ಪುಟಗಳು

ಶುಕ್ರವಾರ, ಆಗಸ್ಟ್ 22, 2014

ಕಿರಣೋತ್ಸವ

ಕೊಲ್ಹಾಪುರದ ಮಹಾಲಕ್ಷ್ಮಿಯ ವಿಗ್ರಹ ಪಶ್ಚಿಮಾಭಿಮುಖವಾಗಿದ್ದು ಸುಮಾರು 6000 ವರ್ಷಗಳಷ್ಟು ಹಳೆಯದು. ದೇವಿಯ ಕಿರೀಟದಲ್ಲಿ ಸರ್ಪಲಾಂಛನ ಹಾಗೂ ಶಿವಲಿಂಗವಿದೆ. ಆದಿಶಂಕರಾಚಾರ್ಯರು ರಚಿಸಿರುವ ಅಷ್ಟಾದಶ ಶಕ್ತಿಪೀಠಗಳನ್ನು ಕುರಿತ ಸ್ತ್ರೋತ್ರದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿಯ ಉಲ್ಲೇಖವಿದೆ. ಸತೀದೇವಿ ತನ್ನ ಯೋಗಾಗ್ನಿಯಿಂದ ಆತ್ಮಾರ್ಪಣೆ ಮಾಡಿಕೊಂಡಾಗ, ದಕ್ಷಸಂಹಾರದ ಬಳಿಕ ಪತ್ನಿಯ ದೇಹ ಹೊತ್ತು ರುದ್ರನರ್ತನ ಮಾಡತೊಡಗಿದ ಶಿವನ ಕೋಪವನ್ನು ತಣಿಸಲು ಹರಿ ಸತೀದೇವಿಯ ಶರೀರವನ್ನು ತುಂಡರಿಸಿ ಹದಿನೆಂಟು ದಿಕ್ಕುಗಳಲ್ಲಿ ಚೆಲ್ಲುತ್ತಾನೆ. ಆ ಹದಿನೆಂಟು ಸ್ಥಳಗಳು ಶಕ್ತಿಪೀಠಗಳೆಂದು ಪ್ರಸಿದ್ಧಿ ಹೊಂದುತ್ತವೆ. ಈ ಪುರಾಣ ಕಥೆಗೂ ವಿಗ್ರಹದ ಕಿರೀಟದಲ್ಲಿರುವ ಶಿವಲಿಂಗಕ್ಕೆ ಏನಾದರೂ ಸಂಬಂಧವಿರಬಹುದೇ? ಸಂಶೋಧನೆಯ ಅಗತ್ಯವಿದೆ!
ಅಲ್ಲದೆ ಈ ದೇವಾಲಯ ನಿರ್ಮಿಸಿದ ಶಿಲ್ಪಿಯ ಚಾತುರ್ಯ ಈ ಕಾಲದ ಯಾವ ಆರ್ಕಿಟೆಕ್ಟಿಗೂ ಸವಾಲೇ ಸರಿ! ರಥ ಸಪ್ತಮಿಯ ಸಮಯದಲ್ಲಿ ಮೂರು ದಿನಗಳ ಕಾಲ ಸೂರ್ಯ ರಶ್ಮಿಯು ಮೊದಲದಿನ ದೇವಿಯ ಪಾದಕ್ಕೂ, ಎರಡನೆಯ ದಿನ ವಿಗ್ರಹದ ಮಧ್ಯಭಾಗಕ್ಕೂ, ಮೂರನೇ ದಿನ ದೇವಿಯ ಪವಿತ್ರ ವದನದ ಮೇಲೆ ಬೀಳುತ್ತದೆ! ಆ ರೀತಿ ಬೀಳುವಂತೆ ಗರ್ಭಗುಡಿಯ ಪಶ್ಚಿಮ ಭಾಗದಲ್ಲಿ ಒಂದು ಕಿಂದಿಯೊಂದನ್ನು ರಚಿಸಲಾಗಿದೆ. ಆ ಕಾಲವನ್ನು ಕಿರಣೋತ್ಸವವೆಂದು ಆಚರಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ