ಪುಟಗಳು

ಶುಕ್ರವಾರ, ಸೆಪ್ಟೆಂಬರ್ 21, 2012

ಭಾರತ ದರ್ಶನ1


ಭಾರತ ದರ್ಶನ...
ಕೇಳಿದೊಡನೆ ನೆನಪಾಗೋದು ತಾಯಿ ಭಾರತಿಯೆ ಮೈವೆತ್ತಂತಿದ್ದ ಸಹನೆ ತಾಳ್ಮೆಗಳ ಸಾಕಾರ ಮೂರ್ತಿ, ವಾಕ್ಪಟು, ದೃಷ್ಟಾರ, ಅಪ್ರತಿಮ ದೇಶಭಕ್ತ ವಿದ್ಯಾನಂದ ಶೆಣೈ. ಮುಖತ ಭೇಟಿಯಾಗದಿದ್ದರೂ,ಅವರ ಉಪನ್ಯಾಸದಿಂದ ಪ್ರಭಾವಿತರಾದವರು ಅನೇಕ. ನೀವು ಕೇಳಿರಬಹುದು ಆತ ಮಾತಾಡುತ್ತಿದ್ದಂತೆ ನಿಂತ ನಿಲುವಲ್ಲೆ ಏಕಚಿತ್ತರಾಗಿ ಕೇಳುತ್ತಿದ್ದವರೆಷ್ಟೋ ಮಂದಿ!ಬುದ್ಧಿ ಇಲ್ಲದ ಕಮ್ಯೂನಿಷ್ಟರು, ದೇಶ ಮಾರುವ ಕಾಂಗ್ರೆಸ್ಸಿಗರೂ,ದೇಶ ದೂರುವ ಯುವಜನಾಂಗ ಕೂಡಾ ಈ ಬ್ರಹ್ಮಾಚಾರಿಯ ವಾಕ್ಪ್ರವಾಹದಲ್ಲಿ ತೇಲಿ ಹೋದರೆಂದರೆ ಅದೆಂಥ ಮಾತಿನ ಮೋಡಿ ಇರಬಹುದು?
ವಿದ್ಯಾನಂದರು ಹೇಳುತ್ತಾರೆ....
ಭಾರತ ದರ್ಶನ ಎಂದರೆ ಭಾಷೆಯ ವಿಲಾಸ ಅಲ್ಲ. ಅದು ಭಾವನೆಗಳ ಸಂಯೋಜನೆ.ನಮ್ಮೆಲ್ಲರ ಹೃದಯದ ಭಾವನೆಗಳಿಗೆ ಕೊಟ್ಟ ಮೂರ್ತ ರೂಪ!!!
... ಬಂಧುಗಳೇ ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟೃ. ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಈ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.

ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಮಾತ್ರವಲ್ಲ ಅದು ಇಂದಿಗೂ ಜಗತ್ತಿನ ಬಲಾಢ್ಯ ರಾಷ್ತ್ರಗಳಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ. ಅದಕ್ಕೆ ಅದು ಸನಾತನ ಹಾಗೂ ನೂತನ!!!

ಭಾರತದರ್ಶನ-೨

ಭಾರತದರ್ಶನ-೨

ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ಮಾನವ ಜೀವನ ವ್ಯವಸ್ಥೆಯ ಅನೇಕ ಪ್ರಯೋಗಗಳ ಪರಿಪಾಕವಾಗಿ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತು, ಆದರ್ಶ ಜೀವನ ಪದ್ದತಿಯನ್ನು ನಮ್ಮ ಪೂರ್ವಜರು ಬಹು ಮೊದಲೇ ನಿರ್ಮಿಸಿದರು. ತಮ್ಮ ದೇಶವನ್ನು ತಾಯಿ ಎಂದು ಕರೆದು ತಮ್ಮೆಲ್ಲಾ ಶೃದ್ಧಾಭಕ್ತಿಗಳನ್ನು ಆಕೆಯ ಪದತಲದಲ್ಲಿ ಅರ್ಪಿಸಿದರು.

ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ಇದನ್ನು ಅಜನಾಭವರ್ಷ ಎಂದರು. ಅಂದರೆ ಅಜನ್ಮನ(ವಿಷ್ಣು) ನಾಭಿ ಕಮಲದ ಮೇಲೆ ಇದು ನಿಂತಿದೆ ಎಂದರ್ಥ(ಮದ್ಭಾಗವತ). ವಾಯು ಪುರಾಣದಲ್ಲಿ ಹೈಮವತವರ್ಷ ಎಂದರು. ಭರತ ಚಕ್ರವರ್ತಿಯಿಂದಾಗಿ ಭಾರತ ಎನಿಸಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ. ಆತನ ಮಗ ನಾಭಿ. ನಾಭಿಯ ಸುತ ಋಷಭ. ಇವನ ಜೇಷ್ಠ ಪುತ್ರನೇ ಭರತ. ಇದು ವಾಯುಪುರಾಣ, ಭಾಗವತ, ಮಾರ್ಕಂಡೇಯ ಪುರಾಣಗಳಿಂದ ಧೃಢಪಟ್ಟಿದೆ. ಆದರೆ ದುಶ್ಯಂತ ಶಕುಂತಲೆಯರ ಪುತ್ರ ಭರತನಿಂದಾಗಿ ಭಾರತವೆನಿಸಿತೆಂದು ಮಹಾಭಾರತದಲ್ಲಿದೆ. ಈತ ಚತುರ್ ದಿಕ್ಕುಗಳನ್ನು ಗೆದ್ದು ನೂರಕ್ಕೂ ಹೆಚ್ಚು ಅಶ್ವಮೇಧ ಯಾಗ ಮಾಡಿಸಿದನೆಂದು ಐತರೇಯ ಬ್ರಾಹ್ಮಣ ಹೇಳುತ್ತದೆ. ಇವುಗಳ ಪೈಕಿ 78ನ್ನು ಯಮುನೆಯ ತಟದಲ್ಲೂ, 55ನ್ನು ಗಂಗಾ ತೀರದಲ್ಲೂ ನಡೆಸಿದ್ದ ದಾಖಲೆ ಶತಪಥ ಬ್ರಾಹ್ಮಣದಲ್ಲಿದೆ.

ಭೃ ಎನ್ನುವ ಧಾತುವಿನಿಂದ ಭಾರತ ಹುಟ್ಟಿಕೊಂಡಿತು. ಅಂದರೆ ಪೋಷಿಸು, ಭರಿಸು ಎಂದರ್ಥ. ಇದಕ್ಕೆ ಬೆಳಕು, ಜ್ಞಾನ, ಭಗವಂತ ಎಂಬೀ ಅರ್ಥಗಳಿವೆ. ಆದ್ದರಿಂದ ವಿಶ್ವವನ್ನೇ ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ, ಜ್ಞಾನ ನೀಡಿದ, ಭಗವಂತನ ನಾಡು ಭಾರತ! 'ಭಾರತ' ಇದು ಪ್ರಗತಿಯ ಚಿಹ್ನೆ. ನಾಟ್ಯಶಾಸ್ತ್ರದ ಹರಿಕಾರ ಭರತಮುನಿಯ ಬೀಡು. ನಟರಾಜನ ಪದತಲ ಸೋಂಕಿದ ಪುಣ್ಯನೆಲ. 'ಭಾ'ವ, 'ರಾ'ಗ, 'ತಾ'ಳಗಳ ಸಾಮರಸ್ಯದ ಭೂಮಿ! ಇದೇ ಇಲ್ಲಿನ ವಿವಿಧತೆಯಲ್ಲೂ ಏಕನಾದ ಹೊರಡಿಸಿಹುದು!
॥ವಂದೇ ಮಾತರಂ॥
-ಮುಂದುವರಿಯುವುದು

ಸೋಮವಾರ, ಆಗಸ್ಟ್ 27, 2012

ಹಿಂದುತ್ವ ನಿಂತ ನೀರಲ್ಲ ನಿಜ. ಆದರೆ ಹರಿಯುತ್ತಿರೋ ಕೊಳಚೆ ನೀರು ಕೂಡಾ ಆಗಬಾರದಲ್ವೇ.....

ಮೊನ್ನೆ ಮಂಗಳೂರಿನಲ್ಲಿ ನಡೆದ ಘಟನೆಯ ಬಳಿಕ ನಡೆದ ವಿಶ್ಲೇಷಣೆಗಳು ಮನಸ್ಸಿನ ಭಾವತರಂಗಗಳನ್ನೇ ಅಸ್ತವ್ಯಸ್ತ ಮಾಡಿಬಿಟ್ಟವು. ಎಲ್ಲವೂ ಏಕಮುಖ ವಿಶ್ಲೇಷಣೆ! ಬರೇ ಮಾಧ್ಯಮ ಹಾಗೂ ಪ್ರಚಾರಪ್ರಿಯ ಬುದ್ಧಿಜೀವಿಗಳಷ್ಟೇ ಆಗಿದ್ದರೆ ಹುಟ್ಟುಗುಣ ಅಂತ ಬಿಟ್ಟು ಬಿಡಬಹುದಿತ್ತು. ಆದರೆ...ಆದರೆ ಚಿಂತಕರು, ವಿಚಾರವಾದಿಗಳು, ಬಲಪಂಥೀಯರು, ಸನಾತನ ಸಂಸ್ಕೃತಿಯ ಪ್ರತಿಪಾದಕರು, ಯುವಜನಾಂಗದ "ಆದರ್ಶ"ರೂ ಅದೇ ರೀತಿ ವಿಶ್ಲೇಷಿಸಿದಾಗ ಎದೆ ತಲ್ಲಣಿಸಿತು. ಯಾಕೆ ಹೀಗೆ?
ಆ ಬರ್ತ್ ಡೇ ಬಾಯ್ ನನ್ನು ನೋಡಿದವರ್ಯಾರೂ ಅವ ಸಭ್ಯ ಎನ್ನಲಾರರು!ಆತ ಐದಾರು ಹುಡುಗಿಯರನ್ನು ಪ್ರೀತಿಸಿ, ಜಗಳವಾಡಿ, ಈಗ ಅವರೆಲ್ಲರನ್ನು ಪಾರ್ಟಿಗೆ ಆಹ್ವಾನಿಸುತ್ತಾನೆಂದರೆ ಅವನ ಉದ್ದೇಶ ಏನಿರಬಹುದು? ಬರ್ತ್ ಡೇ ಪಾರ್ಟಿಗೆ ಬೆಡ್ ರೂಮ್ ಯಾಕೆ ಬೇಕು?ಅರೆ ಬರೆ ಡ್ರೆಸ್ ಹಾಕಿಕೊಂಡು ಕುಡಿದು ಕುಣಿದು ತೂರಾಡುವ ಹುಡುಗಿಯರಲ್ಲಿ ಯಾವ ಸಂಸ್ಕೃತಿ ಇದೆ?
ಅವರು ಶ್ರೀಮಂತರ ಮಕ್ಕಳೆಂದು ಅಥವಾ ಪೋಲಿಸ್ ಅಧಿಕಾರಿಯ ಮಗಳಿದ್ದಳೆಂದು ಘಟನೆಗೆ ಆ ರೀತಿ ಪ್ರಚಾರ ಸಿಕ್ಕತೇ?ಒಂದು ವೇಳೆ ಅವರು ಬಡ ಹೆಣ್ಣುಮಕ್ಕಳಾಗಿದ್ದರೆ ಘಟನೆಗೆ ಇದೇ ರೀತಿ ಪ್ರಚಾರ ವಿಶ್ಲೇಷಣೆಗಳು ನಡೆಯುತ್ತಿದ್ದವೆ?
ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪರವಾನಿಗೆ ಇಲ್ಲದ, ತೆರಿಗೆ ಕಟ್ಟದ 150 ಹೋಮ್ ಸ್ಟೇ ರೆಸಾರ್ಟ್ ಗಳಿವೆ. ಅವುಗಳಲ್ಲಿ ಸೆಕ್ಸ್ ಟೂರಿಸಂ, ಹುಡುಗಿಯರ ಮಾರಾಟದಂತಹ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದರೂ ಸ್ಥಳೀಯರು ದೂರು ನೀಡಿದಾಗಲೂ ಪೋಲಿಸ್ ಇಲಾಖೆ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಶ್ರೀಮಂತರ ಹೂಟವೆಂದೇ? ಅಥವಾ ಮತಾಂಧರ ಬೆದರಿಕೆಗೆ ಹೆದರಿಯೇ?
ಕೇಳಬೇಕಾದವರು ಕೇಳದಿದ್ದಾಗ ಹೇಳಬೇಕಾದವರು ಹೇಳದೆ ಉಳಿದಾಗ ರಾಜದಂಡ ವಿಫಲವಾದಾಗ ಸಮಾಜದ ಸ್ವಾಸ್ಥ್ಯ ಸಮಾಜವೇ ಕಾಪಾಡಿಕೊಳ್ಳ ಬೇಕಲ್ಲವೆ?ಸಾಮದಿಂದ ಹೇಳಿದಾಗ ಬುದ್ದಿ ಬರದ ತಂಗಿಗೆ ದಂಡಪ್ರಯೋಗ ಮಾಡಿದರೆ ತಪ್ಪೇನು?
ಅಲ್ಲಾ ಮುಸ್ಸಂಜೆ ಹೊತ್ತಲ್ಲಿ ಮನೆಯಲ್ಲಿ ದೀಪ ಉರಿಸೋ ಬದಲು ತುಂಡು ಬಟ್ಟೆ ಉಟ್ಟು ಕುಡಿದು ತೂರಾಡೋ ಹುಡುಗ ಹುಡುಗಿಯರಲ್ಲಿ ಹಿಂದುತ್ವದ ಯಾವ ಸಂಸ್ಕೃತಿ ಅಡಗಿದೆ?
ಹಿಂದುತ್ವ ಬೊನ್ಸಾಯ್ ಗಿಡ ಅಗಬಾರದು, ಆಗಲಾರದು ಅದು ವಿಶಾಲ ವಟವೃಕ್ಷ.ಹಾಗೆಂದು ಅದರ ಬೇರುಗಳನ್ನು ಕೀಳ ಹೊರಟರೆ ಹೇಗೆ? ಅದರ ಟೊಂಗೆ ಕಡಿದರೆ ಅದು ನೆರಳು ಕೊಡುವುದೆಂತು,ಪಕ್ಷಿಗಳು ಬದುಕುವುದೆಂತು?
ಹಿಂದುತ್ವ ನಿಂತ ನೀರಲ್ಲ ನಿಜ. ಆದರೆ ಹರಿಯುತ್ತಿರೋ ಕೊಳಚೆ ನೀರು ಕೂಡಾ ಆಗಬಾರದಲ್ವೇ?

ಪ್ರಾಣ ಹೋಗಿತ್ತು. ಧರ್ಮ ಸತ್ತಿತ್ತು!

ಒಂದು ಕಥೆ-ಒಂದು ವ್ಯಥೆ!
ಹುಡುಗಿಯರಿಬ್ಬರು ಇಬ್ಬರು ಹುಡುಗರೊಡನೆ ಲಲ್ಲೆಗರೆಯುತ್ತ ಸಾಗುತ್ತಿದ್ದಾರೆ. ವಸನವೋ ಹೇಳತೀರದು.ವ್ಯಸನವಾಗಿದೆ.
ಮಾರ್ಗ ಮಧ್ಯದಲ್ಲಿ ಬಡತನವೇ ಮೈವೆತ್ತಂತಿರುವ ಹರಿದ ಸೀರೆ ಉಟ್ಟ ಹೆಂಗಸೊಬ್ಬಳು ಹಸಿವು ಬಾಯಾರಿಕೆಯಿಂದ ಬಿದ್ದು ನರಳುತ್ತಿದ್ದಾಳೆ.ಅವಳನ್ನು ನೋಡಿ ಈ ಹುಡುಗ ಹುಡುಗಿಯರು ಸಹಾಯ ಮಾಡೋ ಬದಲು ತಮಾಷೆ ಅವಹೇಳನ ಮಾಡಲಾರಂಭಿಸಿದರು.
ಆಗ ಆ ತಾಯಿ ಮನಸ್ಸಲ್ಲೇ ಅಂದುಕೊಂಡಳು, "ನನ್ನ ಪ್ರಾಣ ಹೋಗುತ್ತಿದೆ. ಆದರೆ ಮಾನ ಉಳಿದಿದೆ. ಅವರ ಮಾನ ಉಳಿದಿಲ್ಲ. ಹಾಗಾಗಿ ಪ್ರಾಣವೂ!"
ಪ್ರಾಣ ಹೋಗಿತ್ತು. ಧರ್ಮ ಸತ್ತಿತ್ತು!

ಬೇಕಿರೋದು ಸಶಸ್ತ್ರ ಕ್ರಾಂತಿ!

ಬಾಂಗ್ಲಾ, ಪಾಕಿಸ್ತಾನದಿಂದ ಬಂದ, ಬರುತ್ತಿರುವ ದೇಶದ್ರೋಹಿಗಳಿಗೆ ರೇಷನ್ ಕಾರ್ಡ್ , ಪೌರತ್ವ, ಕೊನೆಗೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ, ಮಂತ್ರಿಗಿರಿ ನೀಡುವ ಷಂಡ ಸರಕಾರಕ್ಕೆ ಅಸ್ಸಾಂ ಹಿಂದುಗಳಿಗೆ ಕನಿಷ್ಟ ಭದ್ರತೆ, ಸಾಂತ್ವನ ಒದಗಿಸುವ ಮನಸ್ಸು ಹೃದಯ ಇಲ್ಲವೇ? ಪಾಕಿಸ್ತಾನ ಬಾಂಗ್ಲಾದಿಂದ ತನು ಮನ ಧನ ಮಾನ ಆಸ್ತಿ ಹಾನಿಗೊಂಡು ಕಣ್ಣೀರು ಸುರಿಸುತ್ತಾ ಭಾರತವೊಂದೇ ಅಭಯ ಎಂಬ ಆಶಾಭಾವನೆಯಿಂದ ಬರುತ್ತಿರೋ ಅಸಂಖ್ಯಾತ ಹಿಂದುಗಳಿಗೆ ಆಶ್ರಯ ಕೊಡದ ಸರಕಾರದ ಮಂತ್ರಿ ಮತ್ತವರ ಹೊಗಳುಭಟರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೆ!
ಬೊಗಳದ ನಾಯಿ ಕಳ್ಳ ನಾಯಿ ಅದು ಕಚ್ಚುತ್ತೆ ಎಂಬುದು ಎಷ್ಟು ಸತ್ಯ ನೋಡಿ! ಮನಮೋಹನ ಯಾಕೆ ಮೌನವಾಗಿದ್ದ ಗೊತ್ತೆ? ಯಾಕೆಂದರೆ ಕಲ್ಲಿದ್ದಲನ್ನೇ ನುಂಗಿದ್ದ!
ಕಣ್ಣು ಕಿವಿ ಇಲ್ಲದ ನಾಲಗೆ ಬಿದ್ದು ಹೋದ ಈ ದೇಶದ್ರೋಹಿ ರಾಜಕಾರಣಿಗಳಿಗೆ ಚಳವಳಿ ಉಪವಾಸಗಳು ನಾಟೋದಿಲ್ಲ. ಬ್ರಿಟಿಷರನ್ನು ಓಡಿಸಿದ ಹಾಗೆ ಈ ಬ್ರಿಟಿಷ್ ಮಾನಸಿಕತೆಯವರನ್ನು ಸುಡಬೇಕಾದರೆ ಸಶಸ್ತ್ರಕ್ರಾಂತಿಯೊಂದೇ ದಾರಿ!
ಬರ್ಮಾದಲ್ಲಿ ಮುಸ್ಲಿಮರು ಸತ್ತರೆ ಯೋಧರ ಸ್ಮೃತಿಚಿಹ್ನೆಗಳನ್ನೇ ಒಡೆದು ಹಾಕುವ, ಹಿಂದುಗಳನ್ನು ಹೊಡೆಯುವ ಕೊಲ್ಲುವ, ರಾಷ್ಟ್ರೀಯ ಆಸ್ತಿಪಾಸ್ತಿ ಹಾನಿ ಮಾಡುವ ವಿಷಯಗಳು ಮಾಧ್ಯಮಗಳ ಟಿ ಆರ್ ಪಿಯನ್ನು ಹೆಚ್ಚಿಸುವುದಿಲ್ಲ ಅಲ್ಲವೆ? ಮಾನಗೆಟ್ಟ ಮಾಧ್ಯಮ ಬುದ್ದಿಜೀವಿಗಳು ಈಗೆಲ್ಲಿ ಸತ್ತು ಹೋಗಿದ್ದಾರೆ? ಅಸ್ಸಾಮಿಗರ ಸಹಾಯಕ್ಕೆ ನಿಂತಿರೋದು ಅದೇ ನೀವು ಚಡ್ಡಿ ಅಂತ ಹೇಳೋ RSSನ ಗೂಂಡಾಗಳು! ಈಗೇನು ನಿಮ್ಮ ನಾಲಗೆ ಬಿದ್ದು ಹೋಗಿದೆಯೇ?