ಪುಟಗಳು

ಶುಕ್ರವಾರ, ನವೆಂಬರ್ 26, 2021

ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ

 ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ


ಇದ್ದಕ್ಕಿದ್ದಂತೆ ಸುಲ್ತಾನ ತಾನು "ಹಿಂದೂ" ಎಂದು ಉದ್ಘೋಷಿಸಿಕೊಂಡ. ತನ್ನ ಶ್ರದ್ಧೆ ಇನ್ನು ಹಿಂದೂ ಧರ್ಮದಲ್ಲಿ ಎಂದು ಘೋಷಿಸಿ ಅದನ್ನು ಕಾರ್ಯಗತಗೊಳಿಸಿದ. ಹಿಂದೂಗಳ ಮುಖಕ್ಕೆ ಉಗುಳುತ್ತಿದ್ದ ಮುಸಲರು ಬಗ್ಗಿ ನಮಸ್ಕಾರ ಮಾಡಲು ಆರಂಭಿಸಿದರು.  ಅರಮನೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡವು. ವೇದ ಮಂತ್ರ ಘೋಷ ಉಚ್ಚಕಂಠದಲ್ಲಿ ಮೊಳಗಿತು. ಭಾಂಗಿನ ಬದಲು ಘಂಟಾನಾದ, ಶಂಖಾನಾದ ಕೇಳಲಾರಂಭಿಸಿತು. ಮಹೋನ್ನತ ಆರತಿಗಳ ದಿವ್ಯ ಬೆಳಕಿನಲ್ಲಿ ದೇವತೆಗಳ ವಿಗ್ರಹಗಳ ಭವ್ಯ ಸ್ವರೂಪ ಕಣ್ಣುಕೋರೈಸಲಾರಂಭಿಸಿತು. ಕುರಾನಿನ ಅಯಾತ್'ಗಳ ಜಾಗದಲ್ಲಿ ಪೂಜೆ, ಭಜನೆಗಳು ನಡೆಯತೊಡಗಿದವು. ಜಿಜಿಯಾ ತಲೆಗಂದಾಯದ ಹೊರೆ ಇಳಿಯಿತು. ತೀರ್ಥಸ್ನಾನಗಳ ನಿಷೇಧವೂ ಅಳಿಯಿತು. ಹಲವು ವರ್ಷಗಳ ಬಳಿಕ ಸ್ವಾತಂತ್ರ್ಯದ, ಸಮಾನತೆಯ ಸವಿಯನ್ನುಂಡ ಹಿಂದೂಗಳ ಸಂಭ್ರಮ ಮೇರೆ ಮೀರಿತು. 



ಇದೇನು ಮುಸಲ್ಮಾನ ರಾಜನೊಬ್ಬ ಸ್ವ ಇಚ್ಛೆಯಿಂದ ಹಿಂದೂವಾಗುವುದು? ಸಾಧ್ಯವೇ ಇಲ್ಲ;  ಕಾಗಕ್ಕ-ಗುಬ್ಬಕ್ಕ ಕಥೆ ಇರಬೇಕು ಎಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಭಾರತದ ಇತಿಹಾಸದಲ್ಲಿ ಇಂತಹಾ ಒಂದು ಘಟನೆ ಮುಸಲರು ಪ್ರಬಲರಾಗಿದ್ದ ಕಾಲದಲ್ಲೇ ನಡೆದಿತ್ತು. ಆದರೆ ಹಿಂದೂ ಪ್ರಜ್ಞೆ ಉದ್ದೀಪನಗೊಂಡು ಪ್ರಜ್ವಲಿಸಿದ್ದನ್ನು ನಮ್ಮ ಇತಿಹಾಸಕಾರರು ಎಂದಾದರೂ ಬರೆದದ್ದಿದೆಯೇ? ಅಲ್ಲಾವುದ್ದೀನ್ ಖಿಲ್ಜಿ 1298ರಲ್ಲಿ ಗುಜರಾತಿಗೆ ದಾಳಿ ಮಾಡಿದಾಗ ಸೆರೆ ಸಿಕ್ಕಿದ ಓರ್ವ ಸುಂದರ ಬಾಲಕನನ್ನು ತನ್ನ ಸೇವಕನನ್ನಾಗಿಸಿಕೊಂಡ. ಮಲಿಕ್-ಕಾಫರನ ವೃತ್ತಾಂತದಂತೆಯೇ ಈತನ ಕಥೆಯೂ ಇದೆ. ಮಲಿಕ್-ಕಾಫರ್ ಹಿಂದೂಧರ್ಮಕ್ಕೆ ಕಂಟಕನಾಗಿ ಬಳಿಕ ಖಿಲ್ಜಿಯನ್ನೇ ಕೊಂದು ಸಿಂಹಾಸನವೇರಿ ಒಂದೇ ತಿಂಗಳಲ್ಲಿ ಕೊಲೆಯಾಗಿ ಹೋದರೆ ಈ ಚಾಣಾಕ್ಷ ಸಮಯ ಕಾದು ಕೆಲಸ ಸಾಧಿಸಿ ಹಿಂದುತ್ವವನ್ನು ಎತ್ತಿ ಹಿಡಿದ. ಈ ಹುಡುಗನನ್ನು ಮತಾಂತರಿಸಿ ಹಸನ್ ಎಂದು ಹೆಸರಿಟ್ಟು ಸುಲ್ತಾನ ಹಾಗೂ ಅವನ ಆಸ್ಥಾನಿಕರು ತಮ್ಮ ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳಲಾರಂಭಿಸಿದರು. ಶೀಘ್ರದಲ್ಲೇ ಯುದ್ಧ ವಿದ್ಯೆ ಕಲಿತ, ಅಪಾರ ಚಾಣಾಕ್ಷಮತಿಯೂ ಆಗಿದ್ದ ಇವನ ಹೆಸರನ್ನು ಖುಸ್ರುಖಾನ್ ಎಂದು ಬದಲಾಯಿಸಿ ಸೇನಾನಾಯಕನನ್ನಾಗಿಸಿ ಯುದ್ಧಕ್ಕೆ ಕಳುಹಿಸಲಾರಂಭಿಸಿದ ಅಲ್ಲಾವುದ್ದೀನ. ಮಲಿಕ್-ಕಾಫರನ ಬಳಿಕ ಅಲ್ಲಾವುದ್ದೀನನ ಮಗ ಮುಬಾರಿಕ್'ಗೆ ದೆಹಲಿಯ ಪಟ್ಟ ಸಿಕ್ಕಿತು. ಮುಬಾರಿಕ್ ನೊಡನೆ ವಿಶೇಷ ಸ್ನೇಹದಿಂದ ಇದ್ದ ಖುಸ್ರುಖಾನ್ ಮುಬಾರಿಕ್ ಪಟ್ಟ ಏರಲು ವಿಶೇಷ ಸಹಾಯವನ್ನೂ ಮಾಡಿದ. ಮಾತ್ರವಲ್ಲ ಆಡಳಿತ ಸೂತ್ರಗಳೆಲ್ಲವೂ ಬುದ್ಧಿವಂತನಾದ ಈತನ ಕೈಗೇ ಬಂತು. ಜೊತೆಗೆ ಮುಬಾರಿಕ್ನ ಅಂತಃಪುರದ ಲೈಂಗಿಕ ವ್ಯವಹಾರಗಳ ಮೇಲ್ವಿಚಾರಣೆಯೂ! ಅಲ್ಲಿ...ಅಲ್ಲಿ ಅವನಿಗೆ ಆಕೆಯ ಪರಿಚಯವಾಯಿತು.


ದೇವಲ ದೇವಿ. ಆಕೆಯದ್ದು ಆ ಕಾಲದ ಬಹುತೇಕ ಹಿಂದೂ ರಾಣಿಯರಂತೆ ದುರಂತ ಅಧ್ಯಾಯ. ಅಲ್ಲಾವುದ್ದೀನ್ ಗುಜರಾತನ್ನು ಆಕ್ರಮಿಸಿ ಅಲ್ಲಿನ ರಾಜನನ್ನು ಸೋಲಿಸಿ ಆತನ ರಾಣಿ ಕಮಲಾದೇವಿಯನ್ನು ಹೊತ್ತು ತಂದ. ತನ್ನ ಮಗಳು ದೇವಲದೇವಿಯೊಂದಿಗೆ ಮುಸಲ್ಮಾನ ರಕ್ಕಸರ ಕಣ್ಣುತಪ್ಪಿಸಿ ಕಾಡುಮೇಡು ಅಲೆದ ರಾಜ. ರಕ್ಷಣೆಗಾಗಿ ದೇವಗಿರಿಯ ಶಂಕರದೇವನೊಂದಿಗೆ ಆಕೆಯ ವಿವಾಹವೇನೋ ಆಯಿತು. ಆದರೆ ಅಲ್ಲಾವುದ್ದೀನ್ ಎಂಬ ರಕ್ಕಸನ ಜನಾನಾ ಸೇರಿದ್ದ ಆಕೆಯ ತಾಯಿ ಕಮಲಾದೇವಿ ಮಗಳನ್ನು ಹುಡುಕಿಸಿ ತಂದು ಇಸ್ಲಾಮಿಗೆ ಸೇರಿಸಬೇಕೆಂಬ ಆಸೆ ವ್ಯಕ್ತಪಡಿಸಿದಳಂತೆ! ಆ ಸಮಯದಲ್ಲೇ ದೇವಗಿರಿಯನ್ನು ಮತ್ತೆ  ಮುತ್ತಿದ ಮಲಿಕ್-ಕಾಫರ್ ದೇವಲ ದೇವಿಯನ್ನು ಸೆರೆ ಹಿಡಿದು ದೆಹಲಿಗೆ ರವಾನಿಸಿದ. ಅಲ್ಲಿ ಅಲ್ಲಾವುದ್ದೀನನ ಹಿರಿ ಮಗ ಖಿಜ್ರಾಖಾನ್ ಜೊತೆ ಆಕೆಗೆ ಮದುವೆ ಮಾಡಿಸಲಾಯಿತು. ಅಲ್ಲಾವುದ್ದೀನ ಸತ್ತಾಗ ಖಿಜ್ರಾಖಾನನನ್ನು ಬಂಧಿಸಿ ಆತನ ಕಣ್ಣುಕಿತ್ತು ಸಾಯಿಸಿದ ಮುಬಾರಿಕ್ ದೇವಲ ದೇವಿಯನ್ನು ತಾನು ವಿವಾಹವಾದ. ಹೀಗೆ ನರಕಮಯವಾದ ಜೀವನವನ್ನು ಆಕೆ ಸವೆಯುವಂತಾದರೂ ಆಕೆ ಹಿಂದೂವಾಗಿಯೇ ಉಳಿದಿದ್ದಳು. ಅಲ್ಲಿಯವರೆಗೆ ಮಡುಗಟ್ಟಿದ್ದ ಆಕ್ರೋಶಕ್ಕೆ ತಂಪೆರೆಯುವಂತೆ ತನ್ನಂತೆಯೇ ದೌರ್ಜನ್ಯಕ್ಕೆ ಗುರಿಯಾಗಿ ಎದೆಯಲ್ಲಿ ಅಪಾರ ಸೇಡು-ವಿದ್ವೇಷಗಳನ್ನು ಹೊತ್ತಿದ್ದ ಖುಸ್ರುಖಾನ್'ನ ಸಂಪರ್ಕವಾಯಿತು. ಆ ಕ್ಷೀಣ ಅವಕಾಶದ ಬೆಳಕೇ ಸತತ ಅತ್ಯಾಚಾರಕ್ಕೀಡಾಗುತ್ತಿದ್ದರೂ ಆಕೆಯ ಮನಸ್ಸನ್ನು ಪ್ರಫುಲ್ಲಗೊಳಿಸಿ ರಾಣಿಯಾಗಿ ತನ್ನ ಅಧಿಕಾರವನ್ನು ಚಲಾಯಿಸುವ ಹುಮ್ಮಸ್ಸನ್ನೂ ಆಕೆಯಲ್ಲಿ ಹುಟ್ಟಿಸಿತು. 


ಮುಬಾರಿಕ್ ಲಂಪಟನಾಗಿದ್ದ. ಹೆಂಗಸರಂತೆ ವೇಶ ಹಾಕಿ ತನ್ನ ಹುಡುಗಿಯರ ದಂಡಿನೊಡನೆ ಕುಣಿಯುತ್ತಿದ್ದ. ಆಡಳಿತದಲ್ಲಂತೂ ತನ್ನ ಗುಲಾಮ ಖುಸ್ರುಖಾನನ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದ. ಆ ಸಮಯದಲ್ಲಿ ಖುಸ್ರುಖಾನನಿಗೆ ತನ್ನ ಪೂರ್ವದ ಅಸ್ಮಿತೆಯ ಅರಿವು ತಾನಾಗಿ ಮೇಲೆದ್ದಿತು. ದೇವಲದೇವಿಯ ಸಂಪರ್ಕ ಸಿಕ್ಕಿದ ನಂತರವಂತೂ ಈ ಇಬ್ಬರೂ ಗುಜರಾತಿಗರೂ ಒಂದಾಗಿ ಕತ್ತಿ ಮಸೆಯಲು ಶುರುವಿಟ್ಟರು. ಹಿಂದೂಗಳ ಗೌರವವನ್ನು ಪುನರ್ ಸ್ಥಾಪಿಸಲು ಈರ್ವರೂ ಜೊತೆಯಾಗಿ ತಂತ್ರಗಳನ್ನು ಹೆಣೆಯತೊಡಗಿದರು. ಖುಸ್ರು ತನ್ನ ಅಣ್ಣನನ್ನು ಗುಜರಾತಿನ ರಾಜ್ಯವ್ಯಾಪಾರಿಯನ್ನಾಗಿಸಿದ. ತನ್ನ ಅಂಗರಕ್ಷಕರನ್ನಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಸೇನಾವೀರರನ್ನು ನಿಯುಕ್ತಿಗೊಳಿಸಿದ. ಅವನೇ ಸೇನಾಧಿಪತಿಯೂ ರಾಜನ ಆಪ್ತನಾಗಿ ರಾಜ್ಯವ್ಯವಹಾರಗಳನ್ನು ನೋಡಿಕೊಳ್ಳುವವನೂ ಆಗಿದ್ದ ಕಾರಣ ಪ್ರಶ್ನಿಸಲು ಯಾರಿಗೂ ಹಕ್ಕಿರಲಿಲ್ಲ. ತನ್ನ ನಡೆಗಳನ್ನು ಕಂಡು ರಾಜನಿಗೆ ದೂರು ನೀಡುತ್ತಿದ್ದ ಸುಲ್ತಾನನ ಒಡ್ಡೊಲಗದ ಹಿರಿತಲೆಗಳನ್ನು ಮುಗುಮ್ಮಾಗುಳಿಸಲು ಅರಸನನ್ನೇ ಪ್ರೇರೇಪಿಸಿ ಅವನನ್ನೇ ಮುಂದಿಟ್ಟುಕೊಂಡು ದಕ್ಷಿಣದ ಕಡೆ ದಂಡಯಾತ್ರೆ ನಡೆಸಿ ಹಿಂದೂರಾಜರನ್ನು ಸೋಲಿಸಿ ಖಜಾನೆಯನ್ನು ತುಂಬಿಸಿದ. ಸ್ವಲ್ಪಕಾಲದ ಬಳಿಕ ತಾನೊಬ್ಬನೇ ದಕ್ಷಿಣಕ್ಕೆ ದಂಡಯಾತ್ರೆ ನಡೆಸಿ ಮಲಬಾರಿನ ರಾಜನನ್ನು ಸೋಲಿಸಿದ. ಆದರೆ ಈ ಅವಧಿಯಲ್ಲಿ ದಕ್ಷಿಣದಲ್ಲಿ ಅಲ್ಲಲ್ಲಿ ಹಿಂದೂ ರಾಜರು ಸುಲ್ತಾನನ ವಿರುದ್ಧ ದಂಗೆಯೆದ್ದರು. ಇದರ ಸೂತ್ರಧಾರ ಖುಸ್ರುಖಾನ್ ಎಂದು ಅವನ ಶತ್ರುಗಳು ಸುಲ್ತಾನನಿಗೆ ದೂರುಕೊಟ್ಟರು. ದೆಹಲಿಯಲ್ಲಂತೂ "ಹಿಂದೂ ಅರಸರು, ಸರದಾರರು, ಸೇನೆಗಳು ಸುಲ್ತಾನನ ಮೇಲೆ ಯೋಜಿಸುತ್ತಿರುವ ಕ್ರಾಂತಿಗೆ ರೂಪುರೇಷೆ ಹಾಕಿದವ ಖುಸ್ರುಖಾನನೇ. ಗುಜರಾತಲ್ಲಿ ಖುಸ್ರುಖಾನನ ಸೋದರನೇ ಆಡಳಿತ ಸೂತ್ರ ಹಿಡಿದು, ರಜಪೂತರೆಲ್ಲಾ ರಾಣಾ ಹಮ್ಮೀರನ ನೇತೃತ್ವದಲ್ಲಿ ದೆಹಲಿಯಿಂದ ಮುಸಲರನ್ನು ಕಿತ್ತೆಸೆಯುತ್ತಾರೆ. ರಾಣಿ ದೇವಲದೇವಿಯ ಆದೇಶದ ಮೇರೆಗೆ ಖುಸ್ರುಖಾನ್ ಕಾರ್ಯಾಚರಿಸುತ್ತಿದ್ದಾನೆ" ಎಂದು ಮುಂತಾದ ಗುಲ್ಲೆಬ್ಬಿತು. ಆದರೆ ಸುಲ್ತಾನನಿಗೆ ಯಾವುದೇ ಗುಮಾನಿ ಬರದಂತೆ ಯುದ್ಧದಲ್ಲಿ ಗೆದ್ದ ಸಂಪತ್ತನ್ನೆಲ್ಲಾ ಅವನ ಪದತಲಕ್ಕೆ ಅರ್ಪಿಸಿ ಖುಸ್ರುಖಾನನೂ, ತನ್ನ ಹೃದಯದ ಭಾವನೆ ಹೊರಗೆ ಬಾರದಂತೆ ವರ್ತಿಸುತ್ತಿದ್ದ ದೇವಲದೇವಿಯೂ ತಮ್ಮಂಥ ಇಸ್ಲಾಮ್ ನಿಷ್ಠರು ಇನ್ನೊಬ್ಬರಿಲ್ಲ ಎಂಬ ಭಾವನೆ ಬಿತ್ತುತ್ತಿದ್ದುದರಿಂದ ಹಿಂದೂ ವಿರೋಧಿಗಳಿಗೆ ಕೈಕೈ ಹಿಸುಕಿಕೊಳ್ಳುವುದಲ್ಲದೆ ಬೇರೆ ದಾರಿಯಿರಲಿಲ್ಲ. ಖುಸ್ರುಖಾನ್ ತಂದ ಸಂಪತ್ತಿನ ರಾಶಿಯನ್ನು ಕಂಡು ಮುಬಾರಿಕ್ ಆತನನ್ನು ಬಂಧಿಸುವ ಬದಲು ಉಳಿದೆಲ್ಲಾ ಆಡಳಿತ ವಲಯಗಳನ್ನೂ ಅವನ ಸುಪರ್ದಿಗೆ ಒಪ್ಪಿಸಿಬಿಟ್ಟ! 


ಆಡಳಿತಾಧಿಕಾರಿಯಾದದ್ದೇ ತಡ, ಖುಸ್ರು ಖಾನ್ ಹಿಂದಕ್ಕೆ ಅಲ್ಲಾವುದ್ದೀನ ಹಿಂದೂಗಳ ಮೇಲೆ ವಿಧಿಸಿದ್ದ ಅತಿಯಾದ ನಿಷೇಧಗಳನ್ನೆಲ್ಲಾ ಒಂದೊಂದಾಗಿ ತೆರವುಗೊಳಿಸುತ್ತಾ ಬಂದ. ಹಿಂದೂಗಳಿಗೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿದ. ಮುಸಲ್ಮಾನರ ಉಗ್ರದಂಡನೆಗಳಿಂದ ಹೈರಾಣಾಗಿದ್ದ ಹಿಂದೂಗಳಲ್ಲಿ ಸಂತೋಷ ಸಮಾಧಾನಗಳು ತುಂಬಿ ಖುಸ್ರುಖಾನ ತಮ್ಮ ರಕ್ಷಕನೆಂದೇ ಅವರು ಭಾವಿಸತೊಡಗಿದರು. ಹಿಂದೂಗಳು ಮಾತ್ರವಲ್ಲದೆ ಮುಸಲ್ಮಾನ ರೈತರ ಮೇಲೆ ಹಾಕಿದ ಕರಭಾರವನ್ನು ಇಳಿಸಿದ. ರಣರಂಗದಲ್ಲಿ ಅವನ ಶೌರ್ಯ, ಸಮಾನ ದೃಷ್ಟಿ, ಆಡಳಿತ ನೈಪುಣ್ಯ ಹಾಗೂ ಕಟ್ಟುನಿಟ್ಟನ್ನು ಕಂಡ ಪ್ರತಿಷ್ಠಿತ ಮುಸಲ್ಮಾನರಲ್ಲಿ ಹಲವರು ದುರ್ನಡತೆಯ ಮುಬಾರಕನಿಗಿಂತ ಇವನೇ ಉತ್ತಮ ಎಂಬ ಭಾವನೆ ಉದಿಸಿ ಅವನ ಪರ ವಾಲಿದರು. ಇಂತಹಾ ಪೂರಕ ವಾತಾವರಣವನ್ನು ಸೃಷ್ಟಿಸಿದ ಬಳಿಕ ಖುಸ್ರುಖಾನ ಹಾಗೂ ದೇವಲದೇವಿ ಜೋಡಿ ತಮ್ಮ ಮಹತ್ವಾಕಾಂಕ್ಷೆಯ ಕ್ರಾಂತಿಯನ್ನು ಉದ್ಘೋಷಿಸಲು ಕಾಲ ಪಕ್ವವಾಗಿದೆಯೆಂದು ತಿಳಿದು ಅದಕ್ಕೆ ಸನ್ನದ್ಧರಾದರು.


ಒಂದು ದಿನ ಸುಲ್ತಾನ ಮುಬಾರಿಕ್ ಬಳಿ ಖುಸ್ರು "ನನ್ನ ಮಾತಿಗೆ ಓಗೊಟ್ಟು ಸಾವಿರಾರು ಮಂದಿ ಹಿಂದೂಗಳು ಇಸ್ಲಾಂ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಆದರೆ ಸರ್ವರ ಸಮ್ಮುಖದಲ್ಲಿ ಮತಾಂತರಗೊಳ್ಲಲು ಅವರಿಗೆ ಸಂಕೋಚವಿದೆ. ಅದಕ್ಕಾಗಿ ನಾನು ಕೆಲವು ಆಯ್ದ ಪ್ರಮುಖರನ್ನು ಅರಮನೆಗೆ ಕರೆತರುತ್ತೇನೆ. ಅವರಿಗೆ ಇಸ್ಲಾಂ ದೀಕ್ಷೆ ನೀಡಬೇಕು" ಎಂದು ಭಿನ್ನವಿಸಿಕೊಂಡ. ಅರಸನ ಒಪ್ಪಿಗೆಯನ್ನು ಗಿಟ್ಟಿಸಿಕೊಂಡು ಈ ನೆಪದಲ್ಲಿ ತನ್ನ ನಂಬುಗೆಯವರನ್ನು ಅರಮನೆಯೊಳಗೆ ಕರೆಸಿಕೊಂಡು ಆಯಕಟ್ಟಿನ ಸ್ಥಾನಗಳಲ್ಲಿ ನೇಮಿಸಿದ. ಆತನ ಸೋದರ ಗುಜರಾತಿನಲ್ಲಿ ಮುಸ್ಲಿಮರ ಆಳ್ವಿಕೆಯನ್ನು ಕೊನೆಗಾಣಿಸಲು ದಂಗೆಯನ್ನು ಆರಂಭಿಸಿ 25ಸಾವಿರ ಹಿಂದೂ ಸೈನಿಕರನ್ನು ಖುಸ್ರುಖಾನನ ಸಹಾಯಕ್ಕೆ ಕಳುಹಿಸಿದ. ಕೆಲವೇ ದಿನಗಳಲ್ಲಿ ರಾತ್ರೋರಾತ್ರಿ ಸುಲ್ತಾನ್ ಮುಬಾರಿಕ್ ನ ಕೊಲೆಯಾಗಿ ಹೋಯಿತು. ಮುಸ್ಲಿಮರ ಆಳ್ವಿಕೆಯಲ್ಲಿ ದೆಹಲಿಯ ಅರಮನೆಗಳಲ್ಲಿ ಸುಲ್ತಾನನ ಕೊಲೆ, ರಕ್ತಪಾತಗಳೇನು ಹೊಸವಿಷಯಗಳಲ್ಲ. ಅಲ್ಲಾವುದ್ದೀನನನ್ನು ಮಲಿಕ್-ಕಾಫರ್ ಕೊಂದಿದ್ದ; ಆತನನ್ನು ಮುಬಾರಿಕ್ ಕೊಂದಿದ್ದ. ಇದಾದ ಕೆಲವೇ ದಿನಗಳಲ್ಲಿ ಖುಸ್ರುಖಾನನ ಕಡೆಯವರೇ ಮುಬಾರಿಕನನ್ನು ಮಸಣಕ್ಕಟ್ಟಿದರೆಂದೂ ಸುದ್ದಿಯೂ, ಖುಸ್ರುಖಾನನೇ ಇನ್ನು ಮುಂದೆ ಸುಲ್ತಾನನೆಂದು ರಾಜಾದೇಶವೂ ಒಟ್ಟೊಟ್ಟಿಗೆ ಜನರ ಕಿವಿಗೆ ಬಿದ್ದು ಮುಸ್ಲಿಮರ ಜಂಘಾಬಲವೇ ಉಡುಗಿ ಹೋಯಿತು. ಜೊತೆಗೆ ಖುಸ್ರುಖಾನ್ ದೇವಲದೇವಿಯನ್ನು ವಿವಾಹವೂ ಆದ. ಇದಿಷ್ಟೇ ಆಗಿದ್ದರೆ ಬರೇ ಎಂದಿನ ರಾಜಕೀಯ ಕ್ರಾಂತಿಯೆಂದು ಜನ ಸುಮ್ಮನಾಗುತ್ತಿದ್ದರು. ಖುಸ್ರುಖಾನ ದೇವಲದೇವಿಯರು ಜೊತೆಗೂಡಿ ಮಾಡಿದ ಘೋಷಣೆಯೊಂದು ಮುಸ್ಲಿಮರ ಪಾದದಡಿಯ ಭೂಮಿ ಕಂಪಿಸುವಂತೆ ಮಾಡಿತು. ಅವರಿಬ್ಬರೂ ಜೊತೆಗೂಡಿ ಧಾರ್ಮಿಕ ಕ್ರಾಂತಿಗೂ ನಾಂದಿ ಹಾಡಿದ್ದರು. 1320ರ ಏಪ್ರಿಲ್ 15ರಂದು "ಹಿಂದೂವಾಗಿದ್ದ ನನ್ನನ್ನು ಇಸ್ಲಾಂಗೆ ಪರಿವರ್ತಿಸಿ ನನ್ನ ಜೀವನವನ್ನು ನರಕಮಯಗೊಳಿಸಲಾಗಿತ್ತು. ಇವತ್ತು ಈ ಹೇಯ ಮುಸಲ ಬದುಕನ್ನು ಕೊನೆಗೊಳಿಸಿ ಮತ್ತೆ ಹಿಂದೂಧರ್ಮವನ್ನು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ನರನಾಡಿಗಳಲ್ಲಿ ಹಿಂದೂ ರಕ್ತವೇ ಹರಿಯುತ್ತಿದೆ. ಹಿಂದೂಧರ್ಮವೇ ನನ್ನ ಜೀವಾಳ. ನಾನೊಬ್ಬ ಹಿಂದೂ ಎಂದು ಘಂಟಾಘೋಷವಾಗಿ ಸಾರುತ್ತಿದ್ದೇನೆ. ನಾನೀಗ ಅಖಂಡ ಭಾರತದ ಹಿಂದೂ ಚಕ್ರವರ್ತಿ. ಅಸಹಾಯಕಳಾಗಿ ಇಷ್ಟವಿಲ್ಲದ ಮದುವೆಗಳಿಂದ ಬೇಸತ್ತು ಇಸ್ಲಾಂನಡಿ ಬದುಕಿ ಈಗ ನನ್ನ ಧರ್ಮಪತ್ನಿಯಾಗಿರುವ ದೇವಲದೇವಿಯೂ ಇಸ್ಲಾಂನ್ನು ಧಿಕ್ಕರಿಸಿ ಹಿಂದೂ ಸಾಮ್ರಾಜ್ಞಿಯಾಗಿ ಬದುಕುತ್ತಾಳೆ. ಇಸ್ಲಾಂ ಮತೀಯರಾಗಿದ್ದರಿಂದ ತಟ್ಟಿದ್ದ ಪಾಪವನ್ನು ನಮ್ಮ ಈ ಪವಿತ್ರ ಪ್ರಜ್ಞೆ ತೊಡೆದು ಹಾಕಲಿ" ಎಂದು ಖುಸ್ರುಖಾನ್ ಘೋಷಣೆ ಮಾಡಿದ.


ವಿಚಿತ್ರವೆಂದರೆ ಹಿಂದೂವಾದರೂ ಅರಸ ತನ್ನ ಹೆಸರನ್ನು ನಾಸಿರ್-ಉದ್-ದೀನ್ ಎಂದು ಇಟ್ಟುಕೊಂಡ. ಅಪಾರವಾದ ಇಸ್ಲಾಂನ ಹಿಂಸೆಯನ್ನುಂಡು ಅವನ ಮೂಲ ಹೆಸರೇ ಅವನಿಗೆ ಮರೆತು ಹೋಗಿರಬೇಕು. ಆದರೆ ಅವನ ಮುಂದಿನ ಕಾರ್ಯದಲ್ಲಿ ಮಾತ್ರ ಹಿಂದೂ ಶ್ರದ್ಧೆಯೇ ಅಡಗಿತ್ತು. ಅಸಲಿಗೆ ನಾಸಿರ್-ಉದ್-ದೀನ್ ಎನ್ನುವುದರ ಅರ್ಥ ಧರ್ಮಶ್ರದ್ಧೆಯನ್ನು ಉಳಿಸಿಕೊಳ್ಳುವಾತ ಎಂದೇ. ತನ್ನ ಶ್ರದ್ಧೆ ಇನ್ನು ಮುಂದೆ ಹಿಂದೂ ಧರ್ಮದಲ್ಲಿ ಎಂದು ಅವನ ಉದ್ಘೋಷ ಸ್ಪಷ್ಟಪಡಿಸಿತ್ತು. ಹೀಗೆ ಘೋಷಣೆಯಾದ ಮರುಕ್ಷಣವೇ ಹಿಂದೂರಾಜ್ಯಗಳನ್ನು ಲೂಟಿಗೈದು ಸಂಗ್ರಹಿಸಿದ್ದ ಅಪಾರ ಸಂಪತ್ತನ್ನು ಹಿಂದೂ ಸೇನಾನಿ, ಸಾಮಾನ್ಯ ಹಿಂದೂ ಸೈನಿಕರಿಗೆಲ್ಲಾ ಹಂಚಿದ. ಸೈನಿಕರ ವೇತನಗಳೂ ಹೆಚ್ಚಳಗೊಂಡವು. ರೈತಾಪಿ ವರ್ಗದ ಮೇಲಿನ ತೆರಿಗೆಗಳೂ ಕಡಿತಗೊಂಡವು. ಧರ್ಮದ ಕಾರಣಕ್ಕಾಗಿ ಸೆರೆಯಲ್ಲಿದ್ದ ಹಿಂದೂಗಳನ್ನು, ಸುಲ್ತಾನನಿಗೆ ವಿರೋಧ ವ್ಯಕ್ತಪಡಿಸಿದ ಸಣ್ಣಪುಟ್ಟ ಕಾರಣಗಳಿಗೆ ಸೆರೆಯಾಗಿದ್ದ ಮುಸ್ಲಿಮರನ್ನೂ ಬಂಧನದಿಂದ ಮುಕ್ತಗೊಳಿಸಿದ. ಆಡಳಿತದಲ್ಲಿ ಸಮಾನದೃಷ್ಟಿಯನ್ನು ಇಟ್ಟುಕೊಂಡ ಕಾರಣ ಅವನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. 



ಹಿಂದೂಗಳನ್ನು ಬಸವಳಿಯುವಂತೆ ಮಾಡಿದ್ದ ಜಿಜಿಯಾ ತಲೆಗಂದಾಯವನ್ನು ತೆಗೆದು ಹಾಕಿ ಹಿಂದೂಗಳ ನೆಮ್ಮದಿಗೆ ಕಾರಣನಾದ. ತೀರ್ಥಯಾತ್ರೆ, ತೀರ್ಥಸ್ನಾನಗಳ ಮೇಲಿದ್ದ ನಿಷೇಧವನ್ನು ತೊಡೆದುಹಾಕಿದ. ಹಿಂದೂಗಳನ್ನು ನಿಕೃಷ್ಟವಾಗಿ ನೋಡುತ್ತಿದ್ದ ಮುಸ್ಲಿಮರೂ, ಮುಸ್ಲಿಮ್ ಸೈನಿಕ, ಸೇನಾನಿಗಳೂ ಈಗ ಬಗ್ಗಿ ನಮಸ್ಕರಿಸಲು ಆರಂಭಿಸಿದರು. ಅರಮನೆಗಳಲ್ಲಿ ಈಗ ಹಿಂದೂ ದೇವರುಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡು ನಿತ್ಯಪೂಜೆ ನಡೆಯುವಂತಾಯಿತು. ಕುರಾನ್ ಅಯಾತ್ ಗಳ ಬದಲು ವೇದಘೋಷ ಅನುರಣನಿಸಿತು. ಬಾಂಗ್ ಕೇಳುವ ಜಾಗದಲ್ಲಿ ಘಂಟಾನಾದ, ಶಂಖನಾದ ಮೊಳಗಿತು. ಉಗುಳಿಕೊಡುವ ಹೀನ ಆಹಾರದ ಜಾಗದಲ್ಲಿ ಪ್ರಸಾದ ವಿತರಣೆ ಆರಂಭವಾಯಿತು. ಅರಸನೂ ಅರಮನೆಯಲ್ಲಿ ಬೀಡುಬಿಟ್ಟ ಹಿಂದೂಗಳು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಬಹು ಶ್ರದ್ಧೆ, ಆಸ್ಥೆಗಳಿಂದ ನಡೆಸಿದರು. ಹಿಂದೂ ಪ್ರಜೆಗಳ, ಹಿಂದೂ ಸೈನಿಕರ ಸಂತೋಷ, ಉತ್ಸಾಹ, ಸಂಭ್ರಮಾಚರಣೆಗಳು ಮೇರೆ ಮೀರಿದವು. ಮುಸ್ಲಿಮರು ಗೆದ್ದಾಗ ಹಿಂದೂ ದೇವಾಲಯಗಳನ್ನು ಕೆಡವಿ ಮೂರ್ತಿಗಳನ್ನು ಭಗ್ನಗೊಳಿಸಿ ಮಸೀದಿಯನ್ನಾಗಿ ಪರಿವರ್ತಿಸುತ್ತಿದ್ದರು. ಈಗ ಹಿಂದೂಗಳು ದೇವಾಲಯಗಳನ್ನು ಕೆಡವಿ ಕಟ್ಟಿದ್ದ ಮಸೀದಿಗಳನ್ನು ಉರುಳಿಸಿ ದೇವಾಲಯಗಳನ್ನು ಮರು ಸ್ಥಾಪಿಸಿ ಅಲ್ಲಿ ಹಿಂದೂ ಧಾರ್ಮಿಕ ದೀಪ ಬೆಳಗುವಂತೆ, ವೇದಘೋಷ ಮೊಳಗುವಂತೆ ಮಾಡಿದರು. ಅಷ್ಟಕ್ಕೇ ಸುಮ್ಮನಾಗದ ಹಿಂದೂ ಚಕ್ರವರ್ತಿ ಬಲಾತ್ಕಾರವಾಗಿ ಜನಾನಾಕ್ಕೆ ದೂಡಲ್ಪಟ್ಟವರನ್ನು ಅವರಿಚ್ಛೆಯಂತೆ ಮತ್ತೆ ಹಿಂದೂಗಳನ್ನಾಗಿಸಿ ಹಿಂದೂ ಸೈನಿಕರಿಗೆ, ಹಿಂದೂ ಅಧಿಕಾರಿಗಳಿಗೆ ಮದುವೆ ಮಾಡಿಸಿದ. ವ್ಯಾವಹಾರಿಕವಾಗಿಯೂ ಅರಸ ಜಾಣ್ಮೆಯಿಂದ ವರ್ತಿಸಿದ. ದೆಹಲಿಯಲ್ಲಿ ಒಮ್ಮೆಗೇ ಎಲ್ಲವನ್ನೂ ಬದಲಾಯಿಸಿದರೆ ಬಹು ಅಪಾಯವಾಗುವ ಸಾಧ್ಯೆತೆ ಹೆಚ್ಚಿತ್ತು. ಅದಕ್ಕಾಗಿ ಯಾವೆಲ್ಲಾ ಮುಸಲ್ಮಾನ ಅದಿಕಾರಿಗಳು, ಮುಲ್ಲಾ-ಮೌಲ್ವಿಗಳು ಹಿಂದೂ ಸಾಮ್ರಾಜ್ಯ ಉರುಳಿಸಲು ಪಿತೂರಿ ಮಾಡಬಹುದೆಂಬ ಗುಮಾನಿಯಿತ್ತೋ ಅಂಥವರ ಬಳಿ ನಯನಾಜೂಕಿನಿಂದ ಮಾತಾಡಿ, ಉಪಾಹಾರ - ಉಡುಗೊರೆಗಳನ್ನು ಕೊಟ್ಟು ತನ್ನ ದಾಕ್ಷಿಣ್ಯಕ್ಕೆ ಕಟ್ಟುಬೀಳುವಂತೆ ಮಾಡಿದ. ಮುಸ್ಲಿಂ ರೈತರಿಗೂ, ಮುಸ್ಲಿಂ ಯೋಧರಿಗೂ ಹಿಂದೂಗಳಿಗೆ ಸಮಾನವಾದ ನಾಗರಿಕ ಹಕ್ಕನ್ನು ನೀಡಿ ತೆರಿಗೆಯಿಂದ ವಿನಾಯಿತಿ ನೀಡಿದ್ದ. ತನ್ನ ಬಲ ಸೇನೆಯಲ್ಲಿ ಎಂದು ನಂಬಿದ್ದ ಆತ ಆಯಕಟ್ಟಿನ ಜಾಗದಲ್ಲಿ ತನ್ನ ನಂಬಿಕಸ್ಥರಾದ ಹಿಂದೂಗಳನ್ನೇ ನೇಮಿಸಿದ್ದ. ಅವನ ಸುವ್ಯವಸ್ಥಿತ ಆಳ್ವಿಕೆಯ ಫಲವಾಗಿ ತೆರಿಗೆ, ಕಪ್ಪಗಳೆಲ್ಲವೂ ಸರಿಯಾದ ಕಾಲಕ್ಕೆ ಸಂಗ್ರಹವಾಗಿ ಖಜಾನೆಯೂ ತುಂಬಿ ತುಳುಕಿತು; ದೇಶದಲ್ಲಿ ಸಮೃದ್ಧತೆ-ಸಮಾಧಾನವೂ ತುಂಬಿತು. ದೆಹಲಿಗೆ ಕಪ್ಪವನ್ನೊಪ್ಪಿಸುತ್ತಿದ್ದ ಹಿಂದೂ ರಾಜರನ್ನು ಸ್ವತಂತ್ರರಾಗಲೂ ಆತ ಅವಕಾಶ ಕೊಟ್ಟ.


ಇಂತಹಾ ಮಹಾ ಹಿಂದೂ ಕ್ರಾಂತಿಯಾಗಿ ಒಂದು ವರ್ಷ ತುಂಬುವಷ್ಟರಲ್ಲಿ ಕೆಲವು ಮುಸಲ್ಮಾನ್ ಅಧಿಕಾರಿಗಳು ಹಿಂದೂ ರಾಜನನ್ನು ಪದಚ್ಯುತಗೊಳಿಸಲು ಪಿತೂರಿ ನಡೆಸಿದರು. ಪಂಜಾಬ್  ಪ್ರಾಂತ್ಯದ ಆಡಳಿತಗಾರ ಘಿಯಾಸುದ್ದೀನ್ ಇದರ ನೇತೃತ್ವ ವಹಿಸಿ ಅರಸನ ಕೈಕೆಳಗಿನ ಮುಸ್ಲಿಂ ಅಧಿಕಾರಿಗಳಿಗೆಲ್ಲಾ ಪತ್ರ ರವಾನಿಸಿದ. ಅವರು ಇದನ್ನೆಲ್ಲಾ ಅರಸನ ಕೈಗೇ ಇತ್ತರು. ಕೂಡಲೇ ಕಾರ್ಯ ಪ್ರವೃತ್ತನಾದ ರಾಜ ಎಳವೆಯಲ್ಲೇ ಈ ಪಿತೂರಿಯನ್ನು ಮುರುಟಿಸಬೇಕೆಂದು ತಾನೇ ಯುದ್ಧಕ್ಕೆ ಮುಂದಾಗಿ ಘಿಯಾಸುದ್ದೀನನ ಮೇಲೆ ಏರಿ ಹೋದ. ಮೊದಲ ದಿನ ಜಯ ಲಭಿಸಿತು. ಅಷ್ಟರಲ್ಲಿ ಹಿಂದೂ ಸೇನೆಯಲ್ಲಿದ್ದ ಮುಸ್ಲಿಂ ಸೇನಾಧಿಕಾರಿಗಳು ಸೈನಿಕರು ಗುಟ್ಟಾಗಿ ಘಿಯಾಸುದ್ದೀನನಿಗೆ ಬೆಂಬಲ ಕೊಡುವ ಪ್ರಸ್ತಾಪವೊಡ್ಡಿ ಹಿಂದೂ ಸೇನೆ ಸೋಲುವಂತೆ ಮಾಡಿದರು. ಯಥಾಪ್ರಕಾರ ಹಿಂದೂ ಅರಸನ ಕತ್ತು ಕೊಯ್ಯಲಾಯಿತು. ವಿಪರ್ಯಾಸವೆಂದರೆ ಯಾವೆಲ್ಲಾ ಹಿಂದೂ ಅರಸರಿಗೆ ಈ ಹಿಂದೂ ಚಕ್ರವರ್ತಿ ಬೆಂಬಲ ಕೊಟ್ಟು ಅವರನ್ನು ಸ್ವತಂತ್ರಗೊಳಿಸಿದ್ದನೋ ಅವರೆಲ್ಲಾ ನಿರ್ಣಾಯಕವಾಗಿ ಕೇಂದ್ರದಲ್ಲಿ ಹಿಂದೂ ಅಧಿಕಾರ ಸ್ಥಾಪನೆಗೆ ಸಹಕಾರವನ್ನೇ ಕೊಡಲಿಲ್ಲ. ಹಾಗಾಗಿ ಮತ್ತೆ ಎದ್ದಿದ್ದ ಹಿಂದೂ ವೀರ ಅಸ್ಮಿತೆಯ ಪ್ರಜ್ಞೆಗೆ ಕೆಂದ್ರದ ಅಧಿಕಾರ ಒಂದೇ ವರ್ಷಕ್ಕೆ ಸೀಮಿತವಾಯಿತು. ಆದರೂ ಧೀರ ಪೃಥ್ವೀರಾಜನ ಬಳಿಕ ದೆಹಲಿಯ ಗದ್ದುಗೆಯನ್ನೇರಿದ ಚಕ್ರವರ್ತಿಯೆಂದು ಆ ಹಿಂದೂ ವೀರನ ಕೀರ್ತಿ ಚಿರಸ್ಥಾಯಿಯಾಯಿತು. ಈ ವೀರನ ಜೊತೆ ನಿಂತ ಅವನ ಸೋದರ ಹಾಗೂ ದೇವಲದೇವಿಗೂ ಹಿಂದೂಗಳಿಂದ ಗೌರವಾರ್ಪಣೆಯಾಗಬೇಕು. ನತದೃಷ್ಟ ಹಿಂದೂಗಳು ಅಪಾರವಾದ ಮುಸ್ಲಿಂ ದೌರ್ಜನ್ಯದ ನಡುವೆ ಕೆಲ ಸಮಯಕ್ಕಾದರೂ ಹಿಂದೂ ಚಕ್ರವರ್ತಿಯೊಬ್ಬನ ಸುಂದರ ಸಮಾನ ದೃಷ್ಟಿಯ ಆಳ್ವಿಕೆಯಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಅದಕ್ಕಿಂತಲೂ ಮುಖ್ಯವಾದುದು ಇನ್ನೊಂದು; ಕೆಳವರ್ಗದಲ್ಲಿ ಜನಿಸಿ ಮುಸಲ್ಮಾನನಾಗಿ, ಮುಸ್ಲಿಮರ ಲೈಂಗಿಕ ದಾಹಕ್ಕೆ ಆಹಾರವಾಗಿ ತನ್ನ ಕಾರ್ಯದಕ್ಷತೆ, ರಣಚಾತುರ್ಯ, ರಾಜಕೀಯ ತಂತ್ರಜ್ಞತೆ, ಧೈರ್ಯ-ಚಾಣಾಕ್ಷತೆಯಿಂದ ಬೆಳೆದು ತನ್ನ ಧ್ಯೇಯವನ್ನು ಸಮಯ ಬಂದಾಗ ಸಾಧಿಸಿ ಮತ್ತೆ ಹಿಂದೂವಾಗಿ, ಹಿಂದೂ ಚಕ್ರವರ್ತಿಯಾಗಿ ಕೆಲಕಾಲವಾದರೂ ಹಿಂದೂಗಳಿಗೊಂದು ನೆಮ್ಮದಿಯ ಬಾಳುಕೊಟ್ಟದ್ದು ಕಡಿಮೆ ಸಾಧನೆಯೇನಲ್ಲ; ಅದೂ ಮತಾಂಧ ಮುಸ್ಲಿಮರ ನಡುವೆ!

ವಂಗ ಭಂಗ; ಹಿಂದೂವಿನ ಮರಣಮೃದಂಗ

ವಂಗ ಭಂಗ; ಹಿಂದೂವಿನ ಮರಣಮೃದಂಗ


ತಾವೇ ಏನಾದರೂ ಅನಾಚಾರ ಮಾಡಿ ತಮ್ಮವರನ್ನು ಎತ್ತಿಕಟ್ಟುವುದು. ಇದು ಜಿಹಾದಿನ ಒಂದು ಬಗೆ. ಬಾಂಗ್ಲಾದಲ್ಲಿ ಈಗ ಆಗುತ್ತಿರುವುದೂ ಅದೇ. ದುರ್ಗಾ ಪೆಂಡಾಲಿನಲ್ಲಿ ದೇವಿಯ ಮೂರ್ತಿಯ ಪಾದದ ಬಳಿ ಕುರಾನ್ ಪ್ರತಿ ಇಟ್ಟ ಜಮಾತ್-ಇ-ಇಸ್ಲಾಮ್ ಬಳಿಕ ಅದರ ಫೋಟೋ ತೆಗೆದು ಜಾಲತಾಣಗಳಲ್ಲಿ ಹಾಕಿ ಇಸ್ಲಾಂನ ನಿಂದನೆಯೆಂಬಂತೆ ಬಿಂಬಿಸಿ ತನ್ನವರನ್ನು ಎತ್ತಿಕಟ್ಟಿತು. ಇದನ್ನೇ ನೆಪವಾಗಿಟ್ಟುಕೊಂಡು ಬೀದಿಗಿಳಿದ ಮತಾಂಧರು ಹಲವು ದೇವಾಲಯಗಳನ್ನು ಧ್ವಂಸಗೊಳಿಸಿದರು. 150ಕ್ಕೂ ಹೆಚ್ಚು ಹಿಂದೂ ಪರಿವಾರಗಳ ಮೇಲೆ ದಾಳಿ ನಡೆಸಿದರು. ಮೂರು ಜನ ಹಿಂದೂಗಳನ್ನು ಕೊಂದರು. ಹಿಂದೂಗಳನ್ನು ಗುರಿಯಾಗಿಸಿಕೊಂಡ ಈ ದಾಳಿ 22 ಜಿಲ್ಲೆಗಳಲ್ಲಿ ವ್ಯಾಪಿಸಿತು. ಈ ಬೆಂಕಿ ಇನ್ನೂ ಆರಿಲ್ಲ. ಕೆಲವು ತಿಂಗಳುಗಳ ಹಿಂದಷ್ಟೇ ಗಡಿಯ ಈಚೆಗಿನ ಬಂಗಾಳೀ ಹಿಂದೂಗಳು ಅನುಭವಿಸಿದ ಹಿಂಸೆಯನ್ನು ಈಗ ಗಡಿಯಾಚೆಗಿನ ಬಂಗಾಳಿಗಳು ಅನುಭವಿಸುತ್ತಿದ್ದಾರೆ. ವಂಗಭಂಗ ಎಂದೋ ಆಗಿದೆ. ಆದರೆ ಅದರ ಕಿಡಿ ಇನ್ನೂ ಉರಿಯುತ್ತಲೇ ಇದೆ. ಜಿಹಾದ್ ರೂಪದಲ್ಲಿ!

50ವರ್ಷಗಳ ಹಿಂದೆಯೂ ಇದೇ ರೀತಿ ಆಗಿತ್ತು. ಹಿಂದೂಗಳು ಪ್ರಾಣ, ಮಾನ ರಕ್ಷಣೆಗಾಗಿ ಭಾರತಕ್ಕೆ ಓಡಿ ಬಂದಿದ್ದರು. ಈಗದರ ಸುವರ್ಣ ಸಂಭ್ರಮಕ್ಕೆ ಆ ರಕ್ಕಸರು ಹೊರಟಂತಿದೆ. ಕಳೆದ ಜೂನ್ ನಿಂದಲೇ ಈ ಜಿಹಾದ್ ಶುರುವಾಗಿದೆ. ಖಿಲಾಫತ್ ಹುಚ್ಚಿನಲ್ಲಿ ಶತಮಾನಗಳ ಹಿಂದೆಯೂ ಇಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಸುಹ್ರಾವರ್ಧಿ ಎಂಬ ಗಾಂಧಿಯ ಮಾನಸಪುತ್ರನ ನೇತೃತ್ವದಲ್ಲಿ ನರಕ ಸೃಷ್ಟಿಯಾಗಿತ್ತು. ನಿತ್ಯದ ಕಿರುಕುಳ, ದಾಳಿಯಂತೂ ಇದ್ದೇ ಇದೆ. ಎಂದಿನಂತೆ ಮಾನವ ಹಕ್ಕುಗಳ ಹೋರಾಟಗಾರರು, ಹಿಂದೂಗಳ, ಹಿಂದೂ ಸಂಸ್ಕೃತಿಯ ವಿರುದ್ಧ ಸದಾ ಊಳಿಡುವ ಜಾತ್ಯಾತೀತವಾದಿಗಳು, ಸತ್ಯವನ್ನು ಮಾರಿಕೊಂಡು ಬೆತ್ತಲಾಗಿರುವ ಬುದ್ಧಿಗೇಡಿ ಪತ್ರಿಕೆಗಳು ತಮ್ಮ ತುಟಿಗಳನ್ನು ಹೊಲಿದುಕೊಂಡಿವೆ. ಹಿಂದೂಗಳೆಂದರೆ ಎಲ್ಲರಿಗೂ ಅಸಡ್ಡೆ, ಹಿಂದೂಗಳಿಗೂ! 200ಕ್ಕೂ ಹೆಚ್ಚು ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಾಧ್ಯಮಗಳು ಈ ಸುದ್ದಿಯನ್ನು ಮುಚ್ಚಿಟ್ಟಿವೆ. ಹಿಂದೂ ಪರವಾದ ದನಿಗಳನ್ನು ದಮನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಹಿಂದೂ ಹತ್ಯಾಕಾಂಡದ ವಿವರ ಹಾಕುವ ಅಕೌಂಟುಗಳನ್ನು ಕಿತ್ತೆಸೆಯುತ್ತಿವೆ. ಹಿಂದೂವಿನ ಮೇಲಿನ ದೌರ್ಜನ್ಯದ ವಿಷಯ ಬಂದಾಗ ಎಲ್ಲರದ್ದೂ ನೀರವ ಮೌನದ, ಹಿಂದೂವಿನ ದನಿಯನ್ನು ನಿಲ್ಲಿಸುವ ಒಗ್ಗಟ್ಟು. ಹಿಂದೂ ಪ್ರತಿರೋಧಿಸಿದನೆಂದರೆ ಲಿಂಚಿಂಗ್, ಕೇಸರಿ ಭಯೋತ್ಪಾದನೆ ಎಂದು ಬೊಬ್ಬಿರಿದು ಬಿಂಬಿಸುವ ಒಗ್ಗಟ್ಟು!

1946ರಲ್ಲಿ ಬಂಗಾಳದಲ್ಲಿದ್ದ ಸುಹ್ರಾವರ್ದಿ ಸರಕಾರದ ಸುಪರ್ದಿಯಲ್ಲೇ ಹಿಂದೂಗಳ ನರಮೇಧ ನಡೆಯಿತು. ಕಲ್ಕತ್ತಾದಲ್ಲಂತೂ ಮೂರು ದಿನಗಳ ಕಾಲ ಹಿಂದೂಗಳ ಸಾಮೂಹಿಕ ಹತ್ಯೆ ಅಬಾಧಿತವಾಗಿ ನಡೆಯಿತು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಅಸಂಖ್ಯ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು. ಹಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು.  ಲೆಖ್ಖವಿಲ್ಲದಷ್ಟು ಮತಾಂತರ ನಡೆಯಿತು. ಕಲ್ಕತ್ತಾ ಪೊಲೀಸರು ಕೈಕಟ್ಟಿ ಕುಳಿತುಕೊಂಡಿದ್ದರು. ಕಾನೂನು ಪಾಲನೆ ಹೊಣೆಹೊತ್ತವರ ಕಣ್ಣೆದುರಲ್ಲೇ ಈ ಭೀಭತ್ಸ ಘಟನೆಗಳು ನಡೆದವು. ಎರಡು ತಿಂಗಳಲ್ಲಿ ಮೂವತ್ತು ಸಾವಿರ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಮೂರು ಲಕ್ಷಕ್ಕೂ ಹಿಂದೂಗಳ ಕಗ್ಗೊಲೆಯಾಯಿತು. ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಯಿತು. ಅದೇ ನವಖಾಲಿ, ಅದೇ ವಂಗ ಇಂದು ಮತ್ತೆ ಮತ್ತೆ ಹೊತ್ತಿ ಉರಿಯುತ್ತಿದೆ.

1970ರ ಚುನಾವಣೆಯಲ್ಲಿ(ಪಾಕಿಸ್ತಾನ ರಚನೆಯಾದ ಬಳಿಕದ ಮೊದಲ ಚುನಾವಣೆ) ಬಂಗಾಳಿ ಶೇಕ್ ಮುಜೀಬುರ್ ರಹಮಾನನ ಪಕ್ಷ ಪೂರ್ವ ಪಾಕಿಸ್ತಾನದಲ್ಲಿ ಬಹುಮತ ಗಳಿಸಿದ್ದು ಪಶ್ಚಿಮ ಪಾಕಿಸ್ತಾನಿಗಳ ಕಣ್ಣು ಕೆಂಪಗಾಗಿಸಿತ್ತು. ಪಾಕ್ ಅಧ್ಯಕ್ಷ ಯಾಹ್ಯಾಖಾನ್ ಸರಕಾರ ರಚಿಸಲು ಬಿಡದೆ ಸೈನ್ಯಾಡಳಿತವನ್ನು ನಿರ್ದೇಶಿಸಿದ. ಜನರಲ್ ಟಿಕ್ಕಾ ಖಾನ್ ರಜಾಕಾರರನ್ನು ಸೈನ್ಯದಲ್ಲಿ ಸೇರ್ಪಡೆಗೊಳಿಸಿದ. "ಶಾಂತಿ ಸಮಿತಿ" ಎಂಬ ಹೆಸರಿನ ಈ ಅರೆಸೈನ್ಯಕ್ಕೆ ಮತಾಂಧ ಮುಸ್ಲಿಮರನ್ನೇ ಸೇರ್ಪಡೆಗೊಳಿಸಲಾಯಿತು. ಅಲ್ ಬದ್ರ್ ಮತ್ತು ಅಲ್ ಶಮ್ಸ್ ಬ್ರಿಗೇಡ್ ಹೆಸರಿನಲ್ಲಿ ರಜಾಕಾರರ ಎರಡು ಪಡೆಗಳು ತಯಾರಾದವು. ಪಾಕಿಸ್ತಾನಿ ಸೈನ್ಯ ರಮಣ ಕಾಳಿ ಮಂದಿರವನ್ನು ನಾಶ ಮಾಡಿ 85 ಹಿಂದೂಗಳನ್ನು ಕೊಂದು ಹಾಕಿತು.  1971ರ ಫೆಬ್ರವರಿ 22ರಂದು ಯಾಹ್ಯಾಖಾನ್  "ಮೂವತ್ತು ಲಕ್ಷ ಜನರನ್ನು ಕೊಂದು ಹಾಕಿ" ಎಂದು ಬಹಿರಂಗವಾಗಿ ನಿರ್ದೇಶನ ಕೊಟ್ಟ. ಪಾಕಿಸ್ತಾನದ ಸೈನ್ಯದ ಆಪರೇಷನ್ ಸರ್ಚ್ ಲೈಟ್ ಜೊತೆಜೊತೆಗೆ ಈ ರಜಾಕಾರರ ಅನಧಿಕೃತ ಸೈನಿಕಪಡೆಯ ಭಯಾನಕ ಹಿಂಸಾಚಾರ ಯಾವುದೇ ಎಗ್ಗಿಲ್ಲದೆ ನಡೆಯಿತು.

ಮಾರ್ಚ್ 25, 1971ರಂದು ಪಾಕಿಸ್ತಾನ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಂಗಾಳೀ ಅಸ್ಮಿತೆಯನ್ನು ನಾಶಗೈಯ್ಯುವ ಹತ್ತು ತಿಂಗಳ ಅವಧಿಯ ಕುಕೃತ್ಯಕ್ಕೆ ಮುನ್ನುಡಿ ಬರೆಯಿತು. ಇಲ್ಲಿ ಬಂಗಾಳೀ ಅಸ್ಮಿತೆ ಅಂದರೆ ಏನು? ಅದು ಶತಪ್ರತಿಶತ ಹಿಂದೂ ಅಸ್ಮಿತೆಯೇ. ಯಾವುದೇ ಸೆಮೆಟಿಕ್ ಮತಗಳಿಂದ ಒಂದು ಪ್ರಾಂತ್ಯದ ಅಸ್ಮಿತೆ ಸೃಷ್ಟಿಯಾಗಲು, ಬೆಳೆಯಲು, ಉಳಿಯಲು ಸಾಧ್ಯವೇ? ಇದು ಮುಂದೆ ಭಾರತದ ಪಾದದಡಿಯಲ್ಲಿ ಪಾಕಿಸ್ತಾನ ಮಂಡಿಯೂರುವುದರೊಂದಿಗೆ ಪರ್ಯಾವಸಾನವಾಯಿತಾದರೂ ಆ ಅವಧಿಯಲ್ಲಿ ಹಿಂದೂಗಳಿಗಾದ ನಷ್ಟ ಅಗಾಧ. ಏಳೇ ದಿವಸದಲ್ಲಿ ಹದಿನೈದು ಲಕ್ಷದಷ್ಟು ಬಂಗಾಳಿಗಳು ತಮ್ಮ ನೆಲೆ ಬಿಟ್ಟು ಓಡಿ ಹೋಗಬೇಕಾಯಿತು. ನವೆಂಬರ್ ಅಂತ್ಯದ ವೇಳೆಗೆ ಒಂದು ಕೋಟಿಯಷ್ಟು ಹಿಂದೂಗಳು ಭಾರತಕ್ಕೆ ಓಡಿ ಬಂದರು. ಭಾರತದ ವಿದೇಶಾಂಗ ಇಲಾಖೆ ಹೊರಗೆಡಹಿದ ಮಾಹಿತಿಯ ಪ್ರಕಾರವೇ 1971ರ ಮಾರ್ಚ್ ಹಾಗೂ ಆಗಸ್ಟ್ ನಡುವೆ ನಿರಾಶ್ರಿತರೆಂದು ನೋಂದಾಯಿಸಿಕೊಂಡ ಬಾಂಗ್ಲಾ ಹಿಂದೂಗಳ ಸಂಖ್ಯೆ 69,71,000 ! ಇದು ಈ ಶತಮಾನದ ಉತ್ತರಾರ್ಧದ ಅತೀ ದೊಡ್ಡ ವಲಸೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿತು. ಹತ್ತಿರ ಹತ್ತಿರ ಮೂರು ಮಿಲಿಯನ್ ಜನರ ಕಗ್ಗೊಲೆ ನಡೆಯಿತು. ಎರಡು ಲಕ್ಷದಷ್ಟು ಮಾನಿನಿಯರ ಮೇಲೆ ಅತ್ಯಾಚಾರ ನಡೆಯಿತು. ಅಂದಿನ ಬಾಂಗ್ಲಾದ ಒಟ್ಟು ಜನಸಂಖ್ಯೆಯ ಶೇ. ನಾಲ್ಕರಷ್ಟು ಜನರ ಹತ್ಯೆಯಾಯಿತು. ಬಾಂಗ್ಲಾದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಅಲ್ಲಿನ ಪಾಕಿಸ್ತಾನೀ ಬೆಂಬಲಿತ ಮುಸ್ಲಿಂ ಮೌಲ್ವಿಗಳು ಬಹಿರಂಗವಾಗಿಯೇ ಬೆಂಬಲಿಸಿ, "ಅವರನ್ನು ನಾವು ಯುದ್ಧದಲ್ಲಿ ಗೆದ್ದುಕೊಂಡಿದ್ದೇವೆ. ಬಂಗಾಳೀ ಮಹಿಳೆಯರೆಲ್ಲಾ ಹಿಂದೂಗಳು. ಕುರಾನಿನ ಪ್ರಕಾರ ಆ ಮಹಿಳೆಯರನ್ನು ಹೇಗೆ ಬೇಕಾದರೂ ಉಪಯೋಗಿಸುವ ಹಕ್ಕು ಯುದ್ಧದಲ್ಲಿ ಗೆದ್ದವರಿಗೆ ಇದೆ " ಎನ್ನುತ್ತಾ  ಇನ್ನಷ್ಟು ಅತ್ಯಾಚಾರವೆಸಗುವಂತೆ ಕರೆಕೊಟ್ಟರು. ಕೆಲವು ವರದಿಗಳ ಪ್ರಕಾರ ನಾಲ್ಕು ಲಕ್ಷದಷ್ಟು ಮಾನಿನಿಯರು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಶಿಬಿರಗಳಲ್ಲಿ ಬಂಧಿಗಳಾಗಿ ಸತತ ಅತ್ಯಾಚಾರಕ್ಕೂ ಬಲಿಯಾದರು ಎಂಬುದಾಗಿ ಬಾಂಗ್ಲಾದೇಶೀ ಪತ್ರಕರ್ತ ಅನುಶಯ್ ಹುಸೈನ್ ವಿಷಾದ ವ್ಯಕ್ತಪಡಿಸಿದ್ದಾನೆ. "ಪಾಕಿಸ್ತಾನದ ಸೈನ್ಯ ಮಾರ್ಚ್ 25ರ ರಾತ್ರಿ ಆರಂಭಿಸಿದ ನರಮೇಧದ ಪರಿಣಾಮ ಲೆಕ್ಖವಿಲ್ಲದಷ್ಟು ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆಗೈಯ್ಯಲಾಯಿತು. ಹಿಂದೂಗಳ ಭೂಮಿ, ಅಂಗಡಿಗಳನ್ನು ಲೂಟಿ ಮಾಡಲಾಯಿತು. ಇದೊಂದು ವ್ಯವಸ್ಥಿತ ಹತ್ಯಾಕಾಂಡ" ಎಂದು ಸೆನೆಟರ್ ಎಡ್ವರ್ಡ್ ಎಂ ಕೆನಡಿ ನವೆಂಬರಿನಲ್ಲಿ ಹೇಳುತ್ತಾನೆ. ಬಂಧಿಸಲ್ಪಟ್ಟ ಪುರುಷರು ಸುನ್ನತ್ ಮಾಡಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಪುರುಷರ ಮೇಲೂ ಪಾಕ್ ಸೈನಿಕರು ಅತ್ಯಾಚಾರ ಎಸಗಿದ್ದನ್ನು ನೆದರ್ಲ್ಯಾಂಡಿನ ಜೆನ್ನೆಕೆರ್ ಆರೆನ್ಸ್ ದಾಖಲಿಸಿದ್ದಾರೆ. ಜಗತ್ತಿನ ಅತ್ಯಂತ ಭಯಾನಕ ನರಮೇಧ ಪ್ರಕರಣಗಳಲ್ಲಿ ಇದಕ್ಕೆ ಹನ್ನೆರಡನೆಯ ಸ್ಥಾನ.

1971ರಿಂದೀಚೆಗೆ ಅಲ್ಲಿ ಶತ್ರುವಿನ ಆಸ್ತಿ ಸ್ವಾಮ್ಯ ಕಾಯಿದೆ ಜಾರಿಯಲ್ಲಿದೆ. ಯಾರು ಶತ್ರು? ಅಲ್ಲೇ ವಾಸವಾಗಿದ್ದ ಹಿಂದೂಗಳು ಶತ್ರುಗಳು! ಯಾವ ಪುರುಷಾರ್ಥಕ್ಕೆ ಭಾರತ ಪ್ರತ್ಯೇಕ ದೇಶವನ್ನು ನಿರ್ಮಿಸಿತು? ಈ ಕಾಯಿದೆಯ ಪ್ರಕಾರ, ಹಿಂದೂವಿನ ಆಸ್ತಿಯನ್ನು ವಶಪಡಿಸಿಕೊಂಡ ಮುಸ್ಲಿಂನನ್ನು ಪ್ರಶ್ನಿಸುವಂತೆಯೇ ಇಲ್ಲ. ಹಿಂದೂಗಳ ಆಸ್ತಿಯನ್ನೆಲ್ಲ ಬಲಾತ್ಕಾರವಾಗಿ ಮುಸ್ಲಿಮರು ವಶಪಡಿಸಿಕೊಂಡರೆ ಅದನ್ನು ಮರಳಿ ಪಡೆಯಲು ಅವಕಾಶವೂ ಇಲ್ಲ. ಮುಸ್ಲಿಮರ ಸಂಖ್ಯೆ ಕಡಿಮೆ ಇರುವ ದೇಶಗಳಲ್ಲೇ ಅವರ ವಿರುದ್ಧ ತುಟಿಬಿಚ್ಚದ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದಲ್ಲಿ ಅಸ್ತಿತ್ವದಲ್ಲಿರುವುದೇ ಅನುಮಾನ. 1991ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಬಾಂಗ್ಲಾದಲ್ಲಿ ಹುಟ್ಟಿಕೊಂಡ ಪ್ರತೀಕಾರದ ಕಾಳ್ಗಿಚ್ಚಿನಲ್ಲಿ ಸುಮಾರು 200 ದೇವಾಲಯಗಳು ಧ್ವಂಸವಾದವು. ಹಿಂದೂಗಳನ್ನು ಕಂಡಲ್ಲಿ ಕತ್ತರಿಸಿ ಹಾಕಲಾಯಿತು. 2017ರಲ್ಲಿ 108 ಹಿಂದೂಗಳನ್ನು ಬಲಿಪಡೆಯಲಾಗಿದೆ; 235 ದೇವಾಲಯಗಳನ್ನು ಮತಾಂಧರು ಧ್ವಂಸ ಮಾಡಿದ್ದಾರೆ. ಆ ವರ್ಷ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಂಖ್ಯೆ 6474!

ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯಾಕಾಂಡ ನಡೆದಿದ್ದರೂ ಜನ ಸಂಘದ ನಾಯಕರ ಆಕ್ರೋಶವನ್ನು ತಪ್ಪಿಸಲು ಆಗಿನ ಕಾಂಗ್ರೆಸ್ ಸರಕಾರ ಈ ದಂಗೆ ಬಾಂಗ್ಲಾದೇಶದ ಬಂಗಾಳಿ ಸಮುದಾಯದ ವಿರುದ್ಧದ ನರಮೇಧ ಎಂದು ತೇಪೆ ಹಾಕಲು ಯತ್ನಿಸಿತು ಎಂದು ತನ್ನ 'ದಿ ಬ್ಲಡ್ ಟೆಲಿಗ್ರಾಮ್: ನಿಕ್ಸನ್, ಕಿಸ್ಸಿಂಜರ್ ಅಂಡ್ ಎ ಫಾರ್ಗಾಟನ್ ಜೆನೊಸೈಡ್' ಪುಸ್ತಕ(2013)ದಲ್ಲಿ ಗ್ಯಾರಿ ಜೆ ಬಾಸ್ ನಮೂದಿಸಿದ್ದಾನೆ. "ಹೌದು, ಅದು ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದೌರ್ಜನ್ಯ ಎನ್ನುವುದನ್ನು ಭಾರತದಲ್ಲಿ ಪ್ರಚುರವಾಗದಂತೆ ಮುಚ್ಚಿ ಹಾಕಲು ಪ್ರಯತ್ನಿಸಿದೆವು" ಎಂದು ಸ್ವರನ್ ಸಿಂಗ್ (ಅಂದಿನ ವಿದೇಶಾಂಗ ಸಚಿವ) ಲಂಡನ್‌ನಲ್ಲಿ ಭಾರತೀಯ ರಾಜತಾಂತ್ರಿಕರ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದ. ಭಾರತದಲ್ಲಿನ ಅಂದಿನ ಯುಎಸ್ ರಾಯಭಾರಿ, ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಮ್ಮ ಮಿತ್ರ 'ಪಾಕಿಸ್ತಾನ' ನರಮೇಧವನ್ನು ಮಾಡುತ್ತಿದೆ ಎಂದು ಹೇಳಿದಾಗ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮುಗುಮ್ಮಾಗಿ ಉಳಿದಿದ್ದ. ಅಂದರೆ ಹಿಂದೂಗಳ ರಕ್ಷಣೆಯ ವಿಷಯಕ್ಕೆ ಬಂದಾಗ ಬಂಗಾಳೀ ಮುಸಲ್ಮಾನನೂ ಮೌನವಾಗಿದ್ದ. ಜಗತ್ತಿನ ಅಂದಿನ ದೊಡ್ಡಣ್ಣ ಅಮೆರಿಕಾವೂ ಮೌನವಾಗಿತ್ತು. ಅಷ್ಟೇಕೆ, ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತವೇ ಮೌನವಾಗಿತ್ತು. ಮುಂದೆ ಭಾರತ ಯುದ್ಧ ಮಾಡಿ ಪಾಕಿಸ್ತಾನವನ್ನು ಸೋಲಿಸಿತು ಸರಿ. ಆದರೆ ಹಿಂದೂಗಳಿಗೆ ಶಾಶ್ವತವಾದ ಭದ್ರತೆಯನ್ನು ಗಿಟ್ಟಿಸಿಕೊಡುವಲ್ಲಿ ವಿಫಲವಾಯಿತು. ಭಾರತವೇ ಸೃಷ್ಟಿಸಿದ ಬಾಂಗ್ಲಾದೇಶ ಮೊದಲಿಗೆ ಸೆಕ್ಯುಲರ್ ಸಂವಿಧಾನವನ್ನು ಅಳವಡಿಸಿಕೊಂಡರೂ ಶೀಘ್ರವಾಗಿ "ಇಸ್ಲಾಮಿಕ್ ಒಗ್ಗಟ್ಟಿನ ಆಧಾರದ ಮೇಲೆ ಮುಸ್ಲಿಂ ರಾಷ್ಟ್ರಗಳ ನಡುವೆ ಸಹೋದರ ಸಂಬಂಧಗಳನ್ನು ಬಲಪಡಿಸಲು ಮತ್ತು  ಸಂರಕ್ಷಿಸಲು" ಎಂಬ ಹೊಸ ಷರತ್ತನ್ನು ಸೇರಿಸಿತು. ಜೂನ್ 9, 1988 ರಂದು ಇಸ್ಲಾಂ ಅನ್ನು ಬಾಂಗ್ಲಾದೇಶದ ಅಧಿಕೃತ ರಾಜ್ಯ ಧರ್ಮವನ್ನಾಗಿ ಮಾಡಲಾಯಿತು. ಇದಂತೂ ಮೊದಲೇ ಉನ್ಮತ್ತರಾದ ಮುಸ್ಲಿಮರಿಗೆ ಹಿಂದೂಗಳ ಮೇಲೆ ಸವಾರಿ ನಡೆಸಲು ಅವಕಾಶ ಕಲ್ಪಿಸಿತು. 

ಬಂಗಾಳದಲ್ಲಿ ಈ ಹತ್ಯಾಕಾಂಡ ಖಿಲಾಫತ್ ಸಮಯದಿಂದ ಶುರುವಾದದ್ದಲ್ಲ. ಖಿಲ್ಜಿಗಳು ಬಂಗಾಳವನ್ನು ಆಕ್ರಮಿಸಿದಾಗಲೇ ಅಲ್ಲಿಗೆ ಬೆಂಕಿ ಹಚ್ಚಿಟ್ಟಿದ್ದಾರೆ. ಖಿಲ್ಜಿಯೋ, ಖಿಲಾಫತ್ತೋ ಹೆಸರು ಮಾತ್ರ. ತನ್ನದಲ್ಲದ ಯಾವುದನ್ನೂ ಸಹಿಸದ, ಪುಸ್ತಕವೊಂದರಲ್ಲಿ ಕೊರೆದ ವಾಕ್ಯಗಳೇ ಪವಿತ್ರ ಎನ್ನುವ ಮೂರ್ಖರ ಮತಾಂಧತೆಯ ಫಲ ಇದು. ಅವರು ಹೊಕ್ಕ ತಾಣಗಳಲ್ಲಿ ಅವರಿಗಾಗದ ಸಂಸ್ಕೃತಿಗಳು ಈ ರೀತಿ ಬೆಂಕಿಗೆ ಆಹುತಿಯಾಗುತ್ತಲೇ ಇರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳದವರು ಸೋಲುತ್ತಿದ್ದಾರೆ, ಸಾಯುತ್ತಿದ್ದಾರೆ. ಎಂದಿಗೆ ಮೊಘಲರು, ಬ್ರಿಟಿಷರು ಹಿಂದೂಗಳನ್ನು ನಿಶ್ಶಸ್ತ್ರೀಕರಣಗೊಳಿಸಿದರೋ ಅಂದಿನಿಂದ ಹಿಂದೂವಿನ ಮೇಲಿನ ದೌರ್ಜನ್ಯಕ್ಕೆ ಪ್ರತಿರೋಧ ಕಡಿಮೆಯಾಯಿತು. ಅಪ್ರಾಯೋಗಿಕ, ಸರಿಯಾಗಿ ಅರ್ಥವಿಸಿಕೊಳ್ಳದ ಅಹಿಂಸೆಯ ಬೆನ್ನು ಬಿದ್ದು ಕ್ಷಾತ್ರತ್ವ ಹ್ರಾಸವಾಯಿತು. ತಮ್ಮ ಸಂಖ್ಯೆ ಹೆಚ್ಚಿರುವಾಗ ರಾಜಕಾರಣಿಗಳ ಸೆಕ್ಯುಲರ್ ಉನ್ಮಾದಕ್ಕೆ ಬಲಿಯಾಗಿ ಹಿಂದೂಗಳು ಪ್ರಾಣ ಕಳೆದುಕೊಂಡರೆ, ಸಂಖ್ಯೆ ಕಡಿಮೆಯಾದ ಕಡೆ ರಕ್ಷಣೆಗೆ ಯಾರೂ ಇಲ್ಲದೆ ಬಲಿಯಾಗುತ್ತಿದ್ದಾರೆ. ಅಂದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ಸಲುವಾಗಿ ಹಿಂದೂಗಳು ಸರ್ವತ್ರ ಸನ್ನದ್ಧರಾಗಬೇಕು. ಪಲಾಯನ ಮಾಡಿ ಸಾಯುವ ಬದಲು, ಎದುರಿಸಿ ಗೆಲ್ಲುವ ತಮ್ಮ ಹಿಂದಿನ ಕ್ಷಾತ್ರವನ್ನು ಮೈಗೂಡಿಸಿಕೊಳ್ಳಬೇಕು. ಯಾವ ಸರಕಾರವೂ, ಯಾವ ಆರಕ್ಷಕ ಪಡೆಯೂ, ಯಾವ ಅನ್ಯಶಕ್ತಿಯೂ ಹಿಂದೂಗಳನ್ನು ರಕ್ಷಿಸಲಾರದು. ತನ್ನ ರಕ್ಷಣೆಗೆ ತಾನೇ ಸನ್ನದ್ಧನಾಗಬೇಕು. ಅತಿಯಾದ ಸೆಕ್ಯುಲರ್ ಬುದ್ಧಿ ಪ್ರದರ್ಶಿಸುತ್ತಾ ಹಾವಿಗೆ ಹಾಲೆರೆಯುವುದನ್ನು, ತಮ್ಮೊಳಗೆ ಕಚ್ಚಾಡುವುದನ್ನು ಬಿಟ್ಟು ತಾವಿರುವ ದೇಶಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಪ್ರಬಲರಾಗಬೇಕು. ಕ್ಷಾತ್ರಬಲವನ್ನೂ ಹೆಚ್ಚಿಸಿಕೊಳ್ಳಬೇಕು. ಪೊಳ್ಳು ಅಹಿಂಸೆ, ಪೊಳ್ಳು ಜಾತ್ಯಾತೀತವಾದಕ್ಕೆ ಬಲಿಯಾಗದ ಭವಿಷ್ಯದ ಹಿಂದೂ ಜನಾಂಗವನ್ನು ಬೆಳೆಸಬೇಕು. ತಮ್ಮೊಳಗೆ ಬರಲು ಇಚ್ಛೆ ಉಳ್ಳವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಧರ್ಮದೀಕ್ಷೆ ನೀಡಬೇಕು. ಅದೇ ಅಸ್ತಿತ್ವ ಉಳಿಸಿ, ಬೆಳೆಸಲು ಇರುವ ದಾರಿ.