ಪುಟಗಳು

ಶನಿವಾರ, ಫೆಬ್ರವರಿ 20, 2021

'ಹಲಾಲ್' ಹೆಸರಲ್ಲಿ ಸಾಂಸ್ಕೃತಿಕ ಮತಾಂತರ

 'ಹಲಾಲ್' ಹೆಸರಲ್ಲಿ  ಸಾಂಸ್ಕೃತಿಕ ಮತಾಂತರ




           ಕೊರೋನಾ ಶುರುವಾದ ಹೊಸತರಲ್ಲಿ ಅದರ ಹರಡುವಿಕೆಗೆ ಕಾರಣವಾದ ತಬ್ಲೀಘಿಗಳ ನಡೆಗೆ ದೇಶ ಕುದ್ದು ಹೋಗಿತ್ತು. ತಬ್ಲೀಘಿಗಳನ್ನು ಬೆಂಬಲಿಸಿದ ವಿಶ್ವಾಸಘಾತುಕ ಹುಟ್ಟುಗುಣವಿರುವವರ ವಿರುದ್ಧವೂ ದೇಶ ಎದ್ದು ನಿಂತಿತು. ಮುಂಬೈನಲ್ಲಿ ಮುಖಕ್ಕೆ ಮಾಸ್ಕ್ ಹಾಕದೆ, ಆಹಾರ ಪದಾರ್ಥವನ್ನು ವಿತರಿಸಲು ಬೇಕಾದ ಯಾವ ನಿಯಮವನ್ನೂ ಅನುಸರಿಸದೆ, ಮನೆಗೆ ಆಹಾರವಸ್ತು ತಂದುಕೊಟ್ಟವನಿಂದ ಅದನ್ನು ಸ್ವೀಕರಿಸುವುದನ್ನು ನಿರಾಕರಿಸಿದ್ದ ವ್ಯಕ್ತಿಯನ್ನು, "ಡೆಲಿವರಿ ಹುಡುಗ ಮುಸಲ್ಮಾನನೆಂಬ ಕಾರಣಕ್ಕೆ ಆಹಾರ ನಿರಾಕರಿಸಿದರು" ಎಂಬ ನೆಪವೊಡ್ಡಿ ಬಂಧಿಸಿಲಾಯಿತು. ತನ್ನ ಆರೋಗ್ಯದ ದೃಷ್ಟಿಯಿಂದ ಸರಕಾರವೇ ವಿಧಿಸಿದ ನಿಯಮದಂತೆ ಆಹಾರವನ್ನು ಪಡೆದುಕೊಳ್ಳಬಹುದಾದ ಆ ವ್ಯಕ್ತಿಯ ಹಕ್ಕನ್ನು ಸುಳ್ಳು ಆಪಾದನೆಯೊಡ್ಡಿ ಸರಕಾರದ ಇಲಾಖೆಯೇ ಮೊಟಕುಗೊಳಿಸಿತು! ಇದನ್ನು ಕಂಡು ರೊಚ್ಚಿಗೆದ್ದ ಹಿಂದೂಗಳು ತಿರುಗಿ ಬಿದ್ದರು. ಕೇಸರಿ ಧ್ವಜ ಹಿಂದೂಗಳ ಅಂಗಡಿಯ ಮುಂದೆ ಹೆಚ್ಚತೊಡಗಿತು. ಚೆನ್ನೈನಲ್ಲಿನ ಜೈನ್ ಸಮುದಾಯಕ್ಕೆ ಸೇರಿದ ಅಂಗಡಿಯ ಮಾಲಿಕರು "ನಾವು ಶುದ್ಧವಾದ ಆಹಾರ ಪದಾರ್ಥಗಳನ್ನು ನೇರ ನಿಮ್ಮ ಮನೆಗೆ ತಲುಪಿಸುತ್ತೇವೆ. ಹಾಗೂ ನಮ್ಮಲ್ಲಿ ಮುಸಲ್ಮಾನ ಕೆಲಸಗಾರರು ಇರುವುದಿಲ್ಲ" ಎಂಬ ಜಾಹೀರಾತನ್ನೂ ಪ್ರಕಟಿಸಿದ್ದೇ ತಡ, ವಾಟ್ಸ್ ಆಪ್'ನಲ್ಲಿ ಬಂದ ಜಾಹೀರಾತನ್ನು ಆಧಾರವಾಗಿಟ್ಟುಕೊಂಡೇ ಪೊಲೀಸರು ಆ ಅಂಗಡಿ ಮಾಲಿಕರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿಬಿಟ್ಟರು. ಬಹುತ್ವವನ್ನು ಗೌರವಿಸಬೇಕು ಎನ್ನುವ, ಸೆಕ್ಯುಲರ್ ಎಂಬ ಲೊಳಲೊಟ್ಟೆಯ ಸಿದ್ಧಾಂತ ಸದಾ ಪ್ರತಿಪಾದಿಸಲ್ಪಡುವ ರಾಷ್ಟ್ರದಲ್ಲಿ ಜೈನರಿಗೆ ತಮ್ಮ ಆಹಾರ ಸಂಸ್ಕೃತಿಯ ಪ್ರಕಾರ ಜಾಹೀರಾತು ಕೊಡಲು ಅವಕಾಶ ಸಿಗಲಿಲ್ಲ. ಆದರೆ ತದ್ವಿರುದ್ಧವಾಗಿ ಹಲಾಲ್ ಸಂಸ್ಕೃತಿಗೆ ರಾಜಾತಿಥ್ಯ ದೊರೆಯುತ್ತಲೇ ಇದೆ!


             ಏನಿದು ಹಲಾಲ್? ಇಸ್ಲಾಮಿನಲ್ಲಿ ಅನುಮತಿಸಲಾಗಿರುವಂತಹವನ್ನು ಹಲಾಲ್ ಎಂದೂ ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎಂದೂ ಕರೆಯಲಾಗುತ್ತದೆ. ಯಾವ ಆಹಾರ ಪದಾರ್ಥವನ್ನು ತಿನ್ನಬೇಕು, ತಿನ್ನುವ ಮುನ್ನ ಅದನ್ನು ಹೇಗೆ ಕತ್ತರಿಸಬೇಕು, ಇವೆಲ್ಲವೂ ಕುರಾನ್ ಮತ್ತು ಹದೀಸ್ಗಳಲ್ಲಿ ಹೇಳಿರುವಂತೆ ಆಚರಿಲ್ಪಟ್ಟರೆ ಮಾತ್ರ ತಿನ್ನಲು ಯೋಗ್ಯವಾದಂಥವು. ಹರಾಮ್ ಆದುದನ್ನು ತಿಂದರೆ ಆತನ ಪ್ರಾರ್ಥನೆಯನ್ನು ಅವರ ಭಗವಂತ ಕೇಳಲಾರನಂತೆ! ಹಲಾಲ್, ಝಟ್ಕಾದಂತೆ ಒಂದೇ ಏಟಿಗೆ ಪ್ರಾಣಿಯನ್ನು ಕಡಿದು ಅದಕ್ಕೆ ನೋವು ಅರಿವಾಗದಂತೆ ಮಾಡುವ ವಿಧಾನವಲ್ಲ. ಹಲಾಲ್ನಲ್ಲಿ ಪ್ರಾಣಿ ನರಳುತ್ತಾ ಸಾಯುತ್ತದೆ. ಆಸ್ಟ್ರೇಲಿಯಾ, ಇಂಗ್ಲೆಂಡು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳನ್ನು ಕೊಲ್ಲುವಮುನ್ನ ಪ್ರಜ್ಞೆ ತಪ್ಪಿಸಬೇಕೆಂಬ ನಿಯಮವಿದೆ. ಹಲಾಲ್'ನಲ್ಲಿ ‘ಬಿಸ್ಮಿಲ್ಲಾ’ ಎನ್ನುತ್ತಾ ಪ್ರಾಣಿಯ ಕುತ್ತಿಗೆಯನ್ನು ನಿಧಾನವಾಗಿ ಕತ್ತರಿಸಬೇಕು. ಆ ಸಮಯದಲ್ಲಿ ಮೌಲ್ವಿಯೊಬ್ಬ ಕಲ್ಮಾ ಓದಬೇಕು! ಈ ರೀತಿ ಪ್ರಾಣಿಯನ್ನು ಕತ್ತರಿಸುವವ ಮುಸಲ್ಮಾನನೇ ಆಗಿರಬೇಕು.  ಹೀಗೆ ಕತ್ತರಿಸುವಾಗ ಚಾಕು ಚೂಪಾಗಿದ್ದು ಆ ಪ್ರಾಣಿಯ ಕನಿಷ್ಠಪಕ್ಷ ಎರಡು ರಕ್ತನಾಳಗಳನ್ನು, ಕಂಠದಭಾಗವನ್ನು ಕತ್ತರಿಸಬೇಕು. ಆದರೆ ಬೆನ್ನಹುರಿಯನ್ನು ಕತ್ತರಿಸುವಂತಿಲ್ಲ. ಕುತ್ತಿಗೆಯ ಭಾಗದಿಂದಲೇ ಎಲ್ಲಾ ರಕ್ತ ಹೊರಹೋಗುವಂತೆ ನೋಡಿಕೊಂಡು ಪ್ರಾಣಿ ಪೂರ್ಣ ಸತ್ತಿದೆ ಎಂದಮೇಲೆ ಮುಂದಿನ ಹಂತಕ್ಕೆ ಕೈ ಹಾಕಬೇಕು. ಹೀಗೆ ಪ್ರಾಣಿಯನ್ನು ವಿಲವಿಲ ಒದ್ದಾಡುವಂತೆ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲುವ ಕ್ರೌರ್ಯದ ಪರಮಾವಧಿ ಹಲಾಲ್!


               ಈ ಹಲಾಲ್ ಎನ್ನುವುದು ಅವರ ಆಚರಣೆಯಲ್ಲವೇ? ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಅನ್ಯರು ಇರುವುದಂತೂ ಸತ್ಯ. ಆದರೆ ಹಲಾಲ್ ಹೇರಿಕೆ ಕೇವಲ ಇಸ್ಲಾಮಿನ ಒಳಗೆ ಮಾತ್ರ ಉಳಿದಿಲ್ಲ ಅದು ಇಸ್ಲಾಮೇತರರ ಒಳಗೂ ಇಳಿಯುತ್ತಿದೆ; ಇಳಿಸಲಾಗುತ್ತಿದೆ! ಹಲಾಲ್ ಕೇವಲ ಪ್ರಾಣಿಗಳನ್ನು ಕೊಯ್ಯುವ ಒಂದು ವಿಧಾನವಾಗಿ ಮಾತ್ರ ಇದ್ದಿದ್ದರೆ ಯಾರದ್ದೂ ತಕರಾರಿರಲಿಲ್ಲ. ಇಲ್ಲಿ ಅವರೊಳಗಿನ ಆಚರಣೆಯನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ಈ ಆಚರಣೆ ನೆಪದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು,  ಹಿಂದುಳಿದ ವರ್ಗಗಳಿಂದ ಉದ್ಯೋಗವನ್ನು ಕಸಿದುಕೊಂಡು ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿಕೊಳ್ಳುವ ಅವರ ವ್ಯಾಪಾರ ಜಿಹಾದ್ ಬಗ್ಗೆ ವಿರೋಧವಿದೆ. ಅದಕ್ಕಿಂತಲೂ ತಮ್ಮ ಆಚರಣೆಯನ್ನು ಅನ್ಯರ ಮೇಲೂ ಹೇರುವ ಈ ಪ್ರಚ್ಛನ್ನ ಜಿಹಾದ್ ಬಗ್ಗೆ ವಿರೋಧವಿದೆ. ಮೊದಲೆಲ್ಲಾ ಮುಸ್ಲಿಮರ ಅಂಗಡಿಗಳಲ್ಲಿ ಮಾತ್ರವಿದ್ದ "ಹಲಾಲ್" ಬೋರ್ಡ್ ಇತ್ತೀಚೆಗೆ ಹಿಂದೂಗಳ, ಕ್ರೈಸ್ತರ ಅಂಗಡಿ, ಹೋಟೆಲುಗಳಲ್ಲೂ ಕಾಣಿಸಿಕೊಳ್ಳತೊಡಗಿತು. ಹಲಾಲ್ ಮಾಡಬೇಕಾದವನು ಮುಸಲ್ಮಾನನೇ ಆಗಿರಬೇಕು ಎಂಬ ಅದರ ನಿಯಮದ ಪ್ರಕಾರ ಹಲಾಲ್ ಪ್ರಮಾಣಪತ್ರ ಪಡೆದ ಪ್ರತಿಯೊಂದು ಅಂಗಡಿಯೂ ಮುಸಲ್ಮಾನರನ್ನೇ ಆ ಪ್ರಕ್ರಿಯೆಗೆ ಇಟ್ಟುಕೊಳ್ಳಬೇಕು. ಇದರಿಂದ ಪರಂಪರಾಗತವಾಗಿ ಮಾಂಸ ಕತ್ತರಿಸುತ್ತಿದ್ದ ಹಿಂದೂಗಳ ಅಥವಾ ಹಿಂದೂ ಅಂಗಡಿಗಳಲ್ಲಿ ಆ ಕೆಲಸಕ್ಕಿದ್ದ ಹಿಂದೂಗಳ, ಕ್ರೈಸ್ತರ ಕೆಲಸಕ್ಕೆ ಕುತ್ತಾಯಿತು. ಅಲ್ಲದೆ ಮೇಲಿನ ಎರಡು ಪ್ರಕರಣಗಳಲ್ಲಿ ನಿರ್ದಿಷ್ಟ ಜಾತಿಯನ್ನು ಹೇಳಿದ ನೆಪವೊಡ್ಡಿ ಬಂಧಿಸಿದ ಸರಕಾರೀ ವ್ಯವಸ್ಥೆ ಹಲಾಲ್ ಪ್ರಮಾಣಪತ್ರ ಪಡೆದ ಅಂಗಡಿಯೂ ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಕೆಲಸಕ್ಕಿಟ್ಟುಕೊಂಡಿದ್ದೇನೆ ಎಂದು ಸಾರಿ ಹೇಳುವಾಗ ಅವರನ್ನೇಕೆ ಬಂಧಿಸುವುದಿಲ್ಲ? ಸೆಕ್ಯುಲರ್ ದೇಶದಲ್ಲಿ ಕೆಲವರಿಗೆ ಮಾತ್ರ ಹಕ್ಕುಗಳು, ರಿಯಾಯಿತಿಗಳು ಹೆಚ್ಚೆಂದೇ?


              ಒಂದು ಆಸ್ಪತ್ರೆಗೆ ಹಲಾಲ್ ಪ್ರಮಾಣಪತ್ರ ಸಿಗಬೇಕಾದರೆ, ಅಲ್ಲಿನ ಕ್ಯಾಂಟೀನ್ಗೆ ಕೋಳಿಯನ್ನು ತರುವವ, ಕ್ಯಾಂಟೀನಿನಲ್ಲಿ ಆ ಕೋಳಿಯನ್ನು ಹಲಾಲ್ ಮಾಡುವವ ಇಬ್ಬರೂ ಮುಸಲ್ಮಾನರಾಗಿರಬೇಕಾಗುತ್ತದೆ. ಮಾತ್ರವಲ್ಲ ಆಸ್ಪತ್ರೆಯಲ್ಲಿ ಅನ್ಯ ಮತದ ಪ್ರಾರ್ಥನಾ ಮಂದಿರಗಳು ಇರುವಂತಿಲ್ಲ; ಅವು ಹರಾಮ್ ಆಗುತ್ತವೆ. ಅಲ್ಲಿ ಮುಸ್ಲಿಮರ ಪ್ರಾರ್ಥನೆಗೆ ಕೋಣೆಗಳನ್ನು ಮೀಸಲಿಡಬೇಕಾಗುತ್ತದೆ. ಹೀಗೆ ಅಲ್ಲಿನ ಉದ್ಯೋಗಗಳೆಲ್ಲಾ ಮುಸ್ಲಿಮರ ಪಾಲಾಗುತ್ತವೆ. ಮುಂದಿನ ದಿನಗಳಲ್ಲಿ ಇವರ ಬೇಡಿಕೆಗಳು ಮತ್ತಷ್ಟು ಹೆಚ್ಚುತ್ತವೆ. ಕೋಳಿ ಸಾಕಾಣಿಕೆಯ ಜಾಗವೂ ಹರಾಮ್ ವಸ್ತುಗಳಿಂದ ಮುಕ್ತವಾಗಿರಬೇಕು ಎನ್ನಲಾಗುತ್ತದೆ, ಅಂದರೆ ಕೋಳಿ ಫಾರಂ ಸುತ್ತಲೂ ಹಂದಿ,ನಾಯಿಗಳು ಸುಳಿದಾಡದಂತಹ ವಾತಾವರಣ ಇರಬೇಕಾಗುತ್ತದೆ. ಕೇವಲ ಕೋಳಿ ಕೊಯ್ಯುವ, ಅದನ್ನು ಸರಬರಾಜು ಮಾಡುವವ ಶರಿಯಾ ಪಾಲಿಸುವ ಮುಸ್ಲಿಂ ಆಗಿದ್ದರೆ ಸಾಲದು, ಕೋಳಿ ಸಾಕುವವನು ನಮ್ಮವನೇ ಆಗಿರಬೇಕು ಎನ್ನುವ ಬೇಡಿಕೆ ಶುರುವಾಗುತ್ತದೆ. ಇದು ಮತಾಂತರಕ್ಕೂ ಎಡೆ ಮಾಡಿಕೊಡುತ್ತದೆ. ಪ್ರತಿ ಹಂತದಲ್ಲೂ ಮುಸ್ಲಿಮರಿಗೆ ಉದ್ಯೋಗ ದೊರಕಿಸಿಕೊಡುವುದು ಮಾತ್ರವಲ್ಲದೇ ಹಿಂದುಳಿದ-ದಲಿತ ವರ್ಗದಿಂದ ಅವರ ಪಾರಂಪರಿಕ ವ್ಯವಹಾರಗಳನ್ನು ಕಸಿದುಕೊಳ್ಳುವ ಗುಪ್ತ ಉಪಾಯ ಇವರದ್ದು.


           ಪ್ರಾಣಿಗಳನ್ನು ಕತ್ತರಿಸುವ ಈ ವಿಧಾನದಿಂದ ನಮಗೇನೂ ಸಮಸ್ಯೆಯಿಲ್ಲ ಎಂದು ಸಸ್ಯಾಹಾರಿಗಳು ನೆಮ್ಮದಿಯ ನಿಟ್ಟುಸಿರೇನು ಬಿಡಬೇಕೂಂತಿಲ್ಲ. ಯಾಕೆಂದರೆ ಮೊದಲನೆಯದಾಗಿ ಇದು ಹಿಂದೂಗಳ ವ್ಯವಹಾರ, ಸಂಸ್ಕೃತಿಗೆ ಮಾರಕವಾಗುವ ಸಮಸ್ಯೆ. ಎರಡನೆಯದಾಗಿ ಹಲಾಲ್'ನ ಕಬಂಧ ಬಾಹು ಮಾಂಸಾಹಾರಕ್ಕಷ್ಟೇ ಸೀಮಿತವಾಗುಳಿದಿಲ್ಲ. ಒಣ ಹಣ್ಣು, ಎಣ್ಣೆ, ಸಿಹಿ ಪದಾರ್ಥ, ಗೋಧಿ, ಮೈದಾ ಮುಂತಾದ ಧಾನ್ಯಗಳು, ಬಿಸ್ಕೆಟ್, ಚಾಕೊಲೇಟು ಮುಂತಾದ ಆಹಾರ ಪದಾರ್ಥಗಳು, ಆಹಾರ ತಯಾರಿ, ಸಾಬೂನು, ಶ್ಯಾಂಪೂ, ಹಲ್ಲುಜ್ಜುವ ಪುಡಿ & ಪೇಸ್ಟ್, ಕಾಡಿಗೆ, ಲಿಪ್‌ಸ್ಟಿಕ್ ಇತ್ಯಾದಿ ಸೌಂದರ್ಯವರ್ಧಕ ವಸ್ತುಗಳು, ಟಿಷ್ಯೂ ಪೇಪರ್, ಗೃಹನಿರ್ಮಾಣಸಂಸ್ಥೆಗಳು, ಮಾಲ್ಗಳು, ಆಸ್ಪತ್ರೆಗಳು, ಔಷಧಿಗಳು, ರೈಲ್ವೇ-ವಿಮಾನಯಾನ ಸಂಸ್ಥೆಗಳಲ್ಲಿನ ಆಹಾರ ತಯಾರಿ, ಪ್ರವಾಸೋದ್ಯಮ, ಸರಕು ಸಾಗಣೆ ಎಲ್ಲವೂ ಹಲಾಲ್ ಪ್ರಮಾಣೀಕೃತವಾಗುತ್ತಿವೆ. ಹಲ್ದಿರಾಮ್’ನ ಶಾಕಾಹಾರಿ ಆಹಾರವೂ, ಮ್ಯಾಕ್‌ಡೊನಾಲ್ಡ್‌ನ ಬರ್ಗರ್ ಹಾಗೂ ಡಾಮಿನೋಸ್‌ನ ಪಿಝ್ಝಾಗಳೂ ಹಲಾಲ್ ಪ್ರಮಾಣೀಕೃತವಾಗಿವೆ! ಅರೆ ಇವೆಲ್ಲಾ ಹೇಗೆ ಹಲಾಲ್ ಆದವು? ಇವುಗಳನ್ನೆಲ್ಲಾ ಹಲಾಲ್ ವ್ಯಾಪ್ತಿಗೆ ತಂದವರು ಮುಂದಕ್ಕೆ ಇವುಗಳ ಉತ್ಪಾದನೆ, ಕಚ್ಚಾವಸ್ತುಗಳ ಸಂಗ್ರಹಣೆ, ಆಯಾ ಕೆಲಸಗಳ ಉಸ್ತುವಾರಿ ಎಲ್ಲವೂ ಶರಿಯಾ ಪಾಲಿಸುವ ಮುಸ್ಲಿಮನಿಂದಲೇ ಆಗಬೇಕು ಎನ್ನುತ್ತಾರೆ. ಹೀಗೆ ಮತೀಯ ಆಧಾರದ ಮೇಲೆ ಆರಂಭವಾದ ಸಮಾನಾಂತರ ಅರ್ಥವ್ಯವಸ್ಥೆ ಏಕಸ್ವಾಮ್ಯವನ್ನು ಸಾಧಿಸಿ ಮೆರೆಯುತ್ತದೆ. ದೇಶವನ್ನು ಪಾಕಿಸ್ತಾನವನ್ನಾಗಿಸುತ್ತದೆ.


               ಭಾರತದಲ್ಲಿ ಸರಕಾರೀ ಮಟ್ಟದಲ್ಲಿ ಈ ಪ್ರಮಾಣಪತ್ರ ಪಡೆಯುವ ನಿಯಮವನ್ನು ಶುರು ಮಾಡಿದವ ಮಣಿಶಂಕರ್ ಅಯ್ಯರ್. ಹೌದು ವೀರ ಸಾವರ್ಕರರನ್ನು ನಿಂದಿಸಿದ್ದ ಅದೇ ದೇಶದ್ರೋಹಿ ಮಣಿಶಂಕರ್ ಅಯ್ಯರ್. ನರೇಂದ್ರ ಮೋದಿಯವರನ್ನು ಸೋಲಿಸಲು ಪಾಕಿಸ್ತಾನದ ಸಹಾಯಹಸ್ತ ಬೇಡಿದ್ದ ಅದೇ ಮಣಿಶಂಕರ್ ಅಯ್ಯರ್. ಮುಸ್ಲಿಮರ ಜೊತೆ ಸೇರಿಕೊಂಡು ಇಂತಹುದೊಂದು ಸಮಾನಾಂತರ ಅರ್ಥವ್ಯವಸ್ಥೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಇಡೀ ದೇಶಕ್ಕೆ ಹಲಾಲ್ ಉಣಿಸುತ್ತಿದೆ. ಇದು ಹಿಂದೂ ಹಾಗೂ ಕ್ರೈಸ್ತರ ಮೇಲಿನ ಜೆಜಿಯಾ! ಈ ಹಲಾಲ್ ಪ್ರಮಾಣಪತ್ರಕ್ಕಾಗಿ 20,500 ರೂಪಾಯಿ ಹಾಗೂ ಪ್ರತೀವರ್ಷ ನವೀಕರಣಕ್ಕಾಗಿ 15,000 ರೂಪಾಯಿ ಶುಲ್ಕವಿದೆ.  ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಮುದ್ರೆ ಬೇಕೋ ಅದಕ್ಕೆ ಪ್ರತ್ಯೇಕ ಶುಲ್ಕ ತೆರಬೇಕಾಗುತ್ತದೆ. ಒಟ್ಟಾರೆ ಈ ಮೊತ್ತ ವರ್ಷಕ್ಕೆ ಐವತ್ತುಸಾವಿರದಷ್ಟಾಗುತ್ತದೆ. ಇಸ್ಲಾಮೀ ದೇಶಗಳಿಗೆ ರಫ್ತು ಮಾಡುವ ಉತ್ಪಾದನೆಗಳಿಗೆ ‘ಹಲಾಲ್ ಪ್ರಮಾಣಪತ್ರ’ ಇರಲೇಬೇಕಾಗುತ್ತದೆ! ವಿಪರ್ಯಾಸವೆಂದರೆ ತಮ್ಮ ವ್ಯಾಪಾರ ವೃದ್ಧಿಯ ದುರಾಸೆಯಿಂದ ಹಲ್ದಿರಾಮ್, ಪತಂಜಲಿ, ಶ್ರೀಶ್ರೀ, ಬಿಕಾನೇರ್ ಸಹಿತ ಭಾರತದ ಹಲವು ಸಂಸ್ಥೆಗಳು ಈ ಪ್ರಮಾಣಪತ್ರವನ್ನು ಪಡೆದು ಹಿಂದೂಗಳ ಮೇಲೆ ಜಿಹಾದೀ ಸಂಸ್ಕೃತಿಯನ್ನು ಹೇರುತ್ತಿವೆ! ಈ ದೇಶದ ಯಾವುದೇ ಫೈವ್ ಸ್ಟಾರ್ ಹೋಟಲ್ ಹಲಾಲ್ ಪ್ರಮಾಣಪತ್ರವಿಲ್ಲದೆ ಕಾರ್ಯಾಚರಿಸುವುದಿಲ್ಲ. ಹೋಟೆಲ್, ಡಾಬಾ ಮಾತ್ರವಲ್ಲದೆ ಏರ್ ಲೈನ್ಸ್, ಸೈನ್ಯದ ಆಹಾರದಲ್ಲಿಯೂ ಕೂಡಾ ಹಲಾಲ್ ನುಗ್ಗಿದೆ! ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಹಿಂದಿನ ಕೇಂದ್ರ ಸರಕಾರವು ಭಾರತೀಯ ರೈಲ್ವೆ, ಏರ್ ಇಂಡಿಯಾ ಹಾಗೂ ಪ್ರವಾಸೋದ್ಯಮ ಮಂಡಳಿಯಂತಹ ಸರಕಾರಿ ಸಂಸ್ಥೆಗಳಲ್ಲಿಯೂ ಹಲಾಲ್ ಅನ್ನು ಕಡ್ಡಾಯ ಮಾಡಲು ಅನುಮತಿ ನೀಡಿತ್ತು. ಹೆಚ್ಚೇಕೇ ಸಂಸತ್ತಿನ ಕ್ಯಾಂಟೀನನ್ನು ಹಲಾಲ್ ಮುಕ್ತಗೊಳಿಸಲು ಸ್ಪೀಕರ್ ಓಂ ಬಿರ್ಲಾ ಜೀ ಓಂಕಾರ ಹೇಳಬೇಕಾಯಿತು! ಕಟ್ಟಡವೂ ಹಲಾಲ್ ಪ್ರಮಾಣೀಕೃತವಾಗಬೇಕು ಎಂದು ಕೇರಳದಲ್ಲಿ ಮುಸ್ಲಿಮರು ಬೊಬ್ಬಿರಿಯಲು ಶುರು ಮಾಡಿದ್ದಾರೆ. ಸಿಮೆಂಟ್, ಮರಳು, ಮರ, ಕಬ್ಬಿಣಕ್ಕೂ ಹಲಾಲ್'ಗೂ ಏನು ಸಂಬಂಧ?ಸರಕಾರಗಳೂ ಮತಬ್ಯಾಂಕ್ ಭದ್ರತೆಗೆ ಈ ಹಲಾಲ್'ನ ದಾಸರಾಗಿವೆ. ಕಳೆದ ವರ್ಷ ರಮಝಾನ್ ಸಮಯದಲ್ಲಿ ನ್ಯೂಯಾರ್ಕ್ ಮುನ್ಸಿಪಾಲಿಟಿ 5 ಲಕ್ಷ  ಹಲಾಲ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿತ್ತು! ಕೊರೋನಾ ವ್ಯಾಕ್ಸೀನ್ ಕೂಡಾ ಹಲಾಲ್ ಆಗಬೇಕೆಂದು ಕೂಗೆದ್ದಿತ್ತು. ಹಲಾಲ್ ಪ್ರಮಾಣಪತ್ರ ಇನ್ನು ಮನುಷ್ಯರಿಗೆ ಮಾತ್ರ ಬಾಕಿ ಅನ್ನುತ್ತೀರಾ? ಮಲೇಶಿಯಾದಲ್ಲಿ ಅದೂ ಶುರುವಾಗಿದೆ. ಇತ್ತೀಚೆಗೆ ಅಲ್ಲಿ ಕಾಮಿಡಿಯನ್ ಒಬ್ಬರೂ ತನಗೂ ಹಲಾಲ್ ಪ್ರಮಾಣಪತ್ರ ಕೊಟ್ಟ ಬಗ್ಗೆ ತಾನು ಈಗ 'ಹಲಾಲ್ ಪ್ರಮಾಣೀಕೃತ ಕಾಮಿಡಿಯನ್' ಎಂದು ವ್ಯಂಗ್ಯವಾಡಿದ್ದರು. ಹಲಾಲ್ ಬ್ಯುಸಿನೆಸ್ ಈಗ 110ಕೋಟಿ ರೂಪಾಯಿಗಳಿಗೇರಿದೆ. ಇದರಿಂದ ಎರಡು ಕೋಟಿಯಷ್ಟು ಹಿಂದೂಗಳು ಕೆಲಸ ಕಳೆದುಕೊಂಡಿದ್ದಾರೆ. ಆ ಜಾಗಕ್ಕೆ ಮುಸ್ಲಿಮರು ಬಂದಿದ್ದಾರೆ.


             ಭಾರತ ಸರ್ಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ’ ಹಾಗೂ ಅನೇಕ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧಿ ಪ್ರಾಧಿಕರಣ’ ಈ ವಿಭಾಗಗಳು ಇರುವಾಗ ‘ಹಲಾಲ್ ಪ್ರಮಾಣಪತ್ರ’ ನೀಡುವ ಅನೇಕ ಇಸ್ಲಾಮೀ ಸಂಸ್ಥೆಗಳ ಆವಶ್ಯಕತೆ ಏನಿದೆ?  ಜಾತ್ಯತೀತ ಭಾರತದಲ್ಲಿ ಸರಕಾರದ 'ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(FSSAI)'ದಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗೀ ಇಸ್ಲಾಮೀ ಪ್ರಮಾಣಪತ್ರ ಪಡೆಯಲು ಕಡ್ಡಾಯವೇಕೆ? ಈ ಹದಿನೇಳು ಪ್ರತಿಶತ ಜನರ ಮತೀಯ ಆಚರಣೆಯನ್ನು ಬಹುಸಂಖ್ಯಾತರ ಮೇಲೆ ಹೇರುವುದರ ಉದ್ದೇಶವಾದರೂ ಏನು? ‘ಹಲಾಲ್’ ಪದದ ಅರ್ಥ ಇಸ್ಲಾಮ್‌ಗನುಸಾರ ಮಾನ್ಯತೆ ಪಡೆದ ಎಂದು! ಹಾಗಾಗಿ ಈ ‘ಹಲಾಲ್ ಪ್ರಾಮಾಣಪತ್ರ’ ಕೊಡುವವರು ಖಾಸಗಿ ಇಸ್ಲಾಮಿ ಸಂಸ್ಥೆಗಳು! ಹೀಗೆ ‘ಹಲಾಲ್ ಪ್ರಮಾಣೀಕೃತ’ದಿಂದ ಸಿಗುವ ಕೋಟಿಗಟ್ಟಲೆ ಹಣವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ಸಿಗದೇ ಅದು ಕೆಲವು ಇಸ್ಲಾಮೀ ಸಂಘಟನೆಗಳ ಪಾಲಾಗುತ್ತದೆ. ಈ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ಸಿಲುಕಿದ ಮತಾಂಧರನ್ನು ಬಿಡುಗಡೆ ಮಾಡಲು ಕಾನೂನಿನ ನೆರವು ನೀಡುತ್ತಿವೆ. ಅದೇ ರೀತಿ ಕೇಂದ್ರ ಸರಕಾರವು ಮಾಡಿದ ದೇಶ ಪರವಾದ ಕಾನೂನುಗಳಾದ ಸಿಎಎ, ವಿಧಿ370ರ ರದ್ದತಿ ಮುಂತಾದುವನ್ನು ವಿರೋಧಿಸುವವರಿಗೆ ದಂಗೆಯನ್ನು ಮಾಡಲು ಬೇಕಾದ ಸಹಾಯವನ್ನು ತನುಮನಧನದಿಂದ ಕೊಡುತ್ತವೆ.


            ಭಾರತದಲ್ಲಿ ಹಲಾಲ್ ಅನ್ನು ಪ್ರಾಮಾಣಿಕರಿಸುವ ಸಂಸ್ಥೆ ಜಮಾತ್-ಇ -ಉಲೆಮಾ ಎಂಬ ಇಸ್ಲಾಮಿಕ್ ಸಂಸ್ಥೆ. ಹಲಾಲ್ ಪ್ರಮಾಣ ಪತ್ರ ಪಡೆಯಲು ಮತ್ತು ಅದನ್ನು ನವೀಕರಿಸಲು ಕಟ್ಟಬೇಕಾದ ಶುಲ್ಕದಿಂದ ಬಂದ ಹಣವನ್ನು ಈ ಸಂಸ್ಥೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಂಚುತ್ತದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಾನೂನು ರೀತ್ಯಾ ನೆರವು ನೀಡುವುದು ಇದರ ಒಂದು ಭಾಗ. ಹಲಾಲ್ ಉದ್ಯಮದಿಂದ ಬಂದ ಹಣದ ಒಂದು ಪಾಲು ಇಸ್ಲಾಂನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗಬೇಕು ಎನ್ನುವುದು ಮುಸ್ಲಿಮರ ನಿಯಮ. ಆ ಹಣದಲ್ಲಿ ನಡೆಯುವ ಮದರಾಸವೊಂದು ಅಲ್ಲಿರುವ ಪುಟ್ಟ ಮಕ್ಕಳ ತಲೆಯಲ್ಲಿ ಕಾಫೀರರ ವಿರುದ್ಧ ದ್ವೇಷವನ್ನು ಕಟ್ಟಿಕೊಡುತ್ತದೆ. ನಮ್ಮ ಕಾಲಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವುದು ಎಂದರೆ ಇದೇ ತಾನೇ? ಮುಸಲ್ಮಾನರು ಮಸೀದಿಗಳಿಗೆ ನೀಡುವ ಝಕಾತ್(ದೇಣಿಗೆ)ನ್ನು ಈ ರೀತಿಯಾದ ದೇಶವಿರೋಧಿ ಚಟುವಟಿಕೆ ಗಳಿಗೆ ಬಳಸುವುದು ಅನವರತವೂ ದೃಢಪಟ್ಟ ಸಂಗತಿ. 2016 ನೆ ಇಸವಿಯಲ್ಲಿ ಇದೇ ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ಗುಲ್ಜಾರ್ ಅಜ್ಮಿ, "ಜಿಹಾದ್ನಿಂದ ಜೈಲಿನಲ್ಲಿ ಕೊಳೆಯುತ್ತಿರುವ ನಮ್ಮ ಹುಡುಗರನ್ನು ರಕ್ಷಿಸಲು ಈ ರೀತಿಯಾದ ಹಣವನ್ನು ಬಳಸಿಕೊಳ್ಳುತ್ತೇವೆ. ಇದಕ್ಕೆ ಅಲ್ಲಾಹುವಿನ ಸಮ್ಮತಿಯಿದೆ" ಎಂದಿದ್ದ. ಹಲಾಲ್ ಪ್ರಮಾಣಪತ್ರ ನೀಡುವ ಇಂತಹ ದೇಶ ದ್ರೋಹಿ ಸಂಘಟನೆಗಳು 108 ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಹಲಾಲ್, ಝಕಾತ್'ಗಳಿಂದ ಬಂದ ಎರಡು ಕೋಟಿಗೂ ಹೆಚ್ಚು ಹಣವನ್ನು ಇದಕ್ಕೆ ನಿಯೋಗಿಸಲಾಗಿದೆ. ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷನಲ್ಸ್ ಎಂಬ  ಸಂಘಟನೆಯು ಮಾಡಿದ ಸರ್ವೆ(2016)ಯ ಪ್ರಕಾರ ಭಾರತದಲ್ಲಿರುವ 17.18 ಕೋಟಿ ಮುಸ್ಲಿಂ ಜನಸಂಖ್ಯೆಯಲ್ಲಿ ಕೇವಲ 10% ನಷ್ಟು ಜನರು ಝಕಾತ್ ಕಟ್ಟಿದರೂ, ಬರೋಬ್ಬರಿ 7,500 ಕೋಟಿಯಷ್ಟು ಹಣ ಸಂಗ್ರಹವಾಗುತ್ತದೆ. ಜನವರಿ 1, 2019 ರಂದು NIA ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಭಯೋತ್ಪಾದರನ್ನು ಹೆಡೆಮುರಿಕಟ್ಟುವುದರಲ್ಲಿ ಯಶಸ್ವಿಯಾಯಿತು, ಆದರೆ ಇದೇ ಜಮಾತ್ ಉಲೆಮಾ ಇ ಹಿಂದ್ ಸಂಘಟನೆ ಇವರಿಗೆ ಕಾನೂನು ನೆರವು ನೀಡಿ ಪ್ರಕರಣದಿಂದ ಖುಲಾಸೆ ಗೊಳಿಸಿತು. ಇಡೀ ದೇಶದಲ್ಲಿ ಕೊರೊನ ಹರಡಿಸಿದ ತಬ್ಲೀಘಿ ಜಮಾತಿಗಳ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದೂ ಇದೇ ಸಂಸ್ಥೆ. ಪಶ್ಚಿಮ ಬಂಗಾಳದ ಉಲೆಮಾ ರಾಜ್ಯಾಧ್ಯಕ್ಷ ಸಿದ್ದಿಕುಲ್ಲಾ ಎನ್.ಆರ್.ಸಿ ಹಾಗೂ ಸಿಎಎಗೆ ಯಾವುದೇ ದಾಖಲೆಗಳನ್ನು ನೀಡಬೇಡಿ ಎಂದು ಮುಸ್ಲಿಮರಿಗೆ ಹೇಳಿದ್ದ.


              2020ರ ಕ್ರಿಸ್ಮಸ್ ಸಮಯದಲ್ಲಿ ಹಲಾಲ್ ವಿರುದ್ಧ ಕೇರಳದ ಕ್ರೈಸ್ತರು ದನಿ ಎತ್ತಿದರು. ಯೇಸುವಿನ ಜನ್ಮ ದಿನದಂದು ನಮಗೇಕೆ ಹಲಾಲ್ ಮಾಂಸ ಸರಬರಾಜು ಮಾಡುತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದಾಗ ಪಿಣರಾಯಿ ಸರಕಾರ ಆ ದನಿಯ ಸದ್ದಡಗಿಸಲು ಯತ್ನಿಸಿತು. ಕ್ರೈಸ್ತರ ಸಂಘಟನೆಯಾದ ‘ಚರ್ಚ್ಸ್ ಆಕ್ಸಲರಿ ಆಫ್ ಸೋಷಿಯಲ್ ಆಕ್ಷನ್’ ‘ಹಲಾಲ್ ಮಾಂಸವನ್ನು ಸೇವಿಸದಂತೆ” ಕ್ರೈಸ್ತರಿಗೆ, ಕರೆ ನೀಡಿತ್ತು. ಹಲಾಲ್ ಮಟನ್ ವಿಷಕಾರಿ. ಪ್ರಾಣಿಯು ನರಳಿ ನರಳಿ ನಿಧಾನವಾಗಿ ಸಾಯುವಾಗ ಅದರ ಮೆದುಳು ಕೆಲಸ ಮಾಡುತ್ತಿರುವುದರಿಂದ ಕೆಟ್ಟ ಭಾವನೆಗಳು ಪ್ರವಹಿಸುತ್ತವೆ. ನರವ್ಯವಸ್ಥೆ, ಅಂಗಾಂಗಗಳು, ಮೂಳೆಗಳು ಮತ್ತು ದೇಹದ ಎಲ್ಲಾ ಭಾಗಗಳು ಬದುಕುಳಿಯುವ ಹಂಬಲದಿಂದ ಹಿಗ್ಗಿಸಲು ಪ್ರಯತ್ನಿಸುತ್ತವೆ. ಆದ್ದರಿಂದ ಸಂಪೂರ್ಣ ದೇಹವು ಹೆಣಗಾಡಿ ನರಳಿ ಪ್ರಾಣಿಯು ಸಾಯುತ್ತದೆ. ಇಂತಹಾ ಮಾಂಸವನ್ನು ತಿನ್ನುವುದರಿಂದ ಆ ಭಾವನೆಗಳು, ಆ ಕ್ರೌರ್ಯ ತಿಂದವನ ದೇಹವನ್ನು ಸೇರುತ್ತವೆ. ಅವನ ಪ್ರವೃತ್ತಿಯೂ ಕ್ರೌರ್ಯವಶವಾಗುತ್ತದೆ. ಭಾರತ ಸರ್ಕಾರದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA)ವು  ಹಲಾಲ್ ಪದವನ್ನು ಸರಕಾರಿ ದಸ್ತಾವೇಜ್ 'ರೆಡ್ ಮೀಟ್ ಮ್ಯಾನ್ಯುಯೆಲ್' ನಿಂದ ತೆಗೆದುಹಾಕಿದೆ. ಸರ್ಕಾರದ ಈ ನಡೆಯಿಂದ 'ಹಲಾಲ್ ಸರ್ಟಿಫಿಕೇಟ್' ನ ಅವಶ್ಯಕತೆಯು ಇಲ್ಲವಾಗಿ ಎಲ್ಲಾ ರೀತಿಯ ಅಧಿಕೃತ ಮಾಂಸ ವ್ಯಾಪಾರಿಗಳು ತಮ್ಮ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಇಸ್ಲಾಂ ಸಂಸ್ಥೆಗಳ 'ಹಲಾಲ್ ಪ್ರಮಾಣಪತ್ರ'ದ ಆಟ ಅಂತ್ಯವಾದಂತಾಯಿತು. ಈ ಕಾರಣಕ್ಕೆ ನಾವು ಕೇಂದ್ರ ಭಾಜಪಾ ಸರಕಾರವನ್ನು ಅಭಿನಂದಿಸಬೇಕು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ