ಪುಟಗಳು

ಸೋಮವಾರ, ನವೆಂಬರ್ 25, 2013

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ!

ಅಭಿವೃದ್ಧಿಯೇ...ಗಾಂಧಿ ವಂಶವೇ?

               ಪ್ರತಿಸಲ ನೀವು ರೈಲಿನಲ್ಲಿ ಹೋಗಬೇಕಾದರೆ ನೀವು ಮೂರು ನಾಲ್ಕು ತಿಂಗಳ ಹಿಂದೆ ಟಿಕೆಟ್ ಬುಕ್ ಮಾಡಿಸಿದ್ದರೂ ನಿಮ್ಮ ಆಸನ ದೃಢೀಕರಣಗೊಂಡಿರೋದಿಲ್ಲ. ಕೊನೆಗೂ ಎಷ್ಟೋ ಜನ ನಿರ್ವಾಹಕರನ್ನು ಕಾಡಿಬೇಡಿ ಆಸನ ಪಡೆದುಕೊಂಡೋ, ರೈಲಿನ ಬೋಗಿಗಳಲ್ಲಿ ಅಲ್ಲಲ್ಲಿ ಕೂತೋ 500-600 ಕಿ.ಮೀ ದೂರ ಪ್ರಯಾಣ ಮಾಡುತ್ತಾರೆ. ಅಲ್ಲದೇ ಬಸ್ಸುಗಳಲ್ಲಿಯೂ ಟಿಕೆಟ್ ಸಿಗದೇ ಕೊನೆಯ ಕ್ಷಣದವರೆಗೂ ಪರಿತಪಿಸಿ ಕೊನೆಗೆ ತಮ್ಮ ಪ್ರಯಾಣವನ್ನೇ ರದ್ದುಗೊಳಿಸುವುದೂ ಇದೆ. ಹಬ್ಬ ಹರಿದಿನಗಳಲ್ಲಿ ಇದೆಲ್ಲಾ ಮಾಮೂಲು. ನಗರ ಹಳ್ಳಿಗಳೆನ್ನದೆ ಗಿಜಿಗಿಟ್ಟುವ ಬಸ್ಸುಗಳು, ಆಟೋ ರಿಕ್ಷಾಗಳು, ಅಂತಹ ಬಸ್ಸುಗಳಲ್ಲಿ ಬಾಗಿಲುಗಳಲ್ಲೇ ನೇತಾಡುತ್ತಾ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಜನರು... ಯಾಕೆ ಹೀಗೆ? ಅಂದರೆ ಇರುವ ಜನರಿಗೆ ಬೇಕಾದಷ್ಟು ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ! ಇನ್ನೂ ನಗರಗಳಲ್ಲಂತೂ ಟ್ರಾಫಿಕ್ ಜಾಮಿನದ್ದೇ ದೊಡ್ಡ ಸಮಸ್ಯೆ. ಎಷ್ಟೋ ಸಲ ಖಾಲಿ ಬಸ್ಸುಗಳು ಓಡಾಡುವುದು, ಹೆಚ್ಚಿನ ಸಲ ಒಬ್ಬರೇ ಕಾರಿನಲ್ಲಿ ಓಡಾಡುವುದು, ಯಾರೋ ಒಬ್ಬ ಮಾಡಬಾರದ ಕಡೆ ತಿರುವು ತೆಗೆದುಕೊಳ್ಳೋದು, ಅಥವಾ ರಸ್ತೆಯಲ್ಲೇ ಬೇಕಾಬಿಟ್ಟಿ ತನ್ನ ವಾಹನ ನಿಲ್ಲಿಸಿ ಎಲ್ಲೋ ಹೋಗಿರೋದು...(ಇದು ಎಲ್ಲ ವಾಹನಗಳಿಗೂ ಅನ್ವಯ!) ಇಲ್ಲಿ ತಮ್ಮ ಬಗ್ಗೆ ಮಾತ್ರ ಯೋಚಿಸಿ ಉಳಿದವರಿಗೇನಾದರೆ ನನಗೇನು ಅನ್ನುವ ದಾರ್ಷ್ಟ್ಯ! ನಮ್ಮ ಜನರೂ ರಾಜಕಾರಣಿಗಳ ಹಾಗೆ ಯೋಚಿಸಲು ಆರಂಭಿಸಿದ್ದೇ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಲು ಒಂದು ಕಾರಣ ಅನ್ನಿಸೋದಿಲ್ವೇ?
               ನೀವು ಯಾವುದಾದರೂ ಸರಕಾರಿ ಕಛೇರಿಗೆ ಒಂದೋ ಪಡಿತರ ಚೀಟಿ ಮಾಡಿಸಲೋ, ಚುನಾವಣಾ ಗುರುತಿನ ಚೀಟಿ ಮಾಡಿಸಲೋ ಹೀಗೆ ಯಾವುದಾರೊಂದು ಕೆಲಸಕ್ಕೆ ಹೋಗಿಯೇ ಇರುತ್ತೀರಿ. ಆದರೆ ನಿಮ್ಮ ಕೆಲಸ ತಿಂಗಳುಗಟ್ಟಲೆ ಕಳೆದರೂ ಆಗುವುದೇ ಇಲ್ಲ. ಇನ್ನು ಆ ಕೆಲಸ ಪೂರ್ಣವಾದಾಗ ಪುನಃ ಅದೇ ಗುರುತುಪತ್ರವನ್ನು ನವೀಕರಿಸಬೇಕು ಎಂಬ ಆದೇಶ ಸರ್ಕಾರ ಹೊರಡಿಸುತ್ತದೆ. ಎಷ್ಟು ಕಿರಿಕಿರಿಯಾಗಬಹುದು? ಪ್ರತಿಯೊಬ್ಬರಿಗೂ ಅವರ ಸಮಯ ಅಮೂಲ್ಯ ತಾನೆ! ಪ್ರತಿಯೊಬ್ಬರು ಸರಕಾರಿ ಕಛೇರಿಗಳಿಗೆ, ಅಧಿಕಾರಿಗಳಿಗೆ ಯಾಕೆ ಛೀಮಾರಿ ಹಾಕುತ್ತಾರೆ? ಸಮಯ, ಲಂಚ, ಅಧಿಕಾರಿಗಳ ಒರಟುತನ, ಏನೂ ಗೊತ್ತಿಲ್ಲದ ಜಾತಿ, ಮತವೊಂದೇ ಮಾನದಂಡವಾಗಿ ಆರಿಸಿಬಂದು ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ, ಅದರ ಮಧ್ಯೆ ನೀವು ಕೊಟ್ಟಿದ್ದರೂ ಬೇಜವಾಬ್ದಾರಿತನದಿಂದ ಆ ದಾಖಲೆಗಳನ್ನು ಕಳೆದು ಹಾಕಿರೋದು ಅಥವಾ ಆ ದಾಖಲೆಗಳನ್ನು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆ ಇಲ್ಲದಿರೋದು, ಸರಿಯಾದ ಮಾಹಿತಿ ಒದಗಿಸದ ಸರಕಾರಿ ವ್ಯವಸ್ಥೆ,...ಇಂತಹಾ ಹತ್ತು ಹಲವು ಕಾರಣಗಳಿಗಾಗಿಯೇ ಕೇವಲ ವಿದ್ಯಾವಂತರು ಮಾತ್ರವಲ್ಲ, ಸುಶಿಕ್ಷಿತನಲ್ಲದವನೂ ಕೂಡಾ ರೋಸಿ ಹೋಗಿ ಇವುಗಳನ್ನು ಹೇಸಿಗೆಗಿಂತಲೂ ಕಡೆಯಾಗಿ ಕಾಣೋದು! ಈ ಕಛೇರಿಗಳಲ್ಲಿರುವ ಸಿಬ್ಬಂದಿಗಳು ಮೀಸಲಾತಿ ಆಧಾರದಿಂದ ಬಂದಿರುತ್ತಾರೆಯೇ ಹೊರತು ತಮ್ಮ ಸಾಮರ್ಥ್ಯ, ಅರ್ಹತೆಗಳಿಂದಲ್ಲ! ಹಾಗಾಗಿ ಅವರಿಗೆ ತಂತ್ರಜ್ಞಾನದ ಗಂಧಗಾಳಿ ಇರೋದಿಲ್ಲ, ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಸುಧಾರಿಸಿಕೊಂದು ಹೋಗುವ ಮನಸ್ಥಿತಿಯೂ ಇರೋದಿಲ್ಲ!
               ನಮ್ಮ ಶಿಕ್ಷಣ ವ್ಯವಸ್ಥೆ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಗುರುಕುಲ ಪದ್ದತಿಯಿರುವಾಗ ಒಂದೇ ಗುರುವಿನ ಕೆಳಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಪ್ರತಿಯೊಬ್ಬರು ತಮಗೆ ಬೇಕಾದುದನ್ನು ಕಲಿತು ಮರಳುತ್ತಿದ್ದರು. ಈಗ ಪ್ರತಿಯೊಬ್ಬರೂ ಇಂಜಿನಿಯರ್, ಡಾಕ್ಟರ್ ಆಗಬಯಸುವವರೇ! ಆದರೆ ಇಂಜಿನಿಯರ್ ಆಗಿ ಹೊರಬಂದವನಿಗೆ ಪ್ರಮಾಣಪತ್ರವಿರುತ್ತದೆಯೇ ಹೊರತು ತಾಂತ್ರಿಕ ನೈಪುಣ್ಯತೆಯೇ ಇರೋದಿಲ್ಲ. ಕೆಲಸ ಸೇರಿದ ಮೇಲೆ ಆ ನೈಪುಣ್ಯ ಸಂಪಾದಿಸುತ್ತಾರೆ ಅದು ಬೇರೆ ಮಾತು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ತಾಂತ್ರಿಕರನ್ನು ರೂಪಿಸುತ್ತಲೇ ಇಲ್ಲ! ಮಾತ್ರವಲ್ಲ ನಿಮಗೆ ಬೇಕಾದ ಕ್ಷೇತ್ರಗಳನ್ನು ಆರಿಸೋಣವೆಂದರೆ ಅದಕ್ಕೆ ಅವಕಾಶವೇ ಇಲ್ಲ..ಅಂದರೆ ಅಂತಹ ಶಿಕ್ಷಣ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ. ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಬಿದ್ದಂತೆ ವರ್ಷದಿಂದ ವರ್ಷಕ್ಕೆ ಹೇಳಿದ್ದನ್ನೇ ಹೇಳುವ ಪಾಠಗಳು ಅದನ್ನೇ ಉರು ಹೊಡೆಯುವ ಮಕ್ಕಳನ್ನು ಈ ವ್ಯವಸ್ಥೆ ತಯಾರಿಸುತ್ತದೆ ಬಿಟ್ಟರೆ ಒಬ್ಬ ತಾನೇ ಏನೋ ಮಾಡಬೇಕು ಎನ್ನುವ ಆಶಾವಾದಿಯನ್ನಲ್ಲ. ನಮ್ಮಲ್ಲಿರುವ ಅವಕಾಶಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿಲ್ಲ. ಅದರಿಂದಾಗಿ ಸಾಲುಗಟ್ಟಲೇ ಇಂಜಿನಿಯರುಗಳು ಉದ್ಯೋಗವಿಲ್ಲದೆ ಪರದಾಡುತ್ತಿರುವ ಸ್ಥಿತಿ! ಮಾತ್ರವಲ್ಲ ಮೆಕಾಲೆ ಅಳವದಿಸಿದ ಈ ಶಿಕ್ಷಣ ಪದ್ದತಿಯಿಂದ ಧರ್ಮ ಎಂದರೇನು, ದೇಶ ಎಂದರೇನು, ಸಂಸ್ಕೃತಿ ಎಂದರೇನು, ಧರ್ಮ-ಮತಗಳ ಮಧ್ಯದ ವ್ಯತ್ಯಾಸವೇನು, ರಾಷ್ಟ್ರದ ಇತಿಹಾಸವೇನು,ಹಿರಿಮೆಯೇನು ಇವ್ಯಾವುದನ್ನು ಅರಿಯದ ಸುಳ್ಳು ಇತಿಹಾಸವನ್ನೇ ಸತ್ಯ ಎಂದು ಭ್ರಮಿಸುವ ಒಂದು ಸಂಸ್ಕೃತಿವಿಹೀನ ಪೀಳಿಗೆಯನ್ನೇ ಸೃಷ್ಠಿ ಮಾಡಿ ದೇಶದ ಅಧಪತನಕ್ಕೆ ನಾಂದಿ ಹಾಡಿದ್ದೇವೆ ಎಂಬ ಅರಿವೇ ನಮಗಾಗದಿರೋದು ವಿಷಾದಕರ ಸಂಗತಿ.
                ಎಲ್ಲಿ ನೋಡಿದರೂ ಮೀಸಲಾತಿ. ಸರಕಾರಿ ಘಟಕಗಳಲ್ಲಿ ಮತ, ಜಾತಿಯಾಧಾರಿತ ಮೀಸಲಾತಿ! ಖಾಸಗಿ ಕ್ಷೇತ್ರದಲ್ಲಿ ಸಂಬಂಧಾಧಾರಿತ ಮೀಸಲಾತಿ! ಪತ್ರಿಕೋದ್ಯಮದಲ್ಲಿ ಪಂಥಾಧರಿತ(ಎಡಪಂಥೀಯ) ಮೀಸಲಾತಿ! ರಾಜಕೀಯದಲ್ಲಿ ಧನಾಧರಿತ ಮೀಸಲಾತಿ! ಸಾಮಾನ್ಯನಿಗೆ ದಿನಕ್ಕೆ 1 ರೂಪಾಯಿ ಸಾಕು ಊಟಕ್ಕೆ, 5 ರೂಪಾಯಿ ಸಾಕು ಊಟಕ್ಕೆ, ಎರಡು ತರಕಾರಿ ಬಳಸೋದ್ರಿಂದ ಬೆಲೆಯೇರಿಕೆ, ಬಡತನ ಮನಸ್ಸಿಗೆ ಸಂಬಂಧಿಸಿದ್ದು(!)...ಇದು ಸರಕಾರದ ನೀತಿ!
               ನಮ್ಮ ದೇಶದಲ್ಲಿ ಇನ್ನೂ ವಿದ್ಯುತ್ತೇ ಇಲ್ಲದ(ಸೋಲಾರನ್ನು ಸೇರಿಸಿ) ಎಷ್ಟು ಹಳ್ಳಿಗಳಿವೆ? ಮನೆಗೆ ನೀರೇ ಸಿಗದೆ ಎಷ್ಟೋ ದೂರದಿಂದ ಹೊತ್ತು ತರುವ ಎಷ್ಟು ಕುಟುಂಬಗಳಿವೆ? ಎಲ್ಲಿ ನೋಡಿದರಲ್ಲಿ ಗುಂಡಿಗಳಿರುವ ರಸ್ತೆಗಳು. ಅಗತ್ಯ ಇಲ್ಲದ ಕಡೆಯೂ ಹಂಪ್-ಗಳು ಇವುಗಳಿಂದಾಗಿಯೇ ದಿನನಿತ್ಯ ಒಂದಷ್ಟು ಅಪಘಾತಗಳು. ಹಲವಾರು ಕಡೆ ಚರಂಡಿಗಳೇ ಇಲ್ಲ! ಒಂದೇ ಮಳೆಗೆ ಕಿತ್ತು ಹೋಗುವ ರಸ್ತೆಗಳು! ಕಳಪೆ ಕಾಮಗಾರಿ! ಎಷ್ಟೋ ಊರುಗಳಿಗೆ ಬಸ್ಸು ಬಿಡಿ, ರಸ್ತೆಗಳೇ ಇಲ್ಲ. ನದಿಗಳಿಗೆ ಸೇತುವೆಗಳಿಲ್ಲದೆ ಹಗ್ಗ, ತೆಪ್ಪದ ಮೂಲಕ ದಾಟುವ ಎಷ್ಟೋ ಜನ ಏನು ಈ ದೇಶದವರಲ್ಲವೆ? ಸ್ವಂತ ಸೂರು ಇಲ್ಲದೆ, ಊಟಕ್ಕೆ ಗತಿಯಿಲ್ಲದೆ, ತಮ್ಮವರವರೆನ್ನುವವರಿಲ್ಲದೆ ಭಿಕ್ಷೆ ಬೇಡುವವರು ಹಾಗೂ ತಮ್ಮ ಜೀವನಕ್ಕಾಗಿ ಇವರನ್ನು ಭಿಕ್ಷಾಟನೆಗೆ ತಳ್ಳುವವರು ಇವಕ್ಕೆಲ್ಲಾ ಎಂದು ವಿಮೋಚನೆ? ಇಂದಿಗೂ ಕನಿಷ್ಟ ಎರಡು ಗಂಟೆಯೂ ೩ ಫೇಸ್ ವಿದ್ಯುತ್ ಸಿಗದೆ ರೈತರ ಕಣ್ಣೀರಿನಲ್ಲೇ ಬೆಳೆ ಬೆಳೆಯುವಂತ ಪರಿಸ್ಥಿತಿ ಉದ್ಭವಿಸಿರುವ ಎಷ್ಟೊಂದು ಹಳ್ಳಿಗಳಿವೆ. ವಿದ್ಯುತ್ ಸಿಕ್ಕಿದರೂ ನೀರೇ ಸಿಗದ ಅದೆಷ್ಟು ಕೃಷಿಭೂಮಿಗಳು! ಇವೆಲ್ಲಾ ಇದ್ದರೂ ಕಾರ್ಮಿಕರು ಸಿಗದೇ ಅಥವಾ ದುಬಾರಿ ವೇತನ ನೀಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ರೈತರು! ಇವೆಲ್ಲದರ ಮಧ್ಯೆ ಕಮ್ಯೂನಿಷ್ಟ್ ಪ್ರೇರಿತ ನಕ್ಸಲರ ಕಾಟ! ಎಲ್ಲ ಸರಿಯಾಗಿದೆ ಎನ್ನುವಷ್ಟರಲ್ಲಿ ವರುಣನ ಕಣ್ಣುಮುಚ್ಚಾಲೆ! ಬೆಳೆಗೆ ಸರಿಯಾದ ಬೆಲೆ ಸಿಗದೆ ಹೈರಾಣಾಗುವ ರೈತ!
             ಸ್ವಾತಂತ್ರ್ಯ ಕ್ರಾಂತಿವೀರರಿಂದ ಒದಗಿದ್ದರೂ ಅವರಿಗೆ ಸಿಗದ ಮಾನ್ಯತೆ, ಸಾವರ್ಕರ್-ಸುಭಾಷ್-ಚಂದ್ರಶೇಖರ್ ಆಜಾದ್, ಅರವಿಂದ, ಬಂಕಿಮರಾದಿಯಾಗಿ ಎಲ್ಲರನ್ನು ಬದಿಗೆ ತಳ್ಳುವ "ಕಮ್ಮಿ" ನಿಷ್ಟರ ಪ್ರಯತ್ನಗಳು, ವೇದ, ಸಂಸ್ಕೃತಿ, ಋಷಿ ಪರಂಪರೆಗೆ ಸಿಗದ ಗೌರವ! ಹಳ್ಳಿಹಳ್ಳಿಯಲ್ಲೂ ಬೇರೂರಿರುವ ಭಯೋತ್ಪಾದಕರು! ಅವರನ್ನು ಕಾಪಾಡುವ ದ್ರೋಹಿ ರಾಜಕಾರಣಿಗಳು. ನಕಲಿ ಎನ್ ಕೌಂಟರ್ ಎಂದೂ ಮಾತ್ರವಲ್ಲ ತಮ್ಮ ಮನೆಯ ಮಗಳವಳೆಂದು ನಾಚಿಕೆ ಬಿಟ್ಟು ಹೇಳುವ ಮಂತ್ರಿ ಮಹೋದಯರು, ಇವರನ್ನೇ ಬೆಂಬಲಿಸುವ ನಾಚಿಕೆ ಮಾನ ಮರ್ಯಾದೆ ಬಿಟ್ಟ ಮಾಧ್ಯಮಗಳು! ಲವ್ ಜಿಹಾದ್, ಭೂ ಜಿಹಾದ್, ವೈಣಿಕ ಜಿಹಾದ್, ಅಕ್ಷರ ಜಿಹಾದ್, ಸಾಂಸ್ಕೃತಿಕ ಜಿಹಾದ್, ರಾಜಕೀಯ ಜಿಹಾದ್..... ಹಿಂದೂಗಳ ಜೀವನಕ್ಕೆ ಕೊಳ್ಳಿ ಇಟ್ಟಿರುವ ರಕ್ತಬೀಜಾಸುರಗಳು. ಆದರೆ ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳದೆ ಇರೋದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇರೋದು ದೊಡ್ಡ ವಿಪರ್ಯಾಸ. ಭಯೋತ್ಪಾದಕತೆ ವಿರುದ್ದ ಪ್ರತಿಭಟನೆ ಮಾಡುವವರನ್ನೇ ಬಂಧಿಸುವ ಸರ್ಕಾರ, ಭಯೋತ್ಪಾದಕರನ್ನು ಬಹುವಚನ ಉಪಯೋಗಿಸಿ ಗೌರವಿಸುವ ಮಂತ್ರಿಗಳು, ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿ ಕೋಟ್ಯಾಂತರ ಖರ್ಚು ಮಾಡುವ ನಪುಂಸಕ ಸರಕಾರ, ದೇಶದ ಸಾಮಾನ್ಯ ಪ್ರಜೆಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ ಭಯೋತ್ಪಾದಕನಿಗೆ ನ್ಯಾಯ ಸಿಗಬೇಕೆಂದು ಬೊಬ್ಬಿರಿಯುವ ಮಾಧ್ಯಮಗಳು, ಶತ್ರುಗಳು ನುಸುಳಿದರೂ ರತ್ನಗಂಬಳಿ ಹಾಸಿ ಮಾತಿಗಿಂತ ಮೌನವೇ ಲೇಸೆನ್ನುವ ಪ್ರಧಾನಿ, ಸಾಲು ಸಾಲು ಹಗರಣಗಳು, ತನಿಖಾ ಸಂಸ್ಥೆಗಳೆಲ್ಲವನ್ನು ತನ್ನ ಕೈವಶ ಮಾಡಿಕೊಂಡಿರುವ ಗಾಂಧಿ ಕುಟುಂಬ, ಬೇಹುಗಾರಿಕಾ ವಿಭಾಗ ಮಾಹಿತಿ ಕೊಟ್ಟರು ಸೂಕ್ತ ಭದ್ರತೆ ಒದಗಿಸದೆ ಜನರ ಸಾವಿಗೆ ಕಾರಣವಾಗುವ ಸರಕಾರ, ಚಿತ್ರನಟಿಯರೊಂದಿಗೆ ಲಲ್ಲೆಗರೆಯುವ ಗೃಹ ಸಚಿವ, ಅತ್ತ ಇತ್ತ ಸುತ್ತ ಮುತ್ತ ಒಳಗೂ ಹೊರಗೂ ಎಲ್ಲೆಡೆಯೂ ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಭಾರತ! ದಿನ ನಿತ್ಯ ಗಡಿ ಸಮಸ್ಯೆ, ಭಾಷಾವಾರು ಜಗಳ, ಅತ್ಯಾಚಾರ, ಹಗರಣ, ಹೊರಗಿಂದ ಬಂದವರಿಗೆ ಪಡಿತರ, ಚುನಾವಣ ಗುರುತು ಚೀಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲ ವಸ್ತುಗಳ ಬೆಲೆಯೇರಿಕೆ, ಭಾರತೀಯ ಬಡವನಾಗಿ ಹೋಗುತ್ತಿದ್ದಾನೆ, ಭಾರತದ ರಾಜಕಾರಣಿ ದುಡ್ದನ್ನೆಲ್ಲಾ ಸ್ವಿಸ್ ಬ್ಯಾಂಕಿನಲ್ಲಿಡುತ್ತಿದ್ದಾನೆ. ತನ್ನ ವಿರುದ್ದ ಮಾತಾಡುವವರನ್ನೆಲ್ಲಾ ನಕಲಿ ದಾಖಲೆ ಸೃಷ್ಟಿಸಿ ಬಾಯಿಮುಚ್ಚಿಸುವ ಸರ್ಕಾರ......

                     ಅಬ್ಬಾ ಹೇಳುತ್ತಾ ಹೋದರೆ ಮುಗಿಯದ ಕಥೆ! ಎಲ್ಲಿ ನೋಡಿದರಲ್ಲಿ ಸಮಸ್ಯೆಗಳೇ...ಇವೆಲ್ಲದರ ಮಧ್ಯೆ ನಿದ್ದೆಗೆ ಜಾರಿರುವ ಭಾರತೀಯ! ಇವುಗಳಿಗೆಲ್ಲಾ ಕೊನೆ ಎಂದು? ಇದೆ ಇದಕ್ಕೆ ಪರಿಹಾರ ನಮ್ಮ ಕೈಯಲ್ಲಿದೆ. ಅಲ್ಲೊಬ್ಬನಿದ್ದಾನೆ ಉಕ್ಕಿನ ಮನುಷ್ಯ! 12 ವರ್ಷಗಳಿಂದ ತನ್ನ ಮೇಲಾಗುತ್ತಿರುವ ದೇಶದ್ರೋಹಿಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತು ಅಭಿವೃದ್ಧಿಯ ಶಕೆಯನ್ನೇ ಬರೆದ! ಕುಹಕಿಗಳಿಗೆ ತನ್ನ ಕಾರ್ಯದಿಂದಲೇ ಉತ್ತರ ಕೊಟ್ಟ! ಮೇಲೆ ಹೇಳಿರುವ ಎಲ್ಲ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎನ್ನುವುದನ್ನು ತನ್ನ ರಾಜ್ಯದಲ್ಲಿ ಮಾಡಿ ತೋರಿಸಿದ. ಒಂದು ಕಾಲದಲ್ಲಿ ಜನರಿಗೆ ಚಹಾ ಕುಡಿಸುತ್ತಿದ್ದ ಆ ವ್ಯಕ್ತಿ ಮುಂದೆ ಗುಜರಾತಿಗರಿಗೆ ಅಮೃತದ ಧಾರೆಯನ್ನೇ ಹರಿಸಿದ. ಎಲ್ಲರೂ ಕೇವಲವಾಗಿ ಮಾತಾಡುತ್ತಿದ್ದ ಕಾಲದಲ್ಲಿ ಮೌನವಾಗಿ ಗುಜರಾತಿನ ಅಭಿವೃದ್ಧಿಯಗಾಥೆಯನ್ನು ಬರೆದ. ಈಗ ಅದೇ ವ್ಯಕ್ತಿ ಭಾ.ಜ.ಪಾ.ದ ಪ್ರಧಾನಿ ಅಭ್ಯರ್ಥಿಯಾಗಿ ನಮ್ಮೆದುರು ನಿಂತಿದ್ದಾನೆ! ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ವಂಶ ಪಾರಂಪರ್ಯವಾಗಿ ತನಗೇ ಅಧಿಕಾರ ಸಿಗಬೇಕೆಂದು ಬೇಕಾದ ಆಟ ಆಡಿ, ಹೂಟ ಹೂಡಿ ಸದಾ ಗದ್ದುಗೆ ಹಿಡಿದು ದೇಶ ಕೊಳ್ಳೆ ಹೊಡೆಯುವ ಗಾಂಧಿ ಕುಟುಂಬದ ಇತಿಹಾಸ ತಿಳಿದ ಮೇಲೂ ಅವರನ್ನೇ ಆರಿಸಿ ಸದಾ ಸಮಸ್ಯೆಗಳ ಜಂಜಡದಲ್ಲಿ ಮುಳುಗಿ ಮುಂದಿನ ಪೀಳಿಗೆಯಿಂದ ಛೀ..ಥೂ..ಅಂತಾ ಉಗುಳಿಸಿಕೊಳ್ಳುತ್ತೀರಾ ಅಥವಾ ರಾಜಕೀಯ ದುರಂಧರನನ್ನು, ಅಭಿವೃದ್ಧಿಯ ಶಕಪುರುಷನನ್ನು, ದೇಶ-ಧರ್ಮ-ಸಂಸ್ಕೃತಿಯನ್ನು ಗೌರವಿಸುವ ಅಪ್ಪಟ ಭಾರತೀಯನನ್ನು ಪ್ರಧಾನಿಯಾಗಿ ಆರಿಸುತ್ತೀರಾ?

ನಿರ್ಧಾರದ ಕಾಲ ಬಂದಿದೆ! ಎದ್ದೇಳು ಅರ್ಜುನ! ನಿಮ್ಮ ಮತ ದೇಶಕ್ಕೆ ಹಿತ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ