ಪುಟಗಳು

ಮಂಗಳವಾರ, ಜೂನ್ 16, 2015

ತನುವನ್ನು ಪಣವಾಗಿಟ್ಟು ಹೋರಾಡುವವನಿಗೂ ಬೇಕಲ್ಲವೆ ಒಳ್ಳೆಯ ದಿನ?

ತನುವನ್ನು ಪಣವಾಗಿಟ್ಟು ಹೋರಾಡುವವನಿಗೂ ಬೇಕಲ್ಲವೆ ಒಳ್ಳೆಯ ದಿನ?

                ಹೌದು ಅಂತಹುದೊಂದು ಕ್ಷಣಗಳಿಗಾಗಿ ಸೈನ್ಯ ಕಾದು ಕುಳಿತಿತ್ತು. ಕಣ್ಣೆದುರೇ ತಮ್ಮ ಸಹವರ್ತಿ ಗುಂಡೇಟು ತಿಂದು ಕುಸಿದು ಬಿದ್ದಾಗಲೂ ಏನೂ ಮಾಡಲಾಗದ ಅಸಹಾಯಕತೆಯಿಂದ ಹೊರ ಬರಲು ಮನ ತುಡಿಯುತ್ತಿತ್ತು. ಶತ್ರುಗಳು ದೇಶದ ಅಂಗುಲ ಅಂಗುಲವನ್ನು ಅತಿಕ್ರಮಿಸಿ ಬರುತ್ತಿರುವಾಗಲೂ ಬಡಿದಟ್ಟಲು ಸಿಗದ "ಅನುಮತಿ" ಎಂಬ ನಾಕಕ್ಷರ ಭಾರತೀಯ ಸೈನ್ಯವನ್ನು ಕಾಡಿದಷ್ಟು ಯಾರನ್ನೂ ಕಾಡಿರಲಿಕ್ಕಿಲ್ಲ! ಶತ್ರು ಎದುರು ನಿಂತು ಗುಂಡು ಹಾರಿಸುತ್ತಿರುವಾಗ ಕೈಯಲ್ಲಿ ಬಂದೂಕು ಹಿಡಿದಿದ್ದರೂ ಪ್ರಯೋಗಿಸಲು ಅನುಮತಿ ಇಲ್ಲದೆ ಅದೆಷ್ಟು ಯೋಧರು ಬಲಿಯಾಗಿರಬಹುದು. "ವೋಟ್ ಬ್ಯಾಂಕ್ ರಾಜಕೀಯ" ಹೆಚ್ಚು ಬಲಿ ತೆಗೆದುಕೊಂಡದ್ದು ಸೈನಿಕರನ್ನೇ! ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ನಂತರ ಭಾರತೀಯರ ಯೋಧರ ಮುಖಕಮಲದಲ್ಲಿ ಮಂದಹಾಸ ಅರಳಿತ್ತು. ಶತ್ರುಗಳ ಉಪಟಳಕ್ಕೆ ಪ್ರತ್ಯುತ್ತರ ನೀಡಲು ಪೂರ್ಣ ಸ್ವಾತಂತ್ರ್ಯ ಲಭಿಸಿತ್ತು. ಇದು ಪರಿಪೂರ್ಣವಾಗಿ ಪ್ರಕಟಗೊಂಡದ್ದು ಜೂನ್ ಒಂಬತ್ತರಂದು ಬರ್ಮಾಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದು ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಮಾಡಿದ  ತಕ್ಕ ಪ್ರತೀಕಾರದಲ್ಲಿ.

          ಎಲ್ಲರ ಪ್ರಶಂಸೆಗೆ ಪಾತ್ರವಾದ, ಬ್ರಹ್ಮ ದೇಶದಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಹುಡುಕಿಕೊಂಡು ಹೋಗಿ ಕೇವಲ 45 ನಿಮಿಷಗಳಲ್ಲಿ ಉಗ್ರರ ಸಂಹಾರ ನಡೆಸಿದ ಭಾರತೀಯ ಯೋಧರ ಈ ಸಾಹಸಕಾರ್ಯ ಹೇಗೆ ನಡೆಯಿತು? ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಇಬ್ಬರೂ ಮಣಿಪುರಕ್ಕೆ ಹೋಗಿ ಕಾರ್ಯಾಚರಣೆಯ ನೀಲಿ ನಕಾಶೆ ತಯಾರಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಾಚರಣೆಗೆ ಸಂಪೂರ್ಣ ಸಮ್ಮತಿ ನೀಡಿದ್ದರು. ಪ್ರಧಾನಿ ಮೋದಿ ಜೊತೆ ಹೋಗಬೇಕಿದ್ದ ಪ್ರವಾಸವನ್ನು ಅಜಿತ್ ದೋವಲ್ ಈ ಕಾರ್ಯಾಚರಣೆಗೋಸ್ಕರ ಕೈಬಿಟ್ಟಿದ್ದರು. ಸೇನಾ ಮುಖ್ಯಸ್ಥರೂ ಕೂಡ ಬ್ರಿಟನ್ ಪ್ರವಾಸದಿಂದ ಹಿಂದೆಸರಿದಿದ್ದರು. ಮಯನ್ಮಾರ್ ಸರ್ಕಾರಕ್ಕೆ ಈ ಕಾರ್ಯಾಚರಣೆಯ ವಿವರವನ್ನು ಭಾರತ ಮೊದಲೇ ತಿಳಿಸಿತ್ತು. ವಿಶೇಷ ತರಬೇತಿ ಪಡೆದ ಪ್ಯಾರಾ ಕಮಾಂಡೋಗಳ ತಂಡಗಳನ್ನು ಅಣಿಗೊಳಿಸಲಾಯಿತು. ಮಂಗಳವಾರ ಮುಂಜಾವು 3 ಗಂಟೆಗೆ ಕಾರ್ಯಾಚರಣೆ ಆರಂಭಿಸಲಾಯಿತು. ವಾಯುಸೇನೆ ಹೆಲಿಕಾಪ್ಟರ್'ಗಳ ಮೂಲಕ ಕಮಾಂಡೋಗಳು ಮಣಿಪುರ, ನಾಗಾಲ್ಯಾಂಡ್ ಗಡಿಭಾಗದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಳಿದರು. ಬಳಿಕ ಕಮಾಂಡೋಗಳು ನಡೆದುಕೊಂಡೇ ಉಗ್ರರ ಅಡಗುದಾಣಗಳನ್ನು ತಲುಪಿದರು. ಎರಡು ಉಗ್ರರ ಗುಂಪು ನೆಲೆಯೂರಿದ್ದರಿಂದ ಎರಡು ಕಮಾಂಡೋಗಳ ಗುಂಪನ್ನು ರಚಿಸಲಾಗಿತ್ತು. ಉಗ್ರರ ಶಿಬಿರಗಳನ್ನು ಸುತ್ತುವರಿದು ಕಮಾಂಡೋಗಳು ಗುಂಡಿನ ದಾಳಿ ನಡೆಸಿದರು. 45 ನಿಮಿಷಗಳ ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಹತರಾದರು. ಬೇರೆ ದೇಶದೊಳಗೆ ಹೋಗಿ ಭಾರತೀಯ ಸೇನೆ ಇಂಥ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲು! ಮತ್ತು ಅದಕ್ಕಾಗಿ 56 ಇಂಚಿನೆದೆಯ ವ್ಯಕ್ತಿಯೇ ಪ್ರಧಾನಿಯಾಗಬೇಕಾಯಿತು!

                 ಕಾರ್ಗಿಲ್ ನಂತರ ಭಾರತೀಯ ಸೇನೆಯ ಬಹುದೊಡ್ಡ ಕಾರ್ಯಾಚರಣೆ ಇದು. ಹೌದು ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಂಡದ್ದಕ್ಕೂ ಕಾರಣವಿದೆ. ಅದು ನಡೆದದ್ದೂ ಎನ್.ಡಿ.ಎ ಸರಕಾರವಿದ್ದಾಗಲೇ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ಲಾಹೋರ್ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು. ಆದರೆ ಕಪಟಿ ಪಾಕಿಸ್ತಾನ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಭಾರತ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಸೈನ್ಯಕ್ಕೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು.

                    ಕಳೆದ ಸೆಪ್ಟೆಂಬರಿನಲ್ಲಿ ಕಾಶ್ಮೀರ ಪ್ರವಾಹದುರಿಗೆ ಸಿಲುಕಿದಾಗ ಜನರ ರಕ್ಷಣೆ ಮಾಡಿದ್ದು ಸೇನೆಯೇ! ಏಳು ದಿನಗಳ ಮಗುವನ್ನು ರಕ್ಷಿಸಿದರು. ಏಳು ವರ್ಷಗಳ ಬಾಲೆಯನ್ನೂ. ಎಪ್ಪತ್ತು ವರ್ಷದ ವೃದ್ಧರನ್ನೂ! ರಕ್ಷಿಸುವಾಗ ಜಾತಿ-ಮತಗಳಾವುವೂ ಅಡ್ಡಿಯಾಗಲಿಲ್ಲ. ಪ್ರತ್ಯೇಕವಾದಿ-ಏಕತಾವಾದಿ, ಪರಿಸರ ರಕ್ಷಕ-ಪರಿಸರ ಭಕ್ಷಕ, ದೇಶಪ್ರೇಮಿ-ದೇಶದ್ರೋಹಿ ಅಂತ ಯಾರನ್ನೂ ವಿಂಗಡಿಸಲಿಲ್ಲ. ಎಲ್ಲರನ್ನೂ ಪ್ರವಾಹದ ವಿರುದ್ದ ಈಜಿ ದಡ ಸೇರಿಸಿದರು. ಪ್ರೀತಿ ತೋರಿದವರನ್ನೂ ರಕ್ಷಿಸಿದರು. ತಮ್ಮ ಮೇಲೆ ಕಲ್ಲೆಸೆದವರನ್ನೂ ರಕ್ಷಿಸಿದರು! ಬಾಂಬಿಟ್ಟವರನ್ನೂ! ಏಕೆಂದರೆ ಭಾರತೀಯ ಸೈನಿಕರಲ್ಲಿರುವುದು ದೇಶದ ಮೇಲಿನ ಅಪರಿಮಿತ ಭಕ್ತಿ! ತತ್ಪರಿಣಾಮದಿಂದ ರಾಗ-ದ್ವೇಷಗಳೆರಡೂ ಮರೆಯಾಗಿ ಸೇವೆಯ ಮೂರ್ತರೂಪವಷ್ಟೇ ಅಲ್ಲಿ ಉಳಿದು ಬಿಡುತ್ತದೆ! ಆದರೆ ನಾವು ಮಾಡುತ್ತಿರುವುದೇನು? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವರ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆಯೇ? ಅವರ  ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ? ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ದೇಹ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ತಾಸಿಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶವನ್ನು ಕಂಡು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ "ಸಾಮಾನ್ಯ ಮನುಷ್ಯನಾದವನು ಸಿಯಾಚಿನ್'ಅಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ಒಂದು ವಿಸ್ಮಯ" ಎಂದಿದ್ದರು.

            ಪಾಕಿಗಳ ಚಿತ್ರಹಿಂಸೆಯಿಂದ ಸಾವನ್ನಪ್ಪಿದ ಸೌರಭ್ ಕಾಲಿಯಾ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಲಯಕ್ಕೆ ಒಪ್ಪಿಸಲೂ ಮೀನ ಮೇಷ ಎಣಿಸಲಾಗುತ್ತೆ(ಈ ಲೇಖನ ಬರೆಯುವ ವೇಳೆಗೆ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲು ಸರಕಾರ ತೀರ್ಮಾನಿಸಿದೆ). ನಿವೃತ್ತ ಯೋಧರ ಏಕ ಶ್ರೇಣಿ-ಏಕ ಪಿಂಚಣಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಈ ದೇಶದ ನಾಗರೀಕರು ಮಾತ್ರವಲ್ಲ, ಭಾರತೀಯ ಸೈನ್ಯಕ್ಕೂ ಭಾಜಪಾ ಕೇಂದ್ರದಲ್ಲಿ ಸರಕಾರ ರಚಿಸಿದ್ದು ಹರ್ಷ ತಂದಿದೆ. ಅವರಿಗೆ ತಮ್ಮ ಸಾಹಸವನ್ನು ತೋರಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ನಿಜ; ಆದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿಳಂಬವಾಗದಂತೆ ಒದಗಿಸಬೇಕಲ್ಲವೆ? ಭಾಜಪವೂ ಕಾಂಗ್ರೆಸಿನಂತೆ ದೇಶ ಕಾಯುವವರನ್ನು ಕಡೆಗಣಿಸಿದರೆ ದೇಶದ ಪಾಡೇನಾದೀತು? ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ  ಪ್ರತಿಮೆ ಇದೆ. ಅದರ ಕೆಳಗೆ " ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ" ಎಂಬ ಒಕ್ಕಣಿಕೆ ಇದೆ. ಹೌದು ನಮ್ಮ ನಾಳೆಯ ಬದುಕಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ನಮ್ಮ ಯೋಧರಿಗೊಂದು ಗೌರವದ ಬದುಕನ್ನು ಕೊಡಲಾರೆವೇ? ಸೈನಿಕರಿಗೂ ಅಚ್ಛೇ ದಿನ್ ಬರಬೇಕಲ್ಲವೇ?

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ “ದಿ ಗ್ರೇಟ್” : ಭಾಗ- 4

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ “ದಿ ಗ್ರೇಟ್” : ಭಾಗ- 4

              ಮೋಸ, ಕುತಂತ್ರಗಳಿಂದ ಉತ್ತರ ಭಾರತದ ರಾಜ್ಯಗಳನ್ನು ತನ್ನ ವಶ ಮಾಡಿಕೊಂಡ ಮೇಲೆ ಅಕ್ಬರನ ದೃಷ್ಟಿ ಬಿದ್ದದ್ದು ಮತದ ಮೇಲೆ! ತನ್ನಂತಹ ಚಕ್ರವರ್ತಿ ಯಾವನೋ ಒಬ್ಬ ಯಕಶ್ಚಿತ್ ಪ್ರವಾದಿಗೆ ತಲೆಬಾಗುವುದೆಂದರೇನು? ತಾನೊಬ್ಬ ದೈವಾಂಶ ಸಂಭೂತನೆಂದೇ ಅಕ್ಬರನ ನಂಬಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಅಕ್ಬರನ ಸುತ್ತ ಮುತ್ತ ಇದ್ದವರೆಲ್ಲಾ ಆತನ ಭಜನೆ ಮಾಡುವವರೇ. ಅಲ್ಲದೇ ಅಡ್ಡ ಬಂದವರನ್ನು ಉದ್ದುದ್ದ ಸಿಗಿದುಬಿಡುತ್ತಾನೆಂಬ ಹೆದರಿಕೆ ಬೇರೆ! ಒಟ್ಟಾರೆ ಮರ್ಕಟವೊಂದು ಮದಿರೆ ಕುಡಿದ ಹಾಗಾಯಿತು  ಅಕ್ಬರನ ಸ್ಥಿತಿ! ಇಸ್ಲಾಂ, ಕ್ರೈಸ್ತ, ಹಿಂದೂಗಳನ್ನು ಸಮನ್ವಯಗೊಳಿಸಿ, ಎಲ್ಲದರಲ್ಲಿನ ಒಳ್ಳೆಯದನ್ನು ತೆಗೆದುಕೊಂಡು ಸರ್ವರಿಗೂ ಆದರಣೀಯ-ಆಚರಣೀಯ ದಾರಿಯನ್ನು ಹುಟ್ಟುಹಾಕಿದ್ದಾನೆಂದು ನಮ್ಮ ಚರಿತ್ರಕಾರರು ಗೀಚಿದ್ದಾರೆ. ಇದರ ಫಲವಾಗಿಯೇ ಅಕ್ಬರ್ "ಲಿಬರಲ್", ಸರ್ವಮತಸಮತ್ವಕ್ಕೆ ಪ್ರಯತ್ನಿಸಿದವ ಎಂದು ಬಲಪಂಥೀಯರ ತಲೆಯಲ್ಲೂ ಹುಳ ಹೊಕ್ಕಿರುವುದು. ಆದರೆ "ದೀನ್ ಇಲಾಹಿ" ಅಪ್ಪಟ ಕಾಗೆ ಬಂಗಾರ!!!

                 ರಾಜನು ದೇವರ ನೆರಳಾದ್ದರಿಂದ, ಹಿಂದೂ ಸ್ಥಾನದಲ್ಲಿ ತಾನೇ ದೊಡ್ಡ ರಾಜನೆಂಬ ಭ್ರಮೆಯಿಂದ ತನ್ನನ್ನೇ ಪ್ರವಾದಿಯಾಗಿ ಘೋಷಿಸಿಕೊಂಡು ಹೊಸಮತವನ್ನು ಸ್ಥಾಪಿಸಹೊರಟ ಅಕ್ಬರ್ 1579ರಲ್ಲಿ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜಪ್ರಮುಖರನ್ನೊಳಗೊಂಡ ಸಭೆಯೊಂದನ್ನು ಆಯೋಜಿಸಿದ. ಅದರಲ್ಲಿ "ತನ್ನ ಸಾಮ್ರಾಜ್ಯದಲ್ಲಿ ಹಲವು ಮತಗಳಿದ್ದು, ಪರಸ್ಪರ ಭೇದಾಭಿಪ್ರಾಯಗಳನ್ನು ಹೊಂದಿವೆ. ಇದು ಸರಿಯಲ್ಲ. ಹಾಗಾಗಿ ಎಲ್ಲದರ ಉತ್ತಮವಾದುದನ್ನು ಆರಿಸಿಕೊಂಡು ಹೊಸಮತವೊಂದನ್ನು ಸೃಷ್ಟಿಸಿ ಅನುಸರಿಸಬೇಕು. ಇಲ್ಲಿರುವವರೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ" ಎಂದು ಆಜ್ಞಾಪಿಸಿದ. ಉದ್ದೇಶವೇನೋ ಒಳ್ಳೆಯದೇ. ಆದರೆ ಆದದ್ದೇನು? ಅಕ್ಬರನ ಭಜನಾಮಂಡಳಿ "ವಿಶ್ವಮತ"ವನ್ನು ಸ್ಥಾಪಿಸಲು ಅವಶ್ಯವಾದ ನಿಯಮಗಳನ್ನು ಚಕ್ರವರ್ತಿಗಳೇ ರೂಪಿಸಬೇಕು ಅಂದುಬಿಟ್ಟರು. ಕಳ್ಳು ಕುಡಿದ ಕಪಿಗೆ ಚೇಳು ಕುಟುಕಿದಂತಾಯಿತು! ಸಧ್ಯದಲ್ಲಿಯೇ ಹೊಸ ಮತವನ್ನು ಸ್ಥಾಪಿಸಲಾಗುವುದೆಂದು ರಾಜ್ಯಾದ್ಯಂತ ಡಂಗುರ ಹೊಡೆಸಿದ. ಹೊಸ ಮತ ಆರಂಭಿಸುವ ಮುನ್ನ ಹಿಂದೂ ಧರ್ಮ, ಕ್ರಿಶ್ಚಿಯನ್ ಮತದ ಆಚಾರ್ಯರನ್ನು ಸಂಪರ್ಕಿಸಲೇ ಇಲ್ಲ! ಮೊಗಲ್ ಸಾಮ್ರಾಜ್ಯದ ಮುಫ್ತಿಯಾಗಿದ್ದ ಕಾಜಿಯಲ್ ಕುಜಾತ್ ಹಾಗೂ ಕೆಲವು ಉಲೇಮಾಗಳ ಕೈಯಲ್ಲಿ ಒಂದು ದಸ್ತಾವೇಜಿಗೆ ಸಹಿ ಮಾಡಿಸಿದ(1579). ಸಿವಿಲ್ ವ್ಯವಹಾರಗಳಲ್ಲಿದ್ದಂತೆ ಪಾರಲೌಕಿಕ ಸಂಗತಿಗಳಲ್ಲೂ ಚಕ್ರವರ್ತಿಯೇ ಅಂತಿಮ ನ್ಯಾಯ ತೀರ್ಮಾನ ನೀಡುವವನೆಂದೂ, ಮುಸ್ಲಿಮ್ ನ್ಯಾಯಕ್ಕೆ ಸಂಬಂಧಿಸಿದಂತೆ ಅಕ್ಬರನೇ ಮಿಕ್ಕೆಲ್ಲಾ ಖಾಜಿಗಳಿಗಿಂತ ಶ್ರೇಷ್ಠನೆಂದೂ, ಅವನ ನಿರ್ಣಯವೇ ಅಂತಿಮವೆಂದು ಅವರ ಕೈಯಲ್ಲಿ ಕಟ್ಟಳೆ ಹೊರಡಿಸಿದ.

ಹೇಗಿತ್ತು ದೀನ್ ಇಲಾಹಿ?

                ಹೊಸ ಮತದಲ್ಲಿ ಸೇರುವಂತಹವರು ಚಕ್ರವರ್ತಿಯ ಸಮ್ಮುಖದಲ್ಲಿ ಸಮರ್ಪಿಸಿಕೊಳ್ಳಬೇಕಿದ್ದ ವಿಷಯಗಳು ನಾಲ್ಕು. ಆಸ್ತಿ, ಜೀವನ, ಗೌರವ, ಮತ! ಈ ನಾಲ್ಕರ ಪೈಕಿ ಒಂದನ್ನು ತ್ಯಾಗ ಮಾಡಿದವನಿಗೆ ಒಂದು ಡಿಗ್ರಿ, ಎರಡನ್ನು ತ್ಯಾಗ ಮಾಡಿದವನಿಗೆ ಎರಡು ಡಿಗ್ರಿ...ಹೀಗೆ ಡಿಗ್ರಿಗಳನ್ನು ನೂತನ ಗುರುಕುಲ ದಯಪಾಲಿಸುತ್ತಿತ್ತು. ಯಾವನಾದರೂ ಹಿಂದೂ ಹೊಸಪಂಥವನ್ನು ಸೇರಬೇಕೆಂದರೆ ತಾನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ದೇವರು-ಆಚರಣೆಗಳನ್ನು ತ್ಯಜಿಸಬೇಕಿತ್ತು. ತನ್ನ ಬಳಿ ಅದ್ಭುತ ಶಕ್ತಿಗಳಿವೆಯೆಂದೂ, ಬಂಜೆಯರಿಗೆ ಮಕ್ಕಳು ಹುಟ್ಟುತ್ತವೆಯೆಂದೂ, ತನ್ನ ಪಾದ ತೊಳೆದ ನೀರನ್ನು ಕುಡಿಯುವುದರಿಂದ ರೋಗಗಳು ವಾಸಿಯಾಗುತ್ತವೆಂದು ಅಕ್ಬರ್ ಮಾಡಿದ ಪ್ರಚಾರಕ್ಕೇನೂ ಕಡಿಮೆ ಇರಲಿಲ್ಲ. ಅನೇಕ ದೌರ್ಭಾಗ್ಯವಂತರು ಅಕ್ಬರನ ಪಾದೋದಕವನ್ನು ಸೇವಿಸಿ ಇಲ್ಲದ ಖಾಯಿಲೆ ಬರಿಸಿಕೊಂಡರು. ಅಕ್ಬರನ ದರಬಾರಿನಲ್ಲಿ ದೀನ್ ಇಲಾಹಿ ಸ್ವೀಕರಿಸಿದ ರಾಜಪ್ರಮುಖರು ಕೇವಲ ಹದಿನೆಂಟು ಮಂದಿ. ಅವರಲ್ಲಿ ಬೀರಬಲ್ ಒಬ್ಬನೇ ಹಿಂದೂ. ಸಾಮಾನ್ಯ ಜನರ ಸಂಖ್ಯೆಯೂ ಅತ್ಯಲ್ಪ. ಅನೇಕ ಹಿಂದೂ ಆಚಾರ-ಸಂಪ್ರದಾಯಗಳನ್ನು ಯಥಾವತ್ ನಕಲು ಹೊಡೆದರೂ ಹಿಂದೂಗಳೇನು ಆಕರ್ಷಿತರಾಗಲಿಲ್ಲ. ಕಾಫಿರರ ರೀತಿಯ ಆಚಾರಗಳೆಂದು ಮುಸ್ಲಿಮರೂ ದೂರಾದರು. ಮುಂದೇನು? ಇದೆಯಲ್ಲ ಅಸ್ತ್ರ...ಸ್ವೀಕರಿಸಬೇಕು ಇಲ್ಲಾ ಶಿಕ್ಷೆಗೆ ಗುರಿಯಾಗಬೇಕು! ಹೊಸ ಮತವನ್ನು ಸ್ವೀಕರಿಸಲಿಚ್ಛಿಸುವವರು ಸೂರ್ಯನು ಪ್ರಜ್ವಲಿಸುವ ಭಾನುವಾರದಂದು ತಮ್ಮ ಮುಂಡಾಸುಗಳನ್ನು ತೆಗೆದಿಟ್ಟು ಅಕ್ಬರನ ಪಾದಮೂಲದಲ್ಲಿ ತಮ್ಮ ತಲೆ ಇರಿಸಿ ಪ್ರಾರ್ಥಿಸಬೇಕಿತ್ತು. ದೇವರ ಪ್ರತಿನಿಧಿಯಾದ ಅರಸ ಅವರನ್ನು ಮೇಲೆಬ್ಬಿಸಿ ತಲೆಯ ಮೇಲೆ ಮುಂಡಾಸನ್ನಿರಿಸಿ ಕೈ ಎತ್ತಿ ಆಶೀರ್ವದಿಸಿ "ಅಲ್ಲಾ ಹು ಅಕ್ಬರ್" ಎಂದು ಬರೆದಿದ್ದ ಒಂದು ಭಿಲ್ಲೆಯನ್ನು ಉದುಗೊರೆಯಾಗಿ ನೀಡುವುದರ ಮೂಲಕ ತನ್ನ ಮತಕ್ಕೆ ಸೇರಿಸಿಕೊಳ್ಳುತ್ತಿದ್ದ. ಭಕ್ತನು ಸದಾ ಆ ಭಿಲ್ಲೆಯನ್ನು ತನ್ನ ಮುಂಡಾಸಿನಲ್ಲಿ ಧರಿಸಿ ಸಂಚರಿಸಬೇಕಿತ್ತು. ನೂತನ ಮತಸ್ಥರು ಪರಸ್ಪರ ಎದುರಾದಾಗ "ಅಲ್ಲಾಹು ಅಕ್ಬರ್" ಎಂದು ಹೇಳಬೇಕಿತ್ತು.

           ಇದರಿಂದ ಹೆಚ್ಚು ಹೊಡೆತ ಬಿದ್ದದ್ದು ಮುಸ್ಲಿಮರಿಗೇ! ನೂತನ ಮತವನ್ನು ವಿರೋಧಿಸಿದರೆಂಬ ಕಾರಣಕ್ಕೆ ಭಾರೀ ಸಂಖ್ಯೆಯ ಷೇಖ್, ಫಕೀರರನ್ನು ದೇಶದಿಂದ ಬಹಿಷ್ಕರಿಸಿ ಕಂದಹಾರಿನ ಮಾರುಕಟ್ಟೆಗಳಲ್ಲಿ ಕುದುರೆಗಳಿಗೆ ಬದಲು ಗುಲಾಮರಂತೆ ಅವರನ್ನು ಮಾರಹಾಕಿದ ಎಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಐದಾರು ವರ್ಷಗಳಲ್ಲಿ ಅವನ ಹೃದಯದಲ್ಲಿ ಇಸ್ಲಾಮಿನ ಬಗೆಗೆ ಲವಲೇಶ ಭಾವನೆಯೂ ಇಲ್ಲದಂತಾಗಿಬಿಟ್ಟಿತ್ತು ಎಂದು ಅಕ್ಬರನ ಸಮಕಾಲೀನ ಬದೌನಿ ಬರೆದಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡುವಂತಿರಲಿಲ್ಲ. ಮೊದಲೇ ಆ ಹೆಸರಿದ್ದರೆ ಬದಲಾಯಿಸಿಕೊಳ್ಳಬೇಕಿತ್ತು. ಗಡ್ಡ ಬೋಳಿಸಬೇಕಿತ್ತು. ಪ್ರಾರ್ಥನೆ, ರಂಜಾನ್ ಉಪವಾಸ, ಮೆಕ್ಕಾ ಯಾತ್ರೆ ಮಾಡುವಂತಿರಲಿಲ್ಲ. ಅರಬ್ಬೀ ಭಾಷೆ, ಕುರಾನಿನ ಅಧ್ಯಯನ, ಷರೀಯತ್ ಕಾನೂನಿಗೆ ಅವಕಾಶವಿರಲಿಲ್ಲ. ಸತ್ತವರ ತಲೆಯನ್ನು ಪೂರ್ವ ದಿಕ್ಕಿಗೆ ಬರುವಂತೆ ಹೂಳಬೇಕಿತ್ತು. ಪೂರ್ವಕ್ಕೆ ತಲೆ ಹಾಕಿ ಮಲಗಬೇಕಿತ್ತು. ಪಶ್ಚಿಮದ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥಿಸುವ ಮುಸ್ಲಿಮರನ್ನು ಅವಮಾನಿಸುವುದು ಇದರ ಉದ್ದೇಶವಾಗಿತ್ತೆಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ.

            ಇದರಿಂದ ಹಿಂದೂಗಳಿಗೇನೂ ಹಾನಿಯಿಲ್ಲ, ಒಳ್ಳೆಯದೇ ಆಯಿತಲ್ವೇ ಅಂತಾ ನೀವು ತಿಳ್ಕೊಂಡಿದ್ದರೆ ಅದು ತಪ್ಪು. ಈ ಮತವನ್ನು ಅಪ್ಪಿಕೊಂಡವರು ಒಂದು ರೀತಿಯಲ್ಲಿ ಇಸ್ಲಾಮಿಗೆ ಮತಾಂತರಗೊಂಡಂತೆಯೇ. ಇದು ಅಕ್ಬರನ ಕಾಲಾನಂತರ ನಿಚ್ಚಳವಾಯಿತು. ಕೆಲವರು ಎಡಬಿಡಂಗಿಗಳಂತೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಉಳಿಯದೆ ಸತ್ತು ಹೋದರು. ಭಾರತೀಯತೆಯನ್ನು, ಹಿಂದೂ ಸಂಸ್ಕೃತಿಯನ್ನು ತುಚ್ಛವಾಗಿ ಕಾಣುವ ಇಂದಿನ "ಸೆಕ್ಯುಲರು"ಗಳು ಬಹುಷಃ ಇವರದ್ದೇ ಸಂತಾನವೇನೋ! ಅಲ್ಲದೆ ಆತ ಕೊನೆಗೆ ಇಸ್ಲಾಮ್ ದ್ವೇಷಿಯಾಗಿ ಬದಲಾದರೂ ಮೊದಲು ಹಿಂದೂಗಳಿಗೆ ಮಾಡಿದ ಅನ್ಯಾಯ ಮುಚ್ಚಿಹೋಗುವುದೇ? ಕಂಡ ಕಂಡ ಮಾನಿನಿಯರನ್ನು ತನ್ನ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದ ಇಂತಹ ಕಾಮುಕನನ್ನು ಹೊಗಳುವವರು ಹೆಣ್ಣನ್ನು ನೋಡುವ ಪರಿ ಯಾವ ರೀತಿ ಇರಬಹುದು? ಹೆಣ್ಣನ್ನು ಬರಿಯ ಭೋಗದ ವಸ್ತುವಾಗಿ ಕಂಡ ಈ ಮೂರ್ಖ ಕೇವಲ ಹೆಣ್ಣು-ಹೊನ್ನು-ಮಣ್ಣನ್ನಷ್ಟೇ ದೋಚಲಿಲ್ಲ, ಇಲ್ಲಿಯ ಜನರ ಬೌದ್ಧಿಕ ಷಂಡತನಕ್ಕೂ ಕಾರಣವಾದ! ಇಲ್ಲದಿದ್ದಲ್ಲಿ ಅದೆಷ್ಟೋ ರಾಜ್ಯಗಳನ್ನು ಸರ್ವನಾಶ ಮಾಡಿದ, ದೇವಾಲಯಗಳನ್ನು ಸುಟ್ಟು ಬೂದಿಯಾಗಿಸಿದ, ಲಕ್ಷ ಲಕ್ಷ ಹಿಂದೂಗಳ ಮತಾಂತರ-ಮಾರಣ ಹೋಮಕ್ಕೆ ಕಾರಣನಾದ, ಲಕ್ಷಾಂತರ ಮಾನಿನಿಯರ ಜೌಹರ್-ಶೀಲಹರಣ-ನರಕಸದೃಶ ಜೀವನಕ್ಕೆ ಕಾರಣನಾದ ಇಂತಹ ಪ್ರಭೃತಿಯನ್ನು "ದಿ ಗ್ರೇಟ್" ಎಂದವರೂ ಅದನ್ನೇ ಒಪ್ಪಿಕೊಳ್ಳುತ್ತಿರುವವರ ಬೌದ್ಧಿಕ ದಾಸ್ಯಕ್ಕೆ ಏನೆನ್ನಬೇಕು? ನನ್ನ ಪ್ರಕಾರ "ಅಕ್ಬರ್ ದಿ ಗ್ರೇಟ್" ಎನ್ನುವವರಷ್ಟು "ವೇಸ್ಟ್ ಜೀವಿ"ಗಳು ಇನ್ನೊಬ್ಬರಿಲ್ಲ!

-ಮುಗಿಯಿತು

ಗುರುವಾರ, ಜೂನ್ 11, 2015

ವೃತ್ತಪುರವಾಗಿದೆ ಭೀಭತ್ಸಪುರ!

ವೃತ್ತಪುರವಾಗಿದೆ ಭೀಭತ್ಸಪುರ!

                 ಒಂದು ಕಡೆ ಭೋರ್ಗರೆವ ರತ್ನಾಕರ, ಇನ್ನೊಂದೆಡೆ ಮುಗಿಲೆತ್ತರದ ಸಹ್ಯಾದ್ರಿಯ ಶಿಖರ, ಹಸಿರ ಸೀರೆಯ ಹೊದ್ದು ನಿಂತ ವನದೇವಿ, ನಡುನಡುವೆ ಅಮೃತವನ್ನೇ ಹೊತ್ತು ಬಳುಕಿ ಹರಿವ ಸುರಭಿ, ಇವೆಲ್ಲದರ ಮಧ್ಯದಲ್ಲಿ ಕಲ್ಪವೃಕ್ಷಗಳಡಿಯಲ್ಲಿ ಧರೆಯ ಸ್ವರ್ಗದಂತೆ ಮಿನುಗುತ್ತಿತ್ತು ವೃತ್ತಪುರ. ಮುಂದೆ ಚಂದದ ಚೆನ್ನಪಟ್ಟಣವೆಂದೆನಿಸಿಕೊಂಡಿತು. ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಒಂಬತ್ತನೇ ಶತಮಾನದಲ್ಲಿ ಹಾಡುವಳ್ಳಿಯಲ್ಲಿದ್ದ, ಶಬ್ದಾನುಶಾಸನ ಬರೆದ ವೈಯ್ಯಾಕರಣಿ, ಜೈನ ಯತಿ ಭಟ್ಟಾಕಳಂಕನ ಕಾರಣದಿಂದ ಭಟ್ಕಳವೆಂಬ ಹೆಸರು ಬಂತೆನ್ನುತ್ತದೆ ಒಂದು ಐತಿಹ್ಯ. ಹೊಯ್ಸಳರು, ಅಳುಪರು, ವಿಜಯನಗರದ ಸಾಳ್ವರು ರಾಜ್ಯಾಭಾರ ಮಾಡುತ್ತಿದ್ದ ಪುಣ್ಯಭೂಮಿ. ಪೋರ್ಚುಗೀಸರ ವಿರುದ್ಧ ಯುದ್ಧ ಸಾರಿದ ಚೆನ್ನಭೈರಾದೇವಿಯ ಆಡಳಿತಕ್ಕೂ, ಕೆಳದಿಯ ಆಡಳಿತಕ್ಕೂ ಇದು ಒಳಪಟ್ಟಿತ್ತು. ೧೬೭೦ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹದಿನೆಂಟು ಬ್ರಿಟಿಷರನ್ನು ಯಮಸದನಕ್ಕಟ್ಟಿದ ಸ್ವಾಭಿಮಾನದ ಭೂಮಿ. ಇಂತಹ ಧರೆಯ ಸ್ವರ್ಗ ನರಕ ಸದೃಶವಾದದ್ದು ಸೌದಿಯ ನವಾಯತರು ಕಾಲಿಟ್ಟ ಮೇಲೆ! ಇವತ್ತು ಭಾರತದಲ್ಲಿ ಎಲ್ಲಿ ಭಯೋತ್ಪಾದಕ ದಾಳಿಯಾದರೂ ಅದರ ತನಿಖೆ ಕೊನೆಗೆ ಬಂದು ನಿಲ್ಲುವುದು ಭಟ್ಕಳದಲ್ಲೇ!

ವೃತ್ತಪುರ ಭೀಭತ್ಸಪುರವಾದದ್ದು ಹೇಗೆ?

                ಭಟ್ಕಳಕ್ಕೂ ಭಯೋತ್ಪಾದನೆಗೂ ನಂಟು ಇಂದು ನಿನ್ನೆಯದಲ್ಲ. 1991ರಲ್ಲಿ ಭಟ್ಕಳದಲ್ಲಿ ಕೋಮುಗಲಭೆ ನಡೆದಿತ್ತು. ಈ ಕೋಮುಗಲಭೆಗೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕಿದ್ದು ಆಘಾತಕಾರಿ ಅಂಶ. ಐಎಸ್ಐ ಶಸ್ತ್ರಾಸ್ತ್ರ ಹಾಗೂ ಆರ್ಡಿಎಕ್ಸಗಳನ್ನು ಭಟ್ಕಳದ ಕರಾವಳಿಗೆ ರವಾನಿಸಿತ್ತು. ಭಟ್ಕಳದ ಪೇಟೆಯೊಳಗೆ ಗಲಭೆ ಸೃಷ್ಟಿಸಿ ಪೊಲೀಸ್ ಹಾಗೂ ಸೇನೆಯ ಗಮನವನ್ನು ಅತ್ತ ಸೆಳೆದು ಶಸ್ತ್ರಾಸ್ತ್ರಗಳನ್ನು ಕರಾವಳಿ ತೀರದಿಂದ ಸುರಕ್ಷಿತವಾಗಿ ಭಟ್ಕಳದಲ್ಲಿರುವ ತಮ್ಮ ತಾಣಗಳಿಗೆ ಸಾಗಿಸಿದ್ದರು ಭಯೋತ್ಪಾದಕರು. ಇದರ ಸೂತ್ರಧಾರಿ ಬೇರ್ಯಾರಲ್ಲ; ಭೂಗತ ಜಗತ್ತು, ಬಾಲಿವುಡ್ಡನ್ನು ಆಳುತ್ತಿರುವ, ಭದ್ರತಾ ಪಡೆಗಳು ಇನ್ನೇನು ಹಿಡಿಯಬೇಕು ಅನ್ನುವಾಗ ರಾಜಕಾರಣಿಗಳ ಕೃಪಾಕಟಾಕ್ಷದಿಂದ ತಪ್ಪಿಸಿಕೊಂಡ, ಈಗ ಪ್ರಧಾನಿ ನರೇಂದ್ರ ಮೋದಿಗೆ ಬೆದರಿ ಪಾಕಿಸ್ತಾನದಲ್ಲಿ ಪ್ರತಿನಿತ್ಯ ತನ್ನ ನಿವಾಸವನ್ನು ಬದಲಾಯಿಸುತ್ತ ಅಂಡಲೆಯುತ್ತಿರುವ ಅದೇ ದಾವೂದ್ ಇಬ್ರಾಹಿಮ್!

ದಾವೂದ್ ಇಬ್ರಾಹಿಂ ಸೌದಿ ಅರೇಬಿಯಾದಿಂದ, ಐಎಸ್ಐ ಸಹಾಯದಿಂದ ಹಡಗುಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಆರ್ಡಿಎಕ್ಸಗಳನ್ನು ರವಾನಿಸಿದ್ದ. ಈ ಶಸ್ತ್ರಾಸ್ತ್ರಗಳು ಗೋವಾ ಬಂದರಿಗೆ ಬಂದು ತಲುಪಿದ್ದವು. ಅಲ್ಲಿಂದ ಸ್ಪೀಡ್ ಬೋಟ್ಗಳ ಮೂಲಕ ಸಮುದ್ರ ಮಾರ್ಗವಾಗಿ ಭಟ್ಕಳಕ್ಕೆ ಇವುಗಳನ್ನು ರವಾನಿಸಲಾಯಿತು. ಭಟ್ಕಳದ ಸಮುದ್ರ ತೀರದಲ್ಲಿರುವ ನೈಸರ್ಗಿಕ ಬಂದರು ನಡುಗಡ್ಡೆಯಿಂದ ಮೀನುಗಾರಿಕಾ ದೋಣಿಗಳ ಮೂಲಕ ನಗರಕ್ಕೆ ತರಲಾಯಿತು. ಅಲ್ಲಿಂದ ಆಂಬುಲೆನ್ಸುಗಳ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಭಾರತದ ವಿವಿಧೆಡೆ ರವಾನಿಸಲಾಗಿತ್ತು. ಭಟ್ಕಳದಲ್ಲಿದ್ದ ಮೊಹಮದ್ ಮೋತಿಶಾ ಇಸ್ಮಾಯಿಲ್ ಕೋಲಾ ಎಂಬಾತನನ್ನು ಬಳಸಿಕೊಂಡು ದಾವೂದ್ ಭಟ್ಕಳದಲ್ಲಿ ಭೂಮಿ ಖರೀದಿಸಿದ್ದ. ಅಲ್ಲಿ ಅಸ್ಪತ್ರೆಯನ್ನು ಸ್ಥಾಪಿಸಲಾಯಿತು. ಈ ಆಸ್ಪತ್ರೆಗೆ ಖರೀದಿಸಿದ್ದ ಆಂಬುಲೆನ್ಸುಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರ, ಆರ್ ಡಿ ಎಕ್ಸ್ ಗಳನ್ನು ಭಾರತದ ಬೇರೆ ಬೇರೆ ಕಡೆ ಸಾಗಿಸಲಾಯಿತು. ಮೋತಿಶಾಗೆ ಸಹಾಯ ಮಾಡಿದವರು ರಿಯಾಜ್, ಇಕ್ಬಾಲ್ ಹಾಗೂ ಯಾಸೀನ್ ಭಟ್ಕಳ್! ಇದಾಗಿ ಎರಡು ವರ್ಷಗಳ ತರುವಾಯ ಮುಂಬೈಯಲ್ಲಿ ಸರಣಿ ಬಾಂಬು ಸ್ಫೋಟ ನಡೆದಿತ್ತು. ಈ ಸ್ಫೋಟಕ್ಕೆ ಬಳಕೆಯಾದದ್ದು ಭಟ್ಕಳದಲ್ಲಿ ಬಂದಿಳಿದ ಆರ್ಡಿಎಕ್ಸೇ! ಮುಂದೆ ಭಾರತದಾದ್ಯಂತ ಆದ ಸ್ಪೋಟಗಳೆಲ್ಲದರ ವಿಚಾರಣೆ ಅಂತಿಮವಾಗಿ ಬಂದು ನಿಲ್ಲುವುದು ಭಟ್ಕಳಕ್ಕೆ. ಒಂದೋ ಅಲ್ಲಿಂದ ಸ್ಫೋಟಕ-ಸಾಮಗ್ರಿಗಳು ಪೂರೈಕೆಯಾಗಿವೆ ಇಲ್ಲಾ ಬಂಧಿತನ ಮೂಲ ಅದೇ ಆಗಿರುತ್ತದೆ. 1991ರ ಕೋಮುಗಲಭೆ ಬಗ್ಗೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ಕೂಲಂಕೂಶ ತನಿಖೆ ಮಾಡಿ ತನ್ನ 2000 ಪುಟಗಳ ವರದಿಯನ್ನು 1997ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಕೋಮುಗಲಭೆಗೆ ಕಾರಣಗಳ ಜೊತೆಗೆ ಭಟ್ಕಳದಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿತ್ತು. ಆದರೆ ಈ ವರದಿ ಇಂದಿಗೂ ವಿಧಾನಮಂಡಲದಲ್ಲಿ ಸಲ್ಲಿಕೆಯಾಗದೆ ಧೂಳು ತಿನ್ನುತ್ತಾ ಕೂತಿದೆ. ಕಾರಣ ಮತ್ತದೇ ಮತಬ್ಯಾಂಕ್ ರಾಜಕಾರಣ!

           ಇದರ ಬಗ್ಗೆ ನಮ್ಮ ಇಂಟಲಿಜೆನ್ಸ್ ಏಜೆನ್ಸಿಗೆ ತಿಳಿದಿರಲಿಲ್ಲವೆ? ತಿಳಿದಿತ್ತು. ಇಂಟೆಲಿಜೆನ್ಸಿ ಅಧಿಕಾರಿ ಅಗರ್ವಾಲ್ ಈ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ಅವರಿಗೆ ರವಾನಿಸಿದ್ದರು. ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಅಗರ್ವಾಲ್ ಮತಾಂಧರಿಗೆ ಬಲಿಯಾದರು. 1996ರ ಏಪ್ರಿಲ್ನಲ್ಲಿ ರಾತ್ರಿ ಊಟ ಮುಗಿಸಿ ಟಿವಿ ನೋಡುತ್ತಿದ್ದ ಶಾಸಕ ಡಾ. ಯು. ಚಿತ್ತರಂಜನ್ ಅವರನ್ನು ಮನೆಯಲ್ಲಿಯೇ ಹತ್ಯೆ ಮಾಡಲಾಯಿತು. ಅವರ ಹತ್ಯೆಯಲ್ಲಿ ಏ.ಕೆ. 47 ಬಳಕೆಯಾಗಿತ್ತು. ಗಣೇಶೋತ್ಸವ, ರಾಮನವಮಿ, ಈದ್ ಸಂದರ್ಭಗಳಲ್ಲಿ ಇಲ್ಲಿಗೆ ಹೆಚ್ಚಿನ ಪೊಲೀಸ್ ತುಕಡಿಗಳನ್ನು ನೇಮಿಸುವುದು ಸಾಮಾನ್ಯವಾಯಿತು. 2004ರ ಮೇ 1ರ ರಾತ್ರಿ ಐಸ್ಕ್ರೀಂ ಪಾರ್ಲರ್ ಮುಚ್ಚಿ ಮನೆಗೆ ಬರುತ್ತಿದ್ದ ಸ್ಥಳೀಯ ಬಿಜೆಪಿ ನಾಯಕ ತಿಮ್ಮಪ್ಪ ನಾಯ್ಕ ಅವರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದರು. ಸ್ಥಳೀಯರ ಸಹಕಾರವಿಲ್ಲದೆ ಈ ಚಟುವಟಿಕೆಗಳು ನಡೆಯಲು ಸಾಧ್ಯವೇ? ಈ ಚಟುವಟಿಕೆಗಳು ಆರಂಭವಾಗುವ ಮೊದಲೇ ದುಬೈಯಿಂದ ಕೆಲವು ವ್ಯಕ್ತಿಗಳು ಭಟ್ಕಳದ ಮೂಲನಿವಾಸಿಗಳಿಗೆ ಮೂರುಪಟ್ಟು ಮೌಲ್ಯಕ್ಕೆ ಅಲ್ಲಿನ ಆಯಕಟ್ಟಿನ ಜಾಗಗಳನ್ನು ಖರೀದಿಸಿದ್ದರು. ತಮಗೆ ಅನುಕೂಲಕರವಾಗುವಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅಲ್ಲಿನ ಮನೆಗಳು ಹೇಗಿವೆಯೆಂದರೆ ಓಣಿಯ ಮೊದಲ ಮನೆ ಹೊಕ್ಕರೆ ಓಣಿಯ ಕೊನೆಯ ಮನೆಯಿಂದ ಹೊರಬರಬಹುದು, ಅಂತಹ ನಿರ್ಮಾಣಗಳು. ಮುಂದೆ ಏಕಾಏಕಿ ಇವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮಾರುಕಟ್ಟೆ, ರಿಯಲ್ ಎಸ್ಟೇಟ್ ಮುಂತಾದುವುಗಳಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿಕೊಂಡ ಇವರು ಮಾದಕದ್ರವ್ಯ ಕಳ್ಳಸಾಗಣೆಯನ್ನೂ ಮಾಡತೊಡಗಿದರು. ಮಾದಕದ್ರವ್ಯಗಳ ಜೊತೆಜೊತೆಗೇ ಶಸ್ತ್ರಾಸ್ತ್ರಗಳೂ ಬರತೊಡಗಿದವು. ಇಂದು ಭಾರತದಾದ್ಯಂತ ಈ ಜಾಲ ಬೆಳೆದಿದೆ.

                 ರಿಯಾಜ್ ಭಟ್ಕಳನ ತಂದೆ ಭಟ್ಕಳದಿಂದ ಮುಂಬೈಗೆ ಬಂದು ಪರ್ಸ್ ತಯಾರಿಸುವ ಉದ್ಯಮದಲ್ಲಿ ತೊಡಗಿಕೊಂಡಿದ್ದ. ಕುರ್ಲಾದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಮಾಡುತ್ತಿದ್ದ ರಿಯಾಜ್ ‘ಸಿಮಿ’ (ಸ್ಟುಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ)ಯ ಸದಸ್ಯನಾಗಿದ್ದ. ಇಸ್ಲಾಂ ಕುರಿತು ಉಗ್ರ ಭಾಷಣಗಳನ್ನು ಮಾಡುವ ಡಾ. ಝಕೀರ್ ನಾಯ್ಕ್ ಎಂಬ ದೇಶದ್ರೋಹಿಯ ಅಭಿಮಾನಿಯಾಗಿದ್ದ. ಮನೆಯಲ್ಲಿ ಓದಲು ಜಾಗವಿಲ್ಲ ಎಂಬ ನೆಪವೊಡ್ಡಿ ‘ಸಿಮಿ’ಯ ಗ್ರಂಥಾಲಯಕ್ಕೆ ಆತ ಓದಲು ಹೋಗುತ್ತಿದ್ದ. ಮೊದಲೇ ಮತದ ಅಮಲಿನಲ್ಲಿ ತೇಲಾಡುತ್ತಿದ್ದ ಆತನನ್ನು ಉಗ್ರರ ಸಿದ್ಧಾಂತಗಳು ಆಕರ್ಷಿಸಿದವು. ಕೆಲವೇ ದಿನಗಳಲ್ಲಿ ಆತ ಪ್ರಚೋದನಾಕಾರಿ ಭಾಷಣಗಳನ್ನು ಮಾಡಲಾರಂಭಿಸಿದ. ನ್ಯೂಯಾರ್ಕ್ನಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ 2001ರ ಸೆಪ್ಟೆಂಬರ್ 11ರಂದು ಅಲ್ ಖೈದಾ ಉಗ್ರರ ದಾಳಿ ನಡೆದ ಮೇಲೆ ಹಲವು ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಅವುಗಳಲ್ಲಿ ‘ಸಿಮಿ’ ಸಹ ಒಂದು. ‘ಸಿಮಿ’ಯ ಮುಂಬೈ ಕಛೇರಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ನಂತರ ಬೆದರಿದ ರಿಯಾಜ್ ಮತ್ತು ಆತನ ಕುಟುಂಬ ಮಂಗಳೂರು ಬಳಿಯ ಉಳ್ಳಾಲಕ್ಕೆ ಪರಾರಿಯಾದರು. ಈ ಸಮಯದಲ್ಲಿ ರಿಯಾಜ್ ‘ಇಂಡಿಯನ್ ಮುಜಾಹಿದೀನ್’ ಸಹ ಸಂಸ್ಥಾಪಕರಾದ ಅಬ್ದುಲ್ ಸುಭಾನ್ ಖುರೇಷಿ, ಸಾಧಿಕ್ ಶೇಖ್ ಅವರೊಂದಿಗೆ ಗುರುತಿಸಿಕೊಂಡ. ಜಿಹಾದಿಯಾಗಿ ಬದಲಾಗಿದ್ದ ಗುಜರಾತ್ ಮೂಲದ ಭೂಗತ ಪಾತಕಿ ಅಮೀರ್ ರಜಾ ಖಾನನ ಸಂಪರ್ಕವೂ ಏರ್ಪಟ್ಟಿತ್ತು. ಅಮೀರ್ ಮತ್ತು ರಿಯಾಜ್ ಭಟ್ಕಳ್ ಇತರ ಗೆಳೆಯರೊಂದಿಗೆ ಪಾಕಿಸ್ತಾನ ಪ್ರವೇಶಿಸಿದರು. ಇವರೆಲ್ಲ ಲಷ್ಕರ್–ಎ–ತೈಯಬಾ ಸಂಘಟನೆಯ ಶಿಬಿರದಲ್ಲಿ ಶಸ್ತ್ರಾಸ್ತ್ರ ನಿರ್ವಹಣೆ, ಸ್ಫೋಟಕಗಳನ್ನು ಜೋಡಿಸುವ ತರಬೇತಿ ಪಡೆದರು. ಅಮೀರ್ ರಜಾ ಖಾನ್ ಇದಕ್ಕೆಲ್ಲ ಹಣ ಒದಗಿಸತೊಡಗಿದ. ಪಾಕಿಸ್ತಾನದಿಂದ ಬಂದ ಮೇಲೆ ರಿಯಾಜ್ ಭಟ್ಕಳದ ಜಾಲಿ, ತೆಂಗಿನಗುಂಡಿ ಸಮುದ್ರ ತೀರದಲ್ಲಿ ತನ್ನ ತಂಡದವರಿಗೆ ಶಸ್ತ್ರಾಸ್ತ್ರ ನಿರ್ವಹಣೆ ತರಬೇತಿ ನೀಡಿದ್ದ. ‘ಇಂಡಿಯನ್ ಮುಜಾಹಿದೀನ್’ ಸ್ಥಾಪನೆಗೆ ಪೂರ್ವಭಾವಿ ಮಾತುಕತೆ, ತರಬೇತಿ ಭಟ್ಕಳದಲ್ಲಿ ನಡೆದಿತ್ತು. ಅಚ್ಚರಿ ಎಂದರೆ ಭಟ್ಕಳದ ಸಮುದ್ರ ತೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದ್ದುದು ಪೊಲೀಸರಿಗೂ ತಿಳಿದಿತ್ತು. ಆದರೆ ಅವರ ಕೈಗಳನ್ನು ಸರಕಾರ ಕಟ್ಟಿಹಾಕಿತ್ತು. ಇನ್ನೊಬ್ಬ, ಯಾಸಿನ್ ಭಟ್ಕಳ್ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ ನಂತರ ಅಪ್ಪನ ವ್ಯವಹಾರದಲ್ಲಿ ಕೈಜೋಡಿಸಲು ದುಬೈಗೆ ತೆರಳಿದ್ದ. ಅಪ್ಪನ ಜತೆ ಜಗಳವಾಡಿ ಮಾತುಬಿಟ್ಟು ಕೆಲ ವರ್ಷಗಳ ಕಾಲ ಮನೆಮಂದಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. ಉಗ್ರ ಸಂಘಟನೆಗಳಾದ ಲಷ್ಕರ್–ಎ–ತೈಯಬಾ, ತಾಲಿಬಾನ್ ಸಂಘಟನೆಗಳ ಒಡನಾಡಿಯಾಗಿ, ಇಂಡಿಯನ್ ಮುಜಾಹಿದೀನ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಯಾಸಿನ್ ‘ಐಎಂ’ನ ಪ್ರಮುಖ ಕಮಾಂಡರ್. ಎಲ್ಲೇ ಸ್ಫೋಟ ನಡೆಯಲಿ ಸ್ಫೋಟಕಗಳನ್ನು ಪೂರೈಸುವ ಕೆಲಸ ಈತನೇ ಮಾಡುತ್ತಿದ್ದ. ಪುಣೆಯ ಜರ್ಮನ್ ಬೇಕರಿ, ಹೈದರಾಬಾದ್ನ ದಿಲ್ಸೂಖ್ ನಗರಗಳಲ್ಲಿ ಸ್ಫೋಟ ನಡೆಯುವ ಮುಂಚೆ ಈತ ಓಡಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ  ದಾಖಲಾಗಿತ್ತು. ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಜಾಡು ಹಿಡಿದು ದೇಶಾದ್ಯಂತ ಉಗ್ರರಿಗೆ ಬಲೆ ಬೀಸಿದ್ದ ಪೊಲೀಸರಿಗೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ ಬಿಹಾರ – ನೇಪಾಳ ಗಡಿಯಲ್ಲಿ 2013ರ ಆಗಸ್ಟ್ನಲ್ಲಿ ಯಾಸಿನ್ ಭಟ್ಕಳ್ ಸೆರೆಸಿಕ್ಕಿದ.

              ಭಟ್ಕಳದ ನವಾಯತ್ ಕಾಲೋನಿಯ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಭಟ್ಕಳ್ ಸಹೋದರರ ಗರಡಿಯಲ್ಲಿ ಬೆಳದು ಇಂಡಿಯನ್ ಮುಜಾಹಿದ್ದಿನ್ ಸೇರಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಒಳಗೆ ಭಿನ್ನಮತವಿತ್ತು. ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಯಾಸೀನ್ ಭಟ್ಕಳ್ ಈ ವಿಷಯ ತಿಳಿಸಿದ್ದ. ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಸೇನೆಯ ವಿರುದ್ಧ ಹೋರಾಟ ನಡೆಸಬೇಕು ಎಂದು ಸುಲ್ತಾನ್ ಅರ್ಮರ್ ಹಾಗೂ ಇತರೆ ಯುವಕರು ಅಪೇಕ್ಷೆ ಪಟ್ಟಿದ್ದರು. ಈ ಬೇಡಿಕೆಯನ್ನು ಐಎಸ್ಐ ನಿರಾಕರಿಸಿತ್ತು. ಆದ್ದರಿಂದ ಆಂತರಿಕ ಬೇಗುದಿಯೂ ಹೆಚ್ಚಾಗಿತ್ತು. ಯಾಸೀನ್ ಭಟ್ಕಳ್ನ ಬಂಧನದ ಬಳಿಕ ಸುಲ್ತಾನ್ ಅರ್ಮರ್ ಭಿನ್ನಮತಿಯ ಯುವಕರ ಗುಂಪು ಸಿದ್ಧಪಡಿಸಿಕೊಂಡ. ಅತ್ತ ಐಎಸ್ಐಎಸ್ ಉಗ್ರ ಸಂಘಟನೆ ಸ್ಥಾಪನೆಯಾಗಿ ಖಲೀಫನ ನೇಮಕವಾಗಿತ್ತು. ಇದು ಅರ್ಮರ್ನನ್ನು ಆಕರ್ಷಿಸಿತು. ಐಎಸ್ಐಎಸ್ ಉಗ್ರ ಸಂಘಟನೆಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಅರ್ಮರ್ ಅನ್ಸರ್-ಉಲ್-ತಾವ್ಹಿದ್ ಸ್ಥಾಪಿಸಿದ್ದಾನೆ. ಇದು ಇಂಡಿಯನ್ ಮುಜಾಹಿದ್ದಿನ್, ಐಎಸ್ಐಎಸ್ ಹಾಗೂ ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟಕ್ಕೆ ಸುಲ್ತಾನ್ ಅರ್ಮರ್ನನ್ನೇ ಆಮೀರ್ ಎಂದು ಘೋಷಿಸಲಾಗಿದೆ. ಭಟ್ಕಳದ ಸುಲ್ತಾನ್ ಅರ್ಮರ್ ಭಾರತದಿಂದ ಸುಮಾರು 250 ಯುವಕರನ್ನು ಒಗ್ಗೂಡಿಸಿ ಆಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ ವಿರುದ್ಧ ಹೋರಾಟ ನಡೆಸಲು ಸಜ್ಜುಗೊಳಿಸುವುದಾಗಿ ತಿಳಿಸಿದ್ದ. ಅದಕ್ಕಾಗಿ ಭಟ್ಕಳದಿಂದಲೂ ಯುವಕರನ್ನು ಒಗ್ಗೂಡಿಸಲು ಆರಂಭಿಸಿದ್ದ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ಭಾರತ ತೊರೆಯಲು ಸಿದ್ಧವಾಗಿದ್ದ ಯುವಕರನ್ನು ತಡೆದು ಕೌನ್ಸೆಲಿಂಗ್ ಮಾಡಲಾಯಿತು. ಆದರೆ ಭಟ್ಕಳದಲ್ಲಿ ಮಾತ್ರ ಸುಲ್ತಾನ್ ಅರ್ಮರ್ ಸೃಷ್ಟಿಸಿದ ಕಾವು ಇನ್ನೂ ಹಾಗೆಯೇ ಉಳಿದಿದೆ. ಅನ್ವರ್ ಬೇಲಿಯನ್ನು ಸುಲ್ತಾನ್ ಅರ್ಮರ್ ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆಯತ್ತ ಸೆಳೆದಿದ್ದ. ಭಟ್ಕಳದಲ್ಲಿ ಆಟೋ ಹಾಗೂ ಟೆಂಪೊ ಓಡಿಸುತ್ತಿದ್ದ ಅನ್ವರ್ ಬೇಲಿ ಕುವೈತ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ. ನಂತರ ದುಬೈಗೆ ತೆರಳಿ ಕಾರು ಚಾಲಕನಾದ. 2013ರವರೆಗೂ ಭಟ್ಕಳದಲ್ಲಿರುವ ಕುಟುಂಬದ ಜೊತೆ ಅನ್ವರ್ ಸಂಪರ್ಕದಲ್ಲಿದ್ದ. ಆ ಬಳಿಕ ಕುಟುಂಬದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಾನೆ. ಅನ್ಸರ್-ಉಲ್-ತಾವ್ಹಿದ್ ಪರವಾಗಿ ಅಫ್ಘಾನಿಸ್ತಾನದಲ್ಲಿ ಹೋರಾಟ ಆರಂಭಿಸಿ ಸಾವನ್ನಪ್ಪಿದ್ದ. 2014ರ ಜುಲೈ ತಿಂಗಳಲ್ಲಿ ಅನ್ಸರ್-ಉಲ್-ತಾವ್ಹಿದ್ ಸಂಘಟನೆಯ ವೆಬ್ಸೈಟ್ನಲ್ಲಿ ಈತ ಹುತಾತ್ಮನಾಗಿದ್ದಾನೆ ಎಂದು ಪ್ರಕಟಿಸಲಾಗಿದೆ.

                ಈ ವರ್ಷ ಜನವರಿ ೧೩ರ ರಾತ್ರಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸೆರೆಸಿಕ್ಕ ಭಟ್ಕಳ ಮೂಲದ  ಉಗ್ರ ರಿಯಾಜ್ ಅಹಮದ್ ಸಯ್ಯದಿ ಹವಾಲಾ ಹಣದ ಕಿಂಗ್ ಪಿನ್ ಎಂದು ತನಿಖೆಯ ವೇಳೆ ದೃಢಪಟ್ಟಿದೆ. ಕಳೆದ 10 ವರ್ಷಗಳಿಂದ ದುಬೈನಲ್ಲಿದ್ದ ಈತ ಹಾರ್ಡ್ವೇರ್ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನ ಹಾಗೂ  ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ರಿಯಾಜ್ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹವಾಲಾ ಹಣವನ್ನು ಸಾಗಾಣಿಕೆ ಮಾಡುತ್ತಿದ್ದ. ದುಬೈನಿಂದ ಬರುತ್ತಿದ್ದ ಈತ ಅಲ್ಲಿಂದ ಸಾಕಷ್ಟು ಹಣ ಪಡೆದು ಮಹಾರಾಷ್ಟ್ರ, ಕೇರಳ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ, ಗೋವಾ, ದೆಹಲಿ ಸೇರಿದಂತೆ ಮತ್ತಿತರ ಕಡೆ ಇರುವ ಭಯೋತ್ಪಾದನೆ ಸಂಘಟನೆಗಳಿಗೆ ಹವಾಲಾ ಹಣ ವಿತರಣೆ ಮಾಡುತ್ತಿದ್ದ. ದುಬೈನಲ್ಲಿದ್ದಾಗಲೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸಹ ಸಂಸ್ಥಾಪಕ ಹಾಗೂ ಸದ್ಯಕ್ಕೆ ಎನ್ಐಎ ವಶದಲ್ಲಿರುವ ಯಾಸಿನ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳರನ್ನು ಈತ ಅನೇಕ ಬಾರಿ ಭೇಟಿ ಮಾಡಿದ್ದ. ಭಾರತದ ಮಹಾನಗರಗಳಲ್ಲಿ ಸ್ಫೋಟ ನಡೆಸಬೇಕೆಂದು ಯಾಸಿನ್ ಭಟ್ಕಳ್ ಹಾಗೂ ರಿಯಾಜ್ ಭಟ್ಕಳ್ ಸಹೋದರರು ಈತನಿಗೆ ನಿರ್ದೇಶನ ನೀಡಿದ್ದರು. ಇವರ ಸೂಚನೆಯಂತೆ ಈತ ಹವಾಲಾ ಹಣ ಪಡೆದುಕೊಂಡು ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿರುವ  ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ. ಅಲ್ಲದೆ, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಾಕಷ್ಟು ಪಳಗಿದ್ದ ರಿಯಾಜ್, ಬಾಂಬ್ ಸ್ಫೋಟಕ್ಕೆ ಬೇಕಾದ ಅಮೋನಿಯಂ ನೈಟ್ರೇಟ್, ಜಿಲೆಟಿನ್ ಕಡ್ಡಿ, ಪಿವಿಸಿ ಪೈಪ್ಗಳನ್ನು ಸಹ ಪೂರೈಕೆ ಮಾಡುತ್ತಿದ್ದ. ಪೊಲೀಸ್ ಮೂಲಗಳ ಪ್ರಕಾರ, ರಿಯಾಜ್ ಕಳೆದ 10 ವರ್ಷಗಳಿಂದ ಭಾರತದಲ್ಲಿ ಅನೇಕ ಭಯೋತ್ಪಾದನೆ ಸಂಘಟನೆಗಳಿಗೆ ಮಧ್ಯವರ್ತಿಯಾಗಿ ಹಣ ಪೂರೈಕೆ ಮಾಡುತ್ತಿದ್ದ. ಭಾರತದಲ್ಲಿರುವ ತಮ್ಮ ಸಹಚರರಿಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದರೆ ಅದು ಬಹಿರಂಗಗೊಳ್ಳಬಹುದೆಂಬ ಆತಂಕದಿಂದ ಎಲ್ಲ ಸೂಚನೆಗಳನ್ನೂ ಅರೇಬಿಕ್ ಭಾಷೆಯಲ್ಲೇ ಬಳಸಲಾಗುತ್ತಿತ್ತು. ಮೊಬೈಲ್ ಸಂಭಾಷಣೆ, ಇ-ಮೇಲ್, ಟ್ವಿಟರ್ ಸೇರಿದಂತೆ ಮತ್ತಿತರ ಕಡೆ ಅರೇಬಿಕ್ ಭಾಷೆಯನ್ನೇ ಬಳಕೆ ಮಾಡಲಾಗಿದೆ. ಭಟ್ಕಳದವನೇ ಆದ ಸಯ್ಯದ್ ಇಸ್ಮಾಯಿಲ್ ಅಫಕ್ ಪತ್ನಿಯನ್ನು ನೋಡುವ ನೆಪದಲ್ಲಿ ಆಗಾಗ್ಗೆ ಕರಾಚಿಗೆ ತೆರಳಿ ಭಟ್ಕಳ್ ಸಹೋದರರನ್ನು ಭೇಟಿ ಮಾಡಿ ಹವಾಲಾ ಹಣ ಪಡೆಯುತ್ತಿದ್ದ. ಹೆಸರಿಗೆ ಮಾತ್ರ ಹೋಮಿಯೋಪತಿ ವೈದ್ಯನಾಗಿದ್ದ ಅಫಕ್  ಭಯೋತ್ಪಾದನೆ ಸಂಘಟನೆಗಳಿಗೆ ಹಣ ಸೇರಿದಂತೆ ಮತ್ತಿತರ ನೆರವು ನೀಡುತ್ತಿದ್ದ.

             ಹೀಗೆ ಭಟ್ಕಳವೆನ್ನುವುದು ಭಯೋತ್ಪಾದಕರ ಸ್ವರ್ಗವಾಗಿ ಬದಲಾಗಿ ಹೋಗಿದೆ. ಇದಕ್ಕೆ ಮುಖ್ಯ ಕಾರಣ ಮತಾಂಧತೆ. ಹಾಗೂ ಅದನ್ನು ಪೋಷಿಸುವ ಮದರಸಾಗಳು, ತಮ್ಮವನು ಮುಗ್ಧ ಎನ್ನುವ ಮುಸ್ಲಿಮರು,ಮುಗ್ಧರನ್ನು ಬಂಧಿಸುತ್ತಿದ್ದಾರೆಂದು ಕೂಗಾಡುವ ದೇಶದ್ರೋಹಿ ಮಾಧ್ಯಮಗಳು. ಭಟ್ಕಳವನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಭಾರತದೊಳಗೆ ಹಲವು ಪಾಕಿಸ್ತಾನಗಳಾಗುವುದು ಸುಸ್ಪಷ್ಟ. ಯಾವುದೇ ಮತವಾಗಲಿ ಬದುಕಿ-ಬದುಕಲು ಬಿಡಿ ಎನ್ನುವ ಮೂಲ ತತ್ವವನ್ನೇ ಅರಿಯದಿದ್ದಲ್ಲಿ ನಷ್ಟ ಅದಕ್ಕೇ. ಇವತ್ತು ತನ್ನದ್ದಲ್ಲದ್ದೆಲ್ಲವನ್ನೂ ಅಸಹನೆಯಿಂದ ಕಂಡು ನಾಶ ಮಾಡುತ್ತಾ ಬರುವ ಅದು ಎಲ್ಲಾ ಮುಗಿದ ಮೇಲೆ ಸುಟ್ಟುಕೊಳ್ಳುವುದು ತನ್ನನ್ನೇ. ಸಂಪೂರ್ಣ ಇಸ್ಲಾಂಮಯವಾಗಿರುವ ದೇಶಗಳಲ್ಲಿ ಈ ಸಂಗತಿ ಈಗಾಗಲೇ ಅರಿವಿಗೆ ಬರುತ್ತಿದೆ. ಇಸ್ಲಾಂ ಜಗತ್ತಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಇಸ್ಲಾಮಿಕ್ ಭಯೋತ್ಪಾದನೆ ನಿಲ್ಲಬೇಕಾದರೆ ಮುಸ್ಲಿಮರೇ ಭಯೋತ್ಪಾದಕರ ವಿರುದ್ಧ ಸೆಟೆದು ನಿಲ್ಲಬೇಕಾದ ಅಗತ್ಯತೆ ಇದೆ. ಆದರೆ ಅವರಿಂದ ಕನಿಷ್ಟ ವಿರೋಧಿಸುವ ಹೇಳಿಕೆಯೇ ಬರುತ್ತಿಲ್ಲ. ಮದರಸಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಶಿಕ್ಷಣ ನೀಡಬೇಕಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಅನ್ಯ ಮತದವನನ್ನು ಕಾಫಿರನಂತೆ ಕಾಣದೆ ಮನುಷ್ಯನನ್ನಾಗಿ ಕಾಣು ಎಂದು ಕುರಾನಿನಲ್ಲಿ ಬದಲಾಯಿಸಬೇಕಾದ ಅವಶ್ಯಕತೆ ಇದೆ!

ಮಂಗಳವಾರ, ಜೂನ್ 9, 2015

ಹೌದು. ಯೋಗ ಹಿಂದೂಗಳದ್ದೇ! ಏನೀಗ?

ಹೌದು. ಯೋಗ ಹಿಂದೂಗಳದ್ದೇ! ಏನೀಗ?

                 ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆಯ ಬಳಿಕ ವಿಶ್ವಸಂಸ್ಥೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತು. ಈ ನಿರ್ಣಯಕ್ಕೆ 175 ರಾಷ್ಟ್ರಗಳು ಬೆಂಬಲ ಸೂಚಿಸಿದವು. ಅವುಗಳಲ್ಲಿ 41 ಮುಸ್ಲಿಂ ರಾಷ್ಟ್ರಗಳೂ ಸೇರಿದ್ದವು!  ವಿಶ್ವಸಂಸ್ಥೆಯ ಇತಿಹಾಸದಲ್ಲೇ ಭಾರತದ ನಿರ್ಣಯವೊಂದಕ್ಕೆ ಇಷ್ಟೊಂದು ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಇದೇ ಮೊದಲು. ಅಮೆರಿಕದ ಸಂಸತ್ತು ಸಂಸದೀಯ ಯೋಗ ಸಂಘವನ್ನೇ ರಚಿಸಿತು. ಜೂನ್ 21ಕ್ಕಾಗಿ ಹೆಚ್ಚಿನ ಎಲ್ಲಾ ರಾಷ್ಟ್ರಗಳು ಸಿದ್ಧತೆಯಲ್ಲಿ ತೊಡಗಿರುವ ಈ ವೇಳೆಯಲ್ಲಿ ಯೋಗದ ಜನ್ಮಭೂಮಿಯಲ್ಲೇ ವಿರೋಧ ವ್ಯಕ್ತವಾಗಿದೆ. ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಶಾಲೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರ ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಿ, ಅದರ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿತು. ಅಲ್ಲದೇ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಯಿತು. ಸೂರ್ಯ ನಮಸ್ಕಾರ, ಯೋಗ ಮುಸ್ಲಿಂ ಧರ್ಮದ ನಂಬಿಕೆಗಳಿಗೆ ವಿರೋಧಿ ಎಂದು ದೂರಿದ ಸಂಘಟನೆ ಮುಸ್ಲಿಮರು ಕೇವಲ ಅಲ್ಲಾನಿಗೆ ಮಾತ್ರ ತಲೆಬಾಗುವುದು. ಅಲ್ಲದೇ  ಸೂರ್ಯನಮಸ್ಕಾರ ಮಾಡಿದರೆ ಕೆಡುಕುಂಟಾಗುತ್ತದೆ ಎಂದು ವಾದಿಸುತ್ತಿದೆ.

                      ತಮ್ಮ ಮತ ಹುಟ್ಟುವುದಕ್ಕೆ ಮುನ್ನ ಜಗತ್ತೇ ಇರಲಿಲ್ಲ ಎನ್ನುವ ಮತಾಂಧರಿಗೆ ಯೋಗದ ಮಹತ್ವ ಅರಿವಾಗೋದು ಹೇಗೆ? ಈ ಮತಾಂಧತೆಯ ಪ್ರಕೋಪವನ್ನು ವಿಶ್ಲೇಷಿಸುವ ಮುನ್ನ ಯೋಗದ ಇತಿಹಾಸವನ್ನೊಮ್ಮೆ ಅವಲೋಕಿಸೋಣ. ಹರಿಯ ಮಿಡುಕಕ್ಕೆ ಶಿವತಾಂಡವವೇ ಕಾರಣವೆಂಬ ಸುಳಿವು ತಿಳಿದು ಶಿವತಾಂಡವವನ್ನು ಪ್ರತ್ಯಕ್ಷೀಕರಿಸಿಕೊಳ್ಳಲು ಮುನಿಪತ್ನಿಯೊಬ್ಬಳ ಗರ್ಭದಲ್ಲಿ ಪತಂಜಲಿಯಾಗಿ ಜನಿಸಿ ತಪಸ್ಸಿಗೆ ತೊಡಗುತ್ತಾನೆ ಶೇಷ. ತಪಸ್ಸಿಗೊಲಿದು ಭಕ್ತನ ಕೋರಿಕೆಯಂತೆ ತಾಂಡವಕ್ಕೆ ತೊಡಗುವ ಯೋಗಿ ಭೂಷಣ ಶಿವನ ತಾಂಡವದ ಒಂದೊಂದು ಭಂಗಿಯೂ ಪತಂಜಲಿಗೆ ಯೋಗದ ಒಂದೊಂದು ಆಸನವಾಗಿ ಗೋಚರಿಸುತ್ತದೆ. ಭುವಿಯ ಪ್ರಾಕೃತ ಭಾಷೆ ಡಮರಿನ ರವದಿ ಸಂಸ್ಕೃತವಾದ ಪರಿಯಂತೆ ಶಿವನ ತನುವಿನ್ಯಾಸ ಪತಂಜಲಿಗೆ ಯೋಗ ಕಲ್ಪಿಸಿತು. ಶಿವನ ತನು ವಿನ್ಯಾಸ, ಉಸಿರಿನ ನಿಯಂತ್ರಣ, ಅಂಗಾಂಗಗಳ ಭಂಗಿ, ಶರೀರದ ಸಮತೋಲನ ಇವೆಲ್ಲವೂ ಯೋಗಿಗೆ ಯೋಗವಾಗಿ ಗೋಚರಿಸಿತು. ಅಧಿ ಆತ್ಮಿಕ ತಾಪದಿಂದ ಬಳಲುತ್ತಿರುವ ಲೋಕದ ಜನರ ತಾಪವನ್ನು ಶಮನ ಮಾಡಲು ಶಿವನ ತಾಂಡವದ ರಹಸ್ಯ ಶಿವನ ಆಜ್ಞೆಯಂತೆ "ಪತಂಜಲಿ ದರ್ಶನ" ವಾಗಿ ಯೋಗಾಸನಗಳಾಗಿ ಯೋಗಿ ಪತಂಜಲಿಯಿಂದ ಹೊರಹೊಮ್ಮಿತು.

                   ಮಹರ್ಷಿ ಪತಂಜಲಿ ಯೋಗವನ್ನು "ವೃತ್ತಿ ನಿರೋಧ" ಎಂದು ವ್ಯಾಖ್ಯಾನಿಸಿದರು. ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರೆ ಹಾಗೂ ಸ್ಮೃತಿ ಇವೇ ಐದು ವಿಧದ ವೃತ್ತಿಗಳು ವೈರಾಗ್ಯ ಹಾಗೂ ಅಭ್ಯಾಸಗಳಿಂದ ಮನಸ್ಸಿನಲ್ಲಿ ಲಯ ಹೊಂದಿದಾಗ ಮನಸ್ಸು ಆತ್ಮನ ಸ್ವರೂಪದಲ್ಲಿ ಅವಸ್ಥಿತವಾಗುತ್ತದೆ. ಅದೇ ಯೋಗ! ಮಹರ್ಷಿ ವ್ಯಾಸರು ಯೋಗವನ್ನು ಸಮಾಧಿ ಎಂದರು. ಯುಜ್ ಎನ್ನುವ ಧಾತುವಿನಿಂದ ವ್ಯುತ್ತತ್ತಿಯಾಗಿದೆ ಯೋಗ. ಸಂಯಮ ಪೂರ್ವಕವಾಗಿ ಸಾಧನೆ ಮಾಡುತ್ತಾ ಆತ್ಮನನ್ನು ಪರಮಾತ್ಮನೊಡನೆ ಜೋಡಿಸಿ ಸಮಾಧಿಯ ಆನಂದವನ್ನು ಪಡೆಯುವುದೇ ಯೋಗ. ಚಿತ್ತದ ಪಂಚಸ್ಥಿತಿಗಳಾದ ಕ್ಷಿಪ್ತ, ಮೂಢ, ವಿಕ್ಷಿಪ್ತ, ಏಕಾಗ್ರ ಹಾಗೂ ನಿರುದ್ಧಗಳಲ್ಲಿ ಪಂಚಕ್ಲೇಶಗಳು ಹಾಗೂ ಕರ್ಮ ಬಂಧನಗಳ ಶಿಥಿಲತೆ ಉಂಟಾದಾಗ ಕ್ರಮಶಃ ಸಂಪ್ರಜ್ಞಾತ ಹಾಗೂ ಅಸಂಪ್ರಜ್ಞಾತ ಸಮಾಧಿ ಉಂಟಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಅನುಕೂಲತೆ-ಪ್ರತಿಕೂಲತೆ, ಸಿದ್ಧಿ-ಅಸಿದ್ಧಿ, ಸಫಲತೆ-ವಿಫಲತೆ, ಜಯ-ಅಪಜಯ ಇವುಗಳಲ್ಲಿ ಸಮತ್ವವನ್ನು ಹೊಂದಿರುವುದೇ ಯೋಗ ಎಂದಿದ್ದಾನೆ. ಅಸಂಗಭಾವದಿಂದ ದೃಷ್ಟಾ ಆಗಿದ್ದುಕೊಂದು ಒಳಗಿನ ದಿವ್ಯಭಾವದಿಂದ ಪ್ರೇರಿತನಾಗಿ ಕುಶಲತಾಪೂರ್ವಕವಾಗಿ ಮಾಡುವ ಕರ್ಮವೇ ಯೋಗ.

                        ಪ್ರತಿಯೊಂದು ಅಂಗದ ಚಲನಶೀಲ ಶಕ್ತಿಯನ್ನು ಕಾಪಾಡಿ ಅವುಗಳ ನಡುವೆ ಸಂಯೋಜನೆಯನ್ನುಂಟು ಮಾಡುವ ಶಕ್ತಿಯೇ ಪ್ರಾಣ. ಉಸಿರು ಮತ್ತು ಪ್ರಾಣ ಒಂದೇ ಅಲ್ಲ. ಪ್ರಾಣವು ಸೂಕ್ಷ ಹಾಗೂ ವೈಶ್ವಿಕ ಶಕ್ತಿಯಾಗಿದ್ದು ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿದೆ. ನಾವು ಉಚ್ಛ್ವಾಸ ಮಾಡಿದಾಗ ಗಾಳಿಯನ್ನು ಮಾತ್ರ ಒಳಗೆಳೆದುಕೊಳ್ಳುವುದಿಲ್ಲ ಜೊತೆಗೆ ಪ್ರಾಣಶಕ್ತಿಯನ್ನೂ ಎಳೆದುಕೊಳ್ಳುತ್ತೇವೆ. ಶರೀರದೊಳಗೆ ಪ್ರವೇಶಿಸಿದ ಪ್ರಾಣಶಕ್ತಿಯು ವ್ಯಾನ-ಅಪಾನ-ಉದಾನ ಮುಂತಾದುವುಗಳಾಗಿ ಪರಿವರ್ತನಗೊಂಡು ಶರೀರಾಂಗಗಳನ್ನು ನಿಯಂತ್ರಿಸುವ ಹಾಗೂ ಸಂಯೋಜಿಸುವ ಸೂಕ್ಷ್ಮ ನರ-ನಾಡಿಗಳಲ್ಲಿ ಸಂಚಯಿಸುತ್ತದೆ. ಯಾವುದಾದರೂ ಅಂಗ ಕಾರ್ಯನಿರ್ವಹಿಸಲು ವಿಫಲವಾದರೆ  ಆ ಅಂಗಗಳನ್ನು ನಿಯಂತ್ರಿಸುವ ನಾಡಿಗಳಿಗೆ ಪ್ರಾಣವು ಸರಿಯಾಗಿ ವಿತರಣೆಯಾಗಿಲ್ಲವೆಂದರ್ಥ. ಪ್ರಾಣದ ಹರಿಯುವಿಕೆಗೆ ಅಡ್ಡಿ ಉಂಟಾದಾಗ ಆಯಾ ಅಂಗಾಂಗದ ಕಾರ್ಯನಿರ್ವಹಣೆಯಲ್ಲಿ ಏರುಪೇರಾಗಿ ರೋಗಗಳಿಗೆ ಕಾರಣವಾಗುತ್ತದೆ. ಪ್ರಾಣವಾಯುವಿನ ಹರಿಯುವಿಕೆಗಿರುವ ಅಡ್ಡಿಗಳನ್ನು ನಿವಾರಿಸಿ ಅದು ಮುಕ್ತವಾಗಿ ಹರಿಯುವಂತೆ ಮಾಡುವ ಕ್ರಿಯೆಯೇ ಪ್ರಾಣಾಯಾಮ.

                 ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಮಾಂಸಖಂಡಗಳು, ಸಂಧಿಗಳು ಬಲಯುತಗೊಳ್ಳುತ್ತವೆ. ದುಗ್ಧ ರಸಗ್ರಂಥಿಯ ಕ್ರಿಯಾಶೀಲತೆ ಮತ್ತು ಪರಿಚಲನೆ ಉತ್ತಮಗೊಳ್ಳುತ್ತದೆ. ಸುಷುಮ್ನಾ ನಾಡಿ ಬಲಯುತಗೊಳ್ಳುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪೀನಿಯಲ್ ಗ್ರಂಥಿಗೆ ಉತ್ತೇಜನ ಹಾಗೂ ಅಧಿಕ ಆಮ್ಲಜನಕ ದೊರೆಯುತ್ತದೆ. ರೆರ್ಲಿಯನ್ ಫೋಟೋಗ್ರಫಿಯ ಮೂಲಕ ತಿಳಿದುದೇನೆಂದರೆ ಸಿಂಪೆಥಿಟಿಕ್ ಮತ್ತು ಪ್ಯಾರಾ ಸಿಂಪೆಥೆಟಿಕ್ ನರವ್ಯೂಹಗಳ ಮೂಲಕ ಪ್ರಭಾವ ಉಂಟುಮಾಡುವುದರಿಂದ ಮನುಷ್ಯನ ದೇಹದ ಸುತ್ತಲಿರುವ ಓರಾ ಅಥವಾ ಬೆಳಕು ಮತ್ತು ಶಕ್ತಿಯ ಪುಂಜ ಪ್ರಖರಗೊಳ್ಳುತ್ತದೆ. ಮಂತ್ರಯುಕ್ತ, ಶಿಸ್ತುಬದ್ಧ ಉಸಿರಾಟದ ಸೂರ್ಯ ನಮಸ್ಕಾರ ದುಗುಡ, ಖಿನ್ನತೆ, ಆತಂಕಗಳನ್ನು ದೂರಮಾಡುತ್ತದೆ. ಎಲ್ಲಾ ಚಕ್ರಗಳನ್ನೂ ಹಾದು ಹೋಗುವ ವೇಗಸ್ ನರದ ಮೇಲೂ ಸೂರ್ಯ ನಮಸ್ಕಾರ ಪ್ರಭಾವ ಬೀರುತ್ತದೆ. ಸೂರ್ಯ ನಮಸ್ಕಾರದ ಅಭ್ಯಾಸವು ಪ್ರಜ್ಞೆಯನ್ನು ಉಚ್ಚಸ್ಥಿತಿಗೆ ಒಯ್ಯುತ್ತದೆ. ಏಕಾಗ್ರತೆ, ಮನೋಬಲ, ಆತ್ಮಬಲ, ರೋಗನಿರೋಧಕತೆ, ಪ್ರಾಣಶಕ್ತಿ, ಜೀರ್ಣಶಕ್ತಿಗಳನ್ನು ವರ್ಧಿಸುತ್ತದೆ. ಜೀವಕೋಶಗಳ ಕ್ರಿಯಾಶೀಲತೆಯನ್ನು ಸಮತೋಲನದಲ್ಲಿರಿಸುತ್ತದೆ.

               ಯೋಗದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ವಿರೋಧಿಸುವವರನ್ನು ಮೂರ್ಖರು ಎನ್ನಬೇಕಷ್ಟೆ. ಸೂರ್ಯನಿಗೆ ನಮಸ್ಕಾರ ಮಾಡದವರು ಸೂರ್ಯನ ಬೆಳಕನ್ನೂ ಪಡೆಯಬಾರದಲ್ವೇ? ಸೂರ್ಯಶಕ್ತಿಯನ್ನೂ, ಸೌರಶಕ್ತಿಯನ್ನುಪಯೋಗಿಸುವ ಯಾವುದೇ ಜೀವಿ-ವಸ್ತುಗಳನ್ನೂ ಬಳಸಬಾರದು. ಅಂದರೆ ಅನಂತ ಬ್ರಹ್ಮಾಂಡಗಳಿರುವ ಈ ಜಗತ್ತಿನಲ್ಲೇ ಇರಬಾರದು. ಯಾಕೆಂದರೆ ಅಸಂಖ್ಯ ಸೂರ್ಯರು ಈ ಬ್ರಹ್ಮಾಂಡದಲ್ಲಿದ್ದಾರೆ. ಹಾಗಂತ ಇದನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ತಮಗೆ ನಂಬಿಕೆ ಇಲ್ಲ ಅಂದಾಕ್ಷಣ ಸತ್ಯ ಸಾಯುವುದೇ? ಸೂರ್ಯನಿಗೆ ನಮಸ್ಕಾರ ಮಾಡುವುದಿಲ್ಲ ಎಂದವರು ಅಗ್ನಿ, ಗಾಳಿ, ನೀರು, ಪರಿಸರಕ್ಕೂ ನಮಸ್ಕರಿಸಿಯಾರೇ? ತನ್ನನ್ನು ಬದುಕಲು ಅವಕಾಶ ಮಾಡಿಕೊಟ್ಟವರಿಗೇ ಗೌರವ ತೋರದವನಿಗೆ ಬದುಕುವ ಹಕ್ಕೂ ಇಲ್ಲ. ಅಂತಹವನು ಇತರರನ್ನು ಬದುಕಬಿಡುವುದೂ ಇಲ್ಲ. ಮೊದಲೇ ಅವನ ಮೆದುಳು ದುರ್ಬೋಧನೆಯಿಂದ ತುಂಬಿ ಹೋಗಿರುತ್ತದೆ. ಇಡಿಯ ಜಗತ್ತೇ ಯೋಗವನ್ನು ಬಾಚಿ ಆಲಂಗಿಸಿಕೊಳ್ಳುತ್ತಿದೆ. ನಲವತ್ತೊಂದು ಮುಸ್ಲಿಮ್ ರಾಷ್ಟ್ರಗಳಿಗೆ ಬೇಕಾದ ಯೋಗ ಇಲ್ಲಿನವರಿಗೆ ಬೇಡವೆಂದರೆ ಇಲ್ಲಿನ ಮುಸಲ್ಮಾನರು ಹಾಗೂ ಆ ನಲವತ್ತೊಂದು ರಾಷ್ಟ್ರಗಳ ಮುಸಲ್ಮಾನರು ಅನುಸರಿಸುವ ಕುರಾನ್, ಅಲ್ಲಾ ಬೇರೆ ಬೇರೆಯೇನು? ಅಷ್ಟಕ್ಕೂ ಯೋಗ ಮಾಡಿ ಅಂತಾ ಇವರನ್ಯಾರಾದರೂ ಒತ್ತಾಯಪಡಿಸಿದ್ದಾರೆಯೇ? ಅಥವಾ ಈ ಮತಾಂಧರು ಯೋಗ ಮಾಡದಿದ್ದ ಮಾತ್ರಕ್ಕೆ ಯೋಗಾಸನವೇ ಈ ಜಗತ್ತಿನಿಂದ ಮರೆಯಾಗುತ್ತದೆಯೇ? ಇಡಿಯ ಜಗತ್ತು ಭಾರತವನ್ನು ನಿರೀಕ್ಷೆಯ ಕಂಗಳಿಂದ ನೋಡುತ್ತಿದೆ. ಇಲ್ಲಿನ ಪ್ರಾಚೀನ ಜ್ಞಾನ-ವಿಜ್ಞಾನಗಳನ್ನು ಒಪ್ಪಿ ಅಪ್ಪಿಕೊಳ್ಳುತ್ತಿದೆ. ಇಲ್ಲಿನ ಸೆಕ್ಯುಲರುಗಳಿಗೆ, ಮತಾಂಧರಿಗೆ ಮಾತ್ರ ಅವು ನಿರುಪಯುಕ್ತವೆಂದನ್ನಿಸುತ್ತವೆ. ಹೌದು ಓವೈಸಿಗಳು ಹೇಳುವಂತೆ ಯೋಗ ಹಿಂದೂಗಳದ್ದೇ; ಹಿಂದುತ್ವದ್ದೇ. ಮಾಡುವುದಾದರೆ ಮಾಡಲಿ; ಆಗದಿದ್ದರೆ ಬಿಡಲಿ ಯಾವುದೇ ನಷ್ಟವಿಲ್ಲ. ಈಗಾಗಲೇ ಹಲವನ್ನು ಕಳಕೊಂಡಾಗಿದೆ; ಕೆಲವು ಕೈತಪ್ಪುತ್ತಿವೆ. ಸೂರ್ಯನಮಸ್ಕಾರವನ್ನು ಏಸು ನಮಸ್ಕಾರವನ್ನಾಗಿಯೂ ಕೆಲವರು ಮಾಡಿಬಿಟ್ಟಿದ್ದಾರೆ. ಈಗ ಯೋಗವನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅದು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ.

              ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಸೂರ್ಯ ನಮಸ್ಕಾರವನ್ನು ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ನಿಟ್ಟಿನಲ್ಲಿ ಯೋಗ ದಿನಾಚರಣೆಯಂದು ಸೂರ್ಯನಮಸ್ಕಾರವನ್ನು ಕೈಬಿಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾರೋ ಕೆಲವರಿಗೆ ನೋವಾಗುತ್ತದೆಂದು ಸೂರ್ಯನಮಸ್ಕಾರವನ್ನು ಬಿಟ್ಟುಬಿಡುವುದೆಷ್ಟು ಸರಿ? ಸೂರ್ಯನಮಸ್ಕಾರ ಮಾಡುವವರು ಮಾಡಲಿ; ಇಷ್ಟವಿಲ್ಲದವರು ಬಿಡಲಿ ಎನ್ನಬಹುದಿತ್ತು. ಅದುಬಿಟ್ಟು ಯೋಗದ ಬಹುಮುಖ್ಯ ಅಂಗವನ್ನೇ ಕಠಿಣ ಎಂಬ ಕಾರಣ ಕೊಟ್ಟು ಕೈಬಿಡುವುದು ಹೇಡಿತನದ ಪರಮಾವಧಿ. ಯೋಗ ದಿನಾಚರಣೆ ಭಾರತೀಯ ವಿದ್ಯೆಯೊಂದನ್ನು ಲೋಕಮುಖಕ್ಕೆ ಪರಿಚಯಿಸಲಿಕ್ಕಾಗಿಯೋ ಅಥವಾ ಸೆಕ್ಯುಲರುಗಳ ತಾಳಕ್ಕೆ ತಕ್ಕಂತೆ ಕುಣಿಯಲಿಕ್ಕಾಗಿ ಇಟ್ಟುಕೊಂಡದ್ದೋ ಎನ್ನುವ ಸಂಶಯ ಕಾಡುತ್ತಿದೆ. ಮೋದಿಯವರು ಮುಸ್ಲಿಮರನ್ನು ಮುಖ್ಯಭೂಮಿಗೆ ತರಲು ಪ್ರಯತ್ನ ಮಾಡಿದಷ್ಟು ಅವರು ಹಿಂದೆ ಸರಿಯಲು ಯತ್ನಿಸುತ್ತಾರೆ. ಆದರೆ ಮುಖ್ಯ ಭೂಮಿಕೆಗೆ ತರುವ ಸಲುವಾಗಿ ತತ್ವಗಳೊಡನೆ ರಾಜೀಮಾಡಿಕೊಳ್ಳುವುದು ಎಷ್ಟು ಸರಿ? ಭಾಜಪಾವೂ ಕಾಂಗ್ರೆಸ್ಸಿನಂತೆ ಈ ರೀತಿ ಓಲೈಕೆ ರಾಜಕಾರಣಕ್ಕೆ ಮುಂದಾದರೆ ಅದರ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಗೊತ್ತಾದೀತು.  ನಂಬಿದವನೊಬ್ಬ ಹಿಂದೂವಿನ ಭಾವನೆಯೊಂದಿಗೆ ಚೆಲ್ಲಾಟವಾಡುವುದರಿಂದ ಉಂಟಾಗುವ ನೋವು ಒಬ್ಬ ಮತಾಂಧ ಮಾಡಿದ ಹಾನಿಯಿಂದುಂಟಾದ ನೋವಿಗಿಂತಲೂ ಹೆಚ್ಚು! ಒಬ್ಬ ರಾಣಾ ಪ್ರತಾಪ, ಶಿವಾಜಿ, ಸಾವರ್ಕರ್ ನಮಗೆ ಬೇಕೇ ಹೊರತು ಪರಿಸ್ಥಿತಿಯೊಡನೆ ರಾಜೀಯಾಗುವ ಗಾಂಧಿಯಲ್ಲ. ಭರವಸೆ ಕುಸಿಯುತ್ತಿದೆ!

ಸೋಮವಾರ, ಜೂನ್ 1, 2015

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೩

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೩


                 ಸಮರಾಂಗಣಕೆ ಆಕೆ ಧುಮುಕಿದರೆ ಸಾಕ್ಷಾತ್ ದುರ್ಗೆಯೇ ಮೈದಳೆದಂತೆ. ಎಪ್ಪತ್ತು ಸಾವಿರ ಪದಾತಿಗಳು, ಇಪ್ಪತ್ತು ಸಾವಿರ ತುರಗಗಳು, ಎರಡೂವರೆ ಸಾವಿರಕ್ಕೂ ಮಿಕ್ಕಿದ ಗಜಪಡೆಯ ಬೃಹತ್ ಸೈನ್ಯದೊಡನೆ ಅವಳ ದಂಡು ಅಂಕಕ್ಕಿಳಿದಾಗ ಅರಿಗಳೆದೆ ಝಲ್ಲೆನ್ನುತ್ತಿತ್ತು. ತನಗೆ ಪ್ರೀತಿಪಾತ್ರವಾದ ಕರಿಯನ್ನೇರಿ ಅವಳು ಬಾಣ, ಖಡ್ಗ, ಬಂದೂಕುಗಳನ್ನು ಸಮಾನ ಪ್ರಾವೀಣ್ಯತೆಯಿಂದ ಪ್ರಯೋಗಿಸುತ್ತಾ ಯುದ್ಧರಂಗದ ನಾಯಕಿಯಾಗಿ ಕಂಗೊಳಿಸುವುದನ್ನು ಕಾಣುವುದೇ ಕಂಗಳಿಗೊಂದು ಸೊಬಗು. ಪತಿ ಗಣಪತಿರಾಯ್ ಸತ್ತಾಗ ಎಳೆವಯಸ್ಸಿನ ಮಗನ ಪರವಾಗಿ 1548ರಲ್ಲಿ ಗೊಂಡ್ವಾನದ ಸಿಂಹಾಸನವನ್ನೇರಿದ ಆಕೆ ಗೋಂಡಾಗಳ ಬಾಳನ್ನು ಹಸನುಮಾಡಿ ಅವರ ಆರಾಧ್ಯದೈವವಾಗಿ ರಾಣಿಯೊಬ್ಬಳು ಹೇಗಿರಬೇಕೆಂದು ತೋರಿಸಿಕೊಟ್ಟಳು. ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಐವತ್ತೊಂದು ಯುದ್ಧಗಳಲ್ಲೂ ದಿಗ್ವಿಜಯವನ್ನು ಸಾಧಿಸಿ ಜಗದ್ವಿಖ್ಯಾತಿಯನ್ನು ಪಡೆದ ಆಕೆಯೇ ಜಗದ್ವಂದ್ಯೆ ರಾಣಿ ದುರ್ಗಾವತಿ! ಬುಂದೇಲ್ ಖಂಡದ ಸಾಮ್ರಾಜ್ಞಿಯಾಗಿ ತನ್ನ ರಾಜ್ಯದಲ್ಲಿನ 23ಸಾವಿರ ಗ್ರಾಮದ ಪ್ರತಿಯೊಬ್ಬ ಹಿರಿಯನ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗಿನ ಸಂವಹನ ಆಕೆಗೆ ಪ್ರಜೆಗಳೊಂದಿಗಿತ್ತು. ಆಕೆಯ ಸಮರ್ಥ ಆಡಳಿತದಿಂದ ಗೊಂಡಾಣ ಸುಭಿಕ್ಷಗೊಂಡಿತು. ಪ್ರತಿಸ್ವರ್ಗದಂತಿದ್ದ ಆ ನಾಡನ್ನು ನರಕಸದೃಶವನ್ನಾಗಿಸಿದ್ದು ಅದೇ ದಯಾಪರ ಅಕ್ಬರ್!

                     ಭಾರೀ ದಂಡಿನೊಂದಿಗೆ ಮೊಘಲರು ಮುತ್ತಿಗೆ ಹಾಕಿದಾಗ ಆತ್ಮರಕ್ಷಣೆಗಾಗಿ ಗೋಂಡಾಗಳೆಲ್ಲರೂ ಒಂದಾಗಿ ರಣಕಣಕ್ಕೆ ಧುಮುಕಿದರು. ದುರ್ಗಾವತಿಯ ರಭಸಕ್ಕೆ ಮೊಗಲ್ ಸೇನೆ ಕಕ್ಕಾಬಿಕ್ಕಿಯಾಯಿತು. ಘನಘೋರ ಕದನದ ನಡುವೆ ಮಗ ವೀರನಾರಾಯಣ್ ಗಾಯಗೊಂಡಾಗ ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಸೂಚಿಸಿದಳು. ಅವನೊಡನೆ ಕೆಲ ಸೈನಿಕರು ತೆರಳಬೇಕಾದ ಕಾರಣ ಸೇನೆಯಲ್ಲಿ ತುಸು ಗೊಂದಲದ ವಾತಾವರಣ ಉಂಟಾಯಿತು. ಅದೇ ವೇಳೆ ಬಾಣವೊಂದು ದುರ್ಗಾವತಿಯ ಬಲಗಣ್ಣಿನ ಮೇಲ್ಭಾಗಕ್ಕೆ ಬಡಿಯಿತು. ಅವಳು ಅದನ್ನು ಕಿತ್ತು ತೆಗೆವ ಪ್ರಯತ್ನ ನಡೆಸಿರುವಾಗಲೇ ಇನ್ನೊಂದು ಬಾಣ ಬಂದು ಕುತ್ತಿಗೆಗೆ ಬಡಿಯಿತು. ತನ್ನ ಕಥೆ ಮುಗಿಯಿತೆಂದು ಮೊಗಲರ ಕೈಗೆ ಸಿಕ್ಕು ಬಂಧಿಯಾಗುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ತನ್ನನ್ನೇ ತಾನು ಇರಿದುಕೊಂಡು ಪ್ರಾಣ ತ್ಯಜಿಸಿದಳು. ಸಾವರಿಸಿಕೊಂಡ ವೀರನಾರಾಯಣ ವೀರಾವೇಶದಿಂದ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಯುವರಾಜ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಕೂಡಲೇ ರಕ್ಕಸರು ಊರೊಳಗೆ ಪ್ರವೇಶಿಸುವ ಮುನ್ನವೇ ಸ್ತ್ರೀಯರು ಮಾನ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕವಾಗಿ ಚಿತೆಗೆ ಹಾರಿದರು. ಆದರೆ ಅಗ್ನಿ ಇಬ್ಬರು ರಾಜಕುವರಿಯರನ್ನು ವಂಚಿಸಿದ. ಅವರನ್ನು ತನ್ನ ದೊಡ್ಡಿಯಂತಿದ್ದ ಜನಾನಾಕ್ಕೆ ನೂಕಿದ ಅಕ್ಬರ್ ಜೀವಂತವಿರುವಾಗಲೇ ಸಾವಿನ ಭಾಗ್ಯ ಒದಗಿಸಿದ! ಮುಂದೆ ಊರೂರೂ ದೋಚುವ ಕಾರ್ಯಕ್ರಮ ಯಥಾವತ್ ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಡೆಯಿತು. ಅಕ್ಬರ್ ಗೊಂಡ್ವಾನದ ಮೇಲೆ ಮಾಡಿದ ದಾಳಿ ಪಕ್ಕಾ ದುರಾಕ್ರಮಣವೇ ಹೊರತು ಇನ್ನೇನಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಬೇರಾವ ಸಮರ್ಥನೆಯೂ ಅದಕ್ಕಿಲ್ಲ ಎಂದಿದ್ದಾನೆ ವಿನ್ಸೆಂಟ್ ಸ್ಮಿತ್!

                  ಅಕ್ಬರನ ಕಾಮದಾಸೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸಲ್ಮಾನರೂ ಬಲಿಯಾದರು. ಆಗ ಮಾಳವವನ್ನಾಳುತ್ತಿದ್ದವ ಅಕ್ಬರನ ಓರಗೆಯವನಾದ ಬಾಜ್ ಬಹಾದ್ದೂರ್! ರೂಪಮತಿ ಅವನ ಮನದನ್ನೆ. ಲವ್ ಜಿಹಾದ್ ಇಲ್ಲವೇ ಇಲ್ಲ ಅನ್ನುವವರು ಗಮನಿಸಿ ಲವ್ ಜಿಹಾದಿಗೆ ಮೊಘಲರ ಕಾಲದ ಇತಿಹಾಸವಿದೆ! ಹೆಸರಿಗೆ ಅನುರೂಪವಾಗಿ ಆಕೆ ಅಪ್ರತಿಮ ಸುಂದರಿ. ಪೌರ್ಣಮಿಯ ಶಶಿಯ ಸೊಬಗಿಗಿಂತ ರೂಪಮತಿಯ ಚೆಲುವು ಹೆಚ್ಚು ಪ್ರಕಾಶಮಾನವಾದುದೆಂದು ವರ್ಣಿಸುತ್ತಿದ್ದರು ಕವಿಗಳು. ಅವಳಂತಹ ನಿರ್ಮಲ ದಿವ್ಯಸ್ತ್ರೀಯನ್ನು ಹತ್ತುಲಕ್ಷಸಂವತ್ಸರಗಳಿಗೊಮ್ಮೆಯಷ್ಟೇ ಭಗವಂತನು ಸೃಷ್ಟಿಸುವನೆಂದೂ, ಆಕೆಯ ಕಣ್ಣಂಚಿನ ಪಾನಪಾತ್ರೆಯಿಂದ ಒಂದು ಬಿಂದು ಮಧುವನ್ನಾಸ್ವಾದಿಸುವುದು ಸ್ವರ್ಗಕ್ಕೆ ಸೋಪಾನವೆಂದು ಹಾಡುತ್ತಿದ್ದರು ಜಾನಪದರು. ಈ ಕೀರ್ತಿಗಾನ ಅಕ್ಬರನ ಕಿವಿಗೆ ಬಿತ್ತು! ಕೇಳಬೇಕೆ ಜೊಲ್ಲುಸುರಿಸಿಕೊಂಡು ಆಕೆಯನ್ನು ಕರೆತರಲು ಅಪ್ಪಣೆಯಾಯಿತು. ಆಕೆ ಬರಲೊಲ್ಲೆ ಎಂದಳು. ಮೊಗಲ್ ಸೈನ್ಯ ಬಂತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವೆನೆಂದಿದ್ದ ಬಾಜ್ ಬಹಾದ್ದೂರ್ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ! ಸುದ್ದಿ ಕೇಳಿದ ರೂಪಮತಿ ವಿಷ ಸೇವಿಸಿದಳು. ಕಾಮಾಂಧನ ಮುಖ ಕಪ್ಪಡರಿತು!

                        ಜಯವಂತಿ...ಮೊಗಲ್ ದಾಸ್ಯದಿಂದ ಮೇವಾಡ ಮುಕ್ತಗೊಳ್ಳುವವರೆಗೆ ಮಗುವನ್ನು ಹಡೆಯುವುದಿಲ್ಲವೆಂದೂ, ಆಭರಣಗಳನ್ನು ಧರಿಸುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದ ಅಪೂರ್ವ ರಜಪೂತ ರಾಜಕನ್ಯೆ. ರಾಜ ಸುರ್ಜನರಾಯನ ಸೋದರನ ಸುತೆ. ಅಕ್ಬರನ ಕಾಮದೃಷ್ಟಿ ಆಕೆಯ ಮೇಲೆ ಬಿತ್ತು. ಹೇಗಾದರೂ ಮಾಡಿ ರಣಥಂಬೋರನ್ನು ಜಯಿಸಿ ಆಕೆಯನ್ನು ಪಡೆವಾಸೆಯಿಂದ ಜೊಲ್ಲುಸುರಿಸಿಕೊಂಡು ಕಾಲು ಕೆದರಿ ಯುದ್ಧಕ್ಕೆ ಹೊರಟ. ಆದರೆ ರಣಥಂಬೋರಿನ ಕೋಟೆ ದುರ್ಭೇಧ್ಯವಾಗಿತ್ತು. ಇರುವೆಗಳು ಕೂಡಾ ಅದರ ಗೋಡೆಗಳ ಮೇಲೇರಲಾರದೆ ಜಾರಿ ಬೀಳುವವೆಂದು ಅಬುಲ್ ಫಜಲ್ ಬರೆದಿದ್ದಾನೆ. ಅಕ್ಬರನಿಗೆ ಗೆಲ್ಲಲಾಗಲಿಲ್ಲ. ಅದಕ್ಕಾಗಿ ಆತ ಭಗವಾನ್ ದಾಸನ ಮೂಲಕ ಸುರ್ಜನರಾಯನಿಗೆ ಪ್ರಲೋಭನೆ ಒಡ್ಡಿ ಕೋಟೆಯ ಬೀಗದ ಕೈಗಳನ್ನು ವಶಪಡಿಸಿಕೊಂಡ. ಸುದ್ದಿ ಅರಿತ ಜಯವಂತಿ ಭರಿಸಲಾರದ ವೇದನೆಯಿಂದ ತನ್ನ ಮೈಮೇಲಿನ ಸೈನಿಕ ಪೋಷಾಕನ್ನು, ರಾಜ ಲಾಂಛನ, ತಿಲಕಗಳನ್ನು ಕಿತ್ತೆಸೆದು ದೇವಾಲಯದ ನರ್ತಕಿಯ ವೇಷ ಧರಿಸಿ ಏಕಲಿಂಗೇಶ್ವರನೆದುರು ಕಾಲ್ಗೆಜ್ಜೆ ತುಂಡಾಗುವವರೆಗೆ ಶಿವತಾಂಡವಗೈದು ಶಿವಲಿಂಗದ ಮುಂದೆ ಕುಸಿದಳು. ಹಾಗೆ ಕುಸಿವಾಗ ಸೊಂಟದಲ್ಲಿದ್ದ ಚೂರಿಯಿಂದ ಎದೆ ಬಗಿದು ರುದ್ರನಿಗೆ ರುಧಿರಾಭಿಷೇಕಗೈದಳು. ರಜಪೂತರ ಧೈರ್ಯಸ್ಥೈರ್ಯಗಳಿಗೆ ಹೊಸ ಭಾಷ್ಯ ಬರೆದು ದೇಶದ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಳು.

                 ಹೀಗೆ ಕಾಮುಕ ಅಕ್ಬರನ ವಕ್ರದೃಷ್ಟಿಗೆ ಬಿದ್ದು ನಾಶವಾದ ರಾಜ್ಯಗಳು, ಮಾನಿನಿಯರು, ಪ್ರಾಣ ಕಳೆದುಕೊಂಡ ಜನತೆ, ಪ್ರಾಣಕ್ಕಿಂತ ಮಾನ ಹೆಚ್ಚೆಂದು ಜೌಹರ್ ಮಾಡಿಕೊಂಡ ಮಾನಿನಿಯರು ಲೆಕ್ಕವಿಲ್ಲದಷ್ಟು. ಅಂತಹ ಕಾಮಾಂಧನನ್ನೂ "ದಿ ಗ್ರೇಟ್" ಅಂದವರು ಯಾವ ಪರಿಯ ಕಾಮಾಂಧರಾಗಿರಬಹುದು???!!!