ಪುಟಗಳು

ಶನಿವಾರ, ಆಗಸ್ಟ್ 31, 2013

ಮುನಿಸು ತರವೆ?


ಮಂದ ಮಾರುತ ಬೀಸೆ|
ನಿನ್ನ ನೋಡಿದೆ ಕೂಸೆ||
ಮಧುರ ಕಂಪದು ಸೋಕೆ|
ಶಶಿಯು ಮರೆವನು ಜೋಕೆ||

ಹುಸಿಯ ಮುನಿಸದು ಬೇಕೆ|
ಇನಿಯನ ನೆನಪದು ಸಾಕೆ||
ಇಳಿದಿದೆ ಕಂಬನಿ ಯಾಕೆ|
ನಗುತ ನಲಿಯೆಲೆ ಮಂಕೆ||

ಹಸುರು ಚೆಲ್ಲಿದೆ ನೋಡು|
ಕುಸುರು ಕೆತ್ತನೆ ಬೀಡು||
ನಾಡ ಹಿರಿಮೆಯ ಹಾಡು|
ಸೆಳೆವ ನಾಟ್ಯವ ಮಾಡು||

ಭೂಮಿ ನಿನ್ನದೆ ರಂಗ|
ಚೆಲುವು ಏರಿದೆ ಶೃಂಗ||
ಕನಸಿಗೇತರ ಭಂಗ|
ಮನವು ಬಯಸಿದೆ ಸಂಗ||

ಕವಿಯ ಕಲ್ಪನೆ ಮುದವು|
ಸುಖದಿ ತಲ್ಪದಿ ಒಲವು||
ನುಡಿವ ಮಾತಿದೆ ಹಲವು|
ಬಿಡೆಲೇ ಏತಕೀ ಛಲವು||

ವರುಣನೊಲುಮೆ

ವರುಣನೊಲುಮೆ


ನೀಲ ನಭದಿ ಕಾಳಮೇಘ
ವರುಣ ಚುಂಬನ||ಇಳೆಗೆ||
ಮಧುರ ಚುಂಬನ

ಮೇಘರವವು ಬರುವ ಮುನ್ನ
ಬೆಳಕು ಮಿಂಚಿದೆ||ಅವನಿಯ||
ತನುವ ಸೋಕಿದೆ

ವರ್ಷಧಾರೆ ನೋಡು ನೀರೆ
ಜಲದಿ ಚೆಲುವಿದೆ||ಧರೆಯ||
ರಂಗು ಚಿಮ್ಮಿದೆ

ಸುಪ್ರಭಾತ ಸಂಧ್ಯಾರಾಗ
ಸುರಥ ಗಾನವು||ಭುವಿಯ||
ಪ್ರೇಮ ರಾಗವು

ಚೆಲುವೆ ಅವನಿ ನಲಿವಳಿಂದು
ಹಸಿರು ಚಿಗುರಿರೆ ||ಧರಣಿಗೆ||
ವರುಣ ಒಲಿದಿರೆ

ಬುಧವಾರ, ಆಗಸ್ಟ್ 21, 2013

ಬಾಳು

ಮನದೊಳಕೆ ಬಂದವಳು ಮನೆಯೊಳಗೆ ಬಂದರೆ
ಬಾಳು ನಂದನವನ
ಮನೆಯೊಳಗೆ ಬಂದವಳು ಮನದೊಳಕೆ ಬಾರದಿದ್ದರೆ
ಬಾಳು ಸ್ಮಶಾನ

ಭಾನುವಾರ, ಆಗಸ್ಟ್ 18, 2013

ನಮೋ ನಮೋ...

ನಮೋ ನಮೋ...


ನಿಶೆಯ ನಶೆಯಲಿ ಮುಳುಗಿದೆ ಭಾರತ|
ಮೂಕ ಮೋಹನ ವೈರಿಗೆ ಶರಣಾಗತ||
ಇಟಲಿ ಸಂಜಾತೆಯ ಕರದೊಳು ಆಡಳಿತ|
ಹೈರಾಣಾಗಿದೆ ಭವ್ಯ ಭಾರತ||೧||

ಜಿಹಾದಿ ನಕ್ಸಲ ಭೃಷ್ಟಾಚಾರ|
ಜೀವರಕ್ಷಣೆಗೆ ದೇಶದಿ ಹಾಹಾಕಾರ||
ಸುಳ್ಳೇ ಸತ್ಯವು ಅನ್ಯಾಯವೇ ನ್ಯಾಯವು|
ಧರ್ಮವು ಕುಸಿದಿದೆ ಸಂಸ್ಕೃತಿ ಅಳಿದಿದೆ||೨||

ಇರುಳು ಕಳೆಯುತಿದೆ ಬೆಳಕು ಹರಿಯುತಿದೆ|
ಪಶ್ಚಿಮ ಭಾರತದೊಳು ಅರುಣೋದಯ||
ಬೆಳಕು ಚದುರಿಹುದು ಕುರುಡು ಕಳೆದಿಹುದು|
ಜನತೆ ಬಯಸಿಹುದು ಭಾರತದ ಮೋದಿ ಮಯ||೩||

ಸೌರ ಶಕ್ತಿಯ ಮೂಲ ಚರಂಕಾ|
ಏಷ್ಯಾದಲ್ಲೇ ಮೊದಲನೇ ಅಂಕ||
ಹಳ್ಳಿ ಬೆಳಗಿದೆ ಹಸಿರು ಚಿಗುರಿದೆ|
ರೈತನ ಮೊಗದಿ ನಗುವು ಮಿನುಗಿದೆ||೪||

ನದಿಯ ಜೋಡಣೆ ರಾಷ್ಟ್ರ ಜೋಡಣೆ|
ವಾಜಪೇಯಿ ನೀತಿ||
ಅತ್ಯುತ್ತಮ ವಿಧಾನ ಸಮರ್ಪಕ ಅನುಷ್ಠಾನ|
ನರೇಂದ್ರ ಮೋದಿ ರೀತಿ||೫||

ಬತ್ತಿದ ನರ್ಮದೆ ಉಕ್ಕಿ ಹರಿದಳು|
ಗುಪ್ತ ಸರಸಿರೆ ಮತ್ತೆ ಒಲಿದಳು||
ಸಬರ್ಮತಿ ಹೊಳೆದಳು ಸರದಾರನ ಸರೋವರ|
ಬಳಲಿದ ಕೃಷಿಕಗೆ ಬರಡು ಭೂಮಿಗೆ ಮೋದಿಯ ವರ||೬||

ದಶ ವರುಷವು ಶಾಂತಿಯ ಹರುಷವು|
ಸಂಪೂರ್ಣ ಸಾಕ್ಷರತೆ ಉದ್ಯೋಗ ನೀತಿಯು||
ಅಬಲೆಯು ಸಬಲೆ ಮಗಳನು ಉಳಿಸಿ|
ವಿಶ್ವ ಮನ್ನಣೆ ಕೀರ್ತಿಯ ಗಳಿಸಿ||೭||

ಸರ್ವರೊಂದಿಗೆ ಸಮಗ್ರ ವಿಕಾಸ|
ನರೇಂದ್ರ ಮೋದಿಗೆ ಕೊಡಿ ಅವಕಾಶ||
ನಮೋ ನಮೋ ಅಭಿವೃದ್ಧಿಯ ಹರಿಕಾರ|
ಭವ್ಯ ಭಾರತದ ಕನಸಿಗೆ ಶ್ರೀಕಾರ||೮||

ಬುಧವಾರ, ಆಗಸ್ಟ್ 14, 2013

ಮಳೆ...ಕುಂಭದ್ರೋಣ ಮಳೆ!

ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ನೆನೆದು ಚಿಗುರಿ ನಳನಳಿಸುತ್ತಿರುವ ಸಾಲುಗಳು!

ಮಳೆ...ಕುಂಭದ್ರೋಣ ಮಳೆ!

ಇಳೆಯ ಕಳೆಯ ಅಳೆದು ತೊಳೆದು|
ಎಳೆಯ ಚಿಗುರು ಮನವ ಸೆಳೆದು||
ಜೀವ ತಳೆದ ನವ ತಳಿಯ ಸೆಳೆತ|
ಜೀವದುಗಮಕೆ ಪ್ರಕೃತಿಯ ತುಡಿತ||

ತೊರೆಯ ತೊರೆದು ನದಿಯು ಹರಿದು|
ಜಲಧಿ ಸೇರುವ ಭರದಿ ಛಲದಿ||
ಹಸಿರ ಸೀರೆ ಶುಭ್ರ ಧಾರೆ|
ಹರುಷ ತರುತಲಿಹುದು ಮನದಿ||

ತಾರೆಗಳು ಜಾರಿ ಧರೆಯ ಸೇರಿ|
ಹೊಳೆಯುತಿಹುದು ಶ್ವೇತ ಧಾರೆ||
ನಡುವ ಬಳುಕಿಸಿ ಮಡುವ ಸೇರಿ|
ಸಾರುತಿಹುದು ನೀಲ ಮೇಘ ಲೀಲೆ||




 

ಶನಿವಾರ, ಆಗಸ್ಟ್ 3, 2013

ಯಾರವರು?



ನಾವು ಗುಜರಾತಿನಲ್ಲಿ ಕೃಷಿ ಬೆಳವಣಿಗೆ 10-11% ಇದೆ ಎಂದಾಗ
ಅವರು 2002 ಗುಜರಾತ್ ಗಲಭೆಯ ಕಡೆ ಕೈ ತೋರಿಸುತ್ತಾರೆ!

ನಾವು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ಗುಜರಾತಿನಲ್ಲಿದ ಎಂದರೆ
ಅವರು ಮತ್ತೆ 2002 ಗುಜರಾತ್ ಗಲಭೆಯ ಕಡೆ ಕೈ ತೋರಿಸುತ್ತಾರೆ!

ನಾವು ಗುಜರಾತ್ ತನ್ನ ಎಲ್ಲ 18,000 ಹಳ್ಳಿಗಳಿಗೆ ದಿನದ 24 ತಾಸು ವಿದ್ಯುತ್ ಒದಗಿಸುವ ಭಾರತದ ಏಕೈಕ ರಾಜ್ಯವಾಗಿದೆ ಎಂದು ಹೇಳಿದರೆ ಅವರದು ಮತ್ತದೇ 2002 ಗುಜರಾತ್ ಗಲಭೆಯ ವರಾತ!

ನಾವು ಅವರಿಗೆ "ಗುಜರಾತ್ ರಸ್ತೆಗಳು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾಗಿವೆ" ಎಂಬ ವಿಶ್ವ ಬ್ಯಾಂಕಿನ 2011 ಹೇಳಿಕೆಯನ್ನು ನೆನಪಿಸಿದರೆ ಅವರಿಗೇ 2002ರದ್ದೇ ಗುಂಗು!

ನಾವು ಗುಜರಾತ್ ತನ್ನ ಎಲ್ಲಾ 18,000 ಹಳ್ಳಿಗಳಲ್ಲಿ ವೇಗದ ನಿಸ್ತಂತು ಬ್ರಾಡ್ಬ್ಯಾಂಡ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂದರೆ ಅವರದು ಮತ್ತದೇ 2002!


ಯಾವಾಗ 2010 ಫೋರ್ಬ್ಸ್ ನಿಯತಕಾಲಿಕೆ ಅಹಮದಾಬಾದ್ ಭಾರತದ ಒಂದನೇ ಮತ್ತು ವಿಶ್ವದಲ್ಲೇ 3ನೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದರೆ ಅವರದು 2002 ಅದೇ ರಾಗ ಅದೇ ಹಾಡು!

ನಾವು ಗುಜರಾತ್ ಪ್ರವಾಸೋದ್ಯಮ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದಾಗ ಅವರ ಕಿವಿಗಳು ಮುಚ್ಚಿಯೇ ಇರುತ್ತವೆ!

ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ವರದಿಯ ಪ್ರಕಾರ ಗುಜರಾತ್ ದೇಶದಲ್ಲೇ ಅತ್ಯಂತ ಕಡಿಮೆ ನಿರುದ್ಯೋಗ ದರ ಇರುವ ರಾಜ್ಯ ಎಂದರೆ ಅವರು ಮತ್ತೆ 2002ರಲ್ಲೇ ಇರುತ್ತಾರೆ!

ಮೋದಿ ಮತ್ತೆ ಮತ್ತೆ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಅತ್ಯುತ್ತಮ ಭಾರತೀಯ ನಾಯಕನಾಗಿ ಆಯ್ಕೆ ಆದಾಗ
ಅವರು 2002 ಕಡೆಗೇ ಕೈ ತೋರಿಸೋದು!

ಇಡೀ ವಿಶ್ವ ಮೋದಿ-ಅಭಿವೃದ್ಧಿ-ಮಾದರಿ ಬಗ್ಗೆ ಮಾತನಾಡುತ್ತಿರುವಾಗ, ವಿಶ್ವದ ನಂಬರ್ ವನ್ ನಿಯತಕಾಲಿಕೆ ಟೈಮ್ ಮ್ಯಾಗಝಿನ್ ಮೋದಿ ಬಗ್ಗೆ ಬರೆದಾಗ ಬುದ್ಧಿಹೀನ ಜೀವಿಗಳದ್ದು ಮತ್ತದೇ ಹಳಸಲು!

ನಾವು ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ ಎಂದರೆ ಅವರು ನಿಂತ ನೀರಿನ ತರಹ ಮತ್ತೂ 2002ರಲ್ಲೇ ಇರುತ್ತಾರೆ ಹೊರತು ಮುಂದೆ ಬರೋದೆ ಇಲ್ಲ!

ಆದರೆ ನಾವು  1993, 2009 ಮುಂಬೈ ಗಲಭೆಗಳು, 2012 ಅಸ್ಸಾಂ ಗಲಭೆ, 1984 ಸಿಖ್ ನರಮೇಧ, 1947 ಬಂಗಾಳ ಗಲಭೆಗಳು, 1969 ಗುಜರಾತ್ ಗಲಭೆ, 1980 ಮೊರದಾಬಾದ್ ಗಲಭೆಗಳು, 1983 ಅಸ್ಸಾಂ ಗಲಭೆ, 1989 ಭಗಲ್ಪುರ್ ದಂಗೆ ಹಾಗೂ ಇಂತಹ 18ಕ್ಕೂ ಹೆಚ್ಚು ಗಲಭೆಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಂಭವಿಸಿದ ಬಗ್ಗೆ ನೆನಪಿಸಿದಾಗ ಅವರದು ನಾಚಿಕೆ, ಮಾನ, ಮರ್ಯಾದೆ ಬಿಟ್ಟ ನೀರವ ಮೌನ!

ಆದರೆ ಎಷ್ಟು ಕಾಲ ಸತ್ಯ ಮುಚ್ಚಿಡಲು ಸಾಧ್ಯ? ಇವತ್ತಿನ ಕೋಲಾರದ ನಮೋ ಬ್ರಿಗೇಡ್ ಶುಭಾರಂಭದ ಚಿತ್ರ ಅವರ 2002 ವಿತಂಡವಾದ ಎಷ್ಟು ಹಳಸಲು ಅಂತ ಎತ್ತಿ ತೋರಿಸುತ್ತದೆಯಲ್ಲವೆ?



ಚಿತ್ರ ಕೃಪೆ: ತೇಜಸ್ವಿ ಸೂರ್ಯ

ಗುರುವಾರ, ಆಗಸ್ಟ್ 1, 2013

ಕಂಪ ಸೂಸುವ ಸಂಪಿಗೆ

ಅಬ್ಬಾ ಅದೆಂಥಾ ಸೌಂದರ್ಯ. ಪೌರ್ಣಿಮೆಯ ಚಂದಿರನಂತೆ, ಹಾಲು ಚೆಲ್ಲಿದ ಬೆಳದಿಂಗಳಂತೆ... ನಯನಗಳೋ ಮಧುರ ಕಾವ್ಯದ ಒರತೆಗಳು...ಕಂಪ ಸೂಸುವ ಸಂಪಿಗೆಯು ನಾಚಿ ಮುದುಡಿಹುದು ನಿನ್ನ ನಾಸಿಕದ ಲಾಸ್ಯ ನೋಡಿ...ವಿಶಾಲವಾದ ಲಲಾಟವ ನೇವರಿಸುವ ಬಯಕೆ ಮೂಡಿದೊಡೆ ಹುಬ್ಬು ಕುಣಿಸಿ ತಬ್ಬಿಬ್ಬುಗೊಳಿಸುವ ನಿನ್ನ ಸಿರಿ ಸೌಂದರ್ಯದ ಪರಿಗೆ ಕರಗಿ ಒರೆಯಲಾಗದೇ ಕುಳಿತೆ. ಕಮಲವೇ ಕಪೋಲವೋ ಅಥವಾ ಕಪೋಲಗಳೇ ಕಮಲಗಳೋ ಎಂಬ ಭ್ರಮೆಯಲ್ಲೇ ಮುಳುಗಿರಲು ತಿಳಿ ಹಾಸ್ಯಕೆ ಮುಗುಳ್ನಗುವ ಭರದಲ್ಲಿ ಗುಳಿ ಬಿದ್ದ ಕೆನ್ನೆಗಳು ರನ್ನೆಯಾಗಿಸಿವೆ ನಿನ್ನ ಮನದನ್ನೆಯಾಗಿಸುವ ತವಕ... ಸುಂದರ ದಂತ ಪಂಕ್ತಿಗೆ ಬೆಳಕಿನ ರಶ್ಮಿಯದು ಸೋಕಲು ಮಿಂಚು ಹೊಡೆದಂತೆ....ಅಧರದ್ವಯಗಳ ಮಧುರ ಲಾಸ್ಯಕೆ ಸೋತು ಹೋದೆ ನಾ...

ಚಿತ್ರ ಕೃಪೆ: ಯಕ್ಷ ಪ್ರೇಮಿ


ಅಮಮಾ ಅರರೆ
ಇದು ಎಂಥಾ ಚೆಲುವು ಅರಿಯೆ|
ಶಶಿಯು ಜಾರಿ
ಧರೆಗೆ ಬಿದ್ದ ಪರಿಯೆ||

ತಾರೆಗಳೆಲ್ಲ ಜಾರಿ ಸೇರಿ ಹೋದ
ಯೌವನದ ಸೊಬಗು|
ಮಿಂಚು ಕೂಡಾ ನಾಚಿ ಮಿಂಚಿ ಹೋದ
ತನುವ ತಳುಕು ಬಳುಕು||

ಅವಳ ಒನಪು ವೈಯ್ಯಾರಕೆ
ತಂಗಾಳಿ ತಾ ಸೋತಿತೋ|
ಮೃದುಲ ಮೈ ಸಿರಿಯಲಿ
ಜಗದ ಸೊಬಗು ಸೆರೆಯಾಯಿತೋ||

ಮೇಘ ಮರೆಗೆ ಸರಿದ
ಶಶಿಯ ತೆರದಿ ನಗುವು|
ಇಬ್ಬನಿ ತಬ್ಬಿದ ಇಳೆಗೆ
ರವಿ ತೇಜ ಸೋಕಿದ ಚೆಲುವು||

ಮಂದ ಮಾರುತ ಬೀಸಿ
ತವ ಅಂದವ ಸೋಕಿ|
ಚಂದಿರ ನಾಚಿ
ಮರೆಯಾದ ನಿನ್ನಂದಕೆ ಬೆರಗಾಗಿ||