ಪುಟಗಳು

ಮಂಗಳವಾರ, ಜುಲೈ 23, 2013

ಕಲಿ ಭೀಮ...

ಒಬ್ಬ ಬಾಲಕನಿಗಿದ್ದ ಸ್ವಾತಂತ್ರ್ಯದ ಪರಿಕಲ್ಪನೆ ನಮ್ಮ ಈಗಿನ ಭಾರತೀಯರಿಗಿಲ್ಲವಲ್ಲ...ಬದುಕಿದರೆ ಚಂದ್ರಶೇಖರ ಆಜಾದನಂತೆ ಬದುಕಬೇಕು...
ಆ ಮೀಸೆ ತಿರುವುತ್ತಾ ನಿಂತ ಮೊಗದಲ್ಲಿ ಅದೆಂತಹಾ ಉತ್ಸಾಹ, ಅಗ್ನಿ ಕಿಡಿ, ತೀಕ್ಷ್ಣ ನೋಟ, ಬಲಿಷ್ಟ ದೇಹ, ಕುಶಾಗ್ರಮತಿ!
"ನಾನು ಸ್ವತಂತ್ರ, ಸ್ವತಂತ್ರನಾಗಿಯೇ ಇರುತ್ತೇನೆ, ಸ್ವತಂತ್ರನಾಗಿಯೇ ಸಾಯುತ್ತೇನೆ" ಎಂದು ನುಡಿದು ಅದರಂತೆ ನಡೆದ ಪ್ರಚಂಡ ವೀರ, ಕಲಿ ಭೀಮ...
ಅಹಿಂಸೆ, ಜಾತ್ಯಾತೀತತೆ ಎಂಬ ಪೊಳ್ಳು ಶಬ್ಧಗಳನ್ನು ಬಡಬಡಿಸುವವರಿಗೆ ಇದೆಲ್ಲಾ ಅರ್ಥ ಆಗೋಲ್ಲ ಬಿಡಿ...
ಹಾಂ...ಇವರಿಗೆಲ್ಲಾ ತಿಳಿ ಹೇಳಬೇಕಾದರೆ ನಿನ್ನ ಕೈಯ ಪಿಸ್ತೂಲಿನ ಗುಂಡಿನ ಮೊರೆತವೇ ಬೇಕು ಆಜಾದ್!
ನಿನ್ನಂತಹ ವೀರನನ್ನು ಹೇಗೆ ಮರೆಯಲಿ...ಕನಿಷ್ಟ ನಿನ್ನ ಜನ್ಮದಿನದಂದಾದರೂ ನಿನ್ನನ್ನು ಗೌರವಿಸುವ ಬಯಕೆ!
ಇದು ಸ್ವಾತಂತ್ರ್ಯದ ಬಯಕೆ!
ವಂದೇ ಮಾತರಂ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ