ಪುಟಗಳು

ಮಂಗಳವಾರ, ಫೆಬ್ರವರಿ 4, 2020

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

                  ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಗೌರವ, ಭಕ್ತಿ ಭಾವನೆಗಳಿವೆ. ತಮ್ಮನ್ನು ತಾವು ಜಾತ್ಯಾತೀತ, ಬುದ್ಧಿಜೀವಿ ಎಂದು ಹೇಳಿಕೊಳ್ಳುವ ಅಥವಾ ಕರೆಸಿಕೊಳ್ಳುವವರಿಗಂತೂ ಈ ಸೂಫಿಗಳು ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರದ ಭಾವನೆಗಳಿವೆ. ಅವರು ಮುಲ್ಲಾಗಳಂತಲ್ಲ; ಹಿಂದೂಗಳನ್ನು ಇಷ್ಟಪಡುತ್ತಾರೆ; ಹಿಂದೂ ಧಾರ್ಮಿಕ ಸಾಹಿತ್ಯವನ್ನು ಇಷ್ಟಪಡುತ್ತಾರೆ; ಅಧ್ಯಾತ್ಮದ ಶೋಧದಲ್ಲಿರುವವರು ಎಂದೆಲ್ಲಾ! ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಮತ್ತು ಭಾರತಕ್ಕೆ ಬಂದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಉತ್ತರಪ್ರದೇಶ, ಬಂಗಾಳ, ಪಂಜಾಬ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ.

ಭಾರತದ ಇತಿಹಾಸದ ಗತಿಯನ್ನು ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದವ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನಿಗೆ ಸಹಾಯಕನಾಗಿ ಬಂದವ ಈ ಸೂಫಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಭೋಳೇ ಹಿಂದೂಗಳ ಸ್ನೇಹವನ್ನೂ ಸಂಪಾದಿಸಿದ. ಒಂದಷ್ಟು ಅನುಯಾಯಿಗಳನ್ನು ಪಡೇದುಕೊಂಡ. ರಾಜ್ಯದ ಸಂರಚನೆ, ಇಲ್ಲಿನ ರಾಜರುಗಳ ಯುದ್ಧನೀತಿ, ಅರಸೊತ್ತಿಗೆ ಬದಲಾದರೂ ತನ್ನ ಪಾಡಿಗೆ ತಾನಿರುವ ಸಭ್ಯ ಸಮಾಜವನ್ನೂ ಅರ್ಥೈಸಿಕೊಂಡ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲು ಎಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ ಘೋರಿ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ತರೈನಿನಲ್ಲಿ ತಮ್ಮ ಅರಸ ಕಾಫಿರರನ್ನು ಹೇಗೆ ವಂಚಿಸಿ ಸಾಯಬಡಿದ ಎಂದು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ.  ಮುಂದುವರೆದ ಘೋರಿ ಅಜ್ಮೀರದ ದೇವಾಲಯಗಳನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಈ ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ಚಿಸ್ತಿ ಅಲ್ಲಾನಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು!

13ನೇ ಶತಮಾನದ ಮೊದಲ ದಶಕದಲ್ಲಿ ದೆಹಲಿಯಲ್ಲಿ ಮೊದಲ ಮುಸ್ಲಿಂ ರಾಜ್ಯದ ಸ್ಥಾಪನೆಯಾಗುತ್ತಲೇ ಅಂದಿನ ಮುಸ್ಲಿಂ ಜಗತ್ತಿನ ಎಲ್ಲೆಡೆಯಿಂದ ಸೂಫಿಗಳು ಭಾರತಕ್ಕೆ ಬರಲಾರಂಭಿಸಿದರು. ಇಸ್ಲಾಮೀ ಆಕ್ರಮಣದ ವಿರುದ್ಧ ದಂಗೆಯೆದ್ದ ಮಂಗೋಲರು ಅವರದ್ದೇ ಭಾಷೆಯಲ್ಲಿ ತಿರುಗಿ ಉತ್ತರ ಹೇಳಲಾರಂಭಿಸಿದ ಬಳಿಕವಂತೂ ಇರಾನ್, ಇರಾಕ್, ಟ್ರಾನ್ಸೋಕ್ಸಿಯಾನ್, ಖುರಾಸಾನ್ ಪ್ರಾಂತ್ಯಗಳಿಂದ ಸೂಫಿಗಳು, ಮುಲ್ಲಾಗಳು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಓಡಿ ಬಂದರು. ಆದರೆ ವಿಚಿತ್ರವೆಂದರೆ ಮಂಗೋಲರ ದೌರ್ಜನ್ಯವನ್ನು ತಮ್ಮ ದುಷ್ಕರ್ಮಗಳಿಗೆ ಸಿಕ್ಕ ಫಲ ಎಂದು ವ್ಯಾಖ್ಯಾನಿಸುವ ಬದಲು "ಇಸ್ಲಾಮಿನ ಭಕ್ತಿಯಿಂದ ದೂರ ಸರಿದ ಕಾರಣ ಅಲ್ಲಾ ತಮ್ಮ ಮೇಲೆ ಸಿಟ್ಟುಗೊಂಡಿದ್ದಾನೆ" ಎಂದು ವ್ಯಾಖ್ಯಾನಿಸಿದ ಅವರ ಮತಾಂಧತೆಯ ಕ್ರೌರ್ಯವನ್ನು ಅನುಭವಿಸಿದ್ದು ಆಶ್ರಯಕೊಟ್ಟ ಹಿಂದೂಗಳು! ಮುಂದಿನೆರಡು ಶತಮಾನಗಳಲ್ಲಿ ಮಧ್ಯೋತ್ತರ ಭಾರತದ ದೇವಾಲಯ ಹಾಗೂ ಚೈತ್ಯಾಲಯಗಳ ಅವಶೇಷಗಳ ಮೇಲೆ ಮಸೀದಿ, ಮದ್ರಸಾ, ಖಾಂಕಾಗಳು ಎದ್ದು ನಿಂತವು!

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

             ಅಹ್ಮದ್ ಸಿರ್ಹಿಂದಿ(1564-1624) ಓರ್ವ ಸೂಫಿ. "ಖಡ್ಗದ ಮೂಲಕ ಷರೀಯತ್ತಿನ ಪ್ರಸಾರ ಸಾಧ್ಯ" ಎಂದು ಘೋಷಿಸುತ್ತಿದ್ದ. ಇದನ್ನು S.A.A. ರಿಜ್ವಿ 1965ರಲ್ಲಿ ಬರೆದ "ಮುಸ್ಲಿಮ್ ರಿವೈವಲಿಸ್ಟ್ ಮೂವ್ ಮೆಂಟ್ ಇನ್ ನಾರ್ಥರ್ನ್ ಇಂಡಿಯಾ ಇನ್ ದಿ 16th & 17 th ಸೆಂಚುರಿ" ಪುಸ್ತಕದಲ್ಲಿ ಓದಬಹುದು. ಈತ ಆ ಕಾಲದಲ್ಲಿ ಬಲಶಾಲಿಯಾಗಿದ್ದ ಹಲವು ದೇಶಗಳಿಗೆ ಪತ್ರಗಳನ್ನು ಬರೆಯುತ್ತಿದ್ದ. ಕೆಲ ಪತ್ರಗಳ ಮಾದರಿಗಳನ್ನು ನೋಡಿ... "ಕುಫ್ರ್ ಮತ್ತು ಕಾಫಿರರನ್ನು ಅವಮಾನಿಸುವುದರಲ್ಲೇ ಇಸ್ಲಾಮಿನ ಗೌರವವಿದೆ. ಕಾಫಿರರನ್ನು ಗೌರವಿಸುವವನು ಮುಸ್ಲಿಮರನ್ನು ಅವಮಾನಿಸಿದಂತೆ. ಅವರ ಮೇಲೆ ಜೆಜಿಯಾವನ್ನು ಹೇರುವುದರ ಉದ್ದೇಶ ಅವರಿಗೆ ಚೆನ್ನಾಗಿ ಬಟ್ಟೆ ಧರಿಸಲು ಮತ್ತು ಅದ್ದೂರಿಯಾಗಿ ಬದುಕಲು ಸಾಧ್ಯವಾಗದಂತೆ ಮಾಡುವುದೇ ಆಗಿದೆ. ಅವರು ಯಾವಾಗಲೂ ಭಯಗ್ರಸ್ತರಾಗಿ ನಡುಗುತ್ತಲೇ ಇರಬೇಕು. ಅವರನ್ನು ತಿರಸ್ಕಾರದಿಂದ ನೋಡಬೇಕು. ಇಸ್ಲಾಮಿನ ಗೌರವ ಸಾಮರ್ಥ್ಯಗಳನ್ನು ಎತ್ತಿ ಹಿಡಿಯುವುದೇ ಇದರ ಉದ್ದೇಶ."
"ಭಾರತದಲ್ಲಿ ಗೋವಧೆ ಅತ್ಯಂತ ಶ್ರೇಷ್ಠವಾದ ಮುಸ್ಲಿಂ ಆಚರಣೆಯಾಗಿದೆ. ಕಾಫಿರರು ಜೆಜಿಯಾವನ್ನಾದರೂ ಪಾವತಿಸಿಯಾರು; ಆದರೆ ಗೋವಧೆಗೆ ಎಂದೂ ಒಪ್ಪಲಾರರು". "ಹಿಂದೂಗಳು ಪೂಜಿಸುವ ರಾಮಕೃಷ್ಣ ಕ್ಷುದ್ರ ಜಂತುಗಳು. ಅವರ ತಂದೆ ತಾಯಿಗಳಿಗೆ ಮಾಮೂಲಾಗಿ ಹುಟ್ಟಿದವರು. ರಾಮನಿಗೆ ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಹೀಗಿರುವಾಗ ಬೇರೆಯವರನ್ನು ಅವನು ಹೇಗೆ ರಕ್ಷಿಸಿಯಾನು? ರಾಮ ಮತ್ತು ರಹಮಾನರು ಸಮಾನರೆಂದು ತಿಳಿಯುವುದು ನಾಚಿಕೆಗೇಡು. ಸೃಷ್ಟಿಕರ್ತ ಹಾಗೂ ಒಂದು ಜಂತು ಸಮಾನರಾಗುವುದು ಅಸಂಭವ" "ಕಾಫಿರರಿಗೆ ಹೃದಯದಿಂದ ಶಪಿಸುವುದರ ಜೊತೆಗೆ ದೈಹಿಕವಾಗಿಯೂ ಹಲ್ಲೆ ನಡೆಸಬೇಕು" ಈತನಿಗೂ ಈಗಿನ ಮತಭ್ರಾಂತ ಭಯೋತ್ಪಾದಕ ಝಕೀರ್ ನಾಯಕ್'ನಿಗೂ ಏನು ವ್ಯತ್ಯಾಸವಿದೆ? ಜಹಾಂಗೀರನು ಗುರು ಅರ್ಜುನ ದೇವರನ್ನು ಚಿತ್ರಹಿಂಸೆ ಕೊಟ್ಟು ಕೊಂದ ಬಳಿಕ "ಶಾಪಗ್ರಸ್ಥ ಕಾಫಿರನಾದ ಗೋಬಿಂದವಲ್ ನನ್ನು ವಧಿಸಿದ್ದೊಂದು ಪ್ರಮುಖ ಸಾಧನೆಯಾಗಿದ್ದು, ಹಿಂದೂಗಳ ಮಹತ್ವದ ಸೋಲಿಗೆ ಅದೇ ಕಾರಣ" ಎಂದು ಈತ ಅವನನ್ನು ಪ್ರಶಂಸಿಸಿದ್ದ. 1620ರಲ್ಲಿ ಜಹಾಂಗೀರ್ ಕಾಂಗ್ರಾ ಕೋಟೆಗಳನ್ನು ಗೆದ್ದು ಅಲ್ಲಿನ ದೇವಾಲಯಗಳನ್ನು ನೆಲಸಮ ಮಾಡಿ ಗೋವಧೆಗೈದು, ಮಸೀದಿ ಕಟ್ಟಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿ ಬರೆದ ಪತ್ರದಲ್ಲಿ "...ಸ್ವತಃ ಬಂದು ಆ ಕಲ್ಲುಗಳನ್ನು ತುಂಡರಿಸಬೇಕೆಂದು ನನಗೆ ಆಶೆಯಿತ್ತು. ಆದರೆ ನನ್ನ ವೃದ್ಧ್ಯಾಪ್ಯದಿಂದಾಗಿ ಬರಲಾಗಿಲ್ಲ" ಎಂದಿದ್ದ! ಸೆಕ್ಯುಲರ್ಗಳು ಶಾಂತಿಯುತ ಎಂದು ಸದಾ ಹೊಗಳುವ ಮುಸ್ಲಿಮ್ ಸಮಾಜದಲ್ಲಿ ಈತನನ್ನು ಶಾ ವಲಿಯುಲ್ಲಾನಿಗೆ ಸಮನಾದ ಅತ್ಯುಚ್ಛ ಸೂಫಿ ಹಾಗೂ ಇಸ್ಲಾಮಿನ ಮತಪಂಡಿತ ಎಂದು ಪರಿಗಣಿಸಲಾಗುತ್ತಿದೆ! ಮೌಲಾನ ಅಬುಲ್ ಕಲಾಮ್ ಆಜಾದ್ ತನ್ನ "ತಾಝ್ ಕಿರಾ"ದಲ್ಲಿ ಸಿರ್ಹಿಂದಿಯ ಬಗೆಗೆ "ಈ ಪತ್ರಗಳನ್ನು ಬರೆಯದಿದ್ದರೆ ಮುಸ್ಲಿಂ ಅಮೀರರು ಇಸ್ಲಾಂನಿಂದ ದೂರ ಸರಿಯಬಹುದಿತ್ತು. ಭಾರತದಲ್ಲಿ ಇಸ್ಲಾಮ್ ಬದಿಗೆ ಸರಿಯುವ ಅಪಾಯವಿತ್ತು" ಎಂದು ಬರೆದಿದ್ದಾನೆ. ಮಾತ್ರವಲ್ಲ ಈ ಪತ್ರಗಳು ಹಾಗೂ ಇಂತಹಾ ಹಲವಾರು ಸೂಫಿಗಳ, ಇಸ್ಲಾಮ್ ಮುಲ್ಲಾಗಳ ಪತ್ರಗಳ ಸಂಗ್ರಹವನ್ನು ಪ್ರಕಟಿಸಿದ ಕೆ.ಎ ನಿಜಾಮಿ ಅದನ್ನು ಮೌಲಾನ ಅಬುಲ್ ಕಲಾಮ್ ಆಜಾದ್ಗೆ ಅರ್ಪಿಸಿದ್ದಾನೆ. ಆಜಾದ್ ಅದಕ್ಕೆ ಉತ್ತರಿಸಿದ್ದು ಹೀಗೆ:-"ಈ ಪತ್ರಗಳನ್ನು ಪ್ರಕಟಿಸುವ ಅರ್ಹತೆ ನಿಮಗೆ ಪ್ರಾಪ್ತವಾದುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ. ಇಂತಹದ್ದೇ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ಅಲ್ಲಾ ನಿಮಗೆ ದಯಪಾಲಿಸಲಿ ಎಂದು ಹೃದಯಂತರಾಳದಿಂದ ಪ್ರಾರ್ಥಿಸುತ್ತೇನೆ". ವಿಪರ್ಯಾಸ ಏನೆಂದರೆ ಈತ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ! ಕಾಂಗ್ರೆಸ್ಸಿನಲ್ಲಿ ಎಂತಹಾ "ಕಟ್ಟಾ ರಾಷ್ಟ್ರವಾದಿಗಳು" ಇದ್ದರೆಂಬುದಕ್ಕೆ ಇದು ನಿದರ್ಶನ!

ಮುಸ್ಲಿಮರು ಅತ್ಯಂತ ಗೌರವದಿಂದ ಕಾಣುವ ಷಾಹ್ ವಲಿಯುಲ್ಲಾನ ಕಾಲದಲ್ಲಿ ಭಾರತದಲ್ಲಿ ಇಸ್ಲಾಮ್ ಸಾಮ್ರಾಜ್ಯವನ್ನು ಮರಾಠಾ ಕೇಸರಿ ಪಡೆ ಒಂದು ದಿಕ್ಕಿನಿಂದ ಹಾಗೂ ವೀರ ಜಾಟ್ ಪಡೆ ಇನ್ನೊಂದು ದಿಕ್ಕಿನಿಂದ ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕಾರಣ ಅದು ದುರ್ಬಲಗೊಂಡು ಅವಸಾನದ ಅಂಚಿಗೆ ತಲುಪಿತ್ತು. ಈ ಬಗೆಗಿನ ವ್ಯಥೆಯಿಂದ ಆತ ಹೊರದೇಶಗಳ ಮುಸ್ಲಿಂ ರಾಜರಿಗೆ ಭಾರತವನ್ನು ಆಕ್ರಮಿಸುವಂತೆ ಪತ್ರಗಳನ್ನು ಬರೆದ. "...ಹಿಂದೂಸ್ಥಾನ ಮುಸ್ಲಿಮೇತರರ ಕೈವಶವಾಗಿದೆ. ಅಧಿಕಾರಿ ಹುದ್ದೆಗಳಲ್ಲಿ ಹಿಂದೂಗಳೇ ತುಂಬಿದ್ದಾರೆ. ಮರಾಠರು ಹಾಗೂ ಜಾಟರು ಹಲಾವಾರು ಕೋಟೆಗಳನ್ನು ವಶಪಡಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಲಾಢ್ಯರಾಗಿದ್ದಾರೆ. ಈ ಕಾಲದಲ್ಲಿ ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಈ ಹಿಂದೂ ರಾಜರನ್ನು ಸೋಲಿಸಿ ನೆಲಕಚ್ಚಿರುವ ಮುಸ್ಲಿಮರಿಗೆ ಮರು ಅಧಿಕಾರ ವಹಿಸಿಕೊಡುವುದು ತಮ್ಮಿಂದಲ್ಲದೇ ಬೇರಾರಿಂದಲೂ ಅಸಾಧ್ಯ. ಮತ್ತದು ತಮ್ಮ ಕರ್ತವ್ಯ(ಫರ್ಜ್-ಇ-ಐನ್)ವಾಗಿದೆ. ಕಾಫಿರರ ಬಲ ಇದೇ ರೀತಿ ಮುಂದುವರೆದರೆ ಮುಸ್ಲಿಮರು ಇಸ್ಲಾಮನ್ನು ತ್ಯಜಿಸಬಹುದು. ನೀವು ಶತ್ರುಗಳ ಮೇಲೆ ದಂಡೆತ್ತಿ ಬರುವುದರಿಂದ ನಿಮ್ಮ ಹೆಸರು ಮುಜಾಹಿದೀನ್ ಫಿ ಸಬಿಲಲ್ಲಾ (ಅಲ್ಲಾನ ಸೇವಕರಾದ ಯೋಧರು)ಗಳ ಪಟ್ಟಿಗೆ ಸೇರುತ್ತದೆ..." ಎನ್ನುವ ವಿಸ್ತಾರವಾದ ಪತ್ರವನ್ನು ಅಪ್ಘಾನಿಸ್ತಾನದ ಅಹಮದ್ ಶಾ ಅಬ್ದಾಲಿಗೆ ಬರೆದು ಭಾರತವನ್ನು ಆಕ್ರಮಿಸುವಂತೆ ಆಹ್ವಾನಿಸಿದ. ಅಲ್ಲದೆ ಅಬ್ದಾಲಿಯ ಭಾರತೀಯ ಸ್ನೇಹಿತರಾದ ನಜೀಬುದ್ದೌಲ, ಶೇಖ್ ಮೊಹಮ್ಮದ್ ಅಶೀಕ್, ಷಾಹ್ ಮೊಹಮ್ಮದ್ ಪಹಲ್ತಿ, ಮೊಹಮ್ಮದ್ ಖಾನ್ ಬಲೂಚ್ ಮೊದಲಾದವರಿಗೂ ಯಾವ ರೀತಿ ಈ ಜಿಹಾದಿನಲ್ಲಿ ನೆರವೀಯಬೇಕೆಂದು ಹಲವಾರು ಪತ್ರಗಳನ್ನು ಬರೆದ. ಇವನ ಒತ್ತಾಸೆಯಿಂದಲೇ ಅಬ್ದಾಲಿ ಭಾರತಕ್ಕೆ ಬಂದು ಮರಾಠರನ್ನು ಮೂರನೇ ಪಾಣಿಪತ್ ಯುದ್ಧದಲ್ಲಿ(1761) ಸೋಲಿಸಿದ್ದು. ಈತನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ!

ದರೋಡೆಕೋರನಾಗಿದ್ದು ಕೆಲಸ ಮಾಡಿ ತಿನ್ನಲು ಸೋಮಾರಿತನ ಆವರಿಸಿ ಖಲೀಫಾನೆಂದು ಉದ್ಘೋಷಿಸಿಕೊಂಡು ಮುಜಾಹಿದೀನ್ಗಳನ್ನು ಬೆಳೆಸಿ ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟು ಬಾಲಾಕೋಟ್ ಎಂಬ ಭಯೋತ್ಪಾದಕರ ಸ್ವರ್ಗ ಕಟ್ಟಿ ಇಂದಿನ ಭಯೋತ್ಪಾದಕರಿಗೆ ಮಾತ್ರವಲ್ಲ ಎಲ್ಲಾ ಮುಸ್ಲಿಮರಿಗೆ ಆದರ್ಶನೆನಿಸಿಕೊಂಡ ಬರೈಲಿಯ ಸಯ್ಯದ್ ಅಹ್ಮದ್ ಬರೇಲ್ವಿ ಈ ಅಜೀಜನ ಶಿಷ್ಯ. ತನ್ನ ಹೋರಾಟ ಬ್ರಿಟಿಷರ ವಿರುದ್ಧ ಎನ್ನುತ್ತಾ ಹಿಂದೂ ರಾಜರುಗಳಿಂದ ಹಣವನ್ನೂ ಪಡೆದುಕೊಂಡು, ಹಿಂದೂಗಳ ವಿರುದ್ಧವೇ ಜಿಹಾದ್ ಘೋಷಿಸಿದ ಈತ ಬಲೂಚಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಹಿಂಬಾಲಕರನ್ನು ಗಿಟ್ಟಿಸಿಕೊಂಡು ರಾಜಾ ರಣಜಿತ್ ಸಿಂಗನ ವಿರುದ್ಧ ಜಿಹಾದೀ ದಂಗೆಯೆಬ್ಬಿಸಿದ ಈತ. ರಣಜಿತ್ ಸಿಂಹನನ್ನು ಸೋಲಿಸಲಾಗದ ಬ್ರಿಟಿಷರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಚಯನ ಮಾಡುತ್ತಿದ್ದ ಈತನಿಗೆ ಭದ್ರತೆಯನ್ನೂ ಒದಗಿಸಿದರು. ಅಂತಿಮವಾಗಿ ರಣಜಿತ್ ಸಿಂಹನ ಸೇನಾಧಿಪತಿ ಶೇರ್ ಸಿಂಗನ ಖಡ್ಗಕ್ಕೆ ಬಲಿಯಾದ ಈತನ ಹೆಸರಲ್ಲಿ ಸೂಫಿ ಶಾಖೆಯೇ ಬೆಳೆದಿದೆ. ಮೊನ್ನೆ ಮೊನ್ನೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್-2 ಗೊಳಗಾದ ಬಾಲಾಕೋಟ್ ಇವತ್ತಿಗೂ ಜಿಹಾದೀಗಳಿಗೆ ಪೂಜನೀಯ ಹಾಗೂ ಆಶ್ರಯ ತಾಣ!

ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ. ಸೋಮನಾಥವನ್ನು ನಾಶಪಡಿಸಲು ಮೊಹಮ್ಮದ್ ಘಜ್ನಿಯ ಮನವೊಲಿಸಿದ್ದು ಆತನ ಸೋದರಳಿಯನಾಗಿದ್ದ ಶಾಹಿದ್ ಸಲಾರ್ ಮಸೂದ್ ಘಾಜಿ ಎನ್ನುವ ಸೂಫಿ. ಆತ ತನ್ನ ತಂದೆಯ ಜೊತೆಗೂಡಿ ಭಾರತದ ಅನೇಕ ಕಡೆ ಸಂಚರಿಸಿ ದೇವಾಲಯಗಳನ್ನು ಕೆಡಹಿ ಅಲ್ಲಿ ಮಸೀದಿಗಳನ್ನೂ, ಹಿಂದೂಗಳ ವಿರುದ್ಧ ಹೋರಾಡಿ ಸತ್ತವರಿಗೆ ಸಮಾಧಿಗಳನ್ನೂ ನಿರ್ಮಿಸಿದ. ಅವುಗಳಲ್ಲಿ ಕೆಲವನ್ನು ಇಂದಿಗೂ ಪವಿತ್ರ ಸ್ಥಳಗಳೆಂಬಂತೆ ಹಿಂದೂಗಳೂ ಪೂಜಿಸುತ್ತಿದ್ದಾರೆ! ಮುಸ್ಲಿಮ್ ಆಕ್ರಮಣಕಾರರ ತುಕಡಿಯೊಟ್ಟಿಗೆ ಬಂದು ದೆಹಲಿಯಲ್ಲಿ ಹಲವು ಜನರನ್ನು ಮತಾಂತರಿಸಿದ ಹಜರತ್ ಖ್ವಾಜಾ ನಿಜಾಮುದ್ದೀನ್ ಔಲಿಯಾನಿಗೆ ದೆಹಲಿಯಲ್ಲಿ ದರ್ಗಾವೇ ಇದೆ. ದೆಹಲಿಯ ರೈಲು ನಿಲ್ದಾಣಕ್ಕೆ ಆ ಮತಾಂತರಿ, ಆಕ್ರಮಣಕಾರಿಯ ಹೆಸರಿನ್ನಿಡಲಾಗಿದೆ!

              ಪ್ರಸಿದ್ಧ ಸೂಫಿ ಅಮೀರ್ ಖುಸ್ರು "ಹಿಂದೂ ರಾಜರು ಸೋತಾಗ ಅವರನ್ನು ಆನೆಗಳ ಕಾಲ್ತುಳಿತಕ್ಕೆ ಒಳಪಡಿಸಲಾಯಿತು" ಎಂದು ಸಂತೋಷದಿಂದ ಬರೆಯುತ್ತಾನೆ. ಚಿತ್ತೋರಿನ ವಿಜಯದ ಬಳಿಕ 30ಸಾವಿರ ಹಿಂದೂಗಳನ್ನು ಹತ್ಯೆಗೈಯಲು ಖಿಜ್ರ್ ಖಾನ್ ನೀಡಿದ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ ಆತ "ಇದು ಅಲ್ಲಾನ ಸ್ತುತಿ" ಎಂದೂ, ಮಲ್ಲಿಕಾಫರನು ದಕ್ಷಿಣದ ದೇಗುಲಗಳನ್ನು ನಾಶಪಡಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ "ಬ್ರಾಹ್ಮಣರು ಮತ್ತು ವಿಗ್ರಹಾರಾಧಕರ ರುಂಡಗಳು ಕುತ್ತಿಗೆಯಿಂದ ನರ್ತಿಸಿ ಕೆಳಕ್ಕೆ ಬಿದ್ದು ರಕ್ತದ ಕಾಲುವೆಯೇ ಹರಿಯಿತು, ಇದು ಇಸ್ಲಾಮಿನ ವಿಜಯ" ಎಂದೂ ಬರೆದ. ಭಾರತದಲ್ಲಿ ಇಸ್ಲಾಮಿನ ವಿಜಯವನ್ನು ಆತ ವರ್ಣಿಸಿದ್ದು ಹೀಗೆ:- "ಇಡೀ ದೇಶ, ನಮ್ಮ ಪವಿತ್ರ ಯೋಧರ ಕತ್ತಿಯ ಮೂಲಕ, ಅದರ ಮುಳ್ಳುಗಳನ್ನು ಬೆಂಕಿಯಿಂದ ನಿರಾಕರಿಸಿದ ಕಾಡಿನಂತೆ ಮಾರ್ಪಟ್ಟಿದೆ. ಇಸ್ಲಾಂ ವಿಜಯಶಾಲಿಯಾಗಿದೆ, ವಿಗ್ರಹಾರಾಧನೆಯು ಅಧೀನವಾಗಿದೆ. ಕಾನೂನು , ಜೆಜಿಯಾ ಪಾವತಿಸುವ ಮೂಲಕ ಸಾವಿನಿಂದ ವಿನಾಯಿತಿ ನೀಡದಿದ್ದರೆ, ಹಿಂದೂಸ್ಥಾನವೆಂಬ ಹೆಸರು, ಅದರ ಮೂಲ ಮತ್ತು ಶಾಖೆಗಳನ್ನು ನಂದಿಸಬಹುದಿತ್ತು."

               ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯದ ಜೊತೆ ದಕ್ಷಿಣಕ್ಕೆ ಬಂದ ಮಾಬರಿ ಖಂಡಾಯತ್ ದಖ್ಖನ್ನಿನಲ್ಲಿ(1305) ಹಲವಾರು ಹಿಂದೂ ಸೈನಿಕರನ್ನು ಸ್ವತಃ ಕೊಂದನಲ್ಲದೆ ಬಹು ಸಂಖ್ಯೆಯ ಹಿಂದೂಗಳನ್ನು ಹಾಗೂ ಜೈನರನ್ನು ಮತಾಂತರ ಮಾಡಿದ. ಈತ ಬಿಜಾಪುರದಲ್ಲಿದ್ದ ಬ್ರಾಹ್ಮಣರನ್ನು ಓಡಿಸಿ ಉಳಿದವರ ಮತಾಂತರಕ್ಕೆ ತೊಡಗಿದ. ಸದಾ ಒಂದು ಕಬ್ಬಿಣದ ರಾಡ್ ಹಿಡಿದು ಕಾಫಿರರ ತಲೆ ಒಡೆದ, ಮತಾಂತರ ಮಾಡಿದ ಈತನಿಗೆ ಅದೇ ಕಾರಣಕ್ಕೆ ಖಂಡಾಯತ್ (ಅಂದರೆ ಮೊಂಡಾದ ರಾಡ್) ಎಂಬ ಹೆಸರು ಸೇರಿಕೊಂಡು ಪೀರ್ ಮಾಬರಿ ಖಂಡಾಯತ್ ಎಂದೇ ಕುಖ್ಯಾತನಾದ. ದಕ್ಷಿಣ ಪಂಜಾಬಿನಲ್ಲಿ ನಡೆದ ಮತಾಂತರದ ಹಿಂದೆ ಮುಲ್ತಾನಿನ ಬನ ಅಲ್ ಹಕ್ ಹಾಗೂ ಬಾಬಾ ಫರೀದ ಎಂಬಿಬ್ಬರು ಸೂಫಿಗಳ ಕೈವಾಡವಿತ್ತು. ಝಾಂಗ್ ಜಿಲ್ಲೆಯಲ್ಲಿ ಶೇಖ್ ಫರೀದ್, ಕಛ್ ಪ್ರಾಂತ್ಯದಲ್ಲಿ ಸೈಯದ್ ಅಬ್ದುಲ್ ಖಾದಿರ್ ಗಿಲಾನಿ ಹಾಗೂ ಆತನ ಶಿಷ್ಯ ಸೈಯದ್ ಯೂಸುದ್ದೀನ್, ಬಾಂಬೆ ಪ್ರೆಸಿಡೆನ್ಸಿಯ ನೇಕಾರರ ಮತಾಂತರದ ಹಿಂದೆ ಸೈಯದ್ ಮುಹಮ್ಮದ್ ಗೆಸು ದರಾಜ್, ಉ.ಪ್ರ.ದ ಬುದೌನ್ ಜಿಲ್ಲೆಯಲ್ಲಿ ಗೌಳಿಗರ ಮತಾಂತರ ಹಿಂದೆ ಶೇಖ್ ಜಲಾಲುದ್ದೀನ್ ತಬ್ರಿಜಿ ಎಂಬ ಸೂಫಿಗಳಿದ್ದರು. ಇನ್ನು ಕೆಲವು ಸೂಫಿಗಳು ಇಸ್ಲಾಂನಿಂದಲೇ ದೂರ ಸರಿದು ಬೋಧಿಸಲು ಪ್ರಾರಂಭಿಸಿದಾಗ ಅಥವಾ ತಾನು ದೇವರ ಪ್ರವಾದಿ ಎಂದು ಹೇಳಿಕೊಂಡಾಗ ಅಂತಹಾ ಸೂಫಿಗಳು ಮುಸ್ಲಿಮರಿಂದಲೇ ಕೊಲ್ಲಲ್ಪಟ್ಟರು. ಸೂಫಿ ಶೇಖ್ ರುಕ್ನುದ್ದೀನ್, ಇಮಾಮ್ ಗಜ್ಜಾಲಿಯಂಥವರು ಇದಕ್ಕೆ ಉದಾಹರಣೆ.

            ಇವು ಕೆಲವು ಸೂಫಿಗಳ ಕೃತ್ಯದ ಕೆಲವು ತುಣುಕುಗಳಷ್ಟೇ. ಇಂತಹಾ ಹಲವಿವೆ. ಇವರೆಲ್ಲರ ಕುಕೃತ್ಯಗಳನ್ನು ಅವರೇ ಸ್ವತಃ ಬರೆದಿಟ್ಟರೂ, ಅಥವಾ ಆಗಿನ ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದರೂ ಅಂತಹವುಗಳನ್ನು ಮರೆಮಾಚಿ ಸೂಫಿಗಳೆಂದರೆ ದೇವಮಾನವರು, ಮಹಾನ್ ತಾಂತ್ರಿಕರು ಎಂದು ಆಧುನಿಕ ಇತಿಹಾಸ ಪುಸ್ತಕಗಳಲ್ಲಿ ಬರೆದು ಪೀಳಿಗೆಗಳಿಗೇ ಉರು ಹೊಡೆಸಲಾಗಿದೆ. ಅದಕ್ಕೆ ಸೆಕ್ಯುಲರ್ ಸರಕಾರಗಳ ಅಭಯ"ಹಸ್ತ" ಬೇರೆ! ರಿಚರ್ಡ್ ಮ್ಯಾಕ್ಸ್ ವೆಲ್ ಬರೆದ(1978, ಪ್ರಿನ್ಸ್ ಟನ್) "ಸೂಫಿಸ್ ಆಫ್ ಬಿಜಾಪುರ್:1300-1700" ಅಂತೂ ಇಲ್ಲಿನ "ಸೆಕ್ಯುಲರ್" ಸರಕಾರದಿಂದ ನಿಷೇಧಿಸಲ್ಪಟ್ಟಿತ್ತು! ಸೀತಾರಾಂ ಗೋಯಲರು ಹಲವು ಸೂಫಿಗಳ ನಿಜ ಇತಿಹಾಸವನ್ನು ಅನಾವರಣ ಮಾಡಿದ್ದಾರೆ. ಸೂಫಿ ಸಂತರು ಇಸ್ಲಾಮೀ ಸಾಮ್ರಾಜ್ಯಶಾಹಿಯ ಬೇಹುಗಾರರಾಗಿ ಕೆಲಸ ಮಾಡಿದರು. ಜೊತೆಗೆ ಹಿಂದೂಗಳಿಗೆ ದ್ರೋಹವನ್ನೂ ಬಗೆದರು ಎಂದು ಸೀತಾರಾಮ್ ಗೋಯಲರು ಬರೆದಿದ್ದಾರೆ.  ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ