ಪುಟಗಳು

ಮಂಗಳವಾರ, ಏಪ್ರಿಲ್ 25, 2017

ಸೋಮನಾಥನ ಸೇಡು ತೀರಿತು ಸೂರ್ಯಕುಂಡದ ಸನಿಹ

ಸೋಮನಾಥನ ಸೇಡು ತೀರಿತು ಸೂರ್ಯಕುಂಡದ ಸನಿಹ


                ಯಾರು ಹೇಳಿದರು ಹಿಂದೂಗಳು ಮುಸಲ್ಮಾನರನ್ನು ಎದುರಿಸಲಿಲ್ಲವೆಂದು? ಯಾರು ಹೇಳಿದರು ಹಿಂದೂಗಳು ತಮ್ಮ ಜಾತಿಯ ಪರಿಧಿಯನ್ನು ಮೀರಿ ಒಟ್ಟಾಗಿ ಮಾತೃಭೂಮಿಯ ರಕ್ಷಣೆ ಮಾಡಲಿಲ್ಲವೆಂದು? ಯಾರು ಹೇಳಿದರು ಹಿಂದೂ ರಾಜರೆಲ್ಲಾ ಯುದ್ಧದಲ್ಲಿ ಗೆದ್ದ ಬಳಿಕ ಧೂರ್ತ, ಮತಾಂಧ ಮುಸ್ಲಿಮರನ್ನು ಕ್ಷಮಿಸಿ ಮತ್ತೆ ಎಲ್ಲವನ್ನೂ ಕಳೆದುಕೊಳ್ಳುವ ಮತಿವಿಭ್ರಮಣೆಗೆ ಒಳಗಾದನೆಂದು? ಎಲ್ಲಾ ಎಡಬಿಡಂಗಿ ಇತಿಹಾಸಕಾರರು ಹೇಳಿದ್ದು ಇದನ್ನೇ! ಆದರೆ ಇದನ್ನು ಅಲ್ಲಗಳೆಯುವ ಘಟನೆಯೊಂದು ನಡೆದಿತ್ತು. ಇರ್ತಲೆ ಹಾವಿನ ರೀತಿಯ ಮುಸ್ಲಿಮರನ್ನು ಮುಲಾಜಿಲ್ಲದೆ ನಾಶ ಮಾಡಿದ, ಮುಸ್ಲಿಮರಂತಹ ಧೂರ್ತ ಶತ್ರುಶೇಷವನ್ನು ಉಳಿಸುವ ಭೋಳೇ ಸ್ವಭಾವಕ್ಕೊಳಗಾಗದ ಧೀರ ಹಿಂದೂ ರಾಜನೊಬ್ಬ ಇದ್ದ. ಆದರೆ ಅವನು ಇತಿಹಾಸದ ಪುಸ್ತಕಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅದೇ ರೀತಿ ಜನಮಾನಸದಿಂದ ಅಳಿಯಲೂ ಇಲ್ಲ. ಆದರೆ ಅವನ ಹೆಸರನ್ನು, ಅವನ ಜಾತಿಯನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಲೇ ಇವೆ. ಅವನ ಜಾತಿಯನ್ನು ಬದಲಾಯಿಸಿದ್ದೂ ಇದೆ. ಅವನನ್ನು ಜಾತಿಯ ಗೂಡಿನೊಳಗೆ ಕಟ್ಟಿ ಹಾಕಿಯೂ ಆಗಿದೆ. ಆದರೆ ಇತಿಹಾಸದಲ್ಲಿ ಅವನಿಗೆ ಸಿಗಬೇಕಾದ ಸ್ಥಾನ ಸಿಗಲೇ ಇಲ್ಲ. ಎಲ್ಲಾ ಜಾತಿಗಳವರನ್ನು, ರಜಪೂತ ರಾಜರುಗಳನ್ನೆಲ್ಲಾ ಒಗ್ಗೂಡಿಸಿ ಮುಸ್ಲಿಂ ಆಕ್ರಮಣಕಾರರನ್ನು ಸದೆಬಡಿದು ಕಾಶಿ, ಮಥುರಾ, ಅಯೋಧ್ಯೆಗಳನ್ನು ರಕ್ಷಿಸಿದವನ ಹೆಸರು ಇತಿಹಾಸದ ಪುಸ್ತಕಗಳಿಂದಲೇ ಮಾಯವಾಗಿದೆ. ಸೋಮನಾಥವನ್ನು ಮತ್ತೆ ಮತ್ತೆ ಧ್ವಂಸಗೈದ ಘಜನಿಯ ಸೈನ್ಯವನ್ನು ಹೇಳ ಹೆಸರಿಲ್ಲದಂತೆ ಮಾಡಿದವನ ಹೆಸರೇ ಇತಿಹಾಸಕಾರರಿಗೆ ಮರೆತು ಹೋಗಿದೆ. ಅನ್ಯ ಅರಸರಂತೆ ಭೋಳೇತನಕ್ಕೊಳಗಾಗದೆ ಶತ್ರುಶೇಷವನ್ನೇ ಉಳಿಸದೆ ದಹಿಸಿದವನ ಹೆಸರು ಇತಿಹಾಸ ಗರ್ಭದಲ್ಲಿ ಸುಟ್ಟುರಿದು ಹೋಗಿದೆ.

                ಎಂಟನೇ ಶತಮಾನದ ಆದಿ ಭಾಗದಲ್ಲೇ ಅರಬ್ಬರು ಸಿಂಧ್ ಮೇಲೆ ತಮ್ಮ ಬರ್ಬರ ಆಕ್ರಮಣವನ್ನು ಆರಂಭಿಸಿದ್ದರು. ಆದರೆ ಕಾಶ್ಮೀರದ ಲಲಿತಾದಿತ್ಯ, ದಕ್ಷಿಣ ತಜಕಿಸ್ತಾನದ ನಾರಾಯಣ, ಸಮರಖಂಡ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ಗೋರಖ್ ಹಾಗೂ ಬುಖಾರ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ತುಷಾರಪತಿಯರ ಸಾಹಸದಿಂದ ಅರಬ್ಬರ ಅಬ್ಬರ ನಿರ್ಬಂಧಿಸಲ್ಪಟ್ಟಿತು. ಮುಂದೆ ಭಾರತವನ್ನು ಆಕ್ರಮಿಸಿಕೊಳ್ಳಲು ಮೂರು ಶತಮಾನಗಳ ಪರ್ಯಂತ ಅವಿರತವಾಗಿ ಹೆಣಗಿದರೂ ಭಾರತದ ಕೂದಲು ಕೊಂಕಿಸಲೂ ಅರಬ್ಬರಿಂದ ಸಾಧ್ಯವಾಗಲಿಲ್ಲ. ಭಾರತದ ಭದ್ರ ಕೋಟೆ ಬಿರುಕು ಬಿಟ್ಟುದುದು ಸಬಕ್ತಜಿನನ ಮೋಸದ ಯುದ್ಧಕ್ಕೇನೆ. ಸಬಕ್ತಜಿನ್, ಶಾಹಿ ಜಯಪಾಲನನ್ನು ಕುತಂತ್ರದಿಂದ ಸೋಲಿಸಿದರೂ ಜಯಪಾಲ ಆತನನ್ನು ಭಾರತದ ಗಡಿಭಾಗಕ್ಕಷ್ಟೇ ಸೀಮಿತವಾಗಿರಿಸಿದ. ಮಹಾಲೂಟಿಕೋರ ಘಜನಿಯನ್ನಂತೂ ಆನಂದಪಾಲ ಸೋಲಿಸಿ ಹಿಮ್ಮೆಟ್ಟಿಸಿಬಿಟ್ಟ. ಶಾಹಿ ವಂಶವೇ ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿ ನಿಂತು ಮಾತೃಭೂಮಿಯನ್ನು ರಕ್ಷಿಸಿತು. ಸತತ ಯುದ್ಧಗಳನ್ನು ಮಾಡಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಲು ಘಜನಿಗೆ ಇಪ್ಪತ್ತು ವರ್ಷಗಳೇ ಬೇಕಾದವು(1026).

                      1026ರಲ್ಲಿ ಘಜನಿ ಸೋಮನಾಥವನ್ನು ಕೊಳ್ಳೆ ಹೊಡೆಯುತ್ತಿದ್ದಾಗ ಹನ್ನೊಂದು ವರ್ಷ ಪ್ರಾಯದ ಅಳಿಯ(ಘಜ್ನಿಯ ತಂಗಿ ಸಿತಾರ್-ಇಮ್-ಅಲ್ ಳ ಮಗ ಸಯ್ಯದ್ ಸಾಲಾರ್ ಮಸೂದ್  ಕೂಡಾ ಅವನ ಜೊತೆಗಿದ್ದ. ಎಳೆ ವಯಸ್ಸಿನಲ್ಲಿಯೇ ಮಾವನ ಮತಾಂಧತೆ ಮತ್ತು ಬರ್ಬರತೆಯನ್ನು ಮೈಗೂಡಿಸಿಕೊಂಡಿದ್ದ ಮಸೂದ್! ಘಜನಿಯ ಸಾವಿನನಂತರ ಕ್ರಿ.ಶ. 1031ರಲ್ಲಿ ತನ್ನ ತಂದೆ ಸಾಲಾರ್ ಸಾಹುವಿನ ಮಾರ್ಗದರ್ಶನದಲ್ಲಿ ಒಂದು ಲಕ್ಷ ಸಂಖ್ಯೆಯ ಬೃಹತ್ ಸೇನೆಯೊಂದಿಗೆ ಮಸೂದ್ ಭಾರತಕ್ಕೆ ದಂಡೆತ್ತಿ ಬಂದ. ಆದರೆ ಮಸೂದನ ಜೈತ್ರಯಾತ್ರೆ ಸುಲಲಿತವಾಗಿರಲಿಲ್ಲ. ಮಾರ್ಗ ಮಧ್ಯದಲ್ಲಿ ಅಸಂಖ್ಯ ಹಿಂದೂರಾಜರಿಂದ ಪ್ರತಿರೋಧವನ್ನೆದುರಿಸಿ ಪೆಟ್ಟು ತಿನ್ನುವ ಸೌಭಾಗ್ಯವೂ ಅವನದ್ದಾಯಿತು. ಹಿಂದೂಸ್ಥಾನವನ್ನು ಗೆಲ್ಲಬೇಕಾದರೆ ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಕಾಶಿ-ಅಯೋಧ್ಯೆಗಳನ್ನೇ ನಾಶಪಡಿಸಬೇಕು ಎನ್ನುವುದನ್ನು ಮನಗಂಡು ಅತ್ತ ಕಡೆ ತನ್ನ ಸೈನ್ಯವನ್ನು ಮುನ್ನಡೆಸಿದ. ಅವನ ಉದ್ದೇಶವೂ ರಾಜ್ಯವನ್ನು ಸಂಪಾದಿಸಿ ಸಿಂಹಾಸನಾಧೀಶನಾಗುವುದಕ್ಕಿಂತ ಹೆಚ್ಚಾಗಿ ಹಿಂದೂಗಳನ್ನು ಮತಾಂತರಿಸಿ ಗಾಜಿ ಪಟ್ಟವನ್ನೇರುವುದೇ ಆಗಿತ್ತು. ಸೈಯ್ಯದ್ ಹುಸೈನ್ ಗಾಜಿ, ಸೈಯ್ಯದ್ ಹುಸೈನ್ ಖಾತಿಮ್, ಸೈಯ್ಯದ್ ಹುಸೈನ್ ಖಾತಿಮ್, ಸುಲ್ತಾನುಲ್ ಸಲಾಹೀನ್ ಮಹಮಿ, ಬಢವಾನಿಯಾ ಸಾಲಾರ್ ಸೈಫುದ್ದೀನ್, ಮೀರ್ ಇಜಾವುದ್ದೀನ್, ಸೈಯ್ಯದ್ ಮಲಿಕ್ ದೌಲತ್ ಶಾಹ್, ಮಿಯಾ ರಜ್ಜಬ್, ಇಬ್ರಾಹಿಂ ಹಾಗೂ ಫೈಸಲ್ ಮಲಿಕನಂತಹ ದಳಪತಿಗಳನ್ನೊಳಗೊಂಡ ಅವನ ಮತಾಂಧ ಸೇನೆ ಕಣ್ಣಿಗೆ ಬಿದ್ದ ದೇವಾಲಯಗಳನ್ನು ಧ್ವಂಸ ಗೈಯುತ್ತಾ, ಅಬಲೆಯರ ಮಾನಾಪಹಾರ ಮಾಡುತ್ತಾ, ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುತ್ತಾ ಸಾಗಿತು. ಬಂದವನೇ ದೆಹಲಿಯ ರಾಜ ಮಹಿಪಾಲ್ ತೋಮರನನ್ನು ಸೋಲಿಸಿ ಅವನ ರಾಜ್ಯವನ್ನು ಕಬಳಿಸಿದ. ಮೀರತ್ ಮೇಲೆ ಮುಗಿಬಿದ್ದು ರಾಜಾ ಹರಿದತ್ತನನ್ನು ಬಂಧಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ. ಕನೌಜ್ ಮೇಲೆ ದಾಳಿಯೆಸಗಿದವನೇ ಅಲ್ಲಿನ ಸ್ಥಳೀಯ ಆಡಳಿತಗಾರರನ್ನೆಲ್ಲಾ ಮುಸ್ಲಿಮರನ್ನಾಗಿಸಿ ಅಪಾರ ಮೊತ್ತದ ಧನವನ್ನು ದೋಚಿದ. ಅದನ್ನೇ ತನ್ನ ಸೇನಾ ನೆಲೆಯನ್ನಾಗಿಸಿಕೊಂಡ ಆತನ ಮುಂದಿನ ಗುರಿ ಸುಲ್ತಾನಪುರವಾಗಿತ್ತು. ಮಹಾಪ್ರತಾಪಿಯಾಗಿದ್ದ ಮಾಳವ ನರೇಶ ಭೋಜ ಪರಮಾರನ ಕಣ್ಣಿಗೆ ಬೀಳದಂತೆ ಸುತ್ತಿ ಬಳಸಿ ಮಸೂದ್ ಮುಂದುವರಿದ. ಸ್ವತಃ ಘಜನಿಯೂ ಭೋಜರಾಜನ ತಂಟೆಗೆ ಹೋಗಿರಲಿಲ್ಲ. ಆದರೆ ಸುಲ್ತಾನಪುರದ ಯುದ್ಧದಲ್ಲಿ ಅದೇ ಭೋಜ ಪರಮಾರನ ಸೈನ್ಯವನ್ನು ಮಸೂದ್ ಎದುರಿಸಬೇಕಾಯಿತು. ಭೋಜನ ಹಾಗೂ ಕಾಶಿಯ ಮದನಪಾಲನ ಸೈನ್ಯದ ಸಹಾಯದಿಂದ ರಜಪೂತರು ಮಸೂದನ ಸದ್ದಡಗಿಸಿಬಿಟ್ಟರು.

                   ಆ ಸಮಯದಲ್ಲಿ ಶ್ರಾವಸ್ತಿಯನ್ನು ಆಳುತ್ತಿದ್ದವ ರಾಜಾ ಸುಹೈಲ್ ದೇವ್. ತ್ರಿಲೋಕಚಂದ ಮಹಾರಾಜ್, ವಿಹಾರದೇವನ ವಂಶದಲ್ಲಿ ಹುಟ್ಟಿದ ಅಪ್ರತಿಮ ಸಾಹಸಿ ಸುಹೈಲ್. ಭಲ್ಲೆಯ ಪ್ರಯೋಗದಲ್ಲಿ ನಿಷ್ಣಾತರಾಗಿದ್ದ ಈ ವಂಶಜರಿಗೆ ಭಲ್ಲಾ ಸುಲ್ತಾನರೆಂಬ ಅನ್ವರ್ಥ ನಾಮವೇ ಇತ್ತು. ಸುಲ್ತಾನಪುರದ ನಿರ್ಮಾತೃಗಳು ಈ ವಂಶಸ್ಥರೇ. ಮೋರ್ ಧ್ವಜ ಅವನ ತಂದೆ. ಸೀತಾಪುರದಿಂದ ಗೋರಖ್ ಪುರದವರೆಗೆ ಹಬ್ಬಿದ್ದ ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಪ್ರಜಾವತ್ಸಲ ಪ್ರತಾಪಿ ರಾಜನಾಗಿದ್ದ ಸುಹೈಲ್ ದೇವ್. ಬಹ್ರೈಚ್'ನ ಸೂರ್ಯ ಮಂದಿರ, ತುಳಸೀಪುರದ ದೇವಿ ಪಾಟನ್ ಮಂದಿರವನ್ನು ಪುನರುತ್ಥಾನಗೊಳಿಸಿದ ಹರಿಕಾರನಾದ ಸುಹೈಲ್ ದೇವ್ ಮಹಾ ಗೋಭಕ್ತನಾಗಿದ್ದ.

                  ಅಷ್ಟರಲ್ಲಿ ಮಸೂದ್ ಸರಯೂ ನದೀ ತಟದಲ್ಲಿ ತನ್ನ ವಿಶಾಲ ಸೇನೆಯೊಡನೆ ಬೀಡುಬಿಟ್ಟಿದ್ದ. ಮೀರತ್, ಕನೌಜ್, ಮಹೀಲಬಾದ್ ಗಳಲ್ಲಿ ವಿಜಯದುಂದುಭಿ ಬಾರಿಸಿ ಮಸೂದ್ ಬಾರಾಬಂಕಿ ಜಿಲ್ಲೆಯ ಸತ್ರಿಕ್ ಎಂಬಲ್ಲಿ ಬಂದ. ವಸಿಷ್ಠರು ರಾಮ ಲಕ್ಷ್ಮಣರಿಗೆ ಪಾಠ ಹೇಳಿಕೊಟ್ಟ ಪುಣ್ಯಸ್ಥಳವದು. ಆ ಜಾಗವನ್ನು ತನ್ನ ಸೇನಾನೆಲೆಯಾಗಿಸಿ ಸುತ್ತಮುತ್ತಲ ಪ್ರದೇಶಗಳನ್ನು ಕಬಳಿಸಲು ಮಸೂದ್ ಸೇನೆಯನ್ನು ಕಳಿಸಲಾರಂಭಿಸಿದ. ಮಸೂದನ ದಂಡಯಾತ್ರೆಯ ಸಮಯದಲ್ಲಿ ಲಕ್ಷ್ಮೀಪುರ, ಸೀತಾಪುರ, ಲಖ್ನೋ, ಬಾರಾಬಂಕಿ, ಉನ್ನಾಓ, ಫೈಸಾಬಾದ್, ಬಹ್ರೈಚ್, ಶ್ರಾವಸ್ತಿ ಮತ್ತು ಗೋಂಡಾ ಪ್ರಾಂತಗಳನ್ನು ಸುಹೈಲ್ ದೇವನ ಇಪ್ಪತ್ತೊಂದು ಸಾಮಂತರು ಆಳುತ್ತಿದ್ದರು. ಸುಹೈಲ್ ದೇವನ ಬೈಸ್ ಜನಾಂಗವಲ್ಲದೆ ಕಾರಣಾಂತರಗಳಿಂದ ಕ್ಷತ್ರಿಯತ್ವದಿಂದ ವಿಮುಖಗೊಂಡು ಬೇರೆ ಜಾತಿಗಳಾದ ರಜಪೂತರ ಸಣ್ಣ ಸಂಸ್ಥಾನಗಳೂ ಅವಧ್ ಮತ್ತಿತರ ಸ್ಥಳೀಯ ಸಂಸ್ಥಾನಗಳನ್ನು ಆಳುತ್ತಿದ್ದವು. ಭೃಗು ವಂಶೀಯರೆಂದು ಹೇಳಿಕೊಳ್ಳುತ್ತಿದ್ದ ಬೈಸ್ ಜನಾಂಗೀಯರು ಮುಂದೆ ಉತ್ತಮ ಯೋಧರೆಂದು ಬ್ರಿಟಿಷರಿಂದಲೂ ಶಹಬ್ಬಾಸ್ ಗಿರಿ ಪಡೆದರು. ತಮ್ಮ ಮಾತೃಭೂಮಿಯನ್ನು ವಿದೇಶಿಯನೊಬ್ಬ ಆಕ್ರಮಿಸಲು ಬರುತ್ತಿರುವುದನ್ನು ಕಂಡು ಈ ಎಲ್ಲಾ ಸಣ್ಣ ಸಂಸ್ಥಾನಗಳು ತಮ್ಮಲ್ಲಿನ ವೈರವನ್ನು ಮರೆತು ಏಕಛತ್ರದಡಿಯಲ್ಲಿ ಒಟ್ಟಾದವು. ಬೈಸ್, ಭಲ್ಲೆ ಸುಲ್ತಾನರು, ಕಲಹಂಸ್, ರೈಕಾವರ್ ಮುಂತಾದ ವಂಶಗಳ ರಾಯ್ ರಾಯಬ್, ರಾಯ್ ಸಾಯಬ್, ರಾಯ್ ಅರ್ಜುನ್, ರಾಯ್ ಭೀಖನ್, ರಾಯ್ ಕನಕ್, ರಾಯ್ ಕಲ್ಯಾಣ್, ರಾಯ್ ಮಕರೂ, ರಾಯ್ ಸವಾರ್, ರಾಯ್ ಅರನ್, ರಾಯ್ ಬೀರಬಲ್, ರಾಯ್ ಜಯಪಾಲ್, ರಾಯ್ ಹರಪಾಲ್, ರಾಯ್ ಶ್ರೀಪಾಲ್, ರಾಯ್ ಹಕರೂ, ರಾಯ್ ಪ್ರಭು, ರಾಯ್ ದೇವನಾರಾಯಣ್, ರಾಯ್ ನರಸಿಂಹ ಎಂಬ ಹದಿನೇಳು ಸಂಸ್ಥಾನಗಳ ರಾಜರುಗಳು ಸುಹೈಲ್ ದೇವನನ್ನು ನಾಯಕನನ್ನಾಗಿ ಮಾಡಿಕೊಂಡು ಶತ್ರುವನ್ನೆದುರಿಸಲು ಸಿದ್ಧತೆ ಆರಂಭಿಸಿದರು. ಗಹಡ್ವಾಲ್ ವಂಶದ ಮದನಪಾಲ ಹಾಗೂ ಮುಂದೆ ಅಯೋಧ್ಯೆಯನ್ನಾಳಿದ ಯುವರಾಜ ಗೋವಿಂದನೂ ಇವರ ಜೊತೆಯಾದರು. ಈ ಸಂಘ "ಇದು ರಜಪೂತ ನೆಲ. ಇಲ್ಲಿಂದ ತತ್ ಕ್ಷಣವೇ ಜಾಗ ಖಾಲಿ ಮಾಡಬೇಕು" ಎಂಬ ಒಕ್ಕಣೆಯುಳ್ಳ ಓಲೆಯನ್ನು ಮಸೂದನಿಗೆ ಕಳುಹಿತು. ಇದು ಅಲ್ಲಾನ ನೆಲ ಎಂದು ಉತ್ತರಿಸುವ ಮೂಲಕ ಮಸೂದ್ ತೋರಿದ ಅವಿಧೇಯತೆ ಹುಟ್ಟು ಕ್ಷತ್ರಿಯರನ್ನು ಕೆರಳಿಸಿತು. ತಮ್ಮತಮ್ಮಲ್ಲೇ ಶತ್ರುತ್ವವಿದ್ದರೂ, ಯುದ್ಧಗಳಾಗುತ್ತಿದ್ದರೂ ಮಾತೃಭೂಮಿಯ ರಕ್ಷಣೆಗಾಗಿ ಇಸ್ಲಾಮನ್ನು ಎದುರಿಸಲು ಸುಹೈಲ್ ದೇವನನ್ನು ನಾಯಕನನ್ನಾಗಿ ಸ್ವೀಕರಿಸಿ ಈ ಎಲ್ಲಾ ಜನಾಂಗಗಳು ಏಕತ್ರವಾದುದು ಮಹತ್ವದ ಅಂಶ. ಭಾರತೀಯರು ಒಳಜಗಳಗಳಿಂದ ಗುಲಾಮರಾದರು ಎಂದು ವೈಭವೀಕರಿಸುವ ಎಲ್ಲಾ ಇತಿಹಾಸಕಾರರು ಗಮನಿಸಬೇಕಾದ ಅಂಶ. ಹಾಗೆಯೇ ಜಾತಿಯ ಎಲ್ಲಾ ಅಂಶಗಳನ್ನು ಬದಿಗೊತ್ತಿ ಮಾತೃಭೂಮಿಯ ರಕ್ಷಣೆಗಾಗಿ ಈ ಜನಾಂಗಗಳು ಒಟ್ಟಾದುದನ್ನು ಜಾತಿಯ ಆಧಾರದಲ್ಲಿ ಭಾರತವನ್ನು ಒಡೆಯಲು ಯತ್ನಿಸುವ ಮೂಳರು, ಭಾರತವು ಜಾತಿಯಿಂದಲೇ ಹಾಳಾಯಿತೆನ್ನುವ ಮೂಢರು, ದೇಶಕ್ಕಿಂತ ತಮ್ಮ ಜಾತಿ ಮೊದಲು ಎನ್ನುವ ಜಾತಿವಾದಿಗಳು ಅರ್ಥೈಸಿಕೊಳ್ಳಬೇಕು.

                       ಮಸೂದ್ ತನ್ನ ದಳವಾಯಿಗಳನ್ನು ವಿವಿಧ ದಿಕ್ಕುಗಳಿಗೆ ಅಟ್ಟಿದ. ಮಿಯಾ ರಜಬ್ ಹಾಗೂ ಸಾಲಾರ್ ಸೈಫುದ್ದೀನ್ ಬಹ್ರೈಚ್ ಅನ್ನು ವಶಪಡಿಸಿಕೊಂಡರು. ಅಮೀರ್ ಹಸನ್ ಮಹೋನ, ಮಲಿಕ್ ಫಜಲ್ ವಾರಣಾಸಿ, ಸಯ್ಯದ್ ಸಾಹು ಕರ್ರಾ ಮತ್ತು ಮಣಿಕಾಪುರಗಳನ್ನು ವಶಪಡಿಸಿಕೊಂಡರು. ಸುಹೈಲ್ ದೇವನ ಸಾಮಂತ ಹರದೋಯಿ ವಿರುದ್ಧ ಯುದ್ಧಕ್ಕೆ ಹೊರಟಿದ್ದ ಸಯ್ಯದ್ ಅಜೀಜ್ ಉದ್ದೀನನನ್ನು ಗೋಪಮಾವು ಬಳಿ ನಡೆದ ಕದನದಲ್ಲಿ ಸ್ವರ್ಗದ ಎಪ್ಪತ್ತೆರಡು ಕನ್ಯೆಯರ ಬಳಿ ಕಳುಹಿತು ಸಂಯುಕ್ತ ಪಡೆ. ತಾನು ಹೋದಲ್ಲೆಲ್ಲಾ ಮತಾಂತರ ಮಾಡುತ್ತಿದ್ದ, ಒಪ್ಪದವರನ್ನು ಕೊಲ್ಲಿಸುತ್ತಿದ್ದ ಮಸೂದನ ಗುರು, ಸರದಾರ ಸಯ್ಯದ್ ಇಬ್ರಾಹಿಂ ಹಾಗೂ ಇನ್ನಿತರ ಸೇನಾ ಪ್ರಮುಖರನ್ನು ದುಂಧಾಗಢ್ ಕದನದಲ್ಲಿ ಸಂಯುಕ್ತ ಪಡೆ ಕೊಚ್ಚಿ ಹಾಕಿತು. ಸಾಲಾರ್ ಸೈಫುದ್ದೀನನನ್ನು ಬಹ್ರೈಚ್ ನಲ್ಲಿಯೇ ತಡೆಯಲಾಯಿತು. ಇದರಿಂದ ಮಸೂದ್ ಅಯೋಧ್ಯೆಯನ್ನು ತಲುಪಲಾಗದೆ ಸಲರಪುರ ಎಂಬಲ್ಲಿ ನಿಲ್ಲಬೇಕಾಯಿತು. ತನ್ನ ಸೇನೆಯೊಂದಿಗೆ ಸೈಫುದ್ದೀನನ ಸಹಾಯಕ್ಕೆ ಬಂದ ಮಸೂದನನ್ನು ಬಹ್ರೈಚ್ ನ ಪಾಳೆಯಗಾರರೆಲ್ಲಾ ಭಾಕ್ಲಾ ನದಿ ದಂಡೆಯಲ್ಲಿ ಎದುರಿಸಲು ಸಿದ್ಧರಾದರು. ಯುದ್ಧ ಸಿದ್ಧತೆಯಲ್ಲೋ, ವಿಶ್ರಾಂತಿಯಲ್ಲೋ ಇದ್ದ ಸಂಯುಕ್ತ ಪಡೆಯ ಮೇಲೆ  ಮಸೂದ್ ರಾತ್ರಿ ವೇಳೆ ಮುಗಿಬಿದ್ದಾಗ ಎರಡೂ ಪಾಳಯಕ್ಕೂ ಅಪಾರ ಹಾನಿಯುಂಟಾಯಿತು.

                 ಬಹುಪಾಲು ಎಲ್ಲಾ ಸರಹದ್ದುಗಳಲ್ಲೂ ಸೋಲನ್ನುಂಡ ಮಸೂದನಿಗೆ ಬಹ್ರೈಚ್ ಮರಣಸದೃಶವಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿದವು. ಜೂನ್ 13, 1033ರಂದು ಸುಹೈಲ್ ದೇವ್ ತನ್ನ ತಮ್ಮ ಬಹಿರ್ ದೇವನೊಂದಿಗೆ ಬಹ್ರೈಚ್'ನ ಸಂಯುಕ್ತ ಪಾಳಯವನ್ನು ಸೇರಿಕೊಂಡ ನಂತರವಂತೂ ಅದು ನಿಚ್ಚಳವಾಗತೊಡಗಿತು. ಅದಕ್ಕೆ ಸಾಕ್ಷಿಯಾದದ್ದು ಚಿತ್ತೋಡಿನ ಪವಿತ್ರ ಸೂರ್ಯ ಕುಂಡ! ಸುಹೈಲ್ ದೇವ್ ಬಂದುದೇ ತಡ ಸಂಯುಕ್ತ ಸೇನೆಯಲ್ಲಿ ನವೋತ್ಸಾಹ ತುಂಬಿತು. ಸುಹೈಲ್ ದೇವ್ ಗೋಭಕ್ತ ಎನ್ನುವುದನ್ನು ಅರಿತಿದ್ದ ಮಸೂದ್ ತನ್ನ ಸೇನೆಯ ಮುಂಭಾಗದಲ್ಲಿ ಅಸಂಖ್ಯ ಗೋವು, ಎತ್ತುಗಳನ್ನು ನಿಲ್ಲಿಸಿದ್ದ. ಆದರೆ ಅಂತಹ ತಡೆಯನ್ನೂ ಚತುರತೆಯಿಂದ ದಾಟಿದ ಗೋಭಕ್ತ ಸುಹೈಲ್ ದೇವ್. ಐದು ದಿನಗಳವರೆಗೆ ಸಾಗಿತು ಯುದ್ಧ. ಸಂಯುಕ್ತ ಸೇನೆಯ ರಭಸಕ್ಕೆ ಇಸ್ಲಾಮೀ ಸೇನೆ ನಜ್ಜುಗುಜ್ಜಾಯಿತು. ಇಸ್ಲಾಮೀ ದಳಪತಿಗಳೆಲ್ಲಾ ಸತ್ತು ಬಿದ್ದರು. ಏತನ್ಮಧ್ಯೆ ರಾಜಾ ಕರಣ್ ನೇತೃತ್ವದ ಒಂದು ದೊಡ್ಡ ಸೇನಾ ತುಕಡಿ ಮುಸಲ್ಮಾನ ಸೇನೆಯ ಕೇಂದ್ರ ಭಾಗಕ್ಕೇ ನುಗ್ಗಿ ಬಲವಾದ ಹೊಡೆತ ನೀಡಿತು. ಸುಹೈಲ್ ದೇವ್ ಹೂಡಿದ ಬಾಣವೊಂದಕ್ಕೆ ಮಸೂದನ ರುಂಡ ಮುಂಡದಿಂದ ಬೇರ್ಪಟ್ಟು ಪವಿತ್ರ ಸೂರ್ಯಕುಂಡದ ಬಳಿ  ಧರೆಗುರುಳಿತು. ಸೇಡು ತೀರಿಸಿಕೊಳ್ಳಲು ಸಾಲಾರ್ ಇಬ್ರಾಹಿಂ ಸುಹೈಲ್ ದೇವನ ಮೇಲೆ ಪ್ರತಿದಾಳಿ ಎಸಗಿದನಾದರೂ ಏನೂ ಪ್ರಯೋಜನವಾಗಲಿಲ್ಲ. ಹೀಗೆ ಬಹ್ರೈಚ್ ಕದನ ಎರಡು ಶತಮಾನಗಳ ಕಾಲ ಉತ್ತರ ಭಾರತವನ್ನು ಇಸ್ಲಾಮೀ ದಬ್ಬಾಳಿಕೆಯಿಂದ ರಕ್ಷಿಸಿತು.

                    ಯುದ್ಧ ಗೆದ್ದ ನೆನಪಿಗಾಗಿ ಸುಹೈಲ್ ದೇವ್ ಬಹ್ರೈಚ್ ಸುತ್ತಮುತ್ತ ನೀರಿನ ಕೊಳಗಳನ್ನು ಕಟ್ಟಿಸಿದ.  ಬಹ್ರೈಚ್ ಕದನ ತಮ್ಮ ರಾಜ್ಯವನ್ನುಳಿಸಲು ಕೆಲವು ಸಣ್ಣ ಸಂಸ್ಥಾನಗಳ ರಜಪೂತರು ಸಂಘಟಿತರಾಗಿ ನಡೆಸಿದ ಯುದ್ಧ ಮಾತ್ರ ಎಂದು ಮೂಗು ಮುರಿದರೆ ನಿಮ್ಮ ಊಹೆ ತಪ್ಪಾದೀತು. ಈ ಕದನದ ವಿಶೇಷತೆಗಳು ಹಲವು. ವಿದೇಶಿಯನೊಬ್ಬನ ಆಕ್ರಮಣವನ್ನು ಮನಗಂಡು ರಜಪೂತರು ಮಾತ್ರವಲ್ಲದೆ ಎಲ್ಲಾ ಜಾತಿಗಳವರು ಏಕಛತ್ರದೊಳಗೆ ಏಕನಾಯಕತ್ವದಡಿಯಲ್ಲಿ ಮಾತೃಭೂಮಿಯ ರಕ್ಷಣೆಗೆ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದುದು ಒಂದು. ಮುಸಲ್ಮಾನರ ಅಗಾಧ ಸೇನೆಯನ್ನು ಅನೇಕ ಸಣ್ಣ ರಾಜರುಗಳ ಸಣ್ಣ ಸೈನ್ಯವೊಂದು ಮಣ್ಣು ಮುಕ್ಕಿಸಿದ್ದು ಇನ್ನೊಂದು. ಹಿಂದಿನ ಹಿಂದೂ ರಾಜರುಗಳಂತಲ್ಲದೆ ಶತ್ರು ಸೈನ್ಯವನ್ನು ಯಾವುದೇ ಕನಿಕರ ಅಥವಾ ಭೋಳೆತನಕ್ಕೊಳಗಾಗಿ ಉಳಿಸದೆ ನಿಶ್ಯೇಷವನ್ನಾಗಿಸಿದ್ದು ಮತ್ತೊಂದು. ಮಹಮ್ಮದ್ ಘಜನಿ ಯಾವ ಸೈನ್ಯವನ್ನು ಉಪಯೋಗಿಸಿಕೊಂಡು ಸೋಮನಾಥವನ್ನು ಮತ್ತೆ ಮತ್ತೆ ಧ್ವಂಸ ಮಾಡಿ ದೋಚಿದನೋ ಅಂತಹ ಆಧುನಿಕ ಶೈಲಿಯ ಘಾಜಿ ಸೇನೆಯನ್ನು ಸರ್ವನಾಶಗೈದದ್ದು ಮಗದೊಂದು. ವಿದೇಶಿ ಇತಿಹಾಸಕಾರ ಶೇಖ್ ಅಬ್ದುರಹಮಮಾನ್ ಚಿಸ್ಥಿ ತಾನು ಬರೆದ ಸಾಲಾರ್ ಮಸೂದನ ಜೀವನ ಚರಿತ್ರೆಯಲ್ಲಿ "ಇಸ್ಲಾಮಿನ ಹೆಸರಲ್ಲಿ ಅಯೋಧ್ಯೆಯ ತನಕ ಸಾಗಿದ ಅವನ ಪ್ರಯತ್ನ ವಿಫಲವಾಯಿತು. ಈ ಘನ ಘೋರ ಯುದ್ಧದಿಂದ ಅರಬ್-ಇರಾನುಗಳ ಮನೆಮನೆಯಲ್ಲಿ ಚಿತೆಯ ಬೆಂಕಿ ಉರಿಯುತ್ತಿತ್ತು. ಈ ಆಘಾತದಿಂದ ಬೆಚ್ಚಿದ ಮುಸಲ್ಮಾನರು ಮುಂದಿನ ಇನ್ನೂರು ವರ್ಷಗಳ ಕಾಲ ಭಾರತದತ್ತ ಮುಖ ಮಾಡಲಿಲ್ಲ" ಎಂದಿದ್ದಾನೆ.

                   ಪವಿತ್ರ ಸೂರ್ಯಕುಂಡದ ಬಳಿ ಮಸೂದನ ರುಂಡ ಬಿತ್ತು ಎಂದೆನಷ್ಟೇ, ಈ ಸೂರ್ಯಕುಂಡ ಬಹಳ ಪ್ರಖ್ಯಾತವಾದದ್ದು. ಸೂರ್ಯದೇವಾಲಯದ ಬಳಿಯಲ್ಲಿದ್ದ ಈ ಕುಂಡದ ಪವಿತ್ರ ಜಲಕ್ಕೆ ಕುಷ್ಠರೋಗಾದಿಯಾಗಿ ಅನೇಕ ಚರ್ಮರೋಗ ಗುಣಪಡಿಸುವ ವಿಶೇಷ ಶಕ್ತಿಯಿತ್ತು. ಆದರೆ ಹದಿಮೂರನೇ ಶತಮಾನದಲ್ಲಿ ಅದಕ್ಕೆ ಮತ್ತೆ ಕಂಟಕ ಎದುರಾಯಿತು. ಫಿರೋಜ್ ಷಾ ತುಘಲಕ್ ಈ ಕ್ಷೇತ್ರವನ್ನು ಧ್ವಂಸಗೈದು ಸೂರ್ಯ ದೇವಾಲಯ ಹಾಗೂ ಪವಿತ್ರಕುಂಡವನ್ನು ಬಳಸಿಕೊಂಡು ಗುಮ್ಮಟವೊಂದನ್ನು ನಿರ್ಮಿಸಿದ. ಈ ಆಕ್ರಮಿತ ರಣ ಕ್ಷೇತ್ರ ಮುಸ್ಲಿಮರಿಗೆ ಅಸಂಖ್ಯಾತ ‘ಶಹೀದ’ರ ಬಲಿದಾನವಾದ ‘ಪುಣ್ಯ’ ಕ್ಷೇತ್ರವಾಯಿತು. ಸಾಲಾರ್ ಮಸೂದನ ಸಮಾಧಿಯನ್ನೂ ಅಲ್ಲಿ ನಿರ್ಮಿಸಲಾಯಿತು. ಆತನನ್ನು ಅಫ್ತಾಬ್-ಇ-ಶಹದಾದ್(ಸೂರ್ಯನ ಹುತಾತ್ಮ) ಎಂದು ಕರೆದು ಪೂಜಿಸುವ ಪರಿಪಾಠ ಆರಂಭವಾಯಿತು. ಸೂರ್ಯ ದೇವಾಲಯವನ್ನು ನಾಶಮಾಡಿ ಅದರ ಅವಶೇಷಗಳನ್ನುಪಯೋಗಿಸಿಕೊಂಡು ದರ್ಗಾವೊಂದನ್ನು ಮಾಡಿ ಅದಕ್ಕೆ "ಹೊಜ್ ಶಂಶಿ" ಎನ್ನುವ ಪರ್ಷಿಯನ್ ಹೆಸರಿಡಲಾಯಿತು. ಸಾಲಾರ್ ಮಸೂದ್ ಎನ್ನುವ ಶಾಪಗ್ರಸ್ಥ "ಧೀರ" ಹುಡುಗ ಅವಿವಾಹಿತನಾಗಿ ದಾರುಣ ಸಾವು ಕಂಡು "ಹುತಾತ್ಮ"ನಾದನೆಂದೂ, ಅವನೊಬ್ಬ "ಸ್ವಾತಂತ್ರ್ಯ ಹೋರಾಟಗಾರ"ನೆಂದೂ, ಸುಹೈಲ್ ದೇವ್ ಎನ್ನುವ ದುಷ್ಟ ರಾಜ ಅವನನ್ನು ಕೊಂದನೆಂದೂ ಕಥೆ ಕಟ್ಟಲಾಯಿತು. ಇದು ಮತಾಂತರದ ಮತ್ತೊಂದು ದಾರಿ ಅಷ್ಟೇ. ಈ ಮುಲ್ಲಾಗಳ ಮೌಢ್ಯ ಎಲ್ಲಿಯವರೆಗೆ ಮುಟ್ಟಿತೆಂದರೆ ಜೋರಾಗಿ ಗಾಳಿ ಬೀಸಿದರೆ ಸುಹೈಲ್ ದೇವನ “ದುಷ್ಟ“ ಆತ್ಮ ಒಳ ಪ್ರವೇಶಿಸದಂತೆ ದರ್ಗಾವನ್ನು ಕಬ್ಬಿಣದ ದ್ವಾರದಿಂದ ಮುಚ್ಚಿ ಸರಪಳಿಯಿಂದ ಬಿಗಿಯುವಂತಹ ಸಂಪ್ರದಾಯವೂ ಬೆಳೆದು ಬಂತು! ಈ ದರ್ಗಾಕ್ಕೆ ಚಾದರ ಅರ್ಪಿಸುವ ಮತಿಗೇಡಿ ಹಿಂದೂಗಳು ಇದ್ದಾರೆ. ಬಹ್ರೈಚ್ ಕ್ಷೇತ್ರದಲ್ಲಿ ಮಸೂದ್ ಇಂದಿಗೂ ಗಾಜಿಯ ಹೆಸರಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಹಾಗೂ ಅವನನ್ನು ಪೂಜಿಸುವವರಲ್ಲಿ ಹೆಚ್ಚಿನವರು ಹಿಂದೂಗಳೇ! ಪ್ರತಿವರ್ಷ ಅಲ್ಲಿ ನಡೆವ ಉರೂಸ್'ನಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸುತ್ತಾರೆ. ಹಿಂದೂವಿನ ಭೋಳೇತನ ಅಂದರೆ ಇದೇ! ತನ್ನನ್ನು, ತನ್ನ ಗರ್ಭಗುಡಿಯನ್ನು, ಮಾತೃಭೂಮಿಯನ್ನು ಸುಡಲು ಬಂದವನನ್ನು ಆರಾಧಿಸುವುದು!

                    ಆದರೂ ಹಿಂದೂಗಳು ಸೂರ್ಯನ ಆರಾಧನೆ ಬಿಟ್ಟಿಲ್ಲ. ಸೂರ್ಯಕುಂಡದ ಔಷಧೀಯ ಗುಣವೂ ಅವರನ್ನು ಇತ್ತ ಸೆಳೆಯುತ್ತಲೇ ಇದೆ. ಸುಹೈಲ್ ದೇವನ ನೆನಪು ಸ್ಥಳೀಯ ಜನಮಾನಸದಲ್ಲಿ ಮತ್ತು ಬೈಸ್ ಪಂಗಡದವರಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿ.ಶ. 1950ಕ್ಕೆ ಮುಂಚೆಯೇ ಆ ಸ್ಥಳವನ್ನು ಮರಳಿ ಪಡೆಯಲು ಚಳವಳಿ ನಡೆದಿತ್ತು. ಇದಕ್ಕಾಗಿ ಚಿತ್ತೋರಾದಲ್ಲಿ ನಡೆಯಲಿದ್ದ ಒಂದು ಜಾತ್ರೆಗೆ ಅನುಮತಿಯನ್ನು ನಿರಾಕರಿಸಿ ಅಲ್ಲಿನ ಜಿಲ್ಲಾಧಿಕಾರಿ ಸೆಕ್ಷನ್ 144 ಜಾರಿ ಮಾಡಿದ್ದ. ನಂತರದ ಕಾಂಗ್ರೆಸ್ ಆಡಳಿತದಲ್ಲೂ ಇದರ ಪುನರಾವರ್ತನೆಯಾಯಿತು. ಪ್ರಯಾಗ್ ಪುರದ ಸ್ಥಳೀಯ ರಾಜಾ ಸಾಹಬ್, ಸುಹೈಲ್ ದೇವ್ ಸ್ಮಾರಕ್ ಸಮಿತಿಗೆ 500 ಬೀಘಾ ಭೂಮಿ ಹಾಗೂ ಧನ ದಾನಗೈದು ಸುಹೈಲ್ ದೇವನ ಪ್ರತಿಮೆಯನ್ನು ಸ್ಥಾಪಿಸಿದ. ಆ ಅಪ್ರತಿಮ ವೀರನಿಗೆ ದೇಗುಲವೂ ನಿರ್ಮಿಸಲ್ಪಟ್ಟಿತು. ವಿಜಯೋತ್ಸವ ಆಚರಣೆಯಲ್ಲಿ ಹವನ, ಸಾರ್ವಜನಿಕ ಸಮಾರಂಭಗಳೂ ಜರುಗಿದವು . ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳೂ ಪುನರಾರಂಭಗೊಂಡವು. ವಸಂತ್ ಪಂಚಮಿಯ ದಿನ ಸುಹೈಲ್ ದೇವನ ರಾಜ್ಯಾಭಿಷೇಕವನ್ನು ದೊಡ್ಡ ಜಾತ್ರೆ ಆಯೋಜಿಸಿ ವಿಜೃಂಭಣೆಯಿಂದ ಆಚರಿಸುಲಾಗುತ್ತಿದೆ.  1960ರ ತರುವಾಯ ಸುಹೈಲ್ ದೇವನ ಹೆಸರನ್ನು ರಾಜಕಾರಣಿಗಳೂ ಬಿಚ್ಚು ಮಾತಿನಲ್ಲಿ ಬಳಸಲಾರಂಭಿಸಿದರು. ಈಗ ಎಲ್ಲಾ ರಾಜಕೀಯ ಪಕ್ಷಗಳೂ ಬೈಸ್ ಪಂಗಡದವರ ಓಟನ್ನು ಗಿಟ್ಟಿಸಲು ಸುಹೈಲ್ ದೇವನ ಹೆಸರನ್ನೇ ಗಾಳವಾಗಿ ಬಳಸುತ್ತಾರೆ . ಬಿ ಎಸ್ ಪಿ ಅಧಿಕಾರಕ್ಕೆ ಬಂದಾಗಲಂತೂ ದಲಿತರ ಮಹಾನತೆಯನ್ನು ಎತ್ತಿಹಿಡಿಯಲೆಂದು ರಾಜ್ಯದೆಲ್ಲೆಲ್ಲಾ ಸುಹೈಲ್ ದೇವನ ಪ್ರತಿಮೆಗಳನ್ನೇ ಸ್ಥಾಪಿಸಿತು. ಹೀಗೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದವನ ಹೆಸರು ಇತಿಹಾಸಕಾರರಿಗೆ ಬೇಡವಾಯಿತು. ಒಂದು ಕಾಲದಲ್ಲಿ ನೆನಪೇ ಮಾಡಿಕೊಳ್ಳದ ರಾಜಕಾರಣಿಗಳ ಓಟು ಬ್ಯಾಂಕಿಗೆ ಬಂಡವಾಳವಾಯಿತು. ಓಟುಬ್ಯಾಂಕಿಗೋಸ್ಕರವೇ ಆತನ ಜಾತಿಯನ್ನೂ ಬದಲಾಯಿಸಲಾಯಿತು. ಸತ್ತ ಮೇಲೂ ಜಾತಿ ಬದಲಾಯಿಸಲ್ಪಟ್ಟ ರಾಜ ಬಹುಷಃ ಅವನೊಬ್ಬನೇ! ಯಾವ ಧೀರ ಮಾತೃಭೂಮಿಯ ರಕ್ಷಣೆಗಾಗಿ ಸರ್ವರನ್ನೂ ಒಗ್ಗೂಡಿಸಿಕೊಂಡು ಪ್ರಾಣವನ್ನು ಪಣವಾಗಿಟ್ಟು ಕ್ಷತ್ರಿಯೋಚಿತವಾಗಿ ಹೋರಾಡಿ ಆಕ್ರಮಕ ಮುಸಲರ ಸೊಕ್ಕಡಗಿಸಿ, ದಿವ್ಯ ಸೋಮನಾಥದ ಗೌರವ ಉಳಿಸಿ, ಅಯೋಧ್ಯೆ, ಮಥುರಾ, ಕಾಶಿಗಳ ಪಾವಿತ್ರ್ಯವನ್ನು ರಕ್ಷಿಸಿ, ಎರಡು ಶತಮಾನಗಳ ಕಾಲ ಮುಸಲರು ಇತ್ತ ತಲೆ ಹಾಕದಂತೆ ಮಾಡಿದನೋ ಅಂತಹಾ ಮಹಾಪುರುಷನಿಗೆ ಭಾರತ ಗೌರವ ನೀಡುವ ಪರಿಯೇ...!




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ