ಪುಟಗಳು

ಗುರುವಾರ, ಅಕ್ಟೋಬರ್ 5, 2017

ಸ್ವಾತಂತ್ರ್ಯದ ಅಧ್ವರಕ್ಕೆ ಪ್ರಾಣವೇ ಪೂರ್ಣಾಹುತಿ

ಸ್ವಾತಂತ್ರ್ಯದ ಅಧ್ವರಕ್ಕೆ ಪ್ರಾಣವೇ ಪೂರ್ಣಾಹುತಿ

       ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ 1857ರಂತಹಾ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಅಂತಹ ಅಂಧಕಾರದ ಸಮಯದಲ್ಲಿ ರತ್ನಗರ್ಭಾ ವಸುಂಧರೆಯಾದ ತಾಯಿ ಭಾರತಿ, ಮಹರ್ಷಿ ದಯಾನಂದ ಎಂಬ ಅತ್ಯಂತ ತೇಜಸ್ವೀ ಪುರುಷನೊಬ್ಬನಿಗೆ ಜನ್ಮ ನೀಡಿದಳು. ಅವರು ಗಾಢಾಂಧಕಾರವನ್ನು ತೊಲಗಿಸಲು ಆರ್ಯ ಸಮಾಜವೆಂಬ ದೀಪವೊಂದನ್ನು ಹಚ್ಚಿದರು. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ!

              ಭಾರತೀಯರ ಮುಂದೆ ಈಗ ಎರಡು ದಾರಿಗಳಿದ್ದವು. ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ ಒಂದು ಕಡೆಯಾದರೆ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜ ಇನ್ನೊಂದೆಡೆ. ಈ ಎರಡೂ ಪ್ರಭಾವಗಳು ತರುಣ ಪೀಳಿಗೆಯ ಮರಣ ಭಯ ನೀಗಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗನ ವಂಶವೃಕ್ಷಕ್ಕಾಯಿತು ಎಂಬುದೇ ವಿಚಿತ್ರ ಹಾಗೂ ವಿಶೇಷ ಸಂಗತಿ. ಆ ವಂಶದ ಪೂರ್ವಜ ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!

             1907 ಸೆಪ್ಟೆಂಬರ್ 28... ವಿಕ್ರಮ ಸಂವತ್ಸರದ 1964ರ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲಾಪುರದ ಬಂಗಾ ಗ್ರಾಮದಲ್ಲಿ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಜ್ಜಿ ಜಯಾ ಕೌರ್ "ಭಗತ್" ಎಂದು ಹೆಸರಿಟ್ಟಳು! ಎಲ್ಲರ ಕಣ್ಮಣಿಯಾಗಿ ಬೆಳೆದ ಸುಂದರ-ಆಕರ್ಷಕ ರೂಪದ ಮಗು ಎರಡೂವರೆ ವರ್ಷವಾಗಿದ್ದಾಗ ತಂದೆಯ ಜೊತೆ ಜಮೀನಿಗೆ ಹೋದಾಗ ತಂದೆಯ ಕೈಬಿಟ್ಟು ಜಮೀನಿನಲ್ಲಿ ಚಿಕ್ಕ ಚಿಕ್ಕ ಹುಲ್ಲಿನ ಕಡ್ಡಿಗಳನ್ನು ನೆಡಲಾರಂಭಿಸಿತು. ತಂದೆ ಪ್ರೀತಿಯಿಂದ ಏನು ಮಾಡುತ್ತಿದ್ದೀಯಾ ಎಂದು ಕೇಳಿದರೆ "ಬಂದೂಕುಗಳನ್ನು ನೆಡುತ್ತಿದ್ದೇನೆ" ಎಂದು ಇನ್ನೂ ಸರಿಯಾಗಿ ಶಬ್ಧ ಉಚ್ಛಾರಣೆ ಮಾಡಲಾಗದ ಮಗುವಿನ ಉತ್ತರವನ್ನು ಕೇಳಿ ತಂದೆ ಹಾಗೂ ಸ್ನೇಹಿತ ಮೆಹ್ತಾ ದಿಗ್ಭ್ರಮೆಗೊಳಗಾದರು. ಬೆಳೆಯುವ ಸಿರಿ ಮೊಳಕೆಯಲ್ಲಿ!

        ಸ್ವಾಮಿ ದಯಾನಂದ ಸರಸ್ವತಿಗಳಿಂದಲೇ ಜನಿವಾರ ಹಾಕಿಸಿಕೊಂಡು ತನ್ನ ವಂಶವನ್ನುದ್ಧರಿಸಿದ. ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದ್ದ. ಅದು ಬಹುದೊಡ್ಡ ಕ್ರಾಂತಿ. ಅದೇ ರಕ್ತಗತವಾಗಿ ಆ ವಂಶದಲ್ಲಿ ಬಂತು. ಸದಾ ದೇಶದ ಕುರಿತಾಗೇ ಚಿಂತಿಸುತ್ತಿದ್ದ ಆತ ತನ್ನ ತಮ್ಮ ಮೆಹರ್ ಸಿಂಹನ ಮಗ ಹರಿಸಿಂಹನ ಜೊತೆಗೂಡಿ ಬಾಂಬೊಂದನ್ನು ತಯಾರಿಸಿ ಪರೀಕ್ಷಿಸಿದ್ದ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿದ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ.

             ನಾಲ್ಕನೆಯ ತರಗತಿಯಲ್ಲಿರುವಾಗಲೇ ಆತ ತನ್ನ ಮನೆಯಲ್ಲಿದ್ದ ಅಜಿತ್ ಸಿಂಹ, ಸೂಫೀ ಅಂಬಾಪ್ರಸಾದ, ಲಾಲಾ ಹರದಯಾಳ್ ಬರೆದಿದ್ದ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ್ದ. ಅವುಗಳಲ್ಲಿದ್ದದ್ದು ಬರೇ ರಾಜಕೀಯ-ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು! ಆತನಲ್ಲಿ ಬ್ರಿಟಿರ ವಿರುದ್ಧ ದ್ವೇಷಾಗ್ನಿ ಝಗಝಗಿಸಲಾರಂಭಿಸಿತು! ಭಾರತಾ ಮಾತಾ ಸೊಸೈಟಿಯ ಆಂದೋಳನ ಶುರುವಾದಾಗ ಶಿಶುವಾಗಿದ್ದ, ಗದರ್ ಪಾರ್ಟಿಯ ಆಂದೋಳನದ ಬೆಳವಣಿಗೆಯನ್ನು ಹೆಜ್ಜೆಹೆಜ್ಜೆಗೂ ಕೇಳಿಸಿಕೊಂಡಿದ್ದ ಆತ ಗದರ್ ಆಂದೋಳನ ತಾರಕಕ್ಕೇರಿದಾಗ ಅದರಲ್ಲೊಬ್ಬನಾದ! 1919ರ ಏಪ್ರಿಲ್ 13! ಜಲಿಯನ್ ವಾಲಾ ಬಾಗ್ ನಲ್ಲಿ ಬ್ರಿಟಿಷರು ದೇಶೀರಕ್ತದ ಹೋಳಿ ಆಚರಿಸಿದ್ದರು! ಹನ್ನೆರಡು ವರ್ಷದ ಭಗತ್ ಮರುದಿನ ಶಾಲೆಗೆ ಹೋದವನು ಸಮಯಕ್ಕೆ ಸರಿಯಾಗಿ ಮರಳಲಿಲ್ಲ. ಜಲಿಯನ್ ವಾಲಾ ಬಾಗಿಗೆ ಹೋಗಿ ರಕ್ತದಿಂದ ನೆನೆದಿದ್ದ ಮಣ್ಣನ್ನು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಶೆಯಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಆ ಶೀಶೆಯ ನಾಲ್ಕೂ ಕಡೆ ಹೂವುಗಳನ್ನಿರಿಸಿ ಭಕ್ತಿಯಿಂದ ನಮಿಸಿದ. ಅದು ದಿನನಿತ್ಯದ ಪೂಜೆಯಾಯಿತು! ಸ್ನೇಹಿತ ಜಯದೇವನ ಮುಖೇನ ತಂದೆಗೆ ಶಾಲೆ ಬಿಟ್ಟು ಕ್ರಾಂತಿಗೆ ಧುಮುಕುವ ವಿಚಾರ ಅರುಹಿದ ಭಗತ್ ಗೆ ವಿದೇಶೀ ವಸ್ತುಗಳ ಹೋಳಿ ಆಚರಣೆ ಕ್ರಾಂತಿಯ ಎರಡನೆ ಮೆಟ್ಟಿಲಾಯಿತು.

               ಆಗ ಸಿಡಿದಿತ್ತು ಚೌರಿಚೌರಾ! ಪೊಲೀಸರನ್ನು ಠಾಣೆಯೊಳಗೆ ಕೂಡಿ ಹಾಕಿದ ದೇಶಭಕ್ತ ಗುಂಪು ಠಾಣೆಗೇ ಬೆಂಕಿ ಹಚ್ಚಿತು. ಗಾಂಧಿ ಹಿಂಸೆ ತಲೆದೋರಿದೆ ಎಂದು ತನ್ನ ಆಂದೋಲನವನ್ನೇ ಹಿಂತೆಗೆದುಕೊಂಡರು. ಡಾ. ಮೂಂಜೆ, ಲಾಲಾ ಲಜಪತ್ ರಾಯ್ ಇದನ್ನು ಕಟುವಾಗಿ ಟೀಕಿಸಿದರು. ಭಗತನ ಮನಸ್ಸು ಹೊಯ್ದಾಟವಾಡುತ್ತಿತ್ತು. ಕ್ರಾಂತಿಯೇ.....ಅಹಿಂಸೆಯೇ? ಆಗ ನಗುನಗುತ್ತ ಬಲಿವೇದಿಯನ್ನೇರಿದ ಕರ್ತಾರ್ ಸಿಂಗ್ ಸರಾಬಾನ ಪುಣ್ಯಕರ್ಮವು ಭಗತ್ ಸಿಂಹನ ಎದೆಯಲ್ಲಿ ಹೊಳೆಯುತ್ತಾ ಕರ್ತಾರನ ಆತ್ಮವೇ ಅವನ ನರನಾಡಿಗಳಲ್ಲಿ ತುಂಬಿಕೊಂಡಿತು! ಅಸಂಖ್ಯಾತ ಜನರನ್ನು ಸೆಳೆದರೂ ಅಹಿಂಸೆಯ ಹಾದಿ ದೇಶವನ್ನು ಸ್ವಾತಂತ್ರ್ಯ ಸಾಧನೆಯ ಕಡೆಗೆ ಕೊಂಡೊಯ್ಯುವುದಿಲ್ಲ ಎಂದವನ ಅಂತರ್ವಾಣಿ ನುಡಿಯಲಾರಂಭಿಸಿತು.

              ಒಂಭತ್ತನೇ ತರಗತಿಯಲ್ಲಿ ಅಸಹಕಾರೀ ಆಂದೋಲನಕ್ಕಾಗಿ ಶಾಲೆ ಬಿಟ್ಟಿದ್ದ ಅವನ ಬುದ್ಧಿಮತ್ತೆಯನ್ನು ಗುರುತಿಸಿದ್ದ ಭಾಯಿ ಪರಮಾನಂದರು ಆತನನ್ನು ನ್ಯಾಷನಲ್ ಕಾಲೇಜಿಗೆ ಸೇರಿಸಲು ನೆರವಾದರು. ಪ್ರೊ. ಜಯಚಂದ್ರ ವಿದ್ಯಾಲಂಕಾರರ ಸಂಪರ್ಕದಿಂದ ಭಗತನೊಳಗಿನ ಭೂಗತ ಕ್ರಾಂತಿಕಾರಿ ಅರಳಲಾರಂಭಿಸಿದ. ಕಾಲೇಜಿನಲ್ಲಿ ನಾಟಕದ ಕ್ಲಬ್ವೊಂದನ್ನು ಸ್ಥಾಪಿಸಿ ಅದರ ಮೂಲಕ ರಾಣಾ ಪ್ರತಾಪ, ಸಾಮ್ರಾಟ್ ಚಂದ್ರಗುಪ್ತರ ನಾಟಕವನ್ನು ಆರಂಭಿಸಿದ. ಅದಕ್ಕೆ ಸರ್ಕಾರದ ಕಾಕದೃಷ್ಟಿ ಬಿತ್ತು. ಮದುವೆಗೆ ಮನೆಯವರ ಒತ್ತಡ ಹೆಚ್ಚಾದಾಗ ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳಿರುವಾಗ ಆತ ಲಾಹೋರಿಗೆ ಪರಾರಿಯಾದ. ಅಲ್ಲಿಂದ ಕಾನ್ಪುರ ತಲುಪಿದ. ಅಲ್ಲಿ ಬಂಗಾಲಿ ಕ್ರಾಂತಿಕಾರಿಗಳೊಡನೊಂದಾಗಿ ಹೋದ. ಗಣೇಶ ಶಂಕರ ವಿದ್ಯಾರ್ಥಿಯ "ಪ್ರತಾಪ್" ಪತ್ರಿಕೆಗೆ ಬಲವಂತ ಸಿಂಹ ಎಂಬ ಹೆಸರಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದ. ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾದ ಸ್ಥಾಪನೆಯಲ್ಲಿ ತೊಡಗಿದ. ಕರ್ತಾರನ ಬಲಿದಾನದ ದಿನವನ್ನು ಕರ್ತಾರನ ಫೋಟೋ ಮೇಲೆ ರಕ್ತದ ಅಭಿಷೇಕ ಮಾಡಿ ಕ್ರಾಂತಿದೀಕ್ಷೆ ನೀಡುವ ಮೂಲಕ ಬಹಿರಂಗವಾಗಿ ಆಚರಿಸಲಾಯಿತು. ಈ ನಡುವೆ ಪಂಡಿತ್ ರಾಮ ಪ್ರಸಾದರ ನೇತೃತ್ವದಲ್ಲಿ ನಡೆದ ಕಾಕೋರಿ ಕಾಂಡದಲ್ಲಿ ಭಾಗಿಯಾದ. 1927ರ ಜುಲೈನಲ್ಲಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ. ಕೆಲವು ವಾರಗಳ ಬಳಿಕ ಅರವತ್ತು ಸಾವಿರ ರೂಪಾಯಿಗಳ ಮುಚ್ಚಳಿಕೆ ಬರೆಸಿಕೊಂಡು ಅವನನ್ನು ಬಿಡುಗಡೆ ಮಾಡಲಾಯಿತು. ಸೈಮನ್ ಕಮೀಷನ್ನಿನ ವಿರುದ್ಧ ಹೋರಾಡುತ್ತಿದ್ದ ಲಾಲಾ ಲಜಪತ್ ನೇತೃತ್ವದ ಹೋರಾಟಗಾರರ ಮೇಲೆ ಸ್ಕಾಟ್ ನ ಆದೇಶದಂತೆ ಸ್ಯಾಂಡರ್ಸ್ ಮುಗಿಬಿದ್ದ. ಪಂಜಾಬಿನ ವೃದ್ಧ ವೀರ ಕೇಸರಿಯ ಶರೀರ ಸ್ಯಾಂಡರ್ಸನ ಲಾಠಿ ಏಟುಗಳ ಆಘಾತಕ್ಕೆ ಜರ್ಝರಿತವಾಯಿತು. ಸ್ಕಾಟ್ ನ ಬಲಿಗೆ ಬೀಸಿದ ಬಲೆಗೆ, ಜಯಗೋಪಾಲ ತಪ್ಪಾಗಿ ಗುರುತಿಸಿದ್ದರಿಂದ ಸ್ಕಾಟಿನ ಬದಲಾಗಿ ಸ್ಯಾಂಡರ್ಸ್, ರಾಜಗುರು ಹಾಗೂ ಭಗತ್ ಸಿಂಹನ ಗುಂಡುಗಳಿಗೆ ಬಲಿಯಾದ. ಅದು ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಆದ ಮರ್ಮಾಘಾತ!

           ಅಸೆಂಬ್ಲಿಯಲ್ಲಿ ಬಾಂಬು ಎಸೆಯುವ ಯೋಜನೆ ಭಗತನದ್ದು. ವ್ಯೂಹ ರಚನೆ ಆಜಾದರದ್ದು. ಆಜಾದ್ ಅಂದರು "ಬಾಂಬು ಎಸೆದವರು ಕೂಡಲೇ ಓಡಿ ಬರಬೇಕು. ಅವರನ್ನು ನಾನು ರಕ್ಷಿಸುತ್ತೇನೆ". ಆದರೆ ಬಾಂಬು ಎಸೆದು ಎಲ್ಲರೆದುರು ನಿಂತು ನಾವು ಯಾಕೆ ಎಸೆದೆವೆಂದು ಹೇಳಬೇಕು, ಓಡಬಾರದು ಎಂಬುದು ಭಗತ್ ನಿಲುವಾಗಿತ್ತು. ಭಗತ್ ನ ಹಠಕ್ಕೆ ಎಲ್ಲರೂ ಒಪ್ಪಲೇಬೇಕಾಯಿತು. ಸೂರ್ಯ ಮುಳುಗದ ಸಾಮ್ರಾಜ್ಯದ ಕಿವುಡರ ಅಸೆಂಬ್ಲಿಯಲ್ಲಿ ಕ್ರಾಂತಿಯ ಬಾಂಬು ಸಿಡಿದಿತ್ತು. ಆದರೆ ಭಗತ್-ದತ್ತ ತ್ಯಾಗದ ಹುಚ್ಚಿಗೊಳಗಾಗಿ ಬಂಧನಕ್ಕೊಳಗಾದರು! ಚಂದ್ರಶೇಖರ್ ಆಜಾದ್ ವೇಶಮರೆಸಿಕೊಂಡು ಬಂದು ಭಗತ್ ನನ್ನು ಬಿಡಿಸಲೆತ್ನಿಸಿದರು. ಆದರೆ ಭಗತನ ಹಠ ಅದಕ್ಕೊಪ್ಪಲಿಲ್ಲ...ಹೇಡಿಗಳು ತಮ್ಮ ಸ್ವಾಭಾವಿಕ ಮೃತ್ಯುವಿನ ಮೊದಲೇ ಎಷ್ಟೋ ಸಲ ಸಾಯುತ್ತಾರೆ. ಆದರೆ ವೀರನಿಗೆ ಮೃತ್ಯು ಬರುವುದು ಒಂದೇ ಸಲ! ಫಾಸಿಕೋಣೆಯಲ್ಲಿ ಗಂಭೀರ ಅಧ್ಯಯನಗಳೊಂದಿಗೆ ತನ್ನ "ಆತ್ಮಕಥೆ", "ದಿ ಡೋರ್ ಟು ಡೆತ್", "ಐಡಿಯಲ್ ಆಫ್ ಸೋಷಿಯಾಲಿಸಮ್", "ಸ್ವಾಧೀನತಾ ಕೀ ಲಢಾಯೀ ಮೇಂ ಪಂಜಾಬ್ ಕಾ ಪಹಲಾ ಉಭಾರ್" ಎಂಬ ಪುಸ್ತಕಗಳನ್ನೂ ಬರೆದ. ಆತ ಸಾಮ್ರಾಜ್ಯಶಾಹಿಗಳಿಗೆ ಪದಾಘಾತ ನೀಡಿ ರಾಜಗುರು-ಸುಖದೇವರೊಂದಿಗೆ ನಗುನಗುತ್ತಾ ಸ್ವಾತಂತ್ರ್ಯ ಯಜ್ಞಕ್ಕೆ ಪೂರ್ಣಾಹುತಿ ನೀಡಿ ತಾತ ಅರ್ಜುನನ ಸಂಕಲ್ಪವನ್ನು ಪೂರೈಸಿದ.

             ಆರ್ಯ ಸಮಾಜದ ಅನುಯಾಯಿಗಳಾಗಿ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದು ಅಲ್ಲೊಂದು ಯಜ್ಞವೇದಿಕೆಯನ್ನು ಅಣಿ ಮಾಡಿದ್ದ ಅಜ್ಜ, ಆ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿ, ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ, ಉರಿಯನ್ನೆಬ್ಬಿಸಿದ್ದ ಅಪ್ಪ, ಚಿಕ್ಕಪ್ಪಂದಿರ ಪಥದಲ್ಲಿ ನಡೆದ ಭಗತ್ ಸಿಂಗ್ ತನ್ನ ಜೀವನವನ್ನೇ ಆಜ್ಯವನ್ನಾಗಿಸಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಅಮೃತಧಾರೆಯು ತಾಯಿ ಭಾರತಿಗೆ ಅಭಿಷೇಕ ಮಾಡಿ ಅಮರವಾಯಿತು.


ಬುಧವಾರ, ಅಕ್ಟೋಬರ್ 4, 2017

ರೋಹಿಂಗ್ಯಾ ಪರ ನಿಲ್ಲೋ ಮುನ್ನ ಅರೆಖಾನಿನತ್ತ ಅರೆಕ್ಷಣ ನೋಡಿ!

ರೋಹಿಂಗ್ಯಾ ಪರ ನಿಲ್ಲೋ ಮುನ್ನ ಅರೆಖಾನಿನತ್ತ ಅರೆಕ್ಷಣ ನೋಡಿ!


          "ನಾವು ದುರ್ಬಲರಾಗಿದ್ದರೆ ನಮ್ಮ ಮಾತೃಭೂಮಿ ಮುಸ್ಲಿಮರ ವಶವಾಗುತ್ತೆ. ನಿಮ್ಮ ಹೃದಯದಲ್ಲಿ ಅಗಾಧವಾದ ದಯೆ ಹಾಗೂ ಪ್ರೇಮವಿರಬಹುದು; ಹಾಗಿದ್ದ ಮಾತ್ರಕ್ಕೆ ನೀವು ಹುಚ್ಚು ನಾಯಿಯ ಜೊತೆ ಮಲಗಲು ಸಾಧ್ಯವಿಲ್ಲ" ಬ್ರಹ್ಮದೇಶ(ಬರ್ಮಾ)ದ ಬೌದ್ಧ ಭಿಕ್ಷು ಅಶಿನ್ ವಿರಥುವಿನ ಈ ದಿಟ್ಟ ನುಡಿ ಅಹಿಂಸಾ ಪ್ರಿಯ ಬೌದ್ಧರನ್ನೇ ಶಸ್ತ್ರ ಹಿಡಿಯಲು ಪ್ರೇರೇಪಿಸಿತು. ಅರೇ ಒಬ್ಬ ಬೌದ್ಧ ಭಿಕ್ಷು ಮುಸ್ಲಿಮರನ್ನು ಹುಚ್ಚುನಾಯಿಗಳೆಂದು ಯಾಕೆ ಕರೆದ? ಅಹಿಂಸೆಯೇ ಮೈವೆತ್ತವರು ಎಂದು ಇತಿಹಾಸಕಾರರಿಂದ, ಸ್ವತಃ ಸೆಕ್ಯುಲರುಗಳಿಂದಲೇ ಹೊಗಳಿಸಿಕೊಂಡ ಬೌದ್ಧರು ಮುಸ್ಲಿಮರ ವಿರುದ್ಧ ಯುದ್ಧ ಸಾರಿದ್ದೇಕೆ ಎಂದು ಯಾರೂ ವಿಚಾರ ಮಾಡಲಿಲ್ಲವೇಕೆ? ಪ್ರಸ್ತುತ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿರುವ ಈ ರೋಹಿಂಗ್ಯಾಗಳೆಂದರೆ ಯಾರು? ಅವರ ಅಸಲಿಯತ್ತೇನು ಎನ್ನುವುದನ್ನು ಯಾಕೆ ಯಾರೂ ಕೆದಕುತ್ತಿಲ್ಲ? ಹಾಗೆ ನೋಡಿದರೆ ಈ ಸಮಸ್ಯೆಯ ಮೂಲ ಸ್ವತಃ ರೋಹಿಂಗ್ಯಾಗಳೇ ಹೊರತು ಬರ್ಮೀಯರಲ್ಲ ಎನ್ನುವ ಸತ್ಯ ತಿಳಿಯಬೇಕಾದರೆ ಸ್ವಲ್ಪ ಗತಕಾಲಕ್ಕೋಡಬೇಕು!



            ಬಿಬಿಸಿಯಂತಹ ಸುದ್ದಿ ಮಾಧ್ಯಮಗಳು, ಇಸ್ಲಾಮಿನ ಪಾದ ನೆಕ್ಕುವ ಹುಸಿ ಜಾತ್ಯಾತೀತವಾದಿಗಳು ಹಾಗೂ ಅನ್ಯ ಭಾಗದ ಮುಸ್ಲಿಮರು ಬೊಬ್ಬಿರಿಯುವಂತೆ ರೋಹಿಂಗ್ಯಾಗಳು ಬರ್ಮಾದ ಮೂಲನಿವಾಸಿಗಳೂ ಅಲ್ಲ, ನಶಿಸುತ್ತಿರುವ ಬರ್ಮಾದ ಬುಡಕಟ್ಟು ಜನಾಂಗವೂ ಅಲ್ಲ. ಅವರೆಲ್ಲಾ ಹೊರಗಿನಿಂದ ವಲಸೆ ಬಂದವರು. ಬರ್ಮಾದ ಬೌದ್ಧರ ಈ ಮಾತುಗಳಲ್ಲಿ ಸುಳ್ಳೇನೂ ಇಲ್ಲ. 15ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ 24 ವರ್ಷ ಬಂಗಾಳದಲ್ಲಿ ಕಳೆದು ಬಳಿಕ ಮತ್ತೆ ರಾಜ್ಯ ಪಡೆದಾಗ ಆತನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ತೆರಳಿದರು. ಇದು ಆ ಬೌದ್ಧರ ನೆಲಕ್ಕೆ ಜಿಹಾದಿಗಳ ಮೊದಲ ಮುಕ್ತ ಪ್ರವೇಶ! ಬಂಗಾಳಕೊಲ್ಲಿಯ ಪೂರ್ವಭಾಗದ ರಖಾಯಿಂಗ್ ಎನ್ನುವ ಪ್ರದೇಶ ಐತಿಹಾಸಿಕ ಬೌದ್ಧ ನೆಲ. ಹೇರಳ ಪ್ರಾಕೃತಿಕ ಸಂಪನ್ಮೂಲಗಳಿಂದ ಕೂಡಿದ್ದ, ಆಯಕಟ್ಟಿನ ವ್ಯಾಪಾರ ಸ್ಥಳವಾಗಿದ್ದ ಅಖಂಡ ಭಾರತದ ಈ ಭೂಭಾಗ ಬ್ರಿಟಿಷರ ಕಣ್ಣು ಕುಕ್ಕಿತು. ಬ್ರಿಟೀಷ್ ಆಕ್ರಮಣವಾದೊಡನೆ ಕೇವಲ ರಖಾಯಿಂಗ್'ನ ಹೆಸರು ಅರಖಾನ್ ಎಂದು ಬದಲಾದುದು ಮಾತ್ರವಲ್ಲ, ಬರ್ಮಾದ ಸಂಪದ್ಭರಿತ ಅರಣ್ಯಗಳಲ್ಲಿದ್ದ ಬೆಲೆಬಾಳುವ ಮರಗಳು ಇದೇ ಅರಖಾನ್ ಮುಖಾಂತರ ಚಿತ್ತಗಾಂಗ್ ಸೇರಿ ಇಂಗ್ಲೆಂಡಿಗೆ ರವಾನೆಯಾಗಲಾರಂಭಿಸಿತು. ಬ್ರಿಟಿಷರ ಈ "ನಾಟಾ" ನಾಟಕಕ್ಕೆ ಮಾತ್ರವಲ್ಲದೆ ಬರ್ಮಾದ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದವರು ಬಂಗಾಳದ ಕೂಲಿ ಕಾರ್ಮಿಕರೇ! ಇವರಲ್ಲಿ ಚಿತ್ತಗಾಂಗಿನ ಮುಸಲ್ಮಾನರ ಸಂಖ್ಯೆಯೇ ಹೆಚ್ಚು. ಕೆಲವರು ಉದ್ಯೋಗದ ಅನುಕೂಲಕ್ಕಾಗಿ ಅಲ್ಲೇ ನೆಲೆ ನಿಂತರು. ಬೆರಳು ಕೊಟ್ಟರೆ ಹಸ್ತ ನುಂಗುವ ಬುದ್ಧಿಯ ಮುಸಲ್ಮಾನರು ಕ್ರಮೇಣ ಹಿಂಡುಹಿಂಡಾಗಿ ಬರ್ಮಾಕ್ಕೆ ವಲಸೆ ಹೋಗತೊಡಗಿದರು. ಈ ವಲಸೆಯ ಪ್ರಮಾಣ ಎಷ್ಟೊಂದು ತೀವ್ರವಾಗಿತ್ತೆಂದರೆ 1940ರ ದಶಕದಲ್ಲಿ “ದಿ ಸ್ಟೇಟ್ಸ್ ಮೆನ್” ಚಿತ್ತಗಾಂಗಿನ ಹತ್ತನೇ ಒಂದರಷ್ಟು ಜನ ಪ್ರತಿವರ್ಷ ಅರೆಖಾನ್'ಗೆ ವಲಸೆ ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿತ್ತು. ಬೌದ್ಧ ಎಷ್ಟೆಂದರೂ ಹಿಂದೂ ಧರ್ಮದ ಒಂದು ಪಂಥವೇ. ಬೌದ್ಧರಾದವರಿಗೆ ಹಿಂದೂ ಭೋಳೆ ಸ್ವಭಾವ ಬಿಟ್ಟು ಹೋಗಲು ಹೇಗೆ ಸಾಧ್ಯ. ಸಹಜವಾಗಿಯೇ ಅವರು ಸಹಾನುಭೂತಿಯಿಂದ ಮುಸ್ಲಿಮರ ಕಾಪಟ್ಯವನ್ನು ಅರಿಯದೇ, ಭವಿಷ್ಯದ ಕರಾಳತೆಯನ್ನು ಅರ್ಥೈಸದೇ ಬಂದವರಿಗೆ ಅನ್ನ ಕೊಟ್ಟರು, ಉಳಿವಿಗೆ ಜಾಗ ಕೊಟ್ಟರು. ಹೀಗೆ ಅಂದು ವಲಸೆ ಹೋದವರೇ ಈ ರೋಹಿಂಗ್ಯಾ ಮುಸಲ್ಮಾನರು.

            ಅಹಿಂಸೆಯನ್ನು ಪ್ರತಿಪಾದಿಸುವ ಜನರ ನಾಡೇನೋ ಆಶ್ರಯ ಕೊಟ್ಟಿತು. ಆದರೆ ಈ ಜನ ಅದನ್ನು ಉಳಿಸಿಕೊಳ್ಳಲಿಲ್ಲ. ಉಳಿಸಿಕೊಳ್ಳುವ ಮನಸ್ಸಿದ್ದರೂ ಅವರಿಗಂಟಿರುವ ಮತ ಬಿಡಬೇಕಲ್ಲ? ಕ್ರಮೇಣ ಅಲ್ಲಿ ಮಸೀದಿಗಳು ತಲೆಯೆತ್ತಲಾರಂಭಿಸಿದವು. ಎಷ್ಟೆಂದರೆ ನಲವತ್ತು ಜನರ ಸಣ್ಣ ಗುಂಪಿಗೂ ಒಂದು ಮಸೀದಿ! ಅಲ್ಲಿಂದ ದಿನ ಬೆಳಗಾದರೆ ಕಾಫಿರರನ್ನು ಕೊಲ್ಲಿರಿ ಎಂಬ ಸುಪ್ರಭಾತ ಕೇಳಿ ಬರಲಾರಂಭಿಸಿತು. ಯಾವ ಮಾಲಿಕ ಕೆಲಸ ಕೊಟ್ಟನೋ ಆತನ ಜಾಗವನ್ನೇ ಈ ರೋಹಿಂಗ್ಯಾಗಳು ತಮ್ಮದಾಗಿಸಿಕೊಂಡರು. ವಿರೋಧಿಸಿದ ಮಾಲಿಕನನ್ನು ಹತ್ಯೆಗೈದರು. ಆತನ ಪರಿವಾರದ ಹೆಂಗಳೆಯರ ಮೇಲೆ ಅತ್ಯಾಚಾರಗೈದರು. ಆತನ ಮಗಳನ್ನು ಹೊತ್ತೊಯ್ದರು. ಮುಸ್ಲಿಂ ರಾಷ್ಟ್ರೀಯವಾದ ಮೊಳೆಯಲಾರಂಭಿಸಿತು. ಜಿನ್ನಾನ ದ್ವಿರಾಷ್ಟ್ರವಾದ ಅವರಿಗೆ ಪ್ರಿಯವಾಯಿತು. ಭಾರತದ ವಿಭಜನೆಯ ಸಮಯದಲ್ಲಿ ಆದ ಇತಿಹಾಸದ ಬಹು ದೊಡ್ಡ ಭಯಾನಕ ಕಗ್ಗೊಲೆಯಲ್ಲೇ ಪಾತ್ರವಹಿಸಿ ಹಿಂದೂಗಳ ಜೀವ ತಿಂದರು. ಬರ್ಮಾ ಸ್ವಾತಂತ್ರ್ಯ ಹೊಂದುವ ಹೊಸ್ತಿಲಲ್ಲಿ ಇದೇ ರೋಹಿಂಗ್ಯಾಗಳು ಅರಖಾನ್ ಪ್ರಾಂತ್ಯವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಬೇಡಿಕೆಯಿಟ್ಟು ದಂಗೆಯನ್ನಾರಂಭಿಸಿದರು.  ಬರ್ಮಾ ಸರ್ಕಾರ ಒಲ್ಲೆ ಎಂದಾಗ ಜಿನ್ನಾನ ಜೊತೆ ಮಾತುಕತೆ ನಡೆಸಿ ಬರ್ಮಾ ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ಈ ಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಖಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದಿಂದ ಮತ್ತಷ್ಟು ಮುಸ್ಲಿಮರನ್ನು ಕರೆತರಲಾರಂಭಿಸಿದರು. ಹೀಗೆ ಆಶ್ರಯ ಬೇಡಿಕೊಂಡು ಹೋದವರು ಪ್ರತ್ಯೇಕ ದೇಶವನ್ನೇ ಕೇಳಲಾರಂಭಿಸಿದರು. ಪ್ರತ್ಯೇಕ ರೋಹಿಂಗ್ಯಾ ಚಳವಳಿಯಲ್ಲಿದ್ದ ಕೆಲವು ಯುವಕರು ತಾಲೀಬಾನಿನಲ್ಲೂ ಕಂಡುಬಂದರು. ಮುಂದೆ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಉಗ್ರರ ಜೊತೆ ನಂಟಿರುವುದೂ ಹೊರಬಂತು.

               ಯಾವಾಗ ರೋಹಿಂಗ್ಯಾಗಳು ಪ್ರತ್ಯೇಕ ದೇಶ ಕೇಳಲಾರಂಭಿಸಿದರೋ ಅಹಿಂಸಾವಾದಿ ಬೌದ್ಧರೂ ಎಚ್ಚೆತ್ತರು. ರಖಾಯಿಂಗ್(ರಖೈನ್) ಪ್ರಾಂತ್ಯದಿಂದ ಮೂಲನಿವಾಸಿಗಳಾದ ತಮ್ಮವರನ್ನು ರೋಹಿಂಗ್ಯಾಗಳು ಒದ್ದೋಡಿಸುತ್ತಿರುವ ಸುದ್ದಿಯನ್ನು ಪದೇ ಪದೇ ಕೇಳಿ ಬರ್ಮೀಯರು ರೊಚ್ಚಿಗೆದ್ದರು. ರೋಹಿಂಗ್ಯಾಗಳ ಕ್ರೌರ್ಯದ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಬರ್ಮಾ ಸರಕಾರ ಸೇನೆಯನ್ನು ಬಳಸಿಕೊಂಡು ರೋಹಿಂಗ್ಯಾಗಳನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ಅದು ರಕ್ತಬೀಜಾಸುರನ ವಂಶವಿರಬೇಕು. ಹಲವು ಬಾರಿ ಸೇನಾ ಕಾರ್ಯಾಚರಣೆ ನಡೆದರೂ ರೋಹಿಂಗ್ಯಾ ಪಡೆ ಮತ್ತೆ ಮತ್ತೆ ಹುಟ್ಟುತ್ತಲೇ ಬೆಳೆಯುತ್ತಲೇ ಸಾಗಿತು. ಈ ನಡುವೆ ರೋಹಿಂಗ್ಯಾಗಳು ತಮ್ಮ ಆರ್ಥಿಕ ಅಗತ್ಯಕ್ಕಾಗಿ ಗಡಿಯಲ್ಲಿ ಅಕ್ಕಿ, ಶಸ್ತ್ರಾಸ್ತ್ರ, ಮಾದಕವಸ್ತುಗಳ  ಕಳ್ಳಸಾಗಣೆಯನ್ನೂ ಆರಂಭಿಸಿದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ ರೋಹಿಂಗ್ಯಾಗಳು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಎಂಬ ಪಕ್ಷವನ್ನೇ ಹುಟ್ಟುಹಾಕಿದರು. ರೋಹಿಂಗ್ಯಾ ಭಯೋತ್ಪಾದಕರ ಪರ ಮಾತಾಡುವ ಭಾಷಣಕಾರರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಇವರಲ್ಲಿ ಪ್ರಮುಖರು. 1980ರ ಬಳಿಕ ರೋಹಿಂಗ್ಯಾಗಳಿಗೆ ವಿಶ್ವದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆಯಲಾರಂಭಿಸಿತು. ತಾಲಿಬಾನ್, ಅಲ್ ಖೈದಾಗಳಂತ ಭಯೋತ್ಪಾದಕ ಸಂಘಟನೆಗಳಲ್ಲದೆ ಹಲವು ಸಿರಿವಂತ ಮುಸ್ಲಿಂ ದೇಶಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಆದರೆ ಅಹಿಂಸಾ ಪ್ರತಿಪಾದಕರಾದರೂ ಬರ್ಮಾದ ಬೌದ್ಧರು ಇದಕ್ಕೆಲ್ಲಾ ಬೆದರಲಿಲ್ಲ. ಸುಮ್ಮನಿದ್ದೂ ಬಿಡಲಿಲ್ಲ. ಮುಗುಮ್ಮಾಗುಳಿಯಲು ಅವರೇನು ಭಾರತೀಯರೇ? ಬರ್ಮಾ ಸೈನ್ಯ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ರೋಹಿಂಗ್ಯಾಗಳಿಗೆ ಪೌರತ್ವ ಕೊಡಿ ಎಂದ ಯು.ಎನ್.ಓ ಮಾತಿಗೂ ಅದು ಸೊಪ್ಪು ಹಾಕಲಿಲ್ಲ. ಇಲ್ಲಿರಬೇಕಾದರೆ ಬಂಗಾಳಿ ಅಂತ ಗುರುತಿಸಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ರೋಹಿಂಗ್ಯಾಗಳಿಗೆ ಆಜ್ಞಾಪಿಸಿತು.

                  ಅನ್ನ ಕೊಟ್ಟ ಮನೆಗೆ ಕನ್ನ ಹಾಕಲು ಯತ್ನಿಸಿ ಪೆಟ್ಟು ತಿಂದ ಮೇಲೆ ಹತಾಶೆಗೊಂಡ ರೋಹಿಂಗ್ಯಾಗಳು ಈಗ ಅಕ್ಕಪಕ್ಕದ ದೇಶಗಳಿಗೆ ನುಗ್ಗಲಾರಂಭಿಸಿದ್ದಾರೆ. ಹದಿನೈದು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. 2016 ಕೊನೆಯ ಮೂರು ತಿಂಗಳಲ್ಲೇ 21000 ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ನುಗ್ಗಿದ್ದರೆಂದರೆ ರೋಹಿಂಗ್ಯಾಗಳ ವಲಸೆಯ ಪ್ರಮಾಣವನ್ನು ಊಹಿಸಬಹುದು. ಎಲ್ಲಾ ನಿರಾಶ್ರಿತರಿಗೂ ಆಪ್ಯಾಯಮಾನ ರಾಷ್ಟ್ರವಾಗಿರುವುದು ಭಾರತವೇ. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ! ಈಗ ರೋಹಿಂಗ್ಯಾಗಳೂ ಬಾಂಗ್ಲಾ ಮೂಲಕ ನುಸುಳಿಕೊಂಡು ಭಾರತದೊಳಗೆ ಬರುತ್ತಿದ್ದಾರೆ. ಈ ನುಸುಳುಕೋರರು ಈಗಾಗಲೇ ದೆಹಲಿ, ಜಮ್ಮು, ಬಂಗಾಲ, ಬಿಹಾರ, ತೆಲಂಗಾಣಗಳಲ್ಲಿ ಬೀಡು ಬಿಟ್ಟಿದ್ದಾರೆ. ಕಾಶ್ಮೀರದಿಂದ ಹೊರದಬ್ಬಿರುವ ಲಕ್ಷೋಪಲಕ್ಷ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳದೆ ರೋಹಿಂಗ್ಯಾ ಸಮುದಾಯಕ್ಕೆ ಜಮ್ಮುವಿನಲ್ಲಿ ವಸತಿಗಾಗಿ ಭೂಮಿಯನ್ನು ನೀಡಲಾಗಿದೆ. ಈಗಾಗಲೇ ಇವರಿಗೆ ಆಧಾರ್ ಹಾಗೂ ಮತದಾರ ಗುರುತಿನ ಚೀಟಿಯನ್ನು ಕೊಡಲಾಗಿದೆ. ಇದಕ್ಕೆ ಕಾರಣರಾರು ಎಂದು ನೋಡ ಹೊರಟರೆ ಆ ದೃಷ್ಟಿ ನೇರ ಅಬ್ದುಲ್ಲಾ ಕುಟುಂಬದತ್ತ ಹೊರಳುತ್ತದೆ. ಅಲ್ಲಿಗೆ ದೇಶದೊಳಕ್ಕೆ ನುಸುಳುವ ರೋಹಿಂಗ್ಯಾಗಳು ಕಾಶ್ಮೀರದಲ್ಲೇ ನೆಲೆ ನಿಲ್ಲುವುದೇಕೆ ಎನ್ನುವುದರ ಅರಿವಾಗಬಹುದು. ಜಮ್ಮು ಕಾಶ್ಮೀರದ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಜಮ್ಮುವಿಗೆ 5,700 ಹಾಗೂ ಲಡಾಕ್ ಗೆ 7,664 ರೊಹಿಂಗ್ಯಾಗಳು ವಲಸೆ ಬಂದಿದ್ದಾರೆ. ವಿಶ್ವಸಂಸ್ಥೆ ನಿರಾಶ್ರಿತ ರಾಷ್ಟ್ರಗಳ ಸಮಿತಿಯ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ರೊಹಿಂಗ್ಯಾಗಳು ನೆಲೆಸಿದ್ದಾರೆ. ಗೃಹ ಇಲಾಖೆಯ ವರದಿ ಪ್ರಕಾರ ಇವರ ಸಂಖ್ಯೆ 40 ಸಾವಿರಕ್ಕಿಂತಲೂ ಹೆಚ್ಚು. ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರಲ್ಲಿ ರೋಹಿಂಗ್ಯಾಗಳೂ ಇದ್ದರು. 2016ರ ಬುದ್ಧಗಯಾ ಸ್ಫೋಟದಲ್ಲಿ ಶಾಮೀಲಾಗಿರುವ, ಈಗಾಗಲೇ ಹಲವು ಉಗ್ರ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಈ ಜನಾಂಗಕ್ಕೆ ಆಶ್ರಯ ನೀಡುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆಯೇ. ಮೊದಲೇ ಭಯೋತ್ಪಾದಕತೆ, ಪ್ರತ್ಯೇಕತಾವಾದದಿಂದ ನರಳುತ್ತಿರುವ ಕಾಶ್ಮೀರಕ್ಕೆ ಇನ್ನೊಂದು ಉರುಳು ಬಿಗಿದಂತಾಯ್ತು! ಬಾಂಗ್ಲಾದೇಶೀ ನುಸುಳುಕೋರರ ಸಮಸ್ಯೆಯನ್ನೇ ಬಗೆಹರಿಸಲಾಗದ ಭಾರತ ರೋಹಿಂಗ್ಯಾಗಳನ್ನು ನಿಯಂತ್ರಿಸುತ್ತದೆಯೇ?



               ರೋಹಿಂಗ್ಯಾಗಳ ಹಿತರಕ್ಷಣೆಗಾಗಿರುವ ‘ಎ.ಆರ್.ಎನ್.ಓ’(ಅರೆಖಾನ್ ರೋಹಿಂಗ್ಯಾ ನ್ಯಾಷನಲ್ ಆರ್ಗನೈಸೇಷನ್) ಅಧ್ಯಕ್ಷ ನೂರುಲ್ ಇಸ್ಲಾಂ ‘ಸಾವಿರಾರು ರೋಹಿಂಗ್ಯಾಗಳು ಭಾರತದಲ್ಲೂ ಬದುಕುತ್ತಿದ್ದಾರೆ. ಭಾರತೀಯರು ಎಂದಿಗೂ ನಮ್ಮನ್ನು ಕೀಳಾಗಿ ಕಂಡಿಲ್ಲ. ನಮಗೆ ಭಾರತದ ಬಗ್ಗೆ ಕೃತಜ್ಞತೆ ತುಂಬಿದ ಗೌರವ ಭಾವನೆ ಇದೆ.’ ಎನ್ನುತ್ತಾರೆ. ಈ ಕೃತಜ್ಞತೆಯ ಭಾವನೆಯಿಂದಲೇ ರೋಹಿಂಗ್ಯಾಗಳು ಬುದ್ಧಗಯಾದಲ್ಲಿ ಸ್ಫೋಟ ಮಾಡಿದರೋ? ನಾವು ಕೀಳಾಗಿ ಕಂಡಿಲ್ಲವೆಂದೇ ರೋಹಿಂಗ್ಯಾಗಳು ಕಾಶ್ಮೀರ ಉಗ್ರರೊಡನೆ ಸೇರಿಕೊಂಡರೋ? ಬರ್ಮಾ ಸರ್ಕಾರ ತಮಗೆ ಮಾನವ ಹಕ್ಕುಗಳನ್ನು ಕೊಡುತ್ತಿಲ್ಲವೆಂದು ಆರೋಪಿಸುವ ಇದೇ ನೂರುಲ್ ಬರ್ಮಾದ ರಂಗೂನ್ ವಿವಿಯಲ್ಲಿ ಪದವಿ ಪಡೆಯಲು ಸಾಧ್ಯವಾದದ್ದಾದರೂ ಹೇಗೆ? ಆಸ್ಟ್ರೇಲಿಯಾ, ಲಂಡನ್ನುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಗಳ ಮೇಲೆ ಪದವಿ ಪಡೆಯಲು ಹೇಗೆ ಅವಕಾಶ ಸಿಕ್ಕಿತು? ಒಂದು ವೇಳೆ ಈಗ ಪರಿಸ್ಥಿತಿ ಬದಲಾಗಿದೆ ಎಂದರೂ ಅದಕ್ಕೆ ಉಪ್ಪು ತಿಂದ ಮನೆಗೆ ಎರಡು ಬಗೆಯ ಹೊರಟ ರೋಹಿಂಗ್ಯಾಗಳೇ ಕಾರಣರಲ್ಲವೇ? ಮೊದಲು ಆಶ್ರಯ ಕೊಟ್ಟವರನ್ನೇ ಹುರಿದು ಮುಕ್ಕಿ ತಿನ್ನಲು ಹೊರಟ ರೋಹಿಂಗ್ಯಾಗಳು ಭೋಳೆ ಸ್ವಭಾವದ ಭಾರತೀಯರನ್ನು ಬಿಟ್ಟಾರೆಯೇ? ಅಂದಹಾಗೆ, ನೂರುಲ್'ಗೆ ಅಲ್ಕೈದಾ ಮತ್ತಿತರ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂದು ‘ವಿಕಿಲೀಕ್ಸ್’  ವರದಿ ಹೇಳುತ್ತಿದೆ!

                  ಐಸಿಸ್'ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಇಂತಹ ರಾಕ್ಷಸೀ ಪ್ರವೃತ್ತಿಯ ರೋಹಿಂಗ್ಯಾಗಳನ್ನು ಬೆಂಬಲಿಸಿ ಭಾರತದ ಮುಸ್ಲಿಮರು ಎಂದಿನಂತೆ ತಮ್ಮ ನಿಜಬಣ್ಣ ತೋರಿಸಿಯಾಗಿದೆ. ಮುಸ್ಲಿಂ ಮಹಿಳಾ ಒಕ್ಕೂಟ, ಅಂಜುಮನ್ ಇಸ್ಲಾಂ, ಎಸ್.ಡಿ.ಪಿ.ಐ ಮುಂತಾದ ಸಂಘಟನೆಗಳು ಭಾರತದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿವೆ. ಮುಸ್ಲಿಮರಿಗೆ ಆಶ್ರಯ ನೀಡಬೇಕೆಂದು ಓವೈಸಿ, ಎಸ್.ಕೆ.ಎಸ್.ಎಸ್.ಎಫ್ ನಂತಹ ಸಂಘಟನೆ(ಈ ಸಂಘಟನೆಯ ಮೇಲೆ ಗುಪ್ತಚರ ಇಲಾಖೆ ಕಣ್ಣಿರಿಸಬೇಕು)ಗಳು ತಮ್ಮ ಗಂಟಲು ಹರಿದುಕೊಂಡಿವೆ. ಇದೇ ಸಂಘಟನೆಗಳು ಕಾಶ್ಮೀರಿ ಪಂಡಿತರ ವಿಷಯದಲ್ಲಿ ಕನಿಷ್ಟ ಸಹಾನುಭೂತಿಯನ್ನೂ ತೋರಿಸಿಲ್ಲವೇಕೆ? ದೆಹಲಿಯ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಾ, ಆರೋಗ್ಯಕರವಲ್ಲದ ನೀರು, ಆಹಾರ ಸೇವಿಸುತ್ತಾ ಶಿಕ್ಷಣ ವಂಚಿತರಾಗಿ ಚಿಂದಿ ಆಯುವ ಕೆಲಸಗಳಲ್ಲಿ ಪರದೇಶೀ ರೋಹಿಂಗ್ಯಾಗಳು ನಿರತರಾಗಿದ್ದಾರೆ ಎಂದು ಕಣ್ಣೀರ್ಗರೆವ ಇದೇ ಸೆಕ್ಯುಲರುಗಳು, ಮುಸ್ಲಿಂ ಸಂಘಟನೆಗಳು, ಇಂತಹುದೇ ಪರಿಸ್ಥಿತಿಯಲ್ಲಿ ದಶಕಗಟ್ಟಲೇ ಇರುವ ತಮ್ಮದೇ ದೇಶಬಾಂಧವರಾದ ಕಾಶ್ಮೀರಿ ಪಂಡಿತರ ಬಗ್ಗೆ ಅನುಕಂಪ ಸೂಚಿಸಿದ ಒಂದೇ ಉದಾಹರಣೆಯನ್ನು ನಾ ಕಾಣೆ! ಆದರೆ ಎಲ್ಲಿನದ್ದೋ ರೋಹಿಂಗ್ಯಾಗಳ ಬಗ್ಗೆ ಇವರದ್ದು ಅಪಾರ ಪ್ರೀತಿ. ಈ ಪ್ರೀತಿಗೆ 2012ರಲ್ಲಿ ಲಖ್ನೋದ ಪಾರ್ಕಿನ ಬೌದ್ಧ ವಿಗ್ರಹಗಳು ಬಲಿಯಾದವು; ಆಜಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ಸೇರಿದ್ದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರು ಹಾಕಿದ ಬೆಂಕಿಗೆ ಪೊಲೀಸರು, ಸುದ್ದಿ ವಾಹಿನಿಗಳ ವಾಹನಗಳು ಸುಟ್ಟು ಹೋದವು; ಅಮರ್ ಜವಾನ್ ಸ್ಮಾರಕ ಧ್ವಂಸಗೊಂಡಿತು!

                 ತಮ್ಮ ಅನುಕೂಲಕ್ಕೆ ತಕ್ಕಂತೆ ವಿಷಯವನ್ನು ತಿರುಚುವ ಸೆಕ್ಯುಲರುಗಳು ರೋಹಿಂಗ್ಯಾಗಳ ಮೇಲಿನ ಬೌದ್ಧರ ದೌರ್ಜನ್ಯವನ್ನು ಕಂಡು ಬುದ್ಧನೇ ಕಣ್ಣೀರ್ಗರೆಯುತ್ತಿದ್ದಾನೆ ಎಂಬಂತೆ ಪದ್ಯಕಟ್ಟುತ್ತಿರುವುದು ನೋಡಿದಾಗ ಇಂತಹವರು ಬುದ್ಧನನ್ನು ಅರಿತುಕೊಂಡ ಪರಿಯನ್ನು ನೆನೆದು ಅಯ್ಯೋ ಅನಿಸುತ್ತದೆ! ಲಿಚ್ಛವಿಗಳು "ಮಾಗಧರು ನಮ್ಮ ಮೇಲೆ ನಿರಂತರ ಯುದ್ಧ ಮಾಡುತ್ತಾರೆ. ನಮ್ಮ ಸ್ವಾತಂತ್ರ್ಯ-ಸಾರ್ವಭೌಮತ್ವದ ಉತ್ಕರ್ಷವನ್ನು ಕಾಪಾಡಿಕೊಳ್ಳುವುದು ಹೇಗೆ" ಎಂದು ಪ್ರಶ್ನಿಸಿದಾಗ ಬುದ್ಧ ಹೇಳುತ್ತಾನೆ - " ಎಲ್ಲಿಯವರೆಗೂ ನೀವೆಲ್ಲರೂ ಐಕ್ಯಮತ್ಯದಿಂದ ಇರುತ್ತೀರೋ ಅಲ್ಲಿಯವರೆಗೆ ನಿಮಗೆ ಸ್ವಾತಂತ್ರ್ಯವಿರುತ್ತದೆ. ಒಳಜಗಳಗಳನ್ನು ಬಿಟ್ಟು ಗಣತಂತ್ರದ ಕೇಂದ್ರಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವವರೆಗೆ ಹಾಗೂ ರಣದುಂಧುಬಿ ಮೊಳಗಿದಾಕ್ಷಣ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ರಣರಂಗಕ್ಕೆ ಧುಮುಕುವವರೆಗೆ ನಿಮ್ಮ ಸ್ವಾತಂತ್ರ್ಯ ಉಳಿಯುತ್ತದೆ." ಅಹಿಂಸೆಯ ಮೂರ್ತಿ ಎಂದು ಖ್ಯಾತಿವೆತ್ತಾತನೂ ಹೇಳಿದ್ದು ಸನಾತನ ಧರ್ಮದ ವ್ಯಾಖ್ಯೆಯನ್ನೇ! ರಾಷ್ಟ್ರರಕ್ಷಕರು ಸದಾ ಆಯುಧಪಾಣಿಗಳಾಗಿ ಮೌಲ್ಯಯುತ ಜೀವನ ನಡೆಸಬೇಕೆಂದು ಹೇಳಿದ ಬುದ್ಧ ವಿನಯಪಿಟಿಕದಲ್ಲಿ ಭಿಕ್ಷುಗಳಿಗೂ ಯುದ್ಧತಂತ್ರ ಮತ್ತು ಆತ್ಮರಕ್ಷಣೆಯ ಮಾರ್ಗಗಳು ಗೊತ್ತಿರಬೇಕೆಂದು ಹೇಳಿದ್ದಾನೆ. "ನಾವು ಹಿಂದೂಗಳು ಕೃಷ್ಣನ ಉಪದೇಶವನ್ನು ದೂರವಿಟ್ಟಿದ್ದೇವೆ; ಆದರೆ ಬರ್ಮಾದ ಬೌದ್ಧರು ಬುದ್ಧನ ಉಪದೇಶವನ್ನು ಸರಿಯಾಗಿ ಕಾರ್ಯಗತಗೊಳಿಸಿದ್ದಾರೆ" ಎಂಬ ಅರಿವು ನಿಮಗಾಗದಿದ್ದರೆ ನೀವು "ಇಂದಿನ" ಸೆಕ್ಯುಲರುಗಳೇ ಆಗಿರಬೇಕು!

                 ಎಷ್ಟೇ ಅಹಿಂಸಾ ಪ್ರಿಯನಾಗಿರಲಿ ಅಸ್ತಿತ್ವದ, ಅಸ್ಮಿತೆಯ ಪ್ರಶ್ನೆ ಬಂದಾಗ ಅವನು ಜಾಗೃತನಾಗದಿದ್ದರೆ ಅವನೊಟ್ಟಿಗೆ ಅವನ ಅಹಿಂಸೆಯೂ ಸಮಾಧಿಯಾಗುವುದು ನಿಶ್ಚಿತ. ಇದರ ಅರಿವು ಬರ್ಮಾದ ಬೌದ್ಧರಿಗಿದೆ, ಬರ್ಮಾದ ಬೌದ್ಧರ ದಿಟ್ಟ ಪ್ರತಿದಾಳಿ ನೋಡಿದ ಶ್ರೀಲಂಕಾದ ಬೌದ್ಧರಿಗೂ ಇದರ ಅರಿವಾಗಿದೆ. ಅರಿವಾಗದೇ ಇದ್ದ ಟಿಬೆಟ್ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ. ಅರಿವಾಗದೆ ಬಂದವರನ್ನೆಲ್ಲಾ ಅಪ್ಪಿಕೊಂಡ ಯೂರೋಪು ಯೂರೋಬಿಯಾವಾಗುವತ್ತ ಸಾಗಿದೆ. ಬುದ್ಧಿ ಇಲ್ಲದ ಜೀವಿಗಳ ಪ್ರಭಾವದಿಂದ ಭಾರತವೂ ಅಂತಹುದೇ ದುರಂತಕ್ಕೀಡಾಗುತ್ತಿದೆ. ಇವತ್ತು ರೋಹಿಂಗ್ಯಾಗಳನ್ನು ನೆಪವಾಗಿರಿಸಿ ಬರ್ಮಾದ ಸರಕಾರವನ್ನು, ಬರ್ಮಾದ ಬೌದ್ಧರನ್ನು ಎಲ್ಲರೂ ಹಿಗ್ಗಾಮುಗ್ಗ ತೆಗಳಲಾರಂಭಿಸಿದ್ದಾರೆ. ವಿರಥುವನ್ನು ಮತಾಂಧನಂತೆ ಚಿತ್ರಿಸಲಾಗಿದೆ. ಆದರೆ ಬರ್ಮಾದಿಂದ ಓಡಿ ಬರುತ್ತಿರುವ ರೋಹಿಂಗ್ಯಾಗಳ ನಿಜಬಣ್ಣವನ್ನು ಯಾವುದೇ ಸೆಕ್ಯುಲರುಗಳಾಗಲೀ, ಬಿಬಿಸಿಯಂತಹ ಯಾವುದೇ ಮಾಧ್ಯಮಗಳಾಗಲೀ, ವಿಶ್ವಸಂಸ್ಥೆಯಾಗಲೀ ಜಗತ್ತಿನ ಮುಂದೆ ಬಿಚ್ಚಿಡುತ್ತಿಲ್ಲವೇಕೆ? ರಕ್ತದ ಕಲೆ ಇದ್ದವನೇ ಯಾವತ್ತೂ ಅಪರಾಧಿಯಾಗಬೇಕೆಂದೇನಿಲ್ಲ!

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ

            ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ ತೀರಿಕೊಂಡ ಮೇಲೆ ಅದು ಹೆಚ್ಚಿದೆಯಂತೆ!

               ನಂಜನಗೂಡಿನ ಅರಮನೆಯ ಮುಂಭಾಗದ ಮನೆ. ಮನೆಯ ಮುಂಭಾಗದ ಸಣ್ಣ ಕೋಣೆಯಲ್ಲಿ ಹದಿನೈದು - ಇಪ್ಪತ್ತು ಮಂದಿ ನಿಂತಿದ್ದಾರೆ. ಎಲ್ಲರೂ ಭಕ್ತಿ ಪರವಶರು. ಕೆಲವರು ಕೈಮುಗಿದು, ಕೆಲವರು ಕಣ್ಮುಚ್ಚಿ, ಕೆಲವರು ಕೈಕಟ್ಟಿ, ಕೆಲವರು ನೆಲನೋಟಕರಾಗಿ ನಿಂತಿದ್ದಾರೆ. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ತುಸು ಸಮಯದ ಬಳಿಕ ಮಿಂಚು ಕೋರೈಸಿದಂತಾಯ್ತು; ಕೋಣೆಯ ತುಂಬಾ ಹೊಂಬೆಳಕೊಂದು ಮೂಡಿದಂತಾಯ್ತು! ಒಂದು ಅಪೂರ್ವವಾದ ಅಲೌಕಿಕ ದೃಶ್ಯ ಕಾಣಿಸಿದಂತಾಯ್ತು. ಎಲ್ಲರೂ ಬೆಚ್ಚಿ ಕೋಣೆಯ ಒಳಬಾಗಿಲ ಕಡೆ ದೃಷ್ಟಿ ಹರಿಸಿದರು. ಅವರೇ, ಬುದ್ಧಿ ಭ್ರಮಣೆಯಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದ ಸ್ವಾಮಿಗಳು ಆಗತಾನೆ ಹೊಸ್ತಿಲನ್ನು ದಾಟಿ ಕೋಣೆಗೆ ಬಂದು ನಿಂತಿದ್ದರು. ಅವರ ಹಿಂಬಂದಿ ಎಡಬಲಗಳಲ್ಲಿ ಸೇವಕರಿಬ್ಬರು. ಕೃಶ ಶರೀರಿ, ಆಕರ್ಷಕವಾಗಿ ತೋರದ ಮೈಕಟ್ಟು, ಬಣ್ಣ. ನಡುವಿಗೂ, ಹೊದೆಯಲೂ ಒಂದೇ ಶುಭ್ರ ಕಾವಿ ಬಟ್ಟೆ; ಅದಕ್ಕೆ ಮೆರುಗೂ ಇರಲಿಲ್ಲ, ಅಂಚೂ ಇರಲಿಲ್ಲ! ಕೊರಳಲ್ಲಿ ರುದ್ರಾಕ್ಷಿ ಮಾಲೆಯಿಲ್ಲ; ಕಾಲುಗಳಲ್ಲಿ ಹಾವುಗೆಯೂ ಇಲ್ಲ. ಜಗದ್ಗುರುವಿನ ಆಡಂಬರವೂ ಇಲ್ಲ. ಬಡ ಸಂನ್ಯಾಸಿಯಂತೆ ತೋರುತ್ತಿದ್ದರು. ಆದರೆ ಆ ಮುಖದ ಮೇಲಿನ ಅಪೂರ್ವವಾದ ಕಳೆ ನೋಡಿದವರ ಕಣ್ಣು ಕೋರೈಸುವಂತಿತ್ತು. ತುಟಿಗಳಲ್ಲಿ ಒಸರುತ್ತಿದ್ದ ಮಂದಹಾಸ ನೆರೆದವರ ಮನವನ್ನು ತಣಿಸಿತ್ತು. ಅಲ್ಲಿ ನೀರವ ಮೌನ. ಸೇರಿದವರಿಗೆ ಸ್ವಚ್ಛ ಸಲಿಲದಲ್ಲಿ ಮಿಂದು, ತಂಗಾಳಿಗೆ ಮೈಯೊಡ್ಡುತ್ತಿರುವ ಅನುಭವ! ಐದು ನಿಮಿಷಗಳ ಬಳಿಕ ಆ ಪ್ರಕಾಶ ಕಡಿಮೆಯಾದಂತೆ ಅನಿಸಿತು. ನೋಡಿದರೆ ಸ್ವಾಮಿಗಳು ಬೆನ್ನು ತಿರುಗಿಸದೆ ಹಾಗೆಯೇ ಕಾಲುಗಳನ್ನು ಹೊಸ್ತಿಲ ಹಿಂದಕ್ಕಿಟ್ಟು ಕೋಣೆಯ ಹೊರನಡೆದಿದ್ದಾರೆ. ಅವರ ಎಡಬಲದಲ್ಲಿದ್ದ ಸೇವಕರಷ್ಟೇ ಕಾಣಿಸುತ್ತಿದ್ದಾರೆ.

               ಬುದ್ಧಿಭ್ರಮಣೆಯಾಗಿದೆಯೆಂದು ಜನ ಆಡಿಕೊಳ್ಳುತ್ತಿದ್ದ ವ್ಯಕ್ತಿಯ ಅಲೌಕಿಕ ರೂಪ ಅದು. ಅವರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. ಶೃಂಗೇರಿ ಮಠದ ಪರಂಪರೆಯ ಮೂವತ್ನಾಲ್ಕನೇ ಪೀಠಾಧಿಪತಿಗಳು. ಅವರ ಪೂರ್ವಾಶ್ರಮದ ಹೆಸರು ಪಟಗುಪ್ಪೆ ಈಶ್ವರೀ ನರಸಿಂಹ ಶಾಸ್ತ್ರಿ. ಸಾಗರ ಮತ್ತು ನಗರಗಳ ನಡುವೆ ಕುಶಾವತೀ ನದಿ ದಂಡೆಯ ಮೇಲಿನ ಸಣ್ಣ ಅಗ್ರಹಾರ ಈ ಪಟಗುಪ್ಪೆ. ಈಶ್ವರೀ ಎನ್ನುವುದು ಮನೆತನದ ಹೆಸರು. ಅವರ ಪಿತಾಮಹ ಸುಬ್ಬಾಶಾಸ್ತ್ರಿಗಳು ಘನಪಂಡಿತರು. ಅವಧೂತರಾಗಿ ಹಿಮಾಲಯದತ್ತ ತೆರಳಿದವರು. ಅಪ್ಪ ಗೋಪಾಲಶಾಸ್ತ್ರಿ, ಅಮ್ಮ ಲಕ್ಷ್ಮಮ್ಮನದ್ದು ಕಪಟವರಿಯದ ಸರಳ ಜೀವನ. ಇದ್ದುದರಲ್ಲಿ ತೃಪ್ತರಾಗುವ, ಹೆಚ್ಚು ಗಳಿಸುವ ಆಶೆಯಿಲ್ಲದ, ಹೆರವರನ್ನು ನೋಡಿ ಕರುಬದ, ಜನರ ಗುಂಪಿನಲ್ಲಿ ಬೆರೆಯದ ತಮ್ಮ ಪಾಡಿಗೆ ತಾವಿರುವ ಹಸುವಿನಂತಹ ಮುಗ್ಧತೆ ಅವರದ್ದು. ಅದೇ ಸ್ವಭಾವವನ್ನು ಮೈವೆತ್ತಿಕೊಂಡು ಅವರ ಹದಿನಾಲ್ಕನೆಯ ಕುಡಿಯಾಗಿ ಹುಟ್ಟಿ ಉಳಿದು, ಉಳಿಸಿ, ನಾಡ ಬೆಳಗಿದ ಮಗುವೇ ನರಸಿಂಹ. ನಂದನ ಸಂವತ್ಸರದ ಆಶ್ವೀಜ ಬಹುಳ ಏಕಾದಶಿ(1892, ಅಕ್ಟೋಬರ್ 16)ರಂದು ಭುವಿಗಿಳಿದ ಈ ಪ್ರಭೆ ನರಸಿಂಹನಾಗಿ, ಚಂದ್ರಶೇಖರನಾಯಿತು; ಸಾವಿರಾರು ಸಾಧಕರಿಗೆ ದಾರಿದೀಪವಾಯಿತು.

               ಲೋಯರ್ ಸೆಕೆಂಡರಿಯವರೆಗೆ ಆಧುನಿಕ ಶಿಕ್ಷಣವನ್ನು ಪಡೆದ ನರಸಿಂಹ. ಮುಂದೆ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಅಪ್ಪಣೆಯಂತೆ ಶೃಂಗೇರಿಯ ಪ್ರಾಚೀನ ವಿದ್ಯಾಶಿಕ್ಷಣ ಶಾಲೆ "ಸದ್ವಿದ್ಯಾಸಂಜೀವಿನೀ"ಯಲ್ಲಿ ತರ್ಕ, ವ್ಯಾಕರಣಗಳನ್ನು ಮುಗಿಸಿ ಬಳಿಕ ಸ್ವಾಮಿಗಳ ಅಪೇಕ್ಷೆಯಂತೆ ಬೆಂಗಳೂರಿನ ಶಂಕರ ಮಠದಲ್ಲಿ ಅವರಿಂದಲೇ ನಿರ್ಮಿಸಲ್ಪಟ್ಟ "ಗೀರ್ವಾಣಪ್ರೌಢವಿದ್ಯಾಭಿವರ್ಧಿನೀ" ಶಾಲೆಯಲ್ಲಿ ಪೂರ್ವಮೀಮಾಂಸಾಶಾಸ್ತ್ರ ಶಿಕ್ಷಣವನ್ನು ಪಡೆದ ನರಸಿಂಹ. ಹಿಂದೆ ಮಠದ ಅಧಿಕಾರಿ ಶ್ರೀಕಂಠಶಾಸ್ತ್ರಿಗಳ ಮನೆಯಲ್ಲಿದ್ದುಕೊಂಡು ಅವರ ಮೇಲ್ವಿಚಾರಣೆಯಲ್ಲಿ ಬೆಳೆದ ಬಡಹುಡುಗ ನರಸಿಂಹ ಮುಂದೆ ಮಠಾಧಿಪತಿಯಾದುದೂ ವಿಚಿತ್ರ ಘಟನೆಯೇ. ನರಸಿಂಹನ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಇವೆಲ್ಲವನ್ನೂ ನೋಡಿದ ಆಗಿನ ಮಠಾಧೀಶರಾಗಿದ್ದ ನೃಸಿಂಹ ಭಾರತೀ ಸ್ವಾಮಿಗಳು ತಮ್ಮ ಮುಂದಿನ ಉತ್ತರಾಧಿಕಾರಿ ನರಸಿಂಹನೆಂದೇ ಮನಸ್ಸಲ್ಲಿ ನಿಶ್ಚಯಿಸಿಕೊಂಡಿದ್ದರು. ಕಾಲಡಿಯಲ್ಲಿ ಶಂಕರಾಚಾರ್ಯರ ಆಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಿಂದಿರುಗಿದ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರಾಯಿತು. ನಂದಿಬೆಟ್ಟದಲ್ಲಿ ತುಸು ವಿಶ್ರಮಿಸಿದರಾದರೂ ಅವರ ಆರೋಗ್ಯ ಸುಧಾರಿಸಲಿಲ್ಲ. ತಮ್ಮ ಅಂತ್ಯಕಾಲ ಹತ್ತಿರವಾಯಿತೆಂದು ತಿಳಿದ ಶ್ರೀಗಳು ನರಸಿಂಹನನ್ನು ಬೆಂಗಳೂರಿನಿಂದ ಕರೆತರುವಂತೆ ತಮ್ಮ ಆಪ್ತರೂ, ಅರಮನೆಯ ಧರ್ಮಾಧಿಕಾರಿಗಳೂ ಆಗಿದ್ದ ಕುಣಿಗಲ್ಲು ರಾಮಾಶಾಸ್ತ್ರಿಗಳಿಗೆ ಅಪ್ಪಣೆ ಮಾಡಿದರು. ರಾಮಾಶಾಸ್ತ್ರಿಗಳಿಂದ ಸ್ವಾಮಿಗಳ ಪತ್ರ ಪಡೆದು ಸ್ವಾಮಿಗಳ ಇಚ್ಛೆಯಂತೆ ಸ್ವಾಮಿಗಳ ಆಯ್ಕೆಯ ಉತ್ತರಾಧಿಕಾರಿ ನರಸಿಂಹನನ್ನು ನೋಡಲು ಹೋದ ಮೈಸೂರು ಮಹಾರಾಜರಿಗೂ ಸ್ವಾಮಿಗಳ ಆಯ್ಕೆ ಒಪ್ಪಿಗೆಯಾಗಲಿಲ್ಲವಂತೆ. ಆದರೆ ಸ್ವಾಮಿಗಳ ಸಂಕಲ್ಪವನ್ನು ಪರಿಗಣಿಸಿ ತಮ್ಮ ಸಮ್ಮತಿ ಸೂಚಿಸಿದರು. ಇತ್ತ ಗುರುಗಳ ಬದುಕು ತೂಗುಯ್ಯಾಲೆಯಲ್ಲಿತ್ತು. ಈ ನಡುವೆ ಮಠದ ಸರ್ವಾಧಿಕಾರಿಗಳಾದ ಶ್ರೀಕಂಠ ಶಾಸ್ತ್ರಿಗಳು ನರಸಿಂಹ ಬರುವುದು ತಡವಾಗಿ ಅದರೊಳಗೆ ಗುರುಗಳು ತೀರಿಕೊಂಡರೆ ಎಂಬ ಶಂಕೆಯಿಂದ ಒಂದಿಬ್ಬರನ್ನು ಉತ್ತರಾಧಿಕಾರಿ ಪಟ್ಟಕ್ಕೆ ಸೂಚಿಸಿದಾಗ ಶ್ರೀಗಳು ಸ್ವಲ್ಪ ಕಟುವಾಗಿಯೇ "ನರಸಿಂಹ ಬರಲಿ, ಸುಮ್ಮನಿರಿ" ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಸೂಚಿಸಿದರು. ಆದರೆ ನರಸಿಂಹ ಬರುವಷ್ಟರಲ್ಲಿ ಗುರುಗಳು ತೀರಿಕೊಂಡಾಗಿತ್ತು. ನರಸಿಂಹನನ್ನು, ಆತನ ಕುಟುಂಬವನ್ನು ತುಚ್ಛವಾಗಿ ಕಾಣುತ್ತಿದ್ದವರಿಗೆ, ತಮ್ಮ ಬೇಳೆ ಬೇಯಿಸಿಕೊಳ್ಳುವ ಹಂಬಲವಿದ್ದವರಿಗೆಲ್ಲಾ ಈ ಬಡಕಲು ಹುಡುಗ ಜಗದ್ಗುರು ಪಟ್ಟವೇರುವುದು ಇಷ್ಟವಾಗುವುದಾದರೂ ಹೇಗೆ? ಆದರೆ ಅದಾಗಲೇ ಗುರುಗಳ ನಿಲುವು, ಮಹಾರಾಜರ ಸಮ್ಮತಿ ನರಸಿಂಹನಿಗಲ್ಲದೆ ಬೇರಾರಿಗೂ ಉತ್ತರಾಧಿಕಾರಿ ಪಟ್ಟ ಸಿಗದಂತೆ ಪಿತೂರಿಗಾರರನ್ನು ತಡೆದಿತ್ತು.

                  ವಿಚಿತ್ರವೆಂದರೆ ಮುಂದಿನ ಪೀಠಾಧಿಪತಿಯ ಸಂನ್ಯಾಸ, ಪಟ್ಟ ಮೊದಲಾದ ವಿಧಿಗಳ ಕಾರ್ಯಕ್ರಮಗಳನ್ನು ನಿರ್ಧರಿಸಲು ನಡೆದ ಸಭೆಯಲ್ಲಿ ಮಠದ ಹಿರಿಯ ಅಧಿಕಾರಿಗಳು, ವಿದ್ವಾಂಸರು, ಮಹಾರಾಜರ ಪ್ರತಿನಿಧಿಗಳು ಇದ್ದರೂ, ಮುಂದೆ ಪೀಠಾಧಿಪತಿಯಾಗಲಿದ್ದ ನರಸಿಂಹನೇ ಅಲ್ಲಿರಲಿಲ್ಲ! ಸ್ವಲ್ಪ ಸಮಯದ ಬಳಿಕ ಅವರಲ್ಲೊಬ್ಬರು ಈ ವಿಧಿಗಳೆಲ್ಲಾ ನಡೆಯಬೇಕಾದುದು ನರಸಿಂಹನಿಗೇ, ನಾವು ನಿರ್ಧರಿಸುವ ಕಾರ್ಯಕ್ರಮ ಅವನಿಗೆ ತಿಳಿಯಬೇಡವೇ ಎಂದಾಗ ನರಸಿಂಹನಿಗೆ ಕರೆಕಳುಹಿಸಲಾಯಿತು. ಬಂದು ಕೈಕಟ್ಟಿಕೊಂಡು ನಿಂತ ನರಸಿಂಹನನ್ನು ಕುಳ್ಳಿರೆಂದು ಯಾರೂ ಹೇಳಲಿಲ್ಲ. ಸ್ವಲ್ಪ ಸಮಯದ ಬಳಿಕ ಹಿರಿಯರ ನಡುವೆ ಕುಳ್ಳಿರಲು ಸಂಕೋಚಗೊಂಡು ನಿಂತೇ ಇದ್ದ ನರಸಿಂಹನನ್ನು ಕಂಡು ರಾಮಚಂದ್ರ ಅಯ್ಯರರು "ನೀವು ನಾಳೆ ಜಗದ್ಗುರುಗಳಾಗಲಿಕ್ಕಿರುವವರು. ನಿಂತಿರಬಾರದು ಕೂಡಿ" ಎಂದರಂತೆ. ಅದಕ್ಕೆ ನರಸಿಂಹ "ಅದು ನಾಳೆ ತಾನೇ" ಎಂದು ನಸುನಗುತ್ತ ಉತ್ತರಕೊಟ್ಟನಂತೆ! ವಿಶೇಷವೆಂದರೆ ಮುಂದೆ ರಾಮಚಂದ್ರ ಅಯ್ಯರ್ ಹಾಗೂ ಈ ಘಟನೆಯನ್ನು ತಮ್ಮ ಸ್ವಾಮಿಗಳ ಕುರಿತ ಗ್ರಂಥದಲ್ಲಿ ಉಲ್ಲೇಖಿಸಿದ ಅವರ ಮಗ ಕೃಷ್ಣಸ್ವಾಮಿ ಅಯ್ಯರ್ ಇಬ್ಬರೂ ಇದೇ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿದರು. ಹೀಗೆ ಶೃಂಗೇರಿಯ ಬಡಹುಡುಗ ನರಸಿಂಹ ಸಂನ್ಯಾಸ ಸ್ವೀಕರಿಸಿ ತಾನು ಬಯಸದೇ, ತನ್ನ ಪರಿವಾರದವರು ಬಯಸದೆ, ಮಠಾಧಿಪತಿಗಳಿಗಿರಬೇಕಾದ ಮನೋಧರ್ಮ, ಶಿಕ್ಷಣವಿಲ್ಲದೆ ಹಲವಾರು ಅರಮನೆಗಳಿಗೆ, ಲಕ್ಷಾಂತರ ಜನರಿಗೆ ಗುರುಪೀಠವೆನಿಸಿದ ಜಗದ್ಗುರುಪಟ್ಟವನ್ನು ಏರಿ ಮಠದ ಪರಂಪರೆಯ ಮೂವತ್ನಾಲ್ಕನೇ ಯತಿಯಾಗಿ ಶ್ರೀಚಂದ್ರಶೇಖರ ಭಾರತೀ ಸ್ವಾಮಿಗಳಾದರು.

           ಸ್ವಾಮಿಗಳದ್ದು ಕವಿಹೃದಯ. ಸಂಗೀತದಲ್ಲೂ ಅವರಿಗೆ ತುಂಬಾ ಅಭಿರುಚಿಯಿತ್ತು. ಶ್ಲೋಕಗಳನ್ನು ರಸವತ್ತಾಗಿ ಹಾಡುವ ಸಾಮರ್ಥ್ಯವೂ ಇತ್ತು. ಕವಿಹೃದಯದವರಿಗೆ ವಿರಕ್ತಿ ಸಹಜವಾಗಿ ಬರಲಾರದು. ಸ್ವಾಮಿಗಳಿಗೆ ವಿರಕ್ತಿ ಬಂದುದು ಸ್ವಭಾವದಿಂದಲೂ ಅಲ್ಲ, ದುಃಖದರ್ಶನದಿಂದಲೂ ಅಲ್ಲ. ಅವರು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಪಡೆದ ಶಿಕ್ಷಣವೇ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಗುರಿ(ಆತ್ಮತತ್ತ್ವದ ಅನುಸಂಧಾನ)ಯನ್ನು ಸಾಧಿಸುವ ದಾರಿಯನ್ನು ತೋರಿಸಿತು. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರು ಅದರ ಆಧಾರದ ಮೇಲೆ ಮನನ ನಿದಿಧ್ಯಾಸನಗಳನ್ನು ಕೈಗೊಳ್ಳಲು ತಮ್ಮ ಬಾಳನ್ನೇ ಮುಡಿಪಾಗಿಟ್ಟರು. ಹಾಗೆ ಮಾಡುವಾಗ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆತರು. ಹೀಗೆ ಆರಂಭವಾಯಿತು 'ಆತ್ಮವಿದ್ಯಾವಿಲಾಸ'ದ ಅನುಸಂಧಾನ. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳನ್ನೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು.

             ತಾಯಿ ತೀರಿಕೊಂಡ ಒಂದೂವರೆ ತಿಂಗಳುಗಳಲ್ಲಿಯೇ ಅವರಿಗಾದ "ಬುದ್ಧಿ ಭ್ರಮಣೆ" ಎಲ್ಲರಿಗೂ ತಿಳಿದು ಬಂತು. ಶಾರದೆಯ ಗುಡಿಗೆ ಬಂದ ಸ್ವಾಮಿಗಳು ಗಣೇಶನ ದರ್ಶನವಾದೊಡನೆ ಹಿಂದಿರುಗಿ ನದಿಗೆ ಬಂದುಬಿಟ್ಟರು. ಸ್ನಾನ ಮಾಡಿ ಮತ್ತೆ ಗುಡಿಗೆ ಬಂದರಾದರೂ ತಾವೇ ಪೂಜೆ ಮಾಡಲಾರದೆ ಪುರೋಹಿತರ ಕೈಯಿಂದಲೇ ಪೂಜೆ ಮಾಡಿಸಿ ತಾವು ಸುಮ್ಮನೆ ಕುಳಿತುಬಿಟ್ಟರು. ಆ ರಾತ್ರಿ ನಿದ್ದೆ ಬಾರದೆ ಅತ್ತಿಂದಿತ್ತ ಠಳಾಯಿಸುತ್ತಿದ್ದರು. ತಮ್ಮ ಸುತ್ತಲಿರುವುದೆಲ್ಲ ತಿರುಗುತ್ತಿದೆಯೆಂದಾಗ ಅವರನ್ನು ನರಸಿಂಹ ವನದಲ್ಲಿ ಇರಿಸುವ ವ್ಯವಸ್ಥೆ ಮಾಡಲಾಯಿತು. ವೈದ್ಯರು ಕೊಟ್ಟ ಲೇಹ್ಯವನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿಬಿಟ್ಟರು. ತೈಲಧಾರೆಯ ಫಲದಿಂದ ಅವರ ಉದ್ವೇಗವೇನೋ ಕಡಿಮೆಯಾಯಿತು. ಆದರೆ ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ಮೊದಲಿನ ದಿನಗಳು; ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಈ ನಡುವೆ ತುಸು ಸಮಯ ಅಂತರ್ಮುಖರಾಗದೇ ಇದ್ದಾಗ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟು ಕಿಗ್ಗ, ಕೊಪ್ಪ, ಚಿಕ್ಕಮಗಳೂರು, ಬೇಲೂರು, ಬೆಳವಾಡಿ, ಹೊಳೆನರಸೀಪುರಗಳಲ್ಲೆಲ್ಲಾ ಸಂಚರಿಸಿ ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ಮುಂದೆ ಸತ್ಯಮಂಗಲ, ತಮಿಳುನಾಡಿನ ಶ್ರೀರಂಗ, ತಿರುಚಿರಪಳ್ಳಿ, ರಾಮೇಶ್ವರದಲ್ಲಿ ಸಂಚರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳಿನಲ್ಲಿಯೇ ಉಪನ್ಯಾಸ ಮಾಡಿದ್ದು ಎಲ್ಲರಿಗೂ ಆಶ್ಚರ್ಯತಂದ ವಿಚಾರವಾಗಿತ್ತು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತುತಿ ಹಾಗೂ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಮುಂದೆ ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆಯನ್ನು ವ್ಯವಸ್ಥೆ ಮಾಡಿ, ಹಿಂದಿರುಗುವಾಗ ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿ ಚಾತುರ್ಮಾಸ್ಯವನ್ನು ಅಲ್ಲೇ ಕಳೆದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

          ಶಿಷ್ಯಪರಿಗ್ರಹವಾದ ಮೇಲಂತೂ ಮಠದೊಂದಿಗಿನ ಅಲ್ಪಸ್ವಲ್ಪ ಸಂಬಂಧವನ್ನೂ ಕಡಿದುಕೊಂಡು ಜೀವನ್ಮುಕ್ತರಂತೆ ನಿಃಸಂಗರಾಗಿ, ನಿರುದ್ವಿಗ್ನರಾಗಿ ಮುಂದಿನ ಇಪ್ಪತ್ಮೂರು ವರ್ಷಗಳ ಕಾಲ ನರಸಿಂಹ ವನದಲ್ಲೇ ತಪಶ್ಚರ್ಯೆಯಲ್ಲಿ ತೊಡಗಿದರು. ಹೀಗೆ ನಿಧಿದ್ಯಾಸನ ಕೈಗೊಂಡು ಏಳು ವರ್ಷಗಳ ಬಳಿಕ ಬಹಿರ್ಮುಖರಾದಾಗ ಅಪೂರ್ವ ತೇಜಸ್ಸಿನಿಂದ ಅವರ ಮುಖ ಕಂಗೊಳಿಸುತ್ತಿತ್ತು.

                ಒಮ್ಮೆ ಮಠದ ಆನೆ ಬಹಳ ದಿನಗಳವರೆಗೆ ಆಹಾರವನ್ನು ಮುಟ್ಟದೆ, ಯಾರನ್ನೂ ತನ್ನ ಬಳಿ ಸೇರಿಸದೆ ಚಂಡಿ ಹಿಡಿದಿತ್ತು. ಮಾವುತನನ್ನೂ ಅದು ಲೆಕ್ಕಿಸಲಿಲ್ಲ. ಆನೆಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿ ಅದನ್ನು ಕಾಡಿಗೆ ಕಳುಹಿಸುವ ತೀರ್ಮಾನವಾಗಿತ್ತು. ಆನೆಯ ಕೂಗಾಟ ಕೇಳಿಸಿದ ಕೂಡಲೇ ಗುರುಗಳು ಗಜಶಾಲೆಯತ್ತ ಧಾವಿಸಿದರು. ಅಲ್ಲಿದ್ದವರು ‘ಆನೆಗೆ ಹುಚ್ಚು ಹಿಡಿದಿದೆ, ಹತ್ತಿರ ಹೋಗಬೇಡಿರಿ’ ಎಂದು ಗುರುಗಳ ಬಳಿ ವಿನಂತಿಸಿಕೊಂಡರು. ಗುರುಗಳು ಆನೆಯ ಹತ್ತಿರ ಹೋಗಿ ಅದರ ಸೊಂಡಿಲಿನ ಮೇಲೆ ಕೈಯಾಡಿಸುತ್ತ ಮೃದುವಾದ ಧ್ವನಿಯಲ್ಲಿ ‘ಯಾಕಪ್ಪ ಏನಾಗಿದೆ?’ ಎಂದು ಕೇಳಿದರು. ಆನೆಯು ತಲೆಬಾಗಿ ತನ್ನ ಮುಂಗಾಲನ್ನು ಎತ್ತಿ ತೋರಿಸಿತು. ಅದರ ಅಂಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು. ಗುರುಗಳು ಆ ಮೊಳೆಯನ್ನು ಜೋಪಾನವಾಗಿ ತೆಗೆಸಿ ಗಾಯಕ್ಕೆ ಚಿಕಿತ್ಸೆ ಮಾಡಿಸಿದರು. ಆನೆ ಯಾವ ತಕರಾರನ್ನು ಮಾಡದೆ ಚಿಕಿತ್ಸೆಗೆ ಸ್ಪಂದಿಸಿತು. ಗುರುಗಳ ದರ್ಶನಕ್ಕಾಗಿ ಮನವಿ ಮಾಡಿದ್ದ ಗಣ್ಯ ವ್ಯಕ್ತಿಯೊಬ್ಬ ತನಗೆ ಯಾವುದೇ ಉತ್ತರ ಬರದಿದ್ದಾಗ ಮೈಸೂರು ದಿವಾನರ ಮೂಲಕ ಮನವಿ ಸಲ್ಲಿಸಿದ. ವಿಚಾರ ತಿಳಿದ ಗುರುಗಳು ‘ಇದಕ್ಕೆ ಹಿಂದೆ ಬಂದ ಪತ್ರದ ಬಗ್ಗೆ ನನಗೇಕೆ ತಿಳಿಸಲಿಲ್ಲ?’ ಎಂದು ಅಧಿಕಾರಿಗಳಲ್ಲಿ ಕೇಳಿದಾಗ ಅಧಿಕಾರಿಗಳು ‘ಗುರುಗಳೇ, ಸಂದರ್ಶನ ಬಯಸಿದ್ದ ವ್ಯಕ್ತಿಯ ಚಾರಿತ್ರ್ಯ ಸರಿ ಇರಲಿಲ್ಲ. ಎಲ್ಲ ರೀತಿಯ ದುರಭ್ಯಾಸಗಳು ಇವೆ. ಆದ್ದರಿಂದ ತಮಗೆ ಅರಿಕೆ ಮಾಡಲು ಹಿಂಜರಿದಿದ್ದೆ’ ಎಂದರು. ಆಗ ಗುರುಗಳು ಕೊಡುವ ಉತ್ತರ ಸಮಾಜದ ಕಣ್ಣು ತೆರೆಸುವಂತಹದ್ದು. ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ." ಬಳಿಕ ಗುರುಗಳ ದರ್ಶನ ಪಡೆದ ಆ ವ್ಯಕ್ತಿ ಗುರುಗಳಿಂದ ಪ್ರಭಾವಿತರಾಗಿ, ತಮ್ಮ ನಡೆನುಡಿಯನ್ನು ಬದಲಾಯಿಸಿಕೊಂಡು ಗುರುಗಳ ಪರಮ ಭಕ್ತರಾದರು. ಹೀಗೆ ಅವರು ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎಂದು ಅವರ ಬಲವಾದ ನಂಬಿಕೆಯಾಗಿತ್ತು. ಹಾಗಾಗಿ ಗುರುಗಳು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರಂತೆ, ಹನುಮಂತನಿಗಾಗಿ!

               ಹಿಂದೂ ಧರ್ಮದ ಬಗ್ಗೆ ಗುರುಗಳ ವಿಶ್ಲೇಷಣೆ ಅದರಲ್ಲೂ ಅವಧೂತರೊಬ್ಬರ ವಿಶ್ಲೇಷಣೆ ಬಲು ಮಹತ್ವವಾದದ್ದು. ಹಿಂದೂ ಧರ್ಮ ಸನಾತನವಾದದ್ದು. "ಹಿಂದೂ" ಎಂಬ ಅದರ ಹೆಸರು ಇತ್ತೀಚಿನದ್ದಾಗಿರಬಹುದು; ಆದರೆ ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ ಅವು ಒಪ್ಪಲಿಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ನಾವು ಅರಿತು ಒಪ್ಪಿಕೊಂಡಲ್ಲಿ ನಮಗೆ ಒಳಿತು. ಇಲ್ಲದಿದ್ದಲ್ಲಿ ಕೆಡುಕು ನಮಗೇ. ಸನಾತನ ಧರ್ಮವು ಈ ರೀತಿಯಾದದ್ದು. ಇತರ ಎಲ್ಲ ಧರ್ಮಗಳ ಉತ್ಕೃಷ್ಟ ಬೋಧನೆಗಳು ತಮ್ಮ ಸ್ಥಾನವನ್ನು ಸನಾತನ ಧರ್ಮದಲ್ಲಿಯೂ ಪಡೆದುಕೊಂಡಿವೆ. ಅವು ಸನಾತನಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ.

ಜಾತಿಪದ್ದತಿಯ ಬಗ್ಗೆ ಅವರ ವಿಶ್ಲೇಷಣೆ: 
              "ಎಲ್ಲರೂ ಹಿಂದೂಗಳೇ ಎಂದರೆ ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ಮಾರ್ಗದರ್ಶನ ಪಡೆಯಲು ಅರ್ಹರು ಎಂದರ್ಥ.  ಆದರೆ ಈ ಮಾರ್ಗದರ್ಶನವು ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದರ್ಥವಲ್ಲ. ಮನುಷ್ಯನಿಗೆ ಹುಟ್ಟಿನಿಂದ ಬಂದ ಒಲವು, ಸ್ವಭಾವ, ಪೂರ್ವಜನ್ಮದ ಸಂಸ್ಕಾರ, ಪರಿಸರ ಮತ್ತು ಅವನು ಹುಟ್ಟಿದ ಮೇಲೆ ಪಡೆದುಕೊಳ್ಳುವ ತರಬೇತು ಇವೆಲ್ಲವೂ ಒಂದೇ ಆಗಿರಲು ಸಾಧ್ಯವಿಲ್ಲ. ಈ ಅವಿರೋಧ ಸತ್ಯವನ್ನು ಗಣನೆಗೆ ತೆಗೆದುಕೊಂಡು ಸನಾತನ ಧರ್ಮವು ಸಾಮಾನ್ಯಧರ್ಮ ಮತ್ತು ವಿಶೇಷಧರ್ಮಗಳು ಎಂದು ವಿಂಗಡಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.  ಸಾಮಾನ್ಯ ಧರ್ಮ ಇಡೀ ಮಾನವಕುಲಕ್ಕೆ ಸಹಕಾರಿಯಾದರೆ ಸಾಮಾನ್ಯ ಧರ್ಮ ಮತ್ತು ವಿಶೇಷ ಧರ್ಮ ಎರಡೂ ಸೇರಿ ಜಾತಿ ಚೌಕಟ್ಟಿನೊಳಗೆ ಬರುವವರಿಗೆ ಉಪಯುಕ್ತವಾಗಿವೆ."

ಇತರ ಮತಗಳ ಬಗ್ಗೆ ಸ್ವಾಮಿಗಳ ಅಭಿಪ್ರಾಯ:
           ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಮುಕ್ತಿಸಾಧನವು ಮುಂದೆ ಜನಿಸುವ ಕ್ರಿಸ್ತನಲ್ಲಿನ ನಂಬಿಕೆಯು ಅದಕ್ಕೆ ಕಡ್ಡಾಯ ಎಂಬ ನಿಯಮವನ್ನು ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ. ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ.

ಆತ್ಮಾರ್ಪಣೆ:
                 1954ರ ಭಾದ್ರಪದ ಬಹುಳ ಅಮವಾಸ್ಯೆಯ ಮುನ್ನಾ ದಿನ ರಾತ್ರಿ. ಸ್ವಾಮಿಗಳು ಮಲಗಲೇ ಇಲ್ಲ. ಸಚ್ಚಿದಾನಂದ ವಿಲಾಸದಲ್ಲಿದ್ದ ತಮ್ಮ ಗುರುಗಳ ಸಮಾಧಿಗೆ ಮತ್ತೆ ಮತ್ತೆ ಪ್ರದಕ್ಷಿಣೆ ಮಾಡುತ್ತಿದ್ದರು. ನಡುವೆ ಕಾಲಭೈರವನ ಗುಡ್ಡಕ್ಕೂ ಹೋಗಿ ಬಂದರು. ಆತ್ಮವಿದ್ಯಾವಿಲಾಸವನ್ನು ಗಟ್ಟಿಯಾಗಿಯೇ ಹೇಳಿಕೊಂಡು ತಿರುಗಾಡುತ್ತಿದ್ದರು. ಆಗ ನದಿಯ ಆಚೆ ದಡದಲ್ಲಿ ನವರಾತ್ರಿಗೆ ಭರ್ಜರಿ ಸಿದ್ಧತೆಗಳಾಗಿತ್ತು. ಸ್ವಾಮಿಗಳು ಬೆಳಕು ಹರಿಯುವ ಮುನ್ನವೇ ಅಲ್ಲೇ ಮಲಗಿದ್ದ ಮಹಾಬಲಭಟ್ಟರನ್ನು ಕರೆದು ಸ್ನಾನಕ್ಕೆ ಹೊರಡೋಣವೆಂದು ಹೊರಟುನಿಂತರು. ಮಳೆ, ಚಳಿಯ ಕಾರಣ ತಣ್ಣೀರು ಸ್ನಾನ ಬೇಡವೆಂದು ಭಟ್ಟರು ಅರಿಕೆ ಮಾಡಿಕೊಂಡಾಗ "ಇವತ್ತು ಪುಣ್ಯದಿನವಲ್ಲವೇ, ತುಂಗಾ ಸ್ನಾನವೇ ಆಗಲಿ" ಎಂದುತ್ತರಿಸಿ ಹೊರಟೇ ಬಿಟ್ಟರು. ಇನ್ನೂ ಕತ್ತಲಿದ್ದುದರಿಂದ ಪರಿಚಾರಕ ರಾಮಸ್ವಾಮಿ ಲಾಟೀನು ಹಿಡಿದುಕೊಂಡರು. ರಾಮಸ್ವಾಮಿಯನ್ನು ಮೇಲೆಯೇ ನಿಲ್ಲಿಸಿ ಭಟ್ಟರೊಂದಿಗೆ ಕೆಳಗಿಳಿದು ಹೋದ ಅವರು ನೀರಿನಲ್ಲಿ ಮುಳುಗು ಹಾಕಿ ಪಕ್ಕದ ಕಟ್ಟೆಯ ಮೇಲೆ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತರು. ಬೆನ್ನು ತಿರುಗಿಸಿ ಬಟ್ಟೆ ಒಗೆಯುತ್ತಿದ್ದ ಭಟ್ಟರು ಏನೋ ಬಿದ್ದ ಸದ್ದಾದಂತಾಗಿ ತಿರುಗಿ ನೋಡುತ್ತಾರೆ, ಸ್ವಾಮಿಗಳು ಪದ್ಮಾಸನದಲ್ಲಿಯೇ ತೇಲಿ ಹೋಗುತ್ತಿದ್ದಾರೆ. ಭಟ್ಟರು ಸಹಾಯಕ್ಕಾಗಿ ಕೂಗು ಹಾಕಿ ಈಜಿಕೊಂಡು ಸ್ವಾಮಿಗಳನ್ನು ಕೇಶವಚಾರಿಯ ಸಹಾಯದಿಂದ ದಡಕ್ಕೆ ತಂದರಾದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ!

                ಪೀಠಾಧಿಪತಿಗಳಾಗಿದ್ದೂ ಪೀಠದ ಪ್ರಚಾರಕ್ಕೆ ಇದ್ದ ಪರಿಕರಗಳನ್ನು ಬದಿಗೊತ್ತಿ, ಪೀಠದ ಬಿಂಕವನ್ನು ಬಿಸುಟು ನಿಂತವರು ಅವರು. ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಒಂದು ಲೇಖನದಲ್ಲೋ ಕೆಲವು ಪದಗಳಲ್ಲೋ ಅವರನ್ನು ಕಟ್ಟಿಡಲಾಗದು. ಅವರ ಸಾಮಾನ್ಯ ವ್ಯಕ್ತಿತ್ವವೇ ವರ್ಣನೆಗೆ ನಿಲುಕದ್ದು; ಇನ್ನು ಅವರ ಅಸಾಮಾನ್ಯ ಸಿದ್ಧಿಯನ್ನು, ವ್ಯಕ್ತಿತ್ವವನ್ನು ಏನೆಂದು ಬಣ್ಣಿಸಲಿ. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ. ಶಂಕರರ ಬಳಿಕ ಶೃಂಗಗಿರಿಯಲ್ಲಿ ಅದ್ವೈತವನ್ನು ಸಾಕ್ಷಾತ್ಕರಿಸಿಕೊಂಡ ಚಂದ್ರಶೇಖರ.

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ ಘಟ್ಟದ ಮೇಲಿನವರ ಮಾತಿನ ಸತ್ಯ ಕಣ್ಣಿಗೆ ರಾಚುತ್ತಿತ್ತು. ಆಗುಂಬೆ ದಾಟಿದೊಡನೆ ಅಲ್ಲಲ್ಲಿ ಕಾಣಸಿಕ್ಕಿದ ರಬ್ಬರ್ ಹಾಡಿಗಳು ಮಳೆ ಕಡಿಮೆಯಾಗಿದ್ದಕ್ಕೆ ಕಾರಣವಾದ ಅಂಶದ ನಗ್ನದರ್ಶನವಿತ್ತಿತ್ತು. ತೀರ್ಥಹಳ್ಳಿಯಲ್ಲಿ ಹೆದ್ದಾರಿ ಬಿಟ್ಟು ಹಳ್ಳಿಯ ದಾರಿ ಹಿಡಿದ ನಮಗೆ ನಾವು ಗತ ವೈಭವವೊಂದರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೇವೆಂಬ ಭಾವವಾದರೂ ಹೇಗುಂಟಾದೀತು? ಕವಳೆದುರ್ಗ, ತೀರ್ಥಹಳ್ಳಿಯ ಬಳಿಯಿರುವ ಸ್ಥಳ ಎಂಬ ಕನಿಷ್ಟ ಮಾಹಿತಿಯೊಂದಿಗೆ ಎಂದಿನ ಅಭ್ಯಾಸದಂತೆ ಮಾರ್ಗದರ್ಶಕರಿಲ್ಲದೆ, ನಿಖರ ಮಾರ್ಗ ಗೊತ್ತಿಲ್ಲದೆ, ಅಲ್ಲಿನ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳದೆ ಸಾಗುತ್ತಿದ್ದ ನಮಗೆ ಆರಂಭದಲ್ಲಿ ಕಾದಿದ್ದು ನಿರಾಶೆಯೇ. ಒಂದೆರಡು ಮನೆಗಳಲ್ಲಿ ವಿಚಾರಿಸಿಕೊಂಡು, ಹದಗೊಳಿಸಿದ ಗದ್ದೆಗಳನ್ನೂ, ಪಾಳು ಬಿದ್ದು ಈಗ ಕೆರೆಯಂತಾಗಿರುವ ಗದ್ದೆಗಳನ್ನು ದಾಟಿ ಬಂದು ನಿಂತವರಿಗೆ ಕಂಡಿದ್ದು ಅಷ್ಟೇನೂ ದಟ್ಟವಲ್ಲದ ಮರಗಳು, ಪೊದೆಗಳಿಂದಾವೃತವಾದ ಕಲ್ಲು, ಮಣ್ಣುಗಳಿಂದಾವೃತವಾದ ಒಂದು ಗುಡ್ಡ. ಅದರ ಮೇಲೆ ಕೋಟೆಯ ಕುರುಹು!


ಕೋಟೆಯ ಒಳ ಹೋಗಲು ಕರಿಯ ದೊರಗು ಕಲ್ಲುಗಳನ್ನು ನೆಲಕ್ಕೆ ಅನುಕ್ರಮವಿಲ್ಲದೆ ಜೋಡಿಸಿದ ಒರಟಾದ ಅಗಲವಾದ ಈಗಿನ ದ್ವಿಪಥ ಎನ್ನಬಹುದಾದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ತುಳುವಿನಲ್ಲಿ "ಅಗರ್(ಅಥವಾ ಅಗಳ್)"ನಂತೆಯೇ ಇರುವ ಕಲ್ಲುಗಳನ್ನು ಜೋಡಿಸಿ ರೂಪಿಸಿದ ದಂಡೆಗಳು. ಮೇಲಿಂದ ಕೆಲ ಬಂಡೆಗಳು ಜಾರಿ ರಸ್ತೆಗೆ ಬಿದ್ದಿವೆಯಾದರೂ ಆ ರಸ್ತೆ ದಂಡೆಗಳ ಸಮೇತ ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷ. ಮುಂದುವರಿದಂತೆ ಕೋಟೆಯ ಮುಖ್ಯ ದ್ವಾರದಲ್ಲಿ ಕಾಣಸಿಕ್ಕಿದ ರಸ್ತೆಯ ಇಕ್ಕೆಲಗಳಲ್ಲಿರುವ ಎರಡು ಬೃಹತ್ ಕಾವಲು(ಅಥವಾ ವೀಕ್ಷಕ) ಗೋಪುರಗಳು ನಮ್ಮ ಕುತೂಹಲವನ್ನು ಬಡಿದೆಬ್ಬಿಸಿದವು. ಯಾವುದೋ ಕಾಲದಲ್ಲಿ ನೇತು ಹಾಕಿದ ಭಾರತೀಯ ಪುರಾತತ್ವ ಇಲಾಖೆಯ ಭಿತ್ತಿಪತ್ರ ಇತಿಹಾಸವನ್ನು ತುಸು ನೆನಪಿಸುವುದರ ಜೊತೆಜೊತೆಗೆ ಒಳಗಿರಬಹುದಾದ ವಿಶೇಷತೆಯನ್ನೂ ಹಾಗೂ ಅವ್ಯಾವುವೂ ಸರಿಯಾಗಿ ನಿರ್ವಹಣೆಗೊಳಗಾಗುತ್ತಿಲ್ಲವೆನ್ನುವುದನ್ನು ಸಾರಿ ಹೇಳುತ್ತಿತ್ತು! ಒಳಹೊಕ್ಕಾಗ ನಮ್ಮನ್ನು ಸ್ವಾಗತಿಸಿದ್ದು ಇಳಿಜಾರಾದ ಕಲ್ಲುಗಳ ನಡುವೆಯೂ ಮೇವನ್ನರಸಿ ಕೋಟೆಯೊಳಗೆ ಹೊರಟಿದ್ದ ಗೋವುಗಳು!

ಅದು ಕವಳೆದುರ್ಗ. ತೀರ್ಥಹಳ್ಳಿಯಿಂದ 16ಕಿಮೀ ದೂರದಲ್ಲಿ ಸಮುದ್ರ ಮಟ್ಟದಿಂದ 1541ಮೀ ಎತ್ತರದ ಬೆಟ್ಟದಲ್ಲಿ ನಿರ್ಮಿತವಾದ ಕೋಟೆ. ಅನೇಕ ಸಾಧುಗಳ ಸಾಧನೆಗೆ ನೆರವಾದ ಪುಣ್ಯಭೂಮಿ. ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರಕ್ಕೇ ಸೇರಿತ್ತು ಎನ್ನುವ ಪ್ರತೀತಿ ಇದೆ. ತ್ರೇತೆಯಲ್ಲಿ ಅಗಸ್ತ್ಯ ಹಾಗೂ ವಾಲ್ಮೀಕಿ ಮಹರ್ಷಿಗಳು ಇಲ್ಲಿ ತಪಃಗೈದಿದ್ದರು ಎನ್ನುವ ಪುರಾಣ ಕಥೆಗಳೂ ಇವೆ. ದ್ವಾಪರೆಯಲ್ಲಿ ಪಾಂಡವರು ಇಲ್ಲಿ ನೆಲೆಸಿದ್ದರು ಎನ್ನುವ ಕಥೆಗಳೂ ಇವೆ. ಸ್ಕಂದ ಪುರಾಣದಲ್ಲಿ ಕಾವ್ಯ ವನ ಹಾಗೂ ಕಪಿಲದುರ್ಗ ಎಂದು ಹೆಸರಿಸಿರುವ ಸ್ಥಳ ಇದೇ ಎನ್ನುವ ವಾದಗಳೂ ಇವೆ. ಆದರೆ ಐತಿಹಾಸಿಕವಾಗಿ ಇದರ ಕುರುಹು ಸಿಗುವುದು 9ನೇ ಶತಮಾನದ ಬಳಿಕವೇ.  ಈ ಕೋಟೆ ನಿರ್ಮಾಣಗೊಂಡದ್ದು ಸುಮಾರು 9ನೇ ಶತಮಾನದಲ್ಲಿ. 14ನೇ ಶತಮಾನದಲ್ಲಿ ಬೇಲಗುತ್ತಿಯ ಅರಸ ಚೆಲುವರಂಗಪ್ಪ ಕೋಟೆಯನ್ನು ನವೀಕರಣಗೊಳಿಸಿ ಅಭಿವೃದ್ಧಿಪಡಿಸಿದ. ಧೋಲಾಯ್ತಮ ಹಾಗೂ ಮುಂಡಿಗೆ ಎನ್ನುವ ಸಹೋದರರು ಈ ಕೋಟೆಯನ್ನು ವಶಪಡಿಸಿದ ಬಳಿಕ ಇದು ಕೌಳಿ ಎನ್ನುವ ಹಳ್ಳಿಯಲ್ಲಿದ್ದ ಕಾರಣಕ್ಕಾಗಿ ಇದನ್ನು ಕೌಳಿ ದುರ್ಗ ಎಂದೇ ಕರೆದರು. ಹದಿನಾರನೇ ಶತಮಾನದಲ್ಲಿ ಕೆಳದಿಯ ಅರಸ ಹಿರಿಯ ವೆಂಕಟಪ್ಪನಾಯಕ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡು ಅದಕ್ಕೆ ಏಳು ಸುತ್ತಿನ ತಡೆಗೋಡೆಗಳ ರಕ್ಷಣೆಯನ್ನು ಒದಗಿಸಿದ. ಆ ಸಮಯದಲ್ಲಿ ಇದು ಭುವನಗಿರಿಯೆಂದೇ ಹೆಸರು ಪಡೆಯಿತು. ಅದು ಕೋಟೆಯ ಸ್ವರ್ಣಮಯ ಕಾಲ! 1763ರಲ್ಲಿ ಹೈದರ್ ಅಲಿ ಆಕ್ರಮಣ ಮಾಡಿದ ಬಳಿಕ ಕೋಟೆ ಅವಸಾನದತ್ತ ಸಾಗಿತು. ತನ್ನ ಒಂದಷ್ಟು ಸೈನಿಕರನ್ನು ಕೋಟೆಯ ಕಾವಲಿಗೆ ಆತ ನಿಲ್ಲಿಸಿದ ಕಾರಣದಿಂದ ಈ ಕೋಟೆ ಜನರ ಬಾಯಲ್ಲಿ ಕಾವಲು ದುರ್ಗವಾಗಿ ಬದಲಾಯಿತು. ಟಿಪ್ಪುವಿನ ಬಳಿಕ ಮೈಸೂರು ಒಡೆಯರ ವಶಕ್ಕೆ ಈ ಕೋಟೆ ಸಿಕ್ಕಿತಾದರೂ ಅದರ ಅಭಿವೃದ್ಧಿ ಕಡೆಗೆ ಅವರೂ ಮನ ಮಾಡಿದಂತೆ ಕಾಣಲಿಲ್ಲ. 1882ರವರೆಗೂ ತಾಲೂಕು ಕೇಂದ್ರವಾಗಿ ಮೆರೆದಿದ್ದ, ಅನೇಕ ಹೆಸರುಗಳನ್ನು ಪಡೆಯುತ್ತ ಅವಸಾನದತ್ತ ಸಾಗುತ್ತಿದ್ದ ಕೋಟೆಗೆ ಇಂದಿನ ಹೆಸರು ಕವಳೆ ದುರ್ಗವೇ. ಕ್ರಮೇಣ ತಾಲೂಕು ಕೇಂದ್ರ ತೀರ್ಥರಾಜಪುರ ಅಂದರೆ ಇಂದಿನ ತೀರ್ಥಹಳ್ಳಿಗೆ ಸ್ಥಳಾಂತರಗೊಂಡಿತು.

ಕೋಟೆಯ ಅಭಿವೃದ್ಧಿಗೆ ವೆಂಕಟಪ್ಪ ನಾಯಕನ ಕೊಡುಗೆ ಅಪಾರ. ಆತ ಇಲ್ಲಿ ಅರಮನೆಯೊಂದನ್ನು ಕಟ್ಟಿಸಿದ. ಅಗ್ರಹಾರ ಹಾಗೂ ಮಹತ್ತಿನ ಮಠವನ್ನು ಕಟ್ಟಿಸಿದ. ಶೃಂಗೇರಿ ಮಠ, ಖಜಾನೆ, ಧಾನ್ಯದ ಕಣಜ, ಟಂಕಸಾಲೆ, ದೇವಾಲಯಗಳು, ಕೊಳಗಳು ಹಾಗೂ ಆನೆ ಮತ್ತು ಕುದುರೆ ಲಾಯಗಳಿಂದ ಕೋಟೆಯ ವೈಭವವನ್ನು ಹೆಚ್ಚಿಸಿದ. ನೈಸರ್ಗಿಕ ಗುಡ್ಡದ ರೂಪುರೇಷೆಯನ್ನಾಧರಿಸಿ ಬೃಹತ್ ಕಣಶಿಲೆಗಳಿಂದ ಮೂರು ಸುತ್ತಿನ ಗೋಡೆಗಳನ್ನು ನಿರ್ಮಿಸಿದ. ಪ್ರತಿಯೊಂದು ಸುತ್ತಿನ ದ್ವಾರದ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳನ್ನು ಕಾಣಬಹುದು. ಪ್ರತಿಯೊಂದು ಸುತ್ತಿನಲ್ಲೂ ಕಾವಲುಗಾರರ ಕೋಟೆಗಳನ್ನೊಳಗೊಂಡ ಪ್ರವೇಶದ್ವಾರವಿದ್ದು ಪ್ರತಿಯೊಂದು ಸುತ್ತಿನ ಮಧ್ಯಭಾಗದಲ್ಲಿ ದೇವಾಲಯಗಳ ಅವಶೇಷಗಳು, ಶಿಥಿಲಗೊಂಡ ಅರಮನೆಯ ನಿವೇಶನಗಳು, ಕಟ್ಟಡಗಳ ಅವಶೇಷಗಳಿವೆ. ಮೊದಲ ಸುತ್ತಿನ ಸಂಕಲಿಸಿದ ಎರಡು ವೃತ್ತಾಕಾರದ ರಚನೆಗಳು ಎರಡನೆ ಸುತ್ತಿಗೆ ದ್ವಾರಗಳಾಗಿವೆ. ಇವಕ್ಕೆ ನಗಾರಿ ಬಾಗಿಲು ಎಂದೇ ಹೆಸರು. ಇದೊಂದು ಸುಭದ್ರವಾದ, ಭವ್ಯ, ಸುಸಜ್ಜಿತ ಕೋಟೆಯಾಗಿತ್ತೆಂದು ಅದರ ಅವಶೇಷಗಳೇ ಸಾರಿ ಹೇಳುತ್ತವೆ. ಕೋಟೆ ಸುಮಾರು 8 ಕಿ.ಮೀ ವಿಸ್ತೀರ್ಣದಲ್ಲಿ ವಿಸ್ತರಿಸಿದೆ. ಹಳ್ಳಿಯನ್ನೇ ಸುತ್ತುವರಿದಿದ್ದ ಹೊರಗಿನ ಎರಡು ರಕ್ಷಣಾ ಗೋಡೆಗಳು ಕಾಲದ ಹೊಡೆತಕ್ಕೆ ಸಿಕ್ಕಿ ಬಹುತೇಕ ಅಳಿದು ಹೋಗಿವೆ. ಉಳಿದ ಐದು ಸುತ್ತಿನ ಗೋಡೆಗಳಲ್ಲೂ ಒಳಗಿನ ಎರಡಷ್ಟೇ ಭದ್ರವಾಗಿ ನಿಂತಿವೆ. ಕೆಲವು ಕಡೆಗಳಲ್ಲಿ ಗೋಡೆಗಳು ಈಗಲೂ 40 ಅಡಿಗಳಷ್ಟು ಎತ್ತರವಿರುವುದನ್ನು ನೋಡಿದರೆ ಕೋಟೆಯ ಅಗಾಧತೆ ಹಾಗೂ ಬಲಿಷ್ಟತೆಯನ್ನು ಊಹಿಸಬಹುದು.






ಕೋಟೆಯೊಳಗಿದ್ದ ಹದಿನೈದು ದೇವಾಲಯಗಳಲ್ಲಿ ಈಗ ಉಳಿದಿರುವುದು ಕೆಲವೇ ಕೆಲವು. ಅವುಗಳಲ್ಲಿ ಮೈಲಾರೇಶ್ವರ, ಕಾಶಿ ವಿಶ್ವನಾಥ, ಲಕ್ಷ್ಮೀನಾರಾಯಣ, ಶಿಖರೇಶ್ವರ ದೇವಾಲಯಗಳು ಪ್ರಮುಖವಾದವು. ಆಸ್ಥಾನದ ಅವಶೇಷಗಳು ಹದಿನಾರನೇ ಶತಮಾನದ ರಾಜದರ್ಬಾರನ್ನು ಕಣ್ತುಂಬಿಕೊಳ್ಳಬಯಸುತ್ತವೆ. ಲಕ್ಷ್ಮೀನಾರಾಯಣ ದೇಗುಲ ಮೊದಲ ಸುತ್ತಿನ ಕೋಟೆಯ ಒಳಭಾಗದಲ್ಲಿ ಬೃಹದಾಕಾರದ ಬಂಡೆಯ ಮೇಲೆ ಕಟ್ಟಲ್ಪಟ್ಟಿದೆ. ಇಲ್ಲೇ ಆಸ್ಥಾನದ ಅವಶೇಷಗಳು, ರಾಣಿಯ ಪ್ರತ್ಯೇಕ ಈಜುಕೊಳ, ಜೈಲಿನ ಅವಶೇಷಗಳು, ಶಸ್ತ್ರಾಗಾರ, ಕಾಲವನ್ನು ಅಳೆಯುತ್ತಿದ್ದ ತಾಮ್ರದ ಘಳಿಗೆ ಬಟ್ಟಲು, ಆನೆ ಮತ್ತು ಕುದುರೆ ಲಾಯಗಳನ್ನು ಕಾಣಬಹುದು. ಬೃಹದಾಕಾರದ ಬಂಡೆಯ ಮೇಲೆ ನಿಂತಿದೆ ಶಿಖರೇಶ್ವರ ದೇವಾಲಯ. ಇಡಿಯ ಕೋಟೆಗೆ ಕಿರೀಟದಂತೆ ಪರ್ವತದ ತುತ್ತತುದಿಯಲ್ಲಿ ಶೋಭಿಸುತ್ತ ನಿಂತಿರುವ ಈ ದೇವಾಲಯ ಬೃಹದಾಕಾರದ ಕಲ್ಲುಗಳಿಂದ ಕಟ್ಟಲ್ಪಟ್ಟ ಒಂದು ಸುಂದರ ಗುಡಿ. ಕೆಳಗಿಂದ ನೋಡಿದರೆ ಈ ದೇವಾಲಯವೇ ಒಂದು ಶಿವಲಿಂಗದಂತೆ ಭಾಸವಾಗುತ್ತದೆ. ಈ ದೇವಾಲಯವು ತಲವಿನ್ಯಾಸದಲ್ಲಿ ಗರ್ಭಗೃಹ, ನಂದಿ ಮಂಟಪ ಹಾಗೂ ಮುಖ ಮಂಟಪವನ್ನು ಹೊಂದಿದ್ದು ಅನುಪಮ ಸೂರ್ಯಾಸ್ತದ ವೀಕ್ಷಣೆಗೆ ಸಹಕಾರಿಯಾಗಿದೆ. ಮೂರನೇ ಸುತ್ತಿನ ಕೋಟೆಯೊಳಗಿರುವ ಕಾಶಿ ವಿಶ್ವನಾಥ ದೇವಾಲಯ ವಿಶೇಷವಾದದ್ದು. ದೇಗುಲದ ಎದುರಿಗೆ ಇಕ್ಕೆಲಗಳಲ್ಲಿರುವ ಎರಡು ಶಿಲಾಸ್ಥಂಭಗಳು ಇತಿಹಾಸಕಾರರ ಕುತೂಹಲಕ್ಕೆ ಕಾರಣವಾಗಬಹುದಾದ ಸಂಗತಿ. ಇದು ದಕ್ಷಿಣ ಭಾರತದ ದೇಗುಲಗಳಲ್ಲಿ ಅಪರೂಪ ಎನ್ನಬಹುದಾದ ರಚನೆಯೇ ಸರಿ. ದೇವಾಲಯದ ಎದುರಿಗಿರುವ ಮಂಟಪವನ್ನು ತುಲಾಭಾರ ಮಂಟಪವೆಂದೇ ಕರೆಯಲಾಗುತ್ತಿತ್ತು. ಬಹುಷಃ ತುಲಾಭಾರ ಸೇವೆ ಇಲ್ಲಿಯೇ ನಡೆಯುತ್ತಿದ್ದಿರಬಹುದೆಂಬ ಊಹೆ. ಆಸ್ಥಾನ ನೃತ್ಯಾಂಗನೆಯ ಚಿತ್ರವೊಂದು ಈ ಮಂಟಪದ ಗೋಡೆಯಲ್ಲಿ ಕೆತ್ತಲ್ಪಟ್ಟಿದೆ. ಹಾಂ, ಮುಸಲರಿಂದ ಆಕ್ರಮಣಗೊಂಡ ಎಲ್ಲಾ ದೇವಾಲಯಗಳಲ್ಲಿ ಇರುವಂತೆ ಇಲ್ಲಿಯೂ ಮತಾಂಧತೆಯ ಕುರುಹು ಇದ್ದೇ ಇದೆ. ಕಾಶಿ ವಿಶ್ವನಾಥ ದೇವಾಲಯದ ಗರ್ಭಗೃಹದ ಹೊರಕೋಣೆಯ ದ್ವಾರವನ್ನು ಹೈದರ್ ಇಸ್ಲಾಮಿಕ್ ಶೈಲಿಗೆ ಬದಲಾಯಿಸಿದ್ದಾನೆ.


ವ್ಯವಸ್ಥಿತವಾದ ಅಡುಗೆ ಒಲೆಗಳು, ಸ್ನಾನಗೃಹ, ನೀರಿನ ತೊಟ್ಟಿಗಳು, ನೀರು ಪೂರೈಕೆ ವ್ಯವಸ್ಥೆಗಳು, ನೀರಿನ ಸಂಪು, ಮುಚ್ಚಿಗೆಯಿರುವ ಬಾವಿ ಎಲ್ಲವೂ ಇದರೊಳಗಿವೆ. ಅರಮನೆಯ ನಿವೇಶನ ಎತ್ತರವಾದ ಮಜಲುಗಳುಳ್ಳ ಅಲಂಕೃತ ಅಧಿಷ್ಠಾನವನ್ನು ಹೊಂದಿದೆ. ಒಂದಕ್ಕೊಂದು ಸಂಪರ್ಕವಿರುವ ಹಲವಾರು ಕೋಣೆಗಳುಳ್ಳ ಸ್ಥಂಭಗಳ ಜಗತಿಯುಳ್ಳ ಒಳಾಂಗಣ ಇತ್ತೀಚಿನ ಸರ್ವೇಕ್ಷಣೆಯಲ್ಲಿ ಬೆಳಕಿಗೆ ಬಂತು. ಮೂಮ್ಭಾಗದಲ್ಲಿ ಸ್ಥಂಭಗಳುಳ್ಳ ಜಗತಿ, ನೈಮಿತ್ತಿಕ ಪೂಜಾ ಕೋಣೆ, ಅಡುಗೆ ಮನೆ, ತನ್ನದೇ ನೀರು ಸರಬರಾಜು ಉಳ್ಳ ಸ್ನಾನಗೃಹ, ಆವರಣವಿರುವ ಹಿತ್ತಲ ಕೋಣೆ, ಪಾವಟಿಕೆಗಳುಳ್ಳ ನೀರಿನ ಕೊಳ ಅಂದಿನ ವಾಸ್ತುಶಿಲ್ಪದ ಕಡೆಗೆ ಬೆಳಕು ಚೆಲ್ಲುತ್ತವೆ. ಐದು ಕಡೆ ಜ್ವಾಲೆಗಳನ್ನು ಹೊರಸೂಸುವ ಕಲ್ಲಿನ ಒಲೆ ಪಾಕಶಾಲೆಯಲ್ಲಿ ಕಂಡುಬಂದಿರುವುದು ಅಂದಿನ ತಂತ್ರಜ್ಞಾನದ ಮಟ್ಟವನ್ನು ಬಿಂಬಿಸುತ್ತದೆ.

ಒಂದು ಗುಹೆಯಂತಹಾ ರಚನೆ, ಅಲ್ಲಿಂದ ಹೊರಹೊಮ್ಮುತ್ತಿತ್ತು ಪುಷ್ಕಳವಾದ ಜಲ. ಗದಾ ತೀರ್ಥವದು. ಭೀಮನ ಗದೆಯಿಂದ ಸೃಷ್ಟಿಯಾದುದೆಂಬ ಪ್ರತೀತಿ. ಕಲ್ಲಿನಿಂದ ನಿರ್ಮಿಸಲ್ಪಟ್ಟ ಎರಡು ಪುಟ್ಟ ಕೊಳಗಳು ಒಳ ಸುತ್ತಿನ ಕೋಟೆಯಲ್ಲಿವೆ. ಒಟ್ಟು ಏಳು ಕೊಳಗಳು ಕೋಟೆಯೊಳಗಿವೆ. ಬಿರು ಬೇಸಗೆಯಲ್ಲೂ ಅವು ತುಂಬಿಕೊಂಡಿರುತ್ತವೆ. ನಾವು ಇಂದಿಗೂ ಅಳವಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿರುವ ಮಳೆಕೊಯ್ಲನ್ನು ಆ ಕಾಲದಲ್ಲೇ ಈ ಕೋಟೆಯಲ್ಲಿ ಅಳವಡಿಸಲಾಗಿದೆ. ಹೀಗೆ ಸಂಗ್ರಹಿಸಲ್ಪಟ್ಟ ಮಳೆ ನೀರು ಕೋಟೆಯ ತುದಿಯಿಂದ ತಳದವರೆಗೆ ವಿಶೇಷವಾಗಿ ನಿರ್ಮಿಸಿದ ನೀರಿನ ಕಾಲುವೆಗಳಲ್ಲಿ ಹರಿಯುತ್ತದೆ. ದಟ್ಟವಾಡ ಕಾಡಿನಿಂದ ಬೆಟ್ಟದ ಮೂಲಕ ಹರಿದು ಬರುವ ನೀರನ್ನೂ ಕಾಲುವೆಗಳ ಮೂಲಕ ಕೊಳಗಳನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ನೀರು ಸಾಗುವಂತೆ ನೆಲದಡಿಯಲ್ಲಿ ಕಾಲುವೆಗಳನ್ನು ರೂಪಿಸಲಾಗಿದೆ. ಅವು ಇಂದಿಗೂ ಸುಸ್ಥಿತಿಯಲ್ಲಿವೆ. ಹೀಗೆ ಹರಿದ ನೀರು ಕೆಳಗಿರುವ ದೊಡ್ಡ ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದುವರಿದು ಹಳ್ಳಿಯ ಹಳ್ಳದಲ್ಲಿ ಹರಿದು ದೊಡ್ಡದಾದ "ತಿಮ್ಮರಸ ನಾಯಕನ ಕೆರೆ"ಗೆ ಸಾಗುತ್ತದೆ. ಇದೊಂದು ಯೋಜನಾಬದ್ಧವಾಗಿ ರೂಪಿಸಿರುವ ವ್ಯವಸ್ಥಿತ ಕೋಟೆಯೇ ಸರಿ. ಒಳಸುತ್ತಿನ ಕೋಟೆಯಲ್ಲಿ ಆದಿಶೇಷನ ಸುಂದರ ವಿಗ್ರಹವೊಂದು ಕಾಣಸಿಗುತ್ತದೆ. ನಾಗದೇವರುಗಳು ಕೋಟೆಯನ್ನು ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿದ್ದರೆಂಬ ಪ್ರತೀತಿ. ತುಪಾಕಿ ಬುರುಜು ಎಂದು ಕರೆಯಲ್ಪಡುತ್ತಿದ್ದ ಶಸ್ತ್ರಾಗಾರವೂ ಅಲ್ಲೇ ಇದೆ.




ಕವಳೆದುರ್ಗ ನಿಜವಾಗಿಯೂ ಭುವನಗಿರಿಯೇ ಸರಿ. ಅದನ್ನು ಹತ್ತಿ ನಿಂತಾಗ ಸುತ್ತ ಕಾಣುವ ನೋಟ ಬಲು ರಮ್ಯವಾದದ್ದು. ಪಶ್ಚಿಮಕ್ಕೆ ವಾರಾಹಿ ಹಾಗೂ ಚಕ್ರಾ ನದಿಗಳ ಜಲಧಾರೆಯೂ, ವಾರಾಹಿ ಅಣೆಕಟ್ಟು ದೂರದಲ್ಲಿ ಗೋಚರಿಸುತ್ತದೆ. ವಾರಾಹಿ ಅಣೆಕಟ್ಟಿನಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ದಟ್ಟವಾದ ಪುಟ್ಟ ಪುಟ್ಟ ಅರಣ್ಯಗಳು ಮಿಂದೆದ್ದಂತೆ ಗೋಚರಿಸಿದರೆ ದಕ್ಷಿಣಕ್ಕೆ ಕುಂದಾದ್ರಿ ಧಿಗ್ಗನೆದ್ದು ನಿಂತಿದೆ. ಉತ್ತರದಲ್ಲಿ ಮನೋಹರ ಸುಂದರಿ ಕೊಡಚಾದ್ರಿ ಏನನ್ನೋ ಉಸುರುತ್ತಿದೆ.

ಕೆಳದಿಯ ನಾಯಕರು ನಿರ್ಮಿಸಿದ ಈ ಅತ್ಯದ್ಭುತ ಕೋಟೆಯು ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲನ ಗರ್ಭದೊಳಗೆ ಮೆಲ್ಲನೆ ನುಸುಳಿ ಮರೆಯಾಗುತ್ತಿದೆ. ಇಂದಿನ ಜನಾಂಗಕ್ಕೆ ಇತಿಹಾಸದ ಸತ್ಯ - ತಥ್ಯ ದರ್ಶನವನ್ನೂ, ತಂತ್ರಜ್ಞಾನದ ಮಾರ್ಗದರ್ಶನವನ್ನೂ ಮಾಡಬಹುದಾಗಿದ್ದ ಅಮೂಲ್ಯ ನಿಧಿಯನ್ನು ನಾವು ಬಳಸಿಕೊಳ್ಳುತ್ತಿರುವ/ಉಳಿಸಿಕೊಂಡಿರುವ ಸ್ಥಿತಿ ಶೋಚನೀಯ. ಕೋಟೆಯ ಸಮಗ್ರ ನಿರ್ವಹಣೆ ಹಾಗು ಸಮರ್ಪಕ ಉತ್ಖನನದಿಂದ ಅರಣ್ಯ ಗರ್ಭದೊಳಗೆ ಹುದುಗಿರುವ ಸತ್ಯಗಳು ಹಾಗು ಕೆಳದಿಯ ನಾಯಕರ ಬಗೆಗಿನ ವಿವರಗಳು ಇನ್ನಷ್ಟು ಹೊರಬರಬಹುದು. ಹೊರ ಖಂಡಗಳಿಗೆ ಕಾಳು ಮೆಣಸನ್ನು ಮಾರಾಟ ಮಾಡುತ್ತಾ ಅಗಾಧ ಶ್ರೀಮಂತಿಕೆಯನ್ನು ಹೊಂದಿದ್ದ ಸಂಸ್ಥಾನ ಕೆಳದಿ. ಅಲ್ಲಿ ಕಾಶಿ ವಿಶ್ವನಾಥನ ದೇಗುಲದ ಗೋಡೆಯಲ್ಲಿ ನಿಧಿಯನ್ನು ಸೂಚಿಸುವ ನಾಗನ ಚಿತ್ರವನ್ನು ಕೆತ್ತಲಾಗಿದೆ. ಅದು ನನಗೆ ಬಳ್ಳಿ ಕಾಳ ಬೆಳ್ಳಿಯು ಬಳುಕಿದಂತೆ ಅನಿಸುತ್ತಿದೆ.