ಪುಟಗಳು

ಶುಕ್ರವಾರ, ಡಿಸೆಂಬರ್ 20, 2013

ಯಥಾ ಬ್ರಹ್ಮಾಂಡೇ ತಥಾ ಪಿಂಡಾಂಡೇ

"ಯಥಾ ಬ್ರಹ್ಮಾಂಡೇ ತಥಾ ಪಿಂಡಾಂಡೇ"
ಹತ್ತು ಮಿಲಿಯನ್ ಪ್ರಕಾಶವರ್ಷ ದೂರದಿಂದ ವೀಕ್ಷಿಸಲು ಸಾಧ್ಯವಾದರೆ ನಮಗೆ ಬ್ರಹ್ಮಾಂಡದ ಸ್ವರೂಪವು ಯಾವ ವಿನ್ಯಾಸದಲ್ಲಿ ಕಾಣುತ್ತದೋ ಅದನ್ನೇ ಹೋಲುವ ದೃಶ್ಯವು ಆ ಬ್ರಹ್ಮಾಂಡದ ಒಂದು ಅಣುವಿನ ಆಂತರಿಕ ಭಾಗವನ್ನು 10 ಪಿಕೋ ಮೀಟರುಗಳಷ್ಟು ಸಮೀಪದಿಂದ ನೋಡಿದಾಗಲೂ ಕಾಣುತ್ತದೆ. ಬ್ರಹ್ಮಾಂಡದ ಅಣು-ರೇಣು-ತೃಣ-ಕಾಷ್ಟಗಳಿಗೂ ಇದು ಅನ್ವಯಿಸುತ್ತದೆ.

ಮಂಗಳವಾರ, ಡಿಸೆಂಬರ್ 17, 2013

ಚಾಯ್ ವಾಲಾ

ಮೊನ್ನೆಯಷ್ಟೇ ನಾವು ಚಾಯ್ ವಾಲಾನಿಂದ ಮಲ್ಲೇಶ್ವರಂ ಆಟದ ಮೈದಾನದಲ್ಲಿ "ನಮೋ ಭಾರತ್" ಉದ್ಘಾಟನೆ ಮಾಡಿದಾಗ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬೆರಗಾಗಿದ್ದೆ. ಈಗಷ್ಟೇ ವಿಶೇಷ ಘಟನೆ ನಡೆಯಿತು. ಪ್ರತಿದಿನ ನಾವು ಚಹಾ ಕುಡಿಯಲು ಹೋಗುತ್ತಿದ್ದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ಚಾಯ್ ವಾಲಾ ಯಾರಿಗೋ "ನರೇಂದ್ರ ಮೋದಿ ಒಳ್ಳೆಯ ಜನ. ಅವರೇ ಈ ಸಲ ಪ್ರಧಾನಿಯಾಗಬೇಕ್ರಿ" ಎಂದು ತನ್ನ ತೆಲುಗು ಮಿಶ್ರಿತ ಕನ್ನಡದಲ್ಲಿ ಅಂದಾಗ " ನರೇಂದ್ರ ಮೋದಿ" ಎನ್ನುವ ಪದ ಕೇಳುತ್ತಿದ್ದಂತೆ ನನ್ನ ಕಿವಿಗಳೆರಡು ನೆಟ್ಟಗಾದವು. ಅವನಲ್ಲಿ ಮಾತಿಗೆ ತೊಡಗುತ್ತಿದ್ದಂತೆ ಆತ ಬೆಲೆಯೇರಿಕೆ, ಎಷ್ಟೇ ಕಷ್ಟ ಪಟ್ಟರೂ ಹೆಚ್ಚಾಗದ ಸಂಪಾದನೆ, ಉದ್ಯೋಗದ ಬದಲಾವಣೆ ಇವೆಲ್ಲವನ್ನೂ ಗುಜರಾತಿನ ಜನರೊಡನೆ ಸಮೀಕರಿಸಿಕೊಂಡು ಹೇಳಿದಾಗ ನನಗೆ ಆಶ್ಚರ್ಯ...!

ಹೌದು... ಮಾಧ್ಯಮಗಳು ನರೇಂದ್ರ ಮೋದಿಯವರ ಬಗ್ಗೆ ತಿಳಿಸದಿದ್ದರೇನು, ಕಾಂಗಿಗಳು, ಪಾಪಿ ಆಪ್ ಗಳು, ಕಮ್ಮಿನಿಷ್ಟರು, ಬುದ್ದಿ(ಹೀನ) ಜೀವಿಗಳು ಅಪಪ್ರಚಾರ ಮಾಡಿದರೇನು ನರೇಂದ್ರ ಮೋದಿ ಜನಸಾಮಾನ್ಯನ ಹೃದಯದಲ್ಲಿದ್ಡಾರೆ. ಅಂತಹ ಅಭಿಮಾನವನ್ನು ಮತವಾಗಿ ಪರಿವರ್ತಿಸಿ ನಮೋರನ್ನು ಪ್ರಧಾನಿ ಮಾಡುವ ಮೂಲಕ ಈ ದೇಶದ ತಮವನ್ನು ದೂರೀಕರಿಸುವ ಜವಾಬ್ದಾರಿ ಈ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರ ಮೇಲಿದೆ

ನಮೋ ನಮೋ ನಮೋ

ಇತಿಹಾಸ ಮರುಕಳಿಸುತ್ತಿದೆ

1947 ಹಾಗೂ 2014 ರ ಕ್ಯಾಲೆಂಡರ್ ಎರಡರ ಮಧ್ಯೆ ಸಾಮ್ಯತೆ ಇದೆ. ಭಾರತದ ರಾಜಕೀಯದಲ್ಲೂ ಅದೇ ರೀತಿ. ಅಂದು ಗಾಂಧಿಯ ಹಟ, ನೆಹರೂ ಸ್ವಾರ್ಥಕ್ಕೆ ದೇಶ ಬಲಿಯಾಗಿ ನೆಹರೂ ಪ್ರಧಾನಿಯಾಗಿ ಈ ದೇಶ ಸತ್ವ,ಸ್ವಾಭಿಮಾನ ಶೂನ್ಯವಾಯಿತು. ಸಮರ್ಥ ಸರದಾರನಿಗೆ ಪ್ರಧಾನಿ ಪಟ್ಟ ಸಿಗಲಿಲ್ಲ. ಕಾಲಚಕ್ರ ಉರುಳಿದಂತೆ ಮತ್ತದೇ ಪರಿಸ್ಥಿತಿ ಬಂದೊದಗಿದೆ. ಇತಿಹಾಸ ಮರುಕಳಿಸಿದೆ ನಿಜ. ಆದರೆ ಇತಿಹಾಸದಂದ ಪಾಠ ಕಲಿಯಬೇಕು. ಅಂದರೆ ಅಂದು ಮಾಡಿದ ತಪ್ಪನ್ನು ಮತ್ತೆ ಭಾರತೀಯರು ಪುನರಾವರ್ತಿಸಬಾರದು. ಗಾಂಧಿ, ನೆಹರೂಗಳ ಜಾಗದಲ್ಲಿ ಇಂದು ಅದೆಷ್ಟೋ ಮಂದಿ ಇದ್ಡಾರೆ. ಆದರೆ ಸರದಾರರ ಜಾಗದಲ್ಲಿರುವ ಸಮರ್ಥ ಒಬ್ಬನೇ. ಅದು ನರೇಂದ್ರ ಮೋದಿ...ಅಂದು ಮಾಡಿದ ತಪ್ಪಿಗೆ ಪ್ರಾಯಶಿತ್ತ ಮಾಡಿಕೊಳ್ಳುವ ಸಮಯ ಬಂದಿದೆ. ನಮೋ ನಮೋ ಎನ್ನುತ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಬೆಳಕಾಗೋಣ. ಹಾಗೆ ಮಾಡಬೇಕೆಂದರೆ ಭಾಜಪಾಕ್ಕೆ ಮತ ನೀಡಬೇಕು.

ಕಮಲಕ್ಕೆ ನಿಮ್ಮ ಮತ|
ಅದರಿಂದ ದೇಶಕ್ಕೆ ಹಿತ||
ಮಾಡೋಣ ಮೋದಿಯ ಪ್ರಧಾನಿ|
ಆಗದಿರು ಈ ಕೆಲಸದಿ ನೀ ನಿಧಾನಿ||

ಶುಕ್ರವಾರ, ಡಿಸೆಂಬರ್ 13, 2013

ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳೋಣ...

                              ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳೋಣ...

               ಮೊನ್ನೆ ಪಾಟ್ನಾ ಸ್ಫೋಟಕ್ಕೆ ಹಣ ಪೂರೈಸಿದ ಆಯೇಷಾ ಲವ್ ಜಿಹಾದಿಗೆ ಬಲಿಯಾಗಿದ್ದ ಆಶಾ ಎಂಬ ಸತ್ಯ ಹೊರಬೀಳುತ್ತಲೇ "ಲವ್ ಜಿಹಾದ್" ಎಂಬ ವಿಷಯ ಮಾಧ್ಯಮ ವಲಯದಲ್ಲಿ ಮತ್ತೊಮ್ಮೆ ಚರ್ಚೆಯಾಯಿತು. ಆದರೆ ಲವ್ ಜಿಹಾದ್ ಭಾರತಕ್ಕೆ ಹೊಸತೇನಲ್ಲ. ಇದು ಈಗ ಪ್ರತಿನಿತ್ಯದ ಸುದ್ದಿ. ಆದರೆ ತಮ್ಮನ್ನು ತಾವು ಮಾರಿಕೊಂಡ ಮಾಧ್ಯಮಗಳು ಈ ಪ್ರಕರಣಗಳನ್ನು ವರದಿ ಮಾಡದೇ ಇರುವುದರಿಂದ ಜನರಿಗೆ ಲವ್ ಜಿಹಾದ್ ಬಗ್ಗೆ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಏನಿದು ಲವ್ ಜಿಹಾದ್ ಎಂದು ಇನ್ನೂ ಯೋಚಿಸುವ ಅಥವಾ ಲವ್ ಜಿಹಾದ್ ಎಂಬ ಹೆಸರೇ ಕೇಳದವರೂ ಇರಬಹುದು! ಅಂದರೆ ನಮ್ಮ ಹಿಂದೂ ಸಮಾಜ ಇನ್ನೂ ನಿದ್ದೆಯ ಅಮಲಲ್ಲೇ ಇದೆ! ಹಿಂದೂ ಹುಡುಗಿಯರು ಲವ್ ಜಿಹಾದಿಗೆ ಬಲಿಯಾದ, ಹಾಗೂ ಅದರಿಂದ ತನ್ನ ಸರ್ವಸ್ವವನ್ನೇ ಕಳೆದುಕೊಂಡ, ಅಲ್ಲದೇ ತನ್ನವರಿಗೇ ಕಂಟಕಪ್ರಾಯರಾದ ಕೆಲವು ಘಟನೆಗಳನ್ನು ನೋಡೋಣ.
1. ಕಳೆದ ವರ್ಷ ನಾಸಿಕ್ ನಲ್ಲಿ ತರುಣಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನೇ ಕೊಲೆಗೈದು ಕಸರಾ ಘಾಟಿಯಲ್ಲಿ ಎಸೆದು ಬಿಟ್ಟಿದ್ದಳು. ಆ ಹುಡುಗಿ ಸಿಖ್ ಆಗಿದ್ದು ಲವ್ ಜಿಹಾದಿಗೆ ಬಲಿಯಾಗಿದ್ದಳು.
2. 2011ರ ಮಾರ್ಚಿನಲ್ಲಿ ಮಧ್ಯಪ್ರದೇಶದ ಕಿರಣ್ ರಾವತ್ ಎನ್ನುವ ತರುಣಿ ತನ್ನ ಮುಸ್ಲಿಮ್ ಪ್ರಿಯಕರನಿಗೋಸ್ಕರ ತನ್ನ ಕೈ ಹಿಡಿದ ಪತಿಯನ್ನೇ ಕೊಲೆಗೈದು ಕೊನೆಗೆ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದು ಈಗ ಇತಿಹಾಸ! ತನ್ನ ಗಂಡನ ರುಂಡ ಮುಂಡ ಬೇರ್ಪಡಿಸಿ ಬೇರೆ ಬೇರೆ ಕಡೆ ಅಡಗಿಸಿಟ್ಟ ಆ ಪೈಶಾಚಿಕತೆ ಲವ್ ಜಿಹಾದಿನ ಪ್ರಸಾದ!
3. ಪಾಕಿಸ್ತಾನಿ ಚಿತ್ರನಟಿಗೋಸ್ಕರ ಇಮ್ತಿಯಾಜ್ ಎನ್ನುವ ಬಾಲಿವುಡ್ ಚಿತ್ರನಟ 11ವರ್ಷದ ಮಗಳಿದ್ದುಕೊಂಡು ತನ್ನ ಹಿಂದೂ ಹೆಂಡತಿಗೆ ಡೈವೋರ್ಸ್ ಕೊಟ್ಟುಬಿಟ್ಟ. ಇದೂ ಲವ್ ಜಿಹಾದೇ! ಆದರೆ ನಾವು ಸಿನಿಮಾದವರೇ ಹೀಗೆ ಎಂದು ನಿರ್ಲಕ್ಷಿಸಿಬಿಡುತ್ತೇವೆ!
4. 2011ರಲ್ಲಿ ಜೈಪುರದಲ್ಲಿ ಮುಸ್ಲಿಂ ಬಾಸ್ ಒಬ್ಬ ತನ್ನ ಕೆಳಗಿನ ಸಹದ್ಯೋಗಿ ದೆಹಲಿ ಮೂಲದ ಹಿಂದೂ ಹುಡುಗಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ತಿಂಗಳುಗಟ್ಟಲೆ ಅತ್ಯಾಚಾರ ಮಾಡಿದ. ಆಮೇಲೆ ಗರ್ಭಿಣಿ ಎಂದು ಗೊತ್ತಾದ ಕೂಡಲೇ ಗರ್ಭಪಾತ ಮಾಡಿಸಿದ. ಆರು ತಿಂಗಳುಗಳ ಕಾಲ ಸುಮ್ಮನಿದ್ದ ಹುಡುಗಿ ಅವನು ಮದುವೆಯಾಗದೇ ಇದ್ದಾಗ ಕೊನೆಗೆ ಬೇರೆ ದಾರಿ ಕಾಣದೆ ಹೆತ್ತವರ ಸಹಾಯದಿಂದ ಪ್ರಕರಣ ದಾಖಲಿಸಿದಳು.
5. ಡಿಸೆಂಬರ್ 2011ರಲ್ಲಿ ಪೃಥ್ವಿ ಎನ್ನುವ ಹುಡುಗಿ ಲವ್ ಜಿಹಾದಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಳು. ಅತ್ಯುತ್ತಮ ಕ್ರೀಡಾಪಟುವಾಗಿದ್ದ ಅವಳ ಭವಿಷ್ಯ ಲವ್ ಜಿಹಾದಿನಿಂದಾಗಿ ಅಂತ್ಯವಾಯಿತು.
6. ಮೊನ್ನೆ ಮೊನ್ನೆ ಡಿಸೆಂಬರ್ 5ರಂದು ಬಂಧಿತನಾದ ಕೋಣಾಜೆ ಪಾವೂರಿನ ಇಲಿಯಾಝ್ ಎಂಬುವವ ತನ್ನ ಹೆಸರನ್ನು ರಾಹುಲ್ ಶೆಟ್ಟಿ ಎಂದಿರಿಸಿಕೊಂಡು ಹತ್ತಾರು ಹುಡುಗಿಯರ ಶೀಲ ಹರಣ ಮಾಡಿ ಅದರ ವಿಡೀಯೋ ಚಿತ್ರೀಕರಣ ಮಾಡಿದ್ದಲ್ಲದೆ ಅದನ್ನುಪಯೋಗಿಸಿ ಚಿನ್ನ ಹಾಗೂ ಹಣ ದೋಚಿದ್ದ.
7. 2012ರಲ್ಲಿ ಜಾರ್ಖಂಡಿನ ಪಲಾಮೂ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂರು ಲವ್ ಜಿಹಾದ್ ಪ್ರಕರಣ ನಡೆದು ಹಿಂದೂಗಳು ತತ್ತರಿಸಿದ್ದರು. ಹಿಂದೂಗಳ ಉದಾರತೆಯನ್ನು ತಮ್ಮ ದುರುಳ ಉದ್ದೇಶಗಳಿಗೆ ಬಳಸಿಕೊಂಡ ಜಿಹಾದಿಗಳು ಟ್ಯೂಷನ್ನಿಗೆ ಬಂದ ಇಬ್ಬರು ಹುಡುಗಿಯರನ್ನು ಮತಾಂತರಿಸಿದರು, ಅಂಗಡಿಯ ಮಾಲೀಕನ ಮಗಳನ್ನು ಲವ್ ಜಿಹಾದಿಗೆ ಬಲಿಯಾಗಿರಿಸಿದರು.
ಈ ಮೇಲಿನ ಎಲ್ಲಾ ಘಟನೆಗಳು ಸಾಮಾನ್ಯ ಅನ್ನಿಸಬಹುದು. ಆದರೆ ಇಲ್ಲೊಂದು ವ್ಯವಸ್ಥಿತವಾದ ಪಿತೂರಿಯಿದೆ. ಅಲ್ಲದೆ ಇನ್ನೊಂದು ಅಂಶವೇನೆಂದರೆ ಈ ಮೇಲಿನ ಎಲ್ಲಾ ಘಟನೆಗಳಲ್ಲಿ ಹಿಂದೂಗಳು ತಮ್ಮ ಧರ್ಮದ ಮೇಲೆ ಪ್ರಹಾರ ನಡೆದಿದ್ದರೂ ಪ್ರತೀಕಾರವೆಸಗಲಿಲ್ಲ. ಜಾಸ್ತಿಯೆಂದರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಅಷ್ಟೆ! ಆ ಕೇಸಂತೂ ಬಿದ್ದು ಹೋದುದು ಸ್ಪಷ್ಟ! ಅದೇ ಇನ್ನೊಂದು ಘಟನೆ ನೋಡಿ. 2012ರ ಅಕ್ಟೋಬರ್ ತಿಂಗಳಲ್ಲಿ ಮುಸ್ಲಿಮ್ ಹುಡುಗಿಯನ್ನು ಪ್ರೀತಿಸಿದ ಕೇರಳದ ಜೂನಿಯರ್ ಫುಟ್ಬಾಲ್ ತಂಡದ ಆಟಗಾರ ಜಿತುವನ್ನು ಮಾಪಿಳ್ಳೆಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದರು!
                            2009ರಲ್ಲಿ ಲವ್ ಜಿಹಾದ್ ಪ್ರಕರಣಗಳೆರಡು ಕೋರ್ಟ್ ಮೆಟ್ಟಿಲೇರಿದಾಗ "ವಿದ್ಯಾಲಯಗಳ ಆವರಣದಲ್ಲಿ ಬಲವಂತ ಮತಾಂತರ ಅಪರಾಧ ಎನ್ನುವ ತೀರ್ಪು ನೀಡಿತು!" ಅಂದರೆ ಉಳಿದ ಕಡೆ ಬಲವಂತದ ಮತಾಂತರ ಮಾಡಬಹುದೆಂದು ಇದರ ಅರ್ಥವೇ? ಇದಕ್ಕೆ ನಿಯಂತ್ರಣವಿದೆಯೋ ಇಲ್ಲವೋ. ಆದರೆ ಅಂತಹ ಕಾನೂನಿಗೆ ಅವರು ಒಳಪಡುವುದೇ ಇಲ್ಲ ಎಂಬುದಕ್ಕೆ ಬಹಿರಂಗವಾಗಿ ಮತಾಂತರ ಕಾರ್ಯ ನಡೆಸುತ್ತಿರುವ ಕೇರಳದ ಪೊನ್ನಣಿಯೇ ಸಾಕ್ಷಿ! ಕೇರಳ ಕ್ಯಾಥೊಲಿಕ್ ಬಿಶಪ್ಸ್ ಕೌನ್ಸಿಲ್ ಕ್ರಿಶ್ಚಿಯನ್ ಪೋಷಕರಿಗೆ ಲವ್ ಜಿಹಾದ್ ಬಗ್ಗೆ ಎಚ್ಚರಿರಬೇಕೆಂದು ಮಾರ್ಗದರ್ಶಿ ಸೂತ್ರವೊಂದನ್ನು ನೀಡಿದೆ. ಪ್ರೀತಿಯ ನಾಟಕವಾಡಿ ಹಿಂದೂ ಹುಡುಗಿಯರನ್ನು ತಮ್ಮ ಬಲೆಗೆ ಕೆಡಹಿದ ಮೇಲೆ ಈ ಹುಡುಗಿಯರೊಂದಿಗೆ ಅವರೇನೂ ಸಂಸಾರ ಹೂಡುವುದಿಲ್ಲ. ಬದಲಿಗೆ ಬೇಕಾದಷ್ಟು ಸಮಯ ಅವರನ್ನು ತಮ್ಮ ಇಚ್ಚಾನುಸಾರ ಬಳಸಿಕೊಂಡು ತದ ನಂತರ ವೇಶ್ಯವಾಟಿಕೆಗೆ ಅರಬ್ ರಾಷ್ಟ್ರಗಳಿಗೆ ಮಾರಿಬಿಡುತ್ತಾರೆ. ಸ್ವಲ್ಪ ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಬಲಯುತವಾದವರನ್ನು ಭಯೋತ್ಪಾದನಾ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ.
ಇಂದು ನಿನ್ನೆಯದಲ್ಲ ಈ ಲವ್ ಜಿಹಾದ್!                
                     ಯಾವಾಗ ಮುಸ್ಲಿಮರು ಈ ದೇಶದ ಮೇಲೆ ದಾಳಿ ಮಾಡಿದರೋ ಅಂದೇ ಲವ್ ಜಿಹಾದ್ ಕೂಡಾ ಭಾರತವನ್ನು ಪ್ರವೇಶಿಸಿತು. ಮೊಘಲ್ ಅರಸರಿಗಂತೂ ಹಿಂದೂ ರಾಜಕುಮಾರಿಯರೇ ರಾಣಿಯರಾಗಬೇಕಿತ್ತು. ಅವರ ಜನಾನಾದಲ್ಲಂತೂ ಹಿಂಡು ಹಿಂಡು ಹಿಂದೂ ಹೆಣ್ಣು ಮಕ್ಕಳು. ಒಂದು ವೇಳೆ ದಾಳಿಕೋರ ಮೊಘಲ್ ಅರಸರು ಹಿಂದೂ ಹೆಣ್ಣುಮಕ್ಕಳನ್ನು ಹೊತ್ತೊಯ್ಯದೇ ಇದ್ದರೆ, ಲವ್ ಜಿಹಾದ್ ನಡೆಸದೇ ಇದ್ದರೆ, ಹಿಂದೂ ಹುಡುಗಿಯರ ಸೆರಗಿಗೆ ಕೈ ಹಾಕದೇ ಇದ್ದರೆ ಸತೀ ಪದ್ದತಿ ಆರಂಭವಾಗುತ್ತಿತ್ತೇ? ಬಾಬರನಿಂದ ಹಿಡಿದು ಔರಂಗಜೇಬನವರೆಗಿನ ಪ್ರತಿಯೊಬ್ಬ ಮೊಘಲ್ ರಾಜ ನಡೆಸಿದ್ದು ಅತ್ಯಾಚಾರವೇ! ಅದೂ ಹೆಣ್ಣು, ಹೊನ್ನು, ಮಣ್ಣು... ಎಲ್ಲದರ ಮೇಲೂ! ಅಕ್ಬರನೂ ಇದಕ್ಕೆ ಹೊರತಾಗಿಲ್ಲ. ಔರಂಗಜೇಬನಂತೂ ಸುಂದರ ರಾಜಕುಮಾರರನ್ನೂ ಬಿಟ್ಟಿರಲಿಲ್ಲ. ಅವರ ಬೀಜ ಒಡೆಸಿ ತನ್ನ ತೀಟೆಗೆ ಬಳಸಿಕೊಳ್ಳುತ್ತಿದ್ದನೆಂದರೆ ಯಾರಿಗಾದರೂ ಆ ಪೈಶಾಚಿಕತೆ ಅರ್ಥವಾದೀತು. ಆದರೆ ಕಮ್ಮಿನಿಷ್ಟ ಇತಿಹಾಸಕಾರರು ಇವುಗಳನ್ನೆಲ್ಲಾ ದಾಖಲಿಸದೇ ಮೊಘಲರನ್ನು ಇಂದ್ರ-ಚಂದ್ರರೆಂದು ಹೊಗಳಿ ನಮ್ಮ ಇತಿಹಾಸವನ್ನು ಪಾವನಗೊಳಿಸಿದರು! ಇದರಿಂದಾಗಿ ನಮ್ಮ ಮಕ್ಕಳು ಇಂದಿಗೂ ಅಕ್ಬರ್ ದಿ ಗ್ರೇಟ್ ಎನ್ನುತ್ತಾ ಕಲಿಯುತ್ತಿರುವುದು ಈ ದೇಶದ ಅತೀ ದೊಡ್ಡ ದುರಂತ. ಕಲಿತವರಾದರೂ ನೈಜ ಇತಿಹಾಸವನ್ನು ತಿಳಿದುಕೊಂಡಿದ್ದಾರಾ? ಅದೂ ಇಲ್ಲ! ಇತಿಹಾಸ ಮರೆತ ದೇಶಕ್ಕೆ ಉಳಿಗಾಲವಿಲ್ಲ!
              ಮೊದಮೊದಲು ಹುಡುಗಿಯರನ್ನು ಮರುಳುಗೊಳಿಸುವ ಕಲೆಯುಳ್ಳವರು ಹಾಗೂ ಹಣ,ಬಾಹುಬಲ,ಕುಟಿಲೋಪಾಯವುಳ್ಳವರಿಗಷ್ಟೇ ಸೀಮಿತವಾಗಿದ್ದ ಈ ಪೀಡೆ ಇಂದು ವಿಶ್ವವ್ಯಾಪಿಯಾಗಲು ಕಾರಣವೇನಿರಬಹುದು ಎಂಬ ಯೋಚನೆ ನಿಮಗಾಗಬಹುದು?  ದಾವೂದ್ ಇಬ್ರಾಹಿಮ್ ಭೂಗತ ಲೋಕದ ಅನಭಿಶಿಕ್ತ ದೊರೆಯಾದ ಬಳಿಕ ಬಾಲಿವುಡ್ದನ್ನೇ ಆಳುತ್ತಿರುವುದು ನಿಮಗೆ ತಿಳಿದಿರಬಹುದು. ಈ ಲವ್ ಜಿಹಾದಿಗೆ ಒಂದು ವ್ಯವಸ್ಥಿತ ರೂಪ ಕೊಟ್ಟವನೂ ಅವನೇ! ಪ್ರತಿಯೊಬ್ಬ ಹಿಂದೂ ಹುಡುಗಿಯ ಗರ್ಭದಲ್ಲಿ ಮುಸ್ಲಿಂ ಪಿಂಡವೊಂದನ್ನು ಬೆಳೆಸುವುದನ್ನೇ ಉದ್ದೇಶವಿರಿಸಿಕೊಂಡು ಮಾಡಿರುವ ವ್ಯವಸ್ಥಿತ ಪಿತೂರಿಯಿದು. ಅದೀಗ ಬಾಲಿವುಡ್ಡಿಂದ ಹಿಡಿದು ಸಿನಿಮಾವನ್ನೇ ನೋಡದ ವರ್ಗದವರೆಗೂ ವ್ಯಾಪಿಸಿದೆ. ಈಗ ಬಾಲಿವುಡ್ಡನ್ನು ಆಳುತ್ತಿರುವ ಖಾನ್ ಗಳು ಮಾಡುವುದು ಲವ್ ಜಿಹಾದನ್ನೇ! ಹಿಂದೂ ಚಿತ್ರ ನಟಿಯರನ್ನು ಮದುವೆಯಾಗಿ ಕೆಲವು ಮಕ್ಕಳಾದ ನಂತರ ವಿಚ್ಚೇದನ ನೀಡಿ ಮತ್ತೊಬ್ಬ ಹಿಂದೂ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಇವರುಗಳು ದಾವೂದ್ ಇಬ್ರಾಹಿಂನ ಛೇಲಾಗಳು. ಅವರಲ್ಲಿ ಕೆಲವರಂತೂ ಅಜನ್ಮ ಬ್ರಹ್ಮಾಚಾರಿಗಳು(?)! ನೀವು ಈ ಚಿತ್ರರಂಗದವರೇ ಹೀಗೆ ಎಂದು ಅಸಡ್ಡೆ ಮಾಡಬಹುದು. ಆದರೆ ಇದು ಸತ್ಯ ಹಾಗೂ ಆಗುವ ಹಾನಿ ಮಾತ್ರ ಹಿಂದೂ ಧರ್ಮಕ್ಕೆ. ಶತ್ರುಗಳ ಸಂಖ್ಯೆ ದ್ವಿಗುಣವಾಗುತ್ತಲೇ ಇರುತ್ತದೆ! ಆದರೆ ಹಿಂದೂಗಳಿಗೆ ಇವು ಅರ್ಥವಾಗಬೇಕಲ್ಲ? ಈ ಖಾನ್ ಗಳ ಚಿತ್ರ ನೋಡಲು ಸಾಲುಗಟ್ಟಿ ನಿಲ್ಲುತ್ತಾರೆ! ಹುಡುಗಿಯರಂತೂ ಈ ಖಾನ್ ಗಳ ಸಿಕ್ಸ್ ಪ್ಯಾಕ್-ಎಯ್ಟ್ ಪ್ಯಾಕ್ ಗಳಿಗೆ ಮರುಳಾಗಿ ತಾನು ಮದುವೆಯಾಗುವ ರಾಜಕುಮಾರ ಇವನೇ ಎಂದು ಭ್ರಮಿಸುತ್ತಾರೆ. ಕಾಲೇಜು ಹುಡುಗ/ಗಿಯರಂತೂ ತಮ್ಮ ಕೊಠಡಿಗಳಲ್ಲಿ ಇವರದೇ ಭಾವಚಿತ್ರ ತೂಗು ಹಾಕಿ ತಮ್ಮ ಆದರ್ಶ ಅಂತ ಭಾವಿಸುತ್ತಾರೆ. ಒಂದು ಕ್ಷಣ ಯೋಚಿಸಿ... ನಿಮ್ಮ ನಾಶಕ್ಕೆ ಬೇಕಾದ ಸಲಕರಣೆ ನೀವೇ ಒದಗಿಸುತ್ತಿದ್ದೀರಿ. ಮುಂದೆ ಯಾವುದೇ ಖಾನ್ ಗಳ ಚಲನಚಿತ್ರ ನೋಡುವ ಮೊದಲು ಒಮ್ಮೆ ಯೋಚಿಸಿ...ಧರ್ಮ ಉಳಿಯಲು ನೆರವಾಗುತ್ತೀರಾ ಅಥವಾ ಅಳಿಸುವ ಆಯುಧವಾಗುತ್ತೀರಾ?

                             2012ರಲ್ಲಿ ಆರೇ ತಿಂಗಳಲ್ಲಿ 4000 ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಲಕ್ಷದಷ್ಟು ಹಿಂದೂ ಹುಡುಗಿಯರು ಲವ್ ಜಿಹಾದಿಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಹೇಳುತ್ತವೆ. ಶಾಲಾ ಕಾಲೇಜುಗಳ ಸಮೀಪ ಮೊಬೈಲ್ ರೀಚಾರ್ಜ್ ಅಂಗಡಿಗಳನ್ನು ತೆರೆಯಲಾಗುತ್ತದೆ. ಅಲ್ಲಿ ಸಿಗುವ ಹುಡುಗಿಯರ ಮೊಬೈಲ್ ಸಂಖ್ಯೆಯನ್ನು ಪಡೆದು ಅವರ ಹಿಂದೆ ಮುಸ್ಲಿಮ್ ಹುಡುಗರ ಹೆಸರನ್ನು ಹಿಂದೂ ಹೆಸರಿನಂತೆ ಬದಲಾಯಿಸಿ, ಕೇಸರಿ ದಾರ ಕೈಗೆ ಕಟ್ಟಿಸಿ ಆ ಹುಡುಗಿಯರ ಹಿಂದೆ ಬಿಡಲಾಗುತ್ತದೆ.  ಜಿಹಾದಿಗಳ ಗುಂಪು ಇದಕ್ಕೆಂದೇ ಒಂದು ಪಡೆಯನ್ನು ನಿರ್ಮಿಸಿದೆ. ಪ್ರತಿಯೊಬ್ಬನಿಗೆ 6 ತಿಂಗಳ ಸಮಯ ಕೊಟ್ಟು ಅವರಿಗೆ ಬೇಕಾದ  ಮೊಬೈಲ್, ಆಧುನಿಕ ರೀತಿಯ ಬಟ್ಟೆಗಳು, ಬೈಕ್ ಹಾಗೂ ಯಥೇಚ್ಚ ಹಣ ಕೊಡಲಾಗುತ್ತದೆ. ಹಿಂದು ಹುಡುಗಿಯರನ್ನು ತಮ್ಮ ಬಲೆಯಲ್ಲಿ ಕೆಡವಲು ಇವರಿಗೆ ತರಬೇತಿ ಕೂಡಾ ನೀಡಲಾಗುತ್ತದೆ. ದೈಹಿಕವಾಗಿ ಬಲಯುತರಾಗಿ ಕಾಣಲು ಬೇಕಾದ ಕಸರತ್ತುಗಳನ್ನು, ಹಿಂದು ಯುವತಿಯರನ್ನು ಬುಟ್ಟಿಗೆ ಹಾಕಲು ಬೇಕಾದ ಮಾತುಗಾರಿಕೆಯ ಕಲೆಯನ್ನು ಕಲಿಸಲಾಗುತ್ತದೆ. ಮೊದಲ ಎರಡು ವಾರಗಳಲ್ಲಿ ಅವರು ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಕೆಡವಬೇಕಾಗುತ್ತದೆ. ಅದಾಗದಿದ್ದಲ್ಲಿ ಇನ್ನೊಂದು ಹುಡುಗಿಯನ್ನು ಬೇಟೆಯಾಡುವಂತೆ ಹೈಕಮಾಂಡ್ ಸೂಚಿಸುತ್ತದೆ. ಮುಂದೆ ಅವರನ್ನು ಮತಾಂತರಿಸಿ ತಮಗೆ ಬೇಕಾದಂತೆ ಬಳಸಿ ಒಂದೋ ಬರೇ ಮಕ್ಕಳನ್ನು ಹುಟ್ಟಿಸಲು ಅಥವಾ ವೇಶ್ಯಾವಾಟಿಕೆಗೆ ಅಥವಾ ಭಯೋತ್ಪಾದಕ ಚಟುವಟಿಕೆಯಲ್ಲದೆ ಇನ್ನೊಂದು ಹುಡುಗಿಯನ್ನು ಬಲೆಗೆ ಬೀಳಿಸಲೂ ಬಳಸಲಾಗುತ್ತದೆ.
              2012ರಲ್ಲಿ ಗುಪ್ತಚರ ವಿಭಾಗದ ಮಾಹಿತಿಯನ್ನಾಧರಿಸಿ ಕಲಾ ಕೌಮುದಿ ಎಂಬ ಕೇರಳದ ಪತ್ರಿಕೆ "ಲವ್ ಜಿಹಾದ್, ಮತಾಂತರ ಹಾಗೂ ಕಪ್ಪುಹಣ" ಎಂಬ ಶೀರ್ಷಿಕೆಯುಳ್ಳ ವಿಶೇಷ ವರದಿ ಪ್ರಕಟಿಸಿತ್ತು. ಆದರೆ ಈ ಪತ್ರಿಕೆ ಮಾರಾಟವಾಗಲೇ ಇಲ್ಲ. ಕೆಲವೊಂದು ಜನರ ಗುಂಪು ಪ್ರತಿಯೊಂದು ಪತ್ರಿಕೆಯ ಅಂಗಡಿಗೆ ನುಗ್ಗಿ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಖರೀದಿಸಿ ನಾಶ ಮಾಡಿತು! ಕೇರಳದಲ್ಲಿ  ಪ್ರತಿ ತಿಂಗಳು ಸರಾಸರಿ 100ರಿಂದ 180 ಹುಡುಗಿಯರು ಮತಾಂತರವಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 3902 ಹೆಣ್ಣು ಮಕ್ಕಳು ಮತಾಂತರಗೊಂಡಿದ್ದು ಅದರಲ್ಲಿ 3815 ಹುಡುಗಿಯರು ಇಸ್ಲಾಂ ಅನ್ನು ಸ್ವೀಕರಿಸಿದ್ದಾರೆ ಎಂದು ವರದಿ ಹೇಳಿತ್ತು! ಗುಪ್ತಚರ ಮಾಹಿತಿಗಳ ಪ್ರಕಾರ 2005ರಲ್ಲಿ ಲಷ್ಕರ್-ಇ-ತೊಯಬಾ ಲವ್ ಜಿಹಾದ್ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಮಾತ್ರವಲ್ಲ ಎಲ್ಲಾ ಭಯೋತ್ಪಾದಕ ಸಂಘಟನೆಗಳಿಂದ ಲವ್ ಜಿಹಾದಿಗಾಗಿ ಯಥೇಚ್ಛ ಹಣ ಹರಿದು ಬರುತ್ತಿದೆ. ಅದರಲ್ಲೂ ಲವ್ ಜಿಹಾದಿಗೆ ಬಲಿಯನ್ನಾಗಿಸುವ ಬಲಿಪಶುಗಳಿಗೆ ಅವರ ಮತವನ್ನಾಧರಿಸಿ ಜಿಹಾದಿಗಳಿಗೆ ಹಣ ಸಂದಾಯವಾಗುತ್ತದೆ. ಸಿಖ್ ಹುಡುಗಿಯಾದರೆ-7ಲಕ್ಷ, ಹಿಂದೂ ಹುಡುಗಿಯಾದರೆ-5ಲಕ್ಷ, ಕ್ರಿಶ್ಚಿಯನ್-4ಲಕ್ಷ, ಜೈನ್-3ಲಕ್ಷ ಹೀಗೆ ಬೇರೆ ಬೇರೆ ಗ್ರೇಡ್ ಕೊಡಲಾಗುತ್ತದೆ. ಇದರ ಹಿಂದೆ ಡ್ರಗ್ ಮಾಫಿಯಾ ಕೂಡಾ ಇರುವುದು ಸುಳ್ಳಲ್ಲ. ಕಾಲೇಜುಗಳ ಸಮೀಪದಲ್ಲಿ ಬಹಿರಂಗವಾಗಿಯೇ ಮಾರಾಟವಾಗುತ್ತಿರೋ ಇದನ್ನು ತಡೆಯಲು ಪೊಲೀಸ್ ಇಲಾಖೆಯಾಗಲೀ ಸರಕಾರಗಳಾಗಲೀ ಚಿಂತಿಸದಿರುವುದು ವಿಷಾದನೀಯ. ಮಣಿಪಾಲ, ಮೂಡಬಿದಿರೆ ಹೀಗೆ ಸಾಲು ಸಾಲು ಇಂಜಿನಿಯರಿಂಗ್ ಕಾಲೇಜುಗಳಿರುವ ಅವಿಭಜಿತ ದಕ್ಷಿಣಕನ್ನಡದಲ್ಲಂತೂ ಡ್ರಗ್ ಮಾಫಿಯಾ ಲವ್ ಜಿಹಾದಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಹಾಗೂ ಅದರ ಬಗ್ಗೆ ಗೊತ್ತಿದ್ದು ಕಣ್ಮುಚ್ಚಿ ಕುಳಿತಿರುವ ಸರಕಾರವನ್ನು ಚುನಾಯಿಸಿದ ಜನತೆ ಹಣೆ ಹಣೆ ಚಚ್ಚಿಕೊಳ್ಳುತ್ತಿರುವುದು ಸುಸ್ಪಷ್ಟ.
ಇಂಗ್ಲೆಂಡ್, ಫ್ರಾನ್ಸಿನಂತಹ ದೇಶಗಳನ್ನೂ ಬಿಟ್ಟಿಲ್ಲ ಈ ಲವ್ ಜಿಹಾದ್!
                       "ಇಂಗ್ಲೆಂಡಿನ ವಿಶ್ವವಿದ್ಯಾಲಯಗಳ ಸಮೀಪ ಸುಳಿದಾಡುವ ಈ ಜಿಹಾದಿಗಳು ತಮ್ಮ ಕಾರ್ಯಕ್ಕೆ £5,000 ಪಡೆಯುತ್ತಾರಲ್ಲದೆ ಹುಡುಗಿಯರನ್ನು ಮೊದಲು ಪ್ರೇಮದ ಬಲೆಗೆ ಬೀಳಿಸಿ ತದನಂತರ ಭಯೋತ್ಪಾದನಾ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ. ಬರ್ಮಿಂಗ್ ಹ್ಯಾಮ್, ಲಂಡನ್, ಲೀಡ್ಸ್, ಬ್ರಾಡ್ ಫೋರ್ಡ್Sಗಳಲ್ಲಿ ಇದು ಇಂದು ಸಾಮಾನ್ಯ ಸಂಗತಿಯಾಗಿದ್ದು, ಲಂಡನ್ನಿನ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಇಂತಹ ಎರಡರಿಂದ ಮೂರು ಪ್ರಕರಣಗಳು ನಡೆದಿವೆ. ಮುಸ್ಲಿಂ ಗೂಂಡಾಗಳು ವಿದ್ಯಾಲಯದ ಪ್ರಾಂಗಣದಲ್ಲೇ ಹುಡುಗಿಯರಿಗೆ ಹೊಡೆದು ಬಡಿದು ಬಲತ್ಕಾರದಿಂದ ಇಸ್ಲಾಮಿಗೆ ಮತಾಂತರ ಮಾಡುತ್ತಾರೆಂದರೆ ಇದರ ಭಯಾನಕತೆ ಊಹಿಸಬಹುದು. ಇಲ್ಲಿನ ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಮೂಡಿದೆಯಲ್ಲದೆ ಪೊಲೀಸ್ ಪಡೆಗಳ ಮೇಲಿನ ಭರವಸೆಯೆ ಹೊರಟು ಹೋಗಿದೆ" ಎಂದು ಸ್ಕ್ವಾಟ್ಲಂಡ್ ಯಾರ್ಡ್ ಮತ್ತು ಕಮಿಷನರ್ ಇಯಾನ್ ಬ್ಲೇರ್ 2012ರಲ್ಲೇ ಹೇಳಿದ್ದರು.  ಇಂಗ್ಲೆಂಡಿನಲ್ಲಿ ಮುಲ್ಲಾಗಳು ಬಹಿರಂಗವಾಗಿಯೇ ಲವ್ ಜಿಹಾದ್ ಮಾಡುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.
                     9 ತಿಂಗಳ ಹಿಂದೆ ಪಾಲ್ತಾಡಿಯ ಹುಡುಗಿಯೊಬ್ಬಳನ್ನು ನೂರುದ್ದೀನ್ ಎನ್ನುವ ವಕೀಲ ಪೊನ್ನಣಿಗೆ ಮತಾಂತರಿಸಲು ಕರೆದುಕೊಂಡು ಹೋಗಿರುವ ವರದಿಯಾಗಿತ್ತು. ಕಳೆದ ಅಕ್ಟೋಬರಿನಲ್ಲಿ ಮೂಡಿಗೆರೆಯ ಅಪೂರ್ವ ಎನ್ನುವ 15 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ಜಿಹಾದಿಗಳು ಅವಳಿಗೆ ಬುರ್ಖಾ ಹಾಕುವಂತೆ ಒತ್ತಾಯ ಕೂಡಾ ಮಾಡಿದ್ದರು. ಅವಳ ದೇಹದ ಮೇಲೆ ನಿಜಾಮ್ ಎಂದು ಬರೆದಿತ್ತು! ಆದರೆ ಆ ನಿಜಾಮ್ ಪರಾರಿಯಾಗಿದ್ದ. ಅದರೊಡನೆ ಆ ಪ್ರಕರಣ ಕೂಡಾ! ಇದೇ ಅಕ್ಟೋಬರಿನಲ್ಲಿ ನಾಪತ್ತೆಯಾದ ಪೆರ್ಲದ ಮೂವರು ಯುವತಿಯರು ಆ ಬಳಿಕ ಪೊನ್ನಣಿಯಲ್ಲಿ ಕಾಣಿಸಿಕೊಂಡರು. ಪ್ರಕರಣ ದಾಖಲಾಯಿತು. ಆದರೇನು ಪ್ರಕರಣ ಮುಂದುವರಿಯಲಿಲ್ಲ.  ಹುಡುಗಿಯರು ಮರಳಲಿಲ್ಲ! ಕೇವಲ ಕೆಲವೇ ಕೆಲವು ಇಂತಹ ಘಟನೆಗಳು ವರದಿಯಾಗುತ್ತವೆ! ಯಾವಾಗ ಸಿಮಿಯ ಮೇಲೆ ನಿಷೇಧ ಹೇರಲಾಯಿತೋ ಆಗ ಸಿಮಿ ಪಾಪ್ಯುಲರ್ ಫ್ರಂಟ್, ಸ್ಮಾರ್ಟ್ ಫ್ರೆಂಡ್ಸ್, ಕ್ಯಾಂಪಸ್ ಫ್ರಂಟ್, ಕೆ.ಎಫ್.ಡಿ, ಪಿ.ಎಫ್.ಐ, ವುಮನ್-ಫ್ರಂಟ್,...ಹೀಗೆ ಹತ್ತು ಹಲವು ಕವಲುಗಳಾಗಿ ಕಾರ್ಯಾಚರಿಸುತ್ತಿದೆ. ಇವೆಲ್ಲವುಗಳಲ್ಲಿರುವ ಕಾರ್ಯಕರ್ತರು ಒಂದೇ. ಈ ಭಯೋತ್ಪಾದಕ ಸಂಘಟನೆಗಳಿಗೆ ಕೇರಳದ ಮುಸ್ಲಿಂ ಲೀಗ್, ತಮಿಳುನಾಡಿನ ಮುಸ್ಲಿಂ ಮುನ್ನೇತ್ರ ಕಳಗಂ, ಆಂದ್ರಪ್ರದೇಶದ ಮುಸ್ಲಿಂ ಪಕ್ಷಗಳು, ಜಮ್ಮು ಕಾಶ್ಮೀರದ ಮುಸ್ಲಿಂ ಪಕ್ಷಗಳು, ಕೆಲವು ಕಾಂಗ್ರೆಸ್-ಕಮ್ಯೂನಿಷ್ಟ್ ಹಾಗೂ ಮುಸ್ಲಿಂ ಓಲೈಕೆ ಮಾಡುವ ರಾಜಕಾರಣಿಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಹಾಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೇರಳದಲ್ಲಂತೂ ಹಿಂದೂಗಳನ್ನು ಸದೆಬಡಿಯಲು ಮುಸ್ಲಿಂ ಲೀಗ್ ಹಾಗೂ ಕೇರಳದ ಕಮ್ಯೂನಿಷ್ಟ್ ಪಕ್ಷ ಒಟ್ಟಾಗಿ ಕೆಲಸ ಮಾಡುತ್ತವೆ! ಸರಕಾರಿ ದಾಖಲೆಗಳ ಪ್ರಕಾರ 1976-77ರಲ್ಲಿ ಕೇವಲ 88ರಷ್ಟಿದ್ದ ಮದರಸಾಗಳ ಸಂಖ್ಯೆ 2000ಕ್ಕಾಗುವಾಗ 30ಸಾವಿರವನ್ನು ದಾಟಿತು! ಈಗ? ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 4000ದ ತನಕ ಸ್ಕಾಲರ್‌ಶಿಪ್ ನೀಡುತ್ತಿದ್ದರೆ, ಸಿದ್ರಾಮಯ್ಯನವರ ಸರ್ಕಾರ ಹೊಸದಾಗಿ ಮದುವೆಯಾದ ಮುಸಲ್ಮಾನ ಮಹಿಳೆಗೆ ಶಾದಿ ಭಾಗ್ಯವೆಂದು ರೂ. 50,000 ಮೌಲ್ಯದ, ಮನೆಯಲ್ಲಿ ಜಾಗವಿಲ್ಲದಿದ್ದರೂ ಮಂಚ, ಹಾಸಿಗೆ ಇನ್ನೂ ಏನೇನೋ ದಯಪಾಲಿಸಿ ಮತಾಂತರಕ್ಕೆ ಮತ್ತು ಲವ್ ಜಿಹಾದಿಗೆ ಉತ್ತೇಜನ ನೀಡುತ್ತಾರೆ.
ಬಂದಿದೆ ಚಾಕಲೇಟ್ ಅಸ್ತ್ರ!
             ಕಾಸರಗೋಡಿನಲ್ಲಿ ಯುವತಿಯರ ಮಾರಾಟದ ಜಾಲವೇ ಇದೆ. ಉಡುಪಿ, ಮಂಗಳೂರಿನಲ್ಲಿ ಈ ಜಾಲದ ಏಜೆಂಟರೂ ಇದ್ದಾರೆ. ಈ ಜಾಲದ ಸದಸ್ಯರು ಯುವತಿಯನ್ನು ಪರಿಚಯ ಮಾಡಿಕೊಂಡು ಕ್ರಮೇಣ ಅವಳಿಗೆ ಮತ್ತು ಬರಿಸುವ ಅಥವಾ ಚಿತ್ತ ಚಂಚಲಗೊಳ್ಳುವ ಚಾಕಲೇಟನ್ನು ಕೊಡುತ್ತಾರೆ. ಈ ಚಾಕ್ಲೇಟನ್ನು ಸೇವಿಸಿದವರಲ್ಲಿ ಒಂದು ರೀತಿಯ ಉನ್ಮಾದ ಉಂಟಾಗಿ ಮತ್ತೆ ಮತ್ತೆ ಅದನ್ನು ತಿನ್ನುವ ಮನಸ್ಸಾಗುತ್ತದೆ. ಅಲ್ಲದೆ ಚಾಕಲೇಟು ಕೊಟ್ಟವನ ಮೇಲೆ ಒಲವು ಮೂಡುತ್ತದೆ. ಪೊನ್ನಣಿಯ ಧಾರ್ಮಿಕ ಅಧ್ಯಯನ ಕೇಂದ್ರದಲ್ಲಿ ಸುಮಾರು 150ಕ್ಕೂ ಹೆಚ್ಚು ಹಿಂದೂ ಹುಡುಗಿಯರಿದ್ದಾರೆ. ಚಾಕಲೇಟು ಕೊಡುವ ತರುಣರು ಕ್ರಮೇಣ ಐಪಾಡ್, ಸಿಮ್ ಸಹಿತ ಮೊಬೈಲ್ ಕೊಟ್ಟು ಯುವತಿಯರನ್ನು ಮರುಳುಗೊಳಿಸುತ್ತಾರೆ. ಐಪಾಡಿನಲ್ಲಿ ಇಸ್ಲಾಂಗೆ ಸಂಬಂಧಪಟ್ಟ ವಿಡಿಯೋಗಳು, ಇಸ್ಲಾಂ ಭೋದನೆಗಳು ಇರುತ್ತವೆ. ಜೊತೆಗೆ ಇಸ್ಲಾಮಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಕೊಟ್ಟು ಪ್ರತಿದಿವಸ ಓದಿದ ವಿಷಯಗಳನ್ನು ಪುಸ್ತಕವೊಂದರಲ್ಲಿ ಬರೆಯಲು ಒತ್ತಾಯಪಡಿಸುತ್ತಾರೆ. ಪೊಲೀಸರು ಹಾಗೂ ಹೊರಜಗತ್ತು ಒಳಹೊಕ್ಕು ನೋಡಿದರು ಅರಿವಾಗದ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಇದೇ ಹುಡುಗಿಯರು ಮುಂದೆ ಹಿಂದೂ ಧರ್ಮದ ವಿರುದ್ದ ಆಯುಧಗಳಾಗಿ ಉಪಯೋಗಿಸಲ್ಪಡುತ್ತಾರೆ.
ಇದಕ್ಕೆ ಪರಿಹಾರವೇನು?
                   ನಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಡುವ ಜೊತೆಗೆ ನಮ್ಮ ಧರ್ಮ-ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಾದ್ದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಹುಡುಗಿಯರು ರೀಚಾರ್ಜ್, ಬಟ್ಟೆ ಹೀಗೆ ಯಾವುದೇ ಅಂಗಡಿಗಳಿಗೆ ಹೋಗುವಾಗ ಹಿಂದೂಗಳ ಅಂಗಡಿಗೆ ಹೋಗುವುದು ಒಳಿತು. ಹೆತ್ತವರು ವಿದ್ಯಾರ್ಜನೆಗೆ, ನೌಕರಿಗೆ ಹೋಗುವ ಮಗಳ ಮೇಲೊಂದು ಕಣ್ಣಿಟ್ಟಿರುವುದರ ಜೊತೆಗೆ ಲವ್ ಜಿಹಾದ್ ಬಗ್ಗೆ ತಿಳಿಸುವುದು ಅಗತ್ಯ. ಅಲ್ಲದೇ ಯಾವುದೇ ಇಂತಹ ಪ್ರಕರಣ ಕಂಡು ಬಂದಲ್ಲಿ ಅದು ಮುಂದುವರಿಯಲು ಬಿಡದೇ ಹೆತ್ತವರಿಗೆ/ಪೋಷಕರಿಗೆ ಅಥವಾ ಹಿಂದೂ ಸಂಘಟನೆಗಳಿಗೆ ಸುದ್ದಿ ಮುಟ್ಟಿಸಿ ತನ್ಮೂಲಕ ಆ ಯುವತಿಯನ್ನು ರಕ್ಷಿಸುವುದರ ಜೊತೆಗೆ ಒಂದು ಕುಟುಂಬವನ್ನು, ಸಮಾಜವನ್ನು, ದೇಶವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ನಮ್ಮಯ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳಬೇಕಾದ್ದು ನಮ್ಮ ಕರ್ತವ್ಯ. "ಯಾರನ್ನೂ ನಂಬಿದರೂ ತುರ್ಕರನ್ನು ನಂಬಬಾರದು" ಎನ್ನುವ ಮಾತೊಂದಿದೆ. ಆದರೆ ಇತಿಹಾಸ ಮರೆತ/ತಿಳಿಯದ ಹಿಂದೂಗಳು ಅದನ್ನು ಪಾಲಿಸದೇ ಇರುವುದು ದುರಂತಕ್ಕೆ ಮೂಲ ಕಾರಣ. ಹಾಗಾಗಿ ಇತಿಹಾಸದ ಅರಿವಿರಬೇಕಾದ್ದು ಅತ್ಯಗತ್ಯ. ಇಲ್ಲದಿದ್ದಲ್ಲಿ ನಾವೇ ಇತಿಹಾಸವಾಗಬೇಕಾದೀತು!


ಗುರುವಾರ, ಡಿಸೆಂಬರ್ 12, 2013

ರವಿಯ ಕಾಣದೆ

ಕಾಣಸಿಗದೇಕಿಂದು ರವಿಯ ನೋಟ
ಭಾನುವನೂ ಬಿಡಲಿಲ್ಲವೇನೋ ಚಳಿಯ ಕಾಟ?
 

ಚಳಿ...ಚಳಿ...

ಇಣುಕಿಣುಕಿ ನೋಡುತಿಹನು ನೇಸರ
ಚಳಿರಾಯ ಬಿಡನು ಏಳಲು ಬೇಸರ
ಬೆಂಗಳೂರು ಚಳಿಯೇತಕೀ ತರ
ಮೈಯೆಲ್ಲ ಕೆರೆದುಕೊಳ್ಳಬೇಕೆನಿಸುವುದು ಪರಪರ

ಮಂಗಳವಾರ, ಡಿಸೆಂಬರ್ 3, 2013

ನಮೋ ಜಂಬೂ ದ್ವೀಪ

ನಮೋ ಎನ್ನದೇ ವಿಧಿಯಿಲ್ಲ
ನಮೋ ಎನ್ನಲು ಭಯವಿಲ್ಲ!||

ನಮೋ ಎನ್ನಲು ಎನ್ನ ಕಿವಿ ನಿಮಿರುವುದು
ನಮೋ ಎನ್ನಲು "ತಾವರೆ" ಅರಳುವುದು||

ನಮೋ ಎನ್ನಲು ಮನವು ಪುಳಕಿತ
ನಮೋ ಎನ್ನದಿರೆ ನೀನು ಕಳಂಕಿತ||

ನಮೋ "ನಮೋ ಜಂಬೂ ದ್ವೀಪಕೆ"
ಬರಲಾರೆಯಾ ನೀ ಗೀತ ಕಥನಕೆ||

ಮೋದಿ ಮೋಡಿಯ ಗುಜರಾತ
ಬಂದು ಕೇಳ್ ನೀ ಚಕ್ರವರ್ತಿಯ ಮಾತ||

ಧನು ಸಂಕ್ರಮಣದ ಪರ್ವ ಕಾಲ
ನಮೋ ಸಂಕೀರ್ತನೆ ಸರ್ವ ಕಾಲ||

ಗುರುವಾರ, ನವೆಂಬರ್ 28, 2013

ನಮೋ ಭಾರತ

                 ಅನ್ಯ ಭಾಗಗಳಲ್ಲಿ ಜನವಸತಿಯೇ ಇಲ್ಲದಿದ್ದ ಕಾಲದಲ್ಲಿ ನಾವು ನಾಗರೀಕತೆಯ ತುತ್ತ ತುದಿಗೇರಿದ್ದೆವು. ಉಳಿದೆಡೆ ಹುಟ್ಟು ಸಾವುಗಳ ಬಗ್ಗೆ ಜಿಜ್ಞಾಸೆಯೇ ಇಲ್ಲದಿದ್ದ ಸಮಯದಲ್ಲೇ ನಮ್ಮಲ್ಲಿ ಸಾವಿನಾಚೆಗಿನ ಬದುಕಿನ ಅವಿಷ್ಕಾರಗಳು ನಡೆದಿತ್ತು. ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು...ಇವೇ ಮುಂತಾದುವುಗಳು ನಡೆಯುತ್ತಿದ್ದು ಒಂದು ಸುಸಂಸ್ಕೃತ ಸಮಾಜ ವ್ಯವಸ್ಥೆ ರೂಪುಗೊಂಡಿತ್ತು. ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!

             ಇಂತಹ ಸುಸಂಸ್ಕೃತ ಬೀಡಿಗೆ ಅದೆಷ್ಟು ವಿದೇಶೀ ಶಕ್ತಿಗಳು ಬಂದೆರಗಿದವು! ದೋಚಲು ಬಂದವರಿಗೂ ಮೃಷ್ಟಾನ್ನ ಭೋಜನವನ್ನುಣಿಸಿತು ನಾಡು! ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!
            ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.
ಆದರೆ.......
            ಸ್ವಾತಂತ್ರ್ಯಾನಂತರದ ಭಾರತ ತನ್ನ ಹಿಂದಿನ ಭೂರಮೆಯ ಸಿರಿಯನ್ನು, ಶ್ರೀರಮೆಯ ಕೃಪಾಕಟಾಕ್ಷವನ್ನು ಮರಳಿ ಪಡೆದಿದೆಯೇ? ನಮ್ಮ ಮೇಲೆ ದಾಳಿ ಮಾಡಿ ದೋಚಿದವರೂ ನಾಚುವಂತೆ ನಮ್ಮನ್ನಾಳಿದವರು, ಈಗ ಆಳುತ್ತಿರುವವರು ದೋಚುತ್ತಿದ್ದಾರಲ್ಲಾ?  ನಮ್ಮ ಮೇಲೆ ನಮಗೆ ಜಿಗುಪ್ಸೆ ಬರುವ ರೀತಿಯಲ್ಲಿ ನಮ್ಮ ದೇಶವನ್ನು ಅಧಪತನಕ್ಕಿಳಿಸಿದ ನಮ್ಮನ್ನಾಳುತ್ತಿರುವವರ ಒಳ ಹೂರಣವೇನು? ಸ್ವಾತಂತ್ರ್ಯನಂತರದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಿದ್ದ ಭರತ ಖಂಡದಲ್ಲಿ ದಿನ ದಿನವೂ ರೈತನ ಆತ್ಮಹತ್ಯೆ, ಕೃಷಿಯ ಹಿಮ್ಮುಖ ಬೆಳವಣಿಗೆ, ಮುಚ್ಚಿ ಮಸಣ ಸೇರುತ್ತಿರುವ ಕೈಗಾರಿಕೆಗಳು, ನೈತಿಕತೆಯ ಅಧಪತನ, ಒಟ್ಟಾರೆ ಯಾವ ನಾಗರೀಕತೆ, ಯಾವ ಸಂಸ್ಕೃತಿ ಸನಾತನ ಎಂದು ಕರೆಯಲ್ಪಡುತ್ತದೋ ಅಂತಹ ಸಂಸ್ಕೃತಿ ಜೀವಚ್ಛವವಾಗುವಂತೆ ಮಾಡುತ್ತಿರುವ ಶಕ್ತಿಗಳು ಯಾವುವು? ಸ್ವಾತಂತ್ರ್ಯಾನಂತರ ಹಣದ ಹರಿವು ಹೆಚ್ಚಾಯಿತು, ಆದರೆ ಅದು ಸೇರಿದ್ದೆಲ್ಲಿಗೆ? ಮುಂದೆಯೂ ಇಂತಹ ಭೃಷ್ಟ ವ್ಯವಸ್ಥೆಯನ್ನೇ ಚುನಾಯಿಸಿದರೆ ಒಂದು ಕಾಲದಲ್ಲಿ ಸಾರ್ವಭೌಮನಾಗಿ ಮೆರೆದ ದೇಶ ಉಳಿಯಬಹುದೆ? ಆಗ ನಮ್ಮೆಲ್ಲರ ಪಾಡೇನು? ಭಾಜಪಾದಿಂದ ಪ್ರಧಾನಿ ಅಭ್ಯರ್ಥಿಯಾಗಿ ನೇಮಕಗೊಂಡು ದೇಶದ ಕತ್ತಲನ್ನು ಕಳೆಯುವ ಸೂರ್ಯನಿವ, ಈತನೇ ನಮ್ಮ ಪ್ರಧಾನಿಯಾಗಬೇಕು ಎಂದು ದೇಶಕ್ಕೆ ದೇಶವೇ ಪಿಸುನುಡಿಯುತ್ತಿರುವ ಶ್ರೀ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಪರಿಸ್ಥಿತಿ ಯಾವ ರೀತಿ ಬದಲಾಗಿ ದೇಶವನ್ನಾವರಿಸಿರುವ ಅಂಧಕಾರ ಕೊನೆಯಾಗಬಹುದು
ದೇಶ ಸೇವೆಯೇ ಈಶ ಸೇವೆ...!
ದೇಶಕ್ಕಾಗಿ ಮೋದಿ...ಮೋದಿಗಾಗಿ ನಾವು...!
ನಾವು ಏಳದಿದ್ದರೆ ದೇಶ ಹೇಗೆ ಎದ್ದು ನಿಂತೀತು? ಮಲಗಿದ್ದು ಸಾಕು. ಇನ್ನು ಏಳೋಣ!

ಸೋಮವಾರ, ನವೆಂಬರ್ 25, 2013

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ!

ಅಭಿವೃದ್ಧಿಯೇ...ಗಾಂಧಿ ವಂಶವೇ?

               ಪ್ರತಿಸಲ ನೀವು ರೈಲಿನಲ್ಲಿ ಹೋಗಬೇಕಾದರೆ ನೀವು ಮೂರು ನಾಲ್ಕು ತಿಂಗಳ ಹಿಂದೆ ಟಿಕೆಟ್ ಬುಕ್ ಮಾಡಿಸಿದ್ದರೂ ನಿಮ್ಮ ಆಸನ ದೃಢೀಕರಣಗೊಂಡಿರೋದಿಲ್ಲ. ಕೊನೆಗೂ ಎಷ್ಟೋ ಜನ ನಿರ್ವಾಹಕರನ್ನು ಕಾಡಿಬೇಡಿ ಆಸನ ಪಡೆದುಕೊಂಡೋ, ರೈಲಿನ ಬೋಗಿಗಳಲ್ಲಿ ಅಲ್ಲಲ್ಲಿ ಕೂತೋ 500-600 ಕಿ.ಮೀ ದೂರ ಪ್ರಯಾಣ ಮಾಡುತ್ತಾರೆ. ಅಲ್ಲದೇ ಬಸ್ಸುಗಳಲ್ಲಿಯೂ ಟಿಕೆಟ್ ಸಿಗದೇ ಕೊನೆಯ ಕ್ಷಣದವರೆಗೂ ಪರಿತಪಿಸಿ ಕೊನೆಗೆ ತಮ್ಮ ಪ್ರಯಾಣವನ್ನೇ ರದ್ದುಗೊಳಿಸುವುದೂ ಇದೆ. ಹಬ್ಬ ಹರಿದಿನಗಳಲ್ಲಿ ಇದೆಲ್ಲಾ ಮಾಮೂಲು. ನಗರ ಹಳ್ಳಿಗಳೆನ್ನದೆ ಗಿಜಿಗಿಟ್ಟುವ ಬಸ್ಸುಗಳು, ಆಟೋ ರಿಕ್ಷಾಗಳು, ಅಂತಹ ಬಸ್ಸುಗಳಲ್ಲಿ ಬಾಗಿಲುಗಳಲ್ಲೇ ನೇತಾಡುತ್ತಾ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಜನರು... ಯಾಕೆ ಹೀಗೆ? ಅಂದರೆ ಇರುವ ಜನರಿಗೆ ಬೇಕಾದಷ್ಟು ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ! ಇನ್ನೂ ನಗರಗಳಲ್ಲಂತೂ ಟ್ರಾಫಿಕ್ ಜಾಮಿನದ್ದೇ ದೊಡ್ಡ ಸಮಸ್ಯೆ. ಎಷ್ಟೋ ಸಲ ಖಾಲಿ ಬಸ್ಸುಗಳು ಓಡಾಡುವುದು, ಹೆಚ್ಚಿನ ಸಲ ಒಬ್ಬರೇ ಕಾರಿನಲ್ಲಿ ಓಡಾಡುವುದು, ಯಾರೋ ಒಬ್ಬ ಮಾಡಬಾರದ ಕಡೆ ತಿರುವು ತೆಗೆದುಕೊಳ್ಳೋದು, ಅಥವಾ ರಸ್ತೆಯಲ್ಲೇ ಬೇಕಾಬಿಟ್ಟಿ ತನ್ನ ವಾಹನ ನಿಲ್ಲಿಸಿ ಎಲ್ಲೋ ಹೋಗಿರೋದು...(ಇದು ಎಲ್ಲ ವಾಹನಗಳಿಗೂ ಅನ್ವಯ!) ಇಲ್ಲಿ ತಮ್ಮ ಬಗ್ಗೆ ಮಾತ್ರ ಯೋಚಿಸಿ ಉಳಿದವರಿಗೇನಾದರೆ ನನಗೇನು ಅನ್ನುವ ದಾರ್ಷ್ಟ್ಯ! ನಮ್ಮ ಜನರೂ ರಾಜಕಾರಣಿಗಳ ಹಾಗೆ ಯೋಚಿಸಲು ಆರಂಭಿಸಿದ್ದೇ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಲು ಒಂದು ಕಾರಣ ಅನ್ನಿಸೋದಿಲ್ವೇ?
               ನೀವು ಯಾವುದಾದರೂ ಸರಕಾರಿ ಕಛೇರಿಗೆ ಒಂದೋ ಪಡಿತರ ಚೀಟಿ ಮಾಡಿಸಲೋ, ಚುನಾವಣಾ ಗುರುತಿನ ಚೀಟಿ ಮಾಡಿಸಲೋ ಹೀಗೆ ಯಾವುದಾರೊಂದು ಕೆಲಸಕ್ಕೆ ಹೋಗಿಯೇ ಇರುತ್ತೀರಿ. ಆದರೆ ನಿಮ್ಮ ಕೆಲಸ ತಿಂಗಳುಗಟ್ಟಲೆ ಕಳೆದರೂ ಆಗುವುದೇ ಇಲ್ಲ. ಇನ್ನು ಆ ಕೆಲಸ ಪೂರ್ಣವಾದಾಗ ಪುನಃ ಅದೇ ಗುರುತುಪತ್ರವನ್ನು ನವೀಕರಿಸಬೇಕು ಎಂಬ ಆದೇಶ ಸರ್ಕಾರ ಹೊರಡಿಸುತ್ತದೆ. ಎಷ್ಟು ಕಿರಿಕಿರಿಯಾಗಬಹುದು? ಪ್ರತಿಯೊಬ್ಬರಿಗೂ ಅವರ ಸಮಯ ಅಮೂಲ್ಯ ತಾನೆ! ಪ್ರತಿಯೊಬ್ಬರು ಸರಕಾರಿ ಕಛೇರಿಗಳಿಗೆ, ಅಧಿಕಾರಿಗಳಿಗೆ ಯಾಕೆ ಛೀಮಾರಿ ಹಾಕುತ್ತಾರೆ? ಸಮಯ, ಲಂಚ, ಅಧಿಕಾರಿಗಳ ಒರಟುತನ, ಏನೂ ಗೊತ್ತಿಲ್ಲದ ಜಾತಿ, ಮತವೊಂದೇ ಮಾನದಂಡವಾಗಿ ಆರಿಸಿಬಂದು ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ, ಅದರ ಮಧ್ಯೆ ನೀವು ಕೊಟ್ಟಿದ್ದರೂ ಬೇಜವಾಬ್ದಾರಿತನದಿಂದ ಆ ದಾಖಲೆಗಳನ್ನು ಕಳೆದು ಹಾಕಿರೋದು ಅಥವಾ ಆ ದಾಖಲೆಗಳನ್ನು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆ ಇಲ್ಲದಿರೋದು, ಸರಿಯಾದ ಮಾಹಿತಿ ಒದಗಿಸದ ಸರಕಾರಿ ವ್ಯವಸ್ಥೆ,...ಇಂತಹಾ ಹತ್ತು ಹಲವು ಕಾರಣಗಳಿಗಾಗಿಯೇ ಕೇವಲ ವಿದ್ಯಾವಂತರು ಮಾತ್ರವಲ್ಲ, ಸುಶಿಕ್ಷಿತನಲ್ಲದವನೂ ಕೂಡಾ ರೋಸಿ ಹೋಗಿ ಇವುಗಳನ್ನು ಹೇಸಿಗೆಗಿಂತಲೂ ಕಡೆಯಾಗಿ ಕಾಣೋದು! ಈ ಕಛೇರಿಗಳಲ್ಲಿರುವ ಸಿಬ್ಬಂದಿಗಳು ಮೀಸಲಾತಿ ಆಧಾರದಿಂದ ಬಂದಿರುತ್ತಾರೆಯೇ ಹೊರತು ತಮ್ಮ ಸಾಮರ್ಥ್ಯ, ಅರ್ಹತೆಗಳಿಂದಲ್ಲ! ಹಾಗಾಗಿ ಅವರಿಗೆ ತಂತ್ರಜ್ಞಾನದ ಗಂಧಗಾಳಿ ಇರೋದಿಲ್ಲ, ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಸುಧಾರಿಸಿಕೊಂದು ಹೋಗುವ ಮನಸ್ಥಿತಿಯೂ ಇರೋದಿಲ್ಲ!
               ನಮ್ಮ ಶಿಕ್ಷಣ ವ್ಯವಸ್ಥೆ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಗುರುಕುಲ ಪದ್ದತಿಯಿರುವಾಗ ಒಂದೇ ಗುರುವಿನ ಕೆಳಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಪ್ರತಿಯೊಬ್ಬರು ತಮಗೆ ಬೇಕಾದುದನ್ನು ಕಲಿತು ಮರಳುತ್ತಿದ್ದರು. ಈಗ ಪ್ರತಿಯೊಬ್ಬರೂ ಇಂಜಿನಿಯರ್, ಡಾಕ್ಟರ್ ಆಗಬಯಸುವವರೇ! ಆದರೆ ಇಂಜಿನಿಯರ್ ಆಗಿ ಹೊರಬಂದವನಿಗೆ ಪ್ರಮಾಣಪತ್ರವಿರುತ್ತದೆಯೇ ಹೊರತು ತಾಂತ್ರಿಕ ನೈಪುಣ್ಯತೆಯೇ ಇರೋದಿಲ್ಲ. ಕೆಲಸ ಸೇರಿದ ಮೇಲೆ ಆ ನೈಪುಣ್ಯ ಸಂಪಾದಿಸುತ್ತಾರೆ ಅದು ಬೇರೆ ಮಾತು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ತಾಂತ್ರಿಕರನ್ನು ರೂಪಿಸುತ್ತಲೇ ಇಲ್ಲ! ಮಾತ್ರವಲ್ಲ ನಿಮಗೆ ಬೇಕಾದ ಕ್ಷೇತ್ರಗಳನ್ನು ಆರಿಸೋಣವೆಂದರೆ ಅದಕ್ಕೆ ಅವಕಾಶವೇ ಇಲ್ಲ..ಅಂದರೆ ಅಂತಹ ಶಿಕ್ಷಣ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ. ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಬಿದ್ದಂತೆ ವರ್ಷದಿಂದ ವರ್ಷಕ್ಕೆ ಹೇಳಿದ್ದನ್ನೇ ಹೇಳುವ ಪಾಠಗಳು ಅದನ್ನೇ ಉರು ಹೊಡೆಯುವ ಮಕ್ಕಳನ್ನು ಈ ವ್ಯವಸ್ಥೆ ತಯಾರಿಸುತ್ತದೆ ಬಿಟ್ಟರೆ ಒಬ್ಬ ತಾನೇ ಏನೋ ಮಾಡಬೇಕು ಎನ್ನುವ ಆಶಾವಾದಿಯನ್ನಲ್ಲ. ನಮ್ಮಲ್ಲಿರುವ ಅವಕಾಶಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿಲ್ಲ. ಅದರಿಂದಾಗಿ ಸಾಲುಗಟ್ಟಲೇ ಇಂಜಿನಿಯರುಗಳು ಉದ್ಯೋಗವಿಲ್ಲದೆ ಪರದಾಡುತ್ತಿರುವ ಸ್ಥಿತಿ! ಮಾತ್ರವಲ್ಲ ಮೆಕಾಲೆ ಅಳವದಿಸಿದ ಈ ಶಿಕ್ಷಣ ಪದ್ದತಿಯಿಂದ ಧರ್ಮ ಎಂದರೇನು, ದೇಶ ಎಂದರೇನು, ಸಂಸ್ಕೃತಿ ಎಂದರೇನು, ಧರ್ಮ-ಮತಗಳ ಮಧ್ಯದ ವ್ಯತ್ಯಾಸವೇನು, ರಾಷ್ಟ್ರದ ಇತಿಹಾಸವೇನು,ಹಿರಿಮೆಯೇನು ಇವ್ಯಾವುದನ್ನು ಅರಿಯದ ಸುಳ್ಳು ಇತಿಹಾಸವನ್ನೇ ಸತ್ಯ ಎಂದು ಭ್ರಮಿಸುವ ಒಂದು ಸಂಸ್ಕೃತಿವಿಹೀನ ಪೀಳಿಗೆಯನ್ನೇ ಸೃಷ್ಠಿ ಮಾಡಿ ದೇಶದ ಅಧಪತನಕ್ಕೆ ನಾಂದಿ ಹಾಡಿದ್ದೇವೆ ಎಂಬ ಅರಿವೇ ನಮಗಾಗದಿರೋದು ವಿಷಾದಕರ ಸಂಗತಿ.
                ಎಲ್ಲಿ ನೋಡಿದರೂ ಮೀಸಲಾತಿ. ಸರಕಾರಿ ಘಟಕಗಳಲ್ಲಿ ಮತ, ಜಾತಿಯಾಧಾರಿತ ಮೀಸಲಾತಿ! ಖಾಸಗಿ ಕ್ಷೇತ್ರದಲ್ಲಿ ಸಂಬಂಧಾಧಾರಿತ ಮೀಸಲಾತಿ! ಪತ್ರಿಕೋದ್ಯಮದಲ್ಲಿ ಪಂಥಾಧರಿತ(ಎಡಪಂಥೀಯ) ಮೀಸಲಾತಿ! ರಾಜಕೀಯದಲ್ಲಿ ಧನಾಧರಿತ ಮೀಸಲಾತಿ! ಸಾಮಾನ್ಯನಿಗೆ ದಿನಕ್ಕೆ 1 ರೂಪಾಯಿ ಸಾಕು ಊಟಕ್ಕೆ, 5 ರೂಪಾಯಿ ಸಾಕು ಊಟಕ್ಕೆ, ಎರಡು ತರಕಾರಿ ಬಳಸೋದ್ರಿಂದ ಬೆಲೆಯೇರಿಕೆ, ಬಡತನ ಮನಸ್ಸಿಗೆ ಸಂಬಂಧಿಸಿದ್ದು(!)...ಇದು ಸರಕಾರದ ನೀತಿ!
               ನಮ್ಮ ದೇಶದಲ್ಲಿ ಇನ್ನೂ ವಿದ್ಯುತ್ತೇ ಇಲ್ಲದ(ಸೋಲಾರನ್ನು ಸೇರಿಸಿ) ಎಷ್ಟು ಹಳ್ಳಿಗಳಿವೆ? ಮನೆಗೆ ನೀರೇ ಸಿಗದೆ ಎಷ್ಟೋ ದೂರದಿಂದ ಹೊತ್ತು ತರುವ ಎಷ್ಟು ಕುಟುಂಬಗಳಿವೆ? ಎಲ್ಲಿ ನೋಡಿದರಲ್ಲಿ ಗುಂಡಿಗಳಿರುವ ರಸ್ತೆಗಳು. ಅಗತ್ಯ ಇಲ್ಲದ ಕಡೆಯೂ ಹಂಪ್-ಗಳು ಇವುಗಳಿಂದಾಗಿಯೇ ದಿನನಿತ್ಯ ಒಂದಷ್ಟು ಅಪಘಾತಗಳು. ಹಲವಾರು ಕಡೆ ಚರಂಡಿಗಳೇ ಇಲ್ಲ! ಒಂದೇ ಮಳೆಗೆ ಕಿತ್ತು ಹೋಗುವ ರಸ್ತೆಗಳು! ಕಳಪೆ ಕಾಮಗಾರಿ! ಎಷ್ಟೋ ಊರುಗಳಿಗೆ ಬಸ್ಸು ಬಿಡಿ, ರಸ್ತೆಗಳೇ ಇಲ್ಲ. ನದಿಗಳಿಗೆ ಸೇತುವೆಗಳಿಲ್ಲದೆ ಹಗ್ಗ, ತೆಪ್ಪದ ಮೂಲಕ ದಾಟುವ ಎಷ್ಟೋ ಜನ ಏನು ಈ ದೇಶದವರಲ್ಲವೆ? ಸ್ವಂತ ಸೂರು ಇಲ್ಲದೆ, ಊಟಕ್ಕೆ ಗತಿಯಿಲ್ಲದೆ, ತಮ್ಮವರವರೆನ್ನುವವರಿಲ್ಲದೆ ಭಿಕ್ಷೆ ಬೇಡುವವರು ಹಾಗೂ ತಮ್ಮ ಜೀವನಕ್ಕಾಗಿ ಇವರನ್ನು ಭಿಕ್ಷಾಟನೆಗೆ ತಳ್ಳುವವರು ಇವಕ್ಕೆಲ್ಲಾ ಎಂದು ವಿಮೋಚನೆ? ಇಂದಿಗೂ ಕನಿಷ್ಟ ಎರಡು ಗಂಟೆಯೂ ೩ ಫೇಸ್ ವಿದ್ಯುತ್ ಸಿಗದೆ ರೈತರ ಕಣ್ಣೀರಿನಲ್ಲೇ ಬೆಳೆ ಬೆಳೆಯುವಂತ ಪರಿಸ್ಥಿತಿ ಉದ್ಭವಿಸಿರುವ ಎಷ್ಟೊಂದು ಹಳ್ಳಿಗಳಿವೆ. ವಿದ್ಯುತ್ ಸಿಕ್ಕಿದರೂ ನೀರೇ ಸಿಗದ ಅದೆಷ್ಟು ಕೃಷಿಭೂಮಿಗಳು! ಇವೆಲ್ಲಾ ಇದ್ದರೂ ಕಾರ್ಮಿಕರು ಸಿಗದೇ ಅಥವಾ ದುಬಾರಿ ವೇತನ ನೀಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ರೈತರು! ಇವೆಲ್ಲದರ ಮಧ್ಯೆ ಕಮ್ಯೂನಿಷ್ಟ್ ಪ್ರೇರಿತ ನಕ್ಸಲರ ಕಾಟ! ಎಲ್ಲ ಸರಿಯಾಗಿದೆ ಎನ್ನುವಷ್ಟರಲ್ಲಿ ವರುಣನ ಕಣ್ಣುಮುಚ್ಚಾಲೆ! ಬೆಳೆಗೆ ಸರಿಯಾದ ಬೆಲೆ ಸಿಗದೆ ಹೈರಾಣಾಗುವ ರೈತ!
             ಸ್ವಾತಂತ್ರ್ಯ ಕ್ರಾಂತಿವೀರರಿಂದ ಒದಗಿದ್ದರೂ ಅವರಿಗೆ ಸಿಗದ ಮಾನ್ಯತೆ, ಸಾವರ್ಕರ್-ಸುಭಾಷ್-ಚಂದ್ರಶೇಖರ್ ಆಜಾದ್, ಅರವಿಂದ, ಬಂಕಿಮರಾದಿಯಾಗಿ ಎಲ್ಲರನ್ನು ಬದಿಗೆ ತಳ್ಳುವ "ಕಮ್ಮಿ" ನಿಷ್ಟರ ಪ್ರಯತ್ನಗಳು, ವೇದ, ಸಂಸ್ಕೃತಿ, ಋಷಿ ಪರಂಪರೆಗೆ ಸಿಗದ ಗೌರವ! ಹಳ್ಳಿಹಳ್ಳಿಯಲ್ಲೂ ಬೇರೂರಿರುವ ಭಯೋತ್ಪಾದಕರು! ಅವರನ್ನು ಕಾಪಾಡುವ ದ್ರೋಹಿ ರಾಜಕಾರಣಿಗಳು. ನಕಲಿ ಎನ್ ಕೌಂಟರ್ ಎಂದೂ ಮಾತ್ರವಲ್ಲ ತಮ್ಮ ಮನೆಯ ಮಗಳವಳೆಂದು ನಾಚಿಕೆ ಬಿಟ್ಟು ಹೇಳುವ ಮಂತ್ರಿ ಮಹೋದಯರು, ಇವರನ್ನೇ ಬೆಂಬಲಿಸುವ ನಾಚಿಕೆ ಮಾನ ಮರ್ಯಾದೆ ಬಿಟ್ಟ ಮಾಧ್ಯಮಗಳು! ಲವ್ ಜಿಹಾದ್, ಭೂ ಜಿಹಾದ್, ವೈಣಿಕ ಜಿಹಾದ್, ಅಕ್ಷರ ಜಿಹಾದ್, ಸಾಂಸ್ಕೃತಿಕ ಜಿಹಾದ್, ರಾಜಕೀಯ ಜಿಹಾದ್..... ಹಿಂದೂಗಳ ಜೀವನಕ್ಕೆ ಕೊಳ್ಳಿ ಇಟ್ಟಿರುವ ರಕ್ತಬೀಜಾಸುರಗಳು. ಆದರೆ ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳದೆ ಇರೋದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇರೋದು ದೊಡ್ಡ ವಿಪರ್ಯಾಸ. ಭಯೋತ್ಪಾದಕತೆ ವಿರುದ್ದ ಪ್ರತಿಭಟನೆ ಮಾಡುವವರನ್ನೇ ಬಂಧಿಸುವ ಸರ್ಕಾರ, ಭಯೋತ್ಪಾದಕರನ್ನು ಬಹುವಚನ ಉಪಯೋಗಿಸಿ ಗೌರವಿಸುವ ಮಂತ್ರಿಗಳು, ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿ ಕೋಟ್ಯಾಂತರ ಖರ್ಚು ಮಾಡುವ ನಪುಂಸಕ ಸರಕಾರ, ದೇಶದ ಸಾಮಾನ್ಯ ಪ್ರಜೆಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ ಭಯೋತ್ಪಾದಕನಿಗೆ ನ್ಯಾಯ ಸಿಗಬೇಕೆಂದು ಬೊಬ್ಬಿರಿಯುವ ಮಾಧ್ಯಮಗಳು, ಶತ್ರುಗಳು ನುಸುಳಿದರೂ ರತ್ನಗಂಬಳಿ ಹಾಸಿ ಮಾತಿಗಿಂತ ಮೌನವೇ ಲೇಸೆನ್ನುವ ಪ್ರಧಾನಿ, ಸಾಲು ಸಾಲು ಹಗರಣಗಳು, ತನಿಖಾ ಸಂಸ್ಥೆಗಳೆಲ್ಲವನ್ನು ತನ್ನ ಕೈವಶ ಮಾಡಿಕೊಂಡಿರುವ ಗಾಂಧಿ ಕುಟುಂಬ, ಬೇಹುಗಾರಿಕಾ ವಿಭಾಗ ಮಾಹಿತಿ ಕೊಟ್ಟರು ಸೂಕ್ತ ಭದ್ರತೆ ಒದಗಿಸದೆ ಜನರ ಸಾವಿಗೆ ಕಾರಣವಾಗುವ ಸರಕಾರ, ಚಿತ್ರನಟಿಯರೊಂದಿಗೆ ಲಲ್ಲೆಗರೆಯುವ ಗೃಹ ಸಚಿವ, ಅತ್ತ ಇತ್ತ ಸುತ್ತ ಮುತ್ತ ಒಳಗೂ ಹೊರಗೂ ಎಲ್ಲೆಡೆಯೂ ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಭಾರತ! ದಿನ ನಿತ್ಯ ಗಡಿ ಸಮಸ್ಯೆ, ಭಾಷಾವಾರು ಜಗಳ, ಅತ್ಯಾಚಾರ, ಹಗರಣ, ಹೊರಗಿಂದ ಬಂದವರಿಗೆ ಪಡಿತರ, ಚುನಾವಣ ಗುರುತು ಚೀಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲ ವಸ್ತುಗಳ ಬೆಲೆಯೇರಿಕೆ, ಭಾರತೀಯ ಬಡವನಾಗಿ ಹೋಗುತ್ತಿದ್ದಾನೆ, ಭಾರತದ ರಾಜಕಾರಣಿ ದುಡ್ದನ್ನೆಲ್ಲಾ ಸ್ವಿಸ್ ಬ್ಯಾಂಕಿನಲ್ಲಿಡುತ್ತಿದ್ದಾನೆ. ತನ್ನ ವಿರುದ್ದ ಮಾತಾಡುವವರನ್ನೆಲ್ಲಾ ನಕಲಿ ದಾಖಲೆ ಸೃಷ್ಟಿಸಿ ಬಾಯಿಮುಚ್ಚಿಸುವ ಸರ್ಕಾರ......

                     ಅಬ್ಬಾ ಹೇಳುತ್ತಾ ಹೋದರೆ ಮುಗಿಯದ ಕಥೆ! ಎಲ್ಲಿ ನೋಡಿದರಲ್ಲಿ ಸಮಸ್ಯೆಗಳೇ...ಇವೆಲ್ಲದರ ಮಧ್ಯೆ ನಿದ್ದೆಗೆ ಜಾರಿರುವ ಭಾರತೀಯ! ಇವುಗಳಿಗೆಲ್ಲಾ ಕೊನೆ ಎಂದು? ಇದೆ ಇದಕ್ಕೆ ಪರಿಹಾರ ನಮ್ಮ ಕೈಯಲ್ಲಿದೆ. ಅಲ್ಲೊಬ್ಬನಿದ್ದಾನೆ ಉಕ್ಕಿನ ಮನುಷ್ಯ! 12 ವರ್ಷಗಳಿಂದ ತನ್ನ ಮೇಲಾಗುತ್ತಿರುವ ದೇಶದ್ರೋಹಿಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತು ಅಭಿವೃದ್ಧಿಯ ಶಕೆಯನ್ನೇ ಬರೆದ! ಕುಹಕಿಗಳಿಗೆ ತನ್ನ ಕಾರ್ಯದಿಂದಲೇ ಉತ್ತರ ಕೊಟ್ಟ! ಮೇಲೆ ಹೇಳಿರುವ ಎಲ್ಲ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎನ್ನುವುದನ್ನು ತನ್ನ ರಾಜ್ಯದಲ್ಲಿ ಮಾಡಿ ತೋರಿಸಿದ. ಒಂದು ಕಾಲದಲ್ಲಿ ಜನರಿಗೆ ಚಹಾ ಕುಡಿಸುತ್ತಿದ್ದ ಆ ವ್ಯಕ್ತಿ ಮುಂದೆ ಗುಜರಾತಿಗರಿಗೆ ಅಮೃತದ ಧಾರೆಯನ್ನೇ ಹರಿಸಿದ. ಎಲ್ಲರೂ ಕೇವಲವಾಗಿ ಮಾತಾಡುತ್ತಿದ್ದ ಕಾಲದಲ್ಲಿ ಮೌನವಾಗಿ ಗುಜರಾತಿನ ಅಭಿವೃದ್ಧಿಯಗಾಥೆಯನ್ನು ಬರೆದ. ಈಗ ಅದೇ ವ್ಯಕ್ತಿ ಭಾ.ಜ.ಪಾ.ದ ಪ್ರಧಾನಿ ಅಭ್ಯರ್ಥಿಯಾಗಿ ನಮ್ಮೆದುರು ನಿಂತಿದ್ದಾನೆ! ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ವಂಶ ಪಾರಂಪರ್ಯವಾಗಿ ತನಗೇ ಅಧಿಕಾರ ಸಿಗಬೇಕೆಂದು ಬೇಕಾದ ಆಟ ಆಡಿ, ಹೂಟ ಹೂಡಿ ಸದಾ ಗದ್ದುಗೆ ಹಿಡಿದು ದೇಶ ಕೊಳ್ಳೆ ಹೊಡೆಯುವ ಗಾಂಧಿ ಕುಟುಂಬದ ಇತಿಹಾಸ ತಿಳಿದ ಮೇಲೂ ಅವರನ್ನೇ ಆರಿಸಿ ಸದಾ ಸಮಸ್ಯೆಗಳ ಜಂಜಡದಲ್ಲಿ ಮುಳುಗಿ ಮುಂದಿನ ಪೀಳಿಗೆಯಿಂದ ಛೀ..ಥೂ..ಅಂತಾ ಉಗುಳಿಸಿಕೊಳ್ಳುತ್ತೀರಾ ಅಥವಾ ರಾಜಕೀಯ ದುರಂಧರನನ್ನು, ಅಭಿವೃದ್ಧಿಯ ಶಕಪುರುಷನನ್ನು, ದೇಶ-ಧರ್ಮ-ಸಂಸ್ಕೃತಿಯನ್ನು ಗೌರವಿಸುವ ಅಪ್ಪಟ ಭಾರತೀಯನನ್ನು ಪ್ರಧಾನಿಯಾಗಿ ಆರಿಸುತ್ತೀರಾ?

ನಿರ್ಧಾರದ ಕಾಲ ಬಂದಿದೆ! ಎದ್ದೇಳು ಅರ್ಜುನ! ನಿಮ್ಮ ಮತ ದೇಶಕ್ಕೆ ಹಿತ!

ಶನಿವಾರ, ನವೆಂಬರ್ 23, 2013

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!



ಮೂಢನಂಬಿಕೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮದ ವಿರುದ್ದ ಸಹಜವಾಗಿಯೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕಾನೂನು ಸನಾತನ ಸಂಸ್ಕೃತಿಯ ಮೇಲೆ ಸವಾರಿ ಮಾಡಲು ಪ್ರಗತಿಪರರು ಅಂತ ತಮ್ಮನ್ನು ತಾವು ಕರೆದುಕೊಂಡವರಿಗೆ ಸಿಕ್ಕ ಒಂದು ಅವಕಾಶ ಎಂದು ಎಂತಹ ಅಜ್ಞಾನಿಗಾದರೂ ಅರ್ಥವಾಗುವ ಸಂಗತಿ. ಹಿಂದೂಗಳ ನಂಬಿಕೆಯನ್ನೇ ಗುರಿಯಾಗಿರಿಸಿ ಈ ದೇಶದಿಂದ ಸನಾತನ ಧರ್ಮವನ್ನು ಕಿತ್ತೆಸೆಯುವ ಸಲುವಾಗಿ ನಡೆಯುತ್ತಿರುವ ಷಡ್ಯಂತ್ರದ ಭಾಗವೆಂದರೂ ಅತಿಶಯೋಕ್ತಿಯಲ್ಲ. ಕರಡನ್ನು ಸಿದ್ಧಪಡಿಸುವ ತಂಡದಲ್ಲಿ ಇದ್ದ ಪ್ರತಿಯೊಬ್ಬನು ಸನಾತನ ಧರ್ಮದ ವಿರೋಧಿಯೇ! ಸಾಮಾನ್ಯನಿಗೂ ಅರ್ಥವಾಗುವ ಈ ಷಡ್ಯಂತ್ರ ಶಿಕ್ಷಿತರು ಎನ್ನಿಸಿಕೊಂಡ ವರ್ಗಕ್ಕೆ ಅರ್ಥವಾಗದೇ ಇರೋದು ವಿಪರ್ಯಾಸ. ಕಪ್ಪುಚರ್ಮದ ಬ್ರಿಟಿಷರನ್ನೇ ನಾನು ಅಳವಡಿಸಿದ ಶಿಕ್ಷಣ ವ್ಯವಸ್ಥೆ ಉತ್ಪಾದನೆ ಮಾಡುತ್ತದೆ ಎಂಬ ಮೆಕಾಲೆ ಅಣಿಮುತ್ತುಗಳು ಅಕ್ಷರಶಃ ನಿಜವಾಗಿರೋದು ಅಪ್ಪಟ ಸತ್ಯ. ಒಂದು ಕಾನೂನನ್ನು ರಚಿಸುವಾಗ ಇತ್ತಂಡಗಳ ವಾದವನ್ನು ಆಲಿಸಬೇಕೆಂಬ ನಿಯಮವನ್ನೇ ಮರೆತ ಸರಕಾರ ತನ್ನ ಭಟ್ಟಂಗಿಗಳ ನೆರವಿನಿಂದ ತನ್ನ ಅಂತ್ಯಕ್ಕೆ ತಾನೇ ಹೊಂಡ ತೋಡುತ್ತಿದೆ!

ಈ ನಿಷೇಧದ ಪಟ್ಟಿಯಲ್ಲಿ ಹಿಂದೂಗಳ ನಂಬಿಕೆಗಳನ್ನು ಹೊರತುಪಡಿಸಿ ಉಳಿದವ್ಯಾವುವು ಕಾಣದೇ ಇರುವುದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ. ಈ ಕಾನೂನೇನಾದರೂ ಜಾರಿಗೆ ಬಂದರೆ ನಾಗತಂಬಿಲ, ನಾಗ ಪೂಜೆ, ನಾಗ ಮಂಡಲ, ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ, ಭೂತ ಕೋಲ, ಪರ್ವ, ವಾಸ್ತು ಹೋಮ, ಭೂಮಿ ಪೂಜೆ, ಅಡ್ಡ ಪಲ್ಲಕ್ಕಿ, ಪಾದ ಪೂಜೆ, .... ಯಾವುದನ್ನೂ ಮಾಡಬಾರದು. ರುದ್ರಾಕ್ಷಿ ಧರಿಸಬಾರದು, ಜ್ಯೋತಿಷ್ಯ, ವಾಸ್ತು ಕೇಳಬಾರದು, ಹೇಳಲೂ ಬಾರದು ಹೀಗೆ ಯಾವುದು ನಮ್ಮ ಜೀವನದ ಅವಿಭಾಜ್ಯ ಅಂಗಗಳಿವೆಯೋ ಅವೆಲ್ಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಷ್ಟಕ್ಕೂ ನಾಗಾರಾಧನೆ, ರುದ್ರಾಕ್ಷ, ಭೂತಕೋಲ, ಜ್ಯೋತಿಷ, ವಾಸ್ತುಶಾಸ್ತ್ರ ಇವೇ ಮುಂತಾದುವುಗಳನ್ನು ನಂಬುವವರಿಂದ ಸಮಾಜಕ್ಕಾಗುವ ಸಮಸ್ಯೆಯಾದರೂ ಏನು? ಮಾನಸಿಕವಾಗಿ ಖಿನ್ನರಾದ, ಆರ್ಥಿಕವಾಗಿ ತೊಂದರೆಗೊಳಗಾದ ಅಥವಾ ಇನ್ನಾವುದೇ ಸಮಸ್ಯೆಗೊಳಗಾದ ಜನ ನಾಗಾರಾಧನೆ, ಕೋಲ, ಜ್ಯೋತಿಷಿ ಹೇಳಿದ ಯಾವುದೇ ಪೂಜೆ ಪುನಸ್ಕಾರ ಮಾಡಿದರೆ ಈ ಸರ್ಕಾರಕ್ಕೇನು ನಷ್ಟ? ಇವತ್ತು ನಾಗಾರಾಧನೆ ನಿಷೇಧಿಸಿದವರು ನಾಳೆ ದೇವಾಲಯಗಳಲ್ಲಿ ಪೂಜೆ ಮಾಡುವುದು ನಿಷೇಧಿಸಲಾರರು ಎಂಬುದಕ್ಕೆ ಏನು ಗ್ಯಾರಂಟಿ?

ರುದ್ರಾಕ್ಷ! ಶುದ್ಧ ನೀರು, ಶುದ್ಧ ಆಹಾರ, ಬೆಂಕಿ ಮುಂತಾದುವುಗಳ ಮೇಲೆ ಹಿಡಿದಾಗ ಪ್ರದಕ್ಷಿಣಾಕಾರವಾಗಿ ಅದು ಸುತ್ತುತ್ತದೆಯೆಂದಾದರೆ ಅದರಲ್ಲೇನೋ ಶಕ್ತಿ ಇರಲೇಬೇಕಲ್ಲವೆ? ಹೌದು ಸಾಧು ಸನ್ಯಾಸಿಗಳು ಅರಣ್ಯದಲ್ಲಿ ಅಲೆಯುವ ಸಂದರ್ಭದಲ್ಲಿ ಸಿಕ್ಕ ನೀರು, ಆಹಾರವನ್ನು ಪರೀಕ್ಷಿಸಲು ಬಳಸುತ್ತಿದ್ದುದು ರುದ್ರಾಕ್ಷವನ್ನೇ. ಅದು ಧರಿಸಿದವನ ದೇಹದ ಸುತ್ತಲಿನ ಕಾಂತೀಯ ವಲಯವನ್ನು ಪ್ರಭಾವಿಸಿ ಅದನ್ನು ಶುದ್ಧಗೊಳಿಸುತ್ತದೆ. ಅಂದರೆ ನಕರಾತ್ಮಕ ವ್ಯಕ್ತಿಗಳ ವಿರುದ್ಧ ಅದೊಂದು ಕವಚದಂತೆ ವರ್ತಿಸುತ್ತದೆ ಮಾತ್ರವಲ್ಲ ರಕದೊತ್ತಡವನ್ನು ತಗ್ಗಿಸುತ್ತದೆ. ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದನ್ನು ಧರಿಸುವುದು ಹಾಗೂ ಮಾರುವುದನ್ನು ಮೂಢನಂಬಿಕೆ ಎಂದು ನಿಷೇಧಿಸಲು ಹೊರಟಿರುವ ಸರಕಾರಕ್ಕೆ ಏನೆನ್ನಬೇಕು? ಇದರ ಬದಲು ಭದ್ರಾಕ್ಷವನ್ನು ರುದ್ರಾಕ್ಷ ಎಂದು ಹೇಳಿ ಮಾರುವ ಕಳ್ಳವ್ಯಾಪಾರಿಗಳನ್ನು ನಿಯಂತ್ರಿಸಲಿ.

ಮಾಟ, ವಶೀಕರಣವನ್ನು ನಿಷೇಧಿಸಬೇಕೆನ್ನೆವುದೇನೋ ಸರಿ. ಆದರೆ ಇವುಗಳನ್ಯಾರಾದರೂ ಇನ್ನೊಬ್ಬರಿಗೆ ಹೇಳಿ ಮಾಡುತ್ತಾರೆಯೇ? ಇಂಥವರೇ ಮಾಡಿದ್ದೆಂದು ಹೇಗೆ ಪತ್ತೆ ಹಚ್ಚಬಲ್ಲರು? ಅದನ್ನು ಪತ್ತೆಹಚ್ಚಹೊರಟವರು ಕೂಡಾ ಮೂಢನಂಬಿಕೆಯುಳ್ಳವರೆಂದೇ ಆಯಿತಲ್ಲ! ಯಾರಾದರೂ ದೂರು ಕೊಟ್ಟರೆ ದೂರು ಕೊಟ್ಟವರು ಕೂಡಾ ಅದನ್ನು ನಂಬಿದಂತೆ ಆಯಿತಲ್ವೇ? ಈಗ ಶಿಕ್ಷೆ ಯಾರಿಗೆ? ಮಾಟ ಮಾಡಿದವನಿಗೋ? ದೂರು ಕೊಟ್ಟವನಿಗೋ? ಪೊಲೀಸರಿಗೋ? ಅಥವಾ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೋ? ಕಾನೂನು ರೂಪಿಸಿದವನಿಗೋ?! ಪ್ರಾಣಿ ಬಲಿ ನಿಷೇಧಿಸಬೇಕೆನ್ನುವವರು ದಿನನಿತ್ಯ ಹಲಾಲ್/ಕುರ್ಬಾನಿ ಹೆಸರಲ್ಲಿ ನಡೆಯುವ ಗೋಹತ್ಯೆಯನ್ನು ಯಾಕೆ ವಿರೋಧಿಸುವುದಿಲ್ಲ? ಪ್ರಾಣಿ ಬಲಿಯಂತೆಯೇ ಕೇವಲ ತಿನ್ನುವುದಕ್ಕಾಗಿಯೇ ಪ್ರಾಣಿಗಳನ್ನು ಕೊಲ್ಲುವುದನ್ನು ಕೂಡಾ ನಿಷೇಧಿಸಬೇಕಲ್ಲವೆ? ಯಾರೇ ಸ್ವಾಮೀಜಿಯಾಗಲಿ ನನ್ನ ಪಾದ ಪೂಜೆ ಮಾಡಿ ಅಂತ ಕೇಳಿಕೊಳ್ಳುತ್ತಾರೆಯೇ ಅಥವಾ ಒತ್ತಾಯಪಡಿಸುತ್ತಾರೆಯೇ? ಅದು ಭಕ್ತರ ನಿಲುಮೆಯಲ್ಲದೆ ಮತ್ತೇನು? ಇವತ್ತು ಪಾದಪೂಜೆ ನಿಷೇಧಿಸುವವರು ನಾಳೆ ಹಿರಿಯರ ಕಾಲಿಗೆ ಅಡ್ಡ ಬೀಳುವುದನ್ನು/ಅಭಿವಾದನೆಯನ್ನು ನಿಷೇಧಿಸುವುದಿಲ್ಲ ಎಂಬುದಕ್ಕೆ ಸಾಕ್ಷಿ ಏನು? ಇವತ್ತು ರುದ್ರಾಕ್ಷಿ ಮಾಲೆ ಧರಿಸಬಾರದೆಂದವರು ನಾಳೆ ತಿಲಕ ಹಚ್ಚುವುದನ್ನೂ/ಭಸ್ಮ/ಗೋಪಿ ಧಾರಣೆಯನ್ನು ಮೌಢ್ಯವೆಂದಾರು!

ಜ್ಯೋತಿಷ್ಯವನ್ನು ಮೌಢ್ಯವೆನ್ನುವವರಿಗೆ ಜ್ಯೋತಿಷ್ಯ ಎಂದರೇನು ತಿಳಿದಿದೆಯೇ? ಜ್ಯೋತಿಷ್ಯವೆಂಬುದು ಗಣಿತ. ನಿಖರ ಲೆಕ್ಕಾಚಾರದ ಮೇಲೆ ಸಿಗುವ ಗ್ರಹಗಳ ಕೋನ/ಸ್ಥಿತಿ, ಚಲನೆಯನ್ನು ಆಧರಿಸಿ ಅದರ ಫಲವನ್ನು ಹೇಳಲಾಗುತ್ತದೆ. ಇವತ್ತಿಗೂ ನಮ್ಮ ಪಂಚಾಂಗಗಳ ಗ್ರಹಣ, ಮಳೆನಕ್ಷತ್ರ, ಹುಣ್ಣಿಮೆ/ಅಮವಾಸ್ಯೆ, ಸಂಕ್ರಮಣ ಹೀಗೆ ಪ್ರತಿಯೊಂದು ನಿಖರವಾಗಿರುತ್ತದೆಯಲ್ಲವೆ. ಪಂಚಾಂಗಗಳೂ ಕೂಡಾ ಮೌಢ್ಯದ ಭಾಗವೇ? ಜ್ಯೋತಿಷ್ಯ ಕಲಿಯದೆ ದೂರದರ್ಶನಗಳಲ್ಲಿ ಜನರನ್ನು ಯಾಮಾರಿಸುವ ಕಳ್ಳ ಜ್ಯೋತಿಷಿಗಳನ್ನು ನಿಗ್ರಹಿಸಬೇಕೆ ಹೊರತು ಜ್ಯೋತಿಷ್ಯವನ್ನೇ? ಅಷ್ಟಮಂಗಲ ಪ್ರಶ್ನೆಯಿಡುವಾಗ ಆ ಜಾಗದ ಅರಿವಿಲ್ಲದ ಎಲ್ಲಿಂದಲೋ ಕರೆಸಿದ ಪುದುವಾಳ/ಜ್ಯೋತಿಷಿ ನಿಖರ ಮಾಹಿತಿಯನ್ನು(ಇಂತಹ ಸ್ಥಳದಲ್ಲಿ ಇಂತಹ ವಸ್ತು ಇದೆ, ಇಂತಹ ಘಟನೆ ನಡೆದಿದೆ) ಹೇಳುತ್ತಾರಾದರೆ ಅಲ್ಲೇನೋ ವಿಶೇಷವಿರಲೇಬೇಕಲ್ಲವೆ? ಹೌದು. ನಮ್ಮ ನಿಜವಾದ ಸಮಸ್ಯೆ ಇರುವುದೇ ಅತೀಂದ್ರಿಯತ್ವವನ್ನು ಕೂಡಾ ವಿಜ್ಞಾನದೊಂದಿಗೆ ಮೇಳೈಸಲು ಯತ್ನಿಸುವುದರಲ್ಲಿ! ಕಲ್ಪನೆಗೆ ಮೀರಿದ್ದನ್ನು ಕಲ್ಪನಾತೀತ ಧ್ಯಾನ/ಶಕ್ತಿಯಿಂದ ಕಂಡುಕೊಳ್ಳಬೇಕೆ ಹೊರತು ಜಡ ವಸ್ತುಗಳ ಪ್ರಯೋಗದಿಂದಲ್ಲ!

ಕಾಂತೀಯ ಅಲೆಗಳು ಪರಿಣಾಮ ಬೀರುತ್ತವೆ ಎನ್ನುವ ಕಾರಣಕ್ಕಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುತ್ತಾರೆ. ಚರ್ಚು ಅಥವಾ ಮಸೀದಿ ಕಟ್ಟಿದಂತೆ ಸಿಕ್ಕ ಸಿಕ್ಕ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸೋದಿಲ್ಲ. ಅಲ್ಲದೆ ದೇವಾಲಯದ ಗರ್ಭಗುಡಿ ಇಂಥಹುದೇ ಆಕಾರದಲ್ಲಿರಬೇಕು ಹಾಗೂ ಅಷ್ಟಬಂಧದ ಮೂಲಕವೇ ವಿಗ್ರಹ ಪ್ರತಿಷ್ಠಾಪಿಸಬೇಕೆನ್ನುವ ಕ್ರಮವಿರುತ್ತದೆಯೆಂದಾದರೆ ಅದಕ್ಕೇನೋ ಕಾರಣ ಇರಬೇಕಲ್ಲವೆ? ನಮಗೆ ತಿಳಿದಿರದಿದ್ದ ಮಾತ್ರಕ್ಕೆ ಇವುಗಳೆಲ್ಲ ಮೂಢನಂಬಿಕೆಗಳೇ? ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ವಸ್ತುವನ್ನು ಧ್ಯಾನಿಸುವ ಹಾಗೂ ಚಿಟಿಕೆ ಹೊಡೆಯುವಷ್ಟರಲ್ಲಿ ಧ್ಯಾನವನ್ನು ಬೇರೆಡೆಗೆ ಹೊರಳಿಸಿ ಮರಳಿ ಬರುವ ಸಾಧನೆಯ ಪ್ರಾತ್ಯಕ್ಷಿಕೆಯನ್ನು ಕೆಲವು ಸಾಧುಗಳನ್ನು ಒಗ್ಗೂಡಿಸಿಕೊಂಡು ದಲಾಯಿ ಲಾಮಾ ಪ್ರಾತ್ಯಕ್ಷಿಕೆ ನೀಡಿದಾಗ ಅದುವರೆಗೆ ಮಿದುಳೇ ಎಲ್ಲವನ್ನು ನಿಯಂತ್ರಿಸುತ್ತದೆ ಎಂದು ಸಾಧಿಸುತ್ತಾ ಬಂದಿದ್ದ ವಿಜ್ಞಾನಿ ಬಳಗ ತಮ್ಮ ಕ್ರಿಯೆಗಳಿಂದ ಮೆದುಳನ್ನೇ ನಿಯಂತ್ರಿಸುವ ಪರಿಯನ್ನು ಕಂಡಾಗ ನಿಬ್ಬೆರಗಾಗಿತ್ತು. ಹೀಗೆ ಅಲ್ಲಿಂದಾಚೆಗೆ ವಿಜ್ಞಾನಿಗಳು ಹೇಗೆ ನಮ್ಮ ಮಾತು ಮಿದುಳನ್ನು ತಲುಪಿ ತನ್ಮೂಲಕ ಹೇಗೆ ದೇಹವನ್ನು ನಿಯಂತ್ರಿಸಬಲ್ಲುದು ಎಂದು ಅರಿತರು. ಮಾತ್ರವಲ್ಲ ಔಷಧ ಕೊಡುವುದು ಮಾತ್ರವಲ್ಲ ಔಷಧ ಕೊಡುವಾತನ ಒಂದು ಹಿತವಾದ ಮಾತು, ಔಷಧ ತೆಗೆದುಕೊಂಡಿದ್ದೇನೆ ಹಾಗಾಗಿ ಗುಣವಾಗುತ್ತದೆ ಎಂಬ ನಂಬಿಕೆ ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆಯಲ್ಲ. ಇವನ್ನೆಲ್ಲಾ ಮೂಢನಂಬಿಕೆ ಎಂದು ಬದಿಗೆ ಸರಿಸಬೇಕಾದರೆ ಮನೋವಿಜ್ಞಾನವನ್ನೇ ಮೂಢನಂಬಿಕೆ ಎನ್ನಲೇ ಬೇಕಾಗುತ್ತದೆಯಲ್ಲವೆ?

ಮೊಹರಂ ಹೆಸರಿನಲ್ಲಿ ಮುಸ್ಲಿಂ ಯುವಕರು ಮೈ, ಕೈ ಸೇರಿದಂತೆ ದೇಹವನ್ನೆಲ್ಲ ಚಾಕು ಗಳಿಂದ ಕೂಯ್ದುಕೊಂಡು ಒಂದು ಜೀವವನ್ನು ಉಳಿಸಬಲ್ಲ ರಕ್ತವನ್ನು ರಸ್ತೆಗೆ ಚಲ್ಲುವುದು ಸಿದ್ದ ರಾಮಯ್ಯ ನವರಿಗೆ ಮೌಢ್ಯವೆನಿಸಲಿಲ್ಲವೆ? ಸುನ್ನತ್ ಹೆಸರಿನಲ್ಲಿ ಸಣ್ಣ ಮಕ್ಕಳ ಮರ್ಮಾಂಗಕ್ಕೆ ಕತ್ತರಿ ಹಾಕೋದು ಇವರಿಗೆ ಮೌಡ್ಯ ಎನಿಸುವುದಿಲ್ಲವೇ? ಊರಿಡೀ ಕೇಳುವಂತೆ ಹತ್ತಾರು ಮೈಕುಗಳನ್ನಳವಡಿಸಿ ಕಿರುಚುವುದು, ಟೋಪಿ ಧರಿಸುವುದು, ಕ್ರಿಶ್ಚಿಯನ್ನರು ಕೊರಳಲ್ಲಿ ಧರಿಸುವ ಶಿಲುಭೆ, ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದು ಪ್ರಾರ್ಥನೆ ಮಾಡುವುದು ಇವುಗಳೆಲ್ಲಾ ಮೌಢ್ಯತೆಯಲ್ಲದೆ ಮತ್ತೇನು?

ಹಿಂದೂಗಳ ನಂಬಿಕೆಗಳನ್ನೆಲ್ಲಾ ಮೂಢನಂಬಿಕೆಗಳು ಅಂತ ಹೇಳುವವರು ತಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಸ್ವಲ್ಪ ಯೋಚಿಸಬೇಕು. ವಿದೇಶೀ ಕಂಪೆನಿಗಳ ಜಾಹೀರಾತುಗಳಿಗೆ ಮಾರು ಹೋಗಿ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಆ ವಸ್ತುಗಳನ್ನು ಬಳಸುವ ನಮ್ಮ ಅಂಧಶೃದ್ಧೆಗಿಂತ ಯಾರಿಗೂ ಉಪದ್ರವ ಆಗದ ಈ ಮೇಲಿನ ನಂಬಿಕೆಗಳೇ ಮೇಲು ಅಂತ ಅನ್ನಿಸೋದಿಲ್ಲವೆ? ಫೇರ್ ಆಂಡ್ ಲವ್ಲಿಯಿಂದ ಸೌಂದರ್ಯ ವೃದ್ಧಿಸುವುದರ ಬದಲು ಮೊಡವೆಗಳಾದದ್ದೆ ಹೆಚ್ಚು! ಪೆಪ್ಸಿ, ಕೋಕ್ ಮುಂತಾದುವುಗಳು ಶೌಚಾಲಯ ಸ್ವಚ್ಛಗೊಳಿಸಲಷ್ಟೇ ಯೋಗ್ಯವಾಗಿದ್ದರೂ ಕಣ್ಣು ಮುಚ್ಚಿ ಅದನ್ನು ಕುಡಿಯುತ್ತೇವಲ್ಲ ಅದು ಮೂಢನಂಬಿಕೆಯಲ್ಲವೆ? ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳುವ ಉಪ್ಪಿರದ , ಹಲ್ಲುಗಳಿಗೆ ಮುಪ್ಪು ಬರಿಸುವ ಕೋಲ್ಗೇಟ್ ಬಳಸುವುದು ಎಷ್ಟೊಂದು ದೊಡ್ಡ ಮೂಢನಂಬಿಕೆ! ವಿದೇಶಗಳಲ್ಲಿ ಹಾನಿಕಾರಕವೆಂದು ನಿಷೇಧಿಸಿದ ಔಷದಿಗಳನ್ನು ಕಣ್ಣು ಮುಚ್ಚಿ ನುಂಗುವ ಹಾಗೂ ಪ್ರಪಂಚದ ಮೊದಲ ಹಾಗೂ ಏಕಾಮೇವದ್ವಿತೀಯ ಔಷಧ ಪದ್ದತಿ ಆಯುರ್ವೇದವನ್ನೇ ದೂರುವವರ ಮನಸ್ಥಿತಿಗೆ ಏನೆನ್ನಬೇಕು? ವಿವೇಕಾನಂದರು ಒಂದು ಮಾತು ಹೇಳಿದ್ದರು, "ಭಾರತೀಯವಾದುದನ್ನು ಮೊದಲು ಸ್ವೀಕರಿಸಿ ಆಮೇಲೆ ಪ್ರಶ್ನಿಸು. ಪಾಶ್ಚಾತ್ಯವಾದುದನ್ನು ಮೊದಲು ಪ್ರಶ್ನಿಸು, ಆಮೇಲೆ ಸ್ವೀಕರಿಸು". ನಾವು ಮಾಡುತ್ತಿರುವುದು ತದ್ವಿರುದ್ದ!

ತಮ್ಮದಾದ ಅಭಿಪ್ರಾಯವನ್ನು ಕಾನೂನು ಎಂಬ ಖಡ್ಗದಂಚಿನಲ್ಲಿರಿಸಿ ಜನರನ್ನು ಬಗ್ಗು ಬಡಿಯುವ ಆಲೋಚನೆಯಿಂದಲೇ ತಯಾರು ಮಾಡಿದಂತಿದೆ ಈ "ಮೂಢನಂಬಿಕೆ ವಿರೋಧಿ ಕಾನೂನು" ಅಷ್ಟಕ್ಕೂ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರವನ್ನು ಕೊಟ್ಟವರ್ಯಾರು? ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡು ಅವರ ಮೇಲೆ ತಮ್ಮದಾದ ಅಭಿಪ್ರಾಯವನ್ನು ಹೇರುವುದು ಸರ್ವಾಧಿಕಾರವಲ್ಲವೆ? ಒಬ್ಬನ ನಂಬಿಕೆ ಇನ್ನೊಬ್ಬನಿಗೆ ಮೂಢನಂಬಿಕೆಯಾಗಿ ಕಾಣಬಹುದು. ಹಾಗಂತ ಅದನ್ನು ನಿಷೇಧಿಸಬೇಕು ಎಂದರೆ ಹೇಗೆ? ಅಷ್ಟಕ್ಕೂ ಮೂಢ ನಂಬಿಕೆ ಎನ್ನುವ ಮೊದಲು ನಂಬಿಕೆ ಅಂದರೇನು ಅಂತ ಮೊದಲು ಸ್ಪಷ್ಟಪಡಿಸಬೇಕಲ್ಲವೆ? ಅಷ್ಟಕ್ಕೂ ನಂಬಿಕೆ ಎನ್ನುವುದು ವಿಜ್ಞಾನ ಶೋಧಿಸಿದ ಸತ್ಯ ಸಂಗತಿಯೇ ಆಗಿರಬೇಕೆಂದರೆ ಆಗ ಅದು ಸತ್ಯ ಎಂದು ಹೇಗಾಗುತ್ತದೆ? ವೈಜ್ಞಾನಿಕ ಸಂಶೋಧನೆಯೆನ್ನುವುದು ಹಿಂದಿನ ಸಂಶೋಧನೆಗಳ ಮೇಲೆ, ತತ್ವಗಳ ಮೇಲೆ ಆಧರಿತವಾಗಿರುತ್ತದೆ. ಹಾಗಾಗಿ ಅದು ಸತ್ಯವೆಂದಾದರೆ ಎಷ್ಟು ಕಾಲದವರೆಗೆ? ಯಾಕೆಂದರೆ ಯಾವುದೇ ವೈಜ್ಞಾನಿಕ ಸಂಶೋಧನೆ ಅದು ನಿಂತಿರುವ ಬುಡ ಅಲುಗಾಡಿದಾಗ ಅದು ಬಿದ್ದು ಹೋಗುವುದು ಸಹಜ. ಹಾಗಾದರೆ ನಂಬಿಕೆ ವಿಜ್ಞಾನದ ತಳಹದಿಯ ಮೇಲೆಯೇ ನಿಂತಿರಬೇಕು ಎನ್ನುವುದು ಕೂಡಾ ಒಂದು ಭ್ರಮೆ ಅರ್ಥಾತ್ ಮೂಢನಂಬಿಕೆಯೇ ಆಯಿತಲ್ಲ! ಒಂದು ಸಮಾಜದ ನಡೆನುಡಿಗಳನ್ನು ಕಾನೂನಿಂದ ನಿಯಂತ್ರಿಸಬಹುದು ಎಂದು ಹೊರಟಿರುವ ಸರಕಾರ ತಾನೇ ಮೌಢ್ಯದಲ್ಲಿ ಬಿದ್ದು ತೊಳಲಾಡುತ್ತಿದೆ ಅನ್ನಲಡ್ಡಿಯಿಲ್ಲ ಅಲ್ಲವೇ?
 




 

ಬುಧವಾರ, ಅಕ್ಟೋಬರ್ 23, 2013

ಚಳಿ

ಮಧುರ ಸ್ವಪ್ನವ ಒರೆವ ಬಯಕೆಯು
ಮರಳಿ ಕರೆದಿರೆ ನಿದಿರೆ ಲಲನೆಯು
ಬೀಸುತಿರಲು ಶೀತ ತಂಗಾಳಿ
ತಂಗದಿರನಿಗೂ ಚಳಿಯ ನಡುಕವೋ

ಮಂಗಳವಾರ, ಅಕ್ಟೋಬರ್ 22, 2013

ಶೀತ ಮಾರುತ

ಶುಭ್ರ ಶೀತಲ ಮರುತ ಬೀಸಿರೆ
ವರ್ಷಧಾರೆಯು ಪುಳಕಗೊಳಿಸಿರೆ
ಶಯ್ಯೆ ಕರೆದಿದೆ ಪವಡಿಸೆಂದು
ನಿದಿರೆ ಲಲನೆಯ ಮಧುರ ಗಾನವಿಂದು

ಭಾನುವಾರ, ಅಕ್ಟೋಬರ್ 20, 2013

ಶಯನ

ನಿದಿರೆಯ ಮಧುರಾಲಿಂಗನಕೆ ಮನ ಬಯಸಿರಲು
ತನುವು ತನ್ನೊಲವ ಆಸನದಲಿ ಅಣಿಯಾಗುತಲಿಹುದು
ತನು ಮನಕೆ ಸಂತುಲಿತ ಶಯನವದು ಹಿತವು
ಪವಡಿಸಲು ಪವನಜನ ನೆನೆಯುವುದು ವಿಹಿತವು
ಅವನಯ್ಯ ಸಿಡುಕಿನೊಳು ಬೀಸುವುದ ಮರೆತರೆ
ತಹತಹಿಸಿ ನಡುಗುವುದು ಬಡಪಾಯಿ ದೇಹವು

ಶನಿವಾರ, ಅಕ್ಟೋಬರ್ 19, 2013

ಮುಗ್ಧೆ ಕುಮುದೆ

ತಿಳಿಗೊಳದ ಶುಭ್ರಜಲದ ನಡುವೆ
ರಾರಾಜಿಸುತಿಹಳು ಕುಮುದ|
ಮಡುವ ನಡುವಿನಲಿ ನಡು
ಬಳುಕುತಿಹುದದೇನು ವೈಯ್ಯಾರ||
ರವಿಯ ಮಂದಹಾಸದ ಕಿರಣಗಳವಳ ಸೋಕಲು
ಮುನಿಸು ಕರಗಿದೆ|
ಬೆಳಕು ವ್ಯಾಪಿಸೆ ಜಗದಿ ಹರುಷ ಹೊಮ್ಮಿತು ಮನದಿ
ಮುದುಡಿದ ತಾವರೆ ಅರಳಿದೆ||

ನಮೋ ನಮೋ...

1. ಅಂದೊಬ್ಬ ನರೇಂದ್ರ ತನ್ನ ವಾಗ್ಝರಿಯ ಮೂಲಕ ಭಾರತವನ್ನು ಜಗದ್ಗುರು ಎಂದು ಜಗತ್ತು ಗುರುತಿಸುವಂತೆ ಮಾಡಿದ|
ಇಂದೊಬ್ಬ ನರೇಂದ್ರ ತನ್ನ ಕೃತಿಯ ಮೂಲಕ ಭಾರತವನ್ನು ಮತ್ತೆ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಹೊರಟಿದ್ದಾನೆ||

2. ನರೇಂದ್ರ ಮೋದಿ ಭಾರತದ ಅಭಿವೃದ್ಧಿಯ ಹಾದಿ
ಕಾಂಗ್ರೆಸ್ ದೇಶವನ್ನು ಮಸಣ ಮಾಡಿದ ಬೀದಿ

3.  ಮೋದಿಗೆ ನೀಡಿದರೆ ಮತ
 ಚಲಿಸುವುದು ಭಾರತದ ಅಭಿವೃದ್ದಿಯ ರಥ|
 ಸರಿಯಾಗಿರಲಿ ನಮ್ಮೆಲ್ಲರ ಪಥ

 ಬರೆಯೋಣ ಭಾರತದ ಔನ್ನತ್ಯದ ಕಥಾ||

4. ಗುಜರಾತಿನ ಒಬ್ಬ ಮುದುಕ ತನ್ನ ಸ್ವಾರ್ಥಕ್ಕಾಗಿ ದೇಶ ಒಡೆಯುವುದು ಹೇಗೆಂದು ತೋರಿಸಿಕೊಟ್ಟ!
ಇನ್ನೊಬ್ಬ ನಾಯಕ ಪ್ರಾಂತಗಳನ್ನು ಒಗ್ಗೂಡಿಸಿ ಅಖಂಡತೆ ಸಾಧಿಸುವುದು ಹೇಗೆಂದು ತೋರಿಸಿದ!!
ಮಗದೊಬ್ಬ ಹಿಂದೂಗಳನ್ನು ಒಗ್ಗೂಡಿಸುವುದು ಹೇಗೆಂದು ತೋರಿಸಿ ತಾನು ಭೀಷ್ಮನಂತೆ ಬದುಕಿದ!!!
ಈಗೊಬ್ಬ ಯುವಕ ಹಿಂದೊಮ್ಮೆ ಸಾರ್ವಭೌಮನಾಗಿ ಮೆರೆದಿದ್ದ ದೇಶವನ್ನು ಮತ್ತೆ ಚಕ್ರವರ್ತಿ ಪೀಠದಲ್ಲಿ ಕುಳ್ಳಿರಿಸಹೊರಟಿದ್ದಾನೆ!!!!
ಅವನಿಗಾಗಿ ನಮ್ಮ ಮತ...ಅದರಿಂದ ದೇಶಕ್ಕೆ ಹಿತ...!!!!!

5. ನಿಶೆಯ ನಶೆಯಲ್ಲಿ ಮುಳುಗಿರುವ ಭಾರತದಲ್ಲಿ ಸೂರ್ಯೋದಯವಾಗುತ್ತಿದೆ...!
ಪೂರ್ವ ದಿಕ್ಕಿನಲ್ಲಲ್ಲ...ಪಶ್ಚಿಮದಲ್ಲಿ ....ಗುಜರಾತಿನಲ್ಲಿ...!!!
ನಮೋ....!

6. ನವ ವರುಷಗಳಲ್ಲಿಯೂ ನವ ನವೀನ ಹಗರಣಗಳಿಂದ ಹಣದ ಬೆಲೆ ಕುಸಿದು ಹೆಣಗುತ್ತಿರುವ ಭಾರತ.

7.  ಚಹದಂಗಡಿಯಿಂದ ಪ್ರಧಾನಿ ಅಭ್ಯರ್ಥಿಯವರೆಗೆ

8. ಅಭಿವೃದ್ಧಿಯ ಪಥ ಗುಜರಾತಿಗೆ ಹಿತ

9. ಮೋದಿ ಮಾಡಿದರು ಮೋಡಿ ಗುಜರಾತ್ ಹೇಗಿದೆ ನೋಡಿ

10. ನವ ಭಾರತದ ಕನಸು ನಿಮ್ಮ ಮತದಿಂದ ನನಸು

ನವರಾತ್ರಿ

ಬರಲೊಲ್ಲೆ ಬರಲೊಲ್ಲೆ
ಎಂದವಳು ಉಲಿಯುತಿರೆ
ಶಂಕೆ ಮೂಡಿಹುದು ಮನದಿ
ನಿದಿರಾ ದೇವಿಗೂ ಹಬ್ಬದ ಸಡಗರವೇ?

ಎದ್ದೇಳು ಹಿಂದೂ

ಭೂಮಿಯನ್ನು ಅಗೆದು ಮಾರಿದರು
ದೇವಾಲಯಗಳಿಗೆ ಕನ್ನವಿಕ್ಕಿದರು
ಭೂಮಿಯೊಳಗೆ ಹುದುಗಿಟ್ಟ ನಿಧಿಯ ಬಗ್ಗೆ ಸಾಧು ಹೇಳಿದೊಡನೆ ಅದನ್ನೂ ಅಗೆದು ಮಾರಲು ಹೊರಟಿದ್ದಾರೆ...!

ಎದ್ದೇಳು ಓ ನನ್ನ ಹಿಂದೂ ಬಂಧು
ಭರತ ಮಾತೆಯ ಸಂಕಲೆಯ ಬಿಡಿಸು ಇಂದು
ಭಾವವದು ಬಲಿಯದಿರೆ ನಾವೆಲ್ಲ ಒಂದು
ಉಳಿಯದು ಈ ಭೂಮಿ ಮುಂದೆ ಎಂದೆಂದು
ಎದ್ದೇಳು ಉರಿದೇಳು ಉಳಿಸೇಳು ಹಿಂದೂ

ಶುಕ್ರವಾರ, ಅಕ್ಟೋಬರ್ 11, 2013

ಮಧುರಾಲಿಂಗನ

ನಿದಿರೆಯ ಮಧುರಾಲಿಂಗನಕೆ
ಮನಸೋತು ಎನ್ನಧರಗಳು ಅದುರುತಿರೆ
ನೇತ್ರದ್ವಯಗಳು ನಾಚಿರಲು
ಕಣ್ ರೆಪ್ಪೆಗಳು ಅಪ್ಪಿ ಕುಳಿತಿವೆ
-ಶುಭರಾತ್ರಿ

ಗುರುವಾರ, ಅಕ್ಟೋಬರ್ 10, 2013

ತುಳಸಿಯ ಮೋಡಿಯ ನೋಡಲು ಮತ ನೀಡಿ.....

ತುಳಸಿಯ ಮೋಡಿಯ ನೋಡಲು ಮತ ನೀಡಿ.....

ಕಾಲವು ಮುನಿಯಿತೋ ದೇಶದ ಅಳಿವೋ
ಕಾಂಗ್ರೆಸ್ ಕಳೆಯು ಜನಿಸಿದ ಪರಿಯು|
ಭಾರತಿ ನಲುಗಲು ಕಳೆಯದು ನಕ್ಕಿತು
ಇತಿಹಾಸದ ಇತಿಶ್ರೀಯಾಯಿತು||

ಮತೀಯ ಆಟವು ಮೆರೆಯಿತು
ನೀತಿಯ ಪಾಠವು ಮರೆಯಿತು|
ಧರ್ಮದ ಗ್ಲಾನಿಯಾಯಿತು
ದೇಶದ ಘನತೆಯು ಕುಸಿಯಿತು||

ಕಳೆಯದು ಹಬ್ಬಲು ಭರದಲಿ
ಜನತೆಯು ಕುಗ್ಗಿತು ಮನದಲಿ|
ದೇಶದ ಕೊಳೆಯ ತೊಳೆಯುವ ಹಂಬಲ
ತಿಳಿಗೊಳದಲಿ ಮೂಡಿತು ಕಮಲ||

ಪ್ರಕೃತಿ ಉಳಿಸಲು ತುಳಸಿಯ ಉದಯ
ದೇಶವ ಉಳಿಸಲು ದೇವಿಯ ಅಭಯ|
ಜನಮನದಲಿ ತುಳಸಿಯು ಬೆಳೆಯಲಿ
ಮುದುಡಿದ ತಾವರೆ ಅರಳಲಿ||

ದೇಶದಿ ಹಬ್ಬಿರುವ ಕಾಂಗ್ರೆಸ್ ಕಳೆ ಅಳಿಸಿ
ದೇಶದ ಸೌಂದರ್ಯ ಉಳಿಸಿ|
ತುಳಸಿ ಅಲೊವೆರಾ ಬೆಳೆಸಿ
ಜಗದ್ಗುರು ಭಾರತವ ಉಳಿಸಿ||

ವಂದೇ ಮಾತರಂ
-ರಾಜೇಶ ರಾವ್

ಅಭಿವೃದ್ದಿ

ಮೋದಿಗೆ ನೀಡಿದರೆ ಮತ
ಚಲಿಸುವುದು ಭಾರತದ ಅಭಿವೃದ್ದಿಯ ರಥ|
ಸರಿಯಾಗಿರಲಿ ನಮ್ಮೆಲ್ಲರ ಪಥ
ಬರೆಯೋಣ ಭಾರತದ ಔನ್ನತ್ಯದ ಕಥಾ||

ಮಂಗಳವಾರ, ಅಕ್ಟೋಬರ್ 1, 2013

ರಾಷ್ಟ್ರಭಾವ


ರಾಷ್ಟ್ರಭಾವ

              "ನಾನು ಶತ್ರುಗಳನ್ನು ಸದೆಬಡಿಯುವುದಕ್ಕೆ ಮುಂಚೆ ಮೃತ್ಯು ನನ್ನ ಮುತ್ತಿಕ್ಕಲು ಬಂದರೆ ನಾನು ಮೃತ್ಯುವನ್ನೇ ಯಮಸದನಕ್ಕಟ್ಟುತ್ತೇನೆ"

 

              ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮೇಜರ್ ಮನೋಜ್ ಕುಮಾರ್ ಪಾಂಡೆ ಎಂಬ ಅಪ್ರತಿಮ ಯೋಧ ಆಡಿದ ಮಾತು ಕೇಳಿದ ಎಂತಹವನಿಗಾದರೂ ರೋಮಗಳು ನಿಮಿರಿ ನಿಲ್ಲಲೇಬೇಕು. ನಮ್ಮ ಸೈನಿಕರೆಂದರೆ ಹಾಗೆಯೇ, ಪ್ರಾಣವನ್ನೇ ಪಣವಾಗಿಟ್ಟು ಜಯಸಿರಿಯನ್ನು ತಂದುಕೊಡುತ್ತಾರೆ. ಆದರೆ ದೇಶದ ದೌರ್ಭಾಗ್ಯ ನೋಡಿ. ಕೆಲವೇ ದಿವಸಗಳ ಹಿಂದೆ ಪಾಕಿಗಳು ನಮ್ಮ ಸೈನಿಕರೀರ್ವರ ರುಂಡ ಚೆಂಡಾಡಿದರು. ಐವರು ಯೋಧರ ಹತ್ಯೆ ಮಾಡಿದರು. ನಮ್ಮ ರಕ್ಷಣಾ ಸಚಿವ ಕೊಂದವರು ಪಾಕ್ ಸಮವಸ್ತ್ರದಲ್ಲಿ ಬಂದ ಭಯೋತ್ಪಾದಕರು ಎಂದು ಬಿಟ್ಟರು. ಇದನ್ನು ಸರಕಾರದ ಇಬ್ಬರು ಮಂತ್ರಿಗಳು ಸಮರ್ಥಿಸಿದ್ದೂ ಆಯಿತು. ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಸ್ತರದಲ್ಲಿ ಮುಖ ಉಳಿಸಿಕೊಳ್ಳಲು ಇಷ್ಟು ಸಾಕಿತ್ತು. ಅದೇ ಸಂದರ್ಭದಲ್ಲಿ ಬಿಹಾರದ ಜೆಡಿಯು ಸಚಿವ ಭೀಮ್ ಸಿಂಗ್ ಎಂಬಾತನಂತೂ ಜನರು ಸೇನೆ ಸೇರುವುದೇ ಸಾಯುವುದಕ್ಕೆ ಎಂದುಬಿಟ್ಟ. ಪ್ರತಿಭಟನೆಗಳಾದವು, ಪ್ರತಿಕೃತಿಗಳನ್ನು ದಹಿಸಲಾಯಿತು. ಕೆಲವೇ ದಿವಸ, ಎಲ್ಲರಿಗೂ ಮರೆತೇ ಹೋಯಿತು. ಸರಕಾರಕ್ಕೂ ಬೇಕಿದ್ದುದು ಅದೇ!

 

             ಯಾಕೆ ಹೀಗೆ? ಸೈನಿಕರೆಂದರೆ ಯಾಕಿಷ್ಟು ನಿಕೃಷ್ಟ ಭಾವ? ಪ್ರಧಾನಿಯಿಂದ ಹಿಡಿದು ಜನಸಾಮಾನ್ಯನವರೆಗೆ ದೇಶವೆಂದರೆ ಯಾಕೀ ಅಸಡ್ಡೆ? ದೇಶದ ಮೇಲೆ ದಾಳಿಯಾದಾಗ, ದೇಶದೆಲ್ಲೆಡೆ ಭಯೋತ್ಪಾದಕ ಕೃತ್ಯಗಳಾದಾಗ, ನಕ್ಸಲರು ನಾಗರಿಕರ ಮೇಲೆ ದಾಳಿ ಮಾಡಿ ಕೊಂದಾಗ ಯಾಕೆ ಮನಸ್ಸು ರೊಚ್ಚಿಗೇಳುವುದಿಲ್ಲ? ನಮ್ಮ ದನ ಕರುಗಳ ಕತ್ತು ಸೀಳಿದಾಗ, ಪಕ್ಕದ ಮನೆಯ ಹುಡುಗಿಯೊಬ್ಬಳು ಲವ್ ಜಿಹಾದಿಗೆ ಬಲಿಯಾದಾಗ ಕುಟುಂಬಕ್ಕೆ ಕುಟುಂಬವೇ ಮತಾಂತರಗೊಂಡಾಗ ನಮ್ಮ ಅಂತಃಕರಣವೇಕೆ ಮಿಡಿಯೋದಿಲ್ಲ? ಹದಿಹರೆಯದ ಹುಡುಗ ಹುಡುಗಿಯರಲ್ಲಿ ದೇಶದ ಇತಿಹಾಸದ ಬಗ್ಗೆ ಕೇಳಿ ನೋಡಿ...ಉತ್ತರ ಶೂನ್ಯ! ನಮ್ಮ ಯುವ ಜನಾಂಗ ಸಿನಿಮಾ ನಟರನ್ನು ಹೀರೋಗಳಾಗಿ ಕಂಡು ಅವರನ್ನೇ ಅನುಕರಿಸುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಜಾಲಾಡುತ್ತಾ ಸರಸ  ಸಲ್ಲಾಪಗಳಲ್ಲಿ ಮುಳುಗೇಳುತ್ತಿದೆ. ಇತ್ತ ನಗರವಾಸಿಗಳು ಸೂಟು-ಬೂಟು-ಕೋಟು ಧರಿಸಿ ಪಾಶ್ಚಾತ್ಯರ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ ಅತ್ತ ಹಳ್ಳಿಗಳೂ ಪಾಶ್ಚಾತ್ಯಮಯವಾಗುತ್ತಿವೆ. ಪ್ರತಿಯೊಬ್ಬ ತಂದೆ ತಾಯಂದಿರು ತನ್ನ ಮಗ ವೈದ್ಯನೋ, ಇಂಜಿನಿಯರಾಗಿಯೋ ಹಣ ಸಂಪಾದಿಸಬೇಕೆಂದು ಬಯಸುತ್ತಾರಲ್ಲದೆ ಸೈನಿಕನಾಗಬೇಕು ಅಥವಾ ಸ್ವಯಂಸೇವಕನಾಗಬೇಕು ಎಂದು ಯಾಕೆ ಬಯಸೋದಿಲ್ಲ? ಪಕ್ಕದ ಮನೆಯಲ್ಲೇ ಶಿವಾಜಿ ಹುಟ್ಟಿ ಬರಬೇಕೆಂಬ ಮನಸ್ಸೇಕೆ?

"ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ|

ಸ್ವರ್ಗಾಪವರ್ಗಾಸ್ಪದಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್||

ಎಂದು ದೇವತೆಗಳೇ ಹಾಡಿ ಹೊಗಳಿದ ರಾಷ್ಟ್ರದಲ್ಲಿ ಹೀಗೇಕಾಗುತ್ತಿದೆ? ಎಲ್ಲೋ ತಪ್ಪಿದ್ದೇವೆ ಎಂದನ್ನಿಸುತ್ತಿಲ್ಲವೇ?

 

     "ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ!"

ಹೌದು, ನಾವು ಯಾರು, ಎಲ್ಲಿಂದ ಬಂದೆವು, ಹೇಗೆ ಬಂದೆವು, ಬದುಕಿನಲ್ಲಿ ಏನೇನು ಸಾಧಿಸಿದೆವು, ಏನೇನು ತಪ್ಪುಗಳನ್ನೆಸಗಿದೆವು ಎನ್ನುವುದನ್ನು ಅರಿಯದಿದ್ದರೆ ನಮಗೆ ವರ್ತಮಾನವು ಅರ್ಥವಾಗದು. ಭವಿಷ್ಯತ್ತಿನ ದಾರಿ ಕಾಣದು. ರಾಮಾಯಣವೇ ಗೊತ್ತಿಲ್ಲದವನಿಗೆ ರಾಮಸೇತುವಿನ ಮಹತ್ವ ಹೇಗೆ ತಿಳಿದೀತು? ಅಯೋಧ್ಯೆ ಎಂಬುದು ಪುಣ್ಯಭೂಮಿ ಎಂದು ಹೇಗೆ ಅರಿವಾದೀತು?

     ಪ್ರಪಂಚದ ನಾಗರೀಕತೆ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ನಾಗರೀಕತೆಯ ಉತ್ತುಂಗದಲ್ಲಿದ್ದವರು ನಾವು. ಚರಿತ್ರೆ ಕಣ್ಣು ಬಿಡುವ ಮೊದಲೇ ಒಂದು ರಾಷ್ಟ್ರವಾಗಿ ನಾವು ಅರಳಿ ನಿಂತಿದ್ದೆವು. ನಮ್ಮ ದೇಶ ಉಳಿದ ದೇಶಗಳಿಗೆ ಕಲೆ, ವಿಜ್ಞಾನಗಳನ್ನು ಅನುಗ್ರಹಿಸಿತ್ತು. ಶಾಸ್ತ್ರೀಯ ದೃಷ್ಟಿಯನ್ನೂ, ಸತ್ಯಾನ್ವೇಷಣೆಯ ವಿಧಾನವನ್ನೂ ತೋರಿಸಿಕೊಟ್ಟಿತ್ತು. ಸಂಕುಚಿತತೆಯ ಮಾಯೆಯ ಹರಿದು ಅನೇಕತೆಯಲ್ಲಿ ಏಕತೆಯನ್ನು ದರ್ಶಿಸುವ ಸಂಸ್ಕಾರವನ್ನು ತಿಳಿಸಿಕೊಟ್ಟಿತು. ವೇದಗಳೇ ಇಂತಹ ಉತ್ಕೃಷ್ಟ ಸಂಸ್ಕೃತಿಯ ತಾಯಿ ಬೇರು. ಹಾಗಾಗಿ ಭಾರತೀಯತೆಯನ್ನು ಮೂಲೋತ್ಪಾಟನೆ ಮಾಡುವ ಸಲುವಾಗಿಯೇ ನಾನು ವೇದಗಳ ಅನುವಾದದಲ್ಲಿ ತೊಡಗಿದ್ದೇನೆಂದು ಮ್ಯಾಕ್ಸ್ ಮುಲ್ಲರ್ ಮಹಾಶಯ ತನ್ನ ಹೆಂಡತಿಗೆ ಪತ್ರ ಬರೆದಿದ್ದ. ಮೆಕಾಲೆಯಂತೂ ಆಂಗ್ಲ ಶಿಕ್ಷಣವನ್ನು ಜಾರಿಗೊಳಿಸಿ ಇನ್ನಿಲ್ಲುಳಿಯುವವರು ಕಪ್ಪು ಚರ್ಮದ ಬ್ರಿಟಿಷರು ಅಂದಿದ್ದ. ಅದರ ಫಲವೇ ನಾವು ಇದು ಕಾಣುತ್ತಿರುವುದು. ನಾವು ನಮ್ಮ ಮಕ್ಕಳಿಗೆ ನೈಜ ಇತಿಹಾಸವನ್ನು ಹೇಳಿಕೊಡುತ್ತಿಲ್ಲ. ನಾವು ಕಣ್ಣು ಮುಚ್ಚಿಕೊಂಡು ನಮ್ಮ ಮಾಜಿ ಪಾಲಕರು ಅವರ ಸ್ವಾರ್ಥಕ್ಕಾಗಿ ಹಲವು ತಲೆಮಾರುಗಳ ಪರ್ಯಂತ ಅರೆದು ಕುಡಿಸಿದ ಅಸತ್ಯಗಳನ್ನೇ ಮೆಲುಕು ಹಾಕುತ್ತಾ ಆರ್ಯರು ವಿದೇಶೀಯರೆಂದೂ, ಎಲ್ಲಿಂದಲೋ ದಂಡೆತ್ತಿ ಬಂದು ದೇಶವನ್ನು ದೌರ್ಜನ್ಯದಿಂದ ಆಕ್ರಮಿಸಿ ತಮ್ಮ ಅಜ್ಞಾನವನ್ನೂ, ಮತ ಮೌಢ್ಯವನ್ನು ಎಲ್ಲರ ಮೇಲೆ ಹೇರಿದರೆಂದೂ, ಬಿಳಿಯ ದೊರೆಗಳು ಮತ್ತವರ ಈಗಿನ ಹಿಂಬಾಲಕರು ಹೇಳಿದ ಸುಳ್ಳು ಮಾತುಗಳನ್ನೂ, ಮತ ಮೌಢ್ಯದಿಂದ ಬರೆದ ಬರವಣಿಗೆಯನ್ನೂ ಶಾಶ್ವತ ಸತ್ಯಗಳೆಂದೂ ನಂಬುತ್ತಿದ್ದೇವೆ. ನಮ್ಮ ಚರಿತ್ರೆಯನ್ನು ದುರ್ಬುಧ್ಧಿಯಿಂದ ಭೃಷ್ಟಗೊಳಿಸಿದ ವಿದೇಶೀ ಪೀಡೆಯಿಂದ ಮುಕ್ತಿ ಹೊಂದಿದ ನಂತರವೂ ಅವರು ಭೃಷ್ಟಗೊಳಿಸಿದ್ದೇ ನಿಜವಾದ ಚರಿತ್ರೆ ಎಂದು ಭ್ರಮಿಸುತ್ತಿದ್ದೇವೆ.

 

   ಯಾವ ಶಿಕ್ಷಣ ನಮ್ಮನ್ನು ಮಣ್ಣಿನೊಡನೆ ಬೆಸೆಯುತ್ತಿತ್ತೋ, ಯಾವುದು ನಮಗೆ ನನ್ನ ದೇಶ, ನನ್ನ ಸಂಸ್ಕೃತಿ ಎಂಬುದನ್ನು ಹೃದಯದಲ್ಲಿ ಅಂಕುರಿಸಿ ಸದಾ ಜಾಗೃತಾವಸ್ಥೆಯಲ್ಲಿರಿಸುತ್ತಿತ್ತೋ ಅಂತಹ ಶಿಕ್ಷಣ ವ್ಯವಸ್ಥೆಯನ್ನು ಕಳೆದುಕೊಂಡೆವು. ಇದರಿಂದಾಗಿ ನಾವು ಈಗ ಚಿಂತನಾ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮಲ್ಲಿ ಆತ್ಮಾಭಿಮಾನ ಪುಟಿಯುತ್ತಿಲ್ಲ. ಆತ್ಮಗೌರವ ಮೊದಲೇ ಇಲ್ಲ ಎಂಬಂತಾಗಿದೆ. ಧರ್ಮಗ್ಲಾನಿಯಾಗಿ, ಜನ ಸಂಸ್ಕೃತಿ ವಿಹೀನರಾಗುತ್ತಿದ್ದಾಗ ಸೃಷ್ಟಿಗೊಂಡ ದಾಸ ಸಾಹಿತ್ಯದ ಪ್ರೇರಣೆಯಿಂದ ಮನೆಮನೆಗಳಲ್ಲಿ ಭಜನೆಗಳಾಗುತ್ತಿದ್ದವು. ಈಗ ಎಷ್ಟು ಮನೆಗಳಲ್ಲಿ ಭಜನೆ ಮಾಡುತ್ತಾರೆ, ದೀಪ ಉರಿಸುತ್ತಾರೆ, ವನದೇವಿ, ಭೂದೇವಿಗೆ ನಮಸ್ಕರಿಸುತ್ತಾರೆ? ಹಿರಿಯರೇ ಮಾಡದಿದ್ದ ಮೇಲೆ ಮಕ್ಕಳಿಗಾದರೂ ತಿಳಿಯೋದು ಹೇಗೆ?

 

     ಅದಕ್ಕಾಗಿಯೇ ನಮ್ಮ ಶಿಕ್ಷಣ ಪದ್ದತಿ ಬದಲಾಗಬೇಕಾಗಿದೆ. ಮಕ್ಕಳಿಗೆ ನೈಜ ಇತಿಹಾಸ ಬೋಧಿಸಬೇಕಾಗಿದೆ. ವಿಜ್ಞಾನದ ತುತ್ತ ತುದಿಯಲ್ಲಿದ್ದ ನಾಗರೀಕತೆಯನ್ನು ಮತ್ತೆ ಎತ್ತಬೇಕಾದರೆ ಮಣ್ಣಿನ ಕಣಕಣದಲ್ಲಿ ಬೆರೆಯುವ ವಿದ್ಯೆ ನೀಡಬೇಕಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಧಾರ್ಮಿಕ, ಲೌಕಿಕ ಶಿಕ್ಷಣ ದೊರೆತು ವೇದದಲ್ಲಿರುವ ವಿಜ್ಞಾನ ಹೊರಬರಬೇಕು. ಇದಕ್ಕಾಗಿ ಅಲ್ಲಲ್ಲಿ ನೆಲೆನಿಂತು ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಬೆನ್ನುಲುಬಾಗಿ ನಿಲ್ಲುವ ಅಧಿಕಾರ ವರ್ಗ ಬೇಕು. ಭಾರತೀಯತೆಯನ್ನು ಎತ್ತಿ ಹಿಡಿಯುವ ಸರಕಾರ ಅಧಿಕಾರಕ್ಕೆ ಬರಬೇಕು. ಆಗ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ ಮನಸ್ಸು ಬೆಳೆಯುತ್ತದೆ. ತಾನು ಕೂಡಾ ಅಂತಹುದನ್ನು ಉತ್ಪಾದಿಸಿ ವಿದೇಶದಲ್ಲೂ ದೇಶದ ಹೆಸರು ಪಸರಿಸಬೇಕೆಂಬ ಛಲ ಜನ ಮನದಲ್ಲಿ ಮೂಡುತ್ತದೆ. ದೇಶೀ ಭಾವ ಮುಂದಿನ ಪೀಳಿಗೆಗೂ ಪಸರಿಸುತ್ತದೆ.

 

   ಧರ್ಮ ಸಂಸ್ಕೃತಿಯಿಲ್ಲದೆ ದೇಶವಿಲ್ಲ. ಭವತಾರಿಣಿಯೂ ಭಾರತಿಯೂ ಒಬ್ಬಳೇ ಎಂಬ ಭಾವ ಮೂಡದಿದ್ದರೆ ಭಾರತ ಉಳಿಯುವುದಿಲ್ಲ. ನನ್ನ ಸಂಸಾರ, ನನ್ನ ಜಾತಿ, ನನ್ನ ಮಠ, ನಮ್ಮ ಸ್ವಾಮೀಜೀ ಎಂಬ ಸಂಕುಚಿತತೆ ತೊರೆದು ನನ್ನ ದೇಶ ನನ್ನ ಜನ ಎಂಬ ಸನಾತನ ಧರ್ಮ ನೀತಿಯನ್ನನುಸರಿಸದಿದ್ದರೆ ಹಿಂದೂ ಉಳಿಯಲಾರ, ಹಿಂದೂಸ್ಥಾನ ಉಳಿಯಲಾರದು.



 

--ವಂದೇ ಮಾತರಂ