ಪುಟಗಳು

ಬುಧವಾರ, ಆಗಸ್ಟ್ 27, 2014

ಅಗ್ನಿಮೀಳೇ.....

"ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ ಋತ್ವಿಜಮ್|
ಹೋತಾರಂ ರತ್ನಧಾತಮಮ್||"

ಅಪಾರವಾದ ಆನಂದವೆಂಬ ರತ್ನವನ್ನು ಧರಿಸಿದವನಾದ, ಯಜ್ಞದ ಪುರೋಹಿತ, ಹೋತಾರ, ಋತ್ವಿಜ ಹಾಗೂ ದೇವನಾದ ಅಗ್ನಿಯನ್ನು ನಾನು ಪ್ರಾರ್ಥಿಸುತ್ತೇನೆ.

ಇಲ್ಲೊಂದು ವಿಶೇಷವಿದೆ: ಇಲ್ಲಿ ಯಜ್ಞವನ್ನು ನಡೆಸುವ ಋತ್ವಿಜನೂ ಅಗ್ನಿಯೇ, ಯಜ್ಞಕ್ಕೆ ಇತರ ದೇವತೆಗಳನ್ನು ಆಹ್ವಾನಿಸುವವ ಹೋತಾರನೂ ಅಗ್ನಿಯೇ, ನಡೆಸುವ ಯಜ್ಞದ ಅಧಿದೇವತೆಯೂ ಅಗ್ನಿಯೇ!
ಅಂದರೆ ಸಾಧಕನ ಹೃದಯದಲ್ಲಿ ಈ ಅಂತರ್ಯಜ್ಞ ನಡೆಯುತ್ತಿದೆ.

ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ
"ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್
ಮಂತ್ರೋಹಮಹಮೇವಾಜ್ಯಮಹಮಗ್ನಿರಹಂ ಹುತಮ್"

"ಯಜ್ಞವು ನಾನೇ - ಮಂತ್ರವೂ ನಾನೇ - ಆಜ್ಯವೂ ನಾನೇ - ಆಹುತಿಯನ್ನೊಯ್ಯುವ ಅಗ್ನಿಯೂ" ನಾನೇ ಎಂದಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ