ಪುಟಗಳು

ಗುರುವಾರ, ಅಕ್ಟೋಬರ್ 27, 2016

ಯಾರು ಮಹಾತ್ಮ? ಭಾಗ- ೧೭

ಯಾರು ಮಹಾತ್ಮ?
ಭಾಗ- ೧೭

          ನಾಗ್ಪುರದ ಖಿಲಾಫತ್ ಸಮ್ಮೇಳನದಲ್ಲಿ ಮುಲ್ಲಾಗಳು ಕಾಫಿರರನ್ನು ಕೊಲ್ಲುವ ಜಿಹಾದ್ ಕುರಿತಂತೆ ಪದೇ ಪದೇ ಕುರಾನ್ ಅಯಾತ್'ಗಳನ್ನು ಉಲ್ಲೇಖಿಸುತಿದ್ದರು. ಅದನ್ನು ಗಾಂಧಿಯ ಗಮನಕ್ಕೆ ತಂದಾಗ ಆತ "ಅವರು ಪ್ರಸ್ತಾಪಿಸುತ್ತಿರುವುದು ಬ್ರಿಟಿಷರನ್ನು" ಎಂದುಬಿಟ್ಟರು. "ಇದು ನಿಮ್ಮ ಅಹಿಂಸಾ ವಿಧಾನಕ್ಕೆ ವಿರುದ್ಧವಾದುದಲ್ಲವೇ. ಅಲ್ಲದೆ ಈ ಮೌಲ್ವಿಗಳು ಇದನ್ನು ಹಿಂದೂಗಳ ವಿರುದ್ಧ ಪ್ರಯೋಗಿಸುವುದಿಲ್ಲ ಎನ್ನುವುದರ ಬಗ್ಗೆ ಏನು ಖಚಿತತೆಯಿದೆ" ಎಂದು ನಾನು ಪ್ರಶ್ನಿಸಿದಾಗ ಗಾಂಧಿಯ ಬಳಿ ಉತ್ತರವಿರಲಿಲ್ಲ. ವರ್ಷದೊಳಗೆ ಸ್ವರಾಜ್ಯ ಪ್ರಾಪ್ತಿಗೆ ಇರಿಸಿದ ಮೂರು ಷರತ್ತುಗಳನ್ನು ಮರೆತ ಗಾಂಧಿ ದೇಶದ ಜನರ ಮುಂದೆ ಮತ್ತೊಂದು ಪ್ರಸ್ತಾಪವಿಟ್ಟರು. ಕಾಂಗ್ರೆಸ್ಸಿನ ಬೆಜವಾಡಾ ಅಧಿವೇಶನದಲ್ಲಿ ಗಾಂಧಿಯವರ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಬೇರೆ ನಾಯಕರ ಪ್ರಸ್ತಾಪಗಳು ಇದಕ್ಕಿಂತ ಎಷ್ಟೋ ಉತ್ತಮವಾಗಿದ್ದಾಗ್ಯೂ ಅವನ್ನು ತಳ್ಳಿ ಹಾಕಲಾಯಿತು. ಚರಕಾವನ್ನು ಮುಖ್ಯ ಸಂಕೇತವಾಗುಳ್ಳ ರಾಷ್ಟ್ರ ಧ್ವಜಕ್ಕೂ ಸಮ್ಮತಿ ಸಿಕ್ಕಿತು. ಒಂದು ಕೋಟಿ ರೂಪಾಯಿ ಸಂಗ್ರಹವಾದರೆ ಮೂರು ತಿಂಗಳ ಒಳಗೆ ಸ್ವರಾಜ್ಯ ತಂದುಕೊಡುತ್ತೇನೆಂಬ ಷರತ್ತು ಅದು. 1921ರ ಜೂನ್ ಅಂತ್ಯದ ವೇಳೆಗೆ ಒಂದು ಕೋಟಿ ಸದಸ್ಯರನ್ನು ಕಾಂಗ್ರೆಸ್ಸಿಗೆ ಸೇರಿಸಿ 20ಲಕ್ಷ ಚರಕಾ ವಿತರಿಸಲಾಯಿತು. ಗಾಂಧಿಯವರ ಈ ನಿರಂಕುಶ ಸರ್ವಾಧಿಕಾರವನ್ನು ಪ್ರತಿಭಟಿಸಿ ಶೃದ್ಧಾ ಪತ್ರಿಕೆಯಲ್ಲಿ ನಾನು ಲೇಖನವನ್ನೂ ಬರೆದೆ. ಗಾಂಧಿಯ ಯಾವುದೇ ಮಾತನ್ನು ಮರುಮಾತಿಲ್ಲದೆ ಅಂಗೀಕರಿಸುವ ಕಾಂಗ್ರೆಸ್ಸಿನ ಮನೋಭೂಮಿಕೆಯಿಂದಾಗಿ ಭಾರತದ ಚಿಂತನಶೀಲ ವರ್ಗ ಗೊಂದಲ ಹಾಗೂ ಬೇಸರಗೊಂಡಿತ್ತು.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

         ಒಂದು ಕೋಟಿ ರೂಪಾಯಿ ಸಂಗ್ರಹವಾಯಿತು. ಸದಸ್ಯರ ಪಟ್ಟಿ ತಯಾರಾಗಲಿಲ್ಲ. ಮೂರು ತಿಂಗಳು ಕಳೆಯಿತು. ಸ್ವರಾಜ್ಯದ ಸುಳಿವೇ ಇಲ್ಲ. "ಸ್ವರಾಜ್ಯಕ್ಕೆ ದೇಶ ಸಿದ್ಧವಾಗಿದೆಯೋ ಇಲ್ಲವೋ ಎಂದು ಅಳೆಯಲು ಅದು ಶಿಸ್ತಿನ ಮಾಪನವಾಗಿತ್ತು. ನಿಜವಾದ ಸ್ವರಾಜ್ಯ ತಾನಾಗಿ ಬರುತ್ತದೆ." ಎಂದು ಬಿಟ್ಟರು ಗಾಂಧಿ. ಖಿಲಾಫತ್ ಅಬ್ಬರ ಮೇರೆ ಮೀರುತ್ತಿತ್ತು. ಯಾರು ಬೆಂಕಿಯುಗುಳುವ ಭಾಷಣ ಮಾಡುತ್ತಾರೋ ಅವರಿಗೆ ಶಹಭಾಸ್ ಗಿರಿ ದಕ್ಕುತ್ತಿತ್ತು. ಆದರೆ ಈ ವಾಗ್ಭಟರೇ ಒಳಗಿಂದೊಳಗೆ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋಟ್ಗರ್'ನ ಸ್ಟೋಕ್ಸ್ ನನಗೆ ಹೇಳಿದಾಗ ಅತ್ಯಾಶ್ಚರ್ಯವಾಯಿತು. ಲಾಲಾಲಜಪತ್ ರಾಯರನ್ನು ನಾಣು ಭೇಟಿಯಾದಾಗ ಅವರೂ ಸ್ಟೋಕ್ಸ್ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ಉನ್ನತ ನಾಯಕರಿಂದ ಹಿಡಿದು ಮರಿ ಪುಢಾರಿಗಳವರೆಗೆ ಯಾರಿಗೂ ಗಾಂಧಿಯ ಹೋರಾಟ ಎತ್ತ ಸಾಗುತ್ತಿದೆ, ಸಾಗುತ್ತದೆ ಎನ್ನುವುದರ ಅರಿವೇ ಇರಲಿಲ್ಲ. ಗಾಂಧಿಯವರ ಅಂತಿಮ ಗುರಿಯೇನು ಎಂದು ತಿಳಿದುಕೊಳ್ಳುವಂತೆ, ತಮ್ಮ ನಂಬಿಗಸ್ಥ ಬೆಂಬಲಿಗರನ್ನು ಬಿಟ್ಟು ತಾವೇನಾದರೂ ಹಿಮಾಲಯಕ್ಕೆ ಹೋಗುತ್ತಾರೋ ಎನ್ನುವುದನ್ನು ಕಂಡುಕೊಳ್ಳುವಂತೆ ನಾನು ಅವರಿಗೆ ಸಲಹೆ ಮಾಡಿದೆ.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

           1922 ಮಾರ್ಚಿನಲ್ಲಿ ಶೃದ್ಧಾನಂದ ಕಾಂಗ್ರೆಸ್ಸಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ "ಗಾಂಧಿ ಹೇಳಿದ ಅಹಿಂಸಾ ಆದರ್ಶದ ಪ್ರಕಾರ ಭಾರತದಲ್ಲಿ ಅಹಿಂಸಾತ್ಮಕ ವಾತಾವರಣ ನೆಲೆಗೊಳ್ಳುತ್ತದೆ ಎನ್ನುವ ಬಗ್ಗೆ ನಂಬಿಕೆ ಇಲ್ಲ. ಕಾನೂ ಭಂಗ ಚಳವಳಿ ಶೀಘ್ರ ಆರಂಭವಾಗಬಹುದೆಂದು ನನಗನಿಸುತ್ತಿಲ್ಲ. ಅಲ್ಲದೆ ಅಸಹಕಾರ ಆಂದೋಲನದ ಪ್ರಚಾರ ಕುರಿತಂತೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಜೊತೆ ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ. ಆಡಳಿತ ಶಾಹಿ ಈಗ ಗಾಂಧಿಯನ್ನು ತನ್ನತ್ತ ಸೆಳೆದುಕೊಂಡಿದೆ!" ಎಂದು ಬರೆದಿದ್ದರು. ಆದರೆ ಶೃದ್ಧಾನಂದರ ರೀತಿಯ ದೃಷ್ಟಿಕೋನ ಇರುವವರು ಕಾರ್ಯಕಾರಿ ಸಮಿತಿಯನ್ನು ತ್ಯಜಿಸಬೇಕೆನ್ನುವುದು ಕೇವಲ ಗಾಂಧಿಯವರ ಅಭಿಪ್ರಾಯ ಎಂದು ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅಸ್ಪೃಶ್ಯತಾ ನಿರ್ಮೂಲನಾ ಕಾರ್ಯದ ಮುಂದಾಳತ್ವವನ್ನು ಸ್ವಾಮಿ ಶೃದ್ಧಾನಂದರಿಗೆ ವಹಿಸಲಾಯಿತು. ವಿಚಿತ್ರವೆಂದರೆ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಗೊಳಿಸುತ್ತಿದ್ದ ಮುಸ್ಲಿಮ್ ನಾಯಕರಿಗೆ ಕಾಂಗ್ರೆಸ್ ನೀತಿನಿರೂಪಣೆಯಲ್ಲಿ ಮಾರ್ಗದರ್ಶನ ಮಾಡಲು ಹಾಗೂ ಸಂಸ್ಥೆಯ ಮಾನ್ಯತೆ ಪಡೆದ ಪ್ರತಿನಿಧಿಗಳಂತೆ ಅವಕಾಶ ನೀಡಲಾಗಿತ್ತು. ಹಿಂದೂ ಸಮಾಜ ಭಿನ್ನವಾಗದಂತೆ ರಕ್ಷಿಸುವ ಕೆಲಸ ಮಾಡುತ್ತಿದ್ದವರನ್ನು ಬಹಿಷ್ಕರಿಸಲಾಗಿತ್ತು. ಇದು ಶೃದ್ಧಾನಂದರನ್ನು ಕುಪಿತಗೊಳಿಸಿತು. ಅವರು ಕಾಂಗ್ರೆಸ್ಸಿನಿಂದ ಹೊರಬಂದರು.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

            ಗಾಂಧಿಯವರ ವಿಚಿತ್ರ ನೀತಿಗಳಿಂದಾಗಿ 1922ರಲ್ಲಿ ಒಂದು ಕೋಟಿಯಷ್ಟಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ ಒಂದೇ ವರ್ಷದಲ್ಲಿ ಕೆಲವೇ ಸಾವಿರಕ್ಕೆ ಕುಸಿಯಿತು. ಸ್ವಾಮಿ ಶೃದ್ಧಾನಂದರು "ವಿವರಿಸಲು ಅಸಾಧ್ಯವಾದ ತಥಾಕಥಿತ ಸ್ವರಾಜ್ಯದ ಮರೀಚಿಕೆಯ ಬೆನ್ನು ಹತ್ತಿ ಹೋಗಿ ಸಮಯ ವ್ಯರ್ಥ ಮಾಡುವ ಬದಲು ನೈಜ ಸ್ವರಾಜ್ಯದ ಗುರಿಗಾಗಿ ಹೋರಾಟ ಮಾಡಿ. ರಾಷ್ಟ್ರೀಯ ಭಾವನೆ ಹೊಂದಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪ್ರವೇಶಿಸಿ ದೇಶಕ್ಕಾಗಿ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಲು ಉದ್ಯುಕ್ತವಾಗುವಂತೆ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿ" ಎಂದು ಲೇಖನವನ್ನೂ ಬರೆದರು. ಖಿಲಾಫತ್ ಅತಿರೇಕದಂದ ಮತಾಂತರಕ್ಕೊಳಗಾದ ಹಿಂದೂಗಳ ಶುದ್ದೀಕರಣ ಕಾರ್ಯ ಕೈಗೊಂಡು ಮರಳಿ ಮಾತೃಧರ್ಮಕ್ಕೆ ಕರೆತಂದರು. ಅವರ ಶುದ್ಧಿ ಪ್ರಚಾರದಿಂದ ಉತ್ತರಪ್ರದೇಶವೊಂದರಲ್ಲೇ ಸುಮಾರು 18000 ಮತಾಂತರಿತರು ಮರಳಿ ಮಾತೃಧರ್ಮಕ್ಕೆ ಸೇರಿದರು. ತಮ್ಮ ಕಾಲ ಕೆಳಗಿನ ನೆಲ ಅದುರುತ್ತಿರುವುದನ್ನು ಅರ್ಥೈಸಿಕೊಂಡ ಮುಲ್ಲಾಗಳು ಶೃದ್ಧಾನಂದರ ಮೇಲೆ ದೋಷಾರೋಪಣೆಗೆ ತೊಡಗಿದರು. ಯಾವ ಮುಸಲ್ಮಾನರು ಹಿಂದೊಮ್ಮೆ ಇದೇ ಸಂತರನ್ನು ಮಸೀದಿಯೊಳಗೆ ಕರೆದೊಯ್ದು ಪ್ರವಚನ ಹೇಳಿಸಿಕೊಂಡಿದ್ದರೋ ಅದೇ ಮುಸ್ಲಿಮರು ಅವರ ಮೇಲೆ ದ್ವೇಷಕಾರಲಾರಂಭಿಸಿದರು. 1926 ಡಿಸೆಂಬರ್ 23ರಂದು ಅಬ್ದುಲ್ ರಶೀದ್ ಎಂಬ ಮುಸ್ಲಿಮ್ ಯುವಕ ಸ್ವಾಮಿ ಶೃದ್ಧಾನಂದರನ್ನು ಕಾಣಲೆಂದು ಅವರ ಆಶ್ರಮಕ್ಕೆ ಬಂದು ಅವರ ಮೇಲೆ ಗುಂಡು ಹಾರಿಸಿದ. ಶೃದ್ಧಾನಂದರು ಕೊನೆಯುಸಿರೆಳೆದರು. ಮುಸ್ಲಿಮರು ರಶೀದನ ಪರ ಕಾನೂನು ಹೋರಾಟಕ್ಕೆ ಭಾರಿ ಹಣ ಸಂಗ್ರಹಿಸಿದರು. ಪ್ರಮುಖ ಕಾಂಗ್ರೆಸ್ ಸದಸ್ಯ ಅಸೀಫ್ ಅಲಿ ರಶೀದ್ ಪರ ವಕಾಲತ್ತು ಮಾಡಿದ. ಅಂತಹ ರಶೀದನನ್ನು ಗಾಂಧಿ ಸಹೋದರ ಎಂದು ಕರೆದರು. ಅಬ್ದುಲ್ ರಶೀದ್ ಪರ ವಾದಿಸಲು ನಾನು ಇಚ್ಚಿಸುತ್ತೇನೆ ಎಂದರು. ರಶೀದ್ ಹೊಂದಿದ್ದ ಆಕ್ರೋಶಕ್ಕೆ ನಾವೇ ಕಾರಣ ಎಂದರು. ಭಗತ್ ಹಾಗೂ ಇನ್ನಿತರ ಕ್ರಾಂತಿವೀರರ ಗಲ್ಲುಶಿಕ್ಷೆ ತಪ್ಪಿಸುವ ಮನವಿಗೆ ಅವರು ಹಿಂಸಾನಿರತರಾಗಿದ್ದರು ಎನ್ನುವ ಕಾರಣವೊಡ್ಡಿ ಒಪ್ಪದಿದ್ದ ಗಾಂಧಿ ರಶೀದನ ಕೃತ್ಯವನ್ನು ಸಮರ್ಥಿಸಿಕೊಂಡದ್ದೇಕೆ. ಅದನ್ನೂ ಆ ನೆಲೆಯಲ್ಲಿಯೇ ನೋಡಬೇಕಿತ್ತಲ್ಲವೆ? ಇವತ್ತಿನ ಓಲೈಕೆಯ ರಾಜಕಾರಣಕ್ಕೆ ಭದ್ರ ತಳಹದಿ ಹಾಕಿದ ರಾಜಕಾರಣಿಯಾಗಿ ನನಗೆ ಗಾಂಧಿ ಕಾಣುತ್ತಾರೆ. ಹಿಂದೂಗಳೇನಾದರೂ ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ಗಾಂಧಿ ಹೀಗೆ ಹೇಳುತ್ತಿದ್ದರೇ? ಹಿಂದೂಗಳಿಗೆ ಅಹಿಂಸೆ ಬೋಧಿಸುವ ಗಾಂಧಿ ಮುಸ್ಲಿಮರು ಮಾಡುವ ಹಿಂಸಾಪಾತಕಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅಂತಹವರನ್ನು ಸಹೋದರರೆಂದು ಅಪ್ಪಿಕೊಳ್ಳುತ್ತಾರೆ, ತಪ್ಪು ನಮ್ಮದೇ ಎನ್ನುತ್ತಾರೆ ಎಂದಾದರೆ ಆ ಅಹಿಂಸೆ ಯಾವ ಬಗೆಯದು. ಗಾಂಧಿ ಹಾಕಿದ ಆ ಅಡಿಪಾಯ ಇಂದಿಗೂ ಅಲುಗಾಡದೆ ನಿಂತಿದೆ. ಇಂದು ಬಂಗಾಳ, ಕೇರಳ, ಕರ್ನಾಟಕಗಳಲ್ಲಿ ಬಹುತೇಕ ದೇಶದಾದ್ಯಂತ ಹಿಂದೂಗಳ ಕಗ್ಗೊಲೆಯಾಗುತ್ತದೆ. ಲಜ್ಜೆಗೆಟ್ಟ ರಾಜಕಾರಣಿಗಳು ಕೊಲೆಗಡುಕರ ಸಹಾಯಕ್ಕೆ ಧಾವಿಸುತ್ತಾರೆ. ಇದು ಯಾವ ಪಕ್ಷವನ್ನೂ ಬಿಟ್ಟಿಲ್ಲ. ಮೊನ್ನೆ ಮೊನ್ನೆ ನವರಾತ್ರಿ ಹಾಗೂ ಮೊಹರಮ್ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮ ಯಾವುದೇ ಸುದ್ಧಿ ಮಾಧ್ಯಮಗಳಲ್ಲಿ ಪ್ರತಿಫಲಿಸಲಿಲ್ಲ ಎಂದಾಗಲೇ ಈ ಓಲೈಕೆ ಎಷ್ಟು ಆಳವಾಗಿ ಬೇರೂರಿದೆ ಎಂದು ಗೊತ್ತಾಗುತ್ತದೆ.

         ಇತ್ತ ಹಿಂದೂಗಳ ನಾಯಕ, ಮಹಾ ಸಂತರೊಬ್ಬನನ್ನು ಕೊಲೆಗೈದ ಹಂತಕ ರಶೀದನಿಗೆ ಶೃದ್ಧಾಂಜಲಿ ಸಲ್ಲಿಸಲೆಂದು 50ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಮಸೀದಿಗಳಲ್ಲಿ ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಮಾತ್-ಉಲ್-ಉಲೇಮಾ ಪಕ್ಷದ ಅಧಿಕೃತ ಮುಖವಾಣಿ ರಶೀದ್ ಹುತಾತ್ಮ ಎಂದು ಅನೇಕ ವಾದಗಳನ್ನು ಮಂಡಿಸಿ ಕರಪತ್ರಗಳನ್ನು ಹೊರಡಿಸಿತು. ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವ, ಅವರ ಶವಸಂಸ್ಕಾರಕ್ಕೆ ಸಾಗರೋಪಾದಿಯಲ್ಲಿ ತಮ್ಮವರನ್ನು ಒಟ್ಟುಗೂಡಿಸುವ ಮುಸ್ಲಿಮರ ಮತಾಂಧತೆ ಇಂದಾದರೂ ಕಡಿಮೆಯಾಗಿದೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ