ಪುಟಗಳು

ಶನಿವಾರ, ಆಗಸ್ಟ್ 20, 2022

ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು

 ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು


ಖಗೋಳ ಶಾಸ್ತ್ರಕ್ಕೆ ಪ್ರಾಚೀನ ಭಾರತದ ಕೊಡುಗೆ ಅಪಾರ. ಪ್ರಸಕ್ತ ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಗಮನಿಸಿದರೆ ಪ್ರಾಚೀನ ಭಾರತದಲ್ಲಿ ಮೂರು ಮಹತ್ತಾದ ಖಗೋಳ ವೀಕ್ಷಣಾಲಯಗಳಿದ್ದವು. ಮೆಹರೂಲಿ, ಉಜ್ಜಯಿನಿ ಹಾಗೂ ಮಹೋದಯಪುರಂಗಳಲ್ಲಿ ಈ ವೀಕ್ಷಣಾಲಯಗಳು ಸ್ಥಿತವಾಗಿದ್ದವು. ಮೆಹರೂಲಿಯಲ್ಲಿ ವರಾಹಮಿಹಿರ ವಿನ್ಯಾಸಗೊಳಿಸಿದ, ಶಕಪುರುಷ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ವೀಕ್ಷಣಾಲಯವಿತ್ತು. ಉಜ್ಜಯಿನಿಯ ವೀಕ್ಷಣಾಲಯವೂ ಬಹುಷಃ ವಿಕ್ರಮಾದಿತ್ಯನಿಂದಲೇ ನಿರ್ಮಿಸಲ್ಪಟ್ಟಿತ್ತು. ಉಜ್ಜಯಿನಿಯಲ್ಲಿ ಹಲವು ಬುದ್ಧಿವಂತ ತಲೆಗಳು ಒಟ್ಟುಗೂಡಿದ್ದವು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ೧ & ೨, ವಟೇಶ್ವರ ಮುಂತಾದ ಘಟಾನುಘಟಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಮಹೋದಯಪುರಂನಲ್ಲಿನ ವೀಕ್ಷಣಾಲಯವನ್ನು ಶಂಕರನಾರಾಯಣ ಎನ್ನುವ ವಿದ್ವಾಂಸ (~ ಸಾ.ಶ. 860) ವಿನ್ಯಾಸಗೊಳಿಸಿದ. ಹಲವು ಪರಿಚಿತ ವೀಕ್ಷಣಾ ಉಪಕರಣಗಳು ಇಲ್ಲಿದ್ದವು. ಆದರೆ ಈ ವೀಕ್ಷಣಾಲಯದ ಒಂದು ಇಟ್ಟಿಗೆಯೂ ಈಗ ಉಳಿದಿಲ್ಲ.


ಜ್ಯೋತಿಷ್ಯ ಮತ್ತು ಕಾಲಗಣನೆಗೆ ಅವಂತಿಯ ಕೊಡುಗೆ ಅನನ್ಯ. ಶಕಕರ್ತ ವಿಕ್ರಮಾದಿತ್ಯನ ಆಡಳಿತಕ್ಕೂ ಇದು ಒಳಪಟ್ಟಿತ್ತು. ಪ್ರಾಚೀನ ಮಾಲವವೇ ಅವಂತೀ. ಅದರ ಒಂದು ಭಾಗ ಉಜ್ಜಯಿನಿಯಾದರೆ ಇನ್ನೊಂದು ಮಾಹಿಷ್ಮತಿಯಾಗಿತ್ತು.ಜಗದ್ಗುರು ಶ್ರೀ ಶಂಕರಾಚಾರ್ಯರ ವೇದಾಂತ ಸಂವಾದ ನಡೆದುದು ಈ ಮಾಲವದಲ್ಲೇ. ಮಾಲವ ಜ್ಯೋತಿಷಿ ಹಾಗೂ ಖಗೋಳ ವಿಜ್ಣಾನಿಗಳ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು. ಉಜ್ಜಯಿನಿಯಲ್ಲಿದ್ದ ಖಗೋಳ ವೀಕ್ಷಣಾಲಯವೂ ಅದಕ್ಕೆ ಕಾರಣ. ಬಹುಷಃ ವಿಕ್ರಮಾದಿತ್ಯನೇ ಇದನ್ನು ಸ್ಥಾಪಿಸಿರಬಹುದು. ಸೂರ್ಯಕೇಂದ್ರಿತ ಅವಧಿಗಳಿಗೆ ತ್ರಿಕೋನಮಿತಿಯ ಕೋಷ್ಟಕಗಳಿಂದ ಹಿಡಿದು ಅಕ್ಷಾಂಶ ಮತ್ತು ರೇಖಾಂಶ ನಿರ್ಣಯದ ತತ್ವಗಳವರೆಗೆ ಎಲ್ಲವೂ ಇಲ್ಲಿಂದ ಬಂದವು. ಶೂನ್ಯ ಡಿಗ್ರಿ ಮಧ್ಯರೇಖೆ ಹಾದು ಹೋಗುವುದೇ ಇಲ್ಲಿ. ಉಜ್ಜಯಿನಿ ಮಹಾಕಾಲನ ನೆಲೆ ಆಗಲೂ ಕಾರಣವೇ ಅದು. ಸೃಷ್ಟಿಯ ಆರಂಭದಲ್ಲೇ ಈ ನಗರವಿತ್ತು (ಸ್ಕಂದಪುರಾಣ ಉಜ್ಜಯಿನಿಯನ್ನು ಪ್ರತಿಕಲ್ಪ ಎಂಬುದಾಗಿ ಹೆಸರಿಸಿದೆ.) ಎನ್ನುವ ಪ್ರತೀತಿಗೂ ಅದೇ ಕಾರಣ. ಅಂತಹಾ ಮಧ್ಯಬಿಂದುವಿನಲ್ಲಿ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದ್ದೂ ಪ್ರಾಚೀನ ಭಾರತೀಯರ ಅಪ್ರತಿಮ ಖಗೋಳ ಜ್ಣಾನಕ್ಕೆ ಸಾಕ್ಷಿ.


ಉಜ್ಜಯಿನಿಯ ವಿಕ್ಷಣಾಲಯದಿಂದ ಹೊರಬಿದ್ದ ಅದ್ವಿತೀಯ ಸಂಶೋಧನೆಗಳಿಂದ ಭಾರತೀಯ ಕೃಷಿ ಮತ್ತು ವ್ಯಾಪಾರಗಳು ನಿಖರವಾದ ಸಂಚರಣೆ ಹಾಗೂ ದಿನಸೂಚಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದವು. ಅರಬ್ಬರು ಹಾಗೂ ಯೂರೋಪಿಯನ್ನರು ಇಲ್ಲಿಂದಲೇ ಖಗೋಳ ವಿಜ್ಞಾನದ ತಂತ್ರಗಳನ್ನು ಪಡೆದರು.  ಭೋಜರಾಜನ ತರುವಾಯ ಉಜ್ಜಯಿನಿ ದುರ್ಬಲವಾಯಿತು. ದೆಹಲಿಯನ್ನು ಆಳುತ್ತಿದ್ದ ಇಲ್ತಮಿಶ್ ಉಜ್ಜಯಿನಿಯ ಮೇಲೆ ದಾಳಿ ಮಾಡಿ ಮಹಾಕಾಲನ ಮಂದಿರವನ್ನೂ , ಖಗೋಳ ವೀಕ್ಷಣಾಲಯವನ್ನೂ ನಾಶ ಮಾಡಿ ಚಿನ್ನದ ಮಹಾಕಾಲನ ಮೂರ್ತಿಯನ್ನು ದೆಹಲಿಗೆ ಹೊತ್ತೊಯ್ಯುತ್ತಾನೆ. ಉಜ್ಜಯಿನಿಯನ್ನು ಲೂಟಿಗೈದು ಮಹಾಕಾಲನ ದೇವಾಲಯದ ಸ್ಥಳದಲ್ಲೇ ಮಸೀದಿಯನ್ನೂ ನಿರ್ಮಿಸುತ್ತಾನೆ. ಶಕಪುರುಷ ವಿಕ್ರಮನ ದೊಡ್ಡದಾದ ಕಂಚಿನ ಪ್ರತಿಮೆಯೊಂದನ್ನು ಈ ವೀಕ್ಷಣಾಲಯದಲ್ಲಿ ಖಗೋಳ ಶಾಸ್ತ್ರಜ್ಞರು ಬಳಸಿದ್ದರು. ಇಲ್ತಮಿಶ್ ಅವಮಾನಿಸಲೆಂದೇ ಅದನ್ನು ದೆಹಲಿಗೆ ಕೊಂಡೊಯ್ದು ಒಡೆದು ಹಾಕಿದ. ಅಬು ಉಮ್ರ್‌ನ ತಬ್ಕತ್-ಇ-ನಾಸಿರಿ ಇಲ್ತುಮಿಶ್‌ನಿಂದ ಉಜ್ಜಯಿನಿಯ ನಾಶವನ್ನು ದಾಖಲಿಸಿದೆ. ಜಲಾಲುದ್ದೀನ್ ಫಿರೋಜ್ ಶಾ ಖಿಲ್ಜಿ ಎರಡೆರಡು ಬಾರಿ ದಾಳಿ ಮಾಡಿ ಅಳಿದುಳಿದ ದೇವಾಲಯಗಳನ್ನು ನಾಶಮಾಡಿ ನಗರವನ್ನು ನರಕ ಸದೃಶಗೊಳಿಸುತ್ತಾನೆ. ಬಳಿಕ ಹಲವು ಮುಸ್ಲಿಮ್ ರಾಜರುಗಳ ಆಡಳಿತವನ್ನು ಕಂಡ ಉಜ್ಜಯಿನಿ ನಲುಗಿ ಹೋಯಿತು.


ಮುಂದೆ 1725ರಲ್ಲಿ ರಾಜಾ ಜಯಸಿಂಹ ಇಲ್ಲಿನ ಖಗೋಳ ವೀಕ್ಷಾಣಾಲಯವನ್ನು ಪುನರುಜ್ಜೀವನಗೊಳಿಸಿದ. ಖಗೋಳ ಶಾಸ್ತ್ರಕ್ಕೆ ಈತನ ಕೊಡುಗೆ ಅನನ್ಯ. ಖಗೋಲಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಜಯಸಿಂಹ ಪಂಚಾಂಗ ಪರಿಷ್ಕರಣೆ, ಗ್ರಹಗಳ ಚಲನಾಧ್ಯಯನ, ಆಕಾಶಕಾಯಗಳ ವೀಕ್ಷಣೆಯನ್ನು ಚೆನ್ನಾಗಿ ಬಲ್ಲವನಾಗಿದ್ದುದು ಮಾತ್ರವಲ್ಲದೆ ಅವುಗಳ ಕಲಿಕೆಗೆ ಪ್ರೋತ್ಸಾಹವನ್ನೂ ಕೊಟ್ಟಿದ್ದ. ಯೂಕ್ಲಿಡ್‌ನ‌ ಜ್ಯಾಮಿತಿಯ ಗ್ರಂಥ, ಟಾಲೆಮಿಯ ರಸಶಾಸ್ತ್ರಗ್ರಂಥ, ಜಾನ್‌ ನೇಪಿಯರ್‌ನ ಕೃತಿಗಳನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅವನಿಗೆ ಪ್ರಿಯವಾದ ಹವ್ಯಾಸಗಳಾಗಿದ್ದವು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ಸ್ವತಃ ತಯಾರಿಸುತ್ತಿದ್ದ. ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಜಂತರ್ ಮಂತರ್ ಬಯಲು ಖಗೋಳವೀಕ್ಷಣಾಲಯದಲ್ಲಿರುವ ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ ಸೂರ್ಯಯಂತ್ರವನ್ನು ನಿರ್ಮಿಸಿದವ ಜಯಸಿಂಹನೇ. ಕಲ್ಲು, ಇಟ್ಟಿಗೆ ಸುಣ್ಣಗಾರೆ, ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆ ಎಂಥವರನ್ನೂ ಬೆರಗಾಗಿಸುತ್ತದೆ. ದೆಹಲಿಯ ಜಂತರ್ ಮಂತರ್, ಮಥುರಾ, ಉಜ್ಜಯಿನಿ, ವಾರಾಣಸಿಗಳಲ್ಲಿ ಖಗೋಲ ವೀಕ್ಷಣಾಲಯಗಳನ್ನು ತಾನೇ ರೂಪಿಸಿ ನಿರ್ಮಿಸಿದ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಯಾರೇ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಗಳ ಕುರಿತು ಅಧ್ಯಯನ ನಡೆಸಬಹುದಿತ್ತು. ದೇಶ-ವಿದೇಶಗಳ ವಿದ್ವಾಂಸರನ್ನು ಕರೆಸಿ ಗೋಷ್ಠಿ ನಡೆಸುತ್ತಿದ್ದ. ಮಧ್ಯ ಏಷ್ಯಾ ಮತ್ತು ಯೂರೋಪುಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಗಳನ್ನು, ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದಲ್ಲದೆ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ. ಅರಬ್ ಹಾಗೂ ಐರೋಪ್ಯ ಖಗೋಲಶಾಸ್ತ್ರಾಧ್ಯಯನಕ್ಕೆ ಭಾರತೀಯ ಜ್ಯೋತಿರ್ವಿದ್ಯೆಯನ್ನು ಬೆಸೆದುದು ಅವನ ಬಹುದೊಡ್ಡ ಸಾಧನೆ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮ ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಜನಸಾಮಾನ್ಯರಿಗೆಂದೇ ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಉದಯವಾಗುವ ಹಾಗೂ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.


ಜಂತರ್ ಎಂದರೆ ಯಂತ್ರ, ಮಂತರ್ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ, ನಾರೀ ವಲಯ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್ ಯಂತ್ರ, ಧ್ರುವದರ್ಶಿಕೆ ಪಟ್ಟಿಕೆ, ಷಷ್ಠಾಂಶ ಯಂತ್ರ, ಛಾಯಾಯಂತ್ರ, ದಕ್ಷಿಣಾವೃತ್ತಿ ಯಂತ್ರ ಮುಂತಾಗಿ ಹಲವು ವಿವಿಧ ಉಪಕರಣಗಳು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲಿದ್ದವು. ಜಯಪ್ರಕಾಶ ಯಂತ್ರದಲ್ಲಿ ನಿಮ್ನ ಅರ್ಧವೃತ್ತಾಕಾರದ ಭಾಗಗಳೆರಡು ಸರದಿಯಲ್ಲಿ ಗಂಟೆಗೊಂದರಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸ್ಥಳೀಯ ಕಾಲವನ್ನು, ಸೂರ್ಯನ ಸ್ಥಾನ, ಸಂಕ್ರಾಂತಿ ವೃತ್ತ ಮತ್ತು ಇಲ್ಲಿ ಗುರುತು ಹಾಕಿರುವ ರಾಶಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಸಹಾಯದಿಂದ ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎನ್ನುವುದನ್ನು ತಿಳಿಯಬಹುದು. ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್ 22 ಹಾಗೂ ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ ನೇರವಾಗಿ ಬೀಳುವ ಹಾಗೂ ಮಾರ್ಚ್ 21 ಮತ್ತು ಸೆಪ್ಟೆಂಬರ್ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವ ಕಾಲಗಣನೆಯನ್ನು ತೋರಿಸುತ್ತದೆ. ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿಂದ ಕೂಡಿದುದೇ ಮಿಶ್ರಯಂತ್ರ. ವಿರಾಟ್ ಸಾಮ್ರಾಟ್ ಯಂತ್ರ ದೃಕ್ಸಿದ್ಧಿ ಕಾಲವನ್ನು ಸೂಚಿಸುತ್ತದೆ. ಇದು ಕೇವಲ ಎರಡು ಸೆಕೆಂಡ್ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲವನ್ನು ತೋರಿಸುತ್ತದೆ. ಇದರಲ್ಲಿರುವ ಷಷ್ಠಾಂಶವೆಂಬ ವೃತ್ತಖಂಡಾಕೃತಿಯ ಮೇಲೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ಸೂಚಿಸುತ್ತದೆ. ದುಂಡನೆಯ ಕಂಬವೊಂದು ದಿಗಂಶವನ್ನು, ಛಾಯಾ ಯಂತ್ರ ಕಾಲವನ್ನೂ ತೋರಿಸುತ್ತವೆ. ಈ ಯಂತ್ರದಿಂದ ಸೂರ್ಯನ ಘಂಟಾವೃತ್ತಾಂಶವನ್ನು ತಿಳಿಯಬಹುದು. ಧ್ರುವ ನಕ್ಷತ್ರವನ್ನು ನೋಡಲು ಇರುವ ಧ್ರುವದರ್ಶಿಕೆ ಪಟ್ಟಿಕೆಯಿಂದ ಹನ್ನೆರಡು ರಾಶಿಗಳ ಸ್ಥಾನ ಹಾಗೂ ಸಮಭಾಜಕ ವೃತ್ತದಿಂದ ಸೂರ್ಯ ಯಾವ ದಿಕ್ಕಿನಲ್ಲಿ, ಯಾವ ಕೋನದಲ್ಲಿರುವನೆಂದೂ ತಿಳಿಯಬಹುದು. ರಾಮಯಂತ್ರ ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಸೂಚಿಸುತ್ತದೆ. ಉಜ್ಜಯಿನಿ ಮೊದಲಿನಿಂದಲೂ ಖಗೋಳಶಾಸ್ತ್ರ ಕೇಂದ್ರವಾಗಿಯೇ ಇತಿಹಾಸ ಪ್ರಸಿದ್ಧ. ಅಲ್ಲಿ ಜಯಸಿಂಹ ನಿರ್ಮಿಸಿದ್ದ ವೀಕ್ಷಣಾಲಯ ಬಹುತೇಕ ಶಿಥಿಲವಾಗಿದೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯವೂ ಈಗ ಸಂಪೂರ್ಣವಾಗಿ ನಾಶವಾಗಿದೆ.


ಭಾಸ್ಕರ ಉಜ್ಜಯಿನಿಯ ವೀಕ್ಷಣಾಲಯದ ಮುಖ್ಯಸ್ಥನಾಗಿದ್ದ. ಆತ ಕಾಲವಾದದ್ದು ಸಾ.ಶ. 1185ರಲ್ಲಿ. ಸಾ.ಶ. 1233ರಲ್ಲಿ ತುರ್ಕರು ಉಜ್ಜಯಿನಿಯನ್ನು ನಾಶಪಡಿಸಿದರು. ನಮ್ಮ ಅದೃಷ್ಟಕ್ಕೆ ಭಾಸ್ಕರ ಆ ಮೊದಲೇ ಇದ್ದ ಕಾರಣ ಆತ ಹಾಕಿದ ತಳಪಾಯದಿಂದ ಮಾಧವ ಕಲನಶಾಸ್ತ್ರ(ಕ್ಯಾಲ್ಕುಲಸ್)ವನ್ನು ಅಭಿವೃದ್ಧಿಪಡಿಸುವಂತಾಯಿತು. ಆರ್ಯಭಟೀಯ ಗಣಿತೀಯ ಶಾಲೆಯು ತ್ರಿಕೋನಮಿತಿಯ ಕೋಷ್ಟಕಗಳನ್ನು ಬಳಸುತ್ತಿತ್ತು. ಆರ್ಯಭಟನ ಸೈನ್-ವ್ಯತ್ಯಾಸ ಕೋಷ್ಟಕವು 1 ನೇ ನಿಮಿಷದವರೆಗೆ ನಿಖರವಾಗಿತ್ತು. ವಟೇಶ್ವರ (ಸಾ.ಶ. 904) ಇದರ ನಿಖರತೆಯನ್ನು 2ನೇ ನಿಮಿಷಕ್ಕೆ ತಳ್ಳಿದ. ಬಳಿಕ ಇದು ಮುಂದುವರೆದದ್ದು ಕೇರಳದಲ್ಲಿ. ಆರ್ಯಭಟನ ಅತ್ಯಂತ ಉತ್ಕಟ ಅನುಯಾಯಿಗಳು ಕೇರಳದಲ್ಲಿದ್ದರು. ಅಲ್ಲಿ ಅನೇಕ ವ್ಯಾಖ್ಯಾನಗಳನ್ನು ರಚಿಸಲಾಯಿತು. ಆದರೆ ಹೆಚ್ಚಿನ ಆರಂಭಿಕ ಕೇರಳದ ಗಣಿತಜ್ಞರ ಕೃತಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಳೆದುಹೋಗಿವೆ.

             ಹರಿದತ್ತ (ಸಾ.ಶ.683), ಗೋವಿಂದಸ್ವಾಮಿ (ಸಾ.ಶ.830CE), ಶಂಕರನಾರಾಯಣ (ಸಾ.ಶ.869CE), ಜಯದೇವ (ಸಾ.ಶ.950CE), ಉದಯದಿವಾಕರ (ಸಾ.ಶ.1073CE) ಇವರಲ್ಲಿ ಪ್ರಮುಖರು. ಮಹೋದಯಪುರಂನಿಂದ ಆಳುತ್ತಿದ್ದ ಕೇರಳದ ಚೇರ ಚಕ್ರವರ್ತಿಯಾದ ಸ್ಥಾಣು ರವಿ ಕುಲಶೇಖರ (ಸಾ.ಶ.844-883)ನಿಗೆ ಸೇವೆ ಸಲ್ಲಿಸುತ್ತಿದ್ದ ಗೋವಿಂದಸ್ವಾಮಿ 3ನೇ ನಿಮಿಷಕ್ಕೆ ಸೈನ್-ವ್ಯತ್ಯಾಸ ಕೋಷ್ಟಕವನ್ನು ಸುಧಾರಿಸಲು ಪ್ರಯತ್ನಿಸಿದ. ಆತನ ದೂರದ ಉತ್ತರಾಧಿಕಾರಿ ಮಾಧವ ಇದನ್ನು ಸಾಧಿಸಿದ. ಆತ  ಇಂದು ನ್ಯೂಟನ್-ಗಾಸ್ ಇಂಟರ್ಪೋಲೇಷನ್ (2 ನೇ ಕ್ರಮ) ಎಂದು ಕರೆಯಲ್ಪಡುವುದನ್ನು ಕಂಡುಹಿಡಿದ. ಗೋವಿಂದಸ್ವಾಮಿಯ ಶಿಷ್ಯನೇ ಶಂಕರನಾರಾಯಣ. ಈ ದಾರ್ಶನಿಕ ವ್ಯಕ್ತಿ ಮಹೋದಯಪುರಂನಲ್ಲಿ ದಕ್ಷಿಣ ಭಾರತದ ಮೊದಲ ಭವ್ಯವಾದ ವೀಕ್ಷಣಾಲಯವನ್ನು ನಿರ್ಮಿಸಿದ. 'ರವಿವರ್ಮ ಯಂತ್ರ ವಲಯ' ಎಂದು ಕರೆಯಲ್ಪಡುವ ಇದು ಅದ್ಭುತವಾಗಿತ್ತು, ಅತ್ಯುತ್ತಮವಾದ ಉಪಕರಣಗಳೊಂದಿಗೆ (ರಾಶಿ ಚಕ್ರ, ಜಲೇಸ ಸೂತ್ರ, ಗೋಲಯಂತ್ರ ಇತ್ಯಾದಿ) ಸಂಪೂರ್ಣವಾಗಿ ಸುಸಜ್ಜಿತವಾಗಿತ್ತು. ಶಂಕರನಾರಾಯಣ ಸಮಯ ಪಾಲನೆ/ಸೂಚನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಯಂತ್ರವಲಯದಿಂದ ಸೂಚಿಸಿದಂತೆ ಪ್ರತಿ ಘಟಿಕ (24 ನಿಮಿಷಗಳು) ಅಥವಾ ಅರ್ಧ ಮುಹೂರ್ತವನ್ನು ಹಾದುಹೋಗುವಾಗ, ಸರಿಯಾದ ಸಮಯವನ್ನು ಸಾರ್ವಜನಿಕರಿಗೆ ತಿಳಿಸಲು ಮಹೋದಯಪುರಂನಾದ್ಯಂತ ಗಂಟೆಗಳನ್ನು(ಕೂಟು) ಬಾರಿಸಲು ಸೈನಿಕರಿಗೆ ತರಬೇತಿ ನೀಡಲಾಗಿತ್ತು.


ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. 


ದೇವಾಲಯಗಳ ಸಮುಚ್ಚಯದ ಮಧ್ಯದಲ್ಲಿ ಈ ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗಿತ್ತು. ಸೂರ್ಯನು ಭೂಮಧ್ಯರೇಖೆಯಲ್ಲಿ ಬರುವ ದಿನ ಹಗಲು ಮತ್ತು ರಾತ್ರಿ ಸಮಾನವಾಗಿರುತ್ತವೆ. ಆ ದಿನ ಮಧ್ಯಾಹ್ನ ೧೨ ಗಂಟೆ ೨೫ ನಿಮಿಷಕ್ಕೆ ಕರಾರುವಕ್ಕಾಗಿ ಈ ಸ್ತಂಭದ ನೆರಳು ಭೂಮಿಯ ಮೇಲೆ ಬಿದ್ದಾಗ ಸ್ತಂಭದ ೧೦೮ ಅಡಿ ಉದ್ದದ ನೆರಳು ಬೀಳುತ್ತದೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಗಳು ಹಾಗೂ ೨೭ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರಕ್ಕೆ ನಾಲ್ಕು ಪಾದಗಳಿದ್ದು, ಒಂದೊಂದು ರಾಶಿಚಕ್ರದಲ್ಲಿ ಎರಡೂ ಕಾಲು ನಕ್ಷತ್ರಗಳಿರುವಂತೆ ವಿಭಾಗಿಸಲಾಗಿದೆ. ಅಂದರೆ ೨೭X೪=೧೦೮ ನಕ್ಷತ್ರ ಪಾದಗಳು. ಮೆಹರೂಲಿಯ ಮೇರು ಸ್ತಂಭದಲ್ಲಿ ೨೭ ದೀಪಸ್ತಂಭಗಳಿವೆ. ಸ್ತಂಭಗಳ ಸುತ್ತಲೂ ನಕ್ಷತ್ರ ವೀಕ್ಷಣೆಗಾಗಿ ೨೭ ಭವನಗಳಿದ್ದವು. ಇವುಗಳನ್ನು ತಾನೇ ಸ್ವತಃ ನಾಶಮಾಡಿದುದಾಗಿ ಕುತುಬುದ್ದೀನ್ ಐಬಕ್ ಕುವ್ವತ್-ಉಲ್-ಇಸ್ಲಾಮ್ ಮಸೀದಿಯ ಪೂರ್ವ ದ್ವಾರದ ಶಿಲಾಶಾಸನದಲ್ಲಿ ಹೇಳಿಕೊಂಡಿದ್ದಾನೆ. ಈ ಮನಾರ್'ಗೆ ಹನ್ನೆರಡು ಮುಖಗಳಿವೆ. ಅವು ಹನ್ನೆರಡು ರಾಶಿ ಚಕ್ರಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲಿರುವ ಏಳು ಮಹಡಿಗಳು ಏಳು ವಿಧದ ಸ್ವರ್ಗಗಳನ್ನು ಸೂಚಿಸುತ್ತವೆ. ಮನಾರ್ ತನ್ನ ಹಿಂದಿರುವ ನೀರಿನಲ್ಲಿ ನಕ್ಷತ್ರಗಳ ಆಧಾರದಲ್ಲಿ ನೆರಳನ್ನು ಬೀಳಿಸುತ್ತಿತ್ತು. ಆಗಸವನ್ನು ನಿರಂತರ ನೋಡುತ್ತಾ ಕಣ್ಣುಗಳಿಗೆ ಹಾನಿಯಾಗದಿರಲೆಂದು ಸುತ್ತಲೂ ಈ ಕೊಳಗಳ ನಿರ್ಮಾಣವಾಗಿತ್ತು. ಅಂದರೆ 27 ಮಂದಿರಗಳ ಮೇಲೆ ನಕ್ಷತ್ರಗಳ ಆಧಾರದಲ್ಲಿ ಕಿರಣಗಳು ಹಾದು ಹೋಗುತ್ತಿದ್ದವು. 

ಗುರುವಾರ, ಮಾರ್ಚ್ 17, 2022

ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ


ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ


ಕಾಶ್ಮೀರದ ಕಣ್ಣೀರ ಕಥೆಯ ಒಂದು ಕಡತ ಬಹು ಜನ ವೀಕ್ಷಿಸುವ ಮಾಧ್ಯಮದ ಮೂಲಕ ಪ್ರಕಟವಾಗಿದೆ. ಕಾಶ್ಮೀರದ ಕಣ್ಣೀರಿನ ಕಥೆಗಳ ಬಗೆಗೆ ಹಲವು ಲೇಖನಗಳು, ಪುಸ್ತಕಗಳು, ಭಾಷಣಗಳು, ಡಾಕ್ಯುಮೆಂಟರಿಗಳು ಇದ್ದರೂ ಅವು ತಲುಪದ ಜನಸಮೂಹವನ್ನು ಕೂಡಾ ತಲುಪುವ ಶಕ್ತಿ ಇರುವ ಮಾಧ್ಯಮ ಚಲನಚಿತ್ರ. ಹಾಗಾಗಿ ಈ ಬಾರಿ ದೇಶದ್ರೋಹಿ ಶಕ್ತಿಗಳ ಸಕಲ ವಿರೋಧ, ಷಡ್ಯಂತ್ರಗಳ ನಡುವೆಯೂ ಕಾಶ್ಮೀರದ ಹಿಂದೂಗಳ, ಪರಿಸರದ ಮೇಲಿನ ದೌರ್ಜನ್ಯದ ಇತಿಹಾಸದ ಒಂದು ತುಣುಕಾದರೂ ರಾಷ್ಟ್ರೀಯವಾದಿ ಸರಕಾರದ ಅಭಯ ಹಸ್ತದ ನೆರಳಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ ಬಹು ಸಂಖ್ಯೆಯ ಜನ ಮಾನಸಕ್ಕೆ ತಲುಪುವಂತಾಯಿತು. ಈ ಪ್ರಯತ್ನಕ್ಕಾಗಿ ದುಡಿದವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಜೊತೆಗೆ ಕ್ರೌರ್ಯವೇ ತುಂಬಿರುವ ಘಟನೆಯನ್ನು ಎಲ್ಲರೂ ನೋಡುವಂತೆ ನಿರೂಪಿಸಿದ ಪರಿಗೂ ಅಭಿನಂದನೆ ಸಲ್ಲಬೇಕು. ಈ ಚಿತ್ರವನ್ನು ನೋಡುವುದು, ಇನ್ನೊಬ್ಬರು ನೋಡುವಂತೆ ಪ್ರೇರೇಪಿಸುವುದು ತನ್ಮೂಲಕ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಿ ಮುಂದೆ ಅಂತಹಾ ಪರಿಸ್ಥಿತಿ ಒದಗದಂತೆ ಪ್ರಯತ್ನಿಸುವುದೇ ನಿಜವಾಗಿ ನಾವು ಸಲ್ಲಿಸಬಹುದಾದ ಅಭಿನಂದನೆ.



ಕಾಶ್ಮೀರದ ಕಣ್ಣೀರಿನ ಕಥೆ ಕಳೆದ ಶತಮಾನದ 90ರ ದಶಕದಲ್ಲಾಗಲೀ ಅಥವಾ 40ರ ದಶಕದಲ್ಲಾಗಲೀ ಪ್ರಾರಂಭವಾದದ್ದಲ್ಲ. ಅದಕ್ಕೆ ಐನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಅಂದರೆ "ಕಾಶ್ಮೀರ್ ಫೈಲ್ಸ್" ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಾವಿರದಲ್ಲೊಂದು ಭಾಗವಷ್ಟೇ. ಈ ದೌರ್ಜನ್ಯಗಳಿಗೆಲ್ಲಾ ಮೂಲ ಪುರುಷನೊಬ್ಬನಿದ್ದಾನೆ. ಅವನು ಅದೇ "ಕಾಶ್ಮೀರ್ ಫೈಲ್ಸ್" ಚಿತ್ರದಲ್ಲಿ ನಾಯಕ ನಟ ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಶಂಸುದ್ದೀನ್ ಅರಾಖಿ. ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಕಡತ ಆರಂಭವಾದುದು ಅವನಿಂದ. ಇಸ್ಲಾಂ ಮತದಲ್ಲಿರುವ ಶಾಂತಿದೂತರು, ಜಾತ್ಯಾತೀತರು, ಹಿಂದೂ-ಮುಸ್ಲಿಂ ಸಮನ್ವಯತೆಗೆ ಕಾರಣವಾದವರು, ಸಂತರು ಎಂದು ಭಾರತೀಯರಿಗೆಲ್ಲಾ ಭ್ರಾಂತಿ ಇರುವ, ಸೂಫಿ ವರ್ಗಕ್ಕೆ ಸೇರಿದ ಪೈಶಾಚಿಕ ಪ್ರವೃತ್ತಿಯ ವ್ಯಕ್ತಿ. ಇಸ್ಲಾಂ ಮತ್ತು ಶಾಂತಿ, ಇಸ್ಲಾಂ ಮತ್ತು ಜಾತ್ಯಾತೀತತೆ, ಇಸ್ಲಾಂ ಮತ್ತು ಸಂತ, ಎಂದಾದರೂ ಒಂದಾಗಲು ಸಾಧ್ಯವೇ? ಭಾರತೀಯರ ಭ್ರಮೆ ಕಳಚುವುದೆಂದು? ಅಂದರೆ ಈ ದೌರ್ಜನ್ಯಗಳಿಗೆಲ್ಲಾ ಕಾರಣ ಯಾವುದು? ಅದೇ...ಅದೇ ಪುಸ್ತಕ...ಯಾವುದು ಮತಭ್ರಾಂತತೆಯನ್ನು ಚಿಕ್ಕಪ್ರಾಯದಿಂದಲೂ ಚೊಕ್ಕವಾಗಿ ಮಸ್ತಕಕ್ಕೆ ತುಂಬಿಸಿತೋ ಅದೇ ಗ್ರಂಥ! ಅಸಲಿಗೆ ಗ್ರಂಥ ಎಂದು ಹೇಳಿಸಿಕೊಳ್ಳುವ ಯೋಗ್ಯತೆಯೂ ಅದಕ್ಕಿಲ್ಲ.


ಯಾರು ಈ ಶಂಸುದ್ದೀನ್ ಅರಾಖಿ? ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್"  ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.


                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).


                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.


               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!


               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.


                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.


                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

ಕಾಲ ಪ್ರವಾಹದೊಂದಿಗೆ ಹರಿದು ಬಂದ ಹಿಂದೂ-ಯೆಹೂದಿ ಬೆಸುಗೆ

  ಕಾಲ ಪ್ರವಾಹದೊಂದಿಗೆ ಹರಿದು ಬಂದ ಹಿಂದೂ-ಯೆಹೂದಿ ಬೆಸುಗೆ


ಹಿಂದೂ ಹಾಗೂ ಯೆಹೂದಿಗಳು  ಪ್ರಪಂಚದಲ್ಲಿ ವ್ಯಾಪಕವಾಗಿದ್ದ ಹಳೆಯ ಎರಡು ನಾಗರಿಕತೆಗಳು. ಇವೆರಡರ ನಡುವಿನ ಸಂಬಂಧ ಹಾಗೂ ಸಂವಹನಗಳು ಕೂಡಾ ಪ್ರಾಚೀನವೇ. ಆದರೆ ಓಲೈಕೆಯ ರಾಜಕಾರಣ ಆ ನಮ್ಮ ಮಿತ್ರ ರಾಷ್ಟ್ರವನ್ನು ದೂರವಿಟ್ಟು ನಮ್ಮದೇ ಅಂತಾರಾಷ್ಟ್ರೀಯ ಸ್ಥಾನಕ್ಕೆ ಪೆಟ್ಟುಕೊಟ್ಟಿತು. 


ಹೀಬ್ರೂ ಹಾಗೂ ಹಿಂದೂಗಳ ನಡುವಿನ ವ್ಯಾಪಾರ ಸಂಪರ್ಕವು ಡೇವಿಡ್ ಮತ್ತು ಸೊಲೊಮನ್ ಕಾಲದಷ್ಟು ಹಿಂದಿನದ್ದು(ಕ್ರಿ.ಪೂ. ೯೫೦). "ರಾಜನು ಹಿರಮ್(ಅಹಿರಮ್)ನ(ಟೈರ್ ಅರಸ) ಹಡಗುಗಳೊಂದಿಗೆ ಸಮುದ್ರ ಮಾರ್ಗದ ವ್ಯಾಪಾರಕ್ಕಾಗಿ ತನ್ನ ಹಡಗುಗಳನ್ನು ಕಳುಹಿಸುತ್ತಿದ್ದನು. ಪ್ರತಿ ಮೂರು ವರ್ಷಗಳಿಗೊಮ್ಮೆ ಅದು ಚಿನ್ನ, ಬೆಳ್ಳಿ, ದಂತ, ಕಪಿಗಳು ಮತ್ತು ಬಬೂನ್ಗಳನ್ನು ಹೊತ್ತು ತರುತ್ತಿತ್ತು". ಬೈಬಲ್ (ಕಿಂಗ್ಸ್ 10.22). ಹಳೆಯ ಒಡಂಬಡಿಕೆಯ ಪ್ರಕಾರ, ಓಫಿರ್ ಎಂಬ ಸ್ಥಳ ಸಂಪತ್ತಿಗೆ ಪ್ರಸಿದ್ಧವಾಗಿತ್ತು. ಸೊಲೊಮನ್ ಈ ಸ್ಥಳದಿಂದ ಚಿನ್ನ, ಬೆಳ್ಳಿ, ಶ್ರೀಗಂಧ, ಮುತ್ತುಗಳು, ದಂತ, ಮಂಗಗಳು ಮತ್ತು ನವಿಲುಗಳನ್ನು ತರಿಸುತ್ತಿದ್ದ. ಓಫಿರ್ ಎಂಬುದು ಪಶ್ಚಿಮ ಭಾರತದ ಅಭೀರ ಸಾಮ್ರಾಜ್ಯ ಎಂದು ಆಧುನಿಕ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಆದರೆ ಭಾರತಕ್ಕೆ ದೊಡ್ಡ ಪ್ರಮಾಣದ ಯಹೂದಿ ನಿರಾಶ್ರಿತರ ಮೊದಲ ವಲಸೆ ಆದದ್ದು ಜೆರುಸಲೆಮ್ ಅನ್ನು ರೋಮನ್ನರು ನಾಶಪಡಿಸಿದ ನಂತರ. ಭಾರತೀಯ ಯಹೂದಿ ಸಂಪ್ರದಾಯದ ಪ್ರಕಾರ ಯಹೂದಿ ನಿರಾಶ್ರಿತರ ಮೊದಲ ತಂಡ ಸಾಮಾನ್ಯ ಯುಗ 70ರಲ್ಲಿ ಕೇರಳದ ಕರಾವಳಿಯಾದ ಕೊಡುಂಗಲ್ಲೂರಿನಲ್ಲಿ ಬಂದಿಳಿಯಿತು. ಕೊಡುಂಗಲ್ಲೂರಿನ ಹಿಂದೂ ಮಹಾರಾಜರು ಯಹೂದಿ ನಿರಾಶ್ರಿತರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಆತ ಆ ನಿರಾಶ್ರಿತರಿಗೆ ಭೂಮಿಯ ಜೊತೆಗೆ ತಮ್ಮ ಮತವನ್ನು ಆಚರಿಸುತ್ತಾ ಜೀವಿಸುವ ಸ್ವಾತಂತ್ರ್ಯವನ್ನು ನೀಡಿದ. ಮಟ್ಟಂಚೇರಿಯಲ್ಲಿರುವ ಪರದೇಸಿ ಸಿನಗಾಗ್(Paradesi Synagogue) ಅಲ್ಲಿರುವ ಚಿತ್ರವೊಂದು ಈ ದೃಶ್ಯವನ್ನು ಕಟ್ಟಿಕೊಟ್ಟಿದೆ. ಅದರಲ್ಲಿ ಹಿಂದೂ ರಾಜನು ಯಹೂದಿ ನಿರಾಶ್ರಿತರನ್ನು ಸ್ವಾಗತಿಸುವ ದೃಶ್ಯವಿದೆ. ಕೇರಳದ ಹಿಂದೂ ಮಹಾರಾಜನು ಕರುಣಿಸಿದ ಈ ಅಭಯವು ಪಶ್ಚಿಮದಲ್ಲಿ ಕಿರುಕುಳವನ್ನು ಅನುಭವಿಸಿದ ಯಹೂದ್ಯರು ಶತಮಾನಗಳ ಪರ್ಯಂತ ಭಾರತಕ್ಕೆ ವಲಸೆ ಬರುವಂತೆ ಉತ್ತೇಜಿಸಿತು. ತಮ್ಮ ನಾಯಕ ಜೋಸೆಫ್ ರಬ್ಬನ್ ಹಿಂದೂ ಮಹಾರಾಜರಿಂದ ತೆರಿಗೆ ಮುಕ್ತ ಭೂಮಿಯ ಸಹಿತ ಅನೇಕ ಸವಲತ್ತುಗಳನ್ನು ಪಡೆದುದನ್ನು ಯೆಹೂದಿ ಸಂಪ್ರದಾಯ ಕೃತಜ್ಞತೆಯಿಂದ ಸ್ಮರಿಸಿದೆ. ಭಾಸ್ಕರ ರವಿ ವರ್ಮನ ಕೊಚ್ಚಿನ್ ಶಾಸನ ಯಹೂದಿ ವ್ಯಾಪಾರಿ ಜೋಸೆಫ್ ರಬ್ಬನ್‌ಗೆ ನೀಡಿದ ಅನುದಾನವನ್ನು ದಾಖಲಿಸಿದೆ. ರಬ್ಬನ್ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದುದು ಮಾತ್ರವಲ್ಲದೆ ಅನುವಂಶಿಕ ಉತ್ತರಾಧಿಕಾರವನ್ನು ಕೂಡಾ ಪಡೆದ. ಈ ಶಾಸನದ ವಿಶೇಷತೆ ಏನೆಂದರೆ ಅದು ಯೆಹೂದಿಗಳಿಗೆ ರಾಜ ಮನೆತನದಿಂದ ಸಂರಕ್ಷಣೆಯ ಹಕ್ಕನ್ನು ನೀಡಿತು. ಜೊತೆಗೆ ಬೆಳಗ್ಗೆ ಹಾಗೂ ಮದುವೆಯ ದಿನದಂದು ಮೂರು ಸೆಲ್ಯೂಟ್ ಗಳನ್ನು ಪಡೆಯುವ ಹಕ್ಕನ್ನೂ ಕೊಡಮಾಡಿತು. ಅಂದರೆ ವಾಸ್ತವಿಕವಾಗಿ ರಬ್ಬನ್‌ಗೆ ರಾಜನ ಸ್ಥಾನಮಾನವನ್ನು ಇದು ಕೊಟ್ಟಿತು. ಕೇರಳದ ಯೆಹೂದಿ ಹಾಡುಗಳು ಅವನನ್ನು "ಯಹೂದಿಗಳ ರಾಜ" ಎಂದು ಕರೆದಿರುವುದಕ್ಕೆ ಕಾರಣ ಇದು. ಇದರರ್ಥ ಹಿಂದೂಗಳು ಯೆಹೂದಿಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿದರು. ಸಮಾನ ಗೌರವ, ಸವಲತ್ತುಗಳನ್ನೂ ನೀಡಿದರು. ಯೆಹೂದಿಗಳ ನೆಮ್ಮದಿಗೆ ಕಾರಣವಾದರು. ಶೀಘ್ರದಲ್ಲೇ ಪಶ್ಚಿಮ ಕರಾವಳಿಯ ವ್ಯಾಪಾರ-ವಹಿವಾಟುಗಳಲ್ಲಿ ಅವರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಇದು ಯಹೂದ್ಯರ ಇತಿಹಾಸದಲ್ಲೇ ಅವರು ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗದ ಏಕೈಕ ಉದಾಹರಣೆ.


ಹಿಂದೂ ಭಾರತವು ಯೆಹೂದಿಗಳಿಗೆ ಎಷ್ಟು ಸ್ವಾಗತಾರ್ಹ ನೆಲೆಯಾಯಿತೆಂದರೆ, 15-16 ನೇ ಶತಮಾನದಲ್ಲಿ ಸ್ಪೈನಿನಲ್ಲಿ ಇನ್ಕ್ವಿಷನ್ ಆರಂಭವಾದಾಗ ಸಾವಿರಾರು ಸೆಫಾರ್ಡಿಕ್ ಯೆಹೂದಿಗಳು ಪ್ರಾಣ ರಕ್ಷಣೆಗಾಗಿ ಕೇರಳಕ್ಕೆ ಓಡಿ ಬಂದರು. ಇಂದು ಅವರ ಸಂತತಿಯನ್ನು "ಪರದೇಸಿ ಯೆಹೂದಿಗಳು" (ಬಿಳಿಯರು) ಎಂದು ಕರೆಯಲಾಗುತ್ತದೆ. ಅವರ ಒಂದು ಹಾಡು "ಹಿಂದೂಗಳು ನಮ್ಮ ನಿಜವಾದ ಸಹೋದರರು" ಎನ್ನುವ ಅರ್ಥಭರಿತ ಸಾಲನ್ನು ಹೊಂದಿದೆ. ದುರದೃಷ್ಟವಶಾತ್ ಯೆಹೂದಿಗಳ ಬೆನ್ನಿಗೆ ಅವರ ಶತ್ರುಗಳೂ, ಮನುಕುಲದ ಶತ್ರುಗಳೂ ಭಾರತಕ್ಕೆ ನುಸುಳಿದರು! 1524 ರಲ್ಲಿ ಕರಿಮೆಣಸ್ಸಿನ ವಹಿವಾಟಿನಲ್ಲಿ ನಡೆದ ಜಗಳದಲ್ಲಿ ಮುಸ್ಲಿಮ್ ಗುಂಪು ಕೊಡುಂಗಲ್ಲೂರಿನ ಯೆಹೂದಿ ವಸಾಹತನ್ನು ನಾಶಗೊಳಿಸಿತು. ಆ ಮತಾಂಧರು ಯೆಹೂದಿ ಮನೆಗಳು ಮತ್ತು ಸಿನಗಾಗ್‌ಗಳನ್ನು ಕೂಡಾ ಸುಟ್ಟುಹಾಕಿದರು. ಕೊನೆಯ ಯಹೂದಿ ರಾಜಕುಮಾರ ಕೊಚ್ಚಿಗೆ ಪಲಾಯನಗೈದ. ಕೊಚ್ಚಿ ಬಳಿಕ ಯಹೂದಿಗಳ ಪಟ್ಟಣವಾಯಿತು. ಕೊಚ್ಚಿಯ ಹಿಂದೂ ರಾಜನು ಯಹೂದಿ ನಿರಾಶ್ರಿತರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ರಾಜಭವನ ಮತ್ತು ರಾಜ ದೇವಾಲಯದ ಪಕ್ಕದಲ್ಲಿ ಸಿನಗಾಗ್(ಪ್ರಾರ್ಥನಾ ಸ್ಥಳ)ಅನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟ.


ವ್ಯಾಟಿಕನ್ ಇನ್ಕ್ವಿಷನ್ ಸಮಯದಲ್ಲಿ ಭಾರತೀಯ ಯೆಹೂದ್ಯರಿಗೆ ಪೋರ್ಚುಗೀಸರ ಕಿರುಕುಳವೂ ತಪ್ಪಲಿಲ್ಲ. ಆಗಲೂ ಯೆಹೂದ್ಯರು ರಕ್ಷಣೆಗಾಗಿ ಧಾವಿಸಿದ್ದು ಕೊಚ್ಚಿಗೇ. ಮಹಾರಾಜರು ಅವರಿಗೆ ಅನೇಕ ಸಿನಗಾಗ್'ಗಳನ್ನು ಸ್ಥಾಪಿಸಲು ಅವಕಾಶ ಕೊಟ್ಟರು. 1568ರಲ್ಲಿ ಕೊಚ್ಚಿ ಮಹಾರಾಜರ ಮುತುವರ್ಜಿಯಲ್ಲಿ ನಿರ್ಮಿಸಲ್ಪಟ್ಟ ಪರದೇಸಿ ಸಿನಗಾಗ್ ಹಾಗೂ ಕೊಚ್ಚಿಯ ರಾಯಲ್ ಫೋರ್ಟ್ ದೇವಸ್ಥಾನಗಳು ಇಂದಿಗೂ ಪರಸ್ಪರ ಅಕ್ಕಪಕ್ಕದಲ್ಲೇ ಇವೆ.ಇದಲ್ಲದೆ, ಮುಂದೆ ಪರದೇಸಿ ಸಿನಗಾಗ್‌ಗೆ ಚಿನ್ನದ ಕಿರೀಟಗಳನ್ನು ಉಡುಗೊರೆಯಾಗಿ ನೀಡುವುದು ಕೊಚ್ಚಿಯ ಮಹಾರಾಜರ ಸಂಪ್ರದಾಯವಾಗಿ ಬೆಳೆಯಿತು. ಇವೆಲ್ಲವನ್ನೂ ಸಂರಕ್ಷಿಸಿ ಸಿನಗಾಗ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಯೆಹೂದಿ ತಾಯ್ನಾಡನ್ನು ರಚಿಸುವ ಬ್ರಿಟಿಷರ ಉದ್ದೇಶವು 1917ರ ಬಾಲ್ಫೋರ್ ಘೋಷಣೆಯಲ್ಲಿ ದೃಢವಾದಾಗ ಕೇರಳದಲ್ಲಿದ್ದ ಅನೇಕ ಯಹೂದಿಗಳು ಬ್ರಿಟಿಷ್ ಪ್ಯಾಲೆಸ್ಟೈನ್ಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಅಂದಿನ ಕೊಚ್ಚಿಯ ಮಹಾರಾಜ ರಾಮ ವರ್ಮ, 8000 ಯೆಹೂದಿಗಳು ಅವರ ಪವಿತ್ರ ಭೂಮಿಗೆ ವಲಸೆ ಹೋಗಲು ಸಹಾಯ ಮಾಡಿದರು. ಅವರ ಪ್ರಯಾಣದ ಖರ್ಚುವೆಚ್ಚಗಳನ್ನು ಅರಸರೇ ಭರಿಸಿದರು. ವಿದ್ವಾಂಸ ನಾಥನ್ ಹ್ಯಾಟ್ಜ್ ಪ್ರಕಾರ, ಅರಸ ತನ್ನ ಯಹೂದಿ ಪ್ರಜೆಗಳ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಸಬ್ಬತ್‌ ಸಮಯಲ್ಲಿ ಯುದ್ಧಗಳನ್ನು ಕೈಗೊಳ್ಳುತ್ತಿರಲಿಲ್ಲ. ಇದು ಹಿಂದೂ ಸಹಿಷ್ಣುತೆಗೆ ಮಹತ್ತರ ಉದಾಹರಣೆ. 1948ರಲ್ಲಿ ಇಸ್ರೇಲ್‌ಗೆ ವಲಸೆ ಹೋಗಲು ಭಾರತವನ್ನು ತೊರೆದ ಬಳಿಕ ಭಾರತೀಯ ಯಹೂದಿಗಳು ಅನೇಕ ಕಷ್ಟಗಳನ್ನು ಮತ್ತು ವರ್ಣಭೇದ ನೀತಿಯನ್ನು ಎದುರಿಸಬೇಕಾಯಿತು. ಇವೆಲ್ಲವೂ ಹಿಂದೂ ಸಮುದಾಯ ಯೆಹೂದಿಗಳನ್ನು ಎಷ್ಟು ಸಹಿಷ್ಣುತೆ ಹಾಗೂ ಸಮಾನ ಗೌರವದಿಂದ ಕಂಡಿತು, ಆದರೆ ಉಳಿದ ಮತಗಳು ಹೇಗೆ ಅಟ್ಟಾಡಿಸಿ ಬಡಿದವು ಎಂಬುದಕ್ಕೆ ನಿದರ್ಶನಗಳಾಗಿವೆ.


ಹಿಂದೂಗಳು ಮತ್ತು ಯಹೂದಿಗಳ ನಡುವಿನ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿನಿಮಯದ ಇತಿಹಾಸ ಸುದೀರ್ಘ ಕಾಲದ್ದು. ಯಹೂದಿ ಖಗೋಳಶಾಸ್ತ್ರಜ್ಞ ಸನದ್ ಇಬ್ನ್ ಅಲ್ ಯಹೂದಿ (9ನೇ ಶತಮಾನ) ಸೂರ್ಯ ಸಿದ್ಧಾಂತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದ್ದರು ಮತ್ತು ಸೂರ್ಯ ಸಿದ್ಧಾಂತದ ಮೇಲೆ ಒಂದು ಗ್ರಂಥವನ್ನು ಕೂಡಾ ಬರೆದರು. ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ವಿದ್ವಾಂಸರಾಗಿದ್ದ ರಬ್ಬಿ ಅಬ್ರಹಾಂ ಇಬ್ನ್ ಎಜ್ರಾ (12 ನೇ ಶತಮಾನ) ಪುರಾತನ ಭಾರತೀಯ ವಿಜ್ಞಾನದಿಂದ ತುಂಬಾ ಪ್ರಭಾವಿತರಾಗಿದ್ದರು. ತಮ್ಮ ಪುಸ್ತಕ Sefer ha-mispar ನಲ್ಲಿ, ಅವರು ಅಂಕಿಗಳನ್ನು(0-9) ಜಗತ್ತಿಗೆ ಪರಿಚಯಿಸಿದ ಹಿಂದೂಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತಕ್ಕೆ ಬಂದಿದ್ದ ಆತ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಗ್ರಹಿಸಿದ್ದರು. ವಿಜ್ಞಾನಕ್ಕೆ ಮೂಲ ಭಾರತವೇ ಎಂದು ಗಟ್ಟಿ ದನಿಯಲ್ಲಿ ಪ್ರತಿಪಾದಿಸಿದ್ದ ಆತ, ಭಾರತೀಯ ವಿಜ್ಞಾನವು ಉತ್ಕೃಷ್ಟ ಮಟ್ಟದಲ್ಲಿತ್ತು, ಇಂದು ವಿಜ್ಣಾನಕ್ಕೆ ತಾನೇ ಮೂಲ ಎನ್ನುವ ಯೂರೋಪು ಅದರ ಹತ್ತಿರಕ್ಕೂ ಸುಳಿಯಲಾರದು ಎಂದಿದ್ದರು. ಆತ ತಮ್ಮ ಜ್ಯೋತಿಷ್ಯ ಗ್ರಂಥಗಳಲ್ಲಿ ರಾಶಿ,ಕುಂಡಲಿಗಳನ್ನು ಬಳಸಿದ್ದರು ಕೂಡಾ. 


ಹೈಫಾ ಯುದ್ಧವನ್ನು ಯೆಹೂದ್ಯರಿಗೆ ಗೆದ್ದುಕೊಟ್ಟದ್ದು ಕೂಡಾ ಭಾರತವೇ. ತುರ್ಕರು ಹಾಗೂ ಜರ್ಮನ್ನರ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ದುರ್ಗಮ ಕಣಿವೆಗಳನ್ನು ನೋಡಿ ತಮ್ಮಲ್ಲಿದ್ದ ಈಟಿ, ಭರ್ಜಿಗಳಿಂದ ಕುದುರೆಗಳ ಮೇಲೆ ಕುಳಿತು ಸವಾರಿ ಮಾಡುತ್ತಾ ಈ ಯುದ್ಧವನ್ನು ಗೆಲ್ಲಲಾಗದು ಎಂದರಿತ ಬ್ರಿಟಿಷ್ ಅಧಿಕಾರಿ ವಾವೆಲ್ ಯುದ್ಧದಿಂದ ಹಿಂದೆ ಸರಿಯಲು ನಿರ್ಧರಿಸಿದಾಗ, ನಮ್ಮ ಸೈನಿಕರು (ಮೈಸೂರು ಲ್ಯಾನ್ಸರ್ಸ್, ಜೋಧಪುರದ ಅಶ್ವಪಡೆ, ಹೈದರಾಬಾದ್ ರೆಜಿಮೆಂಟ್) “ನಾವು ಸಾಯಲು ಸಿದ್ಧರಿದ್ದೇವೆಯೇ ಹೊರತೂ ಯುದ್ಧಕ್ಕೆಂದು ಬಂದ ಮೇಲೆ ಯುದ್ಧ ಮಾಡದೆ ಇಲ್ಲಿಂದ ಹೇಡಿಗಳಂತೆ ಹಿಂದೆ ತಿರುಗುವ ಪ್ರಶ್ನೆಯೇ ಇಲ್ಲ” ಎಂದು ತಮ್ಮ ಬಳಿಯಿದ್ದ ಈಟಿ,ಭರ್ಜಿಗಳ ಮೂಲಕವೇ ಶತ್ರು ಬಣವನ್ನೆದುರಿಸಿ, ಅವರ ಸೈನ್ಯದ ಫಿರಂಗಿ, ಮಷಿನ್ ಗನ್‌ಗಳಿಗೆ ಎದೆಯೊಡ್ಡಿ, ನಾನ್ನೂರಕ್ಕೂ ಹೆಚ್ಚು ವರ್ಷಗಳ ಕಾಲದ ಆಳ್ವಿಕೆಯನ್ನು ಕೇವಲ ಹದಿನೈದು ಗಂಟೆಗಳೊಳಗಾಗಿ ಅಂತ್ಯಗೊಳಿಸಿ ಇಸ್ರೇಲ್ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದರು.


ಈ ಎಲ್ಲಾ ಕಾರಣಗಳಿಂದಲೇ ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಗತ್ತಿನ ದೊಡ್ಡಣ್ಣರೆಲ್ಲಾ ನಮ್ಮ ವಿರುದ್ಧವಿದ್ದಾಗ ಇಸ್ರೇಲ್ ನಮ್ಮ ಸಹಾಯಕ್ಕೆ ಬಂದಿತು.. ಬಹುತೇಕ ಸ್ವಾತಂತ್ರ್ಯೋತ್ತರದ ನಮ್ಮ ಸೆಕ್ಯುಲರ್ ರಾಜಕಾರಣ ಇಸ್ರೇಲಿಗೆ ವಿರುದ್ಧವಾಗಿ ವರ್ತಿಸಿದರೂ ಇಸ್ರೇಲ್ ತನಗೆ ಉಪಕಾರ ಮಾಡಿದ ಹಿಂದೂ ರಾಷ್ಟ್ರವನ್ನು ಮರೆಯದೇ ಇಂದಿನವರೆಗೂ ನಮ್ಮ ಬೆನ್ನಿಗೆ ನಿಂತಿದೆ.

ಹಿಂದುತ್ವವನ್ನು ಹಿಂದೂಗಳಿಂದ ಬೇರ್ಪಡಿಸುವ ಕುತ್ಸಿತ ರಾಜಕಾರಣ

ಹಿಂದುತ್ವವನ್ನು ಹಿಂದೂಗಳಿಂದ ಬೇರ್ಪಡಿಸುವ ಕುತ್ಸಿತ ರಾಜಕಾರಣ


ಸ್ವಾತಂತ್ರ್ಯ ಸಂಗ್ರಾಮದಲ್ಲಿ ಖಡ್ಗಗಳು ತಾಡನಗೊಂಡಾಗ ಕೋರೈಸಿದ ಬೆಳಕಿನಲ್ಲಿ, ಕಾರಾಗೃಹದ ಕತ್ತಲ ಕೋಣೆಯಲ್ಲಿ ಆಧಾರಗಳ ಸಹಿತವಾಗಿ, ಅಧ್ಯಯನ ಪೂರ್ಣವಾಗಿ ರಚಿಸಲ್ಪಟ್ಟ ಕೃತಿ ಸಾವರ್ಕರರ ಹಿಂದುತ್ವ. ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ, ಪುಣ್ಯಭೂಮಿಯಾಗಿ ಯಾರು ಸ್ವೀಕರಿಸುತ್ತಾನೋ ಅವನನ್ನು ಹಿಂದೂ ಎಂದು ಎಂದೆಂದಿಗೂ ಅಪ್ಪಿಕೊಂಡಿದ್ದ ಈ ದೇಶದ ಜೀವನಪದ್ದತಿಯನ್ನು ಸಾಧಾರವಾಗಿ ನಿರೂಪಿಸಿದ ಕೃತಿ ಅದು. ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ, ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ, ಭಾರತವೇ ಅವರಿಗೆ ಮಾತೃಭೂಮಿ ಎಂದು ಸಾರಿ ಹೇಳಿದ ಕೃತಿ. ವೈದಿಕ - ಅವೈದಿಕರೆಲ್ಲರೂ ಒಂದೇ ರಾಷ್ಟ್ರವಾಗಿ, ಒಂದೇ ಸಂಸ್ಕೃತಿಯ ಉಸಿರಾಗಿ, ಒಂದೇ ರಕ್ತದವರಾಗಿ ಒಂದೇ ರಾಷ್ಟ್ರೀಯ ಧ್ವಜದ ನೆರಳಿನಲ್ಲಿ ಬದುಕಿದ್ದರು ಎಂದುಸುರಿದ ಮಹತ್ವದ ಗ್ರಂಥ ಹಿಂದುತ್ವ.

ಹಿಂದುತ್ವ ಕೇವಲ ಒಂದು ಪದವಲ್ಲ; ಅದು ಜೀವನ ಪದ್ದತಿ; ಹಿಂದೂವಿನ ಚೈತನ್ಯದ ಸೆಲೆ; ಮನುಕುಲದ ಸ್ಫೂರ್ತಿ. ಹಿಂದುತ್ವದಿಂದಲೇ ಹಿಂದುಸ್ಥಾನ ಉಳಿದಿದೆ. ಇಸ್ಲಾಂನ ಕತ್ತಿಯ ಅಲುಗಿಗೆ ಸಿಲುಕಿ ರಾಷ್ಟ್ರ, ಸಂಸ್ಕೃತಿಗಳೇ ನಾಶವಾಗಿ ಹೋದಾಗ ಇಲ್ಲಿ ಅದಕ್ಕೆ ತಕ್ಕ ಉತ್ತರ ಕೊಟ್ಟು ರಾಷ್ಟ್ರವನ್ನೂ, ಸಂಸ್ಕೃತಿಯನ್ನೂ ಉಳಿಸಿದ ಶೌರ್ಯ, ಪ್ರತಾಪವೇ ಹಿಂದುತ್ವ. ಹಿಂದುತ್ವವೇ ಈ ದೇಶದ ಆತ್ಮವಾದ ಕಾರಣದಿಂದಲೇ ಕನ್ನಡಿಗರು ಕಾಶ್ಮೀರಿಗಳಿಗೊದಗಿದ ದುಃಖಕ್ಕೆ ಕಣ್ಣೀರು ಸುರಿಸುವಂತಾಯಿತು. ಈ ಬಂಧವನ್ನು ಗುರುತಿಸಲು ಒಪ್ಪದ ವೈಚಾರಿಕ ಲೋಕದ ವಿಕೃತಿಗಳಿಗೆ ಇಂದಿಗೂ ಸಾವರ್ಕರ್‌ ಅರ್ಥವಾಗಿಲ್ಲ. ಹಿಂದೂ ಎಂಬ ಕಾರಣಕ್ಕಾಗಿಯೇ ನಮ್ಮನ್ನು ಶತ್ರುಗಳು ದ್ವೇಷಿಸಿದ್ದು; ಈ ಜೀವನ ಪದ್ದತಿಯ ಉಳಿವಿಗಾಗಿಯೇ ಶಾಲಿವಾಹನನಿಂದ ಶಿವಾಜಿಯವರೆಗೆ ನಮ್ಮ ಸಾವಿರಾರು ವೀರರು ಸಂಘರ್ಷ ನಡೆಸಿದ್ದು! ಗಾಂಧಿಯ ಹಿಂದ್ ಸ್ವರಾಜ್‌ ಕೃತಿಯ ಚರ್ಚೆಗಳಿಗೆ ಸಿಕ್ಕಿದ ವ್ಯಾಪ್ತಿಯ ಒಂದಂಶವಾದರೂ ಈ ಕೃತಿಗೆ ಸಿಕ್ಕಿದೆಯೇ? ಈ ಕೃತಿಯನ್ನು ಓದದೆಯೇ ಪುಟಗಟ್ಟಲೆ ಬರೆದ, ಬೊಬ್ಬಿರಿದು ವಿರೋಧಿಸಿದವರಿಗೇನೂ ಕಡಿಮೆಯಿಲ್ಲ. ಈ ದೇಶವನ್ನು ರಾಷ್ಟ್ರವಾಗಿ, ಪಿತೃಭೂಮಿಯಾಗಿ, ಪುಣ್ಯಗರ್ಭೆಯಾಗಿ ಒಪ್ಪುವ ಎಲ್ಲರನ್ನೂ ಏಕತ್ರಗೊಳಿಸಿದ ಸೂತ್ರವೇ ಹಿಂದುತ್ವ ಎಂದು ಸಾವರ್ಕರ್ ಪ್ರತಿಪಾದಿಸಿದ ತತ್ತ್ವ, ಭಾರತೀಯರ ಸಾಂಸ್ಕೃತಿಕ ಅಸ್ಮಿತೆಯನ್ನು ಭಗ್ನಗೊಳಿಸಲು, ಈ ದೇಶವನ್ನು ಒಡೆದು ಚೂರಾಗಿಸಲು  ಹೊಂಚು ಹಾಕಿದ್ದ ಪ್ರಭೃತಿಗಳು ತತ್ತರಿಸುವಂತೆ ಮಾಡಿತು. ಹಿಂದೂಗಳನ್ನು ಏಕಸೂತ್ರದಲ್ಲಿ ಬಂಧಿಸಿದ ಅದೇ ಹಿಂದುತ್ವವನ್ನು ಇಂದು ಸಾಮಾನ್ಯ ಹಿಂದೂವಿನಿಂದ ದೂರೀಕರಿಸಲು ಭಾರತವನ್ನು ಛಿದ್ರಗೊಳಿಸಲು ಮುಂದಾಗಿರುವ ಶಕ್ತಿಗಳು ಪ್ರಯತ್ನಿಸುತ್ತಿದ್ದಾರೆ. 

ರಾಜಕಾರಣದಲ್ಲಿ ಬಲಪಂಥೀಯ ಪಕ್ಷ ಪ್ರಬಲವಾಗುತ್ತಿದ್ದಂತೆ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ತನ್ನಂತೆಯೇ ಅಧಿಕಾರದಾಹಿಗಳಾದ ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಿತು. ಅದೂ ಸಾಲದಾದಾಗ ಹಿಂದೂಗಳನ್ನು ಜಾತಿಯ ಆಧಾರದಲ್ಲಿ ಒಡೆಯುವ ಪ್ರಯತ್ನಕ್ಕೆ ಶುರುವಿಟ್ಟಿತು. ಆದರೆ ಈ ತಂತ್ರಗಳೆಲ್ಲಾ ವಿಫಲವಾಗಿ ಬಹು ಸಂಖ್ಯೆಯಲ್ಲಿ ಇವರ ಬಲಿಪಶುಗಳಾಗಿದ್ದ ದಲಿತ ಮತ್ತಿತರ ಹಿಂದುಳಿದ ವರ್ಗಗಳ ಪ್ರೀತಿ ಬಿಜೆಪಿಯ ಕಡೆಗೆ ವಾಲಿದಾಗ ಕಾಂಗ್ರೆಸ್ ಪಾಳಯಕ್ಕೆ ನಿಂತ ನೆಲ ಕುಸಿದ ಅನುಭವವಾಯಿತು. ಅಂತಹಾ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಎಲ್ಲಾ ಪಕ್ಷಗಳು ಆರಂಭಿಸಿದ ಪರಿಪಾಠ ಭಾಜಪಾ ನೇತೃತ್ವದ ಕೇಂದ್ರ ಸರಕಾರ ತರುವ ಎಲ್ಲಾ ಯೋಜನೆಗಳನ್ನು ಶತಾಯಗತಾಯ ವಿರೋಧಿಸುವುದು. ಸಿಎಎ, ಎನ್ ಆರ್ ಸಿ, ರಾಮಮಂದಿರ ಸಹಿತ ದೇವಾಲಯಗಳ ಪುನರುತ್ಥಾನ, 370ನೇ ವಿಧಿಯ ರದ್ದು, ಗಡಿರಸ್ತೆ ಕಾಮಗಾರಿ, ಶಸ್ತ್ರಾಸ್ತ್ರ ಖರೀದಿ ಮುಂತಾದ ಎಲ್ಲವನ್ನೂ ವಿರೋಧಿಸಲು ಹಣ ಕೊಟ್ಟು ಜನರನ್ನು ಒಟ್ಟು ಸೇರಿಸಿ ದೇಶದ ಅಭಿವೃದ್ಧಿಗೇ ಈ ಪಡೆಗಳು ಅಡ್ಡಗಾಲಾದವು. ರೈತರ ಹೆಸರಿನಲ್ಲಿ ಗೂಂಡಾಗಳನ್ನು, ದೇಶವಿರೋಧಿಗಳನ್ನು ಕರೆತಂದು ವರ್ಷಕ್ಕೂ ಮಿಗಿಲು ವ್ಯವಸ್ಥೆಯನ್ನು ಹದಗೆಡಿಸಲು, ದೇಶವನ್ನು ದಳ್ಳುರಿಗೆ ತಳ್ಳಲು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಯಿತು. ಇವೆಲ್ಲದರ ಹಿಂದೆ ಕೇವಲ ದೇಶವನ್ನು ಅಸ್ಥಿರಗೊಳಿಸುವ ಉದ್ದೇಶ ಮಾತ್ರವಿದ್ದುದಲ್ಲ; ಈ ರೀತಿಯ ನಕಲಿ ದಂಗೆಗಳ ಮೂಲಕ ರೈತರನ್ನು, ಕಾರ್ಮಿಕರನ್ನು, ದಲಿತರನ್ನು, ಮುಸ್ಲಿಮರನ್ನು, ರಾಜ್ಯವಾರು ಬಲಿಷ್ಟವಾಗಿದ್ದ ಸಮುದಾಯಗಳನ್ನು ತಮ್ಮ ಮತಬ್ಯಾಂಕ್ ಆಗಿ ಉಳಿಸಿಕೊಳ್ಳುವ ಉದ್ದೇಶವೂ ಈ ಪಕ್ಷಗಳಿಗಿತ್ತು. ಅಂದರೆ ಅಧಿಕಾರವನ್ನು ಹಿಡಿಯಲು ದೇಶದ್ರೋಹದ ಮಾರ್ಗಕ್ಕಿಳಿಯಲೂ ಈ ಪಕ್ಷಗಳು ಹಿಂದೆಮುಂದೆ ನೋಡಲಿಲ್ಲ. ಆದರೆ ಪ್ರಧಾನಿ ಮೋದಿಯವರ ಚಾಣಾಕ್ಷ ರಾಜನೀತಿಯ ಫಲದಿಂದ ಅವರ ಆಟಗಳಾವುವೂ ನಡೆಯಲಿಲ್ಲ. ಕೆಲವು ರಾಜ್ಯಗಳಲ್ಲಿ ಗೂಂಡಾಗಿರಿ, ಮುಸ್ಲಿಂ ಮತಾಂಧತೆಯ ಬಲದಿಂದ ಆ ಪಂಗಡ ಅಧಿಕಾರ ಹಿಡಿದಿರಬಹುದು. ಆದರೆ ಅವ್ಯಾವುವೂ ಬಹುಕಾಲ ಬಾಳುವಂತಹುದ್ದಲ್ಲ.

ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಮಾರ್ಗವೂ ತೋಚದಿದ್ದಾಗ ಈ ಪಕ್ಷಗಳಿಗೆ ಸಿಕ್ಕಿದ ಅಸ್ತ್ರವೇ ಹಿಂದುತ್ವ. ತೀರಾ ಇತ್ತೀಚೆಗೆ ಅವರೇ ಸಾಕಿಕೊಂಡ ಎಡಚಿಂತಕರು ಹಿಂದುತ್ವವನ್ನು ಟೀಕಿಸುತ್ತಾ ಬಂದದ್ದು, ಇಡೀ ಪಟಾಲಂ ವೀರ ಸಾವರ್ಕರರನ್ನು ಟೀಕಿಸುತ್ತಾ ಬಂದದ್ದು, ಮುಂಬೈ ದಾಳಿಯನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ಮಾಡಿದ್ದು ಮುಂತಾದುವನ್ನು ಬಿಟ್ಟರೆ ಹಿಂದುತ್ವದ ಸುದ್ದಿಗೆ ಈ ಪಕ್ಷಗಳು ಇಳಿದಿರಲಿಲ್ಲ. ಸಾವರ್ಕರ್ ಬಗ್ಗೆ ಮಾತಾಡಿದಾಗಲಂತೂ ತಾವೇ ಬೆತ್ತಲಾಗಿ ಬಿಟ್ಟವು ಈ ಪಕ್ಷಗಳು. ಡಿಜಿಟಲ್ ಯುಗದ ಪರಿಣಾಮವಾಗಿ ಸಾಮಾನ್ಯ ನಾಗರಿಕನೂ ಇತಿಹಾಸದಲ್ಲಿ ಆಸಕ್ತಿ ಹೊಂದಿ, ಸಾಕ್ಷಿಗಳನ್ನು ಆಗಿಂದಾಗಲೇ ಮುಖಕ್ಕೆ ಹಿಡಿದ ಕಾರಣ ಈ ಕುತಂತ್ರವೂ ಹೆಚ್ಚು ದಿನ ಬಾಳಲಿಲ್ಲ. ಜೊತೆಗೇ ಗಾಂಧಿ, ನೆಹರು ಹಾಗೂ ಕಾಂಗ್ರೆಸ್ ಪಕ್ಷದ ನಿಲುವುಗಳು, ಕುತಂತ್ರಗಳು, ಶತ್ರುವಿನೊಂದಿಗಿನ ಒಳ-ಒಪ್ಪಂದಗಳು ಎಲ್ಲಾ‌ ಬಯಲಾಗತೊಡಗಿದಂತೆ ಇಡೀ‌ ಎಡ, ನಗರ ನಕ್ಸಲರು,‌ ನಕಲಿ ಗಾಂಧೀಗಳ ಬುಡ ಅಲ್ಲಾಡತೊಡಗಿತು! ಈಗ ನೇರ ಹಿಂದುತ್ವದ ಮೇಲೆ ಆಕ್ರಮಣ ಈ ಗುಂಪಿಗೆ ಅನಿವಾರ್ಯವಾಯಿತು. ಡಿಜಿಟಲ್ ಕ್ರಾಂತಿಯಿಂದಾಗಿ ವಿಚಾರವಿನಿಮಯ ಮುಕ್ತವಾಗಿ ನಡೆಯಲು ಶುರುವಾಗಿ ಇತಿಹಾಸದ ಘಟನೆ, ಟೀಕೆ-ಟಿಪ್ಪಣಿಗಳು ಸಾಮಾನ್ಯನಿಗೂ ಅಂಗೈಯಲ್ಲಿ ನಿಲುಕುವಂತಾಗಿ ನಮಗಾದ ಅನ್ಯಾಯ, ನಮ್ಮ ಮೇಲಾದ ‌ದೌರ್ಜನ್ಯಗಳ ಕತೆ ಆಚೆ ಬರಲು ಆರಂಭವಾಯಿತೋ ಆಗ ಯಾವುದಾರೂ ಒಂದು ವಿಧಾನದಿಂದ ನಮ್ಮನ್ನು ಒಡೆಯುವ ಕೆಲಸ ಆಗಬೇಕಿತ್ತು! ಅದಕ್ಕೆ ಈಗ ಬಳಸಲ್ಪಡುತ್ತಿರುವುದು ಅದೇ ನಮ್ಮ ಒಳ್ಳೆಯತನ! ನಮ್ಮ ಒಳಗೆ ಮೂಡುವ ಕರುಣೆ, ನ್ಯಾಯದ ಗುಣಗಳು!

ಆ ಪ್ರಯೋಗವೇ ಹಿಂದುತ್ವದ ಮೇಲೆ ಆರೋಪ! ಹಿಂದೂಗಳಲ್ಲಿ ಒಂದು ಬಲಹೀನತೆ ಇದೆ. ಅದು ಒಳ್ಳೆಯತನ; ಸಹಿಷ್ಣುತೆ! ನಮ್ಮ ರಕ್ತಗುಣ ಅದು. ಧರ್ಮ-ಕರ್ಮ, ನ್ಯಾಯ-ನೀತಿ, ಎಲ್ಲವೂ ಸೇರಿಕೊಂಡ ಪರಿಣಾಮ ನಾವು ಕೆಲವು‌ ಕಡೆ ನಮ್ಮ ಧರ್ಮದ ರಕ್ಷಣೆಯ ಕೆಲಸಕ್ಕೆ ರಿಯಾಯಿತಿ ಕೊಟ್ಟು ಬಿಡುತ್ತೇವೆ! ನಾವೇ ಏನೇ‌ ಮಾಡಿದರೂ ನಮ್ಮಲ್ಲಿ ಮೂಲಭೂತವಾದಿ ಬುದ್ಧಿ ಎದ್ದೇಳುವುದಿಲ್ಲ. ಅದೇನಿದ್ದರೂ ಕೆಲವರಲ್ಲಿ; ಅದೂ ತಮ್ಮ- ತಮ್ಮ ಆಚರಣೆಯಲ್ಲಿ ಅಥವಾ ತಮ್ಮ- ತಮ್ಮ ಜಾತಿಯ ಪ್ರಶ್ನೆ ಬಂದಾಗ ಮಾತ್ರ! ಇಂತಹುದಕ್ಕೆಲ್ಲಾ ನಮ್ಮಲ್ಲಿರುವ ಹಠ ನಮ್ಮ‌ ಧರ್ಮದ ಕುರಿತು ಇದ್ದಿದ್ದರೆ‌ ನಮ್ಮ ಧರ್ಮ ಎಲ್ಲಾ ಗುಣಗಳನ್ನು ಹೊಂದಿದ್ದೂ ಈ ರೀತಿಯಲ್ಲಿ ಅಳಿವುಉಳಿವಿನ ಹೋರಾಟಕ್ಕೆ ನಿಲ್ಲಬೇಕಿರಲಿಲ್ಲ! ನಾವು ಮೊದಲಿನಿಂದಲೂ ಅಲ್ಪ ತೃಪ್ತರು, ಸತ್ಯಸಂಧರು, ಸಹಿಷ್ಣುಗಳು! ಸಾವಿರಾರು ವರ್ಷದ ಹಿಂದೆಯೇ ‌ಅಲ್ಪ ಸಂಖ್ಯಾತರು ಬಂದು ಇಲ್ಲಿ‌ ನೆಲೆಸಿದ್ದರು ಹಾಗೂ ಈಗಲೂ ಅವರ ಆಚರಣೆಗಳನ್ನು ಉಳಿಸಿಕೊಂಡಿದ್ದಾರೆ, ಅವರ ಪ್ರಾರ್ಥನಾ ಸ್ಥಳಗಳನ್ನು, ಸಂಖ್ಯಾಬಲವನ್ನು ಬೆಳೆಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಮ್ಮ ಗುಣಗಳೇ ‌ಕಾರಣ! 

ಆ ಕಾರಣದಿಂದಲೇ ಕುತಂತ್ರಿಗಳೆಲ್ಲಾ ಒಟ್ಟಾಗಿ ‌ಈಗ ಎಲ್ಲಾ ಕಡೆಯಿಂದ ಹಿಂದು ಧರ್ಮ ಹಾಗೂ ಹಿಂದುತ್ವವನ್ನು‌ ಬೇರ್ಪಡಿಸುವ ತಂತ್ರ ಅಳವಡಿಸಿಕೊಂಡಿದ್ದಾರೆ! ಒಂದು ಕಡೆಯಲ್ಲಿ ಹಿಂದು ಧರ್ಮವನ್ನು ಹೊಗಳುತ್ತಾ ಇನ್ನೊಂದು ಕಡೆ ಹಿಂದುತ್ವ ಹಾಗೂ ಹಿಂದುತ್ವವಾದಿಗಳನ್ನು, ಕ್ರೂರ, ಹಿಂಸಾತ್ಮಕ, ಗಲಭೆಕೋರರು ಎಂದು ಬಿಂಬಿಸುವ ಆಟ ನಡೆಯುತ್ತಿದೆ!  ಯಾಕೆ? ಯಾಕೆಂದರೆ ಹಿಂಸೆ, ಅನ್ಯಾಯ ಬೇಡದ ಸಾಕಷ್ಟು ಜನ ಹಿಂದುಗಳು ಈ ಕಾರಣದಿಂದ ಗೊಂದಲಕ್ಕೊಳಗಾಗುತ್ತಾರೆ! ಆ ಗೊಂದಲದ ಸೃಷ್ಟಿಯಿಂದ ಹಿಂದುಗಳ ಮತ ಒಡೆದರೆ ಅಷ್ಟೇ ಸಾಕು! ಒಮ್ಮೆ ಇವರ ಕೈಗೆ ಅಧಿಕಾರ ಸಿಗಲಿ ಇಡೀ ಹತ್ತು ವರ್ಷ ಆಗಿರುವ ಕೆಲಸಗಳನೆಲ್ಲಾ ಒಂದೇ ವರ್ಷದಲ್ಲಿ ನಾಶ ಮಾಡಿಬಿಡುತ್ತಾರೆ! ಇವರಿಗೆ ಬೇಕಿರುವುದು ಅಷ್ಟೇ, ಒಂದೇ ಒಂದು ಅವಕಾಶ! ಈಗ ಇವರಿಗೆ ಭಾಜಪಾದ ರಾಜಕೀಯ ಅರ್ಥವಾಗುತ್ತಿದೆ! ಅದರ ತಂತ್ರಗಾರಿಕೆಗೆ ಇವರ ಬಳಿ ಹಿಂದುಗಳನ್ನು ಒಡೆಯುವುದನ್ನು‌ ಬಿಟ್ಟು ಬೇರೆ ಯಾವುದೇ ಉತ್ತರವಿಲ್ಲ. ಹಾಗಾಗಿ ಉಳಿದಿರುವುದೊಂದೇ ದಾರಿ! ಹಿಂದುತ್ವವನ್ನು‌ ಬಯ್ಯುವುದು ಅದನ್ನು ಹಿಂಸೆಯ ಮಾರ್ಗವೆಂಬಂತೆ ಬಿಂಬಿಸಿ‌ ಸಾಮಾನ್ಯ ಹಿಂದುಗಳನನ್ನು ಗೊಂದಕ್ಕೊಳಪಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು! 

ನಮಗೇನು? ಒಬ್ಬಳು ಬೀದಿಯಲ್ಲಿ ನಿಂತು ಹನುಮಾನ್ ಚಾಲಿಸ ಹೇಳಿದರೆ ಸಾಕು ಅವಳನ್ನು ಹಿಂದು ಅನ್ನುತ್ತೇವೆ! ಒಬ್ಬ ಮಾನವ ಹಕ್ಕು ಹೋರಾಟಗಾರ ಮಾತನಾಡಿದರೆ ನಾವು ನಮಗಾದ ಅನ್ಯಾಯವನ್ನೂ ಮರೆತು ಅವರಿಗೆ ಬೆಂಬಲ ನೀಡುತ್ತೇವೆ! ಹಾಗಾಗಿಯೇ ಶಬರಿಮಲೆ, ರಾಮ ಮಂದಿರ, ಕಾಶಿ ,ಮಥುರಾ ಇತ್ಯಾದಿ ವಿಷಯಗಳಲ್ಲಿ ನಾವು ಒಡೆದು ನೂರಾಗುವುದು! ನಮಗೆ ಬೇರೆಯವರು ಶತ್ರುಗಳಲ್ಲ! ನಮ್ಮ ಒಳ್ಳೆಯತನ ಹಾಗೂ ಸ್ವಂತವಾಗಿ ‌ಯೋಚಿಸುವ ಶಕ್ತಿಯಿದೆಯಲ್ಲ ಅವೇ ನಮ್ಮ ಶತ್ರುಗಳು! ಜೊತೆಗೆ ಹಿಂದಿನದರ ಮರೆವು ಹಾಗಾಗಿ ಭವಿಷ್ಯದ ಬಗ್ಗೆ ಆಗದ ಅರಿವು! ಇದೇ‌ ಕಾರಣಕ್ಕಾಗಿ ಈಗ ಹಿಂದುತ್ವದ ಬಗ್ಗೆ ಆಕ್ರಮಣವಾಗುತ್ತಿದೆ! ಯಾವಾಗ ಸಾವರ್ಕರ್ ಅವರು ಹೇಳುವ ಮೊದಲೇ ಹಿಂದುತ್ವದ ಬಗ್ಗೆ ಹಲವರು ಮಾತನಾಡಿದ್ದರು ಎಂಬ ಸುದ್ದಿ ಹೊರಗೆ ಬರುತ್ತಿದೆಯೋ , ಯಾವಾಗ ಇನ್ನು ಮುಂದೆ ಸಾವರ್ಕರ್ ಅವರನ್ನು ಹಿಂದುತ್ವಕ್ಕೆ, ಗಾಂಧಿ ಹತ್ಯೆಗೆ ಕಾರಣಕರ್ತರನ್ನಾಗಿ ಬಿಂಬಿಸಲು ಸಾಧ್ಯವಿಲ್ಲವೆಂದಾಯಿತೋ, ಇವರ ತಂತ್ರಗಾರಿಕೆ ಬದಲಾಗಿದೆ, ಇನ್ನು ಮುಂದೆ ಎಲ್ಲವನ್ನೂ ಹಿಂದುತ್ವಕ್ಕೆ ಹೋಲಿಸಿ,ಅದರಲ್ಲಿ ಇಲ್ಲದ ಹಿಂಸಾಚಾರಕ್ಕೆ ಹೋಲಿಸಲಾಗುತ್ತದೆ! ಎಷ್ಟಾಗುತ್ತದೋ ‌ಅಷ್ಟು ಜನರಿಗೆ ಇದರ ಬಗ್ಗೆ ಹೇಸಿಗೆ ಹುಟ್ಟಿ ಇದನ್ನು ಪ್ರತಿಪಾದಿಸುವವರನ್ನು ಕ್ರೂರಿಗಳು, ಹಿಂಸಾಚಾರದ ಒಲವುಳ್ಳವರು ಎಂದು ಹಿಂದುತ್ವದಿಂದ, ಸಂಘದಿಂದ, ಭಾಜಪಾದಿಂದ ದೂರ ಸರಿಯುವಂತೆ ಮಾಡುವುದೇ ಇದರ ಗುರಿ! ಹಿಂದು ಧರ್ಮವನ್ನು ಹೊಗಳಿ ಹಾಡುವುದರಿಂದ ಇವರಿಗೆ ಅವರ ಬಗ್ಗೆ ಯಾವ ಅನುಮಾನವೂ ಬರುವುದಿಲ್ಲ! ಹಾಗೆಯೇ ಅವರು ಎಲ್ಲಾ ಜನರಿಗೆ ಮನಮುಟ್ಟುವ ವಿಚಾರಗಳನ್ನು ಇದರಲ್ಲಿ ಸೇರಿಸುತ್ತಾರೆ! ಏಳು ಜನ ಸಾವಿರಾರು ಕಿಮೀ ನಡೆದು ಹೋದ ಕತೆಯನ್ನು ಹೃದಯವಿದ್ರಾವಕವಾಗಿ ವಿವರಿಸುವ ಇವರುಗಳು, ಅವರನ್ನು ನಿಮ್ಮನಿಮ್ಮ ಜಾಗದಲ್ಲೇ ಇರಿ, ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ! ಅವರನ್ನು ತಮ್ಮ ಜಾಗದಿಂದ ಹೊರಡುವಂತೆ ಸುಳ್ಳು ಹೇಳಿ ಮನೆ ಬಿಡುವಂತೆ ಮಾಡಿದವರ ಬಗ್ಗೆಯೂ ಮಾತನಾಡುವುದಿಲ್ಲ! ರೈತರ ಮುಷ್ಕರದ ಬಗ್ಗೆ ಮಾತನಾಡುವ ಇವರು ಖಲಿಸ್ಥಾನದ ಉಗ್ರರು ಬಲಾತ್ಕಾರ ಮಾಡಿ ಸಾಯಿಸಿದ್ದನ್ನು ಹೇಳುವುದೇ ಇಲ್ಲ! ಹೀಗಾಗಿ ಯಾವುದೋ ಒಂದು ಪತ್ರಿಕೆ ಓದುವವರಿಗೆ, ಒಂದು ಚಾನೆಲ್ ನೋಡುವವರಿಗೆ ಸಂಪೂರ್ಣ ಚಿತ್ರಣ ಸಿಗದೆ ಹಿಂದುತ್ವದ ಬಗ್ಗೆ ತಿರಸ್ಕಾರ ಬರುವ ಎಲ್ಲಾ ಕೆಲಸವನ್ನೂ ಮಾಡುತ್ತಾರೆ! ಒಬ್ಬ ಪುಸ್ತಕ ಬರೆದ, ಕೂಡಲೇ ರಾಹುಲ್ ಗಾಂಧಿ ಹೇಳಿಕೆ ಕೊಟ್ಟ, ಇಂದು ತರೂರ್ ಹಿಂದುತ್ವವನ್ನು ಫುಟ್ಬಾಲ್ ಆಟದಲ್ಲಿನ ರೌಡಿಗಳಿಗೆ‌ ಹೋಲಿಸಿದ್ದಾನೆ! ಆದರೆ ಇಸ್ಲಾಮ್ ಹೇಳುವುದು ಮಾತ್ರ ಶಾಂತಿ ಮಂತ್ರವೇ! ಇದೇ ಆಟ!