ಪುಟಗಳು

ಬುಧವಾರ, ಅಕ್ಟೋಬರ್ 7, 2015

ಮುಳ್ಳುಸಂಪಿಗೆ

#ನಾಸ್ತಿಮೂಲಮನೌಷಧಮ್
#ಮುಳ್ಳುಸಂಪಿಗೆ
ತುಳುವಿನಲ್ಲಿ ಹಂಪುಲ್, ಕಲ್ಲ್ ಸಂಪಿಗೆ ; ಕನ್ನಡದಲ್ಲಿ ಮುಳ್ಳುಸಂಪಿಗೆ, ಚಪ್ಳಕ, ಚಾಪಿ ಹಣ್ಣು, ಅಬ್ಳುಕಗ ಎಂದೆಲ್ಲಾ ಕರೆಯಲ್ಪ್ಡುವ ಸುಂದರ ಕೆಂಪನೆಯ ರುಚಿಕರ ಹಣ್ಣು ಇದು. ಈ ಹಣ್ಣನ್ನು ಸುಣ್ಣದೊಟ್ಟಿಗೆ ತಿಂದರೆ ಇನ್ನಷ್ಟು ರುಚಿ! ಸಂಸ್ಕೃತದಲ್ಲಿ ವಿಕಂಟಕ ಎಂಬ ಹೆಸರು.
ಈ ಮರವು ಕಾಸರ್ಕನ ಮರವನ್ನೇ ಹೋಲುತ್ತದೆ. ಹಸಿರು ಗೊಬ್ಬರಕ್ಕೆ ಇದರ ಗೆಲ್ಲು-ಎಲೆಗಳು ಉತ್ತಮ. ಇದರ ಚೆಕ್ಕೆಯು ಅತಿಸಾರ, ಗಂಟುನೋವು, ಹುಣ್ಣು-ಗಾಯಗಳ ನಿವಾರಣೆಗೆ ಉಪಯುಕ್ತ.
ವಿಕಂಟಕ ಮಿಡಿಯಾಗಿರುವಾಗ ಕೊಯ್ದು ತಂದು ನೀರಿನಲ್ಲಿ ಹಾಕಿ ಕುದಿಸಬೇಕು. ಅನಂತರ ಒಂದು ದಿನ ಕಾಲ ಉಪ್ಪು ನೀರಿನಲ್ಲಿ ನೆನೆ ಹಾಕಿ. ಬಳಿಕ ಮೆಣಸು ಸಾಸಿವೆ, ಅರಶಿಣಗಳನ್ನು ಅರೆದು ಮಿಶ್ರಮಾಡಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ.
ಹಾಂ...ಈ ಹಣ್ಣನ್ನು ಅತಿಯಾಗಿ ತಿಂದರೆ ಬೇಧಿ ಶುರುವಾದೀತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ