ಪುಟಗಳು

ಬುಧವಾರ, ಆಗಸ್ಟ್ 14, 2019

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ


         ಸ್ವಾತಂತ್ರ್ಯ. ಅದರಿಚ್ಛೆ ಯಾರಿಗಿಲ್ಲ? ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಅಥವಾ ನಿತ್ಯರೂಢಿಯಿಂದ ಅದೇ ಅಭ್ಯಾಸವಾಗಿಬಿಡುವ ಕಾರಣ ಸುಮ್ಮನುಳಿಯುತ್ತದೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ನಿತ್ಯ ಪ್ರತಿಧ್ವನಿಸುವ ಪದ ಸ್ವಾತಂತ್ರ್ಯ. ಪ್ರತಿಜೀವಿಗಳಲ್ಲೂ ಈ ಮೂರು ಪದವನ್ನು ತನ್ನದಾಗಿಸಿಕೊಳ್ಳುವ ಹಪಹಪಿ ಅದೆಷ್ಟು? ಈ ಪದ ಸ್ಫುರಿಸುವ ಭಾವವದೆಷ್ಟು? ಪ್ರತಿಯೊಬ್ಬರ ಅದರೆಡೆಗಿನ ಭಾವವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ದಕ್ಕಿದ ಪ್ರಮಾಣವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ಅರ್ಥವಾಗುವ ರೀತಿಯೂ ಬೇರೆ ಬೇರೆಯೇ! ಅದರ ಪ್ರಾಪ್ತಿಗಾಗಿ ಜೀವಿ ಪಡುವ ಪಾಡೆಷ್ಟು? ನಡೆದ ಯುದ್ಧಗಳೆಷ್ಟು? ಆದ ಬಲಿದಾನಗಳೆಷ್ಟು? ಅದರ ಪ್ರಾಪ್ತಿಗಾಗಿ ಹೆಣಗಾಡಿದ ಅದೆಷ್ಟು ಜೀವಗಳು ದನಿಯೂ ಹೊರಬರದಂತೆ ಹೆಣವಾಗಿ ಹೋದವು? ಅದರ ಉಳಿಕೆ-ಗಳಿಕೆಗಾಗಿ ಅದೆಷ್ಟು ಕಣ್ಣೀರಿನ ಕೋಡಿ ಹರಿಯಿತು; ಅದೆಷ್ಟು ರಕ್ತ ಮಣ್ಣಿಗಿಳಿಯಿತು. ಕೆಲವರು ತಾವು ಪಟ್ಟ ಪಾಡಿಗೆ ತಕ್ಕ ಪ್ರತಿಫಲವನ್ನಾದರೂ ಉಂಡರು. ಕೆಲವರಿಗೆ ತಮ್ಮ ಪಾಡನ್ನು ಅಕ್ಷರರೂಪಕ್ಕಿಳಿಸಿ ಇತರರ ನೆರವಿಂದ ಪ್ರತಿಫಲವೋ, ಕಾಲಗರ್ಭದಲ್ಲಿ ಅನುಕಂಪದ ಅಲೆಯಾದರೂ ಲಭಿಸಿತು. ಈ ವಿಶಾಲ ದಿಗಂತದಲ್ಲಿ ಅಂತಹಾ ಯಾವುದೇ ಪ್ರತಿಫಲವಿಲ್ಲದೆ, ಜೀವಿಯ, ಕಾಲದ ನೆರವಿಲ್ಲದೆ, ಕನಿಷ್ಟ ತನ್ನ ಕಿರುಚಾಟ-ಕಣ್ಣೀರಿಗೂ ಎಡೆ ಸಿಗದೆ ಗತಪ್ರಾಣರಾದವರೆಷ್ಟೋ?

             ಭಾರತ ಇದೆಲ್ಲವನ್ನೂ ಕಂಡಿದೆ. ಸ್ವಾತಂತ್ರ್ಯೇಚ್ಛೆ ಬರಿಯ ವ್ಯಕ್ತಿಯದ್ದಲ್ಲ. ಒಂದು ಸಮೂಹದ್ದೂ ಆಗಿರಬಹುದು; ಒಂದು ದೇಶದ್ದೂ ಆಗಿರಬಹುದು. ಆ ಇಚ್ಛೆಯಿಂದಲೇ ಹಲವು ಕಾಲ ಈ ದೇಶ ಹೋರಾಡಿತು. ಅದೆಷ್ಟು ಬಗೆಯ ಹೋರಾಟಗಳು; ಅದೆಷ್ಟು ರಣ ಕಲಿಗಳು; ಅದೆಷ್ಟು ಬಲಿದಾನಗಳು. ಆ ಸ್ವಾತಂತ್ರ್ಯ ಪ್ರಾಪ್ತಿಯ ಮನಸ್ಥಿತಿಯ ಉದ್ದೀಪನಕ್ಕೆ ಅದೆಷ್ಟು ಮಂತ್ರಗಳು, ತಂತ್ರಗಳು, ಮಾರ್ಗಗಳು! ಅವೆಲ್ಲದರ ಮೂಲ ಸ್ರೋತ ಯಾವುದು? ನಿಸ್ಸಂಶಯವಾಗಿ ವಂದೇ ಮಾತರಂ. ಭಾವಾವೇಶದ ದಿವ್ಯ ಸ್ಥಿತಿಯಲ್ಲಿ ಋಷಿ ಬಂಕಿಮರಿಗೆ ಅಪ್ರಯತ್ನವಾಗಿ ಆದ ಮಂತ್ರ ದರ್ಶನವದು. ಇಡಿಯ ಹಿಂದೂಸ್ಥಾನದಲ್ಲಿ ಮಿಂಚಿನ ಸಂಚಾರ ಮೂಡಿಸಿದ ಗೀತೆಯದು. ಅದರ ಪ್ರತಿಯೊಂದು ಶಬ್ಧವೂ ಸ್ವಾತಂತ್ರ್ಯದ ಅಪೇಕ್ಷಿಗಳಿಗೆ ರೋಮಾಂಚನವನ್ನುಂಟುಮಾಡಿತು. ಅದರಿಂದೆದ್ದ ಜ್ವಾಲಾಮುಖಿ ದಾಸ್ಯರಕ್ಕಸನನ್ನು ಸುಟ್ಟು ಹಾಕಿತು.

              ದೇಶವೇ ತಾಯಿ ಎನ್ನುವ ಭಾವ ಭಾರತೀಯರಿಗೇನೂ ಹೊಸದಾಗಿರಲಿಲ್ಲ. ಆದರೆ ಆ ಕಾಲಘಟ್ಟದಲ್ಲಿ ಪಾಶ್ಚಾತ್ಯಂಧಾನುಕರಣೆಯ ಸುಳಿಯಿಂದ ಜನತೆಯನ್ನು ತಪ್ಪಿಸಿ ರಾಷ್ಟ್ರವೆಂಬ ಭಾವಸಾಗರದಲ್ಲಿ ಈಜಲು ಅನುವು ಮಾಡಿಕೊಡಬೇಕಿತ್ತು. ಜೊತೆಗೆ ಪರಂಪರೆಯ ಸೊಬಗಿಗೆ ಆಧುನಿಕತೆಯ ಸ್ಪರ್ಷ ಬೇಕಿತ್ತು. ಸರಿಯಾದ ಸಮಯದಲ್ಲಿ ಪ್ರಕೃತಿ ಬಂಕಿಮರ ಚಿತ್ತಭಿತ್ತಿಯಲ್ಲಿ ಪ್ರತ್ಯಕ್ಷಳಾಗಿ ಅವರ ಭಾವದಲ್ಲಿ ಹೊನಲಾಗಿ ಕವನವಾಗಿ ಹರಿದಳು. ಅಮ್ಮಾ ಎನುವ ಭಾವೋದ್ದೀಪನವನ್ನು ವಂದೇ ಮಾತರಂ ಒದಗಿಸಿತು. ಭಾಷೆಯ ಹಂಗಿಲ್ಲದೆ ಭಾರತೀಯರನ್ನು ಬೆಸೆಯಿತು. ರಾಷ್ಟ್ರಧರ್ಮವೇ ಪರಮೋಧರ್ಮ ಎನ್ನುವುದು ಬುದ್ಧಿಗಿಂತಲೂ ಭಾವವಾಗಿ ಹರಿದುದರಿಂದ ಅದು ಬಂಕಿಮರ ಮಾತಿನಂತೆ ಕೆಲವೇ ವರ್ಷಗಳಲ್ಲಿ ಬಂಗಾಳವೇಕೆ ಇಡಿಯ ಭಾರತವನ್ನೇ ಹುಚ್ಚೆಬ್ಬಿಸಿತು. ರವೀಂದ್ರರಿಗೆ ಜ್ವಾಲಾಮುಖಿಯೆನಿಸಿತು. ಋಷಿಕಲ್ಪ ಅರವಿಂದರಿಗೆ ದರ್ಶನವೆನಿಸಿತು. ವೀರ ಸಾವರ್ಕರರ "ಸ್ವಾತಂತ್ರ್ಯ ಲಕ್ಷೀ ಕೀ ಜೈ"ಯ ಜೊತೆ ಸೇರಿತು. ಕ್ರಾಂತಿ ಸಂಘಟನೆಗಳನ್ನು ಪ್ರೇರೇಪಿಸಿತು. ಸ್ವಾಭಿಮಾನವನ್ನು ಉದ್ದೀಪಿಸಿತು. ರಾಷ್ಟ್ರಧ್ವಜದ ಪರಿಕಲ್ಪನೆಗೂ ಸೇರಿತು. ಪತ್ರಿಕೆ, ಸಂಘಟನೆಗಳಿಗೆ ಬೀಜರೂಪವಾಯಿತು. ಹಲವು ಭಾಷೆಗಳಲ್ಲಿ ಹಲವು ಕವಲುಗಳಾಗಿ ಹರಿಯಿತು. ಗಂಡುಗಲಿ ಚಂದ್ರಶೇಖರ ಆಜಾದನ ಗುಂಡುಗಳಲ್ಲಿ ಮೊರೆಯಿತು. ಭಗತ್-ಬಟುಕೇಶ್ವರರು ಎಸೆದ ಬಾಂಬುಗಳಲ್ಲಿ ಭೋರ್ಗರೆಯಿತು. ಸುಭಾಷರ "ಜೈ ಹಿಂದ್"ಗೆ ಸ್ಪೂರ್ತಿಯಾಯಿತು. ಆತ್ಮಹತ್ಯೆ ಮತ್ತು ಆತ್ಮಾಹುತಿಯ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸಿ ಸ್ವಾತಂತ್ರ್ಯ ಪ್ರಾಪ್ತಿಗೂ ಕಾರಣವಾಯಿತು. ಇಂದಿಗೂ ಅದು ಸತ್ತಂತಿಹರನು ಬಡಿದೆಚ್ಚರಿಸುತ್ತಲೇ ಇದೆ.

            ಒಟ್ಟಿಗೆ ಬಾಳಲು ಜನರು ತಾಳುವ ಇಚ್ಛಾಶಕ್ತಿ ರಾಷ್ಟ್ರವೊಂದನ್ನು ರೂಪಿಸುತ್ತದೆ. ಆದರೆ ರಾಷ್ಟ್ರವೆಂದರೆ ಬರಿಯ ಭೂಮಿಯ ತುಂಡಾಗಲೀ, ಜನಸಮೂಹವಾಗಲೀ ಅಲ್ಲವಲ್ಲ. ಅಂದರೆ ರಾಜ್ಯ ಮತ್ತು ರಾಷ್ಟ್ರವನ್ನು ಸಮಾನ ವ್ಯಾಪ್ತಿಯಲ್ಲಿ ನೋಡಿದ ಆಂಗ್ಲ ಮಾನಸಿಕತೆ ನಮ್ಮಲ್ಲೂ ನೆಲೆಯೂರಿ, ರಾಷ್ಟ್ರ ಸ್ವಾತಂತ್ರ್ಯಕ್ಕಿಂತಲೂ, ದೇಶ ಸ್ವಾತಂತ್ರ್ಯವೇ ಮೇಲಾಗಿ, ಕೆಲವರ ಹಿತಾಸಕ್ತಿಗೆ ಬಲಿಯಾಗಿ ರಾಜಕೀಯ ಸ್ವಾತಂತ್ರ್ಯವಷ್ಟೇ ನಮ್ಮ ಪಾಲಿಗಾಯಿತು. ಅದಕ್ಕಿಂತಲೂ ಹೆಚ್ಚಾಗಿ ಅದೇ ಕೆಲವರ ದುರಾಸೆಯಿಂದ ತಾಯಿ ಭಾರತಿ ತನ್ನ ಮುಕುಟಮಣಿಯನ್ನೂ ತನ್ನ ಹಲವು ಅಂಗಾಂಗಗಳನ್ನು ಕಳೆದುಕೊಂಡು ನಿಸ್ತೇಜಳಾದಳು. ಅಲ್ಲದೆ ನಮ್ಮದೇ ಬಂಧು ಬಾಂಧವರ ಅತ್ಯಾಚಾರ, ದುರ್ಮರಣ; ಸೂತಕ! ಹೀಗೆ ಸ್ವಾತಂತ್ರ್ಯ ದಿನವೆಂಬುದು ಸ್ವಾತಂತ್ರ್ಯದ ಸಂಭ್ರಮದ ಜೊತೆಗೆ ನಮ್ಮ ಅದೆಷ್ಟೋ ಬಂಧು ಭಗಿನಿಯರ ಶ್ರಾದ್ಧವನ್ನೂ ಮಾಡಬೇಕಾಗಿ ಬಂದ ದ್ವಂದ್ವದ ದಿನ! ರಾಜಕೀಯ ಸ್ವಾತಂತ್ರ್ಯವಾದರೂ ಉಳಿಯಿತೇ? ಅದೂ ಅದೇ ಕೆಲವರ ಕುಟುಂಬದ ಸೊತ್ತಾಯಿತು! ಚುಕ್ಕಾಣಿ ಹಿಡಿದವರ ಪಾಶ್ಚಾತ್ಯೀಕೃತ ಮಾನಸಿಕತೆಯಿಂದಾಗಿ ಪರೋಕ್ಷ ವಸಾಹತುಶಾಹಿ ಮುಂದುವರಿಯಿತು. ವಿಕೃತ ಜಾತ್ಯಾತೀತತೆ, ಮತ ಬ್ಯಾಂಕ್ ರಾಜಕಾರಣ, ರಾಷ್ಟ್ರ ವಿರೋಧಿ ನಡವಳಿಕೆ, ಇತಿಹಾಸದ ತಿರುಚುವಿಕೆ, ರಾಷ್ಟ್ರಭಾವ ತುಂಬದ ಶಿಕ್ಷಣ, ಧರ್ಮ-ನೀತಿಗಳಿಲ್ಲದ ವ್ಯವಹಾರ, ಭ್ರಷ್ಟಾಚಾರ, ವಿದೇಶನಿಷ್ಠೆ, ವಂಚಕ, ದೇಶದ್ರೋಹಿಗಳಿಗೆ ಕುಮ್ಮಕ್ಕು ಇವೆಲ್ಲವೂ ಅದೇ ಪರೋಕ್ಷ ವಸಾಹತುಶಾಹಿಯ ಫಲಶ್ರುತಿಗಳು!

           2014; ಈ ಎಲ್ಲಾ ಅಪಸವ್ಯಗಳನ್ನು ಮೆಟ್ಟಿ ನಿಂತು ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಭಾರತ ಮುಂದಡಿಯಿಟ್ಟಿತು. ಅಂದಿನಿಂದ ಸೇನೆಯೂ ಸ್ವಾತಂತ್ರ್ಯದ ಸಂಭ್ರಮವನ್ನು ಸವಿಯಿತು. ಆಡಳಿತ, ರಾಜಕೀಯ, ಸಾಮಾಜಿಕ ಜೀವನದಲ್ಲಿ ನಿಧಾನವಾಗಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಸ್ವಾಭಿಮಾನವನ್ನು ಗಳಿಸಿಕೊಂಡ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾತಿಯಿಂದ ವರ್ತಿಸಿ ತನ್ನ ಶತಶತಮಾನಗಳ ಹಿಂದಿನ ಘನತೆಯನ್ನು ಮತ್ತೆ ಪಡೆಯುವತ್ತ ಸಾಗಿತು. ಭಯೋತ್ಪಾದನೆಯ ಮೂಲಕ ತನ್ನನ್ನು ನಾಶ ಮಾಡಲು ಯತ್ನಿಸುವವರಿಗೆ ಎರಡೆರಡು ಬಗೆಬಗೆಯ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ತನ್ನ ಶಕ್ತಿಯನ್ನೂ, ಬದಲಾವಣೆಗೊಂಡ ನೀತಿಯನ್ನು ನಿರೂಪಿಸಿತು. ಒಂದು ಕಾಲದಲ್ಲಿ ಜಗತ್ತಿಗೆ ಧನಾತ್ಮಕವಾದ ಎಲ್ಲವನ್ನೂ ಕೊಡುತ್ತಿದ್ದ ದೇಶ ಎಲ್ಲವನ್ನೂ ಪಡೆದುಕೊಳ್ಳಬೇಕಾದ ಸ್ಥಿತಿಗೆ ತಲುಪಿತ್ತು. ಆ ಪರಿಸ್ಥಿತಿಯೂ ಬದಲಾಯಿತು. ಇವೆಲ್ಲವೂ ಕಳೆದ ಐದು ವರ್ಷಗಳ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದ್ದವು.

             ಏನೇ ಬದಲಾದರೂ ಹಲವು ಕೊರಗುಗಳು ಉಳಿದು ಬಿಟ್ಟಿದ್ದವು. ಜಾತ್ಯತೀತ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದರೂ ಸಮುದಾಯವೊಂದರ ಸ್ತ್ರೀಯರ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ಟ್ರಿಪಲ್ ತಲಾಖ್ ಅನ್ನು ನಿಷೇಧಿಸುವ ಮೂಲಕ ಆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ಮಾತ್ರ ಸರಕಾರ ಮೊದಲ ಹೆಜ್ಜೆಯಿಟ್ಟದ್ದಲ್ಲ; ಸಮಾನ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೊಳಿಸಲೂ ಇದು ಮೊದಲ ಉಪಕ್ರಮವೇ. ಒಂದು ದೇಶದಲ್ಲಿ ಸ್ವಾತಂತ್ರ್ಯವೆಂಬುದು ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಎಂಬಂತಿದ್ದ ಸ್ಥಿತಿಯನ್ನು ಸರಿಪಡಿಸಲೂ ಸರಕಾರ ತೆಗೆದುಕೊಂಡ ಮೊದಲ ಹೆಜ್ಜೆ. ಚಂದ್ರಯಾನ-2ಕ್ಕೆ ಯಶಸ್ವಿಯಾಗಿ ಚಾಲನೆ ನೀಡುವ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು ಭಾರತ. ಎಪ್ಪತ್ತು ವರ್ಷಗಳ ಹಿಂದೆ ತನ್ನ ಮುಕುಟಮಣಿಯ ಅರ್ಧಭಾಗವನ್ನು ಕಳೆದುಕೊಂಡಿತ್ತು ಭಾರತ. ನೆಹರೂ ಎಂಬ ಮೂರ್ಖನ ನಿರ್ಧಾರದಿಂದ 370 ಎಂಬಾ ವಿಧಿಯಡಿಗೆ ಸಿಲುಕಿ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿಯ ಉಳಿದರ್ಧ ಭಾಗ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿತು. ವಿಧಿ 370 ಎಂಬ ಷರೀಯತ್ಗೆ ಸಮನಾದ ರಕ್ಕಸನಿಗೆ ಬಲಿಯಾಗಿ ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ, ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳ ದಾಸ್ಯಕ್ಕೆ ತುತ್ತಾಗಿ; ಅಭಿವೃದ್ಧಿಯೂ ಮರೀಚಿಕೆಯಾಗಿ; ತಾಯ್ನೆಲವನ್ನು ಅಮ್ಮಾ ಎನ್ನುವ ಸೌಭಾಗ್ಯವೂ ಸಿಗದೆ; ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸ್ವಾತಂತ್ರ್ಯವೂ ಇಲ್ಲದೆ ನಲುಗಿದ್ದ ನಮ್ಮ ಬಂಧುಗಳು ಮುಕ್ತಿ ಪಡೆದು ಮುಖ್ಯಭೂಮಿಕೆಯಲ್ಲಿ ಸೇರುವ ಅಭೂತಪೂರ್ವ ಕ್ಷಣ ಮಹತ್ತರವಲ್ಲದೆ ಇನ್ನೇನು? ನಕಲಿ ಮಾನವೀಯತೆಯೆಂಬ ಮುಖ ಹೊಂದಿ ಲೇಖನಿಯ ತುದಿಯಲ್ಲಿ ನಲಿದು ಜಗದ ಜನರ ಮನಸ್ಸಿನಲ್ಲಿ ಆಶ್ರಯ ಪಡೆದಿದ್ದ ಕೆಲವೇ ಜನರ ಸ್ವಾರ್ಥದ ಪ್ರತ್ಯೇಕತೆಯ ಹೋರಾಟವು ಇದರಿಂದ ಕೊನೆಗೊಂಡು ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಬಹುಜನರ ಒಂದಾಗುವ ಬೇಡಿಕೆ ಈಡೇರಿದ ಪುಣ್ಯ ಕ್ಷಣವದು.

             ಈ ಘನ ಕಾರ್ಯದ ಹಿಂದೆ "ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹಿ ಚಲೇಗಾ" ಎನ್ನುತ್ತಾ ಹೋರಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ. ಪಾಕಿಸ್ತಾನ ಆಕ್ರಮಿಸಿಕೊಂಡ ಉಳಿದ ಭಾಗಗಳನ್ನು ಮರಳಿ ಪಡೆಯಲೂ ಈ ಮಹಾನ್ ಕಾರ್ಯ ವಿಶ್ವಾಸ ತುಂಬಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳೂ ಹತ್ತಿರವಾಗಿವೆ. ಭಾರತ ಮನಸ್ಸು ಮಾಡಿದರೆ ಏನು ಸಾಧಿಸಬಹುದು ಎನ್ನುವುದನ್ನೂ ಈ ಐತಿಹಾಸಿಕ ನಡೆ ಜಗತ್ತಿಗೆ ತೋರಿಸಿದೆ. ಬಲೂಚಿಗಳು, ಸಿಂಧಿಗಳ ಹೃದಯದಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ತೀವ್ರಗೊಳಿಸಿದೆ. ಅಖಂಡ ಭಾರತದ ಸಾಕ್ಷಾತ್ಕಾರಕ್ಕೆ ದೇಶ ಮೊದಲ ಹೆಜ್ಜೆಯೆನ್ನಿರಿಸಿದೆ. ಅದೇ ಕಾರಣಕ್ಕೆ ಇಷ್ಟು ವರ್ಷವಿಲ್ಲದಿದ್ದ ವಿಶೇಷ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಬಂದಿದೆ. ಎಲ್ಲಾ ಭಾರತೀಯರು ಈ ಸವಿಯನ್ನುಂಡು ಪಾವನರಾಗೋಣ.

               ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ ಉಳಿಕೆಗೆ-ಗಳಿಕೆಗೆ ಮಹಾಯುದ್ಧಗಳೇ ನಡೆದವು. ಈಗಲೂ ನಡೆಯುತ್ತಲೇ ಇವೆ. ತನ್ನ ಲಾಭಕ್ಕಾಗಿ ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ವೀರರ ಲಕ್ಷಣವಂತೂ ಅಲ್ಲ. "ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು" ಎಂದ ವಿವೇಕ ವಾಣಿ ಯಾರ ಕಿವಿಯಲ್ಲಿ ಮೊಳಗುತ್ತದೆಯೋ ಆತ ಸ್ವಾತಂತ್ರ್ಯದೆಡೆಗೆ ತೀವ್ರಗತಿಯಲ್ಲಿ ಸಾಗುತ್ತಾನೆ. ಅಲ್ಲದೆ ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಎಂದಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲ. ಭಾರತ ತನ್ನ ಆತ್ಮವನ್ನು ಸದಾ ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳಲಿ ಎಂದು ಆಶಿಸೋಣ.

ಭಾನುವಾರ, ಆಗಸ್ಟ್ 11, 2019

ಕಾಶ್ಮೀರ "ಘರ್ ವಾಪಸಿ"ಯಾಗಿದೆ!

ಕಾಶ್ಮೀರ "ಘರ್ ವಾಪಸಿ"ಯಾಗಿದೆ!


            ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ.

                1947ರ ಭಾರತ ಸ್ವಾತಂತ್ರೃ ಕಾಯಿದೆಯಂತೆ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದಾದ ಆಯ್ಕೆಯಲ್ಲಿ ಭಾರತವನ್ನೇ ನಂಬಿ ಕಾಶ್ಮೀರದ ರಾಜ ಹರಿಸಿಂಗ್ ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ  1947ರ ಅಕ್ಟೋಬರ್ 26ರಂದು ಸಹಿಹಾಕಿದರು. ಅಕ್ಟೋಬರ್ 27ರಂದು ಗವರ್ನರ್ ಜನರಲ್ ಮೌಂಟ್ಬ್ಯಾಟನ್ನನ ಷರಾವು ಅದಕ್ಕೆ ಬಿದ್ದಿತ್ತು. ನೆಹರೂ ತನ್ನ ಮಿತ್ರ ಶೇಖ್ ಅಬ್ದುಲ್ಲಾನಿಗೆ ಸಹಾಯ ಮಾಡುವ ದೃಷ್ಟಿಯಿಂದ ಒತ್ತಡ ಹೇರಿದಾಗ, ಶೇಖ್ ಅಬ್ದುಲ್ಲಾನ ಆಶಯದಂತೆ ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಸಂವಿಧಾನ ರಚನಾ ಸಮಿತಿ ಮುಂದೆ 306-ಎ ವಿಧಿಯನ್ನು  ಮಂಡಿಸುತ್ತಾರೆ. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ಇದನ್ನು ಒಪ್ಪುವುದಿಲ್ಲ. ಆಗ ನೆಹರೂ ಅಂಬೇಡ್ಕರ್ನ್ನು ಕಂಡು ಮನವೊಲಿಸುವಂತೆ ಅಬ್ದುಲ್ಲಾನಿಗೆ ಸೂಚಿಸುತ್ತಾರೆ. ಹಾಗೆ ಬಂದ ಅಬ್ದುಲ್ಲಾನಿಗೆ "ಕಾಶ್ಮೀರಿಗಳಿಗೆ ಭಾರತದ ಪ್ರಜೆಗಳಿಗಿರುವಂತೆ ಸಮಾನ ಹಕ್ಕುಗಳನ್ನು ಬಯಸುವ ನೀವು, ಭಾರತೀಯರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳಿರಬಾರದು ಎನ್ನುತ್ತೀರಿ. ಕಾಶ್ಮೀರದ ರಕ್ಷಣೆಗೆ, ಅಭಿವೃದ್ಧಿಗೆ ಭಾರತ ಬೇಕು. ಆದರೆ ಅಲ್ಲಿ ಉಳಿದ ಭಾರತೀಯರಿಗೆ ಹಕ್ಕಿಲ್ಲ ಎಂದರೇನರ್ಥ? ಈ ದೇಶದ ಕಾನೂನು ಮಂತ್ರಿಯಾಗಿ ನಾನು ನನ್ನ ದೇಶೀಯರ ಹಿತಾಸಕ್ತಿಯನ್ನು, ದೇಶದ ಸಾರ್ವಭೌಮತ್ವವನ್ನು ಎಂದಿಗೂ ಕಡೆಗಣಿಸುವುದಿಲ್ಲ" ಎಂದು ಖಂಡತುಂಡವಾಗಿ ನಿರಾಕರಿಸುತ್ತಾರೆ ಅಂಬೇಡ್ಕರ್. ಆದರೆ ನೆಹರೂ ತನ್ನ ಮಿತ್ರನಿಗೋಸ್ಕರ 370ನೇ ವಿಧಿ ತಾತ್ಕಾಲಿಕ ಎಂದು ಸೇರಿಸುವಂತೆ ಪಟೇಲರನ್ನು ಒಪ್ಪಿಸಿ ಸಂವಿಧಾನ ಶಿಲ್ಪಿಯ ಬಾಯಿ ಮುಚ್ಚಿಸಿದ್ದರು. ಮುಂದೆ ವಿಧಿ 35ಎ ಯನ್ನು ಹಿಂಬಾಗಿಲ ಮೂಲಕ ಸೇರಿಸಿ ಮತ್ತಷ್ಟು ಗಬ್ಬೆಬ್ಬಿಸಲಾಯಿತು!

ಹೇಗಿತ್ತು ಆರ್ಟಿಕಲ್ 370 ಹಾಗೂ 35ಎ?
          ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನವರಾರೂ ಅಲ್ಲಿ ಭೂಮಿ ಖರೀದಿಸುವಂತಿರಲಿಲ್ಲ. ಭಾರತದ ಉಳಿದ ಭಾಗದವರು ಅಲ್ಲಿ ಹೋಗಿ ನೆಲೆಸಿದರೆ ಅಲ್ಲವರಿಗೆ ಮತದಾನದ ಹಕ್ಕು ಇರಲಿಲ್ಲ. ಸರ್ಕಾರಿ ನೌಕರಿಯ ಹಕ್ಕೂ ಇರಲಿಲ್ಲ. ವ್ಯಾಪಾರ ಮಾಡುವಂತಿರಲಿಲ್ಲ. ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಹೊರಗಿನವರಾರೂ ಅಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೂ ಈ ವಿಧಿಯ ಪ್ರಕಾರ ಸಿಗುತ್ತಿದ್ದ ಹಕ್ಕು, ಸೌಲಭ್ಯಗಳೆಲ್ಲಾ ತಪ್ಪಿ ಹೋಗುತ್ತಿದ್ದವು. ಆದರೆ ಆಕೆ ಪಾಕಿಸ್ತಾನದವನೊಬ್ಬನನ್ನು ಮದುವೆಯಾದರೆ ಆಕೆಯ ಹಕ್ಕುಗಳೆಲ್ಲಾ ಹಾಗೆಯೇ ಉಳಿಯುತ್ತಿದ್ದವು. ಮಾತ್ರವಲ್ಲಾ ಆ ಪಾಕಿಸ್ತಾನಿಗೂ ಜಮ್ಮುಕಾಶ್ಮೀರದ ನಾಗರಿಕತ್ವ ತನ್ಮೂಲಕ ಭಾರತದ ನಾಗರಿಕತ್ವವೂ ಸಿಗುತ್ತಿತ್ತು. ಅಂದರೆ ಇದು ಭಯೋತ್ಪಾದಕರಿಗೆ ಭಾರತಕ್ಕೆ ಬರಲು ಇದ್ದ ರಹದಾರಿಯಾಗಿತ್ತು. ಹಾಗೆಯೇ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತಿತ್ತು. ಷರಿಯಾ ಕಾನೂನಿನ ಕುಣಿಕೆ ಮಹಿಳೆಯರ ಮೇಲಿರುತ್ತಿತ್ತು. ಈ ಅಸಮಾನತೆಯ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಹೋರಾಡಿದ್ದು ಕಾಣೆ. ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಹಣ ಇಲ್ಲಿಗೆ ಹೋಗುತ್ತಿತ್ತು!

           ಈ 370ನೇ ವಿಧಿಯ ಲಾಭ ಪಡೆದು ಜಮ್ಮುಕಾಶ್ಮೀರ ರಾಜ್ಯ ತನ್ನದೇ ಆದ ಸಂವಿಧಾನವನ್ನು 1957ರಲ್ಲಿ ಅಳವಡಿಸಿಕೊಂಡಿತು. ಒಂದು ದೇಶದಲ್ಲಿ ಎರಡು ಸಂವಿಧಾನ! ಈಗ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವ ಜಾತ್ಯಾತೀತರು ಹಾಗೂ ಸಮಾಜವಾದಿಗಳೆಂದು ಕರೆಯಿಸಿಕೊಳ್ಳುತ್ತಿರುವವರೂ ಗಮನಿಸಬೇಕಾದ ವಿಷಯವೇನೆಂದರೆ ಅವೆರಡೂ ಪದಗಳಿಗೆ ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಜಾಗವೇ ಇರಲಿಲ್ಲ! ಕೇಂದ್ರ ಸರಕಾರ ಇತ್ತೀಚೆಗೆ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ತಂದಾಗ ಇದೇ 370ನೇ ವಿಧಿಯ ಪರವಾಗಿರುವವರು ವಿರೋಧಿಸಿದ್ದರು. ಆದರೆ 370ನೇ ವಿಧಿಯ ಕಾರಣ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಆರ್.ಟಿ.ಐಗೆ ಯಾವುದೇ ಕಿಮ್ಮತ್ತಿರಲಿಲ್ಲ. ಕೌಟುಂಬಿಕ ದೌರ್ಜನ್ಯ ಪರಿಹಾರ, ವನ್ಯಜೀವಿ ಸಂರಕ್ಷಣೆ,ಸಿಎಜಿ, ಭ್ರಷ್ಟಾಚಾರ ನಿಯಂತ್ರಣಗಳಂತಹಾ ಕಾಯ್ದೆಗಳ ಸಹಿತ ಯಾವುದೇ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಇಲ್ಲಿ ಅಧಿಕಾರವಿರಲಿಲ್ಲ. ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರಕಾರದ ಅನುಮತಿ ಪಡೆಯಬೇ ಕಿತ್ತು! ಸರ್ವೋಚ್ಚ ನ್ಯಾಯಾಲಯ ಕೇವಲ ಮನವಿ ಮಾಡಬಹುದಿತ್ತು! ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ. ಪಂಚಾಯತ್ಗಳಿಗೆ ಅಧಿಕಾರವಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾದರೂ ಅನುಮತಿ ಪಡೆದುಕೊಳ್ಳಬೇಕಿತ್ತು. ಬಳಿಕವೂ ಜಮ್ಮು ಕಾಶ್ಮೀರದ ಧ್ವಜದ ಜೊತೆಗೆಯೇ ಹಾರಿಸಬೇಕಿತ್ತು. ರಾಷ್ಟ್ರಧ್ವಜವನ್ನು ಸುಡುವ, ಹರಿಯುವ ಮುಂತಾದ ರಾಷ್ತ್ರೀಯ ಸಂಕೇತಗಳಿಗೆ ಮಾಡುವ ಅವಮಾನ ಇಲ್ಲಿ ಅಪರಾಧವಾಗಿರಲಿಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ-ಸಂಪರ್ಕ ಕ್ಷೇತ್ರ ಬಿಟ್ಟು ಯಾವುದೇ ಕಾಯಿದೆ-ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ಮಾಡಲು ಕೇಂದ್ರ ಸರಕಾರ ಅಲ್ಲಿನ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು.

            ರಾಷ್ಟ್ರಾದ್ಯಂತ ಮಂಡಲ ಆಯೋಗದ ಬಗ್ಗೆ ಬೊಬ್ಬೆ ಕೇಳಿ ಬರುತ್ತದೆ. ಆದರೆ ಕಾಶ್ಮೀರದಲ್ಲಿ ಮಂಡಲ ಆಯೋಗದ ವರದಿ ಜಾರಿಗೇ ಬರಲಿಲ್ಲ. 1991ರವರೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಮೀಸಲಾತಿಯೇ ಸಿಗುತ್ತಿರಲಿಲ್ಲ. 91ರ ಬಳಿಕವೂ ರಾಜಕೀಯ ಮೀಸಲಾತಿ ಸಿಗಲಿಲ್ಲ. ಅಸಲಿಗೆ ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟಿದೆಯೆಂಬ ಅಂಕಿ ಅಂಶಗಳೇ ಇಲ್ಲ. 1956ರಲ್ಲಿ ಪಂಜಾಬಿಬಿಂದ ಕರೆತಂದ ವಾಲ್ಮೀಕಿ ಜನಾಂಗಕ್ಕೆ ಯಾವುದೇ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. 1947ರಲ್ಲಿ ಅಪಾರ ಪ್ರಮಾಣದ ಹಿಂದೂಗಳು, ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಬಂದವರಲ್ಲಿ ಕೆಲವರು ಕಾಶ್ಮೀರದಲ್ಲಿ ನೆಲೆ ನಿಂತರು. ಆದರೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಸಿಗಲಿಲ್ಲ. ಆದರೆ ವಿಭಜನೆ ಸಂದರ್ಭದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಬೇಕಾದರೆ ಮರಳಿ ಬರಬಹುದು, ತಮ್ಮ ಭೂಮಿಯನ್ನು ಮರಳಿ ಪಡೆಯಬಹುದು, ಪರಿಹಾರವನ್ನೂ ಪಡೆದುಕೊಳ್ಳಬಹುದು!

          1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಡೆಯಿತು. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ, ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ! ಯಾಕೆ ಹೀಗೆ? ಕಾರಣ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ!

           1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ನಡೆದಿತ್ತು. ಇನ್ನೇನು ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಬೇಕು ಅನ್ನುವಷ್ಟರಲ್ಲಿ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆ ಯೋಜನೆಯನ್ನು ತಿರಸ್ಕರಿಸಿಬಿಟ್ಟರು! ಕೇವಲ ರಾಜಕೀಯ ಮಾತ್ರವಲ್ಲ ಅಭಿವೃದ್ಧಿಯೂ ಜಮ್ಮು ಪಾಲಿಗೆ ಮರೀಚಿಕೆಯೇ! ಪ್ರವಾಸೋದ್ಯಮ ಬಜೆಟ್ನಲ್ಲಿ ಶೇ.90ರಷ್ಟನ್ನು ಕಾಶ್ಮೀರಕ್ಕೆ ಕೊಡಲಾಗಿದೆ.. ವ್ಯಾಪಾರ ಮತ್ತು ಪ್ರವಾಸೋದ್ಯಮದಿಂದ ಬರುವ ಬಹುತೇಕ ಆದಾಯ ಜಮ್ಮುವಿನಿಂದಲೇ ಆಗಿದ್ದರೂ ಅಲ್ಲಿಗೆ ಅನುದಾನವಿಲ್ಲ! ಮಾತ್ರವಲ್ಲ, ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ದುಬಾರಿ ವಿದ್ಯುತ್ ಶುಲ್ಕ, ಇವೆಲ್ಲವೂ 370ನೇ ವಿಧಿಯ ಅಪಸವ್ಯಗಳು! ಹೀಗೆ ದೇಶಕ್ಕೇ ಒಂದು ಕಾನೂನಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು.

         ದೇಶದ 1% ಜನಸಂಖ್ಯೆ ಇರುವ ಜಮ್ಮು ಕಾಶ್ಮೀರಕ್ಕೆ ಕೇಂದ್ರದ ಅನುದಾನದ ಪಾಲು 10%! ದೇಶದ 13% ಜನಸಂಖ್ಯೆಯುಳ್ಳ ಉತ್ತರ ಪ್ರದೇಶ ಪಡೆಯುವ ಪಾಲು 8.2%. 2000-2016ರ ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿ ತಲಾ 91,300 ರೂ. ಪಡೆದರೆ ಉತ್ತರಪ್ರದೇಶದ ವ್ಯಕ್ತಿಗೆ ಸಿಕ್ಕಿದ್ದು ಬರೇ 4300 ರೂ. ಈ ಅವಧಿಯಲ್ಲಿ ಜಮ್ಮು ಕಾಶ್ಮೀರ ಗಿಟ್ಟಿಸಿದ್ದು ಬರೋಬ್ಬರಿ 1.14 ಲಕ್ಷ ಕೋಟಿ ರೂ.! ಇವೆಲ್ಲವೂ ವಿಧಿ 370ರ ಫಲಶ್ರುತಿಗಳೇ. ಈ ಅವ್ಧಿಗೆ ಮುನ್ನವೂ ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಅನುದಾನವನ್ನು ಜಮ್ಮು ಕಾಶ್ಮೀರ ಪಡೆದುಕೊಂಡು ಬಂದಿತ್ತು. ಆದರೆ ಆ ಹಣದ ಹಂಚಿಕೆ, ವಿನಿಯೋಗ, ಉಳಿತಾಯದಲ್ಲಿ ಯಾವುದೇ ಪಾರದರ್ಶಕತೆಯಿರಲಿಲ್ಲ ಎಂದು 2016ರ ಕೇಂದ್ರ ಸಿಎಜಿ ವರದಿ ಹೇಳಿದೆ. ಇಷ್ಟು ಅನುದಾನವಿದ್ದರೂ ಕಾಶ್ಮೀರ ಯಾಕೆ ಅಭಿವೃದ್ಧಿಯಾಗಲಿಲ್ಲ? ಕಾರಣ ಇವೆಲ್ಲವೂ ಮೂರು ಕುಟುಂಬಗಳ ಖಜಾನೆ ಸೇರಿತ್ತು!

        ಈಗ ಕೇಂದ್ರ ಸರಕಾರ ಆರ್ಟಿಕಲ್ 370ಯನ್ನು ಕಿತ್ತೊಗೆದಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಶಾಸನ ಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಢಕ್ ಶಾಸನ ಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಆರ್ಟಿಕಲ್ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ವಿಧಾನಸಭೆ ವಿಸರ್ಜನೆಯಾಗಿರುವ ಜಮ್ಮು ಕಾಶ್ಮೀರದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ. ಹಾಗಾಗಿ ಕಾಶ್ಮೀರದ ರಾಜ್ಯಪಾಲರ ಸಹಿಯೊಂದು ಸಾಕು. ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ವಿಧಿ 370ರ ವಿಧಿಬರೆಹವನ್ನು ಬದಲಾಯಿಸಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಈಗ ಜಮ್ಮು ಕಾಶ್ಮೀರ ನಿಜಾರ್ಥದಲ್ಲಿ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಮರಳಿದೆ. ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳಿಗೆ ಇನ್ನು ಕಾದಿದೆ ಹಬ್ಬ! ಜಮ್ಮು ಕಾಶ್ಮೀರದ ಕ್ಷೇತ್ರ ಮರುವಿಂಗಡನೆಗೂ ಕಾಲ ಕೂಡಿ ಬಂದಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳು ಹತ್ತಿರವಾಗಿವೆ.

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ


            ಒಬ್ಬ ಆರ್ಚ್ ಬಿಷಪ್ ಜಲಿಯನ್ ವಾಲಾಭಾಗ್'ನಲ್ಲಿ ಏನಾಗಿತ್ತು ಎನ್ನುವುದರ ಪೂರ್ಣ ಮತ್ತು ಪಾರದರ್ಶಕ ಮಾಹಿತಿಯನ್ನು ಕೊಡುವುದೆಂದರೇನರ್ಥ? ಆರ್ಚ್ ಬಿಷಪ್ ಏನು ಇತಿಹಾಸಕಾರನೇ ಅಥವಾ ಜಲಿಯನ್ ವಾಲಾಭಾಗಿನಲ್ಲಿ ನಡೆದ ಕ್ರೌರ್ಯ ಆತ ಮಾಹಿತಿ ಕೊಟ್ಟೊಡನೆ ಮರೆಯಾಗುವುದೇ? ಶತಮಾನದ ಬಳಿಕ ಬ್ರಿಟಿಷರು ತಮ್ಮ ಆರ್ಚ್ ಬಿಷಪ್ ಒಬ್ಬನನ್ನು ಜಲಿಯನ್ ವಾಲಾಭಾಗಿಗೆ ಕಳುಹುತ್ತಿದ್ದಾರೆ. ಆತನ ಸ್ವಾಗತಕ್ಕೆ ಭಾರತದಲ್ಲಿನ ಅವನ ವಂದಿಮಾಗಧರು ಅಣಿಯಾಗುತ್ತಿದ್ದಾರೆ. ಆದರೆ ಆತ ಬರುತ್ತಿರುವುದು ಕ್ಷಮೆ ಕೇಳಲಲ್ಲ; ಇತಿಹಾಸದಲ್ಲಿ ಏನಾಯಿತು ಎಂದು ವಿವರಿಸುವುದಕ್ಕೆ; ತಮ್ಮ ಇತಿಹಾಸದ ಪಾಪಗಳನ್ನು ಗುರುತಿಸಿಕೊಳ್ಳುವುದಕ್ಕೆ ಎನ್ನುವ ನುಡಿಮುತ್ತುಗಳು ಆತನಿಂದಲೇ ಬಂದಿವೆ!ಅಸಲಿಗೆ ನಮಗೆ ಬೇಕಾದುದು ಕ್ಷಮಾಪಣೆಯಲ್ಲ. ಪಂಜಾಬಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಸಿಖ್ ಬಂಧುಗಳ ಮತಾಂತರಕ್ಕೆ ಆತ ಕಡಿವಾಣ ಹಾಕಿದರೆ ಅದು ಆತ ಯಾಚಿಸುವ ಕ್ಷಮೆಗಿಂತಲೂ ದೊಡ್ಡದು. ಮಾತ್ರವಲ್ಲ ಜಲಿಯನ್ ವಾಲಾಭಾಗಿನಲ್ಲಿ ಹರಿದ ನೆತ್ತರಿಗೆ, ಅಳಿದ ಬಂಧುಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ! ಆದರೆ ಅಂತಹುದನ್ನು ಪಾದ್ರಿಯೊಬ್ಬನಿಂದ ನಿರೀಕ್ಷಿಸಬಹುದೇ? ಈಗಾಗಲೇ ಆತ ಬರುವುದು ತನ್ನ ಮತದ ಹಿರಿಮೆಯನ್ನು ಸಾರಲು ಎನ್ನುವುದು ಆತನಿಗೆ ಅಂತರ್ಮತೀಯ ಸಲಹೆಗಾರನಾಗಿರುವವನಿಂದ ಮಾಧ್ಯಮಗಳಿಗೆ ವಿವರಿಸಲ್ಪಟ್ಟಿದೆ!

               ರಾಜಕೀಯದ ಭೇಟಿ ಇದಲ್ಲ ಎನ್ನುತ್ತಾ ಹತ್ತು ದಿನಗಳ ಭಾರತ ಪ್ರವಾಸಕ್ಕೆಂದು ಆಗಸ್ಟ್ 31ರಂದು ಬರುತ್ತಿರುವ ಕ್ಯಾಂಟರ್ಬರಿಯ ಆರ್ಚ್ ಬಿಷಪ್ "ಭಾರತದಲ್ಲಿ ಗುಂಪುಗಲಭೆ ಇದೆ, ಭಾರತೀಯನೊಬ್ಬ ಹಿಂದೂವೇ ಆಗಿರಬೇಕು ಅನ್ನುವ ಪ್ರತಿಪಾದನೆ ಬಲವಾಗುತ್ತಿದೆ, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾಗುತ್ತಿವೆ" ಎನ್ನುವ ತನ್ನವರ ಕಲ್ಪಿತ ವರದಿಯನ್ನು ಗಮನದಲ್ಲಿಟ್ಟುಕೊಂಡೇ ಭಾರತದಲ್ಲಿ ಕ್ರೈಸ್ತರ ನಿಜವಾದ ಸ್ಥಿತಿಯನ್ನು ಅರಿಯಲು ಬರುತ್ತಿದ್ದೇನೆ ಎಂದಿದ್ದಾನೆ. ಅದಕ್ಕಿಂತಲೂ ವಿಶೇಷವಾಗಿ ಗಮನಿಸಬೇಕಾದುದು "ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ; ಕ್ರೈಸ್ತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ; ಕ್ರೈಸ್ತರ ಕೊಲೆಯಾಗುತ್ತಿದೆ; ನರೇಂದ್ರ ಮೋದಿ ನೇತೃತ್ವದ ಬಲಪಂಥೀಯ ಸರಕಾರ ಬಂದ ನಂತರ ಇವು ಹೆಚ್ಚಾಗಿವೆ" ಎನ್ನುವಂತಹಾ ಆತನ ಹೇಳಿಕೆ. ರಾಜಕೀಯದ ಮಾತಿಲ್ಲ ಅನ್ನುವ ಆತನೇ ಈ ರೀತಿಯ ಬಿಡುಬೀಸಾದ ರಾಜಕೀಯ ಹೇಳಿಕೆ ನೀಡುತ್ತಾನೆ ಎನ್ನುವಾಗಲೇ ಆತನ ಮಾತಿನಲ್ಲಿರುವ ದ್ವಂದ್ವ ಭಾರತೀಯರಿಗೆ ಅರಿವಾಗಬೇಕು. ರಾಜಕೀಯದ ಮಾತಾಡುವುದಿಲ್ಲ ಅಂದವನು ಮೋದಿ ಸರಕಾರವನ್ನು ದೂಷಿಸುತ್ತಿರುವುದ್ಯಾಕೆ? ಅದಕ್ಕೆ ಕಾರಣ ಗುಂಪುಗಲಭೆಯೋ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೋ? ಯಾವುದೂ ಅಲ್ಲ ಅಸಲಿಗೆ "ಮಾಬ್ ಲಿಂಚಿಂಗ್" ಎನ್ನುವಂತಹಾ ಪದ ಅವರಿಂದ ಹಾಗೂ ಅವರ ಕೃಪಾ ಪೋಷಿತ ಮಾಧ್ಯಮಗಳಿಂದ ಹುಟ್ಟಿದ್ದೇ ಇವರ ಮತಾಂತರ ಪ್ರಕ್ರಿಯೆಗೆ ಮೋದಿ ಸರಕಾರದ ಕಠಿಣ ಕಾನೂನು ಅಡ್ಡಬಂದುದರಿಂದ!

               ಕಳೆದ ಮೂರು ವರ್ಷಗಳಲ್ಲಿ ಎಫ್.ಸಿ.ಆರ್.ಎ ನಿಯಮಗಳನ್ನು ಉಲ್ಲಂಘಿಸಿದ ಹದಿಮೂರು ಸಾವಿರಕ್ಕೂ ಹೆಚ್ಚು ಎನ್ಜಿಓಗಳ ಪರವಾನಗಿಯನ್ನು ಮೋದಿ ಸರಕಾರ ರದ್ದುಪಡಿಸಿದೆ. ಇದರಿಂದ ವಿದೇಶೀ ಹಣ ಬಳಸಿಕೊಂಡು ನಡೆಯುತ್ತಿದ್ದ ಅವ್ಯಾಹತ ಮತಾಂತರಕ್ಕೆ ಅಡ್ಡಿಯುಂಟಾಯಿತು. ಸೇವೆಯ ಹೆಸರಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಮತಾಂತರಿಸುತ್ತಿದ್ದ ಪ್ರಕ್ರಿಯೆಗಳು, ರಸ್ತೆ ಬದಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಗಳು ಹಠಾತ್ತನೆ ನಿಂತು ಹೋದವು. ಸಭೆಗಳನ್ನು ಮಾಡಿ ಜೋರಾಗಿ ಬೊಬ್ಬೆ ಹೊಡೆಯುತ್ತಾ ರೋಗಿಯ ದೇಹವನ್ನು ಮುಟ್ಟಿದ ತಕ್ಷಣ ರೋಗ ಗುಣವಾಯಿತೆಂದು ನಾಟಕ ಮಾಡುತ್ತಾ ಮುಗ್ಧರನ್ನು ಮೌಢ್ಯದ ಬಲೆಗೆ ಸಿಲುಕಿಸಿ ಮತಾಂತರ ನಡೆಸುತ್ತಿದ್ದ, ಹಣದ ಆಮಿಶವೊಡ್ಡಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಇವಾಂಜೆಲಿಸ್ಟುಗಳೆಲ್ಲಾ ಈಗ ಬೇರೆ ಕೆಲಸ ಹುಡುಕಲು ಅರ್ಜಿ ಸಲ್ಲಿಸುತ್ತಿದ್ದಾರೆ. 2016ರಲ್ಲಿ ದೇಣಿಗೆ ಸಂಗ್ರಹಿಸಿದ 19ಸಾವಿರ ಎನ್ಜಿಓಗಳಿಗೆ ಹಣ ನೀಡಿದ ಪ್ರಮುಖ ಹದಿನಾಲ್ಕು ಸಂಸ್ಥೆಗಳು ಕ್ರಿಶ್ಚಿಯನ್ ಸಂಘಟನೆಗಳಾಗಿವೆ ಕೇಂದ್ರ ಎಂದು ಗೃಹಸಚಿವಾಲಯ ಹೇಳಿತ್ತು. ಹೀಗೆ ತಮಗೆ ಬರುತ್ತಿದ್ದ ಅಕ್ರಮ ಹಣಕ್ಕೆ, ತಮ್ಮ ಮತಾಂತರ ಕಾರ್ಯಕ್ಕೆ ಅಡ್ಡಿಯುಂಟಾದಾಗ ಹುಟ್ಟಿಕೊಂಡದ್ದೇ ಗುಂಪುಗಲಭೆ, ಮಾಬ್ ಲಿಂಚಿಂಗ್, ಅಸಹಿಷ್ಣುತೆ ಮುಂತಾದ ಅರಚಾಟಗಳು. ಆರ್ಚ್ ಬಿಷಪನ ಭಾರತ್ ಭೇಟಿ ಹಾಗೂ ಹೇಳಿಕೆಗಳ ಹಿಂದಿನ ಕಾರಣವೂ ಇದೇ!

             ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎನ್ನುವ ಆತನ ಹೇಳಿಕೆಯೇ ಹಾಸ್ಯಾಸ್ಪದ. ಹಿಂದೂಗಳು ಎಂದಿಗೂ ಯಾರನ್ನೂ ಬಲವಂತವಾಗಿ ಮತಾಂತರ ಮಾಡಲೂ ಇಲ್ಲ; ಮಾಡಲು ಸಾಧ್ಯವೂ ಇಲ್ಲ. ವ್ಯತಿರಿಕ್ತವಾಗಿ ಮೋದಿ ನೇತೃತ್ವದ ಸರಕಾರ, ಅದು ಈಗಿದ್ದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಡುವೆಯೂ ಹಿಂದೂಗಳ ಮತಾಂತರ ನಿಂತಿಲ್ಲ. ನಮ್ಮ ಕಾನೂನು ಇನ್ನಷ್ಟು ಬಲಗೊಳ್ಳಬೇಕಾಗಿರುವುದು ಅತ್ಯಗತ್ಯ. ಉದಾಹರಣೆಗೆ "ವಾಟರ್ ಆಫ್ ಲೈಫ್" ಎನ್ನುವ ಅಮೇರಿಕಾ ಮೂಲದ ಸಂಸ್ಥೆಯೊಂದು ತಾನು ಸ್ವಚ್ಛ ಕುಡಿಯುವ ನೀರನ್ನು ದಲಿತರಿಗೆ ಕೊಡುತ್ತೇನೆ ಎನ್ನುತ್ತಾ ಮತಾಂತರ ಕಾರ್ಯವನ್ನು ಅವ್ಯಾಹತವಾಗಿ ನಡೆಸುತ್ತಿದೆ. ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಳ್ಳುವ ಪ್ರಕಾರ 2012ರಲ್ಲಿ ಹದಿನೈದು ಸಾವಿರ, 2013ರಲ್ಲಿ 37ಸಾವಿರ, 2014ರಲ್ಲಿ 2,92,000, 2015ರಲ್ಲಿ ಆರು ಲಕ್ಷ ಹಾಗೂ 2016ರಲ್ಲಿ 8,98,657 ಹಿಂದೂಗಳನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿದ್ದೇವೆ ಎಂದು ಹೇಳಿಕೊಂಡಿದೆ. ಅಲ್ಲದೆ ಆಂಧ್ರದ ಪ್ರಕಾಶಮ್ ಜಿಲ್ಲೆಯನ್ನು ಸಂಪೂರ್ಣವಾಗಿ ಕ್ರೈಸ್ತಮಯವನ್ನಾಗಿಸಿದ ತನ್ನ ಹೆಗ್ಗಳಿಕೆಯನ್ನು ಹೊಗಳಿಕೊಂಡಿದೆ. ಅಲ್ಲಿನ ಜನಸಂಖ್ಯೆ 3.5ಮಿಲಿಯನ್! ಹಿಂದೂಗಳಲ್ಲಿರುವ ಜಾತಿಪದ್ದತಿ ಹಾಗೂ ಅಸ್ಪೃಷ್ಯತೆಯಿಂದಾಗಿ ಕೆಳವರ್ಗದವರನ್ನು ಮನುಷ್ಯರನ್ನಾಗಿಯೇ ನೋಡುತ್ತಿಲ್ಲ; ಅವರಿಗೆ ಉದ್ಯೋಗವಕಾಶಗಳನ್ನು ಕೊಡದೇ ಬಡವರನ್ನಾಗಿಯೇ ಉಳಿಸಲಾಗಿದೆ; ಅಂಥವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿ ಗೌರವದ ಬದುಕನ್ನು ಕೊಡುತ್ತಿದ್ದೇವೆ- ಇದು ಮತಾಂತರಕ್ಕೆ ಅದು ಕೊಡುವ ಕಾರಣ! ಎಷ್ಟೊಂದು ಹಸಿ ಸುಳ್ಳು! ಭಾರತದಲ್ಲಿ ಶಿಕ್ಷಣಕ್ಕೆ, ಉದ್ಯೋಗಕ್ಕೆ ಇರುವಷ್ಟು ಮೀಸಲಾತಿ ಯಾವ ದೇಶದಲ್ಲಿದೆ? ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಿಸುವುದನ್ನು ಬಿಟ್ಟು ಸಂಸ್ಥೆ ಮಾಡುವ ಕೆಲಸ ಮತಾಂತರ! ಸ್ವಚ್ಛ ನೀರು ಕುಡಿಯಲು ವ್ಯಕ್ತಿಯೊಬ್ಬ ಕ್ರೈಸ್ತನಾಗಲೇಬೇಕೇ? ಸ್ವಚ್ಛ ನೀರು ಕೊಡುವ ಮನಸ್ಸಿನಲ್ಲಿ ಎಷ್ಟೆಲ್ಲಾ ಕೊಳಚೆ ಇದೆ! ಇದು ಒಂದು ಸಂಸ್ಥೆಯ ಲೆಕ್ಖ! ಇಂತಹಾ ಅನೇಕ ಸಂಸ್ಥೆಗಳು ಭಾರತಾದ್ಯಂತ ಕಾರ್ಯಾಚರಿಸುತ್ತಲೇ ಇವೆ. ಇಂತಹಾ ಆಮಿಶದ ಮತಾಂತರವನ್ನು ನಿಲ್ಲಿಸಲು ಆರ್ಚ್ ಬಿಷಪ್ ಕರೆಕೊಡಲಿ ನೋಡೋಣ.

             ಆತನ ಇನ್ನೊಂದು ಹೇಳಿಕೆ ಕ್ರೈಸ್ತ ಮಹಿಳೆಯರ ಅತ್ಯಾಚಾರವಾಗುತ್ತಿದೆ ಎಂದು. ಅತ್ಯಾಚಾರ ಎಸಗುವವರು ಯಾರು? ನನ್ಗಳನ್ನೂ ಬಿಡದೆ ಅತ್ಯಾಚಾರ ಎಸಗುತ್ತಿರುವವರು ಯಾರು? ನ್ಯಾಯ ಕೇಳಲೆಂದು ನ್ಯಾಯಾಲಯ ಬಾಗಿಲು ಬಡಿದ ನನ್ಗಳನ್ನು, ಬೀದಿಗಿಳಿದು ಪ್ರತಿಭಟನೆ ನಡೆಸಿದವರ ಮೇಲೆ ದೌರ್ಜನ್ಯ ನಡೆಸಿದವರು ಯಾರು? ಅತ್ಯಾಚಾರವೆಸಗಿದ ಆರೋಪಿಗಳನ್ನು ಹಾರ ತುರಾಯಿ ಹಾಕಿ ಸ್ವಾಗತಿಸಿದವರಾರು? ದೌರ್ಜನ್ಯಗಳಿಗೆ ಸಾಕ್ಷಿಯಾದವರನ್ನು ಸ್ಮಶಾನಕ್ಕಟ್ಟಿದವರು ಯಾರು? ಅತ್ಯಾಚಾರ ಎಸಗಿದ ಪಾದ್ರಿಗಳು ಹೇಗೆ ಬಚಾವಾಗುತ್ತಾರೆ ಎನ್ನುವುದನ್ನೆಲ್ಲಾ ಭಾರತದ ಚರ್ಚುಗಳಿಗೆ ಪ್ರಶ್ನಿಸುವ ತಾಕತ್ತು ಆರ್ಚ್ ಬಿಷಪ್ಗಿದೆಯೇ? ಸಾಧ್ಯವೇ ಇಲ್ಲ. ಯಾಕೆಂದರೆ ಅಂತಹಾ ನೈತಿಕತೆಯೇ ಆತನಿಗಿಲ್ಲ. ಕಾರಣ; ಕಳೆದ ಎಂಟು ವರ್ಷಗಳಲ್ಲಿ ಅಮೇರಿಕಾದ ಈಶಾನ್ಯ ಭಾಗವೊಂದರಲ್ಲೇ ಕ್ಯಾಥೋಲಿಕ್ ಚರ್ಚು 10.6 ಮಿಲಿಯನ್ ಡಾಲರ್ ಹಣವನ್ನು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪಾದ್ರಿಗಳ ಪರವಾದ ಕಾನೂನು ಹೋರಾಟಕ್ಕಾಗಿ ವ್ಯಯಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಕಡಮೆ ಮಾಡುವ ನಿಟ್ಟಿನಲ್ಲಿ ನ್ಯೂಯಾರ್ಕಿನಲ್ಲಿ ಕಳೆದ ಫೆಬ್ರವರಿಯಲ್ಲಿ ತಂದ ಕಾಯಿದೆ ಅನುಷ್ಠಾನವಾಗದಂತೆ ತಡೆಯಲು ಮೂರು ಮಿಲಿಯನ್ ಡಾಲರ್ ಹಣ ವ್ಯಯಿಸಿತ್ತು! ಪೆನ್ಸಿಲ್ವೇನಿಯಾದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮುನ್ನೂರು ಪಾದ್ರಿಗಳನ್ನು ರಕ್ಷಿಸಲು ಐದು ಮಿಲಿಯನ್ ಹಣ ಕೊಟ್ಟು ಲಾಬಿ ಮಾಡಿತ್ತು! ಇವೆಲ್ಲಾ ಜಗತ್ತಿನ ಕೆಲವು ಭಾಗಗಳ, ಬೆಳಕಿಗೆ ಬಂದ ಸುದ್ದಿಗಳು. ಜಗತ್ತಿನೆಲ್ಲೆಡೆ ಹಬ್ಬಿರುವ ಈ ಮತಾಂತರಿಗಳು ಮಾಡಿರುವ ಪಾಪ ಅದೆಷ್ಟೋ? ಅವರೇ ಅತ್ಯಾಚಾರಕ್ಕೆ ಬೆಂಬಲವಾಗಿ ನಿಂತಿರುವಾಗ ಭಾರತದ ಪಾದ್ರಿಗಳು ಮಾಡುವ ಅತ್ಯಾಚಾರವನ್ನು ಖಂಡಿಸಲು ನಾಲಿಗೆಯಾದರು ಹೇಗೆ ಹೊರಳೀತು?

             ಮತಾಂತರಕ್ಕೆ ಹೊರಗಿನಿಂದ ಬರುತ್ತಿದ್ದ ಹಣ ಬಹುತೇಕ ನಿಂತ ಮೇಲೂ ಮತಾಂತರ ಏಕೆ ನಿಂತಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇತ್ತೀಚೆಗೆ ಆರ್ಗನೈಸರ್ ಪತ್ರಿಕೆ ಅದಕ್ಕಿರುವ ಕೆಲವು ಕಾರಣಗಳನ್ನು ವಿಶ್ಲೇಷಿಸಿದೆ. ಎನ್ಜಿಓಗಳಿಗೆ ವಿದೇಶದಿಂದ ನೇರ ದೇಣಿಗೆ ಬರುವುದಕ್ಕೆ ಕಡಿವಾಣ ಹಾಕಿದ ಬಳಿಕ, ಅವು ಬಹುರಾಷ್ಟ್ರೀಯ ಕಂಪೆನಿಗಳನ್ನು ಅಪ್ಪಿಕೊಂಡವು. ಬಹುರಾಷ್ಟ್ರೀಯ ಸಂಸ್ಥೆಗಳು ಈ ಮತಾಂತರಿ ಸಂಸ್ಥೆಗಳನ್ನು ತಮ್ಮ ಪಾಲುದಾರರನ್ನಾಗಿ ಮಾಡಿಕೊಂಡು ಅವುಗಳಿಗೆ ಹಣ ಪಾವತಿ ಮಾಡುತ್ತಿದ್ದು ಅವೆಲ್ಲಾ ಮತಾಂತರ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಬ್ಲೂಡಾರ್ಟ್, ಓಯಸಿಸ್ನಂತಹಾ ಕಂಪೆನಿಗಳು ಹಳ್ಳಿಗಳಲ್ಲಿ ಶಿಕ್ಷಣ, ಪರಿಸರದ ಹಸಿರೀಕರಣ, ಅನಾಥ ಮಕ್ಕಳಿಗೆ ಆಶ್ರಯ ಮುಂತಾದ ಯೋಜನೆಗಳಡಿಯಲ್ಲಿ ಮತಾಂತರ ಕಾರ್ಯಕ್ಕೆ ಬೆಂಬಲ ನೀಡುತ್ತವೆ. ಓಯಸಿಸ್ ಅಂತೂ ನೇರವಾಗಿ ಭಾರತದ ಚರ್ಚುಗಳ ಜೊತೆಗೂಡಿ ಕೆಲಸ ಮಾಡುತ್ತದೆ. ತನ್ನ ಪ್ರತಿಯೊಂದು ಲೇಖನ, ಜಾಲತಾಣದಲ್ಲಿ ಬೈಬಲ್ಲಿನ ವಾಕ್ಯಗಳನ್ನು ಅಣಿಮುತ್ತಿನಂತೆ ಉದುರಿಸುತ್ತದೆ. ತನ್ನೆಲ್ಲಾ ಸಾಮಾಜಿಕ ಕಾರ್ಯಗಳಿಗೆ ಚರ್ಚುಗಳೇ ಪಾಲುದಾರರಾಗಬೇಕೆಂದು ನೇರವಾಗಿ ಹೇಳಿಕೊಳ್ಳುತ್ತದೆ. ಮತಾಂತರ ಪರವಾಗುಳ್ಳ ಲೇಖನಗಳನ್ನು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸುತ್ತದೆ. ಮತಾಂತರಿ ಸಂಗೀತಗಾರರನ್ನೇ(ಕ್ರಿಸ್ತನ ಕೀರ್ತನೆ ಹಾಡುವವರು) ಕರೆದು ಸಮಾರಂಭ ಏರ್ಪಡಿಸುತ್ತದೆ! ಇಂತಹಾ ಹಲವು ಬಹುರಾಷ್ಟ್ರೀಯ ಸಂಸ್ಥೆಗಳು ಮತಾಂತರಕ್ಕೆ ಬೆಂಗಾವಲಾಗಿ ನಿಂತು ತಮ್ಮ ತೆರಿಗೆಯ ಕೆಲ ಭಾಗವನ್ನೂ ಉಳಿಸಿಕೊಳ್ಳುತ್ತವೆ! ಸ್ವಾಮಿ ಕಾರ್ಯ & ಸ್ವಕಾರ್ಯ! ಆರ್ಚ್ ಬಿಷಪ್ಗಳ ಆಶೀರ್ವಾದವಿಲ್ಲದೆ ಇದೆಲ್ಲಾ ಹೇಗೆ ನಡೆದೀತು?

              ಅಸ್ಪೃಶ್ಯತೆ ಒಂದು ಶಾಪವೇ. ಯಾರು ಮಾಡಿದರೂ ಅದು ತಪ್ಪೇ. ಆದರೆ ಅದು ಹಿಂದೂಗಳಲ್ಲಿ ಮಾತ್ರ ಇರುವುದೇ? ಕ್ರೈಸ್ತರಲ್ಲಿ ದಲಿತ ಕ್ರೈಸ್ತರಿಗೆಂದು ಪ್ರತ್ಯೇಕ ಚರ್ಚುಗಳು ಯಾಕಿವೆ? ಮೇಲ್ವರ್ಗದ ಕ್ರೈಸ್ತರು ಹಾಗೂ ದಲಿತ ಕ್ರೈಸ್ತರ ನಡುವೆ ವಿವಾಹಾದಿ ಸಂಬಂಧಗಳು ಏಕೆ ಏರ್ಪಡುವುದಿಲ್ಲ? ಇತ್ತೀಚೆಗಷ್ಟೇ ಕೆವಿನ್ ಎನ್ನುವ ದಲಿತ ಕ್ರೈಸ್ತನೊಬ್ಬ ಮೇಲ್ವರ್ಗದ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಆತನ ಕೊಲೆಯಾಗಿತ್ತು. ಚರ್ಚಿನ ಪಕ್ಕ ಬೋರ್ ವೆಲ್ ಹಾಕಿಸಿ ಕ್ರೈಸ್ತರಿಗೆ ಮಾತ್ರ ಎನ್ನುವಂತಹಾ ಪ್ರಕರಣಗಳು ಯಾಕೆ ನಡೆದವು? ಇವೆಲ್ಲಾ ಅಸ್ಪೃಶ್ಯತೆಯ ಪಟ್ಟಿಯೊಳಗೆ ಸೇರುವುದಿಲ್ಲವೇ? ಇಂತಹುದನ್ನು ಖಂಡಿಸುವ ಮಾತುಗಳು ಆತನಿಂದ ಬಂದೀತೇ? ಸಂಪೂರ್ಣ ಕ್ರೈಸ್ತ ಮಯವೇ ಆದ ಬಳಿಕವೂ ಆಫ್ರಿಕಾದ ದೇಶಗಳು ಯಾಕೆ ಬಡವರಾಗಿಯೇ ಉಳಿದಿವೆ? ಹಿಂದೂ ಧರ್ಮವನ್ನು, ದೇವತೆಗಳನ್ನು ನಿಂದಿಸುವಂತಹಾ ಪುಸ್ತಕಗಳು ಚರ್ಚುಗಳಿಂದ ಯಾಕೆ ಪ್ರಕಟಿಸಲ್ಪಟ್ಟವು? ಭಾರತೀಯ ಸಂವಿಧಾನದ ಪರಿಚ್ಛೇದ 25(1)ರ ಪ್ರಕಾರ ಮತ ಪ್ರಚಾರ ಮಾಡಬಹುದಾದರೂ ವ್ಯಕ್ತಿಯೊಬ್ಬನ ನಂಬಿಕೆಯ ವಿರುದ್ಧ ಪ್ರಚಾರ ಮಾಡಿ, ಆತನನ್ನು ಮರುಳುಗೊಳಿಸಿ ಮತಾಂತರ ಮಾಡುವ ಹಾಗಿಲ್ಲ. ಹಾಗಿದ್ದರೂ ಹಿಂದೂ ದೇವರುಗಳನ್ನು ಯೇಸು, ಮೇರಿಯಂತೆ ನಕಲಿಸಿ, ಹಿಂದೂ ಧರ್ಮಗ್ರಂಥಗಳನ್ನು, ಆಚರಣೆಗಳನ್ನು ನಕಲಿಸಿ, ಯೇಸುವಿನ ವಿಭೂತಿ ಎಂದು ಉತ್ತೇಜಕ ವಸ್ತುಗಳನ್ನು ಅದರಲ್ಲಿ ಹಾಕಿ, ವೃದ್ದಾಶ್ರಮ ,ಕುಷ್ಠರೋಗ ನಿರ್ಮೂಲನ ಕೇಂದ್ರದಂತಹಾ ಸೇವಾ ಸಂಸ್ಥೆಗಳ ಹೆಸರುಗಳಡಿಯಲ್ಲಿ, ಹಣ, ಉದ್ಯೋಗಗಳ ಆಮಿಶಗಳನ್ನೊಡ್ಡಿ ಮಾಡುವ ಕಾನೂನು ಬಾಹಿರ ಮತಾಂತರಗಳನ್ನು ಮಾಡದಿರುವಂತೆ ಆಜ್ಞಾಪಿಸಲು ಚರ್ಚ್ ಬಿಷಪ್ ಸಿದ್ಧನಿದ್ದಾನೆಯೇ?

              ಆರ್ಚ್ ಬಿಷಪ್ ಭಾರತಕ್ಕೆ ಬರುವುದಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ ಆತ ಹಿಂದೂಗಳನ್ನು, ಬಲಪಂಥೀಯ ಸರಕಾರವನ್ನು ವಿನಾ ಕಾರಣ ದೂಷಿಸುವ ಬದಲು ತನ್ನವರು ಮಾಡುವ ಮತಾಂತರವನ್ನು ನಿಲ್ಲಿಸಲು ಕರೆ ಕೊಡಲಿ; ಮತಾಂತರ ಕಾರ್ಯಗಳನ್ನು ನಿಲ್ಲಿಸಲಿ. ಆಗ ಆತನ ಆಗಮನವನ್ನೂ ಬಲಪಂಥೀಯರೂ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಾರೆ. ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂಗಳಿಗೆ ಅದು ರಕ್ತಗುಣ. ಹಿಂದೂಗಳೂ ಮತಾಂತರದ ಕುರಿತು ಎಚ್ಚರಿಕೆ ವಹಿಸಬೇಕು. ಎಲ್ಲವನ್ನೂ ಸರಕಾರವೇ ಮಾಡಲು ಸಾಧ್ಯವಿಲ್ಲ. ಆಂಧ್ರದ ಕಡಪ ಜಿಲ್ಲೆಯ ಕೆಸಲಿಂಗಪಲ್ಲಿಯ ಗ್ರಾಮಸ್ಥರು 2017ರಲ್ಲಿ ಕೈಗೊಂಡಂತೆ ಮತಾಂತರವಾದವರನ್ನು ಶುದ್ಧೀಕರಣಗೊಳಿಸಿ, ಮತಾಂತರಿಗಳು ತಮ್ಮ ಊರೊಳಗೆ ಕಾಲಿಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಒಗ್ಗಟ್ಟಾಗಿ ಕೈಗೊಂಡರೆ ಮತಾಂತರ ತಾನೇ ತಾನಾಗಿ ನಿಲ್ಲುತ್ತದೆ.

ಭಾನುವಾರ, ಜುಲೈ 28, 2019

ನಿಜವಾದ ಅಸಹಿಷ್ಣುಗಳಾರು?

ನಿಜವಾದ ಅಸಹಿಷ್ಣುಗಳಾರು?


             ದನ ಕಳ್ಳ ಅಖ್ಲಾಖನಿಗೆ ಬಡಿದಾಗ ಎದ್ದ ಅಸಹಿಷ್ಣುತೆ ಎಂಬ ಕೂಗು ಅಖ್ಲಾಖನ ಬಳಿ ಇದ್ದದ್ದು ದನದ ಮಾಂಸ ಎಂದು ಫೊರೆನ್ಸಿಕ್ ರಿಪೋರ್ಟ್ ಹೇಳಿದಾಗ ಮಕಾಡೆ ಮಲಗಿತ್ತು. ಸ್ವಾತಂತ್ರ್ಯೋತ್ತರದಲ್ಲಿ ದೇಶ ಕಂಡು ಕೇಳರಿಯದ ಅಭಿವೃದ್ಧಿಯನ್ನು ಕಳೆದ ಐದು ವರ್ಷಗಳಲ್ಲಿ  ನಡೆಸಿದ ಸರಕಾರಕ್ಕೆ ಎಲ್ಲಾ ಪ್ರತಿಪಕ್ಷಗಳಿಂದ, ವಿರೋಧಿಗಳಿಂದ ಸಿಕ್ಕಿದ್ದೇನೆಂದರೆ  "ಭಾರತದಲ್ಲಿ ಅಸಹಿಷ್ಣುತೆ ಇದೆ, ಮಾಬ್ ಲಿಂಚಿಂಗ್ ನಡೆಯುತ್ತಿದೆ, ಕೇಸರಿಕರಣ ನಡೆಯುತ್ತಿದೆ" ಎಂಬ ಸುಳ್ಳನ್ನು ಜಾಗತಿಕ ಮಟ್ಟದಲ್ಲಿ ಬೊಬ್ಬೆಯೆಬ್ಬಿಸಿ ಭಾರತದ ಮಾನವನ್ನು ಹೀನವಾಗಿಸಲು ನಡೆಸಿದ ಯತ್ನ!

              ಆದರೆ ನಿಜವಾದ ಅಸಹಿಷ್ಣುತೆ, ಅಸಹನೆ ಯಾವ ಕಡೆಯಿಂದ ಇದೆ ಎನ್ನುವುದನ್ನು ಇತಿಹಾಸದ ಹಲವು ನಿದರ್ಶನಗಳೇ ನಮಗೆ ಪರಿಚಯಿಸುತ್ತವೆ. ಅಜ್ಮೀರದಲ್ಲೊಂದು ದರ್ಗಾ ಇದೆ. ಹಿಂದೂಗಳೂ ಚಾದರ ಸಮರ್ಪಿಸುವ ದರ್ಗಾ! 1191ರಲ್ಲಿ ಮಹಮ್ಮದ್ ಘೋರಿ, ಪೃಥ್ವೀರಾಜನ ರಾಜ್ಯದ ಮೇಲೆ ಆಕ್ರಮಣಕ್ಕೆ ಬಂದಿದ್ದಾಗ ಆತನ ಜೊತೆ ಬಂದವನೇ ಮೊಯಿನುದ್ದೀನ್ ಚಿಸ್ತಿ. ಪೃಥ್ವೀರಾಜನಿಂದ ಹೀನಾಯವಾಗಿ ಸೋಲಲ್ಪಟ್ಟ ಘೋರಿ ಹಿಂದಿರುಗಿದ. ಆದರೆ ಈ ಚಿಸ್ತಿ ಅಜ್ಮೀರದಲ್ಲೇ ನೆಲೆಯೂರಿದ. ಮರು ವರ್ಷ ಮತ್ತೆ ಆಕ್ರಮಣಕ್ಕೆ ಬಂದ ಘೋರಿಗೆ ಪೃಥ್ವೀರಾಜನನ್ನು ಗೆಲ್ಲಲು ವಂಚನೆಯ ಮಾರ್ಗವನ್ನು ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ. ಅಣ್ಣನನ್ನು ಕೇಳದೆ ನಾನು ನಿರ್ಣಯಿಸಲಾರೆ. ಹಾಗಾಗಿ ಅಣ್ಣನಿಂದ ಉತ್ತರ ಬರುವವರೆಗೆ ತಡೆಯಿರಿ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ಕಾಫಿರರನ್ನು ಸಾಯಬಡಿದು ತರೈನಿನಲ್ಲಿ ತಮ್ಮ ಅರಸ ಸಾಧಿಸಿದ ವಿಜಯವನ್ನು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ. ಪೃಥ್ವೀರಾಜನನ್ನು ಕೊಂದ ಬಳಿಕ ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಹೀಗೆ ಭಾರತದ ಇತಿಹಾಸವನ್ನೇ ಬದಲಿಸಿದ ಈ ಘಟನೆ ನುಸುಳುಕೋರನೊಬ್ಬ ಆಶ್ರಯ ಕೊಟ್ಟವರ ವಿರುದ್ಧವೇ ಅಸಹನೆ ತೋರಿದ, ಭಾರತದ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಮೊದಲ ಘಟನೆಯೂ ಹೌದು. ನುಸುಳುಕೋರರು ಎಂದೆಂದಿಗೂ ದೇಶಕ್ಕೆ ಅಪಾಯಕಾರಿಗಳು ಎನ್ನುವುದನ್ನು ಸೂಚಿಸಿದ ಘಟನೆಯೂ ಹೌದು. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು! ಈಗ ಹೇಳಿ ಅಸಹಿಷ್ಣುಗಳು ಯಾರು? ಅಸಹನೆ ಯಾರದ್ದು?
ಕೌಟಿಲ್ಯ ತನ್ನ ಲಬ್ಧಪ್ರಶಮನಂದಲ್ಲಿ
ಚೋರ ಪ್ರಕೃತೀನಾಂ ಮ್ಲೇಚ್ಛಜಾತೀನಾಂ
ಚ ಸ್ಥಾನವಿಪರ್ಯಾಸಂ ಅನೇಕಸ್ಥಂ ಕಾರಯೇತ್ ||
ಕಳ್ಳ ಸ್ವಭಾವದವರು, ಮ್ಲೇಚ್ಛ ಮುಂತಾದ ವಲಸಿಗರನ್ನು ಒಂದೇ ಜಾಗದಲ್ಲಿ ಒಟ್ಟುಗೂಡಿ ನಿಲ್ಲುವುದಕ್ಕೆ ಅವಕಾಶ ಕೊಡಬಾರದು. ಅವರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುತ್ತಿರಬೇಕು ಎಂದಿದ್ದಾನೆ. ನಮ್ಮ ರಾಜರುಗಳ ಔದಾರ್ಯಕ್ಕೆ ಕೊನೆಯೆಲ್ಲಿ? ರಾಜನಾದವನು ಉದಾರನಿರುವಂತೆ, ಕಠಿಣನೂ ಇರಬೇಕು ಎನ್ನುವುದನ್ನು ಮರೆತುಬಿಟ್ಟೇ ಇಂದಿಗೂ ವಲಸಿಗರ ಉಪಟಳ ತಾರಕಕ್ಕೇರಿರುವುದು! ಇದು ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಲು ಹೊರಟಿರುವ, ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರವೂ ಹೌದು; ಈ ವಲಸಿಗರು ಅಸಹಿಷ್ಣುಗಳೂ ಕೂಡಾ!

             ಹುಮಾಯೂನ ರಜಪೂತರ ಮೇಲೆ ಆಕ್ರಮಣ ಮಾಡಿದ್ದ. ಆದರೆ ಮುಂದೆ ರಜಪೂತರು ಹುಮಾಯೂನ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಆತನಿಗೆ ಆಶ್ರಯ ನೀಡಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟರು! ಅಕ್ಬರ್ ಹುಟ್ಟಿದ್ದು ಹಿಂದೂ ಕೋಠಿಯೊಳಗೆ. ಬಾಣಂತನವೆಲ್ಲಾ ಮುಗಿದ ಬಳಿಕ ಹುಮಾಯೂನನ ಅಸಹಿಷ್ಣುತೆ ಭುಗಿಲೆದ್ದಿತು. ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಅವನು ಯುದ್ದಕ್ಕಿಳಿದ! ಹಿಂದೂಗಳ ಆಶ್ರಯದಲ್ಲಿ ಅದರಲ್ಲೂ ರಜಪೂತರ ಸೂರಿನಡಿಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ! ಅದೆಷ್ಟು ದೇವಾಲಯಗಳನ್ನು ಭಗ್ನಗೊಳಿಸಿದ! ಚಿತ್ತೋಡಗಢದ ಮೇಲೆ ದಾಳಿ ಮಾಡಿದ ಅಕ್ಬರ್ ಊರೂರುಗಳನ್ನೇ ಸುಟ್ಟು ಕೋಟೆಗಳನ್ನು ಪುಡಿಗಟ್ಟಿದ. ಅಬುಲ್ ಫಜಲ್ ಹೇಳುವಂತೆ ಮೂವತ್ತು ಸಾವಿರ ಜನರನ್ನು ಕೊಂದು ಅವರ ತಲೆಗಳನ್ನು ಕುಯ್ಯಿಸಿ ಅವುಗಳಿಂದ ಒಂದು ಗೋಪುರ ಕಟ್ಟಿದ. ಅವನ ಅನುಯಾಯಿಗಳು ಒಡೆಯನ ಅನುಮತಿ ಪಡೆದು ವಿಜೃಂಭಿಸಿದರು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು.  ಕೆಲವು ದಾಖಲೆಗಳ ಪ್ರಕಾರ ಸತ್ತವರ ಯಜ್ಞೋಪವೀತ ತೂಗಿದರೆ ಹತ್ತಾರು ಮಣಗಳಷ್ಟಿತ್ತಂತೆ! ಇನ್ನೂ ಕೆಲವು ದಾಖಲೆಗಳ ಪ್ರಕಾರ ಅದರ ತೂಕ 74ಮಣಗಳು(8 ಪೌಂಡುಗಳು)! ರಾಜರನ್ನೋ, ಸೈನಿಕರನ್ನೋ ಯುದ್ಧದಲ್ಲಿ ಕೊಲ್ಲುವುದೇನೋ ಒಂದು ಬಗೆಯಲ್ಲಿ ಒಪ್ಪಬಹುದು. ಆದರೆ ಜನಸಾಮಾನ್ಯರನ್ನು ಕೊಲ್ಲುವುದು, ಅವರನ್ನು ಮತಾಂತರಿಸುವುದು, ಮಾನಿನಿಯರ ಮಾನ ಹರಣಮಾಡುವುದು ಇವೆಲ್ಲಾ ಅಸಹಿಷ್ಣುತೆಯ ಪ್ರತೀಕಗಳಲ್ಲವೇ? ಭಾರತದ ಇತಿಹಾಸದಲ್ಲಿ ಮೊಘಲರು ಮಾಡಿದ್ದು ಇದನ್ನೇ. ಮೊಘಲರು ಅಸಹಿಷ್ಣುಗಳಲ್ಲದಿದ್ದರೆ ಯಾಕೆ ಅವರಲ್ಲಿ ಒಬ್ಬನೇ ಒಬ್ಬ ಶ್ರೀರಾಮಚಂದ್ರನೋ, ಪೃಥ್ವೀರಾಜನೋ, ಶಿವಾಜಿಯೋ ಹುಟ್ಟಲಿಲ್ಲ? ಘಜನಿ ಮಹಮ್ಮದ್, ಬಾಬರ ಟಾರ್ಟರರು; ಮಹಮ್ಮದ್ ಘೋರಿ, ನಾದಿರ್ ಶಹಾ, ಅಹಮದ್ ಶಹಾ ಅಬ್ದಾಲಿ ಅಫ್ಘನ್ನರು. ಅಫ್ಘನ್ನರು ಹಾಗೂ ಟಾರ್ಟರರು ತಮ್ಮೊಳಗೇ ಕಿತ್ತಾಡಿಕೊಂಡಿದ್ದರೂ ಹಿಂದೂಗಳನ್ನು ನಾಶ ಮಾಡುವ ಬಗ್ಗೆ ಅವರಲ್ಲಿ ಏಕಶೃದ್ಧೆಯಿತ್ತು ಏಕೆ? ಮೊಘಲ್ ಸಹಿತ ಎಲ್ಲಾ ಮುಸ್ಲಿಮ್ ರಾಜರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅವುಗಳು ತಳಪಾಯವನ್ನೇ ಉಪಯೋಗಿಸಿಕೊಂಡು ಮಸೀದಿಯನ್ನು  ನಿರ್ಮಿಸಿದರಲ್ಲಾ, ಅವೆಲ್ಲಾ ಅಸಹಿಷ್ಣುತೆಯಲ್ಲವೇ?

              ಗುರು ಗೋವಿಂದ ಸಿಂಗರನ್ನು ಪಠಾಣ ಶಿಷ್ಯರಿಂದಲೇ ಹೊಡೆಸಿ ಕೊಂದ ವಜೀರ ಖಾನನದ್ದು, ಗುರು ತೇಜ್ ಬಹಾದ್ದೂರರ ಶಿಷ್ಯ ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ದೇಹವನ್ನು ಛಿದ್ರಗೊಳಿಸಿದ; ಇನ್ನಿಬ್ಬರು ಶಿಷ್ಯರನ್ನು ಕುದಿಯುವ ನೀರಿಗೂ, ಉರಿಯುವ ಬೆಂಕಿಗೂ ಎತ್ತಿ ಒಗೆದ; ಹಾಡುಹಗಲೇ ತೇಜ್ ಬಹಾದೂರರ ತಲೆಯನ್ನು ಕತ್ತರಿಸಿ ಚೆಲ್ಲಿದ; ಮರಾಠ ವೀರ ಸಂಭಾಜಿಯ ಕಣ್ಣುಗಳನ್ನು ತಿವಿದು, ನಾಲಿಗೆ ಕತ್ತರಿಸಿ, ಶರೀರದ ಅಂಗಾಂಗಗಳನ್ನು ಒಂದೊಂದಾಗಿ ಕತ್ತರಿಸಿ ಆ ಮಾಂಸವನ್ನು ನಾಯಿಗಳಿಗೆ ಹಾಕಿ ಚಿತ್ರಹಿಂಸೆ ಕೊಟ್ಟು ಕೊಂದು, ಅವನ ರುಂಡದಲ್ಲಿ ಹುಲ್ಲುತುಂಬಿ ಡೋಲು ಬಾರಿಸುತ್ತಾ ಕಹಳೆ ಊದುತ್ತಾ ದಖ್ಖನಿನ ಮುಖ್ಯ ಪಟ್ಟಣಗಳಲ್ಲಿ ಪ್ರದರ್ಶಿಸಲು ಏರ್ಪಾಟು ಮಾಡಿದ; ಗೋಲ್ಕೊಂಡಾದ ಮಂತ್ರಿಗಳಾಗಿದ್ದ ಅಕ್ಕಣ್ಣ-ಮಾದಣ್ಣರನ್ನು ಕೊಲ್ಲಿಸಿ ಅವರ ತಲೆಗಳನ್ನು ತನಗೆ ತೃಪ್ತಿಯಾಗುವಷ್ಟು ಕಾಲ ಆನೆಗಳ ಕಾಲುಗಳ ಕೆಳಗೆ ಹಾಕಿ ನುಜ್ಜುಗುಜ್ಜು ಮಾಡಿಸಿದ; ಅಸಂಖ್ಯ ದೇವಾಲಯಗಳನ್ನು, ಮತಾಮತರಕ್ಕೆ ಒಪ್ಪದ ಹಿಂದೂಗಳನ್ನು ಸರ್ವನಾಶಗೈದ ಔರಂಗಜೇಬನದ್ದು ಅಸಹಿಷ್ಣುತೆಯಲ್ಲವೇ?

             ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರೇರಣೆ ಪಡೆದು ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿ ಶ್ರದ್ಧಾನಂದ ಓರ್ವ ಕ್ರಾಂತಿಕಾರಿ ಹಿಂದೂ ಸಂತ. ಗಾಂಧಿಯವರ ಅಸಹಕಾರ ಆಂದೋಲನದ ಮೂಲಕ ರಾಜಕೀಯ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದ ಈ ಸಂನ್ಯಾಸಿ ಜಾಮಾ ಮಸೀದಿಯ ವೇದಿಕೆಯಲ್ಲೂ ಪ್ರವಚನ ನೀಡಿದ್ದರು! ಗಾಂಧಿಯವರ ಗೊಂದಲದ ಮನಃಸ್ಥಿತಿ ಹಾಗೂ ನಿರಂಕುಶ ಸರ್ವಾಧಿಕಾರವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಹೊರಬಂದ ಆತ ಶುದ್ಧಿ ಪ್ರಚಾರಕ್ಕೆ ಆರಂಭಿಸಿದರು. ಅವರ ಕರೆಗೆ ಓಗೊಟ್ಟು ಉತ್ತರಪ್ರದೇಶದಲ್ಲಿ ಆರು ತಿಂಗಳಲ್ಲೇ(1923) 18ಸಾವಿರ ಮತಾಂತರಿತರು ಮಾತೃಧರ್ಮಕ್ಕೆ ಮರಳಿದ್ದರು. ಇದರಂದ ಮುಸ್ಲಿಮರು ಅವರನ್ನು ಶತ್ರುವಿನಂತೆ ಕಾಣತೊಡಗಿದರು. ಕೊನೆಗೆ ಅಬ್ದುಲ್ ರಶೀದ್ ಎಂಬ ಮತಾಂಧ ನೀರು ಕೇಳುವ ನೆಪವೊಡ್ದಿ ಅವರನ್ನು ಗುಂಡಿಟ್ಟು ಕೊಂದ. ಬ್ರಿಟಿಷ್ ನ್ಯಾಯಾಲಯ ರಶೀದನನ್ನು ಗಲ್ಲಿಗೇರಿಸಿದಾಗ ಆತನಿಗೆ ಶೃದ್ಧಾಂಜಲಿ ಸಲ್ಲಿಸುವ ಮೆರವಣಿಗೆಯಲ್ಲಿ 50ಸಾವಿರಕ್ಕೂ ಹೆಚ್ಚು ಮುಸ್ಲಿಮರು ಸೇರಿದ್ದರು. ರಶೀದ್ ಹುತಾತ್ಮ ಎಂಬ ಕರಪತ್ರವನ್ನೂ ಹೊರಡಿಸಲಾಯಿತು! ಈಗ ಹೇಳಿ ಅಸಹಿಷ್ಣುಗಳು ಯಾರು?

              ಈ ದೇಶದಲ್ಲಿ ಇಸ್ಲಾಮಿನ ನಿಜ ಮಾನಸಿಕತೆಯನ್ನು ಬಿಚ್ಚಿಡುವ ಎಲ್ಲಾ ಬರಹಗಳು ನಿಷೇಧಿಸಲ್ಪಡುತ್ತವೆ. ಮಹರ್ಷಿ ಅರವಿಂದರ "ದಿ ಕುರಾನ್ ಆಂಡ್ ದಿ ಕಾಫಿರ್" ನಿಷೇಧಿಸಲ್ಪಟ್ಟಿತು. ರಿಚರ್ಡ್ ಮ್ಯಾಕ್ಸ್ ವೆಲ್ರ "ಸೂಫಿಸ್ ಆಫ್ ಬಿಜಾಪುರ"ಕ್ಕೂ ಅದೇ ಗತಿಯಾಯಿತು. ಪಂಡಿತ ಚಂಪೂಪತಿ ಬರೆದ ರಂಗೀಲಾ ರಸೂಲ್, ಮ್ಯಾಕ್ಸ್ ವೈಲಿಯ ಹಿಂದೂ ಹೆವೆನ್, ಅರ್ಲಿ ಇಸ್ಲಾಮ್, ರಶ್ದಿಯ ಸಟಾನಿಕ್ ವರ್ಸಸ್, ರಾಮಸ್ವರೂಪರ "ಅಂಡರ್ಸ್ಟ್ಯಾಂಡಿಗ್ ಇಸ್ಲಾಮ್ ಥ್ರೋ ಹದೀಸ್", ದಿ ಟ್ರೂ ಫರ್ಕಾನ್, ಸತ್ಯಾರ್ಥ ಪ್ರಕಾಶ್(ಸಿಂಧ್ ನಲ್ಲಿ), ತಸ್ಲಿಮಾ ನಸ್ರೀನರ ದ್ವಿಖಂಡಿತೋ...ಇನ್ನೆಷ್ಟೋ ನಿಷೇಧಿಸಲ್ಪಡುವಾಗ ಅಸಹಿಷ್ಣುತೆ ಕಣ್ಣು ಮುಚ್ಚಿ ಕುಳಿತಿತ್ತೇ?ಅಸಹಿಷ್ಣುಗಳ ಕ್ರೌರ್ಯಕ್ಕೆ ಕಾಶ್ಮೀರ ಪಂಡಿತರು ಎಂಬ ಜನಾಂಗವೇ ಅಳಿಯುವಂತಹ ಸ್ಥಿತಿಗೆ ತಲುಪಿತು. ಇವೇ ಅಸಹಿಷ್ಣುಗಳು ಗೋಧ್ರಾದಲ್ಲಿ ಕರಸೇವಕರನ್ನು ಸುಟ್ಟು ಕೊಂದರು. 2013ರ ಮುಜಾಫುರ ನಗರ ದಂಗೆಗೆ ಕಾರಣವಾದದ್ದೂ ಈ ಅಸಹಿಷ್ಣುತೆಯೇ.

             ಇದೆಲ್ಲವೂ ಇತಿಹಾಸ. ಈಗ ಹಾಗೇನಾಗಿದೆ ಎಂದಿದ್ದರೆ ನಿಮ್ಮ ಊಹೆ ತಪ್ಪು. ಇವೇ ಅಸಹಿಷ್ಣುಗಳ ಉಪಟಳದಿಂದ ಕೈರಾನದಲ್ಲಿ ಹಿಂದೂಗಳು ಊರನ್ನೇ ತೊರೆದು ಹೊರಟರು(2016). ತಮ್ಮ ಮತಾಂತರ ಕಾರ್ಯಕ್ಕೆ ತಡೆಯೊಡ್ಡಿದ ಎಂಬ ಒಂದೇ ಕಾರಣಕ್ಕೆ ರಾಮಲಿಂಗಮರನ್ನು ಬಡಿದು ಕೊಂದರು(2019). ತನ್ನ ಮಗಳನ್ನು ಚುಡಾಯಿಸಿದ್ದನ್ನು ಆಕ್ಷೇಪಿಸಿದ ಧ್ರುವ ತ್ಯಾಗಿಯನ್ನು ಸಿಗಿದು ಹಾಕಿದರು(ಮೇ 2019). ಉತ್ತರಪ್ರದೇಶದ ಔರೈಯಾದಲ್ಲಿ ಗೋಹತ್ಯೆಯನ್ನು ವಿರೋಧಿಸಿದ ಮೂವರು ಸಾಧುಗಳ ಹಲಾಲ್ ಮಾಡಿ ಶಿವದೇಗುಲದ ಕಲ್ಯಾಣಿಗೆ ಎಸೆದರು(ಆಗಸ್ಟ್ 2018). ಚಾಂದನೀ ಚೌಕದಲ್ಲಿ ದೇವಾಲಯವನ್ನೇ ಕೆಡವಿದರು. ಆಳ್ವಾರ್ನಲ್ಲಿ ಗೋಹಂತಕರನ್ನು ಎದುರಿಸಿದ ರತನ್ ಸಿಂಗರನ್ನು ಹತ್ಯೆಗೈದರು. ಮುಸ್ಲಿಮ್ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಸಂಜಯ್ ಕುಮಾರ್ ಕೊಲ್ಲಲ್ಪಟ್ಟ(2019). ಖಾಯಲಾದ ಪರಿವಾರ, ಮಹಾರಾಷ್ಟ್ರದಲ್ಲಿ ಕಾನ್ಸ್ಟೇಬಲ್, ದೆಹಲಿಯ ದಂತವೈದ್ಯ, ಖುರ್ಷಿದಾಪುರದ ರೈತ...ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೆಲ್ಲಕ್ಕೂ ಕಾರಣ ತಮ್ಮ ಅಕ್ರಮ ಚಟುವಟಿಕೆಗಳಾದ ಗೋಹತ್ಯೆ, ಮಾದಕದ್ರವ್ಯ ಮಾರಾಟ, ಅತ್ಯಾಚಾರ, ಮತಾಂತರಕ್ಕೆ ಅಡ್ಡಿಯಾದರು ಎಂಬ ಕಾರಣಗಳೇ ಆಗಿದ್ದರೂ ಮೂಲ ಕಾರಣ ಅಸಹಿಷ್ಣುತೆ, ಅಸಹನೆ, ಮತಾಂಧತೆಯೇ! ಇನ್ನೂ ಈ ವರ್ಷ ಕೇಳಿ ಬಂದ ಅತ್ಯಾಚಾರ, ಲವ್ ಜಿಹಾದ್ ಪ್ರಕರಣಗಳಂತೂ ದಂಗುಬಡಿಸುವಂತಹದ್ದು. ಸಾಲ ಕೊಟ್ಟ ಹತ್ತು ಸಾವಿರ ರೂಪಾಯಿಯನ್ನು ಮರಳಿಸುವಂತೆ ಕೇಳಿಕೊಂಡದ್ದಕ್ಕೆ ಮೂರು ವರ್ಷದ ಮಗಳ ಮೇಲೆ ಅತ್ಯಾಚಾರ, 71 ವರ್ಷದ ದಾದಿಯ ಮೇಲೆ ಅತ್ಯಾಚಾರ, ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಮದ್ರಸಾದಲ್ಲಿ ಅತ್ಯಾಚಾರ, ದಲಿತ ಹುಡುಗಿಯನ್ನು ಅಪಹರಣ ಮಾಡಿ ಮತಾಂತರಿಸಿ ಅತ್ಯಾಚಾರ...ಹೀಗೆ ಮುಗಿಯಲೊಲ್ಲದ ಘಟನೆಗಳು.

              ಈ ಎಲ್ಲಾ ಘಟನೆಗಳು ನಿಜವಾದ ಅಸಹಿಷ್ಣುಗಳು ಯಾರು, ಅಸಹನೆ ಯಾವ ದಿಕ್ಕಿನಿಂದ ಇದೆ, ಮತಾಂಧತೆ ಯಾರದ್ದು, "ಮಾಬ್ ಲಿಂಚಿಂಗ್" ಮಾಡುವವರು ಯಾರು ಎನ್ನುವುದನ್ನು ಮಾತ್ರವಲ್ಲ ಜಾತ್ಯಾತೀತರ ಮಹಾಸುಳ್ಳುಗಳನ್ನೂ ಎತ್ತಿ ತೋರಿಸುತ್ತವೆ. ದೇಶದಲ್ಲಿ ಪದೇ ಪದೇ ಸಂಘ ಕಾರ್ಯಕರ್ತರ ಕೊಲೆಯಾಗುತ್ತಿದ್ದರೂ ಅಸಹಿಷ್ಣುತಾ ಬ್ರಿಗೇಡಿಗೆ ಆಗ ಅಸಹಿಷ್ಣುತೆಯ ನೆನಪಾಗುವುದಿಲ್ಲ. ಹೇಗೆ ಪೆಟಾ(PETA)ಕ್ಕೆ ಗೋವುಗಳು ಪ್ರಾಣಿಗಳು ಅಂತ ಅನ್ನಿಸುವುದಿಲ್ಲವೋ ಹಾಗೆಯೇ ಮಾನವ ಹಕ್ಕು ಆಯೋಗಕ್ಕೆ ಸಂಘದ ಕಾರ್ಯಕರ್ತರು ಮಾನವರೆಂದು ಅನ್ನಿಸುವುದೇ ಇಲ್ಲ! ಜಾತ್ಯಾತೀತರು ಎಂದು ಹೇಳಿಕೊಳ್ಳುವವರೆಲ್ಲಾ ಈ ಬಗೆಯ ಎಲ್ಲಾ ಘಟನೆಗಳು ನಡೆದಾಗ ಮುಗುಮ್ಮಾಗುಳಿಯುತ್ತಾರೆ. ಮತಾಂಧರ ಆಟಾಟೋಪಗಳಿಗೆ ಇವರದ್ದು ದಿವ್ಯ ಮೌನ. ಅದೇ ಹಿಂದೂಗಳ ತಪ್ಪಿರದಿದ್ದಾಗ್ಯೂ ಆ ಘಟನೆಯನ್ನು ವೈಭವೀಕರಿಸಿ ಅಸಹಿಷ್ಣುತೆ ಎಂದು ಬೊಬ್ಬಿರಿದು ದೇಶದ ಮಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹರಾಜು ಹಾಕುತ್ತಾರೆ. ಹಿಂದೂಗಳನ್ನು ಸಹಿಸದ ಜಾತ್ಯಾತೀತರ ಈ ಮನಃಸ್ಥಿತಿಯೂ ಅಸಹಿಷ್ಣುತೆಯಡಿಯಲ್ಲಿ ಬರುವುದಿಲ್ಲವೇ?  ಮೋದಿ ಸರಕಾರವಿದ್ದರೂ ಈ ಘಟನೆಗಳು ನಡೆದವೇ? ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲವೇ? ಮೋದಿ ಸರಕಾರ ಕಾನೂನಿನಂತೆ ನಡೆದುಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಅಪರಾಧಗೈಯುವವರಿಗೆ ಕಾನೂನಿನ ಭಯ ಎಂಬುದಾದರೂ ಇರಬೇಕಲ್ಲವೇ? ಯಾಕಿಲ್ಲ? ನಮ್ಮ ನ್ಯಾಯಾಲಯಗಳು ಕೊಡುವ ತೀರ್ಪು ಅಂತಿದೆ! ಇಲ್ಲಿ ಮುಸ್ಲಿಮರ ಮತಾಂಧತೆಯನ್ನು ಎತ್ತಿ ತೋರಿಸಿದವರಿಗೇ ಶಿಕ್ಷೆ ವಿಧಿಸಿ, ಕುರಾನ್ ಹಂಚಿ ಎನ್ನುವ ತೀರ್ಪು ಕೊಡುವ ಮನಃಸ್ಥಿತಿಯ ನ್ಯಾಯಾಧೀಶರೇ ತುಂಬಿರುವಾಗ ಮತಾಂಧರಿಗೆ ಏತರ ಭಯ? ನ್ಯಾಯಾಲಯವೂ ಹಿಂದೂಗಳನ್ನು ಸಹಿಸುವುದಿಲ್ಲವೇ? ಅದಕ್ಕೂ ಅಸಹಿಷ್ಣುತೆಯ ಮನಃಸ್ಥಿತಿ ಅಂಟಿಕೊಂಡಿದೆಯೇ? ಏನೋ! ಈ ಜಾತ್ಯಾತೀತ ರೋಗಕ್ಕೂ ಅಸಹಿಷ್ಣು ಮನಃಸ್ಥಿತಿಗೂ ತುಂಬಾ ಹತ್ತಿರದ ಬಂಧುತ್ವವಂತೂ ಎದ್ದು ಕಾಣುತ್ತಿದೆ! ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂ ಎಂದಾದರೂ ಅಸಹಿಷ್ಣುವಾಗಲು ಸಾಧ್ಯವಿದೆಯೇ?

ಶನಿವಾರ, ಜುಲೈ 6, 2019

ಚರಿತ್ರ ಹೀನನಷ್ಟೇ ಅಲ್ಲ; ಜಿಹಾದಿಗಳನ್ನೂ ನಾಚಿಸಿದ ಮತೋನ್ಮತ್ತ ಅಕ್ಬರ್!

ಚರಿತ್ರ ಹೀನನಷ್ಟೇ ಅಲ್ಲ; ಜಿಹಾದಿಗಳನ್ನೂ ನಾಚಿಸಿದ ಮತೋನ್ಮತ್ತ ಅಕ್ಬರ್!


             ಹಲವು ದಿನಗಳೇ ಉರುಳಿದವು. ಕೋಟೆಯನ್ನು ಸುತ್ತುವರಿದ ಅಗಾಧ ಶತ್ರುಸೇನೆ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೋಟೆಯೊಳಗಿನ ಆಹಾರ ದಾಸ್ತಾನು ಬರಿದಾಗುತ್ತಿರಲು ಕೈ ಮೀರಿದ ಆ ಪರಿಸ್ಥಿತಿಯಲ್ಲಿ ಆತ್ಮಾರ್ಪಣೆಯೇ ಮಾರ್ಗವೆಂದು ನಿರ್ಧರಿಸಿತು ಚಿತ್ತೋಡಿನ ಸೇನೆ. ಬಿಲ್ಲಿನಿಂದ ಸೆಳೆದು ಬಿಟ್ಟ ಬಾಣಗಳಂತೆ ಹೊರಬಿತ್ತು 8000ಕ್ಕೂ ಅಧಿಕ ಯೋಧರ ಪಡೆ. ಆ ಸೈನ್ಯವನ್ನೆಲ್ಲಾ ತನ್ನ ಖಡ್ಗಕ್ಕೆ ಆಹುತಿ ನೀಡಿ ವಿಜಯೋತ್ಸಾಹದಿಂದ ಕೋಟೆಯೊಳಗೆ ಕಾಲಿಟ್ಟ ಶತ್ರುರಾಜ. ಬಾಯಲ್ಲಿ ನೀರೂರಿಸಿದ್ದ ಮೇವಾಡದ ಸೌಂದರ್ಯ ರಾಶಿಗಳನ್ನೆಲ್ಲಾ ತನ್ನ ಜನಾನಾಕ್ಕೆ ತಳ್ಳಿ ಮನಸೋ ಇಚ್ಛೆ ಮೇಯಬಹುದೆಂದು ಒಳಗೊಳಗೇ ಖುಷಿಪಟ್ಟ. ಆದರೆ ಕೋಟೆಯೊಳಹೊಕ್ಕವನಿಗೆ ಕಾಣಸಿಕ್ಕಿದ್ದೇನು? ಧಗಧಗಿಸುತ್ತಿರುವ ಚಿತ್ತೋಡಿನ ಚಿತ್ತಚೋರಿಯರ ಚಿತೆಗಳು! ಒಂದು ಕಡೆ ಭಸ್ಮಗೊಂಡ ಸೌಂದರ್ಯರಾಶಿಗಳನ್ನು ಎವೆಯಿಕ್ಕದೆ ನೋಡುತ್ತಾ ಉಂಟಾದ ದಿಗ್ಭ್ರಮೆ ಇನ್ನೊಂದೆಡೆ ಮಿಕ್ಕವರಂತೆ ತತ್ತಕ್ಷಣ ಮಣಿಯದೆ ತನ್ನನ್ನು ಕಾಡಿದ ಮೇವಾಡದ ಮೇಲಿನ ಕ್ರೋಧ! ಎರಡೂ ಸೇರಿ ಹೊರಬಿದ್ದದ್ದು ಸರ್ವರನ್ನು, ಸಕಲವನ್ನೂ ನಾಶ ಮಾಡಿರೆಂಬ ಆಜ್ಞೆ!

                 ಒಡೆಯನ ಅನುಮತಿ ಸಿಕ್ಕಿದ್ದೇ ತಡ, ಇನ್ನೇನು ತಡೆ, ಮತಿಗೆಟ್ಟ ಪಡೆ ವಿಜೃಂಭಿಸಿತು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ತಮ್ಮ ಅರಸನಿಗೆ ಲೆಕ್ಕ ಒಪ್ಪಿಸುವ ಸಲುವಾಗಿ ಶವಗಳಿಂದ ಜನಿವಾರಗಳನ್ನು ಕಲೆ ಹಾಕಿದರು. ಅವುಗಳನ್ನು ತೂಕ ಮಾಡಿದಾಗ 74ಮಣ (8 ಪೌಂಡುಗಳು)ಗಳಿದ್ದವು! ಕೇವಲ ಒಂಬತ್ತೂವರೆ ಗಂಟೆಗಳವಧಿಯಲ್ಲಿ ಕೊಲೆಯಾದವರ ಸಂಖ್ಯೆ 30ಸಾವಿರ ಎಂದು ಆನಂದದಿಂದ ವರ್ಣಿಸಿದ್ದಾನೆ ಅಬುಲ್ ಫಜಲ್! ಆ ಹೆಣಗಳ ತಲೆಯಿಂದ ಒಂದು ಗೋಪುರ ಕಟ್ಟಲಾಯಿತು. ಎಲ್ಲಿ ನೋಡಿದರಲ್ಲಿ ಶವಗಳ ರಾಶಿ, ನಾಲ್ದೆಸೆಗಳಿಗೆ ಚಾಚಿದ ಬೆಂಕಿಯ ಕೆನ್ನಾಲಿಗೆ, ಕಮಟು ವಾಸನೆ, ಆಕ್ರಂದನ, ಭೀಭತ್ಸ ದೃಶ್ಯಗಳು. ಇದಕ್ಕೆ ಕಾರಣಕರ್ತನಾದ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ ಇನ್ನೂ ಇದೆಯೇ. ಇದ್ದರೆ ಕೇಳಿ...ಮಹಾ ಮಾನವತಾವಾದಿ ಎಂದು ನಮ್ಮ ಸೆಕ್ಯುಲರ್ ಇತಿಹಾಸಕಾರರು ಹಾಡಿ ಹೊಗಳಿರುವ; ಸಾಹಸಿ, ಸುಕೋಮಲಿ, ಆದರ್ಶವಾದಿ, ಕನಸುಗಾರ ಎಂದು ನೆಹರೂ ಹಾಡಿಹೊಗಳಿರುವ, ರಾಜಸ್ಥಾನ ಭಾಜಪಾ ರಾಜ್ಯಾಧ್ಯಕ್ಷ, ಸಂಸದ ಮದನ್ ಲಾಲ್ ಸೈನಿ ಇತ್ತೀಚೆಗೆ ಯಾರನ್ನು ಚರಿತ್ರಹೀನ ಎಂದು ಅಕ್ಷರಶಃ ಸತ್ಯ ಹೇಳಿದಾಗ ಯಾವನ ಭಕ್ತರು ಮೆಣಸಿನಕಾಯಿ ತಿಂದಂತಾಡಿದರೋ ಅದೇ ಅಕ್ಬರ್!

                ಈ ಭೀಭತ್ಸ ಹತ್ಯಾಕಾಂಡವನ್ನು ನೋಡಲಾರದೆ ರಾಜ್ಯದ ಮೂಲೆ ಮೂಲೆಗಳಿಂದ ಕೇಳಿಬರುತ್ತಿರುವ ಆಕ್ರಂದನಗಳಿಂದ ಕಂಬನಿದುಂಬಿ ರಜಪೂತ ಪ್ರಮುಖರಾದ ಮಾನ್ ಸಿಂಗ್, ತೋಡರಮಲ್ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಾಗ ಇದೇ ಮಾನವತಾವಾದಿ ಹೇಳಿದ್ದೇನು ಗೊತ್ತೇ?
"ನಾನೀಗ ತೈಮೂರನೊಂದಿಗೆ ಅನುಸಂಧಾನದಲ್ಲಿದ್ದೇನೆ. ನನಗೀಗ ಬೇಕಾದುದು ರಕ್ತವೇ ಹೊರತು ಅಮೃತವಲ್ಲ. ಷಾಹಾನಾಮಾದ ಪಠಣವನ್ನು ನಾನೀಗ ಕೇಳಬೇಕು."
ಕ್ಷಣಿಕ ಕೋಪದಿಂದ ಅರಸ ಹೀಗಾಡಿದ ಎಂದುಕೊಳ್ಳೋಣವೇ? ಆದರೆ ಅಂತಹ ಕಿಂಚಿತ್ ಪಶ್ಚಾತ್ತಾಪವೂ ಅವನಿಗಿರಲಿಲ್ಲ. ತಾನು ಮಾಡಿದ್ದು ಸರಿ; ಅದನ್ನು ದೇವರೇ ಮೆಚ್ಚಿಕೊಂಡ ಎಂದು ಯಾವ ನಾಚಿಕೆ-ಹಿಂಜರಿಕೆಗಳಿಲ್ಲದೆ ಆತ ಹೇಳಿಕೊಂಡ. ಅಬುಲ್ ಫಜಲ್ ಯಥಾವತ್ತಾಗಿ ನಮೂದಿಸಿರುವ ಅಕ್ಬರನ ಮಾತುಗಳನ್ನು ಓದಿದವರ್ಯಾರೂ ಆತನನ್ನು ಮಾನವತಾವಾದಿ ಬಿಡಿ ಮಾನವನೆಂದೇ ಕರೆಯಲಾರರು. ಅಷ್ಟಕ್ಕೂ ನನ್ನ ರೀತಿ ನೀತಿಯನ್ನು ಅಲ್ಲಾ ಅನುಮೋದಿಸದೇ ಇರುತ್ತಿದ್ದರೆ ಮೈಮೇಲೆ ಸಣ್ಣ ಗಾಯವೂ ಇಲ್ಲದಂತೆ ನಾನು ಹಿಂದಿರುಗುತ್ತಿರಲಿಲ್ಲ ಎಂದ ಆ ದಯಾಪರನ ಉನ್ಮಾದವೇನೂ ಕ್ಷಣಿಕವಾದುದಾಗಿರಲಿಲ್ಲ. ಅದು ಜನ್ಮಜಾತ ಸ್ವಭಾವಜನ್ಯ ಸಹಜೋನ್ಮಾದ, ರಕ್ತಗುಣ! ನಮ್ಮ "ಮಹಾನ್ ಇತಿಹಾಸಕಾರರು" ಬರೆದುದನ್ನು ಓದಿ ಸತ್ಯ ಎಂದುಕೊಂಡವರಿಗೆ ಅಕ್ಬರನೇ ಆದರ್ಶಪುರುಷನಾಗಿರುವುದಕ್ಕೂ, ಅಕ್ಬರನಿಗೆ ಆತನ ವಂಶಜ ತೈಮೂರನೇ ಆದರ್ಶಪುರುಷನಾಗಿರುವುದಕ್ಕೆ ಹೆಚ್ಚೇನು ವ್ಯತ್ಯಾಸವಿಲ್ಲ. ಅದು ಆಶ್ಚರ್ಯಪಡುವಂತಹದ್ದೂ ಅಲ್ಲ!

            ಚಿತ್ತೋಡಿನ ಮೇಲಾದ ದೌರ್ಜನ್ಯ ಕೇವಲ ಜನರಿಗಷ್ಟೇ ಸೀಮಿತವಾಗುಳಿಯಲಿಲ್ಲ. ಖಿಲ್ಜಿ, ಬಾಬರರು "ಕರುಣೆದೋರಿ" ಉಳಿಸಿದ್ದ ಪುಣ್ಯಕ್ಷೇತ್ರಗಳೆಲ್ಲಾ ಈ ಪಾಪಿಯ ಕತ್ತಿಗೆ ಬಲಿಯಾದವು. ರಜಪೂತರ ಆರಾಧ್ಯ ದೈವ ಏಕಲಿಂಗೇಶ್ವರನ ವಿಗ್ರಹ ಮಸೀದಿಗಳಲ್ಲಿ ಕುರಾನನ್ನಿಡುವ ಪೀಠಕ್ಕಾಗಿ ತುಂಡರಿಸಲ್ಪಟ್ಟಿತು. ಇಂತಹವನನ್ನು ಪರಮತ ಸಹಿಷ್ಣು ಎಂದವರಿಗೆ ಅಕ್ಬರನೇ 1568 ಮಾರ್ಚ್ 9ರಂದು ಹೊರಡಿಸಿದ ವಿಜಯೋನ್ಮಾದದ "ಫತ್ವಾ"ವನ್ನು ನೆನಪಿಸಬೇಕು! "ನಮ್ಮ ಅಮೂಲ್ಯ ಸಮಯವನ್ನು ಜಿಹಾದಿಗೆ ಸರ್ವರೀತಿಯಿಂದಲೂ ಬಳಸೋಣ. ಕೋಟೆ-ಕೊತ್ತಲಗಳನ್ನು ವಶಪಡಿಸಿಕೊಂಡು, ಖಡ್ಗದ ಬಲದಿಂದ ಬಹುದೇವತಾರಾಧನೆಯನ್ನು ಹೋಗಲಾಡಿಸಿ ಕಾಫಿರರ ಪುಣ್ಯ ಸ್ಥಳಗಳನ್ನು ನಾಶಮಾಡಿ ಇಸ್ಲಾಂ ಪತಾಕೆಯನ್ನು ಹಾರಿಸೋಣ." ಇಂಥವನನ್ನು ಆದರ್ಶವಾಗಿಟ್ಟುಕೊಂಡವರು ಹೇಗಿರಬಹುದು? ವಿನ್ಸೆಂಟ್ ಸ್ಮಿತ್, ಜೇಮ್ಸ್ ಟಾಡ್ ಮುಂತಾದ ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವುದನ್ನು ಬಿಡಿ, ಅಬುಲ್ ಫಜಲ್ ಎಂಬ ಅಕ್ಬರ್ ಭಕ್ತ ಬರೆದುದನ್ನೂ ಪಕ್ಕಕ್ಕಿಡಿ, ಸ್ವತಃ ಅಕ್ಬರನೇ ಹೊರಡಿಸಿದ ಫತ್ವಾಗಳನ್ನೆಲ್ಲಾ ನೋಡಿದರೆ ಸಾಕು ಆತನ ದಯಾಪರ, ಪರಮತ ಸಹಿಷ್ಣುತೆಯ ನಿಜಬಣ್ಣ ಬಯಲಿಗೆ ಬರುತ್ತದೆ.

                   ಉಪಕಾರ ಮಾಡಿದವರಿಗೆ ಕೇಡನ್ನುಂಟುಮಾಡುವುದು ಅಕ್ಬರನಿಗೆ ವಂಶಪಾರಂಗತವಾಗಿ ಬಂದ ವಿದ್ಯೆ. ಅಕ್ಬರನ ತಂದೆ ಹುಮಾಯೂನ್ ತನ್ನ ಸ್ವಂತ ತಮ್ಮನ ಕಣ್ಣುಗಳನ್ನೇ ಶೂಲದಿಂದ ಕೀಳಿಸಿ ಉಪ್ಪು, ನಿಂಬೆರಸಗಳನ್ನು ತುಂಬಿಸಿದ್ದ. ದ್ರೋಹವೆಸಗುವುದು ಮೊಘಲರ ಹುಟ್ಟುಗುಣ! ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಹುಮಾಯೂನನಿಗೆ ಆತ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ರಜಪೂತರು ಆಶ್ರಯ ನೀಡಿದ್ದರು! ಅಕ್ಬರ ಹುಟ್ಟಿದ್ದು ಆಗಲೇ. ಆದರೆ ಅದೇ ಹುಮಾಯೂನ ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಯುದ್ದಕ್ಕಿಳಿದ! ರಕ್ತದೊಂದಿಗೆ ಸ್ವಭಾವವೂ ಹರಿದು ಬಂತು. ಹಿಂದೂಗಳ ಸೂರಿನಡಿಯಲ್ಲಿ ಹಿಂದೂಗಳ ರಕ್ಷಣೆಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ!ಚಿಕ್ಕವಯಸ್ಸಿನಲ್ಲಿ ತಂದೆ ಸತ್ತಾಗ ದಿಕ್ಕುಕಾಣದ ಅಕ್ಬರನನ್ನು ತನ್ನ ಭುಜಗಳ ಮೇಲೆ ಕೂರಿಸಿಕೊಂಡು ವ್ಯೂಹ ರಚಿಸಿ ಗೆದ್ದು ಅಕ್ಬರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದವ ಭೈರಾಂಖಾನ್. ಆದರೆ ಅಧಿಕಾರ ಸೂತ್ರಗಳ ಮೇಲೆ ಸ್ವಲ್ಪ ಹಿಡಿತ ಸಿಗುತ್ತಿದ್ದಂತೆ ಭೈರಾಂಖಾನನಿಗೇ ಗುಂಡಿ ತೋಡಿದ ಅಕ್ಬರ್! ಸಿಕಂದರ್ ಅಪ್ಘನ್ನನನ್ನು ಸೋಲಿಸಿ ಲಾಹೋರಿನಿಂದ ದಿಲ್ಲಿಗೆ ಹಿಂದಿರುಗಿ ಬರುತ್ತಿದ್ದಾಗ ಮಾನ್ ಕೋಟ್ ಎಂಬಲ್ಲಿ ಸೇನೆ ಬೀಡು ಬಿಟ್ಟಿದ್ದಾಗ ಭೈರಾಂಖಾನ್ ಮೈಮೇಲೆಲ್ಲಾ ಗುಳ್ಳೆಗಳಾಗಿ ಡೇರೆಯಲ್ಲಿ ಮಲಗಿದ್ದ. ಆ ಡೇರೆಯ ಮೇಲೆ ಅರಸನಿಗೆ ಸೇರಿದ ಆನೆಗಳೆರಡು ದಾಳಿ ಮಾಡಹೊರಟವು. ಭೈರಾಂಖಾನ್ ಆ ಸಮಯದಲ್ಲಿ ಬದುಕುಳಿದನಾದರೂ ಆತನ ಪರಿಸ್ಥಿತಿ ನೆಟ್ಟಗಿರಲಿಲ್ಲ. ಆತ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆಂದು ಕೇಳಲು ಅರಸನಲ್ಲಿಗೆ ಕಳುಹಿಸಿದ ದೂತನಿಗೆ ಯಾವ ಪ್ರತ್ಯುತ್ತರವೂ ಸಿಗಲಿಲ್ಲ. ಈ ಘಟನೆಯಿಂದ ಬೇಸರಗೊಂಡು ಭೈರಾಂಖಾನ್ ಮೆಕ್ಕಾಗೆ ಹೊರಟಾಗ ಗುಜರಾತಿನ ಸಹರ್ವಾಲದಲ್ಲಿ ಅಕ್ಬರನ ಕಟುಕರು ಭೈರಾಂಖಾನನ ರುಂಡ ಚೆಂಡಾಡಿದರು. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅದು ಹೋಗಿ ನಿಲ್ಲುವುದು ಸಲೀಮಾ ಸುಲ್ತಾನ ಬೇಗಂಳ ಬಳಿ! ಆಕೆ ಮತ್ಯಾರಲ್ಲ, ಭೈರಾಂಖಾನನ ಹೆಂಡತಿ, ಅಕ್ಬರನಿಗೆ ಗುರುಪತ್ನಿಯ ಸಮಾನಳು! ಆದರೇನು ಭೈರಾಂಖಾನನ ಗೋರಿಯ ಮೇಲೆ ಹುಲ್ಲು ಬೆಳೆಯುವ ಮೊದಲೇ ಅಕ್ಬರ ಅವಳನ್ನು ಮದುವೆ ಮಾಡಿಕೊಂಡ!

                   ಅಕ್ಬರ್ ಒಬ್ಬ ಸ್ತ್ರೀಲೋಲುಪ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. "ನಿನ್ನ ಹೆಂಡತಿ ನನಗಿಷ್ಟವಾಗಿದ್ದಾಳೆ, ಅವಳನ್ನು ನನ್ನ ಅಂತಃಪುರಕ್ಕೆ ಕಳುಹಿಸು ಎಂದು ಆದೇಶ ನೀಡುತ್ತಿದ್ದ ಧರ್ಮಪ್ರಭು ಅವನು. ನಿರಾಕರಿಸಿದಾತನ ರುಂಡ ಮುಂಡ ಬೇರೆಬೇರೆಯಾಗುತ್ತಿದ್ದುದು ದಿಟ! ಬಹಳಷ್ಟು ಜನ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ದುರ್ವಿಧಿಗೆ ತಲೆಬಾಗುತ್ತಿದ್ದರು. ಅಕ್ಬರನ ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ದಿಲ್ಲಿಯ ಜನಸಾಮಾನ್ಯರ ಮನೆಯ ಮಂಚದವರೆಗೂ! ಕೆಲಕಾಲ ಸುಮ್ಮನಿದ್ದ ಜನತೆ ತಿರುಗಿಬಿದ್ದಿತು. 1564ರಲ್ಲಿ ದಿಲ್ಲಿಯ ಷೇಕ್ ಒಬ್ಬನನ್ನು ನಿನ್ನ ಹೆಂಡತಿಗೆ ವಿಚ್ಛೇದನ ಕೊಡು; ನನಗವಳು ಬೇಕು ಎಂದು ಅಕ್ಬರ್ ಒತ್ತಾಯಿಸಿದ. ಕೆಲವೇ ದಿನಗಳಲ್ಲಿ ಅಕ್ಬರ್ ರಾಜಬೀದಿಯಲ್ಲಿ ಸುತ್ತುತ್ತಿದ್ದಾಗ ಉಲಾದ್ ಎಂಬ ಗುಲಾಮನೊಬ್ಬ ಮನೆಯ ಮಾಳಿಗೆಯೊಂದರಿಂದ ಅಕ್ಬರನ ಮೇಲೆ ಬಾಣ ಬಿಟ್ಟ. ಅದು ಅಕ್ಬರನ ಭುಜಕ್ಕೆ ತಗುಲಿ ಗಾಯವಾಯಿತು. ರಾಜಭಟರು ಆತನನ್ನು ಅಲ್ಲಿಯೇ ತುಂಡರಿಸಿ ಎಸೆದರು. ಈ ಹತ್ಯಾಪ್ರಯತ್ನದ ನಂತರ ಅಕ್ಬರನ ಮರ್ಯಾದೆಗೆಟ್ಟ ಹುನ್ನಾರಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ಅದಕ್ಕಾಗಿಯೇ ತನ್ನ ರಾಜ್ಯದಲ್ಲಿ ಮೀನಾ ಬಜಾರ್" ವ್ಯವಸ್ಥೆಯನ್ನು ಪೋಷಿಸಿದ. ಹೊಸವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಅಲ್ಲಿ ನಡೆಯುತ್ತಿದ್ದ ನೌರೋಜ್ ಉತ್ಸವದಲ್ಲಿ ಹಿಂದೂ ಸಾಮಂತ ರಾಜರೆಲ್ಲಾ ಒಂದೊಂದು ಅಂಗಡಿ ತೆರೆದು ತಮ್ಮ ರಾಜ್ಯದಲ್ಲಿನ ರೂಪವತಿಯರನ್ನೆಲ್ಲಾ ಪ್ರದರ್ಶನಕ್ಕಿಡಬೇಕಾಗಿತ್ತು. ಮಹಾರಾಜ ಪ್ರತಿಯೊಂದು ಅಂಗಡಿ ವೀಕ್ಷಿಸಿ ತನಗೆ ಬೇಕಾದವರನ್ನು ಜನಾನಕ್ಕೆ ಅಟ್ಟುತ್ತಿದ್ದ!

                  ತನಗೆ ಇಷ್ಟವೆನಿಸಿದ ರಾಜಪ್ರಮುಖರ ಪತ್ನಿಯರನ್ನು, ಇತರ ಸ್ತ್ರೀಯರನ್ನು ಅಜೀರ್ಣವೆನಿಸುವ ತನಕ ಮನಸೋ ಇಚ್ಛೆ ಅನುಭವಿಸುತ್ತಿದ್ದ ಎಂದು ಸ್ವತಃ ಅಕ್ಬರನ ಸ್ವಾಮಿನಿಷ್ಠ ಸೇವಕ ಅಬುಲ್ ಫಜಲ್ ಬರೆದಿದ್ದಾನೆ. ಮೀನಾ ಬಜಾರಿನಿಂದ ವರ್ಷ ವರ್ಷ ಹಿಂದೂ ಸ್ತ್ರೀಯರನ್ನು ಸಾಗಿಸಿಕೊಂಡು ಬರುತ್ತಿದ್ದ ಕಾರಣ, ತಾನು ಸೋಲಿಸಿದ ರಜಪೂತರಿಂದ ಕನಿಷ್ಟ ಸಂಖ್ಯೆಯ ಹೆಣ್ಣುಗಳನ್ನು ತನ್ನ ಅಂತಃಪುರಕ್ಕೆ ಕಳುಹಿಸಿಕೊಡಬೇಕೆಂಬ ಕರಾರು ಮಾಡಿಕೊಳ್ಳುತ್ತಿದ್ದರ ಫಲವಾಗಿ, ಹಾಗೂ ಕಂಡ ಕಂಡವರ ಹೆಂಡಿರ ಮೇಲೆ ಕಣ್ಣು ಹಾಕುತ್ತಿದ್ದರಿಂದ ಈ ಸ್ತ್ರೀಲಂಪಟನ ರಾಣಿವಾಸವೆಂಬುದು ಎಮ್ಮೆದೊಡ್ಡಿಯಂತಾಗಿತ್ತು. ಅಲ್ಲದೆ ಚಕ್ರವರ್ತಿಗೆ ದಯೆ ಬಂದರೆ ಯಾವುದೇ ವಿಭಾಗಗಳ ಯಾವುದೇ ಪ್ರಮುಖ ಯಾವ ಅಂತಃಪುರ ಸ್ತ್ರೀಯರನ್ನಾದರೂ ಇಷ್ಟಾನುಸಾರ ಭೋಗಿಸಬಹುದಾಗಿತ್ತು ಎಂದಿದ್ದಾನೆ ಫಜಲ್! ಇದನ್ನು ವಿನ್ಸೆಂಟ್ ಸ್ಮಿತ್ ಕೂಡಾ ಸ್ಪಷ್ಟಪಡಿಸುತ್ತಾ ಅಕ್ಬರನ ದಾಖಲೆಗಳನ್ನು ನೋಡಿದರೆ ಅವನು ಒಬ್ಬಳು ಪತ್ನಿಗೆ ಸೀಮಿತಗೊಂಡ ಅಸಾಮಿಯಲ್ಲ ಎಂದಿದ್ದಾನೆ. ಇನ್ನು ರಜಪೂತರ ಒಲವನ್ನು ಗಳಿಸುವ ಹುನ್ನಾರದಿಂದ ಅವರ ಕನ್ಯೆಯರನ್ನು ತನ್ನ ರಾಜಪ್ರಮುಖರಿಗೋ, ಸರದಾರರಿಗೋ ಮದುವೆ ಮಾಡಿಸುತ್ತಿದ್ದನಷ್ಟೇ. ಆ ಹುಡುಗಿಯರ ಸ್ಥಿತಿ ಏನಾಗುತ್ತಿತ್ತು ಎನ್ನುವುದು ಆ ಕಾಲದಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅವಳು ಅರಸನ ಕಾಮದೃಷ್ಟಿಗೆ ಬಿದ್ದರೆ ಮುಗಿಯಿತು; ಇಲ್ಲವಾದಲ್ಲಿ  ಕಟ್ಟಿಕೊಂಡವನು ಯಾರ ಕೈಗೆ ಒಪ್ಪಿಸಿದರೆ ಅವನೊಂದಿಗೆ ಎಷ್ಟುಕಾಲ ಒಪ್ಪಿಸೆಂದರೆ ಅಷ್ಟು ಕಾಲ ವ್ಯಭಿಚಾರ ಮಾಡುವುದೇ ಆ ಸ್ತ್ರೀಯರು ಅನುಭವಿಸಿದ ರಾಣೀವಾಸ! ಹಾಗಂತ ಎಲ್ಲಾ ರಜಪೂತ ಅರಸರು ಅಧಿಕಾರ, ಲಾಭದಾಸೆಗೆ ಬಲಿಬಿದ್ದು ತಮ್ಮವರ ಮಾನ ಕಳೆದುಕೊಳ್ಳಲು ಬಿಡಲಿಲ್ಲ; ಮೇವಾಡದ ಸ್ತ್ರೀಯರು ಮಾನವೇ ಪ್ರಾಣಕ್ಕಿಂತಲೂ ಶ್ರೇಷ್ಠವೆಂದು ಸಾಮೂಹಿಕವಾಗಿ ಚಿತೆಗೆ ಹಾರಿ "ಜೋಹರ್" ಮಾಡಿಕೊಂಡರು. ಸತೀಸಹಗಮನ ಪದ್ದತಿ ಆರಂಭವಾದದ್ದೇ ಕಾಮುಕ ಮೊಘಲರ ಅಟ್ಟಹಾಸದಿಂದ ಮಾನ ಉಳಿಸಿಕೊಳ್ಳಲು.

                 ಹಿಂದೂ ಸ್ತ್ರೀಯರನ್ನು ವಿವಾಹವಾಗುವುದು ಅಕ್ಬರನ ಸೆಕ್ಯುಲರ್ ನೀತಿಯೆಂದು, ಹಿಂದೂ ಮುಸ್ಲಿಮ್ ಐಕ್ಯತೆಗೆ ದಾರಿದೀಪವೆಂದು ಬೊಂಬಡಾ ಬಜಾಯಿಸುವ "ಮಹಾನ್ ಇತಿಹಾಸಕಾರರು" 1568ರಲ್ಲಿ ವಂಚನೆಯಿಂದ ರಣಥಂಬೋರ್ ಕೋಟೆಯನ್ನು ಅಕ್ಬರ್ ವಶಪಡಿಸಿಕೊಂಡಾಗ ಉಂಟಾದ ಒಡಂಬಡಿಕೆಯನ್ನು ಗಮನಿಸುವುದೊಳಿತು. ಅಕ್ಬರನಿಗೂ ಸರ್ಜನರಾಯನಿಗೂ ನಡೆದ ಸಂಧಿಯ ಒಪ್ಪಂದದಲ್ಲಿ ಅರಸನ ಅಂತಃಪುರಕ್ಕೆ ವಧುಗಳನ್ನು ಕಳುಹಿಸುವ ಪದ್ದತಿಯಿಂದ ಬುಂದಿ ರಾಜ್ಯಪಾಲಕರಿಗೆ ವಿನಾಯಿತಿ ಇರುತ್ತದೆಂದೂ, ಮೀನಾಬಜಾರಿನ ಅಂಗಡಿಗಳಲ್ಲಿ ತಮ್ಮ ವಧುಗಳನ್ನು ಕಳುಹಿಸುವ ಕಾರ್ಯದಿಂದ ವಿನಾಯಿತಿ ಇರುತ್ತದೆಂಬುದೇ ಮುಖ್ಯ ಷರತ್ತುಗಳಾಗಿದ್ದವು. ಅಲ್ಲದೆ ಹಿಂದೂ ಮುಸ್ಲಿಮ್ ಐಕ್ಯತೆಗೆ ಶ್ರಮಿಸಿದ್ದನೆನ್ನುವ ಅಕ್ಬರ್ ಎಷ್ಟು ಮೊಘಲ ಸ್ತ್ರೀಯರನ್ನು ಹಿಂದೂಗಳಿಗೆ ಮದುವೆ ಮಾಡಿಸಿದ್ದ?

                  ಸಮರಾಂಗಣಕೆ ಆಕೆ ಧುಮುಕಿದರೆ ಸಾಕ್ಷಾತ್ ದುರ್ಗೆಯೇ ಮೈದಳೆದಂತೆ. ಎಪ್ಪತ್ತು ಸಾವಿರ ಪದಾತಿಗಳು, ಇಪ್ಪತ್ತು ಸಾವಿರ ತುರಗಗಳು, ಎರಡೂವರೆ ಸಾವಿರಕ್ಕೂ ಮಿಕ್ಕಿದ ಗಜಪಡೆಯ ಬೃಹತ್ ಸೈನ್ಯದೊಡನೆ ಅವಳ ದಂಡು ಅಂಕಕ್ಕಿಳಿದಾಗ ಅರಿಗಳೆದೆ ಝಲ್ಲೆನ್ನುತ್ತಿತ್ತು. ತನಗೆ ಪ್ರೀತಿಪಾತ್ರವಾದ ಕರಿಯನ್ನೇರಿ ಅವಳು ಬಾಣ, ಖಡ್ಗ, ಬಂದೂಕುಗಳನ್ನು ಸಮಾನ ಪ್ರಾವೀಣ್ಯತೆಯಿಂದ ಪ್ರಯೋಗಿಸುತ್ತಾ ಯುದ್ಧರಂಗದ ನಾಯಕಿಯಾಗಿ ಕಂಗೊಳಿಸುವುದನ್ನು ಕಾಣುವುದೇ ಕಂಗಳಿಗೊಂದು ಸೊಬಗು. ಪತಿ ಗಣಪತಿರಾಯ್ ಸತ್ತಾಗ ಎಳೆವಯಸ್ಸಿನ ಮಗನ ಪರವಾಗಿ 1548ರಲ್ಲಿ ಗೊಂಡ್ವಾನದ ಸಿಂಹಾಸನವನ್ನೇರಿದ ಆಕೆ ಗೋಂಡಾಗಳ ಬಾಳನ್ನು ಹಸನುಮಾಡಿ ಅವರ ಆರಾಧ್ಯದೈವವಾಗಿ ರಾಣಿಯೊಬ್ಬಳು ಹೇಗಿರಬೇಕೆಂದು ತೋರಿಸಿಕೊಟ್ಟಳು. ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಐವತ್ತೊಂದು ಯುದ್ಧಗಳಲ್ಲೂ ದಿಗ್ವಿಜಯವನ್ನು ಸಾಧಿಸಿ ಜಗದ್ವಿಖ್ಯಾತಿಯನ್ನು ಪಡೆದ ಆಕೆಯೇ ಜಗದ್ವಂದ್ಯೆ ರಾಣಿ ದುರ್ಗಾವತಿ! ಬುಂದೇಲ್ ಖಂಡದ ಸಾಮ್ರಾಜ್ಞಿಯಾಗಿ ತನ್ನ ರಾಜ್ಯದಲ್ಲಿನ 23ಸಾವಿರ ಗ್ರಾಮದ ಪ್ರತಿಯೊಬ್ಬ ಹಿರಿಯನ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗಿನ ಸಂವಹನ ಆಕೆಗೆ ಪ್ರಜೆಗಳೊಂದಿಗಿತ್ತು. ಆಕೆಯ ಸಮರ್ಥ ಆಡಳಿತದಿಂದ ಗೊಂಡಾಣ ಸುಭಿಕ್ಷಗೊಂಡಿತು. ಪ್ರತಿಸ್ವರ್ಗದಂತಿದ್ದ ಆ ನಾಡನ್ನು ನರಕಸದೃಶವನ್ನಾಗಿಸಿದ್ದು ಅದೇ ದಯಾಪರ ಅಕ್ಬರ್! ಅವನ ಕಣ್ಣು ದುರ್ಗಾವತಿಯ ಮೇಲೆ ಬಿತ್ತು!

                ಭಾರೀ ದಂಡಿನೊಂದಿಗೆ ಮೊಘಲರು ಮುತ್ತಿಗೆ ಹಾಕಿದಾಗ ಆತ್ಮರಕ್ಷಣೆಗಾಗಿ ಗೋಂಡಾಗಳೆಲ್ಲರೂ ಒಂದಾಗಿ ರಣಕಣಕ್ಕೆ ಧುಮುಕಿದರು. ದುರ್ಗಾವತಿಯ ರಭಸಕ್ಕೆ ಮೊಗಲ್ ಸೇನೆ ಕಕ್ಕಾಬಿಕ್ಕಿಯಾಯಿತು. ಘನಘೋರ ಕದನದ ನಡುವೆ ಮಗ ವೀರನಾರಾಯಣ್ ಗಾಯಗೊಂಡಾಗ ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಸೂಚಿಸಿದಳು. ಅವನೊಡನೆ ಕೆಲ ಸೈನಿಕರು ತೆರಳಬೇಕಾದ ಕಾರಣ ಸೇನೆಯಲ್ಲಿ ತುಸು ಗೊಂದಲದ ವಾತಾವರಣ ಉಂಟಾಯಿತು. ಅದೇ ವೇಳೆ ಬಾಣವೊಂದು ದುರ್ಗಾವತಿಯ ಬಲಗಣ್ಣಿನ ಮೇಲ್ಭಾಗಕ್ಕೆ ಬಡಿಯಿತು. ಅವಳು ಅದನ್ನು ಕಿತ್ತು ತೆಗೆವ ಪ್ರಯತ್ನ ನಡೆಸಿರುವಾಗಲೇ ಇನ್ನೊಂದು ಬಾಣ ಬಂದು ಕುತ್ತಿಗೆಗೆ ಬಡಿಯಿತು. ತನ್ನ ಕಥೆ ಮುಗಿಯಿತೆಂದು ಮೊಗಲರ ಕೈಗೆ ಸಿಕ್ಕು ಬಂಧಿಯಾಗುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ತನ್ನನ್ನೇ ತಾನು ಇರಿದುಕೊಂಡು ಪ್ರಾಣ ತ್ಯಜಿಸಿದಳು. ಸಾವರಿಸಿಕೊಂಡ ವೀರನಾರಾಯಣ ವೀರಾವೇಶದಿಂದ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಯುವರಾಜ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಕೂಡಲೇ ರಕ್ಕಸರು ಊರೊಳಗೆ ಪ್ರವೇಶಿಸುವ ಮುನ್ನವೇ ಸ್ತ್ರೀಯರು ಮಾನ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕವಾಗಿ ಚಿತೆಗೆ ಹಾರಿದರು. ಆದರೆ ಅಗ್ನಿ ಇಬ್ಬರು ರಾಜಕುವರಿಯರನ್ನು ವಂಚಿಸಿದ. ಅವರನ್ನು ತನ್ನ ದೊಡ್ಡಿಯಂತಿದ್ದ ಜನಾನಾಕ್ಕೆ ನೂಕಿದ ಅಕ್ಬರ್ ಜೀವಂತವಿರುವಾಗಲೇ ಸಾವಿನ ಭಾಗ್ಯ ಒದಗಿಸಿದ! ಮುಂದೆ ಊರೂರೂ ದೋಚುವ ಕಾರ್ಯಕ್ರಮ ಯಥಾವತ್ ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಡೆಯಿತು. ಅಕ್ಬರ್ ಗೊಂಡ್ವಾನದ ಮೇಲೆ ಮಾಡಿದ ದಾಳಿ ಪಕ್ಕಾ ದುರಾಕ್ರಮಣವೇ ಹೊರತು ಇನ್ನೇನಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಬೇರಾವ ಸಮರ್ಥನೆಯೂ ಅದಕ್ಕಿಲ್ಲ ಎಂದಿದ್ದಾನೆ ವಿನ್ಸೆಂಟ್ ಸ್ಮಿತ್!

               ಅಕ್ಬರನ ಕಾಮದಾಸೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸಲ್ಮಾನರೂ ಬಲಿಯಾದರು. ಆಗ ಮಾಳವವನ್ನಾಳುತ್ತಿದ್ದವ ಅಕ್ಬರನ ಓರಗೆಯವನಾದ ಬಾಜ್ ಬಹಾದ್ದೂರ್! ರೂಪಮತಿ ಅವನ ಮನದನ್ನೆ. ಲವ್ ಜಿಹಾದ್ ಇಲ್ಲವೇ ಇಲ್ಲ ಅನ್ನುವವರು ಗಮನಿಸಿ ಲವ್ ಜಿಹಾದಿಗೆ ಮೊಘಲರ ಕಾಲದ ಇತಿಹಾಸವಿದೆ! ಹೆಸರಿಗೆ ಅನುರೂಪವಾಗಿ ಆಕೆ ಅಪ್ರತಿಮ ಸುಂದರಿ. ಪೌರ್ಣಮಿಯ ಶಶಿಯ ಸೊಬಗಿಗಿಂತ ರೂಪಮತಿಯ ಚೆಲುವು ಹೆಚ್ಚು ಪ್ರಕಾಶಮಾನವಾದುದೆಂದು ವರ್ಣಿಸುತ್ತಿದ್ದರು ಕವಿಗಳು. ಅವಳಂತಹ ನಿರ್ಮಲ ದಿವ್ಯಸ್ತ್ರೀಯನ್ನು ಹತ್ತುಲಕ್ಷಸಂವತ್ಸರಗಳಿಗೊಮ್ಮೆಯಷ್ಟೇ ಭಗವಂತನು ಸೃಷ್ಟಿಸುವನೆಂದೂ, ಆಕೆಯ ಕಣ್ಣಂಚಿನ ಪಾನಪಾತ್ರೆಯಿಂದ ಒಂದು ಬಿಂದು ಮಧುವನ್ನಾಸ್ವಾದಿಸುವುದು ಸ್ವರ್ಗಕ್ಕೆ ಸೋಪಾನವೆಂದು ಹಾಡುತ್ತಿದ್ದರು ಜಾನಪದರು. ಈ ಕೀರ್ತಿಗಾನ ಅಕ್ಬರನ ಕಿವಿಗೆ ಬಿತ್ತು! ಕೇಳಬೇಕೆ ಜೊಲ್ಲುಸುರಿಸಿಕೊಂಡು ಆಕೆಯನ್ನು ಕರೆತರಲು ಅಪ್ಪಣೆಯಾಯಿತು. ಆಕೆ ಬರಲೊಲ್ಲೆ ಎಂದಳು. ಮೊಗಲ್ ಸೈನ್ಯ ಬಂತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವೆನೆಂದಿದ್ದ ಬಾಜ್ ಬಹಾದ್ದೂರ್ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ! ಸುದ್ದಿ ಕೇಳಿದ ರೂಪಮತಿ ವಿಷ ಸೇವಿಸಿದಳು. ಕಾಮಾಂಧನ ಮುಖ ಕಪ್ಪಡರಿತು!

                ಜಯವಂತಿ...ಮೊಗಲ್ ದಾಸ್ಯದಿಂದ ಮೇವಾಡ ಮುಕ್ತಗೊಳ್ಳುವವರೆಗೆ ಮಗುವನ್ನು ಹಡೆಯುವುದಿಲ್ಲವೆಂದೂ, ಆಭರಣಗಳನ್ನು ಧರಿಸುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದ ಅಪೂರ್ವ ರಜಪೂತ ರಾಜಕನ್ಯೆ. ರಾಜ ಸುರ್ಜನರಾಯನ ಸೋದರನ ಸುತೆ. ಅಕ್ಬರನ ಕಾಮದೃಷ್ಟಿ ಆಕೆಯ ಮೇಲೆ ಬಿತ್ತು. ಹೇಗಾದರೂ ಮಾಡಿ ರಣಥಂಬೋರನ್ನು ಜಯಿಸಿ ಆಕೆಯನ್ನು ಪಡೆವಾಸೆಯಿಂದ ಜೊಲ್ಲುಸುರಿಸಿಕೊಂಡು ಕಾಲು ಕೆದರಿ ಯುದ್ಧಕ್ಕೆ ಹೊರಟ. ಆದರೆ ರಣಥಂಬೋರಿನ ಕೋಟೆ ದುರ್ಭೇಧ್ಯವಾಗಿತ್ತು. ಇರುವೆಗಳು ಕೂಡಾ ಅದರ ಗೋಡೆಗಳ ಮೇಲೇರಲಾರದೆ ಜಾರಿ ಬೀಳುವವೆಂದು ಅಬುಲ್ ಫಜಲ್ ಬರೆದಿದ್ದಾನೆ. ಅಕ್ಬರನಿಗೆ ಗೆಲ್ಲಲಾಗಲಿಲ್ಲ. ಅದಕ್ಕಾಗಿ ಆತ ಭಗವಾನ್ ದಾಸನ ಮೂಲಕ ಸುರ್ಜನರಾಯನಿಗೆ ಪ್ರಲೋಭನೆ ಒಡ್ಡಿ ಕೋಟೆಯ ಬೀಗದ ಕೈಗಳನ್ನು ವಶಪಡಿಸಿಕೊಂಡ. ಸುದ್ದಿ ಅರಿತ ಜಯವಂತಿ ಭರಿಸಲಾರದ ವೇದನೆಯಿಂದ ತನ್ನ ಮೈಮೇಲಿನ ಸೈನಿಕ ಪೋಷಾಕನ್ನು, ರಾಜ ಲಾಂಛನ, ತಿಲಕಗಳನ್ನು ಕಿತ್ತೆಸೆದು ದೇವಾಲಯದ ನರ್ತಕಿಯ ವೇಷ ಧರಿಸಿ ಏಕಲಿಂಗೇಶ್ವರನೆದುರು ಕಾಲ್ಗೆಜ್ಜೆ ತುಂಡಾಗುವವರೆಗೆ ಶಿವತಾಂಡವಗೈದು ಶಿವಲಿಂಗದ ಮುಂದೆ ಕುಸಿದಳು. ಹಾಗೆ ಕುಸಿವಾಗ ಸೊಂಟದಲ್ಲಿದ್ದ ಚೂರಿಯಿಂದ ಎದೆ ಬಗಿದು ರುದ್ರನಿಗೆ ರುಧಿರಾಭಿಷೇಕಗೈದಳು. ರಜಪೂತರ ಧೈರ್ಯಸ್ಥೈರ್ಯಗಳಿಗೆ ಹೊಸ ಭಾಷ್ಯ ಬರೆದು ದೇಶದ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಳು. ಹೀಗೆ ಕಾಮುಕ ಅಕ್ಬರನ ವಕ್ರದೃಷ್ಟಿಗೆ ಬಿದ್ದು ನಾಶವಾದ ರಾಜ್ಯಗಳು, ಮಾನಿನಿಯರು, ಪ್ರಾಣ ಕಳೆದುಕೊಂಡ ಜನತೆ, ಪ್ರಾಣಕ್ಕಿಂತ ಮಾನ ಹೆಚ್ಚೆಂದು ಜೌಹರ್ ಮಾಡಿಕೊಂಡ ಮಾನಿನಿಯರು ಲೆಕ್ಕವಿಲ್ಲದಷ್ಟು. ಅಂತಹ ಕಾಮಾಂಧನನ್ನೂ "ದಿ ಗ್ರೇಟ್" ಅಂದವರೂ ಬಹುಷಃ ಕಾಮಾಂಧರೇ ಇರಬೇಕು!

           ಅಧಂ ಖಾನ್. ಅಕ್ಬರನನ್ನು ಸ್ವಂತಮಗನಂತೆ ಸಾಕಿದ ಮಹಮಾನಗಾಳ ಮಗ. ಅನೇಕ ಯುದ್ಧಗಳಲ್ಲಿ ಬಲಗೈ ಬಂಟನಂತೆ ಅಕ್ಬರನಿಗೆ ಸಹಾಯ ಮಾಡಿದ ವೀರ. ಒಂದು ಅಕ್ಬರ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಏನೋ ಗದ್ದಲ ಕೇಳಿತು. ಏನೆಂದು ವಿಚಾರಿಸಿದಾಗ ವಜೀರ ಅದಗಾ ಖಾನನನ್ನು ಕೊಂದು ಅಧಂಖಾನ್ ಅರಸನನ್ನು ಕೊಲ್ಲಲು ಬರುತ್ತಿರುವನೆಂದು ಯಾರೋ ಕಿವಿಯೂದಿದರು. ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ ಅಕ್ಬರ್ ಅಧಂಖಾನನ ಮೇಲೇರಿ ಹೋದ. ಅಧಂಖಾನ್ ನಡೆದುದನ್ನು ವಿಶದೀಕರಿಸುತ್ತೇನೆಂದು ಪರಿಪರಿಯಾಗಿ ಕೋರಿದರೂ ಕೇಳದೆ ಅವನ ಮುಖದ ಮೇಲೆ ಗುದ್ದಿದ. ಜ್ಞಾನ ತಪ್ಪಿ ಬಿದ್ದ ಆತನನ್ನು ಹಗ್ಗಗಳಿಂದ ಕಟ್ಟಿ ಅರಮನೆಯ ಮೇಲಿಂದ ಕೆಳಗೆಸೆಯಿರೆಂದು ಆಜ್ಞೆ ಮಾಡಿದ. ಸೇವಕರು ಆತನನ್ನು ಕೊಲ್ಲಲು ಇಷ್ಟವಿಲ್ಲದೆ ಕೆಳಕ್ಕೆ ಜಾರಿಬಿಟ್ಟರು. ಆದರೆ ಈ ದಯಾಪರ ಬಿಡಬೇಕೇ! ಸತ್ತನೋ ಇಲ್ಲವೋ ನೋಡಿರಂದು ಆಜ್ಞೆ ಮಾಡಿದ. ಅರೆಜೀವವಾಗಿದ್ದಾನೆಂದು ತಿಳಿದೊಡನೆ ಅವನ ಜುಟ್ಟು ಹಿಡಿದು ಮೇಲಕ್ಕೆಳೆದು ತಲೆ ಹೋಳಾಗುವಂತೆ ಕೆಳಕ್ಕೆ ಬಿಸಾಕಲು ಆಜ್ಞಾಪಿಸಿದ. ಅದು ಅಕ್ಬರ್ ತನ್ನ ಸಹವರ್ತಿಯೊಬ್ಬನಿಗೆ ಪರಿಪಾಲಿಸಿದ ಸಮುಚಿತ ನ್ಯಾಯ!

                ಆ ದಿನ ದೀಪ ಹಚ್ಚುವ ನೌಕರನಿಗೇ ದೀಪ ಹಚ್ಚಬೇಕಾಯಿತು! ಕಾರಣವಿಷ್ಟೇ, ಅರಸ ನಿದ್ದೆಯಿಂದ ಬೇಗ ಎಚ್ಚರಗೊಂಡುದುದು! ಅರಸ ಎದ್ದಾಗ ಸೇವಕರ್ಯಾರೂ ಕಾಣಲಿಲ್ಲ. ದೀಪ ಹಚ್ಚುವ ಸೇವಕನೊಬ್ಬ ಮೂಲೆಯಲ್ಲಿ ಮುದುಡಿ ಮಲಗಿದ್ದ. ಸಿಡಿಮಿಡಿಗೊಂಡ ಅರಸ ಆತನನ್ನು ರಾಜಗೋಪುರದಿಂದ ಕೆಳಕ್ಕೆ ಎಸೆಯುವಂತೆ ಆಜ್ಞಾಪಿಸಿದ. ಇತಿಹಾಸದಲ್ಲಿ ದೀಪ ಹಚ್ಚುವ ಸೇವಕನೊಬ್ಬನನ್ನು ನಿದ್ದೆ ಮಾಡುವ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗೆ ಗೋಪುರದ ಕೆಳಕ್ಕೆಸೆದು ಸಾಯಿಸಿದ ಮಹಾಮಾನವತಾವಾದಿ ಧರ್ಮಪ್ರಭು ಅಕ್ಬರನೊಬ್ಬನೆ! 1565ರಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಂದ ಅಕ್ಬರನನ್ನು ದಯಾಪರ ಎಂದು ಕರೆದ ನೆಹರೂವೇ ಧನ್ಯ!

                ಮೋಸ, ಕುತಂತ್ರಗಳಿಂದ ಉತ್ತರ ಭಾರತದ ರಾಜ್ಯಗಳನ್ನು ತನ್ನ ವಶ ಮಾಡಿಕೊಂಡ ಮೇಲೆ ಅಕ್ಬರನ ದೃಷ್ಟಿ ಬಿದ್ದದ್ದು ಮತದ ಮೇಲೆ! ಗೆಲುವು, ಕೀರ್ತಿ ತಲೆಗಡರಿತ್ತು! ತನ್ನಂತಹ ಚಕ್ರವರ್ತಿ ಯಾವನೋ ಒಬ್ಬ ಯಕಶ್ಚಿತ್ ಪ್ರವಾದಿಗೆ ತಲೆಬಾಗುವುದೆಂದರೇನು? ತಾನೊಬ್ಬ ದೈವಾಂಶ ಸಂಭೂತನೆಂದೇ ಅಕ್ಬರನ ನಂಬಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಅಕ್ಬರನ ಸುತ್ತ ಮುತ್ತ ಇದ್ದವರೆಲ್ಲಾ ಆತನ ಭಜನೆ ಮಾಡುವವರೇ. ಅಲ್ಲದೇ ಅಡ್ಡ ಬಂದವರನ್ನು ಉದ್ದುದ್ದ ಸಿಗಿದುಬಿಡುತ್ತಾನೆಂಬ ಹೆದರಿಕೆ ಬೇರೆ! ಒಟ್ಟಾರೆ ಮರ್ಕಟವೊಂದು ಮದಿರೆ ಕುಡಿದ ಹಾಗಾಯಿತು  ಅಕ್ಬರನ ಸ್ಥಿತಿ! ಇಸ್ಲಾಂ, ಕ್ರೈಸ್ತ, ಹಿಂದೂಗಳನ್ನು ಸಮನ್ವಯಗೊಳಿಸಿ, ಎಲ್ಲದರಲ್ಲಿನ ಒಳ್ಳೆಯದನ್ನು ತೆಗೆದುಕೊಂಡು ಸರ್ವರಿಗೂ ಆದರಣೀಯ-ಆಚರಣೀಯ ದಾರಿಯನ್ನು ಹುಟ್ಟುಹಾಕಿದ್ದಾನೆಂದು ನಮ್ಮ ಚರಿತ್ರಕಾರರು ಗೀಚಿದ್ದಾರೆ. ಇದರ ಫಲವಾಗಿಯೇ ಅಕ್ಬರ್ "ಲಿಬರಲ್", ಸರ್ವಮತಸಮತ್ವಕ್ಕೆ ಪ್ರಯತ್ನಿಸಿದವ ಎಂದು ಬಲಪಂಥೀಯರ ತಲೆಯಲ್ಲೂ ಹುಳ ಹೊಕ್ಕಿರುವುದು. ಆದರೆ "ದೀನ್ ಇಲಾಹಿ" ಅಪ್ಪಟ ಕಾಗೆ ಬಂಗಾರ!

                ರಾಜನು ದೇವರ ನೆರಳಾದ್ದರಿಂದ, ಹಿಂದೂ ಸ್ಥಾನದಲ್ಲಿ ತಾನೇ ದೊಡ್ಡ ರಾಜನೆಂಬ ಭ್ರಮೆಯಿಂದ ತನ್ನನ್ನೇ ಪ್ರವಾದಿಯಾಗಿ ಘೋಷಿಸಿಕೊಂಡು ಹೊಸಮತವನ್ನು ಸ್ಥಾಪಿಸಹೊರಟ ಅಕ್ಬರ್ 1579ರಲ್ಲಿ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜಪ್ರಮುಖರನ್ನೊಳಗೊಂಡ ಸಭೆಯೊಂದನ್ನು ಆಯೋಜಿಸಿದ. ಅದರಲ್ಲಿ "ತನ್ನ ಸಾಮ್ರಾಜ್ಯದಲ್ಲಿ ಹಲವು ಮತಗಳಿದ್ದು, ಪರಸ್ಪರ ಭೇದಾಭಿಪ್ರಾಯಗಳನ್ನು ಹೊಂದಿವೆ. ಇದು ಸರಿಯಲ್ಲ. ಹಾಗಾಗಿ ಎಲ್ಲದರ ಉತ್ತಮವಾದುದನ್ನು ಆರಿಸಿಕೊಂಡು ಹೊಸಮತವೊಂದನ್ನು ಸೃಷ್ಟಿಸಿ ಅನುಸರಿಸಬೇಕು. ಇಲ್ಲಿರುವವರೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ" ಎಂದು ಆಜ್ಞಾಪಿಸಿದ. ಉದ್ದೇಶವೇನೋ ಒಳ್ಳೆಯದೇ. ಆದರೆ ಆದದ್ದೇನು? ಅಕ್ಬರನ ಭಜನಾಮಂಡಳಿ "ವಿಶ್ವಮತ"ವನ್ನು ಸ್ಥಾಪಿಸಲು ಅವಶ್ಯವಾದ ನಿಯಮಗಳನ್ನು ಚಕ್ರವರ್ತಿಗಳೇ ರೂಪಿಸಬೇಕು ಅಂದುಬಿಟ್ಟರು. ಕಳ್ಳು ಕುಡಿದ ಕಪಿಗೆ ಚೇಳು ಕುಟುಕಿದಂತಾಯಿತು! ಸಧ್ಯದಲ್ಲಿಯೇ ಹೊಸ ಮತವನ್ನು ಸ್ಥಾಪಿಸಲಾಗುವುದೆಂದು ರಾಜ್ಯಾದ್ಯಂತ ಡಂಗುರ ಹೊಡೆಸಿದ. ಹೊಸ ಮತ ಆರಂಭಿಸುವ ಮುನ್ನ ಹಿಂದೂ ಧರ್ಮ, ಕ್ರಿಶ್ಚಿಯನ್ ಮತದ ಆಚಾರ್ಯರನ್ನು ಸಂಪರ್ಕಿಸಲೇ ಇಲ್ಲ! ಮೊಗಲ್ ಸಾಮ್ರಾಜ್ಯದ ಮುಫ್ತಿಯಾಗಿದ್ದ ಕಾಜಿಯಲ್ ಕುಜಾತ್ ಹಾಗೂ ಕೆಲವು ಉಲೇಮಾಗಳ ಕೈಯಲ್ಲಿ ಒಂದು ದಸ್ತಾವೇಜಿಗೆ ಸಹಿ ಮಾಡಿಸಿದ(1579). ಸಿವಿಲ್ ವ್ಯವಹಾರಗಳಲ್ಲಿದ್ದಂತೆ ಪಾರಲೌಕಿಕ ಸಂಗತಿಗಳಲ್ಲೂ ಚಕ್ರವರ್ತಿಯೇ ಅಂತಿಮ ನ್ಯಾಯ ತೀರ್ಮಾನ ನೀಡುವವನೆಂದೂ, ಮುಸ್ಲಿಮ್ ನ್ಯಾಯಕ್ಕೆ ಸಂಬಂಧಿಸಿದಂತೆ ಅಕ್ಬರನೇ ಮಿಕ್ಕೆಲ್ಲಾ ಖಾಜಿಗಳಿಗಿಂತ ಶ್ರೇಷ್ಠನೆಂದೂ, ಅವನ ನಿರ್ಣಯವೇ ಅಂತಿಮವೆಂದು ಅವರ ಕೈಯಲ್ಲಿ ಕಟ್ಟಳೆ ಹೊರಡಿಸಿದ.

ಹೇಗಿತ್ತು ದೀನ್ ಇಲಾಹಿ?
                ಹೊಸ ಮತದಲ್ಲಿ ಸೇರುವಂತಹವರು ಚಕ್ರವರ್ತಿಯ ಸಮ್ಮುಖದಲ್ಲಿ ಸಮರ್ಪಿಸಿಕೊಳ್ಳಬೇಕಿದ್ದ ವಿಷಯಗಳು ನಾಲ್ಕು. ಆಸ್ತಿ, ಜೀವನ, ಗೌರವ, ಮತ! ಈ ನಾಲ್ಕರ ಪೈಕಿ ಒಂದನ್ನು ತ್ಯಾಗ ಮಾಡಿದವನಿಗೆ ಒಂದು ಡಿಗ್ರಿ, ಎರಡನ್ನು ತ್ಯಾಗ ಮಾಡಿದವನಿಗೆ ಎರಡು ಡಿಗ್ರಿ...ಹೀಗೆ ಡಿಗ್ರಿಗಳನ್ನು ನೂತನ ಗುರುಕುಲ ದಯಪಾಲಿಸುತ್ತಿತ್ತು. ಯಾವನಾದರೂ ಹಿಂದೂ ಹೊಸಪಂಥವನ್ನು ಸೇರಬೇಕೆಂದರೆ ತಾನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ದೇವರು-ಆಚರಣೆಗಳನ್ನು ತ್ಯಜಿಸಬೇಕಿತ್ತು. ತನ್ನ ಬಳಿ ಅದ್ಭುತ ಶಕ್ತಿಗಳಿವೆಯೆಂದೂ, ಬಂಜೆಯರಿಗೆ ಮಕ್ಕಳು ಹುಟ್ಟುತ್ತವೆಯೆಂದೂ, ತನ್ನ ಪಾದ ತೊಳೆದ ನೀರನ್ನು ಕುಡಿಯುವುದರಿಂದ ರೋಗಗಳು ವಾಸಿಯಾಗುತ್ತವೆಂದು ಅಕ್ಬರ್ ಮಾಡಿದ ಪ್ರಚಾರಕ್ಕೇನೂ ಕಡಿಮೆ ಇರಲಿಲ್ಲ. ಅನೇಕ ದೌರ್ಭಾಗ್ಯವಂತರು ಅಕ್ಬರನ ಪಾದೋದಕವನ್ನು ಸೇವಿಸಿ ಇಲ್ಲದ ಖಾಯಿಲೆ ಬರಿಸಿಕೊಂಡರು. ಅಕ್ಬರನ ದರಬಾರಿನಲ್ಲಿ ದೀನ್ ಇಲಾಹಿ ಸ್ವೀಕರಿಸಿದ ರಾಜಪ್ರಮುಖರು ಕೇವಲ ಹದಿನೆಂಟು ಮಂದಿ. ಅವರಲ್ಲಿ ಬೀರಬಲ್ ಒಬ್ಬನೇ ಹಿಂದೂ. ಸಾಮಾನ್ಯ ಜನರ ಸಂಖ್ಯೆಯೂ ಅತ್ಯಲ್ಪ. ಅನೇಕ ಹಿಂದೂ ಆಚಾರ-ಸಂಪ್ರದಾಯಗಳನ್ನು ಯಥಾವತ್ ನಕಲು ಹೊಡೆದರೂ ಹಿಂದೂಗಳೇನು ಆಕರ್ಷಿತರಾಗಲಿಲ್ಲ. ಕಾಫಿರರ ರೀತಿಯ ಆಚಾರಗಳೆಂದು ಮುಸ್ಲಿಮರೂ ದೂರಾದರು. ಮುಂದೇನು? ಇದೆಯಲ್ಲ ಅಸ್ತ್ರ...ಸ್ವೀಕರಿಸಬೇಕು ಇಲ್ಲಾ ಶಿಕ್ಷೆಗೆ ಗುರಿಯಾಗಬೇಕು! ಹೊಸ ಮತವನ್ನು ಸ್ವೀಕರಿಸಲಿಚ್ಛಿಸುವವರು ಸೂರ್ಯನು ಪ್ರಜ್ವಲಿಸುವ ಭಾನುವಾರದಂದು ತಮ್ಮ ಮುಂಡಾಸುಗಳನ್ನು ತೆಗೆದಿಟ್ಟು ಅಕ್ಬರನ ಪಾದಮೂಲದಲ್ಲಿ ತಮ್ಮ ತಲೆ ಇರಿಸಿ ಪ್ರಾರ್ಥಿಸಬೇಕಿತ್ತು. ದೇವರ ಪ್ರತಿನಿಧಿಯಾದ ಅರಸ ಅವರನ್ನು ಮೇಲೆಬ್ಬಿಸಿ ತಲೆಯ ಮೇಲೆ ಮುಂಡಾಸನ್ನಿರಿಸಿ ಕೈ ಎತ್ತಿ ಆಶೀರ್ವದಿಸಿ "ಅಲ್ಲಾ ಹು ಅಕ್ಬರ್" ಎಂದು ಬರೆದಿದ್ದ ಒಂದು ಭಿಲ್ಲೆಯನ್ನು ಉಡುಗೊರೆಯಾಗಿ ನೀಡುವುದರ ಮೂಲಕ ತನ್ನ ಮತಕ್ಕೆ ಸೇರಿಸಿಕೊಳ್ಳುತ್ತಿದ್ದ. ಭಕ್ತನು ಸದಾ ಆ ಭಿಲ್ಲೆಯನ್ನು ತನ್ನ ಮುಂಡಾಸಿನಲ್ಲಿ ಧರಿಸಿ ಸಂಚರಿಸಬೇಕಿತ್ತು. ನೂತನ ಮತಸ್ಥರು ಪರಸ್ಪರ ಎದುರಾದಾಗ "ಅಲ್ಲಾಹು ಅಕ್ಬರ್" ಎಂದು ಹೇಳಬೇಕಿತ್ತು.

                  ದೀನ್ ಇಲಾಹಿಯಿಂದ ಹೆಚ್ಚು ಹೊಡೆತ ಬಿದ್ದದ್ದು ಮುಸ್ಲಿಮರಿಗೇ! ನೂತನ ಮತವನ್ನು ವಿರೋಧಿಸಿದರೆಂಬ ಕಾರಣಕ್ಕೆ ಭಾರೀ ಸಂಖ್ಯೆಯ ಷೇಖ್, ಫಕೀರರನ್ನು ದೇಶದಿಂದ ಬಹಿಷ್ಕರಿಸಿ ಕಂದಹಾರಿನ ಮಾರುಕಟ್ಟೆಗಳಲ್ಲಿ ಕುದುರೆಗಳಿಗೆ ಬದಲು ಗುಲಾಮರಂತೆ ಅವರನ್ನು ಮಾರಹಾಕಿದ ಎಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಐದಾರು ವರ್ಷಗಳಲ್ಲಿ ಅವನ ಹೃದಯದಲ್ಲಿ ಇಸ್ಲಾಮಿನ ಬಗೆಗೆ ಲವಲೇಶ ಭಾವನೆಯೂ ಇಲ್ಲದಂತಾಗಿಬಿಟ್ಟಿತ್ತು ಎಂದು ಅಕ್ಬರನ ಸಮಕಾಲೀನ ಬದೌನಿ ಬರೆದಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡುವಂತಿರಲಿಲ್ಲ. ಮೊದಲೇ ಆ ಹೆಸರಿದ್ದರೆ ಬದಲಾಯಿಸಿಕೊಳ್ಳಬೇಕಿತ್ತು. ಗಡ್ಡ ಬೋಳಿಸಬೇಕಿತ್ತು. ಪ್ರಾರ್ಥನೆ, ರಂಜಾನ್ ಉಪವಾಸ, ಮೆಕ್ಕಾ ಯಾತ್ರೆ ಮಾಡುವಂತಿರಲಿಲ್ಲ. ಅರಬ್ಬೀ ಭಾಷೆ, ಕುರಾನಿನ ಅಧ್ಯಯನ, ಷರೀಯತ್ ಕಾನೂನಿಗೆ ಅವಕಾಶವಿರಲಿಲ್ಲ. ಸತ್ತವರ ತಲೆಯನ್ನು ಪೂರ್ವ ದಿಕ್ಕಿಗೆ ಬರುವಂತೆ ಹೂಳಬೇಕಿತ್ತು. ಪೂರ್ವಕ್ಕೆ ತಲೆ ಹಾಕಿ ಮಲಗಬೇಕಿತ್ತು. ಪಶ್ಚಿಮದ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥಿಸುವ ಮುಸ್ಲಿಮರನ್ನು ಅವಮಾನಿಸುವುದು ಇದರ ಉದ್ದೇಶವಾಗಿತ್ತೆಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ.

                   ಇದರಿಂದ ಹಿಂದೂಗಳಿಗೇನೂ ಹಾನಿಯಿಲ್ಲ, ಒಳ್ಳೆಯದೇ ಆಯಿತಲ್ವೇ ಅಂತಾ ನೀವು ತಿಳ್ಕೊಂಡಿದ್ದರೆ ಅದು ತಪ್ಪು. ಈ ಮತವನ್ನು ಅಪ್ಪಿಕೊಂಡವರು ಒಂದು ರೀತಿಯಲ್ಲಿ ಇಸ್ಲಾಮಿಗೆ ಮತಾಂತರಗೊಂಡಂತೆಯೇ. ಇದು ಅಕ್ಬರನ ಕಾಲಾನಂತರ ನಿಚ್ಚಳವಾಯಿತು. ಕೆಲವರು ಎಡಬಿಡಂಗಿಗಳಂತೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಉಳಿಯದೆ ಸತ್ತು ಹೋದರು. ಭಾರತೀಯತೆಯನ್ನು, ಹಿಂದೂ ಸಂಸ್ಕೃತಿಯನ್ನು ತುಚ್ಛವಾಗಿ ಕಾಣುವ ಇಂದಿನ "ಸೆಕ್ಯುಲರು"ಗಳು ಬಹುಷಃ ಇವರದ್ದೇ ಸಂತಾನವೇನೋ! ಅಲ್ಲದೆ ಆತ ಕೊನೆಗೆ ಇಸ್ಲಾಮ್ ದ್ವೇಷಿಯಾಗಿ ಬದಲಾದರೂ ಮೊದಲು ಹಿಂದೂಗಳಿಗೆ ಮಾಡಿದ ಅನ್ಯಾಯ ಮುಚ್ಚಿಹೋಗುವುದೇ? ಕಂಡ ಕಂಡ ಮಾನಿನಿಯರನ್ನು ತನ್ನ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದ ಇಂತಹ ಕಾಮುಕನನ್ನು ಹೊಗಳುವವರು ಹೆಣ್ಣನ್ನು ನೋಡುವ ಪರಿ ಯಾವ ರೀತಿ ಇರಬಹುದು? ಹೆಣ್ಣನ್ನು ಬರಿಯ ಭೋಗದ ವಸ್ತುವಾಗಿ ಕಂಡ ಈ ಮೂರ್ಖ ಕೇವಲ ಹೆಣ್ಣು-ಹೊನ್ನು-ಮಣ್ಣನ್ನಷ್ಟೇ ದೋಚಲಿಲ್ಲ, ಇಲ್ಲಿಯ ಜನರ ಬೌದ್ಧಿಕ ದಾರಿದ್ರ್ಯಕ್ಕೂ ಕಾರಣವಾದ! ಇಲ್ಲದಿದ್ದಲ್ಲಿ ಅದೆಷ್ಟೋ ರಾಜ್ಯಗಳನ್ನು ಸರ್ವನಾಶ ಮಾಡಿದ, ದೇವಾಲಯಗಳನ್ನು ಸುಟ್ಟು ಬೂದಿಯಾಗಿಸಿದ, ಲಕ್ಷ ಲಕ್ಷ ಹಿಂದೂಗಳ ಮತಾಂತರ-ಮಾರಣ ಹೋಮಕ್ಕೆ ಕಾರಣನಾದ, ಲಕ್ಷಾಂತರ ಮಾನಿನಿಯರ ಜೌಹರ್-ಶೀಲಹರಣ-ನರಕಸದೃಶ ಜೀವನಕ್ಕೆ ಕಾರಣನಾದ ಇಂತಹ ಪ್ರಭೃತಿಯನ್ನು "ದಿ ಗ್ರೇಟ್" ಎಂದವರೂ ಅದನ್ನೇ ಒಪ್ಪಿಕೊಳ್ಳುತ್ತಿರುವವರ ಬೌದ್ಧಿಕ ದಾಸ್ಯಕ್ಕೆ ಏನೆನ್ನಬೇಕು? ಅಬುಲ್ ಫಜಲನಿಗಾದರೂ ಅಕ್ಬರನನ್ನು ಹೊಗಳಲು ಅನ್ನದ ಋಣವಿತ್ತು. ಸ್ವಾಮಿನಿಷ್ಠೆಯ ಪರಾಕಾಷ್ಟತೆಯಿತ್ತು! ಆದರೆ ಚಪಲ ಚೆನ್ನಿಗ ರಾಯ ನೆಹರೂವಿಗೇನಿತ್ತು? ICHR ಎಂಬ ಸಂಸ್ಥೆಯಲ್ಲಿ ದಶಕಗಳ ಪರ್ಯಂತ ಕಾರುಬಾರು ನಡೆಸಿ ದೇಶದ ಸಂಪತ್ತನ್ನು ತಿಂದು ತೇಗಿದ ಮಹಾನ್ ಇತಿಹಾಸಕಾರರಿಗೆ ಇತಿಹಾಸವನ್ನು ತಿರುಚುವ ಅಗತ್ಯವೇನಿತ್ತು?