ಪುಟಗಳು

ಗುರುವಾರ, ಡಿಸೆಂಬರ್ 27, 2012

ಭಾರತ ದರ್ಶನ - ೨೩


ಭಾರತ ದರ್ಶನ - ೨೩:

                  ಸಹ್ಯಾದ್ರಿಯ ಇನ್ನೊಂದು ವಿಶೇಷ ಎಂದರೆ, ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅಂತಹ ಹಿಂದೂ ಹೃದಯ ಸಾಮ್ರಾಟನಿಗೆ ಜನ್ಮ ನೀಡೋ ಭಾಗ್ಯ ದೊರೆತುದು. ಹೌದು ಶಿವಾಜಿಯ ಹೆಸರು ಕೇಳಿದೊಡನೆ ಹಿಂದೂವಿನ ಕಂಗಳ ಕಾಂತಿ ಪ್ರಜ್ವಲಿಸತೊಡಗುತ್ತೆ. ಒಂದು ವೇಳೆ ಹಾಗಾಗಾದೇ ಇದ್ದರೆ ಅವ ಹಿಂದುವಾಗಿದ್ದೇನು ಪ್ರಯೋಜನ?

                    ಹೌದು, ಇಂದಿನ ಪೀಳಿಗೆಗೆ ಶಿವಾಜಿಯ ಬಗ್ಗೆ ಗೊತ್ತಿಲ್ಲ. ಗೊತ್ತುಪಡಿಸಿಕೊಳ್ಳುವ ಮನಸ್ಥಿತಿಯೂ ಇಲ್ಲ. ಕಾರಣ ಅವೆರಡನ್ನು ನಾವು ಹೇಳಿಕೊಟ್ಟಿಲ್ಲ! ನಮ್ಮ ಪಠ್ಯ ಪುಸ್ತಕಗಳಲ್ಲಿ ಶಿವಾಜಿಗೆ ಕಲ್ಪಿಸಿರೋದು ಕೇವಲ ಒಂದೇ ಪುಟದ ವ್ಯಾಖ್ಯೆ! ಅದರಲ್ಲಿ ಅರ್ಧ ಪುಟ ಅವನ ಭಾವಚಿತ್ರಕ್ಕೆ ಹೋದರೆ ಉಳಿದರ್ಧದಲ್ಲಿ ಅವನನ್ನು ವರ್ಣಿಸುವುದು ಹೇಗೆ ಸಾಧ್ಯ? ಈಗಂತು ಆ ಒಂದು ಪುಟವೂ ಉಳಿದಿಲ್ಲ. ಬ್ರಿಟಿಷ್ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿದ ಇತಿಹಾಸ ಕಥನವನ್ನು ನಮ್ಮವರೂ ಸರಿಪಡಿಸಲಿಲ್ಲ. 'ಮಹಾತ್ಮ' ಅಂತ ಕರೆಯಿಸಿಕೊಂಡ ಕೆಲವು ದೇಶದ್ರೋಹಿಗಳಿಗೆ ಈ ಹಿಂದೂ ಹೃದಯ ಸಾಮ್ರಾಟ ದಾರಿ ತಪ್ಪಿದ ದೇಶಭಕ್ತರಲ್ಲೊಬ್ಬನಾಗಿಬಿಟ್ಟ. ಅವನ ಭಟ್ಟಂಗಿಗಳು ಈ ಛತ್ರಪತಿಯನ್ನು ಇತಿಹಾಸದ ಪುಟಗಳಿಂದಲೇ ತೆಗೆದು ಹಾಕುವ ಪ್ರಯತ್ನ ಮಾಡಿದರು, ಮಾಡುತ್ತಲೇ ಇದ್ದಾರೆ!

                  ಶಿವಾಜಿಯ ಮಹತ್ವ ನಮಗೆ ಅರಿವಾಗೋದು ಯಾವಾಗ?
ಅಕಸ್ಮಾತ್ ಆತ ಹುಟ್ಟದೇ ಇರುತ್ತಿದ್ದರೆ ಏನಾಗುತ್ತಿತ್ತು?
ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಅಂತಹ ಸಂದರ್ಭದಲ್ಲಿ ಶಿವಾಜಿ ಎದ್ದು ಬಂದ!

ಬಾಲ ಶಿವಾಜಿ ಹೇಳಿದ್ದೇನು?
" ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್|"

                 ನಮ್ಮ ಸ್ಥಿತಿ ಹೇಗಿತ್ತು ಆವಾಗ?

ಭೂಷಣ ಅನ್ನೋ ಕವಿ ಹೇಳುತ್ತಾನೆ,

"ಕಾಶಿಜೀ ಕೀ ಕಳಾ ಜಾತೀ
ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ
ಸುನ್ನತ್ ಹೋತಿ ಸಬ್ ಕೀ||"

ಅಂದರೇನು?
ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!

                 ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದಾಗ ಅದರ ಸಂರಕ್ಷಣೆಗಾಗಿ ಎದ್ದು ಬಂದ ಶಿವಾಂಶ ಆತ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ! ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಸಿಲುಕಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ!

                   ಸ್ವರಾಜ್ಯದ ರಕ್ಷಣೆಗಾಗಿ ಜನರನ್ನು ಜೋಡಿಸಲು ಯತ್ನಿಸಿದ. ನಾಡಿನಲ್ಲಿ ಅವನಿಗೆ ಸಹಕಾರ ಸಿಗಲಿಲ್ಲ. ನಮ್ಮ ಪರಂಪರೆಯೇ ಹಾಗೆ! ಗೆಲುವು ಖಚಿತವಾಗುವವರೆಗೆ ನಾವು ಯಾರಿಗೂ ಸಹಾಯ ಮಾಡೋಲ್ಲ. ಇದು ಇಂದು ನಿನ್ನೆಯ ಮಾತಲ್ಲ. ರಾಮ ರಾವಣರ ಯುದ್ಧ ನಡೆದಾಗ ದೇವತೆಗಳು ಜೈಕಾರ ಹಾಕುತ್ತಿದ್ದರು. ಯಾರಿಗೆ ಅಂತ ಗೊತ್ತಿಲ್ಲ. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ! ಶ್ರೀರಾಮ ಭುವಿಗಿಳಿದ ಭಗವಂತ ಅವನು ಗೆಲ್ಲಲೇಬೇಕು ಆದರೆ ನಂಬೋದು ಹ್ಯಾಗೆ? ಯಾಕೆಂದರೆ ರಾಮ ಸೈನ್ಯ ಸಮೇತ ಅಯೋಧ್ಯೆಯಿಂದ ಬಂದವನಲ್ಲ. ಅವನ ಸೈನ್ಯವೋ ಕಪಿಗಳ ಹಿಂಡು. ಒಂದು ಹೇಳಿದರೆ ಹತ್ತು ಮಾಡುವಂತಹವು. ಹೀಗಿರುವಾಗ ಅವನು ಗೆಲ್ಲಬಹುದು ಅಂತ ನಂಬಿ ಜೈಕಾರ ಹಾಕೋದು ಹೇಗೆ? ಅಕಸ್ಮಾತ್ ರಾವಣ ಗೆದ್ದರೆ ಸುಮ್ಮನೇ ಬಿಟ್ಟಾನೆಯೇ? ಹಾಗಂತ ರಾವಣನಿಗೆ ಜೈಕಾರ ಹಾಕಿ ರಾಮ ಗೆದ್ದರೆ ರಾಮನಿಗೆ ಮುಖ ತೋರ್ಸೋದು ಹೇಗೆ? ಅದಕ್ಕೆ ರಗಳೆಯೇ ಬೇಡ. ಸುಮ್ಮನೇ ಜೈ ಅಂದು ಬಿಡೋದು! ೮೦ ದಿವಸದ ಯುದ್ಧ ಮುಗಿಯಿತು. ರಾವಣನ ಪಕ್ಷದ ಪ್ರಮುಖರೆಲ್ಲ ನೆಲಕಚ್ಚಿದರು. ೮೧ನೇ ದಿವಸ. ಆಗಸ್ಥ್ಯರು ಬಂದು ರಾಮನಿಗೆ ಆದಿತ್ಯ ಹೃದಯ ಮಂತ್ರ ಉಪದೇಶಿಸಿದರು. ಇನ್ನು ರಾಮ ಗೆಲ್ಲೋದು ಖಚಿತ ಎಂದಾದಾಗ ಇಂದ್ರ ರಾಮನಿಗೆ ಸಾರಥಿ ಮಾತಲಿ ಸಹಿತವಾಗಿ ತನ್ನ ರಥ ಕಳುಹಿಸಿಕೊಟ್ಟ. ಅಲ್ಲಿಯ ತನಕ ರಥಿಕ ರಾವಣ, ವಿರಥಿ ರಾಮ! ಅಂದರೆ ಗೆಲ್ಲುವವರ ಪರ ನಿಂತರೆ ಲಾಭಕರ ಎಂಬ ಚಿಂತನೆ!

                ಶಿವಾಜಿಗೂ ಹಾಗೆ. ನಗರದಲ್ಲಾರು ಬೆಂಬಲಿಸಲಿಲ್ಲ. ಹಳ್ಳಿಗಳಿಗೆ ಹೋದ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳನ್ನು ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಛ್ಛಳಿಯದೆ ಉಳಿದು ಬಿಟ್ಟಿತು.

                   "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಹೇಗೆ ಯಶಸ್ವಿಯಾಯಿತು ನೋಡಿ! ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ..... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು.

ನೆನಪು ಮಾಡಿಕೊಳ್ಳಿ,
                   ಒಂದು ದಿನ ಜೀಜಾ ಮಾತೆ ಕೊಂಡಾಣದತ್ತ ಕೈ ತೋರಿಸಿ ಅಲ್ಲಿ ಭಗವಾಧ್ವಜ ಹಾರಬೇಕು ಅಂತ ಹೇಳುತ್ತಾಳೆ. ಮಾತೆಯ ಮಾತೆಂದರೆ ಅದು ಆಜ್ಞೆ ಅಲ್ವಾ? ಆದರೆ ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ಅವನ ಮಗನ ಮದುವೆ. ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮನೆಯಲ್ಲಿ ಮದುವೆ ಇರೋವಾಗ ಯಾರಾದರೂ ಯುದ್ಧಕ್ಕೆ ಹೊರಡೋಕಾಗುತ್ತಾ? ಆದರೆ ತಾನಾಜಿಗೆ ಜೀಜಾ ಮಾತೆಯ ಮನದಿಚ್ಛೆ ತಿಳಿಯಿತು. ಜೀಜಾ ಮಾತೆಯ ಬಳಿ ಬಂದು " ತಾಯಿ ನಿಮ್ಮಾಸೆ ಎನಗಾಜ್ಞೆ" ಎನ್ನುತ್ತಾನೆ. ಆಗ ಜೀಜಾ ಮಾತೆ ಮಗೂ ನಿನ್ನ ಮಗನ ಮದುವೆ ಮುಗಿಯಲಿ ಎಂದಾಗ ಅವ ಹೇಳೊ ಮಾತು ಕೇಳಿ, " ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ಶಿವಾಜಿ ರಾಜ. ನನ್ನ ಮಗ ಅವನಿಗೂ ಮಗನಂತೆಯೇ ತಾನೇ? ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡ್ತೇನೆ." ಹೀಗೆ ರಣವೀಳ್ಯ ಪಡೆದೇ ಬಿಟ್ಟ.

                ಶಿವಾಜಿಯ ಸೈನ್ಯ ಕೊಂಡಾಣವನ್ನು ಗೆದ್ದಿತು. ಆದರೆ ತಾನಾಜಿಯ ಬಲಿದಾನವಾಯಿತು. ಸುದ್ದಿ ತಿಳಿದ ಶಿವಾಜಿಯ ಬಾಯಿಂದ  ಅಶ್ರುಧಾರೆಯೊಂದಿಗೆ ಹೊರಬಂದ ಮಾತು " ಗಢ್ ಆಲಾ, ಪಣ್ ಸಿಂಹ ಗೇಲಾ"- ಕೋಟೆ ಬಂತು ಆದರೆ ಸಿಂಹ ಹೊರಟು ಹೋಯಿತು. ತಾನಾಜಿಗೆ ಆ ಕೋಟೆಯಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಸಿಂಹಗಢ ಅಂತ ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ.

                   ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ?
ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!

೧೩ ವರ್ಷದ ರಾಯಬಾ ಮದುವೆಯಾಗ್ತಿದ್ದ ಹಾಗೆ ತಂದೆಯನ್ನು ಕಳೆದುಕೊಂಡ. ತಂದೆಯ ೧೨ನೇ ದಿವಸದ ಕೆಲಸ ಮುಗಿಸಿ ೧೮ನೇ ದಿವಸ ಅಪ್ಪನ ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕುತ್ತಾನೆ. ತಂದೆಯ ಕೆಲಸ ಪೂರೈಸಲು!

ಯಾವ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ದೇಶಭಕ್ತಿಯ ಶಿಕ್ಷಣ ಕೊಡಲಾಗುತ್ತೆ? ಅದಕ್ಕಾಗಿಯೇ ಸಹ್ಯಾದ್ರಿಯ ಬಳಿ ಬಂದಾಗ ಶಿವಾಜಿ ಕಣ್ಮುಂದೆ ಬರೋದು!

                         ಹೀಗೆ ತನ್ನ ಪರಾಕ್ರಮ, ಬುದ್ಧಿಶಕ್ತಿಯಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಮಹಾರಾಜರು ಸ್ವರಾಜ್ಯಕ್ಕೆ ಜೋಡಿಸಿದರು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಪ್ರತ್ಯಕ್ಷ ಔರಂಗಜೇಬನ ಅರಮನೆ ಹೊಕ್ಕು, ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬರುತ್ತಾರೆ! ತನ್ನ ಕೊಲ್ಲ ಬಂದ ಬಿಜಾಪುರದ ಸೊಕ್ಕಿನ ದೈತ್ಯ ಸರದಾರ ಅಫಜಲ ಖಾನನನ್ನು ಹೆಡೆಮುರಿ ಕಟ್ಟಿದರು. ಕೊನೆಗೊಮ್ಮೆ ೧೬೭೪ರ ಆನಂದ ನಾಮ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿಯ ದಿನ ರಾಯಗಢದಲ್ಲಿ ಸಿಂಹಾಸನವೇರಿ ಛತ್ರಪತಿಯಾಗಿ ನಮ್ಮ ಸಮಾಜದ ಶೃದ್ಧಾಕೇಂದ್ರವಾದರು. ಶಿವಾಜಿಯನ್ನನುಸರಿಸಿ ಹೋದ ಮರಾಠ ಕುದುರೆಗಳು ಮೊಘಲರನ್ನು ಮೆಟ್ಟಿ, ಕಾಬೂಲ್ ನದಿಯ ನೀರನ್ನು ಕುಡಿದು ತಮ್ಮ ಸ್ವರಾಜ್ಯ ದಾಹ ತಣಿಸಿಕೊಳ್ಳುತ್ತವೆ. ಎಂತಹ ರೋಮ ಹರ್ಷಕ ಇತಿಹಾಸವಿದು!

                  ಇದೇ ಸಹ್ಯಾದ್ರಿ ಗರ್ಭದಲ್ಲಿ ದೈತ್ಯರಾದ ಅತಿಬಲ, ಮಹಾಬಲರ ಸಂಹಾರವಾಗಿದೆ.
ಪನ್ನಾಳದ ಪಾವನ ಖಿಂಡಿಯಲ್ಲಿ ಶಿವಾಜಿ ಮಹಾರಾಜರ ರಕ್ಷಣೆಗಾಗಿ ಹಿರಿಯ ಸೇನಾನಿ ಬಾಜೀಪ್ರಭು ದೇಶಪಾಂಡೆ ತನ್ನ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹೋರಾಡಿ ಬಲಿದಾನ ನೀಡಿದ್ದಾನೆ.

                         ನಮ್ಮ ಧರ್ಮ ಸಂಸ್ಕೃತಿಯ ರಕ್ಷಣೆಗಾಗಿ ಗುರು ಗೋವಿಂದ ಸಿಂಹ ತನ್ನ ಪರಿವಾರವನ್ನು ಬಲಿಕೊಟ್ಟು ತನ್ನ ನಂತರದ ಹೋರಾಟಕ್ಕಾಗಿ "ಬಂದಾ ಬೈರಾಗಿ"ಗೆ ಪ್ರೇರಣೆ ನೀಡಿದ್ದು ಸಹ್ಯಾದ್ರಿ ಗರ್ಭದ ನಾಂದೇಡ್ ನಲ್ಲಿ. ಅಲ್ಲೇ ಅವರ ಬಲಿದಾನವಾಯಿತು. ಕಶ್ಯಪ, ಆತ್ರೇಯ, ಭರದ್ವಾಜ, ಗೌತಮ, ಆಗಸ್ಥ್ಯ ಮುಂತಾದ ಋಷಿವರ್ಯರ ಜೊತೆ ಸಂಬಂಧ ಹೊಂದಿರುವ ಈ ಶ್ರೇಷ್ಠ ಪರ್ವತ ಸಹ್ಯಾದ್ರಿಯ ನೆನಪು ಮಾಡಿಕೊಂಡರೆ ಹೃದಯ ಪುಳಕಿತಗೊಳ್ಳುತ್ತೆ. ಅಪ್ರತಿಮ ಸ್ವಾತಂತ್ರ್ಯ ವೀರರಾದ ವಾಸುದೇವ ಬಲವಂತ ಫಡಕೆ, ಛಾಪೇಕರ್ ಸಹೋದರರು, ಸಾವರ್ಕರ್ ಸಹೋದರರು,....ಗೋಡ್ಸೆ ಸಹೋದರರು ಹೀಗೆ ಅನೇಕ ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಸಮರ್ಪಿಸಿದ ಶಿಖರವಿದು. ಅದಕ್ಕಾಗಿಯೇ ನಾವು ಪರ್ವತಗಳಲ್ಲಿ ದೈವತ್ವವನ್ನು ಕಾಣುತ್ತೇವೆ.

ವಂದೇ ಮಾತರಂ

ಸೋಮವಾರ, ಡಿಸೆಂಬರ್ 17, 2012

ಉತ್ತರ ಕೊಡು ಮೌನಮೋಹನ.....!

ಉತ್ತರ ಕೊಡು ಮೌನಮೋಹನ.....!

1. 2009ರಲ್ಲಿ ರಷ್ಯಾದ ಹಳೇ ಹಡಗು(ಗೋರ್ಶ್ಕೋವ್) ಖರೀದಿ ಹಗರಣದ ತನಿಖೆಯ ಫಲಿತಾಂಶ ಏನು?
2. 2009ರಲ್ಲಿ ನಡೆದ ಶಸ್ತ್ರಾಸ್ತ್ರ ಖರೀದಿ ಹಗರಣ ಸರ್ಕಾರದ ಬೊಕ್ಕಸಕ್ಕೆ 9000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿತು. ಅದರ ಆರೋಪಿಗಳನ್ನೇಕೆ ಶಿಕ್ಷಿಸಲಿಲ್ಲ?
3. 2011ರಲ್ಲಿ ಇಸ್ರೇಲ್ ನಿಂದ ರಾ(RAW) ಖರೀದಿ ಮಾಡಿದ 450 ಕೋಟಿ ರೂಪಾಯಿ ಅವ್ಯವಹಾರದ ಕಥೆ ಏನು?
4. ದೇಶದ 71ಶೇಕಡಾ ರಾಜ್ಯಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿಯಲ್ಲಿಲ್ಲ. ಹಾಗಾದರೆ ಆ ಹಣ ಏನಾಗುತ

್ತಿದೆ?
5.ರಾಷ್ಟ್ರದ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ೨ಜಿ ತರಂಗಾಂತರ (2G-spectrum) ಹಗರಣದ ಆರೋಪಿಗಳನ್ನು ಯಾಕೆ ಬಿಟ್ಟಿರಿ?
6. 2012ರ 1.84 ಲಕ್ಷ ಕೋಟಿ ಹಗರಣವನ್ನು ಮಾಡಿ ಮೌನಕ್ಕೆ ಶರಣಾದ ನಿಮ್ಮ ಬಾಯೊಳಗೇನು ಕಲ್ಲಿದ್ದಲು ತುಂಬಿತ್ತೇ?
7. ಜಗತ್ತಿನ ಎದುರು ಭಾರತದ ಮಾನ ಕಳೆದ ಕಾಮನ್ ವೆಲ್ತ್ ಹಗರಣದ ಆರೋಪಿಗಳಿಗೆ ಕಲ್ಲು ಸಕ್ಕರೆ ಕೊಟ್ಟಿದ್ದೀರಲ್ಲ, ಭಾರತ ಏನು ನಿಮ್ಮಪ್ಪನ ಆಸ್ತಿಯೇ?
8. 2002ರಲ್ಲಿ ಅಟಲ್ ಪ್ರಾರಂಭಿಸಿದ ರಾಷ್ಟ್ರೀಯ ನದಿ ಜೋಡಣೆ ಯೋಜನೆಯನ್ನು 2004ರಲ್ಲಿ ಅಸ್ತಿತ್ವಕ್ಕೆ ಬಂದ ನಿಮ್ಮ ಸರಕಾರ ಕತ್ತು ಹಿಸುಕಿ ಕೊಂದಿತಲ್ಲ. ಕಾರಣವೇನು?
9. ವಾಜಪೇಯಿ ಸರಕಾರಕ್ಕೆ ಹೆಸರು ಬರುವುದೆಂದು ಸುವರ್ಣಚತುಷ್ಪಥ ಯೋಜನೆಯನ್ನು ಮಕಾಡೆ ಮಲಗಿಸಿದಿರಲ್ಲ. ಯಾಕೆ?
10. ನೆರೆಯ ದೇಶಗಳ ಕರೆನ್ಸಿ ಸ್ಥಿರವಾಗಿರುವಾಗ ಭಾರತದ ರೂಪಾಯಿ ಮಾತ್ರ ಅಪಮೌಲ್ಯ ಆಗಲು ಕಾರಣವೇನು?
11. ಭಯೋತ್ಪಾದನೆಗೆ ಹವಾಲ ಹಣ ಪೂರೈಕೆಯಾಗುತ್ತದೆ ಎನ್ನುವ ನೀವು ಅದನ್ನು ನಿಲ್ಲಿಸಲು ಯಾಕೆ ಕ್ರಮ ಕೈಗೊಳ್ಳುವುದಿಲ್ಲ?
12. ಪ್ರತಿವರ್ಷ ಸಹಸ್ರ ಸಂಖ್ಯೆಯ ಜನರ ಜೀವ ತೆಗೆಯುತ್ತಿರೋ ನಕ್ಸಲರ ನಿಗ್ರಹಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
13. ಗುಜರಾತ್ನಲ್ಲಿ 11% ಕೃಷಿ ಕ್ಷೇತ್ರದಲ್ಲಿ ಏರಿಕೆಯಾಗಿರುವಾಗ ಇಡೀ ದೇಶದಲ್ಲಿ ಕೇವಲ 1% ಏರಿಕೆಯಾಗುತ್ತಿದೆ ಎನ್ನುತ್ತೀರಲ್ಲ ನಿಮ್ಮ ಪಟ್ಟವನ್ನು ಅಭಿವೃದ್ಧಿಯ ಹರಿಕಾರ ಮೋದಿಯ ಕೈಗೆ ಯಾಕೆ ಕೊಡಬಾರದು?
14. ರಾಷ್ಟ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡುಬಂದ ಸರಕಾರ ಮತ್ತು ಸೇನೆಯ ನಡುವಿನ ಸಂಘರ್ಷಕ್ಕೆ ನಿಮ್ಮ ದೇಶದ್ರೋಹತನವೇ ಕಾರಣವಲ್ಲವೇ?
15. ವಿದ್ಯುತ್ ಉತ್ಪಾದನೆಯಲ್ಲಿ 40% ಉತ್ಪಾದನೆ ಸ್ಥಗಿತವಾಗಿದೆಯಲ್ಲ. ಏನು ಕ್ರ್ಮ ಕೈಗೊಂಡಿರಿ?
16. ಅಮರನಾಥ ಯಾತ್ರೆಯನ್ನು 38 ದಿನಗಳಿಗಿಳಿಸಿ ಹಝ್ ಯಾತ್ರೆಗೆ ಸಹಾಯಧನ ಹೆಚ್ಚಿಸಿದ ನಿಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕೆ ಏನು ಹೇಳಬೇಕು?
17. ಜಗತ್ತು ಕಂಡ ಬಹುದೊಡ್ಡ ಹಗರಣವಾದ ಯುರೇನಿಯಮ್ ಹಗರಣ ಯಾಕೆ ಮುಚ್ಚಿ ಹೋಯಿತು?
18. ನೀವೆ ಹೇಳಿದ ವೃತ್ತಿ ಕೌಶಲ ತರಬೇತಿ ಕೇಂದ್ರಗಳು ಎಲ್ಲಿ ಹೋದವು?
19. ಅಮರ್ ಜವಾನ್ ಸ್ಮಾರಕ ಮುರಿದ ಆರೋಪಿಗಳನ್ನು ಹಿಡಿದ ಡಿಸಿಪಿ ಪ್ರಮೋದ್ ತಾವ್ಡೆಗೆ " ಸುಭಾಷ್ ಚಂದ್ರ ಬೋಸ್ ತರಹ ಕನ್ನಡಕ ಹಾಕಿದ ತಕ್ಷಣ ಬಹಳ ಶಾಣ್ಯಾ ಎಂದು ಕೊಳ್ಳಬೇಡ, ಬಾಸ್ಟರ್ಡ್. ಬಿಟ್ಟು ಬಿಡು ಅವರನ್ನು" ಅಂತ ಬೈದ ಕಮೀಷನರ್ ಅರೂಪ್ ಪಟ್ನಾಯಕ್ ನಿಗೆ ಆರೋಪಿಗಳನ್ನು ಬಂಧಿಸದಂತೆ ಆರ್ಡರ್ ಮಾಡಿದ ನಿಮ್ಮ ಸರಕಾರ ಏನು ಪಾಕಿಸ್ತಾನದಿಂದ ಚುನಾಯಿತವಾದದ್ದೇ?
20. ಇಟಲಿಯ ಪರಿಚಾರಿಕೆಯ ಮಾತು ಕೇಳಿಕೊಂಡು ನಾಯಿಯ ಹಾಗೆ ಅವಳ ಹಿಂದೆ ಬಾಲ ಅಲ್ಲಾಡಿಸುತ್ತೀಯಲ್ಲ, ಸಿಖ್ಖರ ಸ್ವಾಭಿಮಾನದ ಒಂದು ಅಂಶವಾದರೂ ನಿನ್ನಲ್ಲಿದೆಯಾ? ಭಾರತೀಯ ಅಂತ ನಿನ್ನನ್ನು ಹೇಗೆ ಕರಿಯೋದು?

ಈ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎನ್ನಲು ನಿನಗೆ ನಾಚಿಕೆಯಾಗುವುದಿಲ್ಲ! ಅಡ್ವಾಣಿಜೀಗೆ ನಿಮ್ಮ ಜ್ಯೋತಿಷಿಯನ್ನು ಬದಲಿಸಿಕೊಳ್ಳಿ ಅಂತ ವ್ಯಂಗ್ಯ ಮಾಡಲು ನಿನ್ನ ನಾಲಗೆ ಹೊರಳುತ್ತದೆ! ಸಾವಿರ ಉತ್ತರಗಳಿಗಿಂತ ನನ್ನ ಮೌನ ಮೇಲು ಎಂದ ಹಾಗಲ್ಲ, ಉತ್ತರ ಕೊಡು ಮೌನಮೋಹನ!

ಶನಿವಾರ, ಡಿಸೆಂಬರ್ 15, 2012

ಭಾರತ ದರ್ಶನ-೨೨







                       ಎರಡೂವರೆ ಶತಮಾನಗಳ ಕಾಲ ಜಗತ್ತಿನ ಕಣ್ಣು ಕೋರೈಸಿದ ಸ್ವರ್ಣಸಾಮ್ರಾಜ್ಯ ವಿಜಯನಗರದ ಹಂಪೆ. ಸಹ್ಯಾದ್ರಿಯ ಗರ್ಭದಲ್ಲಿ ಹೊಸಪೇಟೆಯ ಬಳಿ ಈ ಐತಿಹಾಸಿಕ ಸ್ಥಳವಿದೆ. ೧೫೬೫ರಲ್ಲಿ ವಿಜಯನಗರದ ಪತನವಾದಾಗ ವಿರೋಧಿ ಮತಾಂಧರು ನಡೆಸಿದ ಕೃತ್ಯ ಎಂತಹ ಕ್ರೂರಿಗಳನ್ನು ಕೂಡಾ ನಾಚಿಸುವಂತಹದ್ದು. ಆಗ ನಡೆದ ಮನುಕುಲದ ಮನಕಲಕುವ ಲೂಟಿ ಮತ್ತು ಪೈಶಾಚಿಕ ಕೃತ್ಯಗಳಿಂದ ವಿರೂಪಾಕ್ಷ ಮಂದಿರ ಅದೃಷ್ಟವಶಾತ್ ಪಾರಾಯಿತು. ಪುಣ್ಯ ಸಲಿಲೆ ತುಂಗಭದ್ರೆ ವಿರೂಪಾಕ್ಷನ ಪಾದ ಪ್ರೋಕ್ಷಿಸುತ್ತಿದ್ದಾಳೆ.

                       ರಾಮಾಯಣದ ಸುವರ್ಣ ಸಂಪುಟಕ್ಕೆ ಮೆರುಗು ನೀಡಿದ ತಾಣ ಹಂಪೆ. ಮತಂಗ ಮುನಿಯ ಆಶ್ರಮ ಇಲ್ಲಿನ ಪಂಪಾ ಸರೋವರದ ಸಮೀಪದಲ್ಲಿತ್ತು. ಮಹಾಪರಾಕ್ರಮಿ, ರಾವಣನನ್ನೇ ನಡುಗಿಸಿದ ವಾನರೇಂದ್ರ ವಾಲಿಯ ಕಿಶ್ಕಿಂಧ ಇರುವುದು ಇಲ್ಲೇ. ಜಿತೇಂದ್ರಿಯ, ರಾಮಬಂಟ, ರಾಮಾಯಣದ ಅನರ್ಘ್ಯರತ್ನ ಹನುಮನ ಅಂಜನಾದ್ರಿಯೂ ಇಲ್ಲೇ ಇದೆ. ವಾಲಿಯಿಂದ ತಿರಸ್ಕರಿಸಲ್ಪಟ್ಟು, ಹೆಂಡತಿಯನ್ನು ಕಳೆದುಕೊಂಡ ಸುಗ್ರೀವ ದುಃಖದಲ್ಲಿದ್ದ ಸ್ಥಳ ಋಷ್ಯಮೂಕ ಇದೇ ಪರಿಸರದಲ್ಲಿದೆ. ಇಲ್ಲೇ ಪಂಪಾ ಸರೋವರದ ಬಳಿ ರಾಮಾಂಜನೇಯರ ಸಮ್ಮಿಲನವಾಯಿತು. ಹನುಮ ಅಂದಿನಿಂದ ಪುರುಷೋತ್ತಮನ ದಾಸನಾದ. ಮಾತ್ರವಲ್ಲ ಅಗ್ನಿಸಾಕ್ಷಿಯಾಗಿ ರಾಮ ಸುಗ್ರೀವರ ಸಖ್ಯ ಮಾಡಿಸಿದ. ಶ್ರೀರಾಮನಿಗಾಗಿ ವರುಷಗಳ ಪರ್ಯಂತ ಕಾಯುತ್ತ ಅವನಿಗಾಗಿ ಅವನದೇ ಧ್ಯಾನದಲ್ಲಿ ಆತ್ಮಯಜ್ಞ ಮಾಡಿದ ಶಬರಿಯ ಪವಿತ್ರ ತಾಣವಿದು. ಸಪ್ತಸಾಲಭೇದ, ವಾಲಿವಧೆ ಮುಂತಾದ ಪ್ರಸಂಗ ನಡೆದ ಸ್ಥಳ. ವಿರೂಪಾಕ್ಷ, ವಿಜಯ ವಿಠ್ಠಲರು ನೆಲೆ ನಿಂತ ಅದ್ಭುತ ಸಮನ್ವಯ ಕ್ಷೇತ್ರ.

                        ಇಂತಹ ಪವಿತ್ರ ಸ್ಥಳದಲ್ಲಿ ಹರಿಹರ ಬುಕ್ಕ ದೇವರು ಮಹಾನ್ ತಪಸ್ವಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಶಾಲ ಸಾಮ್ರಾಜ್ಯವನ್ನು ಕಟ್ಟಿದರು. ಈ ಸಾಮ್ರಾಜ್ಯ ವಿಜಯಶಾಲಿ ಹಿಂದುತ್ವದ ಧ್ವಜವನ್ನು ಬಾನೆತ್ತರದಲ್ಲಿ ಮುಕ್ತವಾಗಿ ಹಾರುವಂತೆ ಮಾಡಿತು. ಮುಂದೆ ಎರಡೂವರೆ ಶತಮಾನಗಳ ಕಾಲ ಈ ಪ್ರಭುತ್ವ ಧರ್ಮವೈರಿಗಳಿಗೆ ದಕ್ಷಿಣ ಭಾರತದಲ್ಲಿ ತಲೆ ಎತ್ತಲೂ ಅವಕಾಶ ಕೊಡಲಿಲ್ಲ. ಇಡೀ ರಾಷ್ಟ್ರವನ್ನು ನುಂಗಲಿಕ್ಕೆ ಕಾಡ್ಗಿಚ್ಚಿನಂತೆ ಬಂದ ಇಸ್ಲಾಮಿ ಮತಾಂಧರನ್ನು ಸಾಮ್ರಾಜ್ಯ ಚತುಃಸೀಮೆಯ ಹೊರಗೇ ಎದುರಿಸಿತು. ಇವತ್ತು ದಕ್ಷಿಣದಲ್ಲಿ ಉಳಿದಿರಬಹುದಾದ ಹಿಂದುತ್ವ, ಧರ್ಮಪೀಠಗಳು, ಸ್ಥಾಪತ್ಯ, ಕಲಾವೈಭವಗಳಿಗೆ ಇಡೀ ರಾಷ್ಟ್ರ ವಿಜಯನಗರ ಸಾಮ್ರಾಜ್ಯಕ್ಕೆ ಋಣಿಯಾಗಿರಬೇಕು.

                              ಸಹ್ಯಾದ್ರಿ ಗರ್ಭದ ಮಂಡ್ಯದ ಮೇಲುಕೋಟೆ ರಾಮಾನುಜಾಚಾರ್ಯರ ಲೀಲಾಭೂಮಿ. ಅವರು ಚೋಳರಾಜನ ಕಿರುಕುಳದಿಂದ ನೊಂದು ಮೇಲುಕೋಟೆಗೆ ಬಂದವರು. ೧೩ ವರ್ಷಗಳ ಕಾಲ ಮೇಲುಕೋಟೆ ಅವರಿಗೆ ಆಶ್ರಯ ಕೊಟ್ಟಿತು. ಅಲ್ಲೇ ಅವರು ಚೆಲುವ ನಾರಾಯಣನನ್ನು ಪ್ರತಿಷ್ಠಾಪಿಸಿದರು. ಅವರ ಸಂಪರ್ಕದಿಂದ ಜೈನ ದೊರೆ ಬಿಟ್ಟಿದೇವ ವಿಷ್ಣುವರ್ಧನನಾದ. ಆ ದೊರೆ ವಿಷ್ಣುವರ್ಧನ ಬೇಲೂರು ಚೆನ್ನಕೇಶವ ದೇವಸ್ಥಾನವನ್ನು ಕಟ್ಟಿಸಿದ. ಶ್ರೀ ರಾಮಾನುಜರು ಸಾಮಾಜಿಕ ಸಾಮರಸ್ಯ ಮತ್ತು ದಲಿತರನ್ನು ಮೇಲಕ್ಕೆತ್ತಲು ಒತ್ತಾಸೆ ನೀಡಿದರು. ಭಾರ್ಗವ ಕ್ಷೇತ್ರವಾದ ಉಡುಪಿ ಕೃಷ್ಣನ ಬೀಡು. ದ್ವೈತ ಪ್ರತಿಪಾದಕ ಮಧ್ವರು ಉಡುಪಿಯ ಪಾಜಕದಲ್ಲಿ ಜನಿಸಿದರು. ಅವರಿಂದೊದಗಿದ ಅಷ್ಠಮಠಗಳು ಸಂಸ್ಕೃತಿಯ ಉಳಿಸಲೋಸುಗ ಶ್ರಮಿಸುತ್ತಿವೆ.

                      ಸಹ್ಯಾದ್ರಿಯ ದಕ್ಷಿಣಭಾಗವನ್ನು ಮಲಯಾ ಅಂತ ಕರೆಯುತ್ತೇವೆ. ಅದು ಶ್ರೀಗಂಧದ ನೆಲೆವೀಡು. ಆದ್ವೈತ, ವೇದಾಂತಗಳ ಮೂಲಕ ಬೌಧ್ಧ ಆಕ್ರಮಣದಿಂದ ಹಿಂದು ಧರ್ಮವನ್ನು ಕಾಪಾಡಿ, ಧರ್ಮದ ಪುನರುತ್ಥಾನ ಮಾಡಿ, ಭಾರತದಾದ್ಯಂತ ಸಂಚರಿಸಿ ಅಲ್ಲಲ್ಲಿ ಶಕ್ತಿ, ಹರಿ, ಹರ ಪೀಠಗಳನ್ನು ನಿರ್ಮಿಸಿ ಭಾರತವನ್ನು ಸಮನ್ವಯ ಹಾಗೂ ಏಕತ್ರಗೊಳಿಸಿದ ಶಂಕರಾಚಾರ್ಯರು ಮಲಯಾದ ಗರ್ಭವಾದ ಕಾಲಟಿಯಲ್ಲೇ ಜನಿಸಿದರು. ಇಲ್ಲಿನ ಇನ್ನೊಂದು ಕ್ಷೇತ್ರ ವರ್ಕಳ. ನಾರಾಯಣ ಗುರುಗಳ ಕರ್ಮಭೂಮಿ. ವಿಕೃತ ವರ್ಣವ್ಯವಸ್ಥೆಗೆ ಸಿಲುಕಿ ನರಳುತ್ತಿದ್ದ ಸಮಾಜವನ್ನು ಧರ್ಮ, ಶಿಕ್ಷಣ, ಸಂಸ್ಕಾರ ನೀಡಿ ಮೇಲಕ್ಕೆತ್ತಿ ಕೇರಳವನ್ನು ಕಾಪಾಡಿದ ಮಹಾಪುರುಷ ಆತ. ಮಲಯಾದ ಗರ್ಭದಲ್ಲೇ ಇರುವ ಬೆಟ್ಟ ಶಬರಿಮಲೆ. ರಾಮನಿಗಾಗಿ ಆತ್ಮಯಜ್ಣ್ಯ ಮಾಡಿದ ಮಾತೆ ಶಬರಿಯ ಪಾದ ಸ್ಪರ್ಷದಿಂದ ಪುನೀತವಾದ ಇದರ ನೆತ್ತಿಯಲ್ಲೇ ಹರಿಹರ ಸುತ ಅಯ್ಯಪ್ಪನ ನೆಲೆ.

( ಮುಂದಿನ ಭಾಗ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜನ ಹುಟ್ಟು, ಕೆಚ್ಚು, ಹೆಚ್ಚುಗಳಿಗೆ ಸಾಕ್ಷಿಯಾದ ಸಹ್ಯಾದ್ರಿಯ ಸೀಮೆಯ ಬಗ್ಗೆ.)

ಸೋಮವಾರ, ಡಿಸೆಂಬರ್ 10, 2012

ಭಾರತ ದರ್ಶನ-೨೧



              ಹಿಮಾಲಯದಲ್ಲಿ ಇನ್ನೂ ಅನೇಕ ಕ್ಷೇತ್ರಗಳಿವೆ. ಪಶುಪತಿನಾಥ, ಮುಕ್ತಿನಾಥ, ಸ್ವಯಂಭೂನಾಥ, ಮತ್ಸ್ಯೇಂದ್ರನಾಥ, ವೈಷ್ಣೋದೇವಿ, ಹೇಮಕುಂಡ...ಹೀಗೆ ಅಸಂಖ್ಯ ಪವಿತ್ರ ಕ್ಷೇತ್ರಗಳು. ಪಾರ್ವತಿಯ ಸಮ್ಮುಖದಲ್ಲಿ ಪರಶಿವ ಪಾರ್ಥನಿಗೆ ಪಾಶುಪತ ನೀಡಿದ ಪವಿತ್ರ ಕ್ಷೇತ್ರ ಪಶುಪತಿನಾಥ.

          ಕೇವಲ ತೀರ್ಥಕ್ಷೇತ್ರ ಮಾತ್ರವಲ್ಲ, ಹವಾಮಾನದ ದೃಷ್ಠಿಯಿಂದಲೂ ಹಿಮಾಲಯ ನಮಗೆ ಮಹದುಪಕಾರ ಮಾಡಿದೆ. ಕೆಲವೇ ವರ್ಷಗಳ ಹಿಂದೆ ರಷ್ಯಾದಲ್ಲಿ ಅಣುವಿಕಿರಣ ಸೋರಿಕೆ ಆದಾಗ ಭಾರತವನ್ನು ಆ ವಿಷಾನಿಲದಿಂದ ಕಾಪಾಡಿದ್ದು ಇದೇ ಹಿಮಾಲಯ. ದಕ್ಷಿಣ ಸಮುದ್ರದಿಂದ ಬರುವ ಗಾಳಿಯನ್ನು ಹಿಡಿದಿಟ್ಟು ವಿಪುಲ ಜಲವೃಷ್ಟಿಗೈಯ್ಯುತ್ತದೆ. ಹಿಮಾಲಯದಿಂದ ಹರಿದು ಬರುವ ನದಿಗಳಿಂದಾಗಿ ಭಾರತ ಸುಜಲಾಂ ಸುಫಲಾಂ ಆಗಿದೆ. ಹೀಗಾಗಿಯೇ ಹಿಮಾಲಯ ಅಂದ ತಕ್ಷಣ ಈ ನಾಡಿನ ಪ್ರತಿ ಮಗುವಿನ ವೀಣಾ ತಂತಿಯನ್ನು ಸ್ಪರ್ಷ ಮಾಡಿದ ಹಾಗಾಗುತ್ತೆ!

        ಹಿಮಾಲಯದಂತೆಯೇ ದಕ್ಷಿಣದ ರಾಜ್ಯಗಳಿಗೆ ಸಹಾಯಕವಾಗಿ ನಿಂತಿರುವುದು ಸಹ್ಯಾದ್ರಿ. ಕರ್ನಾಟಕಕ್ಕೆ ಸಹ್ಯಾದ್ರಿಯ ಕೊಡುಗೆ ಅಪಾರ. ನಮ್ಮ ದೇಶದ ಪಶ್ಚಿಮದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿ ನಿಂತಿರುವ ಭವ್ಯ ಗಿರಿಗಹ್ವರ ಸಹ್ಯಾದ್ರಿ. ಕೊಂಕಣ ಸೀಮೆಯ ರತ್ನಾಗಿರಿಯಿಂದ ಮೌನ ತಪಸ್ವಿನಿ ಕನ್ಯಾಕುಮಾರಿಯವರೆಗೆ ತಲೆ ಎತ್ತಿ ನಿಂತ ಭವ್ಯ ಗಿರಿ ಪೀಠವಿದು. ಸಪ್ತಗಿರಿಗಳಲ್ಲೊಂದಾಗಿ ನಮಗೆ ಪ್ರಾತಸ್ಮರಣೀಯವಾಗಿರುವ ಇದು ಹಿಮಾಲಯದ ನಂತರದ ಅತೀ ದೊಡ್ಡ ಪರ್ವತ.

              ತಾಪಿ ನದೀ ತೀರದಿಂದ ಕುಮಾರಿ ಪೀಠದವರೆಗೆ ಹಬ್ಬಿರುವ ಈ ಮಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ತಾಪಿಯಿಂದ ದಕ್ಷಿಣಕ್ಕಿರುವ ೮೦೦ ಮೈಲು ಉದ್ದದ ಸೀಮೆಯೇ ಪ್ರಧಾನ ಸಹ್ಯಾದ್ರಿ. ನಂತರ ಸುಮಾರು ೧೬ ಮೈಲು ಉದ್ದದ ಪಾಲ್ಘಾಟ್ ಕಣಿವೆ. ನಂತರ ಸುಮಾರು ೨೦೦ ಮೈಲು ಉದ್ದದ ಮಲಯ ಪರ್ವತ ಶ್ರೇಣಿ. ಸಹ್ಯಾದ್ರಿ ಶಿಖರಗಳ ಸರಾಸರಿ ಎತ್ತರ ೪೦೦೦ ಅಡಿಗಳು. ಮಹಾರಾಷ್ಟ್ರದ ಕಳುಸುಬಾಯಿ ಅನ್ನೋ ಶಿಖರ ೫೪೨೦ ಅಡಿ ಎತ್ತರವಿದೆ. ಕರ್ನಾಟಕದಲ್ಲಿ ಸಹ್ಯಾದ್ರಿ ಶಿಖರಗಳು ಸುಮಾರು ಆರರಿಂದ ಎಂಟು ಸಾವಿರ ಅಡಿ ಎತ್ತರವಿದ್ದಾವೆ. ನೀಲಗಿರಿ ನಡುವಿನ ದೊಡ್ಡ ಬೆಟ್ಟ ೮೧೨೫ ಅಡಿ ಎತ್ತರವಿದೆ.

            ಸಹ್ಯಾದ್ರಿಯ ಬ್ರಹ್ಮಗಿರಿಯ ತ್ರ್ಯಂಬಕ ಕ್ಷೇತ್ರದಲ್ಲಿ ಗೌತಮ ಮುನಿಯ ತಪಸ್ಸಿನಿಂದಾಗಿ ಗೋದಾವರಿ ಜನಿಸಿದ್ದಾಳೆ. ಕೃಷ್ಣೆ, ಭೀಮೆಯರೂ ಸಹ್ಯಾದ್ರಿಯ ಸಲಿಲೆಗಳೇ. ಇವುಗಳೊಂದಿಗೆ ತುಂಗಾ, ಭದ್ರಾ, ಕಾಳಿ, ಶರಾವತಿ, ವರದಾ, ಕಾವೇರಿ, ಘಟಪ್ರಭಾ, ಮಲಪ್ರಭಾ, ಗಂಗಾವತಿ, ವೇದಾವತಿ, ವಾಶಿಷ್ಠಿ, ನೇತ್ರ, ನಂದಿನಿ, ನಳಿನಿ, ಸೀತಾ, ಕುಮಾರಧಾರ, ಮಾಲತಿ, ಅರ್ಕಾವತಿ, ಮಾಂಡವಿ, ಹೇಮಾ, ಕಪಿಲಾ, ಸುವರ್ಣಾಮುಖಿ...ಎಲ್ಲವೂ ಸಹ್ಯಾದ್ರಿಯ ವರಪ್ರಸಾದ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಆರು ಸಹ್ಯಾದ್ರಿಯ ಮಡಿಲಲ್ಲಿವೆ.

         ಇದರ ಗರ್ಭದಲ್ಲೇ ಪಂಚವಟೀ ಇದೆ.  ಅದೇ ಈಗಿನ ನಾಸಿಕ್. ರಾಮ ಸೀತಾ, ಲಕ್ಷ್ಮಣ ಸಮೇತನಾಗಿ ಹದಿನಾಲ್ಕು ವರ್ಷ ವನವಾಸದ ಬಹುಪಾಲು ಭಾಗವನ್ನು ಕಳೆದ ಪುಣ್ಯಭೂಮಿಯಿದು. ನಾಸಿಕ ಅಂದರೆ ಮೂಗು. ರಾಮನಾಜ್ಞೆಯ ಮೇರೆಗೆ ಮರ್ಯಾದೆ ಮೀರಿ ವ್ಯವಹರಿಸಿದ ಹೆಣ್ಣು, ರಾಕ್ಷಸಿ, ಶೂರ್ಪನಖಿಯ ಮೂಗನ್ನು ಸೌಮಿತ್ರಿ ಕತ್ತರಿಸಿದ ಜಾಗವಿದು. ತನ್ಮೂಲಕ ಕೋಪಗೊಂಡು ಎರಗಿದ ಖರ ದೂಷಣರನ್ನು ರಾಮ ಯಮಪುರಿಗಟ್ಟಿದ ಕ್ಷೇತ್ರವಿದು. ಮಾಯಾಜಿಂಕೆಯಾಗಿ ಬಂದ ಮಾರೀಚ ಮುಕ್ತಿ ಹೊಂದಿದ ಜಾಗ. ಲೋಕ ಮಾತೆ ಸೀತೆಯನ್ನು ಖಳ ರಾವಣ ಅಪಹರಿಸಿ ರಾಮಾಯಣಕ್ಕೆ ತಿರುವು ನೀಡಿದ ಸ್ಥಳ. ದಾಟಬಾರದ, ದಾಟಿದಲ್ಲಿ ಅಪಾಯ ಖಚಿತವಾದ ಲಕ್ಷ್ಮಣ ರೇಖೆ ಸೃಷ್ಠಿಯಾದ ಜಾಗವಿದು. ಮಾತೆ ಸೀತೆಯ ಮಾನ ರಕ್ಷಣೆಗೆ ಪಕ್ಷಿರಾಜ ಜಟಾಯು ಪ್ರಾಣ ಪಣವಿಟ್ಟು ಹೋರಾಡಿದ ಪವಿತ್ರ ಭೂಮಿ. ಭೂಮಿಗಿಳಿದ ಭಗವಂತ ಪತ್ನಿಯನ್ನು ಕಳಕೊಂಡು ಕಣ್ಣೀರ ಕೋಡಿ ಹರಿಸಿದ ಜಾಗ.

            ಇಲ್ಲೇ ಹತ್ತಿರದಲ್ಲಿ ಗೌತಮರ ತಪೋಭೂಮಿ ಇದೆ. ಗೋದೆಯ ಉಗಮ ಇಲ್ಲೇ. ಶಿವ ತ್ರಯಂಬಕೇಶ್ವರನಾಗಿ ನೆಲೆ ನಿಂತ ಸ್ಥಳ. ಕಟಿಯಲ್ಲಿ ಕರವಿಟ್ಟು ಇಟ್ಟಿಗೆಯ ಮೇಲೆ ನಿಂತ ಪಾಂಡುರಂಗನ ಪಂಡರಾಪುರ ಚಂದ್ರಭಾಗ ತೀರದಲ್ಲಿದೆ. ಗೋದೆಯ ದಡದಲ್ಲಿ ಪ್ರತಿಷ್ಠಾನಪುರ ಈಗಿನ ಪೈಠಣ್ ಇದೆ. ಶಕಕರ್ತ ಶಾಲಿವಾಹನನ ರಾಜಧಾನಿ ಇದು. ಎಂಟು ಶತಮಾನಗಳ ಕಾಲ ಸಾಗರೋತ್ತರವಾಗಿ ಭಾರತದ ಸಂಸ್ಕೃತಿಯನ್ನು ಹಬ್ಬಿಸಿ ಮೆರೆಯಿತದು. ಸಮರ್ಥ ರಾಮದಾಸರ ತಪೋಭೂಮಿ ಸಜ್ಜನಘಢ, ಕೊಲ್ಹಾಪುರದ ಮಹಾಲಕ್ಷ್ಮಿ, ಅಜಂತಾ, ಎಲ್ಲೋರಾ, ಅಷ್ಟವಿನಾಯಕ ಕ್ಷೇತ್ರಗಳು ಹೀಗೆ ಅಸಂಖ್ಯ ಕ್ಷೇತ್ರಗಳು ಸಹ್ಯಾದ್ರಿಯ ಗರ್ಭದಲ್ಲಿವೆ. ಸಹ್ಯಾದ್ರಿಯ ತಪ್ಪಲ ಬಸವನ ಬಾಗೇವಾಡಿಯಲ್ಲಿ "ಲಿಂಗ ಮಧ್ಯೇ ಜಗತ್ಸರ್ವಂ ಸತ್ಯಂ ಶಿವಂ ಸುಂದರಂ. ಕಾಯಕವೇ ಕೈಲಾಸ " ಎಂದ ಅಣ್ಣ ಬಸವಣ್ಣನ ಜನನವಾಯಿತು.

ಶನಿವಾರ, ಡಿಸೆಂಬರ್ 8, 2012

ಎದ್ದೇಳು ಅರ್ಜುನ.....!

ಎದ್ದೇಳು ಅರ್ಜುನ.....!


ಅಗ್ನಿದಃ ಗರದಶ್ಚೈವ ಶಸ್ತ್ರಪಾಣಿರ್ಧನಾಪಹಃ |
ಕ್ಷೇತ್ರ-ಧಾರಾ-ಹರಶ್ಚೈವ ಷಡೇತೇ ಆತತಾಯಿನಃ ||

                  " ಪರರ ಆಸ್ತಿ-ಪಾಸ್ತಿಗೆ ಬೆಂಕಿಯಿಕ್ಕುವವನು, ವಿಷವಿಕ್ಕುವವನು, ಆಯುಧ ಹಿಡಿದ ಹಂತಕನು, ಇತರರ ಸಂಪತ್ತನ್ನು ಅಪಹರಿಸುವವನು, ಪರರ ಭೂಮಿಯನ್ನು ಕಬಳಿಸುವವನು, ಮತ್ತು ಪರ ಸ್ತ್ರೀಯನ್ನು ಹೊತ್ತೊಯ್ಯುವವನು ಹೀಗೆ ಆರು ಬಗೆಯ ದುರ್ಜನರಿರುತ್ತಾರೆ. ಇಂತಹವರನ್ನು ಕಂಡಲ್ಲಿಯೇ "ಜಹಿ, ಮಾ ವ್ಯತಿಷ್ಠ" (ಕೊಲ್ಲು, ಹಿಂಜರಿಯದಿರು) ಎನ್ನುತ್ತವೆ ಧರ್ಮಶಾಸ್ತ್ರಗಳು.

ಆದರೆ ನಾವಿದನ್ನು ಪಾಲಿಸುತ್ತಿದ್ದೇವೆಯೇ?

                        ನಮ್ಮ ಆಸ್ತಿಯನ್ನು ಕಬಳಿಸಿದ ಚೀನಿಯರನ್ನು ಕೊಲ್ಲುವುದಿರಲಿ, ರತ್ನಗಂಬಳಿ ಹಾಸಿ ಅವರ ಉತ್ಪಾದನೆಗಳನ್ನೇ ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಬಳಸುವ ಮೂಲಕ ಮರ್ಯಾದೆಯನ್ನೇ ಬಿಟ್ಟು ಬಿಟ್ಟಿದ್ದೇವೆ. ಸಾಮಾನ್ಯನೊಬ್ಬನ ಮೊಬೈಲ್ ಫೋನ್ ನಿಂದ ಹಿಡಿದು ರಕ್ಷಣಾ ವಿಭಾಗ, ಸ್ಯಾಟಲೈಟ್ ಹೀಗೆ ಎಲ್ಲಾ ಕ್ಷೇತ್ರಗಳನ್ನು ಅವು ಆವರಿಸಿಕೊಂಡಿದ್ದು, ಅವುಗಳಲ್ಲಿರುವ ಸಿದ್ಧ ಪ್ರೋಗ್ರಾಮ್ ಗಳು ಸಮಯಕ್ಕೆ ಸರಿಯಾಗಿ ಚಿಗಿತುಕೊಂಡರೆ ನಮ್ಮ ಅಂತರ್ಜಾಲ(ಇಂಟರ್ನೆಟ್), ಮೊಬೈಲ್ ಆದಿಯಾಗಿ ಎಲ್ಲಾ ಸಂವಹನ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಚೀನೀ ಸೇನೆ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಮೇಲೆರಗಿದರೆ ಆ ಭಗವಂತನೇ ಹಿಂದೂಸ್ಥಾನವನ್ನು ರಕ್ಷಿಸಬೇಕು!

                      ನಮ್ಮ ಮಾಜಿ ಪ್ರಧಾನಿ, ಸಚ್ಚರಿತ, "ಪರಿಶುದ್ಧ ರಾಜಕಾರಣಿ" ದಿವಂಗತ ಶಾಸ್ತ್ರಿಯವರಿಗೆ ವಿಷವಿಕ್ಕಿದ, ಭಯೋತ್ಪಾದನೆಯ ಆಯುಧ ಹಿಡಿದು ಸದಾ ನಮ್ಮನ್ನು ಬೆದರಿಸುತ್ತಿರುವ, ನಮ್ಮ ಆಸ್ತಿ ಪಾಸ್ತಿ, ಸಂಪತ್ತೆಲ್ಲವನ್ನೂ ನುಂಗಿ ನೀರು ಕುಡಿದಿರುವ ಪಾಕಿಸ್ತಾನ ಇನ್ನೂ ಇದೆಯಲ್ಲ!
ನಮ್ಮ ಸ್ತ್ರೀಯರನ್ನು ಅಪಹರಿಸುತ್ತಿರುವ ಜಿಹಾದಿಗಳನ್ನು ಜೀವಂತ ಬಿಡುತ್ತಿದ್ದೇವಲ್ಲಾ?

                        ನಮ್ಮ ಭೂಮಿಯನ್ನು ಕಬಳಿಸುತ್ತಿರುವ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ನಮ್ಮ ಸಂಪತ್ತನ್ನು ದೋಚುತ್ತಿರುವ ಇಟಲಿಯ ನಾಯಿಗಳು, ಮತ್ತವುಗಳ ಹಿಂ'ಬಾಲ'ಕರು ಇನ್ನೂ ಬದುಕಿದ್ದಾರೆ!
ನಮ್ಮ ಜನರ ಮನಸ್ಸಿನಲ್ಲಿ ಏನೇನೋ ತುಂಬಿ ಅವರ ಬದುಕನ್ನು ಮೂರಾಬಟ್ಟೆ ಮಾಡಿ, ಅವರ ನೆಮ್ಮದಿ ಎಂಬ ಸಂಪತ್ತನ್ನೇ ನಾಶ ಮಾಡುವ ಢೋಂಗಿ ಜಾತ್ಯಾತೀತ(ಸೂಡೋ ಸೆಕ್ಯುಲರ್)ವಾದಿ ಕಮ್ಯೂನಿಷ್ಟರನ್ನು ಯಾಕೆ ಸಾಯಿಸುವುದಿಲ್ಲ?
ನಮ್ಮವರ ಮನೆಗಳಲ್ಲಿ ಅನ್ನ ತಿಂದು, ಕಮ್ಮಿನಿಷ್ಟರ ದುರ್ಭೋಧನೆಗೊಳಗಾಗಿ ಅನ್ನ ಹಾಕಿದವರನ್ನೇ ಕೊಲ್ಲುವ ನಕ್ಸಲೈಟರಿನ್ನೂ ಜೀವಂತವಿದ್ದಾರೆ!

                    ಲವ್ ಜಿಹಾದ್, ಭೂ ಜಿಹಾದ್, ವ್ಯಾಪಾರಿಕ ಜಿಹಾದ್, ರಾಜಕೀಯ ಜಿಹಾದ್, ಮಾಧ್ಯಮ ಜಿಹಾದ್, ಮಾಡಿ ಧರ್ಮದ ಅಂತಃಸತ್ವವನ್ನೇ ಉಡುಗಿಸುತ್ತಿರುವವರನ್ನು ಕತ್ತರಿಸದೇ ಯಾಕೆ ಬದುಕಗೊಡುತ್ತೀರಿ?
ಸೇವೆ ಮತ್ತು ಶಿಕ್ಷಣದ ಹೆಸರಲ್ಲಿ ಗೆದ್ದಲು ಹುಳುಗಳಂತೆ ಹೊಕ್ಕು ನಮ್ಮ ಸಂಸ್ಕೃತಿಯನ್ನು ತಮ್ಮ ದೇವನ ತೆರದಿ ಶಿಲುಬೆಗೇರಿಸಲು ಯತ್ನಿಸುತ್ತಿರುವ ಕಪಟಿಗಳನ್ನು ಯಾಕೆ ಇರಗೊಡುತ್ತೀರಿ?
ನಮ್ಮ ಆಯುರ್ವೇದ, ಸಸ್ಯ ಸಂಪತ್ತನ್ನು ಹಾಳುಗೆಡವುತ್ತಿರುವ ವಿದೇಶಿ ವಸ್ತುಗಳನ್ನು ಯಾಕೆ ಬಳಸುತ್ತಿದ್ದೀರಿ?

                   ನಿಮ್ಮ ಮುಂದಿನ ಪೀಳಿಗೆ ಸಂಸ್ಕೃತಿ, ಧರ್ಮ, ಜೊತೆಗೆ ನಿಮ್ಮನ್ನೂ ಗೌರವದಿಂದ ಕಾಣಬೇಕಾದರೆ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ.
" ಅಹಿಂಸಾ ಪರಮೋ ಧರ್ಮ" ಹೌದು. ಆದರೆ ಅದು ಇನ್ನೂ ಮುಂದುವರಿದು "ಧರ್ಮ ಹಿಂಸಾ ತಥೈವಚ" ಎಂದೂ ಹೇಳುತ್ತದೆ ಎನ್ನುವುದನ್ನು ಮರೆಯದಿರಿ!

ಎದ್ದೇಳು ಅರ್ಜುನ!

ಬುಧವಾರ, ಡಿಸೆಂಬರ್ 5, 2012

ಸುಪ್ತ ರಾಗ


ಮಧು ಮಧುರ ಈ ಮೈತ್ರಿ
ಸುಮಧುರವು ಶುಭ್ರರಾತ್ರಿ|
ಹೊರಟಿಹುದು ಪಂಚ ಶರಧಿ
ಶಶಿ ಮೂಡಿಹನು ಮನದಿ||

ಮುದ ನೀಡೋ ಶ್ವೇತ ಕುಮುದ
ತಿಳಿನೀರ ಶುಭ್ರ ಜಲದಿ|
ಜತೆ ಹಂಸ ಆಡುತಿರಲು
ಆ ಚಂದ್ರ ಹಾಸ ಮೂಡಿ||

ಬಾಗಿಹುದು ಆಮ್ರ ಫಲವು
ಪಿಸು ಮಾತು ಶುಕ ರವವು|
ಅನುರಣಿಪ ಮಂದ್ರ ರಾಗ
ಕಳೆದ್ಹೋಯ್ತು ಆ ವಿರಾಗ||

ಅನುದಿನವು ನಾಟ್ಯರಾಣಿ
ಕಡೆದಿರಲು ಚತುರ ಶಿಲ್ಪಿ|
ನಟವರನು ಹರಸುತಿರಲು
ನಾಚಿಹುದು ಗಿರಿ ಮಯೂರ||

ಹಠವಾದಿ ಮಂದ ಮಾರುತ
ಛಲದೊಳಿಹ ಗೋವಿಂದ ಸುತ|
ಜೋಡಿಯೊಳು ಮಿನುಗು ತಾರೆ
ಓ ಪ್ರಿಯೆ ನಾ ನಿನಗೆ ಅಭಾರೆ||