ಕಾಲ ಮಣಿಯುವುದು ತತ್ಪರನಾದವನಿಗೆ ಮಾತ್ರ. ತತ್ಪರನು ವೇದಗಳ ತಾತ್ಪರ್ಯವಾಗಿರುತ್ತಾನೆ. ತತ್ಪರನಾದವ ಸ್ತಬ್ಧನಾಗಿರುತ್ತಾನೆ! ಸ್ತಬ್ಧತೆಯಲ್ಲಿ ಕಾಲವೂ ನಿಶ್ಚಲ! ತನ್ನನ್ನು ನಿಶ್ಚಲಗೊಳಿಸುವವನಿಗಷ್ಟೇ ಕಾಲ ಮಣಿಯುತ್ತದೆ. ಅವನು ಒಂದು ಬ್ರಹ್ಮಾಂಡದಿಂದ ಇನ್ನೊಂದಕ್ಕೆ ಸಂಚರಿಸಬಲ್ಲ. ಸಂಚರಿಸುವುದೆಂದರೇನು ಬ್ರಹ್ಮಾಂಡಗಳೆಲ್ಲವೂ ಅವನಾಗಿರುವಾಗ. ತತ್ಪರದ ಇನ್ನೊಂದು ಅರ್ಥವೇ ಎಲ್ಲಾ ಕಡೆ ಇರುವನೆಂದು. ಎಲ್ಲಾ ಕಡೆ ಇರುವ, ಎಲ್ಲವೂ ಅವನೇ ಆಗಿರುವವನಿಗೆ ಕಾಲ ಮಣಿಯದೆ ಇನ್ನೇನು ಮಾಡಿತು. ಸ್ತಬ್ಧನಾಗಿಯೇ ಅವನು ಜ್ಞಾನ ಪಸರಿಸಿದ. ರಮಣ ಎಂದರೆ ಒಡೆಯ ಎನ್ನುವ ಅರ್ಥವೂ ಇದೆ! ಅರುಣಾಚಲ ಎನ್ನುವ ಹೆಸರಲ್ಲೇ ಎಲ್ಲಾ ಇದೆ! ಸ್ತಬ್ಧತೆಯೂ! ತಾತ್ಪರ್ಯವೂ!
#ರಮಣ
#ರಮಣ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ