ಪುಟಗಳು

ಬುಧವಾರ, ನವೆಂಬರ್ 25, 2015

ಮೊಳಕೆ

ಮೊಳಕೆ

ಸಿಡಿಲಾರ್ಭಟಕೆ ಬೆದರಿ ಮುರುಟಿ
ಭೂತ ಬಡಿದಂತೆ ನಿಂತು ನಿರುಕಿಸೆ||

ನಭೋ ಮಂಡಲದಿಂದ ಭೋರ್ಗರೆದಿಳಿದ
ಧಾರೆಗೆ ಧರೆಯು ಧನ್ಯವಾಯ್ತು||

ಅಡಿದಾವರೆ ಪಿಡಿದಾಗ ಬಡಿದ
ಮೊಗ್ಗುಗಳೆಲ್ಲಾ ಕರವಿಡಿದು ನಿಂತಿವೆ||

ಹಸಿಹಸಿರು ನಳನಳಿಸಿ ಹೊಸ ಚಿಗುರು ಮೇಳೈಸಿ
ಇಳೆಯ ಕಳೆ ಹೆಚ್ಚಿ ಸ್ವರ್ಗಕೆ ಹಚ್ಚಿ ಕಿಚ್ಚು||

ಹೊಳೆಯಿತದು ಹೊಸ ರಾಗ ಮೊಳೆಯಿತದು ಹೊಸ ಭಾವ
ಮನದ ಬೇಸರವೆಲ್ಲಾ ಕ್ಷಣದಿ ಮಾಯವಾಯ್ತು||

ಗುರುವಾರ, ನವೆಂಬರ್ 19, 2015

ಕ್ರಾಂತಿಯ ಕಿಡಿ ಹೋಯಿತೆಲ್ಲಿ?

ಕ್ರಾಂತಿಯ ಕಿಡಿ ಹೋಯಿತೆಲ್ಲಿ?


              ಜೂನ್ 29, 1863. ಮೇಜರ್ ಜನರಲ್ ಜಿ.ಎಸ್.ಪಿ. ಲಾರೆನ್ಸ್ ಭಾರತದಲ್ಲಿನ ಬ್ರಿಟಿಷ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಒಂದು ಪತ್ರ ಬರೆದ. "ತಾತ್ಯಾಟೋಪೆ ಬಿಕಾನೇರಿನಲ್ಲಿದ್ದಾನೆ. ಬಿಕಾನೇರಿನ ರಾಜ ತಾತ್ಯಾಟೋಪೆಗೆ ಧನಸಹಾಯ ಮಾಡಿದ್ದಾನೆ. ತಾತ್ಯಾನೊಂದಿಗೆ 5000 ಬಂಗಾಳದ ಮಾಜಿ ಸೈನಿಕರು ಸಾಲಂಬೂರು ಅರಣ್ಯದಲ್ಲಿದ್ದಾರೆ. ಅವರನ್ನೆದುರಿಸಲು 40000 ಸೈನಿಕರನ್ನು ಸಜ್ಜಾಗಿರಿಸಿದ್ದೇನೆ." ಎನ್ನುವುದು ಆ ಪತ್ರದ ಸಾರಾಂಶ. ಅರೆ, ತಾತ್ಯಾಟೋಪೆಯನ್ನು ನೇಣಿಗೇರಿಸಿದ ನಾಲ್ಕು ವರ್ಷಗಳ ಬಳಿಕ ಮತ್ತೆ ತಾತ್ಯಾಟೋಪೆಯಿಂದ ಆಕ್ರಮಣ! ಹಾಗಾದರೆ ಏಪ್ರಿಲ್ 18, 1859ರಂದು ತಾತ್ಯಾಟೋಪೆ ಎಂದು ಹೇಳಿ ಬ್ರಿಟಿಷರು ನೇಣಿಗೇರಿಸಿದ್ದು ಯಾರನ್ನು? ತಾತ್ಯಾಟೋಪೆಯನ್ನೇ ಆಗಿದ್ದರೆ ನಾಲ್ಕು ವರ್ಷಗಳ ಬಳಿಕ ಬರೆದ ಪತ್ರದಲ್ಲಿ ತಾತ್ಯಾಟೋಪೆಯನ್ನು ಉಲ್ಲೇಖಿಸಿದ್ದೇಕೆ? ಬ್ರಿಟಿಷ್ ಅಧಿಕಾರಿಗಳು ಜನರನ್ನು ಹೆದರಿಸಲು ಅಥವಾ ತಾತ್ಯಾನನ್ನು ಸೆರೆ ಹಿಡಿಯಲು ವಿಫಲರಾಗಿ ಬೇಸತ್ತು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ತಾತ್ಯಾ ಹೆಸರಲ್ಲಿ ಅನ್ಯ ವ್ಯಕ್ತಿಯನ್ನು ನೇಣಿಗೇರಿಸಿದರೆ? ಈ ಪತ್ರದಲ್ಲಿದ್ದ ವರದಿ ಸತ್ಯವಾಗಿರಲಿ ಅಥವಾ ಸುಳ್ಳೇ ಆಗಿರಲಿ, "ತಾತ್ಯಾ" ಎನ್ನುವ ಹೆಸರು ಬ್ರಿಟಿಷರನ್ನು ಯಾವ ಪರಿ ನಿದ್ದೆಗೆಡಿಸಿತ್ತು ನೋಡಿ!

                1814ರಲ್ಲಿ ಶಿರ್ಡಿಯಿಂದ 35ಕಿಮೀ ದೂರದಲ್ಲಿರುವ ಪತೋಡಾ ಜಿಲ್ಲೆಯ ಯೆವೋಲಾ ಎನ್ನುವ ಊರಿನಲ್ಲಿ ಜನ್ಮ ತಳೆದ ರಾಮಚಂದ್ರ ಪಾಂಡುರಂಗ ಯೆವೋಲೇಕರ್ ಎಂಬ ಕಿಡಿ ತಾತ್ಯಾ ಎನ್ನುವ ಹೆಸರಿನ ಅಗ್ನಿಜ್ವಾಲೆಯಾಗಿ ದೇಶದಾದ್ಯಂತ ಪಸರಿಸಿತು. ಎರಡನೆಯ ಬಾಜೀರಾಯ ಬ್ರಿಟಿಷರಿಗೆ ಸೋತಾಗ ಆತನೊಂದಿಗೆ ಅರಮನೆಯಲ್ಲಿ ಪುರೋಹಿತರಾಗಿದ್ದ ತಾತ್ಯಾನ ತಂದೆ ಕಾನ್ಪುರದ ಬಿಠೂರಿಗೆ ತೆರಳಬೇಕಾಯಿತು. ಹೀಗೆ ತಾತ್ಯಾನ ಸಾಹಸಯಾತ್ರೆಗೆ ಶ್ರೀಗಣೇಶ ಹಾಡಿದ ಕಾನ್ಪುರಕ್ಕೆ ತೆರಳುವಾಗ ತಾತ್ಯಾ ನಾಲ್ಕು ವರ್ಷದ ಮಗು. ತಾತ್ಯಾನ ಇನ್ನೂರನೇ ಜನ್ಮವರ್ಷಾಚರಣೆಗೆ ಯುವಬ್ರಿಗೇಡ್ ಸಜ್ಜಾಗುತ್ತಿದೆ. ಬ್ರಿಟಿಷರನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದ ಪದ ತಾತ್ಯಾ. ಅಂತಹ ತಾತ್ಯಾ ಭಾರತದ ಬಾನಂಗಳದಿಂದ ಹೇಗೆ ಮರೆಯಾದ ಎನ್ನುವುದು ಇತಿಹಾಸದಲ್ಲಿ ಕಗ್ಗಂಟಾಗುಳಿದಿರುವ ಪ್ರಶ್ನೆ. ಕೆಲವೇ ಕೆಲವು ಇತಿಹಾಸಕಾರರನ್ನು ಬಿಟ್ಟು ಉಳಿದವರೆಲ್ಲಾ ಬ್ರಿಟಿಷ್ ಕಂಗಳಲ್ಲೇ ಭಾರತದ ಇತಿಹಾಸವನ್ನು ಕಂಡುದುದರ ಫಲವಾಗಿ ಭಾರತದ ಚರಿತ್ರೆ ಕಲಸು ಮೇಲೋರಗವೇ ಆಗಿ ಬಿಟ್ಟಿದೆ. ಅಷ್ಟಕ್ಕೂ ಸ್ವಾತಂತ್ರ್ಯ ಸಂಗ್ರಾಮವನ್ನೇ ದಂಗೆಯೆಂದು ಕರೆದ ಇಲ್ಲಿನ ಇತಿಹಾಸಕಾರರು ತಾತ್ಯಾನ ಬಗ್ಗೆ ಸಂಶೋಧನೆಗಿಳಿದಾರೆ?

             ಇರಲಿ,1859ರಲ್ಲಿ ಬ್ರಿಟಿಷರು ಸೆರೆಹಿಡಿದು ಗಲ್ಲಿಗೇರಿಸಿದ್ದು ತಾತ್ಯಾನನ್ನಲ್ಲ ಎನ್ನುವುದಕ್ಕೆ ಹಲವಾರು ಆಧಾರಗಳಿವೆ. ತಾತ್ಯಾನ ಪರಿವಾರದ ಹೇಳಿಕೆಯಂತೆ ತನ್ನ ಬಾಲ್ಯದ ಯೆವೋಲಾದಲ್ಲಿನ ಮನೆಗೆ 1859-62ರ ಮಧ್ಯೆ ಹಲವು ಬಾರಿ ಬಂದಿದ್ದ. ಆತನನ್ನು ಗಲ್ಲಿಗೇರಿಸಿದ್ದೇವೆಂದು ಬ್ರಿಟಿಷರು ಹೇಳಿದ ಕೆಲವು ತಿಂಗಳುಗಳ ಬಳಿಕ ಯೆವೋಲಾಕ್ಕೆ ಸಾಧುವಿನ ವೇಷದಲ್ಲಿ ಬಂದಿದ್ದ ತಾತ್ಯಾ ಎರಡು ದಿನ ಅಲ್ಲಿ ತಂಗಿದ್ದ. ಅಲ್ಲಿಂದ ಕೋಪರ್ಗಾಂವಿಗೆ ತೆರಳಿ ಏನಾದರೂ ಸಹಾಯ ಸಿಗುವುದೇ ಎಂದು ನೋಡುವುದಾಗಿ ತ್ರ್ಯಂಬಕ್ ಸದಾಶಿವ ಟೋಪೆಯ ಬಳಿ ಹೇಳಿದ್ದ. ಇದೇ ರೀತಿ ಅನೇಕ ಬಾರಿ ತನ್ನ ಹೆತ್ತವರು ತೀರಿಕೊಳ್ಳುವವರೆಗೂ(1962) ತನ್ನ ಹುಟ್ಟೂರಿಗೆ ಬಂದಿದ್ದ ತಾತ್ಯಾ ತನ್ನಿಂದಾದ ಧನ ಸಹಾಯ ಮಾಡಿ ಹೋಗುತ್ತಿದ್ದ. ಇದು ಸುಳ್ಳು ಎಂದು ಭಾವಿಸುವುದಾದರೆ ತಾತ್ಯಾನ ಪರಿವಾರಕ್ಕೆ ಆ ರೀತಿಯ ಸುಳ್ಳು ಹೇಳಿ ಸಾಧಿಸುವುದಾದರೂ ಏನಿತ್ತು? ತಾತ್ಯಾನನ್ನು ಸೆರೆ ಹಿಡಿದ ಸಂದರ್ಭದಲ್ಲಿ ತಾತ್ಯಾನ ಚಿತ್ರ ಬಿಡಿಸಿದವನು ಮೇಜರ್ ಮೇಡ್ ನ ಸೈನ್ಯದಲ್ಲಿದ್ದ ಲೆಫ್ಟಿನೆಂಟ್ ಬಾಗ್. ಆದರೆ ಈ ಚಿತ್ರ ತಾತ್ಯಾನ ಉಳಿದ ಚಿತ್ರಗಳಿಗೆ ಹೋಲಿಕೆಯಾಗುತ್ತಿಲ್ಲ. ಮಾತ್ರವಲ್ಲ ತಾತ್ಯಾನನ್ನು ಬಿಠೂರಿನಲ್ಲಿ ನೋಡಿದ್ದ ಜನರಲ್ ಲ್ಯಾಂಗನ ವರ್ಣನೆಗೂ ಈ ಚಿತ್ರಕ್ಕೂ ಅಗಾಧ ವ್ಯತ್ಯಾಸಗಳಿವೆ. ತಾತ್ಯಾ ಸೆರೆ ಸಿಕ್ಕರೆ ಕಾನ್ಪುರ ಯುದ್ಧದ ಸಮಗ್ರ ವಿಚಾರಣೆಯನ್ನು ನಡೆಸಿ ವರದಿ ಸಲ್ಲಿಸಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ ಗಮನಾರ್ಹ ವಿಚಾರಣೆಯನ್ನೇ ನಡೆಸದೆ ತುರಾತುರಿಯಲ್ಲಿ ತಾತ್ಯಾನನ್ನು ಗಲ್ಲಿಗೇರಿಸಿತೇಕೆ?

              ನವೆಂಬರ್ 14, 1862ರಲ್ಲಿ ಅಸಿಸ್ಟೆಂಟ್ ರೆಸಿಡೆಂಟ್ ಬಾಂಬೆ ಸರಕಾರದ ರಾಜಕೀಯ ವಿಭಾಗದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಾತ್ಯಾನ ಸಂಬಂಧಿ ರಾಮಕೃಷ್ಣ ಟೋಪೆ ಬಿಠೂರನ್ನು ಬಿಟ್ಟು ಉದ್ಯೋಗವನ್ನರಸುತ್ತಾ ಬರೋಡಾಗೆ ಬಂದಿರುವುದಾಗಿಯೂ ತಾನು ಆತನನ್ನು "ತಾತ್ಯಾ ಎಲ್ಲಿದ್ದಾನೆ" ಎಂದು ವಿಚಾರಿಸಿದಾಗ, ಆತ ನಮ್ಮನ್ನು ಬಿಟ್ಟು ಹೋದ ನಂತರ ತಾತ್ಯಾನ ಮಾಹಿತಿಯೇ ನಮಗಿಲ್ಲ ಎಂದುತ್ತರಿಸಿದಾಗಿಯೂ ಉಲ್ಲೇಖಗಳಿವೆ. ಒಂದು ವೇಳೆ ತಾತ್ಯಾನನ್ನೇ ಗಲ್ಲಿಗೇರಿಸಿದ್ದು ಹೌದಾಗಿದ್ದರೆ ಬ್ರಿಟಿಷ್ ಸರಕಾರದ ಅಧಿಕಾರಿಯೊಬ್ಬನಿಗೆ ಈ ಪರಿಯ ವಿಚಾರಣೆಯ ಅಗತ್ಯವೇನಿತ್ತು? ಈ ಪತ್ರವನ್ನು ಮೇಜರ್ ಮೇಡ್ ಗೆ ರವಾನಿಸಿ ರಾಮಕೃಷ್ಣ ಟೋಪೆಯ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಕೇಳಿದಾಗ ಆತನಿಂದ ಅದು ನಿಜವೆಂಬ ಉತ್ತರ ಲಭ್ಯವಾಗಿತ್ತು. ಜನರಲ್ ಮೇಡ್ ಈ ಸಂದರ್ಭದಲ್ಲಿ ತಾತ್ಯಾನನ್ನು ತಾನು ಸೆರೆ ಹಿಡಿದು ಗಲ್ಲಿಗೇರಿಸಿದ್ದೇನೆ, ಇನ್ನು ವಿಚಾರಣೆಯ ಅವಶ್ಯಕತೆ ಇಲ್ಲ ಎಂದೇಕೆ ಉತ್ತರಿಸಲಿಲ್ಲ? ತಾತ್ಯಾನನ್ನು ಗಲ್ಲಿಗೇರಿಸಿದ ಬಳಿಕವೂ ಇಬ್ಬರು ವ್ಯಕ್ತಿಗಳನ್ನು ತಾತ್ಯಾ ಎಂದು ಹೇಳಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂದರೆ ಇದೆಲ್ಲವೂ ಬ್ರಿಟಿಷರಾಡಿದ ನಾಟಕ ಎಂದೇ ಭಾಸವಾಗುವುದಿಲ್ಲವೇ?

              ತಾತ್ಯಾನನ್ನು ಸೆರೆಹಿಡಿಯಲು ಸಹಾಯ ಮಾಡಿದ ಎನ್ನಲಾದ ಮಾನ್ ಸಿಂಗ್ ಓರ್ವ ರಜಪೂತ. ತಮ್ಮ ಪ್ರಾಣ ಹೋದರೂ ಕೊಟ್ಟ ಮಾತಿಗೆ ತಪ್ಪುವವರಲ್ಲ ರಜಪೂತರು. ಹಾಗಾಗಿ ಆತ ತನ್ನ ಆಶ್ರಯದಲ್ಲಿದ್ದ ತಾತ್ಯಾನನ್ನು ಬ್ರಿಟಿಷರಿಗೊಪ್ಪಿಸಿದ ಎಂದು ಒಪ್ಪಲು ಕಷ್ಟವಾಗುತ್ತದೆ. ಕೆಲವು ಇತಿಹಾಸಕಾರರು ಮಾನ್ ಸಿಂಗ್ ತಾತ್ಯಾನ ಯೋಜನೆಯಂತೆ ತಾತ್ಯಾನ ಜಾಗದಲ್ಲಿ ಇನ್ನೊಬ್ಬನನ್ನು ಒಪ್ಪಿಸಿರಬಹುದೆಂದು ಅನುಮಾನಪಡುತ್ತಾರೆ. ಅಲ್ಲದೆ ಬ್ರಿಟಿಷರ ವಶದಲ್ಲಿದ್ದ ತನ್ನ ರಾಣಿ ಹಾಗೂ ಸಂಬಂಧಿಗಳನ್ನು ಬಿಡಿಸಿಕೊಳ್ಳಲು ಮಾನಸಿಂಗನೇ ತಾತ್ಯಾನನ್ನೊಪ್ಪಿಸುವ ನಾಟಕವನ್ನಾಡಿರಬಹುದೆಂಬ ಊಹೆಗಳೂ ಇವೆ. ಹಾಗೆಯೇ ಚಾಣಾಕ್ಷ ತಾತ್ಯಾ ಅನುಮಾನಗೊಂಡು ತಪ್ಪಿಸಿಕೊಂಡಾಗ ತನ್ನ ತಲೆ ಉಳಿಸಿಕೊಳ್ಳಲು ಬೇರೊಬ್ಬನನ್ನು ತಾತ್ಯಾ ಎಂದು ಬಿಂಬಿಸಿ ಬ್ರಿಟಿಷರಿಗೊಪ್ಪಿಸಿರಬಹುದೆಂಬ ಅನುಮಾನಗಳೂ ಇವೆ. ಈ ಎಲ್ಲಾ ಅಂಶಗಳನ್ನು ಖಚಿತ ಎಂದು ಒಪ್ಪಲಿಕ್ಕಾಗದೇ ಇದ್ದರು ಬ್ರಿಟಿಷರ ವರದಿಯೊಂದು ಇಂತಹ ಸಂಭವನೀಯತೆಯೊಂದನ್ನು ತೆರೆದಿಟ್ಟಿದೆ. ಆ ವರದಿಯಂತೆ ಮಾನ್ ಸಿಂಗನ ಆಶ್ರಯದಲ್ಲಿದ್ದ ತಾತ್ಯಾನನ್ನು ಸೆರೆ ಹಿಡಿಯುವಾಗ ತಾತ್ಯಾನ ಅಡುಗೆ ಭಟ್ಟರಿಬ್ಬರು ತಪ್ಪಿಸಿಕೊಂಡರು ಎಂದಿದೆ. ಅಡುಗೆಭಟ್ಟರೇ ತಪ್ಪಿಸಿಕೊಂಡಾಗ ಬ್ರಿಟಿಷರಿಂದಲೇ "ಅಪ್ರತಿಮ ಗೆರಿಲ್ಲಾ ನಾಯಕ" "ಕಣ್ಣೆದುರಿನಿಂದಲೇ ತಪ್ಪಿಸಿಕೊಳ್ಳುವುದರಲ್ಲಿ ಚಾಣಾಕ್ಷ"(genius of flight) ಎಂದೆಲ್ಲಾ ಹೊಗಳಿಸಿಕೊಂಡ ತಾತ್ಯಾ ಮಾತ್ರ ಸೆರೆ ಸಿಕ್ಕಿದನೆಂದರೆ ಅದು ಆಶ್ಚರ್ಯವಲ್ಲದೆ ಮತ್ತೇನು? ಅಲ್ಲದೆ ತಾತ್ಯಾನನ್ನು ಹಿಡಿದುಕೊಟ್ಟರೆ ಜಾಗೀರು ಕೊಡುತ್ತೇವೆಂದು ಮಾತುಕೊಟ್ಟ ಬ್ರಿಟಿಷರು ತಾತ್ಯಾ ತಮ್ಮ ಕೈಸೆರೆಯಾದ ಮೇಲೆ ಮಾನ್ ಸಿಂಗನಿಗೆ ಚಿಕ್ಕಾಸನ್ನೂ ಕೊಡಲಿಲ್ಲ. ಅಂದರೆ ಬ್ರಿಟಿಷರಿಗೆ ತಾವು ಸೆರೆ ಹಿಡಿದದ್ದು ತಾತ್ಯಾನನ್ನೇ ಎನ್ನುವ ವಿಶ್ವಾಸವಿರಲಿಲ್ಲ ಎನ್ನುವ ಗುಮಾನಿ ಏಳುವುದಿಲ್ಲವೇ?

            ಗುಜರಾತ್ ವಿವಿಯ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಆರ್.ಕೆ. ಧಾರಯ್ಯ ಬ್ರಿಟಿಷರು 1859ರ ನಂತರವೂ ಬದುಕಿದ್ದ ಅನ್ನುವುದಕ್ಕೆ ಹಲವು ಆಧಾರಗಳನ್ನು ಕೊಡುತ್ತಾರೆ. 1862ರಲ್ಲಿ ತನ್ನ ಹೆತ್ತವರು ತೀರಿಕೊಂಡ ಬಳಿಕ ಗುಜರಾತಿನ ನವಸಾರಿಗೆ ತಹಲ್ದಾಸ್ ಎನ್ನುವ ಸಾಧುವಿನ ವೇಶದಲ್ಲಿ ಬಂದು ನೆಲೆ ನಿಂತ ತಾತ್ಯಾ. ಅಲ್ಲಿನ ಬಾವಾಜಿ ಪರ್ವತದಲ್ಲಿ ನೆಲೆಸಿದ್ದ ಸಾಧು ತಹಲ್ದಾಸ್ ತಾತ್ಯಾನೇ ಎನ್ನುವುದಕ್ಕೆ ಧಾರಯ್ಯ ಕೊಡುವ ಇವು. ೧) ತಹಲ್ದಾಸ್ ತಾನು ದೇಶಸ್ಥ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಿದ್ದರು. ತಾತ್ಯಾ ಕೂಡಾ ದೇಶಸ್ಥ ಬ್ರಾಹ್ಮಣ! ೨) ತಾತ್ಯಾ ಹಿಂದೊಮ್ಮೆ ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಂಡಿದ್ದ ಬಾಣಸ್ವರ ಅರಣ್ಯದಲ್ಲಿದ್ದ ಗಂಗ್ರೋಲ್ ಎಂಬ ಹಳ್ಳಿಗೆ ತಹಲ್ದಾಸ್ ಆಗಾಗ ಹೋಗಿ ಬರುತ್ತಿದ್ದರು. ೩)ತಾತ್ಯಾನ ಜೊತೆಗಾರ ರಾಮಚಂದ್ರ(ರಾಮಭಾವೂ) ತಹಲ್ದಾಸ್ ಜೊತೆಗಿದ್ದ ೪) ತಹಲ್ದಾಸ್ ತಾತ್ಯಾನಂತೆ ನಿರರ್ಗಳವಾಗಿ ಮರಾಠಿ,ಹಿಂದಿ,ಗುಜರಾತಿಗಳಲ್ಲಿ ಮಾತನಾಡುತ್ತಿದ್ದರು ೫) ತಹಲ್ದಾಸರಿಗೆ ಯುದ್ಧ ಹಾಗೂ ಶಸ್ತ್ರಾಸ್ತ್ರಗಳ ಬಗೆಗೆ ಅಗಾಧ ಜ್ಞಾನವಿತ್ತು ೬) ಜನರಲ್ ಲ್ಯಾಂಗ್ ವರ್ಣಿಸಿದ ತಾತ್ಯಾನಂತೆಯೇ ತಹಲ್ದಾಸ್ ಚರ್ಯೆ ಇದ್ದುದು ೭) ಸಂವತ್ 1871(AD 1814) ತಹಲ್ದಾಸ್ ಜನ್ಮವರ್ಷವಾಗಿತ್ತು. ತಾತ್ಯಾನ ಜನ್ಮವರ್ಷವೂ ಅದೇ!

              ತಾತ್ಯಾ ಐದು ವಾರಗಳ ಕಾಲ ಮಾನ್ ಸಿಂಗನ ಆಶ್ರಯದಲ್ಲಿ ವಿಶ್ರಾಂತಿ ಪಡೆದು ಸರೊಂಜೀ ಕಾಡಿನಲ್ಲಿದ್ದ ತನ್ನ ಹೊಸ ಅನುಯಾಯಿಗಳ ನಾಯಕತ್ವ ವಹಿಸಿ ಹೋರಾಡುವ ರೂಪುರೇಷೆಯನ್ನು ನಿರ್ಧರಿಸಿದ್ದ. ಇದನ್ನೆಲ್ಲಾ ತಿಳಿದ ಮಾನ್ ಸಿಂಗ್ ಬ್ರಿಟಿಷರ ಕ್ಯಾಂಪಿಗೆ ದಿನನಿತ್ಯ ಹೋಗಿಬರುತ್ತಿದ್ದ ವಿಚಾರ ತಾತ್ಯಾನಂತಹ ಮೇಧಾವಿಗೆ ತಿಳಿಯಲಿಲ್ಲ ಎಂದು ನಂಬುವುದು ಕಷ್ಟವಾಗುತ್ತದೆ. ಎಷ್ಟೇ ಸುಸ್ತಾಗಿದ್ದರೂ ಶತ್ರು ಸೇನೆಯ ಸೆರೆಗೆ ಸಿಕ್ಕಿಹಾಕಿಕೊಳ್ಳುವಂತಹ ಮೂರ್ಖತನವನ್ನು ತಾತ್ಯಾ ಖಂಡಿತಾ ಮಾಡುವವನಲ್ಲ. ಅಲ್ಲದೆ ಐದುವಾರಗಳ ಕಾಲ ನಿದ್ದೆ ಮಾಡುವ ಪ್ರವೃತ್ತಿಯೂ ತಾತ್ಯಾನದ್ದಲ್ಲ. ಮೇಲಾಧಿಕಾರಿಗಳಿಗೆ ತಮ್ಮ ಕರ್ತವ್ಯ ನಿಷ್ಠೆಯನ್ನು ಸಾದರಪಡಿಸುವ ಸಲುವಾಗಿಯೋ, ರಾಣಿಯಿಂದ ಪ್ರಶಂಸೆ-ಜಾಗೀರು ಪಡೆದುಕೊಳ್ಳುವ ಆಶೆಯಿಂದಲೋ, ತಾತ್ಯಾನನ್ನು ಸೆರೆ ಹಿಡಿದೆವು-ಸಂಗ್ರಾಮ ಮುಗಿಯಿತು-ಇನ್ನು ಬಾಲಬಿಚ್ಚಬೇಡಿ ಎಂದು ಭಾರತೀಯರನ್ನು ಬೆದರಿಸುವ ಉದ್ದೇಶದಿಂದ ಯಾರೋ ಒಬ್ಬಾತನನ್ನು ಗಲ್ಲಿಗೇರಿಸಿ ಆತನೇ ತಾತ್ಯಾ ಎಂದು ಬ್ರಿಟಿಷರು ಬಿಂಬಿಸಿರಬಹುದು.

             ಹಾಗಾದರೆ ತಾತ್ಯಾ ಏನಾದ?  ಸನ್ಯಾಸಿಯಾಗಿಯೇ ಜೀವನ ಕಳೆದನೇ? ಅಥವಾ ಅಲ್ಲಲ್ಲಿ ಹೊಸ ಹೊಸ ಪಡೆಗಳನ್ನು ಕಟ್ಟಿ ಬೇರೆ ಬೇರೆ ಹೆಸರಲ್ಲಿ ಹೋರಾಡಿ ಮುಂದಿನ ಕ್ರಾಂತಿ ಪ್ರವಕ್ತಕರಿಗೆ ಪ್ರೇರಣೆ ನಿಡಿದನೇ? ಅಥವಾ ಮುಂದೆ ಭಾರತೀಯರ ನೆರವು ಸಿಗದೆ ಒದ್ದಾಡಿದನೇ? ಟಿಪ್ಪುವಿನಂಥ ಮತಾಂಧ, ಹೇಡಿಯನ್ನು ದೇಶಪ್ರೇಮಿ ಎನ್ನುವ ಈಗಿನ ದೇಶದ್ರೋಹಿಗಳಂತೆ ಆಗಲೂ ಬ್ರಿಟಿಷರ ಪರವಾಗಿದ್ದ ದೇಶದ್ರೋಹಿಗಳೇ ಅಧಿಕವಾಗಿದ್ದು ಸಹಕಾರಿಗಳೇ ಸಿಗದೇ ನಿರಾಶನಾಗಿ ಹೋದನೇ? ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ನೈಜ ಇತಿಹಾಸಕಾರರೇ ಇತಿಹಾಸವನ್ನು ಬರೆಯಬೇಕಾಗಿದೆ. ಏನೇ ಇರಲಿ, ಶಿವಾಜಿಯ ಸಕಲ ಗುಣಗಳನ್ನು ಮೇಳೈಸಿಕೊಂಡಿದ್ದ ತಾತ್ಯಾ ಎನ್ನುವ ಕ್ರಾಂತಿ ಸೂರ್ಯ ಭವ್ಯ ಭಾರತದ ಸ್ಪೂರ್ತಿದಾಯಕ ಇತಿಹಾಸವೊಂದನ್ನು ರಚಿಸಿ ಮುಂದಿನ ತಾತ್ಯಾ(ವೀರ ಸಾವರ್ಕರ್)ನಿಗೆ ಪ್ರೇರಣೆಯಾಗಿ ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗುಳಿದ.

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!


                ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಹಾಗೂ ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಧಾರ್ಮಿಕ-ದತ್ತಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವುದರೊಂದಿಗೆ ಸೆಕ್ಯುಲರ್ ಸರಕಾರಕ್ಕೆ ಚುರುಕು ಮುಟ್ಟಿಸಿದೆ ಉಚ್ಛ ನ್ಯಾಯಾಲಯ. ಇದರಿಂದಾಗಿ ಮುಜರಾಯಿ ದೇಗುಲಗಳ ಆಡಳಿತ ನಿರ್ವಹಣೆಗಾಗಿ ಕಾಯ್ದೆಯ ತಿದ್ದುಪಡಿ ನಂತರ ಸರ್ಕಾರ ರಚಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್ ಕೂಡ ಮಾನ್ಯತೆ ಕಳೆದುಕೊಳ್ಳಲಿದೆ. ಹೈಕೋರ್ಟ್ ಆದೇಶದಿಂದಾಗಿ ಸರ್ಕಾರ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ, ಆಡಳಿತಾಧಿಕಾರಿಗಳ ನೇಮಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನೇಮಕದ ಅಧಿಕಾರವನ್ನು ಕಳೆದುಕೊಳ್ಳಲಿದೆ. ಧಾರ್ಮಿಕ ದತ್ತಿ ಕಾಯ್ದೆಯಡಿ 2003ರಲ್ಲಿ ಹೊಸ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಒಟ್ಟು 34 ಸಾವಿರ ದೇಗುಲಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಧಿಸೂಚನೆ ಹೊರಡಿಸಿತ್ತು. ಮುಜರಾಯಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಶ್ರೀಮಂತ ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿದೆ. ಅಲ್ಲದೆ 1957ರ ಧಾರ್ಮಿಕ ದತ್ತಿ ಕಾಯ್ದೆಗೆ ಪದೇಪದೆ ತಿದ್ದುಪಡಿ ತರುವ ಮೂಲಕ ಅದರ ಸಾಂವಿಧಾನಿಕ ಮೌಲ್ಯಕ್ಕೆ ಧಕ್ಕೆ ತಂದಿದೆ ಎಂದು ಪೀಠ ಸರಕಾರದ ನಡೆಯನ್ನು ತೀಕ್ಷ್ಣವಾಗಿ ಟೀಕಿಸಿದೆ.

                ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅಲ್ಲಿ ಇತಿಹಾಸದ ನೆನಪುಗಳಿವೆ, ಪಾಠವಿದೆ! ಕಲಾವಿದನೊಬ್ಬನ ಕೈಚಳಕದಿಂದ ಸಿದ್ಧಗೊಂಡ ಕಲಾ ವೈಭವವು ಗತದ ಹಿರಿಮೆ-ಗರಿಮೆಯನ್ನು ಸಾರುತ್ತದೆ. ಹಿಂದೆ ಅಲ್ಲಿ ವೇದ-ವೇದಾಂಗಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿದ್ದವು. ಭಾರತೀಯ ಕಲೆಗಳ ಪೋಷಕ ತಾಣಗಳಾಗಿದ್ದವು. ಅಲ್ಲಿ ಜಂಜಡದ ಬದುಕಿನ ಬವಣೆಗಳಿಂದ ಮುಕ್ತನಾಗಿ ಕ್ಷಣಕಾಲ ಶಾಂತಿಯಿಂದಿರಲು ಸಾಧ್ಯವಿತ್ತು. ಬ್ರಿಟಿಷರ ಕಾಪಟ್ಯದಿಂದಲೋ ನಮ್ಮವರದೇ ಮೌಢ್ಯದಿಂದಲೋ ಜಾತಿಯ ಒಳಸುಳಿಗೆ ಅವು ಸಿಲುಕಿದರೂ ದಶಕಗಳ ಹಿಂದಿನವರೆಗೂ ಅಲ್ಲಿ ಅಧ್ಯಾತ್ಮವನ್ನೂ ಸವಿಯಬಹುದಿತ್ತು. ಶಾಂತಿಯನ್ನು ಪಡೆಯಬಹುದಿತ್ತು. ಆದರೆ ಯಾವಾಗ ಆಳುಗರ ಕೆಟ್ಟ ದೃಷ್ಠಿ ದೇಗುಲಗಳ ಮೇಲೆ ಬಿತ್ತೋ ಅವರ ಮತ ಬ್ಯಾಂಕಿಗೆ ಈ ದೇವಾಲಯಗಳ ನಿಧಿಗಳು ಜಮಾವಣೆಯಾಗತೊಡಗಿದವು! ಅಲ್ಲಿನ ಲೌಕಿಕ ಹಾಗೂ ಅಲೌಕಿಕ ಸೌಂದರ್ಯಗಳೆರಡೂ ಸೊರಗತೊಡಗಿತು!

          ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಬಳಿಕ ಸಮರ್ಪಕವಾಗಿ ಅವುಗಳನ್ನು ನಿರ್ವಹಿಸಿದರೆ ಯಾರೊಬ್ಬರ ತಕರಾರು ಇರುವುದಿಲ್ಲ. ಆದರೆ ಒಮ್ಮೆ ಸರಕಾರದ ವಶಕ್ಕೊಳಗಾದ ದೇವಾಲಯ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಅಲ್ಲಿ ನಡೆಯುವ ಪೂಜಾ-ಉತ್ಸವಾದಿಗಳಿಗೆ, ಧಾರ್ಮಿಕ ಶಿಕ್ಷಣಕ್ಕೆ, ಅನ್ನ-ಅಕ್ಷರ ದಾಸೋಹಗಳಿಗೆ ತೆರೆ ಬೀಳುತ್ತದೆ ಅಥವಾ ಅವೆಲ್ಲವೂ ನಾಮಕೆವಾಸ್ತೇ ಎಂಬತಾಗುತ್ತವೆ. ಅರ್ಚಕರು, ಪರಿಚಾರಕರಿಗೆ ಸರಿಯಾದ ಸಂಬಳ ಸಿಗದೆ ಅವರು ತಿಂಗಳುಗಟ್ಟಲೆ ಸರಕಾರೀ ನೌಕರರಂತೆ ತಮ್ಮ ಸಂಬಳಕ್ಕೆ ಕಾಯುವಂತೆ ಮಾಡುತ್ತದೆ ಸರಕಾರ. ಆದರೆ ಹುಂಡಿಯ ಹಣದ ಲೆಕ್ಕದ ಸಮಯದಲ್ಲಿ ಸರಿಯಾಗಿ ಆಗಮಿಸುತ್ತಾರೆ ಸರಕಾರೀ ಅಧಿಕಾರಿಗಳು! ಈ ಹಣವಾದರೂ ದೇವಾಲಯದ ಅಭಿವೃದ್ಧಿಗೆ ಉಪಯೋಗವಾಗುತ್ತದೆಯೇ? ಈ ಹಣದಿಂದ ಭಕ್ತರ ಜೀವನಕ್ಕೇನಾದರೂ ಲಾಭವಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಹಜ್ ಯಾತ್ರೆಯ ಸಬ್ಸಿಡಿಗಳಲ್ಲಿ, ಮತಾಂತರದ ಕಾರಸ್ಥಾನಗಳಲ್ಲೇ ಉತ್ತರ ಕಂಡುಕೊಳ್ಳಬೇಕು!

             ದೇಶದಲ್ಲಿ ನಾಲ್ಕನೇ ಅತ್ಯಧಿಕ ದೇವಾಲಯಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು ಎರಡೂವರೆ ಲಕ್ಷ ದೇವಾಲಯಗಳು ಸರಕಾರದ ಸುಪರ್ದಿಯಲ್ಲೇ ಇವೆ. ದೇವಾಲಯಗಳಿಂದ ಬರುವ 70% ಆದಾಯ ಮದ್ರಸಾಗಳಿಗೆ, ಹಜ್ ಯಾತ್ರೆಗೆ ಬಳಸಲ್ಪಡುತ್ತದೆ. ಕರ್ನಾಟಕದಲ್ಲಿ 2003ರಲ್ಲಿ ದೇವಾಲಯಗಳಿಂದ 79ಕೋಟಿ ಸಂಗ್ರಹ ಮಾಡಲಾಗಿತ್ತು. ಆದರೆ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೇ 7 ಕೋಟಿ! ಹಜ್ ಯಾತ್ರೆಗೆ 59 ಕೋಟಿ, ಚರ್ಚ್ ಗಳಿಗೆ 13 ಕೋಟಿ. ಈ ಧೋರಣೆ ಇಡೀ ದೇಶದಲ್ಲಿ ಸಾಗಿದೆ. ರಾಜ್ಯಾದ್ಯಂತ ದೇವಾಲಯಗಳಿಂದ ಬಂದ ಹಣದಲ್ಲೇ ಮುಲ್ಲಾ, ಪಾದರಿಗಳಿಗೂ ಸಂಬಳ ಪಾವತಿಯಾಗುತ್ತದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 125 ಎ ವರ್ಗದ ದೇವಾಲಯಗಳು, 179 ಬಿ ವರ್ಗದ ದೇವಾಯಗಳು ಇದ್ದು, ಎ ವರ್ಗದ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋ.ರೂ., 2011-12ನೇ ಸಾಲಿನಲ್ಲಿ 261.14 ಕೋ.ರೂ., ಬಿ ವರ್ಗದ ದೇವಾಲಯಗಳಿಂದ 20.18 ಕೋ.ರೂ. ಹಾಗೂ 21.58 ಕೋ.ರೂ. ಆದಾಯ ಬಂದಿದೆ. ದ.ಕ.ಜಿಲ್ಲೆಯಲ್ಲಿ 40 ‘ಎ’ ವರ್ಗದ ದೇವಾಲಯಗಳು, 27 ‘ಬಿ’ ವರ್ಗದ ಹಾಗೂ 400ಕ್ಕೂ ಹೆಚ್ಚು ‘ಸಿ’ವರ್ಗದ ದೇವಾಲಯಗಳು ಇವೆ. ರೂಪಾಯಿ 25ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಾಲಯಗಳು ‘ಎ’ ವರ್ಗಕ್ಕೂ ರೂ.25ಲಕ್ಷಕ್ಕಿಂತ ಕಡಿಮೆ ರೂ.5ಲಕ್ಷಕ್ಕಿಂತ ಹೆಚ್ಚಿನ ಆಧಾಯ ಇರುವ ದೇವಾಲಯಗಳು ‘ಬಿ’ವರ್ಗಕ್ಕೂ ಹಾಗೂ ರೂ.5ಲಕ್ಷಕ್ಕಿಂತ ಕಡಿಮೆ ಹಾಗೂ 1ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ದೇವಾಲಯಗಳು ‘ಸಿ’ವರ್ಗಕ್ಕೆ ಸೇರಿವೆ. ಕುಕ್ಕೆ ಸುಬ್ರಹ್ಮಣ್ಯ ಅತೀ ಹೆಚ್ಚು ಆದಾಯವುಳ್ಳ ದೇವಾಲಯ. ಕುಕ್ಕೆ ದೇವಸ್ಥಾನದ ಆದಾಯ 2010-11ನೇ ಸಾಲಿನಲ್ಲಿ 44.82 ಕೋ.ರೂ.ಗಳಿದ್ದರೆ 2011-12ನೇ ಸಾಲಿನಲ್ಲಿ 58.29 ಕೋ.ರೂ.ಗೇರಿತ್ತು. 2013-14ರಲ್ಲಿ 68ಕೋಟಿ, 2013-14ರಲ್ಲಿ ಕುಕ್ಕೆಯ ಆದಾಯ 78ಕೋಟಿ ರೂಪಾಯಿಗಳಾಗಿತ್ತು. ಕೊಲ್ಲೂರು ದೇವಳದ ಆದಾಯ 17.48 ಕೋ.ರೂ.ಗಳಿಂದ 20 ಕೋ.ರೂ.ಗಳಿಗೆ ಏರಿಕೆಯಾಗಿತ್ತು. ಕಟೀಲು ದೇವಸ್ಥಾನದ ಆದಾಯ 10.07 ಕೋ.ರೂ.ಗಳಿದ್ದುದು ಮರುವರ್ಷ 11.5 ಕೋ.ರೂ.ಗೆ ಏರಿಕೆಯಾಗಿತ್ತು. ಕುಕ್ಕೆ ದೇವಸ್ಥಾನದ ಆದಾಯ ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನದಾಗಿದ್ದು ಬಳಿಕ ಕೊಲ್ಲೂರು, ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಲೆಮಹದೇಶ್ವರ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮೊದಲಾದವುಗಳಿವೆ.

           300ವರ್ಷಗಳಿಗೂ ಹಿಂದಿನ ಪ್ರಾಚೀನ ಸ್ಮಾರಕಗಳನ್ನು ನವೀಕರಿಸುವುದಲ್ಲ, ಯಥಾಸ್ಥಿತಿ ಕಾಪಾಡಬೇಕು ಎನ್ನುವ ಕಾನೂನಿದೆ. ದೇವಾಲಯಗಳನ್ನು ತನ್ನ ಸ್ವಾಧೀನ ಮಾಡಿಕೊಳ್ಳುವ ಸರ್ಕಾರ ದೇವಾಲಯಗಳ ಅಮೂಲ್ಯ ವಾಸ್ತುಶಿಲ್ಪದ ಪರಂಪರೆಯನ್ನು ವಿವೇಚನಾರಹಿತವಾಗಿ ನಾಶಪಡಿಸುತ್ತಿದೆ. ಎಷ್ಟೋ ದೇವಾಲಯಗಳ ಶಿಲ್ಪಕಲಾ ವೈಭವ ಹಾಗೂ ಶಾಸನಗಳು ಧೂಳು, ಮರಳು ಮೆತ್ತಿ ನಾಶವಾಗುತ್ತಲೇ ಇವೆ. ಕಾಂಕ್ರೀಟಿಕರಣದ ಭರದಲ್ಲಿ ಹಲವು ದೇವಾಲಯಗಳ ಸೊಗಡು-ಇತಿಹಾಸವೆರಡೂ ನಾಶವಾಗುತ್ತಿವೆ. 2003-04ರ ಅವಧಿಯಲ್ಲಿ ಕರ್ನಾಟಕದಲ್ಲಿ ಸುಮಾರು ಐದುಸಾವಿರ ದೇವಾಲಯಗಳನ್ನು ನಿರ್ವಹಣೆ ಹಾಗೂ ಹಣಕಾಸಿನ ನೆಪವೊಡ್ಡಿ ಮುಚ್ಚಲಾಗಿತ್ತು.  ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಕೆಲವು ದೇವಾಲಯಗಳಿಗೆ ಕೊಡುವ ಹಣ ಎಣ್ಣೆ-ಬತ್ತಿಗಳಿಗೇ ಸಾಲುವುದಿಲ್ಲ. ಕೆಲವು ದೇವಸ್ಥಾನಗಳ ಅರ್ಚಕರು ಬೇರೆ ಆದಾಯದ ಮೂಲಗಳಿಲ್ಲದಿದ್ದರೆ ಬದುಕುವುದೇ ದುಸ್ತರ ಎಂಬಂತಹ ಸಂಬಳ ಪಡೆಯುತ್ತಾರೆ! ಕೆಲವಾರು ವರ್ಷ ಹಿಂದಿನವರೆಗೂ ಸರಕಾರ ದೇವಾಲಯಗಳಿಗೆ ಕೊಡುತ್ತಿದ್ದ ತಸ್ತೀಕ್ ವಾರ್ಷಿಕ ರೂ. ೧೫೦ನ್ನೂ ದಾಟುತ್ತಿರಲಿಲ್ಲ. ಈಗ ಸ್ವಲ್ಪ ಏರಿಕೆಯಾಗಿದೆಯಾದರೂ ಹಲವು ದೇವಾಲಯಗಳ ದೆಸೆ ಬದಲಾಗಿಲ್ಲ. ದೇವಾಲಯಗಳಿಗೆ ಸರಕಾರ ಕೊಡುವ ತಸ್ತೀಕ್ ತಿಂಗಳಿಗೆ 2000 ರೂ.! ಈ ಬಾರಿ ಜೂನ್ ನಲ್ಲಿ ಮುಜರಾಯಿ ಇಲಾಖೆ ದೇವಾಲಯಗಳಿಗೆ ವಾರ್ಷಿಕವಾಗಿ ನೀಡುತ್ತಿರುವ ಪೂಜಾ ಕೈಂಕರ್ಯ ವೆಚ್ಚವನ್ನು 24ಸಾವಿರದಿಂದ 36 ಸಾವಿರ ರೂ.ಗಳಿಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಇಷ್ಟರ ಮೇಲೆ ದೇವಾಲಯಗಳಲ್ಲಿ ತಟ್ಟೆಗೆ ಹಣ ಹಾಕಬೇಡಿ. ಹುಂಡಿಗೇ ಹಾಕಿ ಎನ್ನುವ ಫಲಕಗಳೂ ದೇವಾಲಯಗಳಲ್ಲಿ ರಾರಾಜಿಸತೊಡಗಿವೆ.

        ಬೆಂಗಳೂರಿನಲ್ಲಿ ಕೆರೆ ಒತ್ತುವರಿ ನೆಪವೊಡ್ಡಿ ಹಲವು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವಶಪಡಿಸಿಕೊಂಡಿದೆ. ಸಾಯಿಬಾಬಾ ದೇವಾಲಯ, ಇಸ್ಕಾನ್ ದೇವಾಲಯ, ಕನ್ನಿಕಾಪರಮೇಶ್ವರಿ, ಕೋದಂಡರಾಮಸ್ವಾಮಿ ದೇವಾಲಯಗಳು ಇವುಗಳಲ್ಲಿ ಪ್ರಮುಖವಾದವುಗಳು. ಕೆರೆ ಒತ್ತುವರಿ ಮಾಡಿ ನಿವೇಶನಗಳನ್ನಾಗಿಸಿ ಅಥವಾ ಮನೆ ಕಟ್ಟಿಸಿ ಮಾರಾಟ ಮಾಡಿದವರು, ಕಂಪೆನಿ-ಹೋಟೆಲ್ಗಳನ್ನು ಸ್ಥಾಪಿಸಿದವರು, ಅಭಿವೃದ್ಧಿಯ ನೆಪವೊಡ್ಡಿ ಕೆರೆಗಳನ್ನೇ ಗುಳುಂ ಮಾಡಿದವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸರಕಾರದ ಕಣ್ಣಿಗೆ ಈ ದೇವಾಲಯಗಳು ಮಾತ್ರ ಯಾಕೆ ಬಿದ್ದವು? ಕಾರಣ ಸ್ಪಷ್ಟ. ಅವೆಲ್ಲವೂ ಅಧಿಕ ಆದಾಯವಿದ್ದ ದೇವಾಲಯಗಳು!

               ಎಷ್ಟೋ ದೇವಾಲಯಗಳು ಗತಿ ಗೋತ್ರವಿಲ್ಲದೆ ಪಾಳು ಬಿದ್ದು ಹೋದದ್ದಿದೆ. ಹಲವು ದೇಗುಲಗಳನ್ನು ಊರವರೇ ಚಂದಾ ಎತ್ತಿ ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುವುದಿದೆ. ಆದರೆ ಒಮ್ಮೆ ದೇವಾಲಯ ಜೀರ್ಣೋದ್ಧಾರವಾಯಿತೆನ್ನಿ, ಸರಕಾರದ ಕೆಟ್ಟದೃಷ್ಠಿ ಈ ದೇವಾಲಯಗಳ ಮೇಲೆ ಬೀಳುತ್ತದೆ. ಉತ್ತಮ ಆದಾಯವಿರುವ ಹಿಂದೂ ದೇವಾಲಯಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಸರ್ಕಾರದ ಪ್ರಯತ್ನ ಸಾಗುತ್ತಲೇ ಇರುತ್ತದೆ. ಸ್ವಚ್ಛತೆಯ ಕಾರಣವೊಡ್ಡಿ, ಆಡಳಿತ ಮಂಡಳಿಯ ದುರಾಡಳಿತ-ಅವ್ಯವಹಾರ, ಹಣ ಲೂಟಿಯ ನೆಪವೊಡ್ಡಿ ದೇವಾಲಯಗಳನ್ನು ತನ್ನ ಸುಪರ್ದಿಗೆ ಒಳಪಡಿಸುವ ಸರಕಾರಕ್ಕೆ ತನ್ನ ದುರಾಡಳಿತ ತಾನು ಮಾಡುವ ಕೋಟಿಗಟ್ಟಲೆ ಹಣದ ಲೂಟಿ ಮರೆತು ಹೋಗಿರುತ್ತದೆ! ಉಡುಪಿ ಶ್ರೀ ಕೃಷ್ಣ ಮಠದಲ್ಲಿ 8 ಮಠಗಳಿದ್ದೂ ಎಲ್ಲವೂ ಮಠಾಧೀಶರ ಉಪಸ್ಥಿತಿಯಲ್ಲಿ ಪೂಜೆ -ಪುನಸ್ಕಾರ ಅನುರಣಿಸುತ್ತದೆ . ಮಠದಲ್ಲಿ ಸಂಗ್ರಹವಾಗುವ ದೇಣಿಗೆ ಸಾಕಷ್ಟು ಜನಪಯೋಗಿ ಕಾರ್ಯದಲ್ಲಿ ಉಪಯೋಗಿಸಲ್ಪಡುತ್ತದೆ . ದಿನಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಮಠದಿಂದ ಮಧ್ಯಾಹ್ನ ಊಟ ದೊರಕುತ್ತಿದೆ. ಸರಕಾರದ ವಶವಾದ ಮೇಲೆ ಇವೆಲ್ಲಾ ಸಾಧ್ಯವಿದೆಯೇ? ಧರ್ಮಸ್ಥಳದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ವೇಳೆ ಸರಕಾರ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಲ್ಲಿ ಈ ಎಲ್ಲಾ ಕಾರ್ಯಗಳು ಸ್ಥಗಿತವಾಗುವುದು ಸುಸ್ಪಷ್ಟ. ಶೃಂಗೇರಿಯಂತಹ ದೇವಾಲಯಗಳಿಂದ ವೇದಾಧ್ಯಯನ, ಅನ್ನದಾನ, ವಿದ್ಯಾದಾನಗಳಲ್ಲದೆ ಬಡಜನರಿಗೆ ಮನೆಗಳ ನಿರ್ಮಾಣ, ಉಚಿತ ಸೋಲಾರ್ ದೀಪಗಳ, ಸ್ವಉದ್ಯೋಗಕ್ಕೆ ಬೇಕಾಗುವ ಉಪಕರಣಗಳ ವಿತರಣೆಯಂತಹ ಜನೋಪಯೋಗಿ ಕಾರ್ಯಗಳು ನಡೆಯುತ್ತವೆ. ಅಲ್ಲಿ ಶ್ರೀಗಳಿರದೆ ಸರಕಾರದಿಂದ ನಿಯಮಿಸಲ್ಪಟ್ಟ ಅಧಿಕಾರ ವರ್ಗ ಮಾತ್ರ ಇದ್ದರೆ ಇವುಗಳೆಲ್ಲಾ ಕನಸಿನಲ್ಲೂ ಸಾಧ್ಯವಿಲ್ಲ. ಈ ರೀತಿ ಹಲವು ದೇವಾಲಯಗಳಿಂದ ಜ್ಞಾನ-ಅನ್ನದಾಸೋಹಗಳು, ವೃತ್ತಿ-ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆಗಳು, ಸ್ವಸಹಾಯ ಸಂಘಟನೆಗಳು, ಧಾರ್ಮಿಕ ಜಾಗರಣದ ಸಮಾವೇಶಗಳು, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಪುರಾಣ ಪ್ರವಚನ, ಯಕ್ಷಗಾನದಂತಹ ಭಾರತೀಯ ಕಲೆಗಳಿಗೆ ಪ್ರೋತ್ಸಾಹವೂ ಸಿಗುತ್ತದೆ. ನಡೆಯುತ್ತವೆ. ಈ ದೇವಾಲಯಗಳು ಸರಕಾರದ ವಶವಾದಲ್ಲಿ ಇಂತಹ ಕಾರ್ಯಗಳಿಗೆಲ್ಲಾ ಎಳ್ಳು-ನೀರು ಬಿಟ್ಟಂತೆಯೇ. ಮುಜರಾಯಿ ಇಲಾಖೆಯ ವ್ಯಾಪ್ತಿಯಡಿ ಬರುವ ಶಾಲೆಗಳನ್ನು ನಡೆಸಲು ದೇವಾಲಯಗಳಿಂದ ಬರುವ ಆದಾಯದಲ್ಲಿ ಸಾಧ್ಯವಿಲ್ಲ ಎಂದು ಹೇಳಿ ಶಿಕ್ಷಣ ಇಲಾಖೆಯಡಿ ಸೇರಿಸಿರುವ ಸರಕಾರ ಇನ್ನುಳಿದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತದೆಯೇ?

           ದೇವಾಲಯಕ್ಕೆ ಆಡಳಿತ ಮಂಡಳಿಯನ್ನು ರಚಿಸುವಾಗಲೂ ಮೀಸಲಾತಿಯನ್ನನುಸರಿಸುತ್ತದೆ ಸರಕಾರ.ಪ್ರತಿಯೊಂದು ದೇವಸ್ಥಾನಕ್ಕೆ ಸರ್ಕಾರದ ಆದೇಶದಂತೆ ಮೀಸಲಾತಿಯನ್ನು ಅನುಸರಿಸಿ ಸದಸ್ಯರನ್ನು ಅಯ್ಕೆ ಮಾಡಲಾಗುತ್ತದೆ. ಕರ್ನಾಟಕ ಸರಕಾರವು ರಾಜ್ಯದ ಹಿಂದೂ ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವ ಮುಜರಾಯಿ ಇಲಾಖೆಯಲ್ಲಿ ಹಿಂದೂ ಧರ್ಮೀಯರನ್ನು ಹೊರತುಪಡಿಸಿ ಅನ್ಯ ಮತೀಯ (೪ ಮುಸಲ್ಮಾನರು ಮತ್ತು ೨ ಕ್ರೈಸ್ತರು) ಅಧಿಕಾರಿಗಳನ್ನು ನೇಮಿಸಿದೆ. ಮುಜರಾಯಿ ಇಲಾಖೆಯು ಹಿಂದೂಗಳ ದೇವಸ್ಥಾನಗಳ ವ್ಯವಸ್ಥಾಪನೆ ನೋಡುವ ಇಲಾಖೆಯಾಗಿರುವುದರಿಂದ ಅದರಲ್ಲಿ ಅಹಿಂದೂ ವ್ಯಕ್ತಿಯ ನೇಮಕವು ಕಾನೂನುಬಾಹಿರವಾಗಿದ್ದು ಅದು ನೇಮಕದ ನಿಯಮಗಳಿಗನುಸಾರವಾಗಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಅಧಿನಿಯಮ, ೧೯೯೭ ರ ಅಧ್ಯಾಯ ೨ ರಲ್ಲಿನ ಪ್ರಕರಣ ೭ ರಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು ಅಥವಾ ನೌಕರರು ಹಿಂದೂಗಳೇ ಆಗಿರಬೇಕು ಎಂಬ ಸ್ಪಷ್ಟ ಉಲ್ಲೇಖವಿದೆ. ಅಂದರೆ ನೇಮಕಾತಿಯ ಸಮಯದಲ್ಲಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಸಲ್ಮಾನರ ಮಸೀದಿ, ಮದರಸಾ ಇವುಗಳ ವ್ಯವಸ್ಥಾಪನೆಯನ್ನು ನೋಡುವ 'ವಕ್ಛ್ ಬೋರ್ಡ್' ಇರಲಿ ಅಥವಾ ಹಜ್ ಯಾತ್ರೆಗಾಗಿ ನೇಮಿಸಿದ ಹಜ್ ಸಮಿತಿ ಇರಲಿ, ಎಲ್ಲದರಲ್ಲಿ ಕೇವಲ ಮುಸಲ್ಮಾನರನ್ನೇ ನೇಮಿಸಲಾಗುತ್ತದೆ. ಅನ್ಯ ಮತೀಯರ  ಧಾರ್ಮಿಕ ಸಂಸ್ಥೆಗಳಲ್ಲಿ ಆಯಾ ಮತೀಯರನ್ನು ನೇಮಿಸುತ್ತಿರುವಾಗ ಹಿಂದೂಗಳ ಮುಜರಾಯಿ ಇಲಾಖೆಯಲ್ಲಿ ಮಾತ್ರ ಹಿಂದೂವೇತರರ ನೇಮಕಾತಿ ಮಾಡುವುದ್ಯಾಕೆ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಪ್ರತಿಯೊಂದು ವಿಷಯದಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತದೆ. ಸರಕಾರದ ಈ ಕ್ರಮವನ್ನು ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಿದವರಿಗೆ ಕೋಮುವಾದಿ ಪಟ್ಟ ಶತಃಸಿದ್ಧ. ಮುಜರಾಯಿ ಇಲಾಖೆಯ 1997ರ ಕಾಯ್ದೆ ಅಸಂವಿಧಾನಿಕ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಕರಣದಲ್ಲಿ ತೀರ್ಪು ನೀಡಿದೆ. ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿ ನಡೆ. ಈ ರೀತಿ ನಡೆದುಕೊಂಡರೆ ನಮ್ಮ ಸಂವಿಧಾನದ ವಿಧಿ 14, 25, 26 ಮತ್ತು 27 ಉಲ್ಲಂಘನೆ ಮಾಡಿದಂತಾಗುತ್ತದೆ. ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟಿರುವ ನಮ್ಮ ಸರಕಾರಗಳು ದೇವಸ್ಥಾನಗಳನ್ನು ನಿಯಂತ್ರಿಸಲು ಹೊರಟಿವೆ. ಸರ್ಕಾರ ಮತ್ತು ನಮ್ಮ ರಾಜಕಾರಣಿಗಳಿಗೆ ದೇವಸ್ಥಾನಗಳ ಅಭಿವೃದ್ದಿಗಿಂತ ಆದಾಯವೇ ಮುಖ್ಯವಾಗಿದೆ.

             ಭಕ್ತರು ನಂಬಿಕೆ, ಭಕ್ತಿಯಿಂದ ಅರ್ಪಿಸಿದ ಈ ಹಣವನ್ನು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅಥವಾ ಕನಿಷ್ಟ ಹಿಂದೂ ಸಮಾಜದ ಅವಶ್ಯಕತೆಗಳ ಪೂರೈಕೆಗೆ ಬಳಸಬೇಕಲ್ಲವೆ? ಆದರೆ ಈ ಹಣ ಹಂಚಿಕೆಯಾಗುವುದು ಮದರಸಾ, ಚರ್ಚುಗಳಿಗೆ! ಇವು ಬಳಕೆಯಾಗೋದು ಮತಾಂತರ, ಜಿಹಾದೀ ಭಯೋತ್ಪಾದನೆಗಳಿಗೆ! ಅಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹಣ ನಮ್ಮನ್ನೇ ಕೊಲ್ಲಲು ಬಳಕೆಯಾಗುತ್ತಿದೆ! ಅಷ್ಟಕ್ಕೂ ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೊಳಪಡಿಸುತ್ತಿರುವುದೇಕೆ? ತಾನು ‘ಮತ ನಿರಪೇಕ್ಷ, ಸಮಾಜವಾದಿ’ ಎಂದು ಬೊಂಬಡಾ ಬಜಾಯಿಸುವ ಸರ್ಕಾರಕ್ಕೆ ದೇವಾಲಯದ ಹಣಕ್ಕೆ ಕೈ ಚಾಚುವುದೇಕೆ? ಅದರಲ್ಲೂ ಕೇವಲ ಹಿಂದುಗಳ ಪೂಜಾಸ್ಥಳಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದೇಕೆ? ಮುಸ್ಲಿಂ ಮತ್ತು ಕ್ರೈಸ್ತ ಮತೀಯ ಸಂಸ್ಥೆಗಳ ಕಡೆಗೆ ಸರ್ಕಾರದ ಗಮನವೇ ಹೋಗುವುದಿಲ್ಲವೇಕೆ? ದೇವರ ಪೂಜೆಯನ್ನೆಲ್ಲಾ ಮೌಢ್ಯವೆಂದು ವಿರೋಧಿಸ ಹೊರಟ ಸರಕಾರಕ್ಕೆ ದೇವಸ್ಥಾನಗಳ ಆದಾಯಗಳೇಕೆ ಬೇಕು? ಕುಂಭಮೇಳ ನಡೆಯುವ ಸಂದರ್ಭದಲ್ಲಿ ತೀರ್ಥಕ್ಕಾಗಿ 25-50ರೂ. ಕಸಿದುಕೊಳ್ಳುವ ಸರಕಾರಗಳು ಕೈಲಾಸ-ಮಾನಸಸರಸಿಯ ಯಾತ್ರೆಗೆ ಅತ್ಯಧಿಕ ಮೊತ್ತದ ಹಣವನ್ನು ತೆರಿಗೆಯ ರೂಪದಲ್ಲಿ ಪಡೆಯುತ್ತವೆ. ಆದರೆ ನಮ್ಮದೇ ಹಣದಲ್ಲಿ ಬಾಂಧವರು ಖರ್ಚಿಲ್ಲದೆ ಹಜ್ ಯಾತ್ರೆಗೈಯ್ಯುತ್ತಾರೆ!
ಕೆಲವು ದೇವಾಲಯಗಳಲ್ಲಿ ಗ್ರಾಮಸ್ಥರ ಆಗ್ರಹದಿಂದಾಗಿಯೋ, ಅಥವಾ ಅರ್ಚಕ-ಪರಿಚಾರಕ ವರ್ಗದವರ ಜಾಣ್ಮೆಯಿಂದಲೋ ತಕ್ಕಮಟ್ಟಿಗಿನ ಸೇವಾ ಕೈಂಕರ್ಯಗಳು ನಡೆಯುತ್ತವೆ. ಆದರೆ ಹಲವಷ್ಟು ದೇವಾಲಯಗಳು ಪಾಳು ಬೀಳುತ್ತಲಿವೆ. ಪಾಳು ಬೀಳುವುದೆಂದರೆ ಕೇವಲ ಧೂಳು ಮೆತ್ತಿ, ಕಟ್ಟಡ ಕುಸಿದು ಹೋಗಿರುವುದು ಮಾತ್ರವಲ್ಲ, ಅಲ್ಲಿನ ಆಡಳಿತ ನಿರ್ವಹಣೆ, ಧಾರ್ಮಿಕ ಕಾರ್ಯಕ್ರಮಗಳಿಗೂ ತತ್ವಾರವುಂಟಾಗಿದೆ. ಈಗ ನ್ಯಾಯಾಲಯದ ಆದೇಶದಿಂದಾಗಿ ಕೆಲವಷ್ಟು ದೇವಾಲಯಗಳಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕ ಹಿಂದು ಧರ್ಮ ಹಾಗೂ ಧಾರ್ಮಿಕ ದತ್ತಿ ಮಸೂದೆ 1997ರಲ್ಲೇ ಜಾರಿಗೊಳಿಸಲಾಗಿತ್ತಾದರೂ, ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿದ್ದು 2001ರ ಅಕ್ಟೋಬರ್ನಲ್ಲಿ. ನಂತರ 2003ರ ಮೇ ತಿಂಗಳಲ್ಲಿ ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ 2011ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಗುಲಗಳನ್ನು ಸರ್ಕಾರದ ಹತೋಟಿಗೆ ತರಲು ಅವಕಾಶ ಕಲ್ಪಿಸಲಾಗಿತ್ತು. 2012ರಲ್ಲಿ ಮತ್ತೊಮ್ಮೆ ಕಾಯ್ದೆಗೆ ತಿದ್ದುಪಡಿ ತಂದು ವಾರ್ಷಿಕ 50 ಲಕ್ಷ ರೂ.ಗೂ ಹೆಚ್ಚಿನ ಆದಾಯ ಗಳಿಸುವ ದೇಗುಲಗಳ ವ್ಯವಸ್ಥಾಪಕ ಮಂಡಳಿ ರಚನೆ, ಆಡಳಿತಾಧಿಕಾರಿ ನೇಮಕ ಮತ್ತಿತರ ನಿರ್ಧಾರ ಕೈಗೊಳ್ಳಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಧಾರ್ಮಿಕ ಪರಿಷತ್ಗಳನ್ನು ರಚಿಸಿತ್ತು. 2012ರ ತಿದ್ದುಪಡಿ ಕಾಯ್ದೆಯನ್ವಯ ಮುಜ ರಾಯಿ ವ್ಯಾಪ್ತಿಗೊಳಪಟ್ಟ ಎಲ್ಲ ದೇವಸ್ಥಾನಗಳು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರದ ಅಂಕುಶದಿಂದ ಮುಕ್ತಗೊಳ್ಳಲಿವೆ.

           ಮುಜರಾಯಿ ಇಲಾಖೆಯಲ್ಲಿ ಹಿಂದುಗಳು ಮಾತ್ರವಿರಬೇಕು. ದೇವಾಲಯ ಹಾಗೂ ಹಿಂದು ಭಕ್ತರಿಂದ ಸಂಗ್ರಹ ವಾಗುವ ಆದಾಯ ಮತ್ಯಾವುದೇ ಮತದ ಅಭಿವೃದ್ಧಿಗೆ ಬಳಕೆ ಮಾಡಬಾರದು. ಅರ್ಚಕರು, ಪರಿಚಾರಕರಿಗೆ ಜೀವನ ಸಾಗಿಸಲು ನೆರವಾಗುವಷ್ಟು ಗೌರವಧನವನ್ನಾದರೂ ಕೊಡಬೇಕು. ದೇವಾಲಯಗಳಿಂದ ಬರುವ ಆದಾಯದಿಂದ ಸಿ ದರ್ಜೆ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರಿಗೆ ವೇತನ, ದೇವಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಮಾಡಬೇಕು. ದೇವಾಲಯಗಳಿಂದ ಬರುವ ಆದಾಯವನ್ನು ಆಯಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸಬೇಕು. ಇದರಿಂದ ಗ್ರಾಮದ ಹಣ ಅಲ್ಲಿಗೇ ಉಪಯೋಗವಾಗುವುದರ ಜೊತೆಗೆ ಭಯೋತ್ಪಾದಕರ ಜೋಳಿಗೆ ಸೇರುವುದು ತಪ್ಪುತ್ತದೆ. ದೇವಾಲಯಗಳು ಅರ್ಚಕರು-ಭಕ್ತರಿಂದಾಗಿ ಉಳಿದಿವೆಯೇ ಹೊರತು, ಆಡಳಿತ ಮಂಡಳಿಗಳಿಂದಾಗಲಿ, ವ್ಯವಸ್ಥಾಪನಾ ಸಮಿತಿಗಳಿಂದಾಗಲಿ ಅಲ್ಲ.

ಗುರುವಾರ, ನವೆಂಬರ್ 5, 2015

ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

              ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಆರೋಪಿಸುತ್ತಾ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ಚಳುವಳಿಯೊಂದು ಆರಂಭವಾಗಿದೆ. ಎಲ್ಲಿ-ಏನು ಅಂತ ಕೇಳಿದರೆ ಅವರ ಬೆರಳು ಹೊರಳುವುದು ದಾದ್ರಿ, ಕಲ್ಬುರ್ಗಿ, ದಾಬೋಲ್ಕರ್ ಹತ್ಯೆಯತ್ತ! ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಸಾಲಿಗೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವವರ ಸಾಲಿಗೆ ಕೆಲ ಕಲಾವಿದರು, ವಿಜ್ಞಾನಿಗಳು, ಉದ್ದಿಮೆದಾರರು ಸೇರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಇಬ್ಬಂದಿತನವನ್ನು ಸರಿಯಾಗಿ ಝಾಡಿಸಲಾಗುತ್ತಿದೆ. ಜನರ ಮನಸ್ಸಲ್ಲಿ, ಸತ್ವ ಹಾಗೂ ಸ್ವತ್ವವನ್ನು ಕಳೆದುಕೊಂಡು ಸ್ವಹಿತಕ್ಕಾಗಿ ಎಂಜಲಿಗೆ ಕೈಚಾಚುವವನೇ ಸಾಹಿತಿ ಎಂಬ ಭಾವನೆ ಬೇರೂರುತ್ತಿದೆ.


                   ಉದ್ರಿಕ್ತಗೊಂಡ ಹಳ್ಳಿಗರು ಅಖ್ಲಾಖನನ್ನು ಸದೆಬಡಿದದ್ದೇ ತಡ ಮುಖ್ಯಮಂತ್ರಿ ಸಿದ್ಧರಾಮಯ್ಯರಂತೆ ನಿದ್ದೆ ಮಾಡುತ್ತಿದ್ದ ಮಾಧ್ಯಮಗಳು ಎದ್ದು ಕುಳಿತವು. ಘಟನೆಗೆ ಕೋಮುಬಣ್ಣ ಹಚ್ಚಿ, ಸಂಘಪರಿವಾರದ ಮೇಲೆ ಆರೋಪ ಹೊರಿಸಿದವು. ಮೋದಿ ಆಡಳಿತದಲ್ಲಿ ಕ್ರೌರ್ಯವೇ ತಾಂಡವವಾಡುತ್ತಿದೆಯೆಂದು ಬೊಬ್ಬಿರಿಯಲಾರಂಭಿಸಿದವು. ಬಿಹಾರದಲ್ಲಿ ಚುನಾವಣೆ ಕಾವೇರಿದ್ದ ಸಮಯ. ಜಲ-ತೈಲದಂತಿದ್ದು ಅಧಿಕಾರಕ್ಕೋಸ್ಕರ ಬೆರೆತ ಭಾಜಪಾ ವಿರೋಧಿಗಳಿಗೆ ಅಮೃತ ಸಿಕ್ಕಂತಾಯಿತು. ಇಷ್ಟರವರೆಗೆ ತಾವು ಬರೆದ ಪುಸ್ತಕಗಳನ್ನೇ ಹೊದ್ದು ಮಲಗಿದ್ದ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳೆಲ್ಲಾ ನಿದ್ದೆ ಬಿಟ್ಟು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು. ದಾದ್ರಿಯಲ್ಲಿ ಏನು ನಡೆಯಿತು ಎನ್ನುವುದರ ಸ್ಪಷ್ಟ ಚಿತ್ರಣವನ್ನು ಯಾವ ಮಾಧ್ಯಮಗಳೂ ಕೊಡಲಿಲ್ಲ. ಅರಿಯುವ ಪ್ರಯತ್ನವನ್ನೂ ಮಾಡಲಿಲ್ಲ.  ದಾದ್ರಿ ಇರುವುದು ಉತ್ತರಪ್ರದೇಶದಲ್ಲಿ, ಅಲ್ಲಿನ ಸರಕಾರ ತಮ್ಮದೇ ಮಾನಸಿಕತೆಯ ಸಮಾಜವಾದಿ ಪಕ್ಷ ಎನ್ನುವುದನ್ನು ಮರೆತುಬಿಟ್ಟರು. ಅಲ್ಲದೆ ದಾದ್ರಿಯಲ್ಲಿ ಸತ್ತವನೊಬ್ಬ ಮುಸ್ಲಿಮ್ ಎನ್ನುವ ಕಾರಣಕ್ಕೆ ಆ ಘಟನೆಗೆ ಅಷ್ಟು ಪ್ರಚಾರ ಸಿಕ್ಕಿತೇ ವಿನಾ ಸತ್ತವ ಹಿಂದೂವಾಗಿದ್ದರೆ ಈ ಪ್ರಶಸ್ತಿ ಹಿಂದಿರುಗಿಸುವವರೆಲ್ಲಾ ತಿರುಗಿ ನೋಡುತ್ತಿರಲಿಲ್ಲ.

               ಅಖ್ಲಾಖ್ ಹಳ್ಳಿಯಲ್ಲಿ ಕೋಮುದ್ವೇಷದ, ಭಾರತ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದ. ಅದರಿಂದಾಗಿ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಆತನ ಮೇಲೆ ಸಿಟ್ಟಿತ್ತು. ಆತನನ್ನು ವಧಿಸುವಾಗ ಮುಸ್ಲಿಮರೂ ಜೊತೆಯಾಗಿದ್ದರು ಎಂಬ ಸಂಗತಿಗಳೆಲ್ಲ ಗೌಣವಾಗಿ ಹೋದವು. ದಾದ್ರಿ ಘಟನೆಯನ್ನು ಹಿಡಿದು ಜಗ್ಗಿ ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿರುವವರು ಅಖ್ಲಾಖ್ ಪಾಕಿಸ್ತಾನಕ್ಕೆ ಹೋದದ್ದೇಕೆಂದು ಕೇಳಲಿಲ್ಲ. ಆತನಿಗೆ ಪಾಕಿಸ್ತಾನಕ್ಕೆ ತೆರಳಲು ಬೇಕಾದ ಪೂರಕ ದಾಖಲೆಗಳು ಹೇಗೆ ಸಿಕ್ಕಿತೆಂದು ಪ್ರಶ್ನಿಸಲೇ ಇಲ್ಲ. ಪಾಕಿಸ್ತಾನಕ್ಕೆ ತೆರಳಿ ಸಂಬಂಧಿಕರ ಮನೆಯಲ್ಲಿ ತಿಂಗಳುಗಟ್ಟಲೇ ಉಳಿಯುವ ದರ್ದು ಏನಿತ್ತು ಎಂದು ಕೇಳಲೇ ಇಲ್ಲ. ಪಾಕಿಸ್ತಾನದಲ್ಲಿ ತಿಂಗಳುಗಟ್ಟಲೆ ಝಂಡಾ ಹೂಡಿದವ ಐ.ಎಸ್.ಐ ಸಂಪರ್ಕಕ್ಕೆ ಒಳಗಾಗಲಿಲ್ಲ ಎಂದು ಹೇಳುವುದು ಹೇಗೆ? ಪಾಕಿಸ್ತಾನದಿಂದ ವಾಪಸಾದ ಕೂಡಲೇ ಆತನಿಗೆ ಕಾರು ಹೇಗೆ ಸಿಕ್ಕಿತೆಂದು ಯಾರೂ ಕೇಳಲಿಲ್ಲ! ಒಂದು ವೇಳೆ ಗೋಮಾಂಸ ಸಂಗ್ರಹಕ್ಕಾಗಿಯೇ ಅಖ್ಲಾಖನನ್ನು ಕೊಲೆ ಮಾಡಲಾಗಿದ್ದರೆ ಉತ್ತರಪ್ರದೇಶ ಸರಕಾರ ಕೇಂದ್ರಕ್ಕೆ ಕಳುಹಿಸಿದ ವರದಿಯಲ್ಲಿ ಗೋಮಾಂಸದ ಉಲ್ಲೇಖವೇ ಇರಲಿಲ್ಲವೇಕೆ? ಮೃತ ಅಖ್ಲಾಖನ ಪರಿವಾರಕ್ಕೆ ನಲವತ್ತೈದು ಲಕ್ಷ ರೂಪಾಯಿಗಳನ್ನೂ ಎರಡು ಬೆಡ್ ರೂಂಗಳುಳ್ಳ ನಾಲ್ಕು ಪ್ಲ್ಯಾಟುಗಳನ್ನು ಪರಿಹಾರಾರ್ಥವಾಗಿ ಕೊಟ್ಟ ಉತ್ತರಪ್ರದೇಶ ಸರಕಾರ ಹಿಂದೂಗಳನ್ನೇ ಅವಮಾನಿಸಿ ತನ್ನ ಮತಬ್ಯಾಂಕನ್ನು ಭದ್ರಪಡಿಸಿಕೊಂಡಿತು. ದಾದ್ರಿಯಲ್ಲಿ ನಡೆದ ಘಟನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಅಣಿಯಾಗಿವೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆ ಹಾಗೂ ಅದನ್ನು ಪರಿಗಣಿಸಿ ದಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ ಕೇಂದ್ರ ಸರಕಾರದ ಕ್ರಮಗಳು ಮಾಧ್ಯಮಗಳಿಗೆ ಮುಖ್ಯ ವಿಷಯವಾಗಲೇ ಇಲ್ಲ. ದೇಶದ ಭದ್ರತೆಗಿಂತಲೂ ಪಾಕಿಸ್ತಾನ ಪ್ರಿಯನೊಬ್ಬನ ವಧೆ ಇವರಿಗೆ ಕಣ್ಣೀರು ಹಾಕುವ ವಿಷಯವಾಯಿತು!

               ಅಮರನಾಥ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಎದ್ದ ಅಸಹಿಷ್ಣುತೆಯನ್ನು ಯಾವ ಸಾಹಿತಿಯೂ ಖಂಡಿಸಿ ಪ್ರಶಸ್ತಿ ವಾಪಸ್ ಮಾಡಲಿಲ್ಲ. ತಾಯ್ನೆಲದಿಂದಲೇ ಕಾಶ್ಮೀರಿ ಪಂಡಿತರನ್ನು ಓಡಿಸಿದ ಅಸಹಿಷ್ಣುತೆ ಅವರಿಗೆ ಕಾಣಲಿಲ್ಲ. ಕೇರಳದಲ್ಲಿ ರಾ.ಸ್ವ.ಸಂ.ದ ಬೆಳವಣಿಗೆಯನ್ನು ಸಹಿಸದೆ ಮಾಡಿದ ಕೊಲೆಗಳು ಸುದ್ಧಿಯೇ ಆಗಲಿಲ್ಲ. ಭಾರತಾದ್ಯಂತ ದೇಶ-ಧರ್ಮ-ಗೋ ರಕ್ಷಣೆಗಾಗಿ ಹೋರಾಡಿದ ಏಕಮಾತ್ರ ತಪ್ಪಿನಿಂದಾದ ಕೊಲೆಗಳೆಲ್ಲಾ ಮಾಧ್ಯಮಗಳಲ್ಲಿ ಮಿಣುಕು ಹುಳುಗಳಂತೆ ಮರೆಯಾದವು. ಇವೇ ಮಾಧ್ಯಮಗಳಾಗಲೀ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿ-ಕಲಾವಿದರಾಗಲೀ ಬೆಳ್ಳಂಬೆಳಗ್ಗೆ ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಗೋರಕ್ಷಣೆಯ ಒಂದೇ ಒಂದು ತಪ್ಪಿಗೆ ಮತಾಂಧರಿಂದ ಕೊಲೆಯಾಗಿ ಹೋದಾಗ ಎಲ್ಲಿ ಸತ್ತು ಹೋಗಿದ್ದರು? ಭಾರತದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಿದೆ. ಆದರೂ ಗೋಹತ್ಯೆ ನಡೆಯುತ್ತಿದೆಯೆಂದಾದರೆ ಅದು ನಮ್ಮ ಕಾನೂನಿನ ಅನುಷ್ಠಾನದ ವೈಫಲ್ಯ ಎಂದು ಯಾವ ಮಾಧ್ಯಮವೂ ಎತ್ತಿ ತೋರಿಸಲಿಲ್ಲ! 2013ರಲ್ಲಿ 823 ಕೋಮು ಸಂಘರ್ಷಗಳು ನಡೆದಿದ್ದರೆ, 2014ರಲ್ಲಿ ಅದು 644ಕ್ಕಿಳಿದಿದೆ. ಅಲ್ಲದೆ 2009ರಿಂದ 2013ಕ್ಕೆ ಹಿಂದುಳಿದ ಜಾತಿಯವರ ಮೇಲಿನ ಹಲ್ಲೆ 33,412ರಿಂದ 39,408ಕ್ಕೆ, ಹಿಂದುಳಿದ ವರ್ಗದವರ ಮೇಲಿನ ಹಲ್ಲೆ 5,250ರಿಂದ 6,793ಕ್ಕೆ ಏರಿದಾಗ ಈ ಪ್ರಶಸ್ತಿ ವಾಪಸಿಗರು ಏನು ಮಸಿ ತಿನ್ನುತ್ತಿದ್ದರೆ? ಆಗ ನೆನಪಾಗದ ಅಸಹಿಷ್ಣುತೆ ಈಗ ಹೇಗೆ ನೆನಪಾಯಿತು? ನಿಜವಾಗಿ ಅಸಹಿಷ್ಣುತೆ ಇರುವುದು ಈ ದೇಶದ ಸಾಮಾನ್ಯ ಜನರಲ್ಲಲ್ಲ, ಈ ಪ್ರಶಸ್ತಿ ವಾಪಸಿಗರಲ್ಲಿಯೇ! ಅದೂ ಪ್ರಧಾನಿ ನರೇಂದ್ರ ಮೋದಿಯ ಮೇಲೆ!

                ಅಸಹಿಷ್ಣುತೆ ಹೆಚ್ಚುತ್ತಿದೆ ಅನ್ನುವವರ ಸಾಲಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿಗಳು. ಭಾರತ ದ್ವೇಷವನ್ನೇ ಮೈಗೂಡಿಸಿಕೊಂಡು, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಾ, ದೇಶದೊಳಗೆ ಸುಳ್ಳು ಸುದ್ದಿಗಳಿಂದ ಕ್ಷೋಭೆ ಸೃಷ್ಟಿಸುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕುಬ್ಜವಾಗಿಸಲು ಸದಾ ಪ್ರಯತ್ನ ಪಡುತ್ತಿದ್ದ ಎನ್.ಜಿ.ಓಗಳಿಗೆ ಧನ ಸಹಾಯ ಮಾಡುತ್ತಿದ್ದ ಫೋರ್ಡ್ ಫೌಂಡೇಶನ್ನಿನ ಆಡಳಿತ ಸಮಿತಿಯ ಭಾಗವಾಗಿರುವ ನಾರಾಯಣಮೂರ್ತಿಗಳಿಗೆ ಮೋದಿ ಆಡಳಿತದಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾದಂತೆ ಕಂಡುಬಂದರೆ ಅದರಲ್ಲಿ ಅಚ್ಚರಿಯೇನಿಲ್ಲ! ಇದೇ ನಾರಾಯಣ ಮೂರ್ತಿಗಳು ಶೆಲ್ಡನ್ ಪೊಲ್ಲಾಕ್ ಎಂಬ ಭಾರತ ದ್ವೇಷಿಗೆ, ಹಿಂದೂ ದ್ವೇಷಿಗೆ ಭಾರತದ ಪುರಾತನ ಶಾಸ್ತ್ರೀಯ ಗ್ರಂಥಗಳ ತರ್ಜುಮೆಗಾಗಿ ಇಪ್ಪತ್ತು ಮಿಲಿಯ ಡಾಲರ್ ಹಣವನ್ನು ಕೊಟ್ಟ ದೇಶದ್ರೋಹಿ ಕೃತ್ಯಕ್ಕಿಂತಲೂ ಮೋದಿ ಆಡಳಿತವೇ ಕೆಟ್ಟದ್ದು ಎಂಬ ಮಹಾನ್ ಅರಿವು ಉಂಟಾದುದು ಅವರ ತಾಂತ್ರಿಕ ಜ್ಞಾನದ ಅಪೂರ್ವ ನೈಪುಣ್ಯತೆಗೆ ಸಾಕ್ಷಿ! ತಮ್ಮ ಪುತ್ರರತ್ನ ರೋಹನ್ ಅನ್ನು ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯಿಂದ ಕೊನೆಕ್ಷಣದಲ್ಲಿ ತೆಗೆದುಹಾಕಿ ಆ ಸ್ಥಾನಕ್ಕೆ ಮನೀಷ್ ಸಬರವಾಲರನ್ನು ನೇಮಿಸಿದ ಪ್ರಧಾನಮಂತ್ರಿ ಕಛೇರಿಯ ಕ್ರಮ ಮೂರ್ತಿಯವರ "ಅಸಹಿಷ್ಣುತೆ"ಗೆ ಕಾರಣ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ!

             "ಎಮಿನೆಂಟ್ ಹಿಸ್ಟೋರಿಯನ್ಸ್" ಎಂಬಂತಹ ಪುಸ್ತಕ ಬರೆದು ಎಡಬಿಡಂಗಿ, ದೇಶದ್ರೋಹಿ ಇತಿಹಾಸಕಾರರ ಬಣ್ಣ ಬಯಲು ಮಾಡಿದ ಅರುಣ್ ಶೌರಿಯಂತಹ ಚಿಂತಕನೊಬ್ಬ ಹಠಾತ್ತನೆ ಬದಲಾಗಿ ಮೋದಿ ವಿರುದ್ಧ, ಗೋಸುಂಬೆ ಸಾಹಿತಿಗಳ ಪರವಾಗಿ ಅರಚಾಡುತ್ತಿರುವುದೇ ಅನೇಕರನ್ನು ಅಚ್ಚರಿಗೆ ತಳ್ಳಿದುದು. ಶೌರಿಗೆ ಮೋದಿ ಮೇಲೆ ಸಿಟ್ಟಿದ್ದಿದ್ದರೆ ಅದು ಅವರ ವೈಯುಕ್ತಿಕ ವಿಷಯ. ಆದರೆ ಅದಕ್ಕಾಗಿ ಈ ದೇಶವಿರೋಧಿಗಳನ್ನು ಬೆಂಬಲಿಸುವುದು ಶೌರಿಯಂತಹವರಿಗೆ ಎಷ್ಟು ಸರಿ? ಶೌರಿಯಂತೆ ಗೌರವಯುತ ಸ್ಥಾನದಲ್ಲಿರುವವರು ನೆನಪಿಡಬೇಕಾದ ಸತ್ಯವೊಂದಿದೆ. ಗೌರವ ಇರುವುದು ತತ್ವಕ್ಕೇ ಹೊರತು ವ್ಯಕ್ತಿಗಲ್ಲ !!!

                ಪ್ರತ್ಯುತ್ತರ ನೀಡಲು ಅನುಮತಿಯಿಲ್ಲದೆ ಜವಾನರು ಸಾಯುತ್ತಿದ್ದಾಗ ಯಾರೂ ಪ್ರಶಸ್ತಿ ವಾಪಸ್ ಮಾಡಲಿಲ್ಲ. ದೇಶದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಹಗರಣಗಳು ನಡೆದಾಗ ಇವರಿಗೂ ಬಹುಷಃ ಪಾಲು ಸಿಗುತ್ತಿತ್ತು. ಲವ್ ಜಿಹಾದ್, ರೇಪ್ ಜಿಹಾದ್, ಲ್ಯಾಂಡ್ ಜಿಹಾದ್ ವಿರೋಧಿಸಿ ಕನಿಷ್ಟ ಹೇಳಿಕೆಯನ್ನೂ ನೀಡಲಿಲ್ಲ. ಅವ್ಯಾಹತ ಮತಾಂತರವನ್ನು ತಡೆಯಲು ಯಾರೂ ಪ್ರತಿಭಟಿಸಲಿಲ್ಲ. ಗಡಿಗಳಲ್ಲಿ ನುಗ್ಗಿಬಂದು ಇಲ್ಲೇ ನೆಲೆಸಿ ಇಲ್ಲಿನ ಹಿಂದೂಗಳನ್ನು ಕಗ್ಗೊಲೆ ನಡೆಸಿದಾಗ ಮಾನವ ಹಕ್ಕುಗಳೆಲ್ಲಾ ನೆನಪಾಗಲೇ ಇಲ್ಲ. ಈಗ ಭಾರತಕ್ಕೆ ಭಾರತವೇ ಒಂದಾಗಿ ಚಾಯ್ ವಾಲಾನೊಬ್ಬನನ್ನು ಪ್ರಧಾನಿಯಾಗಿ ಆರಿಸಿದಾಗ, ಕಳೆದ ಒಂದೂವರೆ ವರ್ಷದಲ್ಲಿ ಒಂದೇ ಒಂದು ಹಗರಣವೂ ಕಾಣದಿದ್ದಾಗ, ತಮ್ಮ ತಮ್ಮ ಗಂಜಿಕೇಂದ್ರಗಳಿಗೆ ಧಕ್ಕೆ ಉಂಟಾದಾಗ, ಸೈನಿಕರಿಗೆ ಆಕ್ರಮಣಕ್ಕೆ ಪ್ರತ್ಯಾಕ್ರಮಣ ನಡೆಸಲು ಅನುಮತಿ ಸಿಕ್ಕಿ ಸೈನ್ಯದಲ್ಲೊಂದು ಹೊಸ ಕಳೆ ಬಂದಿರುವಾಗ, ದೇಶ ಎಲ್ಲರಿಗಿಂತಲೂ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವಾಗ, ಪ್ರಧಾನಿ ವಿಶ್ವದಲ್ಲೇ ಪ್ರಭಾವಿ ವ್ಯಕ್ತಿಯಾಗಿ ದೇಶ ಮತ್ತೊಮ್ಮೆ ವಿಶ್ವಗುರುವಾಗಲು ಸನಿಹವಾಗಿರುವಾಗ ಈ ಭಾರತ ದ್ವೇಷಿಗಳು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು.

             ಬುದ್ಧಿಜೀವಿಗಳ ಅಸಹಿಷ್ಣುತೆಗೆ ಕಾರಣ ಇಲ್ಲದಿಲ್ಲ. ಕಳೆದ ಆರು ದಶಕಗಳಲ್ಲಿ ಬೇಕಾದ ಸ್ಥಾನಮಾನವನ್ನುಂಡು ಕೊಬ್ಬಿರುವ ಅವರನ್ನು ಹಠಾತ್ತನೆ ಇಳಿಸಿಬಿಟ್ಟರೆ ಮತ್ತೇನಾದೀತು? ಐ.ಸಿ.ಎಚ್.ಆರ್.ನಿಂದ ಇತಿಹಾಸವನ್ನು ತಿರುಚಿದ ಹೆಗ್ಗಣಗಳನ್ನು ಮನೆಗೆ ಕಳುಹಿಸಿದಾಗಲೇ ಅವರ ಪಿತ್ತ ನೆತ್ತಿಗೇರಿತ್ತು. ತಮ್ಮ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದ್ದ ಎನ್ಜಿಓಗಳನ್ನು ನಿಷೇಧಿಸಿದಾಗ ಆಕಾಶವೇ ಕುಸಿದುಬಿದ್ದಂತಾಗಿತ್ತು. ಮೋದಿಯ ನಾಯಕತ್ವದಲ್ಲಿ ಭಾರತ ಬಲು ವೇಗವಾಗಿ ಅಭಿವೃದ್ಧಿಗೊಳ್ಳುತ್ತಾ ದೇಶದ ಕೀರ್ತಿ ಗಗನಕ್ಕೇರುತ್ತಿರುವಾಗ ತಮ್ಮ ಆಶ್ರಯದಾತರಿಗೇ ಆಶ್ರಯತಪ್ಪುವ ಸೂಚನೆ ಕಂಡೊಡನೆ ಅವರು ಧರಾಶಾಯಿಗಳಾಗಿದ್ದರು. ಹಾಗಾಗಿಯೇ ಈ ಕೌರವರೆಲ್ಲಾ ಒಟ್ಟು ಸೇರಿ ದಾದ್ರಿ ಪ್ರಕರಣವನ್ನು ಸೃಷ್ಟಿಸಿ ವಿಶ್ವ ಮಟ್ಟದಲ್ಲಿ "ಭಾರತ ಅಲ್ಪಸಂಖ್ಯಾತರನ್ನು ಸಹಿಸದ ದೇಶವೆಂದು" ಬಿಂಬಿಸಿ ಇಲ್ಲಿ ಯಾವುದೇ ಹೂಡಿಕೆ ಆಗದಂತೆ ತಡೆದು ಇದೇ ವಿಷಯವನ್ನು ಹಿಡಿದು ಚಳಿಗಾಲದ ಅಧಿವೇಶನವನ್ನು ಹಾಳುಗೆಡವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಯೋಜಿಸಿದರು. ಇದಕ್ಕಾಗಿ ಹಲವು ದೇಶದ್ರೋಹಿ ಎನ್ಜಿಓಗಳು, ಭಾರತ ವಿರೋಧಿ ಶಕ್ತಿಗಳು ಹಣಕಾಸಿನ ನೆರವನ್ನು ನೀಡಿವೆ. ಹಾಗಾಗಿ ತನ್ನ ಆಡಳಿತವನ್ನು ಸುಗಮವಾಗಿ ನೆರವೇರಿಸಬೇಕಾದರೆ ಇಂತಹ ವಿದ್ರೋಹಿ ಶಕ್ತಿಗಳ ಸೊಂಟ ಮುರಿಯುವುದು ಮೋದಿ ಸರಕಾರದ ತುರ್ತು ಅಗತ್ಯವಾಗಿದೆ. ಹಾಂ… ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

             ಶತಮಾನದ ಹಿಂದೆ ಜಗತ್ತಿನ ಜೀವ ಹಿಂಡಿದ "ಖಿಲಾಪತ್" ಮತ್ತೆ ಮುನ್ನೆಲೆಗೆ ಬಂದಿದೆ. ಮುಸ್ಲಿಮ್ ಜಗತ್ತಿನ ತಲೆಗೆ ಅಡರಿದ ಮತಾಂಧತೆಯ ಮರುಳು ಜಗತ್ತನ್ನೇ ಆಪೋಶನ ತೆಗೆದುಕೊಳ್ಳುವುದು ಹೊಸದಲ್ಲವಾದರೂ ಈ "ಐಸಿಸ್" ಎಂಬ ಜಿಹಾದೀ ಗುಂಪು ವಿಶ್ವವನ್ನು ವೇಗವಾಗಿ ಮುಸ್ಲಿಂಮಯವನ್ನಾಗಿಸುತ್ತಾ, ಒಪ್ಪದವರನ್ನು ತರಿಯುತ್ತಾ, ಜನಸಮೂಹಗಳನ್ನೇ ತನ್ನ ಸಂಘಟನೆಗೆ ಸೇರಿಸಿಕೊಳ್ಳುತ್ತಾ ಸಾಗಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ತಮ್ಮ ಪಂಥಕ್ಕೆ ಸೇರಲೊಪ್ಪದವರನ್ನು ಅಮಾನುಷವಾಗಿ ಚಿತ್ರಹಿಂಸೆ ಕೊಟ್ಟು, ಹಸುಳೆ-ಮಹಿಳೆ ಎನ್ನದೆ ಎಲ್ಲರನ್ನೂ ಬಗೆಬಗೆಯ ರೀತಿಯಲ್ಲಿ ಕೊಲ್ಲುತ್ತಾ, ಕೊಂದ ರೀತಿಯನ್ನು ಚಿತ್ರೀಕರಣ ಮಾಡಿ ಅಂತರ್ಜಾಲಕ್ಕೇರಿಸಿ ವಿಕೃತ ಆನಂದ ಪಡುತ್ತಾ ಮನುಷ್ಯ-ಪ್ರಾಣಿ ಎನ್ನದೆ ಎಲ್ಲರ ಮೇಲೂ ಅತ್ಯಾಚಾರವೆಸಗಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾ ಭೀಬತ್ಸವಾಗಿ ವರ್ತಿಸುತ್ತಿರುವ ಈ ಮತಾಂಧರ ಉನ್ಮಾದಕ್ಕೆ ದೇಶಗಳೆಲ್ಲಾ ಬೆದರಿ ಹೋಗಿವೆ.

               ಒಸಾಮಾ ಬಿನ್ ಲಾಡೆನ್ನನ ಅವಸಾನದ ತರುವಾಯ ಅವನ ಬಲಗೈ ಬಂಟರಾಗಿದ್ದ ಅಬೂಬಕರ್ ಅಲ್ ಬಾಗ್ದಾದಿ ಹಾಗೂ ಆಲ್ ಜವಾಹಿರಿ ಬದ್ಧ ವಿರೋಧಿಗಳಾಗಿಬಿಟ್ಟರು. ಇದರಿಂದಾಗಿ ಅಲ್ಕೈದಾದ ಅಳಿದುಳಿದ ಸಾಮರ್ಥ್ಯವೂ ಕುಗ್ಗಿಹೋಯಿತು. ಈ ಸಂಘರ್ಷ ಬಾಗ್ದಾದಿ ಆಲ್ ಕೈದಾದಿಂದ ದೂರನಾಗಿ ಪ್ರತ್ಯೇಕ ಸಂಘಟನೆ ಹುಟ್ಟುಹಾಕುವಲ್ಲಿವರೆಗೆ ಮುಟ್ಟಿತು. ಹಾಗೆ ರೂಪುಗೊಂಡ ಸಂಘಟನೆಯೇ ಐಸಿಸ್! ಬಾಗ್ದಾದಿ ನೇತೃತ್ವದಲ್ಲಿ ಐಸಿಸ್ ಅದ್ಭುತವಾಗಿ, ವೃತ್ತಿಪರವಾಗಿ ಹೋರಾಡುತ್ತಾ ಇರಾಕಿನ ಹಲವು ಪ್ರದೇಶಗಳು, ಸಿರಿಯದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿತು. ಪರಿಣಾಮವಾಗಿ ಭೂಪ್ರದೇಶಗಳ ಜೊತೆ ಅಪಾರಪ್ರಮಾಣದ ತೈಲ ಸಂಪತ್ತು, ಹಣ, ಶಸ್ತ್ರಾಸ್ತ್ರಗಳು ಐಸಿಸ್ ಕೈಸೇರಿದವು. ಐಸಿಸ್ನ ದಾಳಿ ಮುಂದುವರೆಯುತ್ತಲೇ ಇದ್ದು, ಉತ್ತರ ಮತ್ತು ಪೂರ್ವ ಇರಾಕಿನ ಪಟ್ಟಣಗಳು ಹಾಗೂ ತೈಲಬಾವಿಗಳು ಅದರ ವಶವಾಗುತ್ತಲೇ ಇವೆ. ಕುರ್ದಿಶ್ ಪ್ರದೇಶಕ್ಕೆ ಅದರ ಬೆದರಿಕೆ ಎದುರಾಗಿದೆ. ಜಗತ್ತಿನ ಇತರ ಜಿಹಾದಿ ಗುಂಪುಗಳು ಐಸಿಸ್ನಿಂದ ಉತ್ತೇಜಿತರಾಗಿ ಬಗ್ದಾದಿಗೆ ಉಘೇ ಎನ್ನುತ್ತಾ ತಮ್ಮ "ನಿಷ್ಠೆ" ಪ್ರಕಟಿಸಿವೆ. ಈ ಎಲ್ಲಾ ಯಶಸ್ಸಿನಿಂದ ಉತ್ಸಾಹಗೊಂಡ ಅದರ ನಾಯಕ ಅಬೂಬಕರ್ ಆಲ್ ಬಗ್ದಾದಿ ತನ್ನನ್ನು ತಾನು ಖಲೀಫ ಎಂದೂ, ತಾನು ಖಲೀಫ್ ರಾಜ್ಯವನ್ನು ಸ್ಥಾಪಿಸಿರುವುದಾಗಿಯೂ ಘೋಷಿಸಿದ. ಇವತ್ತು ಐಸಿಸ್ ಜಗತ್ತಿನ ಅತ್ಯಂತ ಶ್ರೀಮಂತ ಜಿಹಾದಿ ಭಯೋತ್ಪಾದಕ ಸಂಘಟನೆ. ಬಾಗ್ದಾದಿಯ ಈ ಐಸಿಸ್ ಎದುರು ಅಲ್ಕೈದಾದಂತಹ ಭಯೋತ್ಪಾದಕ ಸಂಘಟನೆಯೇ ಮಂಕಾಗಿ ಬಿಟ್ಟಿದೆ. ಐಸಿಸ್ ಹಿಂದೊಮ್ಮೆ ತನ್ನ ಧಣಿಯಾಗಿದ್ದ ಆಲ್ ಕೈದಾವನ್ನು ಹಿಂದಿಕ್ಕಿ ಜಾಗತಿಕ ಜಿಹಾದಿನ ನಾಯಕನಾದುದಲ್ಲದೆ ತನ್ನದೇ ಸರಕಾರವನ್ನು ರಚಿಸಿ ಷರೀಯತ್ ಕಾನೂನಿನಡಿಯಲ್ಲಿ  ಆಡಳಿತವನ್ನೂ ಆರಂಭಿಸಿದೆ. ಹೀಗೆ ಈ ಜಿಹಾದೀ ಸಂಘಟನೆ ರಾತ್ರಿ ಬೆಳಗಾಗುವುದರೊಳಗೆ ಇಸ್ಲಾಮಿಕ್ ರಾಜ್ಯ ಎನ್ನುವ ಹೆಸರನ್ನು ಗಳಿಸಿಕೊಂಡಿತು.

            ಖಲೀಫ್ ರಾಜ್ಯದಲ್ಲಿ ವಹಾಬಿ ಸಿದ್ಧಾಂತದ ಅನುಸಾರ ಶರೀಯತ್ ಶಾಸನವನ್ನು ಹೇರಲಾಗಿದೆ. ಸಿರಿಯಾದ ಪಟ್ಟಣ ರಖಾ ಅಧಿಕಾರದ ಕೇಂದ್ರಸ್ಥಾನವಾಗಿದ್ದು, ಖಲೀಫ್ ಈಗಾಗಲೇ ಆದೇಶಗಳನ್ನು ಹೊರಡಿಸುತ್ತಿದ್ದಾನೆ. ಆತನ ಸಂದೇಶ ಇಷ್ಟೇ: "ಸುನ್ನಿಗಳಾಗಿ ಅಥವಾ ಮಣ್ಣಾಗಲು ಸಿದ್ಧರಾಗಿ!".  ಎಲ್ಲಾ ಮುಸ್ಲಿಮರು ತನ್ನಲ್ಲಿ ನಿಷ್ಠೆಯನ್ನು ಪ್ರಕಟಿಸಬೇಕೆಂದು ಅಬೂಬಕರ್ ಅಲ್ ಬಗ್ದಾದಿ ಯಾನೆ ಖಲೀಫ್ ಇಬ್ರಾಹಿಮ್ ಕರೆ ನೀಡಿದ್ದಾನೆ; ಜಗತ್ತಿನ ಎಲ್ಲಾ ಮುಸ್ಲಿಮರಿಗೆ ತಾನೇ ಖಲೀಫ್ ಹಾಗೂ ಇಮಾಮ್ ಎನ್ನುತ್ತಿದ್ದಾನೆ. ಇದು ಇತರ ಅರೇಬಿಯನ್ ಆಳರಸರಲ್ಲಿ ಭಯ ಹುಟ್ಟಿಸಿದೆ. ತಾನು ಗೆದ್ದ ಪ್ರದೇಶದಲ್ಲಿ ಐಸಿಸ್ ಅನ್ಯ ಮತೀಯರ/ಪಂಥೀಯರ ಮೇಲೆ ಜಿಜಿಯಾ ವಿಧಿಸಿದೆ. ಈ ಸುನ್ನಿ ಜಿಹಾದಿಗಳ ವಿರುದ್ಧ ಹೋರಾಡಲು ಸುನ್ನಿ ಸೈನಿಕರು ನಿರಾಕರಿಸುತ್ತಿದ್ದಾರೆ.  ಐಸಿಸ್ ಭೀತಿಯಿಂದ ಲಕ್ಷಾಂತರ ಜನ ತಮ್ಮ ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಇರಾಕಿ ಮಹಿಳೆಯರ ವಿರುದ್ಧ ಖಲಿಫೇಟ್ ಹೊರಡಿಸಿದ ಆದೇಶದಲ್ಲಿ ಸ್ತ್ರೀ ಜನನಾಂಗವನ್ನು ಊನಗೊಳಿಸುವುದು, ಪೂರ್ಣ ಬುರ್ಖಾ ಧರಿಸುವುದು ಮತ್ತು ಸುಗಂಧದ್ರವ್ಯಗಳ ನಿಷೇಧ ಮುಂತಾದುವು ಸೇರಿವೆ. ಪ್ರಸಿದ್ಧ ವ್ಯಕ್ತಿಗಳ ಶಿಲ್ಪಗಳನ್ನು ಮತ್ತು ಪವಿತ್ರ ತಾಣಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತೀ ಹತ್ಯೆಯನ್ನೂ ಬಗೆಬಗೆಯ ರೀತಿಯಲ್ಲಿ ಮಾಡುತ್ತಾ ಅವುಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮ ತಾಣಗಳಿಗೆ ಅವುಗಳನ್ನು ರವಾನಿಸಿದ್ದಾರೆ ಈ ರಕ್ಕಸರು. ಅವರ ಸಿದ್ಧಾಂತಗಳನ್ನು ಒಪ್ಪದಿರುವವರಿಗೆ ಖಲೀಫ್ ರಾಜ್ಯದಲ್ಲಿ ಜಾಗವಿಲ್ಲ. ಸಾವಿರಾರು ಯಾಜಿದಿಗಳನ್ನು ಹತ್ಯೆ ಮಾಡಿದ ಈ ಮತಾಂಧರು ಯಾಜಿದಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಿರಿಯಕ್ಕೆ ಸಾಗಿಸಿದರು. ಅವರನ್ನು ಬಲಾತ್ಕಾರವಾಗಿ ಮತಾಂತರಿಸಿ ತಮ್ಮ ಸಿದ್ಧಾಂತವನ್ನೊಪ್ಪುವವರಿಗೆ ಮಾರಾಟ ಮಾಡಿದರು.

              ಐಸಿಸ್ ಉಗ್ರರು ತಮ್ಮದೇ ಆದ ಹೊಸ ಕರೆನ್ಸಿಯನ್ನು ಸೃಷ್ಟಿಸಿದ್ದಾರೆ. ಅದೂ ಚಿನ್ನದ ನಾಣ್ಯಗಳ ಮೂಲಕ!  ಚಿನ್ನದ ದಿನಾರ್, ಬೆಳ್ಳಿ ದಿರ್ಹಾಮ್ಸ್, ತಾಮ್ರದ ನಾಣ್ಯಗಳನ್ನು ಐಸಿಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಒಂದು ದಿನಾರ್ ಚಿನ್ನದ ನಾಣ್ಯವು 4.25 ಗ್ರಾಂ ತೂಕವಿದ್ದು, 21 ಕ್ಯಾರೆಟ್ ಶುದ್ಧತೆ ಹೊಂದಿದೆ. ಹಾಗೆಯೇ ದಿರ್ಹಾಮ್ ಬೆಳ್ಳಿ ನಾಣ್ಯವು 2 ಗ್ರಾಂ ತೂಕದ್ದಾಗಿದೆ. ತಾಮ್ರದ ನಾಣ್ಯವು 20 ಗ್ರಾಂ ತೂಕವಿದೆ. ಯಾವೆಲ್ಲಾ ದೇಶಗಳನ್ನು ‘ಪೂರ್ತಿ ಇಸ್ಲಾಮೀಕರಣ’ ಮಾಡಬೇಕೆಂದು ಬಗ್ದಾದಿ ತನ್ನ ಮುಂದಿನ ಯೋಜನೆಯನ್ನೇ ಪ್ರಕಟಿಸಿದ್ದಾನೆ.  ಇಸ್ಲಾಮಿಕ್ ರಾಜ್ಯದ ಪ್ರಕಾರ ಯಾವೆಲ್ಲ ದೇಶಗಳು ಇಸ್ಲಾಮಿನ ಶತ್ರುಗಳೆಂದು ಹೊಸ್ ಖಲೀಫ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದಾನೆ. ಅದರಲ್ಲಿ ಭಾರತದ ಹೆಸರೂ ಇದೆ. ಈ ದೇಶಗಳ ಮುಸ್ಲಿಮರು ದಂಗೆಯೆದ್ದು, ತಮ್ಮ ದೇಶಗಳ ವಿರುದ್ಧ ಜಿಹಾದ್ ನಡೆಸಬೇಕೆಂದು ಆತ ಆದೇಶ ಹೊರಡಿಸಿದ್ದಾನೆ!

               ಕೆಲವು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದಮಾಡಿದ್ದರು. ಇತ್ತೀಚೆಗೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಸಿಕ್ಕ ಮಹಿಳೆಯರನ್ನು ಅತ್ಯಾಚಾರ ಮಾಡುವುದಲ್ಲದೆ ಅವರನ್ನು ಭಯೋತ್ಪಾದನಾ ಚಟುವಟಿಕೆಗೂ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಜೊತೆ ಸಂಭೋಗ ನಡೆಸಲು ನಿರಾಕರಿಸಿದ ಮಹಿಳೆಯರನ್ನು ಹತ್ಯೆ ಮಾಡುತ್ತಾರೆ. ಐಸಿಸ್ ಉಗ್ರರು, ಕಳ್ಳಮಾರ್ಗದಲ್ಲಿ ತೈಲ ಮಾರಾಟ, ಸುಲಿಗೆ, ಮಾನವ ಕಳ್ಳಸಾಗಣೆ ಮೂಲಕ ಭಾರೀ ಹಣ ಸಂಪಾದಿಸುತ್ತಿದ್ದಾರೆ. ಅವರು ಜನರ ಮಾರಣಹೋಮ ಮಾಡುವುದರ ಜೊತೆಗೆ ಐತಿಹಾಸಿಕ ನಗರಗಳಲ್ಲಿರುವ ಕಲಾಕೃತಿಗಳನ್ನು ಕೂಡ ನಾಶ ಪಡಿಸುತ್ತಿದ್ದಾರೆ. ಪಾಲ್ಮೈರಾ ಸಿರಿಯಾದ ಪುರಾತನ ನಗರ. ಅಲ್ಲಿಯ ಬಾಲ್-ಶಮೀನ್ ದೇವಸ್ಥಾನ ಒಂದನೇ ಶತಮಾನದ್ದು. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ತಾಣವದು. ಆ ದೇವಾಲಯವನ್ನು ನಾಶ ಪಡಿಸಿದ ಉಗ್ರರು 2000 ವರ್ಷಗಳ ಐತಿಹಾಸಿಕ ಸಿಂಹದ ಪ್ರತಿಮೆಯನ್ನು ತುಂಡರಿಸಿದರು. ಇರಾಕ್, ಸಿರಿಯಾಗಳಲ್ಲಿನ ಪ್ರಾಚೀನ ತಾಣಗಳ ನಿರ್ವಹಣೆಯ ಒಪ್ಪಂದಕ್ಕೆ ಯುನಿಸ್ಕೋ ಸಹಿ ಹಾಕಿದ ಬೆನ್ನಲ್ಲೇ ಉಗ್ರರು ಪ್ರಾಚೀನ ಕಲಾಕೃತಿಗಳನ್ನು ನಾಶ ಮಾಡಿದ್ದಾರೆ. ಅನ್ಯ ದೇಶೀಯರನ್ನು ಅಪಹರಣ ಮಾಡುವ ಐಸಿಸ್ ಅವರ ಬಿಡುಗಡೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದೆ. ಐಸಿಸ್ ಈಗಾಗಲೇ ಸಿರಿಯಾದ ಶೇ.40ರಷ್ಟು ಭಾಗವನ್ನು ಆಕ್ರಮಿಸಿದೆ.

              ಇಸ್ಲಾಂ ರಾಜ್ಯ ಸ್ಥಾಪನೆ ಹೆಸರಿನಲ್ಲಿ ನರಕ ಸೃಷ್ಟಿಸುತ್ತಿರುವ ಐಎಸ್ಐಎಸ್ ಉಗ್ರರು ಪಾಶ್ಚಾತ್ಯ ದೇಶಗಳ ಪ್ರಜೆಗಳೆಲ್ಲರನ್ನೂ ಗುರಿಯಾಗಿಸಿ ಯೋಜನೆ ರೂಪಿಸುತ್ತಿದ್ದಾರೆ. ಇರಾಕಿನ ಮೊಸೂಲ್ ಪ್ರದೇಶದಲ್ಲಿ ಐಸಿಸ್ ಭಯೋತ್ಪಾದಕರೊಂದಿಗೆ ಹತ್ತು ದಿನವಿದ್ದು, ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಅವರ ಯೋಜನೆಗಳ ಬಗ್ಗೆ ತಿಳಿದುಕೊಂಡ ಮಾಜಿ ಜರ್ಮನ್ ಸಂಸದ, ಪತ್ರಕರ್ತ ಜೂರ್ಜೆನ್ ಟೋಡೆನ್ ಬಹಿರಂಗಪಡಿಸಿದ ವಿಷಯಗಳು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಮತಾಂಧರು ಖಲೀಫಾ ರಾಜ್ಯ ಸ್ಥಾಪನೆ ಗುರಿಯೊಂದಿಗೆ ಹಿಂದುಗಳು, ವಿಗ್ರಹಾರಾಧಕರು, ನಾಸ್ತಿಕರು, ಶಿಯಾ ಮುಸ್ಲಿಮರನ್ನು ಹತ್ಯೆ ಮಾಡಲು ವ್ಯೂಹ ರಚಿಸುತ್ತಿದ್ದಾರೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಲು ಅವರು ಸಿದ್ದ. ಅಣ್ವಸ್ತ್ರಗಳನ್ನು ಉಪಯೋಗಿಸಲೂ ಅವರು ಹಿಂಜರಿಯಲಾರರು. 50 ಕೋಟಿ ಜನರನ್ನು ಕೊಲ್ಲಲು ಐಸಿಸ್ ಯೋಜನೆ ರೂಪಿಸುತ್ತಿದೆ. ಅಣು ಸುನಾಮಿ ಮೂಲಕ ವಿಶ್ವವನ್ನೇ ಹೆಣಗಳ ರಾಶಿಯಾಗಿಸುವುದೇ ಅವರ ಗುರಿ ಎಂದು ಟೋಡೆನ್ ಸಂದರ್ಶನದಲ್ಲಿ ಈ ರಾಕ್ಷಸರ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ.

             ಸಿರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಐಸಿಸ್ ಹಿಡಿತ ಸಾಧಿಸುತ್ತಿದ್ದಂತೆ ಎಲ್ಲರ ಮನದಲ್ಲಿ ಪ್ರಶ್ನೆಯೊಂದು ಮೂಡಿದೆ.  ಒಬ್ಬ ವ್ಯಕ್ತಿ ಹಾಗೂ ಆತ ಕಟ್ಟಿದ ಸೇನೆ ಇಡೀ ಜಗತ್ತನ್ನು ಅಲ್ಲಾಡಿಸುತ್ತಿದೆಯೆಂದರೆ ಅದು ಸಾಮಾನ್ಯ ಸಂಗತಿಯೇನು? ಬಲಾಢ್ಯ ಶಕ್ತಿಯೊಂದರ ಸಹಕಾರವಿಲ್ಲದೆ ಒಬ್ಬ ವ್ಯಕ್ತಿಗೆ ಅಂಥ ತಾಕತ್ತು ಬರುವುದು ಹೇಗೆ? ಆತನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವವರಾರು? ಈ ಭಯೋತ್ಪಾದನಾ ಹಾವಳಿಯ ಹಿಂದೆ ಯಾರಿದ್ದಾರೆ? ಪ್ಯಾಲೆಸ್ತೈನನ್ನು ಸ್ವತಂತ್ರಗೊಳಿಸುವ ಜತೆಗೆ ಅಲ್ಲಿ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ರೂಪುಗೊಂಡಿರುವ ಹಮಾಸ್ ಸಂಘಟನೆಯ ಶಕ್ತಿ ಕುಂದಿಸಲು ಮುಸ್ಲಿಮ್ ರಾಷ್ಟ್ರಗಳನ್ನು ಒಡೆದು ತನ್ಮೂಲಕ ಕಚ್ಚಾ ತೈಲ ಸಂಪತ್ತಿನ ಮೂಲಕ ಅವು ಸಂಪಾದಿಸಿಕೊಂಡಿರುವ ಆರ್ಥಿಕ ಬಲವನ್ನು ತಗ್ಗಿಸಲು ಅಮೇರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು ಯೋಜನೆ ರೂಪಿಸಿದವು. ಅದರಂತೆ ಸಿರಿಯಾದಲ್ಲಿರುವ ಪ್ರತ್ಯೇಕತಾವಾದಿಗಳ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಖಿಲಾಫತ್ ಚಳವಳಿಗೆ ಬೆಂಬಲ ನೀಡಿತು ಅಮೇರಿಕಾ. ಮೇಲ್ನೋಟಕ್ಕೆ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ಇದನ್ನು ನಿರಾಕರಿಸಿದರೂ ಮುಸ್ಲಿಂ ರಾಷ್ಟ್ರಗಳ ಆಂತರಿಕ ಯುದ್ಧದಿಂದ ಅಮೆರಿಕಕ್ಕೆ ಲಾಭವಾಗುವುದು ಸುಳ್ಳಲ್ಲ. ಇದಕ್ಕೆ ಸರಿಯಾಗಿ ತನ್ನ ವಿರುದ್ಧ ತಿರುಗಿ ಬಿದ್ದಿದ್ದ ಒಸಾಮಾ ಬಿನ್ ಲಾಡೆನ್ನನ್ನು ಮುಗಿಸಿದ ಬಳಿಕ ಅವನ ಶಿಷ್ಯರಾದ ಬಾಗ್ದಾದಿ ಹಾಗೂ ಜವಾಹಿರಿ ಒಬ್ಬರಿಗೊಬ್ಬರು ವಿರೋಧಿಗಳಾಗಿಬಿಟ್ಟರು.

            ಕಚ್ಚಾ ತೈಲ ಸಂಪತ್ತು ಹೊಂದಿರುವ ಮುಸ್ಲಿಂ ರಾಷ್ಟ್ರಗಳನ್ನು ಒಡೆಯಬೇಕಾದರೆ ಪ್ರಬಲ ಅಸ್ತ್ರವೇ ಶಿಯಾ-ಸುನ್ನಿ ವರ್ಗೀಕರಣ! ಐಸಿಸ್ಗೆ ಬೆಂಗಾವಲಾಗಿ ನಿಂತಿರುವವರ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವುದು ಸೌದಿ ಅರೇಬಿಯಾ, ಈಜಿಪ್ಟ್, ಕತಾರ್ ಹಾಗೂ ಅಮೆರಿಕಗಳ ಹೆಸರು! ಸಧ್ಯ ಸಿರಿಯಾ ಅಮೇರಿಕಾದಿಂದ ಯಾವುದೇ ಯುದ್ದ ಉಪಕರಣಗಳನ್ನಾ ಖರೀದಿಸದೆ ಚೈನಾ ಹಾಗೂ ರಷ್ಯಾದ ಯುದ್ದ ಪರಿಕರಗಳನ್ನ ಬಳಸುತ್ತಿದೆ. ವೆನಿಜ಼ುವೆಲಾ, ಕ್ಯೂಬಾ ಮತ್ತು ಅರ್ಜೆಂಟೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಶರ್ ಅಲ್ ಅಸದ್ ಅಮೇರಿಕಾ ವಿರೋಧೀ ನೀತಿ ಅನುಸರಿಸುತ್ತಿದ್ದಾನೆ. 2006ರವರೆಗೆ ವಿದೇಶಿ ವಿನಿಮಯಕ್ಕೆ  ಬಳಸುತ್ತಿದ್ದ ಡಾಲರ್ ಅನ್ನು ಯುರೋಗೆ ಬದಲಾಯಿಸಿದ ಅಸದ್! ಈ ಎಲ್ಲವೂ ಅಮೇರಿಕಾದ ಕಣ್ಣು ಕೆಂಪಗಾಗಿಸಿತ್ತು. ಜೊತೆಗೆ ಅಪಾರ ತೈಲ ಸಾಮ್ರಾಜ್ಯದ ಮೇಲೂ ಅದರ ಕಣ್ಣುಬಿದ್ದಿತ್ತು. ಹೀಗಾಗಿ ಅಸದ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾನೆ, ಆತನನ್ನು ಪದಚ್ಯುತಗೊಳಿಸಬೇಕು ಎನ್ನುವ ನೆಪವೊಡ್ಡಿ ಅಮೇರಿಕಾ ಆಡುತ್ತಿರುವ ಹೂಟ ಇದು. ಇದಕ್ಕೆ ಸರಿಯಾಗಿ ಅಸದ್ ಆಡಳಿತವನ್ನು ವಿರೋಧಿಸುವವರಿಗೆ ಕೋಟ್ಯಂತರ ಡಾಲರ್ ಹಣದ ಸಹಾಯವನ್ನು ತೈಲ ಸಾಮ್ರಾಜ್ಯದ ದೊರೆಗಳು ಒದಗಿಸಿದ್ದಾರೆ. ತನ್ನ ಸಾಮ್ರಾಜ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೌದಿ ಎಂಥ ಅಪಾಯಕಾರಿ ಹೆಜ್ಜೆಯನ್ನೂ ಇಡಬಲ್ಲದು ಎನ್ನುವುದಕ್ಕೆ ಅದು ಐಸಿಸ್ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ಸಹಾಯ ನೀಡುತ್ತಿರುವುದೇ ಸಾಕ್ಷಿ. ಇದಕ್ಕೆ ಟರ್ಕಿಯೂ ಜೊತೆಗೂಡಿದೆ. ಸಿರಿಯಾದಲ್ಲಿ ಸುನ್ನಿ ಪಂಗಡವನ್ನು ಬಲಗೊಳಿಸಿ ಅಸದ್ ನನ್ನು ಕೆಳಗಿಳಿಸುವುದೇ ಇದರ ಉದ್ದೇಶ. ಬಾಗ್ದಾದಿ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರ ಸೌದಿಯದ್ದು ಎನ್ನುವುದು ಸಾಬೀತಾಗಿದೆ.
ಖಿಲಾಫತ್ ಸ್ಥಾಪನೆಗಾಗಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಬಾಗ್ದಾದಿ ಲಾಡೆನ್ನಿನಂತೆ ತನಗೇ ತಿರುಗಿ ಬೀಳುತ್ತಾನೆ ಎನ್ನುವ ಸತ್ಯ ಗೊತ್ತಿದ್ದೂ ಅಸದ್ ನನ್ನು ಆತ ಹತ್ಯೆಗೈಯುವ ತನಕ ಸುಮ್ಮನುಳಿಯಲು ಯೋಚಿಸಿತ್ತು ಅಮೇರಿಕಾ. ಆದರೆ ಯಾವಾಗ ತಮ್ಮ ಪತ್ರಕರ್ತ ಸ್ಟೀವನ್ ಸೋಟ್ಲೊನನ್ನು ಐಸಿಸ್ ಶಿರಚ್ಛೇದ ಮಾಡಿತೋ ಆಗ ಅಮೇರಿಕಾದ ಜನತೆ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಲಾರಂಭಿಸಿದರು. ಹಾಗಾಗಿ ಅಮೇರಿಕಾ ಯುದ್ಧ ರಂಗಕ್ಕಿಳಿಯಬೇಕಾಯಿತು. ಆದರೆ ಈ ನಿರ್ಧಾರದ ಹಿಂದೆ ಇನ್ನೊಂದು ಕಾರಣವೂ ಇದೆ. ಅತ್ತ ರಷ್ಯಾ ಐಸಿಸ್ ಉಗ್ರರ ನಿರ್ಮೂಲನ ಮಾಡುವುದಾಗಿ ಘೋಷಿಸಿ ಸಮರಾಂಗಣಕ್ಕಿಳಿದಿದೆ. ಅಪಾರ ಯಶಸ್ಸು ಅದರ ಪಾಲಿಗೊದಗಿದೆ. ಜಗತ್ತಿನ ಭೂಪಟದಲ್ಲಿ ತನ್ನ ಅಸ್ತಿತ್ವವನ್ನು ವಿಶ್ವಕ್ಕೆ ಸಾಬೀತು ಮಾಡಿ ದೊಡ್ಡಣ್ಣನಾಗಿ ಮೆರೆಯಲು ಅದು ಪ್ರಯತ್ನಕ್ಕಿಳಿದಿದೆ. ಉಕ್ರೇನ್, ಕ್ರಿಮಿಯಾವನ್ನು ತನ್ನ ತೆಕ್ಕೆಗೆ ಸೇರಿಸಲು ಬಲಪ್ರಯೋಗಿಸಿದಾಗಲೇ ಅದರ ಈ ಇರಾದೆ ಸ್ಪಷ್ಟವಾಗಿತ್ತು. ಒಟ್ಟಾರೆ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿನ ವಿಶ್ವದ ಪ್ರಬಲ ರಾಷ್ಟ್ರಗಳ ನಡುವಿನ ಈ ಶೀತಲ ಸಮರ ಮತಾಂಧರನ್ನು ಹೆಚ್ಚಿಸಿ ಶಾಂತಿಯುತ ದೇಶಗಳಲ್ಲೂ ಗಲಭೆ ಸೃಷ್ಟಿಸಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಳಿಸಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.

ಭಾರತಕ್ಕೇನು ಹಾನಿ?

               ಮತಭ್ರಾಂತಿಯ ಹುಚ್ಚು ಕಳೆದ ಎರಡು ಸಾವಿರ ವರುಷಗಳಲ್ಲಿ ಭಾರತವನ್ನೇ ಛಿದ್ರಗೊಳಿಸಿಬಿಟ್ಟಿದೆ. ಇವತ್ತು ಉಳಿದಿರುವ ಭಾರತದ ಭೂಭಾಗದಲ್ಲೂ ದಿನ ನಿತ್ಯ ಈ ಮತಾಂಧರದ್ದೇ ಅಬ್ಬರ. ಈ ವಿಕ್ಷಿಪ್ತ ಮನಸ್ಥಿತಿಯ ಬೆಳವಣಿಗೆಗೆ ನಮ್ಮಲ್ಲಿನ ಗೋಸುಂಬೆ ನಾಯಕರ 'ಸೆಕ್ಯುಲರಿಸಂ" ಪರಿಕಲ್ಪನೆಯೇ ಕಾರಣ. ಕಳೆದ ಶತಮಾನದ ಆರಂಭದಲ್ಲಿ ಇದೇ "ಖಿಲಾಫತ್" ಭೂತ ಇಲ್ಲಿನ ಹಿಂದೂಗಳನ್ನು ಆಪೋಶನ ತೆಗೆದುಕೊಂಡದ್ದು ಕಡಿಮೆಯೇನು? ಗಾಂಧಿಯೂ ಸೇರಿ ಕಾಂಗ್ರೆಸ್ಸಿನ ನಾಯಕರೆಲ್ಲಾ ಇದೇ ಖಿಲಾಫತಿಗೆ ಬೆಂಬಲ ನೀಡಿದ್ದರಿಂದಲೇ ಅದು ಉಳಿದಿದ್ದ ಭಾರತವನ್ನೂ ತುಂಡರಿಸುವವರೆಗೆ ಬೆಳೆದು ಈಗಲೂ ಕಾಡುತ್ತಿರುವುದು ಸುಳ್ಳಲ್ಲ. ಹಾಗಾಗಿ ಐಸಿಸ್ ಉಗ್ರರು ಎಸಗುತ್ತಿರುವ ಪ್ರತಿಯೊಂದು ಕೃತ್ಯಗಳನ್ನೂ ಕಂಡರಿತಿರುವ ಭಾರತ ಇತಿಹಾಸದ ತಪ್ಪುಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಕೇಂದ್ರ ಸರಕಾರವೇನೋ ಕಠಿಣ ನಿಲುವು ತೆಗೆದುಕೊಂಡು ಕಟ್ಟೆಚ್ಚರ ವಹಿಸಿದೆ. ಆದರೆ ರಾಜ್ಯ ಸರಕಾರಗಳು? ಹೀಗೆ ಹೇಳಲೂ ಕಾರಣವಿದೆ. ಐಸಿಸ್ ಪರವಾಗಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಮಸೂರ್ ಬಗ್ಗೆ ಬ್ರಿಟನ್ನಿನ ಚಾನಲ್4-ಟಿವಿ ಮಾಹಿತಿ ಪ್ರಸಾರ ಮಾಡಿತ್ತು. ಈ ವರದಿಯನ್ನು ಆಧಾರಿಸಿಕೊಂಡು ಬೆಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. 2014, ಡಿಸೆಂಬರ್ 13ರ ಮುಂಜಾನೆ ಮೆಹದಿಯ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಆದರೆ ಮಸೂರ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನಾ ದಿನವೇ ಆತನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿತು. ಮಾತ್ರವಲ್ಲ ಖಿಲಾಫತ್ ಪರವಾಗಿರುವ ಮತಾಂಧರಿಗೆ ಇಲ್ಲಿನ ರಾಜ್ಯ ಸರಕಾರವೇ ರಕ್ಷಣೆ ನೀಡುತ್ತಿದೆ. ಕಳೆದರಡು ವರುಷಗಳಲ್ಲಿ ನಡೆದ ಹಿಂದೂಗಳ ಹತ್ಯೆ ಹಾಗೂ ಹತ್ಯೆಗೆ ಕಾರಣವಾದವರ ಬಗ್ಗೆ ಮಾಹಿತಿ ಇದ್ದರೂ ಬಂಧಿಸದೇ ಮೀನ ಮೇಷ ಎಣಿಸುತ್ತಿರುವುದು, ದನಕಳ್ಳ ಮತಾಂಧ ಭಯೋತ್ಪಾದಕರು ಸತ್ತಾಗ ಲಕ್ಷಗಟ್ಟಲೆ ಪರಿಹಾರ ಧನ ನೀಡಿರುವುದೇ ಇದಕ್ಕೆ ನಿದರ್ಶನ! ಸರಕಾರದಿಂದಲೇ ಇಂತಹ ಪ್ರೋತ್ಸಾಹ ಸಿಗುತ್ತಿರುವಾಗ ಬಾಲ್ಯದಲ್ಲೇ ಮೆದುಳು ಬದಲಾಗಿಸಿಕೊಂಡಿರುವ ಈ ಮತಾಂಧರು ಐಸಿಸ್ನಂತಹ ಉಗ್ರ ಸಂಘಟನೆಗಳ ಸೆಳೆತಕ್ಕೊಳಗಾಗದಿರುತ್ತಾರೆಯೇ?

              ಏಪ್ರಿಲ್ 15ರಂದು ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ವಿಚಾರಣೆ ವೇಳೆ  ಈ ಉಗ್ರರಿಗೆ ಐಸಿಸ್ ಜೊತೆಗಿರುವ ನಂಟು ಬೆಳಕಿಗೆ ಬಂತು. ಬಾಂಬ್ ತಯಾರಿಸುವ ರಾಸಾಯನಿಕಗಳನ್ನು ಹೊಂದಿದ್ದ ಆರೋಪದಲ್ಲಿ ಖಾನ್ ಮತ್ತು ಅವನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಐಸಿಸ್ ಉಗ್ರರಿಗೂ ಭಟ್ಕಳಕ್ಕೂ ನಂಟಿರುವ ಬಗ್ಗೆ ಇಮ್ರಾನ್ ಬಾಯಿ ಬಿಟ್ಟ. ಬಂಧಿತ ಇಮ್ರಾನ್ ಖಾನನನ್ನು ಐಸಿಸ್ ಸಂಘಟನೆಗೆ ಸೇರಿಸಿದ್ದು, ಐಸಿಸ್ನ ಸಕ್ರಿಯ ಕಾರ್ಯಕರ್ತ ಭಟ್ಕಳ ಮೂಲದ ಮಹಮ್ಮದ್ ಶಫಿ ಅರ್ಮರ್! ಗ್ರಾಮೀಣ ಶಿಕ್ಷಣ ಇಲಾಖೆಯ ಗುಮಾಸ್ತರೊಬ್ಬರ ಮಗನಾಗಿರುವ ಇಮ್ರಾನ್ ಖಾನ್ ಉದ್ಯೋಗ ಅರಸಿಕೊಂಡು ಗಲ್ಪ್ ದೇಶಗಳಿಗೆ ಹೋಗಿದ್ದ. ಅಲ್ಲಿ ಅರ್ಮರನ ಸಂಪರ್ಕ ಸಾಧಿಸಿ ಅವನಿಂದ ಬಾಂಬ್ ತಯಾರಿಸುವ ವಿಧಾನವನ್ನು ಕಲಿತಿದ್ದ. ಬಳಿಕ ಶಫಿ ಅರ್ಮರ್ ಅವನನ್ನು ಐಸಿಸ್ಗೆ ಸೇರಿಸಿದ. ಅನಂತರ ವಾಸಿಂ ಖಾನ್, ಮೊಹಮ್ಮದ್ ರಿಜ್ವಾನ್, ಅನ್ವರ್ ಮತ್ತು ಮಝರ್ ಎಂಬವರನ್ನು ಸೇರಿಸಿಕೊಂಡು ಖಾನ್ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಮಾಡಿದ್ದ! ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿಯಾದ ಫಯಾಜ್ ಮಸೂದ್ ಖಾಸಗಿ ಕೆಲಸ ನಿಮಿತ್ತ 2013ರ ಸೆಪ್ಟೆಂಬರಿನಲ್ಲಿ ಕತಾರ್ ಗೆ ತೆರಳಿದ್ದ. ಅಲ್ಲಿಂದ ಸಿರಿಯಾಗೆ ತೆರಳಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡ. ಶಿವಾಜಿನಗರದ ನಿವಾಸಿ ಉಮರ್ ಸುಬಾನ್ ಯೆಮೆನ್ ನಲ್ಲಿ ಖಾಸಗಿ ಕಂಪನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಈತನೂ 2013ರ ಅಂತ್ಯಕ್ಕೆ ಇರಾಕಿಗೆ ತೆರಳಿ ಐಸಿಸ್ ಗೆ ಸೇರ್ಪಡೆಯಾಗಿದ್ದ. ವಿಜಯಪುರದ ನಿವಾಸಿಯಾದ ಅಬ್ದುಲ್ ಖುದ್ದುಸ್ ಟರ್ಕಿ, ಫಯಾಜ್ ಮಸೂದ್ ಹಾಗೂ ಉಮರ್ ಸುಬಾನ್ ಸಂಪರ್ಕ ಬೆಳೆಸಿಕೊಂಡು ನಕಲಿ ಪಾಸ್ ಪೋರ್ಟ್ ಮೂಲಕ ಬಾಗ್ದಾದಿಗೆ ತೆರಳಿದ್ದ.

             ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವೀಧರೆಯಾಗಿದ್ದ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಪುತ್ರಿ ಐಸಿಸ್ ಉಗ್ರಗಾಮಿ ಸಂಘಟನೆ ಸೇರಿಕೊಳ್ಳಲು ಮುಂದಾಗಿದ್ದಳು. ಉನ್ನತ ಶಿಕ್ಷಣಕ್ಕೆಂದು ಆಸ್ಟ್ರೇಲಿಯಾಕ್ಕೆ ಹೋದಾಗ ಅಲ್ಲಿ ಐಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುವ ಜಾಲವೊಂದರ ಸಂಪರ್ಕಕ್ಕೆ ಈ ಯುವತಿ ಬಂದಿದ್ದು ಅವರ ಪ್ರಭಾವದಿಂದಾಗಿಯೇ ಐಸಿಸ್ ಸೇರಲು ಮುಂದಾಗಿದ್ದಳು. ಬೌದ್ಧಮತದಿಂದ ಮತಾತಂರಗೊಂಡು ಅಬು ಖಲೀದ್ ಅಲ್ ಕಾಂಬೊಡಿ ಎಂದು ಹೆಸರಿಟ್ಟುಕೊಂಡಿರುವ ನೀಲ್ ಪ್ರಕಾಶ್ ಎಂಬಾತ ಆಸ್ಟ್ರೇಲಿಯಾದಲ್ಲಿ ಐಸಿಸ್ಗೆ ನೇಮಕಾತಿ ಮಾಡುವ ಮುಖ್ಯಸ್ಥರಲ್ಲೊಬ್ಬ. ಇತ್ತೀಚೆಗಷ್ಟೆ ಆತ ಆಸ್ಟ್ರೇಲಿಯಾದ ಯುವಜನರಿಗೆ ಆಸ್ಟ್ರೇಲಿಯಾದಲ್ಲಿ ತೋಳ ದಾಳಿ ನಡೆಸುವಂತೆ ಪ್ರೇರೇಪಿಸುವ ವಿಡಿಯೊವೊಂದನ್ನು ಅಂತರ್ಜಾಲಕ್ಕೇರಿಸಿದ್ದ. ಇವುಗಳಿಂದ ಉತ್ತೇಜಿತಗೊಂಡಿದ್ದ ಈಕೆ ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಇಸ್ಲಾಂಗೆ ಮತಾಂತರಗೊಂಡು ಬಳಿಕ ಆಸ್ಟ್ರೇಲಿಯಾದ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಸೇರಿ ಜಿಹಾದ್ ನಡೆಸುವ ಇರಾದೆಯಲ್ಲಿದ್ದಳು. ಅಂತರ್ಜಾಲ ಮೂಲಕ ಯುವಕರನ್ನು ಐಸಿಸ್ ಸಂಘಟನೆ ಸೇರಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದ, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದರೆ ಸ್ವರ್ಗದಲ್ಲಿ ನಮಗೆ ಅಲ್ಲಾನ ಕೃಪೆ ಸಿಗುತ್ತದೆ ಎಂದು ಯುವಕರಿಗೆ ನೀತಿ ಪಾಠ ಹೇಳುತ್ತಿದ್ದ, ಭಾರತ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟಬೇಕಾದರೆ ನಾವೆಲ್ಲರೂ ಒಂದಾಗಿ ಐಸಿಸ್ ಸಂಘಟನೆಯನ್ನು ಬಲಪಡಿಸಬೇಕೆಂದು ಉಗ್ರವಾದವನ್ನು ಬೆಂಬಲಿಸುತ್ತಿದ್ದ ಈಕೆಯ ನಡವಳಿಕೆಯಿಂದ ಸಂಶಯಗೊಂಡ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದರು. ಎನ್ಐಎ ಅಧಿಕಾರಿಗಳು ಯುವತಿಯನ್ನು ವಶಕ್ಕೆ ತೆಗೆದುಕೊಂಡು ಕೌನ್ಸಲಿಂಗ್ ನಡೆಸುತ್ತಿದ್ದಾರೆ.

              ಕಳೆದ ಜನವರಿಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಪಡ್ಡಾಯೂರು ಸಮೀಪ ಐಸಿಸ್ ಬೆಂಬಲಿಸಿ ಬರಹಗಳು ಪತ್ತೆಯಾಗಿದ್ದವು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಸ್ಸಾಂ, ಜಮ್ಮುಕಾಶ್ಮೀರದಲ್ಲಿ ಐಸಿಸ್ ಕುರಿತು ಆಸಕ್ತಿ ಹೆಚ್ಚುತ್ತಿದೆ. ಅಂತರ್ಜಾಲದಲ್ಲಿ ಐಸಿಸ್ ಕುರಿತು ಜನರು ಮಾಹಿತಿ ಶೋಧಿಸುತ್ತಿರುವ ರಾಜ್ಯಗಳಲ್ಲಿ ಇವೆರಡು ಮೊದಲ ಸ್ಥಾನದಲ್ಲಿವೆ. ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಐಸಿಸ್ ಹೊಸ ಟ್ವಿಟರ್ ಖಾತೆಯನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಿದೆ. ದೇಶದ್ರೋಹಿ, ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಗೃಹ ಬಂಧನದಲ್ಲಿ ಇರಿಸಿದ್ದನ್ನು ವಿರೋಧಿಸಿ ಭಾರತ ವಿರೋಧಿಗಳು ಕಳೆದ ಜುಲೈ 18 ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಐಸಿಸ್ ಧ್ವಜವನ್ನು ಪ್ರದರ್ಶಿಸಿದ್ದರು. ಇಂತಹ ಹಲವಾರು ಘಟನೆಗಳು ದಿನಂಪ್ರತಿ ವರದಿಯಾಗುತ್ತಿದ್ದು ಐಸಿಸ್ ಪರ ಒಲವು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆ ಐಸಿಸ್ ಉಗ್ರ ಸಂಘಟನೆ ಭಾರತದಲ್ಲೂ ಸದ್ದಿಲ್ಲದೆ ಬೇರೂರಲಾರಂಭಿಸಿದೆ.  ಮತ ಬ್ಯಾಂಕ್ ಎಲ್ಲಿ ಕೈತಪ್ಪುತ್ತದೋ ಎಂಬ ಭೀತಿಯಿಂದ ರಾಜಕಾರಣಿಗಳು ಇದಕ್ಕೆ ನೀರೆರೆಯುತ್ತಿದ್ದಾರೆ. ಈ ರಕ್ತಬೀಜಾಸುರರು ತಮ್ಮನ್ನೇ ಆಪೋಶನ ತೆಗೆದುಕೊಳ್ಳುತ್ತಾರೆನ್ನುವ ಕನಿಷ್ಟ ಪ್ರಜ್ಞೆಯೂ ಅವರಲ್ಲಿಲ್ಲ.