ಪುಟಗಳು

ಲವ್ ಜಿಹಾದ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲವ್ ಜಿಹಾದ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಡಿಸೆಂಬರ್ 13, 2013

ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳೋಣ...

                              ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳೋಣ...

               ಮೊನ್ನೆ ಪಾಟ್ನಾ ಸ್ಫೋಟಕ್ಕೆ ಹಣ ಪೂರೈಸಿದ ಆಯೇಷಾ ಲವ್ ಜಿಹಾದಿಗೆ ಬಲಿಯಾಗಿದ್ದ ಆಶಾ ಎಂಬ ಸತ್ಯ ಹೊರಬೀಳುತ್ತಲೇ "ಲವ್ ಜಿಹಾದ್" ಎಂಬ ವಿಷಯ ಮಾಧ್ಯಮ ವಲಯದಲ್ಲಿ ಮತ್ತೊಮ್ಮೆ ಚರ್ಚೆಯಾಯಿತು. ಆದರೆ ಲವ್ ಜಿಹಾದ್ ಭಾರತಕ್ಕೆ ಹೊಸತೇನಲ್ಲ. ಇದು ಈಗ ಪ್ರತಿನಿತ್ಯದ ಸುದ್ದಿ. ಆದರೆ ತಮ್ಮನ್ನು ತಾವು ಮಾರಿಕೊಂಡ ಮಾಧ್ಯಮಗಳು ಈ ಪ್ರಕರಣಗಳನ್ನು ವರದಿ ಮಾಡದೇ ಇರುವುದರಿಂದ ಜನರಿಗೆ ಲವ್ ಜಿಹಾದ್ ಬಗ್ಗೆ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಏನಿದು ಲವ್ ಜಿಹಾದ್ ಎಂದು ಇನ್ನೂ ಯೋಚಿಸುವ ಅಥವಾ ಲವ್ ಜಿಹಾದ್ ಎಂಬ ಹೆಸರೇ ಕೇಳದವರೂ ಇರಬಹುದು! ಅಂದರೆ ನಮ್ಮ ಹಿಂದೂ ಸಮಾಜ ಇನ್ನೂ ನಿದ್ದೆಯ ಅಮಲಲ್ಲೇ ಇದೆ! ಹಿಂದೂ ಹುಡುಗಿಯರು ಲವ್ ಜಿಹಾದಿಗೆ ಬಲಿಯಾದ, ಹಾಗೂ ಅದರಿಂದ ತನ್ನ ಸರ್ವಸ್ವವನ್ನೇ ಕಳೆದುಕೊಂಡ, ಅಲ್ಲದೇ ತನ್ನವರಿಗೇ ಕಂಟಕಪ್ರಾಯರಾದ ಕೆಲವು ಘಟನೆಗಳನ್ನು ನೋಡೋಣ.
1. ಕಳೆದ ವರ್ಷ ನಾಸಿಕ್ ನಲ್ಲಿ ತರುಣಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನೇ ಕೊಲೆಗೈದು ಕಸರಾ ಘಾಟಿಯಲ್ಲಿ ಎಸೆದು ಬಿಟ್ಟಿದ್ದಳು. ಆ ಹುಡುಗಿ ಸಿಖ್ ಆಗಿದ್ದು ಲವ್ ಜಿಹಾದಿಗೆ ಬಲಿಯಾಗಿದ್ದಳು.
2. 2011ರ ಮಾರ್ಚಿನಲ್ಲಿ ಮಧ್ಯಪ್ರದೇಶದ ಕಿರಣ್ ರಾವತ್ ಎನ್ನುವ ತರುಣಿ ತನ್ನ ಮುಸ್ಲಿಮ್ ಪ್ರಿಯಕರನಿಗೋಸ್ಕರ ತನ್ನ ಕೈ ಹಿಡಿದ ಪತಿಯನ್ನೇ ಕೊಲೆಗೈದು ಕೊನೆಗೆ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದು ಈಗ ಇತಿಹಾಸ! ತನ್ನ ಗಂಡನ ರುಂಡ ಮುಂಡ ಬೇರ್ಪಡಿಸಿ ಬೇರೆ ಬೇರೆ ಕಡೆ ಅಡಗಿಸಿಟ್ಟ ಆ ಪೈಶಾಚಿಕತೆ ಲವ್ ಜಿಹಾದಿನ ಪ್ರಸಾದ!
3. ಪಾಕಿಸ್ತಾನಿ ಚಿತ್ರನಟಿಗೋಸ್ಕರ ಇಮ್ತಿಯಾಜ್ ಎನ್ನುವ ಬಾಲಿವುಡ್ ಚಿತ್ರನಟ 11ವರ್ಷದ ಮಗಳಿದ್ದುಕೊಂಡು ತನ್ನ ಹಿಂದೂ ಹೆಂಡತಿಗೆ ಡೈವೋರ್ಸ್ ಕೊಟ್ಟುಬಿಟ್ಟ. ಇದೂ ಲವ್ ಜಿಹಾದೇ! ಆದರೆ ನಾವು ಸಿನಿಮಾದವರೇ ಹೀಗೆ ಎಂದು ನಿರ್ಲಕ್ಷಿಸಿಬಿಡುತ್ತೇವೆ!
4. 2011ರಲ್ಲಿ ಜೈಪುರದಲ್ಲಿ ಮುಸ್ಲಿಂ ಬಾಸ್ ಒಬ್ಬ ತನ್ನ ಕೆಳಗಿನ ಸಹದ್ಯೋಗಿ ದೆಹಲಿ ಮೂಲದ ಹಿಂದೂ ಹುಡುಗಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ತಿಂಗಳುಗಟ್ಟಲೆ ಅತ್ಯಾಚಾರ ಮಾಡಿದ. ಆಮೇಲೆ ಗರ್ಭಿಣಿ ಎಂದು ಗೊತ್ತಾದ ಕೂಡಲೇ ಗರ್ಭಪಾತ ಮಾಡಿಸಿದ. ಆರು ತಿಂಗಳುಗಳ ಕಾಲ ಸುಮ್ಮನಿದ್ದ ಹುಡುಗಿ ಅವನು ಮದುವೆಯಾಗದೇ ಇದ್ದಾಗ ಕೊನೆಗೆ ಬೇರೆ ದಾರಿ ಕಾಣದೆ ಹೆತ್ತವರ ಸಹಾಯದಿಂದ ಪ್ರಕರಣ ದಾಖಲಿಸಿದಳು.
5. ಡಿಸೆಂಬರ್ 2011ರಲ್ಲಿ ಪೃಥ್ವಿ ಎನ್ನುವ ಹುಡುಗಿ ಲವ್ ಜಿಹಾದಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಳು. ಅತ್ಯುತ್ತಮ ಕ್ರೀಡಾಪಟುವಾಗಿದ್ದ ಅವಳ ಭವಿಷ್ಯ ಲವ್ ಜಿಹಾದಿನಿಂದಾಗಿ ಅಂತ್ಯವಾಯಿತು.
6. ಮೊನ್ನೆ ಮೊನ್ನೆ ಡಿಸೆಂಬರ್ 5ರಂದು ಬಂಧಿತನಾದ ಕೋಣಾಜೆ ಪಾವೂರಿನ ಇಲಿಯಾಝ್ ಎಂಬುವವ ತನ್ನ ಹೆಸರನ್ನು ರಾಹುಲ್ ಶೆಟ್ಟಿ ಎಂದಿರಿಸಿಕೊಂಡು ಹತ್ತಾರು ಹುಡುಗಿಯರ ಶೀಲ ಹರಣ ಮಾಡಿ ಅದರ ವಿಡೀಯೋ ಚಿತ್ರೀಕರಣ ಮಾಡಿದ್ದಲ್ಲದೆ ಅದನ್ನುಪಯೋಗಿಸಿ ಚಿನ್ನ ಹಾಗೂ ಹಣ ದೋಚಿದ್ದ.
7. 2012ರಲ್ಲಿ ಜಾರ್ಖಂಡಿನ ಪಲಾಮೂ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂರು ಲವ್ ಜಿಹಾದ್ ಪ್ರಕರಣ ನಡೆದು ಹಿಂದೂಗಳು ತತ್ತರಿಸಿದ್ದರು. ಹಿಂದೂಗಳ ಉದಾರತೆಯನ್ನು ತಮ್ಮ ದುರುಳ ಉದ್ದೇಶಗಳಿಗೆ ಬಳಸಿಕೊಂಡ ಜಿಹಾದಿಗಳು ಟ್ಯೂಷನ್ನಿಗೆ ಬಂದ ಇಬ್ಬರು ಹುಡುಗಿಯರನ್ನು ಮತಾಂತರಿಸಿದರು, ಅಂಗಡಿಯ ಮಾಲೀಕನ ಮಗಳನ್ನು ಲವ್ ಜಿಹಾದಿಗೆ ಬಲಿಯಾಗಿರಿಸಿದರು.
ಈ ಮೇಲಿನ ಎಲ್ಲಾ ಘಟನೆಗಳು ಸಾಮಾನ್ಯ ಅನ್ನಿಸಬಹುದು. ಆದರೆ ಇಲ್ಲೊಂದು ವ್ಯವಸ್ಥಿತವಾದ ಪಿತೂರಿಯಿದೆ. ಅಲ್ಲದೆ ಇನ್ನೊಂದು ಅಂಶವೇನೆಂದರೆ ಈ ಮೇಲಿನ ಎಲ್ಲಾ ಘಟನೆಗಳಲ್ಲಿ ಹಿಂದೂಗಳು ತಮ್ಮ ಧರ್ಮದ ಮೇಲೆ ಪ್ರಹಾರ ನಡೆದಿದ್ದರೂ ಪ್ರತೀಕಾರವೆಸಗಲಿಲ್ಲ. ಜಾಸ್ತಿಯೆಂದರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಅಷ್ಟೆ! ಆ ಕೇಸಂತೂ ಬಿದ್ದು ಹೋದುದು ಸ್ಪಷ್ಟ! ಅದೇ ಇನ್ನೊಂದು ಘಟನೆ ನೋಡಿ. 2012ರ ಅಕ್ಟೋಬರ್ ತಿಂಗಳಲ್ಲಿ ಮುಸ್ಲಿಮ್ ಹುಡುಗಿಯನ್ನು ಪ್ರೀತಿಸಿದ ಕೇರಳದ ಜೂನಿಯರ್ ಫುಟ್ಬಾಲ್ ತಂಡದ ಆಟಗಾರ ಜಿತುವನ್ನು ಮಾಪಿಳ್ಳೆಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದರು!
                            2009ರಲ್ಲಿ ಲವ್ ಜಿಹಾದ್ ಪ್ರಕರಣಗಳೆರಡು ಕೋರ್ಟ್ ಮೆಟ್ಟಿಲೇರಿದಾಗ "ವಿದ್ಯಾಲಯಗಳ ಆವರಣದಲ್ಲಿ ಬಲವಂತ ಮತಾಂತರ ಅಪರಾಧ ಎನ್ನುವ ತೀರ್ಪು ನೀಡಿತು!" ಅಂದರೆ ಉಳಿದ ಕಡೆ ಬಲವಂತದ ಮತಾಂತರ ಮಾಡಬಹುದೆಂದು ಇದರ ಅರ್ಥವೇ? ಇದಕ್ಕೆ ನಿಯಂತ್ರಣವಿದೆಯೋ ಇಲ್ಲವೋ. ಆದರೆ ಅಂತಹ ಕಾನೂನಿಗೆ ಅವರು ಒಳಪಡುವುದೇ ಇಲ್ಲ ಎಂಬುದಕ್ಕೆ ಬಹಿರಂಗವಾಗಿ ಮತಾಂತರ ಕಾರ್ಯ ನಡೆಸುತ್ತಿರುವ ಕೇರಳದ ಪೊನ್ನಣಿಯೇ ಸಾಕ್ಷಿ! ಕೇರಳ ಕ್ಯಾಥೊಲಿಕ್ ಬಿಶಪ್ಸ್ ಕೌನ್ಸಿಲ್ ಕ್ರಿಶ್ಚಿಯನ್ ಪೋಷಕರಿಗೆ ಲವ್ ಜಿಹಾದ್ ಬಗ್ಗೆ ಎಚ್ಚರಿರಬೇಕೆಂದು ಮಾರ್ಗದರ್ಶಿ ಸೂತ್ರವೊಂದನ್ನು ನೀಡಿದೆ. ಪ್ರೀತಿಯ ನಾಟಕವಾಡಿ ಹಿಂದೂ ಹುಡುಗಿಯರನ್ನು ತಮ್ಮ ಬಲೆಗೆ ಕೆಡಹಿದ ಮೇಲೆ ಈ ಹುಡುಗಿಯರೊಂದಿಗೆ ಅವರೇನೂ ಸಂಸಾರ ಹೂಡುವುದಿಲ್ಲ. ಬದಲಿಗೆ ಬೇಕಾದಷ್ಟು ಸಮಯ ಅವರನ್ನು ತಮ್ಮ ಇಚ್ಚಾನುಸಾರ ಬಳಸಿಕೊಂಡು ತದ ನಂತರ ವೇಶ್ಯವಾಟಿಕೆಗೆ ಅರಬ್ ರಾಷ್ಟ್ರಗಳಿಗೆ ಮಾರಿಬಿಡುತ್ತಾರೆ. ಸ್ವಲ್ಪ ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಬಲಯುತವಾದವರನ್ನು ಭಯೋತ್ಪಾದನಾ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ.
ಇಂದು ನಿನ್ನೆಯದಲ್ಲ ಈ ಲವ್ ಜಿಹಾದ್!                
                     ಯಾವಾಗ ಮುಸ್ಲಿಮರು ಈ ದೇಶದ ಮೇಲೆ ದಾಳಿ ಮಾಡಿದರೋ ಅಂದೇ ಲವ್ ಜಿಹಾದ್ ಕೂಡಾ ಭಾರತವನ್ನು ಪ್ರವೇಶಿಸಿತು. ಮೊಘಲ್ ಅರಸರಿಗಂತೂ ಹಿಂದೂ ರಾಜಕುಮಾರಿಯರೇ ರಾಣಿಯರಾಗಬೇಕಿತ್ತು. ಅವರ ಜನಾನಾದಲ್ಲಂತೂ ಹಿಂಡು ಹಿಂಡು ಹಿಂದೂ ಹೆಣ್ಣು ಮಕ್ಕಳು. ಒಂದು ವೇಳೆ ದಾಳಿಕೋರ ಮೊಘಲ್ ಅರಸರು ಹಿಂದೂ ಹೆಣ್ಣುಮಕ್ಕಳನ್ನು ಹೊತ್ತೊಯ್ಯದೇ ಇದ್ದರೆ, ಲವ್ ಜಿಹಾದ್ ನಡೆಸದೇ ಇದ್ದರೆ, ಹಿಂದೂ ಹುಡುಗಿಯರ ಸೆರಗಿಗೆ ಕೈ ಹಾಕದೇ ಇದ್ದರೆ ಸತೀ ಪದ್ದತಿ ಆರಂಭವಾಗುತ್ತಿತ್ತೇ? ಬಾಬರನಿಂದ ಹಿಡಿದು ಔರಂಗಜೇಬನವರೆಗಿನ ಪ್ರತಿಯೊಬ್ಬ ಮೊಘಲ್ ರಾಜ ನಡೆಸಿದ್ದು ಅತ್ಯಾಚಾರವೇ! ಅದೂ ಹೆಣ್ಣು, ಹೊನ್ನು, ಮಣ್ಣು... ಎಲ್ಲದರ ಮೇಲೂ! ಅಕ್ಬರನೂ ಇದಕ್ಕೆ ಹೊರತಾಗಿಲ್ಲ. ಔರಂಗಜೇಬನಂತೂ ಸುಂದರ ರಾಜಕುಮಾರರನ್ನೂ ಬಿಟ್ಟಿರಲಿಲ್ಲ. ಅವರ ಬೀಜ ಒಡೆಸಿ ತನ್ನ ತೀಟೆಗೆ ಬಳಸಿಕೊಳ್ಳುತ್ತಿದ್ದನೆಂದರೆ ಯಾರಿಗಾದರೂ ಆ ಪೈಶಾಚಿಕತೆ ಅರ್ಥವಾದೀತು. ಆದರೆ ಕಮ್ಮಿನಿಷ್ಟ ಇತಿಹಾಸಕಾರರು ಇವುಗಳನ್ನೆಲ್ಲಾ ದಾಖಲಿಸದೇ ಮೊಘಲರನ್ನು ಇಂದ್ರ-ಚಂದ್ರರೆಂದು ಹೊಗಳಿ ನಮ್ಮ ಇತಿಹಾಸವನ್ನು ಪಾವನಗೊಳಿಸಿದರು! ಇದರಿಂದಾಗಿ ನಮ್ಮ ಮಕ್ಕಳು ಇಂದಿಗೂ ಅಕ್ಬರ್ ದಿ ಗ್ರೇಟ್ ಎನ್ನುತ್ತಾ ಕಲಿಯುತ್ತಿರುವುದು ಈ ದೇಶದ ಅತೀ ದೊಡ್ಡ ದುರಂತ. ಕಲಿತವರಾದರೂ ನೈಜ ಇತಿಹಾಸವನ್ನು ತಿಳಿದುಕೊಂಡಿದ್ದಾರಾ? ಅದೂ ಇಲ್ಲ! ಇತಿಹಾಸ ಮರೆತ ದೇಶಕ್ಕೆ ಉಳಿಗಾಲವಿಲ್ಲ!
              ಮೊದಮೊದಲು ಹುಡುಗಿಯರನ್ನು ಮರುಳುಗೊಳಿಸುವ ಕಲೆಯುಳ್ಳವರು ಹಾಗೂ ಹಣ,ಬಾಹುಬಲ,ಕುಟಿಲೋಪಾಯವುಳ್ಳವರಿಗಷ್ಟೇ ಸೀಮಿತವಾಗಿದ್ದ ಈ ಪೀಡೆ ಇಂದು ವಿಶ್ವವ್ಯಾಪಿಯಾಗಲು ಕಾರಣವೇನಿರಬಹುದು ಎಂಬ ಯೋಚನೆ ನಿಮಗಾಗಬಹುದು?  ದಾವೂದ್ ಇಬ್ರಾಹಿಮ್ ಭೂಗತ ಲೋಕದ ಅನಭಿಶಿಕ್ತ ದೊರೆಯಾದ ಬಳಿಕ ಬಾಲಿವುಡ್ದನ್ನೇ ಆಳುತ್ತಿರುವುದು ನಿಮಗೆ ತಿಳಿದಿರಬಹುದು. ಈ ಲವ್ ಜಿಹಾದಿಗೆ ಒಂದು ವ್ಯವಸ್ಥಿತ ರೂಪ ಕೊಟ್ಟವನೂ ಅವನೇ! ಪ್ರತಿಯೊಬ್ಬ ಹಿಂದೂ ಹುಡುಗಿಯ ಗರ್ಭದಲ್ಲಿ ಮುಸ್ಲಿಂ ಪಿಂಡವೊಂದನ್ನು ಬೆಳೆಸುವುದನ್ನೇ ಉದ್ದೇಶವಿರಿಸಿಕೊಂಡು ಮಾಡಿರುವ ವ್ಯವಸ್ಥಿತ ಪಿತೂರಿಯಿದು. ಅದೀಗ ಬಾಲಿವುಡ್ಡಿಂದ ಹಿಡಿದು ಸಿನಿಮಾವನ್ನೇ ನೋಡದ ವರ್ಗದವರೆಗೂ ವ್ಯಾಪಿಸಿದೆ. ಈಗ ಬಾಲಿವುಡ್ಡನ್ನು ಆಳುತ್ತಿರುವ ಖಾನ್ ಗಳು ಮಾಡುವುದು ಲವ್ ಜಿಹಾದನ್ನೇ! ಹಿಂದೂ ಚಿತ್ರ ನಟಿಯರನ್ನು ಮದುವೆಯಾಗಿ ಕೆಲವು ಮಕ್ಕಳಾದ ನಂತರ ವಿಚ್ಚೇದನ ನೀಡಿ ಮತ್ತೊಬ್ಬ ಹಿಂದೂ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಇವರುಗಳು ದಾವೂದ್ ಇಬ್ರಾಹಿಂನ ಛೇಲಾಗಳು. ಅವರಲ್ಲಿ ಕೆಲವರಂತೂ ಅಜನ್ಮ ಬ್ರಹ್ಮಾಚಾರಿಗಳು(?)! ನೀವು ಈ ಚಿತ್ರರಂಗದವರೇ ಹೀಗೆ ಎಂದು ಅಸಡ್ಡೆ ಮಾಡಬಹುದು. ಆದರೆ ಇದು ಸತ್ಯ ಹಾಗೂ ಆಗುವ ಹಾನಿ ಮಾತ್ರ ಹಿಂದೂ ಧರ್ಮಕ್ಕೆ. ಶತ್ರುಗಳ ಸಂಖ್ಯೆ ದ್ವಿಗುಣವಾಗುತ್ತಲೇ ಇರುತ್ತದೆ! ಆದರೆ ಹಿಂದೂಗಳಿಗೆ ಇವು ಅರ್ಥವಾಗಬೇಕಲ್ಲ? ಈ ಖಾನ್ ಗಳ ಚಿತ್ರ ನೋಡಲು ಸಾಲುಗಟ್ಟಿ ನಿಲ್ಲುತ್ತಾರೆ! ಹುಡುಗಿಯರಂತೂ ಈ ಖಾನ್ ಗಳ ಸಿಕ್ಸ್ ಪ್ಯಾಕ್-ಎಯ್ಟ್ ಪ್ಯಾಕ್ ಗಳಿಗೆ ಮರುಳಾಗಿ ತಾನು ಮದುವೆಯಾಗುವ ರಾಜಕುಮಾರ ಇವನೇ ಎಂದು ಭ್ರಮಿಸುತ್ತಾರೆ. ಕಾಲೇಜು ಹುಡುಗ/ಗಿಯರಂತೂ ತಮ್ಮ ಕೊಠಡಿಗಳಲ್ಲಿ ಇವರದೇ ಭಾವಚಿತ್ರ ತೂಗು ಹಾಕಿ ತಮ್ಮ ಆದರ್ಶ ಅಂತ ಭಾವಿಸುತ್ತಾರೆ. ಒಂದು ಕ್ಷಣ ಯೋಚಿಸಿ... ನಿಮ್ಮ ನಾಶಕ್ಕೆ ಬೇಕಾದ ಸಲಕರಣೆ ನೀವೇ ಒದಗಿಸುತ್ತಿದ್ದೀರಿ. ಮುಂದೆ ಯಾವುದೇ ಖಾನ್ ಗಳ ಚಲನಚಿತ್ರ ನೋಡುವ ಮೊದಲು ಒಮ್ಮೆ ಯೋಚಿಸಿ...ಧರ್ಮ ಉಳಿಯಲು ನೆರವಾಗುತ್ತೀರಾ ಅಥವಾ ಅಳಿಸುವ ಆಯುಧವಾಗುತ್ತೀರಾ?

                             2012ರಲ್ಲಿ ಆರೇ ತಿಂಗಳಲ್ಲಿ 4000 ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಲಕ್ಷದಷ್ಟು ಹಿಂದೂ ಹುಡುಗಿಯರು ಲವ್ ಜಿಹಾದಿಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಹೇಳುತ್ತವೆ. ಶಾಲಾ ಕಾಲೇಜುಗಳ ಸಮೀಪ ಮೊಬೈಲ್ ರೀಚಾರ್ಜ್ ಅಂಗಡಿಗಳನ್ನು ತೆರೆಯಲಾಗುತ್ತದೆ. ಅಲ್ಲಿ ಸಿಗುವ ಹುಡುಗಿಯರ ಮೊಬೈಲ್ ಸಂಖ್ಯೆಯನ್ನು ಪಡೆದು ಅವರ ಹಿಂದೆ ಮುಸ್ಲಿಮ್ ಹುಡುಗರ ಹೆಸರನ್ನು ಹಿಂದೂ ಹೆಸರಿನಂತೆ ಬದಲಾಯಿಸಿ, ಕೇಸರಿ ದಾರ ಕೈಗೆ ಕಟ್ಟಿಸಿ ಆ ಹುಡುಗಿಯರ ಹಿಂದೆ ಬಿಡಲಾಗುತ್ತದೆ.  ಜಿಹಾದಿಗಳ ಗುಂಪು ಇದಕ್ಕೆಂದೇ ಒಂದು ಪಡೆಯನ್ನು ನಿರ್ಮಿಸಿದೆ. ಪ್ರತಿಯೊಬ್ಬನಿಗೆ 6 ತಿಂಗಳ ಸಮಯ ಕೊಟ್ಟು ಅವರಿಗೆ ಬೇಕಾದ  ಮೊಬೈಲ್, ಆಧುನಿಕ ರೀತಿಯ ಬಟ್ಟೆಗಳು, ಬೈಕ್ ಹಾಗೂ ಯಥೇಚ್ಚ ಹಣ ಕೊಡಲಾಗುತ್ತದೆ. ಹಿಂದು ಹುಡುಗಿಯರನ್ನು ತಮ್ಮ ಬಲೆಯಲ್ಲಿ ಕೆಡವಲು ಇವರಿಗೆ ತರಬೇತಿ ಕೂಡಾ ನೀಡಲಾಗುತ್ತದೆ. ದೈಹಿಕವಾಗಿ ಬಲಯುತರಾಗಿ ಕಾಣಲು ಬೇಕಾದ ಕಸರತ್ತುಗಳನ್ನು, ಹಿಂದು ಯುವತಿಯರನ್ನು ಬುಟ್ಟಿಗೆ ಹಾಕಲು ಬೇಕಾದ ಮಾತುಗಾರಿಕೆಯ ಕಲೆಯನ್ನು ಕಲಿಸಲಾಗುತ್ತದೆ. ಮೊದಲ ಎರಡು ವಾರಗಳಲ್ಲಿ ಅವರು ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಕೆಡವಬೇಕಾಗುತ್ತದೆ. ಅದಾಗದಿದ್ದಲ್ಲಿ ಇನ್ನೊಂದು ಹುಡುಗಿಯನ್ನು ಬೇಟೆಯಾಡುವಂತೆ ಹೈಕಮಾಂಡ್ ಸೂಚಿಸುತ್ತದೆ. ಮುಂದೆ ಅವರನ್ನು ಮತಾಂತರಿಸಿ ತಮಗೆ ಬೇಕಾದಂತೆ ಬಳಸಿ ಒಂದೋ ಬರೇ ಮಕ್ಕಳನ್ನು ಹುಟ್ಟಿಸಲು ಅಥವಾ ವೇಶ್ಯಾವಾಟಿಕೆಗೆ ಅಥವಾ ಭಯೋತ್ಪಾದಕ ಚಟುವಟಿಕೆಯಲ್ಲದೆ ಇನ್ನೊಂದು ಹುಡುಗಿಯನ್ನು ಬಲೆಗೆ ಬೀಳಿಸಲೂ ಬಳಸಲಾಗುತ್ತದೆ.
              2012ರಲ್ಲಿ ಗುಪ್ತಚರ ವಿಭಾಗದ ಮಾಹಿತಿಯನ್ನಾಧರಿಸಿ ಕಲಾ ಕೌಮುದಿ ಎಂಬ ಕೇರಳದ ಪತ್ರಿಕೆ "ಲವ್ ಜಿಹಾದ್, ಮತಾಂತರ ಹಾಗೂ ಕಪ್ಪುಹಣ" ಎಂಬ ಶೀರ್ಷಿಕೆಯುಳ್ಳ ವಿಶೇಷ ವರದಿ ಪ್ರಕಟಿಸಿತ್ತು. ಆದರೆ ಈ ಪತ್ರಿಕೆ ಮಾರಾಟವಾಗಲೇ ಇಲ್ಲ. ಕೆಲವೊಂದು ಜನರ ಗುಂಪು ಪ್ರತಿಯೊಂದು ಪತ್ರಿಕೆಯ ಅಂಗಡಿಗೆ ನುಗ್ಗಿ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಖರೀದಿಸಿ ನಾಶ ಮಾಡಿತು! ಕೇರಳದಲ್ಲಿ  ಪ್ರತಿ ತಿಂಗಳು ಸರಾಸರಿ 100ರಿಂದ 180 ಹುಡುಗಿಯರು ಮತಾಂತರವಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 3902 ಹೆಣ್ಣು ಮಕ್ಕಳು ಮತಾಂತರಗೊಂಡಿದ್ದು ಅದರಲ್ಲಿ 3815 ಹುಡುಗಿಯರು ಇಸ್ಲಾಂ ಅನ್ನು ಸ್ವೀಕರಿಸಿದ್ದಾರೆ ಎಂದು ವರದಿ ಹೇಳಿತ್ತು! ಗುಪ್ತಚರ ಮಾಹಿತಿಗಳ ಪ್ರಕಾರ 2005ರಲ್ಲಿ ಲಷ್ಕರ್-ಇ-ತೊಯಬಾ ಲವ್ ಜಿಹಾದ್ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಮಾತ್ರವಲ್ಲ ಎಲ್ಲಾ ಭಯೋತ್ಪಾದಕ ಸಂಘಟನೆಗಳಿಂದ ಲವ್ ಜಿಹಾದಿಗಾಗಿ ಯಥೇಚ್ಛ ಹಣ ಹರಿದು ಬರುತ್ತಿದೆ. ಅದರಲ್ಲೂ ಲವ್ ಜಿಹಾದಿಗೆ ಬಲಿಯನ್ನಾಗಿಸುವ ಬಲಿಪಶುಗಳಿಗೆ ಅವರ ಮತವನ್ನಾಧರಿಸಿ ಜಿಹಾದಿಗಳಿಗೆ ಹಣ ಸಂದಾಯವಾಗುತ್ತದೆ. ಸಿಖ್ ಹುಡುಗಿಯಾದರೆ-7ಲಕ್ಷ, ಹಿಂದೂ ಹುಡುಗಿಯಾದರೆ-5ಲಕ್ಷ, ಕ್ರಿಶ್ಚಿಯನ್-4ಲಕ್ಷ, ಜೈನ್-3ಲಕ್ಷ ಹೀಗೆ ಬೇರೆ ಬೇರೆ ಗ್ರೇಡ್ ಕೊಡಲಾಗುತ್ತದೆ. ಇದರ ಹಿಂದೆ ಡ್ರಗ್ ಮಾಫಿಯಾ ಕೂಡಾ ಇರುವುದು ಸುಳ್ಳಲ್ಲ. ಕಾಲೇಜುಗಳ ಸಮೀಪದಲ್ಲಿ ಬಹಿರಂಗವಾಗಿಯೇ ಮಾರಾಟವಾಗುತ್ತಿರೋ ಇದನ್ನು ತಡೆಯಲು ಪೊಲೀಸ್ ಇಲಾಖೆಯಾಗಲೀ ಸರಕಾರಗಳಾಗಲೀ ಚಿಂತಿಸದಿರುವುದು ವಿಷಾದನೀಯ. ಮಣಿಪಾಲ, ಮೂಡಬಿದಿರೆ ಹೀಗೆ ಸಾಲು ಸಾಲು ಇಂಜಿನಿಯರಿಂಗ್ ಕಾಲೇಜುಗಳಿರುವ ಅವಿಭಜಿತ ದಕ್ಷಿಣಕನ್ನಡದಲ್ಲಂತೂ ಡ್ರಗ್ ಮಾಫಿಯಾ ಲವ್ ಜಿಹಾದಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಹಾಗೂ ಅದರ ಬಗ್ಗೆ ಗೊತ್ತಿದ್ದು ಕಣ್ಮುಚ್ಚಿ ಕುಳಿತಿರುವ ಸರಕಾರವನ್ನು ಚುನಾಯಿಸಿದ ಜನತೆ ಹಣೆ ಹಣೆ ಚಚ್ಚಿಕೊಳ್ಳುತ್ತಿರುವುದು ಸುಸ್ಪಷ್ಟ.
ಇಂಗ್ಲೆಂಡ್, ಫ್ರಾನ್ಸಿನಂತಹ ದೇಶಗಳನ್ನೂ ಬಿಟ್ಟಿಲ್ಲ ಈ ಲವ್ ಜಿಹಾದ್!
                       "ಇಂಗ್ಲೆಂಡಿನ ವಿಶ್ವವಿದ್ಯಾಲಯಗಳ ಸಮೀಪ ಸುಳಿದಾಡುವ ಈ ಜಿಹಾದಿಗಳು ತಮ್ಮ ಕಾರ್ಯಕ್ಕೆ £5,000 ಪಡೆಯುತ್ತಾರಲ್ಲದೆ ಹುಡುಗಿಯರನ್ನು ಮೊದಲು ಪ್ರೇಮದ ಬಲೆಗೆ ಬೀಳಿಸಿ ತದನಂತರ ಭಯೋತ್ಪಾದನಾ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ. ಬರ್ಮಿಂಗ್ ಹ್ಯಾಮ್, ಲಂಡನ್, ಲೀಡ್ಸ್, ಬ್ರಾಡ್ ಫೋರ್ಡ್Sಗಳಲ್ಲಿ ಇದು ಇಂದು ಸಾಮಾನ್ಯ ಸಂಗತಿಯಾಗಿದ್ದು, ಲಂಡನ್ನಿನ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಇಂತಹ ಎರಡರಿಂದ ಮೂರು ಪ್ರಕರಣಗಳು ನಡೆದಿವೆ. ಮುಸ್ಲಿಂ ಗೂಂಡಾಗಳು ವಿದ್ಯಾಲಯದ ಪ್ರಾಂಗಣದಲ್ಲೇ ಹುಡುಗಿಯರಿಗೆ ಹೊಡೆದು ಬಡಿದು ಬಲತ್ಕಾರದಿಂದ ಇಸ್ಲಾಮಿಗೆ ಮತಾಂತರ ಮಾಡುತ್ತಾರೆಂದರೆ ಇದರ ಭಯಾನಕತೆ ಊಹಿಸಬಹುದು. ಇಲ್ಲಿನ ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಮೂಡಿದೆಯಲ್ಲದೆ ಪೊಲೀಸ್ ಪಡೆಗಳ ಮೇಲಿನ ಭರವಸೆಯೆ ಹೊರಟು ಹೋಗಿದೆ" ಎಂದು ಸ್ಕ್ವಾಟ್ಲಂಡ್ ಯಾರ್ಡ್ ಮತ್ತು ಕಮಿಷನರ್ ಇಯಾನ್ ಬ್ಲೇರ್ 2012ರಲ್ಲೇ ಹೇಳಿದ್ದರು.  ಇಂಗ್ಲೆಂಡಿನಲ್ಲಿ ಮುಲ್ಲಾಗಳು ಬಹಿರಂಗವಾಗಿಯೇ ಲವ್ ಜಿಹಾದ್ ಮಾಡುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.
                     9 ತಿಂಗಳ ಹಿಂದೆ ಪಾಲ್ತಾಡಿಯ ಹುಡುಗಿಯೊಬ್ಬಳನ್ನು ನೂರುದ್ದೀನ್ ಎನ್ನುವ ವಕೀಲ ಪೊನ್ನಣಿಗೆ ಮತಾಂತರಿಸಲು ಕರೆದುಕೊಂಡು ಹೋಗಿರುವ ವರದಿಯಾಗಿತ್ತು. ಕಳೆದ ಅಕ್ಟೋಬರಿನಲ್ಲಿ ಮೂಡಿಗೆರೆಯ ಅಪೂರ್ವ ಎನ್ನುವ 15 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ಜಿಹಾದಿಗಳು ಅವಳಿಗೆ ಬುರ್ಖಾ ಹಾಕುವಂತೆ ಒತ್ತಾಯ ಕೂಡಾ ಮಾಡಿದ್ದರು. ಅವಳ ದೇಹದ ಮೇಲೆ ನಿಜಾಮ್ ಎಂದು ಬರೆದಿತ್ತು! ಆದರೆ ಆ ನಿಜಾಮ್ ಪರಾರಿಯಾಗಿದ್ದ. ಅದರೊಡನೆ ಆ ಪ್ರಕರಣ ಕೂಡಾ! ಇದೇ ಅಕ್ಟೋಬರಿನಲ್ಲಿ ನಾಪತ್ತೆಯಾದ ಪೆರ್ಲದ ಮೂವರು ಯುವತಿಯರು ಆ ಬಳಿಕ ಪೊನ್ನಣಿಯಲ್ಲಿ ಕಾಣಿಸಿಕೊಂಡರು. ಪ್ರಕರಣ ದಾಖಲಾಯಿತು. ಆದರೇನು ಪ್ರಕರಣ ಮುಂದುವರಿಯಲಿಲ್ಲ.  ಹುಡುಗಿಯರು ಮರಳಲಿಲ್ಲ! ಕೇವಲ ಕೆಲವೇ ಕೆಲವು ಇಂತಹ ಘಟನೆಗಳು ವರದಿಯಾಗುತ್ತವೆ! ಯಾವಾಗ ಸಿಮಿಯ ಮೇಲೆ ನಿಷೇಧ ಹೇರಲಾಯಿತೋ ಆಗ ಸಿಮಿ ಪಾಪ್ಯುಲರ್ ಫ್ರಂಟ್, ಸ್ಮಾರ್ಟ್ ಫ್ರೆಂಡ್ಸ್, ಕ್ಯಾಂಪಸ್ ಫ್ರಂಟ್, ಕೆ.ಎಫ್.ಡಿ, ಪಿ.ಎಫ್.ಐ, ವುಮನ್-ಫ್ರಂಟ್,...ಹೀಗೆ ಹತ್ತು ಹಲವು ಕವಲುಗಳಾಗಿ ಕಾರ್ಯಾಚರಿಸುತ್ತಿದೆ. ಇವೆಲ್ಲವುಗಳಲ್ಲಿರುವ ಕಾರ್ಯಕರ್ತರು ಒಂದೇ. ಈ ಭಯೋತ್ಪಾದಕ ಸಂಘಟನೆಗಳಿಗೆ ಕೇರಳದ ಮುಸ್ಲಿಂ ಲೀಗ್, ತಮಿಳುನಾಡಿನ ಮುಸ್ಲಿಂ ಮುನ್ನೇತ್ರ ಕಳಗಂ, ಆಂದ್ರಪ್ರದೇಶದ ಮುಸ್ಲಿಂ ಪಕ್ಷಗಳು, ಜಮ್ಮು ಕಾಶ್ಮೀರದ ಮುಸ್ಲಿಂ ಪಕ್ಷಗಳು, ಕೆಲವು ಕಾಂಗ್ರೆಸ್-ಕಮ್ಯೂನಿಷ್ಟ್ ಹಾಗೂ ಮುಸ್ಲಿಂ ಓಲೈಕೆ ಮಾಡುವ ರಾಜಕಾರಣಿಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಹಾಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೇರಳದಲ್ಲಂತೂ ಹಿಂದೂಗಳನ್ನು ಸದೆಬಡಿಯಲು ಮುಸ್ಲಿಂ ಲೀಗ್ ಹಾಗೂ ಕೇರಳದ ಕಮ್ಯೂನಿಷ್ಟ್ ಪಕ್ಷ ಒಟ್ಟಾಗಿ ಕೆಲಸ ಮಾಡುತ್ತವೆ! ಸರಕಾರಿ ದಾಖಲೆಗಳ ಪ್ರಕಾರ 1976-77ರಲ್ಲಿ ಕೇವಲ 88ರಷ್ಟಿದ್ದ ಮದರಸಾಗಳ ಸಂಖ್ಯೆ 2000ಕ್ಕಾಗುವಾಗ 30ಸಾವಿರವನ್ನು ದಾಟಿತು! ಈಗ? ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 4000ದ ತನಕ ಸ್ಕಾಲರ್‌ಶಿಪ್ ನೀಡುತ್ತಿದ್ದರೆ, ಸಿದ್ರಾಮಯ್ಯನವರ ಸರ್ಕಾರ ಹೊಸದಾಗಿ ಮದುವೆಯಾದ ಮುಸಲ್ಮಾನ ಮಹಿಳೆಗೆ ಶಾದಿ ಭಾಗ್ಯವೆಂದು ರೂ. 50,000 ಮೌಲ್ಯದ, ಮನೆಯಲ್ಲಿ ಜಾಗವಿಲ್ಲದಿದ್ದರೂ ಮಂಚ, ಹಾಸಿಗೆ ಇನ್ನೂ ಏನೇನೋ ದಯಪಾಲಿಸಿ ಮತಾಂತರಕ್ಕೆ ಮತ್ತು ಲವ್ ಜಿಹಾದಿಗೆ ಉತ್ತೇಜನ ನೀಡುತ್ತಾರೆ.
ಬಂದಿದೆ ಚಾಕಲೇಟ್ ಅಸ್ತ್ರ!
             ಕಾಸರಗೋಡಿನಲ್ಲಿ ಯುವತಿಯರ ಮಾರಾಟದ ಜಾಲವೇ ಇದೆ. ಉಡುಪಿ, ಮಂಗಳೂರಿನಲ್ಲಿ ಈ ಜಾಲದ ಏಜೆಂಟರೂ ಇದ್ದಾರೆ. ಈ ಜಾಲದ ಸದಸ್ಯರು ಯುವತಿಯನ್ನು ಪರಿಚಯ ಮಾಡಿಕೊಂಡು ಕ್ರಮೇಣ ಅವಳಿಗೆ ಮತ್ತು ಬರಿಸುವ ಅಥವಾ ಚಿತ್ತ ಚಂಚಲಗೊಳ್ಳುವ ಚಾಕಲೇಟನ್ನು ಕೊಡುತ್ತಾರೆ. ಈ ಚಾಕ್ಲೇಟನ್ನು ಸೇವಿಸಿದವರಲ್ಲಿ ಒಂದು ರೀತಿಯ ಉನ್ಮಾದ ಉಂಟಾಗಿ ಮತ್ತೆ ಮತ್ತೆ ಅದನ್ನು ತಿನ್ನುವ ಮನಸ್ಸಾಗುತ್ತದೆ. ಅಲ್ಲದೆ ಚಾಕಲೇಟು ಕೊಟ್ಟವನ ಮೇಲೆ ಒಲವು ಮೂಡುತ್ತದೆ. ಪೊನ್ನಣಿಯ ಧಾರ್ಮಿಕ ಅಧ್ಯಯನ ಕೇಂದ್ರದಲ್ಲಿ ಸುಮಾರು 150ಕ್ಕೂ ಹೆಚ್ಚು ಹಿಂದೂ ಹುಡುಗಿಯರಿದ್ದಾರೆ. ಚಾಕಲೇಟು ಕೊಡುವ ತರುಣರು ಕ್ರಮೇಣ ಐಪಾಡ್, ಸಿಮ್ ಸಹಿತ ಮೊಬೈಲ್ ಕೊಟ್ಟು ಯುವತಿಯರನ್ನು ಮರುಳುಗೊಳಿಸುತ್ತಾರೆ. ಐಪಾಡಿನಲ್ಲಿ ಇಸ್ಲಾಂಗೆ ಸಂಬಂಧಪಟ್ಟ ವಿಡಿಯೋಗಳು, ಇಸ್ಲಾಂ ಭೋದನೆಗಳು ಇರುತ್ತವೆ. ಜೊತೆಗೆ ಇಸ್ಲಾಮಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಕೊಟ್ಟು ಪ್ರತಿದಿವಸ ಓದಿದ ವಿಷಯಗಳನ್ನು ಪುಸ್ತಕವೊಂದರಲ್ಲಿ ಬರೆಯಲು ಒತ್ತಾಯಪಡಿಸುತ್ತಾರೆ. ಪೊಲೀಸರು ಹಾಗೂ ಹೊರಜಗತ್ತು ಒಳಹೊಕ್ಕು ನೋಡಿದರು ಅರಿವಾಗದ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಇದೇ ಹುಡುಗಿಯರು ಮುಂದೆ ಹಿಂದೂ ಧರ್ಮದ ವಿರುದ್ದ ಆಯುಧಗಳಾಗಿ ಉಪಯೋಗಿಸಲ್ಪಡುತ್ತಾರೆ.
ಇದಕ್ಕೆ ಪರಿಹಾರವೇನು?
                   ನಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಡುವ ಜೊತೆಗೆ ನಮ್ಮ ಧರ್ಮ-ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಾದ್ದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಹುಡುಗಿಯರು ರೀಚಾರ್ಜ್, ಬಟ್ಟೆ ಹೀಗೆ ಯಾವುದೇ ಅಂಗಡಿಗಳಿಗೆ ಹೋಗುವಾಗ ಹಿಂದೂಗಳ ಅಂಗಡಿಗೆ ಹೋಗುವುದು ಒಳಿತು. ಹೆತ್ತವರು ವಿದ್ಯಾರ್ಜನೆಗೆ, ನೌಕರಿಗೆ ಹೋಗುವ ಮಗಳ ಮೇಲೊಂದು ಕಣ್ಣಿಟ್ಟಿರುವುದರ ಜೊತೆಗೆ ಲವ್ ಜಿಹಾದ್ ಬಗ್ಗೆ ತಿಳಿಸುವುದು ಅಗತ್ಯ. ಅಲ್ಲದೇ ಯಾವುದೇ ಇಂತಹ ಪ್ರಕರಣ ಕಂಡು ಬಂದಲ್ಲಿ ಅದು ಮುಂದುವರಿಯಲು ಬಿಡದೇ ಹೆತ್ತವರಿಗೆ/ಪೋಷಕರಿಗೆ ಅಥವಾ ಹಿಂದೂ ಸಂಘಟನೆಗಳಿಗೆ ಸುದ್ದಿ ಮುಟ್ಟಿಸಿ ತನ್ಮೂಲಕ ಆ ಯುವತಿಯನ್ನು ರಕ್ಷಿಸುವುದರ ಜೊತೆಗೆ ಒಂದು ಕುಟುಂಬವನ್ನು, ಸಮಾಜವನ್ನು, ದೇಶವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳಬೇಕಾದ್ದು ನಮ್ಮ ಕರ್ತವ್ಯ. "ಯಾರನ್ನೂ ನಂಬಿದರೂ ತುರ್ಕರನ್ನು ನಂಬಬಾರದು" ಎನ್ನುವ ಮಾತೊಂದಿದೆ. ಆದರೆ ಇತಿಹಾಸ ಮರೆತ/ತಿಳಿಯದ ಹಿಂದೂಗಳು ಅದನ್ನು ಪಾಲಿಸದೇ ಇರುವುದು ದುರಂತಕ್ಕೆ ಮೂಲ ಕಾರಣ. ಹಾಗಾಗಿ ಇತಿಹಾಸದ ಅರಿವಿರಬೇಕಾದ್ದು ಅತ್ಯಗತ್ಯ. ಇಲ್ಲದಿದ್ದಲ್ಲಿ ನಾವೇ ಇತಿಹಾಸವಾಗಬೇಕಾದೀತು!


ಸೋಮವಾರ, ಸೆಪ್ಟೆಂಬರ್ 23, 2013

ಇದು ಕತೆ ಅಲ್ಲ , ಜೀವನ! ಭಾಗ-1


ಇದು ಕತೆ ಅಲ್ಲ , ಜೀವನ! ಭಾಗ-1:                                                   
           ಶೀರ್ಷಿಕೆ ನೋಡಿದೊಡನೆ ಸಾಮಾನ್ಯ ಬುದ್ಧಿಯಿರುವ ಯಾರಿಗಾದರೂ ಅರ್ಥವಾದೀತು ಇದು ನಮ್ಮ ಜೀವನದಲ್ಲಿ ನಡೆಯುವಂಥ ವಿಚಾರವೇ ಇರಬೇಕು ಎಂದು. ನಾನು ಕಥೆಗಾರನಲ್ಲ. ಆದರೆ ಸಮಾಜದಲ್ಲಿ ನಡೆಯುತ್ತಿರುವ ವೈಪರೀತ್ಯಗಳನ್ನು ನೋಡಿದಾಗ, ಅದನ್ನು ಜನ ತಿಳಿದೋ ತಿಳಿಯದೆಯೋ ಅಲಕ್ಷಿಸುತ್ತಿರುವಾಗ ನನಗೆ ಸುಮ್ಮನಿರಲಾಗಲಿಲ್ಲ. ಅದರ ಫಲವೇ ಕಥೆ. ಶೀರ್ಷಿಕೆಯೇ ಸೂಚಿಸುವಂತೆ ಇದು ನೈಜವಾದ ಘಟನೆಯೇ. ಇಲ್ಲಿ ಬರುವ ಹೆಸರುಗಳು ಮಾತ್ರ ನನ್ನ ಕಲ್ಪನೆ. ಇನ್ನು ಕಥೆಯಲ್ಲಿ ಅಲ್ಲಲ್ಲಿ ಕೆಲವು ವರ್ಣನೆಗಳು ಅತಿರೇಕ ಎನಿಸಿದರೂ ಅಥವಾ ಕೆಲವು ಕಡೆ ವಿಷಯ ವಿಸ್ತಾರವಾಗದೆ ಹಾರಿಸಿದ ಹಾಗೆ ಅನಿಸಿದರೆ ಅದು ನನ್ನನ್ನು ನಾನು ಹಿಡಿದಿಡಲಾರದ ಭಾವನೆಯೇ ಹೊರತು ಘಟನೆಯ ವೈಭವೀಕರಣವಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಇದನ್ನೋದಿ ಕೆಲವರಾದರೂ ಎಚ್ಚೆತ್ತುಕೊಂಡರೆ ಅದೇ ಸಮಧಾನ.
         ಅದು ಮಲೆನಾಡ ತಪ್ಪಲಲ್ಲಿರುವ ಸುಳ್ಯ ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ. ಪದ್ಮನಾಭ ಶರ್ಮ..... ಊರಿಗೆಲ್ಲಾ ಚಿರಪರಿಚಿತ ಹೆಸರು. ಕೃಷಿಯನ್ನೇ ನೆಚ್ಚಿಕೊಂಡಿರುವ ಅವರದು ಮಧ್ಯಮ ವರ್ಗದ ಸಂತೃಪ್ತ ಕುಟುಂಬ. ಅಂಗಳದಲ್ಲಿ ಶಿಸ್ತಾಗಿ ಪೋಣಿಸಿದಂತೆ ಭಾಸವಾಗುವ ಒಣಗಲು ಹಾಕಿದ ಅಡಕೆ, ಕರಿಮೆಣಸು, ಗೇರು ಬೀಜ. ಭಾನು ಬುವಿಗೆ ರಂಗೆರಚಿ ಮರೆಯಾಗುತ್ತಿದ್ದಾನೆ. ಹಸಿರು ಸಿರಿಯ ನಡುವೆ ಹುಲ್ಲು ಕಟಾವು ಮಾಡುತ್ತಿದ್ದಾರೆ ಪದ್ಮನಾಭಯ್ಯನವರ ಧರ್ಮಪತ್ನಿ ಲಕ್ಷ್ಮಿ. ಕೆಲಸಗಾರರು ಸಿಗದೆ ಸ್ವತಃ ಪದ್ಮನಾಭಯ್ಯನವರೇ ಬೀಳುತ್ತಿರುವ ಅಡಿಕೆಯನ್ನು ಹೆಕ್ಕುತ್ತಿದ್ದಾರೆ. ಮನೆಯೊಳಗಿಂದ ಯಾವುದೋ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ಧ್ವನಿ ಕೇಳಿ ಬರುತ್ತಿದೆ. ರಾಯರ ಮಗ ಪ್ರದ್ಯುಮ್ನ  ಪಂದ್ಯ ವೀಕ್ಷಣೆಯಲ್ಲಿ ಮಗ್ನ.
 
          ಅಷ್ಟರಲ್ಲಿ ಕಾಲ್ಗೆಜ್ಜೆಯ ದನಿ..... ಮುಗ್ಧ ಮುದ್ದು ಮೊಗದ ಬಳುಕುವ ನಡುವಿನ ಚಂದ್ರಕಾಂತಿಯ ಚೆಲುವೆ ಮನೆಯೊಳಗೆ ಪ್ರವೇಶಿಸುತ್ತಿದ್ದಾಳೆ. ಸೌಂದರ್ಯದ ಖನಿ. ಅವಳ ನಡಿಗೆಯ ಲಾಸ್ಯಕ್ಕೆ ಹಂಸಗಳೇ ನಾಚುತ್ತಿವೆಯೇನೋ ಎಂದನ್ನಿಸುತ್ತಿದೆ. ಅವಳ ತನುವ ಮಿಡುಕಕ್ಕೆ ಹಿತ್ತಿಲಿನಲ್ಲಿದ್ದ ನವಿಲು ನರ್ತಿಸುತ್ತಿದೆ. ಇಂಪಾಗಿ ಹಾಡುತ್ತಿರುವ ಅವಳ ಇನಿದನಿಗೆ ಮನಸೋತು ಕೋಗಿಲೆ ಹಾಡತೊಡಗಿದೆ. ಜಂಬುನೇರಳೆ ಮರದ ಮೇಲೆ ಕುಳಿತ ಗಿಣಿಗಳು ಅವಳ ಕಲರವಕ್ಕೆ ತಮ್ಮ ದನಿ ಜೋಡಿಸುತ್ತಿವೆ. ಅವಳು ಮನೆಯೊಳಗೆ ಬಂದೊಡನೆ ಪೌರ್ಣಿಮೆಯ ಚಂದಿರನು ಭುವಿಯ ಬೆಳಗಿದ ತೆರದಿ ಮನೆಯಲ್ಲ ಪ್ರಕಾಶಮಾನವಾಯಿತು. ಮನೆಯಂಗಳದಲ್ಲಿ ಅವಳನ್ನೇ ಕಾಯುತ್ತಿದ್ದ ಶುಭ್ರ ಬಣ್ಣದ ಶ್ವಾನ ಅವಳು ತನ್ನೊಡನೆ ಆಡಲು ಬರಲೆಂದು ಕುಂಯ್ ಗುಟ್ಟುತ್ತಿದೆ. ಅವಳ ಗೆಜ್ಜೆಯ ದನಿಯ ಕೇಳಿದ ಮುದ್ದು ಕರು ನಂದಿನಿ ಅಂಬಾ ಎಂದವಳನ್ನು ಕರೆಯುತ್ತಿದೆ. ಅವಳು ಬಂದು ಕುರ್ಚಿಯಲ್ಲಿ ಕೂತೊಡನೆ ಎಲ್ಲೋ ಇದ್ದ ಬೆಕ್ಕಿನ ಮರಿ ಅವಳ ತೊಡೆಯೇರಿ ಕುಳಿತವಳ ಕಂಠಾಹಾರದೊಂದಿಗೆ ಆಡುತ್ತಿದೆ. ಅವಳು ಪದ್ಮನಾಭ ಶರ್ಮರ ಏಕೈಕ ಪುತ್ರಿ ವಿದ್ಯುಲ್ಲತಾ.

                 ತಮ್ಮನ ಕೈಯಿಂದ ರಿಮೋಟ್ ಕಂಟ್ರೋಲರ್ ಕಿತ್ತುಕೊಂಡವಳೇ ಚಾನೆಲ್ ಬದಲಾಯಿಸಿದಳು. ಜಗಳ ಶುರುವಾಯಿತು ಅಕ್ಕ ತಮ್ಮಂದಿರಲ್ಲಿ. ಆಗ ತಾನೇ ಮನೆಯೊಳಗೆ ಬಂದ ಲಕ್ಷ್ಮಿ ಅಮ್ಮನವರ ಹಿತನುಡಿ ವ್ಯರ್ಥ. ಪದ್ಮನಾಭಯ್ಯನವರು ಒಳಬಂದವರೇ ರಿಮೋಟ್ ಕಂಟ್ರೋಲರ್ ಕಿತ್ತುಕೊಂಡು ನ್ಯೂಸ್ ಚಾನೆಲ್ ಹಾಕಿ ಅತ್ತ ನ್ಯೂಸ್ ಇತ್ತ ಅಕ್ಕ ತಮ್ಮಂದಿರ ಜಗಳ ನೋಡುತ್ತಾ ಮುಸಿ ಮುಸಿ ನಗುತ್ತಾ ಕೂತರು. ಆಗಲೇ ವಿದ್ಯುಲ್ಲತೆಯ ಮೊಬೈಲ್ ಸದ್ದು ಮಾಡಿತು. ಜಗಳ ನಿಂತಿತು. ಮೊಬೈಲ್ ನೋಡಿದವಳಿಗೆ ಅಚ್ಚರಿ ಕಾದಿತ್ತು. ಅಪರಿಚಿತ ಸಂಖ್ಯೆಯಿಂದ ಸಂದೇಶ "ಹಾಯ್" ಎಂದು. ಯಾರು ಅಂತ ಕೇಳಿದರೆ ಉತ್ತರವಿಲ್ಲ. ಇನ್ನೊಂದು ಘಂಟೆ ಬಿಟ್ಟು ಪುನಹ ಅದೇ ಸಂಖ್ಯೆಯಿಂದ ಅದೇ ಸಂದೇಶ...ಹೀಗೆ ಗಂಟೆಗೊಂದರಂತೆ ಐದು ಬಾರಿ...ವಿದ್ಯುಲ್ಲತೆಯ ಮನಸ್ಸಿನಲ್ಲಿ ಮಿಶ್ರಭಾವ. ಐದನೇ ಬಾರಿ ಕರೆ ಬಂದಾಗ ಸಿಟ್ಟುಗೊಂಡು ಕರೆ ಮಾಡಿದಳು. ಕಡೆಯಿಂದ ಅವಳ ಸಹಪಾಠಿ ಅಬ್ದುಲ್ಲಾ. ಅವನಿಗೆ ಹೇಗೆ ಸಿಕ್ಕಿತು ಇವಳ ಮೊಬೈಲ್ ಸಂಖ್ಯೆ? ವಾಸ್ತವವಾಗಿ ವಿದ್ಯುಲ್ಲತಾ ಆವತ್ತು ಮೊಬೈಲ್ ರೀಚಾರ್ಜ್ ಮಾಡಿದ ಅಂಗಡಿಯ ಮಾಲಿಕ ಅಬ್ದುಲ್ಲನ ಸ್ನೇಹಿತ. ಮುಂದೆ ಪ್ರತಿದಿನ ಸಂದೇಶಗಳ ವಿನಿಮಯವಾಗುತ್ತಿತ್ತು. ಒಂದು ದಿನ " ಲವ್ ಯೂ" ಅಂತ ಕಳುಹಿಸಿದ. ಸಿಡಿಮಿಡಿಗೊಂಡಳು ವಿದ್ಯುಲ್ಲತಾ. ಕರೆ ಮಾಡಿ ಝಾಡಿಸಿದಳು. ಅಲ್ಲಿಗೆ ಕೊನೆ!?

           ಆದರೆ ಅಬ್ದುಲ್ಲಾ ಸುಮ್ಮನಿರಬೇಕಲ್ಲಾ! ಒಂದು ದಿನ ವಿದ್ಯುಲ್ಲತಾಳ ಸ್ನೇಹಿತೆಯೊಬ್ಬಳ ಜನುಮ ದಿನದ ಪಾರ್ಟಿ. ತರಗತಿಯ ಎಲ್ಲಾ ಸಹಪಾಠಿಗಳು ಭಾಗವಹಿಸಿದ್ದರು. ಯಾವಾಗಲೂ ಪಾರ್ಟಿಯಲ್ಲಿ ಏನೂ ತಿನ್ನದೇ, ಕುಡಿಯದೇ ಇರುತ್ತಿದ್ದ ವಿದ್ಯುಲ್ಲತಾ ಅಂದು ಎಲ್ಲರ ಒತ್ತಾಯಕ್ಕೆ ಒಳಗಾಗಿ ತಂಪು ಪಾನೀಯ ಕುಡಿಯಬೇಕಾಯಿತು. ಪಾರ್ಟಿ ನಡೆಯುತ್ತಿತ್ತು. ಸ್ವಲ್ಪ ಹೊತ್ತಲ್ಲೇ ಮೂರ್ಛೆ ತಪ್ಪಿ ಬಿದ್ದಳು. ಎಲ್ಲರೂ ಗಾಬರಿಯಾಗಿದ್ದಾಗ ಅಬ್ದುಲ್ಲಾ ತನ್ನ ಕಾರಿನಲ್ಲಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟ. ಜೊತೆಯಲ್ಲಿ ಅಬ್ದುಲ್ಲಾನ ಇಬ್ಬರು ಗೆಳೆಯರು ಅಬ್ಬಾಸ್, ಇಸ್ಮಾಯಿಲ್!
   
       ಕಾರು ಆಸ್ಪತ್ರೆ ತಲುಪಲಿಲ್ಲ. ಪ್ರಜ್ಞೆ ಬಂದಾಗ ವಿದ್ಯುಲ್ಲತಾ ಅಬ್ದುಲ್ಲನ ಕಬಂಧ ಬಾಹುಗಳಲ್ಲಿ ನಲುಗುತ್ತಿದ್ದಳು. ಒಬ್ಬರಾದ ಮೇಲೆ ಒಬ್ಬರು. ಜೀವಚ್ಛವವಾದಳು ವಿದ್ಯುಲ್ಲತಾ... ರಾತ್ರಿ ವಿದ್ಯುಲ್ಲತಾ ಮನೆಗೇ ಬರಲೇ ಇಲ್ಲ. ಗಾಬರಿಯಾದ ಪದ್ಮನಾಭಯ್ಯನವರು ಅವಳ ಸ್ನೇಹಿತೆಯರಲ್ಲೆಲ್ಲಾ ವಿಚಾರಿಸಿ ಅಬ್ದುಲ್ಲಾನ ಮೇಲೆ ಪೊಲೀಸಿಗೆ ದೂರು ಕೊಟ್ಟರು. ಪ್ರಯೋಜನವಿಲ್ಲ. ಹದಿನೈದು ದಿವಸಗಳ ನಂತರ ಅಬ್ದುಲ್ಲಾನಿಂದ ದೂರವಾಣಿ ಕರೆ ಬಂತು. ವಿದ್ಯುಲ್ಲತಾಳನ್ನು ತಾನು ಮದುವೆಯಾಗಿದ್ದೇನೆಂದೂ, ಅವಳಿಗೆ ನಿಮ್ಮೊಡನೆ ಮಾತಾಡಲು ಇಷ್ಟವಿಲ್ಲವೆಂದೂ....ಪದ್ಮನಾಭಯ್ಯನವರ ಎದೆಯೊಡೆಯಿತು. ಲಕ್ಷ್ಮಿ ಅಮ್ಮ ಮಗಳ ನೆನಪಲ್ಲೇ ಕೊರಗಿ ಕೊರಗಿ ಜೀವಚ್ಛವವಾದರು. ಮಗ ಪ್ರದ್ಯುಮ್ನನಿಗೆ ಸಹವಾಸ ದೋಷದಿಂದ ಡ್ರಗ್ ಚಟ ಹಿಡಿದು ಅವನನ್ನು ಹಿಡಿಯಲು ಯಾರಿಂದಲೂ ಆಗುತ್ತಿರಲಿಲ್ಲ. ಪದ್ಮನಾಭಯ್ಯನವರಿಗೆ ಎರಡು ಸಲ ಹಾರ್ಟ್ ಅಟ್ಯಾಕ್ ಆಗಿದೆ. ಹಸುಗೂಸು ನಂದಿನಿಯನ್ನು ಯಾರೋ ಕಟುಕರು ಎತ್ತಿಕೊಂಡು ಹೋಗಿದ್ದಾರೆ.

           ಈಗ ನಂದನವನದಲ್ಲಿ ಅಂಬಾ ಎನ್ನುವ ದನಿಯಿಲ್ಲ. ಕುಂಯ್ ಕುಂಯ್ ಸ್ವರವಿಲ್ಲ. ವಿದ್ಯುಲ್ಲತಾಳ ಕೋಕಿಲ ಗಾನವಿಲ್ಲ. ಬೆಕ್ಕು ಕಾಣದಾಗಿದೆ. ತೋಟ ಒಣಗಿದೆ. ಅಂಗಳದಲ್ಲಿ ಪಾಚಿ ಆವರಿಸಿದೆ. ನಂದನವನದಂತಿದ್ದದ್ದು ಸ್ಮಶಾನ ಸದೃಶವಾಗಿದೆ. ಮನೆಯ ಬಾಗಿಲಿನಲ್ಲಿ ವಿದ್ಯುಲ್ಲತಾಳ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದಾನೆ ದಾಸು!