ಪುಟಗಳು

ಮಂಗಳವಾರ, ನವೆಂಬರ್ 29, 2016

ಯಾರು ಮಹಾತ್ಮ? ಭಾಗ-೨೬

ಯಾರು ಮಹಾತ್ಮ?
ಭಾಗ-೨೬


          ಬಸವಳಿದಿತ್ತು ಬ್ರಿಟನ್. ಎರಡನೇ ವಿಶ್ವಯುದ್ಧದಲ್ಲಿ ಅದು ಗೆಲುವನ್ನೇನೋ ಪಡೆದಿತ್ತು. ಆದರೆ ಯುದ್ಧಕ್ಕೆ ಮುನ್ನ ಸೂರ್ಯ ಮುಳುಗದ ನಾಡಾಗಿದ್ದ ಬ್ರಿಟನ್ನಿನಲ್ಲಿ ಯುದ್ಧದ ತರುವಾಯ ಅಕ್ಷರಶಃ ಕತ್ತಲು ಆವರಿಸಿತ್ತು. ಕಲ್ಲಿದ್ದಲು ಉತ್ಪಾದನೆ ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಹಾಗಾಗಿ ಬ್ರಿಟನ್ನಿನ ಹಲವು ಭಾಗಗಳಲ್ಲಿ ದಿನದ ಬಹುತೇಕ ಸಮಯ ವಿದ್ಯುತ್ತೇ ಇರುತ್ತಿರಲಿಲ್ಲ. ವಿಜಯವೇನೋ ಸಿಕ್ಕಿತ್ತು. ಆದರೆ ಆ ವಿಜಯಕ್ಕಾಗಿ ಬ್ರಿಟನ್ ತೆತ್ತ ಬೆಲೆ ಅಪಾರ! ಲಂಡನ್ನಿನ ಬೀದಿಗಳು ಗಬ್ಬು ನಾರುತ್ತಿದ್ದವು. ಕೈಗಾರಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಬೊಕ್ಕಸ ಬರಿದಾಗಿತ್ತು. ಸಾಲ ತುಂಬಲೂ ಹಣ ಇಲ್ಲದಂತಾಗಿತ್ತು. ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದರು. ಬೀದಿಗಳು ಬಿಕೋ ಅನ್ನುತ್ತಿದ್ದವು. ಜನರು ಕಳಾಹೀನರಾಗಿದ್ದರು. ಜನರ ಅಶನ ವಸನಾದಿಗಳು ಎಂಟು ವರ್ಷಗಳ ಯುದ್ಧದ ಪರಿಣಾಮವನ್ನು ಸಾರಿ ಹೇಳುತ್ತಿದ್ದವು.

          ಸತತ ಎಂಟನೇ ವರ್ಷವೂ ಸರಕಾರ ಕೊಡಮಾಡುವ ಪಡಿತರದಲ್ಲೇ ಬದುಕಬೇಕಾದ ಅನಿವಾರ್ಯ ಅಸಹಾಯಕ ಸ್ಥಿತಿಯಲ್ಲಿ ಲಂಡನ್ನಿಗರಿದ್ದರು. ಆಹಾರ, ಇಂಧನ, ಪಾನೀಯ, ವಿದ್ಯುತ್, ಶೂ ಹಾಗೂ ಬಟ್ಟೆಗಳಿಗಾಗಿ ಜನ ಪಡಿತರವನ್ನೇ ಆಶ್ರಯಿಸಿದ್ದರು. ಆಟಿಕೆಗಳ ಮೇಲೆ ಸರಕಾರ ನೂರು ಶೇಖಡಾ ಖರೀದಿ ತೆರಿಗೆ ವಿಧಿಸಿತ್ತು. ಲಂಡನ್ನಿನ ಯಾವ ಅಂಗಡಿಯನ್ನು ನೋಡಿದರೂ "ಇಲ್ಲ" ಎನ್ನುವ ಒಕ್ಕಣೆಯುಳ್ಳ ಬೋರ್ಡುಗಳೇ ರಾರಾಜಿಸುತ್ತಿದ್ದವು. ಆಲೂಗಡ್ಡೆ, ಮಾಂಸ, ಸಿಗರೇಟಿಗೂ ತತ್ವಾರ ಉಂಟಾಗಿತ್ತು. ಬ್ರಿಟನ್ ಅರ್ಥಶಾಸ್ತ್ರಜ್ಞ ಜಾನ್ ಮೇಯ್ನಾರ್ಡ್ 1946ರಲ್ಲಿ ಹೇಳಿದ್ದ "ನಮ್ಮದು ಬಡ ದೇಶ. ಅದರಂತೆ ಬದುಕುವುದನ್ನು ಕಲಿಯಬೇಕಾಗಿದೆ" ಎನ್ನುವ ಮಾತುಗಳೇ ಸದಾ ಬ್ರಿಟಿಷರ ತಲೆಯಲ್ಲಿ ಗುಂಯ್ಗುಡುತ್ತಿದ್ದವು. 1947ರ ಹೊಸವರ್ಷದ ಬೆಳಗನ್ನು ಚಹಾ ಹೀರುವ ಮೂಲಕ ಸ್ವಾಗತಿಸೋಣವೆಂದರೆ ಒಂದು ಲೋಟ ಬಿಸಿ ನೀರಿಗೂ ಇಂಗ್ಲೆಂಡಿಗರಿಗೆ ತತ್ವಾರವಾಗಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)

          ಮಹಾಯುದ್ಧದ ಸಂದರ್ಭವನ್ನು ವೀರ ಸಾವರ್ಕರ್ ಸಲಹೆಯಂತೆ ಸದುಪಯೋಗಪಡಿಸಿಕೊಂಡು ರಾಸ್ ಬಿಹಾರಿ ಬೋಸರಿಂದ ಸೇನಾಧಿಪತ್ಯ ಪಡೆದು ಸುಭಾಷ್ ಬ್ರಿಟಿಷರನ್ನು ಒದ್ದೋಡಿಸಲು ಭಾರತದತ್ತ ಮುನ್ನುಗ್ಗುತ್ತಿದ್ದರು. ಶತಮಾನಗಳಿಂದಲೂ ಮತ್ತೆ ಮತ್ತೆ ಎದ್ದು ಬರುತ್ತಿದ್ದ ಕ್ರಾಂತಿಯ ಕಿಡಿ, ಸುಭಾಷ್ ಹಾಗೂ ಐ.ಎನ್.ಎ.ಯ ಭಯ ಹಾಗೂ ಅದರಿಂದ ಭಾರತೀಯ ಸೇನೆಯಲ್ಲಿ ಎದ್ದ ಕಿಚ್ಚು, ಮಹಾಯುದ್ಧದಿಂದ ಇಂಗ್ಲೆಂಡಿನಲ್ಲಿ ಉಂಟಾಗಿದ್ದ ದುರ್ಭರ ಸನ್ನಿವೇಶ ಬ್ರಿಟಿಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದವು. "ಸಶಸ್ತ್ರ ಕ್ರಾಂತಿ ಮತ್ತು ಇತಿಹಾಸದ ಶಕ್ತಿಗಳಿಂದ ಹೊರದಬ್ಬಿಸಿಕೊಳ್ಳುವ ಬದಲು ಭಾರತವನ್ನು ತ್ಯಜಿಸುವುದೇ ಮೇಲು" ಎನ್ನುವ ನಿರ್ಣಯಕ್ಕೆ ಅನಿವಾರ್ಯವಾಗಿ ಬರಲೇಬೇಕಾಯಿತು. ಇದು ವಾಸ್ತವ. ವಿಪರ್ಯಾಸವೆಂದರೆ ಅಸಂಗತ, ಅಸಮರ್ಪಕ, ಅರೆಬೆಂದ ವಿಚಾರಧಾರೆಯ, ನಿರ್ದಿಷ್ಟ ಗುರಿಯಿಲ್ಲದ, ನಿರ್ಣಾಯಕವೂ ಅಲ್ಲದ ಗಾಂಧಿಯ ಚಳವಳಿಗಳೇ ಸ್ವಾತಂತ್ರ್ಯಕ್ಕೆ ಕಾರಣ ಎನ್ನುವ ಇತಿಹಾಸದ ವಿರೂಪವೇ ಎಲ್ಲೆಡೆ ನರ್ತಿಸುತ್ತಿದೆ.

             ಸುಭಾಷರ ಸಾಹಸ ಹಾಗೂ ಬಳಿಕದ ಐ.ಎನ್.ಎ ಸೈನಿಕರ ವಿಚಾರಣೆ ಭಾರತೀಯ ಸೈನಿಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿತ್ತು. ದೇಶವಾಸಿಗಳು ಸಿಡಿದೆದ್ದಿದ್ದರು. ಐ.ಎನ್.ಎ ವಿಚಾರಣೆ ಖಂಡಿಸಿ 1946ರಲ್ಲಿ ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ವೈಸ್ ರಾಯ್ ನಿರ್ಣಯದಂತೆ ಐ.ಎನ್.ಎ ಯ ಸೈನಿಕರ ಗಡೀಪಾರು ಶಿಕ್ಷೆಯನ್ನು ರದ್ದುಮಾಡಿ ಕ್ಷಮಾದಾನ ನೀಡಲಾಯಿತು. ಅದೇ ಸಂದರ್ಭದಲ್ಲಿ ರಾಯಲ್ ನೇವಿಯ 3000 ಸೈನಿಕರು ಬಂಡೆದ್ದರು. ಬಾಂಬೆ ಸಿಗ್ನಲ್ ಶಾಲೆಯ ಸೈನಿಕರು ಬ್ರಿಟಿಷ್ ಕಮಾಂಡರುಗಳು ಭಾರತದ-ರಾಷ್ಟ್ರೀಯತೆಯ ವಿರುದ್ಧ ಮಾಡುತ್ತಿದ್ದ ಅವಹೇಳನಕರವಾದ ತಾತ್ಸಾರದ ನುಡಿಗಳು, ವೇತನ, ಅಸಮರ್ಪಕ ಆಹಾರ ಹಾಗೂ ಜನಾಂಗೀಯ ಪಕ್ಷಪಾತದ ವಿರುದ್ಧ 1945 ಆಗಸ್ಟಿನಲ್ಲಿ ಉಪವಾಸ ಶುರು ಮಾಡಿದರು. ಆ ಸಂದರ್ಭದಲ್ಲಿ ಕಮಾಂಡರ್ ಕಿಂಗ್ ಎನ್ನುವ ಉಸ್ತುವಾರಿ ಅಧಿಕಾರಿಯೊಬ್ಬ ಸೈನಿಕರನ್ನು ಉದ್ದೇಶಿಸಿ ಅವರ ಬಗ್ಗೆ, ಅವರ ಹೆತ್ತವರ ಬಗ್ಗೆ ಅಸಭ್ಯ ಭಾಷೆಯಲ್ಲಿ ಮಾತಾಡಿದ. ಮುಷ್ಕರ ಎಪ್ಪತ್ನಾಲ್ಕು ಹಡಗುಗಳಿಗೆ, ಇಪ್ಪತ್ತು ಸಾಗರ ನೆಲೆಗಳಿಗೆ ಹಬ್ಬಿತು. ಮೂರೇ ದಿನಗಳಲ್ಲಿ ಬ್ರಿಟಿಷ್ ಆಡಳಿತ ಭಾರತೀಯ ಸೇನೆಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನೌಕಾದಳದ ಸೈನಿಕರು ಇಪ್ಪತ್ತು ಹಡಗುಗಳ ಮೇಲೆ ನಿಯಂತ್ರಣ ಸಾಧಿಸಿದರು. ಸೇನಾ ಕಾವಲುಗಾರರ ಮೇಲೆ ಗುಂಡು ಹಾರಿಸಲು ಸಿದ್ಧರಾದರು. ಗನ್ ಹಾಗೂ ವಿಮಾನಗಳನ್ನು ವಶಪಡಿಸಿಕೊಳ್ಳಲಾಯಿತು. ಅಡ್ಮಿರಲ್ ಗಾಡ್ ಫ್ರೇಯ ಮನವೊಲಿಸುವ ಮಾತುಗಳೂ ವಿಫಲವಾದವು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮಾತನ್ನು ಲೆಕ್ಕಿಸದೆ ಪ್ರತಿಭಟನೆ ಆರಂಭವಾಯಿತು. ಜನ ಬ್ಯಾಂಕ್, ಅಂಚೆಕಛೇರಿ, ಪೊಲೀಸ್ ಠಾಣೆ, ಸರಕಾರೀ ಕಛೇರಿಗಳ ಲೂಟಿಗೆ ತೊಡಗಿದರು. ಪೊಲೀಸರಿಂದ ಪರಿಸ್ಥಿತಿಯ ನಿಯಂತ್ರಣ ಸಾಧ್ಯವಾಗದೆ ಸೈನ್ಯವನ್ನು ಕರೆಸಲಾಯಿತು. "ಕಂಡಲ್ಲಿ ಗುಂಡು ಹಾರಿಸಿ" ಎನ್ನುವ ನಿರ್ದೇಶನದಿಂದ ಇನ್ನೂರಕ್ಕೂ ಹೆಚ್ಚು ಜನರ ಆಹುತಿಯಾಯಿತು. ಈ ಮುಷ್ಕರಕ್ಕೆ ಬೆಂಬಲ ನೀಡಿ ರೈಲ್ವೇ ಸಿಬ್ಬಂದಿ ತಮ್ಮ ಕಾರ್ಯ ಸ್ಥಗಿತಗೊಳಿಸಿದರು.(ದಿ ಟ್ರಾನ್ಸ್ ಫರ್ ಆಫ್ ಪವರ್ - ವಿ.ಪಿ. ಮೆನನ್)(ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

           ಅಂಬಾಲಾ, ಕರಾಚಿ, ಮದ್ರಾಸ್, ಕಲ್ಕತ್ತಾ ಹಾಗೂ ರಂಗೂನ್'ಗಳಲ್ಲೂ ಮುಂಬಯಿ ಪ್ರತಿಭಟನೆ ಪ್ರತಿಧ್ವನಿಸಿತು. ಇದು ಭೂ ಸೇನೆ ಹಾಗೂ ವಾಯುದಳದ ಮೇಲೂ ಪರಿಣಾಮ ಬೀರಿತು. ವಾಯುದಳದ ಸೈನಿಕರು ದಂಗೆಯೆದ್ದರು. ನೌಕಾದಳದ ಸಿಬ್ಬಂದಿ ಕೆಲಸ ನಿಲ್ಲಿಸಿದರು. ಪೊಲೀಸರಲ್ಲೂ ದೇಶಭಕ್ತರ ಅನೇಕ ಭೂಗತ ಜಾಲಗಳಿದ್ದವು. ಬಿಹಾರ ಕಾನ್ ಸ್ಟೇಬಲ್ ರಮಾನಂದ ತಿವಾರಿ ಅಂತಹ ದೇಶಭಕ್ತ ಪೊಲೀಸರ ಬಹುದೊಡ್ಡ ಜಾಲವನ್ನು ಹೆಣೆದಿದ್ದ ಪ್ರಮುಖರಲ್ಲೊಬ್ಬ. ಅನೇಕ ಕಡೆ ಪೊಲೀಸರ ಬಂಡಾಯವೂ ಆರಂಭವಾಯಿತು. ನೌಕಾದಳದ ಮುಷ್ಕರವನ್ನು ಕಮಾಂಡರ್-ಇನ್-ಚೀಫ್ ಖಂಡಿಸಿದಾಗ ಇಂಡಿಯನ್ ಸಿಗ್ನಲ್ ಕಾರ್ಪ್ಸ್'ನ 200 ಸಿಬ್ಬಂದಿ ಜಬಲ್ಪುರದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಸರ್ಕಾರ ವಿಜಯ ದಿನ ಆಚರಿಸಲು ಮುಂದಾದಾಗ ದೆಹಲಿಯಲ್ಲಿ ಭಾರೀ ಗಲಭೆಗಳು ನಡೆದವು. ಹೀಗೆ 1946ರಲ್ಲಿ ಇಡೀ ಭಾರತ ಕ್ರಾಂತಿಯ ವಾತಾವರಣದಿಂದ ಕೂಡಿತ್ತು. ಪೊಲೀಸ್ ಹಾಗೂ ಸೈನ್ಯದಲ್ಲಿ ಬಂಡಾಯಗಳು ನಡೆದವು. 1946ರ ಫೆಬ್ರವರಿಯಲ್ಲಿ ಮುಂಬೈಯ ಹನ್ನೊಂದು ನೌಕಾನೆಲೆಗಳ ಇಪ್ಪತ್ತು ಸಾವಿರ ರೇಟಿಂಗ್ ಹಾಗೂ ಎಲ್ಲಾ ಬಂದರುಗಳಲ್ಲಿದ್ದ ಯೂನಿಯನ್ ಜಾಕ್ ಧ್ವಜವನ್ನು ಕೆಳಗಿಳಿಸಲಾಯಿತು. ದೇಶದಲ್ಲಿ ಎದ್ದ ಕ್ರಾಂತಿಯ ಜ್ವಾಲೆಗೆ ಬ್ರಿಟಿಷರ ನಾಲಗೆಯ ಪಸೆ ಆರತೊಡಗಿತು.(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್ - ಹೊ.ವೆ. ಶೇಷಾದ್ರಿ; ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

            ಸೈನ್ಯವನ್ನು, ಪೊಲೀಸ್ ಪಡೆಯನ್ನು ನಂಬುವಂತಿಲ್ಲವಾದ್ದರಿಂದ ನೇರವಾಗಿ ದಂಗೆಯನ್ನು ದಮನಿಸಹೊರಟರೆ ತಮಗೆ ಕ್ರಾಂತಿ ಜ್ವಾಲೆ ತಮ್ಮನ್ನೇ ಆಪೋಶನ ತೆಗೆದುಕೊಳ್ಳಬಹುದೆಂದು ಅರಿತ ಸರ್ಕಾರ ಬಂಡಾಯಕ್ಕೆ ಕೊನೆಹಾಡುವಂತೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗಿಗೆ ಮನವಿ ಮಾಡಿತು. ಅದರಂತೆ ಜಿನ್ನಾ ಹಾಗೂ ಗಾಂಧಿ ದಂಗೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ, ದಂಗೆಯಲ್ಲಿ ಭಾಗವಹಿಸಿದ್ದವರು ಶರಣಾಗುವಂತೆ ಕರೆ ನೀಡಿದರು. ತಮ್ಮನ್ನು ಜನತೆಯಿಂದ ಪ್ರತ್ಯೇಕಿಸಿದ ತಥಾಕಥಿತ ನಾಯಕರ ಕುತಂತ್ರದಿಂದ ಬೇಸತ್ತ ನೌಕಾಪಡೆ ಮುಷ್ಕರ ನಿಲ್ಲಿಸುವಂತೆ ಕರೆ ನೀಡಿತು. ತಮಗೆ ವಿಶ್ವಾಸದ್ರೋಹ ಎಸಗಲಾಯಿತು ಎಂಬ ಭಾವನೆ ಅವರಲ್ಲುಂಟಾಯಿತು. ತಿದಿಯೂದಿ ಬೆಂಕಿಯ ಝಳಕ್ಕೆ ನಡುಗುವ, ಕ್ರಾಂತಿಯ ಬಿರುಗಾಳಿಗೆ ಆಶ್ರಯ ಹುಡುಕುವ, ತಮ್ಮ ಆಸೆಗಳಿಗಾಗಿ ದೇಶೀಯರನ್ನು ಬಲಿಕೊಟ್ಟು ಪರದೇಶಿಗಳ ಕಾಲ್ನೆಕ್ಕುವ ನಾಯಕರ ಬಗ್ಗೆ ಅವರಿಗೆ ಅಸಹ್ಯ ಉಂಟಾಯಿತು. ಹೀಗೆ ಸ್ವಾತಂತ್ರ್ಯದ ಮಹತ್ವದ ಘಟ್ಟವಾದ ಸೇನಾ ಬಂಡಾಯಕ್ಕೂ ಹಿಂದಿನಿಂದ ಇರಿದ ಹಿರಿಮೆ ಗಾಂಧಿಯದ್ದು!


           ಬ್ರಿಟಿಷ್ ಸರಕಾರ ಮೂವರು ಸಂಪುಟ ಸಚಿವರ(ಲಾರೆನ್ಸ್, ಕ್ರಿಪ್ಸ್, ಅಲೆಗ್ಸಾಂಡರ್) ನಿಯೋಗವನ್ನು ಭಾರತಕ್ಕೆ ಕಳುಹಿತು. ಈ ಆಯೊಗದ ಸಮೀಕ್ಷೆಯನ್ನು ಆಧಾರವಾಗಿರಿಸಿ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ "ಭಾರತದ ಇತಿಹಾಸದಲ್ಲಿ 1946 ಮಹತ್ವದ ವರ್ಷವಾಗಲಿದೆ. ಮುಂದಿನ ಕೆಲ ತಿಂಗಳಲ್ಲಿ ನಾವು ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು ಮುಂದೆ ಹೆಜ್ಜೆ ಹಾಕಲಿದ್ದೇವೆ. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ" ಎಂದು ಘೋಷಿಸಿದ. ಭಾರತವನ್ನು ತ್ಯಜಿಸುವ ಬಗ್ಗೆ ಬ್ರಿಟಿಷರು ತಯಾರಾಗಿದ್ದರು ಎನ್ನುವುದನ್ನು ಈ ಮಾತು ಪ್ರತಿಧ್ವನಿಸಿತ್ತು. ಹಾಗೆಯೇ "ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು..." ಎನ್ನುವ ವಾಕ್ಯ ವಿಭಜನೆಯ ಮುನ್ಸೂಚನೆಯನ್ನೂ ಕೊಟ್ಟಿತ್ತು! ಆದರೆ ವಿಭಜನೆಗೆ ಮಹಾತ್ಮ ಎಂದು ಕರೆಸಿಕೊಂಡಾತನೇ ಬೆಂಬಲ ಕೊಟ್ಟದ್ದು ಮಾತ್ರ ಚೋದ್ಯ! ಅತ್ತ ಆಟ್ಲಿ "ಭಾರತದಲ್ಲಿ ರಾಷ್ಟ್ರೀಯತೆಯ ಗಾಳಿ ಜೋರಾಗಿ ಬೀಸುತ್ತಿದೆ. ಸ್ಪಷ್ಟ ಹಾಗೂ ನಿರ್ದಿಷ್ಟ ಕ್ರಮ ಕೈಗೊಳ್ಳಲು ಇದು ಸಕಾಲ" ಎಂದು ಹೌಸ್ ಆಫ್ ಕಾಮನ್ಸಿನಲ್ಲಿ ಹೇಳಿಕೆ ನೀಡಿದ. ಹೀಗೆ ನಾವು ಮೆಟ್ಟಿದವರೇ ನಮ್ಮನ್ನು ತಟ್ಟಿ-ಮೆಟ್ಟಿ-ಹೊರಗಟ್ಟುವ ಮೊದಲೇ ಜಾಗ ಖಾಲಿ ಮಾಡುವುದೊಳ್ಳೆಯದು ಎಂಬ ನಿರ್ಧಾರಕ್ಕೆ ಸೂರ್ಯ ಮುಳುಗದ ನಾಡಿನ ನಾಯಕರುಗಳು ಬಂದಿದ್ದರು!

        ಇಷ್ಟೆಲ್ಲಾ ಇತಿಹಾಸದ ಕಟು ವಾಸ್ತವಗಳಿದ್ದರೂ ಇಂದಿಗೂ ಗಾಂಧಿ ಬಂದ ನಂತರ(1914-15) ಸ್ವಾತಂತ್ರ್ಯ ಹೋರಾಟ ಶುರುವಾಯಿತು . ಗಾಂಧಿಯ ನೇತೃತ್ವದ ಹೋರಾಟದಿಂದಾಗಿಯೇ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಈ ಜಗತ್ತಿನ ಬಹು ದೊಡ್ಡ ವರ್ಗ ಭಾವಿಸುತ್ತದೆ. ತಿರುಚಿದ ಭಾರತದ ಪ್ರಾಚೀನ ಇತಿಹಾಸದಂತೆ ಭಾರತದ ಆಧುನಿಕ ಇತಿಹಾಸವೂ ಕುತಂತ್ರದಿಂದಲೇ ಹೆಣೆಯಲ್ಪಟ್ಟಿದೆ. ಅದೇ ನಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಶೇಖರಣೆಗೊಂಡು ಪ್ರತಿಯೊಂದು ಪೀಳಿಗೆ ಅದನ್ನೇ ಉರು ಹೊಡೆದು ಅದೇ ಸತ್ಯವೆಂದು ಭ್ರಮಿಸಿ ಹೊರಳಾಡುತ್ತಿದೆ. ತಾಯಿ ಭಾರತಿಯ ಮೈಗೆ ಹಲವು ಗಾಯಗಳನ್ನು ಮಾಡಿ ರಕ್ತ ಸೋರುವಂತೆ ಮಾಡಿದ ರಾಜಕಾರಣಿಯೊಬ್ಬನನ್ನು ಮಹಾತ್ಮ ಪಟ್ಟಕ್ಕೆ ಏರಿಸಿದ ಇತಿಹಾಸದ ವಿರೂಪದಲ್ಲಿ ಅಸಂಖ್ಯ ಹಿಂದೂಗಳ ಆಕ್ರಂದನ ಮರೆಯಾಗಿ ಹೋಗಿದೆ. ಆಗಸ್ಟ್ ಹದಿನೈದು ಅಂದರೆ ಸಾಕು ಲಕ್ಷಾಂತರ ಭಗಿನಿಯರ ಕರುಳು ಕಿತ್ತು ಬರುವ ಆಕ್ರಂದನ ಕೇಳಿಸುತ್ತದೆ. ತನ್ನ ಕಣ್ಣೆದುರಲ್ಲೇ ಅತ್ಯಾಚಾರಕ್ಕೊಳಗಾದ ತಾಯಿಯ-ಮಗಳ-ಪತ್ನಿಯ-ಸಂಬಂಧಿಯ ಕಂಡು ಅಸಹಾಯಕನಾದ ಹಿಂದೂವಿನ ಮೂಕ ವೇದನೆ ಕಣ್ಣ ಮುಂದೆ ಬರುತ್ತದೆ. ಧರ್ಮದ ಉಳಿವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬಲಿದಾನಿಯ ಭಾವ ಸ್ಪುರಿಸುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ 1857ರ ಸಂಗ್ರಾಮ ಯಶಸ್ವಿಯಾಗುತ್ತಿದ್ದರೆ...? ಸ್ವಾತಂತ್ರ್ಯ ವೀರ ಸಾವರ್ಕರ್ ಅಂಡಮಾನ್ ಕರಿನೀರ ಕತ್ತಲ ಕೂಪದೊಳಗೆ ಬೀಳದಿರುತ್ತಿದ್ದರೆ...? ಸುಭಾಷರು ಕಣ್ಮರೆಯಾಗಿರದಿರುತ್ತಿದ್ದರೆ...? ಭಾರತದ ಇತಿಹಾಸವೇ ಬದಲಾಗುತ್ತಿತ್ತು ಅಲ್ಲವೇ? ಮಹತ್ವದ ಘಟ್ಟದಲ್ಲಿ ಅದ್ವಿತೀಯನಾದ, ಪರಾಕ್ರಮಿಯಾದ, ಧರ್ಮ-ನೀತಿ:ಬ್ರಾಹ್ಮ-ಕ್ಷಾತ್ರ ಭೀರು ನಾಯಕನ ಕೊರತೆ ಭಾರತಕ್ಕೆ ಎಂದೆಂದೂ ಕಾಡುತ್ತಿರುವುದೇಕೆ?

ಬುಧವಾರ, ನವೆಂಬರ್ 23, 2016

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

            ನಮ್ಮ ಚರಿತ್ರೆಯ ಗ್ರಂಥಗಳಲ್ಲಿ ಆಕ್ರಮಣಕಾರರನ್ನೇ ವೈಭವೀಕರಿಸಲಾಗಿದೆ. ನಮ್ಮ ಅರಸರು ಅಸಮರ್ಥರೂ, ಭೋಗಲಾಲಸಿಗಳೂ ಆಗಿದ್ದು ತಮ್ಮ ಸುತ್ತ ನಡೆಯುತ್ತಿದ್ದ ಹುನ್ನಾರವನ್ನು, ಶತ್ರುಗಳ ಆಕ್ರಮಣವನ್ನು ಅಂದಾಜಿಸದೆ, ಶತ್ರುಗಳಿಗೆ ಪ್ರತ್ಯುತ್ತರ ನೀಡಲು ಸಿದ್ಧರಾಗದೆ ಉಪೇಕ್ಷಿಸಿ ತಮ್ಮ ಹಾಗೂ ಪ್ರಜೆಗಳ ವಿನಾಶಕ್ಕೆ ಕಾರಣೀಭೂತರಾದರು ಎನ್ನುವ ಅಭಿಪ್ರಾಯವನ್ನೇ ಸಾಮಾನ್ಯ ಜನತೆಯಲ್ಲಿ ರೂಪಿಸುವ ರೀತಿಯಲ್ಲೇ ನಮ್ಮ ಇತಿಹಾಸದ ಪಠ್ಯಗಳು ಬರೆಯಲ್ಪಟ್ಟಿವೆ. ಆದರೆ ವಾಸ್ತವ ಆ ರೀತಿ ಇತ್ತೇ ಎಂದು ಕೇಳಿದರೆ ಇತಿಹಾಸಕಾರರ ಕುತಂತ್ರಗಳು ಒಂದೊಂದೇ ಬಯಲಾಗುತ್ತವೆ. ಈ ಇತಿಹಾಸಕಾರರು ಆಕ್ರಮಕರ ಮತಾಂಧತೆ, ದಬ್ಬಾಳಿಕೆ, ಮತಾಂತರ, ಲಂಪಟತೆ, ಕ್ರೌರ್ಯ ಹಾಗೂ ಪ್ರಾಯೋಜಿತ ನರಮೇಧವನ್ನು ಮುಚ್ಚಿಡುವುದರ ಜೊತೆಜೊತೆಗೆ ನಮ್ಮ ರಾಜರ ಶೌರ್ಯ, ಪ್ರತಾಪ, ಸಂಘಟಿತ ಪ್ರಯತ್ನಗಳನ್ನೂ ಮುಚ್ಚಿಟ್ಟರು. ತಮ್ಮದೇ ಸ್ವಾರ್ಥ, ಅಧಿಕಾರ ದಾಹ ಹಾಗೂ ಅಂತಃಕಲಹಗಳಲ್ಲಿ ಮುಳುಗಿದ್ದ ಕೆಲ ರಾಜರೂ ಇದ್ದರು. ಅದರ ಜೊತೆಯಲ್ಲೇ ವಿದೇಶಿಯರ ದಾಳಿಯನ್ನು ಧೀರೋದಾತ್ತವಾಗಿ ಎದುರಿಸಿ ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದವರೂ ಅನೇಕರಿದ್ದರು ಎನ್ನುವ ಸತ್ಯ ಮರೆಯಾಯಿತು.

            ಕ್ರಿ.ಶ. ಹತ್ತನೇ ಶತಮಾನದವರೆಗೂ ಕಾಬೂಲಿನವರೆಗೆ ಭಾರತ ಹಿಂದೂಗಳ ಆಳ್ವಿಕೆಗೇ ಒಳಪಟ್ಟಿತ್ತು. ಆಗ ಕಾಬೂಲಿ(ಕುಭ)ನ ರಾಜನಾಗಿದ್ದವನು ಜಯಪಾಲ. ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿದ್ದ ಕಪಿಲ, ಪೂರ್ವ ಪಂಜಾಬುಗಳವರೆಗೆ ಅವನ ರಾಜ್ಯ ಹಬ್ಬಿತ್ತು. ಆಗ ಹರಿ-ರುದ್ರರ ಹೆಸರಿನಿಂದ ನಿರ್ಮಾಣವಾಗಿದ್ದ ಹರ್ತ್(ಪಶ್ಚಿಮ ಅಪ್ಘಾನಿಸ್ಥಾನ), ಗಾಂಧಾರ(ಕಂದಹಾರ್) ಹಾಗೂ ಗಜನಿಗಳನ್ನು ಸೇರಿಸಿದ ಪ್ರಾಂತ್ಯವನ್ನು ಆಳುತ್ತಿದ್ದವ ಸಬಕ್ತಜಿನ್ ಎಂಬ ಮುಸ್ಲಿಮ್ ಗುಲಾಮ ರಾಜ. ಷಾಹಿಗಳ ಗಡಿ ಪ್ರದೇಶಗಳು ಹಾಗೂ ಪರ್ವತ ಶಿಖರಗಳಲ್ಲಿದ್ದ ಕೋಟೆಗಳ ಮೇಲೆ ದಾಳಿ ಮಾಡಿ ಸಬಕ್ತಜಿನ್ ಲೂಟಿಮಾಡತೊಡಗಿದಾಗ ಕಿಡಿಕಿಡಿಯಾದ ಷಾಹಿ ಜಯಪಾಲ ತನ್ನ ಪ್ರಬಲ ಗಜಬಲದೊಂದಿಗೆ ಪ್ರತ್ಯಾಕ್ರಮಣ ಮಾಡಿದ. ಸೋಲು ಖಚಿತಗೊಂಡಾಗ ಸಬಕ್ತಜಿನ್ ಅಧರ್ಮದ ದಾರಿ ಹಿಡಿದ. ಜಯಪಾಲನ ಸೈನ್ಯ ಬೀಡುಬಿಟ್ಟ ಸ್ಥಳ ಪರ್ವತವೊಂದರ ತಪ್ಪಲಾಗಿತ್ತು. ಆ ಪರ್ವತಾಗ್ರದಿಂದ ಸ್ವಚ್ಛ ಶುಭ್ರ ಜಲಧಾರೆಯೊಂದು ಹರಿದು ಬರುತ್ತಿತ್ತು.ಆ ಜಲಧಾರೆಗೆ ಯಾರಾದರೂ ಕಶ್ಮಲಗಳನ್ನು ಹಾಕಿದರೆ ಕೂಡಲೇ ಕತ್ತಲು ಕವಿದು ಸುಂಟರಗಾಳಿ ಬೀಸುವುದು, ಬೆಟ್ಟದ ಬಂಡೆಗಳು ಒಡೆದು ಬೀಳುವುದು, ಧಾರಾಕಾರ ಮಳೆ ಸುರಿಯುವಂತಹ ಅವಘಡಗಳುಂಟಾಗುತ್ತಿದವು. ಇದನ್ನು ಅರಿತ ಸಬಕ್ತಜಿನ್ ಅಶುದ್ಧ ವಸ್ತುಗಳನ್ನು ಆ ನೀರಿನಲ್ಲಿ ಹಾಕಿಸಿದ. ಕೂಡಲೇ ಪ್ರಳಯಕಾಲದಲ್ಲಿ ಉಂಟಾಗುವಂತೆ ಉತ್ಪಾತಗಳು ಉಂಟಾದವು. ಕುಂಭದ್ರೋಣ ಮಳೆ, ಉರುಳಿ ಬರುತ್ತಿರುವ ಬಂಡೆ, ಅಚಾನಕ್ಕಾಗಿ ಭಾರೀ ಶಬ್ಧದಿಂದ ಬೀಳುತ್ತಿರುವ ವೃಕ್ಷಗಳು, ದಟ್ಟವಾಗಿ ಹಬ್ಬಿದ್ದ ಕಪ್ಪು ಧೂಮದಿಂದ ಜಯಪಾಲನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಹಲವು ಸೈನಿಕರು ಸತ್ತು, ತಂದಿದ್ದ ಆಹಾರ ಪದಾರ್ಥಗಳು ನಷ್ಟವಾಗಿ ಯುದ್ಧ ಮುಂದುವರಿಸುವುದು ಅಸಾಧ್ಯವಾದಾಗ ಜಯಪಾಲ ಸಂಧಿಗಾಗಿ ರಾಯಭಾರಿಯನ್ನು ಕಳುಹಿದ. ಐವತ್ತು ಆನೆಗಳು, ಕೆಲವು ಕೋಟೆಗಳನ್ನು ವಶಕ್ಕೊಪ್ಪಿಸುವುದರ ಕರಾರಿನ ಮೇಲೆ ಸಬಕ್ತಜಿನ್ ಸಂಧಿಗೆ ಒಪ್ಪಿಕೊಂಡ. ಒಂದು ಚಿಕ್ಕ ಕೋಟೆಯನ್ನು ಕೊಡಲು ಜಯಪಾಲ ನಿರಾಕರಿಸಿದಾಗ ಸಿಟ್ಟಿಗೆದ್ದ ಸಬಕ್ತಜಿನ್ ಸೈನ್ಯ ತೆಗೆದುಕೊಂಡು ದಂಡೆತ್ತಿ ಬಂದು ಯುದ್ಧದಲ್ಲಿ ಜಯಪಾಲನನ್ನು ಸೋಲಿಸಿ ಲಂಘೂನ್ ನಗರದವರೆಗೆ ಜಯಪಾಲನ ರಾಜ್ಯವನ್ನು ಆಕ್ರಮಿಸಿಕೊಂಡ. ಇದು ಮಹಮ್ಮದೀಯ ಚರಿತ್ರೆಕಾರ ಆಲ್ ಉತ್ಖಿ ತನ್ನ "ತಾರೀಖ್ ಯಾಮಿನಿ"ಯಲ್ಲಿ ಬರೆದ ಕಥೆ!

               ಆದರೆ ಈ ಸೋಲಿನಿಂದ ಜಯಪಾಲನೇನೂ ಹತಾಷನಾಗಲಿಲ್ಲ. ಸಬಕ್ತಜಿನ್'ಗೆ ಶರಣಾಗಲೂ ಇಲ್ಲ. ತನ್ನ ಸೈನ್ಯವನ್ನು ಬಲಪಡಿಸಿದ. ಸುತ್ತಲ ಹಿಂದೂ ರಾಜರು ಅವನ ಸಹಾಯಕ್ಕಾಗಿ ತಮ್ಮ ಸೈನ್ಯವನ್ನು ಕಳುಹಿದರು. ಇಸ್ಲಾಂ ದುರಾಕ್ರಮಣವನ್ನು ತಡೆಯಲು ಹಿಂದೂ ರಾಜರು ಐಕ್ಯಮತ್ಯವನ್ನು, ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿರುವುದು ಈ ರಾಷ್ಟ್ರದ ಹೆಮ್ಮೆಯ ಚರಿತ್ರೆಯಲ್ಲವೇ? ಆದರೆ ನಮ್ಮ ಇತಿಹಾಸಕಾರರಿಗೆ ಒಂದಿಬ್ಬರು ಸ್ವಾರ್ಥಿ ರಾಜರ ಮೋಸವೇ ಚರಿತ್ರೆಯಾಗಿ ಕಂಡಿದುದು ಮಾತ್ರ ವಿಪರ್ಯಾಸ. ಆದರೆ ನಮ್ಮ ಇತಿಹಾಸಕಾರರಿಗೆ ಜಯಪಾಲನಿಗೆ ಹಿಂದೂ ರಾಜರು ಸಹಾಯ ಮಾಡಿರುವ ಬಗ್ಗೆ ಅನುಮಾನವೆದ್ದುಬಿಟ್ಟಿತು. ಶತ್ರುಪಕ್ಷದ ಇತಿಹಾಸಕಾರನೇ(ಫಿರಿಸ್ತಾ) ಬರೆದಿರುವುದು ಸತ್ಯಕ್ಕೆ ದೂರ ಎಂದು ನಿರ್ಧರಿಸಿಬಿಟ್ಟರು. ಸಹಾಯ ಮಾಡಿರುವ ರಾಜರುಗಳು ಬಗ್ಗೆ ಫಿರಿಸ್ತಾ ಕೊಟ್ಟಿರುವ ಅಲ್ಪ ಉಲ್ಲೇಖಗಳಿಂದ ಇದನ್ನು ರುಜುವಾತು ಮಾಡಲು ಸಾಧ್ಯವಿಲ್ಲ, ಸಾಕ್ಷ್ಯಾಧಾರಗಳು ಸಾಕಾಗುವುದಿಲ್ಲ ಎಂದು ಒಂದೇ ಏಟಿಗೆ ಈ ಅಂಶವನ್ನು ತೊಡೆದು ಹಾಕಿಬಿಟ್ಟರು. ಕಟ್ಟುವುದಕ್ಕಿಂತ ಕೆಡಹುವುದು ಸುಲಭವಲ್ಲವೇ! ಆಲ್ ಉತ್ಖಿ ಹೇಳಿದ ಆಲಿಕಲ್ಲು ಸಹಿತದ ಕುಂಭದ್ರೋಣ ಮಳೆಯ, ಪ್ರಕೃತಿ ವೈಪರೀತ್ಯದ ಕಥೆಯನ್ನು ನಂಬಿದವರಿಗೆ ಫಿರಿಸ್ತಾ ಹೇಳಿದ ಓರಗೆಯ ಹಿಂದೂರಾಜರು ಸಹಾಯ ಮಾಡಿದರು ಎನ್ನುವ ಸಾಲುಗಳು ಅನುಮಾನಕ್ಕೆ ಕಾರಣವಾದದ್ದು ಚೋದ್ಯವೇ ಸರಿ. ಸಬಕ್ತಜಿನನ ಮಾಯದಾಟಕ್ಕೆ ಬೆದರಿ ಕಂಗಾಲಾಗಿ ಶರಣು ಬಂದು ಸಂಧಿ ಮಾಡಿಕೊಂಡು ಷರತ್ತುಗಳಿಗೆ ಒಪ್ಪಿದಂತೆ ನಟಿಸಿ ಹಿಂತಿರುಗಿ ಹೋಗಿ ಕೊಟ್ಟ ಮಾತಿಗೆ ತಪ್ಪಿದನೆಂದೂ, ಪರಿಣಾಮ ಕ್ರುದ್ಧನಾದ ಸಬಕ್ತಜಿನ್ ದಂಡೆತ್ತಿ ಬರಲು ಸೋತು ವಿಶಾಲ ಭೂಪ್ರದೇಶವನ್ನು ಕಳೆದುಕೊಂಡನೆಂಬ ಕಥೆಯನ್ನು ಯಾವುದೇ ಅನ್ಯ ಸಾಕ್ಷ್ಯ ಕೇಳದೆ ನಂಬಿದವರಿಗೆ ಹಿಂದೂಗಳು ಒಗ್ಗಟ್ಟಾಗಿ ಹೋರಾಡಿದ ಘಟನೆಗೆ ಮಾತ್ರ ಸಾಕ್ಷ್ಯ ಕಡಿಮೆಯಾಯಿತು. ಶತ್ರು ಪಕ್ಷದ ಇತಿಹಾಸಕಾರ ರಾಜರ ಹೆಸರು ಹೇಳಿದರೆ ಸಾಲದೆ? ಅವನು ಅವರ ವಂಶವೃಕ್ಷವನ್ನೇ ಬರೆಯಬೇಕೇ? ಓರಗೆಯ ಹಿಂದೂ ರಾಜರು ಸಹಾಯ ಮಾಡಿದರೂ, ಧೀರೋದಾತ್ತವಾಗಿ ಸೆಣಸಿದರೂ ಸಬಕ್ತಜಿನನ ಕುತಂತ್ರಗಳೆದುರು ಷಾಹಿ ಜಯಪಾಲನ ಧರ್ಮಯುದ್ಧ ನಡೆಯಲಿಲ್ಲ. ಪೇಷಾವರದವರೆಗಿನ ಭೂಮಿ ಸಬಕ್ತಜಿನನ ವಶವಾಯಿತು. ಜಯಪಾಲ ಪಂಜಾಬಿಗೆ ಸೀಮಿತಗೊಳ್ಳಬೇಕಾಯಿತು.

           ಸಬಕ್ತಜಿನನ ಬಳಿಕ ಬಂದ ಗಜನಿ ಮಹಮ್ಮದ್ ಭಾರತದ ಮೇಲೆ ಸಾಲುಸಾಲು ದಂಡಯಾತ್ರೆಯನ್ನೇ ಕೈಗೊಂಡ. ಹದಿನೇಳು ಸಾವಿರ ಅಶ್ವಾರೋಹಿಗಳೊಡನೆ ಬಂದು ಜಯಪಾಲನನ್ನೂ, ಅವನ ಪುತ್ರ-ಪೌತ್ರರನ್ನು ಸೆರೆಯಲ್ಲಿರಿಸಿದ. ಎರಡೂವರೆ ಲಕ್ಷ ದಿನಾರುಗಳನ್ನು, 25 ಆನೆಗಳನ್ನು ತನಗೊಪ್ಪಿಸಿದರೆ ಜಯಪಾಲನನ್ನು ಬಿಡುಗಡೆ ಮಾಡುವುದಾಗಿ ಷರತ್ತು ಹಾಕಿದಾಗ ಜಯಪಾಲನ ಮಗ ಆನಂದಪಾಲ ಆ ಮೊತ್ತವನ್ನು ಕೊಟ್ಟು ತಂದೆ ಹಾಗೂ ಬಂಧುಗಳನ್ನು ಬಿಡಿಸಿಕೊಂಡ. ಸಾಲು ಸಾಲು ಸೋಲುಗಳಿಂದ ಅವಮಾನಿತನಾದ ಜಯಪಾಲ ಅದನ್ನು ಸಹಿಸಲಾರದೆ ಚಿತೆಯನ್ನು ಸಿದ್ಧಪಡಿಸಿ ತನ್ನ ಕೈಯಿಂದಲೇ ಬೆಂಕಿ ಹಚ್ಚಿಕೊಂಡು ಸಜೀವವಾಗಿ ದಹನವಾದ. ಅವನ ನಂತರ ಪಟ್ಟವೇರಿದ ಆನಂದಪಾಲನಿಗೂ ಗಜನಿಯ ಕೈಯಲ್ಲಿ ಸೋಲುಗಳೇ ಆದವಂತೆ. ಇದು ನಮ್ಮ ಎಲ್ಲಾ ಚರಿತ್ರೆಯ ಗ್ರಂಥಗಳಲ್ಲಿ ಕಂಡುಬರುವ ಆಲ್ ಉತ್ಖಿಯ ಗ್ರಂಥದಿಂದ ಉತ್ಖನನ ಮಾಡಿರುವ ಕಥೆಗಳು. ಇದನ್ನೂ ನಂಬಿ ಬಿಟ್ಟ ಬಗೆಯಂತೂ ವಿಚಿತ್ರ. ಮೊದಲೆರಡು ಬಾರಿ ಸಬಕ್ತಜಿನನ ಎದುರು ಸೋತು ಸೆರೆ ಸಿಕ್ಕು ಷರತ್ತುಗಳಿಗೆ ಬಗ್ಗಿದರೂ ಅವಮಾನವಾಗದ ಜಯಪಾಲನಿಗೆ ಅವನ ಮಗನ ಎದುರುಂಟಾದ ಸೋಲು ಅಪಮಾನಕರವಾಗಿ ಕಂಡಿತೇ? ಆಲ್ ಉತ್ಖಿಯೇ ಹೇಳಿದ ಹಾಗೆ ಮೊದಲು ಕೊಟ್ಟ ಮಾತಿಗೆ ತಪ್ಪಿ ನಡೆದ ವಚನಭೃಷ್ಟನಾಗಿದ್ದ ಪಕ್ಷದಲ್ಲಿ ಇನ್ನೊಮ್ಮೆ ಅಂತಹುದೇ ಪರಿಸ್ಥಿತಿಯಲ್ಲಿ ಅದೇ ರೀತಿಯ ಚಾಣಾಕ್ಷತೆಯನ್ನು ಯಾಕೆ ತೋರಿಸಲಿಲ್ಲ? ಒಂದೋ ಮೊದಲಿನದ್ದು ಸುಳ್ಳಾಗಿರಬೇಕು ಅಥವಾ ಎರಡನೆಯದ್ದು! ಮೊದಲನೆಯದ್ದು ಸುಳ್ಳಾಗಿದ್ದರೆ ಜಯಪಾಲ ಮೊದಲ ಬಾರಿಗೆ ಸೋತದ್ದರ ಮೇಲೂ ಸಂದೇಹ ಬರುತ್ತದಲ್ವೇ? ಎರಡನೆಯ ಬಾರಿ ಸೋತು ಚಿತೆಯೇರುವ ಹೊತ್ತಲ್ಲಿ ಅವನ ಓರಗೆಯ ರಾಜರು ಹೆಚ್ಚೇಕೆ ಅವನ ಸ್ವಂತ ಮಗ ಅಂತಹ ದೇಶ-ಧರ್ಮಕ್ಕಾಗಿ ಹೋರಾಡಿದ ಅಂತಹ ಪರಾಕ್ರಮಶಾಲಿಯನ್ನು ಈ ಕಾರ್ಯದಿಂದ ತಡೆಯಲಿಲ್ಲವೇಕೇ? ಶತ್ರು ಪಕ್ಷದ ಚರಿತ್ರೆಕಾರರ ಕಥೆಗಳನ್ನೆಲ್ಲಾ ಒಪ್ಪಿದವರಿಗೆ ನೈಜದಂತೆ ಮೇಲ್ನೋಟಕ್ಕೆ ಕಾಣುವ ಘಟನೆಗಳನ್ನು ಒಪ್ಪಲು ಕಷ್ಟವಾಗುವುದೇಕೆ?

            ಜಯಪಾಲನ ಮಗ ಆನಂದಪಾಲ ಮಹಾಶೂರನೂ, ವಿದ್ಯಾವಂತನೂ, ಕಲೋಪಾಸಕನೂ ಆಗಿದ್ದ. ಪಾಣಿನಿಯ ಅಷ್ಟಾಧ್ಯಾಯಿಗೆ ಸಮನಾದ "ಶಿಷ್ಯ-ಹಿತ-ವೃತ್ತಿ" ಎನ್ನುವ ವ್ಯಾಕರಣ ಗ್ರಂಥ ರಚಿಸಿದ ಉಗ್ರಭೂತಿಯ ಆಶ್ರಮದಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದ್ದ ಛಲಗಾರನಾತ. ಉಗ್ರಭೂತಿಯ ವ್ಯಾಕರಣ ಗ್ರಂಥವನ್ನು ತನ್ನ ರಾಜ್ಯದಲ್ಲಿ ಪ್ರಚುರಪಡಿಸಿದ ಗುರು ಸೇವಕನೀತ. ಎಲ್ಲಾ ಚರಿತ್ರೆಕಾರರು ಉಲ್ಲೇಖಿಸಿರುವ ಇನ್ನೊಂದು ಅಂಶವೆಂದರೆ ಜಯಪಾಲನ ಪುತ್ರ ಆನಂದಪಾಲನೂ ಗಜನಿಯ ಕೈಯಲ್ಲಿ ಸೋತು ಹೋದ ಎನ್ನುವುದು. ದಿಟವೇ. ಆದರೆ ಸಂಪೂರ್ಣವಲ್ಲ. ಒಂದು ವೇಳೆ ಆನಂದಪಾಲನಿಗೂ ಗಜನಿಯ ಎದುರು ಸಾಲುಸಾಲು ಅಪಜಯಗಳು ಪ್ರಾಪ್ತಿಯಾಗಿದ್ದರೆ ಅದೇ ಆನಂದಪಾಲ ಗಜನಿಗೆ "ನಿನ್ನ ರಾಜ್ಯದ ಮೇಲೆ ತುರ್ಕರು ದಂಡೆತ್ತಿ ಬಂದಿದ್ದಾರೆಂದೂ, ಖುರಾಸಾನ್ ಪ್ರಾಂತ್ಯವನ್ನು ಆಕ್ರಮಿಸಿದ್ದಾರೆಂದೂ ಕೇಳಿದ್ದೇನೆ. ನೀನು ಬಯಸಿದರೆ 5000 ಅಶ್ವದಳ, ಹತ್ತು ಸಾವಿರ ಪದಾತಿ, ಶತಗಜಗಳೊಡನೆ ನಾನೇ ನಿನ್ನ ಸಹಾಯಕ್ಕೆ ಬರುತ್ತೇನೆ. ಇಲ್ಲವೇ ಇದರ ಎರಡರಷ್ಟು ಬಲದೊಡನೆ ಮಗನನ್ನು ಕಳುಹುತ್ತೇನೆ. ನಾನು ಈ ಸಹಾಯ ಮಾಡುವುದು ನಿನ್ನ ಅನುಗ್ರಹಕ್ಕಾಗಿ ಅಲ್ಲ. ನಿನ್ನನ್ನು ಸಂಪೂರ್ಣವಾಗಿ ಸೋಲಿಸಿದ ಗೌರವ ನನಗಲ್ಲದೆ ಬೇರಾರಿಗೂ ದಕ್ಕಕೂಡದು ಎನ್ನುವ ನನ್ನ ಆಶಯಕ್ಕಾಗಿ!" ಎಂದು ಯಾಕೆ ಪತ್ರ ಬರೆಯುತ್ತಿದ್ದ? ಈ ಪತ್ರದ ಉಲ್ಲೇಖವಿರುವುದು ಮಹಮದ್ ಗಜನಿಯ ಆಪ್ತ ಆಲ್-ಬೆರೂನಿಯ ತಾರಿಖ್-ಉಲ್-ಹಿಂದ್'ನಲ್ಲಿ. ಇದರರ್ಥ ಆನಂದಪಾಲ ಹಿಂದೆ ಗಜನಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾನೆ ಎಂದಲ್ಲವೇ? ಈ ವಿಷಯದಲ್ಲಿ ಆಲ್ಬೆರೂನಿ ಸುಳ್ಳು ಹೇಳಲೂ ಆಸ್ಪದವಿಲ್ಲ. ಆ ರೀತಿ ಮಾಡಿದ್ದರೆ ಅವನ ತಲೆ ಉಳಿಯುತ್ತಿರಲಿಲ್ಲ. ಗಜನಿ ಅಷ್ಟು ದಯನೀಯವಾಗಿ ಸೋತು ಹೋತದ್ದು ಯಾವ ಯುದ್ಧದಲ್ಲಿ? ಗಜನಿಯ ಹದಿನೇಳು ದಂಡಯಾತ್ರೆಗಳಲ್ಲಿ ಅದು ಎಷ್ಟನೆಯದ್ದು? ನಮ್ಮ ಚರಿತ್ರೆಕಾರರು ಮುಚ್ಚಿಟ್ಟದ್ದು ಎಂತಹಾ ಭವ್ಯ ಇತಿಹಾಸವನ್ನು! ಮಹಮ್ಮದ್ ತನ್ನ ಪುಟ್ಟ ಸೈನ್ಯದ ಬಲದಿಂದ ಕಾಫಿರರ ಎಂತಹಾ ಬಲಾಢ್ಯ ಸೈನ್ಯವನ್ನಾದರೂ ಅಲ್ಲಾನ ಕೃಪೆಯಿಂದ ಗೆದ್ದನೆಂಬ ಮುಸ್ಲಿಂ ಆಸ್ಥಾನ ಬರಹಗಾರರ ಕಥೆಗಳನ್ನು ಚರಿತ್ರೆಯ ಗ್ರಂಥಗಳಿಗೆ ಯಥಾವತ್ ಭಟ್ಟಿ ಇಳಿಸಿದ ನಮ್ಮ ಸೆಕ್ಯುಲರ್ ಇತಿಹಾಸಕಾರರು ಮಾಡಿದ್ದು ಐತಿಹಾಸಿಕ ದ್ರೋಹವಲ್ಲವೇ?

           ಇದು ನಮ್ಮ ಇತಿಹಾಸಕಾರರ ದ್ರೋಹದ ಕಥೆಯಾಯಿತು. ಈ ಆನಂದಪಾಲನ ಭೋಳೇತನಕ್ಕೆ ಏನು ಹೇಳೋಣ? ತನ್ನ ತಂದೆಯ ಆತ್ಮಾಹುತಿಗೆ ಕಾರಣನೆನ್ನಲಾದ, ಯುದ್ಧದಲ್ಲಿ ಕುತಂತ್ರವನ್ನೇ ಉಪಯೋಗಿಸುತ್ತಿದ್ದ ಮತಾಂಧ ಮದಾಂಧನನ್ನು ಕೈಗೆ ಸಿಕ್ಕಿದರೂ ಕೊಲ್ಲದೇ ಬಿಟ್ಟ ಆನಂದಪಾಲನ ಕ್ರಮ ಹುಚ್ಚುತನವಲ್ಲದೆ ಇನ್ನೇನು? ತಾನೊಬ್ಬನೇ ಗಜನಿಯನ್ನು ಗೆದ್ದೆನೆಂಬ ಗೌರವ ಶಾಶ್ವತವಾಗಿ ಉಳಿಯಬೇಕೆಂಬ ಕಾರಣಕ್ಕೆ ಇನ್ನಾರಾದರೂ ಯುದ್ಧಕ್ಕೆ ಬಂದರೆ ಗಜನಿ ಸೋಲಬಾರದೆನ್ನುವ ಕಾರಣಕ್ಕೆ ಅವನಿಗೆ ಒತ್ತಾಸೆಯಾಗಿ ನಿಲ್ಲುವ ಅವನ ಅಹಂ ಅವನಿಗೇ ಮುಳುವಾಯಿತು. ತನಗೆ ಸಹಾಯ ಮಾಡಬಂದ ಆನಂದಪಾಲನನ್ನು ಗಜನಿ ನಡೆಸಿಕೊಂಡದ್ದಾದರೂ ಹೇಗೆ? ಮುಲ್ತಾನನ್ನು ಆಳುತ್ತಿದ್ದ ದಾವೂದನ ಮೇಲೆ ದಾಳಿ ಮಾಡಲು ನನ್ನ ಸೈನ್ಯವನ್ನು ನಿನ್ನ ರಾಜ್ಯದ ಮೂಲಕ ಕೊಂಡು ಹೋಗಲು ಅನುಮತಿ ಕೊಡು ಎಂದು ಮಹಮ್ಮದ್ ಕೇಳಿದಾಗ ದಾವೂದನೊಂದಿಗೆ ಮೊದಲಿನಿಂದಲೂ ತನಗಿದ್ದ ಸ್ನೇಹ ಸಂಬಂಧದ ಕಾರಣ ಆನಂದಪಾಲ ಅನುಮತಿ ನಿರಾಕರಿಸಿದ. ಒಂದು ವೇಳೆ ಆನಂದಪಾಲ ಹಿಂದೆ ಗೆದ್ದಿಲ್ಲವೆಂದಿದ್ದರೆ ಈ ಅನುಮತಿ ಕೇಳುವ ಪ್ರಸಂಗವೂ ಬರುತ್ತಿರಲಿಲ್ಲ ಅಲ್ಲವೇ? ಕೆರಳಿದ ಗಜನಿ ಸಕಲ ಸೈನ್ಯದೊಂದಿಗೆ ದಂಡೆತ್ತಿ ಬಂದ. ಅಪಾಯವನ್ನು ಗ್ರಹಿಸಿದ ಉಜ್ಜಯಿನಿ, ಗ್ವಾಲಿಯರ್, ಕನೋಜ್, ಕಲಿಂಜರ್, ಅಜ್ಮೀರಗಳ ದೊರೆಗಳು ಆನಂದ ಪಾಲನಿಗೆ ಬೆಂಬಲವಾಗಿ ದೊಡ್ಡ ಪ್ರಮಾಣದ ಸೈನ್ಯವನ್ನು ಕಳುಹಿಕೊಟ್ಟರು. ನಲವತ್ತು ದಿನಗಳ ಕಾಲ ಎರಡೂ ಪಕ್ಷಗಳು ಶಿಬಿರದಲ್ಲೇ ಉಳಿದವು. ಈ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳ ಸ್ತ್ರೀಯರು, ಪುರುಷರು ತಂತಮ್ಮ ಬೆಳ್ಳಿ,ಬಂಗಾರದ ಒಡವೆಗಳನ್ನು ಮಾರಿ, ಆಭರಣಗಳನ್ನು ಕರಗಿಸಿ ಶತ್ರುಗಳನ್ನು ಎದುರಿಸಲು ಯಥಾಶಕ್ತಿ ನಿಧಿಯನ್ನು ಒಟ್ಟುಗೂಡಿಸಿಕೊಟ್ಟರು. ಇಂತಹ ಅಭೂತಪೂರ್ವ ರಾಷ್ಟ್ರಪ್ರೇಮ, ಐಕ್ಯತೆ ವಿಜೃಂಭಿಸಿದ್ದರೂ, ಸ್ವತಃ ಮಹಾಶೂರನಾಗಿದ್ದ ಆನಂದಪಾಲನೇ ಮಹಾ ಸೇನೆಯ ನೇತೃತ್ವ ವಹಿಸಿದ್ದಾಗ್ಯೂ ವಿಧಿ ಬೇರೊಂದು ಬಗೆಯಿತು. ಮಹಮ್ಮದ್ ತ್ವರಿತವಾಗಿ ದಾಳಿ ಮಾಡುವ ತನ್ನ ನುರಿತ ಬಿಲ್ಲುಗಾರರನ್ನು ಒಮ್ಮೆಲೇ ದಾಳಿ ಮಾಡುವಂತೆ ಪ್ರೇರೇಪಿಸಿದ. ಅವರೆಲ್ಲಾ ಕ್ಷಣಾರ್ಧದಲ್ಲಿ ಸತ್ತು ಬಿದ್ದರು. ಹೊತ್ತು ಕಳೆಯುತ್ತಿದ್ದಂತೆ ಮಹಮ್ಮದನ ಕಡೆಯ ಅತಿರಥ ಮಹಾರಥರೆಲ್ಲಾ ನೆಲಕ್ಕೊರಗಿದರು. ಇನ್ನೇನು ಸೋತು ನೆಲಕ್ಕಚ್ಚಿ ತನ್ನ ಪಾಡು ನಾಯಿಪಾಡಾಗುತ್ತದೆ ಎನ್ನುವಾಗ ಮಹಮ್ಮದ ತನ್ನ ಕಡೆಯ ಆಯ್ದ ಸೈನಿಕರಿಗೆ ನೇರವಾಗಿ ಆನಂದಪಾಲ ಕುಳಿತ ಆನೆಯ ಮೇಲೆ ದಾಳಿ ಮಾಡುವಂತೆ ಕಳುಹಿದ. ಶತ್ರು ಸೈನಿಕರ ಈಟಿಗೆ ಆನಂದಪಾಲ ಕುಳಿತಿದ್ದ ಆನೆ ಗಾಯಗೊಂಡು ಓಡಲಾರಂಭಿಸಿದಾಗ ರಾಜನೇ ಪಲಾಯನ ಮಾಡುತ್ತಿದ್ದಾನೆಂದು ಅರಿತ ಅವನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಮೊದಲೇ ಧೂರ್ತನಾಗಿದ್ದ ಗಜನಿ ಈ ಗೊಂದಲದ ಪರಿಸ್ಥಿತಿಯನ್ನು ತನಗೆ ಅನುಕೂಲಕರವಾಗುವಂತೆ ಬಳಸಿ ಯುದ್ಧದಲ್ಲಿ ಜಯಶಾಲಿಯಾದ. ಪರಾಭವಗೊಂಡ ಸೈನ್ಯವನ್ನು ಹಿಂದೂ ರಾಜರಂತೆ ಕ್ಷಮಿಸಿ ಬಿಟ್ಟುಬಿಡದೆ ಅವರ ಬೆನ್ನ ಹಿಂದೆ ಬಿದ್ದು ಬೇಟೆಯಾಡಿ ಇಪ್ಪತ್ತು ಸಾವಿರ ಸೈನಿಕರ ಮಾರಣಹೋಮ ಮಾಡಿದ. ಹೀಗೆ ತಾನು ಸೋಲಿಸಿದೆ ಎಂದು ಗರ್ವಪಟ್ಟ ಶತ್ರುವಿನ ಕೈಯಲ್ಲೇ ಆನಂದಪಾಲ ಸೋಲಲ್ಪಟ್ಟ. ಐವತ್ತು ಗಜ ಹಾಗೂ ಪ್ರತಿವರ್ಷ ಸುಲ್ತಾನನ ಸೇವೆ ಮಾಡಲು ಎರಡು ಸಾವಿರ ಜನರನ್ನು ಸರಬರಾಜು ಮಾಡುವ ಸಂಧಿಯೊಂದಿಗೆ ಸಾಮಂತನಾಗಿಬಿಟ್ಟ. ಮುಂದಿನ ಭಾರತವೀರರು ಈ ಘಟನೆಯಿಂದ ಪಾಠ ಕಲಿಯಬೇಕಿತ್ತು. ಹೀಗೆ ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...ಆದರೆ ಇತಿಹಾಸಕಾರರ ತಿರುಚುವಿಕೆಗೆ ಸಿಲುಕಿ ಮಣ್ಣಾಗಿ ಹೋದ!

             ಈ ಸೋಲಿನ ನಂತರ ಷಾಹಿಗಳು ತಮ್ಮ ರಾಜಧಾನಿಯನ್ನು ನಂದನಕ್ಕೆ ಬದಲಿಸಿಕೊಂಡರಾದರೂ ಗಜನಿಗೆ ಅಡಿಗಡಿಗೆ ತಡೆಯಾಗಿ ನಿಂತರು. ಆನಂದಪಾಲನ ಮಗ ತ್ರೀಲೋಚನಪಾಲ ಕ್ರಿ.ಶ 1013ರಲ್ಲಿ ಕಾಶ್ಮೀರದ ಪ್ರಧಾನಿಯ ಸಹಾಯ ಪಡೆದು ಗಜನಿಯನ್ನು ದಿಟ್ಟವಾಗಿ ಎದುರಿಸಿದ. ಹಲವು ದಿನಗಳವರೆಗೆ ಯುದ್ಧ ನಡೆಯಿತು. ಇಲ್ಲೂ ಮೋಸದಿಂದ ಗಜನಿ ಜಯಶಾಲಿಯಾದ. ಆತನ ಮಗ ಭೀಮಪಾಲ ಲೋಹರ ಅಥವಾ ಲೋಹಕೋಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ವೇಳೆಯಲ್ಲಿ(ಕ್ರಿ.ಶ.1015) ಗಜನಿ ಹರಸಾಹಸ ಪಟ್ಟರು ಆತನ ಕೂದಲು ಕೊಂಕಿಸಲಾಗಲಿಲ್ಲ. ಹೇಗೋ ಬಚಾವಾದ ಗಜನಿ ನಿರಾಶನಾಗಿ ತನ್ನ ಊರು ಸೇರಿಬಿಟ್ಟ. ಷಾಹಿಗಳು ಲೋಹರಾದಿಂದ ಆಚೆಗೆ ಗಜನಿಯನ್ನು ಹೋಗಗೊಡಲೇ ಇಲ್ಲ. ಅತ್ತ ಗಜನಿಗೂ ಅವರನ್ನು ಲೋಹರಾದಿಂದ ನಿರ್ಮೂಲನೆಗೊಳಿಸಲಾಗಲಿಲ್ಲ. ಆದರೆ ಸತತ ಯುದ್ಧಗಳ ಬಳಿಕ 1021ರಲ್ಲಿ ತ್ರಿಲೋಚನಪಾಲ ಹಾಗೂ 1026ರಲ್ಲಿ ಭೀಮಪಾಲನನ್ನು ಕೊಲೆಗೈದ ಗಜನಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಿದ. ವರ್ಷಗಳ ಬಳಿಕ ಆಲ್ಬೆರೂನಿ ಬರೆಯುತ್ತಾನೆ- "ಷಾಹಿಗಳ ರಾಜವಂಶ ಈಗ ನಿರ್ನಾಮವಾಗಿದೆ. ಆದರೆ ತಾವಿದ್ದಷ್ಟು ದಿನ ಪರಮ ವೈಭವದಿಂದ ಪರಾಕ್ರಮದಿಂದ ಬದುಕಿದ ಷಾಹಿಗಳು ಉದಾತ್ತ ಮನೋಭಾವವನ್ನು, ಉದಾತ್ತ ಗುಣಧರ್ಮವನ್ನೂ ಹೊಂದಿದ್ದ ಮಹಾಪುರುಷರಾಗಿದ್ದರು." ಸುಮಾರು ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿದ ಷಾಹಿ ರಾಜವಂಶ ಮಾತೃಭೂಮಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಸಮರ್ಪಿಸಿತು. ಭಾರತೀಯ ಅರಸರು ವಿದೇಶೀ ಆಕ್ರಮಣದ ವಿರುದ್ಧ ಸೆಟೆದು ನಿಲ್ಲಲಿಲ್ಲ ಎಂದು ಹೇಳಿದ ಮೂರ್ಖರಿಗೆ ಇದು ಅರ್ಥವಾದೀತೇ?

ಯಾರು ಮಹಾತ್ಮ? ಭಾಗ-೨೫

ಯಾರು ಮಹಾತ್ಮ?

ಭಾಗ-೨೫

 
                  ಬೇಡುವುದು ಹಾಗೂ ಬ್ರಿಟಿಷರನ್ನು ಸಂತೋಷಗೊಳಿಸುವ ಕ್ರಮದ ಮೂಲಕ ಕಾಂಗ್ರೆಸ್ ಭಿಕ್ಷುಕರ ಪಕ್ಷವಾಗುವ ಮಟ್ಟಕ್ಕೆ ಇಳಿಯುವುದನ್ನು  ತಿಲಕರು ಎಂದೂ ಬಯಸುತ್ತಿರಲಿಲ್ಲ(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ತಿಲಕರ ಬಳಿಕ ಕಾಂಗ್ರೆಸ್ ಬ್ರಿಟಿಷರ ಮುಂದೆ ಮಂಡಿಯೂರಿತು.  1939ರಲ್ಲಿ ಬೋಸ್ ಗಾಂಧಿಯ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಗೆದ್ದರು. "ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಕೂಡಲೇ ಹೋರಾಟ ಕೈಗೆತ್ತಿಕೊಳ್ಳಬೇಕು. ಭಾರತವನ್ನು ತೊರೆಯಲು ಬ್ರಿಟಿಷರಿಗೆ ಅಂತಿಮ ಗಡುವು ನೀಡಬೇಕು" ಎಂದು ಅವರು ಘೋಷಿಸಿದರು. ಅಲ್ಲದೆ ಕೆಲವು ಕಾಂಗ್ರೆಸ್ ನಾಯಕರು ಬ್ರಿಟಿಷ್ ಸಾಮ್ರಾಜ್ಯಶಾಹಿ ಜೊತೆ ಶಾಮೀಲಾಗಿದ್ದಾರೆ ಎಂದೂ ಆಪಾದಿಸಿದರು. ಈ ಮಾತು ಗಾಂಧಿಯನ್ನು ಕುರಿತೇ ಹೇಳಿದುದಾಗಿತ್ತು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ಬ್ರಿಟಿಷರ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಪಕ್ಷ ಸಿದ್ಧವಿತ್ತು. "ಗೌರವಯುತ ಒಪ್ಪಂದ ಸಾಧ್ಯವಾಗುವುದಾದರೆ ಬ್ರಿಟಿಷರ ಜೊತೆ ರಾಜಿಗೆ ನಾವು ಸಿದ್ಧ" ಎನ್ನುವುದು ಗಾಂಧಿಯ ನಿಲುವಾಗಿತ್ತು(ಲೈಫ್ ಹಿಸ್ಟರಿ ಆಫ್ ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ).

               ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಭೂತಪೂರ್ವ ಕಾಣಿಕೆ ನೀಡಿದ ಸಶಸ್ತ್ರ ಹೋರಾಟವನ್ನು ಗಾಂಧಿ ಟೀಕಿಸಿದರು. ಅದನ್ನು ವ್ಯರ್ಥಗೊಳಿಸಲು ತಮ್ಮಿಂದಾದ ಪ್ರಯತ್ನ ಮಾಡಿದರು. "ಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದಕ್ಕಿಂತ ಸಾವಿರ ವರ್ಷವಾದರೂ ಸರಿ, ಅಹಿಂಸಾ ವಿಧಾನದಿಂದ ಸ್ವಾತಂತ್ರ್ಯ ಗಳಿಸುವುದೇ ಮೇಲು" ಎನ್ನುತ್ತಿದ್ದರವರು. ದೇಶೀಯರನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕಿಂತ ತಮ್ಮ ತಥಾಕಥಿತ ಅಹಿಂಸಾ ಸಿದ್ಧಾಂತವೇ ಅವರಿಗೆ ಮುಖ್ಯವಾಯಿತು. ಕ್ರಾಂತಿಕಾರಿಗಳನ್ನು ತಮಗೆ ಸಿಕ್ಕ ವೇದಿಕೆ ಹಾಗೂ ಮಾಧ್ಯಮಗಳ ಮೂಲಕ ಖಂಡಿಸುತ್ತಾ ದೂಷಿಸುತ್ತಿದ್ದರು ಗಾಂಧಿ. ಈ ಕದನ ಕಲಿಗಳಿಗೆ ದೇಶೀಯರ ಹೃದಯದಲ್ಲಿ ಅಗಾಧ ಬೆಂಬಲ ಇದ್ದಾಗ್ಯೂ ಗಾಂಧಿ ಕ್ರಾಂತಿಕಾರಿಗಳಿಗೆ ಪ್ರೇರಣಾ ಸ್ತ್ರೋತರಾದ ಶಿವಾಜಿ, ರಾಣಾ ಪ್ರತಾಪ, ಗುರು ಗೋವಿಂದ ಸಿಂಗರಂತಹ ಮಹಾಪುರುಷರನ್ನು ಟೀಕಿಸಲು ಆರಂಭಿಸಿದರು. ಅವರನ್ನು "ಹಾದಿ ತಪ್ಪಿದ ದೇಶಭಕ್ತರು" ಎಂದೂ ಜರೆದರು. ಸರಕಾರ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸತೊಡಗಿದಾಗ ಪ್ರತಿರೋಧ ಬಿಡಿ, ಕನಿಷ್ಟ ಸಂತಾಪವನ್ನೂ ವ್ಯಕ್ತಪಡಿಸಲಿಲ್ಲ.

               ಕಾಂಗ್ರೆಸ್ಸಿನ ಮಂದಗಾಮಿ ನಡೆಯನ್ನು ಬೋಸ್ ಯಾವಾಗಲೂ ಉದಾಸೀನ ಭಾವ ಎನ್ನುವಂತೆ ಲೇವಡಿ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಕೆಂಡಕಾರುವ ಹೇಳಿಕೆ ನೀಡುತ್ತಿದ್ದ ಅವರನ್ನು ಕಂಡರೆ ಸಹಜವಾಗಿಯೇ "ತನ್ನದೇ ನಡೆಯಬೇಕು" ಎನ್ನುವ ಭಾವದ ಗಾಂಧಿ ಹಾಗೂ ಅವರ ಅನುಯಾಯಿಗಳಿಗೆ ಸದಾ ಇರಿಸುಮುರಿಸು ಉಂಟಾಗುತ್ತಿತ್ತು. ಬೋಸ್ ಗಾಂಧಿ ನೇತೃತ್ವದ ಅಭ್ಯರ್ಥಿಯ ವಿರುದ್ಧ ಭಾರೀ ಅಂತರದಿಂದ ಗೆದ್ದು ಎರಡನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಈ ವಿರಸ ತಾರಕಕ್ಕೇರಿತು. ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು  ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಬೋಸ್ ತಾವಾಗಿ ಹೊರ ಹೋದ ಮೇಲೂ ಗಾಂಧಿಗೆ ಅವರ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಬೋಸ್'ರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸಲಾಯಿತು. ಮೂರು ವರ್ಷಗಳವರೆಗೆ ಅವರು ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೆ ಆಯ್ಕೆಯಾಗುವ ಹಕ್ಕನ್ನು ಕಸಿದುಕೊಳ್ಳಲಾಯಿತು. (ಇಂಡಿಯನ್ ಪೊಲಿಟಿಕಲ್ ಟ್ರಡಿಷನ್ಸ್ - ಎಚ್.ಎಚ್. ದಾಸ್ & ಪಿ.ಎಸ್.ಎನ್. ಪಾತ್ರೋ)(ನೇತಾಜಿ ಸುಭಾಷ್ ಚಂದ್ರ ಬೋಸ್ - ತಾತ್ಸೋ ಹಯಾಶಿದಾ)

               ಗಾಂಧಿಯ ನೇತೃತ್ವದಲ್ಲಿ 1942ರಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿತು. ಆಂದೋಲನಕ್ಕೆ ಚಾಲನೆ ಸಿಗುವ ಮುನ್ನವೇ ಸರ್ಕಾರ ಕಾಂಗ್ರೆಸ್ಸಿನ ಬಹುತೇಕ ನಾಯಕರನ್ನು ಬಂಧಿಸಿತು. ಕಾಂಗ್ರೆಸ್ಸಿನ ಇನ್ನೊಂದು ವರ್ಗ ಭೂಗತವಾಯಿತು. ಗಾಂಧಿಯ ಕಾರ್ಯತಂತ್ರವನ್ನು ಅನುಸರಿಸಿ ಜೈಲಿಗೆ ಹೋಗುವ ಬದಲು ಸಂಪರ್ಕ ಹಾಳುಗೆಡಹುವುದು, ಬೆಂಕಿ ಹಚ್ಚುವುದು, ಲೂಟಿ, ಕೊಲೆಗಳ ಮೂಲಕ ಸರ್ಕಾರಕ್ಕೆ ಗರಿಷ್ಟ ಹಾನಿಯನ್ನುಂಟು ಮಾಡುವುದು ಅವರ ಉದ್ದೇಶವಾಗಿತ್ತು. ಬಿಹಾರ ಹಾಗೂ ಆಸುಪಾಸಿನಲ್ಲಿ ಸುಮಾರು 900 ರೈಲ್ವೇ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಯಿತು. ಅನೇಕ ಸಮಯದವರೆಗೆ ಆಡಳಿತಯಂತ್ರ ಸ್ಥಬ್ಧಗೊಂಡಿತ್ತು. ಇವೆಲ್ಲವೂ ಗಾಂಧಿಯ ಅಹಿಂಸಾ ವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದ್ದವು. ಗಾಂಧಿ ಇವನ್ನು ಸಮರ್ಥಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ವಿರೋಧಿಸಿದರೆ ದೇಶೀಯರ ತಾತ್ಸಾರಕ್ಕೆ, ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತಿತ್ತು. ಸಮರ್ಥಿಸಿದರೆ ಅವರ ಅಹಿಂಸಾವಾದದ ಪೊಳ್ಳುತನ ಬಯಲಾಗುತ್ತಿತ್ತು. ಗಾಂಧಿ 'ಮಾಡು ಇಲ್ಲವೇ ಮಡಿ' ಕರೆ ನೀಡಿದ್ದನ್ನು ಜನ ಹಿಂಸಾತ್ಮಕ್ಕೆ ಹೋರಾಟಕ್ಕೆ ನಡೆದ ಅನುಮತಿ ಎಂದೇ ತಿಳಿದುಕೊಂಡರು. ಹಾಗೂ ಎಲ್ಲಾ ರೀತಿಯ ಹಿಂಸಾ ಚಟುವಟಿಕೆಗೆ ಮುಂದಾದರು. ಹೀಗೆ ಆಂದೋಲನ ಆರಂಭವಾದ ಕೆಲವೇ ವಾರಗಳಲ್ಲಿ ಗಾಂಧಿಯ ಅಹಿಂಸಾ ಸಿದ್ಧಾಂತ ಮಣ್ಣುಗೂಡಿತು. 1943ರಲ್ಲಿ ಲಾರ್ಡ್ ಲಿಲಿನ್ತೋ ಗಾಂಧಿಗೆ ಬರೆದ ಪತ್ರದಲ್ಲಿ "ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧಿಯ ಬೆಂಬಲಿಗರು ನಡೆಸಿದ ಹಿಂಸಾಚಾರಗಳನ್ನು ಒಪ್ಪಿಕೊಳ್ಳುವಂತೆ ಅಥವಾ ನಿರಾಕರಿಸುವಂತೆ" ಸವಾಲು ಹಾಕಿದ. ಆಗ ಗಾಂಧಿ ಬಲವಂತವಾಗಿ ಹಿಂಸೆಯನ್ನು ಖಂಡಿಸಬೇಕಾಯಿತು. ಅಂದರೆ ತಮ್ಮ ಗೊಡ್ಡು ವಿಚಾರಗಳ ಗೆಲುವಿಗಾಗಿ ಸ್ವಾತಂತ್ರ್ಯ ಹೋರಾಟವನ್ನೂ ವಿರೋಧಿಸುವ ನಿಲುವಿಗೂ ಗಾಂಧಿ ಬಂದಿದ್ದರು! ತಮ್ಮದೇ ಅಹಿಂಸಾ ಮಾದರಿಯ ಹೋರಾಟಗಳು ಒಂದರ ಹಿಂದೆ ಒಂದು ವಿಫಲವಾಗುತ್ತಿದ್ದರೂ, ಅಹಿಂಸೆಯ ಹೋರಾಟವೇ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಹಿಂಸಾತ್ಮಕವಾಗಿ ಬದಲಾಗಿದ್ದರೂ ಗಾಂಧಿ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ಪ್ರೋತ್ಸಾಹಿಸಲೇ ಇಲ್ಲ.

                     ಅತ್ತ ಸುಭಾಷ್, ರಾಸ್ ಬಿಹಾರಿ ಬೋಸರಿಂದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗಿನ ನೇತೃತ್ವವನ್ನು ವಹಿಸಿಕೊಂಡು ಐ.ಎನ್.ಎ ಕಟ್ಟಿ ಭಾರತದತ್ತ ದಾಳಿಗೆ ಮುಂದುವರಿಯುತ್ತಿರುವುದನ್ನು ಗಾಂಧಿ ಹಾಗೂ ಅವರ ಶಿಷ್ಯ ನೆಹರೂ ವಿರೋಧಿಸಿದರು. ಸುಭಾಷರು ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಅವರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಉತ್ತರ ಕುಮಾರ ನೆಹರೂ "ನಿಮ್ಮ ಯುದ್ಧಾಪರಾಧಿ ಸುಭಾಷ್ ಬೋಸ್'ಗೆ ರಷ್ಯಾ ಆಶ್ರಯ ನೀಡಿದೆ. ವಿಚಾರಿಸಿಕೊಳ್ಳಿ" ಎಂದು ಪತ್ರವನ್ನೂ ಬರೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತನ್ನದೇ ದೇಶೀಯನನ್ನು ಯುದ್ಧಾಪರಾಧಿ ಎಂದು ಕರೆದು, ಆತನ ವಿರುದ್ಧ ಕತ್ತಿ ಮಸೆದದ್ದು ಮಾತ್ರವಲ್ಲ, ಆತನಿಗೆ ಇಂತಹವರು ಆಶ್ರಯ ಕೊಟ್ಟಿದ್ದಾರೆ, ವಿಚಾರಿಸಿಕೊಳ್ಳಿ ಎಂದಾತ ಈ ದೇಶದ ಮೊದಲ ಪ್ರಧಾನಿಯಾದ! "ಬೋಸ್ ಶೂರತನ ವೈಭವೀಕರಿಸುವ ಪ್ರಚಾರ ಮತ್ತಷ್ಟು ನಡೆದಲ್ಲಿ, ಹೂವಿನ ಗುಚ್ಛ ನೀಡಿದಂತೆ ದೇಶದ ನಾಯಕತ್ವವನ್ನು ಅವರಿಗೆ ನೀಡಲು ದಾರಿ ಮಾಡಿದಂತೆ" ಎಂದು ಗಾಂಧಿಗೆ ಮೌಂಟ್ ಬ್ಯಾಟನ್ ಎಚ್ಚರಿಕೆ ನೀಡಿದ್ದ.(ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ)

                   ಅಲ್ಲಾ, ಮೌಂಟ್ ಬ್ಯಾಟನ್ ಗಾಂಧಿಗೆ ಯಾಕೆ ಎಚ್ಚರಿಕೆ ಕೊಡಬೇಕು? ಮೌಂಟ್ ಬ್ಯಾಟನ್ ಸುಭಾಷರಿಗೂ ಗಾಂಧಿಗೂ ಸಮಾನ ವೈರಿಯಲ್ಲವೇ? ಹಾಗಿದ್ದಲ್ಲಿ ಆತ ಗಾಂಧಿಗೆ ಯಾಕೆ ಈ ರೀತಿ ಎಚ್ಚರಿಕೆ ಕೊಡುತ್ತಾನೆ? ಆತ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದ ಎನ್ನೋಣವೇ? ನಾಯಕರ ಮಧ್ಯೆ ಅದರಲ್ಲೂ ಸುಭಾಷರು ಹಾಗೂ ಗಾಂಧಿಯ ನಡುವೆ ಒಡಕು ತರುವುದರಿಂದ ಆತನಿಗೇನೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಗಾಂಧಿ - ಸುಭಾಷರ ನಡುವಿನ ಒಡಕು ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಅಲ್ಲದೆ ಸುಭಾಷರನ್ನು ಹತ್ತಿಕ್ಕಲು ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರು ಗಾಂಧಿ. ಸುಭಾಷರ ಸ್ವಾತಂತ್ರ್ಯ ಹೋರಾಟಕ್ಕೇ ಇತಿಶ್ರೀ ಹಾಡಲೂ ಗಾಂಧಿ ಪ್ರಯತ್ನಿಸಿದ್ದರು. ಈ ಎಲ್ಲಾ ಬಿಂದುಗಳನ್ನು ರೇಖೆಗಳೊದಿಗೆ ಜೋಡಿಸಿದಾಗ ಅದು ಕೊನೆಗೆ ಹೋಗಿ ನಿಲ್ಲುವುದು ಸ್ವಾರ್ಥ-ಅಧಿಕಾರ ದಾಹ-ಪ್ರಸಿದ್ಧಿಯ ಹುಚ್ಚು ಎನ್ನುವ ಮೂರು ಅಂಶಗಳ ವ್ಯಕ್ತಿತ್ವಕ್ಕೆ! ಅಂದರೆ ಗಾಂಧಿ ಅಧಿಕಾರಕ್ಕೋಸ್ಕರ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರು, ತಮಗೆ ಅಥವಾ ತಮಗೆ ಬೇಕಾದವರಿಗೆ ಅಧಿಕಾರವನ್ನು ಹಸ್ತಾಂತರಿಸಲು ನಾಟಕವಾಡುತ್ತಿದ್ದರು ಎನ್ನುವ ಅರ್ಥ ಇದರಿಂದ ಹೊರಹೊಮ್ಮುತ್ತದಲ್ಲವೇ?


ಗುರುವಾರ, ನವೆಂಬರ್ 17, 2016

ಯಾರು ಮಹಾತ್ಮ? ಭಾಗ- ೨೪

ಯಾರು ಮಹಾತ್ಮ?
ಭಾಗ- ೨೪


          1947 ಕಾಂಗ್ರೆಸ್ 12ರಂದು ಕಾಂಗ್ರೆಸ್ ಧುರೀಣರು ಹರಿದ್ವಾರಕ್ಕೆ ಭೇಟಿ ನೀಡಿದಾಗ ಹಿಂದೂ ನಿರಾಶ್ರಿತರ ದೊಡ್ಡ ಗುಂಪೊಂದು ಎದುರಾಯಿತು. ಮುಸ್ಲಿಮ್ ಲೀಗಿನ ನೇರ ಕಾರ್ಯಾಚರಣೆಯಿಂದ ಮನೆ, ಆಸ್ತಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಅವರಿಗೆ ಸಹಜವಾಗಿಯೇ ಗಾಂಧಿಯ ಮೇಲೆ ಸಿಟ್ಟಿತ್ತು. ಗಾಂಧಿಯನ್ನು ಕಂಡಕೂಡಲೇ ಅವರಿಂದ "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆ ಅವರಿಂದ ಹೊರಹೊಮ್ಮಿತು. ಇದೇ ಪರಿಸ್ಥಿತಿ ಗಾಂಧಿ ಪಂಜಾಬ್-ಸಿಂಧ್ ಪ್ರವಾಸದಲ್ಲಿರುವಾಗಲೂ ಎದುರಾಯಿತು. ಅಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿ ಯಾವುದೇ ಭಾಷಣ ಮಾಡದೆ ಗಾಂಧಿ ದೆಹಲಿಗೆ ವಾಪಸಾಗಬೇಕಾಯಿತು.


             ಆಚಾರ್ಯ ಕೃಪಲಾನಿ 1947ರ ಜೂನ್ 14ರಂದು ನಡೆದ ಎಐಸಿಸಿ ಅಧಿವೇಶನದಲ್ಲಿ ವಿಭಜನೆಯ ಬಗೆಗಿನ ಗಾಂಧಿ ದೃಷ್ಟಿಕೋನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ದೇಶ ವಿಭಜನೆ ಕುರಿತ ಗಾಂಧಿ ನಿಲುವು ಅಪ್ರಾಯೋಗಿಕ. ಕಳೆದ ಮೂವತ್ತು ವರ್ಷಗಳಿಂದ ಗಾಂಧಿಯ ಮೇಲೆ ರಾಜಕೀಯ ನಿಷ್ಠೆ ಹೊಂದಿದ್ದರೂ ಇಂದು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಸಮಸ್ಯೆಗಳನ್ನು ಸಾಮೂಹಿಕ ಆಧಾರದ ಮೇಲೆ ಬಗೆಹರಿಸುವ ದಾರಿ ಗಾಂಧಿಗೆ ತಿಳಿದಿಲ್ಲ. ಅವರು ನಮಗೆ ತೋರಿದ ಅಹಿಂಸೆ, ಅಸಹಕಾರಗಳನ್ನು ಯಾಂತ್ರಿಕವಾಗಿಯಾದರೂ ಅನುಸರಿಸುತ್ತಿದ್ದರು. ಇಂದು ಅವರೇ ಸ್ವತಃ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಪಂಜಾಬಿನ ಹಿಂಸೆಯನ್ನು ಶಮನಗೊಳಿಸಲು ಅವರ ಅಹಿಂಸೆ-ಅಸಹಕಾರಗಳಿಗೆ ಸಾಧ್ಯವಾಗಲಿಲ್ಲ. ಇಡೀ ಭಾರತದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆಯನ್ನು ಸಾಧಿಸುವ ಸಲುವಾಗಿ ತಾವು ಬಿಹಾರದಲ್ಲಿ ಪ್ರಯತ್ನಿಸುವುದಾಗಿ ಗಾಂಧಿ ಹೇಳುತ್ತಾರೆ. ಇದು ಹೇಗೆ ಸಾಧ್ಯ? ಸಾಮಾನ್ಯನಿಗೂ ಗೊತ್ತು ಇದು ಅಪ್ರಾಯೋಗಿಕ ಎಂದು. ಉದ್ದೇಶಿತ ಗುರಿ ಸಾಧಿಸಲು ಗಾಂಧಿಯಲ್ಲಿ ಖಚಿತ ಹೆಜ್ಜೆಗಳೇ ಇಲ್ಲ. ಅವರು ನೀತಿಗಳನ್ನು ರೂಪಿಸುತ್ತಾರೆ. ಆದರೆ ಅವು ಬೇರೆಯವರಿಂದ ಜಾರಿಯಾಗಬೇಕೆಂದು ಬಯಸುತ್ತಾರೆ." "ಹೃದಯದ ಏಕತೆ ಸಾಧಿಸುವ ಮೂಲಕ ವಿಭಜನೆಯ ಪರಿಣಾಮಗಳನ್ನು ತಟಸ್ಥಗೊಳಿಸಿ. ಕೆಲಸಕಾರ್ಯಗಳ ಮುಖಾಂತರ ಎರಡು ದೇಶ ಸಿದ್ಧಾಂತವನ್ನು ಖಂಡಿಸಿ" ಎಂದು ಬಿಟ್ಟಿ ಸಲಹೆ ನೀಡಿದಾಗ ವಿಭಜನೆಯ ಪ್ರಸ್ತಾಪ ವಿರೋಧಿಸಿದ ಜನ ತಿರುಗಿ ಬೀಳದೆ ಇರುತ್ತಾರೆಯೇ? ಮೇಲಿಂದ ಮೇಲೆ ವಿರೋಧ ಎದುರಿಸಿದಾಗ ತಮ್ಮ ದಾರಿ ಸರಿಯಾಗಿಯೇ ಇದೆ ಎಂದು ಗಾಂಧಿ ಭಾವಿಸಿದರು. ಮತ್ತೆ ತಮ್ಮ ದಾರಿಯಲ್ಲೇ ಸಾಗಿದರು(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                 ವಿಭಜನೆಯ ನಿರ್ಣಯವನ್ನು ಕೊನೆಗಾಣಿಸುವವರೆಗೆ ಗಾಂಧಿಯ ಮನೆಯ ಎದುರು ಉಪವಾಸ ಕೂರಲು ಯುವ ಜೋಡಿಯೊಂದು ನಿರ್ಧರಿಸಿತು. ಆಗ ಗಾಂಧಿ "ಇದು ಸರಿಯಾದ ವಿಧಾನವಲ್ಲ. ಭೌತಿಕ ವಿಭಜನೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಪಾಕಿಸ್ತಾನ ರಚನೆಯಾಗದಂತೆ ತಡೆಯುವ ಏಕೈಕ ಮಾರ್ಗವೆಂದರೆ ಹಿಂದೂಗಳು ಮುಸ್ಲಿಮ್ ಸಹೋದರರಿಂದ ಬೇರೆಯಾಗದೇ ಇರುವುದು. ಹಿಂದೂಗಳ ಹೃದಯ ಗಟ್ಟಿಯಾಗಿ ಇದ್ದರೆ ಭೌತಿಕ ವಿಭಜನೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ." ಎಂದು ಸಮಾಧಾನಿಸಲು ಯತ್ನಿಸಿದರು ಗಾಂಧಿ. ಇಲ್ಲಿ ಗಾಂಧಿಯ ಕಪಟತ್ವ ಬೆಳಕಿಗೆ ಬರುತ್ತಿದೆ. ವಿಭಜನೆಯಾದರೆ ನನ್ನ ದೇಹದ ಮೇಲೆ ಎಂದಾತ ಈಗ ಅದು ಕೇವಲ ಭೌತಿಕ ವಿಭಜನೆಯಷ್ಟೇ ಎಮ್ದು ತಿಪ್ಪೆ ಸಾರಿಸುತ್ತಿದ್ದಾರೆ. ಅಲ್ಲದೆ ಆ ವಿಭಜನೆಯಿಂದ ಭಾರತಕ್ಕೇನೂ ಹಾನಿಯಿಲ್ಲ ಎನ್ನುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರೇನೇ ಹಾನಿ ಮಾಡಿದರೂ ಹಿಂದೂಗಳು ಮುಸ್ಲಿಮರ ಜೊತೆಯಾಗಿ ಇರಬೇಕಂತೆ! ಗಾಂಧಿಗೆ ದೇಶಕ್ಕಿಂತ ಹಿಂದೂ-ಮುಸ್ಲಿಮ್ ಏಕತೆಯ ಹುಚ್ಚೇ ತೀವ್ರವಾಗಿತ್ತು ಎನ್ನುವುದರ ದ್ಯೋತಕ ಇದು. ರಾಜತಾಂತ್ರಿಕವಾಗಿ ಕಾರ್ಯ ನಿರ್ವಹಿಸಬೇಕಾದ ಹೊತ್ತಿನಲ್ಲಿ ಎಲ್ಲಾ ಬಿಟ್ಟವರಂತೆ ಮಾತನಾಡುತ್ತಿದ್ದಾರೆ ಗಾಂಧಿ. ಕ್ಷಾತ್ರವನ್ನು ಪ್ರದರ್ಶಿಸಬೇಕಾದ ಸಮಯದಲ್ಲಿ ವೇದಾಂತ ಹೇಳುತ್ತಿದ್ದಾರೆ. ಇದು ಗಾಂಧಿಯ ನಾಯಕತ್ವದ ವೈಫಲ್ಯದ ಲಕ್ಷಣ. ಆ ಯುವ ಜೋಡಿ ತಾವು ತಮ್ಮ ಆತ್ಮಸಾಕ್ಷಿ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ಗಾಂಧಿಯ ಮಂತ್ರವನ್ನೇ ತಿರುಗಿ ಉಪಯೋಗಿಸಿದಾಗ ಗಾಂಧಿಯ ಮುಖ ಪೆಚ್ಚಾಗದೇ ಇದ್ದೀತೇ? (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                ದೇಶ ವಿಭಜನೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದ ಗಾಂಧಿ ವಿಭಜನೆಯನ್ನು ಒಪ್ಪುವ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅಂಗೀಕರಿಸುವಂತೆ ಜನರನ್ನು ಒತ್ತಾಯಪಡಿಸಿದರು. ವಿಭಜನೆಯ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಮರುಮಾತಿಲ್ಲದೆ ಒಪ್ಪಿದ ಗಾಂಧಿ ದೇಶದ ಜನರ ಮತಭೇದವಿಲ್ಲದ ನಿರ್ಧಾರವನ್ನು ಪರಿಗಣಿಸಿ ಧ್ವಜ ಸಮಿತಿ ಶಿಫಾರಸ್ಸು ಮಾಡಿದ ಕೇಸರಿ ಬಣ್ಣದ ಧ್ವಜವನ್ನು ಯಾಕೆ ಒಪ್ಪಲಿಲ್ಲ? ಅಲ್ಲದೆ ಅದನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದೇಕೆ? ಆ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು, ಸಮಿತಿಯ ನಿರ್ಣಯವನ್ನು ತಿರಸ್ಕರಿಸಿದ ಗಾಂಧಿಗೆ ಈಗೇಕೆ ಸಾಧ್ಯವಾಗಲಿಲ್ಲ? ಗಾಂಧಿಗೆ ಕಾಂಗ್ರೆಸ್ಸಿನ ಮೇಲಿನ ಹಿಡಿತ ತಪ್ಪಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಐವತ್ತೈದು ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತು ತಮ್ಮ ನಿರ್ಧಾರವನ್ನು ಸಾಧಿಸಿಕೊಂಡ ಛಲಗಾರನಿಗೆ ದೇಶ ವಿಭಜನೆಯಂತಹ ಜೀವನ್ಮರಣದ ಪ್ರಶ್ನೆಯ ವಿಚಾರ ಬಂದ ತಕ್ಷಣ ಹಿಡಿತ ತಪ್ಪಿ ಹೋಯಿತೇ? ವಿಭಜನೆಯಾದ ಕೂಡಲೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿತ್ತು. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಬಾಕಿ ಹಣ ಕೊಡುವುದಿಲ್ಲ ಎಂದು ಭಾರತ ಸರಕಾರ ದೃಢ ನಿರ್ಧಾರ ತಾಳಿತ್ತು. ಅಂತಹ ಸಮಯದಲ್ಲಿ ಬಾಕಿ 55 ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತರು ಗಾಂಧಿ. ಗಾಂಧಿಯ ಹಠಮಾರಿ ಧೋರಣೆಗೆ ತಲೆಬಾಗಿತು ಸರಕಾರ! ಪಾಕಿಸ್ತಾನಕ್ಕೆ ಸಹಾಯಕವಾಗುವುದಾದರೆ ಮಾತ್ರ ಉಪವಾಸದ ಅಸ್ತ್ರ , ಹಿಂದೂಗಳಿಗೆ, ಹಿಂದೂಸ್ಥಾನದ ಭವಿಷ್ಯಕ್ಕಾಗುವಾಗ ಉಪವಾಸ, ಅಸಹಕಾರದ ಅಸ್ತ್ರಗಳು ಇಲ್ಲ ಎಂದರೆ ಏನರ್ಥ? ಅನುಯಾಯಿಗಳು ನೆನಪಿಸಿದರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲವೇಕೆ? ಕಾಂಗ್ರೆಸ್ ಮೇಲೆ ಹಿಡಿತವಿಲ್ಲವೆಂದಾದರೆ ಜನರನ್ನೇಕೆ ವಿಭಜನೆಗೆ ಒಪ್ಪುವಂತೆ ಒತ್ತಾಯಪಡಿಸಬೇಕಿತ್ತು? ದೇಶದ ಜನತೆ ತಮ್ಮ ಬೆಂಬಲಕ್ಕೆ ನಿಲ್ಲುತ್ತೇವೆಂದು, ಕಾರ್ಯಕರ್ತರನ್ನು ಒದಗಿಸುತ್ತೇವೆಂದು, ಧನ ಸಹಾಯವನ್ನೂ ಮಾಡುತ್ತೇವೆಂದು ಬಗೆಬಗೆಯಲ್ಲಿ ಧೈರ್ಯ ತುಂಬಿದರೂ ಗಾಂಧಿ ನಿಷ್ಕ್ರಿಯರಾದದ್ದೇಕೆ?


                    ಗಾಂಧಿ ಕೇವಲ ನಿಷ್ಕ್ರಿಯರಾದದ್ದು ಮಾತ್ರವಲ್ಲ ಜನರಲ್ಲಿ ಪಾಕಿಸ್ತಾನದ ರಚನೆಯ ಕುರಿತು ಪ್ರಚಾರ ಕಾರ್ಯವನ್ನೂ ಕೈಗೊಂಡರು. ತನಗಿಷ್ಟವಿಲ್ಲದಿದ್ದಾಗ, ತನ್ನಿಂದ ವಿಭಜನೆಯನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಾಗ ಸುಮ್ಮನೆ ಉಳಿಯಬೇಕಿತ್ತು. ಅದು ಬಿಟ್ಟು ವಿಭಜನೆಯನ್ನು ಒಪ್ಪಿಕೊಳ್ಳಿ ಎಂದು ಜನರಿಗೆ ದುಂಬಾಲು ಬಿದ್ದರು ಗಾಂಧಿ. ಅವರ ಈ ನಿಲುವು ಆಶ್ಚರ್ಯ ತರುವಂತಹದ್ದೇನಲ್ಲ. ಅಡಿಗಡಿಗೆ ಮತಾಂಧ ಮುಸ್ಲಿಮರ ಸಹಾಯಕ್ಕೆ ನಿಂತು ಹಿಂದೂಗಳನ್ನೂ, ರಾಷ್ಟ್ರೀಯವಾದಿ ಮುಸಲ್ಮಾನರನ್ನು ಕಡೆಗಣಿಸಿದ ವ್ಯಕ್ತಿಯ ಈ ನಿಲುವು ಅಸಹಜವೂ ಅಲ್ಲ. ಇಡೀ ಭಾರತ ಬೇಕಾದರೆ ಪಾಕಿಸ್ತಾನವಾಗಲಿ ಎಂದು ಹೇಳಿದ್ದ, ಭಾರತದ ಆಳ್ವಿಕೆಯನ್ನು ಹಿಂದೂಗಳಿಗೆ ಮಾರಣಾಂತಕವಾದ ಮುಸ್ಲಿಮ್ ಲೀಗಿಗೆ ವಹಿಸಿ ಜಿನ್ನಾನನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸುವಂತೆ ವೈಸ್ ರಾಯ್ ಮೌಂಟ್ ಬ್ಯಾಟನ್'ಗೆ ಸಲಹೆ ಮಾಡಿದ್ದ ಗಾಂಧಿಗೆ ದೇಶವಿಭಜನೆಯೆಂದರೆ ಮಕ್ಕಳಾಟದಂತೆ ಕಂಡಿದ್ದಿರಬಹುದು. ಹಿಂದೂಗಳನ್ನು ಸಲಾಮ್ ಮಾಡಿ, ಅಲ್ಲಾ ಹೋ ಅಕ್ಬರ್ ಎಂದು ಹೇಳಿ, ಉರ್ದು ಕಲಿಯಿರಿ, ವಂದೇ ಮಾತರಂ, ಶಿವಬಾವನಿ ಹಾಡಬೇಡಿ, ವಿಭಜನೆಯ ಮೂಲ ಬೀಜ ಇಕ್ಬಾಲನ ಕವಿತೆ ಹಾಡಿ ಎಂದ ಗಾಂಧಿಗೆ ಪಾಕಿಸ್ತಾನವೇ ಪ್ರಿಯವಾಗಿದ್ದಿರಬಹುದು. ಖಿಲಾಫತ್ ಚಳುವಳಿಯನ್ನು ಹಿಂದೂಗಳ ಮೇಲೆ ಹೇರಿ, ಕೊಲೆಗಾರ ಮೋಪ್ಲಾಗಳನ್ನು ಸೋದರರೆಂದು ಕರೆದ ವ್ಯಕ್ತಿಗೆ ಮುಸ್ಲಿಂ ಲೀಗ್ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ಏನಾಶ್ಚರ್ಯವಿದೆ? ಕಲ್ಕತ್ತಾದಲ್ಲಿ ಹಿಂದೂಗಳ ನರಮೇಧಕ್ಕೆ ಕಾರಣನಾದ ಸುಹ್ರಾವರ್ದಿಯನ್ನು ತನ್ನ ಪ್ರೀತಿಯ ಸೈನಿಕ ಎಂದ, ಶೃದ್ಧಾನಂದರ ಕೊಲೆಗಾರ ರಶೀದನನ್ನು ಸಹೋದರ ಎಂದ, ಶೌಕತ್, ಮಹಮ್ಮದ್ ಅಲಿಗೆ ಶರಣು ಬಂದ ಗಾಂಧಿಗೆ ಕೋಮುವಾದಿಯಾಗಿ ಬದಲಾದ ಜಿನ್ನಾ ಪ್ರಿಯನಾಗದೆ ಇದ್ದಾನೇ? ಬ್ರಿಟಿಷರ ಒಡೆದು ಆಳುವ ನೀತಿಗೆ ಗಾಂಧಿಯ ದಾರಿ ಸಹಾಯಕವಾಯಿತು. ವಿಚಿತ್ರವೆಂದರೆ ತನ್ನ ಪುಕ್ಕಲುತನ, ತಿಕ್ಕಲುತನ, ಅಸಹಾಯಕತನ, ಗೊಂದಲಗಳಿಂದಾಗಿ ಸಾಲು ಸಾಲು ವೈಫಲ್ಯ ಕಂಡು ಕೊನೆಗೆ ವಿಭಜನೆಯ ಶಿಲ್ಪಿಯಂತೆ ಕೆಲಸ ಮಾಡಿ ಪರೋಕ್ಷವಾಗಿ ಪಾಕಿಸ್ತಾನದ ಜನಕನಾದ ವ್ಯಕ್ತಿಯನ್ನು ರಾಷ್ಟ್ರಪಿತ ಎಂದು ಸತ್ಕರಿಸಿದ ಈ ದೇಶದ ಬೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು?

ಗುರುವಾರ, ನವೆಂಬರ್ 10, 2016

ಯಾರು ಮಹಾತ್ಮ? ಭಾಗ- ೨೩

ಯಾರು ಮಹಾತ್ಮ?
ಭಾಗ- ೨೩


          ವಿಭಜನೆಯ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಹೊತ್ತಲ್ಲೇ ವಿಭಜನೆ ವಿರುದ್ಧ ಹೋರಾಟ ಆರಂಭಿಸುವಂತೆ ಆಗ್ರಹಿಸುವಂತಹ ಅನೇಕ ಪತ್ರಗಳು ಗಾಂಧಿಗೆ ಬರತೊಡಗಿದವು. ಬ್ರಿಟಿಷರು ತಾವು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವಾಗ ಸೃಷ್ಟಿಸಿದ್ದ ಸ್ಥಿತಿಯನ್ನೇ ಈಗ ಮರುಸೃಷ್ಟಿಸಿದ್ದಾರೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ಜಗಳ ನಡೆಸುವಂತೆ ಮಾಡಿ ತಾವು ತೆರಳುತ್ತಿದ್ದಾರೆ. ನೀವು ವಿಭಜನೆ ವಿರುದ್ಧ ಹೋರಾಟವನ್ನು ಪ್ರಾರಂಭಿಸುವುದಾದಲ್ಲಿ ನಾನು ಗೌರವಯುತವಾಗಿ ಒಂದು ಲಕ್ಷ ಶಿಸ್ತುಬದ್ಧ ಕಾರ್ಯಕರ್ತರನ್ನು ಒದಗಿಸಬಲ್ಲೆ. ಅವರು ಅಹಿಂಸೆಯ ದೀಕ್ಷೆ ತೊಟ್ಟವರಲ್ಲದಿದ್ದರೂ ನಿಮ್ಮ ಸೂಚನೆಗಳನ್ನು ತಮ್ಮದೇ ನೀತಿ ಸಂಹಿತೆಯಂತೆ ವಿಶ್ವಾಸದಿಂದ ಪಾಲಿಸುತ್ತಾರೆ ಎನ್ನುವುದು ಒಂದು ಪತ್ರದ ಒಕ್ಕಣೆಯಾಗಿತ್ತು. ಆದರೆ ಇಅದಕ್ಕೆ ಗಾಂಧಿ "ವಿಭಜನೆಯಂದ ನನ್ನಷ್ಟು ದುಃಖಕ್ಕೀಡಾಗುವವರು ಬೇರೆ ಯಾರೂ ಇಲ್ಲ. ಆದರೆ ಇದರ ವಿರುದ್ಧ ಹೋರಾಟ ನಡೆಸುವ ಯಾವುದೇ ಇರಾದೆ ನನಗಿಲ್ಲ. ಕಾಂಗ್ರೆಸ್ ಯಾವಾಗ ವಿಭಜನೆಯನ್ನು ತನಗಿಷ್ಟವಿಲ್ಲದಿದ್ದರೂ ಕಾಂಗ್ರೆಸ್ ಅಂಗೀಕರಿಸಿತೋ ಅಂತಹ ಕಾಂಗ್ರೆಸ್ ವಿರುದ್ಧವೂ ನಾನ್ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಂತಹ ಹೆಜ್ಜೆಯೂ ಕಲ್ಪನಾತೀತ. ಬ್ರಿಟಿಷರು ವಿಭಜನೆಯನ್ನು ಪ್ರೋತ್ಸಾಹಿಸಿಲ್ಲ. ಹಾಗಾಗಿ ಅವರ ವಿರುದ್ಧ ನಿಮ್ಮ ದಾಳಿಯನ್ನೂ ನಾನು ಒಪ್ಪುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಹಾಗಾದರೆ ಗಾಂಧಿಯ ಪ್ರಕಾರ ದೇಶ ವಿಭಜನೆಗೆ ಜವಾಬ್ದಾರರು ಯಾರು? ಇದು ನುಣುಚಿಕೊಳ್ಳುವ ಕುತಂತ್ರ ಬುದ್ಧಿಯಲ್ಲವೇ? ಅತ್ತ ಕಾಂಗ್ರೆಸ್ ಕಾರ್ಯಕಾರಿಣಿಯ ತೀರ್ಮಾನದ ವಿರುದ್ಧವೂ ಹೋರಾಟ ಮಾಡುವುದಿಲ್ಲ. ಇತ್ತ ಬ್ರಿಟಿಷರ ವಿರುದ್ಧವೂ! ಕಾಂಗ್ರೆಸ್ ವಿರುದ್ಧ ಹೋರಾಟ ಕಲ್ಪನಾತೀತ. ಲಕ್ಷಾಂತರ ಜನರ ಬೆಂಬಲವಿದ್ದು, ಅಸಂಖ್ಯ ಪತ್ರಗಳು ಹೋರಾಟ ಕೈಗೊಳ್ಳುವಂತೆ ಗೋಗರೆದಾಗಲೂ ಗಾಂಧಿಗೆ ವಿಭಜನೆ ವಿರುದ್ಧ ಹೋರಾಡುವ ಮನಸ್ಸಿಲ್ಲವೆಂದಾದರೆ ಗಾಂಧಿಗೆ ವಿಭಜನೆಗೆ ಪೂರ್ಣಸಹಮತವಿತ್ತು ಎಂದೇ ಅರ್ಥವಲ್ಲವೇ? ಜನ ಪಾಕಿಸ್ತಾನ ರಚನೆ ವಿರುದ್ಧ ಹೋರಾಡಬೇಕೆಂದು ನೇರವಾಗಿ ಹೇಳಿದ್ದರು. ಗಮನಿಸಿ, ಬಹುಷಃ ಇದೇ ಕಾರಣಕ್ಕಾಗಿ ಗಾಂಧಿ ಮುಸ್ಲಿಮ್ ಲೀಗ್ ಹೆಸರನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಿಲ್ಲ.

        "ಕಾರ್ಯಕಾರಿ ಸಮಿತಿಯ ದೇಶ ವಿಭಜನೆಯ ನಿರ್ಣಯವನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಕೆಡುಕಿನ ಸಲಹೆ ಬರಬಹುದು. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ಇದನ್ನು ಮಾಡುವ ಅಧಿಕಾರವಿದೆ. ಆದರೆ ಅವರ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡಿದೆ ಮತ್ತು ಆ ನಿರ್ಣಯದ ಪರವಾಗಿ ನಿಲ್ಲುವದು ತಮ್ಮ ಕರ್ತವ್ಯ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು" "ನಿರ್ಣಯಕ್ಕೆ ಸಂಬಂಧಿಸಿ ಕಾರ್ಯಕಾರಿ ಸಮಿತಿ ಹೊರತುಪಡಿಸಿ ಇನ್ನೆರಡು ಪಕ್ಷಗಳಿವೆ - ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮ್ ಲೀಗ್. ಆ ಹಂತದಲ್ಲಿ ಎಐಸಿಸಿ ನಿರ್ಣಯವನ್ನು ವಿರೋಧಿಸಿದರೆ ಜಗತ್ತು ಏನೆಂದು ತಿಳಿದುಕೊಳ್ಳುತ್ತದೆ? ಎಲ್ಲಾ ಪಕ್ಷಗಳು ವಿಭಜನೆಯ ಯೋಜನೆಯನ್ನು ಒಪ್ಪಿಕೊಂಡಿವೆ. ಕಾಂಗ್ರೆಸ್ ತನ್ನ ಮಾತಿನಿಂದ ಹಿಂದೆ ಸರಿಯುವುದು ಸೂಕ್ತವಾಗಲಾರದು."(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮ್ ಲೀಗ್ ಹಾಗೂ ಬ್ರಿಟಿಷರು ಒಪ್ಪಿಕೊಂಡ ಮಾತ್ರಕ್ಕೆ ಕಾಂಗ್ರೆಸ್ ಹಾಗೂ ದೇಶದ ಜನತೆ ವಿಭಜನೆಯನ್ನು ಒಪ್ಪಿಕೊಳ್ಳಬೇಕೇ? ಜಗತ್ತಿನಲ್ಲಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎನ್ನುವ ಉದ್ದೇಶಕ್ಕಾಗಿ ಭಾರತವನ್ನು ಹಾಳುಗೆಡವಬೇಕೇ? ಗಾಂಧಿಯನ್ನು ಮಹಾತ್ಮ ಎಂದು ಪೂಜಿಸುವ ಯಾರೂ ಗಾಂಧಿಯ ಇಂತಹ ಕುಟಿಲ ನೀತಿಗಳನ್ನು ತಿಳಿದಿರುವುದಿಲ್ಲ. ತಿಳಿದಿದ್ದರೂ ಹೇಳುವುದಿಲ್ಲ. ಸಾರ್ವಜನಿಕವಾಗಿ ಒಪ್ಪುವುದೂ ಇಲ್ಲ. ಅವಕಾಶವಾದ!

          "ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್ ತಿರಸ್ಕರಿಸಿದರೆ ಆಗ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಮೇಲೆ ಅವಿಶ್ವಾಸ ಸೂಚಿಸುತ್ತದೆ. ಇದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗೂ ಹೊಸನಾಯಕರನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹೊಸ ನಾಯಕ ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಣಯವನ್ನು ವಿರೋಧಿಸುವವರು ಅಂಥ ನಾಯಕಗಣವನ್ನು ಹುಡುಕಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮತ್ತು ಬಹುಮತ ಸದಸ್ಯರು ಇದೇ ದೃಷ್ಟಿಕೋನ ಹೊಂದಿದ್ದರೆ ಎಐಸಿಸಿ ನಿರ್ಣಯವನ್ನು ತಿರಸ್ಕರಿಸಬಹುದು"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಗಾಂಧಿಯ ದೃಷ್ಟಿಯಲ್ಲಿ ಈಗಿರುವ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವೇ? ಅಪ್ರತಿಮ ಕ್ಷತ್ರಿಯರನ್ನು ಕಂಡ ಈ ನಾಡಿನಲ್ಲಿ ನಾಯಕರಿಗೆ ಬರಗಾಲವೇ? ಇದು ಜನರನ್ನು ವಿಭಜನೆಗೆ ಒಪ್ಪಿಸುವ ಕುಟಿಲತೆಯಷ್ಟೇ! ಇಲ್ಲೇ ಒಂದು ಒಳಸುಳಿಯಿದೆ! ಪರೋಕ್ಷವಾಗಿ ತಮ್ಮ ಶಿಷ್ಯ ನೆಹರೂವಿಗಿಂತ ಉತ್ತಮ ನಾಯಕರಿಲ್ಲ ಅಥವಾ ನೆಹರೂಗಲ್ಲದೆ ಬೇರ್ಯಾರಿಗೂ ಅಧಿಕಾರ ಸಿಗಬಾರದು ಎನ್ನುವ ಭಾವವನ್ನು ಗಾಂಧಿ ಪ್ರಕಟಿಸುತ್ತಿದ್ದಾರೆಯೇ? ಮುಂದೆ ನಡೆದ ಎಲ್ಲಾ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.

        "ಭಾರತ ವಿಭಜನೆಯನ್ನು ಅದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು  ಐರ್ಲೆಂಡಿನಲ್ಲಿರುವ ಭಾರತೀಯರು ಬಲವಾಗಿ ವಿರೋಧಿಸುತ್ತಾರೆ. ಬ್ರಿಟಿಷರು ಐರ್ಲೆಂಡನ್ನು ತ್ಯಜಿಸುವಾಗ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದರ ಪರಿಣಾಮವಾಗಿ ಈಗ ಉತ್ತರ ಹಾಗೂ ದಕ್ಷಿಣ ಐರ್ಲೆಂಡಿನ ಜನರು ದೇವಾಲೆರಾ ನೇತೃತ್ವದಲ್ಲಿ ವಿಭಜನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೂ ಇದೇ ಗತಿ. ನಿಮ್ಮ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನ ಪಡೆದಿರುವ ಭಾರತ ವಿಭಜನೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ಆತ್ಮಹತ್ಯೆಗೆಳಸುವುದಿಲ್ಲ ಎಂದು ಇಲ್ಲಿನ ಎಲ್ಲಾ ಹಿಂದೂಗಳು ಹಾಗೂ ಮುಸ್ಲಿಮರು ನಂಬಿದ್ದೇವೆ" ಎನ್ನುವ ವಿಚಾರವುಳ್ಳ ಪತ್ರವೊಂದನ್ನು ಡಬ್ಲಿನ್ನಿನ ಗಾಂಧಿಯ ಸ್ನೇಹಿತರೊಬ್ಬರು ಬರೆದರು. ಪ್ರತಿಕ್ರಿಯೆಯಾಗಿ ಗಾಂಧಿ "ನನ್ನಲ್ಲಿ ಅಸಹಾಯಕ ಭಾವವುಂಟಾಗುತ್ತಿದೆ. ಭಾರತ ಮತ್ತು ಐರ್ಲೆಂಡ್ ಮಧ್ಯೆ ಸಮಾನಾಂತರ ರೇಖೆ ಎಳೆಯಬಹುದೇ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಪ್ಪಂದಕ್ಕೆ ಬಂದಿವೆ. ನೈಜ ಸ್ಥಿತಿ ಹೀಗಿರುವಾಗ ಅದನ್ನೇ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಉತ್ತರಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿ ಮಾತು ಮತ್ತು ಕೃತಿಗೆ ಎಷ್ಟು ಅಜಗಜಾಂತರ. ಅವರ ಬೋಧನೆಗಳಲ್ಲಿ ಬಂದ ಉನ್ನತಾದರ್ಶಗಳ್ಯಾವುವೂ ಕ್ರಿಯೆಯಲ್ಲಿ ಕಾಣಲೇ ಇಲ್ಲ.

         ಗಾಂಧಿ ತಮ್ಮ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಹಾಗಾಗಿ ಕಾರ್ಯಕಾರಿ ಸಮಿತಿಯ ನಿರ್ಣಯದ ವಿರುದ್ಧ ದನಿಯೆತ್ತಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ತಾವು ಸಮಿತಿಯ ನಿರ್ಣಯದ ಬಗ್ಗೆ ಅಭಿಪ್ರಾಯಭೇದ ಹೊಂದಬಹುದು ಎಂದೂ ಹೇಳಿದರು. ಆದರೆ ಮುಂದಿನ ಎಐಸಿಸಿ ಸಭೆಯಲ್ಲೇ ವಿಭಜನೆಯ ಪರವಾಗಿ ನಿಂತರು.  "ಕೆಲವೊಮ್ಮೆ ಮನಸ್ಸಿಗೆ ಹಿಡಿಸದಿದ್ದರೂ ಕೆಲವು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ಹಂತದಲ್ಲಿ ದೇಶದ ಶಾಂತಿ ಮುಖ್ಯ ಎನ್ನುವುದನ್ನು ಸದಸ್ಯರು ಮರೆಯಬಾರದು. ದೇಶದಲ್ಲಿ ಕ್ಷಿಪ್ರ ಕ್ರಾಂತಿ ಅಥವಾ ಉತ್ಕ್ರಾಂತಿಯ ಮಾತಾಡುವವರು ಈ ನಿರ್ಣಯವನ್ನು ಆಚೆಗೆಸೆಯುವ ಮೂಲಕ ಇದನ್ನು ಸ್ಥಾಪಿಸಲು ಶಕ್ತರಿರಬಹುದು. ಆದರೆ ಅವರಿಗೆ ದೇಶದ ಹಾಗೂ ಕಾಂಗ್ರೆಸ್ಸಿನ ಅಧಿಕಾರ ಕೈಗೆ ತೆಗೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ ಎನ್ನುವುದು ಸಂಶಯ. ನನಗೇನಾದರೂ ಶಕ್ತಿಯಿದ್ದಲ್ಲಿ ಏಕಾಕಿಯಾಗಿ ಬಂಡಾಯ ಘೋಷಿಸುತ್ತಿದ್ದೆ. ನಾನು ಕಾರ್ಯಕಾರಿ ಸಮಿತಿಯ ಪರವಾಗಿ ಬೇಡುತ್ತಿಲ್ಲ. ಎಐಸಿಸಿಯು ನಿರ್ಣಯದ ಸಾಧಕಬಾಧಕಗಳನ್ನು ಅಳೆದುನೋಡಬೇಕು. ನಿರ್ಣಯದ ಲಾಭದ ಮನವರಿಕೆಯಾಗದಿದ್ದರೆ ಅದನ್ನು ಒಪ್ಪಬಾರದು. ಇಂತಹ ನಿರ್ಣಯ ದೇಶದಲ್ಲಿ ಗಲಭೆಗೆ ಕಾರಣವಾಗುತ್ತದೆಂದಾದರೆ ಅದನ್ನು ತಿರಸ್ಕರಿಸಬಹುದು. ಆದರೆ ಕಾರ್ಯಕಾರಿ ಸಮಿತಿಯ ಸದಸ್ಯರು 'ಹೆಮ್ಮೆಯ ದಾಖಲೆ ಹೊಂದಿದ, ದೇಶದ ಹಳೆಯ ಮತ್ತು ಅನುಭವಿ ಸೇವಕರು, ಕಾಂಗ್ರೆಸ್ಸಿನ ಬೆನ್ನುಲುಬಾಗಿದ್ದವರು' ಎಂದೂ ಮರೆಯಬಾರದು. ಈ ಹಂತದಲ್ಲಿ ಅವರ ಬದಲು ಬೇರೆಯವರನ್ನು ತರುವುದು ಸಾಧ್ಯವಾಗದಿದ್ದಲ್ಲಿ ಅದು ಅತಿ ಅವಿವೇಕದ ಕೆಲಸವಾಗುತ್ತದೆ. ಯಾವುದನ್ನು ಅಂಗೀಕರಿಸಲಾಗಿದೆಯೋ ಅದು ಉತ್ತಮವೇನಲ್ಲ. ಆದರೆ ಮುಂದೆ ಅದರಿಂದ ಒಳ್ಳೆಯದಾಗಬಹುದು. ಕೆಲವೊಮ್ಮೆ ತಪ್ಪಿನಿಂದಲೂ ಒಳ್ಳೆಯದಾಗುತ್ತದೆ. ತಂದೆಯ ತಪ್ಪಿನಿಂದಾಗಿ ರಾಮ ವನವಾಸಕ್ಕೆ ಹೋದರೂ ರಾವಣನ ಅಂತ್ಯಕ್ಕೆ ಅದು ಕಾರಣವಾಯಿತಲ್ಲವೇ. ಹಾಗೆಯೇ ದೋಷಪೂರಿತ ಯೋಜನೆಯಿಂದ ಒಳ್ಲೆಯದನ್ನು ಹೊರತೆಗೆಯಲು ಎಐಸಿಸಿ ಸಮರ್ಥವಾಗಿದೆ. ಬಂಗಾರವನ್ನು ಕೂಡಾ ಹೊಲಸಿನಿಂದಲೇ ಆಯ್ದು ತೆಗೆಯಲಾಗುತ್ತದೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ವ್ಹಾವ್...ಗಾಂಧಿ ವಿಭಜನೆಯನ್ನು ರಾಮಾಯಣಕ್ಕೆ ಹೋಲಿಸುತ್ತಿದ್ದಾರೆ! ಎಐಸಿಸಿಯನ್ನು ರಾಮನಿಗೆ! ರಾಮ ದೇವಾಂಶ ಸಂಭೂತ. ವಿಭಜನೆಯ ಪರಿಣಾಮವನ್ನು ಒಳ್ಳೆಯ ಕ್ರಿಯೆಯಾಗಿಸಲು ಕಾಂಗ್ರೆಸ್ ಅಥವಾ ಗಾಂಧಿಯೇನು ದೇವರೇ? ಕಾರ್ಯಕಾರಿ ಸಮಿತಿಯ ಸದಸ್ಯರು ಕಾಂಗ್ರೆಸ್ಸಿನ ಬೆನ್ನುಲುಬಾದ ಮಾತ್ರಕ್ಕೆ ಅವರು ಶ್ರೇಷ್ಠರೇ? ಅವರು ಹೇಳಿದ್ದು ವೇದವಾಕ್ಯವೇ? ಅನುಭವಿ ಸೇವಕರಿಂದೇನು ತಪ್ಪು ಘಟಿಸದೇ? ಉತ್ಕ್ರಾಂತಿಯ ಮಾತಾಡುವವರ ಸಾಮರ್ಥ್ಯವನ್ನು ಪ್ರಶ್ನಿಸುವ ಗಾಂಧಿಗೆ ತನ್ನ ಅನುಭವಿ ಸೇವಕರ ಮೇಲೆ ಅಗಾಧ ವಿಶ್ವಾಸ! ವಿಭಜನೆಯನ್ನು ವಿರೋಧಿಸುತ್ತಲೇ ಅದನ್ನು ಸಮರ್ಥಿಸುತ್ತಾ ಜನರ ಮೇಲೆ ಹೇರುವ ಈ ವೃದ್ಧನಿಗೆ ಇಂದಿನ ರಾಜಕಾರಣಿಗಳು ಕಾಲಿಗಡ್ಡಬಿದ್ದರೆ ಆಶ್ಚರ್ಯವೇನಿಲ್ಲ