ಪುಟಗಳು

ಮಂಗಳವಾರ, ಡಿಸೆಂಬರ್ 15, 2015

ಭರತನಾಟ್ಯವನ್ನೇ ಶಿಲುಬೆಗೇರಿಸಿದ ಮತಾಂಧತೆ

ಭರತನಾಟ್ಯವನ್ನೇ ಶಿಲುಬೆಗೇರಿಸಿದ ಮತಾಂಧತೆ

            “ಭರತ ನಾಟ್ಯವು ಸೃಷ್ಟಿ-ಸ್ಥಿತಿ-ಲಯಗಳ ಆವರ್ತನಾಚಕ್ರವನ್ನೇ ಆಧರಿಸಿದೆ. ಶಿವನ ನೃತ್ಯದಲ್ಲಿ ಕಾಣಬರುವುದೂ ಅದೇ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು”
- ಆನಂದ ಕುಮಾರ ಸ್ವಾಮಿ. 
ನೃತ್ಯದ ಹಿಂದಿನ ತತ್ವವನ್ನು ಅರುಂದಲೆ "ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ" ಎಂದು ವಿವರಿಸುತ್ತಾರೆ. ಶಿವನ ಈ ನೃತ್ಯ ರೂಪಕವು  ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ.

               ನಟರಾಜ ನೃತ್ಯದ, ನೃತ್ಯಗಾರರ ಅಧಿಪತಿ. ಅವನು ಪ್ರಜ್ಞೆಯ ಭವನದಲ್ಲಿ ನರ್ತಿಸುತ್ತಾನೆ. ಇಡೀ ವಿಶ್ವದ ಲಯಗತಿಯನ್ನು ನೇಯುತ್ತಾನೆ. ಸೃಷ್ಟಿ, ಸ್ಥಿತಿ, ಪುನರುಜ್ಜೀವನ ತಿರೋಧಾನ ಮತ್ತು ಅನುಗ್ರಹಗಳೆಲ್ಲವೂ ಅವನ ನೃತ್ಯದಲ್ಲಿ ಒಳಗೊಂಡಿವೆ. ನೃತ್ಯವು ಹಿಂದೂ ಧರ್ಮದೊಂದಿಗೆ ಎಷ್ಟು ಬೆಸೆದಿದೆಯೆಂದರೆ ಅದನ್ನು ಈ ಮೌಲಿಕ ಹಿನ್ನೆಲೆಯಿಂದ ಬೇರ್ಪಡಿಸಿ ಊಹಿಸುವುದೂ ಅಸಾಧ್ಯ ಎಂದಿದ್ದಾರೆ ರುಕ್ಮಿಣಿದೇವಿ ಅರುಂದಲೆ. ನೃತ್ಯವು ದೇವತಾರಾಧನೆಯ ಒಂದು ವಿಧಾನವೂ ಹೌದು. ಭರತನಾಟ್ಯದ ಮೂಲವನ್ನು ನೃತ್ಯಕ್ಕೆ ಸಂಬಂಧಿಸಿದ ವೇದದ ಉಲ್ಲೇಖಗಳಲ್ಲಿ ಗುರುತಿಸಬಹುದು. ಕಲಾ ಪ್ರಕಾರ ಹಾಗೂ ಕಲಾಭಿಜ್ಞತೆಯ ಅಧಿಕೃತ ಗ್ರಂಥವಾದ "ನಾಟ್ಯಶಾಸ್ತ್ರ"ವನ್ನು ಭರತ ಮುನಿ ಬರೆಯುವುದಕ್ಕೆ ಮುಂಚೆಯೇ ನೃತ್ಯಪ್ರಕಾರವು ವ್ಯವಸ್ಥಿತ ರೂಪ ತಳೆದಿತ್ತು. ತಮಿಳು ಮಹಾಕಾವ್ಯ "ಚಿಲ್ಲಪ್ಪದಿಗಾರಂ" ಪ್ರಾಚೀನ ನಗರಗಳಲ್ಲಿ ಶಾಸ್ತ್ರೀಯ ನೃತ್ಯಪ್ರದರ್ಶನ ನಡೆಯುತ್ತಿದುದರ ಬಗ್ಗೆ ವರ್ಣಿಸಿದೆ. ಶಾಸ್ತ್ರ ಗ್ರಂಥಗಳನ್ನು ನೇರವಾಗಿ ಗ್ರಹಿಸುವ ಶಕ್ತಿ ಇಲ್ಲದ ಸಾಮಾನ್ಯರು ಮಾತ್ರವಲ್ಲ, ಕಲೆಯ ಮೂಲಕವೇ ಶಿವನನ್ನು ಒಲಿಸಿಕೊಳ್ಳುವ ಮರ್ಮ ತಿಳಿವ ಹಂಬಲವಿದ್ದ ಅಸಾಮಾನ್ಯರೂ ನೃತ್ಯವನ್ನು ದೇವತಾರಾಧನೆಯ ಭಾಗವೆಂದೇ ಪರಿಗಣಿಸುತ್ತಿದ್ದುದರ ಫಲವಾಗಿ ಅವುಗಳಿಗೆ ಧಾರ್ಮಿಕ ಆಚರಣೆಗಳ ಸ್ಥಾನವಿತ್ತು.

ನೃತ್ಯದ ಆಧ್ಯಾತ್ಮಿಕ ಆಯಾಮವನ್ನು ಕಾಪಾಡಿಕೊಂಡು, ಅದರಲ್ಲಿ ಹೊಸ ಹೊಸ ಪ್ರಕಾರಗಳನ್ನು ಪರಿಚಯಿಸಿ, ಅದರ ತಂತ್ರಗಳನ್ನು ಪ್ರಸಾರ ಮಾಡಿದವರಲ್ಲಿ ಶೈವ ಸನ್ಯಾಸಿಗಳೂ ಪ್ರಮುಖರು. ಅವರು ಅದನ್ನು ಆನಂದದ ತುರೀಯಾವಸ್ಥೆಗೆ ತಲುಪುವ ಒಂದು ವಿಧಾನವಾಗಿ ಬಳಸುತ್ತಿದ್ದರು. ಭರತ ಖಂಡದ ಉದ್ದಗಲಗಳಲ್ಲಿ ತಮ್ಮದೇ ನಾಟ್ಯ ಪರಂಪರೆಯನ್ನು ಹೊಂದಿದ ವಿವಿಧ ಬುಡಕಟ್ಟು ಪರಂಪರೆಗಳು ಈ ಸುಸಂಸ್ಕೃತ ನೃತ್ಯಧಾರೆಯೊಂದಿಗೆ ಸಂಬಂಧ ಹೊಂದಿದ್ದಂಥವೇ. ಈ ಮುಖ್ಯ ಧಾರೆಯೇ ಮುಂದೆ ಭರತ ನಾಟ್ಯ, ಕಥಕ್ಕಳಿ, ಮಣಿಪುರಿ ಮುಂತಾದ ಅನನ್ಯ ನಾಟ್ಯ ಸಂಯೋಜನೆಗಳ ಉದಯಕ್ಕೆ ನೆರವಾಯಿತು. ಎಷ್ಟೆಂದರೆ ಕಠ್ಮಂಡು ಕಣಿವೆಯಲ್ಲಿದ್ದ ಬೌದ್ಧರು ನೇವಾರರಲ್ಲಿ ತಮ್ಮ ರಾಜ್ಯವನ್ನು ವಾರ್ಷಿಕವಾಗಿ ನವೀಕರಿಸುವ ವಿಧಿಯೆಂಬಂತೆ ಭೈರವ ನೃತ್ಯವನ್ನು ಮಾಡುತ್ತಿದ್ದರು, ನಟರಾಜನನ್ನು ಪೂಜಿಸುತ್ತಿದ್ದರು. ಇವೆಲ್ಲಾ ಹೊಂದಾಣಿಕೆಗಳು ಮೂಲಪ್ರಾಕಾರವನ್ನು ಬುಡಮೇಲು ಮಾಡದೆ ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿದವು.

ಯಾವಾಗ ಮಿಷನರಿಗಳು ಭಾರತದಲ್ಲಿ ಬಲವಾಗಿ ಕಾಲೂರಲಾರಂಭಿಸಿದರೋ ಅಂದಿನಿಂದ ಭಾರತೀಯ ನಾಟ್ಯ ಶಾಸ್ತ್ರದ ಮೇಲೆ ಪ್ರಹಾರ ಮೊದಲ್ಗೊಂಡಿತು. ಅವರ ಮೊದಲ ಪ್ರಹಾರ ದೇವದಾಸೀ ಪದ್ದತಿಯ ಮೇಲೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಶೈವಾಗಮದ ಪ್ರಕಾರ ಶಿವನ ಪೂಜೆಯ ಒಂದು ಭಾಗವಾಗಿ ಇಂತಿಂಥ ಪ್ರಕಾರದ ನ್ರತ್ತವನ್ನು ಇಂತಿಂಥ ಕುಲದ ಸ್ತ್ರೀಯರು ಮಾಡಬೇಕು. ಮತ್ತು ಐದು ಆಚಾರ್ಯರು ಹಿಮ್ಮೇಳದಲ್ಲಿರಬೇಕು ಎನ್ನುವ ಉಲ್ಲೇಖದಂತೆ ಅಂತಹ ಕುಲಗಳು ದೇವಾಲಯಗಳ ಸೇವೆಯ ಅಗತ್ಯ ಜೊತೆಗಾರರಾಗಿ ಜೀವನ ಸಾಗಿಸಿದ್ದವು. ಆದರೆ ಹನ್ನೊಂದನೆಯ ಶತಮಾನದವರೆಗೆ ಶುದ್ಧ ಹಾಗೂ ಉತ್ತುಂಗ ಸ್ಥಿತಿಯಲ್ಲಿದ್ದ ಈ ಪದ್ದತಿ ಮೊಘಲರ ಆಳ್ವಿಕೆ ಬಂದೊಡನೆ ಧಾರ್ಮಿಕತೆಯಿಂದ ರಿಕ್ತವಾಗಿ ಮನರಂಜನೆಯಾಗಿ ಬದಲಾಯಿತು. ಕೆಲವು ಸಂದರ್ಭಗಳಲ್ಲಿ ನರ್ತಕಿಯರು ವೇಶ್ಯಾವಾಟಿಕೆಗೆ ಬಳಸಲ್ಪಟ್ಟು ದೇವದಾಸೀ ಪದ್ದತಿಯ ಬಗೆಗೆ ಹಿಂದೂಗಳಿಗೇ ಅಸಹ್ಯಹುಟ್ಟುವಂತಾಗಿತ್ತು. ಈ ಲಂಪಟತನವನ್ನೇ ಅಸ್ತ್ರವಾಗಿಟ್ಟುಕೊಂಡು ವಿಚಾರವಂತ ಹಿಂದೂಗಳ ಸಹಾನುಭೂತಿ ಗಿಟ್ಟಿಸಿ ತಮ್ಮ ಕಂಪೆನಿ ಸರಕಾರದ ಮೂಲಕ ಈ ಪದ್ದತಿಯನ್ನೇ ನಿರ್ಮೂಲನಗೊಳಿಸಹೊರಟರು ಮಿಷನರಿಗಳು. ನಿಜವಾದ ಕಳಕಳಿ ಹೊಂದಿದ್ದರೆ ಕೆಟ್ಟು ಹೋದ ಭಾಗವನ್ನು ತೆಗೆದು ಮತ್ತೆ ಶುದ್ಧತೆಯನ್ನು ಸ್ಥಾಪಿಸಲು ನೆರವಾಗಬೇಕಿತ್ತು. ಆದರೆ ಅವರದ್ದು ಕುಟಿಲ ನೀತಿ. ದೇವದಾಸೀ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವ ಬದಲು ಗೀತೆಯ ಬೋಧೆಯನ್ನು, ರಾಮಾಯಣದ ಸೌಂದರ್ಯವನ್ನು, ಆಗಮಗಳ ಪೂಜಾವಿಧಿಗಳನ್ನು ಅವರಲ್ಲಿ ಮತ್ತೆ ತುಂಬಿ ಶುದ್ಧ ನಾಟ್ಯವನ್ನಾಗಿ ಪರಿವರ್ತಿಸುತ್ತಿದ್ದಲ್ಲಿ ಗಾರ್ಗಿ, ಮೈತ್ರೇಯೀ, ಮಣಿಮೇಖಲೆಯರಂತಹ ವೇದ ಸ್ತ್ರೀಮಂತ್ರಗಾತೃಗಳಂತೆ ಸಮಾಜದ ನೈತಿಕತೆ-ಧಾರ್ಮಿಕತೆಗಳನ್ನುದ್ದೀಪನಗೊಳಿಸುವ, ಭಾರತದ ಧರ್ಮ ದೀವಿಗೆಯನ್ನು ಜಗತ್ತಿಗೆ ಪಸರಿಸುವ ಜ್ಯೋತಿಗಳನ್ನಾಗಿ ದೇವದಾಸಿಯರನ್ನು ಪರಿವರ್ತಿಸಬಹುದಿತ್ತು. ಆದರೆ ನಮ್ಮಲ್ಲಿನ ವಿಚಾರವಂತರು ಮೈಮರೆತರು. ಮಿಷನರಿಗಳು ನಾಟ್ಯದ ಕ್ರೈಸ್ತೀಕರಣದ ಮೊದಲ ಪ್ರಯತ್ನದಲ್ಲಿ ಗೆದ್ದರು. ಮಿಷನರಿಗಳ ಪ್ರಭಾವ ಯಾವ ಮಟ್ಟದ್ದೆಂದರೆ ಒಬ್ಬ ದ್ರಾವಿಡವಾದಿಯಂತೂ ನಾಟ್ಯವನ್ನು ವೇಶ್ಯಾವೃತ್ತಿಯನ್ನು ಪ್ರೋತ್ಸಾಹಿಸುವ ಜೀವನಾಡಿ ಎಂದು ಬಿಟ್ಟ!

ಮಿಷನರಿಗಳ ಈ ಕಾರ್ಯಕ್ಕೆ ತಡೆಯನ್ನೊಡ್ಡಿದವರಲ್ಲಿ ರುಕ್ಮಿಣಿದೇವಿ ಅರುಂದಲೆ ಪ್ರಮುಖರು. "ಕಲಾಕ್ಷೇತ್ರ ಅಕಾಡೆಮಿ ಆಫ್ ಡಾನ್ಸ್ ಆಂಡ್ ಮ್ಯೂಸಿಕ್" ಸಂಸ್ಥೆಯನ್ನು 1936ರಲ್ಲಿ ಸ್ಥಾಪಿಸಿ, ಈ ನಾಟ್ಯ ಪ್ರಕಾರವನ್ನು ರಕ್ಷಿಸಿ, ಪುನರುಜ್ಜೀವನಗೊಳಿಸಿದರವರು. ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲದೆ ಗಂಡು ಮಕ್ಕಳೂ ಕೂಡಾ ಭರತನಾಟ್ಯವನ್ನು ಕಲಿಯುವುದು ಸ್ವೀಕಾರಾರ್ಹವಾಗುವಂತೆ ಮಾಡಿದ ಆಕೆ  ದೇವತಾ ಪ್ರಾರ್ಥನೆ, ಶಾಕಾಹಾರ ಮತ್ತು ಗುರುಶಿಷ್ಯ ಸಂಬಂಧಗಳ ಮೇಲೆ ಲಕ್ಷ್ಯವಿಟ್ಟು ಒಂದುಗುರುಕುಲದಂತೆ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದರು. ಇದು ಮುಂದೆ ಒಂದು ಕಲಾ ವಿಶ್ವವಿದ್ಯಾಲಯವೇ ಆಯಿತು. ಇದರಿಂದ ಪರಂಪರೆಯ ಗುರು-ಶಿಷ್ಯ ಪದ್ದತಿ ತಮಿಳುನಾಡು ಮಾತ್ರವಲ್ಲದೆ ಹೊರಭಾಗಗಳಿಗೂ ವ್ಯಾಪಿಸಿ ಭರತನಾಟ್ಯ ಒಂದು ಕಲಾಪ್ರಕಾರವಾಗಿ ಪುನರುಜ್ಜೀವನಗೊಂಡಿತು.

ಇದರಿಂದ ಮಿಷನರಿಗಳು ತಮ್ಮ ಕಾರ್ಯಸಾಧನೆಗೆ ಬೇರೆ ಉಪಾಯಗಳನ್ನು ಹುಡುಕಲಾರಂಭಿಸಿದರು. ಈ ಬಾರಿ ಅವರ ಕಾರ್ಯ ಸಾಧನೆ ನೇರವಾಗಿ ಒಳಹೊಕ್ಕುವ ಮೂಲಕ ನಡೆಯಿತು. ಆರಂಭದಲ್ಲಿ ಹಿಂದೂ ಆಚರಣೆ-ರೂಢಿ-ಸಂಪ್ರದಾಯ-ಸಂಕೇತಗಳಿಗೆ ಗೌರವ ತೋರಿಸುತ್ತಾ ಹಿಂದೂಗುರುಗಳಲ್ಲಿ ಅಭ್ಯಾಸ ಮಾಡತೊಡಗಿದರು. ಅಮಾಯಕ ಗುರುಗಳು ಇವರ ಗುರಿಯನ್ನರಿಯದೇ ಶಿಷ್ಯರನ್ನಾಗಿ ಸ್ವೀಕರಿಸಿದರು. ಪದ್ಮಭೂಷಣ ಕಲಾನಿಧಿ ನಾರಾಯಣ, ಕುಬೇಂದ್ರನಾಥ್, ಚಂದ್ರಶೇಖರ್, ಖಗೇಂದ್ರನಾಥ್ ಮುಂತಾದ ಘಟಾನುಘಟಿಗಳಿಂದ ಕಲಿತ ಫ್ರಾನ್ಸಿಸ್ ಬಾರ್ಬೋಜಾ ಭರತನಾಟ್ಯವನ್ನು ಕ್ರಿಸ್ತೀಕರಣಗೊಳಿಸಲು ಯತ್ನಿಸಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಭಾರತೀಯ ನಾಟ್ಯ ಶಾಸ್ತ್ರದ ಅನನ್ಯ ಲಕ್ಷಣಗಳಾದ ಹಸ್ತ ಮುದ್ರೆಗಳನ್ನು ಅನುಕರಿಸಿ ಆತ ದೇವಹಸ್ತ, ಕ್ರಿಸ್ತ, ಫಾದರ್, ಉದಿತ ಕ್ರಿಸ್ತ, ಮೇರಿ, ಶಿಲುಬೆ, ಚರ್ಚು, ಮೆಡೋನ್ನಾಗಳ ಮುದ್ರೆಗಳನ್ನು ಸೃಷ್ಟಿಸಿದ. ವಿದೇಶೀಯನೊಬ್ಬನಿಂದ ನಮ್ಮ ಕಲೆ ಬೆಳೆಯುತ್ತಿದೆಯೆಂಬ ಹುಂಬ ಅಭಿಮಾನ ಹಾಗೂ ಹೊಸತನದಿಂದ ಭವಿಷ್ಯದಲ್ಲುಂಟಾಗಬಹುದಾದ ಪರಿಣಾಮಗಳನ್ನು ಪರಾಮರ್ಶಿಸದೆ ಅಪ್ಪಿಕೊಳ್ಳುವ ಭಾರತೀಯರ ಸಹಜ ಭೋಳೇ ಸ್ವಭಾವ ಭರತ ನಾಟ್ಯವನ್ನು ಕ್ರಿಸ್ತನಾಟ್ಯವಾಗಿ ಪರಿವರ್ತಿಸಲು ಆತನಿಗೆ ಸಹಾಯಕವಾಯಿತು. ಪ್ರಸಿದ್ಧಿ, ಹಣದ ಹುಚ್ಚಿನಿಂದ ಇಂತಹ ಗೋಮುಖವ್ಯಾಘ್ರ ಶಿಷ್ಯರಿಗೆ ಬೆಂಗಾವಲಾಗಿ ನಿಂತ ಗುರುಗಳಿಗೇನೂ ಕಡಿಮೆ ಇರಲಿಲ್ಲ.

             1977ರಲ್ಲಿ ಕೆಥೋಲಿಕ್ ಪೂಜಾರಿಯೊಬ್ಬನಿಂದ ಆರಂಭಗೊಂಡ "ಕಲೈ ಕಾವೇರಿ ಆಫ್ ಫೈನ್ ಆರ್ಟ್ಸ್" ಭರತ ನಾಟ್ಯವನ್ನೇ ಮತಾಂತರ ಮಾಡಲು ಹೊರಟ ಒಂದು ಸಂಸ್ಥೆ. ನನ್, ಪಾದ್ರಿಗಳನ್ನು ಹಿಂದೂ ಗುರುಗಳ ಬಳಿ ನೃತ್ಯಾಭ್ಯಾಸ ಮಾಡಲು ಕಳುಹಿ ಕೊಟ್ಟ ಈ ಕ್ಷುದ್ರ ಜೀವಿ ಆ ಬಳಿಕ ಅವರನ್ನುಪಯೋಗಿಸಿಕೊಂಡು ತನ್ನ ಮತಾಂತರದ ಜಾಲವನ್ನು ವಿಸ್ತರಿಸಿದ. ಭರತ ನಾಟ್ಯ ಹಾಗೂ ಭಾರತೀಯ ಸಂಗೀತ ಶಾಸ್ತ್ರದಲ್ಲಿ ಪದವಿಯನ್ನು ಪ್ರದಾನಿಸುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಈ ಸಂಸ್ಥೆ ಭರತ ನಾಟ್ಯದಲ್ಲಿ ಹಿಂದೂ ಮುದ್ರೆಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ಬಾರ್ಬೋಜಾ ರೂಪಿಸಿದ ಕ್ರೈಸ್ತ ಮುದ್ರೆಗಳನ್ನು ರಾಜಾರೋಷವಾಗಿ ಬಳಸುತ್ತಿದೆ. ಕಲೈ ಕಾವೇರಿ ಸಾಗರದಾಚೆಗೂ ಹಲವು ಶಾಖೆಗಳನ್ನು ಹೊಂದಿದೆ. ತನ್ನ ಇಪ್ಪತ್ತೈದನೇ ವಾರ್ಷಿಕೋತ್ಸವದ  ಕೈಪಿಡಿಯಲ್ಲಿ  ಭರತನಾಟ್ಯವನ್ನು ಕ್ರಿಸ್ತನಾಟ್ಯವಾಗಿ ಪರಿವರ್ತಿಸಿದ ತನ್ನ ಸಫಲ ಕಾರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ ಕಲೈ ಕಾವೇರಿ. ಮೊದಲು ಜಗತ್ತಿನ ಸೃಷ್ಟಿಯನ್ನು, ವಾಗ್ದೇವಿ-ಓಂಕಾರಗಳ ಸಂಬಂಧವನ್ನು ವರ್ಣಿಸುತ್ತಾ ಸಾಗುವ ಇದರ ವಿಶ್ಲೇಷಣೆ ಮುಂದುವರಿದಂತೆ ಬೈಬಲಿನ ವ್ಯಾಖ್ಯೆಗೆ ತೊಡಗುತ್ತದೆ. "ಆದಿಯಲ್ಲಿ ಬ್ರಹ್ಮನಿದ್ದ. ಆತನೊಡನಿದ್ದ ನಾದವೇ ಪರಬ್ರಹ್ಮ" ಎನ್ನುವ ವೇದಮಂತ್ರವನ್ನು "ಆದಿಯಲ್ಲಿ ದೇವರಿದ್ದ. ಅವನೊಡನಿದ್ದ ಶಬ್ಧವೇ ದೇವರಾಗಿತ್ತು" ಎಂದು ತಿರುಚಿ ಮುಂದೆ ನೇರವಾಗಿ ಕ್ರಿಸ್ತನ ಕಡೆಗೆ ಸಾಗುತ್ತದೆ ಈ ವಿಶ್ಲೇಷಣೆ. ಕಲೈಕಾವೇರಿಯ ನಿಷ್ಣಾತ ನಾಟ್ಯಪಟು ಕೇರಳದ ಸಜು ಜಾರ್ಜ್ ಎಂಬ ಪಾದ್ರಿ ಭರತನಾಟ್ಯದಲ್ಲಿ ಕ್ರಿಸ್ತನನ್ನು ಶಿಲುಬೆಗೇರಿಸುವ, ಆತನ ಪುನರಾಗಮನದ ದೃಶ್ಯಗಳನ್ನು ಅಳವಡಿಸಿದ. ರಾಧಾಕೃಷ್ಣರ ಹಾಗೂ ಕ್ರಿಸ್ತನ ದೃಷ್ಯವೈವಿಧ್ಯಗಳೆರಡನ್ನೂ ಒಂದೇ ವೇದಿಕೆಯ ಮೇಲೆ ತೋರಿಸುವ ಮೂಲಕ ಹಿಂದೂಗಳ ಸಹಾನುಭೂತಿಯನ್ನೂ, ಭರತ ನಾಟ್ಯದ ಕ್ರಿಸ್ತೀಕರಣವನ್ನೂ ಹಾಗೂ ದುರ್ಬಲ ಮನಸ್ಸುಗಳ ವೈಚಾರಿಕ/ಆಚಾರಿಕ ಮತಾಂತರವನ್ನು ಏಕಕಾಲದಲ್ಲಿ ಸಾಧಿಸತೊಡಗಿದ. ಈತನ ಬಗ್ಗೆ ಕಲೈ ಕಾವೇರಿ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ.  ಮೇಲ್ನೋಟಕ್ಕೆ ಇದರಿಂದ ನಮಗೇನೂ ಹಾನಿಯಿಲ್ಲ ಎಂಬಂತಿದ್ದರೂ ಒಳಹೊಕ್ಕು ನೋಡಿದಾಗ  ಬೆಚ್ಚಿಬೀಳುವ ಅಗಾಧತೆ ಈ ಮತಾಂತರಕ್ಕಿದೆ. ಚರ್ಚಿನ ಅಭಿಯಾನ ಎನ್ನುತ್ತಾ ಅಪಾರ ಪ್ರಮಾಣದ ಹಣವೂ ಈ ಕಾರ್ಯಕ್ಕೆ ಹರಿದು ಬರುತ್ತಿದೆ. ವಿಪರ್ಯಾಸವೆಂದರೆ ತಮಿಳುನಾಡಿನ ಸರಕಾರವೂ ಈ ಸಂಸ್ಥೆಗೆ ಧನ ಸಹಾಯ ಮಾಡುತ್ತಿರುವುದು.

            ಓರ್ವ ಮತಾಂಧ ಇವ್ಯಾಂಜೆಲಿಸ್ಟನ ಮಗಳಾದ ರಾಣಿ ಡೇವಿಡ್ ಭರತನಾಟ್ಯದ ಕ್ರಿಸ್ತೀಕರಣ ಮಾಡುವುದರಲ್ಲಿ ಎಲ್ಲರಿಗಿಂತಲೂ ಪರಿಣತಳು. ಅಮೇರಿಕಾದ ಹಿಂದೂ ದೇವಾಲಯವೊಂದರ ಪಕ್ಕದಲ್ಲೇ "ಕಲೈ ರಾಣಿ ನಾಟ್ಯ ಸಾಲೈ" ಎನ್ನುವ ಸಂಸ್ಥೆಯನ್ನು ಸ್ಥಾಪಿಸಿರುವ ಈಕೆ ತಂಜಾವೂರ್ ಪದ್ದತಿಯಲ್ಲಿ ಷಣ್ಮುಗಂ ಅವರ ಬಳಿ ನಾಟ್ಯಾಭ್ಯಾಸ ಮಾಡಿದಳು. ಆನಂತರ ಅರುಂದಲೆಯವರ ನೇರ ಶಿಷ್ಯೆ ಮೈಥಿಲಿ ರಾಘವನರ ಬಳಿ ಹೆಚ್ಚಿನ ಅಭ್ಯಾಸ ನಡೆಸಿದಳು. ಬಳಿಕ ಅಡ್ಯಾರ್ ಲಕ್ಷ್ಮಣ ಹಾಗೂ ಸೀತಾರಾಮ ಶರ್ಮರಿಂದ ನುಟುವಾಂಗವನ್ನು ಕಲಿತಳು. ಭರತ ನಾಟ್ಯದಿಂದ "ನಮಸ್ಕಾರ" ಭಂಗಿಯನ್ನೇ ತೆಗೆದು ಹಾಕಿದ ಆಕೆ "ಏಸು ಏಸು ಏಸು" ಎನ್ನುವ ನಾಟ್ಯ ಕಾರ್ಯಕ್ರಮವನ್ನೇ ಹುಟ್ಟುಹಾಕಿದಳು. ನಾಟ್ಯವು ಬೈಬಲಿನಲ್ಲಿ ಖಂಡಿಸಲ್ಪಟ್ಟಾಗ ಅದನ್ನು ಭರತನಾಟ್ಯವೆಂದು ಹೇಳುತ್ತಾ, ಬೈಬಲಿನಲ್ಲಿ ಹೊಗಳಲ್ಪಟ್ಟ ಸಂದರ್ಭಗಳಲ್ಲಿ ಕ್ರಿಸ್ತನಾಟ್ಯವನ್ನಾಗಿ ತನಗೆ ಬೇಕಾದಂತೆ ತಿರುಚಿ ಲೇಖನಗಳನ್ನು ಬರೆದಳು. ರಾಣಿ ಡೇವಿಡಳ ಹಿಂಬಾಲಕಿ ಅನಿತಾ ರತ್ನಂ ಭರತ ನಾಟ್ಯ ಹಾಗೂ "ಸಂಗಂ ತಮಿಳ್"ದೊಂದಿಗೆ ಕ್ರಿಶ್ಚಿಯಾನಿಟಿ ಇತ್ತೆನ್ನುವುದನ್ನು ರಾಣಿ ಡೇವಿಡ್ ವಾಸ್ತವಾಂಶಗಳೊಂದಿಗೆ ನಿರೂಪಿಸಿದ್ದಾಳೆ ಎಂದಿದ್ದಾಳೆ. ಈಕೆ ನಡೆಸುತ್ತಿರುವ "ನರ್ತಕಿ.ಕಾಂ" ಭರತ ನಾಟ್ಯದ ಬಗೆಗೆ ರಾಣಿ ಡೇವಿಡ್ ಬರೆದಿರುವ ಕ್ರೈಸ್ತ ಇತಿಹಾಸವನ್ನೇ ಅಧಿಕೃತವೆಂದು ಪರಿಗಣಿಸಿ ಪ್ರಕಟಿಸುತ್ತಿದೆ.

             ಯಾವ ರುಕ್ಮಿಣಿ ಅರುಂದಲೆ ಭರತನಾಟ್ಯವನ್ನು ಕ್ರೈಸ್ತ ಮತ ಪ್ರಚಾರಕರ ಷಡ್ಯಂತ್ರಗಳಿಂದ ಪಾರು ಮಾಡಿ ಕಲಾಕ್ಷೇತ್ರವನ್ನು ಸ್ಥಾಪಿಸಿದಳೋ ಅದೇ ಅರುಂದಲೆಯ ಶಿಷ್ಯೆ ಲೀಲಾ ಸ್ಯಾಮ್ಸನಳಿಂದ ಕಲಾಕ್ಷೇತ್ರ ಮತಪ್ರಚಾರಕರ ವಶವಾಯಿತು. ಲೀಲಾ ಸ್ಯಾಮ್ಸನಳಿಗೆ ನೃತ್ಯ ಕಲಿಸಲು ರುಕ್ಮಿಣಿದೇವಿಯವರಿಗೆ ಮನಸ್ಸಿರಲಿಲ್ಲ. ಆದರೆ ತಮ್ಮ ಸಹವರ್ತಿಗಳ/ಶಿಷ್ಯಂದಿರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಆಕೆಯನ್ನು ಶಿಷ್ಯೆಯಾಗಿ ಸ್ವೀಕರಿಸಿದರು. ಭರತನಾಟ್ಯದ ಆಧ್ಯಾತ್ಮಿಕ ಮೂಲಗಳನ್ನು ಅಳಿಸಿ ಹಾಕುವುದನ್ನು ಬಹಿರಂಗವಾಗಿ ಸಮರ್ಥಿಸಿದ ಈಕೆ 'ಆರ್ಟ್ ಆಫ್ ಲಿವಿಂಗ್'ನ ಶ್ರೀ ರವಿಶಂಕರರು ನಡೆಸಿದ "ಆರೋಗ್ಯ ಮತ್ತು ಆನಂದ" ಎಂಬ ಶಿಬಿರ ಹಿಂದೂ ಧರ್ಮಕ್ಕೆ ಸಂಬಂಧಿಸಿದುದು ಎನ್ನುವ ನೆಪವೊಡ್ಡಿ ಕಲಾಕ್ಷೇತ್ರದ ವಿದ್ಯಾರ್ಥಿಗಳು ಆ ಶಿಬಿರದಲ್ಲಿ ಭಾಗವಹಿಸದಂತೆ ಪ್ರತಿಬಂಧಿಸಿದಳು. ಕಲಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಆದಿಯಿಂದಲೂ ಪೂಜಿಸುತ್ತಿದ್ದ ವಿಗ್ರಹಗಳನ್ನು ತೆಗೆದು ಹಾಕಿದಳು. ಗೀತಗೋವಿಂದವನ್ನು ಅವಹೇಳನಕಾರಿ ಶಬ್ಧಗಳಲ್ಲಿ ಪಾಠ ಮಾಡುತ್ತಿದ್ದಳು. ರುಕ್ಮಿಣಿ ಅರುಂದಲೆಯವರು ವಿನ್ಯಾಸಗೊಳಿಸಿದ್ದ ಪ್ರಮಾಣಪತ್ರದಲ್ಲಿದ್ದ ನಟರಾಜನ ಲಾಂಛನವನ್ನು ತೆಗೆದು ಹಾಕಿದಳು. ಹಿಂದೂ ಕಥಾನಕಗಳನ್ನು ವಾಲ್ಟಡಿಸ್ನಿಯ ಪಾತ್ರಗಳಿಗೆ ಹೋಲಿಸಿ, ಬ್ರಹ್ಮನನ್ನು "ಸ್ಟಾರ್ ವಾರ್ಸ್" ಚಿತ್ರಕಥೆಯ ವಿಲಕ್ಷಣ ಪಾತ್ರಗಳಿಗೆ ಹೋಲಿಸಿ ಲೇವಡಿ ಮಾಡತೊಡಗಿದಳು. ಹೀಗೆ ಲೀಲಾ ಸ್ಯಾಮ್ಸನ್ ಭರತನಾಟ್ಯವನ್ನು ಅದರ ಆಧ್ಯಾತ್ಮಿಕ, ತಾತ್ವಿಕ, ಕಲಾತ್ಮಕ, ಬೌದ್ಧಿಕ ಆಯಾಮಗಳಿಂದ ಮುಕ್ತಗೊಳಿಸಿ ಅವಳದ್ದೇ ಮಾತುಗಳಲ್ಲಿ ಹೇಳುವುದಾದರೆ ಹಿಂದೂ ಧರ್ಮದಿಂದ ಮುಕ್ತಗೊಳಿಸುವ ತನ್ನ ಕಾರ್ಯದಲ್ಲಿ ಯಶಸ್ವಿಯಾದಳು. "ಯಾವುದನ್ನೂ ತಿಳಿಯದಿರುವುದೇ ವೈಶ್ವಿಕ ಧರ್ಮ. ವೈಶ್ವಿಕ ಧರ್ಮವನ್ನು ಅನುಸರಿಸುತ್ತೇವೆ ಎನ್ನುವ ಜನರಿಗೆ ಹಿಂದೂ ಧರ್ಮದ ಔನ್ನತ್ಯದ ಬಗೆಗೆ, ಭಾರತದ ಹಿರಿಮೆಯ ಬಗೆಗೆ ಏನು ಗೊತ್ತು?" ಎನ್ನುವ ಅರುಂದಲೆಯವರ ಕಿಡಿನುಡಿ ತಾನು ವೈಶ್ವಿಕ ಧರ್ಮವನ್ನು ನಂಬುತ್ತೇನೆ ಎಂದು ಹೇಳಿ ಮತಾಂತರದ ಹೀನ ಕಾರ್ಯವೆಸಗುವ ಅವರ ಶಿಷ್ಯೆ ಸ್ಯಾಮ್ಸನಳಂತಹವರಿಗೆ ಉತ್ತರದಂತಿದೆ.

             ಮತಾಂತರಿಗಳ ಕುತಂತ್ರ ಅಷ್ಟಕ್ಕೇ ಕೊನೆಯಾಗಲಿಲ್ಲ. ಜಾನಪದ ಕಲೆಯನ್ನು ಹಿಂದೂಧರ್ಮದಿಂದ ವಿಭಜಿಸಲು ಹುನ್ನಾರವನ್ನೇ ನಡೆಸಿದರು. ಜಾನಪದವನ್ನು ದ್ರಾವಿಡ ಕಲೆಯೆಂದು ವರ್ಗೀಕರಿಸಿ ಆರ್ಯರ ವಿರುದ್ಧ ನಡೆದ ಪ್ರತಿಭಟನೆ ಎನ್ನಲಾಯಿತು. ಜಾನಪದ ದೇವದೇವಿಯರು ಜೈನ ಹಾಗೂ ಬೌದ್ಧ ಧರ್ಮದಿಂದ ಬಂದು ಶೈವರಾಗಿ ಪರಿವರ್ತಿತರಾದವರು ಎಂದು ಇತಿಹಾಸವನ್ನು ತಿರುಚಲಾಯಿತು. ಜಾನಪದ ಗೀತೆಗಳನ್ನು ಕ್ರಿಸ್ತೀಕರಣಗೊಳಿಸಿ ಅವೇ ಮೂಲಗೀತೆಗಳೆಂದು ಬಿಂಬಿಸಲಾಯಿತು. ಈ ಮತಿಹೀನರು  ಮುರುಗನ್ ಎಂದರೆ ಕ್ರಿಸ್ತನೇ ಎಂದು ಕಥೆಕಟ್ಟಿ, ಮುರುಗನ್ ಪತ್ನಿ ವಲ್ಲಿಯನ್ನು ಕ್ರಿಸ್ತನ ತಾಯಿ ಮೇರಿ ಎಂದು ಹೇಳಿ ತಮ್ಮ ಮತಾಂತರದ ಕೆಲಸವನ್ನು ಚುರುಕುಗೊಳಿಸಿದರು. ಫೋರ್ಡ್ ಫೌಂಡೇಶನ್ನಿನ ಧನಸಹಾಯ ಪಡೆದು ಕಾರ್ಯ ನಿರ್ವಹಿಸುವ ಜೆಸ್ಯೂಟ್ ಕಾಲೇಜು ತಿರುಚಿ ಕ್ರಿಸ್ತೀಕರಣಗೊಳಿಸಿದ ಇತಿಹಾಸ-ಪುರಾಣಗಳನ್ನು ತುರುಕಿದ ಪಠ್ಯ ಪುಸ್ತಕವೊಂದನ್ನು ಬಿಡುಗಡೆಗೊಳಿಸಿತು. ಭಾರತ, ವಂದೇಮಾತರಂ, ಇತಿಹಾಸ-ಪುರಾಣಗಳನ್ನು ಅವಹೇಳನ ಮಾಡುವ ಇನ್ನೊಂದು ಪುಸ್ತಕವನ್ನು ಕೂಡಾ ಈ ಸಂಸ್ಥೆ ಪ್ರಕಟಿಸಿದೆ. ಇತ್ತೀಚೆಗಂತೂ ಮತಾಂತರದ ವ್ಯವಸ್ಥಿತ ಪ್ರಯತ್ನಗಳೇ ನಡೆಯುತ್ತಿವೆ. ತಮಿಳುನಾಡಿನಲ್ಲಿ ನವಿಲನ್ನು ವಾಹನವಾಗುಳ್ಳ ಮುರುಗನ್ ಜಾಗದಲ್ಲಿ ಯೇಸುವನ್ನು ಚಿತ್ರಿಸಿದರೆ, ಕೇರಳದಲ್ಲಿ ಕೃಷ್ಣನ ಜಾಗದಲ್ಲಿ ಯೇಸುವನ್ನು ಕುಳ್ಳಿರಿಸಲಾಗಿದೆ. ಧ್ವಜಸ್ಥಂಭ, ಸಹಸ್ರನಾಮಾರ್ಚನೆ, ಹಣ್ಣುಕಾಯಿ, ಮಂಗಳಾರತಿ, ತೀರ್ಥಪ್ರಸಾದಗಳನ್ನೂ ಚರ್ಚುಗಳಲ್ಲಿ ಆರಂಭಿಸಲಾಗಿದೆ. ಎಲ್ಲರೂ ಒಂದೇ, ನಮ್ಮಂತೆಯೇ ಎನ್ನುವ ಹಿಂದೂಗಳ ಭೋಳೇತನ, ಆಗುವುದೆಲ್ಲಾ ಒಳ್ಳೆಯದಕ್ಕೇ ಎನ್ನುವ ನಿರ್ಲಿಪ್ತ ಮನೋಭಾವಗಳೇ ಹಿಂದೂ ಧರ್ಮಕ್ಕೆ ಮುಳ್ಳಾದದ್ದು. ತನ್ನ ವಿಸ್ತರಣೆಗಾಗಿ ಕ್ರಿಶ್ಚಿಯಾನಿಟಿ ನಿರಂತರ ಪರಿಷ್ಕರಣೆ ಹೊಂದುತ್ತಾ ತಂತ್ರಗಳನ್ನು ಉಪಯೋಗಿಸುತ್ತಾ ಮತಾಂತರ ಕಾರ್ಯವನ್ನು ತೀವ್ರಗೊಳಿಸುತ್ತಿರುತ್ತದೆಯೆನ್ನುವ ವಿಚಾರ ಹಿಂದೂಗಳಿಗೆ ಅರಿವಾದಾಗ ಕಾಲ ಮುಗಿದು ಹೋಗಿರುತ್ತದೆ. ಜ್ಞಾನದ ನಿಧಿಯೇ ಬತ್ತಿ ಹೋಗುತ್ತಿರುವುದನ್ನು ಕಂಡು ಮಹಾಕಾಲ "ನಟರಾಜ" "ಲಯ"ವನ್ನಲ್ಲದೇ ಮತ್ತೇನು ಮಾಡಿಯಾನು?

ಬುಧವಾರ, ನವೆಂಬರ್ 25, 2015

ಮೊಳಕೆ

ಮೊಳಕೆ

ಸಿಡಿಲಾರ್ಭಟಕೆ ಬೆದರಿ ಮುರುಟಿ
ಭೂತ ಬಡಿದಂತೆ ನಿಂತು ನಿರುಕಿಸೆ||

ನಭೋ ಮಂಡಲದಿಂದ ಭೋರ್ಗರೆದಿಳಿದ
ಧಾರೆಗೆ ಧರೆಯು ಧನ್ಯವಾಯ್ತು||

ಅಡಿದಾವರೆ ಪಿಡಿದಾಗ ಬಡಿದ
ಮೊಗ್ಗುಗಳೆಲ್ಲಾ ಕರವಿಡಿದು ನಿಂತಿವೆ||

ಹಸಿಹಸಿರು ನಳನಳಿಸಿ ಹೊಸ ಚಿಗುರು ಮೇಳೈಸಿ
ಇಳೆಯ ಕಳೆ ಹೆಚ್ಚಿ ಸ್ವರ್ಗಕೆ ಹಚ್ಚಿ ಕಿಚ್ಚು||

ಹೊಳೆಯಿತದು ಹೊಸ ರಾಗ ಮೊಳೆಯಿತದು ಹೊಸ ಭಾವ
ಮನದ ಬೇಸರವೆಲ್ಲಾ ಕ್ಷಣದಿ ಮಾಯವಾಯ್ತು||

ಗುರುವಾರ, ನವೆಂಬರ್ 19, 2015

ಕ್ರಾಂತಿಯ ಕಿಡಿ ಹೋಯಿತೆಲ್ಲಿ?

ಕ್ರಾಂತಿಯ ಕಿಡಿ ಹೋಯಿತೆಲ್ಲಿ?


              ಜೂನ್ 29, 1863. ಮೇಜರ್ ಜನರಲ್ ಜಿ.ಎಸ್.ಪಿ. ಲಾರೆನ್ಸ್ ಭಾರತದಲ್ಲಿನ ಬ್ರಿಟಿಷ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಒಂದು ಪತ್ರ ಬರೆದ. "ತಾತ್ಯಾಟೋಪೆ ಬಿಕಾನೇರಿನಲ್ಲಿದ್ದಾನೆ. ಬಿಕಾನೇರಿನ ರಾಜ ತಾತ್ಯಾಟೋಪೆಗೆ ಧನಸಹಾಯ ಮಾಡಿದ್ದಾನೆ. ತಾತ್ಯಾನೊಂದಿಗೆ 5000 ಬಂಗಾಳದ ಮಾಜಿ ಸೈನಿಕರು ಸಾಲಂಬೂರು ಅರಣ್ಯದಲ್ಲಿದ್ದಾರೆ. ಅವರನ್ನೆದುರಿಸಲು 40000 ಸೈನಿಕರನ್ನು ಸಜ್ಜಾಗಿರಿಸಿದ್ದೇನೆ." ಎನ್ನುವುದು ಆ ಪತ್ರದ ಸಾರಾಂಶ. ಅರೆ, ತಾತ್ಯಾಟೋಪೆಯನ್ನು ನೇಣಿಗೇರಿಸಿದ ನಾಲ್ಕು ವರ್ಷಗಳ ಬಳಿಕ ಮತ್ತೆ ತಾತ್ಯಾಟೋಪೆಯಿಂದ ಆಕ್ರಮಣ! ಹಾಗಾದರೆ ಏಪ್ರಿಲ್ 18, 1859ರಂದು ತಾತ್ಯಾಟೋಪೆ ಎಂದು ಹೇಳಿ ಬ್ರಿಟಿಷರು ನೇಣಿಗೇರಿಸಿದ್ದು ಯಾರನ್ನು? ತಾತ್ಯಾಟೋಪೆಯನ್ನೇ ಆಗಿದ್ದರೆ ನಾಲ್ಕು ವರ್ಷಗಳ ಬಳಿಕ ಬರೆದ ಪತ್ರದಲ್ಲಿ ತಾತ್ಯಾಟೋಪೆಯನ್ನು ಉಲ್ಲೇಖಿಸಿದ್ದೇಕೆ? ಬ್ರಿಟಿಷ್ ಅಧಿಕಾರಿಗಳು ಜನರನ್ನು ಹೆದರಿಸಲು ಅಥವಾ ತಾತ್ಯಾನನ್ನು ಸೆರೆ ಹಿಡಿಯಲು ವಿಫಲರಾಗಿ ಬೇಸತ್ತು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ತಾತ್ಯಾ ಹೆಸರಲ್ಲಿ ಅನ್ಯ ವ್ಯಕ್ತಿಯನ್ನು ನೇಣಿಗೇರಿಸಿದರೆ? ಈ ಪತ್ರದಲ್ಲಿದ್ದ ವರದಿ ಸತ್ಯವಾಗಿರಲಿ ಅಥವಾ ಸುಳ್ಳೇ ಆಗಿರಲಿ, "ತಾತ್ಯಾ" ಎನ್ನುವ ಹೆಸರು ಬ್ರಿಟಿಷರನ್ನು ಯಾವ ಪರಿ ನಿದ್ದೆಗೆಡಿಸಿತ್ತು ನೋಡಿ!

                1814ರಲ್ಲಿ ಶಿರ್ಡಿಯಿಂದ 35ಕಿಮೀ ದೂರದಲ್ಲಿರುವ ಪತೋಡಾ ಜಿಲ್ಲೆಯ ಯೆವೋಲಾ ಎನ್ನುವ ಊರಿನಲ್ಲಿ ಜನ್ಮ ತಳೆದ ರಾಮಚಂದ್ರ ಪಾಂಡುರಂಗ ಯೆವೋಲೇಕರ್ ಎಂಬ ಕಿಡಿ ತಾತ್ಯಾ ಎನ್ನುವ ಹೆಸರಿನ ಅಗ್ನಿಜ್ವಾಲೆಯಾಗಿ ದೇಶದಾದ್ಯಂತ ಪಸರಿಸಿತು. ಎರಡನೆಯ ಬಾಜೀರಾಯ ಬ್ರಿಟಿಷರಿಗೆ ಸೋತಾಗ ಆತನೊಂದಿಗೆ ಅರಮನೆಯಲ್ಲಿ ಪುರೋಹಿತರಾಗಿದ್ದ ತಾತ್ಯಾನ ತಂದೆ ಕಾನ್ಪುರದ ಬಿಠೂರಿಗೆ ತೆರಳಬೇಕಾಯಿತು. ಹೀಗೆ ತಾತ್ಯಾನ ಸಾಹಸಯಾತ್ರೆಗೆ ಶ್ರೀಗಣೇಶ ಹಾಡಿದ ಕಾನ್ಪುರಕ್ಕೆ ತೆರಳುವಾಗ ತಾತ್ಯಾ ನಾಲ್ಕು ವರ್ಷದ ಮಗು. ತಾತ್ಯಾನ ಇನ್ನೂರನೇ ಜನ್ಮವರ್ಷಾಚರಣೆಗೆ ಯುವಬ್ರಿಗೇಡ್ ಸಜ್ಜಾಗುತ್ತಿದೆ. ಬ್ರಿಟಿಷರನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದ ಪದ ತಾತ್ಯಾ. ಅಂತಹ ತಾತ್ಯಾ ಭಾರತದ ಬಾನಂಗಳದಿಂದ ಹೇಗೆ ಮರೆಯಾದ ಎನ್ನುವುದು ಇತಿಹಾಸದಲ್ಲಿ ಕಗ್ಗಂಟಾಗುಳಿದಿರುವ ಪ್ರಶ್ನೆ. ಕೆಲವೇ ಕೆಲವು ಇತಿಹಾಸಕಾರರನ್ನು ಬಿಟ್ಟು ಉಳಿದವರೆಲ್ಲಾ ಬ್ರಿಟಿಷ್ ಕಂಗಳಲ್ಲೇ ಭಾರತದ ಇತಿಹಾಸವನ್ನು ಕಂಡುದುದರ ಫಲವಾಗಿ ಭಾರತದ ಚರಿತ್ರೆ ಕಲಸು ಮೇಲೋರಗವೇ ಆಗಿ ಬಿಟ್ಟಿದೆ. ಅಷ್ಟಕ್ಕೂ ಸ್ವಾತಂತ್ರ್ಯ ಸಂಗ್ರಾಮವನ್ನೇ ದಂಗೆಯೆಂದು ಕರೆದ ಇಲ್ಲಿನ ಇತಿಹಾಸಕಾರರು ತಾತ್ಯಾನ ಬಗ್ಗೆ ಸಂಶೋಧನೆಗಿಳಿದಾರೆ?

             ಇರಲಿ,1859ರಲ್ಲಿ ಬ್ರಿಟಿಷರು ಸೆರೆಹಿಡಿದು ಗಲ್ಲಿಗೇರಿಸಿದ್ದು ತಾತ್ಯಾನನ್ನಲ್ಲ ಎನ್ನುವುದಕ್ಕೆ ಹಲವಾರು ಆಧಾರಗಳಿವೆ. ತಾತ್ಯಾನ ಪರಿವಾರದ ಹೇಳಿಕೆಯಂತೆ ತನ್ನ ಬಾಲ್ಯದ ಯೆವೋಲಾದಲ್ಲಿನ ಮನೆಗೆ 1859-62ರ ಮಧ್ಯೆ ಹಲವು ಬಾರಿ ಬಂದಿದ್ದ. ಆತನನ್ನು ಗಲ್ಲಿಗೇರಿಸಿದ್ದೇವೆಂದು ಬ್ರಿಟಿಷರು ಹೇಳಿದ ಕೆಲವು ತಿಂಗಳುಗಳ ಬಳಿಕ ಯೆವೋಲಾಕ್ಕೆ ಸಾಧುವಿನ ವೇಷದಲ್ಲಿ ಬಂದಿದ್ದ ತಾತ್ಯಾ ಎರಡು ದಿನ ಅಲ್ಲಿ ತಂಗಿದ್ದ. ಅಲ್ಲಿಂದ ಕೋಪರ್ಗಾಂವಿಗೆ ತೆರಳಿ ಏನಾದರೂ ಸಹಾಯ ಸಿಗುವುದೇ ಎಂದು ನೋಡುವುದಾಗಿ ತ್ರ್ಯಂಬಕ್ ಸದಾಶಿವ ಟೋಪೆಯ ಬಳಿ ಹೇಳಿದ್ದ. ಇದೇ ರೀತಿ ಅನೇಕ ಬಾರಿ ತನ್ನ ಹೆತ್ತವರು ತೀರಿಕೊಳ್ಳುವವರೆಗೂ(1962) ತನ್ನ ಹುಟ್ಟೂರಿಗೆ ಬಂದಿದ್ದ ತಾತ್ಯಾ ತನ್ನಿಂದಾದ ಧನ ಸಹಾಯ ಮಾಡಿ ಹೋಗುತ್ತಿದ್ದ. ಇದು ಸುಳ್ಳು ಎಂದು ಭಾವಿಸುವುದಾದರೆ ತಾತ್ಯಾನ ಪರಿವಾರಕ್ಕೆ ಆ ರೀತಿಯ ಸುಳ್ಳು ಹೇಳಿ ಸಾಧಿಸುವುದಾದರೂ ಏನಿತ್ತು? ತಾತ್ಯಾನನ್ನು ಸೆರೆ ಹಿಡಿದ ಸಂದರ್ಭದಲ್ಲಿ ತಾತ್ಯಾನ ಚಿತ್ರ ಬಿಡಿಸಿದವನು ಮೇಜರ್ ಮೇಡ್ ನ ಸೈನ್ಯದಲ್ಲಿದ್ದ ಲೆಫ್ಟಿನೆಂಟ್ ಬಾಗ್. ಆದರೆ ಈ ಚಿತ್ರ ತಾತ್ಯಾನ ಉಳಿದ ಚಿತ್ರಗಳಿಗೆ ಹೋಲಿಕೆಯಾಗುತ್ತಿಲ್ಲ. ಮಾತ್ರವಲ್ಲ ತಾತ್ಯಾನನ್ನು ಬಿಠೂರಿನಲ್ಲಿ ನೋಡಿದ್ದ ಜನರಲ್ ಲ್ಯಾಂಗನ ವರ್ಣನೆಗೂ ಈ ಚಿತ್ರಕ್ಕೂ ಅಗಾಧ ವ್ಯತ್ಯಾಸಗಳಿವೆ. ತಾತ್ಯಾ ಸೆರೆ ಸಿಕ್ಕರೆ ಕಾನ್ಪುರ ಯುದ್ಧದ ಸಮಗ್ರ ವಿಚಾರಣೆಯನ್ನು ನಡೆಸಿ ವರದಿ ಸಲ್ಲಿಸಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ ಗಮನಾರ್ಹ ವಿಚಾರಣೆಯನ್ನೇ ನಡೆಸದೆ ತುರಾತುರಿಯಲ್ಲಿ ತಾತ್ಯಾನನ್ನು ಗಲ್ಲಿಗೇರಿಸಿತೇಕೆ?

              ನವೆಂಬರ್ 14, 1862ರಲ್ಲಿ ಅಸಿಸ್ಟೆಂಟ್ ರೆಸಿಡೆಂಟ್ ಬಾಂಬೆ ಸರಕಾರದ ರಾಜಕೀಯ ವಿಭಾಗದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಾತ್ಯಾನ ಸಂಬಂಧಿ ರಾಮಕೃಷ್ಣ ಟೋಪೆ ಬಿಠೂರನ್ನು ಬಿಟ್ಟು ಉದ್ಯೋಗವನ್ನರಸುತ್ತಾ ಬರೋಡಾಗೆ ಬಂದಿರುವುದಾಗಿಯೂ ತಾನು ಆತನನ್ನು "ತಾತ್ಯಾ ಎಲ್ಲಿದ್ದಾನೆ" ಎಂದು ವಿಚಾರಿಸಿದಾಗ, ಆತ ನಮ್ಮನ್ನು ಬಿಟ್ಟು ಹೋದ ನಂತರ ತಾತ್ಯಾನ ಮಾಹಿತಿಯೇ ನಮಗಿಲ್ಲ ಎಂದುತ್ತರಿಸಿದಾಗಿಯೂ ಉಲ್ಲೇಖಗಳಿವೆ. ಒಂದು ವೇಳೆ ತಾತ್ಯಾನನ್ನೇ ಗಲ್ಲಿಗೇರಿಸಿದ್ದು ಹೌದಾಗಿದ್ದರೆ ಬ್ರಿಟಿಷ್ ಸರಕಾರದ ಅಧಿಕಾರಿಯೊಬ್ಬನಿಗೆ ಈ ಪರಿಯ ವಿಚಾರಣೆಯ ಅಗತ್ಯವೇನಿತ್ತು? ಈ ಪತ್ರವನ್ನು ಮೇಜರ್ ಮೇಡ್ ಗೆ ರವಾನಿಸಿ ರಾಮಕೃಷ್ಣ ಟೋಪೆಯ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಕೇಳಿದಾಗ ಆತನಿಂದ ಅದು ನಿಜವೆಂಬ ಉತ್ತರ ಲಭ್ಯವಾಗಿತ್ತು. ಜನರಲ್ ಮೇಡ್ ಈ ಸಂದರ್ಭದಲ್ಲಿ ತಾತ್ಯಾನನ್ನು ತಾನು ಸೆರೆ ಹಿಡಿದು ಗಲ್ಲಿಗೇರಿಸಿದ್ದೇನೆ, ಇನ್ನು ವಿಚಾರಣೆಯ ಅವಶ್ಯಕತೆ ಇಲ್ಲ ಎಂದೇಕೆ ಉತ್ತರಿಸಲಿಲ್ಲ? ತಾತ್ಯಾನನ್ನು ಗಲ್ಲಿಗೇರಿಸಿದ ಬಳಿಕವೂ ಇಬ್ಬರು ವ್ಯಕ್ತಿಗಳನ್ನು ತಾತ್ಯಾ ಎಂದು ಹೇಳಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂದರೆ ಇದೆಲ್ಲವೂ ಬ್ರಿಟಿಷರಾಡಿದ ನಾಟಕ ಎಂದೇ ಭಾಸವಾಗುವುದಿಲ್ಲವೇ?

              ತಾತ್ಯಾನನ್ನು ಸೆರೆಹಿಡಿಯಲು ಸಹಾಯ ಮಾಡಿದ ಎನ್ನಲಾದ ಮಾನ್ ಸಿಂಗ್ ಓರ್ವ ರಜಪೂತ. ತಮ್ಮ ಪ್ರಾಣ ಹೋದರೂ ಕೊಟ್ಟ ಮಾತಿಗೆ ತಪ್ಪುವವರಲ್ಲ ರಜಪೂತರು. ಹಾಗಾಗಿ ಆತ ತನ್ನ ಆಶ್ರಯದಲ್ಲಿದ್ದ ತಾತ್ಯಾನನ್ನು ಬ್ರಿಟಿಷರಿಗೊಪ್ಪಿಸಿದ ಎಂದು ಒಪ್ಪಲು ಕಷ್ಟವಾಗುತ್ತದೆ. ಕೆಲವು ಇತಿಹಾಸಕಾರರು ಮಾನ್ ಸಿಂಗ್ ತಾತ್ಯಾನ ಯೋಜನೆಯಂತೆ ತಾತ್ಯಾನ ಜಾಗದಲ್ಲಿ ಇನ್ನೊಬ್ಬನನ್ನು ಒಪ್ಪಿಸಿರಬಹುದೆಂದು ಅನುಮಾನಪಡುತ್ತಾರೆ. ಅಲ್ಲದೆ ಬ್ರಿಟಿಷರ ವಶದಲ್ಲಿದ್ದ ತನ್ನ ರಾಣಿ ಹಾಗೂ ಸಂಬಂಧಿಗಳನ್ನು ಬಿಡಿಸಿಕೊಳ್ಳಲು ಮಾನಸಿಂಗನೇ ತಾತ್ಯಾನನ್ನೊಪ್ಪಿಸುವ ನಾಟಕವನ್ನಾಡಿರಬಹುದೆಂಬ ಊಹೆಗಳೂ ಇವೆ. ಹಾಗೆಯೇ ಚಾಣಾಕ್ಷ ತಾತ್ಯಾ ಅನುಮಾನಗೊಂಡು ತಪ್ಪಿಸಿಕೊಂಡಾಗ ತನ್ನ ತಲೆ ಉಳಿಸಿಕೊಳ್ಳಲು ಬೇರೊಬ್ಬನನ್ನು ತಾತ್ಯಾ ಎಂದು ಬಿಂಬಿಸಿ ಬ್ರಿಟಿಷರಿಗೊಪ್ಪಿಸಿರಬಹುದೆಂಬ ಅನುಮಾನಗಳೂ ಇವೆ. ಈ ಎಲ್ಲಾ ಅಂಶಗಳನ್ನು ಖಚಿತ ಎಂದು ಒಪ್ಪಲಿಕ್ಕಾಗದೇ ಇದ್ದರು ಬ್ರಿಟಿಷರ ವರದಿಯೊಂದು ಇಂತಹ ಸಂಭವನೀಯತೆಯೊಂದನ್ನು ತೆರೆದಿಟ್ಟಿದೆ. ಆ ವರದಿಯಂತೆ ಮಾನ್ ಸಿಂಗನ ಆಶ್ರಯದಲ್ಲಿದ್ದ ತಾತ್ಯಾನನ್ನು ಸೆರೆ ಹಿಡಿಯುವಾಗ ತಾತ್ಯಾನ ಅಡುಗೆ ಭಟ್ಟರಿಬ್ಬರು ತಪ್ಪಿಸಿಕೊಂಡರು ಎಂದಿದೆ. ಅಡುಗೆಭಟ್ಟರೇ ತಪ್ಪಿಸಿಕೊಂಡಾಗ ಬ್ರಿಟಿಷರಿಂದಲೇ "ಅಪ್ರತಿಮ ಗೆರಿಲ್ಲಾ ನಾಯಕ" "ಕಣ್ಣೆದುರಿನಿಂದಲೇ ತಪ್ಪಿಸಿಕೊಳ್ಳುವುದರಲ್ಲಿ ಚಾಣಾಕ್ಷ"(genius of flight) ಎಂದೆಲ್ಲಾ ಹೊಗಳಿಸಿಕೊಂಡ ತಾತ್ಯಾ ಮಾತ್ರ ಸೆರೆ ಸಿಕ್ಕಿದನೆಂದರೆ ಅದು ಆಶ್ಚರ್ಯವಲ್ಲದೆ ಮತ್ತೇನು? ಅಲ್ಲದೆ ತಾತ್ಯಾನನ್ನು ಹಿಡಿದುಕೊಟ್ಟರೆ ಜಾಗೀರು ಕೊಡುತ್ತೇವೆಂದು ಮಾತುಕೊಟ್ಟ ಬ್ರಿಟಿಷರು ತಾತ್ಯಾ ತಮ್ಮ ಕೈಸೆರೆಯಾದ ಮೇಲೆ ಮಾನ್ ಸಿಂಗನಿಗೆ ಚಿಕ್ಕಾಸನ್ನೂ ಕೊಡಲಿಲ್ಲ. ಅಂದರೆ ಬ್ರಿಟಿಷರಿಗೆ ತಾವು ಸೆರೆ ಹಿಡಿದದ್ದು ತಾತ್ಯಾನನ್ನೇ ಎನ್ನುವ ವಿಶ್ವಾಸವಿರಲಿಲ್ಲ ಎನ್ನುವ ಗುಮಾನಿ ಏಳುವುದಿಲ್ಲವೇ?

            ಗುಜರಾತ್ ವಿವಿಯ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಆರ್.ಕೆ. ಧಾರಯ್ಯ ಬ್ರಿಟಿಷರು 1859ರ ನಂತರವೂ ಬದುಕಿದ್ದ ಅನ್ನುವುದಕ್ಕೆ ಹಲವು ಆಧಾರಗಳನ್ನು ಕೊಡುತ್ತಾರೆ. 1862ರಲ್ಲಿ ತನ್ನ ಹೆತ್ತವರು ತೀರಿಕೊಂಡ ಬಳಿಕ ಗುಜರಾತಿನ ನವಸಾರಿಗೆ ತಹಲ್ದಾಸ್ ಎನ್ನುವ ಸಾಧುವಿನ ವೇಶದಲ್ಲಿ ಬಂದು ನೆಲೆ ನಿಂತ ತಾತ್ಯಾ. ಅಲ್ಲಿನ ಬಾವಾಜಿ ಪರ್ವತದಲ್ಲಿ ನೆಲೆಸಿದ್ದ ಸಾಧು ತಹಲ್ದಾಸ್ ತಾತ್ಯಾನೇ ಎನ್ನುವುದಕ್ಕೆ ಧಾರಯ್ಯ ಕೊಡುವ ಇವು. ೧) ತಹಲ್ದಾಸ್ ತಾನು ದೇಶಸ್ಥ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಿದ್ದರು. ತಾತ್ಯಾ ಕೂಡಾ ದೇಶಸ್ಥ ಬ್ರಾಹ್ಮಣ! ೨) ತಾತ್ಯಾ ಹಿಂದೊಮ್ಮೆ ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಂಡಿದ್ದ ಬಾಣಸ್ವರ ಅರಣ್ಯದಲ್ಲಿದ್ದ ಗಂಗ್ರೋಲ್ ಎಂಬ ಹಳ್ಳಿಗೆ ತಹಲ್ದಾಸ್ ಆಗಾಗ ಹೋಗಿ ಬರುತ್ತಿದ್ದರು. ೩)ತಾತ್ಯಾನ ಜೊತೆಗಾರ ರಾಮಚಂದ್ರ(ರಾಮಭಾವೂ) ತಹಲ್ದಾಸ್ ಜೊತೆಗಿದ್ದ ೪) ತಹಲ್ದಾಸ್ ತಾತ್ಯಾನಂತೆ ನಿರರ್ಗಳವಾಗಿ ಮರಾಠಿ,ಹಿಂದಿ,ಗುಜರಾತಿಗಳಲ್ಲಿ ಮಾತನಾಡುತ್ತಿದ್ದರು ೫) ತಹಲ್ದಾಸರಿಗೆ ಯುದ್ಧ ಹಾಗೂ ಶಸ್ತ್ರಾಸ್ತ್ರಗಳ ಬಗೆಗೆ ಅಗಾಧ ಜ್ಞಾನವಿತ್ತು ೬) ಜನರಲ್ ಲ್ಯಾಂಗ್ ವರ್ಣಿಸಿದ ತಾತ್ಯಾನಂತೆಯೇ ತಹಲ್ದಾಸ್ ಚರ್ಯೆ ಇದ್ದುದು ೭) ಸಂವತ್ 1871(AD 1814) ತಹಲ್ದಾಸ್ ಜನ್ಮವರ್ಷವಾಗಿತ್ತು. ತಾತ್ಯಾನ ಜನ್ಮವರ್ಷವೂ ಅದೇ!

              ತಾತ್ಯಾ ಐದು ವಾರಗಳ ಕಾಲ ಮಾನ್ ಸಿಂಗನ ಆಶ್ರಯದಲ್ಲಿ ವಿಶ್ರಾಂತಿ ಪಡೆದು ಸರೊಂಜೀ ಕಾಡಿನಲ್ಲಿದ್ದ ತನ್ನ ಹೊಸ ಅನುಯಾಯಿಗಳ ನಾಯಕತ್ವ ವಹಿಸಿ ಹೋರಾಡುವ ರೂಪುರೇಷೆಯನ್ನು ನಿರ್ಧರಿಸಿದ್ದ. ಇದನ್ನೆಲ್ಲಾ ತಿಳಿದ ಮಾನ್ ಸಿಂಗ್ ಬ್ರಿಟಿಷರ ಕ್ಯಾಂಪಿಗೆ ದಿನನಿತ್ಯ ಹೋಗಿಬರುತ್ತಿದ್ದ ವಿಚಾರ ತಾತ್ಯಾನಂತಹ ಮೇಧಾವಿಗೆ ತಿಳಿಯಲಿಲ್ಲ ಎಂದು ನಂಬುವುದು ಕಷ್ಟವಾಗುತ್ತದೆ. ಎಷ್ಟೇ ಸುಸ್ತಾಗಿದ್ದರೂ ಶತ್ರು ಸೇನೆಯ ಸೆರೆಗೆ ಸಿಕ್ಕಿಹಾಕಿಕೊಳ್ಳುವಂತಹ ಮೂರ್ಖತನವನ್ನು ತಾತ್ಯಾ ಖಂಡಿತಾ ಮಾಡುವವನಲ್ಲ. ಅಲ್ಲದೆ ಐದುವಾರಗಳ ಕಾಲ ನಿದ್ದೆ ಮಾಡುವ ಪ್ರವೃತ್ತಿಯೂ ತಾತ್ಯಾನದ್ದಲ್ಲ. ಮೇಲಾಧಿಕಾರಿಗಳಿಗೆ ತಮ್ಮ ಕರ್ತವ್ಯ ನಿಷ್ಠೆಯನ್ನು ಸಾದರಪಡಿಸುವ ಸಲುವಾಗಿಯೋ, ರಾಣಿಯಿಂದ ಪ್ರಶಂಸೆ-ಜಾಗೀರು ಪಡೆದುಕೊಳ್ಳುವ ಆಶೆಯಿಂದಲೋ, ತಾತ್ಯಾನನ್ನು ಸೆರೆ ಹಿಡಿದೆವು-ಸಂಗ್ರಾಮ ಮುಗಿಯಿತು-ಇನ್ನು ಬಾಲಬಿಚ್ಚಬೇಡಿ ಎಂದು ಭಾರತೀಯರನ್ನು ಬೆದರಿಸುವ ಉದ್ದೇಶದಿಂದ ಯಾರೋ ಒಬ್ಬಾತನನ್ನು ಗಲ್ಲಿಗೇರಿಸಿ ಆತನೇ ತಾತ್ಯಾ ಎಂದು ಬ್ರಿಟಿಷರು ಬಿಂಬಿಸಿರಬಹುದು.

             ಹಾಗಾದರೆ ತಾತ್ಯಾ ಏನಾದ?  ಸನ್ಯಾಸಿಯಾಗಿಯೇ ಜೀವನ ಕಳೆದನೇ? ಅಥವಾ ಅಲ್ಲಲ್ಲಿ ಹೊಸ ಹೊಸ ಪಡೆಗಳನ್ನು ಕಟ್ಟಿ ಬೇರೆ ಬೇರೆ ಹೆಸರಲ್ಲಿ ಹೋರಾಡಿ ಮುಂದಿನ ಕ್ರಾಂತಿ ಪ್ರವಕ್ತಕರಿಗೆ ಪ್ರೇರಣೆ ನಿಡಿದನೇ? ಅಥವಾ ಮುಂದೆ ಭಾರತೀಯರ ನೆರವು ಸಿಗದೆ ಒದ್ದಾಡಿದನೇ? ಟಿಪ್ಪುವಿನಂಥ ಮತಾಂಧ, ಹೇಡಿಯನ್ನು ದೇಶಪ್ರೇಮಿ ಎನ್ನುವ ಈಗಿನ ದೇಶದ್ರೋಹಿಗಳಂತೆ ಆಗಲೂ ಬ್ರಿಟಿಷರ ಪರವಾಗಿದ್ದ ದೇಶದ್ರೋಹಿಗಳೇ ಅಧಿಕವಾಗಿದ್ದು ಸಹಕಾರಿಗಳೇ ಸಿಗದೇ ನಿರಾಶನಾಗಿ ಹೋದನೇ? ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ನೈಜ ಇತಿಹಾಸಕಾರರೇ ಇತಿಹಾಸವನ್ನು ಬರೆಯಬೇಕಾಗಿದೆ. ಏನೇ ಇರಲಿ, ಶಿವಾಜಿಯ ಸಕಲ ಗುಣಗಳನ್ನು ಮೇಳೈಸಿಕೊಂಡಿದ್ದ ತಾತ್ಯಾ ಎನ್ನುವ ಕ್ರಾಂತಿ ಸೂರ್ಯ ಭವ್ಯ ಭಾರತದ ಸ್ಪೂರ್ತಿದಾಯಕ ಇತಿಹಾಸವೊಂದನ್ನು ರಚಿಸಿ ಮುಂದಿನ ತಾತ್ಯಾ(ವೀರ ಸಾವರ್ಕರ್)ನಿಗೆ ಪ್ರೇರಣೆಯಾಗಿ ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗುಳಿದ.

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!


                ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಹಾಗೂ ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಧಾರ್ಮಿಕ-ದತ್ತಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವುದರೊಂದಿಗೆ ಸೆಕ್ಯುಲರ್ ಸರಕಾರಕ್ಕೆ ಚುರುಕು ಮುಟ್ಟಿಸಿದೆ ಉಚ್ಛ ನ್ಯಾಯಾಲಯ. ಇದರಿಂದಾಗಿ ಮುಜರಾಯಿ ದೇಗುಲಗಳ ಆಡಳಿತ ನಿರ್ವಹಣೆಗಾಗಿ ಕಾಯ್ದೆಯ ತಿದ್ದುಪಡಿ ನಂತರ ಸರ್ಕಾರ ರಚಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್ ಕೂಡ ಮಾನ್ಯತೆ ಕಳೆದುಕೊಳ್ಳಲಿದೆ. ಹೈಕೋರ್ಟ್ ಆದೇಶದಿಂದಾಗಿ ಸರ್ಕಾರ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ, ಆಡಳಿತಾಧಿಕಾರಿಗಳ ನೇಮಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನೇಮಕದ ಅಧಿಕಾರವನ್ನು ಕಳೆದುಕೊಳ್ಳಲಿದೆ. ಧಾರ್ಮಿಕ ದತ್ತಿ ಕಾಯ್ದೆಯಡಿ 2003ರಲ್ಲಿ ಹೊಸ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಒಟ್ಟು 34 ಸಾವಿರ ದೇಗುಲಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಧಿಸೂಚನೆ ಹೊರಡಿಸಿತ್ತು. ಮುಜರಾಯಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಶ್ರೀಮಂತ ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿದೆ. ಅಲ್ಲದೆ 1957ರ ಧಾರ್ಮಿಕ ದತ್ತಿ ಕಾಯ್ದೆಗೆ ಪದೇಪದೆ ತಿದ್ದುಪಡಿ ತರುವ ಮೂಲಕ ಅದರ ಸಾಂವಿಧಾನಿಕ ಮೌಲ್ಯಕ್ಕೆ ಧಕ್ಕೆ ತಂದಿದೆ ಎಂದು ಪೀಠ ಸರಕಾರದ ನಡೆಯನ್ನು ತೀಕ್ಷ್ಣವಾಗಿ ಟೀಕಿಸಿದೆ.

                ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅಲ್ಲಿ ಇತಿಹಾಸದ ನೆನಪುಗಳಿವೆ, ಪಾಠವಿದೆ! ಕಲಾವಿದನೊಬ್ಬನ ಕೈಚಳಕದಿಂದ ಸಿದ್ಧಗೊಂಡ ಕಲಾ ವೈಭವವು ಗತದ ಹಿರಿಮೆ-ಗರಿಮೆಯನ್ನು ಸಾರುತ್ತದೆ. ಹಿಂದೆ ಅಲ್ಲಿ ವೇದ-ವೇದಾಂಗಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿದ್ದವು. ಭಾರತೀಯ ಕಲೆಗಳ ಪೋಷಕ ತಾಣಗಳಾಗಿದ್ದವು. ಅಲ್ಲಿ ಜಂಜಡದ ಬದುಕಿನ ಬವಣೆಗಳಿಂದ ಮುಕ್ತನಾಗಿ ಕ್ಷಣಕಾಲ ಶಾಂತಿಯಿಂದಿರಲು ಸಾಧ್ಯವಿತ್ತು. ಬ್ರಿಟಿಷರ ಕಾಪಟ್ಯದಿಂದಲೋ ನಮ್ಮವರದೇ ಮೌಢ್ಯದಿಂದಲೋ ಜಾತಿಯ ಒಳಸುಳಿಗೆ ಅವು ಸಿಲುಕಿದರೂ ದಶಕಗಳ ಹಿಂದಿನವರೆಗೂ ಅಲ್ಲಿ ಅಧ್ಯಾತ್ಮವನ್ನೂ ಸವಿಯಬಹುದಿತ್ತು. ಶಾಂತಿಯನ್ನು ಪಡೆಯಬಹುದಿತ್ತು. ಆದರೆ ಯಾವಾಗ ಆಳುಗರ ಕೆಟ್ಟ ದೃಷ್ಠಿ ದೇಗುಲಗಳ ಮೇಲೆ ಬಿತ್ತೋ ಅವರ ಮತ ಬ್ಯಾಂಕಿಗೆ ಈ ದೇವಾಲಯಗಳ ನಿಧಿಗಳು ಜಮಾವಣೆಯಾಗತೊಡಗಿದವು! ಅಲ್ಲಿನ ಲೌಕಿಕ ಹಾಗೂ ಅಲೌಕಿಕ ಸೌಂದರ್ಯಗಳೆರಡೂ ಸೊರಗತೊಡಗಿತು!

          ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಬಳಿಕ ಸಮರ್ಪಕವಾಗಿ ಅವುಗಳನ್ನು ನಿರ್ವಹಿಸಿದರೆ ಯಾರೊಬ್ಬರ ತಕರಾರು ಇರುವುದಿಲ್ಲ. ಆದರೆ ಒಮ್ಮೆ ಸರಕಾರದ ವಶಕ್ಕೊಳಗಾದ ದೇವಾಲಯ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಅಲ್ಲಿ ನಡೆಯುವ ಪೂಜಾ-ಉತ್ಸವಾದಿಗಳಿಗೆ, ಧಾರ್ಮಿಕ ಶಿಕ್ಷಣಕ್ಕೆ, ಅನ್ನ-ಅಕ್ಷರ ದಾಸೋಹಗಳಿಗೆ ತೆರೆ ಬೀಳುತ್ತದೆ ಅಥವಾ ಅವೆಲ್ಲವೂ ನಾಮಕೆವಾಸ್ತೇ ಎಂಬತಾಗುತ್ತವೆ. ಅರ್ಚಕರು, ಪರಿಚಾರಕರಿಗೆ ಸರಿಯಾದ ಸಂಬಳ ಸಿಗದೆ ಅವರು ತಿಂಗಳುಗಟ್ಟಲೆ ಸರಕಾರೀ ನೌಕರರಂತೆ ತಮ್ಮ ಸಂಬಳಕ್ಕೆ ಕಾಯುವಂತೆ ಮಾಡುತ್ತದೆ ಸರಕಾರ. ಆದರೆ ಹುಂಡಿಯ ಹಣದ ಲೆಕ್ಕದ ಸಮಯದಲ್ಲಿ ಸರಿಯಾಗಿ ಆಗಮಿಸುತ್ತಾರೆ ಸರಕಾರೀ ಅಧಿಕಾರಿಗಳು! ಈ ಹಣವಾದರೂ ದೇವಾಲಯದ ಅಭಿವೃದ್ಧಿಗೆ ಉಪಯೋಗವಾಗುತ್ತದೆಯೇ? ಈ ಹಣದಿಂದ ಭಕ್ತರ ಜೀವನಕ್ಕೇನಾದರೂ ಲಾಭವಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಹಜ್ ಯಾತ್ರೆಯ ಸಬ್ಸಿಡಿಗಳಲ್ಲಿ, ಮತಾಂತರದ ಕಾರಸ್ಥಾನಗಳಲ್ಲೇ ಉತ್ತರ ಕಂಡುಕೊಳ್ಳಬೇಕು!

             ದೇಶದಲ್ಲಿ ನಾಲ್ಕನೇ ಅತ್ಯಧಿಕ ದೇವಾಲಯಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು ಎರಡೂವರೆ ಲಕ್ಷ ದೇವಾಲಯಗಳು ಸರಕಾರದ ಸುಪರ್ದಿಯಲ್ಲೇ ಇವೆ. ದೇವಾಲಯಗಳಿಂದ ಬರುವ 70% ಆದಾಯ ಮದ್ರಸಾಗಳಿಗೆ, ಹಜ್ ಯಾತ್ರೆಗೆ ಬಳಸಲ್ಪಡುತ್ತದೆ. ಕರ್ನಾಟಕದಲ್ಲಿ 2003ರಲ್ಲಿ ದೇವಾಲಯಗಳಿಂದ 79ಕೋಟಿ ಸಂಗ್ರಹ ಮಾಡಲಾಗಿತ್ತು. ಆದರೆ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೇ 7 ಕೋಟಿ! ಹಜ್ ಯಾತ್ರೆಗೆ 59 ಕೋಟಿ, ಚರ್ಚ್ ಗಳಿಗೆ 13 ಕೋಟಿ. ಈ ಧೋರಣೆ ಇಡೀ ದೇಶದಲ್ಲಿ ಸಾಗಿದೆ. ರಾಜ್ಯಾದ್ಯಂತ ದೇವಾಲಯಗಳಿಂದ ಬಂದ ಹಣದಲ್ಲೇ ಮುಲ್ಲಾ, ಪಾದರಿಗಳಿಗೂ ಸಂಬಳ ಪಾವತಿಯಾಗುತ್ತದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 125 ಎ ವರ್ಗದ ದೇವಾಲಯಗಳು, 179 ಬಿ ವರ್ಗದ ದೇವಾಯಗಳು ಇದ್ದು, ಎ ವರ್ಗದ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋ.ರೂ., 2011-12ನೇ ಸಾಲಿನಲ್ಲಿ 261.14 ಕೋ.ರೂ., ಬಿ ವರ್ಗದ ದೇವಾಲಯಗಳಿಂದ 20.18 ಕೋ.ರೂ. ಹಾಗೂ 21.58 ಕೋ.ರೂ. ಆದಾಯ ಬಂದಿದೆ. ದ.ಕ.ಜಿಲ್ಲೆಯಲ್ಲಿ 40 ‘ಎ’ ವರ್ಗದ ದೇವಾಲಯಗಳು, 27 ‘ಬಿ’ ವರ್ಗದ ಹಾಗೂ 400ಕ್ಕೂ ಹೆಚ್ಚು ‘ಸಿ’ವರ್ಗದ ದೇವಾಲಯಗಳು ಇವೆ. ರೂಪಾಯಿ 25ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಾಲಯಗಳು ‘ಎ’ ವರ್ಗಕ್ಕೂ ರೂ.25ಲಕ್ಷಕ್ಕಿಂತ ಕಡಿಮೆ ರೂ.5ಲಕ್ಷಕ್ಕಿಂತ ಹೆಚ್ಚಿನ ಆಧಾಯ ಇರುವ ದೇವಾಲಯಗಳು ‘ಬಿ’ವರ್ಗಕ್ಕೂ ಹಾಗೂ ರೂ.5ಲಕ್ಷಕ್ಕಿಂತ ಕಡಿಮೆ ಹಾಗೂ 1ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ದೇವಾಲಯಗಳು ‘ಸಿ’ವರ್ಗಕ್ಕೆ ಸೇರಿವೆ. ಕುಕ್ಕೆ ಸುಬ್ರಹ್ಮಣ್ಯ ಅತೀ ಹೆಚ್ಚು ಆದಾಯವುಳ್ಳ ದೇವಾಲಯ. ಕುಕ್ಕೆ ದೇವಸ್ಥಾನದ ಆದಾಯ 2010-11ನೇ ಸಾಲಿನಲ್ಲಿ 44.82 ಕೋ.ರೂ.ಗಳಿದ್ದರೆ 2011-12ನೇ ಸಾಲಿನಲ್ಲಿ 58.29 ಕೋ.ರೂ.ಗೇರಿತ್ತು. 2013-14ರಲ್ಲಿ 68ಕೋಟಿ, 2013-14ರಲ್ಲಿ ಕುಕ್ಕೆಯ ಆದಾಯ 78ಕೋಟಿ ರೂಪಾಯಿಗಳಾಗಿತ್ತು. ಕೊಲ್ಲೂರು ದೇವಳದ ಆದಾಯ 17.48 ಕೋ.ರೂ.ಗಳಿಂದ 20 ಕೋ.ರೂ.ಗಳಿಗೆ ಏರಿಕೆಯಾಗಿತ್ತು. ಕಟೀಲು ದೇವಸ್ಥಾನದ ಆದಾಯ 10.07 ಕೋ.ರೂ.ಗಳಿದ್ದುದು ಮರುವರ್ಷ 11.5 ಕೋ.ರೂ.ಗೆ ಏರಿಕೆಯಾಗಿತ್ತು. ಕುಕ್ಕೆ ದೇವಸ್ಥಾನದ ಆದಾಯ ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನದಾಗಿದ್ದು ಬಳಿಕ ಕೊಲ್ಲೂರು, ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಲೆಮಹದೇಶ್ವರ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮೊದಲಾದವುಗಳಿವೆ.

           300ವರ್ಷಗಳಿಗೂ ಹಿಂದಿನ ಪ್ರಾಚೀನ ಸ್ಮಾರಕಗಳನ್ನು ನವೀಕರಿಸುವುದಲ್ಲ, ಯಥಾಸ್ಥಿತಿ ಕಾಪಾಡಬೇಕು ಎನ್ನುವ ಕಾನೂನಿದೆ. ದೇವಾಲಯಗಳನ್ನು ತನ್ನ ಸ್ವಾಧೀನ ಮಾಡಿಕೊಳ್ಳುವ ಸರ್ಕಾರ ದೇವಾಲಯಗಳ ಅಮೂಲ್ಯ ವಾಸ್ತುಶಿಲ್ಪದ ಪರಂಪರೆಯನ್ನು ವಿವೇಚನಾರಹಿತವಾಗಿ ನಾಶಪಡಿಸುತ್ತಿದೆ. ಎಷ್ಟೋ ದೇವಾಲಯಗಳ ಶಿಲ್ಪಕಲಾ ವೈಭವ ಹಾಗೂ ಶಾಸನಗಳು ಧೂಳು, ಮರಳು ಮೆತ್ತಿ ನಾಶವಾಗುತ್ತಲೇ ಇವೆ. ಕಾಂಕ್ರೀಟಿಕರಣದ ಭರದಲ್ಲಿ ಹಲವು ದೇವಾಲಯಗಳ ಸೊಗಡು-ಇತಿಹಾಸವೆರಡೂ ನಾಶವಾಗುತ್ತಿವೆ. 2003-04ರ ಅವಧಿಯಲ್ಲಿ ಕರ್ನಾಟಕದಲ್ಲಿ ಸುಮಾರು ಐದುಸಾವಿರ ದೇವಾಲಯಗಳನ್ನು ನಿರ್ವಹಣೆ ಹಾಗೂ ಹಣಕಾಸಿನ ನೆಪವೊಡ್ಡಿ ಮುಚ್ಚಲಾಗಿತ್ತು.  ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಕೆಲವು ದೇವಾಲಯಗಳಿಗೆ ಕೊಡುವ ಹಣ ಎಣ್ಣೆ-ಬತ್ತಿಗಳಿಗೇ ಸಾಲುವುದಿಲ್ಲ. ಕೆಲವು ದೇವಸ್ಥಾನಗಳ ಅರ್ಚಕರು ಬೇರೆ ಆದಾಯದ ಮೂಲಗಳಿಲ್ಲದಿದ್ದರೆ ಬದುಕುವುದೇ ದುಸ್ತರ ಎಂಬಂತಹ ಸಂಬಳ ಪಡೆಯುತ್ತಾರೆ! ಕೆಲವಾರು ವರ್ಷ ಹಿಂದಿನವರೆಗೂ ಸರಕಾರ ದೇವಾಲಯಗಳಿಗೆ ಕೊಡುತ್ತಿದ್ದ ತಸ್ತೀಕ್ ವಾರ್ಷಿಕ ರೂ. ೧೫೦ನ್ನೂ ದಾಟುತ್ತಿರಲಿಲ್ಲ. ಈಗ ಸ್ವಲ್ಪ ಏರಿಕೆಯಾಗಿದೆಯಾದರೂ ಹಲವು ದೇವಾಲಯಗಳ ದೆಸೆ ಬದಲಾಗಿಲ್ಲ. ದೇವಾಲಯಗಳಿಗೆ ಸರಕಾರ ಕೊಡುವ ತಸ್ತೀಕ್ ತಿಂಗಳಿಗೆ 2000 ರೂ.! ಈ ಬಾರಿ ಜೂನ್ ನಲ್ಲಿ ಮುಜರಾಯಿ ಇಲಾಖೆ ದೇವಾಲಯಗಳಿಗೆ ವಾರ್ಷಿಕವಾಗಿ ನೀಡುತ್ತಿರುವ ಪೂಜಾ ಕೈಂಕರ್ಯ ವೆಚ್ಚವನ್ನು 24ಸಾವಿರದಿಂದ 36 ಸಾವಿರ ರೂ.ಗಳಿಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಇಷ್ಟರ ಮೇಲೆ ದೇವಾಲಯಗಳಲ್ಲಿ ತಟ್ಟೆಗೆ ಹಣ ಹಾಕಬೇಡಿ. ಹುಂಡಿಗೇ ಹಾಕಿ ಎನ್ನುವ ಫಲಕಗಳೂ ದೇವಾಲಯಗಳಲ್ಲಿ ರಾರಾಜಿಸತೊಡಗಿವೆ.

        ಬೆಂಗಳೂರಿನಲ್ಲಿ ಕೆರೆ ಒತ್ತುವರಿ ನೆಪವೊಡ್ಡಿ ಹಲವು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವಶಪಡಿಸಿಕೊಂಡಿದೆ. ಸಾಯಿಬಾಬಾ ದೇವಾಲಯ, ಇಸ್ಕಾನ್ ದೇವಾಲಯ, ಕನ್ನಿಕಾಪರಮೇಶ್ವರಿ, ಕೋದಂಡರಾಮಸ್ವಾಮಿ ದೇವಾಲಯಗಳು ಇವುಗಳಲ್ಲಿ ಪ್ರಮುಖವಾದವುಗಳು. ಕೆರೆ ಒತ್ತುವರಿ ಮಾಡಿ ನಿವೇಶನಗಳನ್ನಾಗಿಸಿ ಅಥವಾ ಮನೆ ಕಟ್ಟಿಸಿ ಮಾರಾಟ ಮಾಡಿದವರು, ಕಂಪೆನಿ-ಹೋಟೆಲ್ಗಳನ್ನು ಸ್ಥಾಪಿಸಿದವರು, ಅಭಿವೃದ್ಧಿಯ ನೆಪವೊಡ್ಡಿ ಕೆರೆಗಳನ್ನೇ ಗುಳುಂ ಮಾಡಿದವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸರಕಾರದ ಕಣ್ಣಿಗೆ ಈ ದೇವಾಲಯಗಳು ಮಾತ್ರ ಯಾಕೆ ಬಿದ್ದವು? ಕಾರಣ ಸ್ಪಷ್ಟ. ಅವೆಲ್ಲವೂ ಅಧಿಕ ಆದಾಯವಿದ್ದ ದೇವಾಲಯಗಳು!

               ಎಷ್ಟೋ ದೇವಾಲಯಗಳು ಗತಿ ಗೋತ್ರವಿಲ್ಲದೆ ಪಾಳು ಬಿದ್ದು ಹೋದದ್ದಿದೆ. ಹಲವು ದೇಗುಲಗಳನ್ನು ಊರವರೇ ಚಂದಾ ಎತ್ತಿ ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುವುದಿದೆ. ಆದರೆ ಒಮ್ಮೆ ದೇವಾಲಯ ಜೀರ್ಣೋದ್ಧಾರವಾಯಿತೆನ್ನಿ, ಸರಕಾರದ ಕೆಟ್ಟದೃಷ್ಠಿ ಈ ದೇವಾಲಯಗಳ ಮೇಲೆ ಬೀಳುತ್ತದೆ. ಉತ್ತಮ ಆದಾಯವಿರುವ ಹಿಂದೂ ದೇವಾಲಯಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಸರ್ಕಾರದ ಪ್ರಯತ್ನ ಸಾಗುತ್ತಲೇ ಇರುತ್ತದೆ. ಸ್ವಚ್ಛತೆಯ ಕಾರಣವೊಡ್ಡಿ, ಆಡಳಿತ ಮಂಡಳಿಯ ದುರಾಡಳಿತ-ಅವ್ಯವಹಾರ, ಹಣ ಲೂಟಿಯ ನೆಪವೊಡ್ಡಿ ದೇವಾಲಯಗಳನ್ನು ತನ್ನ ಸುಪರ್ದಿಗೆ ಒಳಪಡಿಸುವ ಸರಕಾರಕ್ಕೆ ತನ್ನ ದುರಾಡಳಿತ ತಾನು ಮಾಡುವ ಕೋಟಿಗಟ್ಟಲೆ ಹಣದ ಲೂಟಿ ಮರೆತು ಹೋಗಿರುತ್ತದೆ! ಉಡುಪಿ ಶ್ರೀ ಕೃಷ್ಣ ಮಠದಲ್ಲಿ 8 ಮಠಗಳಿದ್ದೂ ಎಲ್ಲವೂ ಮಠಾಧೀಶರ ಉಪಸ್ಥಿತಿಯಲ್ಲಿ ಪೂಜೆ -ಪುನಸ್ಕಾರ ಅನುರಣಿಸುತ್ತದೆ . ಮಠದಲ್ಲಿ ಸಂಗ್ರಹವಾಗುವ ದೇಣಿಗೆ ಸಾಕಷ್ಟು ಜನಪಯೋಗಿ ಕಾರ್ಯದಲ್ಲಿ ಉಪಯೋಗಿಸಲ್ಪಡುತ್ತದೆ . ದಿನಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಮಠದಿಂದ ಮಧ್ಯಾಹ್ನ ಊಟ ದೊರಕುತ್ತಿದೆ. ಸರಕಾರದ ವಶವಾದ ಮೇಲೆ ಇವೆಲ್ಲಾ ಸಾಧ್ಯವಿದೆಯೇ? ಧರ್ಮಸ್ಥಳದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ವೇಳೆ ಸರಕಾರ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಲ್ಲಿ ಈ ಎಲ್ಲಾ ಕಾರ್ಯಗಳು ಸ್ಥಗಿತವಾಗುವುದು ಸುಸ್ಪಷ್ಟ. ಶೃಂಗೇರಿಯಂತಹ ದೇವಾಲಯಗಳಿಂದ ವೇದಾಧ್ಯಯನ, ಅನ್ನದಾನ, ವಿದ್ಯಾದಾನಗಳಲ್ಲದೆ ಬಡಜನರಿಗೆ ಮನೆಗಳ ನಿರ್ಮಾಣ, ಉಚಿತ ಸೋಲಾರ್ ದೀಪಗಳ, ಸ್ವಉದ್ಯೋಗಕ್ಕೆ ಬೇಕಾಗುವ ಉಪಕರಣಗಳ ವಿತರಣೆಯಂತಹ ಜನೋಪಯೋಗಿ ಕಾರ್ಯಗಳು ನಡೆಯುತ್ತವೆ. ಅಲ್ಲಿ ಶ್ರೀಗಳಿರದೆ ಸರಕಾರದಿಂದ ನಿಯಮಿಸಲ್ಪಟ್ಟ ಅಧಿಕಾರ ವರ್ಗ ಮಾತ್ರ ಇದ್ದರೆ ಇವುಗಳೆಲ್ಲಾ ಕನಸಿನಲ್ಲೂ ಸಾಧ್ಯವಿಲ್ಲ. ಈ ರೀತಿ ಹಲವು ದೇವಾಲಯಗಳಿಂದ ಜ್ಞಾನ-ಅನ್ನದಾಸೋಹಗಳು, ವೃತ್ತಿ-ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆಗಳು, ಸ್ವಸಹಾಯ ಸಂಘಟನೆಗಳು, ಧಾರ್ಮಿಕ ಜಾಗರಣದ ಸಮಾವೇಶಗಳು, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಪುರಾಣ ಪ್ರವಚನ, ಯಕ್ಷಗಾನದಂತಹ ಭಾರತೀಯ ಕಲೆಗಳಿಗೆ ಪ್ರೋತ್ಸಾಹವೂ ಸಿಗುತ್ತದೆ. ನಡೆಯುತ್ತವೆ. ಈ ದೇವಾಲಯಗಳು ಸರಕಾರದ ವಶವಾದಲ್ಲಿ ಇಂತಹ ಕಾರ್ಯಗಳಿಗೆಲ್ಲಾ ಎಳ್ಳು-ನೀರು ಬಿಟ್ಟಂತೆಯೇ. ಮುಜರಾಯಿ ಇಲಾಖೆಯ ವ್ಯಾಪ್ತಿಯಡಿ ಬರುವ ಶಾಲೆಗಳನ್ನು ನಡೆಸಲು ದೇವಾಲಯಗಳಿಂದ ಬರುವ ಆದಾಯದಲ್ಲಿ ಸಾಧ್ಯವಿಲ್ಲ ಎಂದು ಹೇಳಿ ಶಿಕ್ಷಣ ಇಲಾಖೆಯಡಿ ಸೇರಿಸಿರುವ ಸರಕಾರ ಇನ್ನುಳಿದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತದೆಯೇ?

           ದೇವಾಲಯಕ್ಕೆ ಆಡಳಿತ ಮಂಡಳಿಯನ್ನು ರಚಿಸುವಾಗಲೂ ಮೀಸಲಾತಿಯನ್ನನುಸರಿಸುತ್ತದೆ ಸರಕಾರ.ಪ್ರತಿಯೊಂದು ದೇವಸ್ಥಾನಕ್ಕೆ ಸರ್ಕಾರದ ಆದೇಶದಂತೆ ಮೀಸಲಾತಿಯನ್ನು ಅನುಸರಿಸಿ ಸದಸ್ಯರನ್ನು ಅಯ್ಕೆ ಮಾಡಲಾಗುತ್ತದೆ. ಕರ್ನಾಟಕ ಸರಕಾರವು ರಾಜ್ಯದ ಹಿಂದೂ ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವ ಮುಜರಾಯಿ ಇಲಾಖೆಯಲ್ಲಿ ಹಿಂದೂ ಧರ್ಮೀಯರನ್ನು ಹೊರತುಪಡಿಸಿ ಅನ್ಯ ಮತೀಯ (೪ ಮುಸಲ್ಮಾನರು ಮತ್ತು ೨ ಕ್ರೈಸ್ತರು) ಅಧಿಕಾರಿಗಳನ್ನು ನೇಮಿಸಿದೆ. ಮುಜರಾಯಿ ಇಲಾಖೆಯು ಹಿಂದೂಗಳ ದೇವಸ್ಥಾನಗಳ ವ್ಯವಸ್ಥಾಪನೆ ನೋಡುವ ಇಲಾಖೆಯಾಗಿರುವುದರಿಂದ ಅದರಲ್ಲಿ ಅಹಿಂದೂ ವ್ಯಕ್ತಿಯ ನೇಮಕವು ಕಾನೂನುಬಾಹಿರವಾಗಿದ್ದು ಅದು ನೇಮಕದ ನಿಯಮಗಳಿಗನುಸಾರವಾಗಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಅಧಿನಿಯಮ, ೧೯೯೭ ರ ಅಧ್ಯಾಯ ೨ ರಲ್ಲಿನ ಪ್ರಕರಣ ೭ ರಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು ಅಥವಾ ನೌಕರರು ಹಿಂದೂಗಳೇ ಆಗಿರಬೇಕು ಎಂಬ ಸ್ಪಷ್ಟ ಉಲ್ಲೇಖವಿದೆ. ಅಂದರೆ ನೇಮಕಾತಿಯ ಸಮಯದಲ್ಲಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಸಲ್ಮಾನರ ಮಸೀದಿ, ಮದರಸಾ ಇವುಗಳ ವ್ಯವಸ್ಥಾಪನೆಯನ್ನು ನೋಡುವ 'ವಕ್ಛ್ ಬೋರ್ಡ್' ಇರಲಿ ಅಥವಾ ಹಜ್ ಯಾತ್ರೆಗಾಗಿ ನೇಮಿಸಿದ ಹಜ್ ಸಮಿತಿ ಇರಲಿ, ಎಲ್ಲದರಲ್ಲಿ ಕೇವಲ ಮುಸಲ್ಮಾನರನ್ನೇ ನೇಮಿಸಲಾಗುತ್ತದೆ. ಅನ್ಯ ಮತೀಯರ  ಧಾರ್ಮಿಕ ಸಂಸ್ಥೆಗಳಲ್ಲಿ ಆಯಾ ಮತೀಯರನ್ನು ನೇಮಿಸುತ್ತಿರುವಾಗ ಹಿಂದೂಗಳ ಮುಜರಾಯಿ ಇಲಾಖೆಯಲ್ಲಿ ಮಾತ್ರ ಹಿಂದೂವೇತರರ ನೇಮಕಾತಿ ಮಾಡುವುದ್ಯಾಕೆ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಪ್ರತಿಯೊಂದು ವಿಷಯದಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತದೆ. ಸರಕಾರದ ಈ ಕ್ರಮವನ್ನು ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಿದವರಿಗೆ ಕೋಮುವಾದಿ ಪಟ್ಟ ಶತಃಸಿದ್ಧ. ಮುಜರಾಯಿ ಇಲಾಖೆಯ 1997ರ ಕಾಯ್ದೆ ಅಸಂವಿಧಾನಿಕ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಕರಣದಲ್ಲಿ ತೀರ್ಪು ನೀಡಿದೆ. ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿ ನಡೆ. ಈ ರೀತಿ ನಡೆದುಕೊಂಡರೆ ನಮ್ಮ ಸಂವಿಧಾನದ ವಿಧಿ 14, 25, 26 ಮತ್ತು 27 ಉಲ್ಲಂಘನೆ ಮಾಡಿದಂತಾಗುತ್ತದೆ. ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟಿರುವ ನಮ್ಮ ಸರಕಾರಗಳು ದೇವಸ್ಥಾನಗಳನ್ನು ನಿಯಂತ್ರಿಸಲು ಹೊರಟಿವೆ. ಸರ್ಕಾರ ಮತ್ತು ನಮ್ಮ ರಾಜಕಾರಣಿಗಳಿಗೆ ದೇವಸ್ಥಾನಗಳ ಅಭಿವೃದ್ದಿಗಿಂತ ಆದಾಯವೇ ಮುಖ್ಯವಾಗಿದೆ.

             ಭಕ್ತರು ನಂಬಿಕೆ, ಭಕ್ತಿಯಿಂದ ಅರ್ಪಿಸಿದ ಈ ಹಣವನ್ನು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅಥವಾ ಕನಿಷ್ಟ ಹಿಂದೂ ಸಮಾಜದ ಅವಶ್ಯಕತೆಗಳ ಪೂರೈಕೆಗೆ ಬಳಸಬೇಕಲ್ಲವೆ? ಆದರೆ ಈ ಹಣ ಹಂಚಿಕೆಯಾಗುವುದು ಮದರಸಾ, ಚರ್ಚುಗಳಿಗೆ! ಇವು ಬಳಕೆಯಾಗೋದು ಮತಾಂತರ, ಜಿಹಾದೀ ಭಯೋತ್ಪಾದನೆಗಳಿಗೆ! ಅಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹಣ ನಮ್ಮನ್ನೇ ಕೊಲ್ಲಲು ಬಳಕೆಯಾಗುತ್ತಿದೆ! ಅಷ್ಟಕ್ಕೂ ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೊಳಪಡಿಸುತ್ತಿರುವುದೇಕೆ? ತಾನು ‘ಮತ ನಿರಪೇಕ್ಷ, ಸಮಾಜವಾದಿ’ ಎಂದು ಬೊಂಬಡಾ ಬಜಾಯಿಸುವ ಸರ್ಕಾರಕ್ಕೆ ದೇವಾಲಯದ ಹಣಕ್ಕೆ ಕೈ ಚಾಚುವುದೇಕೆ? ಅದರಲ್ಲೂ ಕೇವಲ ಹಿಂದುಗಳ ಪೂಜಾಸ್ಥಳಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದೇಕೆ? ಮುಸ್ಲಿಂ ಮತ್ತು ಕ್ರೈಸ್ತ ಮತೀಯ ಸಂಸ್ಥೆಗಳ ಕಡೆಗೆ ಸರ್ಕಾರದ ಗಮನವೇ ಹೋಗುವುದಿಲ್ಲವೇಕೆ? ದೇವರ ಪೂಜೆಯನ್ನೆಲ್ಲಾ ಮೌಢ್ಯವೆಂದು ವಿರೋಧಿಸ ಹೊರಟ ಸರಕಾರಕ್ಕೆ ದೇವಸ್ಥಾನಗಳ ಆದಾಯಗಳೇಕೆ ಬೇಕು? ಕುಂಭಮೇಳ ನಡೆಯುವ ಸಂದರ್ಭದಲ್ಲಿ ತೀರ್ಥಕ್ಕಾಗಿ 25-50ರೂ. ಕಸಿದುಕೊಳ್ಳುವ ಸರಕಾರಗಳು ಕೈಲಾಸ-ಮಾನಸಸರಸಿಯ ಯಾತ್ರೆಗೆ ಅತ್ಯಧಿಕ ಮೊತ್ತದ ಹಣವನ್ನು ತೆರಿಗೆಯ ರೂಪದಲ್ಲಿ ಪಡೆಯುತ್ತವೆ. ಆದರೆ ನಮ್ಮದೇ ಹಣದಲ್ಲಿ ಬಾಂಧವರು ಖರ್ಚಿಲ್ಲದೆ ಹಜ್ ಯಾತ್ರೆಗೈಯ್ಯುತ್ತಾರೆ!
ಕೆಲವು ದೇವಾಲಯಗಳಲ್ಲಿ ಗ್ರಾಮಸ್ಥರ ಆಗ್ರಹದಿಂದಾಗಿಯೋ, ಅಥವಾ ಅರ್ಚಕ-ಪರಿಚಾರಕ ವರ್ಗದವರ ಜಾಣ್ಮೆಯಿಂದಲೋ ತಕ್ಕಮಟ್ಟಿಗಿನ ಸೇವಾ ಕೈಂಕರ್ಯಗಳು ನಡೆಯುತ್ತವೆ. ಆದರೆ ಹಲವಷ್ಟು ದೇವಾಲಯಗಳು ಪಾಳು ಬೀಳುತ್ತಲಿವೆ. ಪಾಳು ಬೀಳುವುದೆಂದರೆ ಕೇವಲ ಧೂಳು ಮೆತ್ತಿ, ಕಟ್ಟಡ ಕುಸಿದು ಹೋಗಿರುವುದು ಮಾತ್ರವಲ್ಲ, ಅಲ್ಲಿನ ಆಡಳಿತ ನಿರ್ವಹಣೆ, ಧಾರ್ಮಿಕ ಕಾರ್ಯಕ್ರಮಗಳಿಗೂ ತತ್ವಾರವುಂಟಾಗಿದೆ. ಈಗ ನ್ಯಾಯಾಲಯದ ಆದೇಶದಿಂದಾಗಿ ಕೆಲವಷ್ಟು ದೇವಾಲಯಗಳಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕ ಹಿಂದು ಧರ್ಮ ಹಾಗೂ ಧಾರ್ಮಿಕ ದತ್ತಿ ಮಸೂದೆ 1997ರಲ್ಲೇ ಜಾರಿಗೊಳಿಸಲಾಗಿತ್ತಾದರೂ, ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿದ್ದು 2001ರ ಅಕ್ಟೋಬರ್ನಲ್ಲಿ. ನಂತರ 2003ರ ಮೇ ತಿಂಗಳಲ್ಲಿ ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ 2011ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಗುಲಗಳನ್ನು ಸರ್ಕಾರದ ಹತೋಟಿಗೆ ತರಲು ಅವಕಾಶ ಕಲ್ಪಿಸಲಾಗಿತ್ತು. 2012ರಲ್ಲಿ ಮತ್ತೊಮ್ಮೆ ಕಾಯ್ದೆಗೆ ತಿದ್ದುಪಡಿ ತಂದು ವಾರ್ಷಿಕ 50 ಲಕ್ಷ ರೂ.ಗೂ ಹೆಚ್ಚಿನ ಆದಾಯ ಗಳಿಸುವ ದೇಗುಲಗಳ ವ್ಯವಸ್ಥಾಪಕ ಮಂಡಳಿ ರಚನೆ, ಆಡಳಿತಾಧಿಕಾರಿ ನೇಮಕ ಮತ್ತಿತರ ನಿರ್ಧಾರ ಕೈಗೊಳ್ಳಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಧಾರ್ಮಿಕ ಪರಿಷತ್ಗಳನ್ನು ರಚಿಸಿತ್ತು. 2012ರ ತಿದ್ದುಪಡಿ ಕಾಯ್ದೆಯನ್ವಯ ಮುಜ ರಾಯಿ ವ್ಯಾಪ್ತಿಗೊಳಪಟ್ಟ ಎಲ್ಲ ದೇವಸ್ಥಾನಗಳು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರದ ಅಂಕುಶದಿಂದ ಮುಕ್ತಗೊಳ್ಳಲಿವೆ.

           ಮುಜರಾಯಿ ಇಲಾಖೆಯಲ್ಲಿ ಹಿಂದುಗಳು ಮಾತ್ರವಿರಬೇಕು. ದೇವಾಲಯ ಹಾಗೂ ಹಿಂದು ಭಕ್ತರಿಂದ ಸಂಗ್ರಹ ವಾಗುವ ಆದಾಯ ಮತ್ಯಾವುದೇ ಮತದ ಅಭಿವೃದ್ಧಿಗೆ ಬಳಕೆ ಮಾಡಬಾರದು. ಅರ್ಚಕರು, ಪರಿಚಾರಕರಿಗೆ ಜೀವನ ಸಾಗಿಸಲು ನೆರವಾಗುವಷ್ಟು ಗೌರವಧನವನ್ನಾದರೂ ಕೊಡಬೇಕು. ದೇವಾಲಯಗಳಿಂದ ಬರುವ ಆದಾಯದಿಂದ ಸಿ ದರ್ಜೆ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರಿಗೆ ವೇತನ, ದೇವಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಮಾಡಬೇಕು. ದೇವಾಲಯಗಳಿಂದ ಬರುವ ಆದಾಯವನ್ನು ಆಯಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸಬೇಕು. ಇದರಿಂದ ಗ್ರಾಮದ ಹಣ ಅಲ್ಲಿಗೇ ಉಪಯೋಗವಾಗುವುದರ ಜೊತೆಗೆ ಭಯೋತ್ಪಾದಕರ ಜೋಳಿಗೆ ಸೇರುವುದು ತಪ್ಪುತ್ತದೆ. ದೇವಾಲಯಗಳು ಅರ್ಚಕರು-ಭಕ್ತರಿಂದಾಗಿ ಉಳಿದಿವೆಯೇ ಹೊರತು, ಆಡಳಿತ ಮಂಡಳಿಗಳಿಂದಾಗಲಿ, ವ್ಯವಸ್ಥಾಪನಾ ಸಮಿತಿಗಳಿಂದಾಗಲಿ ಅಲ್ಲ.

ಗುರುವಾರ, ನವೆಂಬರ್ 5, 2015

ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

              ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಆರೋಪಿಸುತ್ತಾ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ಚಳುವಳಿಯೊಂದು ಆರಂಭವಾಗಿದೆ. ಎಲ್ಲಿ-ಏನು ಅಂತ ಕೇಳಿದರೆ ಅವರ ಬೆರಳು ಹೊರಳುವುದು ದಾದ್ರಿ, ಕಲ್ಬುರ್ಗಿ, ದಾಬೋಲ್ಕರ್ ಹತ್ಯೆಯತ್ತ! ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಸಾಲಿಗೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವವರ ಸಾಲಿಗೆ ಕೆಲ ಕಲಾವಿದರು, ವಿಜ್ಞಾನಿಗಳು, ಉದ್ದಿಮೆದಾರರು ಸೇರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಇಬ್ಬಂದಿತನವನ್ನು ಸರಿಯಾಗಿ ಝಾಡಿಸಲಾಗುತ್ತಿದೆ. ಜನರ ಮನಸ್ಸಲ್ಲಿ, ಸತ್ವ ಹಾಗೂ ಸ್ವತ್ವವನ್ನು ಕಳೆದುಕೊಂಡು ಸ್ವಹಿತಕ್ಕಾಗಿ ಎಂಜಲಿಗೆ ಕೈಚಾಚುವವನೇ ಸಾಹಿತಿ ಎಂಬ ಭಾವನೆ ಬೇರೂರುತ್ತಿದೆ.


                   ಉದ್ರಿಕ್ತಗೊಂಡ ಹಳ್ಳಿಗರು ಅಖ್ಲಾಖನನ್ನು ಸದೆಬಡಿದದ್ದೇ ತಡ ಮುಖ್ಯಮಂತ್ರಿ ಸಿದ್ಧರಾಮಯ್ಯರಂತೆ ನಿದ್ದೆ ಮಾಡುತ್ತಿದ್ದ ಮಾಧ್ಯಮಗಳು ಎದ್ದು ಕುಳಿತವು. ಘಟನೆಗೆ ಕೋಮುಬಣ್ಣ ಹಚ್ಚಿ, ಸಂಘಪರಿವಾರದ ಮೇಲೆ ಆರೋಪ ಹೊರಿಸಿದವು. ಮೋದಿ ಆಡಳಿತದಲ್ಲಿ ಕ್ರೌರ್ಯವೇ ತಾಂಡವವಾಡುತ್ತಿದೆಯೆಂದು ಬೊಬ್ಬಿರಿಯಲಾರಂಭಿಸಿದವು. ಬಿಹಾರದಲ್ಲಿ ಚುನಾವಣೆ ಕಾವೇರಿದ್ದ ಸಮಯ. ಜಲ-ತೈಲದಂತಿದ್ದು ಅಧಿಕಾರಕ್ಕೋಸ್ಕರ ಬೆರೆತ ಭಾಜಪಾ ವಿರೋಧಿಗಳಿಗೆ ಅಮೃತ ಸಿಕ್ಕಂತಾಯಿತು. ಇಷ್ಟರವರೆಗೆ ತಾವು ಬರೆದ ಪುಸ್ತಕಗಳನ್ನೇ ಹೊದ್ದು ಮಲಗಿದ್ದ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳೆಲ್ಲಾ ನಿದ್ದೆ ಬಿಟ್ಟು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು. ದಾದ್ರಿಯಲ್ಲಿ ಏನು ನಡೆಯಿತು ಎನ್ನುವುದರ ಸ್ಪಷ್ಟ ಚಿತ್ರಣವನ್ನು ಯಾವ ಮಾಧ್ಯಮಗಳೂ ಕೊಡಲಿಲ್ಲ. ಅರಿಯುವ ಪ್ರಯತ್ನವನ್ನೂ ಮಾಡಲಿಲ್ಲ.  ದಾದ್ರಿ ಇರುವುದು ಉತ್ತರಪ್ರದೇಶದಲ್ಲಿ, ಅಲ್ಲಿನ ಸರಕಾರ ತಮ್ಮದೇ ಮಾನಸಿಕತೆಯ ಸಮಾಜವಾದಿ ಪಕ್ಷ ಎನ್ನುವುದನ್ನು ಮರೆತುಬಿಟ್ಟರು. ಅಲ್ಲದೆ ದಾದ್ರಿಯಲ್ಲಿ ಸತ್ತವನೊಬ್ಬ ಮುಸ್ಲಿಮ್ ಎನ್ನುವ ಕಾರಣಕ್ಕೆ ಆ ಘಟನೆಗೆ ಅಷ್ಟು ಪ್ರಚಾರ ಸಿಕ್ಕಿತೇ ವಿನಾ ಸತ್ತವ ಹಿಂದೂವಾಗಿದ್ದರೆ ಈ ಪ್ರಶಸ್ತಿ ಹಿಂದಿರುಗಿಸುವವರೆಲ್ಲಾ ತಿರುಗಿ ನೋಡುತ್ತಿರಲಿಲ್ಲ.

               ಅಖ್ಲಾಖ್ ಹಳ್ಳಿಯಲ್ಲಿ ಕೋಮುದ್ವೇಷದ, ಭಾರತ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದ. ಅದರಿಂದಾಗಿ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಆತನ ಮೇಲೆ ಸಿಟ್ಟಿತ್ತು. ಆತನನ್ನು ವಧಿಸುವಾಗ ಮುಸ್ಲಿಮರೂ ಜೊತೆಯಾಗಿದ್ದರು ಎಂಬ ಸಂಗತಿಗಳೆಲ್ಲ ಗೌಣವಾಗಿ ಹೋದವು. ದಾದ್ರಿ ಘಟನೆಯನ್ನು ಹಿಡಿದು ಜಗ್ಗಿ ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿರುವವರು ಅಖ್ಲಾಖ್ ಪಾಕಿಸ್ತಾನಕ್ಕೆ ಹೋದದ್ದೇಕೆಂದು ಕೇಳಲಿಲ್ಲ. ಆತನಿಗೆ ಪಾಕಿಸ್ತಾನಕ್ಕೆ ತೆರಳಲು ಬೇಕಾದ ಪೂರಕ ದಾಖಲೆಗಳು ಹೇಗೆ ಸಿಕ್ಕಿತೆಂದು ಪ್ರಶ್ನಿಸಲೇ ಇಲ್ಲ. ಪಾಕಿಸ್ತಾನಕ್ಕೆ ತೆರಳಿ ಸಂಬಂಧಿಕರ ಮನೆಯಲ್ಲಿ ತಿಂಗಳುಗಟ್ಟಲೇ ಉಳಿಯುವ ದರ್ದು ಏನಿತ್ತು ಎಂದು ಕೇಳಲೇ ಇಲ್ಲ. ಪಾಕಿಸ್ತಾನದಲ್ಲಿ ತಿಂಗಳುಗಟ್ಟಲೆ ಝಂಡಾ ಹೂಡಿದವ ಐ.ಎಸ್.ಐ ಸಂಪರ್ಕಕ್ಕೆ ಒಳಗಾಗಲಿಲ್ಲ ಎಂದು ಹೇಳುವುದು ಹೇಗೆ? ಪಾಕಿಸ್ತಾನದಿಂದ ವಾಪಸಾದ ಕೂಡಲೇ ಆತನಿಗೆ ಕಾರು ಹೇಗೆ ಸಿಕ್ಕಿತೆಂದು ಯಾರೂ ಕೇಳಲಿಲ್ಲ! ಒಂದು ವೇಳೆ ಗೋಮಾಂಸ ಸಂಗ್ರಹಕ್ಕಾಗಿಯೇ ಅಖ್ಲಾಖನನ್ನು ಕೊಲೆ ಮಾಡಲಾಗಿದ್ದರೆ ಉತ್ತರಪ್ರದೇಶ ಸರಕಾರ ಕೇಂದ್ರಕ್ಕೆ ಕಳುಹಿಸಿದ ವರದಿಯಲ್ಲಿ ಗೋಮಾಂಸದ ಉಲ್ಲೇಖವೇ ಇರಲಿಲ್ಲವೇಕೆ? ಮೃತ ಅಖ್ಲಾಖನ ಪರಿವಾರಕ್ಕೆ ನಲವತ್ತೈದು ಲಕ್ಷ ರೂಪಾಯಿಗಳನ್ನೂ ಎರಡು ಬೆಡ್ ರೂಂಗಳುಳ್ಳ ನಾಲ್ಕು ಪ್ಲ್ಯಾಟುಗಳನ್ನು ಪರಿಹಾರಾರ್ಥವಾಗಿ ಕೊಟ್ಟ ಉತ್ತರಪ್ರದೇಶ ಸರಕಾರ ಹಿಂದೂಗಳನ್ನೇ ಅವಮಾನಿಸಿ ತನ್ನ ಮತಬ್ಯಾಂಕನ್ನು ಭದ್ರಪಡಿಸಿಕೊಂಡಿತು. ದಾದ್ರಿಯಲ್ಲಿ ನಡೆದ ಘಟನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಅಣಿಯಾಗಿವೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆ ಹಾಗೂ ಅದನ್ನು ಪರಿಗಣಿಸಿ ದಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ ಕೇಂದ್ರ ಸರಕಾರದ ಕ್ರಮಗಳು ಮಾಧ್ಯಮಗಳಿಗೆ ಮುಖ್ಯ ವಿಷಯವಾಗಲೇ ಇಲ್ಲ. ದೇಶದ ಭದ್ರತೆಗಿಂತಲೂ ಪಾಕಿಸ್ತಾನ ಪ್ರಿಯನೊಬ್ಬನ ವಧೆ ಇವರಿಗೆ ಕಣ್ಣೀರು ಹಾಕುವ ವಿಷಯವಾಯಿತು!

               ಅಮರನಾಥ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಎದ್ದ ಅಸಹಿಷ್ಣುತೆಯನ್ನು ಯಾವ ಸಾಹಿತಿಯೂ ಖಂಡಿಸಿ ಪ್ರಶಸ್ತಿ ವಾಪಸ್ ಮಾಡಲಿಲ್ಲ. ತಾಯ್ನೆಲದಿಂದಲೇ ಕಾಶ್ಮೀರಿ ಪಂಡಿತರನ್ನು ಓಡಿಸಿದ ಅಸಹಿಷ್ಣುತೆ ಅವರಿಗೆ ಕಾಣಲಿಲ್ಲ. ಕೇರಳದಲ್ಲಿ ರಾ.ಸ್ವ.ಸಂ.ದ ಬೆಳವಣಿಗೆಯನ್ನು ಸಹಿಸದೆ ಮಾಡಿದ ಕೊಲೆಗಳು ಸುದ್ಧಿಯೇ ಆಗಲಿಲ್ಲ. ಭಾರತಾದ್ಯಂತ ದೇಶ-ಧರ್ಮ-ಗೋ ರಕ್ಷಣೆಗಾಗಿ ಹೋರಾಡಿದ ಏಕಮಾತ್ರ ತಪ್ಪಿನಿಂದಾದ ಕೊಲೆಗಳೆಲ್ಲಾ ಮಾಧ್ಯಮಗಳಲ್ಲಿ ಮಿಣುಕು ಹುಳುಗಳಂತೆ ಮರೆಯಾದವು. ಇವೇ ಮಾಧ್ಯಮಗಳಾಗಲೀ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿ-ಕಲಾವಿದರಾಗಲೀ ಬೆಳ್ಳಂಬೆಳಗ್ಗೆ ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಗೋರಕ್ಷಣೆಯ ಒಂದೇ ಒಂದು ತಪ್ಪಿಗೆ ಮತಾಂಧರಿಂದ ಕೊಲೆಯಾಗಿ ಹೋದಾಗ ಎಲ್ಲಿ ಸತ್ತು ಹೋಗಿದ್ದರು? ಭಾರತದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಿದೆ. ಆದರೂ ಗೋಹತ್ಯೆ ನಡೆಯುತ್ತಿದೆಯೆಂದಾದರೆ ಅದು ನಮ್ಮ ಕಾನೂನಿನ ಅನುಷ್ಠಾನದ ವೈಫಲ್ಯ ಎಂದು ಯಾವ ಮಾಧ್ಯಮವೂ ಎತ್ತಿ ತೋರಿಸಲಿಲ್ಲ! 2013ರಲ್ಲಿ 823 ಕೋಮು ಸಂಘರ್ಷಗಳು ನಡೆದಿದ್ದರೆ, 2014ರಲ್ಲಿ ಅದು 644ಕ್ಕಿಳಿದಿದೆ. ಅಲ್ಲದೆ 2009ರಿಂದ 2013ಕ್ಕೆ ಹಿಂದುಳಿದ ಜಾತಿಯವರ ಮೇಲಿನ ಹಲ್ಲೆ 33,412ರಿಂದ 39,408ಕ್ಕೆ, ಹಿಂದುಳಿದ ವರ್ಗದವರ ಮೇಲಿನ ಹಲ್ಲೆ 5,250ರಿಂದ 6,793ಕ್ಕೆ ಏರಿದಾಗ ಈ ಪ್ರಶಸ್ತಿ ವಾಪಸಿಗರು ಏನು ಮಸಿ ತಿನ್ನುತ್ತಿದ್ದರೆ? ಆಗ ನೆನಪಾಗದ ಅಸಹಿಷ್ಣುತೆ ಈಗ ಹೇಗೆ ನೆನಪಾಯಿತು? ನಿಜವಾಗಿ ಅಸಹಿಷ್ಣುತೆ ಇರುವುದು ಈ ದೇಶದ ಸಾಮಾನ್ಯ ಜನರಲ್ಲಲ್ಲ, ಈ ಪ್ರಶಸ್ತಿ ವಾಪಸಿಗರಲ್ಲಿಯೇ! ಅದೂ ಪ್ರಧಾನಿ ನರೇಂದ್ರ ಮೋದಿಯ ಮೇಲೆ!

                ಅಸಹಿಷ್ಣುತೆ ಹೆಚ್ಚುತ್ತಿದೆ ಅನ್ನುವವರ ಸಾಲಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿಗಳು. ಭಾರತ ದ್ವೇಷವನ್ನೇ ಮೈಗೂಡಿಸಿಕೊಂಡು, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಾ, ದೇಶದೊಳಗೆ ಸುಳ್ಳು ಸುದ್ದಿಗಳಿಂದ ಕ್ಷೋಭೆ ಸೃಷ್ಟಿಸುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕುಬ್ಜವಾಗಿಸಲು ಸದಾ ಪ್ರಯತ್ನ ಪಡುತ್ತಿದ್ದ ಎನ್.ಜಿ.ಓಗಳಿಗೆ ಧನ ಸಹಾಯ ಮಾಡುತ್ತಿದ್ದ ಫೋರ್ಡ್ ಫೌಂಡೇಶನ್ನಿನ ಆಡಳಿತ ಸಮಿತಿಯ ಭಾಗವಾಗಿರುವ ನಾರಾಯಣಮೂರ್ತಿಗಳಿಗೆ ಮೋದಿ ಆಡಳಿತದಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾದಂತೆ ಕಂಡುಬಂದರೆ ಅದರಲ್ಲಿ ಅಚ್ಚರಿಯೇನಿಲ್ಲ! ಇದೇ ನಾರಾಯಣ ಮೂರ್ತಿಗಳು ಶೆಲ್ಡನ್ ಪೊಲ್ಲಾಕ್ ಎಂಬ ಭಾರತ ದ್ವೇಷಿಗೆ, ಹಿಂದೂ ದ್ವೇಷಿಗೆ ಭಾರತದ ಪುರಾತನ ಶಾಸ್ತ್ರೀಯ ಗ್ರಂಥಗಳ ತರ್ಜುಮೆಗಾಗಿ ಇಪ್ಪತ್ತು ಮಿಲಿಯ ಡಾಲರ್ ಹಣವನ್ನು ಕೊಟ್ಟ ದೇಶದ್ರೋಹಿ ಕೃತ್ಯಕ್ಕಿಂತಲೂ ಮೋದಿ ಆಡಳಿತವೇ ಕೆಟ್ಟದ್ದು ಎಂಬ ಮಹಾನ್ ಅರಿವು ಉಂಟಾದುದು ಅವರ ತಾಂತ್ರಿಕ ಜ್ಞಾನದ ಅಪೂರ್ವ ನೈಪುಣ್ಯತೆಗೆ ಸಾಕ್ಷಿ! ತಮ್ಮ ಪುತ್ರರತ್ನ ರೋಹನ್ ಅನ್ನು ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯಿಂದ ಕೊನೆಕ್ಷಣದಲ್ಲಿ ತೆಗೆದುಹಾಕಿ ಆ ಸ್ಥಾನಕ್ಕೆ ಮನೀಷ್ ಸಬರವಾಲರನ್ನು ನೇಮಿಸಿದ ಪ್ರಧಾನಮಂತ್ರಿ ಕಛೇರಿಯ ಕ್ರಮ ಮೂರ್ತಿಯವರ "ಅಸಹಿಷ್ಣುತೆ"ಗೆ ಕಾರಣ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ!

             "ಎಮಿನೆಂಟ್ ಹಿಸ್ಟೋರಿಯನ್ಸ್" ಎಂಬಂತಹ ಪುಸ್ತಕ ಬರೆದು ಎಡಬಿಡಂಗಿ, ದೇಶದ್ರೋಹಿ ಇತಿಹಾಸಕಾರರ ಬಣ್ಣ ಬಯಲು ಮಾಡಿದ ಅರುಣ್ ಶೌರಿಯಂತಹ ಚಿಂತಕನೊಬ್ಬ ಹಠಾತ್ತನೆ ಬದಲಾಗಿ ಮೋದಿ ವಿರುದ್ಧ, ಗೋಸುಂಬೆ ಸಾಹಿತಿಗಳ ಪರವಾಗಿ ಅರಚಾಡುತ್ತಿರುವುದೇ ಅನೇಕರನ್ನು ಅಚ್ಚರಿಗೆ ತಳ್ಳಿದುದು. ಶೌರಿಗೆ ಮೋದಿ ಮೇಲೆ ಸಿಟ್ಟಿದ್ದಿದ್ದರೆ ಅದು ಅವರ ವೈಯುಕ್ತಿಕ ವಿಷಯ. ಆದರೆ ಅದಕ್ಕಾಗಿ ಈ ದೇಶವಿರೋಧಿಗಳನ್ನು ಬೆಂಬಲಿಸುವುದು ಶೌರಿಯಂತಹವರಿಗೆ ಎಷ್ಟು ಸರಿ? ಶೌರಿಯಂತೆ ಗೌರವಯುತ ಸ್ಥಾನದಲ್ಲಿರುವವರು ನೆನಪಿಡಬೇಕಾದ ಸತ್ಯವೊಂದಿದೆ. ಗೌರವ ಇರುವುದು ತತ್ವಕ್ಕೇ ಹೊರತು ವ್ಯಕ್ತಿಗಲ್ಲ !!!

                ಪ್ರತ್ಯುತ್ತರ ನೀಡಲು ಅನುಮತಿಯಿಲ್ಲದೆ ಜವಾನರು ಸಾಯುತ್ತಿದ್ದಾಗ ಯಾರೂ ಪ್ರಶಸ್ತಿ ವಾಪಸ್ ಮಾಡಲಿಲ್ಲ. ದೇಶದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಹಗರಣಗಳು ನಡೆದಾಗ ಇವರಿಗೂ ಬಹುಷಃ ಪಾಲು ಸಿಗುತ್ತಿತ್ತು. ಲವ್ ಜಿಹಾದ್, ರೇಪ್ ಜಿಹಾದ್, ಲ್ಯಾಂಡ್ ಜಿಹಾದ್ ವಿರೋಧಿಸಿ ಕನಿಷ್ಟ ಹೇಳಿಕೆಯನ್ನೂ ನೀಡಲಿಲ್ಲ. ಅವ್ಯಾಹತ ಮತಾಂತರವನ್ನು ತಡೆಯಲು ಯಾರೂ ಪ್ರತಿಭಟಿಸಲಿಲ್ಲ. ಗಡಿಗಳಲ್ಲಿ ನುಗ್ಗಿಬಂದು ಇಲ್ಲೇ ನೆಲೆಸಿ ಇಲ್ಲಿನ ಹಿಂದೂಗಳನ್ನು ಕಗ್ಗೊಲೆ ನಡೆಸಿದಾಗ ಮಾನವ ಹಕ್ಕುಗಳೆಲ್ಲಾ ನೆನಪಾಗಲೇ ಇಲ್ಲ. ಈಗ ಭಾರತಕ್ಕೆ ಭಾರತವೇ ಒಂದಾಗಿ ಚಾಯ್ ವಾಲಾನೊಬ್ಬನನ್ನು ಪ್ರಧಾನಿಯಾಗಿ ಆರಿಸಿದಾಗ, ಕಳೆದ ಒಂದೂವರೆ ವರ್ಷದಲ್ಲಿ ಒಂದೇ ಒಂದು ಹಗರಣವೂ ಕಾಣದಿದ್ದಾಗ, ತಮ್ಮ ತಮ್ಮ ಗಂಜಿಕೇಂದ್ರಗಳಿಗೆ ಧಕ್ಕೆ ಉಂಟಾದಾಗ, ಸೈನಿಕರಿಗೆ ಆಕ್ರಮಣಕ್ಕೆ ಪ್ರತ್ಯಾಕ್ರಮಣ ನಡೆಸಲು ಅನುಮತಿ ಸಿಕ್ಕಿ ಸೈನ್ಯದಲ್ಲೊಂದು ಹೊಸ ಕಳೆ ಬಂದಿರುವಾಗ, ದೇಶ ಎಲ್ಲರಿಗಿಂತಲೂ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವಾಗ, ಪ್ರಧಾನಿ ವಿಶ್ವದಲ್ಲೇ ಪ್ರಭಾವಿ ವ್ಯಕ್ತಿಯಾಗಿ ದೇಶ ಮತ್ತೊಮ್ಮೆ ವಿಶ್ವಗುರುವಾಗಲು ಸನಿಹವಾಗಿರುವಾಗ ಈ ಭಾರತ ದ್ವೇಷಿಗಳು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು.

             ಬುದ್ಧಿಜೀವಿಗಳ ಅಸಹಿಷ್ಣುತೆಗೆ ಕಾರಣ ಇಲ್ಲದಿಲ್ಲ. ಕಳೆದ ಆರು ದಶಕಗಳಲ್ಲಿ ಬೇಕಾದ ಸ್ಥಾನಮಾನವನ್ನುಂಡು ಕೊಬ್ಬಿರುವ ಅವರನ್ನು ಹಠಾತ್ತನೆ ಇಳಿಸಿಬಿಟ್ಟರೆ ಮತ್ತೇನಾದೀತು? ಐ.ಸಿ.ಎಚ್.ಆರ್.ನಿಂದ ಇತಿಹಾಸವನ್ನು ತಿರುಚಿದ ಹೆಗ್ಗಣಗಳನ್ನು ಮನೆಗೆ ಕಳುಹಿಸಿದಾಗಲೇ ಅವರ ಪಿತ್ತ ನೆತ್ತಿಗೇರಿತ್ತು. ತಮ್ಮ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದ್ದ ಎನ್ಜಿಓಗಳನ್ನು ನಿಷೇಧಿಸಿದಾಗ ಆಕಾಶವೇ ಕುಸಿದುಬಿದ್ದಂತಾಗಿತ್ತು. ಮೋದಿಯ ನಾಯಕತ್ವದಲ್ಲಿ ಭಾರತ ಬಲು ವೇಗವಾಗಿ ಅಭಿವೃದ್ಧಿಗೊಳ್ಳುತ್ತಾ ದೇಶದ ಕೀರ್ತಿ ಗಗನಕ್ಕೇರುತ್ತಿರುವಾಗ ತಮ್ಮ ಆಶ್ರಯದಾತರಿಗೇ ಆಶ್ರಯತಪ್ಪುವ ಸೂಚನೆ ಕಂಡೊಡನೆ ಅವರು ಧರಾಶಾಯಿಗಳಾಗಿದ್ದರು. ಹಾಗಾಗಿಯೇ ಈ ಕೌರವರೆಲ್ಲಾ ಒಟ್ಟು ಸೇರಿ ದಾದ್ರಿ ಪ್ರಕರಣವನ್ನು ಸೃಷ್ಟಿಸಿ ವಿಶ್ವ ಮಟ್ಟದಲ್ಲಿ "ಭಾರತ ಅಲ್ಪಸಂಖ್ಯಾತರನ್ನು ಸಹಿಸದ ದೇಶವೆಂದು" ಬಿಂಬಿಸಿ ಇಲ್ಲಿ ಯಾವುದೇ ಹೂಡಿಕೆ ಆಗದಂತೆ ತಡೆದು ಇದೇ ವಿಷಯವನ್ನು ಹಿಡಿದು ಚಳಿಗಾಲದ ಅಧಿವೇಶನವನ್ನು ಹಾಳುಗೆಡವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಯೋಜಿಸಿದರು. ಇದಕ್ಕಾಗಿ ಹಲವು ದೇಶದ್ರೋಹಿ ಎನ್ಜಿಓಗಳು, ಭಾರತ ವಿರೋಧಿ ಶಕ್ತಿಗಳು ಹಣಕಾಸಿನ ನೆರವನ್ನು ನೀಡಿವೆ. ಹಾಗಾಗಿ ತನ್ನ ಆಡಳಿತವನ್ನು ಸುಗಮವಾಗಿ ನೆರವೇರಿಸಬೇಕಾದರೆ ಇಂತಹ ವಿದ್ರೋಹಿ ಶಕ್ತಿಗಳ ಸೊಂಟ ಮುರಿಯುವುದು ಮೋದಿ ಸರಕಾರದ ತುರ್ತು ಅಗತ್ಯವಾಗಿದೆ. ಹಾಂ… ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

             ಶತಮಾನದ ಹಿಂದೆ ಜಗತ್ತಿನ ಜೀವ ಹಿಂಡಿದ "ಖಿಲಾಪತ್" ಮತ್ತೆ ಮುನ್ನೆಲೆಗೆ ಬಂದಿದೆ. ಮುಸ್ಲಿಮ್ ಜಗತ್ತಿನ ತಲೆಗೆ ಅಡರಿದ ಮತಾಂಧತೆಯ ಮರುಳು ಜಗತ್ತನ್ನೇ ಆಪೋಶನ ತೆಗೆದುಕೊಳ್ಳುವುದು ಹೊಸದಲ್ಲವಾದರೂ ಈ "ಐಸಿಸ್" ಎಂಬ ಜಿಹಾದೀ ಗುಂಪು ವಿಶ್ವವನ್ನು ವೇಗವಾಗಿ ಮುಸ್ಲಿಂಮಯವನ್ನಾಗಿಸುತ್ತಾ, ಒಪ್ಪದವರನ್ನು ತರಿಯುತ್ತಾ, ಜನಸಮೂಹಗಳನ್ನೇ ತನ್ನ ಸಂಘಟನೆಗೆ ಸೇರಿಸಿಕೊಳ್ಳುತ್ತಾ ಸಾಗಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ತಮ್ಮ ಪಂಥಕ್ಕೆ ಸೇರಲೊಪ್ಪದವರನ್ನು ಅಮಾನುಷವಾಗಿ ಚಿತ್ರಹಿಂಸೆ ಕೊಟ್ಟು, ಹಸುಳೆ-ಮಹಿಳೆ ಎನ್ನದೆ ಎಲ್ಲರನ್ನೂ ಬಗೆಬಗೆಯ ರೀತಿಯಲ್ಲಿ ಕೊಲ್ಲುತ್ತಾ, ಕೊಂದ ರೀತಿಯನ್ನು ಚಿತ್ರೀಕರಣ ಮಾಡಿ ಅಂತರ್ಜಾಲಕ್ಕೇರಿಸಿ ವಿಕೃತ ಆನಂದ ಪಡುತ್ತಾ ಮನುಷ್ಯ-ಪ್ರಾಣಿ ಎನ್ನದೆ ಎಲ್ಲರ ಮೇಲೂ ಅತ್ಯಾಚಾರವೆಸಗಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾ ಭೀಬತ್ಸವಾಗಿ ವರ್ತಿಸುತ್ತಿರುವ ಈ ಮತಾಂಧರ ಉನ್ಮಾದಕ್ಕೆ ದೇಶಗಳೆಲ್ಲಾ ಬೆದರಿ ಹೋಗಿವೆ.

               ಒಸಾಮಾ ಬಿನ್ ಲಾಡೆನ್ನನ ಅವಸಾನದ ತರುವಾಯ ಅವನ ಬಲಗೈ ಬಂಟರಾಗಿದ್ದ ಅಬೂಬಕರ್ ಅಲ್ ಬಾಗ್ದಾದಿ ಹಾಗೂ ಆಲ್ ಜವಾಹಿರಿ ಬದ್ಧ ವಿರೋಧಿಗಳಾಗಿಬಿಟ್ಟರು. ಇದರಿಂದಾಗಿ ಅಲ್ಕೈದಾದ ಅಳಿದುಳಿದ ಸಾಮರ್ಥ್ಯವೂ ಕುಗ್ಗಿಹೋಯಿತು. ಈ ಸಂಘರ್ಷ ಬಾಗ್ದಾದಿ ಆಲ್ ಕೈದಾದಿಂದ ದೂರನಾಗಿ ಪ್ರತ್ಯೇಕ ಸಂಘಟನೆ ಹುಟ್ಟುಹಾಕುವಲ್ಲಿವರೆಗೆ ಮುಟ್ಟಿತು. ಹಾಗೆ ರೂಪುಗೊಂಡ ಸಂಘಟನೆಯೇ ಐಸಿಸ್! ಬಾಗ್ದಾದಿ ನೇತೃತ್ವದಲ್ಲಿ ಐಸಿಸ್ ಅದ್ಭುತವಾಗಿ, ವೃತ್ತಿಪರವಾಗಿ ಹೋರಾಡುತ್ತಾ ಇರಾಕಿನ ಹಲವು ಪ್ರದೇಶಗಳು, ಸಿರಿಯದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿತು. ಪರಿಣಾಮವಾಗಿ ಭೂಪ್ರದೇಶಗಳ ಜೊತೆ ಅಪಾರಪ್ರಮಾಣದ ತೈಲ ಸಂಪತ್ತು, ಹಣ, ಶಸ್ತ್ರಾಸ್ತ್ರಗಳು ಐಸಿಸ್ ಕೈಸೇರಿದವು. ಐಸಿಸ್ನ ದಾಳಿ ಮುಂದುವರೆಯುತ್ತಲೇ ಇದ್ದು, ಉತ್ತರ ಮತ್ತು ಪೂರ್ವ ಇರಾಕಿನ ಪಟ್ಟಣಗಳು ಹಾಗೂ ತೈಲಬಾವಿಗಳು ಅದರ ವಶವಾಗುತ್ತಲೇ ಇವೆ. ಕುರ್ದಿಶ್ ಪ್ರದೇಶಕ್ಕೆ ಅದರ ಬೆದರಿಕೆ ಎದುರಾಗಿದೆ. ಜಗತ್ತಿನ ಇತರ ಜಿಹಾದಿ ಗುಂಪುಗಳು ಐಸಿಸ್ನಿಂದ ಉತ್ತೇಜಿತರಾಗಿ ಬಗ್ದಾದಿಗೆ ಉಘೇ ಎನ್ನುತ್ತಾ ತಮ್ಮ "ನಿಷ್ಠೆ" ಪ್ರಕಟಿಸಿವೆ. ಈ ಎಲ್ಲಾ ಯಶಸ್ಸಿನಿಂದ ಉತ್ಸಾಹಗೊಂಡ ಅದರ ನಾಯಕ ಅಬೂಬಕರ್ ಆಲ್ ಬಗ್ದಾದಿ ತನ್ನನ್ನು ತಾನು ಖಲೀಫ ಎಂದೂ, ತಾನು ಖಲೀಫ್ ರಾಜ್ಯವನ್ನು ಸ್ಥಾಪಿಸಿರುವುದಾಗಿಯೂ ಘೋಷಿಸಿದ. ಇವತ್ತು ಐಸಿಸ್ ಜಗತ್ತಿನ ಅತ್ಯಂತ ಶ್ರೀಮಂತ ಜಿಹಾದಿ ಭಯೋತ್ಪಾದಕ ಸಂಘಟನೆ. ಬಾಗ್ದಾದಿಯ ಈ ಐಸಿಸ್ ಎದುರು ಅಲ್ಕೈದಾದಂತಹ ಭಯೋತ್ಪಾದಕ ಸಂಘಟನೆಯೇ ಮಂಕಾಗಿ ಬಿಟ್ಟಿದೆ. ಐಸಿಸ್ ಹಿಂದೊಮ್ಮೆ ತನ್ನ ಧಣಿಯಾಗಿದ್ದ ಆಲ್ ಕೈದಾವನ್ನು ಹಿಂದಿಕ್ಕಿ ಜಾಗತಿಕ ಜಿಹಾದಿನ ನಾಯಕನಾದುದಲ್ಲದೆ ತನ್ನದೇ ಸರಕಾರವನ್ನು ರಚಿಸಿ ಷರೀಯತ್ ಕಾನೂನಿನಡಿಯಲ್ಲಿ  ಆಡಳಿತವನ್ನೂ ಆರಂಭಿಸಿದೆ. ಹೀಗೆ ಈ ಜಿಹಾದೀ ಸಂಘಟನೆ ರಾತ್ರಿ ಬೆಳಗಾಗುವುದರೊಳಗೆ ಇಸ್ಲಾಮಿಕ್ ರಾಜ್ಯ ಎನ್ನುವ ಹೆಸರನ್ನು ಗಳಿಸಿಕೊಂಡಿತು.

            ಖಲೀಫ್ ರಾಜ್ಯದಲ್ಲಿ ವಹಾಬಿ ಸಿದ್ಧಾಂತದ ಅನುಸಾರ ಶರೀಯತ್ ಶಾಸನವನ್ನು ಹೇರಲಾಗಿದೆ. ಸಿರಿಯಾದ ಪಟ್ಟಣ ರಖಾ ಅಧಿಕಾರದ ಕೇಂದ್ರಸ್ಥಾನವಾಗಿದ್ದು, ಖಲೀಫ್ ಈಗಾಗಲೇ ಆದೇಶಗಳನ್ನು ಹೊರಡಿಸುತ್ತಿದ್ದಾನೆ. ಆತನ ಸಂದೇಶ ಇಷ್ಟೇ: "ಸುನ್ನಿಗಳಾಗಿ ಅಥವಾ ಮಣ್ಣಾಗಲು ಸಿದ್ಧರಾಗಿ!".  ಎಲ್ಲಾ ಮುಸ್ಲಿಮರು ತನ್ನಲ್ಲಿ ನಿಷ್ಠೆಯನ್ನು ಪ್ರಕಟಿಸಬೇಕೆಂದು ಅಬೂಬಕರ್ ಅಲ್ ಬಗ್ದಾದಿ ಯಾನೆ ಖಲೀಫ್ ಇಬ್ರಾಹಿಮ್ ಕರೆ ನೀಡಿದ್ದಾನೆ; ಜಗತ್ತಿನ ಎಲ್ಲಾ ಮುಸ್ಲಿಮರಿಗೆ ತಾನೇ ಖಲೀಫ್ ಹಾಗೂ ಇಮಾಮ್ ಎನ್ನುತ್ತಿದ್ದಾನೆ. ಇದು ಇತರ ಅರೇಬಿಯನ್ ಆಳರಸರಲ್ಲಿ ಭಯ ಹುಟ್ಟಿಸಿದೆ. ತಾನು ಗೆದ್ದ ಪ್ರದೇಶದಲ್ಲಿ ಐಸಿಸ್ ಅನ್ಯ ಮತೀಯರ/ಪಂಥೀಯರ ಮೇಲೆ ಜಿಜಿಯಾ ವಿಧಿಸಿದೆ. ಈ ಸುನ್ನಿ ಜಿಹಾದಿಗಳ ವಿರುದ್ಧ ಹೋರಾಡಲು ಸುನ್ನಿ ಸೈನಿಕರು ನಿರಾಕರಿಸುತ್ತಿದ್ದಾರೆ.  ಐಸಿಸ್ ಭೀತಿಯಿಂದ ಲಕ್ಷಾಂತರ ಜನ ತಮ್ಮ ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಇರಾಕಿ ಮಹಿಳೆಯರ ವಿರುದ್ಧ ಖಲಿಫೇಟ್ ಹೊರಡಿಸಿದ ಆದೇಶದಲ್ಲಿ ಸ್ತ್ರೀ ಜನನಾಂಗವನ್ನು ಊನಗೊಳಿಸುವುದು, ಪೂರ್ಣ ಬುರ್ಖಾ ಧರಿಸುವುದು ಮತ್ತು ಸುಗಂಧದ್ರವ್ಯಗಳ ನಿಷೇಧ ಮುಂತಾದುವು ಸೇರಿವೆ. ಪ್ರಸಿದ್ಧ ವ್ಯಕ್ತಿಗಳ ಶಿಲ್ಪಗಳನ್ನು ಮತ್ತು ಪವಿತ್ರ ತಾಣಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತೀ ಹತ್ಯೆಯನ್ನೂ ಬಗೆಬಗೆಯ ರೀತಿಯಲ್ಲಿ ಮಾಡುತ್ತಾ ಅವುಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮ ತಾಣಗಳಿಗೆ ಅವುಗಳನ್ನು ರವಾನಿಸಿದ್ದಾರೆ ಈ ರಕ್ಕಸರು. ಅವರ ಸಿದ್ಧಾಂತಗಳನ್ನು ಒಪ್ಪದಿರುವವರಿಗೆ ಖಲೀಫ್ ರಾಜ್ಯದಲ್ಲಿ ಜಾಗವಿಲ್ಲ. ಸಾವಿರಾರು ಯಾಜಿದಿಗಳನ್ನು ಹತ್ಯೆ ಮಾಡಿದ ಈ ಮತಾಂಧರು ಯಾಜಿದಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಿರಿಯಕ್ಕೆ ಸಾಗಿಸಿದರು. ಅವರನ್ನು ಬಲಾತ್ಕಾರವಾಗಿ ಮತಾಂತರಿಸಿ ತಮ್ಮ ಸಿದ್ಧಾಂತವನ್ನೊಪ್ಪುವವರಿಗೆ ಮಾರಾಟ ಮಾಡಿದರು.

              ಐಸಿಸ್ ಉಗ್ರರು ತಮ್ಮದೇ ಆದ ಹೊಸ ಕರೆನ್ಸಿಯನ್ನು ಸೃಷ್ಟಿಸಿದ್ದಾರೆ. ಅದೂ ಚಿನ್ನದ ನಾಣ್ಯಗಳ ಮೂಲಕ!  ಚಿನ್ನದ ದಿನಾರ್, ಬೆಳ್ಳಿ ದಿರ್ಹಾಮ್ಸ್, ತಾಮ್ರದ ನಾಣ್ಯಗಳನ್ನು ಐಸಿಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಒಂದು ದಿನಾರ್ ಚಿನ್ನದ ನಾಣ್ಯವು 4.25 ಗ್ರಾಂ ತೂಕವಿದ್ದು, 21 ಕ್ಯಾರೆಟ್ ಶುದ್ಧತೆ ಹೊಂದಿದೆ. ಹಾಗೆಯೇ ದಿರ್ಹಾಮ್ ಬೆಳ್ಳಿ ನಾಣ್ಯವು 2 ಗ್ರಾಂ ತೂಕದ್ದಾಗಿದೆ. ತಾಮ್ರದ ನಾಣ್ಯವು 20 ಗ್ರಾಂ ತೂಕವಿದೆ. ಯಾವೆಲ್ಲಾ ದೇಶಗಳನ್ನು ‘ಪೂರ್ತಿ ಇಸ್ಲಾಮೀಕರಣ’ ಮಾಡಬೇಕೆಂದು ಬಗ್ದಾದಿ ತನ್ನ ಮುಂದಿನ ಯೋಜನೆಯನ್ನೇ ಪ್ರಕಟಿಸಿದ್ದಾನೆ.  ಇಸ್ಲಾಮಿಕ್ ರಾಜ್ಯದ ಪ್ರಕಾರ ಯಾವೆಲ್ಲ ದೇಶಗಳು ಇಸ್ಲಾಮಿನ ಶತ್ರುಗಳೆಂದು ಹೊಸ್ ಖಲೀಫ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದಾನೆ. ಅದರಲ್ಲಿ ಭಾರತದ ಹೆಸರೂ ಇದೆ. ಈ ದೇಶಗಳ ಮುಸ್ಲಿಮರು ದಂಗೆಯೆದ್ದು, ತಮ್ಮ ದೇಶಗಳ ವಿರುದ್ಧ ಜಿಹಾದ್ ನಡೆಸಬೇಕೆಂದು ಆತ ಆದೇಶ ಹೊರಡಿಸಿದ್ದಾನೆ!

               ಕೆಲವು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದಮಾಡಿದ್ದರು. ಇತ್ತೀಚೆಗೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಸಿಕ್ಕ ಮಹಿಳೆಯರನ್ನು ಅತ್ಯಾಚಾರ ಮಾಡುವುದಲ್ಲದೆ ಅವರನ್ನು ಭಯೋತ್ಪಾದನಾ ಚಟುವಟಿಕೆಗೂ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಜೊತೆ ಸಂಭೋಗ ನಡೆಸಲು ನಿರಾಕರಿಸಿದ ಮಹಿಳೆಯರನ್ನು ಹತ್ಯೆ ಮಾಡುತ್ತಾರೆ. ಐಸಿಸ್ ಉಗ್ರರು, ಕಳ್ಳಮಾರ್ಗದಲ್ಲಿ ತೈಲ ಮಾರಾಟ, ಸುಲಿಗೆ, ಮಾನವ ಕಳ್ಳಸಾಗಣೆ ಮೂಲಕ ಭಾರೀ ಹಣ ಸಂಪಾದಿಸುತ್ತಿದ್ದಾರೆ. ಅವರು ಜನರ ಮಾರಣಹೋಮ ಮಾಡುವುದರ ಜೊತೆಗೆ ಐತಿಹಾಸಿಕ ನಗರಗಳಲ್ಲಿರುವ ಕಲಾಕೃತಿಗಳನ್ನು ಕೂಡ ನಾಶ ಪಡಿಸುತ್ತಿದ್ದಾರೆ. ಪಾಲ್ಮೈರಾ ಸಿರಿಯಾದ ಪುರಾತನ ನಗರ. ಅಲ್ಲಿಯ ಬಾಲ್-ಶಮೀನ್ ದೇವಸ್ಥಾನ ಒಂದನೇ ಶತಮಾನದ್ದು. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ತಾಣವದು. ಆ ದೇವಾಲಯವನ್ನು ನಾಶ ಪಡಿಸಿದ ಉಗ್ರರು 2000 ವರ್ಷಗಳ ಐತಿಹಾಸಿಕ ಸಿಂಹದ ಪ್ರತಿಮೆಯನ್ನು ತುಂಡರಿಸಿದರು. ಇರಾಕ್, ಸಿರಿಯಾಗಳಲ್ಲಿನ ಪ್ರಾಚೀನ ತಾಣಗಳ ನಿರ್ವಹಣೆಯ ಒಪ್ಪಂದಕ್ಕೆ ಯುನಿಸ್ಕೋ ಸಹಿ ಹಾಕಿದ ಬೆನ್ನಲ್ಲೇ ಉಗ್ರರು ಪ್ರಾಚೀನ ಕಲಾಕೃತಿಗಳನ್ನು ನಾಶ ಮಾಡಿದ್ದಾರೆ. ಅನ್ಯ ದೇಶೀಯರನ್ನು ಅಪಹರಣ ಮಾಡುವ ಐಸಿಸ್ ಅವರ ಬಿಡುಗಡೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದೆ. ಐಸಿಸ್ ಈಗಾಗಲೇ ಸಿರಿಯಾದ ಶೇ.40ರಷ್ಟು ಭಾಗವನ್ನು ಆಕ್ರಮಿಸಿದೆ.

              ಇಸ್ಲಾಂ ರಾಜ್ಯ ಸ್ಥಾಪನೆ ಹೆಸರಿನಲ್ಲಿ ನರಕ ಸೃಷ್ಟಿಸುತ್ತಿರುವ ಐಎಸ್ಐಎಸ್ ಉಗ್ರರು ಪಾಶ್ಚಾತ್ಯ ದೇಶಗಳ ಪ್ರಜೆಗಳೆಲ್ಲರನ್ನೂ ಗುರಿಯಾಗಿಸಿ ಯೋಜನೆ ರೂಪಿಸುತ್ತಿದ್ದಾರೆ. ಇರಾಕಿನ ಮೊಸೂಲ್ ಪ್ರದೇಶದಲ್ಲಿ ಐಸಿಸ್ ಭಯೋತ್ಪಾದಕರೊಂದಿಗೆ ಹತ್ತು ದಿನವಿದ್ದು, ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಅವರ ಯೋಜನೆಗಳ ಬಗ್ಗೆ ತಿಳಿದುಕೊಂಡ ಮಾಜಿ ಜರ್ಮನ್ ಸಂಸದ, ಪತ್ರಕರ್ತ ಜೂರ್ಜೆನ್ ಟೋಡೆನ್ ಬಹಿರಂಗಪಡಿಸಿದ ವಿಷಯಗಳು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಮತಾಂಧರು ಖಲೀಫಾ ರಾಜ್ಯ ಸ್ಥಾಪನೆ ಗುರಿಯೊಂದಿಗೆ ಹಿಂದುಗಳು, ವಿಗ್ರಹಾರಾಧಕರು, ನಾಸ್ತಿಕರು, ಶಿಯಾ ಮುಸ್ಲಿಮರನ್ನು ಹತ್ಯೆ ಮಾಡಲು ವ್ಯೂಹ ರಚಿಸುತ್ತಿದ್ದಾರೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಲು ಅವರು ಸಿದ್ದ. ಅಣ್ವಸ್ತ್ರಗಳನ್ನು ಉಪಯೋಗಿಸಲೂ ಅವರು ಹಿಂಜರಿಯಲಾರರು. 50 ಕೋಟಿ ಜನರನ್ನು ಕೊಲ್ಲಲು ಐಸಿಸ್ ಯೋಜನೆ ರೂಪಿಸುತ್ತಿದೆ. ಅಣು ಸುನಾಮಿ ಮೂಲಕ ವಿಶ್ವವನ್ನೇ ಹೆಣಗಳ ರಾಶಿಯಾಗಿಸುವುದೇ ಅವರ ಗುರಿ ಎಂದು ಟೋಡೆನ್ ಸಂದರ್ಶನದಲ್ಲಿ ಈ ರಾಕ್ಷಸರ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ.

             ಸಿರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಐಸಿಸ್ ಹಿಡಿತ ಸಾಧಿಸುತ್ತಿದ್ದಂತೆ ಎಲ್ಲರ ಮನದಲ್ಲಿ ಪ್ರಶ್ನೆಯೊಂದು ಮೂಡಿದೆ.  ಒಬ್ಬ ವ್ಯಕ್ತಿ ಹಾಗೂ ಆತ ಕಟ್ಟಿದ ಸೇನೆ ಇಡೀ ಜಗತ್ತನ್ನು ಅಲ್ಲಾಡಿಸುತ್ತಿದೆಯೆಂದರೆ ಅದು ಸಾಮಾನ್ಯ ಸಂಗತಿಯೇನು? ಬಲಾಢ್ಯ ಶಕ್ತಿಯೊಂದರ ಸಹಕಾರವಿಲ್ಲದೆ ಒಬ್ಬ ವ್ಯಕ್ತಿಗೆ ಅಂಥ ತಾಕತ್ತು ಬರುವುದು ಹೇಗೆ? ಆತನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವವರಾರು? ಈ ಭಯೋತ್ಪಾದನಾ ಹಾವಳಿಯ ಹಿಂದೆ ಯಾರಿದ್ದಾರೆ? ಪ್ಯಾಲೆಸ್ತೈನನ್ನು ಸ್ವತಂತ್ರಗೊಳಿಸುವ ಜತೆಗೆ ಅಲ್ಲಿ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ರೂಪುಗೊಂಡಿರುವ ಹಮಾಸ್ ಸಂಘಟನೆಯ ಶಕ್ತಿ ಕುಂದಿಸಲು ಮುಸ್ಲಿಮ್ ರಾಷ್ಟ್ರಗಳನ್ನು ಒಡೆದು ತನ್ಮೂಲಕ ಕಚ್ಚಾ ತೈಲ ಸಂಪತ್ತಿನ ಮೂಲಕ ಅವು ಸಂಪಾದಿಸಿಕೊಂಡಿರುವ ಆರ್ಥಿಕ ಬಲವನ್ನು ತಗ್ಗಿಸಲು ಅಮೇರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು ಯೋಜನೆ ರೂಪಿಸಿದವು. ಅದರಂತೆ ಸಿರಿಯಾದಲ್ಲಿರುವ ಪ್ರತ್ಯೇಕತಾವಾದಿಗಳ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಖಿಲಾಫತ್ ಚಳವಳಿಗೆ ಬೆಂಬಲ ನೀಡಿತು ಅಮೇರಿಕಾ. ಮೇಲ್ನೋಟಕ್ಕೆ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ಇದನ್ನು ನಿರಾಕರಿಸಿದರೂ ಮುಸ್ಲಿಂ ರಾಷ್ಟ್ರಗಳ ಆಂತರಿಕ ಯುದ್ಧದಿಂದ ಅಮೆರಿಕಕ್ಕೆ ಲಾಭವಾಗುವುದು ಸುಳ್ಳಲ್ಲ. ಇದಕ್ಕೆ ಸರಿಯಾಗಿ ತನ್ನ ವಿರುದ್ಧ ತಿರುಗಿ ಬಿದ್ದಿದ್ದ ಒಸಾಮಾ ಬಿನ್ ಲಾಡೆನ್ನನ್ನು ಮುಗಿಸಿದ ಬಳಿಕ ಅವನ ಶಿಷ್ಯರಾದ ಬಾಗ್ದಾದಿ ಹಾಗೂ ಜವಾಹಿರಿ ಒಬ್ಬರಿಗೊಬ್ಬರು ವಿರೋಧಿಗಳಾಗಿಬಿಟ್ಟರು.

            ಕಚ್ಚಾ ತೈಲ ಸಂಪತ್ತು ಹೊಂದಿರುವ ಮುಸ್ಲಿಂ ರಾಷ್ಟ್ರಗಳನ್ನು ಒಡೆಯಬೇಕಾದರೆ ಪ್ರಬಲ ಅಸ್ತ್ರವೇ ಶಿಯಾ-ಸುನ್ನಿ ವರ್ಗೀಕರಣ! ಐಸಿಸ್ಗೆ ಬೆಂಗಾವಲಾಗಿ ನಿಂತಿರುವವರ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವುದು ಸೌದಿ ಅರೇಬಿಯಾ, ಈಜಿಪ್ಟ್, ಕತಾರ್ ಹಾಗೂ ಅಮೆರಿಕಗಳ ಹೆಸರು! ಸಧ್ಯ ಸಿರಿಯಾ ಅಮೇರಿಕಾದಿಂದ ಯಾವುದೇ ಯುದ್ದ ಉಪಕರಣಗಳನ್ನಾ ಖರೀದಿಸದೆ ಚೈನಾ ಹಾಗೂ ರಷ್ಯಾದ ಯುದ್ದ ಪರಿಕರಗಳನ್ನ ಬಳಸುತ್ತಿದೆ. ವೆನಿಜ಼ುವೆಲಾ, ಕ್ಯೂಬಾ ಮತ್ತು ಅರ್ಜೆಂಟೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಶರ್ ಅಲ್ ಅಸದ್ ಅಮೇರಿಕಾ ವಿರೋಧೀ ನೀತಿ ಅನುಸರಿಸುತ್ತಿದ್ದಾನೆ. 2006ರವರೆಗೆ ವಿದೇಶಿ ವಿನಿಮಯಕ್ಕೆ  ಬಳಸುತ್ತಿದ್ದ ಡಾಲರ್ ಅನ್ನು ಯುರೋಗೆ ಬದಲಾಯಿಸಿದ ಅಸದ್! ಈ ಎಲ್ಲವೂ ಅಮೇರಿಕಾದ ಕಣ್ಣು ಕೆಂಪಗಾಗಿಸಿತ್ತು. ಜೊತೆಗೆ ಅಪಾರ ತೈಲ ಸಾಮ್ರಾಜ್ಯದ ಮೇಲೂ ಅದರ ಕಣ್ಣುಬಿದ್ದಿತ್ತು. ಹೀಗಾಗಿ ಅಸದ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾನೆ, ಆತನನ್ನು ಪದಚ್ಯುತಗೊಳಿಸಬೇಕು ಎನ್ನುವ ನೆಪವೊಡ್ಡಿ ಅಮೇರಿಕಾ ಆಡುತ್ತಿರುವ ಹೂಟ ಇದು. ಇದಕ್ಕೆ ಸರಿಯಾಗಿ ಅಸದ್ ಆಡಳಿತವನ್ನು ವಿರೋಧಿಸುವವರಿಗೆ ಕೋಟ್ಯಂತರ ಡಾಲರ್ ಹಣದ ಸಹಾಯವನ್ನು ತೈಲ ಸಾಮ್ರಾಜ್ಯದ ದೊರೆಗಳು ಒದಗಿಸಿದ್ದಾರೆ. ತನ್ನ ಸಾಮ್ರಾಜ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೌದಿ ಎಂಥ ಅಪಾಯಕಾರಿ ಹೆಜ್ಜೆಯನ್ನೂ ಇಡಬಲ್ಲದು ಎನ್ನುವುದಕ್ಕೆ ಅದು ಐಸಿಸ್ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ಸಹಾಯ ನೀಡುತ್ತಿರುವುದೇ ಸಾಕ್ಷಿ. ಇದಕ್ಕೆ ಟರ್ಕಿಯೂ ಜೊತೆಗೂಡಿದೆ. ಸಿರಿಯಾದಲ್ಲಿ ಸುನ್ನಿ ಪಂಗಡವನ್ನು ಬಲಗೊಳಿಸಿ ಅಸದ್ ನನ್ನು ಕೆಳಗಿಳಿಸುವುದೇ ಇದರ ಉದ್ದೇಶ. ಬಾಗ್ದಾದಿ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರ ಸೌದಿಯದ್ದು ಎನ್ನುವುದು ಸಾಬೀತಾಗಿದೆ.
ಖಿಲಾಫತ್ ಸ್ಥಾಪನೆಗಾಗಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಬಾಗ್ದಾದಿ ಲಾಡೆನ್ನಿನಂತೆ ತನಗೇ ತಿರುಗಿ ಬೀಳುತ್ತಾನೆ ಎನ್ನುವ ಸತ್ಯ ಗೊತ್ತಿದ್ದೂ ಅಸದ್ ನನ್ನು ಆತ ಹತ್ಯೆಗೈಯುವ ತನಕ ಸುಮ್ಮನುಳಿಯಲು ಯೋಚಿಸಿತ್ತು ಅಮೇರಿಕಾ. ಆದರೆ ಯಾವಾಗ ತಮ್ಮ ಪತ್ರಕರ್ತ ಸ್ಟೀವನ್ ಸೋಟ್ಲೊನನ್ನು ಐಸಿಸ್ ಶಿರಚ್ಛೇದ ಮಾಡಿತೋ ಆಗ ಅಮೇರಿಕಾದ ಜನತೆ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಲಾರಂಭಿಸಿದರು. ಹಾಗಾಗಿ ಅಮೇರಿಕಾ ಯುದ್ಧ ರಂಗಕ್ಕಿಳಿಯಬೇಕಾಯಿತು. ಆದರೆ ಈ ನಿರ್ಧಾರದ ಹಿಂದೆ ಇನ್ನೊಂದು ಕಾರಣವೂ ಇದೆ. ಅತ್ತ ರಷ್ಯಾ ಐಸಿಸ್ ಉಗ್ರರ ನಿರ್ಮೂಲನ ಮಾಡುವುದಾಗಿ ಘೋಷಿಸಿ ಸಮರಾಂಗಣಕ್ಕಿಳಿದಿದೆ. ಅಪಾರ ಯಶಸ್ಸು ಅದರ ಪಾಲಿಗೊದಗಿದೆ. ಜಗತ್ತಿನ ಭೂಪಟದಲ್ಲಿ ತನ್ನ ಅಸ್ತಿತ್ವವನ್ನು ವಿಶ್ವಕ್ಕೆ ಸಾಬೀತು ಮಾಡಿ ದೊಡ್ಡಣ್ಣನಾಗಿ ಮೆರೆಯಲು ಅದು ಪ್ರಯತ್ನಕ್ಕಿಳಿದಿದೆ. ಉಕ್ರೇನ್, ಕ್ರಿಮಿಯಾವನ್ನು ತನ್ನ ತೆಕ್ಕೆಗೆ ಸೇರಿಸಲು ಬಲಪ್ರಯೋಗಿಸಿದಾಗಲೇ ಅದರ ಈ ಇರಾದೆ ಸ್ಪಷ್ಟವಾಗಿತ್ತು. ಒಟ್ಟಾರೆ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿನ ವಿಶ್ವದ ಪ್ರಬಲ ರಾಷ್ಟ್ರಗಳ ನಡುವಿನ ಈ ಶೀತಲ ಸಮರ ಮತಾಂಧರನ್ನು ಹೆಚ್ಚಿಸಿ ಶಾಂತಿಯುತ ದೇಶಗಳಲ್ಲೂ ಗಲಭೆ ಸೃಷ್ಟಿಸಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಳಿಸಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.

ಭಾರತಕ್ಕೇನು ಹಾನಿ?

               ಮತಭ್ರಾಂತಿಯ ಹುಚ್ಚು ಕಳೆದ ಎರಡು ಸಾವಿರ ವರುಷಗಳಲ್ಲಿ ಭಾರತವನ್ನೇ ಛಿದ್ರಗೊಳಿಸಿಬಿಟ್ಟಿದೆ. ಇವತ್ತು ಉಳಿದಿರುವ ಭಾರತದ ಭೂಭಾಗದಲ್ಲೂ ದಿನ ನಿತ್ಯ ಈ ಮತಾಂಧರದ್ದೇ ಅಬ್ಬರ. ಈ ವಿಕ್ಷಿಪ್ತ ಮನಸ್ಥಿತಿಯ ಬೆಳವಣಿಗೆಗೆ ನಮ್ಮಲ್ಲಿನ ಗೋಸುಂಬೆ ನಾಯಕರ 'ಸೆಕ್ಯುಲರಿಸಂ" ಪರಿಕಲ್ಪನೆಯೇ ಕಾರಣ. ಕಳೆದ ಶತಮಾನದ ಆರಂಭದಲ್ಲಿ ಇದೇ "ಖಿಲಾಫತ್" ಭೂತ ಇಲ್ಲಿನ ಹಿಂದೂಗಳನ್ನು ಆಪೋಶನ ತೆಗೆದುಕೊಂಡದ್ದು ಕಡಿಮೆಯೇನು? ಗಾಂಧಿಯೂ ಸೇರಿ ಕಾಂಗ್ರೆಸ್ಸಿನ ನಾಯಕರೆಲ್ಲಾ ಇದೇ ಖಿಲಾಫತಿಗೆ ಬೆಂಬಲ ನೀಡಿದ್ದರಿಂದಲೇ ಅದು ಉಳಿದಿದ್ದ ಭಾರತವನ್ನೂ ತುಂಡರಿಸುವವರೆಗೆ ಬೆಳೆದು ಈಗಲೂ ಕಾಡುತ್ತಿರುವುದು ಸುಳ್ಳಲ್ಲ. ಹಾಗಾಗಿ ಐಸಿಸ್ ಉಗ್ರರು ಎಸಗುತ್ತಿರುವ ಪ್ರತಿಯೊಂದು ಕೃತ್ಯಗಳನ್ನೂ ಕಂಡರಿತಿರುವ ಭಾರತ ಇತಿಹಾಸದ ತಪ್ಪುಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಕೇಂದ್ರ ಸರಕಾರವೇನೋ ಕಠಿಣ ನಿಲುವು ತೆಗೆದುಕೊಂಡು ಕಟ್ಟೆಚ್ಚರ ವಹಿಸಿದೆ. ಆದರೆ ರಾಜ್ಯ ಸರಕಾರಗಳು? ಹೀಗೆ ಹೇಳಲೂ ಕಾರಣವಿದೆ. ಐಸಿಸ್ ಪರವಾಗಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಮಸೂರ್ ಬಗ್ಗೆ ಬ್ರಿಟನ್ನಿನ ಚಾನಲ್4-ಟಿವಿ ಮಾಹಿತಿ ಪ್ರಸಾರ ಮಾಡಿತ್ತು. ಈ ವರದಿಯನ್ನು ಆಧಾರಿಸಿಕೊಂಡು ಬೆಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. 2014, ಡಿಸೆಂಬರ್ 13ರ ಮುಂಜಾನೆ ಮೆಹದಿಯ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಆದರೆ ಮಸೂರ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನಾ ದಿನವೇ ಆತನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿತು. ಮಾತ್ರವಲ್ಲ ಖಿಲಾಫತ್ ಪರವಾಗಿರುವ ಮತಾಂಧರಿಗೆ ಇಲ್ಲಿನ ರಾಜ್ಯ ಸರಕಾರವೇ ರಕ್ಷಣೆ ನೀಡುತ್ತಿದೆ. ಕಳೆದರಡು ವರುಷಗಳಲ್ಲಿ ನಡೆದ ಹಿಂದೂಗಳ ಹತ್ಯೆ ಹಾಗೂ ಹತ್ಯೆಗೆ ಕಾರಣವಾದವರ ಬಗ್ಗೆ ಮಾಹಿತಿ ಇದ್ದರೂ ಬಂಧಿಸದೇ ಮೀನ ಮೇಷ ಎಣಿಸುತ್ತಿರುವುದು, ದನಕಳ್ಳ ಮತಾಂಧ ಭಯೋತ್ಪಾದಕರು ಸತ್ತಾಗ ಲಕ್ಷಗಟ್ಟಲೆ ಪರಿಹಾರ ಧನ ನೀಡಿರುವುದೇ ಇದಕ್ಕೆ ನಿದರ್ಶನ! ಸರಕಾರದಿಂದಲೇ ಇಂತಹ ಪ್ರೋತ್ಸಾಹ ಸಿಗುತ್ತಿರುವಾಗ ಬಾಲ್ಯದಲ್ಲೇ ಮೆದುಳು ಬದಲಾಗಿಸಿಕೊಂಡಿರುವ ಈ ಮತಾಂಧರು ಐಸಿಸ್ನಂತಹ ಉಗ್ರ ಸಂಘಟನೆಗಳ ಸೆಳೆತಕ್ಕೊಳಗಾಗದಿರುತ್ತಾರೆಯೇ?

              ಏಪ್ರಿಲ್ 15ರಂದು ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ವಿಚಾರಣೆ ವೇಳೆ  ಈ ಉಗ್ರರಿಗೆ ಐಸಿಸ್ ಜೊತೆಗಿರುವ ನಂಟು ಬೆಳಕಿಗೆ ಬಂತು. ಬಾಂಬ್ ತಯಾರಿಸುವ ರಾಸಾಯನಿಕಗಳನ್ನು ಹೊಂದಿದ್ದ ಆರೋಪದಲ್ಲಿ ಖಾನ್ ಮತ್ತು ಅವನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಐಸಿಸ್ ಉಗ್ರರಿಗೂ ಭಟ್ಕಳಕ್ಕೂ ನಂಟಿರುವ ಬಗ್ಗೆ ಇಮ್ರಾನ್ ಬಾಯಿ ಬಿಟ್ಟ. ಬಂಧಿತ ಇಮ್ರಾನ್ ಖಾನನನ್ನು ಐಸಿಸ್ ಸಂಘಟನೆಗೆ ಸೇರಿಸಿದ್ದು, ಐಸಿಸ್ನ ಸಕ್ರಿಯ ಕಾರ್ಯಕರ್ತ ಭಟ್ಕಳ ಮೂಲದ ಮಹಮ್ಮದ್ ಶಫಿ ಅರ್ಮರ್! ಗ್ರಾಮೀಣ ಶಿಕ್ಷಣ ಇಲಾಖೆಯ ಗುಮಾಸ್ತರೊಬ್ಬರ ಮಗನಾಗಿರುವ ಇಮ್ರಾನ್ ಖಾನ್ ಉದ್ಯೋಗ ಅರಸಿಕೊಂಡು ಗಲ್ಪ್ ದೇಶಗಳಿಗೆ ಹೋಗಿದ್ದ. ಅಲ್ಲಿ ಅರ್ಮರನ ಸಂಪರ್ಕ ಸಾಧಿಸಿ ಅವನಿಂದ ಬಾಂಬ್ ತಯಾರಿಸುವ ವಿಧಾನವನ್ನು ಕಲಿತಿದ್ದ. ಬಳಿಕ ಶಫಿ ಅರ್ಮರ್ ಅವನನ್ನು ಐಸಿಸ್ಗೆ ಸೇರಿಸಿದ. ಅನಂತರ ವಾಸಿಂ ಖಾನ್, ಮೊಹಮ್ಮದ್ ರಿಜ್ವಾನ್, ಅನ್ವರ್ ಮತ್ತು ಮಝರ್ ಎಂಬವರನ್ನು ಸೇರಿಸಿಕೊಂಡು ಖಾನ್ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಮಾಡಿದ್ದ! ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿಯಾದ ಫಯಾಜ್ ಮಸೂದ್ ಖಾಸಗಿ ಕೆಲಸ ನಿಮಿತ್ತ 2013ರ ಸೆಪ್ಟೆಂಬರಿನಲ್ಲಿ ಕತಾರ್ ಗೆ ತೆರಳಿದ್ದ. ಅಲ್ಲಿಂದ ಸಿರಿಯಾಗೆ ತೆರಳಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡ. ಶಿವಾಜಿನಗರದ ನಿವಾಸಿ ಉಮರ್ ಸುಬಾನ್ ಯೆಮೆನ್ ನಲ್ಲಿ ಖಾಸಗಿ ಕಂಪನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಈತನೂ 2013ರ ಅಂತ್ಯಕ್ಕೆ ಇರಾಕಿಗೆ ತೆರಳಿ ಐಸಿಸ್ ಗೆ ಸೇರ್ಪಡೆಯಾಗಿದ್ದ. ವಿಜಯಪುರದ ನಿವಾಸಿಯಾದ ಅಬ್ದುಲ್ ಖುದ್ದುಸ್ ಟರ್ಕಿ, ಫಯಾಜ್ ಮಸೂದ್ ಹಾಗೂ ಉಮರ್ ಸುಬಾನ್ ಸಂಪರ್ಕ ಬೆಳೆಸಿಕೊಂಡು ನಕಲಿ ಪಾಸ್ ಪೋರ್ಟ್ ಮೂಲಕ ಬಾಗ್ದಾದಿಗೆ ತೆರಳಿದ್ದ.

             ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವೀಧರೆಯಾಗಿದ್ದ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಪುತ್ರಿ ಐಸಿಸ್ ಉಗ್ರಗಾಮಿ ಸಂಘಟನೆ ಸೇರಿಕೊಳ್ಳಲು ಮುಂದಾಗಿದ್ದಳು. ಉನ್ನತ ಶಿಕ್ಷಣಕ್ಕೆಂದು ಆಸ್ಟ್ರೇಲಿಯಾಕ್ಕೆ ಹೋದಾಗ ಅಲ್ಲಿ ಐಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುವ ಜಾಲವೊಂದರ ಸಂಪರ್ಕಕ್ಕೆ ಈ ಯುವತಿ ಬಂದಿದ್ದು ಅವರ ಪ್ರಭಾವದಿಂದಾಗಿಯೇ ಐಸಿಸ್ ಸೇರಲು ಮುಂದಾಗಿದ್ದಳು. ಬೌದ್ಧಮತದಿಂದ ಮತಾತಂರಗೊಂಡು ಅಬು ಖಲೀದ್ ಅಲ್ ಕಾಂಬೊಡಿ ಎಂದು ಹೆಸರಿಟ್ಟುಕೊಂಡಿರುವ ನೀಲ್ ಪ್ರಕಾಶ್ ಎಂಬಾತ ಆಸ್ಟ್ರೇಲಿಯಾದಲ್ಲಿ ಐಸಿಸ್ಗೆ ನೇಮಕಾತಿ ಮಾಡುವ ಮುಖ್ಯಸ್ಥರಲ್ಲೊಬ್ಬ. ಇತ್ತೀಚೆಗಷ್ಟೆ ಆತ ಆಸ್ಟ್ರೇಲಿಯಾದ ಯುವಜನರಿಗೆ ಆಸ್ಟ್ರೇಲಿಯಾದಲ್ಲಿ ತೋಳ ದಾಳಿ ನಡೆಸುವಂತೆ ಪ್ರೇರೇಪಿಸುವ ವಿಡಿಯೊವೊಂದನ್ನು ಅಂತರ್ಜಾಲಕ್ಕೇರಿಸಿದ್ದ. ಇವುಗಳಿಂದ ಉತ್ತೇಜಿತಗೊಂಡಿದ್ದ ಈಕೆ ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಇಸ್ಲಾಂಗೆ ಮತಾಂತರಗೊಂಡು ಬಳಿಕ ಆಸ್ಟ್ರೇಲಿಯಾದ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಸೇರಿ ಜಿಹಾದ್ ನಡೆಸುವ ಇರಾದೆಯಲ್ಲಿದ್ದಳು. ಅಂತರ್ಜಾಲ ಮೂಲಕ ಯುವಕರನ್ನು ಐಸಿಸ್ ಸಂಘಟನೆ ಸೇರಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದ, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದರೆ ಸ್ವರ್ಗದಲ್ಲಿ ನಮಗೆ ಅಲ್ಲಾನ ಕೃಪೆ ಸಿಗುತ್ತದೆ ಎಂದು ಯುವಕರಿಗೆ ನೀತಿ ಪಾಠ ಹೇಳುತ್ತಿದ್ದ, ಭಾರತ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟಬೇಕಾದರೆ ನಾವೆಲ್ಲರೂ ಒಂದಾಗಿ ಐಸಿಸ್ ಸಂಘಟನೆಯನ್ನು ಬಲಪಡಿಸಬೇಕೆಂದು ಉಗ್ರವಾದವನ್ನು ಬೆಂಬಲಿಸುತ್ತಿದ್ದ ಈಕೆಯ ನಡವಳಿಕೆಯಿಂದ ಸಂಶಯಗೊಂಡ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದರು. ಎನ್ಐಎ ಅಧಿಕಾರಿಗಳು ಯುವತಿಯನ್ನು ವಶಕ್ಕೆ ತೆಗೆದುಕೊಂಡು ಕೌನ್ಸಲಿಂಗ್ ನಡೆಸುತ್ತಿದ್ದಾರೆ.

              ಕಳೆದ ಜನವರಿಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಪಡ್ಡಾಯೂರು ಸಮೀಪ ಐಸಿಸ್ ಬೆಂಬಲಿಸಿ ಬರಹಗಳು ಪತ್ತೆಯಾಗಿದ್ದವು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಸ್ಸಾಂ, ಜಮ್ಮುಕಾಶ್ಮೀರದಲ್ಲಿ ಐಸಿಸ್ ಕುರಿತು ಆಸಕ್ತಿ ಹೆಚ್ಚುತ್ತಿದೆ. ಅಂತರ್ಜಾಲದಲ್ಲಿ ಐಸಿಸ್ ಕುರಿತು ಜನರು ಮಾಹಿತಿ ಶೋಧಿಸುತ್ತಿರುವ ರಾಜ್ಯಗಳಲ್ಲಿ ಇವೆರಡು ಮೊದಲ ಸ್ಥಾನದಲ್ಲಿವೆ. ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಐಸಿಸ್ ಹೊಸ ಟ್ವಿಟರ್ ಖಾತೆಯನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಿದೆ. ದೇಶದ್ರೋಹಿ, ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಗೃಹ ಬಂಧನದಲ್ಲಿ ಇರಿಸಿದ್ದನ್ನು ವಿರೋಧಿಸಿ ಭಾರತ ವಿರೋಧಿಗಳು ಕಳೆದ ಜುಲೈ 18 ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಐಸಿಸ್ ಧ್ವಜವನ್ನು ಪ್ರದರ್ಶಿಸಿದ್ದರು. ಇಂತಹ ಹಲವಾರು ಘಟನೆಗಳು ದಿನಂಪ್ರತಿ ವರದಿಯಾಗುತ್ತಿದ್ದು ಐಸಿಸ್ ಪರ ಒಲವು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆ ಐಸಿಸ್ ಉಗ್ರ ಸಂಘಟನೆ ಭಾರತದಲ್ಲೂ ಸದ್ದಿಲ್ಲದೆ ಬೇರೂರಲಾರಂಭಿಸಿದೆ.  ಮತ ಬ್ಯಾಂಕ್ ಎಲ್ಲಿ ಕೈತಪ್ಪುತ್ತದೋ ಎಂಬ ಭೀತಿಯಿಂದ ರಾಜಕಾರಣಿಗಳು ಇದಕ್ಕೆ ನೀರೆರೆಯುತ್ತಿದ್ದಾರೆ. ಈ ರಕ್ತಬೀಜಾಸುರರು ತಮ್ಮನ್ನೇ ಆಪೋಶನ ತೆಗೆದುಕೊಳ್ಳುತ್ತಾರೆನ್ನುವ ಕನಿಷ್ಟ ಪ್ರಜ್ಞೆಯೂ ಅವರಲ್ಲಿಲ್ಲ.

ಮಂಗಳವಾರ, ಅಕ್ಟೋಬರ್ 20, 2015

ಮುರುಗನ_ಹುಳಿ

#ನಾಸ್ತಿಮೂಲಮನೌಷಧಮ್
#ಮುರುಗನ_ಹುಳಿ

ಬಾಯಲ್ಲಿ ನೀರೂರಿಸುವ ಸುಂದರ ಕೆಂಪನೆ ಹಣ್ಣುಗಳು, ಯಾವುದೇ ರೋಗವಿಲ್ಲದೆ, ಪೋಷಣೆಯ ಅಗತ್ಯವಿಲ್ಲದೆ ಪಶ್ಚಿಮ ಘಟ್ಟಗಳ ತಳದಲ್ಲಿ ಬೆಳೆವ ಮರ. ಅದೇ ಮಾರಾಯರ್ರೇ... ಪುನರ್ ಪುಳಿ! ಬಹುಷಃ ಪುನರ್ ಪುಳಿ ಗೊತ್ತಿಲ್ಲದ ಕರಾವಳಿಗ-ಮಲೆನಾಡಿಗನಿರಲಿಕ್ಕಿಲ್ಲ. ಸಿಪ್ಪೆಯನ್ನು ಹಿಂಡಿ ಮಾಡುವ ಶರಬತ್ತು ಸೂಪರ್! ಸಿಪ್ಪೆಯನ್ನು ಒಣಗಿಸಿ ಬಹುಕಾಲದವರೆಗೆ ಶರಬತ್ತು ಅಥವಾ ಸಾರು ಮಾಡಲು ಉಪಯೋಗಿಸಬಹುದು. ಇದರೊಳಗಿನ ಲೋಳೆ, ಸಿಪ್ಪೆ ಮನುಷ್ಯನ ಬೊಜ್ಜನ್ನು ಕರಗಿಸುತ್ತವೆ. ಬೀಜವನ್ನೊಣಗಿಸಿ ಬಿಸಿ ಮಾಡಿ ಎಣ್ಣೆಯನ್ನು ತಯಾರಿಸಬಹುದು. ಬೆಂಕಿ ತಾಗಿದ ಗಾಯಕ್ಕೆ ಈ ಎಣ್ಣೆ ಹಚ್ಚಿದರೆ ಕಲೆಯೂ ಉಳಿಯದಂತೆ ವಾಸಿ ಮಾಡುತ್ತದೆ.

ಇದರ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿಯ ವಸ್ತುಗಳನ್ನು ತೊಳೆದರೆ ಅವು ಮಿರಿ ಮಿರಿ ಮಿಂಚುತ್ತವೆ. ಕರಾವಳಿಯಲ್ಲಿ ಬಿರಿಂಡ ಎಂದು ಸಿಗುತ್ತಿದ್ದ ಶರಬತ್ತು ಇದರದ್ದೇ! ತುಳುವಿನಲ್ಲಿ ಪುನರ್ ಪುಳಿ, ಮಲೆಯಾಳದಲ್ಲಿ ಪಣಂಪುಳಿ, ಹಿಂದಿಯಲ್ಲಿ ಕೋಕಮ್, ಸಂಸ್ಕೃತದಲ್ಲಿ ವೃಕ್ಷಾಮ್ಲ, ಕನ್ನಡದಲ್ಲಿ ಮುರುಗಲ, ಮುರುಗನ ಹುಳಿ ಎನ್ನುವ ಹೆಸರುಗಳು ಇದಕ್ಕೆ! ಒಂದು ಲೊಟ ಬಿಸಿ ನೀರಿಗೆ ಕಡಲೆ ಕಾಳಿನಷ್ಟು ಎಣ್ಣೆ ಹಾಕಿ ಕುಡಿದರೆ ಆಮಶಂಕೆಗೆ ಔಷಧಿ. ಮರದ ತೊಗಟೆಯ ತಣ್ಣನೆ ಕಷಾಯದಿಂದ ಪಾರ್ಶ್ವವಾಯು ಆದ ಜಾಗಕ್ಕೆ ಹಚ್ಚಿದರೆ ಶಮನವಾಗುತ್ತದೆ.

ಹಣ್ಣಿಗೆ ಜಂತುಹುಳು ನಿವಾರಕ ಮತ್ತು ಹೃದಯೋತ್ತೇಜಕ ಗುಣಗಳಿವೆ. ಪುನರ್ ಪುಳಿ ಪಿತ್ತನಿವಾರಕ. ಇದನ್ನು ಮೂಲವ್ಯಾಧಿ, ರಕ್ತಭೇದಿ, ಹೃದ್ರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಇದರ  ಬೇರುಗಳಿಗೆ ಸ್ಥಂಭಕ ಗುಣವಿದೆ. ಬೀಜಗಳಲ್ಲಿ ಶೇ. 44ರಷ್ಟು ಜಿಡ್ಡಿನಂಶವಿರುತ್ತದೆ. ಇದನ್ನು ಮುರುಗಲ ಬೆಣ್ಣೆ ಎಂದು ಕರೆಯುತ್ತಾರೆ.

ಕೋಲಾ ಬಿಡಿ, ಕೋಕಂ ಕುಡಿಯಿರಿ...ದೇಹಕ್ಕೂ ಒಳ್ಳೆಯದು...ದೇಶಕ್ಕೂ!


ಸೋಮವಾರ, ಅಕ್ಟೋಬರ್ 19, 2015

ಅಳಲೆಕಾಯಿ

#ನಾಸ್ತಿಮೂಲಮನೌಷಧಮ್
#ಅಳಲೆಕಾಯಿ

            ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯ. ಸಂಸ್ಕೃತದಲ್ಲಿ ಹರೀತಕಿ, ಅಭಯಾ; ಕನ್ನಡದಲ್ಲಿ ಅಳಲೆಕಾಯಿ, ತುಳುವಿನಲ್ಲಿ ಅಣಿಲೆ, ಹಿಂದಿಯಲ್ಲಿ ಹರ್ಡಾ ಎಂದು ಕರೆಯಲ್ಪಡುವ ಈ ಕಾಯಿ ಆಯುರ್ವೇದದ ತ್ರಿಫಲಗಳಲ್ಲಿ ಒಂದು. ತ್ರಿಫಲಾದಿ ಚೂರ್ಣ, ತೈಲ, ಅಭಯಾರಿಷ್ಟದಲ್ಲಿ ಮುಖ್ಯವಸ್ತು. ಹೊಟ್ಟೆಯನ್ನು ಶುದ್ಧಗೊಳಿಸುವ ವಿರೇಚಕವೆಂಬ ಇದರ ವಿಶೇಷ ಗುಣವೇ ಅನೇಕ ಬಗೆಯ ಔಷಧಿಗಳಲ್ಲಿ ಮುಖ್ಯಸ್ಥಾನವನ್ನು ತಂದುಕೊಟ್ಟಿದೆ.  ಪಿತ್ತಪ್ರಕೋಪಕ್ಕೆ, ಹಸಿವು, ನಿದ್ದೆ ಸರಿಪಡಿಸಲು ಅಳಲೆಯ ಚೂರ್ಣವೇ ರಾಮಬಾಣ. ಅಳಲೆಕಾಯಿಯನ್ನಿ ಅರಸಿನದೊಂದಿಗೆ ಅರೆದು ಲೇಪವನ್ನು ಕಬ್ಬಿಣದ ವಸ್ತುವಿನಲ್ಲಿ ಬಿಸಿ ಮಾಡಿ, ಉಗುರು ಬೆಚ್ಚಗಿನ ಲೇಪವನ್ನು ದೊಡ್ಡ ಗಾಯಗಳಿಗೆ ಹಚ್ಚಿದರೆ ಗಾಯ, ನೋವು ಉಪಶಮನ. ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ.

ಧನ್ವಂತರಿ ನಿಘಂಟುವಿನಲ್ಲಿ
"ಹರಸ್ಯ ಭವನೇ ಜಾತಾ ಹರೀತಾ ಚ ಸ್ವಭಾವತಃ
ಸರ್ವ ರೋಗಾಂಶ್ಚ ಹರತೇತೇನ ಖ್ಯಾತ ಹರೀತಕೀ"
ದೇವಲೋಕದಲ್ಲಿ ಹುಟ್ಟಿದ, ಹಸಿರು ಬಣ್ಣವುಳ್ಳ ಅಳಲೆಕಾಯಿಯು ಎಲ್ಲ ರೋಗಗಳನ್ನೂ ಹರಣ ಮಾಡುವ ಹರೀತಕೀ! ಎಂದಿದೆ.
"ಮಾತಾ ಯಸ್ಯ ಸ್ವಯಂ ನಾಸ್ತಿ
 ತಸ್ಯ ಮಾತಾ ಹರೀತಕೀ"
 ಯಾವ ಮಗುವಿಗೆ ಶೈಶವಾವಸ್ಥೆಯಲ್ಲಿಯೇ ತಾಯಿಯನ್ನು ಕಳೆದುಕೊಳ್ಳವ ದುರ್ಭಾಗ್ಯವುಂಟಾಗುವುದೋ ಅದಕ್ಕೆ ಅಳಲೇಕಾಯಿಯೇ ತಾಯಿಯಾಗಬಲ್ಲುದು.

             ಅಳಲೆಕಾಯಿ ವಾತಾನುಲೋಮನೀ. ಆಮ್ಲರಸದಿಂದ ವಾತವನ್ನೂ, ಮಧುರ, ಕಹಿ ರಸಗಳಿಂದ ಪಿತ್ತವನ್ನೂ, ಕಾರ-ಒಗರು ರಸಗಳಿಂದ ಕಫವನ್ನೂ ಅಳಲೆಕಾಯಿಯು ಪರಿಹರಿಸಬಲ್ಲದಾದುದರಿಂದ ಅದನ್ನು ತ್ರಿದೋಷಘ್ನೀ ಎನ್ನಲಾಗಿದೆ. ಅದು ಶರೀರದಲ್ಲಿನ ವಿಷಾಂಶವನ್ನು ತೆಗೆಯುವುದು, ಮೈಯನ್ನು ಹಗುರಗೊಳಿಸುವುದು. ಬುದ್ಧಿಯನ್ನು ವರ್ಧಿಸುವುದು. ಕಣ್ಣಿನ ಕಾಯಿಲೆಗಳಿಗೆ ನಿವಾರಿಸುವುದು. ಮೂತ್ರಾಂಗ ರೋಗ, ಕುಷ್ಠ, ವಾಂತಿಗಳಿಗೆ ರಾಮಬಾಣ.

ಇಷ್ಟೆಲ್ಲಾ ಓದಿ ನೀವು ನನ್ನನ್ನು "ಅಳಲೆ ಕಾಯಿ ಪಂಡಿತ" ಅಂದರೆ........
ಬೇಜಾರಿಲ್ಲ. ಈ "ಅಳಲೆಕಾಯಿ ಪಂಡಿತ" ಪದವನ್ನು ಹುಟ್ಟು ಹಾಕಿದವರು ಆಯುರ್ವೇದ ವಿರೋಧೀ ಅಲೋಪತಿ ವೈದ್ಯರು!
ಹಾಂ ದಕ್ಷಿಣ ಕನ್ನಡದ ವಿಟ್ಲದ ಬಳಿ "ಅಣಿಲ ಕಟ್ಟೆ" ಎಂಬ ಊರೇ ಇದೆ. ಅದು ಈಗ ಅನಿಲ ಕಟ್ಟೆ ಎಂದು ಬದಲಾಗಿದೆ.


ಮಂಗಳವಾರ, ಅಕ್ಟೋಬರ್ 13, 2015

ಈಶ್ವರೀ_ಬಳ್ಳಿ

#ನಾಸ್ತಿಮೂಲಮನೌಷಧಮ್
#ಈಶ್ವರೀ_ಬಳ್ಳಿ

ಸಂಸ್ಕೃತದಲ್ಲಿ ನಕುಲಿ, ರುದ್ರಜಿಟಾ; ಕನ್ನಡದಲ್ಲಿ ಈಶ್ವರೀ ಬಳ್ಳಿ;ತುಳುವಿನಲ್ಲಿ "ಈಸರಾ ಬೇರ್" ಎನ್ನುವ ಹೆಸರುಗಳು. ಮೂರು ವಿಧದ ಈಶ್ವರ ಬಳ್ಳಿಗಳಿವೆ. ಚಿತ್ರದಲ್ಲಿರುವಂತಹದ್ದು ದೊಡ್ಡ ಎಲೆಗಳ ಬಳ್ಳಿ. ಹೂಗಳು ಅರಳುವಾಗ ಮಧ್ಯದ ಹಳದಿ ವರ್ಣವನ್ನು ನೇರಳೆ ವರ್ಣ ಸುತ್ತುವರಿದು ಹಾವು ಹೆಡೆಬಿಚ್ಚಿದಂತೆ ಕಾಣುತ್ತದೆ. ಕಾಯಿಗಳು ಒಡೆದು ಬಳ್ಳಿಯಲ್ಲಿ ತೊಟ್ಟಿಲಂತೆ ತೂಗುತ್ತವೆ.

ಇದರ ಉಪಯೋಗಗಳು ಹಲವಾರು. ಇದನ್ನು ಜ್ವರ, ಕೆಮ್ಮು, ಮಲಬದ್ಧತೆ, ಮೂಲವ್ಯಾಧಿ, ವಿಷಮ ಜ್ವರ, ಸನ್ನಿಜ್ವರ, ದೃಷ್ಟಿ ದೋಷ ಶಮನಕ್ಕಾಗಿ ಬಳಸುತ್ತಾರೆ. ಹಾವಿನ ವಿಷವಿಳಿಸಲು  ಬಳಸುತ್ತಾರೆ. ಸರ್ಪ ಕಚ್ಚಿದಲ್ಲಿ, ಹಸೀ ಎಲೆಗಳನ್ನು ಚೆನ್ನಾಗಿ ಜಜ್ಜಿ ಕಷಾಯಮಾಡಿ ಕುಡಿಸಿದರೆ ವಿಷ ಇಳಿಯುವುದು. ವಿಷಜಂತು ಕಡಿತಕ್ಕೆ ಶಮನಕಾರಿಯಾಗಿ ಇದರ ಬೇರು ಕೂಡಾ ಉಪಯುಕ್ತ. ಇಡೀ ಸಸ್ಯ ಹಾವು ಕಡಿತದಲ್ಲಿ ವಿಷವಿಳಿಸಲು, ಮೂಳೆ ಜೋಡಣೆಯಲ್ಲಿ, ಮಲೇರಿಯಾ ಶಮನಕಾರಿಯಾಗಿಯೂ ಉಪಯುಕ್ತ.

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೇರೆ ಮರಗಳನ್ನು ತಬ್ಬಿ ಬೆಳೆಯುವ ಈಶ್ವರ ಬಳ್ಳಿ ಈಗ ವಿನಾಶದ ಅಂಚಿನಲ್ಲಿದೆ. ಅತಿಯಾದ ಬಳಕೆ ಒಂದೆಡೆಯಾದರೆ ಮರಗಳ ನಾಶದಿಂದ ಬದುಕಲು ಆಶ್ರಯ ಸಿಗದೇ ಇರುವುದು ಇನ್ನೊಂದೆಡೆ. ಇದರ ಮಧ್ಯೆ ಕೇವಲ ರಾಜಕಾರಣಿಗಳು-ಕಾಂಟ್ರಾಕ್ಟ್ ದಾರರಿಗೆ ಮಾತ್ರ ಪ್ರಯೋಜನವಾಗುವ ಎತ್ತಿನಹೊಳೆಯಂತಹ ಯೋಜನೆಗಳು ಇಂತಹ ಉಪಯುಕ್ತ ಸಸ್ಯಗಳನ್ನು ಗತಕಾಲಕ್ಕೆ ಸೇರಿಸುತ್ತಿವೆ.

ಸೋಮವಾರ, ಅಕ್ಟೋಬರ್ 12, 2015

ಲೋಳೆಸರ

#ನಾಸ್ತಿಮೂಲಮನೌಷಧಮ್
#ಲೋಳೆಸರ

       ಬಹುಷಃ ಲೋಳೆಸರ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಅದೇ ಅಲೊವೆರಾ ಅಂದರೆ ಆಯುರ್ವೇದ ಔಷಧ ಬಳಕೆ ಮಾಡುವವರಿಗೆ ತಿಳಿದೀತು. ದಪ್ಪಗಿನ ಎಲೆಗಳು, ಅದರೊಳಗೆ ಕಹಿಯಾದ, ಸಿಂಬಳದಂತಹ ಲೋಳೆ!  ಈ ಲೋಳೆಯೇ ಲೋಳೆಸರ ಎಂದು ಹೆಸರು ಬರಲು ಕಾರಣ ಕೂಡಾ. ಹಾಗೆಯೇ ಹಲವು ರೋಗಗಳನ್ನು ಶಮನ ಮಾಡುವ ಗುಣವನ್ನು ಒದಗಿಸಿದ್ದು ಈ ಕಹಿ ಲೋಳೆಯೇ! ಸಂಸ್ಕೃತದಲ್ಲಿ ಘೃತಕುಮಾರಿ, ಕುಮಾರಿ, ಕನ್ಯಾ ಎನ್ನುವ ಹೆಸರುಗಳಿವೆ ಇದಕ್ಕೆ.

          ಬೆಂಕಿ ತಾಗಿ ಸುಟ್ಟ ಚರ್ಮಕ್ಕೆ ಲೋಳೆಸರದ ಲೋಳೆಯನ್ನು ಕೂಡಲೇ ಹಚ್ಚಿದಲ್ಲಿ ವಾಸಿ. ಹೊಟ್ಟೆಯೊಳಗಿನ ದುರ್ಮಾಂಸ, ಪಿತ್ತಕೋಶದ ತೊಂದರೆ, ಗರ್ಭಕೋಶದ ತೊಂದರೆಗಳ ನಿವಾರಣೆಗೆ ಲೋಳೆಸರ ಉಪಯುಕ್ತ. ಶಾಂಪೂವಿನಂತೆ ಈ ಲೋಳೆಯನ್ನು ಉಪಯೋಗಿಸಿದರೆ ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಹೆಂಗಸರ ಮುಟ್ಟುದೋಷದ ತೊಂದರೆ, ಅತಿ ರಕ್ತಸ್ರಾವ ಇದ್ದಲ್ಲಿ ಇದರ ಲೋಳೆಯನ್ನು ಕಲ್ಲುಸಕ್ಕರೆಯ ಹುಡಿಯೊಟ್ಟಿಗೆ ತೆಗೆದುಕೊಂಡಲ್ಲಿ ಶಮನವಾಗುತ್ತದೆ. ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ, ಒಣ ಚರ್ಮ, ಚರ್ಮ ಒಡೆಯುವಿಕೆಗೆ ಲೋಳೆಸರ ರಾಮಬಾಣ. ಜೀರ್ಣಕ್ರಿಯ ವೃದ್ಧಿ, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ದಂತಕ್ಷಯ ನಿವಾರಣೆಗೆ, ನೋವು ಮತ್ತು ಊತ ಹೋಗಲಾಡಿಸಲು ಲೋಳೆಸರ ಸಹಕಾರಿ.

            ಲೋಳೆಸರದ ರಸವನ್ನು ಮೂಲವ್ಯಾದಿ, ಕ್ಯಾನ್ಸರ್, ಕಣ್ಣು ನೋವುಗಳ ನಿವಾರಣೆಗೆ ಔಷಧಿಯಾಗಿ ಬಳಸುತ್ತಾರೆ. ಲೋಳೆರಸವನ್ನು ಅಲ್ಪ ಪ್ರಮಾಣದಲ್ಲಿ ನಿತ್ಯ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪತಂಜಲಿ ಸಂಸ್ಥೆಯಿಂದ ಅಲೊವೆರಾ ಜೆಲ್ ಹಾಗೂ ಇನ್ನಿತರ ಔಷಧಗಳು ಲಭ್ಯವಿವೆ. ಯಾವ್ಯಾವುದೋ ಕ್ರೀಮುಗಳನ್ನು ಹಚ್ಚಿ ಮುಖವನ್ನೇಕೆ ಹೊಲಸುಗೊಳಿಸುತ್ತೀರಿ? ಅಲೊವೆರಾ ಬಳಸಿ. ಆರೋಗ್ಯಕ್ಕೂ ಒಳ್ಳೆಯದು ಸೌಂದರ್ಯವರ್ಧಕವೂ ಹೌದು!

ಗುರುವಾರ, ಅಕ್ಟೋಬರ್ 8, 2015

1971...ಸಂಘವೇ ಸೈನ್ಯವು ಇನ್ನೊಂದು!

1971...ಸಂಘವೇ ಸೈನ್ಯವು ಇನ್ನೊಂದು!

               1971. ತಮಗಾಗಿ ಪ್ರತ್ಯೇಕ ದೇಶ ಬೇಕೆಂದು ರಕ್ತದೋಕುಳಿ ಹರಿಸಿ ಪ್ರತ್ಯೇಕವಾದವರೇ ಇಬ್ಬಾಗವಾದ ವರ್ಷ! ಉಭಯ ಗಡಿಗಳಲ್ಲೂ ಗುಂಡಿನ ಚಕಮಕಿ ಆರಂಭವಾಗಿತ್ತು. ಒಂದು ದಿನ ಬೆಳ್ಳಂಬೆಳಗ್ಗೆ ಪಾಕ್ ಸೈನಿಕರು ಪಶ್ಚಿಮ ಬಂಗಾಳದ ದಿನಜಪುರ ಜಿಲ್ಲೆಯ ಚಕ್ರಂ ಹಳ್ಳಿಯ ಹಳ್ಳದಾಚೆ ಹಠಾತ್ತನೆ ಕಾಣಿಸಿಕೊಂಡರು. ಹತ್ತಿರದಲ್ಲೇ ಎತ್ತರಕ್ಕೆ ಬೆಳೆದ ಸೆಣಬಿನ ಗದ್ದೆ.  ಬೆಳೆದು ನಿಂತ ಗಿಡಗಳ ಮರೆಯಲ್ಲಿ ಭಾರತೀಯ ಸೈನಿಕರೂ ಅಡಗಿ ಕೂತರು. ಆದರೆ ಈ ಗಡಿಬಿಡಿಯಲ್ಲಿ ಮದ್ದುಗುಂಡು ತುಂಬಿದ ಕೆಲವು ಪೆಟ್ಟಿಗೆಗಳು ಹಿಂದೆಯೇ ಉಳಿದು ಹೋದವು. ಅವು ಇದ್ದ ಜಾಗ ಪಾಕಿಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲದೆ ಆ ಜಾಗ ಅವರ ಗುಂಡಳತೆಯ ದೂರದಲ್ಲೇ ಇತ್ತು. ಪ್ರತ್ಯಕ್ಷ ಸಾವಿಗೆ ಆಮಂತ್ರಣ ನೀಡುವ ಅವುಗಳನ್ನು ತರುವ ಸಾಹಸವನ್ನು ನಮ್ಮ ಸೈನಿಕರು ಕೈಬಿಡಬೇಕಾಯಿತು. ಚುರ್ಕಾಮುರ್ಮು! ಸ್ಥಳೀಯ "ಶಾಖೆ"ಯ ಮುಖ್ಯ ಶಿಕ್ಷಕನಾಗಿದ್ದ. ಶಾಲಾ ವಿದ್ಯಾರ್ಥಿ. ಆತ ಆ ಪೆಟ್ಟಿಗೆಗಳನ್ನು ತರುವ ಸಾಹಸಕ್ಕೆ ಮುಂದಾದ. ಸುಮಾರು ನೂರು ಅಡಿಗಳಷ್ಟು ತೆವಳಿಕೊಂಡೇ ಹೋದ ಆತ ಹಗ್ಗದ ಕೊನೆಯಲ್ಲಿ ಕಟ್ಟಿದ ಕೊಕ್ಕೆಗಳಿಂದ ಕೆಲವು ಪೆಟ್ಟಿಗೆಗಳನ್ನು ಎಳೆದು ತಂದ. ತರಲಾಗದ್ದನ್ನು ಹಳ್ಳಕ್ಕೆ ತಳ್ಳಿದ. ಅಷ್ಟರಲ್ಲೇ ಆರಂಭವಾಯಿತು ಗುಂಡಿನ ಮೊರೆತ! ಚುರ್ಕಾಮುರ್ಮು ನೆಲಕ್ಕುರುಳಿದ. "ಭಾರತ್ ಮಾತಾ ಕೀ ಜೈ" ಎಂಬ ಘೋಷ ಅವನ ಬಾಯಿಯಿಂದ ಮೊಳಗಿತ್ತು! ನಮ್ಮ ಸೈನಿಕರು ಆ ಮದ್ದು ಗುಂಡು ತುಂಬಿದ ಪೆಟ್ಟಿಗೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿದರು. ಮುಂದೆ ಅವೇ ಮದ್ದುಗುಂಡುಗಳು ಅಂದಿನ ವಿಜಯಕ್ಕೆ ಕಾರಣವಾದವು!

             ಯುದ್ಧಾರಂಭಗೊಳ್ಳುತ್ತಿದ್ದಂತೆ ಸ್ವಯಂಸೇವಕರು ರಕ್ತದಾನ, ನಾಗರಿಕ ರಕ್ಷಣೆ, ಪಹರೆ, ಪ್ರಥಮ ಚಿಕಿತ್ಸೆ ಮುಂತಾದ ಪರಿಹಾರ ಕಾರ್ಯಗಳಿಗೆ ಮುಂದಾದರು. ದೆಹಲಿಯ ಕಿಂಗ್ಸ್ ವೇ ಕ್ಯಾಂಪ್ ಸ್ಟೇಷನ್ನಿನ ಪೊಲೀಸ್ ಅಧಿಕಾರಿಗಳು ರೇಡಿಯೋ ಕಾಲನಿಯಲ್ಲಿದ್ದ ಆಕಾಶವಾಣಿ ಮತ್ತಿತರ ಪ್ರಮುಖ ಸರ್ಕಾರೀ ಕಟ್ಟಡಗಳು, ವಜೀರಾಬಾದಿನ ನೀರು ಸರಬರಾಜು ಕೇಂದ್ರಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟದ್ದು ಸ್ವಯಂಸೇವಕರಿಗೇನೇ! ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರ ಶುಶ್ರೂಷೆಗೆ ನಿಂತದ್ದು ಸ್ವಯಂ ಸೇವಕರೇ. ಸೈನಿಕರಿಗೆ ಹಣ್ಣುಹಂಪಲು, ದಿನಬಳಕೆಯ ಸಾಮಗ್ರಿಗಳನ್ನು ಒಟ್ಟುಮಾಡಿ ಪೂರೈಸಿದ್ದೂ ಸ್ವಯಂಸೇವಕರೇ. 71ರ ಡಿಸೆಂಬರ್ 7ರಂದು ರಾಜಾಸ್ಥಾನದ ಬಾರ್ ಮೇರ್ ರೈಲು ನಿಲ್ದಾಣದ ಮೇಲೆ ಪಾಕಿಗಳು ಬಾಂಬು ದಾಳಿ ಮಾಡಿರುವ ಸುದ್ದಿ ತಿಳಿದೊಡನೆ ಆ ಅಪಾಯಕಾರಿ ಸ್ಥಳಕ್ಕೆ ಧಾವಿಸಿದ ಸ್ವಯಂ ಸೇವಕರು ಅಲ್ಲಿನ ಗೂಡ್ಸ್ ರೈಲಿನಲ್ಲಿದ್ದ ಪೆಟ್ರೋಲ್ ಪೀಪಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಪರಿಸ್ಥಿತಿ ತುಂಬಾ ನಾಜೂಕಾಗಿದ್ದ ಸ್ಥಳಗಳಲ್ಲಿ ಕ್ಯಾಂಟೀನ್ ನಡೆಸಲು ಸೇನೆ ಅನುಮತಿ ನೀಡುತ್ತಿದ್ದುದು ಸ್ವಯಂಸೇವಕರಿಗೆ ಮಾತ್ರ.

             ಪಂಜಾಬಿನ ಫಾಜಿಲ್ಕಾ ನಗರದ ಮೇಲೆ ಪಾಕಿಗಳು ಬಾಂಬು ದಾಳಿ ಆರಂಭಿಸಿದ್ದರು. ಆ ನಗರದ ಜನರು ಊರು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಲಾರಂಭಿಸಿದ್ದರು. ಅಲ್ಲಿನ ಜಿಲ್ಲಾ ಸಂಘ ಚಾಲಕರು ನಾಗರಿಕ ರಕ್ಷಣಾ ವ್ಯವಸ್ಥೆಯ ಬಗ್ಗೆ ಸಲಹೆ ಕೇಳಲು ಜಿಲ್ಲಾಧಿಕಾರಿಗಳ ಬಳಿ ಬಂದರು. ಜಿಲ್ಲಾಧಿಕಾರಿ ಅರೆಕ್ಷಣ ತಬ್ಬಿಬ್ಬಾದರು. ಸ್ವತಃ ಅವರೇ ಊರು ಬಿಟ್ಟು ಓಡುವ ಸಿದ್ಧತೆಯಲ್ಲಿದ್ದರು! ಆಗ ಸಂಘಚಾಲಕರು ಅಂದು ಸಂಘ ಶಾಖೆಗಳಲ್ಲಿ ಹಾಡುತ್ತಿದ್ದ ಗೀತೆಯೊಂದನ್ನು ಅವರೆದುರು ಹಾಡಿದರು. ಉತ್ಕಟ ದೇಶಭಕ್ತಿ ಹಾಗೂ ಕೆಚ್ಚಿನ ಭಾವನೆಯನ್ನು ಉದ್ದೀಪನಗೊಳಿಸುತ್ತಿದ್ದ ಆ ಹಾಡಿನ ಭಾವಕ್ಕೆ ಕಿವಿಗೊಟ್ಟು ಜಿಲ್ಲಾಧಿಕಾರಿ ಊರು ಬಿಡುವ ಯೋಚನೆಯನ್ನು ಕೈಬಿಟ್ಟರು! ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಪಡೆಯನ್ನು ಕಳಿಸುವಂತೆ ಕೋರಿದರು. ಒಂದೇ ಗಂಟೆಯೊಳಗೆ ಬಂದು ತಲುಪಿದ ಸೈನಿಕ ಪಡೆಯಿಂದಾಗಿ ಶತ್ರುಗಳ ತೆಕ್ಕೆಗೆ ಬೀಳಬಹುದಾಗಿದ್ದ ನಗರ ಉಳಿಯಿತು. ಮುಂದೆ ಡಿವಿಜನಲ್ ಕಮೀಷನರ್ ಆದ ಆ ಜಿಲ್ಲಾಧಿಕಾರಿಯೇ 1988 ಏಪ್ರಿಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆ ಸಂಘಚಾಲಕರನ್ನು ಸನ್ಮಾನಿಸಿ ಈ ಮೇಲಿನ ಘಟನೆಗಳನ್ನು ಸ್ಮರಿಸಿಕೊಂಡು ಭಾವುಕರಾದರು.

              ಪೂರ್ವ ಬಂಗಾಳದ ನಿರ್ವಾಸಿತರ ನೆರವಿಗಾಗಿ ದೇಶಾದ್ಯಂತ ಸ್ವಯಂಸೇವಕರು ಹಣ ಹಾಗೂ ಬಟ್ಟೆಗಳನ್ನು ಒಟ್ಟು ಮಾಡಿ ಹಂಚಿದರು. ಆ ನಿರ್ವಾಸಿತರಲ್ಲಿ ಪಾಕ್ ಸೈನಿಕರ ಅತ್ಯಾಚಾರಗಳಿಗೆ ಬಲಿಯಾದ ಮುಸ್ಲಿಮರೂ ಇದ್ದರು. ಸುಸಂಘಟಿತ ಸಂಘದ ಸ್ವಯಂಸೇವಕ ತಂಡಗಳ ಕೆಲಸದ ವೇಗ, ಅಚ್ಚುಕಟ್ಟುತನ ಕಂಡು ಸರ್ಕಾರೀ ಅಧಿಕಾರಿಗಳಿಗೂ ಅಚ್ಚರಿಯಾಗುತ್ತಿತ್ತು! ಡೇರೆಗಳು, ಪಾತ್ರೆಗಳು, ಆಹಾರ ಸಾಮಗ್ರಿಗಳು, ಬಟ್ಟೆಬರೆಗಳು ನೋಡನೋಡುತ್ತಿದ್ದಂತೆ  ಬಂದು ರಾಶಿ ಬೀಳುತ್ತಿದ್ದವು. 24 ಪರಗಣ ಜಿಲ್ಲೆಯ ಬನಗಾಂವ್ ಸಮೀಪ ಇನ್ನೂ ಹೆಚ್ಚಿನ ಪರಿಹಾರ ಕೇಂದ್ರಗಳನ್ನು ತೆರೆಯುವಂತೆ ಸ್ವಯಂಸೇವಕರನ್ನು ಸರ್ಕಾರೀ ಅಧಿಕಾರಿಗಳು ವಿನಂತಿಸತೊಡಗಿದರು. ಕೆಲವೇ ದಿನಗಳೊಳಗಾಗಿ 35000 ನಿರಾಶ್ರಿತರ ಜವಾಬ್ದಾರಿಯನ್ನು ಸ್ವಯಂಸೇವಕರು ವಹಿಸಿಕೊಂಡರು.

            ಸೇನಾದಂಡನಾಯಕರಿಗೆ ಖರ್ಜೂರ-ದ್ರಾಕ್ಷಿ ಮುಂತಾದ ಒಣಹಣ್ಣುಗಳ ಪೊಟ್ಟಣಗಳನ್ನು ಉಡುಗೊರೆಯಾಗಿ ನೀಡಿದ್ದು ಒಂದು ವಿನೂತನ ಉಪಕ್ರಮ. ಮೇಜರ್ ಕೌಶಲ್ ಹಾಗೂ ಜನರಲ್ ಅರೋರಾ ಅವರಿಗೆ ಇಂತಹ ಹದಿನೈದು ಸಾವಿರ ಪೊಟ್ಟಣಗಳು ಬಂದಿದ್ದವು. ಪ್ರತಿಯೊಂದರಲ್ಲೂ ಒಂದು ಚೀಟಿ. ಅದರಲ್ಲಿ "ಬಾಂಗ್ಲಾದೇಶದಲ್ಲಿ ಅಮಾನುಷ ದೌರ್ಜನ್ಯ ನಡೆಸಿದ ಪಾಕೀ ಸೈನ್ಯವನ್ನು ಇಷ್ಟು ತ್ವರಿತವಾಗಿ ಮಣ್ಣುಮುಕ್ಕಿಸಿದ ನೀವು ಭಾರತೀಯ ಸೈನಿಕರ ಶೌರ್ಯ ಸಾಹಸಗಳ ಪುರಾತನ ಸ್ಪೂರ್ತಿದಾಯಕ ಪರಂಪರೆಗೆ ಇನ್ನಷ್ಟು ಮೆರುಗು ನೀಡಿದಿರಿ. ದೇಶದ ಜನತೆ ನಿಮ್ಮ ಬಗ್ಗೆ ತಾಳಿರುವ ಅಪಾರ ಹೆಮ್ಮೆಯ ಈ ಸಣ್ಣ ಕಾಣಿಕೆಯನ್ನು ಸ್ವೀಕರಿಸಿ." ಎಂದಿತ್ತು!
ಆಧಾರ: ಹೊ.ವೆ ಶೇಷಾದ್ರಿ, ಚಂದ್ರ ಶೇಖರ ಭಂಡಾರಿ ಸಂಕಲಿತ "ಕೃತಿರೂಪ ಸಂಘದರ್ಶನ".

ಬುಧವಾರ, ಅಕ್ಟೋಬರ್ 7, 2015

ಮುಳ್ಳುಸಂಪಿಗೆ

#ನಾಸ್ತಿಮೂಲಮನೌಷಧಮ್
#ಮುಳ್ಳುಸಂಪಿಗೆ
ತುಳುವಿನಲ್ಲಿ ಹಂಪುಲ್, ಕಲ್ಲ್ ಸಂಪಿಗೆ ; ಕನ್ನಡದಲ್ಲಿ ಮುಳ್ಳುಸಂಪಿಗೆ, ಚಪ್ಳಕ, ಚಾಪಿ ಹಣ್ಣು, ಅಬ್ಳುಕಗ ಎಂದೆಲ್ಲಾ ಕರೆಯಲ್ಪ್ಡುವ ಸುಂದರ ಕೆಂಪನೆಯ ರುಚಿಕರ ಹಣ್ಣು ಇದು. ಈ ಹಣ್ಣನ್ನು ಸುಣ್ಣದೊಟ್ಟಿಗೆ ತಿಂದರೆ ಇನ್ನಷ್ಟು ರುಚಿ! ಸಂಸ್ಕೃತದಲ್ಲಿ ವಿಕಂಟಕ ಎಂಬ ಹೆಸರು.
ಈ ಮರವು ಕಾಸರ್ಕನ ಮರವನ್ನೇ ಹೋಲುತ್ತದೆ. ಹಸಿರು ಗೊಬ್ಬರಕ್ಕೆ ಇದರ ಗೆಲ್ಲು-ಎಲೆಗಳು ಉತ್ತಮ. ಇದರ ಚೆಕ್ಕೆಯು ಅತಿಸಾರ, ಗಂಟುನೋವು, ಹುಣ್ಣು-ಗಾಯಗಳ ನಿವಾರಣೆಗೆ ಉಪಯುಕ್ತ.
ವಿಕಂಟಕ ಮಿಡಿಯಾಗಿರುವಾಗ ಕೊಯ್ದು ತಂದು ನೀರಿನಲ್ಲಿ ಹಾಕಿ ಕುದಿಸಬೇಕು. ಅನಂತರ ಒಂದು ದಿನ ಕಾಲ ಉಪ್ಪು ನೀರಿನಲ್ಲಿ ನೆನೆ ಹಾಕಿ. ಬಳಿಕ ಮೆಣಸು ಸಾಸಿವೆ, ಅರಶಿಣಗಳನ್ನು ಅರೆದು ಮಿಶ್ರಮಾಡಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ.
ಹಾಂ...ಈ ಹಣ್ಣನ್ನು ಅತಿಯಾಗಿ ತಿಂದರೆ ಬೇಧಿ ಶುರುವಾದೀತು!

ಗರುಡಪಾತಾಳ

#ನಾಸ್ತಿಮೂಲಮನೌಷಧಮ್
#ಗರುಡಪಾತಾಳ
ತುಳುವಿನಲ್ಲಿ ಗರುಡ ಪಾತಾಳ; ಕನ್ನಡದಲ್ಲಿ ಪಾತಾಳಗಂಧಿ,ಹಡಕಿ,ಸರ್ಪಾಕ್ಷಿ ಎಂದು ಕರೆಯಲ್ಪಡುವ ಸಸ್ಯವಿದು. ಸಂಸ್ಕೃತದಲ್ಲಿ ಸರ್ಪಗಂಧ ಚಂದ್ರಿಕಾ, ಗಂಧನಾಕುಲಿ, ಮಲೆಯಾಳಂನಲ್ಲಿ ಚುವನಾವಿಲ್‌ಪುರಿ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ 'ಹುಚ್ಚರ ಔಷಧಿ', ಆಂಗ್ಲದಲ್ಲಿ 'ಸರ್ಪೆಂಟ್‌ವುಡ್' ಎನ್ನುತ್ತಾರೆ. ಇದರ ಬೇರು ಸರ್ಪದ ಆಕಾರದಲ್ಲಿದ್ದು , ಸರ್ಪದ ವಿಷ ಇಳಿಸುವುದರಿಂದ ಆಯುರ್ವೇದದ ಪ್ರಕಾರ ಇದನ್ನು 'ಸರ್ಪಗಂಧ'(ಚರಕ ಸಂಹಿತೆ) ಎನ್ನಲಾಗಿದೆ. ಸಾಧಾರಣ ತಂಪು ಹವೆಯುಳ್ಳ, ಹೆಚ್ಚು ಮಳೆ ಬೀಳುವ ಹರಿದ್ವರ್ಣದ ಎಲ್ಲಾ ಕಾಡುಗಳಲ್ಲಿ, ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡುಗು, ಉಡುಪಿ, ಉತ್ತರಕನ್ನಡಗಳಲ್ಲಿ, ಹಿಮಾಲಯ ಶ್ರೇಣಿಗಳಲ್ಲಿ, ಶ್ರೀಲಂಕಾ, ಚೀನಾಗಳಲ್ಲಿ ಗರುಡಪಾತಾಳ ಕಾಣಸಿಗುತ್ತದೆ(ತ್ತಿತ್ತು!)

ಅಚ್ಚ ಹಸಿರಿನ ಹೊಳಪಿನ ಎಲೆಗಳು, ಕೆಂಪು ಅಥವಾ ಬಿಳಿಯ ಹೂಗಳಿರುವ ಸಸ್ಯ. ಇದರ ಬೇರು ಔಷದೀಯ ಗುಣಗಳನ್ನು ಹೊಂದಿದೆ. ಇವತ್ತಿಗೂ ಕಳ್ಳಸಾಗಾಣಿಕೆಯಿಂದ ವಿದೇಶಗಳಿಗೆ ರವಾನೆಯಾಗುತ್ತಿದೆ ಗರುಡಪಾತಾಳದ ಬೇರು! ಮಾನಸಿಕ ವೇದನೆಯನ್ನು ಶಮನ ಮಾಡುವ ವಿಶೇಷ ಗುಣವುಳ್ಳ ಬೇರು ಇದರದ್ದು. ರಕ್ತದೊತ್ತಡ ನಿವಾರಣೆಗೂ ಇದರ ಬಳಕೆಯಾಗುತ್ತದೆ. ಇದರ ಬೇರಿನಲ್ಲಿ ರಿಸರ್ಪಿನ್ ಎಂಬ ಸಸ್ಯಕ್ಷಾರವಿದೆ. ಬೇರಿನಲ್ಲಿ 20ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳ ಕ್ಷಾರ (ಅಲ್ಕಲಾಯ್ಡ್ಸ್) ಇರುವುದರಿಂದ ಅದು ಬೇರೆ ಬೇರೆ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ. ಹಾವಿನ ಕಡಿತಕ್ಕೆ ಔಷಧವಾಗಿ ಬಳಕೆಯಾಗುತ್ತದೆ ಗರುಡ ಪಾತಾಳ. ಇದರೊಂದಿಗೆ "ಈಶ್ವರ ಬೇರು" ಎಂಬ ಗಿಡದ ಬೇರು ಬಳಸಿ ಚೂರ್ಣ ತಯಾರಿಸಿ ವಿಷ ಜಂತು ಕಚ್ಚಿದಾಗ ವಿಷ ಹೊರತೆಗೆಯಲು ಬಳಸುತ್ತಿದ್ದರು. ರೋಗ ಭ್ರಾಂತಿ(Hypochondria)ಯ ಉಪಶಮನಕ್ಕೆ ಉತ್ತಮ ಔಷಧ. ಹೊಟ್ಟೆಗೆ ಸಂಬಂಧ ಪಟ್ಟ ರೋಗಗಳಿಗೂ ಇದು ರಾಮಬಾಣ! ಹಿಂದೆ ಮನೆಯೆದುರು ತುಳಸಿಕಟ್ಟೆಯಲ್ಲೇ ಇದಕ್ಕಿತ್ತು ಸ್ಥಾನ! ಮನುಷ್ಯನ ಅತಿಯಾಸೆಗೆ ಬಲಿಯಾಗಿ ವಿನಾಶದ ಅಂಚಿಗೆ ತಲುಪಿರುವ ಸರ್ಪಗಂಧ ಮುಂದೆ ಪಾತಾಳದಲ್ಲೂ ಸಿಗಲಿಕ್ಕಿಲ್ಲ!

>> ಇದರ ಬೇರನ್ನು ಮುಖ್ಯವಾಗಿ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರದ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನದ ಸಂದರ್ಭದಲ್ಲಿ ಶಮನಕಾರಿಯಾಗಿ ಬಳಸಲಾಗುತ್ತದೆ..
>> ಇದರ ಬೇರಿನಲ್ಲಿ ನಿದ್ದೆ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅಪಸ್ಮಾರ, ರಕ್ತದ ಒತ್ತಡ, ಉನ್ಮಾದ, ಚಿತ್ತಭ್ರಮಣೆ ಮತ್ತು ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ.
>> ಕಹಿ ಗುಣವನ್ನು ಹೊಂದಿದ್ದು ನಂಜು, ಕಜ್ಜಿ, ತುರಿಕೆ, ಸರ್ಪಸುತ್ತು (ಹರ್ಪಿಸ್) ಮತ್ತು ಎಲ್ಲಾ ತರಹದ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
>> ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದವುಗಳಿಂದ ಉಂಟಾಗುವ ರೋಗಗಳ ಮೇಲೆ ಇದು ಅತ್ಯತ್ತಮ ಪರಿಣಾಮ ಬೀರುತ್ತದೆ.
>> ಹಾವು, ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತವಾದಾಗ ಸರ್ಪಗಂಧವೇ ರಾಮಬಾಣ. ಸರ್ಪಗಂಧವು ರೋಗನಿರೋಧಕ, ರೋಗನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆ್ಯಂಟಿಬಯಾಟಿಕ್ ಮತ್ತು ಸ್ಟಿರಾಯ್ಡ್ ತರಹವೂ ಕೆಲಸ ಮಾಡುತ್ತದೆ. ಆದರೆ ಇದು ಇತರೆ ಸ್ಟಿರಾಯ್ಡ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ.

ಗುರುವಾರ, ಅಕ್ಟೋಬರ್ 1, 2015

ಬ್ರಾಹ್ಮೀ

#ನಾಸ್ತಿಮೂಲಮನೌಷಧಮ್
#ಬ್ರಾಹ್ಮೀ
ತುಳುವಿನಲ್ಲಿ ತಿಮರೆ, ಸಂಸ್ಕೃತದಲ್ಲಿ ಬ್ರಾಹ್ಮೀ, ಮಂಡೂಕಪರ್ಣೀ, ಕಪೋತವಂಕಾ,ಸೋಮವಲ್ಲೀ, ಹಿಂದಿ-ಕೊಂಕಣಿಯಲ್ಲಿ ಏಕಪಾನಿ ಎಂದು ಕರೆಯಲ್ಪಡುವ ಅದ್ಭುತ ಮದ್ದಿನ ಗುಣಗಳುಳ್ಳ ಕನ್ನಡದಲ್ಲಿ ಒಂದೆಲಗ ಎಂದೇ ಕರೆಯಲ್ಪಡುವ ಒಂದೇ ಎಲೆ ಹೊಂದಿರುವ ವಾರ್ಷಿಕ ಸಸ್ಯವಿದು. ಅಚ್ಚರಿಯೇನು ಗೊತ್ತಾ? ನೆನಪಿನ ಶಕ್ತಿಯನ್ನು ಉದ್ದೀಪನಗೊಳಿಸಬಲ್ಲ ಇದರ ಎಲೆಯ ಆಕಾರ ಮೆದುಳಿನ ರೀತಿಯೇ! ಗ್ರಹಣಶಕ್ತಿಯನ್ನು ಜಾಸ್ತಿ ಮಾಡಬಲ್ಲ ಇದು ಮೆದುಳಿನ ಟಾನಿಕ್ಕೇ ಸರಿ.

ಇದರ ಎಲೆಯನ್ನು ದಂಟು ಸಮೇತ ನಲವತ್ತೆಂಟು ದಿನಗಳ ಸೇವಿಸಿದರೆ ಒಳ್ಳೆಯದು. ಇದರ ಸೇವನೆಯಿಂದ ದೇಹದಾರ್ಢ್ಯತೆ ಹೆಚ್ಚುತ್ತದೆ. ಸೊಂಟ ನೋವು, ಬೆನ್ನು ಹುರಿ, ಕುತ್ತಿಗೆ ನೋವಿಗೆ ರಾಮಬಾಣ! ಸೇವಿಸಿದರೆ ನಿಮ್ಮ ರಾಗವೂ ಉತ್ತಮಗೊಳ್ಳುವುದು. ಗರ್ಭಿಣಿಯರು ಸೇವಿಸಿದಲ್ಲಿ ಅವರ ದೇಹದಾರ್ಢ್ಯತೆ ಹೆಚ್ಚುವುದರೊಂದಿಗೆ ಹುಟ್ಟುವ ಮಗುವೂ ಬುದ್ಧಿವಂತನಾಗುತ್ತದೆ. ಅದರಿಂದಾಗಿಯೇ ಸರಸ್ವತೀ ಎಂಬ ಹೆಸರೂ ಇದಕ್ಕಿದೆ. ಸಾರಸ್ವತಾರಿಷ್ಟ ಇದರದ್ದೇ ಉತ್ಪನ್ನ. ಇದನ್ನು ನೆಲ್ಲಿಕಾಯಿಯೊಂದಿಗೆ ಸೇರಿಸಿ ತಯಾರಿಸಿದ ತೈಲ ತಲೆಗೆ ಹಚ್ಚಿಕೊಂಡರೆ ಸೊಂಪಾದ ತಲೆಕೂದಲು, ಸುಖನಿದ್ದೆ ನಿಮ್ಮದ್ದು! ಬ್ರಾಹ್ಮೀಯಿಂದ ತಯಾರಿಸಲ್ಪಟ್ಟ ಬಗೆಬಗೆಯ ತೈಲ, ಅರಿಷ್ಟಗಳು ಲಭ್ಯವಿವೆ. ಜಲಬ್ರಾಹ್ಮೀ ಎನ್ನುವ ಇನ್ನೊಂದು ಪ್ರಭೇದವೂ ಇದೆ.

ಹಾಂ ಇಷ್ಟು ಹೇಳಿದ ಮೇಲೆ ಅಡುಗೆಯ ಬಗ್ಗೆ ಹೇಳಲೇಬೇಕಲ್ವೇ. ತುಳುನಾಡ ಬ್ರಾಹ್ಮಣರನ್ನು ಕೇಳಿನೋಡಿ...ಶ್ರಾದ್ಧದ ದಿನದ ಭೋಜನದಲ್ಲಿ "ತಿಮರೆಯ ಚಟ್ನಿ"ಗೆ ಮೊದಲ ಪ್ರಾಶಸ್ತ್ಯ! ಹಾಂ ಪುಳಿಚಾರು ಎಂದು ಜರೆಯುವವರಿಗೆ ಇದರ ರುಚಿ ಖಂಡಿತಾ ತಿಳಿಯದು! ಇದರ ತಂಬುಳಿಯೂ ರುಚಿಕರ.
>>ಜ್ಞಾನಕಾರಕ
>> ಕಫ,ಪಿತ್ತ ದೋಷ ನಿವಾರಕ
>>ಚರ್ಮರೋಗ ವಿನಾಶಕ
>>ಅಪಸ್ಮಾರವಿದ್ದಲ್ಲಿ ಇದರ ಸೇವನೆ ಒಳ್ಳೆಯದು
>>ಅಜೀರ್ಣನಾಶಕ
>>ಹೃದ್ರೋಗ, ಶ್ವಾಸಕೋಶದ ತೊಂದರೆ, ಮಧುಮೇಹವನ್ನು ಹೋಗಲಾಡಿಸಲು ಸಹಕಾರಿ.
>>ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಸಹಕಾರಿ

ಸೂರ್ಯೋದಯಕ್ಕೂ ಮುನ್ನ ಹುಟ್ಟುಡುಗೆಯಲ್ಲಿ ಬ್ರಾಹ್ಮಿ ಸಸ್ಯವು ಬೆಳೆದ ಸ್ಥಳಕ್ಕೆ ದೀಪ ಉಪಯೋಗಿಸದೇ ನಡೆದು ಹೋಗಿ, ಒಂದು ಬ್ರಾಹ್ಮಿ ಗಿಡವನ್ನು ಸಮೂಲವಾಗಿ ತನ್ನ ಹಲ್ಲಿನಿಂದಲೇ ಕಿತ್ತು, ಅಗಿದು ನುಂಗಿ, ತನ್ನ ವಾಸಸ್ಥಾನಕ್ಕೆ ವಾಪಸಾಗಿ, ಬೆಳಗಾಗುವ ತನಕ ಬ್ರಾಹ್ಮೀ ಜಪವನ್ನು ಮಾಡಿದವನಿಗೆ ಬ್ರಾಹ್ಮೀ ಸಿದ್ಧಿಯಾಗುವುದೆಂಬ ಪ್ರತೀತಿಯೂ ಇದೆ.

ಬುಧವಾರ, ಸೆಪ್ಟೆಂಬರ್ 30, 2015

‎ಚಗ್ತೆ ಸೊಪ್ಪು‬

‪#ನಾಸ್ತಿಮೂಲಮನೌಷಧಮ್‬
‪#ಚಗ್ತೆ_ಸೊಪ್ಪು‬
ತುಳುವಿನಲ್ಲಿ ಹೊಜಂಕ್(ತೊಜಂಕ್,ತಜಂಕ್) ಎಂದು ಕರೆಯಲ್ಪಡುವ ಇದರ "ತಂಬುಳಿ" ತುಳುನಾಡಲ್ಲಿ ಚಿರಪರಿಚಿತ. ಜೇನು ಹುಳ ಕಚ್ಚಿದಾಗ ಇದರ ರಸ ಹಚ್ಚಿದರೆ ಸಾಕು ನೋವು ಮಾಯ! ಹೊಟ್ಟೆಯೊಳಗಿನ ದುರ್ಮಾಂಸ ನಿವಾರಣೆಗೂ ಇದು ಪರಿಣಾಮಕಾರಿ. ಯಾವುದೇ ಕಳೆ ಗಿಡಗಳನ್ನು ಬೆಳೆಯಲು ಬಿಡದ ಗುಣ ಇದರದ್ದು. ಆಯುದಮ, ಚಕ್ರಮರ್ದ ಎಂದು ಕರೆಯಲ್ಪಡುವ ಚಗ್ತೆ ಕೆಲವು ಬಗೆಯ ಚರ್ಮರೋಗ ನಿವಾರಣೆಗೂ ಸಹಕಾರಿ. ಹೊಟ್ಟೆ ಹಾಳಾದಾಗ ಕಶ್ಮಲಗಳನ್ನು ಹೊರ ಹಾಕಲೂ ದಿವ್ಯೌಷಧ. ಹಾಂ...ಇದರ ಪಲ್ಯ, ಪಕೋಡಾ, ದೋಸೆ ಕೂಡಾ ಬಹಳ ರುಚಿ...ಏನು ಮಾಡೋಣ ಈಗಿನ ಜನಾಂಗ ಹೊಜಂಕ್ ಅನ್ನು "ಜಂಕ್" ಎಂದೇ ಪರಿಗಣಿಸಿ ನಿಜವಾಗಿಯೂ "ಜಂಕ್" ಆದ ಆಹಾರಗಳಿಗೆ ಬಲಿಯಾಗಿದೆ!

ಬಕುಳ

#ನಾಸ್ತಿಮೂಲಮನೌಷಧಮ್‬
#ಬಕುಳ

          ಬಕುಳ ಸಂಸ್ಕೃತದ ಹೆಸರು. ಶುರದಿಕಾ, ಅನಂಗಕಾ ಎನ್ನುವ ಉಪನಾಮಗಳನ್ನು ಹೇಳಿದರೂ ಈಗಿನವರಿಗೆ ತಿಳಿಯಲಿಕ್ಕಿಲ್ಲಾ! ಆದರೆ ರೆಂಜೆ ಹೂವು ಎಂದರೆ ಹಳ್ಳಿಯಲ್ಲಿ ಬೆಳೆದವರಿಗೆ ಅದರಲ್ಲೂ ನಾರಿಯರಿಗೆ ತಿಳಿದೀತು. ರೆಂಜೆ, ಬಕುಳೆ ಎನ್ನುವಾಗಲೇ ಅದರ ಸುವಾಸನೆಯನ್ನು ಮನ ಮೆಲುಕು ಹಾಕುತ್ತದೆ. ರಾತ್ರಿ ಅರಳುವ ವಿಶಿಷ್ಟ ಪರಿಮಳಯುಕ್ತ ಹೂವು ಅದು. ಒಣಗಿದ ಮೇಲೂ ಸುಗಂಧ ಬೀರುವ ಪುಷ್ಪವದು. ಎತ್ತರದ ಮರದಿಂದ ಮಂದಾನಿಲಕೆ ಬೆದರುತ್ತಾ ಮೆಲ್ಲನೆ ಬುವಿಗಿಳಿದು ಭೂಮಿಯನ್ನು ಶ್ವೇತವರ್ಣದಿಂದ ಮುಚ್ಚುವ ಬಕುಳ ಪುಷ್ಪ ಸೃಷ್ಟಿಸುವ ಸನ್ನಿವೇಶ ಆತ್ಮೋನ್ನತಿ ಪಡೆದ ಯೋಗಿಯ ತೆರನದ್ದು! ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳೇ ಮುಡಿದು ಸಿಂಗರಿಸಿ ಕೊಂಡು ಸಂಭ್ರಮಿಸುವ "ಬಕುಳಾಶೋಕವಿಹೃತಿ" ಎಂಬ ಪರ್ವವೇ ಇದೆಯಂತೆ.  ಬೆಳ್ಳಂಬೆಳಗ್ಗೆ ಶಾಲೆಗೆ ಹೋಗುವಾಗ ದಾರಿಯ ಮೇಲೆ ರಂಗವಲ್ಲಿ ಹಾಕಿದಂತೆ ಬಿದ್ದು ಸ್ವಾಗತ ಕೋರುತ್ತಿದ್ದ ಇದರ ಸುಗಂಧಭರಿತ ಹೂವು, ಸಂಜೆಯ ವೇಳೆ ಮರವೇರಿ ಕಿಸೆ ತುಂಬಾ ಸಂಗ್ರಹಿಸುತ್ತಿದ್ದ ಇದರ ಕೆಂಪು/ಕಿತ್ತಳೆ ವರ್ಣದ ಹಣ್ಣು ಈಗ ನೆನಪು ಮಾತ್ರ. ಈಗಿನ ಮಕ್ಕಳಿಗೆೀ ಆ ಭಾಗ್ಯವೇ ಇಲ್ಲ! ಹಾಂ ಬಕುಳದ ಹೂವನ್ನು ಕಟ್ಟಬೇಕೆಂದಿಲ್ಲ, ಸುರಿಯಲು ಸುಲಭವಾಗುವಂತೆ ಅದರ ರಚನೆ!

         ಈಗ ಕೋಲ್ಗೇಟಿನವರು ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಮಂಗ ಮಾಡುತ್ತಾರಲ್ಲಾ...ನಾವು ಮಂಗ ಆದೆವಲ್ಲಾ! ನಮ್ಮ ಅಜ್ಜಿ ಈಗಲೂ ಹಲ್ಲುಜ್ಜಲು ಬಳಸುವುದು ಬಕುಳೆಯ ತೊಗಟೆಯನ್ನೇ! ಇದರಿಂದ ಎರಡು ಪ್ರಯೋಜನ ಒಂದು ದಂತಗಳು ಝಗಮಗಿಸುತ್ತವೆ. ಇನ್ನೊಂದು->ವಸಡುಗಳು ಗಟ್ಟಿಯಾಗುತ್ತವೆ. ಇದರ ಮರದ ತೊಗಟೆಯನ್ನು ಪುಡಿ ಮಾಡಿ ಅಥವಾ ಆ ಪುಡಿಯಿಂದ ಕಷಾಯ ಮಾಡಿ ಉಪಯೋಗಿಸಬಹುದು. ತೊಗಟೆ ಮಲಬದ್ಧತೆ, ಪಿತ್ತ ಕೋಶ-ಮೂತ್ರಕೋಶಗಳ ತೊಂದರೆ, ಅತಿಸಾರಗಳ ಶಮನಕ್ಕೆ ಸಹಕಾರಿ. ಬಕುಳೆ ನಿತ್ಯಹರಿದ್ವರ್ಣದ ಮರ! ನಮ್ಮ ಕರಾವಳಿಯ ಕೆಲವೆಡೆ ಮದುವೆಗಳಲ್ಲಿ ಮದುಮಕ್ಕಳು ರೆಂಜೆ ಹೂವಿನ ಮಾಲೆಯನ್ನು ಪರಸ್ಪರ ಬದಲಾಯಿಸಿಕೊಳ್ಳುವ ಶಾಸ್ತ್ರವಿತ್ತು. ಈಗ ಅದು ಇತಿಹಾಸ!


ಬುಧವಾರ, ಸೆಪ್ಟೆಂಬರ್ 23, 2015

ಬೀಳುತಿಹುದು ಬುಜೀಗಳ ಮಾಳಿಗೆ

ಕವಿಯ ಕ್ಷಮೆ ಕೋರಿ.... "ಮೇಲಕ್ಕೇರಿ" ಹೋಗುತಿಹ ಬುಜೀಗಳಿಗರ್ಪಣೆ

ಸೋರುತಿಹುದು ‪ಬುಜೀಗಳ ಮಾಳಿಗೆ ||ಅಜ್ಞಾನದಿಂದ||
ಬೀಳುತಿಹುದು ಬುಜೀಗಳ ಮಾಳಿಗೆ

ಬೀಳುತಿಹುದು ಬುಜೀಗಳ ಮಾಳಿಗೆ ದಾರು(ನೀರಾ) ಕುಡಿದು ಬೊಗಳುತ್ತಿರುವವು
ಕಾಳ ಕತ್ತಲೆಯೊಳಗೆ ಬುಜೀಗಳು "ಮೇಲಕ್ಕೇರಿ" ಹೋಗ್ವರೆಲ್ಲಾ

ಮುರುಕು ತಲೆಯು ಶೂನ್ಯ ಬುದ್ಧಿ ನಾಚಿಕೆ ತೊರೆದು ಕೀಲು ಬಿದ್ದು
ಹರಕು ಚಪ್ಪರ ಬಿದ್ದೇ ಬಿಡ್ತು "ಮೇಲಕ್ಕೇರಿ" ಹೋಗುತಿಹರು||ಸೋರುತಿಹುದು||

ತುಳಸಿ, ಗರಿಕೆ ಕಸವು ಎಂದು ರಾಮನೇನ್ಮಹಾ ಎನಲು
ರಾಮರಾಮ ಜಗವು ಕೂಗೆ "ಮೇಲಕ್ಕೇರಿ" ಹೋಗುತಿಹರು ||ಸೋರುತಿಹುದು||

#WithdrawAward‬

ಸೋಮವಾರ, ಸೆಪ್ಟೆಂಬರ್ 21, 2015

ಎತ್ತಿನಹೊಳೆ ನೀರ ತಿರುವು - ಕರಾವಳಿಗರ ಕಣ್ಣೀರ ಹರಿವು

ಎತ್ತಿನಹೊಳೆ ನೀರ ತಿರುವು - ಕರಾವಳಿಗರ ಕಣ್ಣೀರ ಹರಿವು

               ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಿಂದ ನೇತ್ರಾವತಿ-ಹೇಮಾವತಿಗಳ ಜೋಡಣೆಯ ಪ್ರಸ್ತಾಪಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಕರ್ನಾಟಕ ಸರಕಾರ ನೇತ್ರಾವತಿ, ಕುಮಾರಧಾರಾ ಮುಂತಾದ ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಬಯಲಸೀಮೆಯ ಜಿಲ್ಲೆಗಳಾದ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹರಿಸುವ ಸಲುವಾಗಿ ಯೋಜನೆ ರೂಪಿಸಲು ಡಾ. ಜಿ.ಎಸ್ ಪರಮೇಶ್ವರಯ್ಯ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಅಷ್ಟೇನು ಪ್ರಾಮುಖ್ಯತೆ ಪಡೆಯದಿದ್ದ ಈ ಚರ್ಚೆ ಕೆಲವು ರಾಜಕಾರಣಿಗಳ ಉದ್ಧಾರಕ್ಕಾಗಿ ಎತ್ತಿನಹೊಳೆ ನದಿ ತಿರುವು ಯೋಜನೆಯಾಗಿ ಬದಲಾದುದು, ಅವರು ತಮ್ಮ ಏಳಿಗೆಗಾಗಿ ಹುಟ್ಟೂರೆಂದೂ ಲೆಕ್ಕಿಸದೆ ಜನತೆಯ-ಅಪರೂಪದ ಜೀವ ಸಂಕುಲದ-ವನ್ಯಸಂಪತ್ತಿನ ವಿನಾಶಕ್ಕೂ ಹೇಸಲಾರರು ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಕುಮಾರಧಾರಾದ ಜೀವಸೆಲೆಯಾದ ಗುಂಡ್ಯ ನದಿ ನೀರನ್ನು ತಿರುಗಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುವುದೇ ಈ ಯೋಜನೆಯ ಉದ್ದೇಶ. ಇದರಿಂದಾಗಿ ಹಾನಿ ಕೇವಲ ಗುಂಡ್ಯ-ಕುಮಾರಧಾರಾಗಳಿಗೆ ಮಾತ್ರವಲ್ಲ, ನೇತ್ರಾವತಿಗೂ ತಪ್ಪಿದ್ದಲ್ಲ!

              ಯೋಜನೆಯನ್ವಯ ಎರಡು ಹಂತಗಳಲ್ಲಿ ಎಂಟು ಅಣೆಕಟ್ಟುಗಳನ್ನು ಗುಂಡ್ಯ ನದಿಗೆ ಕಟ್ಟಲಾಗುತ್ತದೆ. ಇವುಗಳಲ್ಲಿ ಎರಡು ಅಣೆಕಟ್ಟುಗಳನ್ನು ಎತ್ತಿನಹೊಳೆ ನದಿ ಹರಿವಿಗೂ, ಎರಡನ್ನು ಅದರ ಉಪನದಿಗಳಿಗೂ, ಎರಡನ್ನು ಕಾಡುಮನೆ ಹೊಳೆಗೂ, ಇನ್ನೊಂದನ್ನು ಕೆರಿಹೊಳೆಗೆ ಅಡ್ಡಲಾಗಿಯೂ, ಉಳಿದೊಂದನ್ನು ಹೊಂಗದ ಹಳ್ಳ ಹರಿವಿಗೆ ಅಡ್ದಲಾಗಿ ಕಟ್ಟಲಾಗುತ್ತದೆ. ಈ ಎಲ್ಲಾ ಹರಿವುಗಳು ಒಟ್ಟಾಗಿ ಗುಂಡ್ಯ ನದಿಯನ್ನು ಸೃಜಿಸಿವೆ. ಗುಂಡ್ಯ ನದಿ ಮುಂದೆ ಕುಮಾರ ಧಾರೆಯೊಡನೆ, ಕುಮಾರಧಾರೆ ನೇತ್ರಾವತಿಯೊಡನೆ ಸೇರುತ್ತದೆ. ಒತ್ತಡದ ಮೂಲಕ ನೀರನ್ನು ಮೂರು ಛೇಂಬರುಗಳಿಗೆ ಪಂಪ್ ಮಾಡಿ ಹಾಯಿಸಿ, ಅಲ್ಲಿಂದ ಸಕಲೇಶಪುರದ ದೊಡ್ದನಗರದಲ್ಲಿ ನಿರ್ಮಾಣವಾಗುವ ಪಂಪಿಂಗ್ ನಿಲ್ದಾಣಕ್ಕೆ ಏರಿಸಲಾಗುತ್ತದೆ. ದೊಡ್ಡನಗರದ ಪಂಪಿಂಗ್ ನಿಲ್ದಾಣದಿಂದ ಮತ್ತೆ ನೀರನ್ನು ಎತ್ತರಿಸಿ ಹಾಯಿಸಿ ಹಾರ್ವನಹಳ್ಳಿಯಲ್ಲಿ ನಿರ್ಮಾಣವಾಗುವ ನಾಲ್ಕು ಚೇಂಬರುಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಾರ್ವನಹಳ್ಳಿಯಿಂದ 250 ಕಿಮೀ ಉದ್ದದ ಗುರುತ್ವಾಕರ್ಷಕ ಕೊಳವೆಗಳ ಮೂಲಕ ನೀರನ್ನು ತುಮಕೂರಿಗೆ ಹರಿಸಿ ಅಲ್ಲಿಂದ,  ದೇವರಾಯನ ದುರ್ಗದಲ್ಲಿ ನಿರ್ಮಾಣಗೊಳ್ಳುವ ಜಲಾಶಯಕ್ಕೆ ನೀರನ್ನು ಎತ್ತರಿಸಿ ಹಾಯಿಸಲಾಗುತ್ತದೆ. ಈ ಜಲಾಶಯ 68 ಮೀಟರ್ ಎತ್ತರವಿದ್ದು 11TMC ನೀರು ಶೇಖರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ಎರಡು ಹಳ್ಳಿಗಳೂ ಸೇರಿದಂತೆ ಅರಣ್ಯಪ್ರದೇಶವನ್ನೊಳಗೊಂಡ ಸುಮಾರು 1200 ಎಕರೆ ಭೂಮಿ ಮುಳುಗಡೆಯಾಗುತ್ತದೆ. ಇಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರಗಳಿಗೆ ನೀರನ್ನು ಪೈಪ್ ಲೈನ್ಗಳ ಮೂಲಕ ಹರಿಸಲಾಗುತ್ತದೆ. 16ಮೀ ಅಗಲದ 250ಕಿಮೀ ಉದ್ದದ ಕೊಳವೆಗಳು ಸರಿಸುಮಾರು 400 ಹೆಕ್ಟೇರ್ ಪ್ರದೇಶವನ್ನು ನುಂಗುತ್ತದೆ.

              ಸರಕಾರದ ವರದಿಯಂತೆ ಯೋಜನೆಯ ಅನುಷ್ಠಾನಕ್ಕೆ ತಗಲುವ ಒಟ್ಟು ವೆಚ್ಚ 8323 ಕೋಟಿ ರೂ.ಗಳು. ಆದರೆ ಇದರೊಳಗೆ ಪುನರ್ವಸತಿ, ಭೂಸ್ವಾಧೀನ, 337 ಟ್ಯಾಂಕಿಗಳಿಗೆ ಬೇಕಾಗುವ ಪೈಪ್ ಲೈನ್ ಇವೆಲ್ಲಾ ಸೇರಿದರೆ ಈ ಮೊತ್ತ 10000 ಕೋಟಿ ದಾಟುವುದು ಶತಃಸಿದ್ಧ! ವರದಿಯಲ್ಲಿರುವಂತೆ ತಿರುಗಿಸಿದ 24.01 TMC ನೀರು ಕೋಲಾರ-ಚಿಕ್ಕಬಳ್ಳಾಪುರಗಳಿಗೆ ತಲುಪಿದಾಗ 2.81 TMCಗಿಳಿಯುತ್ತದೆ. ಯೋಜನೆ ಅನುಷ್ಠಾನವಾದ ಮೇಲೆ ಪ್ರಾಯೋಗಿಕವಾಗಿ ಎಷ್ಟು ನೀರು ದೊರೆಯುತ್ತದೆ ಎನ್ನುವುದನ್ನು ದೇವರೇ ಬಲ್ಲ. ತಜ್ಞರ ಅಭಿಪ್ರಾಯದಂತೆ ಇದು 0.7TMC! ಅಲ್ಲದೆ ಬಜೆಟಿನಲ್ಲಿ ತಿಳಿಸಿದಂತೆ ಬೆಂಗಳೂರು ನಗರಕ್ಕೂ ಈ ನೀರನ್ನು ಉಪಯೋಗಿಸಿದಲ್ಲಿ ಕೋಲಾರ ಚಿಕ್ಕಾಬಳ್ಳಾಪುರಗಳಿಗೆ ಬರಿಯ ಪೈಪುಗಳಷ್ಟೇ ಗತಿ! ಯೋಜನೆಯ ಯಾವುದೇ ವಿಸ್ತೃತ ವರದಿಯಿಲ್ಲದೆ, ಯೋಜನೆಯ ಲಾಭ-ನಷ್ಟಗಳ ಲೆಕ್ಕಾಚಾರ ಮಾಡದೆ, ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನ ಮಾಡದೆ ಈಗಾಗಲೇ 2670 ಕೋಟಿ  ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯೂ ಆರಂಭವಾಗಿದೆ. ವಿಪರ್ಯಾಸವೆಂದರೆ ಕರಾವಳಿಯ ಉದ್ಯಮಿಗಳೂ ಇದರ ಪಾಲುದಾರರು!

                ಯೋಜನೆಗೆ ಅಗತ್ಯವಿರುವ ವಿದ್ಯುತ್ ಸುಮಾರು 370 MW. ಸುಮಾರು 90 ಸ್ಕ್ವೇರ್ ಕಿ.ಮೀ ಜಾಗವನ್ನುಪಯೋಗಿಸಿಕೊಂಡು 24.01 TMC ನೀರು ತಿರುಗಿಸುವ ಈ ಯೋಜನೆ ಯಶಸ್ವಿಯಾಗುವುದು ಜೂನ್-ನವಂಬರ್ ಗಳ ನಡುವೆ ಮಾತ್ರ. 24.01 TMC ನೀರು ಸಿಗುವ ಸಾಧ್ಯತೆ 50%ನಷ್ಟು! ಹಾಗಾಗಿ ಈ ಯೋಜನೆಯ ಅನುಷ್ಠಾನಕ್ಕೆ ಮಾಡುವ ನಿರ್ಮಾಣಗಳೂ 50%ನಷ್ಟು ಸಾಧ್ಯತೆಯನ್ನು ಅವಲಂಬಿಸಿಯೇ ಸಿದ್ಧಗೊಳ್ಳುತ್ತವೆ. ಒಂದು ವೇಳೆ 24 TMC ಅಥವಾ ಅದಕ್ಕಿಂತ ಹೆಚ್ಚು ನೀರು ದೊರೆತಲ್ಲಿ ಅಷ್ಟನ್ನೂ ತಿರುಗಿಸುವ ದೂ(ದು)ರಾಲೋಚನೆಯೂ ಇದರಲ್ಲಿದೆ. ಯೋಜನೆಯ ಮುಂದುವರಿದ ಭಾಗವಾಗಿ ಉಳಿದ ನದಿಗಳ ನೀರನ್ನು ತಿರುಗಿಸುವ ಮಾಸ್ಟರ್ ಪ್ಲಾನ್ ಕೂಡಾ ಇದೆ! 110 ಹೆಕ್ಟೇರುಗಳಷ್ಟು ದಟ್ಟಾರಣ್ಯ ಕೇವಲ ಅಣೆಕಟ್ಟುಗಳಿಂದ ಪಂಪಿಂಗ್ ಸ್ಟೇಷನ್ನಿಗೆ ಹಾಕಲಾಗುವ ಮೈನ್ಸ್ ಗಳಿಗೇ  ಬಲಿಯಾಗುತ್ತದೆ.  ಯೋಜನೆಯ ವರದಿಯಲ್ಲಿ ಕಾಡನ್ನು ಉರಿಸಿ ನಾಶಪಡಿಸುವುದಾಗಿ ಹೇಳಿದ್ದು ಇದರಿಂದಾಗುವ ಅರಣ್ಯನಾಶ, ವನ್ಯಜೀವಿ-ಜಲಚರಗಳ ನಾಶ ಊಹಿಸಲಸಾಧ್ಯ! ಇದಲ್ಲದೆ ಅಣೆಕಟ್ಟು, ಕೆಲಸಗಾರರ ವಸತಿ, ಹೆದ್ದಾರಿಯನ್ನು ಸಂಧಿಸಲು ನಿರ್ಮಿಸುವ ಹೊಸ ಮಾರ್ಗಗಳು, ತ್ಯಾಜ್ಯವನ್ನು ಹೂಳಲು ಬೇಕಾಗುವ ಜಾಗಗಳು, ಇಲೆಕ್ಟ್ರಿಕಲ್ ಸಬ್ ಸ್ಟೇಷನ್ಗಳು, ಮೈನಿಂಗ್ ಸಾಮಗ್ರಿಗಳು, ಬಂಡೆಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ನಾಶ ಸೇರಿ ಅರಣ್ಯದ ಮೇಲಾಗುವ ಅತ್ಯಾಚಾರ ಲೆಕ್ಕವಿಲ್ಲದ್ದು!

               ಈ ಯೋಜನೆ ಅನುಷ್ಠಾನಗೊಳ್ಳುವ ಭಾಗದಲ್ಲಿ ಐ.ಐ.ಎಸ್.ಸಿ ಕೈಗೊಂಡ ಅಧ್ಯಯನವೊಂದು 119 ವಿವಿಧ ಜಾತಿಯ ಮರಗಳು, 63 ಜಾತಿಯ ಪೊದೆಗಳು-ಬಳ್ಳಿಗಳು, 57 ಗಿಡಮೂಲಿಕೆಗಳು ಮತ್ತು 54 ಅಪುಷ್ಪಸಸ್ಯಗಳು, 44  ವಿವಿಧ ಜಾತಿಯ ಚಿಟ್ಟೆಗಳು, 4 ಡ್ರಾಗನ್ನುಗಳು, ಕನ್ನೆನೊಣಗಳು, ನಶಿಸುತ್ತಿರುವ ಗುಂಡ್ಯ ಕಪ್ಪೆಗಳನ್ನೊಳಗೊಂಡಂತೆ 23 ವಿವಿಧ ಉಭಯಚರಗಳು, 32 ಸರೀಸೃಪಗಳು, 91 ಜಾತಿಯ ಹಕ್ಕಿಗಳು, ಹುಲಿ ಮುಂತಾದ 22 ಬಗೆಯ ಸಸ್ತನಿಗಳು, ಸಿಂಹ ಬಾಲದ ಕೋತಿಗಳು, ಆನೆ, ಕಾಡುಪಾಪ , ಕಾಡುಕೋಣ ಗಳನ್ನು ಗುರುತಿಸಿತ್ತು. 2002-13ರ ನಡುವೆ 34 ಜನ ಆನೆಗಳ ದಾಳಿಗೆ ಬಲಿಯಾಗಿದ್ದರೆ, 17 ಆನೆಗಳು ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದವು. "ಕರ್ನಾಟಕ ಎಲಿಫೆಂಟ್ ಟಾಸ್ಕ್ ಫೋರ್ಸ್" ಆನೆಗಳಿಗೆ ಹಾಗೂ ಪರಿಸರ ಹಾನಿಯ ಕಾರಣವೊಡ್ಡಿ ಸಕಲೇಶಪುರದಲ್ಲಿ ಆಗಬೇಕಿದ್ದ ಜಲವಿದ್ಯುತ್ ಯೋಜನೆಯೊಂದನ್ನು ನಿಲ್ಲಿಸಿತ್ತು. ಈಗ ಅದಕ್ಕಿಂತಲೂ ಹೆಚ್ಚು ಹಾನಿಯುಂಟುಮಾಡುವ ಯೋಜನೆಗೆ ಅನುಮತಿ ಸಿಕ್ಕಿದ್ದಾದರೂ ಹೇಗೆ? ಮನುಷ್ಯ-ವನ್ಯಜೀವಿಗಳ ನಡುವೆ ಸಂಘರ್ಷ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ತಪ್ಪಿಸಲು ಸರಿಯಾದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆನೆಗಳ ವಾಸಸ್ಥಾನಗಳಿಗೆ ಅಪಾಯವೊಡ್ಡುವ ಈ ಯೋಜನೆಯಿಂದ ಆನೆಗಳು ನೆಲೆಯನ್ನರಸುತ್ತಾ ನಾಡಿಗಿಳಿಯಲಾರಂಭಿಸಿದರೆ ಜನರ ಪಾಡೇನು? ಮಾನವನ ದುರಾಸೆಗಾಗಿ ವನ್ಯಜೀವಿಗಳ ಪ್ರಾಣವನ್ನು ಬಲಿಕೊಡುವುದು ಎಷ್ಟು ಸರಿ? ಈ ಯೋಜನೆ ಅನುಷ್ಠಾನಗೊಳ್ಳುವುದು "ವಿಶ್ವ ಪಾರಂಪರಿಕ ತಾಣ"ಗಳಲ್ಲೊಂದಾದ ಪುಷ್ಪಗಿರಿ ಅಭಯಾರಣ್ಯಕ್ಕೆ ಹತ್ತು ಕಿಮೀ ಅಂತರದಲ್ಲಿ. ಇದರಿಂದ ಅಲ್ಲಿನ ಜೀವ ವೈವಿಧ್ಯದಲ್ಲಿ ವ್ಯತ್ಯಯವಾಗುವುದು ನಿಶ್ಚಿತ. ಈ ಯೋಜನೆ ಮೈಸೂರಿನ ಆನೆಗಳ ರಕ್ಷಿತಾರಣ್ಯಕ್ಕೂ ತೊಂದರೆಯೊಡ್ಡುವುದರಲ್ಲಿ ಅನುಮಾನವಿಲ್ಲ.
   
               ನೀರನ್ನು ತಿರುವುಗೊಳಿಸುವ ಸ್ಥಳವನ್ನು ಯಾವುದೇ ವೈಜ್ಞಾನಿಕ ಅಧ್ಯಯನವನ್ನು ಮಾಡಿ ನಿರ್ಧರಿಸಿಲ್ಲ. ಬಂಟ್ವಾಳದಲ್ಲಿ ನೇತ್ರಾವತಿಯ ನದಿ ನೀರಿನ ಮಾಪನವನ್ನು ತೆಗೆದುಕೊಂಡು ಅದನ್ನೇ ಘಟ್ಟಕ್ಕೆ ಬಹಿರ್ಗಣಿಸಿದಾಗ ಸಿಗುವ ನೀರಿನ ಪ್ರಮಾಣವನ್ನೇ 24TMC ಎಂದು ಪರಿಗಣಿಸಿದವರ ಮೂರ್ಖತನಕ್ಕೆ ಏನೆನ್ನಬೇಕು?! ಈ ಯೋಜನೆಯಿಂದಾಗಿ ಕೆಳಭಾಗಕ್ಕೆ ಹರಿಯುವ ನೀರು ಅತ್ಯಲ್ಪ ಅಥವಾ ಶೂನ್ಯ. ಇದರಿಂದ ಜಲಚರಗಳಿಗೆ, ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಅಲ್ಲದೆ ಕೆಳಭಾಗದ ಕೃಷಿಕರಿಗಾಗುವ ಹಾನಿಯ ಬಗೆಗೆ ಯೋಜನೆಯ ನಿರ್ಮಾತೃಗಳು ಯೋಚಿಸಿದ್ದಾರೆಯೇ? ಕಳೆದ ಕೆಲವು ವರ್ಷಗಳಲ್ಲಿ ಮಳೆಯ ಪ್ರಮಾಣ ಕುಸಿದಿರುವ ಪಶ್ಚಿಮಘಟ್ಟಗಳಲ್ಲಿ ಮುಂಬರುವ ವರ್ಷಗಳಲ್ಲಿ  ಮಳೆ ಮತ್ತಷ್ಟು  ಕಡಿಮೆಯಾಗುವ ಸಾಧ್ಯತೆಯನ್ನು ಅಧ್ಯಯನಗಳು ಹೇಳುತ್ತಿವೆ. ಇದರಿಂದ ಕೆಲವೇ ವರ್ಷಗಳಲ್ಲಿ ಸಣ್ಣ ನದಿಗಳು, ತೊರೆಗಳು ಬಡವಾಗಿ ಅಂತರ್ಜಲವೂ ಬತ್ತಿ ಹೋಗಿ ಭೂಮಿ ಬರಡಾಗಿ ಜನಜೀವನ ಅಸ್ತವ್ಯಸ್ತವಾದೀತು. ಮೊದಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಕರಾವಳಿ ಭಾಗದಲ್ಲಿ ಮುಂದೆ ಆಗಲಿರುವ ಕೈಗಾರಿಕಾ ವಲಯ, ವಿಶೇಷ ವಿತ್ತವಲಯ, ಹೆಚ್ಚುವ ಜನಸಂಖ್ಯೆಗೆ ಉಪ್ಪು ನೀರೇ ಗತಿ!


             ನೇತ್ರೆ ,ಕುಮಾರಧಾರಾ, ಗುಂಡ್ಯ ನದಿಗಳು ಕೆಲವು ಅಪರೂಪದ ಪ್ರಭೇದದ ಮೀನುಗಳಿಗೆ ಆಶ್ರಯತಾಣಗಳಾಗಿವೆ. ಕುಕ್ಕೆ, ನಕುರ್ ಗಯಾ, ಯೇನೇಕಲ್ ಗಳಲ್ಲಿರುವ ಮೀನು ರಕ್ಷಿತ ತಾಣಗಳು ಈ ಯೋಜನೆ ಜಾರಿಯಾದಲ್ಲಿ ಬಡವಾಗುವುದು ಖಂಡಿತ. ನೀರಿನ ಹರಿವು ಕ್ಷೀಣಗೊಂಡಾಗ ಅವುಗಳ ಆವಾಸ-ಆಹಾರಗಳಲ್ಲಿ ವ್ಯತ್ಯಯವುಂಟಾಗಿ ಸಂತತಿಯೇ ನಶಿಸಿ ಹೋಗಬಹುದು. ಈ ಬಗ್ಗೆ ಯಾವುದೇ ಅಧ್ಯಯನವನ್ನು ಮಾಡದೆ ಏಕಾಏಕಿ ಯೋಜನೆ ಜಾರಿಗೊಳಿಸಿದುದೇಕೆ? ಅಲ್ಲದೆ ಬಂಡೆಗಳನ್ನು ಡೈನಮೈಟ್ ಉಪಯೋಗಿಸಿ ಒಡೆಯುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವನ್ಯಜೀವಿ ಹಾಗೂ ಜಲಚರಗಳಿಗಾಗುವ ಹಾನಿಯೇನು ಕಡಿಮೆಯೇ? ಈ ಸ್ಫೋಟಗಳು ಅಂತರ್ಜಲ ಹಾಗೂ ನೀರಿನ ಸೆಲೆಗಳಲ್ಲಿ ಉಂಟಾಗುವ ವ್ಯತ್ಯಯಗಳ ಬಗ್ಗೆ ಸಂಶೋಧನೆಗಳು ಹೇಳುತ್ತವೆ. ಇವನ್ನೆಲ್ಲಾ ಗಮನಕ್ಕೆ ತೆಗೆದುಕೊಂಡಿಲ್ಲವೇಕೆ? ಯೋಜನೆಯ ವರದಿಯಂತೆ ಹದಿನಾಲ್ಕು ಲಕ್ಷ ಕ್ಯೂಬಿಕ್ ಮೀಟರಿಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ನೀರಿನ ಗುಣಮಟ್ಟ, ಕಾಡು ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಪ್ರತಿದಿವಸ ಈ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗಿ ಮುಂದೊಂದು ದಿನ ಘಟ್ಟದ ಕೆಳಭಾಗದಲ್ಲಿ 2013ರಲ್ಲಿ  ಉತ್ತರಾಖಂಡದಲ್ಲಿ ಸಂಭವಿಸಿದಂತೆ ಪ್ರವಾಹ-ಭೂಕುಸಿತಗಳುಂಟಾದರೂ ಆಶ್ಚರ್ಯವಿಲ್ಲ.

              ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅಲ್ಲಿನ ಜೀವ ವೈವಿಧ್ಯವನ್ನು ಉಳಿಸಲೋಸುಗ ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿಯಂತೆ ಪರಿಸರಕ್ಕೆ ಮಾರಕವಾಗುವ ಯಾವುದೇ ಕಾಮಗಾರಿ ಈ ಭಾಗದಲ್ಲಿ ನಡೆಯಕೂಡದು. ಹಾಗಾದರೆ ಎತ್ತಿನಹೊಳೆ ಯೋಜನೆ ಹೇಗೆ ಜಾರಿಯಾಗುತ್ತಿದೆ? ಎತ್ತಿನಹೊಳೆ ಯೋಜನೆ ಭಂಡ ರಾಜಕಾರಣಿಗಳ ಇಬ್ಬಂದಿತನವನ್ನು, ತಮ್ಮ ಹೊಟ್ಟೆ ಹೊರೆದುಕೊಳ್ಳುವ ಜಾಣತನವನ್ನು ಸೂಚಿಸುತ್ತದೆ. ಒಟ್ಟಾರೆ ಮಲೆನಾಡಿಗರನ್ನು ಅತ್ತ ಭೂಮಿ ಕಿತ್ತುಕೊಳ್ಳುವ ಕಸ್ತೂರಿ ರಂಗನ್ ವರದಿಯ ಅನುಮಾನಿತ ಭೂತ ಇತ್ತ ಆಹಾರ ಕಿತ್ತುಕೊಳ್ಳುವ ಎತ್ತಿನಹೊಳೆಯ ಪ್ರೇತಗಳು ಜೀವಚ್ಛವವಾಗಿಸುವುದರಲ್ಲಿ ಸಂಶಯವಿಲ್ಲ. ಚೀನಾದಲ್ಲಿ ಹೆಚ್ಚಿದ ವಾಣಿಜ್ಯ ಚಟುವಟಿಕೆ, ಅವೈಜ್ಞಾನಿಕ ನದಿ ತಿರುವು ಯೋಜನೆಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ 28000 ನದಿಗಳೇ ಕಾಣೆಯಾಗಿವೆ. ರಾಜಕಾರಣಿಗಳ ದುರಾಸೆಗೆ ಬಲಿಬಿದ್ದರೆ ಅಂತಹ ಸ್ಥಿತಿ ನಮಗೂ ಬಂದೀತು.

ಮಂಗಳವಾರ, ಸೆಪ್ಟೆಂಬರ್ 15, 2015

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

              ಅವರ ಮತಾಂಧತೆಗೆ ಹಲವಾರು ದೇಗುಲಗಳು ಧರೆಗುರುಳಲ್ಪಟ್ಟವು. ಅವರ ಕಾರಣಕ್ಕೆ ಇತಿಹಾಸವನ್ನೇ ತಿರುಚಿ ಬರೆಯಲಾಯಿತು. ದೇಶವನ್ನೇ ಹರಿದು ಹಂಚಲಾಯಿತು. ತಮ್ಮವರಿಗೆ ಅನ್ಯಾಯವಾಗುತ್ತಿದ್ದರೂ, ರಕ್ತದೋಕುಳಿ ಹರಿಯುತ್ತಿದ್ದರೂ ನಾಲಿಗೆ ಕಚ್ಚಿಕೊಳ್ಳಿರೆಂದು ಹೇಳಲಾಯಿತು. ಅವರಿಗಾಗಿ ರಾಷ್ಟ್ರಗೀತೆ-ರಾಷ್ಟ್ರಧ್ವಜ-ರಾಷ್ಟ್ರಭಾಷೆ ಬದಲಾಯಿತು. ಅವರ ಓಲೈಕೆಯಿಂದ ಈ ದೇಶ ಕಳೆದುಕೊಂಡದ್ದೆಷ್ಟು? ಕೇವಲ ಇಪ್ಪತ್ತು ಪ್ರತಿಶತವಿರುವ ಅವರ ಸಂಖ್ಯೆ ಈ ದೇಶದ ಕಾನೂನನ್ನೇ ಬದಲಾಯಿಸಬಲ್ಲುದು. ಯೋಜನೆಗಳ ಉದ್ದೇಶವನ್ನೇ ಮೂಲೋತ್ಪಾಟನೆ ಮಾಡಬಲ್ಲುದು. ಶತಶತಮಾನಗಳ ಪರ್ಯಂತ ಈ ದೇಶವನ್ನು ಕೊಳ್ಳೆಹೊಡೆಯುತ್ತಾ ಬಂದು, ಸ್ವಾತಂತ್ರ್ಯಗೊಂಡ ನಂತರವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯೊಂದಿಗೆ ಅನೇಕಾನೇಕ ಉಚಿತ ಸೌಲಭ್ಯಗಳನ್ನು, ಕೆಲವು ಕಡೆ ತಮಗೆ ಬೇಕಾದವರನ್ನು ಆರಿಸುವ ಅಧಿಕಾರ ಪಡೆದ ಮತವೊಂದರ ಅನುಯಾಯಿಗಳ ಒಳಗಿನ ಹೂರಣವನ್ನು ಕೆದಕುತ್ತಾ ಹೋದರೆ ಕಂಡು ಬರುವುದು ಗೆದ್ದಲು ಹುಳಗಳೇ. ಕೆಲವೊಂದಷ್ಟು ರತ್ನಗಳು ಈ ದೇಶದ ಮಣ್ಣಿನೊಂದಿಗೆ ಬೆರೆತು ಮುಖ್ಯವಾಹಿನಿಗೆ ಬಂದು ದೇಶದ ಅಸ್ಮಿತೆಗೆ ಕಾಣಿಕೆ ಸಲ್ಲಿಸಿದರೂ ಅದು ಲಕ್ಷದಲ್ಲೊಂದು. ಅನ್ನ ಕೊಟ್ಟ ಭೂಮಿಗಿಂತಲೂ ಮತವೇ ಮಹತ್ ಎನ್ನುವ ಮಾನಸಿಕತೆ ಇಂದಿಗೂ ಬದಲಾಗಿಲ್ಲ. ಎಲ್ಲವೂ ತಮ್ಮವರಿಗಾಗಿ ಎನ್ನುವವರೊಳಗಿನವರು ಎಷ್ಟು ಸುಖಿಗಳು ಎಂದು ಒಳಹೊಕ್ಕು ನೋಡಿದರೆ ಎಂಥವನೂ ಬೆಚ್ಚಿಬಿದ್ದಾನು!


               2012ರ ವರದಿಯೊಂದು ದೇಶದ ಶೇ. 59ರಷ್ಟು ಮುಸ್ಲಿಂ ಮಹಿಳೆಯರು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ ಎಂದಿತ್ತು. ಮುಸ್ಲಿಂ ಮಹಿಳೆ ನಿರಂತರ ತುಳಿತಕ್ಕೆ ಒಳಗಾಗುತ್ತಿದ್ದಾಳೆ. ಹಾಗಂತ ಆಕೆ ತುಳಿತಕ್ಕೊಳಗಾಗುತ್ತಿರುವುದು ತಮ್ಮ ಮತವೇ ಶ್ರೇಷ್ಠ ಎನ್ನುತ್ತಾ ಅನ್ಯರನ್ನು ತುಚ್ಛವಾಗಿ ಕಾಣುವ ತಮ್ಮದೇ ಸಮಾಜದ ಬಾಂಧವರಿಂದ ಅಲ್ಲವೇ?  ದೇಶಕ್ಕೆ ಸ್ವಾತಂತ್ರ್ಯದಕ್ಕಿ ಆರೂವರೆ ದಶಕಗಳು ಕಳೆದರೂ ಮುಸ್ಲಿಮರ ಅಭಿವೃದ್ಧಿ ಏಕಾಗಿಲ್ಲ ಎನ್ನುವುದಕ್ಕೆ ಮುಸ್ಲಿಮರ ಸಾಕ್ಷರತೆಯ ಪ್ರಮಾಣ ಜ್ವಲಂತ ಸಾಕ್ಷಿ. ಈ ಕುರಿತು ಅರಿವು ಮೂಡಿಸಬೇಕಿದ್ದ ಮುಸ್ಲಿಂ ಜನನಾಯಕರು ಇಷ್ಟೂ ವರ್ಷ ಮಾಡುತ್ತಿದ್ದುದೇನು? ಮುಸ್ಲಿಮ್ ಮಹಿಳೆ ನ್ಯಾಯಾಧೀಶೆಯಾಗುವಂತಿಲ್ಲ, ಚುನಾವಣೆಗೆ ಸ್ಪರ್ದಿಸುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ, ಹೋದರೂ ಕಛೇರಿಗಳಲ್ಲಿ ಪುರುಷ ಸಹೋದ್ಯೋಗಿಗಳೊಡನೆ ಮಾತಾಡುವಂತಿಲ್ಲ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ವೇದಿಕೆ ಹತ್ತಿ ಮಾತಾಡುವಂತಿಲ್ಲ, ಅವರಿಗೆ ಮೀಸಲಾತಿ ಕೊಡುವುದು ಸರಿಯಲ್ಲ, ವಾಹನ ಚಲಾವಣಾ ಪರವಾನಗಿ ಪತ್ರ-ಚುನಾವಣಾ ಗುರುತು ಚೀಟಿಯಲ್ಲಿ ಅವರ ಭಾವಚಿತ್ರ ಹಾಕುವಂತಿಲ್ಲ, ಗರ್ಭಪಾತ ಮಾಡಿಕೊಳ್ಳುವಂತಿಲ್ಲ,  ಹೀಗೆಲ್ಲಾ ಫತ್ವಾ ಹೊರಡಿಸಿರುವ ಉಲೇಮಾಗಳು, ಮೌಲ್ವಿಗಳು ಸ್ತ್ರೀಯೆಂದರೆ ಬರಿಯ ಭೋಗದ ವಸ್ತುವಾಗಿ ನೋಡಿದ್ದರಿಂದಲೇ ಅಲ್ಲವೇ ಆಕೆ ತನ್ನದೇ ಮತದಲ್ಲಿ ಕಡೆಗಣಿಸಲ್ಪಟ್ಟದ್ದು. ಕಪ್ಪು ಪರದೆಯೊಳಗಿನ ನಾಲ್ಕು ಗೋಡೆಗಳ ನಡುವಿನ ಹೆರಿಗೆಯಂತ್ರದ ಜೀವನ ಕಂಡವರಿಗೇ ಪ್ರೀತಿ! ಹಾಗಂತ ಆ ಯಂತ್ರಗಳೇನು ಮನುಷ್ಯರಲ್ಲವೇ? ಅವರಿಗೂ ಮನಸ್ಸೆಂಬುದು ಇಲ್ಲವೇ? ಎಲ್ಲವನ್ನು ಉಚಿತವಾಗಿ ಪಡೆಯುವವರ, ತಮ್ಮ ಮೂಗಿನ ನೇರಕ್ಕೇ ಈ ದೇಶದ ಯೋಜನೆಗಳನ್ನು ನಿರ್ಧರಿಸುವವರ "ಕೈಹಿಡಿಸಿಕೊಂಡವರ" ಸ್ಥಿತಿಗತಿಗಳೇನು? ಅವರ ಅಂತರಂಗದೊಳಗೆ ಹುದುಗಿ ಹೋಗಿರುವ ಮಾತುಗಳು, ಅವರ ನಿಟ್ಟುಸಿರು ಸೂಚಿಸುವ ಅಸಹಾಯಕತೆಗಳಿಗೆ ಅಂಕೆಗಳ/ಪದಗಳ ರೂಪ ಕೊಟ್ಟಾಗ ಕಂಡುದುದಿಷ್ಟು.



  • 73.1% ಕುಟುಂಬಗಳ ವಾರ್ಷಿಕ ಆದಾಯ Rs.50,000 ಕ್ಕಿಂತಲೂ ಕಡಿಮೆ.
  • 55.3% ಹುಡುಗಿಯರ ವಿವಾಹ ಹದಿನೆಂಟು ವರ್ಷ ಪ್ರಾಯ ತುಂಬುವ ಮೊದಲೇ ನಡೆಯುತ್ತದೆ!
  • ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಕೇವಲ 53.5%!
  • 53.2% ಮಹಿಳೆಯರು ಮನೆಯೊಳಗಿನ/ಸಾಂಸಾರಿಕ ಜಗಳಕ್ಕೀಡಾಗುತ್ತಿದ್ದಾರೆ.
  • 78.7% ಮಹಿಳೆಯರು ಯಾವುದೇ ಉದ್ಯೋಗವಿಲ್ಲದೆ ಅಂದರೆ ಗೃಹಿಣಿಯಾಗಿ ಜೀವನ ಸಾಗಿಸುತ್ತಿದ್ದಾರೆ.
  • 95.5% ಮಹಿಳೆಯರಿಗೆ "ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್" ಎನ್ನುವುದು ಇದೆಯೆಂಬುದೇ ತಿಳಿದಿಲ್ಲ. 
  • 75.5% ಮಹಿಳೆಯರು ಮದುವೆಯಾಗಲು ಹುಡುಗಿಯ ವಯಸ್ಸು ಹದಿನೆಂಟು ದಾಟಿರಬೇಕೆಂದು ಬಯಸುತ್ತಾರೆ. 
  • 88.3% ಮಹಿಳೆಯರು ಮದುವೆಯಾಗಲು ಹುಡುಗನ ವಯಸ್ಸು ಇಪ್ಪತ್ತೊಂದು ಕಳೆದಿರಬೇಕೆಂದು ಬಯಸುತ್ತಾರೆ.
  • 85.7% ಜನ ಮದುವೆಯ ಸಮಯದಲ್ಲಿ ಮೆಹ್ರ್ ಕೊಡಬೇಕೆಂದು ಬಯಸುತ್ತಾರೆ.
  • 83.9% ಜನ ವರನ ವಾರ್ಷಿಕ ಆದಾಯದಷ್ಟು ಮೆಹರ್ ಇರಬೇಕೆಂದು ಇಚ್ಛಿಸುತ್ತಾರೆ.
  • 75.1% ಮಹಿಳೆಯರು ವಿಚ್ಛೇದನ ಪಡೆಯುವಾಗ ಖುಲಾ ಕೊಡುವುದಾದಲ್ಲಿ ಮೆಹ್ರ್ ಅನ್ನು ಪಡೆಯಬಾರದೆಂದು ಇಚ್ಛಿಸುತ್ತಾರೆ.
  • 91.7% ಮಹಿಳೆಯರು ತನ್ನ ಪತಿ ಇನ್ನೊಂದು ಮದುವೆಯಾಗುವುದನ್ನು ಬಯಸುವುದಿಲ್ಲ.
  • 92.1% ಮಹಿಳೆಯರು ಮೌಖಿಕ/ಏಕಪಕ್ಷೀಯ ನಿರ್ಧಾರದ ವಿಚ್ಛೇದನ ರದ್ದಾಗಬೇಕೆಂದು ಬಯಸುತ್ತಾರೆ.
  • 88.3% ಮಹಿಳೆಯರು ತಲಾಕ್-ಇ-ಅಹ್ಸಾನ್ ವಿಚ್ಛೇದನದ ವಿಧಾನವಾಗಿರಬೇಕೆಂದು ಬಯಸುತ್ತಾರೆ.
  • 93% ಮಹಿಳೆಯರು ಪಂಚಾಯತಿ ಪ್ರಕ್ರಿಯೆ ವಿಚ್ಛೇದನಕ್ಕೆ ಮುನ್ನ ಇರಲೇಬೇಕೆಂದು ಪ್ರತಿಪಾದಿಸುತ್ತಾರೆ.
  • 72.3% ಮಹಿಳೆಯರು ವಿಚ್ಛೇದನಕ್ಕೆ ಮುನ್ನ ಪಂಚಾಯತಿ ಪ್ರಕ್ರಿಯೆ 3 ರಿಂದ 6 ತಿಂಗಳು ಇರಬೇಕೆಂದು ಪ್ರತಿಪಾದಿಸುತ್ತಾರೆ.
  • 88.5% ಮಹಿಳೆಯರು ಮೌಖಿಕ ವಿಚ್ಛೇದನಕ್ಕೆ ನೋಟೀಸ್ ಕಳುಹಿಸುವ ಖಾಜಿಯನ್ನು ಶಿಕ್ಷಿಸಬೇಕೆಂದು ಹೇಳುತ್ತಾರೆ.
  • 88.9% ಮಹಿಳೆಯರು ವಿಚ್ಛೇದನದ ನಂತರ ಮಕ್ಕಳನ್ನು ಪತ್ನಿಯೇ ಪಾಲಿಸಬೇಕೆಂದು ಬಯಸುತ್ತಾರೆ.
  • 95.6% ಮಹಿಳೆಯರು ತಾನು ಮಕ್ಕಳ ಪಾಲನೆ ಮಾಡಿದರೂ ವಿಚ್ಛೇದಿತ ಪತಿ ಪಾಲನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಕೊಡಬೇಕೆಂದು ಇಚ್ಛಿಸುತ್ತಾರೆ.
  • 92.7% ಮಹಿಳೆಯರು ಒಪ್ಪಿಗೆ ಹಾಗೂ ಆರೋಗ್ಯ, ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ನಿರ್ಧಾರಕ ಅಂಶಗಳಾಗಿರಬೇಕೆಂದು ಆಶಿಸುತ್ತಾರೆ.
  • 79.8% ಜನ ದತ್ತು ಸ್ವೀಕಾರಗೊಂಡ ಮಗುವೇ ಆಸ್ತಿಯ ವಾರಸುದಾರನಾಗಿರಬೇಕೆಂದು ಬಯಸುತ್ತಾರೆ.
  • 83.3% ಜನ ಮುಸ್ಲಿಮ್ ಕೌಟುಂಬಿಕ ಕಾನೂನಿನ ಕ್ರೋಢೀಕರಣ/ನವೀಕರಣ  ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುತ್ತದೆಯೆಂಬ ಭರವಸೆ ವ್ಯಕ್ತಪಡಿಸುತ್ತಾರೆ.
  • 87.9% ಜನ ದಾರುಲ್ ಖಾಜಾದ ಚಟುವಟಿಕೆಗಳನ್ನು ರಾಜ್ಯವೇ ನಿಯಂತ್ರಿಸಬೇಕೆಂದು ಬಯಸುತ್ತಾರೆ.
  • 95.4% ಜನ ಮುಸ್ಲಿಮ್ ಮಹಿಳೆಯರಿಗೆ ಕಾನೂನು ನೆರವನ್ನು ಬಯಸುತ್ತಾರೆ.


           ಯಾರೋ ಬಲಪಂಥೀಯ ಇಂತಹ ಅಂಕಿಅಂಶಗಳನ್ನು ಕೊಟ್ಟಿದ್ದರೆ ನಮ್ಮ ಬುಜೀಗಳು ಆಕಾಶ-ಭೂಮಿ ಒಂದು ಮಾಡುತ್ತಿದ್ದರೇನೋ? "ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ" ಎಂಬ ಸಂಘಟನೆಯೊಂದು ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ ಕೌಟುಂಬಿಕ ನ್ಯಾಯ ರಕ್ಷಣೆಯ ವಿಷಯಕವಾಗಿ ನಡೆಸಿದ ರಾಷ್ಟ್ರವ್ಯಾಪಿ ಸರ್ವೆಯಲ್ಲಿ ಕಂಡುಬಂದ ಮಹತ್ವದ ಅಂಶಗಳಿವು. ಅದಕ್ಕೇ ಮಾತೆತ್ತಿದರೆ ಹಿಂದೂಗಳಲ್ಲಿ ಶೋಷಣೆ-ಜಾತಿವಾದ-ಪಂಥೀಯತೆ-ಕೋಮುವಾದ ಎಂದೆಲ್ಲಾ ಬೊಂಬಡಾ ಬಜಾಯಿಸುವ ಈ ದೇಶದ ಸೆಕ್ಯುಲರುಗಳಿಗೆ, ಮತಾಂಧರಿಗೆ ಜಾಣ ಕುರುಡು! ಬುಡಕ್ಕೇ ಕೊಡಲಿಯೇಟು ಬಿದ್ದಾಗ, ಕೂತಿರುವ ಪೀಠವೇ ಸುಡುತ್ತಿರುವಾಗ ಮಾತೆಲ್ಲಿಂದ ಹೊರಟೀತು? ಎಷ್ಟು ದಿನ ಅಂತಾ ಕಣ್ಣೀರು ಸುರಿದೀತು? ಎಷ್ಟು ದಿನ ಕತ್ತಲು ಮುಸುಕಿದ್ದೀತು? ಅದಕ್ಕೇ ಕಪ್ಪು ಪರದೆ ಹರಿದು ಸಣ್ಣದಾದರೂ ಸಶಕ್ತ ಬೆಳಕೊಂದು ನಾಲ್ಕುಗೋಡೆಗಳನ್ನು ಭೇದಿಸಿ ತಲಾಕಿಗೇ ಸವಾಲೆಸೆಯುತ್ತಾ ಹೊರಟಿದೆ. ಅದು ಬರಬರುತ್ತಾ ಕ್ರಾಂತಿಜ್ವಾಲೆಯಾಗಿ ಈ ದೇಶದ ಅಸ್ಮಿತೆಯೊಂದಿಗೆ ಒಂದಾದರೆ ದೇಶಕ್ಕೂ ಲಾಭವೇ!

ಏನಿದು ಬಿ.ಎಂ.ಎಂ.ಎ.?

                  ಜನವರಿ 2007ರಲ್ಲಿ ಆರಂಭಗೊಂಡ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ್, ತನ್ನನ್ನು ತಾನು ಸ್ವತಂತ್ರ, ಜಾತ್ಯಾತೀತ, ಹಕ್ಕುಗಳೇ ಆಧಾರವಾಗುಳ್ಳ, ಮುಸ್ಲಿಮ್ ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿರುವ, ಭಾರತದ ಮುಸ್ಲಿಮರ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಬೃಹತ್ ಸಂಘಟನೆಯೆಂದು ಹೇಳಿಕೊಳ್ಳುತ್ತದೆ. ಭಾರತೀಯ ಸಮಾಜದಲ್ಲಿ ಮುಸ್ಲಿಮರು ಅದರಲ್ಲೂ ಮುಸ್ಲಿಮ್ ಮಹಿಳೆಯರು ತಮ್ಮ ಬಡತನವನ್ನು ನಿವಾರಿಸಿಕೊಂಡು ನ್ಯಾಯ, ಸಮಾನತೆ ಹಾಗೂ ಮಾನವ ಹಕ್ಕುಗಳನ್ನು ಪಡೆದು ಗೌರವಯುತ ಜೀವನವನ್ನು ನಡೆಸಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡುವುದು ತನ್ನ ಉದ್ದೇಶವೆನ್ನುತ್ತದೆ. ಬಿ.ಎಮ್.ಎಮ್.ಎ ನ್ಯಾಯಕ್ಕಾಗಿನ ತನ್ನ ಹೋರಾಟದಲ್ಲಿ ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪ್ರಜಾಪ್ರಭುತ್ವದ ಮೌಲ್ಯಗಳು, ಜಾತ್ಯಾತೀತತೆ, ಸಮಾನತೆ, ಶಾಂತಿ ಹಾಗೂ ಮಾನವ ಹಕ್ಕುಗಳು ತನ್ನ ಮಾರ್ಗದರ್ಶಕ ಸೂತ್ರಗಳೆಂದು ನಂಬುತ್ತದೆ. ಬಿ.ಎಮ್.ಎಮ್.ಎ.ಯಲ್ಲಿ 60ಸಾವಿರಕ್ಕಿಂತಲೂ ಅಧಿಕ ಸದಸ್ಯರಿದ್ದು ಹದಿಮೂರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾರೂ ಬೇಕಾದರೂ ಸದಸ್ಯರಾಗಲು ಅರ್ಹರೆಂದು ಬಿ.ಎಮ್.ಎಮ್.ಎ ಹೇಳಿಕೊಳ್ಳುತ್ತದೆ. ಅದು ಮುಸ್ಲಿಮ್ ಮಹಿಳೆಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ತಮ್ಮ ಶೈಕ್ಷಣಿಕ-ಸಾಮಾಜಿಕ ಅಭಿವೃದ್ಧಿ ಸಾಧಿಸಲು ತಾವೇ ನಾಯಕತ್ವ ವಹಿಸಿ ಮುಂದುವರಿಯಬೇಕೆಂದು ಬಯಸುತ್ತದೆ.

              ಮುಸ್ಲಿಮ್ ಸಮಾಜದ ಸ್ಥಿತಿಗತಿ ಹಾಗೂ ಅಗತ್ಯತೆಗಳನ್ನು ಅರಿತುಕೊಳ್ಳುವುದು, ಮುಸ್ಲಿಮ್ ಮಹಿಳಾ ಸಬಲೀಕರಣ ಹಾಗೂ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ, ನಾಗರಿಕ, ಕಾನೂನಾತ್ಮಕ, ಧಾರ್ಮಿಕ ಹಕ್ಕುಗಳನ್ನು ಖಚಿತಪಡಿಸುವುದು, ಸಾಂವಿಧಾನಿಕ ಅಂಶಗಳಾದ ಸಮಾನತೆ, ಸ್ವತಂತ್ರತೆ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದು, ಮತದ ಬಗ್ಗೆ ಧನಾತ್ಮಕ ಹಾಗೂ ಉದಾರ ವ್ಯಾಖ್ಯಾನವನ್ನು ಪ್ರಸಾರ ಮಾಡಿ ಅವುಗಳಿಂದ ನ್ಯಾಯ, ಸಮಾನತೆ, ಸಮಭಾವ ಹಾಗೂ ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳುವುದು, "ಮುಸ್ಲಿಮ್ ಪರ್ಸನಲ್ ಲಾ"ದಲ್ಲಿ ಕಾನೂನಾತ್ಮಕ ಸುಧಾರಣೆಗಳಿಗೆ ಮುಂದಾಗುವುದು,ಮತೀಯತೆ, ವಿನಾಶಕಾರೀ ಬಂಡವಾಳಶಾಹಿ ವ್ಯವಸ್ಥೆ, ಪಂಥೀಯತೆ, ಸರ್ವಾಧಿಕಾರಿ ಧೋರಣೆಗಳನ್ನು ವಿರೋಧಿಸಿ ಶಾಂತಿ-ನ್ಯಾಯ-ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವುದು, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಇತರ ಸಂಸ್ಥೆ-ಸಂಘಟನೆ, ಚಳುವಳಿಗಳೊಂದಿಗೆ ಸಹಭಾಗಿಯಾಗುವುದು, ಮುಸ್ಲಿಮ್ ಸಮಾಜದಲ್ಲಿನ ಜಾತಿವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು “ದಲಿತ ಮುಸ್ಲಿಮ”ರ ಸಮಸ್ಯೆಗಳನ್ನು ಹೋಗಲಾಡಿಸಲು ದನಿಯೆತ್ತುವುದು. ಮುಸ್ಲಿಮ್ ಸಮಾಜದೊಳಗೆ ಪ್ರತ್ಯೇಕ ಪ್ರಗತಿಪರ ದನಿಯೊಂದನ್ನು ಸೃಷ್ಟಿಸುವುದು ತನ್ನ ಮುಖ್ಯ ಧ್ಯೇಯೋದ್ದೇಶಗಳೆಂದು ಹೇಳಿಕೊಳ್ಳುತ್ತದೆ.

              ಮಹಾರಾಷ್ಟ್ರದ ನವಪಾದ, ಬೆಹ್ರಂಪಾದ, ಗರೀಬ್ ನಗರ್, ಇಂದಿರಾ ನಗರ್, ಪೈಪ್ ಲೈನ್, ಭಾರತ್ ನಗರ್, ಗೋಲಿಬಾರ್ ಜಿಲ್ಲೆಗಳಲ್ಲಿ ಬಿ.ಎಂ.ಎಂ.ಎ. ಕಾರ್ಯಾಚರಿಸುತ್ತಿದೆ. ಬಿಎಂಎಂಎ "ಯುಎನ್ ವುಮೆನ್" ಹಾಗೂ ಫೋರ್ಡ್ ಫೌಂಡೇಶನ್ ಸಹಕಾರದೊಂದಿಗೆ ತನ್ನದೇ ಪ್ರಕಾಶನವನ್ನು ಹೊಂದಿದ್ದು "ಲೊಕೇಟಿಂಗ್ ಮುಸ್ಲಿಮ್ ವುಮೆನ್ ಇನ್ ಇಂಡಿಯನ್ ಪಾಲಿಸಿ" ಇನ್ ಪೀಪಲ್ ಎಟ್ ದ ಮಾರ್ಜಿನ್ಸ್: ವೂಸ್ ಬಡ್ಜೆಟ್? ವೂಸ್ ರೈಟ್ಸ್? ಎನ್ನುವ ಪುಸ್ತಕವನ್ನು ಹೊರತಂದಿದೆ."ಧಾರ್ಮಿಕ ಅಲ್ಪ ಸಂಖ್ಯಾತರ ಸಬಲೀಕರಣ" ಕಾರ್ಯಕ್ರಮದ ಅಂಶಗಳನ್ನು ಅವಲೋಕಿಸಿದಾಗ ಈ ಕಾರ್ಯಕ್ರಮದಿಂದ ಮುಸ್ಲಿಮ್ ಮಹಿಳೆಯರಿಗೆ ಸಿಗುವ ಲಾಭ ಅತ್ಯಲ್ಪ ಎಂದು ಬಿ.ಎಂ.ಎಂ.ಎ. ಪ್ರತಿಪಾದಿಸುತ್ತದೆ. ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಒರಿಸ್ಸಾ ಈ ನಾಲ್ಕು ರಾಜ್ಯಗಳಲ್ಲಿ ಪ್ರಧಾನ ಮಂತ್ರಿಗಳ ಹದಿನೈದು ಅಂಶಗಳ ಕಾರ್ಯಕ್ರಮದ ಅಧ್ಯಯನದಿಂದ ಮಾಹಿತಿ ಕಲೆ ಹಾಕಿದ ಬಿಎಂಎಂಎ ಮುಸ್ಲಿಮ್ ಮಹಿಳೆಯರಿಗಾಗಿ ಈ ಕಾರ್ಯಕ್ರಮದ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಲಹೆ ಮಾಡಿದೆ. ಹುಡುಗಿಯರಿಗಾಗಿ ಪ್ರತ್ಯೇಕ ಶಾಲೆಗಳು, ಎಲ್ಲಾ ಯೋಜನೆಗಳಲ್ಲಿ ಮುಸ್ಲಿಂ ಮಹಿಳೆಗೆ ಪ್ರತಿಯೊಂದು ಮನೆಯಲ್ಲಿ ಪ್ರಾಶಸ್ತ್ಯ ಕಲ್ಪಿಸುವುದು, ಮುಸ್ಲಿಮ್ ಮಹಿಳೆಯರಿಗೆ ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಅವಕಾಶ, ಹೆಚ್ಚಿನ ಬಂಡವಾಳ ಒದಗಿಸುವುದು ಇದರಲ್ಲಿನ ಮುಖ್ಯ ಅಂಶಗಳು.
ಒರಿಸ್ಸಾದ ಮುಸ್ಲಿಮ್ ಮಹಿಳೆಯರಿಗೆ ಸರಕಾರೀ ಯಂತ್ರದ ಬಗ್ಗೆಯಾಗಲೀ ಕಾನೂನಾತ್ಮಕ ವ್ಯವಹಾರಗಳ ಬಗ್ಗೆಯಾಗಲೀ ಸರಿಯಾದ ಶಿಕ್ಷಣವಿರಲಿಲ್ಲ. ತಮ್ಮೊಳಗಿನ ವಿವಾದ ತೊಡಕುಗಳ ನಿವಾರಣೆಗೆ ಅವರು ಗ್ರಾಮದ ಸರಪಂಚ್, ಬಸ್ತಿಯ ಸರ್ದಾರ್ ಅಥವಾ ಖಾಜಿಗಳನ್ನೇ ಅವಲಂಬಿಸಿದ್ದರು. ಇದರಿಂದ ನ್ಯಾಯವೆಂಬುದು ಮರೀಚಿಕೆಯಾಗಿತ್ತು. ಬಿಎಂಎಂಎ ಒರಿಸ್ಸಾದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿನ ಮುಸ್ಲಿಮ್ ಮಹಿಳೆಯರ ಸಹಾಯಕ್ಕೆ ಮುಂದಾಯಿತು. ಸರಕಾರದಿಂದ ತರಬೇತಿ ಪಡೆದ ಪ್ಯಾರಾ ಕಾನೂನು ಸ್ವಯಂಸೇವಕರ ಸಹಾಯದೊಂದಿಗೆ ಬಿಎಂಎಂಎ ಉಚಿತ ಕಾನೂನು ಸಹಾಯ, ಮಹಿಳಾ ಠಾಣೆ, ಮಹಿಳಾ ಜೈಲುಕೋಣೆಗಳನ್ನು ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದೆ. ಇದರ ಫಲವಾಗಿ ಮುಸ್ಲಿಮ್ ಮಹಿಳೆಯರ ಕಾನೂನಾತ್ಮಕ ವಿಚಾರಗಳಲ್ಲಿ ತಮ್ಮ ಮತಗ್ರಂಥದಲ್ಲಿ ಹೇಳಿದ್ದನ್ನು ಅನುಸರಿಸುವ ಬದಲು ನ್ಯಾಯಾಲಯಕ್ಕೆ ಎಡತಾಕುವ ಪರಿಪಾಠ ಆರಂಭವಾಗಿದೆ. ಅಲ್ಲದೆ ಮುಸ್ಲಿಮ್ ಮಹಿಳೆಯರು ಫತ್ವಾಗಳ ವಿರುದ್ಧ ದನಿಯೆತ್ತಲು ಆರಂಭಿಸಿದ್ದಾರೆ. ಬಿಎಂಎಂಎ "ನಿಕಾಹ್ ನಾಮಾ"ದ ಮಾದರಿಯೊಂದನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದು ಖಾಜಿಗಳೊಂದಿಗೆ ಇದರ ಬಗೆಗೆ ಮಾತುಕತೆಯನ್ನೂ ಆರಂಭಿಸಿದೆ.

               ಮುಸ್ಲಿಮ್ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬಿಎಂಎಂಎ ಖಾಜಿಗಗಳನ್ನು ಮಾತುಕತೆಗೆ ಆಹ್ವಾನಿಸಿತು. ನಿಖಾಹ್, ತಲಾಕ್, ಆಸ್ತಿ ಕುರಿತಾದ ಕಾನೂನುಗಳ ಕುರಿತಾದ ಚರ್ಚೆಗೆ ವೇದಿಕೆಯನ್ನೂ ಸಿದ್ಧಪಡಿಸಿತು. ಆದರೆ ಮುಸ್ಲಿಮ್ ಕ್ಲೆರ್ಜಿಗಳು ಚರ್ಚೆಗೆ ಬರದೆ ತಪ್ಪಿಸಿಕೊಂಡರು. ಯಾರು ಚರ್ಚೆಗೆ ಬಂದಿದ್ದರೋ ಅವರ ಕೈಯಲ್ಲಿ ಯಾವುದೇ ಅಧಿಕಾರವಿರಲಿಲ್ಲ.  ಪ್ರವಾದಿ ಮಹಮ್ಮದ್ ಹೇಳಿದ ವಿಧಾನವನ್ನು ಅನುಸರಿಸದೆ ಮೂರು ಸಲ ತಲಾಕ್ ಹೇಳಿ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಆಘಾತಕಾರಿ ಪ್ರಕ್ರಿಯೆಯ ನಿಯಂತ್ರಣ, ದೇಶದ ಕಾನೂನು ಮೂರು ಸಲ ತಲಾಕ್ ಹೇಳಿ ಕೊಡುವ ವಿಚ್ಛೇದನಕ್ಕೆ ಯಾವುದೇ ಮಾನ್ಯತೆ ನೀಡದಿರುವುದು. ತಲಾಕಿಗೊಳಗಾದ ಮಹಿಳೆ ಅತ್ತ ಗಂಡನ ಮನೆಯೂ ಇಲ್ಲದೆ, ಇತ್ತ ತವರು ಮನೆಯ ಆಸರೆಯೂ ಇಲ್ಲದಿರುವಾಗ ಆಕೆಯ ಮುಂದಿನ ಜೀವನಕ್ಕೆ ಸರಿಯಾದ ನಿರ್ದೇಶನ ಇಲ್ಲದಿರುವುದು. ದಾರುಲ್ ಖಾಜಾಗಳ ಬಗ್ಗೆ ಸರಿಯಾದ ಮಾಹಿತಿಯ ಅವಶ್ಯಕತೆ, ವಿಚ್ಛೇದನದ ಸಮಯದಲ್ಲಿ ಕೊಡಬೇಕಾದ ಮೆಹ್ರ್ ಹಾಗೂ ಇದ್ದತ್ ಗಳ ಬಗೆಗಿನ ಸ್ಪಷ್ಟ ನಿರ್ಣಯ, ಅನ್ಯಾಯ-ಶೋಷಣೆಗೊಳಗಾದವರ ಆಶ್ರಯಕ್ಕೆ ಬೇಕಾದ ಅಗತ್ಯ/ತ್ವರಿತ ನಿವಾಸಗಳ ನಿರ್ಮಾಣ ಆ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳಾಗಿದ್ದವು. ತಮ್ಮ ಸಮಾಜದಲ್ಲಿ ಅಂಗವೈಕಲ್ಯ ಹೊಂದಿರುವವರಿಗೆ ಸಹಾಯ ಹಸ್ತ ಚಾಚುವುದು, ಮಹಿಳೆಯರಿಗೆ ಪಡಿತರ ಕಾರ್ಡುಗಳನ್ನು ಒದಗಿಸುವುದು, ಮನೆಮಠ ಕಳೆದುಕೊಂಡವರ ರಕ್ಷಣೆಗೆ ಧಾವಿಸುವುದು, ವಿಚ್ಛೇದನ ಹಾಗೂ ವಿಚ್ಛೇದಿತೆಗೆ ಜೀವನಾಂಶ ಒದಗಿಸಲು ನೆರವಾಗುವುದು, ಸಣ್ಣ ಉದ್ದಿಮೆಗಳ ಆರಂಭಕ್ಕಾಗಿ ಹಣಕಾಸಿನ ನೆರವನ್ನು ಒದಗಿಸುವುದು, ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು, ಆರೋಗ್ಯ ಶಿಬಿರಗಳನ್ನು ನಡೆಸುವುದು, ಸಾಲಸೌಲಭ್ಯಗಳನ್ನು ಒದಗಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಲ್ಲಿ ದೇಶದ ಹದಿಮೂರು ರಾಜ್ಯಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ ಬಿಎಂಎಂಎ.

                ಹಾಗಂತ ಇವರು ಮಾಡುವ ಎಲ್ಲವೂ ಸರಿ ಎನ್ನುವಂತಿಲ್ಲ. ಸಾಚಾರ್ ವರದಿ ಜಾರಿಯಾಗಲಿ ಎಂದು ಸಹಿಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿತ್ತು ಬಿಎಂಎಂಎ!  ಭಾರತದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಎನ್ಜಿಓಗಳಿಗೆ ಹಣ ಸಹಾಯ ಮಾಡುವ ಫೋರ್ಡ್ ಫೌಂಡೇಶನ್ ಇದರ ಹಿಂದಿರುವುದು ಕೂಡಾ ಅನುಮಾನಕ್ಕೆ ಕಾರಣವಾಗಿರುವ ಇನ್ನೊಂದು ಅಂಶವಾಗಿದೆ. ತಮ್ಮೊಳಗಿನ ದಲಿತ ಮುಸ್ಲಿಮರಿಗೆ ಸಹಾಯ ಮಾಡುತ್ತೇವೆ ಎನ್ನುವ ಮೂಲಕ ಹಲವಾರು ಸತ್ಯಗಳನ್ನು ಅವರು ಒಪ್ಪಿಕೊಂಡಂತಾಯಿತು. ಒಂದು ತಮ್ಮವರು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎನ್ನುವುದು. ತಮ್ಮಲ್ಲಿ ಜಾತಿ ವ್ಯವಸ್ಥೆ ಇದೆ ಎನ್ನುವುದು ಇನ್ನೊಂದು. ಮತಾಂತರವಾಗಿ ಬಂದವರನ್ನು ತಮ್ಮವರು ಹೀನವಾಗಿ ನೋಡಿಕೊಳ್ಳುತ್ತಾರೆ ಎನ್ನುವುದು ಮಗದೊಂದು! ಇರಲಿ, ಅದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ತಮ್ಮವರೇ ಉದ್ಧಾರವಾಗಿಲ್ಲ ಎನ್ನುವ ಸತ್ಯ ಕಣ್ಣೆದುರು ಇರುವಾಗ ಈ ರೀತಿಯ ಮತಾಂತರವನ್ನು ಬಿಎಂಎಂಎ ಯಾಕೆ ವಿರೋಧಿಸುವುದಿಲ್ಲ? ತಮ್ಮೊಳಗಿನ ಜಾತಿ ವ್ಯವಸ್ಥೆಯನ್ನು ಯಾಕೆ ವಿರೋಧಿಸುವುದಿಲ್ಲ? ತಮ್ಮ ಹೆಣ್ಣುಮಕ್ಕಳ ವಿವಾಹಕ್ಕೆ ಕಷ್ಟವಾಗಿರುವಾಗ, ತಮ್ಮ ಗಂಡಸರು ಮನಸ್ಸಿಗೆ ಬಂದಷ್ಟು ವಿವಾಹವಾಗುತ್ತಾರೆ ಎನ್ನುವುದು ತಿಳಿದಿರುವಾಗ, ಮದುವೆಯಾಗಿ ತಾವು ಅನುಭವಿಸುತ್ತಿರುವ ಕಷ್ಟಪರಂಪರೆಯ ವಿರುದ್ಧ ಹೋರಾಟಕ್ಕಿಳಿದಿರುವಾಗ ಇನ್ನೊಂದು ಮತದ ಹುಡುಗಿಯನ್ನು ಲಪಟಾಯಿಸುವ ಲವ್ ಜಿಹಾದ್, ಸೆಕ್ಸ್ ಜಿಹಾದಿನಂತಹ ಕ್ರೌರ್ಯಗಳಿಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ? ತನ್ನ ವೆಬ್ ಸೈಟಿನಲ್ಲಿ ಮತಾಂಧತೆಯ ವಿರುದ್ಧ ಹೋರಾಡುತ್ತೇವೆ ಎಂದಿರುವ ಬಿಎಂಎಂಎ ಭಯೋತ್ಪಾದನೆ ವಿರುದ್ಧ ಕನಿಷ್ಟ ಹೇಳಿಕೆ ಕೊಟ್ಟದ್ದನ್ನು ಯಾರೂ ಕೇಳಿದ್ದಿಲ್ಲ!

             ಪರಿವರ್ತನೆ ಜಗದ ನಿಯಮ. ಇಸ್ಲಾಮಿನ ಮತಾಂಧತೆಯನ್ನು ಸುಡಬೇಕಾದರೆ ಅವರ ಹೆಣ್ಣುಮಕ್ಕಳೇ ಎದ್ದೇಳಬೇಕು. ಅಂತಹ ಕ್ಷೀಣ ಸಾಧ್ಯತೆಯೊಂದು ಗೋಚರಿಸುತ್ತಿದೆ. ಅಲ್ಲಲ್ಲಿ ಫತ್ವಾಗಳ ವಿರುದ್ಧ, ಮತಾಂಧ ಮಾನಸಿಕತೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿ ಆರಂಭವಾಗಿದೆ. ಅಮೇರಿಕಾದಲ್ಲಿ ಮುಸ್ಲಿಮ್ ಮಹಿಳೆಯರು ತಮಗಾಗಿಯೇ ಪ್ರತ್ಯೇಕ ಮಸೀದಿಯನ್ನೇ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಸೆಪ್ಟೆಂಬರ್ 15ರಂದು ಫ್ರಾನ್ಸಿನಲ್ಲಿ ಸಮ್ಮೇಳನವೊಂದರಲ್ಲಿ ಫತ್ವಾ ಹೊರಡಿಸುವ ಮೌಲ್ವಿಗಳಿಬ್ಬರು ಮಹಿಳಾ ಸಮಾನತೆಯನ್ನು ಟೀಕಿಸುತ್ತಿದ್ದಾಗ ವಿವಸ್ತ್ರರಾಗಿ ಮುಸ್ಲಿಮ್ ಮಹಿಳೆಯರಿಬ್ಬರು ಪ್ರತಿಭಟನೆ ನಡೆಸಿದ್ದು ಮತಾಂಧರನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಕಪ್ಪು ಪರದೆ-ಕತ್ತಲ ಕೋಣೆಯಂದ ಹೊರಬಂದು ಕನಿಷ್ಟ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೆಲ ಮನಸ್ಸುಗಳು ಮುಂದಾಗಿವೆ ಎನ್ನುವುದೇ ವಿಶೇಷ! ಈ ಹೋರಾಟದಿಂದ ಮುಸ್ಲಿಮ್ ಜಗತ್ತಿನಲ್ಲಿ ಪರಿವರ್ತನೆಯಾದರೆ ಅದರಿಂದ ದೇಶಕ್ಕೂ ಒಳ್ಳೆಯದು, ಪ್ರಪಂಚಕ್ಕೂ, ಇಸ್ಲಾಮಿಗೂ!