ಪುಟಗಳು

ಸೋಮವಾರ, ಡಿಸೆಂಬರ್ 17, 2012

ಉತ್ತರ ಕೊಡು ಮೌನಮೋಹನ.....!

ಉತ್ತರ ಕೊಡು ಮೌನಮೋಹನ.....!

1. 2009ರಲ್ಲಿ ರಷ್ಯಾದ ಹಳೇ ಹಡಗು(ಗೋರ್ಶ್ಕೋವ್) ಖರೀದಿ ಹಗರಣದ ತನಿಖೆಯ ಫಲಿತಾಂಶ ಏನು?
2. 2009ರಲ್ಲಿ ನಡೆದ ಶಸ್ತ್ರಾಸ್ತ್ರ ಖರೀದಿ ಹಗರಣ ಸರ್ಕಾರದ ಬೊಕ್ಕಸಕ್ಕೆ 9000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿತು. ಅದರ ಆರೋಪಿಗಳನ್ನೇಕೆ ಶಿಕ್ಷಿಸಲಿಲ್ಲ?
3. 2011ರಲ್ಲಿ ಇಸ್ರೇಲ್ ನಿಂದ ರಾ(RAW) ಖರೀದಿ ಮಾಡಿದ 450 ಕೋಟಿ ರೂಪಾಯಿ ಅವ್ಯವಹಾರದ ಕಥೆ ಏನು?
4. ದೇಶದ 71ಶೇಕಡಾ ರಾಜ್ಯಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿಯಲ್ಲಿಲ್ಲ. ಹಾಗಾದರೆ ಆ ಹಣ ಏನಾಗುತ

್ತಿದೆ?
5.ರಾಷ್ಟ್ರದ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ೨ಜಿ ತರಂಗಾಂತರ (2G-spectrum) ಹಗರಣದ ಆರೋಪಿಗಳನ್ನು ಯಾಕೆ ಬಿಟ್ಟಿರಿ?
6. 2012ರ 1.84 ಲಕ್ಷ ಕೋಟಿ ಹಗರಣವನ್ನು ಮಾಡಿ ಮೌನಕ್ಕೆ ಶರಣಾದ ನಿಮ್ಮ ಬಾಯೊಳಗೇನು ಕಲ್ಲಿದ್ದಲು ತುಂಬಿತ್ತೇ?
7. ಜಗತ್ತಿನ ಎದುರು ಭಾರತದ ಮಾನ ಕಳೆದ ಕಾಮನ್ ವೆಲ್ತ್ ಹಗರಣದ ಆರೋಪಿಗಳಿಗೆ ಕಲ್ಲು ಸಕ್ಕರೆ ಕೊಟ್ಟಿದ್ದೀರಲ್ಲ, ಭಾರತ ಏನು ನಿಮ್ಮಪ್ಪನ ಆಸ್ತಿಯೇ?
8. 2002ರಲ್ಲಿ ಅಟಲ್ ಪ್ರಾರಂಭಿಸಿದ ರಾಷ್ಟ್ರೀಯ ನದಿ ಜೋಡಣೆ ಯೋಜನೆಯನ್ನು 2004ರಲ್ಲಿ ಅಸ್ತಿತ್ವಕ್ಕೆ ಬಂದ ನಿಮ್ಮ ಸರಕಾರ ಕತ್ತು ಹಿಸುಕಿ ಕೊಂದಿತಲ್ಲ. ಕಾರಣವೇನು?
9. ವಾಜಪೇಯಿ ಸರಕಾರಕ್ಕೆ ಹೆಸರು ಬರುವುದೆಂದು ಸುವರ್ಣಚತುಷ್ಪಥ ಯೋಜನೆಯನ್ನು ಮಕಾಡೆ ಮಲಗಿಸಿದಿರಲ್ಲ. ಯಾಕೆ?
10. ನೆರೆಯ ದೇಶಗಳ ಕರೆನ್ಸಿ ಸ್ಥಿರವಾಗಿರುವಾಗ ಭಾರತದ ರೂಪಾಯಿ ಮಾತ್ರ ಅಪಮೌಲ್ಯ ಆಗಲು ಕಾರಣವೇನು?
11. ಭಯೋತ್ಪಾದನೆಗೆ ಹವಾಲ ಹಣ ಪೂರೈಕೆಯಾಗುತ್ತದೆ ಎನ್ನುವ ನೀವು ಅದನ್ನು ನಿಲ್ಲಿಸಲು ಯಾಕೆ ಕ್ರಮ ಕೈಗೊಳ್ಳುವುದಿಲ್ಲ?
12. ಪ್ರತಿವರ್ಷ ಸಹಸ್ರ ಸಂಖ್ಯೆಯ ಜನರ ಜೀವ ತೆಗೆಯುತ್ತಿರೋ ನಕ್ಸಲರ ನಿಗ್ರಹಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
13. ಗುಜರಾತ್ನಲ್ಲಿ 11% ಕೃಷಿ ಕ್ಷೇತ್ರದಲ್ಲಿ ಏರಿಕೆಯಾಗಿರುವಾಗ ಇಡೀ ದೇಶದಲ್ಲಿ ಕೇವಲ 1% ಏರಿಕೆಯಾಗುತ್ತಿದೆ ಎನ್ನುತ್ತೀರಲ್ಲ ನಿಮ್ಮ ಪಟ್ಟವನ್ನು ಅಭಿವೃದ್ಧಿಯ ಹರಿಕಾರ ಮೋದಿಯ ಕೈಗೆ ಯಾಕೆ ಕೊಡಬಾರದು?
14. ರಾಷ್ಟ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡುಬಂದ ಸರಕಾರ ಮತ್ತು ಸೇನೆಯ ನಡುವಿನ ಸಂಘರ್ಷಕ್ಕೆ ನಿಮ್ಮ ದೇಶದ್ರೋಹತನವೇ ಕಾರಣವಲ್ಲವೇ?
15. ವಿದ್ಯುತ್ ಉತ್ಪಾದನೆಯಲ್ಲಿ 40% ಉತ್ಪಾದನೆ ಸ್ಥಗಿತವಾಗಿದೆಯಲ್ಲ. ಏನು ಕ್ರ್ಮ ಕೈಗೊಂಡಿರಿ?
16. ಅಮರನಾಥ ಯಾತ್ರೆಯನ್ನು 38 ದಿನಗಳಿಗಿಳಿಸಿ ಹಝ್ ಯಾತ್ರೆಗೆ ಸಹಾಯಧನ ಹೆಚ್ಚಿಸಿದ ನಿಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕೆ ಏನು ಹೇಳಬೇಕು?
17. ಜಗತ್ತು ಕಂಡ ಬಹುದೊಡ್ಡ ಹಗರಣವಾದ ಯುರೇನಿಯಮ್ ಹಗರಣ ಯಾಕೆ ಮುಚ್ಚಿ ಹೋಯಿತು?
18. ನೀವೆ ಹೇಳಿದ ವೃತ್ತಿ ಕೌಶಲ ತರಬೇತಿ ಕೇಂದ್ರಗಳು ಎಲ್ಲಿ ಹೋದವು?
19. ಅಮರ್ ಜವಾನ್ ಸ್ಮಾರಕ ಮುರಿದ ಆರೋಪಿಗಳನ್ನು ಹಿಡಿದ ಡಿಸಿಪಿ ಪ್ರಮೋದ್ ತಾವ್ಡೆಗೆ " ಸುಭಾಷ್ ಚಂದ್ರ ಬೋಸ್ ತರಹ ಕನ್ನಡಕ ಹಾಕಿದ ತಕ್ಷಣ ಬಹಳ ಶಾಣ್ಯಾ ಎಂದು ಕೊಳ್ಳಬೇಡ, ಬಾಸ್ಟರ್ಡ್. ಬಿಟ್ಟು ಬಿಡು ಅವರನ್ನು" ಅಂತ ಬೈದ ಕಮೀಷನರ್ ಅರೂಪ್ ಪಟ್ನಾಯಕ್ ನಿಗೆ ಆರೋಪಿಗಳನ್ನು ಬಂಧಿಸದಂತೆ ಆರ್ಡರ್ ಮಾಡಿದ ನಿಮ್ಮ ಸರಕಾರ ಏನು ಪಾಕಿಸ್ತಾನದಿಂದ ಚುನಾಯಿತವಾದದ್ದೇ?
20. ಇಟಲಿಯ ಪರಿಚಾರಿಕೆಯ ಮಾತು ಕೇಳಿಕೊಂಡು ನಾಯಿಯ ಹಾಗೆ ಅವಳ ಹಿಂದೆ ಬಾಲ ಅಲ್ಲಾಡಿಸುತ್ತೀಯಲ್ಲ, ಸಿಖ್ಖರ ಸ್ವಾಭಿಮಾನದ ಒಂದು ಅಂಶವಾದರೂ ನಿನ್ನಲ್ಲಿದೆಯಾ? ಭಾರತೀಯ ಅಂತ ನಿನ್ನನ್ನು ಹೇಗೆ ಕರಿಯೋದು?

ಈ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎನ್ನಲು ನಿನಗೆ ನಾಚಿಕೆಯಾಗುವುದಿಲ್ಲ! ಅಡ್ವಾಣಿಜೀಗೆ ನಿಮ್ಮ ಜ್ಯೋತಿಷಿಯನ್ನು ಬದಲಿಸಿಕೊಳ್ಳಿ ಅಂತ ವ್ಯಂಗ್ಯ ಮಾಡಲು ನಿನ್ನ ನಾಲಗೆ ಹೊರಳುತ್ತದೆ! ಸಾವಿರ ಉತ್ತರಗಳಿಗಿಂತ ನನ್ನ ಮೌನ ಮೇಲು ಎಂದ ಹಾಗಲ್ಲ, ಉತ್ತರ ಕೊಡು ಮೌನಮೋಹನ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ