಿದನೆಂದೂ, ಜಯಚಂದ್ರನದೇನು ತಪ್ಪಿದೆ ಎಂದು ಮೊರೆದರು. ಇರಲಿ ಅವರವರ ಭಾವಕ್ಕೆ, ಬುದ್ಧಿಗೆ, ನಿಷ್ಠೆಗೆ! ಈ ಕಥೆಯೇನೋ ರುಕ್ಮಿಣಿ ಸ್ವಯಂವರದಂತೆಯೇ ಇದೆ. ಆದರೆ ಕಥೆಯ ಮಧ್ಯದಲ್ಲಿ ನುಸುಳಿರುವ ಸಣ್ಣ ತಪ್ಪೊಂದು ಇಡೀ ಕಥೆಯನ್ನೇ ಸಂಶಯಕ್ಕೀಡುಮಾಡುತ್ತದೆ. ದೆಹಲಿಯನ್ನಾಳಿದ ತುವರವಂಶಜ ಅನಂಗಪಾಲನಿಗೆ ಪುತ್ರ ಸಂತಾನವಿರಲಿಲ್ಲ. ಇಬ್ಬರು ಪುತ್ರಿಯರ ಪೈಕಿ ಕಮಲಾದೇವಿಯನ್ನು ಅಜ್ಮೀರದ ದೊರೆ ಸೋಮೇಶ್ವರನಿಗೂ, ವಿಮಲಾದೇವಿಯನ್ನು ಕನೋಜಿನ ರಾಜ ವಿಜಯಪಾಲನಿಗೂ ವಿವಾಹಮಾಡಿಕೊಟ್ಟಿದ್ದ. ಕಮಲಾದೇವಿಯ ಮಗ ಪೃಥ್ವೀರಾಜನಾದರೆ ವಿಮಲಾದೇವಿಯ ಮಗನೇ ಜಯಚಂದ್ರ. ತಾತ ಅನಂಗಪಾಲ ಬದರಿಕಾಶ್ರಮಕ್ಕೆ ತೆರಳುವ ಮುನ್ನ ಮೊಮ್ಮಗ ಪೃಥ್ವೀರಾಜನಿಗೆ ರಾಜ್ಯವನ್ನೊಪ್ಪಿಸಿ ಹೋದ. ತನಗೆ ರಾಜ್ಯ ಸಿಗಲಿಲ್ಲ ಎಂದು ಸಿಟ್ಟಾದ ಜಯಚಂದ್ರ. ಪೃಥ್ವೀರಾಜ-ಜಯಚಂದ್ರರ ನಡುವಿನ ದ್ವೇಷದ ಮೂಲ ಇದು! ಇದರ ಪ್ರಕಾರ ಜಯಚಂದ್ರ ಪೃಥ್ವೀರಾಜರು ವರಸೆಯಲ್ಲಿ ಅಣ್ಣತಮ್ಮಂದಿರಾಗುತ್ತಾರೆ. ಜಯಚಂದ್ರನ ಮಗಳಿಗೆ ಪೃಥ್ವೀರಾಜ ಚಿಕ್ಕಪ್ಪನಾಗುತ್ತಾನೆ. ತನ್ನ ಚಿಕ್ಕಪ್ಪನನ್ನು ಸಂಯುಕ್ತ ಹೇಗೆ ಪ್ರೇಮಿಸುತ್ತಾಳೆ? ನಮ್ಮಲ್ಲಿ ಅಣ್ಣನ ಮಗಳನ್ನು ವಿವಾಹವಾಗುವ ಪದ್ದತಿ ಇಲ್ಲವಲ್ಲ!

                 ಪೃಥ್ವೀರಾಜನ ಚರಿತ್ರೆಗೆ ಪ್ರಧಾನ ಆಧಾರ ಎಂದು ಪರಿಗಣಿಸಬಹುದಾದ ಇನ್ನೆರಡು ಗ್ರಂಥಗಳೆಂದರೆ ಪೃಥ್ವೀರಾಜ್ ವಿಜಯ್ ಹಾಗೂ ಹಮೀರ್ ಮಹಾಕಾವ್ಯ. ಬಹುಪಾಲು ಇತಿಹಾಸಕಾರರು ಪ್ರಾಮಾಣಿಕ ಎಂದು ಒಪ್ಪಿಕೊಂಡಿರುವ ಗ್ರಂಥ ಪೃಥ್ವೀರಾಜ್ ವಿಜಯವೇ ಹೊರತು ಪೃಥ್ವೀರಾಜ್ ರಾಸೋ ಅಲ್ಲ. ಪೃಥ್ವೀರಾಜ್ ವಿಜಯದಲ್ಲೆಲ್ಲೂ ಸಂಯುಕ್ತಳ ಉಲ್ಲೇಖವೇ ಇಲ್ಲ. ತಿಲೋತ್ತಮೆ ಎಂಬ ರೂಪಸಿಯೊಬ್ಬಳನ್ನು ಪ್ರೇಮಿಸಿ ಮದುವೆಯಾದ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ತಿಲೋತ್ತಮೆ ಜಯಚಂದ್ರನ ಮಗಳಲ್ಲ. ಇನ್ನು ಪೃಥ್ವೀರಾಜನ ಜೀವನವನ್ನು ಸವಿವರವಾಗಿ ವರ್ಣಿಸುವ ಹಮೀರ್ ಕಾವ್ಯದಲ್ಲೂ ಸಂಯುಕ್ತಳ ಉಲ್ಲೇಖವಾಗಲೀ, ಅಂತಹ ಪ್ರೇಮಪ್ರಕರಣದ ಉಲ್ಲೇಖವೂ ಇಲ್ಲ! ರೋಮ್ಯಾಂಟಿಕ್ ಕಾವ್ಯ ಪೃಥ್ವೀರಾಜ್ ರಾಸೋ ರಚಿಸಿದ್ಯಾವಾಗ ಎನ್ನುವುದು ತಿಳಿದು ಬಂದಿಲ್ಲ. 13ನೇ ಶತಮಾನದ ನಂತರ ಅಸ್ತಿತ್ವದಲ್ಲಿದ್ದ ಇದರಲ್ಲಿ ಅನೇಕರು ಕೈಯಾಡಿಸಿ, ತಮ್ಮ ಮನಸ್ಸಿಗೆ ಬಂದುದನ್ನು ಸೇರಿಸಿ ಅದು ಪ್ರಕ್ಷೇಪಗೊಂಡಿದ್ದಂತೂ ಸತ್ಯ! ಅಲ್ಲದೆ ತಮ್ಮ ಸುಲ್ತಾನರ ಪರಾಕ್ರಮಗಳನ್ನು ಉತ್ಪ್ರೇಕ್ಷೆಯೊಂದಿಗೆ ಸಾಕಷ್ಟು ಪಕ್ಷಪಾತದಿಂದ ವರ್ಣಿಸುವ ಆ ಕಾಲದ ಪರ್ಷಿಯನ್ ಇತಿಹಾಸಕಾರರ್ಯಾರೂ ಈ ಪ್ರೇಮಕಥನದ ಬಗ್ಗೆ ಹೇಳಲೇ ಇಲ್ಲ. ಹಿಂದೂರಾಜನೊಬ್ಬ ಇನ್ನೊಬ್ಬ ಹಿಂದೂರಾಜನ ಮಗಳನ್ನೆತ್ತಿಕೊಂಡು ಹೋಗಿ ಆ ಕಾರಣದಿಂದ ಉಂಟಾದ ಹಗೆತನದಿಂದ ಹೊಡೆದಾಡಿ ತಮ್ಮ ರಾಜರಿಂದ ಸೋತಿದ್ದರು ಎಂದಾಗಿದ್ದರೆ ಪರ್ಷಿಯನ್ ಇತಿಹಾಸಕಾರರು ಇಲಿಯನ್ನು ಹುಲಿಯನ್ನಾಗಿಸಿ ಹಲವು ಕಥೆ ಹೆಣೆದು ಬಿಡುತ್ತಿದ್ದರು. ಭಾರತೀಯ ಇತಿಹಾಸಕಾರಲ್ಲಿ ತಕ್ಕಮಟ್ಟಿಗೆ ವಸ್ತುನಿಷ್ಟ ಎಂದು ಕರೆಸಿಕೊಳ್ಳುವ ಆರ್.ಸಿ. ಮಜುಂದಾರರು ತಮ್ಮ "The History and Culture of Indian People" ನಲ್ಲಿ ಈ ರೋಮ್ಯಾಂಟಿಕ್ ಕಥನವೇ ಅಸಂಗತ-ಅಸಂಬದ್ಧ ಎಂದಿದ್ದಾರೆ.

ಅಂದಿನ ಸನ್ನಿವೇಶದಲ್ಲಿ ಘೋರಿಯನ್ನು ಸೋಲಿಸುವ ತಾಕತ್ತು ಇದ್ದದ್ದು ಪೃಥ್ವೀರಾಜ, ಜಯಚಂದ್ರ ಹಾಗೂ ಚಾಲುಕ್ಯರ ಮೂಲರಾಜರಲ್ಲಿ. ಆದರೆ ಈ ಮೂವರು ಒಟ್ಟಾಗಿ ನಿಂತು ಘೋರಿಯನ್ನು ಎದುರಿಸುವ ಪ್ರಯತ್ನ ಮಾಡಲೇ ಇಲ್ಲ. ಪೃಥ್ವೀರಾಜ ಹಾಗೂ ಜಯಚಂದ್ರನ ನಡುವೆ ದ್ವೇಷವಿತ್ತು ಎನ್ನುವುದನ್ನು ಬಹುತೇಕ ಇತಿಹಾಸಕಾರರು ಒಪ್ಪುತ್ತಾರೆ. ಜಯಚಂದ್ರನ ತಂಗಿ ಕರ್ಮದೇವಿ ಸಿಸೋದಿಯಾವಂಶದ ಸಮರಸಿಂಹನ ಪತ್ನಿಯಾಗಿದ್ದಳು. ಸಮರಸಿಂಹ ಜಯಚಂದ್ರನ ಆತ್ಮೀಯ ಸ್ನೇಹಿತನೂ ಆಗಿದ್ದ. ಇದೇ ಸಮರಸಿಂಹ ಹಾಗೂ ಪೃಥ್ವೀರಾಜರು ಏಕೋಭಾವದಿಂದ ಒಟ್ಟಾಗಿ ನಿಂತು ಮೊದಲನೇ ತರೈನ್ ಯುದ್ಧದಲ್ಲಿ ಘೋರಿಗೆ ಮಣ್ಣು ಮುಕ್ಕಿಸಿದ್ದರು. ಹಾಗಾಗಿ ಇವರೀರ್ವರ ನಡುವಣ ವೈರವೂ ದೊಡ್ಡಮಟ್ಟದ್ದಾಗಿರಲಿಕ್ಕಿಲ್ಲ. ಹಾಗೆಯೇ ಜಯಚಂದ್ರ ಪೃಥ್ವೀರಾಜನಿಗೆ ದ್ರೋಹವೆಸಗಿಲ್ಲ ಎಂದು ಇತ್ತೀಚಿನ ಸಂಶೋಧನೆಗಳು ದೃಢಪಡಿಸುತ್ತವೆ. ಈತನೂ ಮಹಮದ್ ಘೋರಿಯ ಎದುರು ನಿಂತು ಹೋರಾಡಿ ಅಸುನೀಗಿದ.

                 ಹಾಗೆಯೇ ಅಂತಃಕಲಹಗಳ ಕಾರಣದಿಂದ ಹಿಂದೂಗಳು ಘೋರಿ ಕೈಯಲ್ಲಿ ಸೋತರು ಎನ್ನುವುದು ಕೂಡಾ ಅಸಂಬದ್ಧ.  ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. 1191ರಲ್ಲಿ ಪಂಜಾಬಿನ ಪ್ರಾಂತ್ಯದ ತಾನೇಶ್ವರ್ ಸಮೀಪ ನಡೆದ ತಾರಾಯಿನ್ ಯುದ್ಧದಲ್ಲಿ ಸೋತ ಘೋರಿಯನ್ನು ಮುಂದೆ ಪ್ರಥ್ವಿರಾಜ ಒಂದೆರಡಲ್ಲ, ಏಳು ಬಾರಿ ಕ್ಷಮಿಸಿ ಕಳುಹಿಸಿದ್ದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಃಪತನವನ್ನು ಕಾಣಬೇಕಿರಲಿಲ್ಲ. 1192ರಲ್ಲಿ ಎರಡನೇ ತರೈನ್ ಯುದ್ಧದಲ್ಲಿ ನೆಹರೂ ಹೇಳುವಂತೆ ಆಗ ಪೃಥ್ವೀರಾಜ ರಾಜಕನ್ಯೆಯನ್ನು ಹಾರಿಸಿಕೊಂಡು ಹೋದನೆಂಬ ಕಾರಣಕ್ಕೆ ಉಳಿದ ರಾಜರೆಲ್ಲಾ ಪೃಥ್ವೀರಾಜನಿಗೆ ಎದುರು ಬಿದ್ದ ಕಾರಣ ಮಹಾವೀರರೆಲ್ಲಾ ಸಾವಿಗೀಡಾಗಿ ಸೈನ್ಯ ದುರ್ಬಲಗೊಂಡು ಪೃಥ್ವೀರಾಜ ಸೋತದ್ದಲ್ಲ. ಘೋರಿಯ ಸಮಕಾಲೀನನಾದ ಮಿನಾಜುದ್ದೀನ್ ಸಿರಾಜ್ "ಹಿಂದೂಸ್ಥಾನದ ರಾಜರೆಲ್ಲರೂ ಪೃಥ್ವೀರಾಜನ ಪರವಾಗಿದ್ದಾರೆ" ಎಂದು ತನ್ನ ತಬಾಕ್ತ್-ಇ-ನಾಸಿರಿಯಲ್ಲಿ ಬರೆದಿದ್ದಾನೆ. ಪ್ರಥ್ವಿರಾಜನ ಜೊತೆ ಅಕ್ಕಪಕ್ಕದ ರಾಜ್ಯದ 150 ರಾಜಕುಮಾರರ ಸಹಿತ ಮೂರು ಲಕ್ಷ ಅಶ್ವದಳ, ಮೂರು ಸಾವಿರ ಗಜದಳಕ್ಕಿಂತ ಹೆಚ್ಚಿನ ಬೃಹತ್ ಸೇನೆಯೆದುರು ಘೋರಿಯ ಸೈನ್ಯ ಯಾತಕ್ಕೂ ಸಾಲುತ್ತಿರಲಿಲ್ಲವೆಂದು ಫಿರಿಸ್ತಾ,ತಬಕತ್-ಇ-ನಾಸಿರಿಯಲ್ಲಿ ಮಿನಾಜುದ್ದೀನ್ ಸಿರಾಜ್  ಮತ್ತು ತಾಜು-ಇ-ಮಹಾಸಿರ್ನಲ್ಲಿ ಹಸನ್ ನಿಜಾಮಿಯಂಥ ಪ್ರಖ್ಯಾತ ಪರ್ಷಿಯನ್ ಇತಿಹಾಸಕಾರರೇ ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಬೃಹತ್ ಸೇನೆ ಹೊಂದಿದ್ದ ಸ್ವತಃ ಮಹಾಪರಾಕ್ರಮಿಯಾಗಿದ್ದ ಪೃಥ್ವೀರಾಜ ಸೋತಿದ್ದು ಹೇಗೆ? ಒಂದು ವರ್ಷದ ಹಿಂದೆ ಘೋರಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿದ್ದ ಯಮಸದೃಶ ಹೋರಾಟಗಾರ ಅದೇ ಬೃಹತ್ ಸೈನ್ಯ ಹೊಂದಿದ್ದೂ ಸೋತನೇಕೆ? 1191ರಲ್ಲಿ ಘೋರಿಯ ಜೊತೆ ಬಂದಿದ್ದ ಮೊಯಿನುದ್ದೀನ್ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ್ದ. ಪೃಥ್ವೀರಾಜನನ್ನು ವಂಚನೆಯ ಮೂಲಕ ಮಾತ್ರ ಗೆಲ್ಲಲು ಸಾಧ್ಯವೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ. ಅಣ್ಣನನ್ನು ಕೇಳದೆ ನಾನು ನಿರ್ಣಯಿಸಲಾರೆ. ಹಾಗಾಗಿ ಅಣ್ಣನಿಂದ ಉತ್ತರ ಬರುವವರೆಗೆ ತಡೆಯಿರಿ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ ಘೋರಿ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ಆತ ಸಾಧಿಸಿದ ವಿಜಯವನ್ನು ವಿಕ್ರಮ ಎನ್ನುವವರು ಮೂರ್ಖರಲ್ಲದೆ ಮತ್ತೇನು? ತರೈನಿನಲ್ಲಿ ತಮ್ಮ ಅರಸ ಕಾಫಿರರನ್ನು ಹೇಗೆ ವಂಚಿಸಿ ಸಾಯಬಡಿದ ಎಂದು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ.  ಮುಂದುವರೆದ ಘೋರಿ ಅಜ್ಮೀರದ ದೇವಾಲಯಗಳನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಈ ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ಚಿಸ್ತಿ ಅಲ್ಲಾನಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ. ಹೀಗೆ ಭಾರತದ ಭವಿಷ್ಯವನ್ನು ಬದಲಿಸಿದ್ದು ಅಂತಃಕಲಹವಲ್ಲ; ಸೂಫಿ ಸಂತನ ವಿದ್ರೋಹ! ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು! ಅನ್ನ ಕೊಟ್ಟ ಭೂಮಿಗೆ ದ್ರೋಹ ಬಗೆದ, ಹಿಂದೂಗಳ ಮಾರಣದ್ವರಕ್ಕೆ ಕಾರಣನಾಗಿ ಹಿಂದೂಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟವನ ಗೋರಿಗೆ ಹಿಂದೂಗಳಿಂದ ಪುಷ್ಪಾರ್ಚನೆಯಾಗುತ್ತಿದೆ!

        ಅಫಘಾನಿಸ್ತಾನದ ಘಜನಿಯಲ್ಲಿ ಮಹಮ್ಮದ್ ಘೋರಿಗೆ ಒಂದು ಭವ್ಯ ಸಮಾಧಿ ಕಟ್ಟಲಾಗಿದೆ. ಇದರ ಆವರಣದ ಹೊರಭಾಗದಲ್ಲಿ ಚಪ್ಪಲಿ ಕಳಚುವ ಜಾಗದಲ್ಲಿ ಒಂದು ಚಿಕ್ಕ ಸಮಾಧಿ ಇದೆ, ಪ್ರಥ್ವಿರಾಜ ಚೌಹಾನನದ್ದು! ಘೋರಿಯನ್ನು ಕೊಂದ ಪ್ರಥ್ವಿರಾಜನ ಮೇಲಿನ ಸಿಟ್ಟು ಅಲ್ಲಿನ ಜನರಲ್ಲಿ ಶತಮಾನಗಳುರುಳಿದರೂ ತಣಿದಿಲ್ಲ. ಅಲ್ಲೇ ಚಪ್ಪಲಿ ಕಳಚಿ, ಆ ಸಮಾಧಿಗೆ ಅಲ್ಲಿಟ್ಟ ದಪ್ಪ ಹಗ್ಗದ ತುದಿಯಿಂದ ಎರಡೇಟು ಹೊಡೆದೇ ಘೋರಿಯ ದರ್ಶನಕ್ಕೆ ಭಕ್ತರು ಒಳಪ್ರವೇಶಿಸುವುದು! ನಮ್ಮ ಮಾಜಿ ಪ್ರಧಾನಿ ಮನಮೋಹನ ಸಿಂಗ್, ನಟವರ್ ಸಿಂಗ್ ಹಾಗೂ ರಾಹುಲ್ ಗಾಂಧಿ 2005ರಲ್ಲಿ ಅಪ್ಘಾನಿಸ್ತಾನಕ್ಕೆ ತೆರಳಿದಾಗ ಘೋರಿಯ ಸಮಾಧಿಗೆ ಕೈಮುಗಿದು ಬಂದರೇ ವಿನಾ ಪೃಥ್ವೀರಾಜನ ಸಮಾಧಿಯೆಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಅವರಿಂದ ಅಂತಹ ನಿರೀಕ್ಷೆಯೂ ಇಲ್ಲ ಬಿಡಿ. ಆದರೆ ಈ ದೇಶದ ಜನಸಾಮಾನ್ಯನಿಗೆ ಈ ಮಣ್ಣಿನ ಬಗೆಗೆ ಅಪಾರ ಗೌರವವಿದೆ. ನಿಮಗೆ ಶೇರ್ ಸಿಂಗ್ ರಾಣಾ ನೆನೆಪಿರಬಹುದು. ಕುಖ್ಯಾತ ಡಕಾಯಿತೆ,  ಬೆಹ್ಮೈಯ ಇಪ್ಪತ್ತು ಠಾಕೂರರನ್ನು ವಿನಾ ಕಾರಣ ಕೊಂದ, ಮುಂದೆ ಸಂಸದೆಯಾಗಿದ್ದ ಪೂಲನ್ ದೇವಿಯನ್ನು ಅವಳ ನಿವಾಸದಲ್ಲೇ ಜುಲೈ25, 2001ರಲ್ಲಿ ಕೊಂದವ. ತಾನೇ ಕೊಂದವನೆಂದು ಎದೆಯುಬ್ಬಿಸಿ ಹೇಳಿ ಜೀವಾವಧಿ  ಶಿಕ್ಷೆಗೊಳಗಾಗಿ ತಿಹಾರ್ ಜೈಲಿನಲ್ಲಿ ಬಂಧಿಯಾದವ. ಇವನಿಗೂ ಪೃಥ್ವೀರಾಜನಿಗೂ ಏನು ಸಂಬಂಧ? ಸ್ವಾರಸ್ಯ ಇರುವುದೇ ಇಲ್ಲಿ! ಪ್ರಪಂಚದ ಅತಿ ದುರ್ಭೇದ್ಯ ಜೈಲುಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಿಂದ 2005ರಲ್ಲಿ ಹಾಡುಹಗಲೇ ನಾಟಕೀಯ ರೀತಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡ ಈತ ಸಂಜಯ್ ಗುಪ್ತಾ ಎಂಬ ನಕಲಿ ಹೆಸರಲ್ಲಿ ಮೂರು ತಿಂಗಳ ಬಾಂಗ್ಲಾದೇಶೀ ವೀಸಾ ಪಡೆದುಕೊಂಡು ಅಲ್ಲಿಂದ ದುಬೈನ ಮೂಲಕ ಅಫ್ಘಾನಿಸ್ತಾನ ತಲುಪಿ ಕಂದಹಾರ್- ಕಾಬೂಲ್- ಹೀರತ್ ಗಳ ಮುಖಾಂತರ ಘಜನಿಯ ಡೀಕ್ ಅನ್ನೋ ಹಳ್ಳಿಯನ್ನು ತಲುಪಿದ. ಅಲ್ಲಿತ್ತು ಪೃಥ್ವೀರಾಜನ ಸಮಾಧಿ. ತಾನು ಘೋರಿಯ ಸಮಾಧಿಯ ಬಗ್ಗೆ ಸಂಶೋಧನೆ ಮಾಡಲು ಬಂದ ಪಾಕಿಸ್ತಾನಿಯೆಂದು ಸ್ಥಳೀಯರನ್ನು ನಂಬಿಸಿ ರಾತ್ರೋರಾತ್ರಿ ಪ್ರಥ್ವಿರಾಜನ ಸಮಾಧಿಯ ಪವಿತ್ರ ಮಣ್ಣನ್ನು ಅಗೆದು ತೆಗೆದು ಭಾರತಕ್ಕೆ ತಂದ.  ಸ್ಥಳೀಯರ ಸಹಕಾರದಿಂದ ಏಪ್ರಿಲ್ 2005 ರಲ್ಲಿ ಎತ್ವಾಹ್ ಜಿಲ್ಲೆಯಲ್ಲಿ ಪೃಥ್ವೀರಾಜನ ಸಮಾಧಿಯ ಪವಿತ್ರ ಮಣ್ಣನ್ನಿಟ್ಟು ಸ್ಮಾರಕವೊಂದನ್ನು ನಿರ್ಮಿಸಿದ. ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದ ಆತನ ತಾಯಿಯ ಹೃದಯ ತುಂಬಿ ಬಂದಿತ್ತು. ಕಣ್ಣುಗಳಿಂದ ಆನಂದದ ಅಶ್ರುಬಿಂದುಗಳುರುಳುತ್ತಿದ್ದವು. ಮನಸ್ಸು ಬೇಷ್ ಮಗನೇ ಎಂದಿತ್ತು! ಆಕೆ "ನನ್ನ ಮಗ ಈ ದೇಶದ ಹೆಮ್ಮೆ, ಈ ದೇಶದ ನೈಜ ಸೇವಕ" ಅಂದಳು! ವಸುಂಧರೆಯ ಸಿರಿಸುತೆಯರಸನ ಮಣ್ಣಾದ ದೇಹ ಸಿರಿಪೃಥ್ವಿಗೇ ಮರಳಿತು!

ಬೇಕಿದೆ ಬಲಿಷ್ಟ ವಲಸೆ ನೀತಿ, ಅದೇ ಜಗವು ಉಳಿವ ರೀತಿ!

ಬೇಕಿದೆ ಬಲಿಷ್ಟ ವಲಸೆ ನೀತಿ, ಅದೇ ಜಗವು ಉಳಿವ ರೀತಿ!


            "ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ. ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ" ಜಗಮೊಂಡ ಎಂದೇ ವಿರೋಧಿಗಳಿಂದ ಕರೆಸಿಕೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರು ಹಾಗೂ ನಿರಾಶ್ರಿತರಿಗೆ ನಿಷೇಧ ಹೇರಿದಾಗ ವ್ಯಕ್ತವಾದ ಟೀಕೆಗೆ ಈ ರೀತಿ ಸಮರ್ಥಿಸಿಕೊಳ್ಳಬೇಕಾಗಿ ಬಂದದ್ದು ಸೆಕ್ಯುಲರಿಸಮ್ ಎಂಬ ಏಕೈಕ ಕಾರಣ. ದೇಶದೇಶಗಳ ವಲಸೆ ನೀತಿಯಲ್ಲಿ ಸೆಕ್ಯುಲರಿಸಮ್ ಎಂಬ ಭೂತ ಹೇಗೆ ಕೈಯಾಡಿಸುತ್ತದೆ ಎನ್ನುವುದಕ್ಕೆ ಬೇರೆ ನಿದರ್ಶನ ಬೇಕೆ? ಟ್ರಂಪ್ ಈ ನಿಷೇಧ ಹೇರಿದ್ದು ಅಮೆರಿಕಾವನ್ನು ಸುರಕ್ಷವಾಗಿರಿಸಿಕೊಳ್ಳುವ ಸಲುವಾಗಿ. ತನ್ನ ದೇಶೀಯರ ರಕ್ಷಣೆಯ ದೃಷ್ಟಿಯಿಂದ. ಆದರೆ ಇದರ ವಿರುದ್ಧ ದೇಶೀಯರಿಂದಲೇ ಟೀಕೆ ವ್ಯಕ್ತವಾಯಿತು. ಅಷ್ಟಕ್ಕೂ ಅಮೆರಿಕಾದ ವಲಸೆ ನೀತಿ ಟ್ರಂಪ್'ರಿಂದ ಶ್ರೀಗಣೇಶವಾದುದಲ್ಲ. 2011ರಲ್ಲಿ ಇರಾಕ್ ದೇಶದ ಪ್ರಜೆಗಳು ಹಾಗೂ ನಿರಾಶ್ರಿತರ ಮೇಲೆ ಒಬಾಮಾ ಸರಕಾರ ಇದೇ ರೀತಿಯ ನಿಷೇಧವನ್ನು ಹೇರಿತ್ತು. ಅಲ್ಲದೆ ಈಗ ಯಾವ ಏಳು ರಾಷ್ಟ್ರಗಳಿಗೆ ಟ್ರಂಪ್ ನಿಷೇಧ ಹೇರಿದ್ದಾರೋ ಉಗ್ರರ ಚಟುವಟಿಕೆ ಹೆಚ್ಚಿರುವ ಆ ರಾಷ್ಟ್ರಗಳು ಭಯೋತ್ಪಾದಕರ ಮೂಲ ಎಂದು ಒಬಾಮಾ ಸರ್ಕಾರವೇ ಪಟ್ಟಿ ಮಾಡಿತ್ತು. ಆದರೆ ಸೆಕ್ಯುಲರುಗಳು ಆಕಾಶ ಭೂಮಿ ಒಂದಾಗುವಂತೆ ಬೊಬ್ಬಿರಿದರು. ಆಗ ಸ್ವತಃ ಟ್ರಂಪ್ "ಇದು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸುವ ನಿರ್ಧಾರವಲ್ಲ. ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಇದು ಭಯೋತ್ಪಾದನೆಯ ವಿರುದ್ಧದ ನಿರ್ಧಾರವೇ ಹೊರತು ಮತದ ವಿರುದ್ಧದ ನಿರ್ಧಾರವಲ್ಲ. ಈ ಏಳು ರಾಷ್ಟ್ರಗಳ ಹೊರತಾಗಿ ಜಗತ್ತಿನ ಉಳಿದ 40ಕ್ಕೂ ಹೆಚ್ಚು ಮುಸಲ್ಮಾನರನ್ನು ಹೊಂದಿರುವ ರಾಷ್ಟ್ರಗಳು ಈ ನಿರ್ಧಾರಕ್ಕೆ ಒಳಪಡುವುದಿಲ್ಲ. ಇಡೀ ಜಗತ್ತು ಭಯೋತ್ಪಾದನೆಯಿಂದಾಗಿ ನಲುಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಒಮ್ಮೆ ನೋಡಿ. ಹೀಗಾಗಿ ನಮ್ಮ ದೇಶಕ್ಕೆ ಕಠಿಣ ಗಡಿ ನೀತಿ ಹಾಗೂ ವೆಟೊ ಕಾನೂನು ಜಾರಿಯ ಅಗತ್ಯವಿದೆ" ಎಂದು ಸಮಜಾಯಿಷಿ ನೀಡಬೇಕಾಗಿ ಬಂತು.

             ತನ್ನ ದೇಶದ ಸುರಕ್ಷತೆ, ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ವಲಸೆ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಟ್ರಂಪ್'ಗೆ ಅಧಿಕಾರವಿಲ್ಲವೇ? ಬುದ್ಧಿಜೀವಿಗಳ ಗಂಜಿಕೇಂದ್ರಗಳ ಉಳಿವಿಗಾಗಿ ದೇಶವನ್ನು ಬಲಿಕೊಡಬೇಕೆ? ಈ ಸೆಕ್ಯುಲರಿಸಮ್ ದಾಳ ಎಷ್ಟು ಬಿಗುವಾಗಿದೆಯೆಂದರೆ ಟ್ರಂಪ್'ರಂತಹ ಟ್ರಂಪೇ ಸಮಜಾಯಿಷಿ ನೀಡಬೇಕಾಗಿ ಬಂತು. ಇದೇ ನಿಷೇಧವೇನಾದರೂ ಭಾರತದಿಂದಾಗಿದ್ದರೆ...? ಹಹ್...ಭಾರತದಿಂದ ಇಂತಹ ವಲಸೆ ನೀತಿ ಸಾಧ್ಯವೇ? ಅಸಲಿಗೆ ಭಾರತದಲ್ಲೊಂದು ವಲಸೆ ನೀತಿ ಇದೆಯೇ? ಇದ್ದರೆ ಅದರ ಅನುಷ್ಠಾನ ಸರಿಯಾಗಿ ಆಗುತ್ತಿದೆಯೇ? ಅಮೆರಿಕಾವನ್ನೇ ಬಗ್ಗಿಸುವ ಸೆಕ್ಯುಲರುಗಳು ಭಾರತದ ಸರಕಾರಗಳನ್ನು ಬಗ್ಗಿಸದೇ ಬಿಟ್ಟಾರೇ?

                ಭಾರತದಲ್ಲಿ ವಿದೇಶಿಯರ ಪ್ರವೇಶ ಹಾಗೂ ವಾಸವನ್ನು ನಿಯಂತ್ರಿಸುವ ಏಕೈಕ ಕಾಯಿದೆ "ವಿದೇಶಿಯರ ಕಾಯಿದೆ-1946". ಯಾವುದೇ ವಿದೇಶಿಯ ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚುಕಾಲ ಇದ್ದರೆ ಆತ ಸ್ಥಳೀಯ ಪೊಲೀಸರ ಬಳಿ ನೋಂದಾಯಿಸಿ ಅನುಮತಿ ಗಿಟ್ಟಿಸಿಕೊಳ್ಳಬೇಕು. ದೇಶವಿಭಜನೆಯ ಸಂದರ್ಭದಲ್ಲಿ ಈ ದೇಶ ಕಂಡದ್ದು ಕಳೆದ ಶತಮಾನದ ಅತೀ ದೊಡ್ಡ ವಲಸೆ. ಆ ಬಳಿಕವೂ ಅನೇಕರು ದೇಶದೊಳಕ್ಕೆ ಬರುತ್ತಲೇ ಇದ್ದರು. ಹಿಂದೂಗಳು ಆಶ್ರಯ ಬಯಸಿ ಬಂದರೆ, ಪಶ್ಚಿಮ ಪಾಕಿಸ್ತಾನದ ಮುಸ್ಲಿಮರು ಭಯೋತ್ಪಾದಕರಾಗಿ ನುಗ್ಗಿದರು. ಪೂರ್ವ ಪಾಕಿಸ್ತಾನದ ಮುಸ್ಲಿಮರು ನುಗ್ಗಿದ ಮೇಲೆ ಭಯೋತ್ಪಾದಕರಾದರು! ದಲಾಯಿ ಲಾಮಾ ಭಾರತಕ್ಕೆ ಬಂದ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ಟಿಬೆಟನ್ನರು ಭಾರತಕ್ಕೆ ಬಂದಿಳಿದಿದ್ದಾರೆ. 1979ರ ಸುಮಾರಿಗೆ ರಷ್ಯಾ ಅಫ್ಘಾನ್ ಅನ್ನು ಆಕ್ರಮಿಸಿದಾಗ 60000 ಅಫ್ಘನ್ನರು ಭಾರತಕ್ಕೆ ಬಂದರು. ಅತ್ತ ಶ್ರೀಲಂಕಾದಿಂದ ಬಂದ ಹತ್ತಿರ ಹತ್ತಿರ ಎಂಬತ್ತು ಲಕ್ಷದಷ್ಟು ತಮಿಳರು ಭಾರತದಲ್ಲೇ ಇದ್ದಾರೆ. ಇದಲ್ಲದೆ ಇಸ್ರೈಲ್, ಇರಾಕ್, ಪ್ಯಾಲೆಸ್ಟೈನ್ಗಳಿಂದಲೂ ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. 2008ರ ಹೊತ್ತಿಗೆ ಈ ದೇಶದಲ್ಲಿದ್ದು ತಮ್ಮ ವಿವರ ನೋಂದಾಯಿಸಿದ ವಿದೇಶಿಯರ ಸಂಖ್ಯೆ 352,000 ಮಾತ್ರ! ಆದರೆ 2001ರ ಗಣತಿ ಪ್ರಕಾರವೇ ಪಾಕ್-ಬಾಂಗ್ಲಾಗಳಲ್ಲಿ ಜನಿಸಿ ಭಾರತದಲ್ಲಿ ನೆಲೆಸಿರುವವರ ಸಂಖ್ಯೆಯೇ ಹತ್ತಿರ ಹತ್ತಿರ 6 ಮಿಲಿಯನ್ನುಗಳಷ್ಟಿತ್ತು! ಭಾರತದಲ್ಲಿ ವಲಸಿಗರ ಸ್ವವಿವರ ಮತ್ತು ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ದಾಖಲಾತಿಗೆ ಯಾವುದೇ ಕಾನೂನು ಅಥವಾ ನಿಬಂಧನೆಗಳಿಲ್ಲ. ಬದಲಿಗೆ, ಇವರೆಲ್ಲರೂ ವಿದೇಶಿಯರ ಕಾಯಿದೆ-1946ರ ನಿಯಂತ್ರಣಕ್ಕೇ ಒಳಪಟ್ಟಿರುತ್ತಾರೆ.

                2001ರಲ್ಲಿ ಆಗಿನ ಕೇಂದ್ರ ಗೃಹ ಸಚಿವಾಲಯ 12ಮಿಲಿಯನ್ ಅಕ್ರಮ ವಲಸಿಗರು ದೇಶದ ಹದಿನೇಳು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದಾರೆಂದು ಅಂದಾಜಿಸಿತ್ತು. ಆಬಳಿಕ ಬಂದ ಯುಪಿಎ ಸರಕಾರ ಈ ವರದಿಯನ್ನು ತಳ್ಳಿ ಹಾಕಿತು. ರಾಜಕೀಯ ವಿಜ್ಞಾನಿ ಕಮಲ್ ಸಾದಿಕ್ ಪ್ರಕಾರ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವವರ ಸಂಖ್ಯೆ 15-20 ಮಿಲಿಯನ್! ಈ ಸಂಖ್ಯೆ ಸರಕಾರದ ಅಪ್ರಕಟಿತ ವರದಿಯನ್ನು ಆಧರಿಸಿದ್ದು! ಅಂದರೆ ಇವರೆಲ್ಲಾ ಈಗಾಗಲೇ ಪಡಿತರ ಚೀಟಿ, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ ಎಂದೇ ಅರ್ಥ! ಬಾಂಗ್ಲಾದೇಶದಿಂದ ಕಾನೂನುಬಾಹಿರ ವಲಸೆ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟಲು ಯೋಗ್ಯ ಕ್ರಮ ಕೈಗೊಳ್ಳಿ ಎಂದು ಏಪ್ರಿಲ್ 2008ರಲ್ಲಿ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆಜ್ಞಾಪಿಸಿತಾದರೂ ಪರಿಣಾಮ ಶೂನ್ಯ! ಯಾವ ಯುಪಿಎ ಸರಕಾರ 2008ರಲ್ಲಿ ಎನ್ಡಿಎ ಸರಕಾರದ 2001ರ ವರದಿಯನ್ನು ತಳ್ಳಿ ಹಾಕಿತ್ತೋ ಅದೇ ಯುಪಿಎ ಸರಕಾರದ ಮಂತ್ರಿಯೋರ್ವರು 2012ರಲ್ಲಿ "ಕಳೆದ ಎರಡು ದಶಕಗಳಲ್ಲಿ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರು ಭಾರತಕ್ಕೆ ಅಕ್ರಮಪ್ರವೇಶ ಮಾಡಿದ್ದಾರೆ. ಅಲ್ಲದೆ ಅವರು ಇಡೀ ದೇಶದಲ್ಲಿ ಹರಿದು ಹಂಚಿಹೋಗಿದ್ದಾರೆ" ಎಂದು ತಮ್ಮ ಲೇಖನದಲ್ಲಿ ಅಲವತ್ತುಕೊಂಡಿದ್ದರು. ಆದರೆ ಬರೇ ಈ ರೀತಿ ಅಳುತ್ತಾ ಕೂತರೆ ಸಮಸ್ಯೆ ಬಗೆಹರಿಯುವುದೇ? ಇದರ ಪರಿಹಾರಕ್ಕೆ ಅವರ ಸರಕಾರವೇ ಯಾವುದೇ ಕ್ರಮ ಕೈಗೊಳ್ಳಲಿಲ್ಲವಲ್ಲ! ಹಿಂದಿನ ಸರಕಾರ ಪ್ರಕಟಿಸಿದ್ದ ವರದಿಯನ್ನೇ ಮೂಲೆಗೆಸೆದು ತೆಪ್ಪಗೆ ಕೂತಿತ್ತಲ್ಲಾ!

                   ಯಾವುದೇ ವಿದೇಶಿಗ ದೇಶದೊಳಗೆ ಬರಬೇಕಾದರೆ ವಿದೇಶೀ ದೂತಾವಾಸ ಕಛೇರಿಯಲ್ಲಿ ಅನುಮತಿ ಪಡೆದು ಬರಬೇಕಾಗುತ್ತದೆ. ಆದರೆ ಇಂತಹುದೊಂದು ಕಛೇರಿ ತೀರಾ ಇತ್ತೀಚಿನವರೆಗೂ ಬರಿಯ ನಾಮಕೆವಾಸ್ತೇ ಆಗಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಸ್ಸಾಂನ್ನು ಆಕ್ರಮಿಸಿಕೊಳ್ಳುತ್ತಿದ್ದ ಬಾಂಗ್ಲಾ ನುಸುಳುಕೋರರನ್ನು ತಡೆಯುವ ಪ್ರಯತ್ನವನ್ನು ಹಿಂದಿನ ಸರ್ಕಾರಗಳು ಮಾಡಲೇ ಇಲ್ಲ.  ನುಸುಳುಕೋರರಲ್ಲಿ ಕೆಲವರಂತೂ ದಶಕಗಳ ಹಿಂದೆಯೇ ಗಡಿಯಾಚೆಯಿಂದ ಭಾರತದೊಳಕ್ಕೆ ನುಸುಳಿ ಬಂದಿದ್ದು ಪಶ್ಚಿಮ ಬಂಗಾಳ, ಅಸ್ಸಾಂನ ವಿವಿಧ ಭಾಗಗಳ ಲಜ್ಜೆಗೆಟ್ಟ ರಾಜಕಾರಣಿಗಳು ಇವರಿಗೆ ರಾಜಾರೋಷವಾಗಿ ಚುನಾವಣಾ ಗುರುತಿನ ಚೀಟಿ ಮಾಡಿಕೊಟ್ಟಿರುವ ಕಾರಣ ಇವರನ್ನು ಗುಪ್ತಚರ ಇಲಾಖೆಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ದೇಶದಲ್ಲಿ 2 ಕೋಟಿಗಿಂತ ಹೆಚ್ಚು ನುಸುಳುಕೋರರು ನೆಲೆಸಿದ್ದು ಈ ಎರಡು ಕೋಟಿ ಸಂಖ್ಯೆಯ ಸಮುದಾಯ ಮಸೀದಿಯ ಮೌಲ್ವಿಗಳು ಹೇಳಿದವರಿಗೇ ಮತ ಹಾಕುವ ಸಾಧ್ಯತೆಯಿರುವುದರಿಂದ ಬಹುತೇಕ ರಾಜಕೀಯ ಪಕ್ಷಗಳು ತೆಪ್ಪಗಿರುತ್ತವೆ. ಗಮನಿಸಿ ಶ್ರೀಲಂಕಾ, ಸಿರಿಯ, ನೆದರ್ಲೆಂಡ್, ಹಂಗೇರಿ, ಬೆಲ್ಜಿಯಮ್ ಸೇರಿದಂತೆ ಜಗತ್ತಿನ 25ಕ್ಕೂ ಅಧಿಕ ದೇಶಗಳ ಜನಸಂಖ್ಯೆ ಎರಡು ಕೋಟಿಗಿಂತಲೂ ಕಡಿಮೆ! ಅಂದರೆ ಈ ಸಮಸ್ಯೆಯ ಅಗಾಧತೆಯ ಅರಿವಾದೀತು!

                   ಅರೇ ಇವರಿಂದೇನು ತೊಂದರೆ, ಭಾರತ ಎಂತೆಂಥವರಿಗೆಲ್ಲಾ ಆಶ್ರಯ ಕೊಟ್ಟಿಲ್ಲ? ದೇಹಿ ಎಂದು ಬಂದವರಿಗೆ ನಾಸ್ತಿ ಎನ್ನದ ದೇಶವಿದಲ್ಲವೇ? ಎಂದು ತಿಳುವಳಿಕಸ್ಥರೂ ಪ್ರಶ್ನಿಸಬಹುದು. ಆದರೆ ಸಮಸ್ಯೆ ನಾವು ಅಂದುಕೊಂಡಷ್ಟು ಸರಳವೂ ಅಲ್ಲ, ಪರಿಹರಿಸುವಂತಹದ್ದೂ ಆಗುಳಿದಿಲ್ಲ. ಭಾರತ ಎಲ್ಲರಿಗೂ ಆಶ್ರಯ ಕೊಟ್ಟಿದೆ ನಿಜ. ಆದರೆ ಅದರಿಂದ ಭಾರತಕ್ಕೆ ಹಾನಿಯಾದುದು ಅಷ್ಟೇ ಸತ್ಯ. ಯಹೂದಿಗಳೋ, ಪಾರ್ಸಿಗಳೋ ಇಲ್ಲಿ ಹಾಲಿನಲ್ಲಿ ಸಕ್ಕರೆಯಂತೆ ಬೆರೆತು ಹೋಗಿರಬಹುದು. ದೇಶಕ್ಕಾಗಿ ಜೀವ ತೇಯ್ದಿರಬಹುದು. ಆದರೆ ಎಲ್ಲರೂ ಹಾಗಲ್ಲವಲ್ಲ. ಇಲ್ಲಿಗೆ ಆಕ್ರಮಕರಾಗಿ ಬಂದವರಿಗೂ ಈ ದೇಶ ಆಶ್ರಯ ಕೊಟ್ಟಿತು ನಿಜ. ಆದರೆ ಅವರು ಅಖಂಡವನ್ನೇ ತುಂಡು ಮಾಡಿ ಒಯ್ದರಲ್ಲ! ಈಗ ಇಲ್ಲಿ ನುಸುಳಿ ಬಂದವರೂ ಇದರಲ್ಲೇನೂ ಹಿಂದೆ ಬಿದ್ದಿಲ್ಲ. ಈ ನುಸುಳುಕೋರರಿಂದ ಬಹುಗಂಭೀರವಾದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ, ಸೃಷ್ಟಿಯಾಗುತ್ತಲೇ ಇವೆ, ಸೃಷ್ಟಿಯಾಗುತ್ತವೆ! ಕೌಶಲರಹಿತ ಔದ್ಯೋಗಿಕ ಕ್ಷೇತ್ರದಲ್ಲಿ ಉಂಟಾಗುವ ಪಲ್ಲಟನ, ಇದರಿಂದ ಉಂಟಾದ ಆರ್ಥಿಕ ಪ್ರಾಬಲ್ಯದಿಂದ ಹೆಚ್ಚಾಗುವ ಸಮಾಜಘಾತಕ ಕೃತ್ಯಗಳು, ಮತದ ಕಾರಣದಿಂದ ಹೆಚ್ಚಾಗಬಹುದಾದ ಅಸಹಿಷ್ಣುತೆ ಮತ್ತು ಅದರಿಂದ ಇಲ್ಲಿನ ಅಸುರಕ್ಷಿತ ಬಹುಸಂಖ್ಯಾತ ವರ್ಗದಲ್ಲಿ ಹುಟ್ಟಿಕೊಳ್ಳುವ ಭೀತಿ ಹಾಗೂ ಉಂಟಾಗುವ ಹಾನಿ, ಭಯೋತ್ಪಾದನೆಯ ಜೊತೆ ಇರುವ ಅಥವಾ ಮಾಡಿಕೊಳ್ಳಬಹುದಾದ ನೇರ ಕೊಂಡಿ, ಇಲ್ಲಿನ ಸಮಾಜದ ಮೌಲ್ಯಗಳ ಪರಿಚಯವಿಲ್ಲದ ಕಾರಣ ಸಮಾಜವನ್ನು ಛಿದ್ರಗೊಳಿಸಬಲ್ಲ ನಂಬಿಕೆ, ನಡವಳಿಕೆಗಳು, ಗುರುತು-ಪರಿಚಯದ ನಿಖರ ಮಾಹಿತಿಯೇ ಇಲ್ಲದ ಕಾರಣ ಇಂತಹ ಎಲ್ಲಾ ಕೃತ್ಯಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾದ ಸಾಧ್ಯತೆ, ಮತಾಂತರ-ನಿಯಂತ್ರಣವೇ ಇಲ್ಲದ ಸೃಷ್ಟಿಯಿಂದುಂಟಾಗಬಹುದಾದ ಜನಾಂಗೀಯ ಪಲ್ಲಟನ ಇದರಿಂದ ದೇಶ ಮತ್ತೊಮ್ಮೆ ಛಿದ್ರವಾಗಬಹುದಾದ ಭೀತಿ, ಇವೆಲ್ಲಕ್ಕೂ ಬೆಂಬಲವಾಗಿ ನಿಲ್ಲಲು ತುದಿಗಾಲಲ್ಲಿ ನಿಂತಿರುವ (ದುಃ)ಬುದ್ಧಿಜೀವಿ ವರ್ಗ ಇಂತಹ ಗಂಭೀರ ಸಮಸ್ಯೆಗಳನ್ನು ಈಗಾಗಲೇ ಇವರನ್ನು ಒಳಬಿಟ್ಟುಕೊಂಡು ನಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ. ಆಶ್ರಯ ಕೊಡಬೇಕು ನಿಜ, ನಮ್ಮನ್ನು ಮನೆಯಿಂದ ಹೊರಹಾಕಬಾರದಲ್ಲವೇ?

                  ಭಾರತದಲ್ಲಿ ಎತ್ತ ನೋಡಿದರತ್ತ ಕೂಲಿಯಾಳುಗಳ ಸಮಸ್ಯೆ. ಅದರಲ್ಲೂ ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಸಮಸ್ಯೆ ವಿಪರೀತ. ದೇಶದೊಳಕ್ಕೆ ಅಕ್ರಮವಾಗಿ ನುಗ್ಗುವ ಜನರಿಗೆ ದೇಶದ ಈ ಪರಿಸ್ಥಿತಿಯೇ ಲಾಭ ತಂದೊಡ್ಡಿದೆ.  ಹೆಚ್ಚಿನ ದೇಶೀಯ ಕೂಲಿ ಕಾರ್ಮಿಕರು ಮಹಾನಗರಗಳತ್ತ ಮುಖ ಮಾಡುವುದರಿಂದ ಸಣ್ಣ ನಗರಗಳಲ್ಲಿ ಉಂಟಾಗುವ ಕಾರ್ಮಿಕ ಅಭಾವ ಅಕ್ರಮ ವಲಸೆಗಾರರ ಪಾಲಿಗೆ ಭಾಗ್ಯದ ಬಾಗಿಲನ್ನೇ ತೆರೆದಿದೆ. ದೇಶೀಯ ಕಾರ್ಮಿಕರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಕಾರಣ ಮೇಸ್ತ್ರಿಗಳಿಗೂ ಇವರು ಅಚ್ಚುಮೆಚ್ಚು. ಹಗಲು-ರಾತ್ರಿ ದುಡಿದು ತಾವು ಹೇಳಿದ ಸಮಯಕ್ಕೆ ಕೆಲಸ ಮುಗಿಸಿಕೊಡುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಮೇಸ್ತ್ರಿಗಳು ಹಾಗೂ ಮಾಲಿಕರು ಇವರನ್ನೇ ಅವಲಂಬಿಸುತ್ತಾರೆ. ಅದರಲ್ಲೂ ಮನೆಗಳಿಗೆ ಗ್ರಾನೈಟ್ ಜೋಡಣೆ ಹಾಗೂ ಫ್ಲಾಸ್ಟರ್ ಆಫ್ ಪ್ಯಾರೀಸ್ ಕೆಲಸದಲ್ಲಿ ಇವರು ನಿಪುಣತೆ ಹೊಂದಿರುತ್ತಾರೆ. ಜೊತೆಗೆ, ಕೂಲಿ ವಿಷಯದಲ್ಲೂ ಹೆಚ್ಚಿನ ತಕರಾರು ಮಾಡದ ಕಾರಣ ಇವರು ತಮ್ಮ ಮಾಲಿಕರ ಮೆಚ್ಚುಗೆ ಗಳಿಸುತ್ತಾರೆ.  ತಮ್ಮ ಲಾಭವನ್ನೇ ನೋಡಿಕೊಳ್ಳುವ ಮೇಸ್ತ್ರಿ, ಕಟ್ಟಡದ ಮಾಲಿಕರಿಗೆ ಕೂಲಿಯಾಳುಗಳ ಪರಿಚಯ, ದೇಶ, ನಡತೆಗಳನ್ನು ಕಟ್ಟಿಕೊಂಡು ಆಗಬೇಕದ್ದಾದರೂ ಏನು? ಹೀಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರಾಗಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಸದ್ದಿಲ್ಲದೆ ನುಸುಳಿಕೊಳ್ಳುತ್ತಿದ್ದಾರೆ.  ನಿರ್ಮಾಣ ವಲಯಕ್ಕೆ ಬಹುಮುಖ್ಯವಾಗಿ ಬೇಕಿರುವ ಇಟ್ಟಿಗೆ ಕಾರ್ಖಾನೆಗಳಲ್ಲಿ ವಲಸಿಗರದೇ ಕಾರುಬಾರು. ಕಾರ್ಖಾನೆ ಇಟ್ಟಿಗೆಗೆ ಬಹು ಬೇಡಿಕೆ ಇರುವ ಈ ಕಾಲದಲ್ಲಿ ಇಟ್ಟಿಗೆ ನಿರ್ಮಾಣದ ಕಾರ್ಖಾನೆಗಳಿಗೇನು ಬರವಿದೆಯೇ? ಪ್ರತಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲೂ ಹತ್ತಾರು ಇಟ್ಟಿಗೆ ಕಾರ್ಖಾನೆಗಳಿವೆ. ಇಂತಹ ಕಾರ್ಖಾನೆಗಳೇ ಪಶ್ಚಿಮ ಬಂಗಾಳ, ಅಸ್ಸಾಂನವರು ಎಂದು ಹೇಳಿಕೊಂಡು ತಿರುಗಾಡುವ  ಬಾಂಗ್ಲಾ ನುಸುಳುಕೋರರ ಆಶ್ರಯತಾಣಗಳು. ಕಟ್ಟಡ ನಿರ್ಮಾಣ ಹಾಗೂ ಅದರ ಇತರ ಕೆಲಸಗಳಾದ ಬಡಗಿ, ಪ್ಲಂಬಿಂಗ್, ಗ್ರಾನೈಟ್, ಪೇಂಟಿಂಗ್ ಕೆಲಸಗಳಲ್ಲೂ ಇವರದೇ ಪಾರುಪತ್ಯ! ನಂಜನಗೂಡು ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ಗ್ರಾನೈಟ್ ಕಾರ್ಖಾನೆಗಳಲ್ಲಿ ಇವರೇ ಕೂಲಿ ಕಾರ್ಮಿಕರು. ಬೆರಳೆಣಿಕೆಯ ಕನ್ನಡಿಗರ ಮಧ್ಯೆ ಇವರದೇ ಪ್ರಾಬಲ್ಯ.

                ನಗರಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವವರೆಲ್ಲಾ ನಮ್ಮದೇ ದೇಶದ ಬಡಪಾಯಿಗಳು ಎಂದರೆ ನಿಮ್ಮ ನಿರೀಕ್ಷೆ ತಪ್ಪಾದೀತು. ಅಲ್ಲಿಯೂ ಬಾಂಗ್ಲಾದಿಂದ ಅಕ್ರಮವಾಗಿ ಇತ್ತ ನುಸುಳಿದವನಿರಬಹುದು. ಹಣ್ಣು, ಜ್ಯೂಸ್, ಪಾನಿಪೂರಿಯಂತಹ ವ್ಯಾಪಾರದಿಂದ ಹಿಡಿದು, ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಟ್ರಾಫಿಕ್ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವ, ಆಟಿಕೆ ಮಾರುವ ಕಾಯಕದಲ್ಲಿಯೂ ನುಸುಳುಕೋರರು ತೊಡಗಿಕೊಂಡಿದ್ದಾರೆ. ಇವರ ಪೂರ್ವಾಪರ ವಿಚಾರಿಸಿದರೆ ಪಶ್ಚಿಮ ಬಂಗಾಳ, ಅಸ್ಸಾಂ ಅಥವಾ ಬಿಹಾರಗಳ ಯಾವುದೋ ಗ್ರಾಮದ ಹೆಸರು ಹೇಳಿ ಸಾಗ ಹಾಕುತ್ತಾರೆ. ಅಸ್ಸಾಮಿಗಳು, ಬಂಗಾಳಿಗಳ ಹೆಸರಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಕಾಫಿ ತೋಟಗಳು, ಟೀ ಎಸ್ಟೇಟ್ಗಳಲ್ಲಿ ಕೂಲಿಗಳಾಗಿ ನೆಲೆಸಿದ್ದಾರೆ. ಭಾರತದಲ್ಲಿ ದಿನಕಳೆದಂತೆ ಕ್ಷೀಣಿಸುತ್ತಿರುವ ಕೌಶಲ್ಯರಹಿತ ಕಾರ್ಮಿಕರ ಸಂಖ್ಯೆಯನ್ನು ಮತ್ತೆ ತುಂಬುತ್ತಿರುವದು ಇದೇ ನುಸುಳುಕೋರ ವರ್ಗವೇ! ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಆಯುವವರಲ್ಲಿ ಬೆಂಗಾಲಿ ಮಾತನಾಡುವ ಬಾಂಗ್ಲಾ  ನುಸುಳುಕೋರರಿದ್ದಾರೆ! ಅಲ್ಲಿಗೆ ಕೌಶಲರಹಿತ ಔದ್ಯೋಗಿಕ ಪಲ್ಲಟನ ಪ್ರಾರಂಭ!

                ಇನ್ನೊಂದು ಭಯಾನಕ ಸಮಸ್ಯೆ ಇದೆ. ಈ ನುಸುಳುಕೋರರೆಲ್ಲಾ ಒಂದೋ ಮುಸ್ಲಿಮರು ಅಥವಾ ಮುಸ್ಲಿಮರಾಗಿ ಮತಾಂತರ ಹೊಂದಿದವರು. ಅವರು ತಮ್ಮ ಕ್ಯಾಂಪಿನಲ್ಲೇ ಮಸೀದಿ ನಿರ್ಮಿಸಿ ಕುರಾನ್ ಪಠಣಕ್ಕೆ ತೊಡಗುತ್ತಾರೆ. ಸ್ಥಳೀಯ ಮೌಲ್ವಿಗಳಿಂದ ಇವರಿಗೆ ಬೇಕಾದ ಸಹಾಯ, ಸೌಲಭ್ಯಗಳೂ ದೊರೆಯುತ್ತವೆ. ಸ್ಥಳೀಯ ಮೌಲ್ವಿಗಳಿಗೆ, ಮುಸ್ಲಿಮರಿಗೆ ಇವರೆಲ್ಲಾ ಬಾಂಗ್ಲಾ ನುಸುಳುಕೋರರೆಂಬಾ ವಿಚಾರ ತಿಳಿದಿದ್ದರೂ ಅದನ್ನು ಪೊಲೀಸರಿಗೆ ತಿಳಿಸದೆ ದೇಶದ್ರೋಹದ ಕಾರ್ಯವೆಸಗುತ್ತಿದ್ದಾರೆ! ಅತ್ತ ಭಯೋತ್ಪಾದಕ ಸಂಘಟನೆಗಳೂ ಈ ನುಸುಳುಕೋರರನ್ನು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವ ಮೂಲಭೂತವಾದಿಗಳಿಗೆ ಬಾಂಗ್ಲಾ ನುಸುಳುಕೋರರು ಅತಿ ಪ್ರೀತ್ಯರ್ಥರು! ಅಲ್ಲಿಗೆ ಭಯೋತ್ಪಾದಕ ಸಂಘಟನೆಗಳನ್ನು ದೇಶದ ಮೂಲೆ ಮೂಲೆಯ ಮುಸ್ಲಿಮರೊಂದಿಗೆ ಬೆಸೆಯಲು ಕೊಂಡಿಯೊಂದು ದೊರೆತಂತಾಯ್ತು. ಮೊದಲೇ "ತಮ್ಮ ದೇವರು, ಗ್ರಂಥ, ಮತವನ್ನು ನಂಬದವರು ಕಾಫಿರರು. ಅವರ ಮೇಲೆ ಜಿಹಾದ್ ಘೋಷಿಸಬೇಕು" ಎಂದು ದಿನನಿತ್ಯ ಪಠಿಸುವ ಮತೀಯರನ್ನು ದೇಶದ ವಿರುದ್ಧ ತಿರುಗಿಸಲು ಇನ್ನೇನು ಬೇಕು? ಮಸೀದಿಗಳೆಲ್ಲಾ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಹೊಂದಿದ್ದರೂ ಆಶ್ಚರ್ಯವಿಲ್ಲ! ದೇಶದ ಕಾನೂನಿನ ಲವಲೇಶವೂ ಪರಿಚಯವಿಲ್ಲದ, ಮಸೀದಿಯ ಆದೇಶಗಳನ್ನು ಮಾತ್ರ ಪಾಲಿಸುವ ಮಂದಿಯಿಂದ ದೇಶದ ಭದ್ರತೆಗೆ ಅಪಾಯ ಸದಾ ಕಟ್ಟಿಟ್ಟ ಬುತ್ತಿ. ಮುಂಬಯಿಯಲ್ಲಿ ಅಮರ್ ಜವಾನ್ ಜ್ಯೋತಿಗೆ ಒದ್ದ ಇವರ ಧಿಮಾಕನ್ನೇ ನೆನೆಸಿಕೊಳ್ಳಿ! ಭಾರತದ ಕರಾಳ ಭವಿಷ್ಯವನ್ನು ನೋಡಿ ಭಯವಾಗುತ್ತಿದೆ.

                 ಏಪ್ರಿಲ್ 2013ರಲ್ಲಿ ದಕ್ಷಿಣ ದೆಹಲಿ ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಾಲ್ಕು ಜನ ಬಾಂಗ್ಲಾ ನುಸುಳುಕೋರರಿಗೆ ಹದಿಮೂರು ವರ್ಷ ಶಿಕ್ಷೆ ವಿಧಿಸುತ್ತಾ  ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶಾಸ್ತ್ರಿ ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯುತ್ತಾ ಹೇಳಿದ ಮಾತು ಇದರ ಗಂಭೀರತೆಗೆ ಕನ್ನಡಿ ಹಿಡಿದಿದೆ. "ನೆರೆಯ ದೇಶಗಳಿಂದ ಬಂದ ಅಕ್ರಮ ವಲಸಿಗರನ್ನು ಒಟ್ಟುಗೂಡಿಸಿದರೆ, ಆ ಸಂಖ್ಯೆ ಒಂದು ಮಧ್ಯಮ ಗಾತ್ರದ ದೇಶದ ಜನಸಂಖ್ಯೆಗೆ ಸಮಾನವಾಗಿದೆ. ಈ ನುಸುಳುಕೋರರು ಕಡಿಮೆ ಕೂಲಿಗೆ ಕೆಲಸ ಮಾಡುವ ಮೂಲಕ ಮಧ್ಯಮ ವರ್ಗದ ಸ್ಥಳೀಯರನ್ನು ಯಾಮಾರಿಸಿದ್ದಾರೆ. ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗರನ್ನು ಗುರುತಿಸಿ ಆದಷ್ಟು ಬೇಗನೆ ಅವರ ದೇಶಗಳಿಗೆ ಕಳುಹಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಕೇಳಿಕೊಳ್ಳುತ್ತಿದ್ದೇನೆ. ಮತ ಬ್ಯಾಂಕ್ ರಾಜಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ವಿದೇಶೀಯರ ಜೊತೆಗಿನ ವ್ಯವಹಾರ ತಮ್ಮದಲ್ಲವೆಂದು ಪರಸ್ಪರರ ಮೇಲೆ ಆರೋಪ ಹೊರಿಸುತ್ತಾ ಕಾಲಹರಣ ಮಾಡಿದುದರಿಂದ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಅಪರಾಧ ಚಟುವಟಿಕೆ ನಿರಂತರ ಹೆಚ್ಚಾಗುತ್ತಿದೆ." ನ್ಯಾಯಾಧೀಶರ ಮಾತನ್ನಾದರೂ ನಮ್ಮ ಲಜ್ಜೆಗೆಟ್ಟ ಸರಕಾರಗಳು ಪಾಲಿಸುತ್ತಿದ್ದರೆ ಇಂದು ಈ ಸಮಸ್ಯೆ ಪರಿಹಾರವಾಗುತ್ತಿತ್ತು! ಆದರೆ ಹಿಂದಿನ ಸರಕಾರ ತನ್ನ ಸೆಕ್ಯುಲರ್ ನೀತಿ, ಶೇಖ್ ಹಸೀನಾರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವ ನೆಪ, ಮತಬ್ಯಾಂಕ್ ರಾಜಕಾರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಗಡಿಭದ್ರತಾ ಪಡೆಗೆ ಅನೇಕ ನಿರ್ಬಂಧಗಳನ್ನು ವಿಧಿಸಿತ್ತು. ತಾವು ಮರುದಾಳಿ ಮಾಡುವಂತಿಲ್ಲವಾದ ಕಾರಣ ಅನೇಕ ಸೈನಿಕರು ಸಾವನ್ನಪ್ಪಿದ, ಹಲವರು ಗಾಯಗೊಂಡ ನಿದರ್ಶನಗಳೂ ಇವೆ. ಇತ್ತೀಚೆಗೆ ಮೋದಿ ಪ್ರಧಾನಿಯಾದ ಬಳಿಕ ಇಂತಹುವುಗಳಿಗೆಲ್ಲಾ ಕಡಿವಾಣ ಬಿದ್ದಿರುವುದು ಸಂತಸದ ವಿಚಾರ.

                    ಈ ತೀವ್ರ ಸ್ವರೂಪದ ಅಕ್ರಮಪ್ರವೇಶದಿಂದ ಗರಿಷ್ಠ ಹಾನಿಗೀಡಾದ ರಾಜ್ಯವೆಂದರೆ ಅಸ್ಸಾಂ. ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ತೀವ್ರಸ್ವರೂಪದ ಜನಾಸಂಖ್ಯಾ ಅಸಮತೋಲನ ಉಂಟಾಗಿದೆ. ಅಕ್ರಮ ಗಡಿ ನುಸುಳುವಿಕೆ ಹಾಗೂ ಏಕರೂಪದ ಕಾನೂನು ಇಲ್ಲದಿರುವ ಕಾರಣ ಅಸ್ಸಾಂನ ಡುಬ್ರಿ, ಗೋಲ್ಪಾರಾ, ಬಾರ್ ಪೇಟ್, ನಾಗೋನ, ಹೈಲಂಕಾಡಿ, ಕರಿಂಗಂಜ್, ಮಾರಿಂಗಾನ, ದರಾಂಗ್, ಬೊಂಗೈಗಾಂವ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೫೦%ಗಿಂತಲೂ ಅಧಿಕವಾಗಿದೆ. ಅಲ್ಲದೆ ಈ ಏರಿಕೆಯ ಪ್ರಮಾಣವೂ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು. ಪರಿಣಾಮವಾಗಿ ಆಗಾಗ ಮತೀಯ ಘರ್ಷಣೆಗಳೂ ನಡೆದಿವೆ. ಬೃಹತ್ ಸ್ವರೂಪದ ಹತ್ಯಾಕಾಂಡಗಳೂ ಸಂಭವಿಸಿವೆ. ಇದೇ ರೀತಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳಾಗುವ ಮುಜಾಫರ್ ನಗರ್, ಮೊರಾದಾಬಾದ್, ರಾಂಪುರ, ಸಹರಾನ್ಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೩೫%ಕ್ಕಿಂತ ಅಧಿಕವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಸದಾ ಗಲಭೆಯ ಕಿಚ್ಚು ಹಚ್ಚುವ ಮಾಲ್ಡಾ, ಉತ್ತರ ದಿನಾಜ್ಪುರಗಳಲ್ಲಿ ಮುಸಲರು ೫೦%ಕ್ಕಿಂತ ಜಾಸ್ತಿಯಿದ್ದರೆ, ಹತ್ತು ಜಿಲ್ಲೆಗಳಲ್ಲಿ ಅವರ ಸಂಖ್ಯೆ ೨೫%ಗಿಂತಲೂ ಹೆಚ್ಚು!  ಬಾಂಗ್ಲಾದೇಶದ ಗಡಿಭಾಗದಿಂದ ಕೇವಲ 8 ಕಿಮಿ ದೂರದಲ್ಲಿರುವ ಮಾಲ್ಡಾ ಜಿಲ್ಲೆಯಂತೂ ಅಕ್ರಮ ನುಸುಳುಕೋರರ ಒಂದು ಬೃಹತ್ ಅಡ್ಡೆ! ಪೋಲೀಸ್ ಠಾಣೆಯ ಮೇಲೆ ದಾಳಿ, ಅಪರಾಧದ ದಾಖಲೆಗಳನ್ನು ಸುಡುವ ದೇಶದ್ರೋಹಿ ಚಟುವಟಿಕೆಗಳು, ಭದ್ರತಾ ಸಿಬ್ಬಂದಿಯ ಮೇಲಿನ ಹಲ್ಲೆ, ಫತ್ವಾ ಹೊರಡಿಸಿ ಹಿಂದೂಗಳ ಮೇಲೆ ದಾಳಿ, ಹಿಂಸಾಚಾರ, ಗುಂಪು ಘರ್ಷಣೆ, ಬಾಂಬ್ ತಯಾರಿಕೆ, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಹಸ್ತ ಇವೆಲ್ಲವೂ ಇಲ್ಲಿ ನಿತ್ಯದ ಸಂಗತಿಗಳು. ಈ ಮೂಲಭೂತವಾದಿ ಗುಂಪುಗಳ ಭಯದಿಂದಾಗಿಯೇ ಗಡಿಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳು ಸುರಕ್ಷಿತ ಜಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ನಕಲಿ ನೋಟುಗಳ ಹಾವಳಿ, ಗೋವು ಸಾಗಣಿಕೆಯಂತಹ ದುಷ್ಟ ಚಟುವಟಿಕೆಗಳಿಗೆ ಇದು ರಾಜಮಾರ್ಗ! ಜೊತೆಗೆ ಈ ಜಿಹಾದೀ ಚಟುವಟಿಕೆಗಳಿಗೆ ಬಂಗಾಳದ ಮುಖ್ಯಮಂತ್ರಿ ದೀದಿಯ ಕೃಪಾಕಟಾಕ್ಷ ಬೇರೆ! ಇಂತಹ ಮೂಲಭೂತವಾದಿಗಳನ್ನು ಬಗ್ಗುಬಡಿಯುವ ಬದಲು ಅವರನ್ನು ಪೋಷಿಸುವವರಿಗೆ ಮಂತ್ರಿಗಿರಿ, ರಾಜಕೀಯ, ಲಾಭವುಳ್ಳ ಸರಕಾರಿ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಕಲ್ಪಿಸಿಕೊಡಲಾಗುತ್ತಿದೆ.  ಬಿಹಾರದ ಕಿಶನ್ ಗಂಜ್ ಹತ್ತಿರ ಹತ್ತಿರ ೭೦% ಮುಸಲರನ್ನು ಹೊಂದಿರುವ ಮಿನಿ ಪಾಕಿಸ್ತಾನ! ಕಾತಿಹಾರ್, ಅರಾರಿಯ, ಪೂರ್ನಿಯಾಗಳಲ್ಲಿ ೪೦% ಕ್ಕಿಂತಲೂ ಅಧಿಕ ಮುಸಲರಿದ್ದು, ಈ ಸಂಖ್ಯೆ ವಿಪರೀತ ಏರುತ್ತಿದೆ. ಇವೆಲ್ಲವೂ ಅಕ್ರಮ ನುಸುಳುಕೋರರಿಗೆ ಆಶ್ರಯ ಕೊಟ್ಟದ್ದಕ್ಕೆ ಸಿಕ್ಕ ಪ್ರತಿಫಲಗಳು!

                   ಇದು ಅಕ್ರಮ ಬಾಂಗ್ಲಾ ನುಸುಳುಕೋರರಿಂದುಂಟಾದ ಸಮಸ್ಯೆಯಾದರೆ ಆಫ್ರಿಕನ್ನರದ್ದು ಇನ್ನೊಂದು ರೀತಿಯ ಸಮಸ್ಯೆ. ದೇಶದ ವಿವಿಧ ನಗರಗಳಲ್ಲಿ ಡ್ರಗ್ಸ್ ಮಾರಾಟ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಹು ದೊಡ್ದ ವರ್ಗ ನೈಜೀರಿಯನ್ನರದ್ದು! ತೀರಾ ಇತ್ತೀಚೆಗೆ ಮನಸೋ ಇಚ್ಛೆ ಮದ್ಯ ಕುಡಿದು ಅಥವಾ ಡ್ರಗ್ಸ್ ಸೇವಿಸಿ ಸಾರ್ವಜನಿಕರಲ್ಲಿ ಭಯಭೀತಿ ಉಂಟುಮಾಡಿದ, ಪೊಲೀಸರ ಬಳಿಯೇ ಧಿಮಾಕು ಪ್ರದರ್ಶಿಸಿದ ಅಫ್ರಿಕನ್ ವಿದ್ಯಾರ್ಥಿಗಳಿಂದ ಸಂಭವಿಸಿದ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇತರ ದೇಶಗಳಿಂದ ವಿದ್ಯಾರ್ಜನೆಗೆಂದು ಬರುವ ವಿದ್ಯಾರ್ಥಿಗಳು ಸುಲಭವಾಗಿ ಈ ಡ್ರಗ್ಸ್ ಅಡ್ದೆಗಳು ಹಾಗೂ ವೇಶ್ಯಾವಾಟಿಕೆಯ ಜಾಲಗಳನ್ನು ನಡೆಸುವುದು ಹೇಗೆ? ಬಳಿಕ ಬಂದ ವಿದ್ಯಾರ್ಥಿಗಳು ಸುಲಭವಾಗಿ ಅದಕ್ಕೆ ಬಲಿಬಿಳುವುದು ಹೇಗೆ? ಇದು ನಮ್ಮ ಆಂತರಿಕ ಭದ್ರತಾ ಲೋಪವಲ್ಲವೇ? ನಾಳೆ ಅದೇ ಜನ ಅಕ್ರಮ ಶಸ್ತ್ರಾಸ್ತ್ರ ಜಾಲಳನ್ನು ಸ್ಥಾಪಿಸುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ? ವಿದ್ಯಾರ್ಥಿಯ ವೀಸಾ ಮೂಲಕ ಬರುವವರು ನಿಜವಾದ ವಿದ್ಯಾರ್ಥಿಗಳು ಹೌದೋ ಅಲ್ಲವೋ ಎಂದು ಬ್ಯೂರೋ ಆಫ್ ಇಮಿಗ್ರೇಷನ್ ಸಾಕಷ್ಟು ಪರಿಶೀಲನೆ ಯಾಕೆ ನಡೆಸುತ್ತಿಲ್ಲ?

                      ಇವೆಲ್ಲವುಗಳ ಜೊತೆ ವ್ಯವಹರಿಸಲು ಭಾರತದಲ್ಲೊಂದು ಕಟ್ಟುನಿಟ್ಟಾದ ವಲಸೆ ನೀತಿಯೇ ಇಲ್ಲ ಎನ್ನುವುದೇ ಒಂದು ದೊಡ್ಡ ಚೋದ್ಯ! ಇರುವ ಕಾನೂನುಗಳನ್ನಾದರೂ ಉಪಯೋಗಿಸಬಹುದಲ್ಲವೇ ಎಂದರೆ ಆಫ್ರಿಕಾದ ವಿದ್ಯಾರ್ಥಿಗಳ ಜೊತೆ ಕಟ್ಟುನಿಟ್ಟಾಗಿ ವ್ಯವಹರಿಸಿದರೆ ನಮ್ಮ ಹಾಗೂ ಆಫ್ರಿಕಾದ ವಿದೇಶೀ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎನ್ನುವ ಹುಸಿ ಭಯ! ಅವರ ಅಕ್ರಮ ಅಡ್ಡೆಗಳನ್ನು ನಾಶಪಡಿಸಿದರೆ ಅದು ವರ್ಣಭೇದ ನೀತಿಯ ಇನ್ನೊಂದು ಮಜಲಾದೀತು ಎನ್ನುವ ಭೀತಿ! ಅಮೆರಿಕಾ, ಇಸ್ರೇಲುಗಳು ಇಂತಹ ವಿಚಾರದಲ್ಲಿ ಕಠಿಣ ನೀತಿ ಅನುಸರಿಬಹುದಾದರೆ ಭಾರತದಂತಹ ಅತಿ ದೊಡ್ಡ ಅರ್ಥ ವ್ಯವಸ್ಥೆಯುಳ್ಳ ದೇಶಕ್ಕೆ ಯಾಕೆ ಸಾಧ್ಯವಿಲ್ಲ? ಎಲ್ಲದರಲ್ಲೂ ಶಾಂತಿಯುತವಾಗಿರಬೇಕೆಂದು ದೇಶದ ಭದ್ರತೆಯ ವಿಚಾರದಲ್ಲೂ ರಾಜೀ ಮಾಡಿಕೊಳ್ಳುವುದು ಎಷ್ಟು ಸರಿ?

                 ಹೊರದೇಶಗಳಿಂದ ಶಿಕ್ಷಣ, ವೈದ್ಯಕೀಯ, ಉದ್ಯೋಗ, ಪ್ರವಾಸಕ್ಕಾಗಿ ಜನ ಇಲ್ಲಿಗೆ ಬರುವುದು ಸಂತೋಷದ ವಿಚಾರವೇ. ಆದರೆ ವೀಸಾ ಅವಧಿ ಮುಗಿದ ತಕ್ಷಣ ಅವರನ್ನು ಮರುಕಳುಹದಿದ್ದರೆ ಆಗುವ ಅನಾಹುತಗಳಿಗೆ ಯಾರು ಹೊಣೆ? ಇಲ್ಲಿ ಬಂದವರ ಮೇಲೆ ನಿಗಾ ಇಡಬೇಕಲ್ಲವೇ? ಅವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದಾಗ ಅದನ್ನು ತಡೆಗಟ್ಟಬೇಕಲ್ಲವೇ? ಇದಕ್ಕಾಗಿ ಬಲವಾದ ವಲಸೆ ಹಾಗೂ ಗಡೀಪಾರು ನೀತಿಯನ್ನು ಭಾರತ ಹೊಂದುವ ಅಗತ್ಯವಿದೆ. ಅಲ್ಲದೇ ಈ ಕಾನೂನನ್ನು ಸುಸೂತ್ರವಾಗಿ ನಡೆಸಲು ರಾಜಕೀಯರಹಿತವಾದ ಸ್ವತಂತ್ರ ಸಂಸ್ಥೆಯೊಂದರ ಅವಶ್ಯಕತೆಯೂ ಬಹಳ. ಭಾರತಕ್ಕೆ ಬರುವ ಪ್ರತಿಯೊಬ್ಬ ವಿದೇಶಿಗನ ಮಾಹಿತಿಯ ನಿಖರ ದಾಖಲಾತಿ ಹಾಗೂ ಅದರ ನಿರ್ವಹಣೆಯ ಅಗತ್ಯತೆಯಿದೆ.

               ಇದು ಭಾರತದ ಕಥೆಯಾದರೆ ವಲಸಿಗರಿಗೆ ತಮ್ಮ ಹೆಬ್ಬಾಗಿಲನ್ನು ತೆರೆದು ಪೂರ್ಣಕುಂಭ ಸ್ವಾಗತ ಕೋರಿದ ಯೂರೋಪಿನ ದೇಶಗಳು ತಮ್ಮ ತಪ್ಪಿಗೆ ಪರಿತಪಿಸುವ ಕಾಲ ಹತ್ತಿರವಾಗುತ್ತಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಇಂಗ್ಲೆಂಡಿನ ಮುಸ್ಲಿಂ ಜನಸಂಖ್ಯೆ 200%ದಷ್ಟು ಹೆಚ್ಚಳವಾಗಿದ್ದು ಇದೇರೀತಿ ಮುಂದುವರೆದರೆ ಮುಂದಿನ ಹದಿನೈದು ವರ್ಷಗಳಲ್ಲಿ ಇಂಗ್ಲೆಂಡಿನ ಅರ್ಧಕ್ಕರ್ಧ ಜನಸಂಖ್ಯೆ ಮುಸ್ಲಿಂಮಯವಾಗಿಬಿಡುತ್ತದೆ. ಆದರೆ ಇದರಿಂದೇನೂ ಇಂಗ್ಲೀಷರಿಗೆ ಬುದ್ಧಿ ಬಂದಂತೆ ಕಾಣಿಸುತ್ತಿಲ್ಲ. ಅಲ್ಲಿ ಇಸ್ಲಾಂ ಮೂಲಭೂತವಾದದ ವಿರುದ್ಧ ಹೋರಾಡುವವರನ್ನು ಇಲ್ಲಿನಂತೆಯೇ "ಎನಿಮೀ ಆಫ್ ಸ್ಟೇಟ್" ಎಂದು ಕರೆದು ಜೈಲಿಗಟ್ಟಲಾಗುತ್ತಿದೆ. ಇದಕ್ಕೆ ಸರಿಯಾಗಿ ಕಳೆದ ಒಂದೇ ವಾರದಲ್ಲಿ ಎರಡೆರಡು ಬಾಂಬುದಾಳಿಗಳು ಅಲ್ಲಿ ನಡೆದಿವೆ. ಒಂದು ಕಾಲದ ಸೂರ್ಯ ಮುಳುಗದ ನಾಡು ಸೆಕ್ಯುಲರ್ ನೀತಿಯಿಂದ ಕೊಚ್ಚೆಗೆ ಜಾರುತ್ತಿದೆ! ಫ್ರಾನ್ಸಿನಲ್ಲಿ ಫರ್ಟಿಲಿಟಿ ದರ 1.8 ಇದ್ದರೆ ಅಲ್ಲಿನ ಮುಸ್ಲಿಮರಲ್ಲಿ ಅದು 8ಕ್ಕೂ ಹೆಚ್ಚು! ಇದೇ ರೀತಿ ಮುಂದುವರೆದರೆ ಮುಂದಿನ 39 ವರ್ಷಗಳಲ್ಲಿ ಫ್ರಾನ್ಸ್ ಇಸ್ಲಾಮಿಕ್ ರಿಪಬ್ಲಿಕ್ ಆಗಿ ಬದಲಾಗಿರುತ್ತದೆ. ಏಂಜಲೋ ಮೋರ್ಕೆಲ್ ಯುದ್ಧ ಪೀಡಿತ ಮಧ್ಯ ಪೂರ್ವದಿಂದ ಬಂದ ಲಕ್ಷಾಂತರ ವಲಸಿಗರಿಗೆ ಜರ್ಮನಿಯ ಹೆಬ್ಬಾಗಿಲು ತೆರೆದರು. ಜರ್ಮನಿಗೆ ಬಂದ ಲಕ್ಷಾಂತರ ವಲಸಿಗರು ಯಾವ ದೇಶದವರೆಂಬ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಅಲ್ಲಿ ಇಸ್ಲಾಂನ ರಭಸ ಕಂಡರೆ 2050ಕ್ಕೆ ಜರ್ಮನಿ ಮುಸ್ಲಿಂ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಸರಕಾರದ ಅಧಿಕೃತ ವರದಿಯೇ ಹೇಳುತ್ತಿದೆ. ರಷ್ಯಾದಲ್ಲಿ ಪ್ರತೀ ಐವರಲ್ಲಿ ಒಬ್ಬ ಮುಸ್ಲಿಂ! ಬೆಲ್ಜಿಯಂನ 25% ಜನಸಂಖ್ಯೆ ಹಾಗೂ 50% ನವಜಾತ ಶಿಶುಗಳು ಮುಸ್ಲಿಮರು! 2025ಕ್ಕಾಗುವಾಗ ಯೂರೋಪ್ ದೇಶಗಳ ಮೂರರಲ್ಲಿ ಒಂದು ನವಜಾತ ಶಿಶು ಮುಸ್ಲಿಂ ಆಗಿರುತ್ತದೆ. 2001-06ರ ನಡುವೆ ಕೆನಡಾದ ಜನಸಂಖ್ಯೆ 1.6 ಮಿಲಿಯನ್ನಷ್ಟು ಹೆಚ್ಚಿತು. ಅದರಲ್ಲಿ 1.2 ಮಿಲಿಯನ್ ವಲಸಿಗರೇ ಆಗಿದ್ದರು! ಅವರು ಮುಸ್ಲಿಮರು ಎಂದು ಬೇರೆ ಹೇಳಬೇಕಾಗಿಲ್ಲ. 1970ರಲ್ಲಿ 1,00,000ವಿದ್ದ ಅಮೆರಿಕಾದ ಮುಸ್ಲಿಮರ ಸಂಖ್ಯೆ 2008ಕ್ಕಾಗುವಾಗ 90,00,000 ಆಯಿತು! ಸ್ವೀಡನ್ನಿನಲ್ಲಿ 2014ರಲ್ಲಿ ಹತ್ತುಸಾವಿರ ಬಲಪಂಥೀಯ ಕಾರ್ಯಕರ್ತರು ವಲಸಿಗರನ್ನು ಹೊರಹಾಕಬೇಕೆಂದು ಸರಕಾರವನ್ನು ಒತ್ತಾಯಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರಕಾರಕ್ಕೆ ಆಗ ಕಿವಿ ಕೇಳಿಸುತ್ತಿರಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸುಗಳಲ್ಲಿ ನುಗ್ಗಿರುವ ವಲಸಿಗರು ರಾಜಾರೋಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಓಡುವ ದೃಶ್ಯಗಳ ವಿಡೀಯೋಗಳು ಯೂಟ್ಯೂಬುಗಳಲ್ಲಿ ಮಾಮೂಲಾಗಿಬಿಟ್ಟಿವೆ. ಇವೆಲ್ಲಾ ದೇಶಗಳಲ್ಲಿ ತಮ್ಮ ದೇಶವನ್ನು ಉಳಿಸಬೇಕೆಂಬ ಸಂಕಲ್ಪ ಹೊತ್ತು ಬಲಪಂಥೀಯ ಸಂಘಟನೆಗಳು ಬೀದಿಗಿಳಿದಿವೆ. ಆದರೆ ಆ ದೇಶಗಳಲ್ಲೂ ಭಾರತದಂತೆ ಸೆಕ್ಯುಲರ್ ಜೀವಿಗಳು ಇದಕ್ಕೆ ಅಡ್ದಗಾಲಾಗಿ ನಿಂತಿವೆ. ಸರಕಾರಗಳೂ ಈ ಸೆಕ್ಯುಲರುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅಲ್ಲಿಯೂ ಮತಬ್ಯಾಂಕಿನ ದುರಾಸೆ! ಇವೆಲ್ಲವೂ ಅಸಮರ್ಪಕ ವಲಸೆ ನೀತಿ, ಅಥವಾ ಸಮರ್ಪಕವಾಗಿದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿನ ಕೊರತೆಯ ನೇರ ಪರಿಣಾಮಗಳು.