ಪುಟಗಳು

ಶನಿವಾರ, ಡಿಸೆಂಬರ್ 28, 2019

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ


                ಸಂಶೋಧನೆ...ಸಂಶೋಧನೆ...ಸಂಶೋಧನೆ. ಆತನ ಉಸಿರೇ ಅದರಲ್ಲಿತ್ತು. ಬಹುಮುಖಿ ಪ್ರತಿಭೆಯೊಂದು ವಿಷಯದ ಆಳ ಹೊಕ್ಕು ಶೋಧಿಸಿ ಅದನ್ನು ಸಮಾಜಮುಖಿಯಾಗಿಸಿ "ಇದಂ ನ ಮಮ" ಎಂದು ಸನಾತನ ಧರ್ಮದ ಸಹಜ ಭಾವ ತೋರಿದ ಶ್ರೇಷ್ಠ ಬದುಕು. ಅದು ಮೆಕಾಲೆ ಪ್ರಣೀತ ಶಿಕ್ಷಣದಿಂದ ತಮ್ಮ ಮೆದುಳನ್ನು ಅಡವಿಟ್ಟಿದ್ದ ಭಾರತೀಯ ಸಮಾಜ ಹಾಗೂ ಬ್ರಿಟಿಷರ ಪಳಿಯುಳಿಕೆಗಳ ವಿರುದ್ಧ ಸೆಣಸಾಟ ನಡೆಸಿ ನಿಜ ಇತಿಹಾಸದ ನವನೀತವನ್ನು ಕಡೆದ ಬದುಕು. ಗಣಿತಜ್ಞ, ಇತಿಹಾಸ ಸಂಶೋಧಕ, ಹಿಂದುತ್ವದ ವಿದ್ವಾಂಸ, ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಭಾಷೆಗಳಲ್ಲಿ ಸಾಧನೆಯನ್ನು ನಡೆಸಿದ, ಸಾಹಿತ್ಯವನ್ನು ಸೃಷ್ಟಿಸಿದ, ಅಪಾರ ದೂರದರ್ಶಿತ್ವ ಹೊಂದಿದ್ದ, ಹಲವುಗಳ ಆದ್ಯಪ್ರವರ್ತಕ, ಸಾಂಪ್ರಾದಾಯಿಕ ಸಂಸ್ಕೃತದ ರಸಧಾರೆ, ಹೆಸರಿಗೆ ಅನ್ವರ್ಥವೆನಿಸುವ ನವರತ್ನ ಇತ್ತೀಚೆಗೆ ಮರೆಯಾಯಿತು.

                ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದ ಈ ದೇಶಸ್ಥ ಕುಟುಂಬಕ್ಕೆ ಉತ್ತರಾದಿ ಮಠದ ಸ್ವಾಮಿಗಳಿಂದ ಕೊಡಲ್ಪಟ್ಟ ಬಿರುದು "ನವರತ್ನ". ಮುಂದೆ ಇದು ಹೆಸರಿನಲ್ಲಿ ಮಾತ್ರವಲ್ಲ, ಸಾಧನೆಯಲ್ಲೂ ಹರಿದು ಬಂತು. ನವರತ್ನ ರಾಮರಾಯರಂಥ ಪ್ರಸಿದ್ಧ ವಿದ್ವಾಂಸರನ್ನು ಕಂಡ ಪರಿವಾರದಲ್ಲಿ 1943 ಸೆಪ್ಟೆಂಬರ್ 22ರಂದು ಜನ್ಮತಾಳಿದ ಒಂದು ರತ್ನವೇ ನವರತ್ನ ಶ್ರೀನಿವಾಸ ರಾಜಾರಾಮ್. ಅಪ್ಪ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸರ್ಜನ್. ತಾಯಿ ಭೂಗರ್ಭಶಾಸ್ತ್ರಜ್ಞ, ಉದ್ದಿಮೆದಾರ, ಬಹುಭಾಷಾ ಕೋವಿದ ರಾಮೋಹಳ್ಳಿ ವ್ಯಾಸರಾಯರ ಮಗಳು. ತಾತ ನವರತ್ನ ರಾಮರಾಯರ ಪ್ರಭಾವವೇ ಎಳೆಯ ರಾಜಾರಾಮನಲ್ಲಿ ಹಲವು ಕ್ಷೇತ್ರಗಳ ಅಧ್ಯಯನದ ಆಸಕ್ತಿಯನ್ನು ಬೆಳೆಯಿಸಿತು. ಹತ್ತು ವರ್ಷದವರೆಗೆ ಮನೆಯಲ್ಲೇ ಶಿಕ್ಷಣ; ಬಳಿಕ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರೌಢ, ಪದವಿಪೂರ್ವ ಶಿಕ್ಷಣ; ಬಿಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದ ಮೇಲೆ 1965ರಲ್ಲಿ ಮುಂಬೈಯ ಟಾಟಾ ಪವರ್ ಕಂಪೆನಿಯಲ್ಲಿ, ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣಾ ಕೋಷ್ಠದಲ್ಲಿ ನೌಕರಿ. ಬಳಿಕ ಪೂನಾ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ ಆಧಾರಿತ ನೀರಾವರಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ.

              ಐದು ವರ್ಷದ ಬಳಿಕ ಟಾಟಾ ಪವರ್ ಸಂಸ್ಥೆಯನ್ನು ತೊರೆದು ಗಣಿತ ಹಾಗೂ ವಿಜ್ಞಾನದ ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋಗಲು ನಿರ್ಧರಿಸಿದರು ರಾಜಾರಾಮ್. 1976ರಲ್ಲಿ ಬ್ಲೂಮಿಂಗ್ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ಮತ್ತು ಗಣಿತೀಯ ಭೌತವಿಜ್ಞಾನವನ್ನು ಆರು ವರ್ಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ, ಸಂಶೋಧಿಸಿ ಬರೆದ ಸಂಶೋಧನಾ ಪ್ರಬಂಧಕ್ಕೆ ಸಿಕ್ಕಿದ್ದು ಪಿ.ಹೆಚ್.ಡಿ ಪದವಿ. ಮುಂದಿನ ನಾಲ್ಕು ವರ್ಷ ಒಹಾಯೋದಲ್ಲಿರುವ ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯಲ್ಲಿ ಗಣಿತ ಮತ್ತು ಗಣಕವಿಜ್ಞಾನ ಬೋಧನೆ. ಸಹಜವಾಗಿಯೇ ಅವರನ್ನು ಸಂಶೋಧನಾ ಕ್ಷೇತ್ರ ಕೈಬೀಸಿ ಕರೆಯಿತು. ಮುಂದಿನ ಹನ್ನೆರಡು ವರ್ಷ ಕೈಗಾರಿಕಾ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇಂದು ಲಾಕ್ ಹೀಡ್ ಮಾರ್ಟಿನ್ ಎಂದು ಕರೆಯಲಾಗುವ ಲಾಕ್ಹೀಡ್ ಕಾರ್ಪೊರೇಶನ್ ಎಂಬ ಸಂಸ್ಥೆಗೆ 1980ರಲ್ಲಿ ಸಂಶೋಧಕನಾಗಿ ಸೇರಿದ ಆತ ಗಣಿತ, ಸಂಖ್ಯಾಶಾಸ್ತ್ರ, ಗಣಕವಿಜ್ಞಾನ, ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ಯಂತ್ರಗಳು, ತಂತ್ರಾಂಶ ಅಭಿವೃದ್ಧಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದರು.

             ಆಗ ಜಗತ್ತಿನ ವಿವಿಧ ಪ್ರದೇಶಗಳ ಕೃಷಿ ಸಂಪನ್ಮೂಲಗಳ ಮೌಲ್ಯಮಾಪನ ಮಾಡುವ ಉದ್ದೇಶದಿಂದ ನಾಸಾ ಲ್ಯಾಂಡ್ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುತ್ತಿದ್ದ ಕಾಲ. ಈ ಉಪಗ್ರಹಗಳು ಕಳುಹಿಸುವ ಭೂಮಿಯ ಅಗಾಧ ಪ್ರಮಾಣದ ಚಿತ್ರಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ವರ್ಣ-ಛಾಯೆ ವಿನ್ಯಾಸಗಳ ವ್ಯತ್ಯಾಸಗಳನ್ನು ಗುರುತಿಸಿ ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಊಹಿಸಿ ಯಾವ ಪ್ರದೇಶ ಯಾವ ಕೃಷಿಗೆ ಸೂಕ್ತ ಎಂಬುದರ ನಿಷ್ಕರ್ಷೆ ಮಾಡುವುದು ಮುಖ್ಯ ಕೆಲಸವಾಗಿತ್ತು. ಚಿತ್ರಗಳನ್ನು ವಿಶ್ಲೇಷಿಸುವ ಕೆಲಸದಲ್ಲಿ ತೊಡಗಿದ್ದ ರಾಜಾರಾಮರು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಕಂಡುಕೊಂಡರು. ನಿಖರವಾದ ಮಾಹಿತಿ ಪಡೆದು ಖಚಿತ ನಿರ್ಣಯಕ್ಕೆ ಬರಬೇಕಾದರೆ ಇವೆಲ್ಲವನ್ನೂ ಅರ್ಥಮಾಡಿಕೊಂಡು ತಾನೇತಾನಾಗಿ ಕೆಲಸ ಮಾಡಬಲ್ಲ ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ರೂಪಿಸುವ ಅಗತ್ಯವನ್ನು ಮನಗಂಡು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿಸಿದರು. ತಮ್ಮ ಪ್ರತಿಪಾದನೆಗೆ ಪ್ರತಿಸ್ಪಂದನ ದೊರೆತಾಗ ಅವರು ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ಬರೆದರು. ಖಚಿತತೆ ಮತ್ತು ಕಡಿಮೆ ಸಂಪನ್ಮೂಲ ಬಳಕೆಯಿಂದ ಮನುಷ್ಯ ಸಹಜವಾದ ಹಸ್ತಚಾಲಿತ ದೋಷಗಳನ್ನು ನಿವಾರಿಸಿಕೊಂಡು ನಿಖರ ಲೆಕ್ಕಾಚಾರ ಒದಗಿಸುವ ಈ ತಂತ್ರಾಂಶಗಳ ಬಗ್ಗೆ ನಾಸಾ ನಿಬ್ಬೆರಗಾಗಿ ನೋಡಿತು.

                1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಇತ್ತ ಅವರು ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದುದು ಮಾತ್ರವಲ್ಲದೆ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆದರೂ ನಾಸಾ ಹಾಗೂ ಲಾಕ್ ಹೀಡ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಇವರ ಬೆನ್ನುಹತ್ತುವುದನ್ನು ಬಿಡಲಿಲ್ಲ. ಹಾಗಾಗಿ ನಾಸಾ ಮತ್ತು ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಸ್ವಯಂಚಾಲಿತ ಯಂತ್ರಗಳ ನಿರ್ಮಾಣ(ರೋಬೋಟಿಕ್ಸ್) ಕುರಿತು ಹಲವು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರವನ್ನು ನಡೆಸಬೇಕಾಇತು. ಕೃತಕ ಬುದ್ಧಿಮತ್ತೆ ಬಳಸುವುದೇ ಅಚ್ಚರಿದಾಯಕವಾಗಿದ್ದ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಯಾವ ಕೆಲಸ ಮಾಡಬೇಕೆಂಬುದನ್ನು ತಾವಾಗಿ ನಿರ್ಧರಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ, ಬಾಹ್ಯಾಕಾಶದಲ್ಲಿ ಬಹಳಷ್ಟು ಪ್ರಯೋಜನಕ್ಕೆ ಬರುವ ಈ ಸಂಶೋಧನೆ ವಿಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲಾಯಿತು. ಈ ಸಂಬಂಧ ಅವರು ಬರೆದ ರೋಬೆಕ್ಸ್-85 ಹಾಗೂ ರೋಬೆಕ್ಸ್-87 ನಂತಹಾ ಸಂಶೋಧನಾ ಕೃತಿಗಳು ಇಂದಿಗೂ ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ಯಂತ್ರಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಆವಿಷ್ಕಾರಗಳಿಗೆ ಅಧಿಕೃತ ಆಕರ ಸಾಹಿತ್ಯಗಳಾಗಿವೆ.

              ಮುಂದೆ ರಾಜಾರಾಮ್ ಇದೇ ಪ್ರಕ್ರಿಯೆಯನ್ನು ಉದ್ದಿಮೆಗಳಲ್ಲೂ ಬಳಸಲು ಯತ್ನಿಸಿದರು. ಗಣಕ ಯಂತ್ರಗಳ ನಿರ್ಮಾಣ ಮತ್ತು ವಿನ್ಯಾಸ ಎರಡರಲ್ಲೂ ಒಂದು ಉದ್ದಿಮೆಗೆ ಸೀಮಿತವಾಗಿರುವಂತೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಲು ರೋಬೋಎಡಿಟ್ ಯಂತ್ರಾಂಶವನ್ನು ಸಿದ್ಧಪಡಿಸಿದರು. ಇದು ಯಂತ್ರವೊಂದನ್ನು ಸ್ವಯಂಚಾಲಿತ ಮಾತ್ರವಲ್ಲದೆ ತಾನು ಮುಂದೇನು ಮಾಡಬೇಕೆಂದು ಅರಿತು ಮಾಡುವಂತಹ ಬುದ್ಧಿವಂತಿಕೆಯನ್ನು ಹೊಂದಿದ್ದು ಮುಂದಿನ ಕೈಗಾರಿಕಾ ಕ್ರಾಂತಿಗೆ ಇದು ನಾಂದಿಯಾಯಿತು. ಅವರ ಮುಂದಿನ ಬಹುಮುಖ್ಯ ಸಂಶೋಧನೆ ಕೃತಕ ನರವ್ಯವಸ್ಥೆಯ ಶೋಧನೆ! ಇದಂತೂ ಹಲವು ಸಂಶೋಧಕರನ್ನು, ಉದ್ದಿಮೆದಾರರನ್ನು ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಭವಿಷ್ಯಕ್ಕೆ ಸಾಗಿದ್ದ ರಾಜಾರಾಮರ ಬದುಕನ್ನು ಭಾರತದ ಭೂತಪೂರ್ವ ಇತಿಹಾಸ ಸೆಳೆಯಿತು. ಅವರು ಅಪಾರವಾದ ಕೆಲಸ, ಪ್ರಸಿದ್ಧಿ, ಧನರಾಶಿಯನ್ನು ತೊರೆದು ಜನ್ಮಭೂಮಿಗೆ ಮರಳಿದರು. ಅದಕ್ಕೆ ಕಾರಣರಾದವರು ವಾಮದೇವ ಶಾಸ್ತ್ರಿ ಅಥವಾ ಡೇವಿಡ್ ಫ್ರಾಲಿ. ಮುಂದೆ ನಡೆದದ್ದು ಭಾರತದ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಅಂಶ.

              1995ರಲ್ಲಿ ರಾಜಾರಾಮರು ಡೇವಿಡ್ ಫ್ರಾಲಿಯವರೊಡಗೂಡಿ ಮೂರು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ "ವೇದಿಕ್ ಆರ್ಯನ್ಸ್ & ದಿ ಒರಿಜಿನ್ಸ್ ಆಫ್ ಸಿವಿಲೈಝೇಷನ್" ಎನ್ನುವ, ಬ್ರಿಟಿಷರು ಹಾಗೂ ಅವರ ಅನುವರ್ತಿಗಳ "ಆರ್ಯ ಆಕ್ರಮಣ" ಎಂಬ ಭಾರತದ ಅಂತಃಸತ್ವವನ್ನೇ ನಾಶ ಮಾಡಿದ ಹುಸಿ ಸಿದ್ಧಾಂತವನ್ನು ಸಾಧಾರವಾಗಿ ಬುಡಮೇಲು ಮಾಡಿದ ಸಂಶೋಧನಾ ಕೃತಿಯನ್ನು ರಚಿಸಿದರು. ಪ್ರಾಚೀನ ಜಗತ್ತು ತನ್ನ ವಿಜ್ಞಾನವನ್ನು ಬ್ಯಾಬಿಲೋನ್ ಮತ್ತು ಮೆಸಪೊಟೊಮಿಯಾದಿಂದ ಎರವಲು ಪಡೆದಿದೆ ಎಂದು ಚಾಲ್ತಿಯಲ್ಲಿದ್ದ  ಮಾದರಿಯನ್ನು ಅವರು ಪ್ರಶ್ನಿಸಿದರು. ಮಾತ್ರವಲ್ಲ ಪಾಶ್ಚಿಮಾತ್ಯ ಇಂಡಾಲಜಿಯು ವಿದ್ವಾಂಸರಿಲ್ಲದೆ ಬಳಲುತ್ತಿದೆ. ಅಮೆರಿಕಾ ಮತ್ತು ಯೂರೋಪಿನಲ್ಲಿ ಸಂಸ್ಕೃತ ವಿದ್ವತ್ ಮಟ್ಟ ತುಂಬಾ ಕಡಿಮೆಯಿದ್ದು ಇವರೆಲ್ಲಾ ಹತ್ತೊಂಬನೇ ಶತಮಾನದಲ್ಲಿ ಕೆಲವರು ಮಾಡಿಟ್ಟ ಅನುವಾದಗಳನ್ನೇ ಉರು ಹೊಡೆಯುತ್ತಾ, ಮಾರ್ಕ್ಸ್ ವಾದ ಮತ್ತು ಪ್ರಾಯ್ಡ್ ನ ವಿಶ್ಲೇಷಣಾ ಮಾದರಿಗಳನ್ನೇ ಅನುಕರಿಸುತ್ತಿದ್ದಾರೆ ಎಂದು ಇಂಡಾಲಿಜಿಸ್ಟ್'ಗಳೆಂದು ಪ್ರಶಂಸೆ ಪಡೆಯುತ್ತಾ ಕೂತಿದ್ದ ಮೆಕಾಲೆ ತಲೆಗಳ ಹುಳುಕುಗಳನ್ನು ಜಗತ್ತಿಗೆ ತೋರಿಸಿದರು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ, ವ್ಯಾಟಿಕನ್ನಿನ ಪಾಪಲ್ ಕಛೇರಿಯಲ್ಲಿ ಕ್ರೈಸ್ತೇತರ ಮತಗಳಿಗೆ ಸಲಹೆಗಾರರಾಗಿದ್ದ ಖ್ಯಾತ ಇಂಡಾಲಜಿಸ್ಟ್ ಡಾ. ಕ್ಲಾಸ್ ಕ್ಲೋಸ್ಟರ್ಮೇಯರ್ "ಆರ್ಯ ಆಕ್ರಮಣದ ವಿಷಯದಲ್ಲಿ ಹಳೆಯ ಸಿದ್ಧಾಂತವು ಭಾಷಾ ಶಾಸ್ತ್ರದ ವಾದಗಳ ಮೇಲೆ ನಿಂತಿದ್ದರೆ ಹೊಸದಾಗಿ  ಪ್ರವೇಶಿಸಿದ ಸಿದ್ಧಾಂತ ಖಗೋಳ, ಭೂವೈಜ್ಞಾನಿಕ, ಗಣಿತ ಮತ್ತು ಪುರಾತತ್ವ ಪುರಾವೆಗಳನ್ನು ಒಳಗೊಂಡಿದೆ" ಎಂದು ರಾಜಾರಾಮರು ಹಾಗೂ ಸಂಗಡಿಗರ ಕಾರ್ಯವನ್ನು ಬಹು ಪ್ರಶಂಸಿಸುವ ಕಾರ್ಯವನ್ನು ತಮ್ಮ "ಆರ್ಯ ಆಕ್ರಮಣವಾದವನ್ನು ಪ್ರಶ್ನಿಸುವುದು ಹಾಗೂ ಭಾರತೀಯ ಇತಿಹಾಸವನ್ನು ಪರಿಷ್ಕರಿಸುವುದು" ಎಂಬ ಲೇಖನದಲ್ಲಿ(1998) ಮಾಡಿದ್ದಾರೆ.

                  ಪ್ರಸಿದ್ಧ ಗಣಿತಜ್ಞರೂ, ಆಳವಾಗಿ ಸಂಶೋಧನೆ ಮಾಡುವವರೂ ಆಗಿದ್ದರೂ ರಾಜಾರಾಮರ ಸಂಶೋಧನೆ ಸ್ಥಾಪಿತ ಇಂಡಾಲಜಿಸ್ಟ್'ಗಳನ್ನು ಕೆರಳಿಸಿತು. ಇದಕ್ಕೆ ಕಾರಣಗಳು ಎರಡು; ಒಂದು ಆತ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯಶೋಧನೆಗೆ ಮಾತ್ರ ಮಹತ್ವ ಕೊಟ್ಟಿದ್ದು; ಇನ್ನೊಂದು ಮತಾಂತರಿಗಳನ್ನು ಖಂಡತುಂಡವಾಗಿ ವಿರೋಧಿಸಿ, ಅವರ ಕುಕೃತ್ಯವನ್ನು ಬಯಲು ಮಾಡುತ್ತಿದ್ದುದು ಮಾತ್ರವಲ್ಲದೆ ಸ್ಥಾಪಿತ ಇಂಡಾಲಜಿಯು ಹೇಗೆ ಮತಾಂತರ ಉದ್ಯಮಕ್ಕೆ ಪೂರಕವಾಗಿ ಹೆಣೆಯಲ್ಪಟ್ಟ ಸುಳ್ಳುಗಳ ಸಂತೆಯಾಗಿದೆ ಎಂದು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದು! "ದ ವಿನ್ಸಿ ಕೋಡ್" ಬರುವುದಕ್ಕೆ ಎಷ್ಟೋ ವರ್ಷ ಮೊದಲೇ ಕ್ರೈಸ್ತ ಮತಾಂತರಿಗಳ ಸುಳ್ಳುಗಳನ್ನೆಲ್ಲಾ ಕಿತ್ತೆಸೆದು ಭಾರತದ ನಿಜ ಇತಿಹಾಸವನ್ನು ಜಗತ್ತಿಗೆ ತೋರಿಸಲು ರಾಮ ಸ್ವರೂಪ್, ಸೀತಾರಾಮ್ ಗೋಯಲ್, ನವರತ್ನ ರಾಜಾರಾಮ್, ಡೇವಿಡ್ ಫ್ರಾಲಿ ಮುಂತಾದ ಬೌದ್ಧಿಕ ಪ್ರತಿಭೆಗಳು ಅವರೊಂದಿಗೆ ಮುಖಾಮುಖಿ ಸಮರ ನಡೆಸಿದ್ದರು. ಹೆಚ್ಚು ಹೆಚ್ಚು ಪುರಾತತ್ತ್ವ ಸಂಶೋಧನೆಗಳಿಂದ ಕ್ರೈಸ್ತಮತದ ಮೂಲ ಹಾಗೂ ಅಸ್ತಿತ್ವವಾದಕ್ಕೆ ಬರಬಹುದಾದ ಬಿಕ್ಕಟ್ಟನ್ನು ರಾಜಾರಾಮರು 1997ರಲ್ಲೇ ವಿಶ್ಲೇಷಿಸಿದ್ದರು. ಇಂತಹಾ ನಿಖರ ಸಂಶೋಧನೆ, ಸತ್ಯಪಥದಿಂದಾಗಿಯೇ ಆತ ಶೈಕ್ಷಣಿಕ ವಲಯಗಳಿಂದಲೂ ಹೊರಗೆ ಜಾಜ್ವಲ್ಯಮಾನ ನಕ್ಷತ್ರದಂತೆ ಹೊಳೆದರು. ಅಲ್ಲದೆ ಅವರಲ್ಲಿನ ಗಣಿತಜ್ಞ ಹಾಗೂ ವಸ್ತುವಿಜ್ಞಾನಿ, ಆಗಿದ್ದ ಭಾಷಾಶಾಸ್ತ್ರ ರಚನೆಗಳನ್ನು ಹುಸಿವಿಜ್ಞಾನವೆಂದೇ ಪರಿಗಣಿಸುತ್ತಿದ್ದ.

                2000ನೇ ಇಸವಿಯಲ್ಲಿ ಪ್ರಾಚೀನ ಲಿಪಿ ಶಾಸ್ತ್ರಜ್ಞರೂ, ವೈದಿಕ ವಿದ್ವಾಂಸರೂ ಆಗಿದ್ದ ನಟವರ್ ಝಾರೊಡನೆ ಸೇರಿ ಸಿಂಧೂ ಲಿಪಿಯಲ್ಲಿನ ಹಲವು ಸಂಕೇತಾಕ್ಷರಗಳ ಗೂಢವನ್ನು ಭೇದಿಸುವ "ಡಿ ಡೆಸಿಫೆರೆಡ್ ಇಂಡಸ್ ಸ್ಕ್ರಿಪ್ಟ್: ಮೆಥಡಾಲಜಿ, ರೀಡಿಂಗ್ಸ್, ಇಂಟರ್ಪ್ರೆಟೇಶನ್" ಎನ್ನುವ ಸಂಶೋಧನಾತ್ಮಕ ಗ್ರಂಥವನ್ನು ಬರೆಯುವ ಮೂಲಕ ಹರಪ್ಪನ್ನರದು ವೈದಿಕ ಧಾರೆಯೇ ಎಂದು ಸಿದ್ಧಪಡಿಸಿದರು. ಅವರ ಸರಸ್ವತಿ ನದಿಯ ಬಗೆಗಿನ "ಸರಸ್ವತಿ ನದಿ ಹಾಗೂ ವೇದಕಾಲೀನ ನಾಗರಿಕತೆ" ಎನ್ನುವ ಆಂಗ್ಲ ಭಾಷೆಯಲ್ಲಿನ ಗ್ರಂಥ ಸರಸಿರೆಯ ಹುಟ್ಟು-ಹರಿವು-ಸಾವುಗಳನ್ನು, ವೇದಕಾಲೀನ ನಾಗರಿಕತೆಯ ಕಡೆಗೆ ಅದರ ಪ್ರಭಾವವನ್ನು ಸಮೂಲಾಗ್ರವಾಗಿ ವಿವರಿಸಿದೆ. "ಇತಿಹಾಸದ ರಾಜಕೀಯ", "ಪ್ರೊಫೈಲ್ಸ್ ಇನ್ ಡಿಸೆಪ್ಶನ್", "ಗುಪ್ತ ಪದರುಗಳು: ಭಾರತೀಯ ಸಂಸ್ಕೃತಿಯ 10000 ವರ್ಷಗಳ ಅನ್ವೇಷಣೆ" ಅವರ ಇನ್ನುಳಿದ ಪ್ರಮುಖ ಗ್ರಂಥಗಳು. ಕೃಷ್ಣನ ಬಗೆಗಿನ ಅವರ ವಿಚಾರವನ್ನು ಗಮನಿಸುವಂತಹದ್ದು; ಪುರಾಣಗಳನ್ನು ಮೀರಿ ನೋಡಿದರೆ ಕೃಷ್ಣನ ನೈಜ ವ್ಯಕ್ತಿ ಚಿತ್ರಣ ದೊರಕೀತು. ಆತನೊಬ್ಬ ಪ್ರಾಯೋಗಿಕ ತತ್ತ್ವಜ್ಞಾನಿ. ತನ್ನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕ್ರಿಯಾಧಾರಿತ  ಸಾಂಖ್ಯ ಸಿದ್ಧಾಂತದತ್ತ ಸರಿದು ಕರ್ಮಯೋಗವನ್ನು ಪ್ರತಿಪಾದಿಸಿದ ಶ್ರೇಷ್ಠ ಭಗವದ್ಗೀತೆಯನ್ನು ಕೊಟ್ಟ ಶ್ರೇಷ್ಠ ಮಾನವನಾತ ಎಂದಿದ್ದಾರೆ ರಾಜಾರಾಮ್.

                 ವಿಟ್ಜೆಲ್, ಸ್ಟೀವ್ ಫಾರ್ಮರ್ ಹಾಗೂ ಅವರ ಚೇಲಾಗಳೆಲ್ಲಾ ಸೇರಿಕೊಂಡು ಮಾಧ್ಯಮಗಳಲ್ಲಿ ತಮಗಿದ್ದ ಪ್ರಭಾವವನ್ನು ಬಳಸಿಕೊಂಡು ರಾಜಾರಾಮರನ್ನು ಅಪಹಾಸ್ಯ ಮಾಡುತ್ತಾ ತೇಜೋವಧೆ ನಡೆಸಿದರೂ ಆತ ಧೃತಿಗೆಡಲಿಲ್ಲ. ಆತ ವಂಶವಾಹಿ ಆಧಾರಿತವಾಗಿ ವೈದಿಕ ನಾಗರಿಕತೆ ಮೂಲವನ್ನು ದೃಢೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಈ ಸಂಶೋಧನೆಯಿಂದ ಆರ್ಯರು ಬೇರೆಲ್ಲಿಂದಲೂ ಬಂದವರಲ್ಲವೆಂದೂ ಹತ್ತಾರು ಸಾವಿರ ವರ್ಷಗಳಿಂದಲೂ ಇಲ್ಲಿಯೇ ನೆಲೆಸಿರುವ ಜನಾಂಗವೆಂದೂ, ಆರ್ಯವೆಂದರೆ ಶ್ರೇಷ್ಠ ಎಂಬ ಅರ್ಥವೇ ಹೊರತು ಜನಾಂಗಸೂಚಕವಲ್ಲವೆಂದೂ, ದ್ರಾವಿಡವು ಕೇವಲ ಪ್ರದೇಶಸೂಚಕವೆಂದು ದೃಢಪಡಿಸಿದರು. ಮುಂದಿನ ಅವರ ಸಂಶೋಧನ ಪ್ರಕ್ರಿಯೆ ನವೀಕರಿಸಬಹುದಾದ ಶಕ್ತಿಗಳ ತಂತ್ರಜ್ಞಾನದತ್ತ ತಿರುಗಿತು. ಯೋಜನಾ ಆಯೋಗದಿಂದ ಹೊರಗಿರುವ ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ. ಭಾರತದ ಯೋಜನಾ ಆಯೋಗ 1960ರ ದಶಕದ ಸೋವಿಯತ್ ಯುಗದ ಮನಃಸ್ಥಿತಿಯಲ್ಲೇ ಇಂದಿಗೂ ಉಳಿದುಕೊಂಡಿರುವುದು ಇದಕ್ಕೆ ಕಾರಣ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಭಾಜಪಾ ಸರಕಾರ ಯೋಜನಾ ಆಯೋಗವೆಂಬ ಕೆಲಸಕ್ಕೆ ಬಾರದ ಬಿಳಿಯಾಣೆಯನ್ನು ಕಿತ್ತೆಸೆದು, ನೀತಿ ಆಯೋಗವನ್ನು ಆರಂಭಿಸಿದ್ದು ನೆನಪಿರಬಹುದು. ಸೌರ ವಿದ್ಯುತ್ ಸ್ಥಾವರಗಳನ್ನು ವಿಕೇಂದ್ರೀಕೃತಗೊಳಿಸಿ ಜಲವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳ ಜೊತೆ ಸಂಯೋಜಿಸಬೇಕು. ಜಲವಿದ್ಯುತ್ ಉತ್ಪಾದನೆಗಾಗಿರುವ ಜಲಾಶಯಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚು ಸೌರಶಕ್ತಿಯನ್ನು ಪಡೆಯುವ ಬಗೆಯನ್ನು ಆತ ಪ್ರತಿಪಾದಿಸಿದ್ದರು.

               ಶೈಕ್ಷಣಿಕವಾಗಿ ನಮ್ಮ ದೇಶದ ಇತಿಹಾಸವನ್ನು ತಿರುಚಿದ ಪಠ್ಯಗಳನ್ನು ಓದುವ ನಮ್ಮ ಪೀಳಿಗೆಗಳ ಹಣೆಯಬರಹ ಬದಲಾಗಿಲ್ಲ ನಿಜ. ಆದರೆ ನಮ್ಮ ನಿಜವಾದ ಇತಿಹಾಸವನ್ನು ಅರಿಯುವಂತೆ ಮಾಡಿದ ಕೆಲವೇ ಕೆಲವು ಮಹಾತ್ಮರಲ್ಲಿ ರಾಜಾರಾಮ್ ಒಬ್ಬರು. ತನಗಿದ್ದ ದುಬಾರಿ ವೇತನದ ಕೆಲಸ, ಸ್ಥಾನಮಾನಗಳನ್ನು ಬದಿಗಿಟ್ಟು ದೇಶದ ನಿಜವಾದ ಇತಿಹಾಸವನ್ನು ಸಂಶೋಧಿಸಿ ದೇಶೀಯರ ಸ್ವಾಭಿಮಾನವನ್ನು ಉದ್ದೀಪನಗೊಳಿಸುವ ಮಹತ್ಕಾರ್ಯವನ್ನು ದೇಶ ವಿರೋಧಿಗಳಿಂದ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂದು, ಅವಮಾನವನ್ನು ನುಂಗಿಕೊಂಡು ಮಾಡಿದ ಆತ ನಿಜಾರ್ಥದಲ್ಲಿ ಈ ದೇಶದ ನವರತ್ನ. ಜೀವಿತವಿಡೀ ಆತ ನಡೆಸಿದ್ದು ಸಂಶೋಧನೆ; ಮನುಕುಲದ ಉದ್ಧಾರಕ್ಕಾಗಿ; ತನ್ನ ದೇಶದ ಇತಿಹಾಸವನ್ನು ಎದೆಯುಬ್ಬಿಸಿಕೊಂಡು ಹೇಳುವ ಅವಕಾಶ ಭಾರತೀಯನಿಗೆ ಒದಗಿಸಲಿಕ್ಕಾಗಿ. ಅಂತಹಾ ಪುಣ್ಯಜೀವಿಯನ್ನು ಅದು ಮರೆಯಾದ ಸಮಯದಲ್ಲಾದರೂ ನೆನಪಿಸಿಕೊಳ್ಳುವುದು ಆತನ ಕಾರ್ಯಕ್ಕೆ ಸಲ್ಲಿಸಬಹುದಾದ ಅತ್ಯಲ್ಪ ಕೃತಜ್ಞತೆ!

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ


              ಅದು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಮಟ್ಟದ ಪ್ರಪ್ರಥಮ ಕಾರ್ಯಾಗಾರ. ಆಗ ದತ್ತೋಪಂಥ ಠೇಂಗಡಿಯವರು ಅಂದ ಮಾತುಗಳು ಹಿಂದೂ ಎಂಬ ಜೀವನ ಪದ್ದತಿ ಹೇಗೆ ತನ್ನನ್ನು ಕಾಲ ಕಾಲಕ್ಕೆ ಪಕ್ವಗೊಳಿಸುತ್ತಾ ಸಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ. "ಒಂದೇ ಕಾಲದಲ್ಲಿ ವಿವಿಧ ಪರಿಸ್ಥಿತಿಗಳಲ್ಲಿರುವ ವಿಭಿನ್ನ ಸಮಾಜಗಳಿಗೆ ಒಂದೇ ವಿಚಾರಧಾರೆ ಇರುವುದಿಲ್ಲ. ಹಾಗೆಯೇ ಒಂದು ಸಮಾಜಕ್ಕೆ ಒಂದೇ ವಿಚಾರ ವಿಭಿನ್ನ ಕಾಲಘಟ್ಟಗಳಲ್ಲಿ ಸೂಕ್ತವಾಗಿ ಇರಬೇಕೆಂದೇನೂ ಇಲ್ಲ. ಒಂದು ಸಿದ್ಧಾಂತವು ಆ ಕಾಲದಲ್ಲಿ ಒದಗಿದ ಜ್ಞಾನ ಸಮುಚ್ಛಯದಿಂದ ಮಾತ್ರವೇ ಒಂದು ಆಕಾರವನ್ನು ಪಡೆದುಕೊಳ್ಳುವುದರಿಂದ ಹಾಗೂ ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುವುದರಿಂದ ಒಂದೇ ಚಿಂತನೆಯೂ ಎಲ್ಲಾ ಕಾಯಿಲೆಗಳಿಗೆ ರಾಮಬಾಣವಾಗಲಾರದು" ಎನ್ನುತ್ತಾರೆ ಠೇಂಗಡಿ. ಎಷ್ಟು ಶ್ರೇಷ್ಠ ಚಿಂತನೆ. ಹಾಗೆಂದು ಇದೇನೂ ಹೊಸ ಚಿಂತನೆಯೆಂದೇನೂ ಅಲ್ಲ. ವೇದಗಳು ಘೋಷಿಸಿದ ಚಿಂತನೆಯೇ ಇದು. ಕಾಲಕಾಲಕ್ಕೆ ದೃಷ್ಟಾರರು ಕಂಡುಕೊಂಡ ಮಂತ್ರವೇ ಇದು. ವಿಶೇಷ ಎಂದರೆ ಆ ಚಿಂತನೆ ಈ ಕಾಲದಲ್ಲೂ ಪ್ರವಹಿಸಿದ್ದು. ಅದಕ್ಕೇ ವೇದವು ಅಪೌರುಷೇಯವಾದದ್ದು. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಸದಾ ಕಾರ್ಯಾಚರಿಸುವ ಹಿಂದೂ ಎಂಬ ಜೀವನ ಪದ್ದತಿ ನಿಂತ ನೀರಾಗದೇ ಸನಾತನ ಧರ್ಮವಾದದ್ದು. ಇಂದು ಬಹುತ್ವ ನಾಶವಾಗುತ್ತಿದೆ ಎಂದು ಬೊಬ್ಬಿರಿವ ಪ್ರಭೃತಿಗಳೆಲ್ಲಾ ಅಳವಡಿಸಿಕೊಳ್ಳಬೇಕಾದ ಚಿಂತನೆ ಇದು. ಎಲ್ಲದಕ್ಕೂ ಕೆಂಪು ಬಳಿದು ರಕ್ತ ಹರಿಸಲು ಹೊರಟ ರಕ್ಕಸರಿಗೆ ಬಹುತ್ವದ ನಿಜವಾದ ಅರ್ಥ ಏನು ತಿಳಿಸುವ ಮಾತುಗಳಿವು. ಈ ಧ್ಯೇಯ ಠೇಂಗಡಿಯವರ ಮೂಲಕ ಮಜ್ದೂರ್ ಸಂಘ, ಸ್ವದೇಶೀ ಜಾಗರಣ ಮಂಚ್ ಭಾರತೀಯ ಕಿಸಾನ್ ಸಂಘಗಳಲ್ಲೂ ಪ್ರವಹಿಸಿತು, ಜನಸಂಘಕ್ಕೂ ಹೊಕ್ಕಿತು, ಸಂಸತ್ತಿನೊಳಗೂ ವಿರಾಜಮಾನವಾಯಿತು, ಸಮಾಜದ ನಡುವೆಯೂ ಪ್ರತಿಷ್ಠಿತವಾಯಿತು.

                  ಹೋರಾಟವು ಅನ್ಯಾಯದ ವಿರುದ್ಧವಾಗಿರಬೇಕೇ ಹೊರತು ಯಾವುದೇ ವರ್ಗದ ವಿರುದ್ಧವಲ್ಲ ಎನ್ನುವುದನ್ನು ಆತ ಸ್ಪಷ್ಟಪಡಿಸಿದ್ದರು. ಜನರನ್ನು ಜಾಗೃತಿಗೊಳಿಸುವುದು ಹಾಗೂ ಸಂಘಟನೆಯನ್ನು ಬಲಗೊಳಿಸುವುದರಿಂದ ಬದಲಾವಣೆಯನ್ನು ತರಬಹುದೇ ಹೊರತು ಬರಿಯ ಹರತಾಳಗಳಿಂದಲ್ಲ ಎನ್ನುವುದನ್ನು ಅವರು ಮಾಡಿ ತೋರಿಸಿದರು. "ಜಗತ್ತಿನ ಕಾರ್ಮಿಕರೇ ಒಂದುಗೂಡಿ" ಎನ್ನುವುದನ್ನು ಆತ "ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ" ಅಂತ ಬದಲಾಯಿಸಿದರು. ಹಾಗಾಗಿಯೇ ಕಾರ್ಮಿಕ ಚಳುವಳಿಗಳಲ್ಲಿ ಅಂದಿನವರೆಗೆ ಕಾಣದಿದ್ದ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಬಿಎಂಎಸ್ ಮೂಲಕ ಕೇಳಿ ಬರಲಾರಂಭಿಸಿತು. ಅಂದಿನವರೆಗೆ ಸ್ಪೂರ್ತಿಗಾಗಿ ರಷ್ಯಾ, ಚೀನಾಗಳತ್ತಲೇ ನೋಡುತ್ತಲಿದ್ದ ಕಾರ್ಮಿಕ ಚಳುವಳಿ ಎಡಪಂಥೀಯವೆಂಬ ಏಕ ವಿಚಾರಧಾರೆಯಿಂದ ಹೊರಳಿ ದೇಶೀ ಸೊಗಡಿನತ್ತ ಸಾಗಿತು. ಧ್ವಜದ ಬಣ್ಣ ಕೆಂಪಿನಿಂದ ಕೇಸರಿಯಾಗಿ ಬದಲಾಯಿತು. ಅದರ ಧ್ಯೇಯವು ಶ್ರಮಿಕರ ರಾಷ್ಟ್ರೀಯಕರಣ, ರಾಷ್ಟ್ರದ ಔದ್ಯೋಗೀಕರಣ, ಉದ್ಯೋಗಗಳ ಶ್ರಮಿಕೀಕರಣವೆಂಬ ಬಿಎಂಎಸ್ ಧ್ಯೇಯವಾಗಿ ಪರಿವರ್ತಿತವಾಯಿತು.

                ಠೇಂಗಡಿ ಅನಾಸಕ್ತ ಯೋಗದ ಸಾಕಾರ ಮೂರ್ತಿ. 1975ರಲ್ಲಿ ಜಯಪ್ರಕಾಶ ನಾರಾಯಣರಿಂದ ಸ್ಥಾಪಿಸಲ್ಪಟ್ಟ ಲೋಕಸಂಘರ್ಷ ಸಮಿತಿಯ ನೇತೃತ್ವ ವಹಿಸಿಕೊಂಡ ಠೇಂಗಡಿ ಇಂದಿರಾಗಾಂಧಿ ದೇಶದ ಮೇಲೆ ವಿಧಿಸಿದ್ದ ತುರ್ತುಪರಿಸ್ಥಿತಿ ಹಾಗೂ ಆಕೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟವನ್ನು ರೂಪಿಸಿದವರು. ಆಕೆ ಚುನಾವಣೆಯಲ್ಲಿ ಸೋತು ಜನತಾ ಸರಕಾರ ಅಧಿಕಾರಕ್ಕೆ ಬಂದಾಗ, ಅವರಾಗಿಯೇ ಜನಸಂಘವನ್ನು ಜನತಾ ಸರಕಾರದ ಜೊತೆ ಜೋಡಿಸಿದ್ದರೂ ಮೊರಾರ್ಜಿ ಸಂಪುಟದಲ್ಲಿ ಸಿಕ್ಕ ಮಂತ್ರಿ ಪದವಿಯನ್ನು ನಿರಾಕರಿಸಿದರು. ಮಾತ್ರವಲ್ಲ ರಾಜಕೀಯದಿಂದಲೇ ಹೊರಬಂದುಬಿಟ್ಟರು. ಮುಂದೆ ತಮಗೆ ಪದ್ಮವಿಭೂಷಣದಂತಹಾ ಸಮ್ಮಾನ ಘೋಷಣೆಯಾದಾಗ ಅದನ್ನೂ ನಿರಾಕರಿಸಿದರು. ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳನ್ನು, ಪ್ರಶಸ್ತಿಗಾಗಿ ಆಳುವ ವರ್ಗದ ಕೈ, ಕಾಲು ಹಿಡಿಯುವ ವ್ಯಕ್ತಿಗಳನ್ನೇ ಕಾಣುತ್ತಿರುವ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಯಿದು!

                   ಇಂದಿನ ಕೇಂದ್ರ ಸರಕಾರದ ನೀತಿಗಳಾದ ಸಾರ್ವತ್ರಿಕ ಆರೋಗ್ಯ ಸೇವೆ, ಸರ್ವರಿಗೂ ವಿದ್ಯುತ್ ಆದಿಯಾಗಿ ಇಂಧನಗಳ ಲಭ್ಯತೆ ಎಲ್ಲವೂ ಠೇಂಗಡಿಯವರ ಮೂಲ ಪರಿಕಲ್ಪನೆಗಳೇ. ಮೋದಿ ಸರಕಾರದ ಹೂಡಿಕೆಯ ವಿಧಾನಗಳು ಹಾಗೂ ನೀತಿ ನಿಯಮಗಳು ಹಾಗೂ ಪಿಎಸ್ಯು(PSU)ಗಳನ್ನು ಮಾರಾಟ ಮಾಡುವ ಬದಲು ಷೇರು ಮಾರುಕಟ್ಟೆಗಳಲ್ಲಿ ಪ್ರವೇಶ ಒದಗಿಸಿರುವುದು ಇವು ಠೇಂಗಡಿಯವರು ಪ್ರತಿಪಾದಿಸಿದ ನೀತಿಗಳೇ. ಈ ನೀತಿಯನ್ನು ವಾಜಪೇಯಿ ಸರಕಾರದ ವಿತ್ತ ಸಚಿವ ಯಶ್ವಂತ್ ಸಿನ್ಹಾ ಅನುಸರಿಸದೇ ಇದ್ದಾಗ ಆತ ತಮ್ಮದೇ ಸ್ನೇಹಿತರು, ಸಮಾನ ಮನಸ್ಕರು, ಸಿದ್ಧಾಂತವಾದಿಗಳಿದ್ದ ಸರಕಾರದ ವಿರುದ್ಧವೇ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಯನ್ನೂ ಕೈಗೊಂಡಿದ್ದರು. ಇದು ಒಂದು ಧ್ಯೇಯಕ್ಕಾಗಿ, ತತ್ತ್ವಕ್ಕಾಗಿ ಅವರು ಬಡಿದಾಡುತ್ತಿದ್ದ ರೀತಿ. ಈಗಿನ ಜೀ ಹುಜೂರ್ ಸಂಸ್ಕೃತಿಯ, ಹಣಕ್ಕಾಗಿಯೇ ಕೆಲಸ ಮಾಡುವ ರಾಜಕಾರಣಿಗಳು ಠೇಂಗಡಿಯವರಿಂದ ಕಲಿಯಬೇಕಾದುದು ಸಾಕಷ್ಟಿದೆ!

               ಡಾಕ್ಟರ್ ಹೆಡಗೇವಾರರೊಂದಿಗೆ ಅನುಶೀಲನ ಸಮಿತಿಯಲ್ಲಿದ್ದ ನರೇಂದ್ರ ಭಟ್ಟಾಚಾರ್ಯ ಬಾಲಾಸೋರ್ ಕದನದಲ್ಲಿ ಬಾಘಾ ಜತೀನನ ವೀರ ಮರಣದ ಬಳಿಕ ಮಾರುವೇಷದಲ್ಲಿ ಎಂ.ಎನ್ ರಾಯ್ ಆಗಿ ರಷ್ಯಾ ಪ್ರವೇಶಿಸಿ ತಾಷ್ಕೆಂಟಿನಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷವನ್ನು ಆರಂಭಿಸಿದ. ಮುಂದೆ ಅದೇ ಮಾಸ್ಕೋ ಸಿದ್ಧಾಂತವನ್ನು ಭಾರತಕ್ಕೂ ತಂದ. ಅದರ ಮೂಲಕ ಬೆಳೆದು ಬಂದ ಕಾರ್ಮಿಕ ಸಂಘಟನೆಗಳಿಗೆ ತಮಗಾಗದ ಪ್ರತಿಯೊಂದರ ವಿರುದ್ಧವೂ ಹರತಾಳ, ಹೊಡಿ-ಬಡಿ, ಕೊಚ್ಚು-ಕೊಲ್ಲು ಇವೇ ಧ್ಯೇಯವಾಗಿ ಬೆಳೆಯಿತು. ಅದೇ ಹೆಡಗೇವಾರರು ಚತುರ್ವಿಧ ಪುರುಷಾರ್ಥಗಳನ್ನು ಆಧರಿಸಿದ ಹಿಂದೂ ಜೀವನ ಪದ್ದತಿಯ ನೆಲೆಗಟ್ಟಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಬೆಳೆದು ಬಂದ ಠೇಂಗಡಿಯವರು ಆರಂಭಿಸಿದ ಕಾರ್ಮಿಕ ಸಂಘಟನೆ ಸಾಂಪ್ರದಾಯಿಕ ಹಿಂದೂ ವಿಶ್ವದೃಷ್ಟಿಕೋನವನ್ನು ಅಪ್ಪಿಕೊಂಡು ತೀವ್ರ ವಿರೋಧದ ನಡುವೆಯೂ ಅಪಾರ ಕರ್ತೃತ್ವ ಶಕ್ತಿ ಹಾಗೂ ದೂರದೃಷ್ಟಿಯ ಫಲದಿಂದ ಬೆಳೆದು ಹೆಮ್ಮರವಾಯಿತು.

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು


           ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೆದ್ದಿತು. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು.

                   ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                 ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.

                 ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

               ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!


             ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೇಳಲು ಕ್ಷಣಗಣನೆ ಶುರುವಾಗಿದೆ. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು. ಇದು ಕೋಟ್ಯಾಂತರ ಶ್ರೀರಾಮಭಕ್ತರು ಪಾವನಗೊಂಡ ಪರ್ವಕಾಲ. ಬಾಬರನಿಗಾಗಿ ಮರ್ಯಾದಾ ಪುರುಷೋತ್ತಮನ ಇತಿಹಾಸವನ್ನೇ ಸಂಶಯಿಸಿ ಈ ನೆಲದ ನಂಬಿಕೆಯನ್ನೇ ಅಲ್ಲಗೆಳೆದವರ ಸುಳ್ಳುಗಳನ್ನು ಕಿತ್ತೆಸೆದ ಕಾಲ.

               ಸ್ವಯಂ ಮನುವೇ ನಿರ್ಮಿಸಿದ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ "ವಿಶ್ವಜಿತ್" ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ದಶರಥನಿಂದ ಋಷ್ಯಶೃಂಗನ ನೇತೃತ್ವದಲ್ಲಿ ಪುತ್ರಕಾಮೇಷ್ಠಿ ನಡೆಸಲ್ಪಟ್ಟ, ಹಿಮವತ್ಪರ್ವತದ ಮಾನಸ ಪುತ್ರಿ ಸರಯೂ ಬಳಸಿ ಹರಿಯುತ್ತಿರುವ ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ. ಸಾಲು ಸಾಲು ರಾಜರ್ಷಿಗಳು, ರಾಜ-ಮಹಾರಾಜರುಗಳ ಈ ಮಾಲಿಕೆಯ ಅರವತ್ತೈದನೆಯ ಪ್ರಭು ಶ್ರೀರಾಮಚಂದ್ರ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ ಅವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು.

                     ರಾಜಾ ವಿಕ್ರಮಾದಿತ್ಯ ಅಯೋಧ್ಯೆಯ ಶ್ರೀರಾಮ ಮಂದಿರದ ಜೀರ್ಣೋದ್ಧಾರ ಮಾಡಿದ್ದ. ಪುಣ್ಯಭೂಮಿ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ” ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ. 1940ರ ಹಿಂದೆ, ಈ ಮಸೀದಿಯನ್ನು “ಮಸ್ಜೀದ್-ಇ-ಜನ್ಮಸ್ಥಾನ್” ಎಂದೂ ಕರೆಯಲಾಗುತ್ತಿತ್ತು! ಇಲ್ಲಿನ ಮಣ್ಣಿನಲ್ಲಿ ಸಿಕ್ಕಿರುವ ಕೆಲವು ದಾಖಲೆಗಳು ಇಲ್ಲಿ ಕ್ರಿಸ್ತಪೂರ್ವ 17ನೇ ಶತಮಾನದಲ್ಲಿಯೂ ಮಾನವ ವಸತಿ ಇತ್ತು ಎಂದು ಹೇಳುತ್ತಿದೆ! 1986ರ ಎನ್ಸೈಕ್ಲೋಪೀಡಿಯ ಬ್ರಿಟಾನಿಕದಲ್ಲಿ “ರಾಮನ  ಜನ್ಮ ಸ್ಥಳವನ್ನು ಇದೀಗ ಮಸೀದಿಯೊಂದು ಆಕ್ರಮಿಸಿಕೊಂಡಿದೆ. ರಾಮನ  ಜನ್ಮಸ್ಥಳದಲ್ಲಿ ನಿಂತಿದ್ದ ಭವ್ಯವಾದ ದೇವಸ್ಥಾನವನ್ನು ಕ್ರಿ.ಶ. 1528ರಲ್ಲಿ ಕೆಡವಿ ಬಾಬರ್ ಎಂಬ ರಾಜ ಮಸೀದಿ ಕಟ್ಟಿಸಿದ” ಎಂದು ಬರೆಯಲಾಗಿದೆ.

               1885ರಲ್ಲಿ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆಯನ್ನು ಮಾಡಲಾರಂಭಿಸಿದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅವರಿಗೆ ಅನುಮತಿ ದೊರಕಲಿಲ್ಲ. 1934ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂಗಳು ಬಾಬರಿ ಮಸೀದಿಯಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡು ಗುಮ್ಮಟಗಳ ದುರಸ್ತಿಗಾಗಿ ಹಿಂದೂಗಳಿಂದಲೇ ದಂಡವನ್ನೂ ಕಟ್ಟಿಸಿಕೊಂಡಿತು. ಈ ಪಾವನ ಕ್ಷೇತ್ರದಲ್ಲಿ 1940ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. 22 ಡಿಸೆಂಬರ್ 1949ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ 1986ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧನದಲ್ಲಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. 1980ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ 1986ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು. 1989ರ ನವೆಂಬರ್ 10ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲರಿಂದ ನೆರವೇರಿತು. ಶ್ರೀರಾಮ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎನ್ನುವುದಕ್ಕೆ ನಿದರ್ಶನವಿದು. ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕರಸೇವೆಗಳು ನಡೆದವು. 1990ರ ಅಕ್ಟೋಬರ್ 30ರಂದು ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ನಡೆಸುತ್ತಿದ್ದ ಸ್ವಯಂಸೇವಕರ ಮೇಲೆ  ಗುಂಡುಹಾರಿಸುವ ಆಜ್ಞೆಯನ್ನು ಅರೆಸೇನಾಪಡೆಗಳಿಗೆ ಮಾಡಿದ ಮುಲಾಯಮ್ ಸಿಂಗ್ ಯಾದವ್ ಸತ್ತವರ ಲೆಕ್ಕ ಸಿಗಬಾರದೆಂಬ ದುರುದ್ದೇಶದಿಂದ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು.

                 ಸದಾ ಹಿಂದೂ ನಂಬಿಕೆಯನ್ನು ಪ್ರಶ್ನಿಸುವ ವರ್ಗ ಹಾಗೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅಯೋಧ್ಯೆಯಲ್ಲಿ ಮಂದಿರವೇ ಇರಲಿಲ್ಲ ಎನ್ನುವ ಸಮರ್ಥನೆಗೆ ತೊಡಗಿದರು. ಆಗ ವಿವಾದಿತ ಜಾಗದಲ್ಲಿ ಉತ್ಖನನ ನಡೆಸುವ ನಿರ್ಧಾರಕ್ಕೆ ಬರಲಾಯಿತು. ಇದಕ್ಕಿಂತ ಮೊದಲು ಬ್ರಿಟಿಷರ ಕಾಲದಲ್ಲೇ ಎರಡು ಬಾರಿ ಉತ್ಖನನಗಳು ನಡೆದಿದ್ದವು. 1976-77ರಲ್ಲಿ ಬಿಬಿ ಲಾಲ್ ನೇತೃತ್ವದಲ್ಲಿ ಉತ್ಖನನಗಳು ನಡೆದಾಗ ದೇಗುಲಗಳಲ್ಲಿ ಕಂಡುಬರುವ ಪೂರ್ಣಕಲಶದ ಕೆತ್ತನೆಗಳನ್ನು ಹೊಂದಿದ್ದ ಕಪ್ಪು ಅಗ್ನಿಶಿಲೆಯನ್ನು ಬಳಸಿ ರಚಿಸಿದ 14 ಸ್ತಂಭಗಳು ದೊರೆತವು. ಸ್ತಂಭಗಳ ಮೇಲೆ ಹಿಂದೂ ದೇವಾನುದೇವತೆಗಳ ಚಿತ್ರಗಳಿದ್ದವು. ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ಎಸ್. ಗೋಪಾಲ್, ರೋಮಿಲಾ ಥಾಪರ್, ಬಿಪಿನ್ ಚಂದ್ರ ಮುಂತಾದ ಎಡಪಂಥೀಯರು ಅದು ಬಾಬರ ಖಾಲಿ ಜಾಗದಲ್ಲಿ ಕಟ್ಟಿದ ಮಸೀದಿ; ಆತ ಯಾವುದೇ ಹಿಂದೂ ಶ್ರದ್ಧಾಕೇಂದ್ರವನ್ನು ಧ್ವಂಸ ಮಾಡಿಲ್ಲ; ಬಾಬರ್ ಹಾಗೆ ಮಾಡಿದನೆಂಬುದಕ್ಕೆ 19ನೇ ಶತಮಾನದಲ್ಲಿ ಯಾವೊಂದು ಉಲ್ಲೇಖವೂ ಇಲ್ಲ; ಅಯೋಧ್ಯೆ ಮೂಲತಃ ಬೌದ್ಧ ಮತ್ತು ಜೈನರ ದೇಗುಲಗಳಿರಬಹುದು ಎಂಬ ಕಪೋಲಕಲ್ಪಿತ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ಮಂಡಿಸತೊಡಗಿದರು. ಪ್ರೊ. ಆರ್. ಎಸ್. ಶರ್ಮಾ, ಅಕ್ತರ್ ಅಲಿ, ಡಿ.ಎಸ್. ಝಾ, ಸೂರಜ್ ಭಾನ್ "ಬಾಬರಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಕಟ್ಟಡಗಳ ಅವಶೇಷಗಳೂ ಇಲ್ಲ. ಅದೆಲ್ಲವೂ ಅಲ್ಲಿ ರಾಮಮಂದಿರ ಕಟ್ಟಬೇಕೆಂದು ಹವಣಿಸುತ್ತಿರುವವರ ಕಟ್ಟುಕತೆಗಳು" ಎಂದು ಅಲಹಾಬಾದ್ನ ಉಚ್ಚನ್ಯಾಯಾಲಯಕ್ಕೆ ವರದಿ ಕೊಟ್ಟರು. ನ್ಯಾಯಾಲಯವು "ಪುರಾತತ್ತ್ವ ಇಲಾಖೆಯ ಉತ್ಖನನದ ಫಲಿತಾಂಶಗಳನ್ನು ನೀವು ಗಮನಿಸಿದ್ದೀರಾ?" ಎಂದು ಕೇಳಿದಾಗ ಈ ಸ್ವಘೋಷಿತ ವಿದ್ವಾಂಸರು "ಕ್ಷಮಿಸಿ, ನಮಗೆ ವರದಿ ಕೊಡಲು ಕೊಟ್ಟ ಅವಧಿ ಅತಿ ಕಡಿಮೆ. ಅಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ಸಂಶೋಧನೆ ಮಾಡಲು ಸಮಯ ಇರಲಿಲ್ಲ. ಆದ್ದರಿಂದ ನಾವು ನಮ್ಮ ಅಭಿಪ್ರಾಯ ತಿಳಿಸಿದೆವು ಅಷ್ಟೆ" ಎಂದು ತಪ್ಪೊಪ್ಪಿಕೊಂಡರು! ಅಂದರೆ ತಮ್ಮ ಅಭಿಪ್ರಾಯವನ್ನು ಇತಿಹಾಸ ಎಂಬಂತೆ ಬಿಂಬಿಸಿ ಈ ಎಡಪಂಥೀಯ ಖೊಟ್ಟಿ ವಿದ್ವಾಂಸರು ಸಮಾಜವನ್ನು ಒಡೆಯಲು ಉಪಯೋಗಿಸಿದ್ದರು! ಆದರೆ ಈ ದಾಳಿ ಅಷ್ಟಕ್ಕೇ ನಿಲ್ಲಲಿಲ್ಲ! ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸಬೇಕು ಎನ್ನುವುದನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಎಡಪಂಥೀಯರು ಮಸೀದಿಯ ಅಡಿಯಲ್ಲಿ ಸಿಕ್ಕಿರುವ ಕಂಬಗಳು ಮಸೀದಿಯದ್ದೇ ಯಾಕಾಗಿರಬಾರದು ಎಂದು ಹುಯಿಲೆಬ್ಬಿಸತೊಡಗಿದರು. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಬಗ್ಗೆ ತಮ್ಮ ಮೂಗಿನ ನೇರಕ್ಕೆ ಬರೆಯಲಾರಂಭಿಸಿದರು. ಇವರಾರೂ ಪ್ರಾಚ್ಯವಸ್ತು ಸಂಶೋಧಕರಲ್ಲವಾದರೂ ಇವರು ಹೇಳಿದ ಸುಳ್ಳು ಜಗತ್ತಿನೆಲ್ಲೆಡೆ ನರ್ತಿಸತೊಡಗಿತು. ಆಗ ಅಲಹಾಬಾದ್ ಹೈಕೋರ್ಟ್ ಇನ್ನೊಮ್ಮೆ ಪೂರ್ಣ ಪ್ರಮಾಣದಲ್ಲಿ ಉತ್ಖನನ ನಡೆಸುವಂತೆ ಆದೇಶಿಸಿತು. ಆಗ ಐವತ್ತು ಕಂಬಗಳ ಅಡಿಪಾಯವೇ ವಿವಾದಿತ ನೆಲದೊಳಗೆ ಪತ್ತೆಯಾಯಿತು. ಮಾತ್ರವಲ್ಲ ಕ್ರಿ.ಪೂ. 1200 ವರ್ಷಕ್ಕೂ ಹಳೆಯದಾದ ಅವಶೇಷಗಳು ದೊರೆತವು. ಹಲವು ಮಣ್ಣಿನ ಮೂರ್ತಿಗಳೂ ದೊರೆತವು. ದೇವಾಲಯಗಳಲ್ಲಿರುವ ದೇವರ ಅಭಿಷೇಕದ ನೀರು ಹರಿದು ಹೋಗುವ ಮಕರ ಪ್ರಣಾಳಿಯೂ ದೊರಕಿತು. ಅಲ್ಲದೆ ವಿಷ್ಣು ದೇವರಿಗೆ ಈ ದೇವಾಲಯ ಅರ್ಪಿತವಾಗಿದೆ ಎನ್ನುವ ಶಿಲಾಫಲಕವೂ ದೊರಕಿತು.

             ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

            ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

              ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 491 ವರ್ಷಗಳಲ್ಲಿ ಬಹುತೇಕ ಮೊಘಲರ ಆಳ್ವಿಕೆ, ಬ್ರಿಟಿಷರ ಆಳ್ವಿಕೆಯಲ್ಲೇ ಕಳೆದಿತ್ತು ದೇಶ. ಆದರೆ ಸ್ವತಂತ್ರಗೊಂಡ ಬಳಿಕವೂ 75% ಹಿಂದೂಗಳಿಂದಲೇ ತುಂಬಿರುವ ದೇಶಕ್ಕೆ ರಾಮ ಮಂದಿರವನ್ನು ನಿರ್ಮಿಸುವ ಅನುಮತಿ ದೊರಕಿಸಿಕೊಳ್ಳಲು 72 ವರ್ಷಗಳೇ ಬೇಕಾಯಿತು ಎಂದರೆ ನಾವು ರೂಪಿಸಿಕೊಂಡ ವ್ಯವಸ್ಥೆಯಲ್ಲೇ ಲೋಪವಿದೆ ಎಂದರ್ಥ. ಅಂತಹಾ ವ್ಯವಸ್ಥೆಯನ್ನು ಸರಿಪಡಿಸಿ ರಾಮರಾಜ್ಯವನ್ನಾಗಿಸಿಕೊಳ್ಳುವುದೇ ಇವೆಲ್ಲಾ ಸಮಸ್ಯೆ, ಅಪಸವ್ಯಗಳಿಗೆ ರಾಮಬಾಣ. ಹಾಗಾಗಬೇಕಿದ್ದರೆ ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯಬೇಕು!