ಪುಟಗಳು

ಮಂಗಳವಾರ, ಫೆಬ್ರವರಿ 18, 2014

ಭಕ್ತಿ, ನಂಬಿಕೆ ಇಲ್ಲದಿದ್ದರೆ ಮಂದಿರವೂ ಮಸಣವಾದೀತು!

   ಭಕ್ತಿ, ನಂಬಿಕೆ ಇಲ್ಲದಿದ್ದರೆ ಮಂದಿರವೂ ಮಸಣವಾದೀತು!
            ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅಲ್ಲಿ ಇತಿಹಾಸದ ನೆನಪುಗಳಿವೆ, ಪಾಠವಿದೆ! ಕಲಾವಿದನೊಬ್ಬನ ಕೈಚಳಕದಿಂದ ಸಿದ್ಧಗೊಂಡ ಕಲಾ ವೈಭವವು ಗತದ ಹಿರಿಮೆ-ಗರಿಮೆಯನ್ನು ಸಾರುತ್ತದೆ. ಅಲ್ಲಿ ವೇದ-ವೇದಾಂಗಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿದ್ದವು. ಭಾರತೀಯ ಕಲೆಗಳ ಪೋಷಕ ತಾಣಗಳಾಗಿದ್ದವು. ಅಲ್ಲಿ ಜಂಜಡದ ಬದುಕಿನ ಬವಣೆಗಳಿಂದ ಮುಕ್ತನಾಗಿ ಕ್ಷಣಕಾಲ ಶಾಂತಿಯಿಂದಿರಲು ಸಾಧ್ಯವಿತ್ತು. ಬ್ರಿಟಿಷರ ಕಾಪಟ್ಯದಿಂದಲೋ ನಮ್ಮವರದೇ ಮೂಢತ್ವದಿಂದಲೋ ಜಾತಿಯ ಒಳಸುಳಿಗೆ ಅವು ಸಿಲುಕಿದರೂ ದಶಕಗಳ ಹಿಂದಿನವರೆಗೂ ಅಲ್ಲಿ ಅಧ್ಯಾತ್ಮವನ್ನೂ ಸವಿಯಬಹುದಿತ್ತು. ಶಾಂತಿಯನ್ನು ಪಡೆಯಬಹುದಿತ್ತು. ಆದರೆ ಯಾವಾಗ ಆಳುಗರ ಕೆಟ್ಟ ದೃಷ್ಠಿ ದೇಗುಲಗಳ ಮೇಲೆ ಬಿತ್ತೋ ಅವರ ಮತ ಬ್ಯಾಂಕಿಗೆ ಈ ದೇವಾಲಯಗಳ ನಿಧಿಗಳು ಜಮಾವಣೆಯಾಗತೊಡಗಿದವು! ಅಲ್ಲಿನ ಲೌಕಿಕ ಹಾಗೂ ಅಲೌಕಿಕ ಸೌಂದರ್ಯಗಳೆರಡೂ ಸೊರಗತೊಡಗಿತು!
      ಹೌದು, ದೇವಾಲಯಗಳನ್ನು ತನ್ನ ಸ್ವಾಧೀನ ಮಾಡಿಕೊಳ್ಳುವ ಸರ್ಕಾರ ದೇವಾಲಯಗಳ ಅಮೂಲ್ಯ ವಾಸ್ತುಶಿಲ್ಪದ ಪರಂಪರೆಯನ್ನು ವಿವೇಚನಾರಹಿತವಾಗಿ ನಾಶಪಡಿಸುತ್ತಿದೆ. ಎಷ್ಟೋ ದೇವಾಲಯಗಳ ಶಿಲ್ಪಕಲಾ ವೈಭವ ಹಾಗೂ ಶಾಸನಗಳು ಧೂಳು, ಮರಳು ಮೆತ್ತಿ ನಾಶವಾಗುತ್ತಲೇ ಇವೆ. ಇತ್ತೀಚೆಗೆ ಕಾಂಕ್ರೀಟಿಕರಣದ ಭರದಲ್ಲಿ ಸೇಲಂ ಸಮೀಪದ ನಾಸಿಯನೂರ್ ದೇವಾಲಯದಲ್ಲಿ ಇಡೀ ಮಂಟಪದೇ ನಾಪತ್ತೆಯಾಯಿತು! 300ವರ್ಷಗಳಿಗೂ ಹಿಂದಿನ ಪ್ರಾಚೀನ ಸ್ಮಾರಕಗಳನ್ನು ನವೀಕರಿಸುವುದಲ್ಲ, ಯಥಾಸ್ಥಿತಿ ಕಾಪಾಡಬೇಕು ಎನ್ನುವ ವಿಚಾರವಾದರೂ ಸರ್ಕಾರೀ ಅಧಿಕಾರಿಗಳಿಗೆ ತಿಳಿದಿದೆಯೇ?  ಇತ್ತೀಚೆಗೆ ತಮಿಳುನಾಡಿನ ಮಧುರೈ, ರಾಮೇಶ್ವರಂ, ಕನ್ಯಾಕುಮಾರಿಯಂತಹ ಸುಪ್ರಸಿದ್ದ ದೇವಾಲಯಗಳನ್ನು ದರ್ಶಿಸುವ ಭಾಗ್ಯ ಒದಗಿ ಬಂದಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಧೂಳು ಹಿಡಿದಿರುವ ವಿಗ್ರಹಗಳು, ಕಲಾ ಕೆತ್ತನೆಗಳು, ಭಿತ್ತಿ ಚಿತ್ರಗಳು, ಶಿಲಾ ಶಾಸನಗಳು, ವರ್ಷಾನುಗಟ್ಟಲೆ ನೀರೆ ಸೋಕದ ಪ್ರಾಂಗಣಗಳು, ದೇಗುಲದೊಳಗೇ ಸರಕಾರ ಪ್ರಾಯೋಜಿತ ಅಂಗಡಿಗಳು ಇವುಗಳನ್ನೆಲ್ಲಾ ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಅಲ್ಲಿನ ಸ್ಥಿತಿ ಕಂಡು ಬಹುಷ ದೇವರೇ ಓಡಿ ಹೋಗಿರಬಹುದು! ಭಾರತದ ದಕ್ಷಿಣದ ಭೂಶಿರ ಭುವನ ಮನೋಹರಿ ಕನ್ಯಾಕುಮಾರಿ. ಅಲ್ಲಿ ತಪಸ್ಸು ಮಾಡುತ್ತಿರುವ ತಾಯಿ ಪಾರ್ವತಿಯ ದೇವಾಲಯವಿದೆ. ಆ ದೇವಾಲಯದ ಒಳಹೊಕ್ಕು ನೋಡಿದರೆ ಖೇದವೆನಿಸುತ್ತದೆ. ಧೂಳು, ಮಣ್ಣುಗಳಿಂದ ಮಸುಕಾಗಿರುವ ಸ್ಥಂಭಗಳು, ಕಲಾಕೃತಿಯಿರುವ ಗೋಡೆಗಳು, ಪ್ರಾಂಗಣಗಳು. ಇದು ಒಳಗಿನ ಸ್ಥಿತಿಯಾದರೆ ಹೊರಗಿನದು ಮತ್ತೊಂದು ಬಗೆ! ದೇಗುಲದ ಸುತ್ತ ಅದೆಷ್ಟು ಚರ್ಚುಗಳು! ದೇವಾಲಯಗಳ ಸಮೀಪವೇ ಇರುವ ಮಸೀದಿಗಳು, ದೇವಾಲಯಗಳ ಒತ್ತಟ್ಟಿಗೇ ಇರುವ ಚರ್ಚುಗಳು, ಇವೆಲ್ಲವೂ ಹಿಂದುಗಳ ಸಹಿಷ್ಣುತೆಯ ಲಾಭ ಪಡೆದು ನಡೆಸುವ ಮತಾಂತರ ಕೇಂದ್ರಗಳೆಂದು ಎಂತಹವನಿಗಾದರೂ ತಿಳಿದು ಬಿಡುತ್ತದೆ. ಹಾಗಾದರೆ ಸರಕಾರ  ದೇವಾಲಯಗಳ ಪಕ್ಕದಲ್ಲಿ ಚರ್ಚು-ಮಸೀದಿಗಳ ನಿರ್ಮಾಣಕ್ಕೆ ಯಾಕೆ ಅವಕಾಶ  ಮಾಡಿಕೊಡುತ್ತದೆ?
                 ವೇದಗಳು ಜ್ಞಾನದ ಆಗರ. ಅವುಗಳ ಕುರಿತ ಸಂಶೋಧನೆ ವೇದಭೂಮಿ ಭರತ ಖಂಡದಲ್ಲಿ ನಡೆಯಬೇಕಿತ್ತು. ಕನಿಷ್ಟ ಪಕ್ಷ ದೇವಾಲಯಗಳಲ್ಲಿ ಆ ಕುರಿತಾದ ಪ್ರಕ್ರಿಯೆಗೆ ಉತ್ತೇಜನ ಕೊಡಬೇಕಿತ್ತು. ಆದರೆ ಹಿಂದೆ ದೇವಾಲಯಗಳ ಆಶ್ರಯದಲ್ಲಿ ನಡೆಯುತ್ತಿದ್ದ ಅದೆಷ್ಟೋ ವೇದ ಪಾಠ ಶಾಲೆಗಳು ಮುಚ್ಚಿ ಹೋಗಿವೆ. ತಮ್ಮ ಸ್ವಂತ ಆಸಕ್ತಿಯಿಂದ ವೇದ ಪ್ರಸಾರ ಮಾಡುವವರಿಗೆ ಸಹಕರಿಸದ ವೇದ ವಿರೋಧಿ ಸರಕಾರಗಳಿಂದ ವೇದ ಪ್ರಸಾರಕ್ಕೆ ಸಹಾಯವನ್ನು ನಿರೀಕ್ಷಿಸುವುದೇ ಮೂರ್ಖತನವಾದೀತು. ಅದಕ್ಕೆ ಸರಿಯಾಗಿ ಹೆಚ್ಚಿನ ದೇಗುಲಗಳಲ್ಲಿ ದೇವರ ಮೆರವಣಿಗೆಯ ವೇಳೆ ವೇದಮಂತ್ರ ಪಠಣದಂತಹ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುವ ಸಿಬ್ಬಂದಿಗೆ ಯಾವುದೇ ಸಂಬಳ ನೀಡಲಾಗುವುದಿಲ್ಲ. ಇತ್ತೀಚೆಗೆ  ನಟರಾಜ ದೇವಾಲಯವನ್ನು ಸರ್ಕಾರದ ಕಪಿಮುಷ್ಠಿಯಿಂದ ತಪ್ಪಿಸಲು ಸುಬ್ರಮಣಿಯನ್ ಸ್ವಾಮಿ ಯಶಸ್ವಿಯಾದರು. ಅವರು ಹೇಳುವಂತೆ "ಶ್ರೀರಂಗಂನಲ್ಲಿ ದಿನದ ಪೂಜಾದಿ ಕೈಂಕರ್ಯವನ್ನು ನೆರವೇರಿಸುವ 36 ಮಂದಿ ಅರ್ಚಕರಿದ್ದು ಅವರಿಗೆ ನಿಗದಿತ ಮಾಸಿಕ ವೇತನವಿಲ್ಲ. ಭಕ್ತರು ನೀಡುವ ದಕ್ಷಿಣೆ ಹಾಗೂ ಸೇವೆಯ ರಶೀದಿ ಮಾರಾಟದಿಂದ ಸಿಗುವ ಹಣದಲ್ಲಿನ ಪಾಲು ಮಾತ್ರ ಅವರ ಆದಾಯ. ಆದರೆ ದೇವಾಲಯದಲ್ಲಿರುವ ಕಾವಲುಗಾರ, ಕಾರು ಚಾಲಕ ಮುಂತಾದ ಸರ್ಕಾರದಿಂದ ನೇಮಕಗೊಂಡ ನೌಕರರಿಗೆ ಪ್ರತಿ ತಿಂಗಳಿಗೆ 8,000ದಿಂದ ರೂ. 20 ಸಾವಿರದವರೆಗಿನ ಸಂಬಳವಿದೆ. ಈ ನೌಕರರು ದೇವಸ್ಥಾನದ ಯಾವುದೇ ಧಾರ್ಮಿಕ ಕೆಲಸದಲ್ಲಿ ಭಾಗಿಯಾಗುವುದಿಲ್ಲ. ತಿರುನಲ್ವೇಲಿಯ ಪ್ರಸಿದ್ಧ ನೆಲ್ಲಿಯಪ್ಪಾರ್ ದೇವಾಲಯದಲ್ಲಿ ದಿನದ ಪೂಜೆ ನಡೆಸುವ ಅರ್ಚಕರಿಗೆ ಮಾಸಿಕ ವೇತನವೇನೋ ಇದೆ. ಎಷ್ಟು ಗೊತ್ತೆ? ತಿಂಗಳಿಗೆ ರೂ.55ರಿಂದ 72ರ ತನಕ." ಹೌದು ದಿನಕ್ಕೆ 5 ರೂ. ಇದ್ದರೆ ಹೊಟ್ಟೆ ತುಂಬ ಊಟ ಮಾಡಬಹುದೆಂದು ಹೇಳುವ, ದಿನಕ್ಕೆ 120 ರೂಪಾಯಿ ದುಡಿದರೆ ಐದು ಜನ ಇರುವ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎನ್ನುವ ರಾಜಕಾರಣಿಗಳ ಪಾಲಿಗೆ ಇವರೆಲ್ಲಾ ಶ್ರೀಮಂತರೇ!
               ಕುಕ್ಕೆ ದೇವಸ್ಥಾನದ ಆದಾಯ 2010-11ನೇ ಸಾಲಿನಲ್ಲಿ 44.82 ಕೋ.ರೂ.ಗಳಿದ್ದರೆ 2011-12ನೇ ಸಾಲಿನಲ್ಲಿ 58.29 ಕೋ.ರೂ.ಗೇರಿತ್ತು. ಕೊಲ್ಲೂರು ದೇವಳದ ಆದಾಯ 17.48 ಕೋ.ರೂ.ಗಳಿಂದ 20 ಕೋ.ರೂ.ಗಳಿಗೆ ಏರಿಕೆಯಾಗಿತ್ತು. ಕಟೀಲು ದೇವಸ್ಥಾನದ ಆದಾಯ 10.07 ಕೋ.ರೂ.ಗಳಿದ್ದುದು ಮರುವರ್ಷ 11.5 ಕೋ.ರೂ.ಗೆ ಏರಿಕೆಯಾಗಿತ್ತು. ಕುಕ್ಕೆ ದೇವಸ್ಥಾನದ ಆದಾಯ ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನದಾಗಿದ್ದು ಬಳಿಕ ಕೊಲ್ಲೂರು, ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಲೆಮಹದೇಶ್ವರ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮೊದಲಾದವುಗಳಿವೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 125 ಎ ವರ್ಗದ ದೇವಾಲಯಗಳು, 179 ಬಿ ವರ್ಗದ ದೇವಾಯಗಳು ಇದ್ದು, ಎ ವರ್ಗದ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋ.ರೂ., 2011-12ನೇ ಸಾಲಿನಲ್ಲಿ 261.14 ಕೋ.ರೂ., ಬಿ ವರ್ಗದ ದೇವಾಲಯಗಳಿಂದ 20.18 ಕೋ.ರೂ. ಹಾಗೂ 21.58 ಕೋ.ರೂ. ಆದಾಯ ಬಂದಿದೆ. ಅಷ್ಟಕ್ಕೂ ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೊಳಪಡಿಸುತ್ತಿರುವುದೇಕೆ? ಈ ದೇಗುಲಗಳಿಂದ ಬಂದ ಆದಾಯವನ್ನು ಅಲ್ಲಿ ಸಮರ್ಪಕವಾದ ವ್ಯವಸ್ಥೆ ಏರ್ಪಡಿಸಲು, ಅಲ್ಲಿ ಕೈಂಕರ್ಯ ಮಾಡುವವರಿಗೆ ಸೂಕ್ತ ವೇತನ ನೀಡಲು ಸರಕಾರ ಏಕೆ ಬಳಸುವುದಿಲ್ಲ? ಮುಜರಾಯಿ ಇಲಾಖೆಗೆ ಒಳಪಟ್ಟ ಹಲವು ದೇವಾಲಯಗಳಿಗೆ ಸರಕಾರದಿಂದ ಬರುವ ವಾರ್ಷಿಕ ತಸ್ತೀಕ್ ಕೇವಲ 165ರೂ! ಅಲ್ಲಿ ಕೆಲಸ ಮಾಡುವ ಅರ್ಚಕರಿಗಾಗಲಿ ಅಥವಾ ಇತರರಿಗಾಗಲಿ ಸಂಬಳ ನಾಸ್ತಿ! ಅಂತಹ ಎಷ್ಟೋ ದೇವಾಲಯಗಳು ಗತಿ ಗೋತ್ರವಿಲ್ಲದೆ ಪಾಳು ಬಿದ್ದು ಹೋದದ್ದಿದೆ. ಹಲವು ದೇಗುಲಗಳನ್ನು ಊರವರೇ ಚಂದಾ ಎತ್ತಿ ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುವುದಿದೆ. ದೇವಾಲಯಗಳಿಂದ ಬರುವ ಆದಾಯವನ್ನು ಮಸೀದಿ,ಮದರಸಾ, ಚರ್ಚುಗಳಿಗೆ ಹಂಚುವ ಸರಕಾರಗಳು ಪಾಳು ಬಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಯಾಕೆ ಮಾಡುವುದಿಲ್ಲ?
            ದೇವಾಲಯಗಳು ಒಂದು ಕಾಲದಲ್ಲಿ ನಮ್ಮ ಸಂಸ್ಕೃತಿಯ ಪೋಷಣೆ ಮಾಡುತ್ತಿದ್ದವು. ಭಾರತೀಯ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡುವುದರ ಮೂಲಕ ಕಲಾವಿದನೂ ಗುರುತಿಸಲ್ಪಡುತ್ತಿದ್ದ, ಕಲೆಯೂ ಬೆಳೆಯುತ್ತಿತ್ತು. ಉತ್ಸವಗಳ ಸಮಯದಲ್ಲಿ ತೇರು ನಿರ್ಮಾಣ, ಚೆಂಡೆ-ವಾದ್ಯಗಳು, ಡೆಕ್ಕೆ ಬಲಿ, ದೇವರ ಉತ್ಸವ ಮೂರ್ತಿಯನ್ನು ಹೊತ್ತು ಮಾಡುವ ನರ್ತನ, ಶಾಸ್ತ್ರೀಯ ಸಂಗೀತ-ನೃತ್ಯ, ಹೀಗೆ ಹತ್ತು ಹಲವು ಪ್ರತಿಭೆಗಳ ಪ್ರದರ್ಶನಕ್ಕೂ ಒಂದು ವೇದಿಕೆ ಸಿಗುತ್ತಿತ್ತು. ಸರಕಾರ ತನ್ನ ವಶಕ್ಕೆ ತೆಗೆದುಕೊಂಡ ನಂತರ ಮೇಲ್ವಿಚಾರಕರಾಗಿರುವ ಅಧಿಕಾರಿಗಳಿಗ ಅಸಡ್ಡೆಯಿಂದಲೋ, ನಂಬಿಕೆ ಇಲ್ಲದಿರುವುದರಿಂದಲೋ ಅಥವಾ ಸರಕಾರದ ಕುಟಿಲ ನೀತಿಯ ಫಲವಾಗಿ ಇವೆಲ್ಲವೂ ಕಣ್ಮರೆಯಾಗುತ್ತಿವೆ. ಹಿಂದೆ ಧಾರ್ಮಿಕ ಹಾಗೂ ನೈತಿಕ ಶಿಕ್ಷಣ ಬೋಧಿಸುವುದರ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದ ದೇವಾಲಯಗಳು ಇಂದು ಬರೇ ಡಾಂಭಿಕ ಆಚರಣೆಗಳ ಆಗರವಾಗುತ್ತಿವೆ. ಗಣೇಶೋತ್ಸವಗಳಂತೂ ಕರ್ಕಶ ಸಿನಿಮಾ ಹಾಡುಗಳ, ಕುಡಿದು ಕುಣಿಯುವ ಮತಿಗೇಡಿಗಳ ದೊಂಬರಾಟವಾಗಿರುವಾಗ ಸರಕಾರದ ಹಿಂದೂ ವಿರೋಧಿ ನೀತಿಯಿಂದ ಇಂತಹ ಅಪದ್ದಗಳು ದೇವಾಲಯಗಳ ಒಳ ಹೊಕ್ಕರೂ ಆಶ್ಚರ್ಯವಿಲ್ಲ.
             ಭಕ್ತರು ನಂಬಿಕೆ, ಭಕ್ತಿಯಿಂದ ಅರ್ಪಿಸಿದ ಈ ಹಣವನ್ನು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅಥವಾ ಕನಿಷ್ಟ ಹಿಂದೂ ಸಮಾಜದ ಅವಶ್ಯಕತೆಗಳ ಪೂರೈಕೆಗೆ ಬಳಸಬೇಕಲ್ಲವೆ? ಆದರೆ ಈ ಹಣ ಹಂಚಿಕೆಯಾಗುವುದು ಮದರಸಾ, ಚರ್ಚುಗಳಿಗೆ! ಮುಂದೆ ಬಳಕೆಯಾಗೋದು ಮತಾಂತರ, ಜಿಹಾದೀ ಭಯೋತ್ಪಾದನೆಗಳಿಗೆ! ಅಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹಣ ನಮ್ಮನ್ನೇ ಕೊಲ್ಲಲು ಬಳಕೆಯಾಗುತ್ತಿದೆ! ಇದಕ್ಕೆ ಪೂರಕವಾಗಿ ಮನದಲ್ಲಿ ಮೂಡುವ ಇನ್ನೊಂದು ಪ್ರಶ್ನೆಯೆಂದರೆ ತಾನು ‘ಮತ ನಿರಪೇಕ್ಷ, ಸಮಾಜವಾದಿ’ ಎಂದು ಬೊಂಬಡಾ ಬಜಾಯಿಸುವ ಸರ್ಕಾರ ಕೇವಲ ಹಿಂದುಗಳ ಪೂಜಾಸ್ಥಳಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದೇಕೆ? ಮುಸ್ಲಿಂ ಮತ್ತು ಕ್ರೈಸ್ತ ಮತೀಯ ಸಂಸ್ಥೆಗಳ ಕಡೆಗೆ ಸರ್ಕಾರದ ಗಮನವೇ ಹೋಗುವುದಿಲ್ಲವೇಕೆ?ನಮ್ಮ ದೇವಾಲಯಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಇಲ್ಲದಿದ್ದರೆ ಈ ಘಜನಿ ಘೋರಿಗಳು ಅವುಗಳನ್ನು ಮುಕ್ಕಿ ತಿಂದಾರು! ಮೊದಲೇ ನೈಜ ಇತಿಹಾಸವನ್ನು ತಿರುಚಿ ಪಠ್ಯ ಪುಸ್ತಕ ರಚಿಸುವ ದೇಶದ್ರೋಹಿ ಸರಕಾರಗಳಿಂದಾಗಿ ಮುಂದಿನ ಪೀಳಿಗೆಗೆ ದೇವಾಲಯಕ್ಕೂ ಚರ್ಚು, ಮಸೀದಿಗಳಿಗೂ ವ್ಯತ್ಯಾಸವೇ ತಿಳಿಯಲಿಕ್ಕಿಲ್ಲ!

ಸೋಮವಾರ, ಫೆಬ್ರವರಿ 17, 2014

ಝಾಡುವಿನ ಜಾಡು ಹಿಡಿದು ಹೊರಟಾಗ

ಝಾಡುವಿನ ಜಾಡು ಹಿಡಿದು ಹೊರಟಾಗ

                ಅಂತೂ 49 ದಿನಗಳ ಮಂಗನಾಟ ಅಂತ್ಯವಾಯಿತು! ಅದು ಪೂರ್ಣ ವಿರಾಮವೇ ಇರಲೆಂದು ಜನ ಬಯಸಿದರೆ ಭವ್ಯ ಭಾರತದ ಕನಸಿಗೆ ನೀರೆರೆದಂತಾಗುತ್ತದೆ. ಇಲ್ಲವಾದಲ್ಲಿ ಕಾಟ್ಜು ಹೇಳಿದಂತೆ 92% ಭಾರತೀಯರು ಮೂರ್ಖರು ಎನ್ನುವುದನ್ನು ಸಾಬೀತು ಮಾಡಿದ ಹಾಗೆಯೇ!  ಇದ್ದ 49 ದಿನವೂ ಒಂದಲ್ಲ ಒಂದು ರಗಳೆಯೇ. ಕಳ್ಳು ಕುಡಿದ ಮಂಗನಿಗೆ ಚೇಳೊಂದು ಕುಟುಕಿದರೆ ಹೇಗೆ ವರ್ತಿಸುತ್ತದೋ ಅದೇ ರೀತಿ. ದೆಹಲಿಯ ಜನಗಳ ಪುಣ್ಯ ಆ ನಾಟಕಕ್ಕೊಂದು ತೆರೆ ಎಳೆಯಲಾಯಿತು. ಅದು ತಾತ್ಕಾಲಿಕವಿರಬಹುದು ಆದರೆ ಬಹುತೇಕ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಂತೂ ಸತ್ಯ!

             ಅಣ್ಣಾ ಹಜಾರೆಯವರ ಭೃಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಬೆಳಕಿಗೆ ಬಂದು ಮುಂದೆ ಆ ಆಂದೋಲನದ ರೂವಾರಿ ಅಣ್ಣಾ ಹಜಾರೆಯವರನ್ನೇ ಪಕ್ಕಕ್ಕೆ ತಳ್ಳಿ ತನ್ನ ರಾಜಕೀಯ ಉದ್ದೇಶವನ್ನು ಪೂರೈಸಿಕೊಳ್ಳಲು ಹೊರಟ ಅರವಿಂದ ಕೇಜ್ರಿವಾಲರ ಹಿಂದಿರುವ "ಕೈ" ಯಾವುದು ಎಂದು ನೋಡ ಹೊರಟರೆ ಸಿಗುವುದು ಫೋರ್ಡ್ ಫೌಂಡೇಶನ್ ಹಾಗೂ ಮತ್ತದೇ ಕಾಂಗ್ರೆಸ್! ದಾನ ಧರ್ಮದ ಹೆಸರಲ್ಲಿ ಜಾಗತಿಕ ರಾಜಕಾರಣದ ಮೇಲೆ ದೊಡ್ದಣ್ಣನ ಪ್ರಭುತ್ವವನ್ನು ಹೇರಲು ಗುಪ್ತವಾಗಿ ಕಾರ್ಯಾಚರಿಸುವ ಈ ಫೋರ್ಡ್ ಫೌಂಡೇಶನ್ ಅಮೇರಿಕಾದ ಗುಪ್ತಚರ ಸಂಸ್ಥೆಯಾದ ಸಿಐಎಯ ಮುಖವಾಡ! ಒಂದು ದೇಶದ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು, ಇತಿಹಾಸಕಾರರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಸಂಸ್ಥೆಗಳು, ಪ್ರಕಾಶಕರು...ಹೀಗೆ ಎಲ್ಲಾ ವಲಯದ ಪ್ರಭಾವಿಗಳನ್ನು ಹಣದ ಮೂಲಕ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಫೋರ್ಡ್ ಫೌಂಡೇಶನ್ ಮುಂದೆ ಅಲ್ಲಿ ಬರುವ ಸರಕಾರದ ಮೇಲೆ ತನ್ನ ಪ್ರಭಾವ ಬೀರಲು ಈ ಎಲ್ಲಾ ಸಿದ್ದತೆ ನಡೆಸುತ್ತದೆ. ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋದಿಯಾ, ಮಲ್ಲಿಕಾ ಸಾರಾಭಾಯ್, ಯೋಗೇಂದ್ರ ಯಾದವ್, ತೀಸ್ತಾ ಸೆತಲ್ವಾಡ್, ಜಾವೇದ್ ಆನಂದ್, ಅಮರ್ತ್ಯ ಸೇನ್ ಇವರಿಗೆಲ್ಲಾ ಫೋರ್ಡ್ ಫೌಂಡೇಶನ್ ಧನ ಸಹಾಯ ಮಾಡಿದೆ ಮಾಡುತ್ತಲೇ ಇದೆ. ಇವರೆಲ್ಲಾ ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡವರೇ. ಇನ್ನೊಂದು ಅಂಶವೆಂದರೆ ಇಲ್ಲಿರುವ ಹೆಚ್ಚಿನವರು ಮೋದಿ ವಿರೋಧಿಗಳು ಹಾಗೂ ಭಾರತೀಯ ಸಂಸ್ಕೃತಿಯ ಅಂದರೆ ಸನಾತನ ಸಂಸ್ಕೃತಿಯ ವಿರೋಧಿಗಳು!
ಪೊರಕೆ ಹಿಡಿದವರೇನು ಸಾಚಾಗಳೇ?
                 ಅಜ್ಮಲ್ ಕಸಬ್ ಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಗೆ ವಿನಂತಿ ಪತ್ರ ಕಳುಹಿಸಿದ್ದ, ಸೋನಿಯಾ ಗಾಂಧಿಯ ರಾಷ್ಟ್ರೀಯ ಸಲಹಾ ಸಮಿತಿಯ ಭಾಗವಾಗಿದ್ದ ಅರುಣಾ ರಾಯ್; ನಕ್ಸಲರ ಪರ ಸಹಾನುಭೂತಿ ಹೊಂದಿ ಅವರ ಮಧ್ಯವರ್ತಿಯಾಗಿದ್ದು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದೆನ್ನುತ್ತಾ ಅಸಂಬದ್ಧ ಹೇಳಿಕೆ ನೀಡುವ ಪ್ರಶಾಂತ್ ಭೂಷಣ್; ನಕ್ಸಲ್ ಪರ ಧೋರಣೆ ಹೊಂದಿದ್ದಕ್ಕಾಗಿ ಛತ್ತೀಸಘಡದ ಹಳ್ಳಿಯೊಂದರಿಂದ ಒದ್ದೋಡಿಸಲ್ಪಟ್ಟಿದ್ದ ಐಎಸ್ಐ ಏಜೆಂಟರೊಂದಿಗೆ ಸಂಪರ್ಕದಲ್ಲಿರುವ ಮೇಧಾ ಪಾಟ್ಕರ್; ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯ ಮಾಜಿ ಸದಸ್ಯ, ಸಿಪಿಐ(ಎಮ್‌ಎಲ್)ನ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ನಕ್ಸಲ್ ಪರ ಧೋರಣೆಗೆ ಹೆಸರಾದ, 'ಇಂಡಿಯಾ ಸ್ಟೂಡೆಂಟ್ಸ್ ಅಸೋಷಿಯೇಷನ್‌' ನ ಅಧ್ಯಕ್ಷ ಗೋಪಾಲ್ ರಾಯ್; ಸ್ಪ್ಯಾಮರ್ ಆಗಿದ್ದು ಸ್ಪ್ಯಾಮ್ ಮಿಂಚಂಚೆ ಕಳುಹಿಸಲೆಂದೇ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಾಲ ಪತ್ರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ, ಇತ್ತೀಚೆಗೆ ಉಗಾಂಡ ಯುವತಿಯರ ಮನೆಗೆ ಅಪರಾತ್ರಿಯಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿ ಎಲ್ಲೆಡೆ ಛೀಮಾರಿ ಹಾಕಿಸಿಕೊಂಡ ಸೋಮನಾಥ್ ಭಾರ್ತಿ; ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರಿಗೆ ತನ್ನ ಪಟಾಲಂ ಜೊತೆ ತೆರಳಿ ಲೈಂಗಿಕ ಕಿರುಕುಳ ನೀಡಿದ ಮನೋಜ್ ಕುಮಾರ್; FCRA ನಿಧಿಯನ್ನು ದುರುಪಯೋಗಪಡಿಸಿಕೊಂಡ ಕ್ರಿಸ್ಟಿನಾ ಮೇರಿ; ಪಾಠ ಮಾಡದೇ ಸಂಬಳ ಪಡೆಯುತ್ತಿದ್ದ, ತ್ರಿಮೂರ್ತಿಗಳನ್ನು ಅವಹೇಳನ ಮಾಡಿ ಭಾಷಣ ಮಾಡಿದ್ದ, ಭೂ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಹಣದ ಬೇಡಿಕೆ ಇಟ್ಟಿದ್ದ ಕುಮಾರ್ ವಿಶ್ವಾಸ್; ಭೂ ಖರೀದಿ ವ್ಯವಹಾರ ಸಮಸ್ಯೆ ಬಗೆ ಹರಿಸಲು ನಗದು ಬೇಡಿಕೆ ಇಟ್ಟ ಶಾಝಿಯಾ ಇಲ್ಮಿ; ಇವರೆಲ್ಲಾ ಆಮ್ ಆದ್ಮಿಯ ನಾಯಕರುಗಳು!
                     ಕೇಜ್ರಿವಾಲರ ಎನ್ ಜಿ ಓ ನ ನೋಂದಾವಣೆ ಬಗ್ಗೆ ಅನೇಕ ಸಂಶಯಗಳಿವೆ ಹಾಗೂ ಅದರ ಹೆಸರಿನಲ್ಲೂ ಗೊಂದಲವಿದೆ. ಅದು ಹೊಂದಿರುವ ಕಾನೂನು ಹೇಳಿಕೆಯ ಪ್ರಕಾರ ""ಪರಿವರ್ತನ್" ಯಾವುದೇ ಸಂಸ್ಥೆ ಅಥವಾ ಟ್ರಸ್ಟ್ ಕಾಯಿದೆಯಡಿ ನೋಂದಣಿಯಾಗಿಲ್ಲ, ಅದು ಜನರ ಚಳುವಳಿಯಾಗಿದ್ದು ಆದಾಯ ತೆರಿಗೆ ವಿನಾಯಿತಿ ಹೊಂದಿರುವ ಜನರ ಕೂಡಿಕೆಯಾಗಿದೆ." ಆದರೆ ಅರವಿಂದ ಕೇಜ್ರಿವಾಲ್ 2002ರಲ್ಲಿ ಪರಿವರ್ತನ್ ಗೆ ಕೊಡ ಮಾಡಿದ ದೇಣಿಗೆಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ, ಪರಿವರ್ತನ್ ಸೆಕ್ಷನ್ 12A ಅಡಿಯಲ್ಲಿ ನೋಂದಾಯಿತವಾಗಿದೆಯೆಂದು  ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದರು! ಅಂದರೆ ಆವತ್ತೇ ಅವರು ಜನತೆಗೆ ಹಸಿ ಸುಳ್ಳು ಹೇಳಲಾರಂಭಿಸಿದ್ದರು! ಪರಿವರ್ತನ್ ನೋಂದಾಯಿಸಿದ ಸಂಸ್ಥೆಯಲ್ಲವೆಂದಾದರೆ ಜನ ಸುನ್ ವೈ ಅಭಿಯಾನದ ಸಂದರ್ಭದಲ್ಲಿ ವಿಶ್ವ ಬ್ಯಾಂಕಿನಿಂದ ಅವರು ಸ್ವೀಕರಿಸಿದ ಹಣ ಹೇಗೆ ಚಲಾವಣೆಯಾಯಿತು? ಯಾಕೆಂದರೆ ವಿಶ್ವ ಬ್ಯಾಂಕ್ ಸ್ವೀಕರಿಸಿದ ಹಣಕ್ಕೆ ಸರಿಯಾದ ಕೆಲಸವನ್ನು ಪರಿವರ್ತನ್ ಮಾಡಿಲ್ಲವೆಂದು ಉಲ್ಲೇಖಿಸಿತ್ತು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಈಜಿಪ್ಟ್ ತಹ್ರೀರ್ ದಂಗೆಗೆ ಪರೋಕ್ಷ ಕಾರಣಳಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕಿ ಶಿಮ್ರಿತ್ ಲೀ "ಪಿಂಕ್ ರೆವೆಲ್ಯೂಷನ್" ಅನ್ನು ಭಾರತದಲ್ಲಿ ಮಾಡುವಂತೆ ಕೇಜ್ರಿವಾಲರಿಗೆ ಸಲಹೆ ನೀಡಿದ್ದೇಕೆ? 2003ರಲ್ಲಿ ದೆಹಲಿಯಲ್ಲಿ ದೋಷಪೂರಿತ ಮೀಟರುಗಳ ಅನುಸ್ಥಾಪನೆ ಹಾಗೂ ವಿದ್ಯುತ್ ಹೆಚ್ಚಳದ ಬಿಕ್ಕಟ್ಟಿನಲ್ಲಿ ಕೇಜ್ರಿವಾಲರ ಹೆಸರು ಉಲ್ಲೇಖವಾಗಿತ್ತು. 2012ರಲ್ಲಿ ವೆಬ್ ಸೈಟುಗಳ ಪರಿಶೀಲನೆ ನಡೆದಾಗ ಅರವಿಂದ ಕೇಜ್ರಿವಾಲರ ಪರಿವರ್ತನ್ ಹಾಗೂ ಕಬೀರ್ ವೆಬ್ ಸೈಟುಗಳೆರಡೂ ಮುಚ್ಚಲ್ಪಟ್ಟಿದ್ದೇಕೆ? ದೇಶದ್ರೋಹಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದುದರಿಂದ ಡಚ್ ನಿಂದ ಬರುವ ಎಲ್ಲಾ ದೇಣಿಗೆಗಳನ್ನು 2002ರಿಂದಲೇ ನಿಷೇಧಿಸಲಾಗಿತ್ತು. ಆದರೆ ಅರವಿಂದ ಕೇಜ್ರಿವಾಲರ ಸಂಸ್ಥೆ ನಿಷೇಧದ ನಂತರವೂ ಅಲ್ಲಿಂದ ದೇಣಿಗೆ ಪಡೆದದ್ದು ಹೇಗೆ ಮತ್ತು ಏಕೆ? ಇಂತಹ ಸೂಕ್ಷ್ಮ ವಿಚಾರಗಳು ಆಮ್ ಆದ್ಮಿಗೆ ತಿಳಿಯುವುದಿಲ್ಲವೆಂಬ ಸತ್ಯ ಕೇಜ್ರಿವಾಲರಿಗೆ ಗೊತ್ತು. ಹಾಗಾಗಿಯೇ ನಮ್ಮ ಜನ ಮತ್ತೆ ಮತ್ತೆ ಮೂರ್ಖರಾದದ್ದು!
              ಇನ್ನು ಸದಾ ಮೋದಿಯನ್ನು ವಿರೋಧಿಸುವ ಮಾಧ್ಯಮಗಳು ಈಗ ಅರವಿಂದ ಕೇಜ್ರಿವಾಲರನ್ನು ದೇವರಂತೆ ಬಿಂಬಿಸುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಯಾಕೆಂದರೆ ಆಪ್ ನ ನಾಯಕರುಗಳಾದ ಮನೀಶ್ ಸಿಸೋಡಿಯಾ ಝೀ ಚಾನಲ್‌ನ ಮಾಜಿ ಪತ್ರಕರ್ತ, ಯೋಗೇಂದ್ರ ಯಾದವ್ ಸಿಎನ್‌ಎನ್ ಐಬಿಎನ್‌ನ ಮಾಜಿ ಪತ್ರಕರ್ತ, ಶಾಜಿಯಾ ಇಲ್ಮಿ ಮಾಜಿ ಪತ್ರಕರ್ತೆ ಮತ್ತು ಅಶುತೋಷ್ ಐಬಿಎನ್7ನ ಮಾಜಿ ವ್ಯವಸ್ಥಾಪಕ ಸಂಪಾದಕ! ಭಾರತೀಯತೆಯನ್ನು ವಿರೋಧಿಸುವ ಮಾಧ್ಯಮಗಳು ಈ ದೇಶದ್ರೋಹಿಗಳನ್ನು ಬೆಂಬಲಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
              ಕೇಜ್ರಿವಾಲರ ಸರಳತೆಯ ಬಗ್ಗೆ ಹೇಳುವುದಾದರೆ ಅದು ಮಾಧ್ಯಮಗಳು ಕೇಜ್ರಿವಾಲರಿಗೆ ವಿಪರೀತ ಪ್ರಚಾರ ಕೊಡಲು ಬಳಸಿದ ವಿಧಾನವಷ್ಟೇ! ಸರಳತೆಯ ವಿಷಯಕ್ಕೆ ಬಂದರೆ ಅನೇಕ ರಾಜಕಾರಣಿಗಳು ನಮಗೆ ಕಾಣ ಸಿಗುತ್ತಾರೆ. ಇಂದಿಗೂ ಸರಕಾರೀ ಬಂಗಲೆಗೆ ಹೋಗದೆ ತಮ್ಮ ಎಂದಿನ ಸಣ್ಣ ಮನೆಯಲ್ಲಿ ವಾಸಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸರಕಾರೀ ವಾಹನ ಬಳಸದೆ ತಮ್ಮ ತಂದೆಯ ಮನೆಯಲ್ಲಿ ವಾಸಿಸುವ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಐಐಟಿ ಪದವೀಧರನಾದರೂ ಯಾವುದೇ ಭದ್ರತೆ ತೆಗೆದುಕೊಳ್ಳದೆ, ಸ್ವಂತ ವಾಹನವನ್ನಷ್ಟೇ ಬಳಸುತ್ತಾ ತಮ್ಮ ಹೆಂಚಿನ ಮನೆಯಲ್ಲೇ ವಾಸಿಸುತ್ತ ಸರಳ ಜೀವನ ನಡೆಸುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, 12 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದರೂ ಆಸ್ತಿಯಲ್ಲಿ ಏರಿಕೆಯಾಗದ ನರೇಂದ್ರ ಮೋದಿಯವರ ಸರಳತೆಯ ಮುಂದೆ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸಿದ ಅರವಿಂದರ ಸರಳತೆ ಅವರ ಭಜನಾ ಮಂಡಳಿಗಳ ಆಲಾಪನೆಯಷ್ಟೇ! ಮೊದಲು ಸರಕಾರೀ ಬಂಗಲೆ, ವಾಹನ ಬೇಡವೆಂದಿದ್ದ ಕೇಜ್ರಿವಾಲ್ ಆಮೇಲೆ ಇದನ್ನೆಲ್ಲಾ ಬಳಸಿಕೊಂಡಿರುವುದು ಅವರ ಗೋಸುಂಬೆತನವನ್ನು ಬಯಲು ಮಾಡಿತು!
             ಕಾಂಗ್ರೆಸ್ ವಿರುದ್ದ ಪ್ರಚಾರ ಮಾಡಿ, ಕಾಂಗ್ರೆಸನ್ನು ಸಂಪೂರ್ಣವಾಗಿ ಕಿತ್ತೆಸೆಯುತ್ತೇವೆಂದು ಡಂಗುರ ಸಾರಿ, ಎಂತಹ ಪರಿಸ್ಥಿತಿಯಲ್ಲಿಯೂ ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಹೇಳಿದ್ದ ಆಮ್ ಆದ್ಮಿಗೆ ಸರಕಾರ ರಚಿಸಲು ಕಾಂಗ್ರೆಸ್ ಸಹಾಯವೇ ಬೇಕಾದದ್ದು ವಿಪರ್ಯಾಸ! ಶೀಲಾ ದೀಕ್ಷಿತ್ ವಿರುದ್ದ 300 ಪುಟಗಳ ಪುರಾವೆ ಇದೆ, ಅಧಿಕಾರಕ್ಕೆ ಬಂದ ಹದಿನೈದು ದಿನಗಳೊಳಗೆ ಶೀಲಾರನ್ನು ಜೈಲಿಗಟ್ಟುತ್ತೇನೆಂದ ಅರವಿಂದ ಅಧಿಕಾರಕ್ಕೆ ಬಂದ ಮೇಲೆ ಭಾಜಪಾಕ್ಕೆ ಸಾಕ್ಷ್ಯಾಧಾರ ಒದಗಿಸಲು ಕೇಳಿದ್ದು ಆಮ್ ಆದ್ಮಿಯ ಬಣ್ಣ ಬಯಲು ಮಾಡಿದ ಮುಖ್ಯ ಅಂಶ! ನಿಷ್ಕಳಂಕರಿಗೆ ಟಿಕೆಟ್ ಕೊಡುತ್ತೇವೆಂದ ಕೇಜ್ರಿವಾಲ್ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್, ಭಾಜಪಾದಲ್ಲಿ ಬಂಡಾಯವೆದ್ದು ಹೊರಬಂದವರಿಗೆ! ಆಮ್ ಆದ್ಮಿ ಪಕ್ಷದ 28ಶಾಸಕರ ಪೈಕಿ 12ಶಾಸಕರು ಕೊಟ್ಯಾಧಿಪತಿಗಳು! ದೆಹಲಿಯಲ್ಲಿ ನೀರು ಸರಬರಾಜು ಇಲ್ಲದೇ ಇರುವ ಮನೆಗಳ ಸಂಖ್ಯೆ 38.6%. ಇವರಿಗೆ ಉಚಿತ ನೀರು ಸಿಗುವುದಿಲ್ಲ. ಅದೇನಿದ್ದರೂ ಉಳಿದ ಆರ್ಥಿಕವಾಗಿ ಅನುಕೂಲ ಹೊಂದಿರುವ ವರ್ಗಕ್ಕೆ ಮಾತ್ರ! ದೆಹಲಿಗೆ ಅರವಿಂದ, ಕೇಂದ್ರಕ್ಕೆ ಮೋದಿ ಎಂದು ಜನರನ್ನು ಯಾಮಾರಿಸಿ ಮತ ಕಸಿದುಕೊಂಡ ಕೇಜ್ರಿವಾಲ್ ಈಗ ಮೋದಿ ವಿರುದ್ದ ಸ್ಪರ್ದಿಸಬಯಸಿದ್ದಾರೆ! ರಾಜಕೀಯ ಪ್ರವೇಶಿಸುವುದಿಲ್ಲವೆಂದು ಪಕ್ಷ ಕಟ್ಟಿದರು. ಯಾವುದೇ ಪಕ್ಷವನ್ನು ಬೆಂಬಲಿಸಲಾರೆ ಎಂದು ಬಡಬಡಿಸಿ "ಕೈ" ಹಿಡಿದರು. ಚುನಾವಣೆ ಮೊದಲು ನೀಡಿದ ಭರವಸೆಗಳಲ್ಲಿ ಯಾವೊಂದನ್ನೂ ಪೂರೈಸದೇ ಸ್ವಪಕ್ಷೀಯರಿಂದಲೇ ನಿಂದನೆಗೊಳಗಾದರು. ದೇಶ ಮೊದಲು ಜಾತಿ, ಮತವಲ್ಲ ಎಂದವರು ಇಶ್ರತ್ ಜಹಾನ್ ಳದ್ದು ನಕಲಿ ಎನ್ ಕೌಂಟರ್ ಎಂದರು. ಹಿಂದೂಗಳ ಮೇಲೆ ದೌರ್ಜನ್ಯವೆಸಗಿ 32 ಪ್ರಕರಣಗಳನ್ನು ಎದುರಿಸುತ್ತಿರುವ ರಜಾರನ್ನು ಭೇಟಿಯಾಗಿ ಬೆಂಬಲ ಕೋರಿದರು. ತಸ್ಲಿಮಾ ನಸ್ರೀನ್ ವಿರುದ್ದ ಫತ್ವಾ ಹೊರಡಿಸಿದ್ದ ಮೌಲಾನಾ ತೌಕೀರ್ ಹೆಣ್ಣುಮಕ್ಕಳ ಮೇಲೆ ಫತ್ವಾವನ್ನೇ ಹೊರಡಿಸಿಲ್ಲ ಎಂದರು!
           ಇರಲಿ ಸರಕಾರ ರಚಿಸಿದ ನಂತರವಾದರೂ ಸರಿಯಾಗಿ ಆಡಳಿತ ನಡೆಸಿದ್ದಾರೆಯೇ?ಕಾರಿನಲ್ಲಿ ಸಂಪುಟ ಸಭೆ ನಡೆಸುವುದು, ಬೀದಿಯಲ್ಲಿ ಕಡತ ವಿಲೇವಾರಿ ಮಾಡುವುದು ಪಾರದರ್ಶಕ ಆಡಳಿತವೇ? ನ್ಯಾಯಾಧೀಶರ ಅದಿಕಾರವನ್ನು ಮೊಟಕುಗೊಳಿಸಬೇಕು ಎನ್ನುವುದು, ನ್ಯಾಯಾಂಗ ಕಾರ್ಯಾಂಗದಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುವುದು, ಪ್ರತ್ಯೇಕತವಾದಿಗಳನ್ನು ಪ್ರೋತ್ಸಾಹಿಸುವುದು, ಸಲಿಂಗ ಕಾಮವನ್ನು ಪ್ರೋತ್ಸಾಹಿಸುವುದು, ದೂರವಾಣಿ ಸಂದೇಶದ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಸರ್ಕಾರ ರಚಿಸುವುದು, ನಿತ್ಯ ಬೀದಿಯಲ್ಲಿ ನಿಂತು ಕೂಗಾಡುವುದು, ಸದಾ ಮಾಧ್ಯಮದ ಮುಂದೆ ಬಡಬಡಿಸುವುದು ಒಟ್ಟಾರೆ ಒಂದು ದಿನವೂ ಆಡಳಿತವನ್ನು ನಡೆಸಲೇ ಇಲ್ಲ ಈ ಸರಕಾರ. ಸೋಮನಾಥ್ ಭರ್ತಿ ನಡುರಾತ್ರಿಯಲ್ಲಿ ಆಫ್ರಿಕಾ ಮಹಿಳೆಯರ ಮನೆಗೆ ನುಗ್ಗಿದ ಪರಿಣಾಮ 22 ಆಫ್ರಿಕನ್ ದೇಶಗಳಿಗೆ ಸಮಜಾಯಿಷಿ ನೀಡಬೇಕಾಗಿ ಬಂತು! ಹಾಟ್ ಲೈನ್ ಮೂಲಕ ಮೊದಲ ದಿನವೇ 4500 ದೂರುಗಳು ಬಂದವಂತೆ! ಅವುಗಳಿಗೆ ಪರಿಹಾರ ನಾಸ್ತಿ. ಮೋದಿಯವರ "ಸ್ವಾಗತ್"ನಂತಹ ಬಿಗಿಯಾದ ಪಾರದರ್ಶಕ ವ್ಯವಸ್ಥೆಯೆಲ್ಲಿ, ಈ ಕೇಜ್ರಿವಾಲರ ಹಾಟ್ ಲೈನಿನ ಬೂಟಾಟಿಕೆಯೆಲ್ಲಿ?ಸಂದೇಶದ ಮುಖೇನ ಜನಾಭಿಪ್ರಾಯ ಪಡೆದು ಸರ್ಕಾರ ರಚಿಸಿದ ಕೇಜ್ರಿವಾಲ್ ಅಭ್ಯರ್ಥಿಯನ್ನು ನಿಲ್ಲಿಸುವಾಗ, ಶಾಸಕರಿಗೆ ಸಚಿವ ಸ್ಥಾನ ಕೊಡುವಾಗ, ಲೋಕಸಭೆಗೆ ಸ್ಪರ್ದಿಸುವ ಕುರಿತು, ಹಾಗೂ ಈಗ ಸರಕಾರವನ್ನು ವಿಸರ್ಜಿಸುವಾಗ ಜನರ ಅಭಿಪ್ರಾಯ ಯಾಚಿಸಿದ್ದಾರೆಯೇ? ಅಷ್ಟಕ್ಕೂ ಲೋಕಪಾಲಕ್ಕೆ ಭಾಜಪಾ, ಕಾಂಗ್ರೆಸ್ ಶಾಸಕರು ಬೆಂಬಲಿಸಲಿಲ್ಲವೆಂದು ಹೇಳುವ ಕೇಜ್ರಿವಾಲರದ್ದು ಅದೂ ಕೂಡಾ ಹಸಿ ಸುಳ್ಳೆಂದು ಸಾಬೀತಾಗಿದೆ. ಲೋಕಪಾಲ ವಿಧೇಯಕವು ನಿಯಮಾವಳಿಗಳಿಗನುಸಾರವಾಗಿ ಸಲ್ಲಿಸಲಾಗಿಲ್ಲವೆಂದು ಸ್ಪೀಕರ್ ಲೆಫ್ಟಿನೆಂಟ್ ಗವರ್ನರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿತವಾಗಿದೆ! ಹೇಳುತ್ತಾ ಹೋದರೆ ಮುಗಿಯದು.
           ಅರುಣ್ ಜೇಟ್ಲಿ ಹೇಳಿದಂತೆ ಮೊದಲು ರಾಜಕೀಯ ಪಕ್ಷವೊಂದನ್ನು ಕಟ್ಟಿ ಆಮೇಲೆ ಸಿದ್ಧಾಂತ ಮತ್ತು ಸದಸ್ಯರನ್ನು ಹುಡುಕುತ್ತಾ ಹೋಗುವುದರಲ್ಲಿ ಅಪಾಯವಿದೆ. ಅದರಿಂದಾಗಿಯೇ ಇಂದು ಆಮ್ ಆದ್ಮಿಯಲ್ಲಿ ಆಮ್ ಆದ್ಮಿಯ ಬದಲಾಗಿ ಭಾರತ ವಿರೋಧಿಗಳು, ಮಾವೋವಾದಿಗಳು, ಸ್ವಯಂಘೋಷಿತ ವಿಚಾರವಾದಿಗಳು, ತಮ್ಮ ಸಿದ್ಧಾಂತವನ್ನು ಹೇರಲೆತ್ನಿಸುವವರು ಸೇರಿ ಅದು ದೆಹಲಿಯಲ್ಲಿ ಅರಾಜಕತೆಯನ್ನು ಸೃಷ್ಟಿಸಿರೋದು!  ಈಗ ಲೋಕಸಭೆಗೆ ಸ್ಪರ್ದಿಸಲು ಸಜ್ಜಾಗುತ್ತಿರುವ ಪೊರಕೆ ಪಕ್ಷಕ್ಕೆ ಮತದಾರರು ಪೊರಕೆ ತೋರಿಸುತ್ತಾರೋ ಇಲ್ಲವೋ ಎಂಬುದರ ಮೇಲೆ ದೇಶದ ಭವಿಷ್ಯವೂ ನಿಂತಿದೆ. ಜನ ಭೃಷ್ಟಾಚಾರ ನಿರ್ಮೂಲನೆಯೆಂಬ ಖೆಡ್ಡಾದಲ್ಲಿ ಬಿದ್ದು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜೀ ಮಾಡಿಕೊಂಡರೆ ಜಗದ್ಗುರು ಭಾರತ ಬಿಡಿ ಭಾರತ ಉಳಿಯುವುದೇ ಕನಸಾದೀತು. ಎಚ್ಚರ!

ಶುಕ್ರವಾರ, ಫೆಬ್ರವರಿ 14, 2014

ಧರ್ಮೋ ರಕ್ಷತಿ ರಕ್ಷಿತಃ

 ಯಮನೊಡನೆ ಛಲದಿ ಕಾದು ತನ್ನಿನಿಯನ ಪ್ರಾಣವನ್ನು ಪತಿವೃತಾ ಧರ್ಮದ ಫಲದಿಂದ ಉಳಿಸಿಕೊಂಡ ಸಾವಿತ್ರಿಯ ಪ್ರೇಮ!
ಕಾಡಿಗಟ್ಟಿದರೂ ರಘುವರನೊಳು ತಪ್ಪಿಲ್ಲವೆಂದು ತನ್ನ ದೌರ್ಭಾಗ್ಯವನ್ನಷ್ಟೇ ಹಳಿದುಕೊಂಡ ಮಹಾ ಪತಿವೃತೆ ಸೀತೆಯ ಪತಿಭಕ್ತಿ!
ಜಟೆ, ಉರಗ, ಬೂದಿಗಳಿಂದಾವೃತಗೊಂಡು ಜಗ ಮರೆತು ಕುಳಿತ ಜಗದೀಶ್ವರನನ್ನೊಲಿಸಿಕೊಳ್ಳಲು ಬಿಸಿಲು, ಗಾಳಿ, ಮಳೆಯ ಲೆಕ್ಕಿಸದೆ ಸೇವೆ ಮಾಡಿದ ಪಾರ್ವತಿಯ ನಿಷ್ಠೆ!
ಇಂತಹ ಎಷ್ಟು ಉದಾಹರಣೆಗಳು ಬೇಕು?
ಅಂತಹ ಪ್ರೀತಿ ಒಂದು ದಿವಸದ್ದಲ್ಲ!
 ಈಗ?? ವಸನದ ವರ್ಣ ನೋಡಿ ನಿರ್ಧರಿಸುವ ವ್ಯಕ್ತಿಯ ಸಂಬಂಧದ ಸ್ಥಿತಿ! ಕ್ಷಣಿಕ ಸುಖಕ್ಕಾಗಿ ಶೀಲ ಕಳೆದುಕೊಳ್ಳುವ "ಶೀಲ"! ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸವನ್ನೇ ಅರಿಯದ ಮೂರ್ಖಮನ! ಧಿಕ್ಕಾರವಿರಲಿ ಈ ಭಾರತೀಯತೆಯನ್ನು ಕೊಲ್ಲುವ ನಡವಳಿಕೆಗೆ!
ಪ್ರೀತಿಸುವುದಕ್ಕೆ ನನ್ನ ವಿರೋಧವಿಲ್ಲ... ಪ್ರೀತಿಯ ಹೆಸರಲ್ಲಿ ಉದಾತ್ತ ಸಂಸ್ಕೃತಿಯನ್ನು ಅಣಕಿಸಿ ಸಂಸ್ಕೃತಿಯ ಅವನತಿಗೆ ಕಾರಣವಾಗುವ ಆಚರಣೆಗಳಿಗೆ ಬದ್ದ ವಿರೋಧವಿದೆ.
ಧರ್ಮೋ ರಕ್ಷತಿ ರಕ್ಷಿತಃ

ಗುರುವಾರ, ಫೆಬ್ರವರಿ 13, 2014

ಬೆಳದಿಂಗಳ ಬಾಲೆ

ಅವಳು ಬೆಳದಿಂಗಳ ಬಾಲೆ...
ಕಣ್ಣಿಗೆ ಕಾಣಳೇಕೆ...?
.
.
.
.
.
.
.
.
.
.
.
ಏನಿಲ್ಲ ಮಾರಾಯರೆ ಬಲಾಹಕನ ಕಬಂಧ ಬಾಹುಗಳು ಚಾಚಿವೆ!
ಅಂದರೆ ಮೋಡ ಕವಿದಿದೆ!

ಸೋಮವಾರ, ಫೆಬ್ರವರಿ 10, 2014

ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!

ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!
ಬೆಳ್ತಂಗಡಿ!
            ಈ ಹೆಸರು ಅಷ್ಟೇನೂ ಪರಿಚಿತವಲ್ಲ. ಹೆಚ್ಚಿನವರಿಗೆ ಧರ್ಮಸ್ಥಳ, ಉಜಿರೆಯ ಹೆಸರು ಗೊತ್ತಿರುತ್ತದೆ ವಿನಾ ಬೆಳ್ತಂಗಡಿಯದಲ್ಲ! ಯಾಕೆ ಹೀಗೆ? ಬಹಳ ಹಿಂದೆಯೂ "ಬೋಲ್ತೆರ್" ಎಂಬ ಹೆಸರಿನಿಂದ ಮಾರುಕಟ್ಟೆಯ ಅಗ್ರಗಣ್ಯ ತಾಣವಾಗಿದ್ದ ಬೆಳ್ತಂಗಡಿ ಈಗ ತಾಲೂಕು ಕೇಂದ್ರವಾಗಿದ್ದೂ ಹಿಂದುಳಿದ ಪ್ರದೇಶವಾಗಿದೆಯೆಂದರೆ ಅದಕ್ಕೆ ಇಲ್ಲಿ ಶಾಸಕರಾಗಿದ್ದು ಗೂಂಡಾಗಿರಿ ಮಾಡಿಕೊಂಡು ತಮ್ಮ ಹೊಟ್ಟೆ ಮಾತ್ರ ತುಂಬಿಸಿಕೊಂಡು ಬರೇ ಮಾತಿನಲ್ಲಿ ಜನರನ್ನು ಅಟ್ಟಕ್ಕೇರಿಸಿ ಬೇಸ್ತು ಬೀಳಿಸಿದವರೇ ಕಾರಣ! ಇಲ್ಲಿ ನಡೆಯುವುದು ಬರೇ ಜಾತಿ ರಾಜಕಾರಣ!
             ಇಂತಹ ಬೆಳ್ತಂಗಡಿ ನಕ್ಸಲರ ಆಶ್ರಯ ತಾಣವೂ ಹೌದು. ಹಿಂದೆ ಮಲೆಕುಡಿಯ ಜನಾಂಗಕ್ಕೆ ಮಧ್ಯ ಕುಡಿಸಿ ತಮ್ಮ ಸಂಘಟನೆ ವಿಸ್ತರಿಸಿಕೊಳ್ಳುತ್ತಿದ್ದ ಕಮ್ಯೂನಿಷ್ಟರಿಗೆ ಸಧ್ಯಕ್ಕೆ ಸಿಕ್ಕಿದ್ದು ಸೌಜನ್ಯ ವಿಷಯ. ಈ ವಿಷಯದಲ್ಲಿ ನ್ಯಾಯಕ್ಕಾಗಿ ಪ್ರಾಣಾಪಾಯವನ್ನೂ ಲೆಕ್ಕಿಸದೇ ಹೋರಾಡುವವರು ಯಾರೋ! ಆದರೆ ಈ ವಿಷಯವನ್ನು ಬಂಡವಾಳ ಮಾಡಿಕೊಂಡು ತಮ್ಮ ಸಂಘಟನೆ ವಿಸ್ತರಿಸಿಕೊಳ್ಳುತ್ತಾ ಹಿಂದೂಗಳಿಗೆ ಕಂಟಕಪ್ರಾಯರಾದ ನಕ್ಸಲ್ ವಾದಿಗಳು ಹಾಗೂ ದೇಶದ್ರೋಹಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಬೆಳ್ತಂಗಡಿಯ ಜನಜೀವನ ಅಸ್ತವ್ಯಸ್ತಗೊಳಿಸುತ್ತಿರುವುದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳದೇ ಇರುವುದು ಬೇಸರದ ಸಂಗತಿ.
            ಸಧ್ಯಕ್ಕೆ ಇಲ್ಲಿರುವುದು "ಕೈ" ಪ್ರಾಬಲ್ಯ. ಅದಕ್ಕೆಂದೇ ಇಲ್ಲಿ ನಡೆಯುವ ಗೋಕಳ್ಳತನ-ಹತ್ಯೆ, ಲವ್-ಲ್ಯಾಂಡ್-ವ್ಯಾಪಾರ ಜಿಹಾದ್ ಸುದ್ದಿಯಾಗೋದೇ ಇಲ್ಲ! ಇಲ್ಲೊಂದು ಸರಕಾರೀ ಪದವಿ ವಿದ್ಯಾಲಯವಿದೆ.  ಅಲ್ಲಿ ಯಾವಾಗ ನೋಡಿದರೂ ಶಿಕ್ಷಕರ ಕೊರತೆ. ಕಳೆದ ವರ್ಷವಂತೂ ವಿದ್ಯಾರ್ಥಿಗಳು ತಿಂಗಳ ಪರ್ಯಂತ ಪರದಾಡಬೇಕಾಯಿತು. ಈಗ ಕೆಲವು ಅತಿಥಿ ಉಪನ್ಯಾಸಕರಿಂದಾಗಿ ನಾಮಕೆವಾಸ್ತೆ ತರಗತಿಗಳು ನಡೆಯುತ್ತಿವೆ. ಕಳೆದ ವರ್ಷ ಪ್ರಾಂಶುಪಾಲರನ್ನು ಹೇಳದೇ ಕೇಳದೇ ವರ್ಗಾವಣೆ ಮಾಡಲಾಗಿತ್ತು. ನಂತರ ಈ ವರ್ಗಾವಣೆಯ ಹಿಂದಿದ್ದ "ಕೈ"ವಾಡ ಬೆಳಕಿಗೆ ಬಂತು! ಅದರ ಹಿಂದಿದ್ದದ್ದು NSUI! ಇದರ ವಿರುದ್ದ ಎಬಿವಿಪಿ ಪ್ರತಿಭಟನೆ ನಡೆಸಿತಾದರೂ ಅದನ್ನು ಹತ್ತಿಕ್ಕಲಾಯಿತು. ಸ್ಥಳಕ್ಕೆ ಬಂದ ಶಾಸಕ ವಸಂತ ಬಂಗೇರ "ನೀವು ಓದುವುದು ಬಿಟ್ಟು ಬರೇ ಪ್ರತಿಭಟನೆಗಳಲ್ಲಿ ತೊಡಗಿದ್ದೀರಿ. ಇದರ ಪರಿಣಾಮ ನೆಟ್ಟಗಾಗದು. ಇದು ನಾನು ಕಟ್ಟಿಸಿದ ವಿದ್ಯಾಲಯ" ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೈದು NSUI ಸಂಘಟನೆಯ ವಿದ್ಯಾರ್ಥಿಗಳಿಂದ ಚಪ್ಪಾಳೆಗಿಟ್ಟಿಸಿಕೊಂಡು ಹೋದದ್ದೂ ಆಯಿತು. ಆ ವಿಚಾರ ಮುಚ್ಚಿಯೂ ಹೋಯಿತು!
                 ತರಗತಿಗಳಿಗೆ ಬಾರದೆ ಉಳಿದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂರಲು ಬಿಡದ NSUI ಸಂಘಟನೆ ಇಲ್ಲಿ ಮಾಡುತ್ತಿರುವುದು ಗೂಂಡಾಗಿರಿ. ವಿದ್ಯಾಲಯದ ಚುನಾವಣೆಯಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದಲ್ಲೂ ಇವರದ್ದೇ ಆಟಾಟೋಪ! ಪ್ರತಿನಿತ್ಯ ಒಂದಿಲ್ಲೊಂದು ಕಿರಿಕಿರಿ. ಇವರಿಂದಾಗಿ ವಿದ್ಯಾಲಯದ ಚುಣಾವಣೆಯೂ ನಿಂತುಹೋಗಿತ್ತು. ಅದಕ್ಕೆ ಪೂರಕವಾಗಿ ವಿದ್ಯಾಲಯದ ಪಕ್ಕದಲ್ಲೊಂದು ಅನಧಿಕೃತ ಮಧ್ಯದಂಗಡಿ! ಕೆಲವು ದಿನಗಳ ಹಿಂದೆ ಮುಸಲ ವಿದ್ಯಾರ್ಥಿಯೊಬ್ಬ ಹಿಂದೂ ಹುಡುಗನಿಗೆ ಹೊಡೆದಿದ್ದ. ಹೊಡೆದದ್ದು "ಬಾಂಧವ"ನಲ್ಲವೇ? ಸುದ್ದಿಯಾಗಲೇ ಇಲ್ಲ. ನಮ್ಮವರ ಸಹಿಷ್ಣುತೆಗೆ ಬೆಂಕಿ ಹಾಕ!
             ಪ್ರಶ್ನೆ ಇರುವುದು ವಿದ್ಯಾರ್ಥಿಗಳ ಹಕ್ಕಿಗಾಗಿ ಹೋರಾಡಬೇಕಾದ ಸಂಘಟನೆ ಗೂಂಡಾಗಿರಿ ಮಾಡುವುದು, ಉಪನ್ಯಾಸಕರಿಗೇ ಬೆದರಿಕೆ ಹಾಕುವುದು ಎಷ್ಟು ಸರಿ? ವಿದ್ಯಾಲಯದ ಸಮೀಪದಲ್ಲಿ ಮಧ್ಯ, ಮಾದಕ ದೃವ್ಯ ಚಟುವಟಿಕೆಗಳಿಗೆ ಸರಕಾರ ಕಡಿವಾಣವೇಕೆ ಹಾಕುವುದಿಲ್ಲ? ಅನದಿಕೃತ ಮಧ್ಯದಂಗಡಿ ಬಗ್ಗೆ ಕಾನೂನು ಕ್ರಮ ಯಾಕೆ ತೆಗೆದುಕೊಂಡಿಲ್ಲ? ಶಾಸಕನಾದವ "ನನಗೆ ಆ ಕಾಲೇಜಿಗೆ ಹೋಗಲು ಇಷ್ಟವಿಲ್ಲ. ನಾನು ಕಟ್ಟಿಸಿದ ಕಾಲೇಜಿನಲ್ಲಿ ನನ್ನ ವಿರುದ್ದವೇ ಪ್ರತಿಭಟನೆ ಮಾಡುತ್ತಾರೆಂದು" ಇನ್ನೊಂದು ಕಾಲೇಜಿನಲ್ಲಿ ಭಾಷಣ ಬಿಗಿದದ್ದು ಯಾವ ಪುರುಷಾರ್ಥಕ್ಕೆ? ಶಾಲೆ ಇವ ಕಟ್ಟಿಸಲು ಸರಕಾರದ ದುಡ್ಡೇನು ಇವನ ಅಪ್ಪನ ಆಸ್ತಿಯೇ? ಏಳೆಂಟು ತಿಂಗಳಿಂದ ಗಬ್ಬೆದ್ದು ಹೋಗಿರುವ ನಾರಾವಿ-ಅಳದಂಗಡಿ-ಗುರುವಾಯನಕೆರೆ ಮೂಲಕ ಸಾಗುವ ರಾಜ್ಯ ಹೆದ್ದಾರಿಯನ್ನು ದುರಸ್ತಿ ಮಾಡದ ಈತ ಇದ್ದ ಜಾತ್ರೆಗಳಿಗೆ ಹೋಗಿ ಅಷ್ಟು ಲಕ್ಷ ಕೊಡುತ್ತೇನೆ, ಇಷ್ಟು ಲಕ್ಷ ಕೊಡುತ್ತೇನೆ ಎಂದು ಜನರನ್ನು ಮಂಗ ಮಾಡುವುದೇಕೆ? ಪ್ರಚಾರದ ಸಮಯದಲ್ಲಿ ಪಿಲಿ ಚಾಮುಂಡಿ ಕೊಳವನ್ನು ಸುನ್ನತ್ ಕೆರೆ ಮಾಡುತ್ತೇನೆಂದ  ಇವನಿಗೆ ಬ್ಯಾರಿಗಳೇನು ಸುನ್ನತ್ ಮಾಡಿಸಿದ್ದಾರೆಯೇ? ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅವಸ್ಥೆ ನೋಡಬೇಕು - ಸರಿಯಾದ ರಸ್ತೆಯಿಲ್ಲದ ಹಳ್ಳಿಗಳು, ಸೇತುವೆಗಳಿಲ್ಲದೆ ಮಳೆಗಾಲದಲ್ಲಿ ನದಿ ದಾಟಲು ಪರದಾಡುವ ಜನರು, ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು, ಮಲೆನಾಡ ತಪ್ಪಲಲ್ಲಿದ್ದರೂ ನೀರಿಗಾಗಿ ಪರದಾಟ! ಮಲೆಯಾಳಿಗಳಿಂದಾಗಿ ರಬ್ಬರ್ ಗುಡ್ದಗಳಾಗಿ ಮರುಭೂಮಿಗಳಾಗುತ್ತಿರುವ ಪಶ್ಚಿಮ ಘಟ್ಟದ ತಪ್ಪಲು, ಕುತಂತ್ರಿಗಳ ಮತಾಂತರ, ನಿರಂತರ ಗೋಹತ್ಯೆ, ಸುದ್ದಿಯೇ ಆಗದ ಲವ್ ಜಿಹಾದ್, ಲ್ಯಾಂಡ್ ಜಿಹಾದ್.....ಹಾಂ ಬೋಲ್ತೆರ್ ಮೇ ಬೋಲ್ ನೇ ವಾಲಾ ಕೋಯೀ ನಾಹೀ ಹೈ! ಇಂತಹ ಬೆಳ್ತಂಗಡಿಯನ್ನು ಸೋಮನಾಥನೇ ಕಾಪಾಡಬೇಕು!
P.S:  ಇವತ್ತಿಗೂ ನಾನು ಊರಿಗೆ ಹೋಗುವಾಗ ಮನೆ ತಲುಪಬೇಕಾದರೆ ಮೂವತ್ತು ನಿಮಿಷ ಕಾಡುದಾರಿಯಲ್ಲಿ ಸಾಗಬೇಕು. ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆಲ್ಲಾ ಮೊಬೈಲ್ ಮಿಣಿ ಮಿಣಿ ಬೆಳಕಿನಲ್ಲಿ ಸಾಗಿದ್ದಿದೆ. ಮಧ್ಯರಾತ್ರಿ ಸರಿಯಾದ ಟಾರ್ಚ್ ಲೈಟ್ ಇಲ್ಲದೆ ಪರದಾಡುತ್ತಾ ಸಾಗಿದ್ದಿದೆ. ಹಾಗೆ ಸಾಗುವಾಗ ಕಾಡುಹಂದಿಗಳ ಹಿಂಡು, ಹಾವುಗಳು, ಕಾಡುಕೋಣಗಳ ಹಿಂಡು ಸಾಮಾನ್ಯ. ಜೊತೆಗೆ ಚಿರತೆಯ ಹೆದರಿಕೆ ಬೇರೆ! ಮಾರ್ಗ ಮಧ್ಯದಲ್ಲೊಂದು ನದಿ ಅಡ್ದ ಬರುತ್ತೆ. ಮಳೆಗಾಲದಲ್ಲಿ ದಾಟುವ ಹಾಗಿಲ್ಲ. ಕಾರಣ ಸೇತುವೆಯೇ ಇಲ್ಲ. ಅದಕ್ಕೆ ಸೇತುವೆ ಮಾಡಿಸಿಕೊಡುತ್ತೇನೆಂದು ಜನರನ್ನು ಯಾಮಾರಿಸಿ ಗೆದ್ದ ಬಂಗೇರ ನಾಪತ್ತೆ! ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!
                 ಇಲ್ಲಿ ಹೇಳಲಾಗದೇ ಉಳಿದ ಭಯಾನಕತೆಗಳು ಇನ್ನೂ ಇವೆ. ಅದಕ್ಕೆ ಪೂರಕ ಸಂದರ್ಭಕ್ಕೆ ಕಾಯುತ್ತಿದ್ದೇನೆ. ಇದು ನನ್ನೊಬ್ಬನ ಕೂಗಲ್ಲ...ಭಾರತದ ಪ್ರತಿಯೊಂದು ಕಡೆ ಇರುವ ದುರವಸ್ಥೆ...ಇದನ್ನು ಸುವ್ಯವಸ್ಥೆಯಾಗಿ ಪರಿವರ್ತಿಸಬೇಕಾದರೆ #ನಮೋ ಎನ್ನಲೇ ಬೇಕು. ಮತ್ತದೇ ನಿಟ್ಟುಸಿರು..."ಹಿಂದೂಗಳೆಲ್ಲಾ ಒಂದಾದರೆ..."