ಪುಟಗಳು

ಗುರುವಾರ, ಫೆಬ್ರವರಿ 19, 2015

"ಕೇಸರಿ"ವೃಷ್ಟಿ

ತೆಂಕಣ ಬಡಗಣದೊಳು ಮತಾಂಧತೆಯ ಅಮಲು|
ಸುತ್ತಲೂ ಆವರಿಸಿಹ ಮತಾಂತರಿಗಳ ಘಮಲು||
ಧರ್ಮ ಸಂಸ್ಕೃತಿ ಅಳಿದು ಹೋಗಿರಲು|
ತಾಯಿ ಭಾರತಿ ಕಣ್ಣೀರ್ಗರೆದಿಹಳು||

ಅಂಬಾ ಭವಾನಿಯ ಕಾರುಣ್ಯ ದೃಷ್ಟಿ|
ಸಮರ್ಥ ರಾಮರ ದಿವ್ಯದೃಷ್ಟಿ||
ದೇಶ ರಕ್ಷಣೆಗೆ ಶಿವನಂಶದ ಸೃಷ್ಟಿ|
ಭರತ ಭೂಮಿಯಲಿ "ಕೇಸರಿ"ವೃಷ್ಟಿ||

ಬಾಲ ಮೊಗದಲಿ ಬೀಷ್ಮ ಪ್ರತಿಜ್ಞೆ|
ಧರ್ಮ ಪ್ರತಿಷ್ಠಾಪನೆಯ ಖಡ್ಗ ದೀಕ್ಷೆ||
ಮಾವಳಿ ವೀರರ ಜೊತೆಗಾರ|
ಸೋಲಿಲ್ಲದ ಸರದಾರ||

ಅಡಿಗಡಿಗೆ ಕಿಡಿಯುರಿಸಿದ ವರಮಾತೆ ಜೀಜಾಜಿ|
ಗುರಿ ತೋರಿಸಿದ ಗುರು ದಾದಾಜಿ, ತಂದೆ ಷಾಹಜೀ||
ತಾನಾಜಿ ಏಸಾಜಿ ನೇತಾಜಿ ಕಂಕಾಜಿ|
ಬಡ ಮಾವಳಿಗಳ ಪಡೆ ಕಟ್ಟಿದ್ದು ಶಿವಾಜಿ||

ವಿಶಾಲ ರಾಯ ಪ್ರತಾಪ ಚಾಕಣ|
ಕೊಂಡಾಣ ಪನ್ನಾಳ ಪುರಂದರಗಳ ತೋರಣ||
ಶತ್ರುವಿನ ಮನೆ ಹೊಕ್ಕು ಎದೆ ಮೆಟ್ಟಿ ಧೀಂಗಿಣ|
ಅಫಜಲನೆದೆ ಸೀಳಿದ ತರುಣ ಮನದ ರಿಂಗಣ||

ಹಿಂದೂ ಮಂದಿರ ಸಾಗರವನುಳಿಸಿದ ಕ್ಷಾತ್ರತೇಜ|
ಸಂಸ್ಕೃತಿ ಧರ್ಮ ಪ್ರತಿಷ್ಠಾಪಿಸಿದ ಶಿವತೇಜ||
ಆನಂದ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿ|
ಸಿಂಹಾಸನವೇರಿದ ಹಿಂದೂ ಸಿಂಹ ಛತ್ರಪತಿ||


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ