ಪುಟಗಳು

ಬುಧವಾರ, ಡಿಸೆಂಬರ್ 21, 2016

ಆನಂದ ಕರುಣಿಸಿದ ತಾಂಡವ

ಆನಂದ ಕರುಣಿಸಿದ ತಾಂಡವ


       ಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ ಕಾಲ. ಆರ್ಯ ಆಕ್ರಮಣವಾದವನ್ನೇ ತಲೆಯಲ್ಲಿ ತುಂಬಿಕೊಂಡು ನಮ್ಮ ಅಸ್ಮಿತೆಗೆ, ಉತ್ಕರ್ಷಕ್ಕೆ, ಜಗದ್ಗುರು ಪಟ್ಟಕ್ಕೆ ಕಾರಣವಾದ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ತುಚ್ಛವಾಗಿ ಕಾಣುವ ಪೀಳಿಗೆಯೇ ಸೃಷ್ಟಿಯಾಗಿದ್ದ ಕಾಲ. ಆದರೂ ಒಂದು ಕಡೆ ರಾಜಕೀಯ ದಾಸ್ಯವನ್ನು ಹೊಡೆದೋಡಿಸಲು ಹೋರಾಟ ನಡೆದಿತ್ತು. ಅದರ ನಡುವಲ್ಲೇ ನಮ್ಮ ಇತಿಹಾಸವನ್ನು ಶುದ್ಧೀಕರಿಸುವ ಪ್ರಕ್ರಿಯೆಯೂ ನಡೆದಿತ್ತು. ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಭಾರತೀಯ ಕಲೆಯನ್ನು ಯೂರೋಪಿನ ಮಾನದಂಡಗಳಿಂದ ನೋಡದೆ ಭಾರತೀಯರು ಅದನ್ನು ಕಂಡುಕೊಂಡ ರೀತಿ, ಅವರ ಸಂಪ್ರದಾಯಗಳ ಮೂಲಕವೇ ಅರ್ಥೈಸಿಕೊಳ್ಳಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದ ವ್ಯಕ್ತಿ ಆತ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು ಕೂಡಾ. ಪಶ್ಚಿಮದ ಪರಿಕಲ್ಪನೆಗಳ ಪರಿಭಾಷೆಯಲ್ಲೇ ಪೂರ್ವದ ಮಹತ್ವವನ್ನು ಎತ್ತಿ ಹಿಡಿದು ಪಶ್ಚಿಮದ ದುರಹಂಕಾರವನ್ನು ಮುರಿದದ್ದೇ, ಸತ್ಯವನ್ನೊಪ್ಪಲು ಹೆದರುವ ಕೆಲ ಪಾಶ್ಚಿಮಾತ್ಯ-ಪೌರ್ವಾತ್ಯರು ಅವರನ್ನು ವಿರೋಧಿಸಲು ಕಾರಣವಾಗಿರಬಹುದು. ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದ್ದ ಋಷಿ ಸದೃಶ ಕಲಾ ತಪಸ್ವಿ ಆತ ಎಂದು ಕುಮಾರಸ್ವಾಮಿಯವರನ್ನು ವಿಶ್ವದ ಅತಿರಥ ಮಹಾರಥ ವಿದ್ವಾಂಸರೇ ಕೊಂಡಾಡಿದ್ದು ಅವರು ಏರಿದ್ದ ಎತ್ತರಕ್ಕೆ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ಓದಿ ಮುಗಿಸಲಾಗದಷ್ಟು ಬರೆದ ಮಹಾನ್ ವ್ಯಕ್ತಿ ಆನಂದ ಕುಮಾರ ಸ್ವಾಮಿ.

           "ಶಂ ಕರೋತಿ ಇತಿ ಶಂಕರಃ"
                    ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷ. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.

              ನಟರಾಜನ ನಾಟ್ಯವನ್ನು ವಿಶ್ಲೇಷಿಸಿದ ಅದ್ಭುತ ಲೇಖನ ಆನಂದ ಕುಮಾರ ಸ್ವಾಮಿಯವರ "ಡಾನ್ಸ್ ಆಫ್ ಶಿವ". ಶಿವನು ನಾಟ್ಯದ ಗುರು. ಆದಿ ಗುರು. ನಟ ಸಾರ್ವ ಭೌಮ ಅವನು. ವಿಶ್ವವೆಂಬ ಪರದೆಯ ಮೇಲೆ ಅವನು ನೀಡುವ ಪ್ರದರ್ಶನಗಳಲ್ಲಿ ಅದೆಷ್ಟು ವಿಧಗಳು. ಆ ಪ್ರದರ್ಶನಗಳಲ್ಲಿ  ನಟನೂ ಅವನೇ ನೋಟಕನೂ! ಅವನು ತನ್ನ ಡಮರುಗವನ್ನು ಬಾರಿಸಲು ಆರಂಭಿಸಿದನೆಂದರೆ ವಿಶ್ವ ವ್ಯಾಪಾರವೆಲ್ಲಾ ಆರಂಭವಾಗಲೇಬೇಕು. ಅವನ ಈ ನೃತ್ಯ ಮುಗಿದ ಮೇಲೆ ಉಳಿಯುವವ ಅವನೊಬ್ಬನೇ. ಹೀಗೆ ನಾಟ್ಯದ ಮೂಲವೇ ಶಿವ ಎಂದು ಅವರು ಕಟ್ಟಿ ಕೊಡುವಾಗ ಪ್ರಜ್ಞೆ ಯಾ ಅಪ್ರಜ್ಞಾಪೂರ್ವಕವಾಗಿ ವಿಶ್ವದ ಉಗಮದ ರಹಸ್ಯವನ್ನೇ ಅವರು ಪ್ರತಿಪಾದಿಸಿದಂತಾಯಿತು. ತನ್ನ ತಾಂಡವದ ವೀಕ್ಷಕನೂ, ಕೊನೆಗೆ ಉಳಿಯುವವನೂ ಅವನೊಬ್ಬನೇ ಎನ್ನುವಾಗಲೇ ಬ್ರಹ್ಮವೊಂದೇ ಸತ್ಯ ಎನ್ನುವ ಭಾವ ಸ್ಫುರಿಸಿತು. “ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎಲ್ಲವೂ ಬ್ರಹ್ಮವೇ! ಅನವರತವೂ ಪರಮಾತ್ಮ ಸ್ವರೂಪದಲ್ಲಿರುವವರು ಈ ಮೂವರೇ” ಎನ್ನುವುದು ಅಪ್ಪಯ್ಯ ದೀಕ್ಷಿತರ ಉಕ್ತಿ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ. ಅವನು ರಮಣನಾಗಿ ಮೌನದಿಂದಲೇ ಜಗವ ಬೆಳಗಿದ. ಅವನು ಅರುಣಾಚಲ. ಅದನ್ನು ಅಪ್ರಜ್ಞೆ ಎನ್ನಲಾಗದು. ಆನಂದ ಕುಮಾರ ಸ್ವಾಮಿಯವರು ಇದನ್ನು ನಂಬುತ್ತಾರೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅವರು ಶೈವ ಸಿದ್ಧಾಂತದ ಈ ಭಾಗವನ್ನು ಎತ್ತಿಕೊಂಡು ಬಿತ್ತರಿಸುವಾಗ ಆ ಸ್ವರೂಪವನ್ನು, ಜ್ಞಾನವನ್ನು ಎತ್ತಿ ಹಿಡಿದಿದ್ದಾರೆ ಎನ್ನುವುದು ಸ್ಪಷ್ಟ.


           "ಶಿವನ ಎಷ್ಟು ಬಗೆಯ ನೃತ್ಯವನ್ನು ಅವನ ಭಕ್ತರು ತಿಳಿದಿದ್ದಾರೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ಈ ಎಲ್ಲಾ ನಾಟ್ಯದ ಹಿಂದೆ ಇರುವುದು ಮೂಲಶಕ್ತಿ ಎನ್ನುವುದು ಸುಸ್ಪಷ್ಟ." ಎನ್ನುತ್ತಾರೆ ಆನಂದ ಕುಮಾರಸ್ವಾಮಿ. ನಾಟ್ಯವೇ ಮೊದಲ ಸೃಷ್ಟಿಶೀಲ ಚಟುವಟಿಕೆಯೇ? ನಾಟ್ಯಕ್ಕೂ ಕಾಮಕ್ಕೂ(Eros) ಬಿಡಿಸಲಾಗದ ನಂಟಿದೆಯೇ? ಪ್ರಕೃತಿಯ ನಡೆಯಲ್ಲಿರುವ "ಲಯ"ದ ಸಂವೇದನೆ ನಾಗರೀಕತೆಯ ಪೂರ್ವದ ನಮ್ಮ ಪೂರ್ವಜರ ನಾಟ್ಯದಲ್ಲಿ ಅಡಗಿತ್ತೇ? ಮುಂತಾದ ತಮ್ಮ ಚಿಂತನೆಯನ್ನು ಆನಂದ ಕುಮಾರಸ್ವಾಮಿ ಹೇಳುತ್ತಾ ಹೋಗುತ್ತಾರೆಯೇ ಹೊರತು ಅದನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇಲ್ಲಿ ಕಾಮ ಎನ್ನುವುದು ಇಚ್ಛೆ ಅಥವಾ ಸಂಕಲ್ಪ. ಅದು ಶಿವನಿಚ್ಛೆ...ಆದುದರಿಂದಲೇ ನರ್ತನ. ಅದೇ ವಿಶ್ವ ಪರದೆಯ ಮೇಲೆ ಮೂಡಿ ಬರುವ ಚಿತ್ರಣ. ಬಾಹ್ಯ ದೃಷ್ಟಿಗೆ ತೋರಿ ಬರುತ್ತಿರುವುದೆಲ್ಲಾ ಟಿವಿಯ ಪರದೆಯ ಮೇಲೆ ಮೂಡಿ ಬರುತ್ತಿರುವ ಚಿತ್ರಗಳಂತೆ. ಅವುಗಳನ್ನು ನಿರಾಕರಿಸಿ ನಿನ್ನನ್ನು ನೀನು ಹುಡುಕು ಎನ್ನುತ್ತಾರೆ ರಮಣ ಮಹರ್ಷಿಗಳು. ಆಗ ಶಿವನ ಲಯಬದ್ಧ ತಾಂಡವ ಕಂಡೀತು. ಆದರೆ ಇಲ್ಲಿ ಆನಂದ ಕುಮಾರಸ್ವಾಮಿ ಈ ನಾಟ್ಯವನ್ನು ಕೇವಲ ಕಲೆಯ ಕಾಣ್ಕೆಯ ದೃಷ್ಟಿಯಿಂದಷ್ಟೇ ನೋಡಿದಂತೆ ಭಾಸವಾಗುತ್ತದೆ. "ಮತ ಧರ್ಮ-ಕಲೆಗಳ ಇತಿಹಾಸದಲ್ಲಿ ಕಂಡುಬರುವ ಯಾವುದೇ ದೊಡ್ಡ ಸಂಕೇತಗಳು ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಕಂಡುಬಂದಿವೆ. ಕಾಲ ಕಾಲಕ್ಕೆ ಅವು ತಮ್ಮ ಎದೆಯಾಳದಲ್ಲೇ ಅಂತಹ ಸಂಪತ್ತನ್ನು ಮನುಷ್ಯರು ಕಂಡುಕೊಳ್ಳುವಂತೆ ತಮ್ಮನ್ನು ಅವರಿಗೆ ಕೊಟ್ಟುಕೊಂಡಿವೆ" ಎನ್ನುತ್ತಾರೆ ಅವರು. ಶಿವನ ನೃತ್ಯದ ಮೂಲ ಏನೇ ಇರಲಿ, ಅದು ಆ ಸಮಯಕ್ಕೆ ಯಾವುದೇ ಕಲೆ ಅಥವಾ ಪಂಥ ಗರ್ವ ಪಡುವಂತೆ ಭಗವಂತನ ಕಾರ್ಯವಾಗಿ ಸ್ಪಷ್ಟವಾಗಿ ಗೋಚರಿಸಿದೆ. ಇದು ಅವರವರ ಭಾವಕ್ಕೆ ಅವರವರ ಭಕುತಿಗೆ ಶಿವನ ತಾಂಡವ ಕಾಣುವ ರೀತಿ. ತಮ್ಮಲ್ಲಿರುವುದನ್ನೇ ತಾವು ಕಂಡುಕೊಳ್ಳುವುದು. ಕಲೆಯ ದೃಷ್ಟಿಯಿಂದ ಅದು ಹೊಸತನ. ನವೀನತೆಯೇ ಕಲೆಯ ಬದುಕಿನ ಜೀವಾಳವಲ್ಲವೇ? ಕಲಾತತ್ತ್ವದ ಜೊತೆಗೆ ತತ್ತ್ವಜ್ಞಾನವೂ ಮೇಳೈಸಿದ್ದು ಕುಮಾರ ಸ್ವಾಮಿಯವರ ವೈಶಿಷ್ಟ್ಯ.

               ಶಿವನ ಹಲವು ನೃತ್ಯಗಳಲ್ಲಿ ಮೂರು ನೃತ್ಯಗಳ ಬಗೆಗಷ್ಟೇ ಆನಂದ ಕುಮಾರಸ್ವಾಮಿ ಹೇಳತೊಡಗುತ್ತಾರೆ. ಒಂದು "ಶಿವ ಪ್ರದೋಶ ಸ್ತೋತ್ರ"ದಲ್ಲಿ ವರ್ಣಿಸಲ್ಪಟ್ಟಿರುವ ಕೈಲಾಸ ಶಿಖರದ ಮೇಲಿನ ಸಾಯಂಕಾಲದ ನೃತ್ಯ. ಶೂಲಪಾಣಿಯಾಗಿ ಅವನು ನೃತ್ಯಗೈಯಲು ಸರಸ್ವತಿ ವೀಣೆಯನ್ನು, ಇಂದ್ರ ಕೊಳಲನ್ನು, ವಿಷ್ಣು ಡಮರುವನ್ನು ನುಡಿಸುತ್ತಿದ್ದರೆ ಲಕ್ಷಿ ಹಾಡುತ್ತಾಳೆ. ದೇವತೆಗಳು, ಯಕ್ಷ, ಕಿನ್ನರ, ಕಿಂಪುರುಷ, ಸಿದ್ಧ, ಸಾಧ್ಯ, ನಾಗ, ಅಪ್ಸರೆಯರೆಲ್ಲಾ ಶಿವನ ಸುತ್ತ ನಿಂತು ಆ ನಾಟ್ಯಕ್ಕೆ ಸಾಕ್ಷಿಯಾಗುತ್ತಾರೆ. ಎರಡನೆಯದ್ದು ತಾಂಡವ. ಶಿವನ ತಾಮಸಿಕ ರೂಪವಾದ ಭೈರವ ಅಥವಾ ವೀರಭದ್ರನಿಗೆ ಸಂಬಂಧಿಸಿದ್ದು. ರುದ್ರಭೂಮಿಗಳಲ್ಲಿ ದಶ ಕರಗಳೊಂದಿಗೆ ದೇವಿಯನ್ನೂ ಜೊತೆ ಸೇರಿಸಿಕೊಂಡು ಶಿವ ನರ್ತಿಸುತ್ತಾನೆ. ಎಲ್ಲೋರಾ, ಎಲಿಫೆಂಟಾ, ಭುವನೇಶ್ವರಗಳಲ್ಲಿ ಈ ನಾಟ್ಯದ ಭಂಗಿಗಳನ್ನು ಕಾಣಬಹುದು. ಮೂರನೆಯದ್ದು ನಟರಾಜನ ನಾದಾಂತ ನೃತ್ಯ. ತಾರಗ್ರಮ್ ಕಾನನದಲ್ಲಿ ಕರ್ಮನಿಷ್ಠ-ತರ್ಕನಿಷ್ಠ ಮೀಮಾಂಸಕರಿದ್ದರು. ಅವರನ್ನು ಭೇಟಿಯಾಗಲೆಂದು ಶಿವ ಸ್ತ್ರೀ ರೂಪ ಧರಿಸಿದ ವಿಷ್ಣು ಹಾಗೂ ಆದಿಶೇಷನ ಜೊತೆ ಹೊರಟ. ಇವರನ್ನು ನೋಡಿ ಋಷಿ ಮಂಡಲದಲ್ಲಿ ತೀವ್ರ ಜಿಜ್ಞಾಸೆ ಉಂಟಾಯಿತು. ಆ ಜಿಜ್ಞಾಸೆ ಕೋಪಕ್ಕೆ ತಿರುಗಿತು. ಋಷಿಗಳು ಹೆಬ್ಬುಲಿಯೊಂದನ್ನು ಸೃಷ್ಟಿಸಿ ಶಿವನ ವಿರುದ್ಧ ಪ್ರಯೋಗಿಸಿದರು. ಶಿವ ನಗುತ್ತಾ ಕಿರು ಬೆರಳ ಉಗುರ ಮೊನೆಯಿಂದ ಹುಲಿಯ ಚರ್ಮವನ್ನು ಸುಲಿದು ತನ್ನ ಸೊಂಟದ ಸುತ್ತಾ ಸುತ್ತಿಕೊಂಡ. ಅವರು ಭಯಾನಕ ಸರ್ಪವೊಂದನ್ನು ಸೃಷ್ಟಿಸಿದರೆ, ಶಿವ ಆ ಹಾವನ್ನೇ ಹೂವಿನ ಮಾಲೆಯಂತೆ ಕೊರಳಿಗೆ ಹಾಕಿಕೊಂಡ. ಅಲ್ಲದೇ ನರ್ತನಕ್ಕೆ ತೊಡಗಿದ. ಕೊನೆಯ ಪ್ರಯತ್ನವೆಂಬಂತೆ ಆ ಮುನಿಗಳು ವಿಕಾರ ರೂಪದ ಮಯಲಕ ಎನ್ನುವ ಕುಬ್ಜನೊಬ್ಬನನ್ನು ಸೃಷ್ಟಿಸಿ ಕಳುಹಿದರು. ಕಾಲಿಗೆ ತೊಡಕಾಗಿ ಬಂದ ಆ ಕುಬ್ಜನ ಮೇಲೆಯೇ ಶಿವ ತನ್ನ ಹೆಬ್ಬೆರಳನ್ನೂರಿದ. ಕುಬ್ಜನ ಬೆನ್ನೆಲುಬು ಮುರಿಯಿತು. ಅವನ ಆ ಸ್ಥಿತಿಯೇ ಶಿವನಿಗೆ ಪ್ರಣಾಮವಾಗಿಬಿಟ್ಟಿತು. ಹೀಗೆ ಈ ಪುರಾಣದ ಅನುಭವದ ಮೇಲೆಯೇ ಕಲೆ ಅರಳಿತು. ಮೈಯನ್ನು ತಿನ್ನಲು ಬರುವ ಹುಲಿಯೇ ಮೈಮುಚ್ಚುವ ಬಟ್ಟೆಯಾದದ್ದು, ಹಾವೇ ಹೂ ಮಾಲೆಯಂತೆ ಕೊರಳ ಬಳಸುವುದು...ಇದು ಕಲೆಯ ವಿಶೇಷ. ಆಗ ಆದಿಶೇಷ ಶಿವನನ್ನು ಅರ್ಚಿಸಿ ಪುನಃ ನಾಟ್ಯವನ್ನು ನೋಡುವ ಸೌಭಾಗ್ಯವನ್ನು ಕರುಣಿಸು ಎಂದು ಶಿವನನ್ನು ಪ್ರಾರ್ಥಿಸಿದಾಗ ಅವನು ವಿಶ್ವದ ಕೇಂದ್ರವಾದ ಚಿದಂಬರಂನಲ್ಲಿ ಮತ್ತೆ ನಾಟ್ಯ ಮಾಡುತ್ತೇನೆಂದು ಮಾತು ಕೊಡುತ್ತಾನೆ. ಇದು ಆನಂದ ಕುಮಾರಸ್ವಾಮಿಯವರು ತಮಿಳಿನ ಕೊಯಿಲ್ ಪುರಾಣದ ಘಟನೆಯನ್ನು ಕಟ್ಟಿಕೊಡುವ ರೀತಿ. ಅಚ್ಚರಿಯೆಂದರೆ ಶ್ರೀಹರಿಯ ಮಿಡಿತಕ್ಕೆ ಅಚ್ಚರಿಗೊಂಡು ಅದರ ಹಿಂದಿನ ಕಾರಣ ಶಿವ ತಾಂಡವವೆಂದು ತಿಳಿದ ಆದಿಶೇಷ ಶಿವನ ತಾಂಡವವನ್ನು ವೀಕ್ಷಿಸಲೋಸುಗ ತಪಗೈಯ್ಯುತ್ತಿರುವಾಗ ನಂದಿಯೊಡನೆ ವಾಗ್ವಾದವಾಗಿ ಕೊಂಬು ಕೋಡುಗಳಿಲ್ಲದ ಅಕ್ಷರ ರಚಿಸುವೆನೆಂದು ಪ್ರತಿಜ್ಞೆ ಮಾಡಿ, ಯೋಗಿಭೂಷಣನ ಕೃಪೆಯಿಂದ ವೀಕ್ಷಿಸಿದ ತಾಂಡವವು ಯೋಗವಿದ್ಯೆಯಾಗಿ "ದರ್ಶನ"ವಾಗಿ ಪತಂಜಲಿಯಿಂದ ಹೊರಹೊಮ್ಮಿತಷ್ಟೇ. ಎರಡು ಬಾರಿಯೂ ತಾಂಡವದ ವೀಕ್ಷಣೆಯ ಆಸೆಯಿಂದ ಹೋದವ ಶೇಷನೇ. ನಾಗನಿಗೂ ನಾಟ್ಯಕ್ಕೂ ಏನು ಲಯಬಂಧ!

           "ಚಿದಂಬರ ಮುಮ್ಮನಿ ಕೊವೈ" ವ್ಯಾಖ್ಯಾನದಂತೆ "ಡಮರುವನ್ನು ಹಿಡಿದ ಕೈ ಭೂ-ಸ್ವರ್ಗ ಮತ್ತಿತರ ಲೋಕಗಳನ್ನು, ಅಸಂಖ್ಯಾತ ಜೀವಿಗಳನ್ನೂ ಸೃಷ್ಟಿಸಿದೆ. ಅಭಯ ಹಸ್ತ ಅವೆಲ್ಲವನ್ನೂ ಪೊರೆಯುತ್ತದೆ. ಇವೆಲ್ಲವೂ ರೂಪ ಪಡೆದದ್ದು ಶಿವನ ಇನ್ನೊಂದು ಕೈಯಲ್ಲಿರುವ ಬೆಂಕಿಯಿಂದಲೇ. ಅಜ್ಞಾನದಿಂದ ನರಳಾಡುತ್ತಿರುವ ಜೀವಿಗೆ ನೆಲದಲ್ಲಿರಿಸಿರುವ ಶಿವನ ಪಾದವೇ ಗತಿ. ಮೇಲಕ್ಕೆತ್ತಿದ ಪಾದ ಮೋಹ ತ್ಯಜಿಸಿ ತನ್ನೆಡೆಗೆ ಬರುತ್ತಿರುವವರಿಗೆ ಅನುಗ್ರಹಕ್ಕಾಗಿ ಪುಟಿದೆದ್ದು ನಿಂತಿದೆ" ಎಂದು ನಟರಾಜನ ಸೃಷ್ಟಿ, ಸ್ಥಿತಿ, ಲಯ, ತಿರೋಭಾವ, ಅನುಗ್ರಹಗಳೆಂಬ ಪಂಚಕೃತ್ಯಗಳನ್ನು ವಿವರಿಸುತ್ತಾರೆ ಆನಂದ ಕುಮಾರ ಸ್ವಾಮಿ. "ತಿರುಕುಟ್ಟು ದರ್ಶನ"ದ ಸಾಲುಗಳನ್ನು ಉಲ್ಲೇಖಿಸುತ್ತಾ "ಅವನು ಎಲ್ಲೆಡೆಯೂ ಇದ್ದಾನೆ. ಎಲ್ಲಾ ಕಡೆಯೂ ಅವನ ನಾಟ್ಯವಿದೆ. ಎಲ್ಲವೂ ಅವನೇ ಹಾಗೂ ಅವನೊಬ್ಬನೇ ಇರುವವನು. ಅವನು ಕಾಲಾತೀತ. ಅವನ ನಾಟ್ಯವೂ! ಪಂಚಕೃತ್ಯಗಳನ್ನು ಮಾಡುವ, ಪೃಥ್ವಿ-ಜಲ-ಅಗ್ನಿ-ಗಾಳಿ-ಆಕಾಶಗಳಲ್ಲೂ ಕಾಣುವ ಅವನ ನೃತ್ಯ ಎಲ್ಲಾ ಕಡೆಯಲ್ಲೂ ಎಲ್ಲಾ ಕಾಲದಲ್ಲೂ ಇರುವ ಪರಮಸತ್ಯ." ಮಾಯೆಯ ಪೊರೆಯನ್ನು ಕಳಚಿಕೊಂಡವರಿಗೆ ಅದು ಕಾಣುತ್ತದೆ ಎಂದು ವಿಸ್ತರಿಸುತ್ತಾರೆ.

          ವಾಸ್ತವವಾಗಿ ಆನಂದ ಕುಮಾರಸ್ವಾಮಿಯವರು ಹೇಳಿದ್ದು ಅನಂದ ತಾಂಡವದ ಒಂದು ಭಂಗಿಯ ಬಗೆಗೆ ಮಾತ್ರ. ತಾಂಡವದಲ್ಲೇ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು?

          ಅವನ ನಾಟ್ಯ ನಮ್ಮೊಳಗೇ ಇರುವಂತಹದ್ದು. ಅದನ್ನು ದರ್ಶಿಸುವವನಿಗೆ ಮಾಯೆಯೆ ಮೋಹ ಮುಸುಕದು. "ಮೇರು ಪ್ರಜ್ಞೆ"ಯನ್ನು ತಲುಪಿ ಆತ್ಮಾನಂದವನ್ನು ಅನುಭವಿಸುತ್ತಿರುವ ಮೌನಿ ಯೋಗಿಗಳು, ಕಟ್ಟಿರುವ ಈ ಮೂರು ಬಂಧಗಳನ್ನು ಬಿಚ್ಚಿ ವೇದಾಂತದ ತುತ್ತ ತುದಿ ತಲುಪಿದ, ಶಿವನ ಕೃಪೆಗೆ ಪಾತ್ರರಾದ ನಿಶ್ಚಲರು. ಶಿವ ಸ್ಮಶಾನದಲ್ಲಿ ನೃತ್ಯ ಮಾಡುತ್ತಾ ಜಗತ್ತನ್ನು ನಾಶಮಾಡುವುದಲ್ಲ. ಅವನು ನಮ್ಮ ಆತ್ಮದಲ್ಲಿ ನರ್ತಿಸುತ್ತಾ ಅಹಂ-ಮೋಹ-ಮಾಯೆಗಳನ್ನು ನಾಶ ಮಾಡುತ್ತಾನೆ. ಅಹಂನ ಕಾರಣದಿಂದ ಮಾಯಾ ಜಗತ್ತಿಗೆ ಬರುವುದು, ಮಾಯೆಯ ಮೋಹಕ್ಕೆ ಸಿಲುಕಿ ಮತ್ತೆ ಅಹಂಗೊಳಗಾಗುವುದು, ಮತ್ತೆ ಮಾಯಾ ಜಗತ್ತಿಗೆ ಬರುವುದು. ಪುನರಪಿ ಜನನಂ ಪುನರಪಿ ಮರಣಂ. ಅಹಂ ಪೊರೆ ಕಳಚಿದಾಗ ಶಿವನಾಗುವುದು. ಯಾವಾಗ "ನಾನು" ಅಳಿಯುವುದೋ ಆಗ "ನಾನು" ಯಾರೆಂದು ತಿಳಿಯುವುದು, ಶಿವನಾಗುವುದು ಎಂದರೆ ಇದೇ ಅಲ್ಲವೇ? ಎಷ್ಟು ಲಯವಿದೆ ಇಲ್ಲಿ! ನಮ್ಮೊಳಗೆ ನಡೆವ ನಾಟ್ಯ ಪಾಪವನ್ನು ಕಳೆಯಲು ಇರುವಂತಹದ್ದು. ಶಿವ ನಮ್ಮನ್ನು ಆವರಿಸಿರುವ ಮಾಯೆಯ ಪೊರೆಯನ್ನು ದೂರ ಮಾಡುತ್ತಾನೆ. ಕರ್ಮ ಬಂಧನವನ್ನು ಕಳಚುತ್ತಾನೆ. ಅವಿದ್ಯೆಯನ್ನು ದೂರ ಮಾಡಿ ಶಾಶ್ವತ ಆನಂದವನ್ನು, ಜ್ಞಾನವನ್ನು ಕರುಣಿಸುತ್ತಾನೆ. ಈ ಶಾಶ್ವತ ನಾಟ್ಯವನ್ನು ಯಾರು ತಮ್ಮೊಳಗೇ ಕಂಡುಕೊಳ್ಳುತ್ತಾರೋ ಅವರು ಮತ್ತೆ ಮತ್ತೆ ಹುಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ.

         ಶಿವನ ಲೀಲೆಯನ್ನು ವರ್ಣಿಸುವ "ಉನೈವಿಳಕ್ಕಮ್"ಗೆ ಸಂವಾದಿಯಾಗಿ ಕುಮಾರ ಸ್ವಾಮಿಯವರು Skryabin ಕವಿಯ "Poem of Ecstasy" ಯ ಕೆಲವು ಸಾಲುಗಳನ್ನು ಉದ್ಧರಿಸುತ್ತಾರೆ. ಹಾಗೆ ಉದ್ಧರಿಸುವಾಗ ಪುರುಷ, ಯೋಗ-ಮಾಯಾ, ಆನಂದ, ಪ್ರಕೃತಿ. ಸ್ವಭಾವ, ಲೀಲೆ, "ನೇತಿ-ನೇತಿ" ಇತ್ಯಾದಿ ಭಾವಗಳನ್ನು ಆರೋಪಿಸುತ್ತಾರೆ. "ಪುರುಷ ನರ್ತಿಸುತ್ತಿದ್ದಾನೆ, ಯೋಗಮಾಯೆ ಪುರುಷನ ಜೊತೆಗೂಡಿ ಎಲ್ಲವನ್ನೂ ಸೃಷ್ಟಿಸುತ್ತಿದ್ದಾಳೆ..." ಹೀಗೆ ಸಾಗುತ್ತದೆ ಕವನ. ಕೊನೆಗೆ "ನಾನು ಎಲ್ಲವನ್ನೂ ನಿರಾಕರಿಸುತ್ತೇನೆ. ಹಾಗೆ ನಿರಾಕರಿಸುತ್ತಾ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಆನಂದವನ್ನು ಪಡೆಯುತ್ತೇನೆ. ಯಾವುದು ಕೆಡುಕೆಂದು ಕಂಡಿದ್ದೆನೋ ಅದೀಗ ಜೀವನೋತ್ಸಾಹವಾಗಿಬಿಟ್ಟಿದೆ." ಶಿವನ ನಾಟ್ಯ ನಿರಂತರ, ಸ್ವಭಾವಗತ, ಅನುದ್ದೇಶಿತ, ಮೋಕ್ಷದಾಯಕ ಎನ್ನುವಾಗಲೇ ಭಾರತೀಯ ಕಲೆಗೆ ಅಧ್ಯಾತ್ಮವೇ ಮೂಲ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ ಆನಂದ ಕುಮಾರಸ್ವಾಮಿ. ಅಲ್ಲದೆ ಕಲೆಗೆ ನೇರ ಸಂಬಂಧವಿರುವ ಅಧ್ಯಾತ್ಮದಿಂದ ಅವರು ಪ್ರಭಾವಿತರಾಗುತ್ತಾರೆ. ಕಲೆಯ ವೈಶಿಷ್ಟ್ಯವೇ ಅದು. ಯಾರು ಒಳಹೊಕ್ಕು ನೋಡುತ್ತಾನೋ, ಅವನನ್ನು ಅದು ಅಪ್ಪಿ ಹಿಡಿಯುತ್ತದೆ.

               ಪಂಚಾಕ್ಷರಿಯನ್ನು, ಅದರ ಮಹತ್ವವನ್ನು, ಯಾವುದರಿಂದ ಶಿವತಾಂಡವವು ಬೇರ್ಪಡುವುದಿಲ್ಲವೋ ಅಂತಹ ಓಂಕಾರವನ್ನು ಸ್ವಾಮಿ ಪಿಳ್ಳೈಯವರ ವಿವರಣೆಯೊಂದಿಗೆ ದಾಖಲಿಸುತ್ತಾರೆ ಕುಮಾರಸ್ವಾಮಿ. "ಮೊದಲ ನಾಟ್ಯ ಶಕ್ತಿಯದ್ದು - ಅದು ಓಂಕಾರ, ಕಾಳಿಯ ನೃತ್ಯ. ಎರಡನೆಯದ್ದು ಶಿವನದ್ದು, ಓಂಕಾರದಿಂದ ಬೇರ್ಪಡಿಸಲಾಗದ್ದು(ಅರ್ಧಮಾತ್ರಾ ಹಾಗೂ ತುರೀಯಮ್). ಶಿವನಿಚ್ಛೆಯಿಲ್ಲದೆ ಮೊದಲ ನಾಟ್ಯವು ನಡೆಯದು. ಪ್ರಕೃತಿ-ಪುರುಷರ(ಶಿ-ವ & ನ-ಮ) ಈ ನಾಟ್ಯದ ನಡುವೆ ಇರುವವು ಜೀವಾತ್ಮಗಳು(ಯ). ಶಿವ ತಾಂಡವವೆಂದರೆ ಅದು ವಿಶ್ವದ ಸ್ಥಿತಿಯ ಮೂಲ. ಜೀವಿಗಳ ಭವಬಂಧನವನ್ನು ಬಿಡಿಸುವುದೇ ಅದರ ಉದ್ದೇಶ. ಚಿದಂಬರಂ(ಆಧ್ಯಾತ್ಮಿಕ ಹೃದಯ)ವೇ ಅದರ ಕೇಂದ್ರ.

       ಮೊಟ್ಟ ಮೊದಲು ಶಿವನ ನಾಟ್ಯದ ಬಗೆಗೆ ಋಷಿಮುನಿಗಳಿಗೆ ಆದ "ದರ್ಶನ", ಅವರ ಚಿಂತನ-ಮಂಥನ, ಅವರು ಆಗ ಅನುಭವಿಸಿದ ಮಹದಾನಂದ, ಜೀವನದ ಸತ್ಯವನ್ನು ಅವರು ಕಂಡುಕೊಂಡ ರೀತಿ, ಶತಶತಮಾನಗಳು ಕಳೆದರೂ ಆ ಸತ್ಯ ಜಗತ್ತೇ ಒಪ್ಪುವಂತೆ ಸ್ಥಿರವಾಗಿರುವ ಬಗ್ಗೆ ಕುಮಾರಸ್ವಾಮಿಯವರು ರೋಮಾಂಚನಗೊಳ್ಳುತ್ತಾರೆ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಬಯಸುವ ತನಕ ನಾಟ್ಯದಲ್ಲಿ ತೊಡಗದು. ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು. ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ. ಶಿವನ ಈ ನೃತ್ಯ ರೂಪಕವು  ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ. ಆನಂದ ಕುಮಾರಸ್ವಾಮಿಯವರಿಗೆ ಭಾರತೀಯ ಕಲೆಯ ಮೂಲವಾಗಿ ಅದು "ದರ್ಶನ" ಕೊಟ್ಟಿತು.



ಗುರುವಾರ, ಡಿಸೆಂಬರ್ 8, 2016

ಯಾರು ಮಹಾತ್ಮ? ಭಾಗ-೩೦

ಯಾರು ಮಹಾತ್ಮ?
ಭಾಗ-೩೦


              ತಾವು ಎರಡನೇ ಮಹಾಯುದ್ಧದಲ್ಲಿ ನೋಡಿದ್ದುದಕ್ಕಿಂತಲೂ ಎಷ್ಟೋ ಪಟ್ಟು ಭೀಕರತೆ ವಿಭಜನೆ ಸಂದರ್ಭದಲ್ಲಿ ನಡೆಯಿತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳು. ಮತಾಂಧತೆಯ ಬರ್ಬರತೆಯನ್ನು ಪ್ರತ್ಯಕ್ಷವಾಗಿ ಕಂಡ ತನ್ನ ಪ್ರತಿನಿಧಿಗಳ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ "ಭಾರತದಲ್ಲಿ ಮಳೆಯ ನೀರಿನಂತೆ ರಕ್ತದ ಕೋಡಿಯೇ ಹರಿಯುತ್ತಿದೆ" ಎಂದು ದಾಖಲಿಸಿತು. ಪಾಕಿಸ್ತಾನದಿಂದ ಇರುವೆ ಸಾಲಿನಂತೆ ಬರುತ್ತಿತ್ತು ನಿರಾಶ್ರಿತರ ದಂಡು. ಇಂತಹ ಒಂದು ನಿರಾಶ್ರಿತರ ಸಮೂಹದಲ್ಲಿ ಎಂಟು ಲಕ್ಷ ಜನರಿದ್ದರು! ಇದು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಜನಸಂಖ್ಯಾ ವಿನಿಮಯ. ಬೆಳಗಿನಿಂದ ಸಂಜೆಯವರೆಗೆ ಪರಿಶೋಧನೆ ನಡೆಸಿ ನಿರಾಶ್ರಿತರ ಸಾಲಿನ ಗಾತ್ರ, ಅದರ ಪ್ರಗತಿಯ ವಿವರಗಳನ್ನು ಗಂಟೆಗೊಮ್ಮೆ ನೀಡಲು ವಾಯುಸೇನೆಯ ವಿಮಾನಗಳು ನಿಯೋಜನೆಗೊಂಡಿದ್ದವು. ವಿಮಾನ ವೀಕ್ಷಣೆ ಸಮಯದಲ್ಲಿ ಇರುವೆ ಸಾಲುಗಳಂತೆ ಬರುವ ಜನ ಒಂದು ಕಡೆಯಾದರೆ ಹೊತ್ತಿ ಉರಿಯುತ್ತಿರುವ ಹಳ್ಳಿಗಳು ಇನ್ನೊಂದೆಡೆ ಗೋಚರಿಸುತ್ತಿದ್ದವು. ಗಂಟೆಗೆ ಇನ್ನೂರು ಕಿಮೀ ವೇಗದಲ್ಲಿ ಹದಿನೈದು ನಿಮಿಷ ಹೋದರೂ ನಿರಾಶ್ರಿತರ ಸಾಲು ಕೊನೆಯಾಗಲಿಲ್ಲ ಎಂದು ಓರ್ವ ಪೈಲಟ್ ಉಲ್ಲೇಖಿಸಿದ್ದಾನೆ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)

            ನಿಶ್ಯಕ್ತರಾದ ತಾಯಿ, ಪತ್ನಿ, ಮಕ್ಕಳು, ವೃದ್ಧರನ್ನು ತಲೆಯ ಮೇಲೆ ಹೆಗಲ ಮೇಲೆ ಹೊತ್ತು ಪುರುಷರು ಸಾಗುತ್ತಿದ್ದರು. ಕಣ್ಣು, ಕೈ ಕಾಲು ಕಳೆದುಕೊಂಡವರ ಸಂಖ್ಯೆಯೇ ದಿಗಿಲು ಹುಟ್ಟುವಷ್ಟಿತ್ತು. ಗರ್ಭಿಣಿ ಸ್ತ್ರೀಯರು ಗಂಡಂದಿರ ಆಸರೆ ಪಡೆದಿದ್ದರು. ಮಾರ್ಗ ಮಧ್ಯೆಯೇ ಅನೇಕ ಹೆರಿಗೆಯೂ ಆಗುತ್ತಿತ್ತು. ಬಾಣಂತನವಿಲ್ಲದೆ ಆಶ್ರಯದ ಆಶೆಯಿಂದ ಆ ಪರಿವಾರಗಳು ನಿರಂತರವಾಗಿ ಮುಂದುವರಿಯುತ್ತಲೇ ಇದ್ದವು. ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಬಿಸಿಲ ಝಳಕ್ಕೆ ಸತ್ತವರೆಷ್ಟೋ? ಔಷಧ, ಶುಶ್ರೂಷೆಯಿಲ್ಲದೆ ಸತ್ತ ರೋಗಿಗಳೆಷ್ಟೋ? ರೋಗ ಬಂದು ಸತ್ತವರೆಷ್ಟೋ? ಮತಾಂಧ ಪುಂಡರಿಗೆ ಬಲಿಯಾದವರೆಷ್ಟೋ? ಮಲಿನವಾದ-ಹರಿದ ಅಂಗಿ, ಧೋತಿ, ಸೀರೆ, ಹರಿದ ಚಪ್ಪಲಿಗಳು, ಹಲವರಲ್ಲಿ ಅದೂ ಇಲ್ಲ, ಆಹಾರ ಸಿಗುವ ಸಂಭವವೂ ಇಲ್ಲ...ಎಂತಹಾ ದುರವಸ್ಥೆ! ಅವರಲ್ಲಿದ್ದುದು ಕೆಲವೇ ಕೆಲವು ಸಾಮಾನುಗಳು ಜೊತೆಗೇ ಶಿವನದ್ದೋ, ಗುರುನಾನಕರದ್ದೋ ಒಂದು ಪಟ ಅಷ್ಟೇ! ವಿಚಿತ್ರವೆಂದರೆ ಮನುಷ್ಯರ ಜೊತೆ ಸಾಕು ಪ್ರಾಣಿಗಳೂ ತಮ್ಮ ಒಡೆಯರ ದುಃಖದಲ್ಲಿ ಸಹಭಾಗಿಗಳಾಗಿದ್ದವು. ಕೆಲ ನಿರಾಶ್ರಿತ ರೈತರು ತಮ್ಮ ಮನೆ-ಕೃಷಿ ಸಾಮಗ್ರಿಗಳನ್ನು ತಮ್ಮ ಎತ್ತುಗಳು, ಕೋಣಗಳ ಮೇಲೆ ಹೇರಿದ್ದರು. ಅದು ಹಿಂದಿರುಗಿ ಬರಲಾಗದ ಪ್ರಯಾಣ! ಬದುಕಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಪ್ರಯಾಣ! ನಡುನಡುವೆ ಕಾಡುವ ಮತಾಂಧರ ದಾಳಿಗಳನ್ನೂ, ಹಸಿವು-ನೀರಡಿಕೆ, ಕಾಲರಾಗಳನ್ನು ಲೆಕ್ಕಿಸದ ಪ್ರಯಾಣ! ಅದು "ಹಸಿವು-ದುಃಖ-ಅನ್ಯಾಯ-ಅಸುರಕ್ಷತೆ-ಅಭಯ-ಹಾದಿಗಳ ಅಂತ್ಯವಿಲ್ಲದ" ಪ್ರಯಾಣ! ಅವರಿಗಿದ್ದ ಅಂತಿಮ ಆಶಾಕಿರಣ ಒಂದೇ...ಅದು ಭಾರತ! ಹಿಂದೂಸ್ಥಾನ! ಅಬ್ಬಾ ಅದೆಷ್ಟು ಜನರಿಗೆ ಈ ನಾಡು ಮಾತೃ ಪ್ರೇಮದ ಸಿಂಚನವನ್ನುಣಿಸಿದೆ? ಅದೆಷ್ಟು ಜನರಿಗೆ ಈ ನಾಡು ಭಯಮುಕ್ತವಾಗಿ, ಸುರಕ್ಷತೆಯ ತಾಣವಾಗಿ, ಅಂತಿಮ ಆಶಾವಾದವಾಗಿ ಕಂಡಿದೆ? ಜಗತ್ತಿಗೆ ಧರ್ಮವನ್ನೂ, ಮೌಲ್ಯವನ್ನೂ, ನೀತಿಯನ್ನೂ, ಜೀವನಪದ್ದತಿಯನ್ನೂ ಬೋಧಿಸಿದ ಹಿಂದೂಧರ್ಮವಲ್ಲದೆ ಇನ್ನಾರು ಜಗತ್ತಿನ ಅಸಹಾಯಕರಿಗೆ ರಕ್ಷಣೆ ಕೊಟ್ಟಾರು?

         ದಿನದಲ್ಲಿ ಕೆಲಬಾರಿ ವಿಮಾನದಿಂದ ಆಹಾರ ಪೊಟ್ಟಣಗಳನ್ನು ಕೆಳಗುದುರಿಸಲಾಗುತ್ತಿತ್ತು. ಅದೇ ಆ ನಿರಾಶ್ರಿತರಿಗಿದ್ದ ಆಶಾವಾದ. ಅದೂ ಸಿಕ್ಕಿದವರಿಗೆ ಸಿಕ್ಕಿತು. ಅಸಹಾಯಕರಿಗೆ ಅದೂ ದುರ್ಲಭವೇ. ನಾಯಿಯೊಂದು ಚಪಾತಿಯೊಂದನ್ನು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಸಿದುಕೊಳ್ಳಲು ಕೆಲ ನಿರಾಶ್ರಿತರು ನಾಯಿಯ ಬೆನ್ನಟ್ಟಿ ಹೋಗುತ್ತಿದ್ದರು. ಅದನ್ನು ನೋಡಿದ ಕ್ಯಾಪ್ಟನ್ ಅಟ್ಕಿನ್'ನ ಕರುಳು ಚುರುಕ್ಕೆಂದಿತು. ಕೆಲವರು ಮಕ್ಕಳನ್ನು ಕರೆದೊಯ್ಯಲಾಗದೇ ವಿಧಿಯ ಕೈಗೆ ಒಪ್ಪಿಸಿ ಮುಂದೆ ಸಾಗುತ್ತಿದ್ದ ದೃಶ್ಯವಂತೂ ಕರುಣಾಜನಕವಾಗಿತ್ತು. ರಸ್ತೆಯ ಬದಿಯಲ್ಲೊಂದು ಮಗು ತನ್ನ ಪುಟಾಣಿ ಮೃದು ಹಸ್ತಗಳಿಂದ ತಾಯಿಯ ಕೈಯನ್ನು ಹಿಡಿದೆಳೆಯುತ್ತಿತ್ತು. ಅದಕ್ಕೇನು ಗೊತ್ತು ತನ್ನ ತಾಯಿ ತನ್ನನ್ನು ಬಿಗಿದಪ್ಪಿಕೊಳ್ಳಲಾಗದ ಲೋಕಕ್ಕೆ ಹೋಗಿದ್ದಾಳೆಂದು! ಲಾಹೋರದಿಂದ ಅಮೃತಸರದವರೆಗಿನ ನಲವತ್ತೈದು ಮೈಲುಗಳ ಹಾದಿ ಅಕ್ಷರಶಃ ಸ್ಮಶಾನವೇ ಆಗಿತ್ತು. ಅಡಿಗಡಿಗೂ ಶವ ಸಿಗುತ್ತಿತ್ತು. ಹಲವರನ್ನು ಕೊಲ್ಲಲಾಗಿತ್ತು. ಕೆಲವರು ಅನ್ನಾಹಾರವಿಲ್ಲದೆ ಸಾವನ್ನಪ್ಪಿದ್ದರು, ಕೆಲವರು ಕಾಲರಾದಿಂದ, ಕೆಲವರು ಅಶಕ್ತತೆಯಿಂದ, ಇನ್ನು ಕೆಲವರು ಆಘಾತದಿಂದ!

         ಇವೆಲ್ಲದರ ನಡುವೆ ಇನ್ನೊಂದು ಆಘಾತ ಕಾದಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರುಗಳಲ್ಲಿ ಬಿರು ಬಿಸಿಲಿನಿಂದ ಬಳಲಿದ್ದ ನಿರಾಶ್ರಿತರ ಪ್ರಾರ್ಥನೆ ಎಂಬಂತೆ ಮಳೆ ಪ್ರಾರಂಭವಾಯಿತು. ಅದು ಎಂತಹ ಮಳೆ? ಕಳೆದೈವತ್ತು ವರ್ಷಗಳಲ್ಲಿ ದೇಶ ಕಂಡು ಕೇಳರಿಯದ ಧಾರಾಕಾರ ಮಳೆ. ಪಂಜಾಬದ ಐದೂ ನದಿಗಳೂ ಉಕ್ಕೇರಿ ಹರಿದವು ನಿರಾಶ್ರಿತರ ಕಣ್ಣೀರ ಧಾರೆಯೊಡನೆ! ರಾತ್ರೋರಾತ್ರಿಯ ಈ ಜಲಪ್ರಳಯದಲ್ಲಿ ನದಿಯ ಇಕ್ಕೆಲಗಳಲ್ಲಿ ಮಲಗಿ ನಿದ್ರಿಸುತ್ತಿದ್ದ ನಿರಾಶ್ರಿತರನ್ನು ನೀರು ತನ್ನ ತೆಕ್ಕೆಗೆ ಎಳೆದುಕೊಂಡಿತು. ಮನುಷ್ಯ, ಪ್ರಾಣಿ, ಸಜೀವ, ನಿರ್ಜೀವ ಎನ್ನದೇ ಎಲ್ಲವನ್ನೂ ನದಿಗಳು ತಮ್ಮೊಡಲಿಗೆ ಎಳೆದುಕೊಂಡವು. ಪ್ರವಾಹ ಕಡಿಮೆಯಾದ ಬಳಿಕ ನೋಡಿದರೆ ಹಲವಾರು ಶವಗಳು ನದಿಗಳ ಪಕ್ಕದ ಮರಗಳಲ್ಲಿ ನೇತಾಡುತ್ತಿದ್ದವು! ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಪೂರ್ವ ಪಂಜಾಬಿನಿಂದ ಹಿಂದೂ ನಿರಾಶ್ರಿತರ ದಂಡು ಪ್ರಯಾಣ ಆರಂಭಿಸಿತು. ಪ್ರತೀ ದಂಡಿನಲ್ಲಿ ನಲವತ್ತು ಸಾವಿರದಷ್ಟು ಜನವಿದ್ದರು. ಸೆಪ್ಟೆಂಬರ್ 18 - ಅಕ್ಟೋಬರ್ 20ರ ನಡುವೆ ಇಂತಹ 24 ದಂಡುಗಳು - ಸುಮಾರು 8,49,000 ಜನರು ಭಾರತದ ಗಡಿ ದಾಟಿದರು. ಲಿಯಾಲ್ ಪುರದಿಂದ ಎರಡು ಲಕ್ಷ ಜನರು ಪ್ರಯಾಣ ಆರಂಭಿಸಿದರು. ನಿರಾಶ್ರಿತರ ಸಾಲಿನ ಉದ್ದ ಐವತ್ತೇಳು ಮೈಲಿಗಳಷ್ಟಿತ್ತು. ಅವರಲ್ಲಿ ಹಲವರು ಮತಾಂಧರಿಗೆ ಬಲಿಯಾದರು. ಕೆಲವರು ಕಾಲರಾ ಹಾಗೂ ಉಳಿದವರು ಪ್ರವಾಹಕ್ಕೆ ಬಲಿಯಾದರು. ಮತಾಂಧರ ಪೈಶಾಚಿಕತೆ ಎಷ್ಟಿತ್ತೆಂದರೆ ನಿರಾಶ್ರಿತರ ಆಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಗಳಿಂದ ಗುಂಡುಗಳನ್ನು ಹೊರತೆಗೆಯಲಾಗುತ್ತಿತ್ತು. ಸೆಪ್ಟೆಂಬರ್ ಹದಿನಾಲ್ಕರಂದು ದೆಹಲಿಯಲ್ಲಿ ಸುರಿದ ಮಳೆಗೆ ನಿರಾಶ್ರಿತ ಶಿಬಿರಗಳಲ್ಲಿದ್ದವರು ಮೊಣಕಾಲೆತ್ತರದ ನೀರಿನಲ್ಲಿ ರಾತ್ರಿ ಕಳೆಯಬೇಕಾಯಿತು. (ಮಹಾತ್ಮ ಗಾಂದಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್).

           ಲಾಹೋರ್-ಕರಾಚಿ ಹೆದ್ದಾರಿಯಲ್ಲಿ ಉಕ್ರಾನಾ ಎನ್ನುವ ಮುಸ್ಲಿಮ್ ಬಾಹುಳ್ಯದ ನಗರವೊಂದಿತ್ತು. ಭಾರತೀಯ ನೌಕಾದಳದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹಿಂದೂ ತರುಣನೊಬ್ಬ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ. ಸ್ವಾತಂತ್ರ್ಯ ಬಂದಾಗ ಉಳಿದ ಕಡೆಯಲ್ಲಿದ್ದಂತೆ ಆ ನಗರದಲ್ಲೂ ಮುಸಲ್ಮಾನರು ಉನ್ಮತ್ತರಂತೆ ಕುಣಿಯತೊಡಗಿದ್ದರು. "ಹಸ್ ಕೇ ಲಿಯಾ ಪಾಕಿಸ್ತಾನ್, ಲಡ್ ಕೇ ಲೇಂಗೇ ಹಿಂದೂಸ್ಥಾನ್" ಎನ್ನುವ ಘೋಷಣೆ ಪ್ರತಿಧ್ವನಿಸುತ್ತಿತ್ತು. ಆತ ತನ್ನ ಚಿಕ್ಕಪ್ಪ-ಚಿಕ್ಕಮ್ಮರೊಂದಿಗೆ ಬಸ್ಸಿನಲ್ಲಿ ಭಾರತದತ್ತ ಹೊರಟೇ ಬಿಟ್ಟ. ಆತನ ತಂದೆ ಜ್ಯೋತಿಷಿ ಹೇಳಿದ ಹೊರಡುವ ಶುಭಗಳಿಗೆಗಾಗಿ ಕಾಯುತ್ತಾ ಹಿಂದೆಯೇ ಉಳಿದ. ಕ್ಷಣ ಹೊತ್ತಲ್ಲೇ ಪಾಕ್ ಸೈನಿಕರು ಬಸ್ಸನ್ನು ತಡೆದು ಸರ್ವಸ್ವವನ್ನೂ ಲೂಟಿ ಮಾಡಿ ಬಸ್ಸನ್ನು ಹೋಗಗೊಟ್ಟರು. ಹೀಗೆ ಆತ ಉಟ್ಟಬಟ್ಟೆಯಲ್ಲಿ ಭಾರತದ ನೆಲ ಪ್ರವೇಶಿಸಿದಾಗ ತನ್ನ ತಂದೆ ರೈಲು ಸ್ಫೋಟದಲ್ಲಿ ಗಾಯಗೊಂಡ ಸುದ್ದಿ ತಿಳಿಯಿತು. ಗಾಯಾಳುಗಳಿಂದ ಕಿಕ್ಕಿರಿದು ತುಂಬಿದ್ದ ಆ ವಾರ್ಡು ಆತನಿಗೆ ಪರಿಸ್ಥಿತಿಯ ಭಯಾನಕ ಚಿತ್ರಣವನ್ನು ಕಟ್ಟಿಕೊಟ್ಟಿತ್ತು! ಮೈ ತುಂಬಾ ಬ್ಯಾಂಡ್-ಏಡ್ ಹಾಕಿಕೊಂಡ ಆತನ ತಂದೆ ಕಂಪಿಸುತ್ತಿದ್ದ. ಆಸ್ಪತ್ರೆಯಿಂದ ಹೊರಬಂದಾಗಲೂ ಆತನಿಗೆ ತನ್ನ ಅಂಗಹೀನ ತಂದೆಯ ಚಿತ್ರವೂ, ಅಸಂಖ್ಯಾತ ಹಿಂದೂಗಳ ಅಸಹಾಯಕ ಚಿತ್ರವೇ ಕಾಣುತ್ತಿತ್ತು, ಕಾಡುತ್ತಿತ್ತು! ಅವನಾಗಲೇ "ಸೇಡು ತೀರಿಸದೇ ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ. ಅವನು ಮದನ್ ಲಾಲ್ ಪಹವಾ! (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)













ಬುಧವಾರ, ಡಿಸೆಂಬರ್ 7, 2016

ಯಾರು ಮಹಾತ್ಮ? ಭಾಗ-೨೯

ಯಾರು ಮಹಾತ್ಮ?
ಭಾಗ-೨೯


               ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು ಒಂದು ಹಾಲು ಕರೆವ ದನ ಅಷ್ಟೇ. ಆ ಹಳ್ಳಿಯಲ್ಲಿ 600 ಮುಸ್ಲಿಮರಿದ್ದರೆ. ಹಿಂದೂಗಳ ಸಂಖ್ಯೆ ಕೇವಲ ಐವತ್ತು! ವಿಭಜನೆಯ ಹೊತ್ತಲ್ಲಿ ಒಂದು ದಿನ ಇವರ ಮನೆಯನ್ನು ಸುತ್ತುವರಿದ ಗುಂಪು "ಪಾಕಿಸ್ತಾನ ತ್ಯಜಿಸಿ, ಇಲ್ಲವಾದರೆ ಕೊಲ್ಲುತ್ತೇವೆ" ಎಂದು ಘೋಷಣೆ ಕೂಗಿತು. ಆ ಕುಟುಂಬ ತಕ್ಷಣ ಗ್ರಾಮದ ಸಿಖ್ ಪ್ರಮುಖನ ಮನೆಗೆ ಓಡಿತು. ಆ ಗುಂಪು ಇವರ ಮನೆಗೆ ಬೆಂಕಿ ಹಚ್ಚಿ ಅಟ್ಟಿಸಿಕೊಂಡು ಬಂದಿತು. ನೋಡಿದರೆ ಅಲ್ಲಿದ್ದ ಎಲ್ಲಾ ಸಿಖ್ ಮನೆಗಳು ಆಗಲೇ ಹೊತ್ತಿ ಉರಿಯುತ್ತಿತ್ತು. ಒಬ್ಬ ಸಿಖ್ಖನ ಗಡ್ಡಕ್ಕೆ ಬೆಂಕಿ ಕೊಟ್ಟರು. ಅಂತಹ ಸ್ಥಿತಿಯಲ್ಲೂ ಆತ ಇಟ್ಟಿಗೆಯೊಂದನ್ನು ಬೆಂಕಿ ಹಚ್ಚಿದವನ ತಲೆಗೆ ಗುರಿಯಿಟ್ಟು ಹೊಡೆದು ಕೊಂದು ಗುರುನಾನಕರ ನಾಮಸ್ಮರಣೆ ಮಾಡುತ್ತಾ ಕುಸಿದು ಬಿದ್ದು ಸತ್ತ. ಕುಲದೀಪ್ ಆ ಮನೆಯ ಛಾವಣಿ ಏರಿದ. ಅಲ್ಲಿ ಅಂಗಳದಲ್ಲಿ ಸಿಖ್ ಪುರುಷರನ್ನು ತಲವಾರಿನಿಂದ ಕತ್ತರಿಸುತ್ತಿದ್ದರು. ಅದನ್ನು ಮನೆಯ ಛಾವಣಿ ಮೇಲೆ ನಿಂತು ನೋಡುತ್ತಿದ್ದ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಕ್ಕಿಂತ ಸಾಯುವುದು ಲೇಸು ಎಂದರಿತ ಆ ಮಹಿಳೆಯರ ಗುಂಪು ದೊಡ್ಡ ಬೆಂಕಿಯೊಂದನ್ನು ಹತ್ತಿಸಿ ಮಕ್ಕಳೊಂದಿಗೆ ಅಗ್ನಿಪ್ರವೇಶ ಮಾಡಿದರು. ಆ ಗುಂಪು ಇಬ್ಬರು ಹುಡುಗಿಯರನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕುಲದೀಪ್ ನೋಡಿದ. ಕತ್ತಲೆಯಾಗುತ್ತಿದ್ದಂತೆ ಆತ ಮೆಲ್ಲನೆ ಛಾವಣಿಯಿಂದಿಳಿದು ಮರವೊಂದನ್ನೇರಿ ಆರು ತಾಸು ಕುಳಿತ. ಎಲ್ಲರೂ ಹೋದ ಮೇಲೆ ತಡರಾತ್ರಿ ಮರದಿಂದ ಇಳಿದ ಆತ ಮನೆಯೊಳಗೆ ಬಿದ್ದಿದ್ದ ರಕ್ತಸಿಕ್ತ ಚಾಕುವಿನಿಂದ ತಲೆಗೂದಲನ್ನು ಮುಸ್ಲಿಮರಂತೆ ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್).

               ವಿಭಜನೆಯ ಸಂದರ್ಭದಲ್ಲಿ ಲೆಖ್ಖವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಹಿಂದೂಗಳ ಮನೆಗಳು, ನಿರಾಶ್ರಿತರ ಶಿಬಿರಗಳು, ರೈಲುಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹೊತ್ತೊಯ್ಯಲಾಯಿತು. ಹಿಂದೂ ಮಹಿಳೆಯರ ಸ್ತನಗಳನ್ನು ಕತ್ತರಿಸಿ ಅವರನ್ನು ಕೊಲೆಗೈಯ್ಯಲು ಕರೆದೊಯ್ಯುತ್ತಿದ್ದ ಮತಾಂಧ ಗುಂಪೊಂದನ್ನು ಪಂಜಾಬ್ ಗಡಿ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಯೊಬ್ಬ ಕಣ್ಣಾರೆಕಮ್ಡು ಬೆಚ್ಚಿಬಿದ್ದ. ಮಹಿಳೆಯರನ್ನು ಅಪಹರಿಸಿದ ಬಳಿಕ ಅಪಹರಣಕಾರನ ಮನೆಯಲ್ಲಿ ಉಳಿಸಿಕೊಳ್ಳಲು ಅವರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿತ್ತು. ಗೋಮಾಂಸ ತಿನ್ನಿಸಿ, ಕುರಾನ್ ಹೇಳಿಸಿ ಕೇಕೆ ಹಾಕಿ ಕುಣಿಯಲಾಗುತ್ತಿತ್ತು. ಅವಳ ಹೆಸರು ಬದಲಾಯಿಸಿ ಮುಸ್ಲಿಮ್ ಹೆಸರು ಇಡಲಾಗುತ್ತಿತ್ತು. ಮತ್ತೆ ಸಾಲು ಸಾಲು ಅತ್ಯಾಚಾರ! ಕೆಲವರನ್ನು ಹರಾಜು ಹಾಕಲಾಗುತ್ತಿತ್ತು. ಮಿಯಾನ್ ವಾಲಿಯ ವಕೀಲನ ಮಗಳು ಹದಿನಾರು ವರ್ಷದ ನಂದಲಾಲಳನ್ನು ಅಪಹರಿಸಿ ಆ ಗ್ರಾಮದ ಮುಸ್ಲಿಮ್ ಪ್ರಮುಖನ ಮನೆಗೆ ಒಯ್ಯಲಾಯಿತು. ಆಕೆಗೆ ಹೊಡೆದು ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಕುರಾನ್ ಸಾಲುಗಳನ್ನು ಹೇಳಿ ಪುನರಾವರ್ತಿಸುವಂತೆ ಒತ್ತಾಯಿಸಲಾಯಿತು. ಆಕೆಯ ಹೆಸರು ಬದಲಾಯಿಸಿ "ಅಲ್ಲಾ ರಕಿಯಾ"(ದೇವರಿಂದ ರಕ್ಷಿಸಲ್ಪಟ್ತವಳು) ಎಂಬ ಹೆಸರಿಡಲಾಯಿತು. ಆಕೆಯನ್ನು ಹರಾಜು ಹಾಕಿದಾಗ ಮರಕೆಲಸದವನೊಬ್ಬ ಆಕೆಯನ್ನು ಖರೀದಿಸಿದ. ಪೂರ್ವ ಮತ್ತು ಪಶ್ಚಿಮ ಪಂಜಾಬಿನ ಹಳ್ಳಿಹಳ್ಳಿಗಳನ್ನೇ ದೋಚಲಾಯಿತು. ದೋಚಿದ ವಸ್ತುಗಳನ್ನು ಮುಸ್ಲಿಮರೊಳಗೆ ಹಂಚಲಾಗುತ್ತಿತ್ತು. ಶಿಶುಗಳನ್ನು ಅಪ್ಪಿಕೊಂಡಿದ್ದಂತೆಯೇ ಪುರುಷ ಸ್ತ್ರೀಯರನ್ನು ಹತ್ಯೆಗೈಯಲಾಯಿತು. ಹಳ್ಳಿಗಳೆಲ್ಲಾ ಹೊತ್ತಿ ಉರಿಯುತ್ತಿದ್ದವು. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್ ; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ).

          ಇದೇ ರೀತಿಯ ಹತ್ಯೆ, ಅತ್ಯಾಚಾರಗಳು ಪೂರ್ವ ಬಂಗಾಲದಲ್ಲೂ ನಡೆದವು. ಝೇಲಂನಲ್ಲಿ ಪುರುಷರನ್ನು ಬೇರ್ಪಡಿಸಿ ಗರಗಸದಿಂದ ಕೊಯ್ಯಲಾಯಿತು. ಒಂದು ವರದಿಯ ಪ್ರಕಾರ ಗುಜರಾತ್ ಪ್ರದೇಶದಲ್ಲೇ ಅಪಹರಣಕ್ಕೊಳಗಾದ ಹುಡುಗಿಯರ ಸಂಖ್ಯೆ 4000. ಅವರನ್ನು ಹರಾಜು ಹಾಕಲಾಯಿತು. ವರದಿಯಾಗದಿದ್ದುದೆಷ್ಟೋ? ಭಾರತದ ಸೀಮೆಯೊಳಗಿದ್ದ ಗುಜರಾತಿನಲ್ಲೇ ಈ ಪರಿಸ್ಥಿತಿಯಾದರೆ ಪಾಕಿಸ್ತಾನಕ್ಕೆ ಸೇರಿದ್ದ ಪ್ರಾಂತ್ಯಗಳಲ್ಲಿ ಹಿಂದೂಗಳ ಬದುಕು ಅದೆಷ್ಟು ಶೋಚನೀಯವಾಗಿರಲಿಕ್ಕಿಲ್ಲ? (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್ ಬಾಲಿ)

         ಪಶ್ಚಿಮ ಪಾಕಿಸ್ತಾನದ ಹಳ್ಳಿಯೊಂದರಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಮತಾಂಧ ಗುಂಪುಗಳ ವಿರುದ್ಧ ಸರ್ದಾರ್ ಪ್ರತಾಪ ಸಿಂಗ್ ಬಳಗ ತಿರುಗಿ ಬಿತ್ತು. ಮೂರು ದಿನಗಳವರೆಗೆ ಹೋರಾಡಿದ ಅವರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದ್ದಂತೆ ಶರಣಾಗಬೇಕಾಯಿತು. ಕೂಡಲೆ ಅವರಿಗೆ ಮತಾಂತರವಾಗುವಂತೆ ಸೂಚಿಸಲಾಯಿತು. ಬೇಡಿಕೊಂಡಾಗ ಮರುದಿನದವರೆಗೆ ಅವಕಾಶ ನೀಡಲಾಯಿತು. ಮರುದಿನ ಬೆಳ್ಳಂಬೆಳಗ್ಗೆ ಆ ಗುಂಪು ಇವರನ್ನು ಮತಾಂತರಿಸಲು ಕತ್ತರಿ, ಚಾಕುಗಳೊಂದಿಗೆ ಸಿದ್ಧವಾಗಿ ನಿಂತಿತ್ತು. ಯಾವ ಮಹಿಳೆಯನ್ನು ಯಾರು ಪಡೆಯಬೇಕು ಎನ್ನುವುದರ ಬಗ್ಗೆ ಆ ಮತಾಂಧರು ತಮ್ಮೊಳಗೇ ಜೋರಾಗಿ ಚರ್ಚಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ಮಹಿಳೆಯರು ಮತಾಂತರವಾಗುವ ಮುನ್ನ ತಾವು ಕೊನೆಯ ಬಾರಿಗೆ ಪ್ರಾರ್ಥನೆ ಸಲ್ಲಿಸುವುದಾಗಿಯೂ, ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಬಾವಿಯ ನೀರು ಕುಡಿಯಲು ಅನುಮತಿ ನೀಡಬೇಕಂದು ಪ್ರಾರ್ಥಿಸಿದರು. ಅದಕ್ಕೆ ಒಪ್ಪಿದ ಗುಂಪು ಕೆಲವೊಂದು ಜನರ ಕಾವಲಿನಲ್ಲಿ ಆ 74 ಮಹಿಳೆಯರನ್ನು ಬಾವಿಯ ಬಳಿ ಕಳುಹಿಸಿಕೊಟ್ಟಿತು. ಸ್ನಾನ ಮಾಡಿ ಪ್ರಾರ್ಥನೆ ಆರಂಭಿಸಿದ ಆ ಮಹಿಳೆಯರು ಜೋರಾಗಿ "ಧೈರ್ಯವಿದ್ದರೆ ಮುಂದೆ ಬನ್ನಿ, ನೀವು ನಮ್ಮ ಮೈ ಮುಟ್ಟಲೂ ಸಾಧ್ಯವಿಲ್ಲ" ಎಂದು ಘರ್ಜಿಸುತ್ತಾ ಬಾವಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡರು. ಆ ಬಲಿದಾವನ್ನು ಕಂಡ ಅಂತಹ ಮತಾಂಧ ಪಡೆಯೂ ಬೆಚ್ಚಿಬಿತ್ತು. ಅದು ಮತಾಂತರಗೊಳಿಸಲು ಉದ್ದೇಶಿಸಿದ್ದ ಪುರುಷರನ್ನು ಅಲ್ಲೇ ಬಿಟ್ಟು ಪರಾರಿಯಾಯಿತು. ಗಾಂಧಿಯ ಕಾರ್ಯದರ್ಶಿ ಪ್ಯಾರೇಲಾಲ್ ಈ ಘಟನೆಯನ್ನು ಗಾಂಧಿಗೆ ತಿಳಿಸಿದಾಗ ಆತ "ಅಹಿಂಸಾತ್ಮಕ ಧೈರ್ಯ ಎಂದೂ ವಿಫಲವಾಗುವುದಿಲ್ಲ. ಪರಿಸ್ಥಿತಿ ತೀರಾ ಪ್ರತಿಕೂಲವಾಗಿದ್ದಾಗ ದೇವರೇ ನೆರವಿಗೆ ಬರುತ್ತಾನೆ" ಎಂದು ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ). ಕಚ್ಛೆಹರುಕ ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವಾದುದೇನಲ್ಲ. ನಾಗರಿಕತೆಯ ಲವಲೇಶವೂ ಇಲ್ಲದ ವ್ಯಕ್ತಿಯಾದರೂ ಈ ಘಟನೆಗೆ ಬೆಚ್ಚಿಬಿದ್ದು ಕನಿಷ್ಟ ಸಹಾನುಭೂತಿಯನ್ನಾದರೂ ಪ್ರಕಟಿಸುತ್ತಿದ್ದ. ಆದರೆ ಮಾನವುಳಿಸಿಕೊಳ್ಳಲು ಆ ಹೆಂಗಸರು ಮಾಡಿದ ಬಲಿದಾನವೂ ಅಹಿಂಸೆಯ ದ್ಯೋತಕವಾಗಿ ಕಂಡಿತು. ಸಹಾನುಭೂತಿಯ ಕನಿಷ್ಟ ಒಂದು ಉದ್ಗಾರವೂ ಅವರಿಂದ ಹೊರಬರಲಿಲ್ಲ. ಮುಸ್ಲಿಮರಿಂದ ತೊಂದರೆಗೀಡಾಗುವುದೇ ಅವರ ಅಹಿಂಸೆಯೇ? ಆ ಲೆಖ್ಖದಲ್ಲಿ ಅದೆಷ್ಟು ಅಹಿಂಸಾತ್ಮಕ ಧೈರ್ಯ ವಿಫಲವಾಗಿಲ್ಲ? ಅದೆಷ್ಟು ಮಹಿಳೆಯರ ಅತ್ಯಾಚಾರವಾಗಿಲ್ಲ? ಈ ಅಹಿಂಸಾತ್ಮಕ ಧೈರ್ಯಗಳೆಲ್ಲಾ ವಿಫಲವಾದುದೇಕೆ ಎನ್ನುವ ಪ್ರಶ್ನೆಗೆ ಗಾಂಧಿಯ ಬಳಿ ಉತ್ತರವಿದೆಯೇ? ಈ ಸಂದರ್ಭಗಳಲ್ಲೆಲ್ಲಾ ಗಾಂಧಿ ಹೇಳುವ ದೇವರು ಯಾಕೆ ಕಾಪಾಡಲಿಲ್ಲ? ವಿಭಜನೆಯನ್ನು ತಪ್ಪಿಸುವ ಅವಕಾಶವಿದ್ದಾಗ್ಯೂ ಅದನ್ನು ಮಾಡದೆ ಕೈಕಟ್ಟಿ ಕುಳಿತ ವ್ಯಕ್ತಿ ಸಾಲುಸಾಲು ಅತ್ಯಾಚಾರಗಳು, ಕೊಲೆಗಳು, ಅಪಹರಣ, ದರೋಡೆಗಳಾಗುತ್ತಿದ್ದಾಗ ತನ್ನದೇ ತಥಾಕಥಿತ ಅಹಿಂಸೆಯನ್ನು ವೈಭವೀಕರಿಸುತ್ತಾನೆ ಎಂದಾದರೆ ಅತನಿಗೆ ಅರಳುಮರಳು ಎನ್ನದಿರಲಾದೀತೇ? ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!






ಮಂಗಳವಾರ, ಡಿಸೆಂಬರ್ 6, 2016

ಯಾರು ಮಹಾತ್ಮ? ಭಾಗ-೨೮

ಯಾರು ಮಹಾತ್ಮ?
ಭಾಗ-೨೮

          ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು. ಸ್ಟೇಷನ್ ಮಾಸ್ಟರ್ ಚಾನಿ ಸಿಂಗ್ ಎಂದಿನಂತೆ ಆಗಸ್ಟ್ ಹದಿನೈದರ(1947) ಮಧ್ಯಾಹ್ನ 10 ಡೌನ್ ಎಕ್ಸ್ ಪ್ರೆಸ್ ಬರುತ್ತಿದೆ ಎಂದು ಬಾವುಟ ಹಾರಿಸುತ್ತಾ ಸೂಚನೆ ನೀಡಿದ. ರೈಲು ಬಂತು. ಎಲ್ಲಾ ಬೋಗಿಗಳ ಕಿಟಕಿ ಬಾಗಿಲುಗಳು ತೆರೆದೇ ಇದ್ದವು. ಯಾರೊಬ್ಬರೂ ಇಳಿದು ಬರಲಿಲ್ಲ. ಯಾರೊಬ್ಬರೂ ಕಾಣಲಿಲ್ಲ. ಚಾನಿ ಸಿಂಗ್ ಮೊದಲನೇ ಬೋಗಿ ಹತ್ತಿದವನೇ ಭೂತ ಬಡಿದವನಂತೆ ನಿಂತುಬಿಟ್ಟ. ಚೆಂಡಾಡಿದ್ದ ರುಂಡಗಳು, ಕೊಚ್ಚಿ ಹಾಕಿದ್ದ ಕೈಕಾಲುಗಳು, ಚೆಲ್ಲಾಡಿದ್ದ ಮಾನವ ಶರೀರಗಳು! ಅದರ ನಡುವೆ ಕ್ಷೀಣ ದನಿಯೊಂದು ಕೇಳಿತು. ಎಲ್ಲೋ ಯಾರೋ ಬದುಕಿದ್ದಾರೆ ಎಂದು ತಿಳಿದ ಆತ "ನೀವೀಗ ಅಮೃತಸರದಲ್ಲಿದ್ದೀರಿ. ಇಲ್ಲಿ ನಾವು ಹಿಂದೂಗಳು ಹಾಗೂ ಸಿಖ್ಖರೇ ಇದ್ದೇವೆ. ಪೊಲೀಸರೂ ಇದ್ದಾರೆ. ಭಯಪಡಬೇಡಿ" ಎಂದು ಕೂಗಿದ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಮುಂದುವರಿದು ಹೋದ ಚಾನಿ ಸ್ತಂಭೀಭೂತನಾಗಿ ನಿಂತುಬಿಟ್ಟ. ಆತ ಆ ದೃಶ್ಯವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಮುಂಡದಿಂದ ಬೇರ್ಪಡಿಸಿದ ತನ್ನ ಗಂಡನ ರುಂಡವನ್ನು ಕರಾಗ್ರದಲ್ಲಿ ಹಿಡಿದು ಕಂಪಿಸುತ್ತಿದ್ದಳು. ಕೊಲೆಗೀಡಾದ ತಾಯಂದಿರ ಶವವನ್ನು ಅಪ್ಪಿಕೊಂಡು ಮಕ್ಕಳು ರೋದಿಸುತ್ತಿದ್ದವು. ಶವಗಳ ರಾಶಿಯಿಂದ ಯಾರೋ ಮಗುವೊಂದನ್ನು ಹೊರಗೆಳೆದರು. ಆದರೆ ಸಿಕ್ಕಿದ್ದು ಮುಂಡ ಮಾತ್ರ! ಸ್ಟೇಷನ್ ಮಾಸ್ಟರ್ ನಂಬ್ ಬೋಗಿಯಿಂದ ಬೋಗಿಗೆ ಸಾಗಿದವ ಪ್ರತೀ ಬೋಗಿಯಲ್ಲೂ ಆ ಭೀಷಣತೆ ಕಂಡು ಬವಳಿ ಬೀಳುವಂತಾದ. ಆತ ರೈಲಿನಿಂದ ಹೊರಬಂದವನೇ ಏನೋ ಅನ್ನಿಸಿ ರೈಲಿನತ್ತ ನೋಡುತ್ತಾನೆ - ಕೊನೇ ಬೋಗಿಯ ಮೇಲೆ ಬಿಳಿಯ ಕಾಗದದಲ್ಲಿ "ನೆಹರೂ ಮತ್ತು ಪಟೇಲ್'ಗೆ ಈ ರೈಲು ನಮ್ಮ ಸ್ವಾತಂತ್ರ್ಯದ ಕಾಣಿಕೆ" ಎಂಬ ಒಕ್ಕಣೆಯಿತ್ತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        1947 ಆಗಸ್ಟ್ 11. ಲಾಹೋರಿನಲ್ಲಿದ್ದ ಹಿಂದೂಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಲಾರಂಭಿಸಿದ್ದರು. ಹಿಂದೂಗಳನ್ನು ತುಂಬಿಕೊಂಡು ರಾವಲ್ಪಿಂಡಿಯಿಂದ ಬರುತ್ತಿದ್ದ ಸಿಂಧ್ ಎಕ್ಸ್ ಪ್ರೆಸ್ ರೈಲನ್ನು ಅದರ ಮುಸ್ಲಿಮ್ ಚಾಲಕ ಉದ್ದೇಶಪೂರ್ವಕವಾಗಿ ಬಾದಾಮಿ ಬಾಗ್ ಮತ್ತು ಲಾಹೋರದ ನಿಲ್ದಾಣಗಳಲ್ಲಿ ನಿಲ್ಲಿಸಿದ. ಕೈಗೆ ಸಿಕ್ಕಿದ್ದನ್ನು ಹಿಡಿದು ಉನ್ಮತ್ತರಂತೆ ಅನೇಕ ಮುಸ್ಲಿಮರ ಗುಂಪುಗಳು ರೈಲನ್ನು ನಾಲ್ದೆಸೆಗಳಂದ ಸುತ್ತುವರಿದವು. ರೈಲಿನಲ್ಲಿದ್ದ ಹಿಂದೂಗಳೆಲ್ಲರನ್ನೂ ಕೊಚ್ಚಿ ಹಾಕಲಾಯಿತು. ಅವರು ಜೊತೆಗೆ ಒಯ್ಯುತ್ತಿದ್ದ ಸ್ವತ್ತುಗಳೆಲ್ಲ ಆ ಲೂಟಿಕೋರರ ಕೈ ಸೇರಿತು. ಬೆಹ್ರಾ, ಪಿಂಡ್-ದಡಾನ್, ಮಿಯಾನಿಯ ಹಿಂದೂಗಳು ತಮ್ಮ ಸ್ವತ್ತುಗಳೊಂದಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆಯೊಂದಿಗೆ ಅಮೃತಸರಕ್ಕೆ ತೆರಳುತ್ತಿದ್ದರು. ಕಾಮೋಕೆ ರೈಲು ನಿಲ್ದಾಣ ದಾಟಿದ ಕೂಡಲೆ ರೈಲನ್ನು ನಿಲ್ಲಿಸಲಾಯಿತು. ಜೊತೆಗಿದ್ದ ಸೈನಿಕರು ಕ್ಷಣಾರ್ಧದಲ್ಲಿ ಅದೃಶ್ಯರಾದರು. ಎಲ್ಲರನ್ನೂ ಕೊಚ್ಚಿ ಕೊಲ್ಲಲಾಯಿತು. ಸಂಪತ್ತನ್ನೆಲ್ಲಾ ದೋಚಲಾಯಿತು. ರೈಲು ಅಮೃತಸರ ತಲುಪಿದಾಗ ಶವಗಳಿಂದ ತುಂಬಿತ್ತು. ರೈಲ್ವೇ ಬೋಗಿಗಳಲ್ಲಿ ಅರ್ಧ ಇಂಚಿನಷ್ಟು ರಕ್ತ ಚೆಲ್ಲಾಡಿಹೋಗಿತ್ತು. 1947ರ ಆಗಸ್ಟ್ 14 ಭಾರತದ ಬೇರೆ ಭಾಗಗಳಿಗೆ ಸಂತಸದ ದಿನವಾಗಿದ್ದರೆ ಲಾಹೋರ್ ಮತ್ತು ಪಶ್ಚಿಮ ಪಂಜಾಬಿನ ಹಿಂದೂಗಳಿಗೆ ಸರ್ವನಾಶದ ದಿನವಾಗಿತ್ತು. (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್. ಬಾಲಿ; ದಿ ಪಾರ್ಟಿಷನ್ ಆಫ್ ಇಂಡಿಯಾ - ಜಿ. ಬಿ. ಸುಬ್ಬರಾವ್).

          ಕತ್ತಲೆ ಗವಿಯಂತಿದ್ದ ಲಾಹೋರ್ ರೈಲ್ವೇ ನಿಲ್ದಾಣದಲ್ಲಿ ಬಾಂಬೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣಿಸಲು ಕೆಲ ಆಂಗ್ಲರು ಬರುತ್ತಿದ್ದರು. ಅಲ್ಲಿ ಕೆಲ ಸಿಬ್ಬಂದಿ ಪ್ಲಾಟ್ ಫಾರ್ಮನ್ನು ನೀರು ಹಾಯಿಸಿ ಸ್ವಚ್ಛಗೊಳಿಸುತ್ತಿದ್ದರು. ಕೆಲವೇ ಗಂಟೆಗಳ ಹಿಂದೆ ಭಾರತಕ್ಕೆ ತೆರಳುತ್ತಿದ್ದ ಹಿಂದೂಗಳನ್ನು ಅಟ್ಟಾಡಿಸಿ ಕೊಲ್ಲಲಾಗಿತ್ತು. ಕೆಲವೇ ಗಂಟೆಗಳ ಹಿಂದೆ ಲಾಹೋರ್ ಪೊಲೀಸ್ ಜವಾಬ್ದಾರಿಯನ್ನು ಹಸ್ತಾಂತರಿಸಿ ರೈಲು ಹತ್ತಲು ಬರುತ್ತಿದ್ದ ಬಿಲ್ ರಿಚ್'ನಿಗೆ ಕಾದಿದ್ದು ಇಂತಹ ಸ್ವಾಗತ! ಆತನ ಎದುರೇ ಪೋರ್ಟರುಗಳು ಲಗೇಜ್ ಗಾಡಿಗಳಲ್ಲಿ ಶವಗಳನ್ನು ಹೇರಿಕೊಂಡು ಹೋಗಿ ವ್ಯಾನಿಗೆ ತುಂಬುತ್ತಿದ್ದರು. ಆತ ಶವವೊಂದನ್ನು ದಾಟಿಕೊಂಡೇ ಮೆಟ್ಟಿಲು ಹತ್ತಬೇಕಾಯಿತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        ಗೂರ್ಖಾ ಪಡೆಯೊಂದಿಗೆ ಕ್ಯಾಪ್ಟನ್ ರಾಬರ್ಟ್ ಅಟ್ಕಿನ್ಸನ್ ಲಾಹೋರ್ ನಗರಕ್ಕೆ ಬಂದಾಗ ಮತಾಂಧತೆಯ ಆಟಾಟೋಪಕ್ಕೆ ಹೆದರಿ ಕಂಗಾಲಾಗಿದ್ದ ಹಿಂದೂ ಜನತೆ ಎದೆಗೆ ಮಕ್ಕಳನ್ನು ಅವುಚಿಕೊಂಡು, ಕಂಕುಳಲ್ಲಿ ತಮ್ಮ ಸೀಮಿತ ವಸ್ತುಗಳನ್ನು ಹಿಡಿದುಕೊಂಡು ಸುತ್ತುವರಿಯಿತು. ತಮಗೆ ರಕ್ಷಣೆ ನೀಡುವಂತೆ ಅವರು ಅಟ್ಕಿನ್ಸನಿಗೆ ಅಂಗಲಾಚಿದರು. ಹಳೇ ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಕ್ಕೂ ಮಿಗಿಲಾದ ಸಂಖ್ಯೆಯ ಹಿಂದೂಗಳು ಸುತ್ತ ಬೆಂಕಿ ಜ್ವಾಲೆ, ಅನ್ನ-ನೀರುಗಳಿಲ್ಲದೆ ತಮ್ಮ ಮೊಹಲ್ಲಾದ ಒಳಗೆ ಕುಳಿತುಕೊಳ್ಳುವ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದರು. ಸುತ್ತುವರಿದಿದ್ದ ಬೆಂಕಿಯ ಕೆನ್ನಾಲಿಗೆಗಿಂತಲೂ ಹೆಚ್ಚಾಗಿ ಹೊರಗಡೆ ಸುಳಿದಾಡುತ್ತಿದ್ದ ಮುಸ್ಲಿಮ್ ಗುಂಪುಗಳೇ ಘಾತಕವಾಗಿದ್ದವು. ಯಾರಾದರೂ ಹೊರಬಂದಾಕ್ಷಣ ಎರಗಲು ಆ ಗುಂಪುಗಳು ಸಿದ್ಧವಾಗಿದ್ದವು. ಷಾ ಅಲಿಮಿ ಗೇಟ್ ಪಕ್ಕದಲ್ಲಿದ್ದ ಗುರುದ್ವಾರಕ್ಕೆ ಮತಾಂಧ ಮುಸ್ಲಿಮರ ಗುಂಪು ಬಂದು ಬೆಂಕಿ ಇಟ್ಟಿತು. ಒಳಗಿದ್ದ ನೂರಾರು ಸಿಖ್ಖರು ಜೀವಂತ ಸುಟ್ಟು ಹೋದರು. ಅವರ ಆಕ್ರಂದನ ಕೇಳಿ ಹೊರಗಿದ್ದ ಗುಂಪು ಕೇಕೆ ಹಾಕಿ ಕುಣಿಯುತ್ತಿತ್ತು.(ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್)

                ಲಾಹೋರಿನ ಕಾಲುವೆಗಳು ರಕ್ತದಿಂದ ಕೆಂಪಾಗಿದ್ದವು. ಹಿಂದೂಗಳ ವಾಸದ ಓಣಿಗಳಲ್ಲಿ ಮುಗಿಲು ಮುಟ್ಟುತ್ತಿದ್ದ ಬೆಂಕಿಯ ಕೆನ್ನಾಲಿಗೆಗಳನ್ನು ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಮುಸ್ಲಿಂ ಲೀಗ್ ನಾಯಕರ ಮಾತುಗಳಿಂದ ಉತ್ತೇಜಿತಗೊಂಡಿದ್ದ ಮತಾಂಧರು "ಪಾಕಿಸ್ತಾನ ನಮ್ಮದೂ ಎಂದಾದರೆ ಹಿಂದೂಗಳ ಜಮೀನು, ಮನೆ, ಅಂಗಡಿ ಎಲ್ಲವೂ ನಮ್ಮದೇ" ಎಂದು ಭಾವಿಸಿದರು. ಪಾಕಿಸ್ತಾನದಲ್ಲಿ ಕಾಫಿರರಿಗೆ ಜಾಗವಿಲ್ಲ ಎಂದು ಜಿಹಾದ್ ಘೋಷಿಸಿಯೇ ಬಿಟ್ಟಿದ್ದರು. ಲೈಲಾಪುರದ ಜವಳಿ ಕಾರ್ಖಾನೆಯೊಂದರಲ್ಲಿ ಮುಸ್ಲಿಮ್ ಕೆಲಸಗಾರರು ತಮ್ಮ ಜೊತೆಯಲ್ಲಿದ್ದ ಹಿಂದೂ ಕೆಲಸಗಾರರನ್ನು ಕೊಚ್ಚಿ ಕೊಂದರು. ಅಲ್ಲಿನ ನೀರಾವರಿ ಕಾಲುವೆಯೊಂದು ಹಿಂದೂಗಳ ಶವ ಹಾಗೂ ರಕ್ತದಿಂದ ಕೆಂಪಾಗಿ ತುಂಬಿದ್ದನ್ನು ಕಣ್ಣಾರೆ ಕಂಡರೂ ನಂಬದಾದ ಕ್ಯಾಪ್ಟನ್ ಅಟ್ಕಿನ್ ಸನ್. ಶೇಖ್ ಪುರದ ಶಾಂತಿ ಸಮಿತಿ ಸದಸ್ಯನೂ, ಮುನ್ಸಿಪಲ್ ಕಮೀಷನರೂ ಆಗಿದ್ದ ಸ್ವಾಮಿ ನಂದ ಸಿಂಗನ ತಲೆಯನ್ನು ಮುಸ್ಲಿಂ ಲೀಗ್ ಸದಸ್ಯನೊಬ್ಬ ತನ್ನ ಖಡ್ಗದಿಂದ ಕತ್ತರಿಸಿ ಮುಸ್ಲಿಂ ಲೀಗ್ ಧ್ವಜಕ್ಕೆ ಅಂತಿಸಿಕೊಂಡು "ಮುಸ್ಲಿಂ ಲೀಗ್ ಜಿಂದಾಬಾದ್" ಎಂದು ಘೋಷಣೆ ಕೂಗಿದ. ಅದೇ ಸ್ಥಿತಿಯಲ್ಲಿ ಬೀದಿಬೀದಿಗಳಲ್ಲಿ ಮೆರವಣಿಗೆಯನ್ನೂ ಗೈಯಲಾಯಿತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).





ಸೋಮವಾರ, ಡಿಸೆಂಬರ್ 5, 2016

ಯಾರು ಮಹಾತ್ಮ? ಭಾಗ-೨೭

ಯಾರು ಮಹಾತ್ಮ?
ಭಾಗ-೨೭


            ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ "ಸಾಮೂಹಿಕ ಹತ್ಯೆ, ಭೀಕರ ಅತ್ಯಾಚಾರ, ಅಪಹರಣ, ಮತಾಂತರ, ಲೂಟಿ-ದರೋಡೆ, ಬಲಾತ್ಕಾರಗಳ" ಭಯಾನಕ ಊಹಿಸಲಾಸಾಧ್ಯವಾದ ಘಟನೆಗಳ ಕಪ್ಪು ಚುಕ್ಕೆಗಳಿವೆ. ವಾಸ್ತವದಲ್ಲಿ ಆ ಕಪ್ಪು ಚುಕ್ಕೆಗಳು ತಮ್ಮ ಸಂಖ್ಯಾ ಬಲದಿಂದ ಸ್ವಾತಂತ್ರ್ಯವೆಂಬ ಬಿಳಿ ಹಾಳೆಯನ್ನು ಮುಚ್ಚಿ ಬಿಟ್ಟಿವೆ. ಆದರೆ ಪ್ರಸಿದ್ಧಿಯ ಹುಚ್ಚು, ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂದಿತು ಎಂಬ ಮುಗಿಲುಮುಟ್ಟುವ ಘೋಷಣೆ, ಅಧಿಕಾರ ದಾಹಗಳ ಮಾಯೆ ಈ ಕಪ್ಪು ಬಣ್ಣವನ್ನು ಮರೆಮಾಚಿ ಬಿಳಿಯ ಬಣ್ಣವನ್ನು ಕಾಣಿಸುವ ಪ್ರಯತ್ನ ನಡೆಸಿದೆ. ಆದರೆ ಅವಿದ್ಯೆ ಎನ್ನುವುದು ಎಷ್ಟು ಕಾಲ ಉಳಿದೀತು? ಜ್ಞಾನವನ್ನು ಪಡೆದ ಆತ್ಮದಲ್ಲಿ ಮಾಯೆಯ ಛಾಯೆಯೂ ಉಳಿಯದಂತೆ ಈ ಮಾಯೆ ನಿಧಾನವಾಗಿ ಕರಗಿ ಇತಿಹಾಸದ ನೈಜತ್ವ ಅನವರತ ಅನಾವರಣವಾಗುತ್ತಲೇ ಇದೆ. ವಿಭಜನೆಯ ಭೂತಕ್ಕೆ ಮತಾಂಧತೆಯ ಲೇಪ ಸಿಕ್ಕಿದಾಗ ಕಾರುವ ರಕ್ತದಂತೆ ಭಾರತಾದ್ಯಂತ ನೆತ್ತರ ಕಾಲುವೆ ಹರಿದದ್ದು ಈಗ ನಿಧಾನವಾಗಿ ಕಣ್ಣ ಪೊರೆಯನ್ನೊಗೆದು ಕಾಣುತ್ತಿದೆ. ಹೌದು 1947ರ ಆಗಸ್ಟ್ 15ರಂದು ದೇಶದ ಒಂದು ಗುಂಪು ರಾಷ್ಟ್ರಧ್ವಜ ಹಾರಿಸುತ್ತಾ ಆನಂದ ಭಾಷ್ಫ ಸುರಿಸುತ್ತಿದ್ದರೆ ಇನ್ನೊಂದು ಬೃಹತ್ ಗುಂಪು ತಮ್ಮ ಪತ್ನಿ-ಪುತ್ರ-ಪುತ್ರಿ-ಸಂಬಂಧಿಕರನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿತ್ತು. ಒಂದೇ ದೇಶದಲ್ಲಿ, ಏಕ ಉದ್ದೇಶವಿದ್ದ, ಏಕ ಭಾವವಿದ್ದ, ಏಕ ರೀತಿಯ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರಲ್ಲಿ ಉದ್ದೇಶ ಈಡೇರಿಕೆಯ ಸಂದರ್ಭದಲ್ಲಿ ಕಂಡುಬಂದ ಈ ವೈರುಧ್ಯ ಬೇರಾವ ದೇಶದಲ್ಲೂ ಕಂಡುಬರಲಿಕ್ಕಿಲ್ಲ, ಬರಲೂ ಬಾರದು!


            ಇದಕ್ಕೂ ಗಾಂಧಿಗೂ ಏನು ಸಂಬಂಧ ಅನ್ನಬಹುದು. ವಿಭಜನೆಯನ್ನು ಒಪ್ಪಲಾರೆ, ಮಾಡಿದರೆ ಎನ್ನ ದೇಹದ ಮೇಲೆ ಎಂದು ಸೋಗು ಹಾಕಿ, ಕೊನೆಗೆ ವಿಭಜನೆಗೆ ಒಪ್ಪಿ, ಜನರನ್ನು ಒಪ್ಪಿಸಲು ಯತ್ನಿಸಿ; ಜನ, ವಿಭಜನೆಯ ವಿರುದ್ಧ ಹೋರಾಡಿ, ನಾವಿದ್ದೇವೆ ನಿಮ್ಮ ಬೆನ್ನ ಹಿಂದೆ ಎಂದಾಗ ಮುಗುಮ್ಮಾಗಿ ಉಳಿದು, ಮತಾಂಧ ಮುಸ್ಲಿಮರನ್ನು ಇನ್ನೇನು ಹಿಂದೂಗಳು ಶಿಕ್ಷಿಸುತ್ತಾರೆ ಎಂದಾಗ ಉಪವಾಸ ಕೂತು; ವಿಭಜನೆಗೆ ಪರೋಕ್ಷ ಕಾರಣನೂ ಆದ ವ್ಯಕ್ತಿ ಈ ರಕ್ತದೋಕುಳಿಗೆ ಕಾರಣನೂ ಆಗುತ್ತಾನಲ್ಲ. ಒಬ್ಬ ನಾಯಕ ಎಚ್ಚರತಪ್ಪಿ ನಡೆದರೆ ಏನಾಗಬಹುದು ಎನ್ನುವುದಕ್ಕೆ ನಿದರ್ಶನ ಗಾಂಧಿ. ಆದರೆ ಇಂತಹ ರಕ್ತಪಾತಕ್ಕೆ ಗಾಂಧಿ ಯಾವ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ. ಹಿಂದೂಗಳಿಗೆ ಸಾಂತ್ವನವನ್ನೂ ಹೇಳಲಿಲ್ಲ. ಬದಲಾಗಿ ಯಾರು ಹಿಂದೂಗಳ ಅತ್ಯಾಚಾರ-ಕೊಲೆ-ಮತಾಂತರಕ್ಕೆ ಕಾರಣರಾದರೋ ಅವರ ಸಲುವಾಗಿ ಉಪವಾಸ ಕೂತರು. ಅಂತಹ ವ್ಯಕ್ತಿಯ ಆಚರಣೆಯೇ "ಜಾತ್ಯಾತೀತತೆ" ಎಂಬ ಪದದೊಳಗೆ ನುಸುಳಿ ಆ ಪದವೇ ಅಪಭೃಂಶಗೊಂಡಿತು. ಅವರ ಅನುಯಾಯಿಗಳು ಇದನ್ನೇ ಗಾಂಧಿವಾದ ಎಂದು ಹೆಸರಿಟ್ಟು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ಮಾಡುತ್ತಲೇ ಇದ್ದಾರೆ!


ವಿಭಜನೆಯ ದುರಂತ ಕಥೆಗಳು:
                   ಭಾರತ ವಿಭಜನೆಯೆಂದರೆ ಕೇವಲ ಎರಡು ಭೂಭಾಗಳ ನಡುವೆ ಬೇಲಿ ಕಟ್ಟಿಕೊಂಡುದುದಲ್ಲ. ಅಲ್ಲಿನ ಹಿಂದೂಗಳು ಇಲ್ಲಿಗೂ, ಇಲ್ಲಿನ ಮುಸ್ಲಿಮರೂ ಅಲ್ಲಿಗೂ ಎನ್ನುವ ಪಲ್ಲಟನವೂ ಜೊತೆಗಿತ್ತು. ಅದರ ಜೊತೆಗೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಸಾವಿರಾರು ಮಹಿಳೆಯರ ಅಪಹರಣ-ಮತಾಂತರ-ಭೀಕರ ಅತ್ಯಾಚಾರದ ಭೀಷಣತೆಯೂ ಸೇರಿಕೊಂಡಿತು. ಮೊದಲನೆಯದ್ದು ಭಾರತೀಯರಿಗೆ ಬ್ರಿಟಿಷರ ಕೊಡುಗೆ! ಎರಡನೆಯದ್ದು ಬ್ರಿಟಿಷ್-ಮುಸ್ಲಿಂ ಲೀಗ್-ಕಾಂಗ್ರೆಸ್ ಈ ಮೂವರ ಕೊಡುಗೆ!! ಹಾಗೂ ಮೂರನೆಯದ್ದು ಮತಾಂಧ ಮುಸ್ಲಿಮರ ಹಾಗೂ ಕಾಂಗ್ರೆಸ್ಸಿನ ಕೊಡುಗೆ!!! ಈ ವಿಭಜನೆಯಿಂದಾಗಿ ತಲೆತಲಾಂತರದಿಂದ ನೆರೆಹೊರೆಯಲ್ಲಿ ಬಾಳುತ್ತಿದ್ದ ಕುಟುಂಬಗಳೆರಡು ಒಂದೇ ದಿನದಲ್ಲಿ ಪರಸ್ಪರ ಬದ್ಧದ್ವೇಷಿಗಳಾಗಿಬಿಟ್ಟವು. ಲಾಹೋರ್, ಕರಾಚಿ, ಪೇಷಾವರ್, ರಾವಲ್ಪಿಂಡಿ, ದೆಹಲಿ, ಅಮೃತಸರ, ಬಿಹಾರ, ಬಂಗಾಳಗಳ ವ್ಯಾಪಾರ ಕೇಂದ್ರಗಳು, ಹಳ್ಳಿಗಳು, ಕೃಷಿ ಜಮೀನುಗಳು, ಅಂಗಡಿ-ಮುಂಗಟ್ಟು, ಗುಡಿಸಲು-ಮಹಲುಗಳ ಗೋಡೆಗಳಲ್ಲಿ ಹಸಿರು ಬಣ್ಣ ಬಳಿಯಲ್ಪಟ್ಟಿತು-ನೆಲದಲ್ಲಿ ರಕ್ತದ ಕೋಡಿಯೇ ಹರಿಯಿತು! ಇದು ಲೂಟಿ-ದರೋಡೆಯೂ ಅಲ್ಲ, ಆಂತರಿಕ ಸಮರವೂ ಅಲ್ಲ; ಜಿಹಾದ್ (ಧರ್ಮ ಯುದ್ಧ) ಎನ್ನುವ ಕೂಗು ಮುಗಿಲು ಮುಟ್ಟಿತು. ಆ ಗದಗುಟ್ಟಿಸುವ ಅಟ್ಟಹಾಸದ ಮಧ್ಯೆ ಮುಗಿಲು ಮುಟ್ಟುವ ಹಿಂದೂಗಳ ಆಕ್ರಂದನವೂ ಕೇಳದಾಯಿತು. ರಸ್ತೆಗಳ ಇಕ್ಕೆಲಗಳಲ್ಲಿ ಹಿಂದೂಗಳ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗರ್ಭ ಸೀಳಿ ಹೊರಬರುತ್ತಿರುವ ಮಗುವಿನ ರುಂಡವನ್ನು ಕತ್ತರಿಸಿದ ಸ್ಥಿತಿಯಲ್ಲಿ ರುಂಡ ಹೀನ ತಾಯಿಯ ಶವವೂ ದ್ವೇಷದ ವಿಕಾರತೆಯನ್ನು ಸಾರಿ ಹೇಳುತ್ತಿತ್ತು. ಆಗ ತಾನೆ ಬಿರಿದ ಕುಸುಮಗಳ ಪಕಳೆಗಳು ಛಿದ್ರವಾಗಿ ಬಿದ್ದಿದ್ದವು. ಮೊಗ್ಗನ್ನು ಅರ್ಧದಲ್ಲೇ ಚಿವುಟಲಾಗಿತ್ತು. ಅರಳಿದ ಹೂಗಳ ಬಿಳಿಚಿದ ಮುಖದ ಶವಗಳು ಭೀಷಣತೆಯ ಸಾಕ್ಷಿಗಳಾಗಿದ್ದವು.

          ರಾವಲ್ಪಿಂಡಿ ನಂತರ ಲಾಹೋರ್ ನಗರದಲ್ಲಿ ಹಿಂದೂಗಳ ಭಯಾನಕ ಸಾಮೂಹಿಕ ಹತ್ಯೆ ನಡೆಯಿತು. ಹತ್ಯೆಗೀಡಾದ ಸಾವಿರಾರು ಜನರ ಶವಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅನಾರ್ಕಲಿ ಮಾರುಕಟ್ಟೆಯಂತಹ ವ್ಯವಹಾರ ಸ್ಥಳಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂಗಳು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಪಾರಾಗಲು ಯತ್ನಿಸಿದ ಹಿಂದೂಗಳು ಸೇನೆ ಮತ್ತು ಪೊಲೀಸರ ಗುಂಡಿಗೆ ಬಲಿಯಾದರು. ಸಾವಿರಾರು ಹಿಂದೂಗಳನ್ನು ಸಜೀವ ದಹಿಸಲಾಯಿತು. ಅಳಿದುಳಿದ ಹಿಂದೂಗಳು ಅನ್ನ-ನೀರುಗಳಿಲ್ಲದೆ ಬಳಲಿ ಬಸವಳಿದು ಜೀವವುಳಿಸಿಕೊಳ್ಳಲು ಭಾರತದತ್ತ ಓಡಿ ಬರುತ್ತಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್)


              ಅದು ಹಿಂದೆಂದೂ ಕಾಣದ ಕ್ರೌರ್ಯದ ಪರಮಾವಧಿ. ಮಧ್ಯಯುಗದಲ್ಲಿ ಅಪ್ಪಳಿಸಿದ ಪ್ಲೇಗಿನಂತೆ ಆರು ವಾರಗಳ ಕಾಲ ಇಡೀ ಉತ್ತರ ಭಾರತಾದ್ಯಂತ ಕೊಲೆಯ ಸನ್ನಿ ಆವರಿಸಿಕೊಂಡಿತ್ತು. ಆ ಮರಣ ಶಾಸನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಯಾವ ಕೋನವೂ ಈ ವೈರಸ್ಸಿನಿಂದ ಮುಕ್ತವಾಗಿರಲಿಲ್ಲ. ಎರಡನೆ ಮಹಾಯುದ್ಧದಲ್ಲಿ ನಾಲ್ಕು ವರ್ಷಗಳಲ್ಲಿ ಅಮೇರಿಕನ್ನರು ಕಳೆದುಕೊಂಡ ಪ್ರಮಾಣದ ಅರ್ಧದಷ್ಟು ಜೀವಗಳನ್ನು ಭಾರತ ಕೇವಲ ಕೆಲವೇ ವಾರಗಳಲ್ಲಿ ಕಳೆದುಕೊಂಡಿತು. ಲಾಹೋರಿನ ಹಳೆಯ ನಗರದಲ್ಲಿ ಹಿಂದೂ ವಾಸದ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ತೀವ್ರ ಬೇಸಗೆಯ ದಿನಗಳಲ್ಲಿ ನೀರಿಲ್ಲದೆ ಹಿಂದೂಗಳು ಹಿಂಡಿ ಹಿಪ್ಪೆಯಾಗಿ ಹೋಗಿದ್ದರು. ನೀರು ಕೇಳಲು ಹೊರ ಬಂದ ಮಹಿಳೆಯರು ಮಕ್ಕಳನ್ನು ಮುಸ್ಲಿಂ ಗುಂಪುಗಳು ವಧಿಸಿದವು. ನಗರದ ಹೆಚ್ಚಿನ ಪ್ರದೇಶಗಳಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲ ಚುಂಬಿಸ ಹೊರಟಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)


         ಭಾರತದಲ್ಲಿ ಸಹಿಷ್ಣುತೆಯಿಂದ ಬದುಕಿ ಈಗ ಪಾಕಿಸ್ತಾನಕ್ಕೆ ಸ್ಥಾನಾಂತರಗೊಂಡಿದ್ದ ಮುಸ್ಲಿಮರನ್ನೂ ಈ ಮತಾಂಧ ಮುಸ್ಲಿಮರು ಬಿಡಲಿಲ್ಲ. ಅವರು ಬದುಕಿಕೊಳ್ಳಲು ತಮ್ಮ ಮನೆಗಳ ಬಾಗಿಲ ಮೇಲೆ ಹಸಿರು ಬಣ್ಣ ಹಚ್ಚಬೇಕಾಯಿತು. ಲಾರೆನ್ಸ್ ರಸ್ತೆಯಲ್ಲಿದ್ದ ಪಾರ್ಸಿ ಜನಾಂಗದ ವ್ಯಕ್ತಿಯೊಬ್ಬ ಮತಾಂಧ ಮುಸ್ಲಿಮರಿಂದ ಬಚಾವಾಗಲು ತನ್ನ ಮನೆಯ ಬಾಗಿಲ ಮೇಲೆ " ಮುಸ್ಲಿಮರು, ಹಿಂದೂಗಳು, ಸಿಖ್ಖರೆಲ್ಲಾ ಸಹೋದರರು. ಆದರೆ ಓ ನನ್ನ ಸೋದರರೇ, ಈ ಮನೆ ಪಾರ್ಸಿಯವನೊಬ್ಬನಿಗೆ ಸೇರಿದ್ದು" ಎಂಬ ಸಂದೇಶ ಬರೆದಿದ್ದ. ಅದು ವಿಭಜನೆಯ ನೆಪದಲ್ಲಿ ಕಳೆದು ಹೋದುದನ್ನು ನೆನಪಿಸುವಂತಿತ್ತು! ಶೇಖ್ ಪುರದ ಬ್ಯಾಂಕಿನಲ್ಲಿ ಸಾಲ ಸಂಬಂಧ ವಶ ಪಡಿಸಿಕೊಂಡ ಧಾನ್ಯಗಳನ್ನು ಉಗ್ರಾಣದಲ್ಲಿ ಪೇರಿಸಿಡಲಾಗಿತ್ತು. ಆ ಪ್ರದೇಶದ ಎಲ್ಲಾ ಹಿಂದೂಗಳು ಅದೇ ಉಗ್ರಾಣದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿಗೆ ಬಂದ ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ಅಸಹಾಯಕ ಹಿಂದೂಗಳ ಮೇಲೆ ಗುಂಡಿನ ಮಳೆಗರೆದರು. ಉಗ್ರಾಣ ಸಮೇತ ಹಿಂದೂಗಳೆಲ್ಲಾ ಸುಟ್ಟು ಹೋದರು.(ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)





ಮಂಗಳವಾರ, ನವೆಂಬರ್ 29, 2016

ಯಾರು ಮಹಾತ್ಮ? ಭಾಗ-೨೬

ಯಾರು ಮಹಾತ್ಮ?
ಭಾಗ-೨೬


          ಬಸವಳಿದಿತ್ತು ಬ್ರಿಟನ್. ಎರಡನೇ ವಿಶ್ವಯುದ್ಧದಲ್ಲಿ ಅದು ಗೆಲುವನ್ನೇನೋ ಪಡೆದಿತ್ತು. ಆದರೆ ಯುದ್ಧಕ್ಕೆ ಮುನ್ನ ಸೂರ್ಯ ಮುಳುಗದ ನಾಡಾಗಿದ್ದ ಬ್ರಿಟನ್ನಿನಲ್ಲಿ ಯುದ್ಧದ ತರುವಾಯ ಅಕ್ಷರಶಃ ಕತ್ತಲು ಆವರಿಸಿತ್ತು. ಕಲ್ಲಿದ್ದಲು ಉತ್ಪಾದನೆ ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಹಾಗಾಗಿ ಬ್ರಿಟನ್ನಿನ ಹಲವು ಭಾಗಗಳಲ್ಲಿ ದಿನದ ಬಹುತೇಕ ಸಮಯ ವಿದ್ಯುತ್ತೇ ಇರುತ್ತಿರಲಿಲ್ಲ. ವಿಜಯವೇನೋ ಸಿಕ್ಕಿತ್ತು. ಆದರೆ ಆ ವಿಜಯಕ್ಕಾಗಿ ಬ್ರಿಟನ್ ತೆತ್ತ ಬೆಲೆ ಅಪಾರ! ಲಂಡನ್ನಿನ ಬೀದಿಗಳು ಗಬ್ಬು ನಾರುತ್ತಿದ್ದವು. ಕೈಗಾರಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಬೊಕ್ಕಸ ಬರಿದಾಗಿತ್ತು. ಸಾಲ ತುಂಬಲೂ ಹಣ ಇಲ್ಲದಂತಾಗಿತ್ತು. ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದರು. ಬೀದಿಗಳು ಬಿಕೋ ಅನ್ನುತ್ತಿದ್ದವು. ಜನರು ಕಳಾಹೀನರಾಗಿದ್ದರು. ಜನರ ಅಶನ ವಸನಾದಿಗಳು ಎಂಟು ವರ್ಷಗಳ ಯುದ್ಧದ ಪರಿಣಾಮವನ್ನು ಸಾರಿ ಹೇಳುತ್ತಿದ್ದವು.

          ಸತತ ಎಂಟನೇ ವರ್ಷವೂ ಸರಕಾರ ಕೊಡಮಾಡುವ ಪಡಿತರದಲ್ಲೇ ಬದುಕಬೇಕಾದ ಅನಿವಾರ್ಯ ಅಸಹಾಯಕ ಸ್ಥಿತಿಯಲ್ಲಿ ಲಂಡನ್ನಿಗರಿದ್ದರು. ಆಹಾರ, ಇಂಧನ, ಪಾನೀಯ, ವಿದ್ಯುತ್, ಶೂ ಹಾಗೂ ಬಟ್ಟೆಗಳಿಗಾಗಿ ಜನ ಪಡಿತರವನ್ನೇ ಆಶ್ರಯಿಸಿದ್ದರು. ಆಟಿಕೆಗಳ ಮೇಲೆ ಸರಕಾರ ನೂರು ಶೇಖಡಾ ಖರೀದಿ ತೆರಿಗೆ ವಿಧಿಸಿತ್ತು. ಲಂಡನ್ನಿನ ಯಾವ ಅಂಗಡಿಯನ್ನು ನೋಡಿದರೂ "ಇಲ್ಲ" ಎನ್ನುವ ಒಕ್ಕಣೆಯುಳ್ಳ ಬೋರ್ಡುಗಳೇ ರಾರಾಜಿಸುತ್ತಿದ್ದವು. ಆಲೂಗಡ್ಡೆ, ಮಾಂಸ, ಸಿಗರೇಟಿಗೂ ತತ್ವಾರ ಉಂಟಾಗಿತ್ತು. ಬ್ರಿಟನ್ ಅರ್ಥಶಾಸ್ತ್ರಜ್ಞ ಜಾನ್ ಮೇಯ್ನಾರ್ಡ್ 1946ರಲ್ಲಿ ಹೇಳಿದ್ದ "ನಮ್ಮದು ಬಡ ದೇಶ. ಅದರಂತೆ ಬದುಕುವುದನ್ನು ಕಲಿಯಬೇಕಾಗಿದೆ" ಎನ್ನುವ ಮಾತುಗಳೇ ಸದಾ ಬ್ರಿಟಿಷರ ತಲೆಯಲ್ಲಿ ಗುಂಯ್ಗುಡುತ್ತಿದ್ದವು. 1947ರ ಹೊಸವರ್ಷದ ಬೆಳಗನ್ನು ಚಹಾ ಹೀರುವ ಮೂಲಕ ಸ್ವಾಗತಿಸೋಣವೆಂದರೆ ಒಂದು ಲೋಟ ಬಿಸಿ ನೀರಿಗೂ ಇಂಗ್ಲೆಂಡಿಗರಿಗೆ ತತ್ವಾರವಾಗಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)

          ಮಹಾಯುದ್ಧದ ಸಂದರ್ಭವನ್ನು ವೀರ ಸಾವರ್ಕರ್ ಸಲಹೆಯಂತೆ ಸದುಪಯೋಗಪಡಿಸಿಕೊಂಡು ರಾಸ್ ಬಿಹಾರಿ ಬೋಸರಿಂದ ಸೇನಾಧಿಪತ್ಯ ಪಡೆದು ಸುಭಾಷ್ ಬ್ರಿಟಿಷರನ್ನು ಒದ್ದೋಡಿಸಲು ಭಾರತದತ್ತ ಮುನ್ನುಗ್ಗುತ್ತಿದ್ದರು. ಶತಮಾನಗಳಿಂದಲೂ ಮತ್ತೆ ಮತ್ತೆ ಎದ್ದು ಬರುತ್ತಿದ್ದ ಕ್ರಾಂತಿಯ ಕಿಡಿ, ಸುಭಾಷ್ ಹಾಗೂ ಐ.ಎನ್.ಎ.ಯ ಭಯ ಹಾಗೂ ಅದರಿಂದ ಭಾರತೀಯ ಸೇನೆಯಲ್ಲಿ ಎದ್ದ ಕಿಚ್ಚು, ಮಹಾಯುದ್ಧದಿಂದ ಇಂಗ್ಲೆಂಡಿನಲ್ಲಿ ಉಂಟಾಗಿದ್ದ ದುರ್ಭರ ಸನ್ನಿವೇಶ ಬ್ರಿಟಿಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದವು. "ಸಶಸ್ತ್ರ ಕ್ರಾಂತಿ ಮತ್ತು ಇತಿಹಾಸದ ಶಕ್ತಿಗಳಿಂದ ಹೊರದಬ್ಬಿಸಿಕೊಳ್ಳುವ ಬದಲು ಭಾರತವನ್ನು ತ್ಯಜಿಸುವುದೇ ಮೇಲು" ಎನ್ನುವ ನಿರ್ಣಯಕ್ಕೆ ಅನಿವಾರ್ಯವಾಗಿ ಬರಲೇಬೇಕಾಯಿತು. ಇದು ವಾಸ್ತವ. ವಿಪರ್ಯಾಸವೆಂದರೆ ಅಸಂಗತ, ಅಸಮರ್ಪಕ, ಅರೆಬೆಂದ ವಿಚಾರಧಾರೆಯ, ನಿರ್ದಿಷ್ಟ ಗುರಿಯಿಲ್ಲದ, ನಿರ್ಣಾಯಕವೂ ಅಲ್ಲದ ಗಾಂಧಿಯ ಚಳವಳಿಗಳೇ ಸ್ವಾತಂತ್ರ್ಯಕ್ಕೆ ಕಾರಣ ಎನ್ನುವ ಇತಿಹಾಸದ ವಿರೂಪವೇ ಎಲ್ಲೆಡೆ ನರ್ತಿಸುತ್ತಿದೆ.

             ಸುಭಾಷರ ಸಾಹಸ ಹಾಗೂ ಬಳಿಕದ ಐ.ಎನ್.ಎ ಸೈನಿಕರ ವಿಚಾರಣೆ ಭಾರತೀಯ ಸೈನಿಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿತ್ತು. ದೇಶವಾಸಿಗಳು ಸಿಡಿದೆದ್ದಿದ್ದರು. ಐ.ಎನ್.ಎ ವಿಚಾರಣೆ ಖಂಡಿಸಿ 1946ರಲ್ಲಿ ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ವೈಸ್ ರಾಯ್ ನಿರ್ಣಯದಂತೆ ಐ.ಎನ್.ಎ ಯ ಸೈನಿಕರ ಗಡೀಪಾರು ಶಿಕ್ಷೆಯನ್ನು ರದ್ದುಮಾಡಿ ಕ್ಷಮಾದಾನ ನೀಡಲಾಯಿತು. ಅದೇ ಸಂದರ್ಭದಲ್ಲಿ ರಾಯಲ್ ನೇವಿಯ 3000 ಸೈನಿಕರು ಬಂಡೆದ್ದರು. ಬಾಂಬೆ ಸಿಗ್ನಲ್ ಶಾಲೆಯ ಸೈನಿಕರು ಬ್ರಿಟಿಷ್ ಕಮಾಂಡರುಗಳು ಭಾರತದ-ರಾಷ್ಟ್ರೀಯತೆಯ ವಿರುದ್ಧ ಮಾಡುತ್ತಿದ್ದ ಅವಹೇಳನಕರವಾದ ತಾತ್ಸಾರದ ನುಡಿಗಳು, ವೇತನ, ಅಸಮರ್ಪಕ ಆಹಾರ ಹಾಗೂ ಜನಾಂಗೀಯ ಪಕ್ಷಪಾತದ ವಿರುದ್ಧ 1945 ಆಗಸ್ಟಿನಲ್ಲಿ ಉಪವಾಸ ಶುರು ಮಾಡಿದರು. ಆ ಸಂದರ್ಭದಲ್ಲಿ ಕಮಾಂಡರ್ ಕಿಂಗ್ ಎನ್ನುವ ಉಸ್ತುವಾರಿ ಅಧಿಕಾರಿಯೊಬ್ಬ ಸೈನಿಕರನ್ನು ಉದ್ದೇಶಿಸಿ ಅವರ ಬಗ್ಗೆ, ಅವರ ಹೆತ್ತವರ ಬಗ್ಗೆ ಅಸಭ್ಯ ಭಾಷೆಯಲ್ಲಿ ಮಾತಾಡಿದ. ಮುಷ್ಕರ ಎಪ್ಪತ್ನಾಲ್ಕು ಹಡಗುಗಳಿಗೆ, ಇಪ್ಪತ್ತು ಸಾಗರ ನೆಲೆಗಳಿಗೆ ಹಬ್ಬಿತು. ಮೂರೇ ದಿನಗಳಲ್ಲಿ ಬ್ರಿಟಿಷ್ ಆಡಳಿತ ಭಾರತೀಯ ಸೇನೆಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನೌಕಾದಳದ ಸೈನಿಕರು ಇಪ್ಪತ್ತು ಹಡಗುಗಳ ಮೇಲೆ ನಿಯಂತ್ರಣ ಸಾಧಿಸಿದರು. ಸೇನಾ ಕಾವಲುಗಾರರ ಮೇಲೆ ಗುಂಡು ಹಾರಿಸಲು ಸಿದ್ಧರಾದರು. ಗನ್ ಹಾಗೂ ವಿಮಾನಗಳನ್ನು ವಶಪಡಿಸಿಕೊಳ್ಳಲಾಯಿತು. ಅಡ್ಮಿರಲ್ ಗಾಡ್ ಫ್ರೇಯ ಮನವೊಲಿಸುವ ಮಾತುಗಳೂ ವಿಫಲವಾದವು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮಾತನ್ನು ಲೆಕ್ಕಿಸದೆ ಪ್ರತಿಭಟನೆ ಆರಂಭವಾಯಿತು. ಜನ ಬ್ಯಾಂಕ್, ಅಂಚೆಕಛೇರಿ, ಪೊಲೀಸ್ ಠಾಣೆ, ಸರಕಾರೀ ಕಛೇರಿಗಳ ಲೂಟಿಗೆ ತೊಡಗಿದರು. ಪೊಲೀಸರಿಂದ ಪರಿಸ್ಥಿತಿಯ ನಿಯಂತ್ರಣ ಸಾಧ್ಯವಾಗದೆ ಸೈನ್ಯವನ್ನು ಕರೆಸಲಾಯಿತು. "ಕಂಡಲ್ಲಿ ಗುಂಡು ಹಾರಿಸಿ" ಎನ್ನುವ ನಿರ್ದೇಶನದಿಂದ ಇನ್ನೂರಕ್ಕೂ ಹೆಚ್ಚು ಜನರ ಆಹುತಿಯಾಯಿತು. ಈ ಮುಷ್ಕರಕ್ಕೆ ಬೆಂಬಲ ನೀಡಿ ರೈಲ್ವೇ ಸಿಬ್ಬಂದಿ ತಮ್ಮ ಕಾರ್ಯ ಸ್ಥಗಿತಗೊಳಿಸಿದರು.(ದಿ ಟ್ರಾನ್ಸ್ ಫರ್ ಆಫ್ ಪವರ್ - ವಿ.ಪಿ. ಮೆನನ್)(ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

           ಅಂಬಾಲಾ, ಕರಾಚಿ, ಮದ್ರಾಸ್, ಕಲ್ಕತ್ತಾ ಹಾಗೂ ರಂಗೂನ್'ಗಳಲ್ಲೂ ಮುಂಬಯಿ ಪ್ರತಿಭಟನೆ ಪ್ರತಿಧ್ವನಿಸಿತು. ಇದು ಭೂ ಸೇನೆ ಹಾಗೂ ವಾಯುದಳದ ಮೇಲೂ ಪರಿಣಾಮ ಬೀರಿತು. ವಾಯುದಳದ ಸೈನಿಕರು ದಂಗೆಯೆದ್ದರು. ನೌಕಾದಳದ ಸಿಬ್ಬಂದಿ ಕೆಲಸ ನಿಲ್ಲಿಸಿದರು. ಪೊಲೀಸರಲ್ಲೂ ದೇಶಭಕ್ತರ ಅನೇಕ ಭೂಗತ ಜಾಲಗಳಿದ್ದವು. ಬಿಹಾರ ಕಾನ್ ಸ್ಟೇಬಲ್ ರಮಾನಂದ ತಿವಾರಿ ಅಂತಹ ದೇಶಭಕ್ತ ಪೊಲೀಸರ ಬಹುದೊಡ್ಡ ಜಾಲವನ್ನು ಹೆಣೆದಿದ್ದ ಪ್ರಮುಖರಲ್ಲೊಬ್ಬ. ಅನೇಕ ಕಡೆ ಪೊಲೀಸರ ಬಂಡಾಯವೂ ಆರಂಭವಾಯಿತು. ನೌಕಾದಳದ ಮುಷ್ಕರವನ್ನು ಕಮಾಂಡರ್-ಇನ್-ಚೀಫ್ ಖಂಡಿಸಿದಾಗ ಇಂಡಿಯನ್ ಸಿಗ್ನಲ್ ಕಾರ್ಪ್ಸ್'ನ 200 ಸಿಬ್ಬಂದಿ ಜಬಲ್ಪುರದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಸರ್ಕಾರ ವಿಜಯ ದಿನ ಆಚರಿಸಲು ಮುಂದಾದಾಗ ದೆಹಲಿಯಲ್ಲಿ ಭಾರೀ ಗಲಭೆಗಳು ನಡೆದವು. ಹೀಗೆ 1946ರಲ್ಲಿ ಇಡೀ ಭಾರತ ಕ್ರಾಂತಿಯ ವಾತಾವರಣದಿಂದ ಕೂಡಿತ್ತು. ಪೊಲೀಸ್ ಹಾಗೂ ಸೈನ್ಯದಲ್ಲಿ ಬಂಡಾಯಗಳು ನಡೆದವು. 1946ರ ಫೆಬ್ರವರಿಯಲ್ಲಿ ಮುಂಬೈಯ ಹನ್ನೊಂದು ನೌಕಾನೆಲೆಗಳ ಇಪ್ಪತ್ತು ಸಾವಿರ ರೇಟಿಂಗ್ ಹಾಗೂ ಎಲ್ಲಾ ಬಂದರುಗಳಲ್ಲಿದ್ದ ಯೂನಿಯನ್ ಜಾಕ್ ಧ್ವಜವನ್ನು ಕೆಳಗಿಳಿಸಲಾಯಿತು. ದೇಶದಲ್ಲಿ ಎದ್ದ ಕ್ರಾಂತಿಯ ಜ್ವಾಲೆಗೆ ಬ್ರಿಟಿಷರ ನಾಲಗೆಯ ಪಸೆ ಆರತೊಡಗಿತು.(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್ - ಹೊ.ವೆ. ಶೇಷಾದ್ರಿ; ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

            ಸೈನ್ಯವನ್ನು, ಪೊಲೀಸ್ ಪಡೆಯನ್ನು ನಂಬುವಂತಿಲ್ಲವಾದ್ದರಿಂದ ನೇರವಾಗಿ ದಂಗೆಯನ್ನು ದಮನಿಸಹೊರಟರೆ ತಮಗೆ ಕ್ರಾಂತಿ ಜ್ವಾಲೆ ತಮ್ಮನ್ನೇ ಆಪೋಶನ ತೆಗೆದುಕೊಳ್ಳಬಹುದೆಂದು ಅರಿತ ಸರ್ಕಾರ ಬಂಡಾಯಕ್ಕೆ ಕೊನೆಹಾಡುವಂತೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗಿಗೆ ಮನವಿ ಮಾಡಿತು. ಅದರಂತೆ ಜಿನ್ನಾ ಹಾಗೂ ಗಾಂಧಿ ದಂಗೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ, ದಂಗೆಯಲ್ಲಿ ಭಾಗವಹಿಸಿದ್ದವರು ಶರಣಾಗುವಂತೆ ಕರೆ ನೀಡಿದರು. ತಮ್ಮನ್ನು ಜನತೆಯಿಂದ ಪ್ರತ್ಯೇಕಿಸಿದ ತಥಾಕಥಿತ ನಾಯಕರ ಕುತಂತ್ರದಿಂದ ಬೇಸತ್ತ ನೌಕಾಪಡೆ ಮುಷ್ಕರ ನಿಲ್ಲಿಸುವಂತೆ ಕರೆ ನೀಡಿತು. ತಮಗೆ ವಿಶ್ವಾಸದ್ರೋಹ ಎಸಗಲಾಯಿತು ಎಂಬ ಭಾವನೆ ಅವರಲ್ಲುಂಟಾಯಿತು. ತಿದಿಯೂದಿ ಬೆಂಕಿಯ ಝಳಕ್ಕೆ ನಡುಗುವ, ಕ್ರಾಂತಿಯ ಬಿರುಗಾಳಿಗೆ ಆಶ್ರಯ ಹುಡುಕುವ, ತಮ್ಮ ಆಸೆಗಳಿಗಾಗಿ ದೇಶೀಯರನ್ನು ಬಲಿಕೊಟ್ಟು ಪರದೇಶಿಗಳ ಕಾಲ್ನೆಕ್ಕುವ ನಾಯಕರ ಬಗ್ಗೆ ಅವರಿಗೆ ಅಸಹ್ಯ ಉಂಟಾಯಿತು. ಹೀಗೆ ಸ್ವಾತಂತ್ರ್ಯದ ಮಹತ್ವದ ಘಟ್ಟವಾದ ಸೇನಾ ಬಂಡಾಯಕ್ಕೂ ಹಿಂದಿನಿಂದ ಇರಿದ ಹಿರಿಮೆ ಗಾಂಧಿಯದ್ದು!


           ಬ್ರಿಟಿಷ್ ಸರಕಾರ ಮೂವರು ಸಂಪುಟ ಸಚಿವರ(ಲಾರೆನ್ಸ್, ಕ್ರಿಪ್ಸ್, ಅಲೆಗ್ಸಾಂಡರ್) ನಿಯೋಗವನ್ನು ಭಾರತಕ್ಕೆ ಕಳುಹಿತು. ಈ ಆಯೊಗದ ಸಮೀಕ್ಷೆಯನ್ನು ಆಧಾರವಾಗಿರಿಸಿ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ "ಭಾರತದ ಇತಿಹಾಸದಲ್ಲಿ 1946 ಮಹತ್ವದ ವರ್ಷವಾಗಲಿದೆ. ಮುಂದಿನ ಕೆಲ ತಿಂಗಳಲ್ಲಿ ನಾವು ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು ಮುಂದೆ ಹೆಜ್ಜೆ ಹಾಕಲಿದ್ದೇವೆ. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ" ಎಂದು ಘೋಷಿಸಿದ. ಭಾರತವನ್ನು ತ್ಯಜಿಸುವ ಬಗ್ಗೆ ಬ್ರಿಟಿಷರು ತಯಾರಾಗಿದ್ದರು ಎನ್ನುವುದನ್ನು ಈ ಮಾತು ಪ್ರತಿಧ್ವನಿಸಿತ್ತು. ಹಾಗೆಯೇ "ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು..." ಎನ್ನುವ ವಾಕ್ಯ ವಿಭಜನೆಯ ಮುನ್ಸೂಚನೆಯನ್ನೂ ಕೊಟ್ಟಿತ್ತು! ಆದರೆ ವಿಭಜನೆಗೆ ಮಹಾತ್ಮ ಎಂದು ಕರೆಸಿಕೊಂಡಾತನೇ ಬೆಂಬಲ ಕೊಟ್ಟದ್ದು ಮಾತ್ರ ಚೋದ್ಯ! ಅತ್ತ ಆಟ್ಲಿ "ಭಾರತದಲ್ಲಿ ರಾಷ್ಟ್ರೀಯತೆಯ ಗಾಳಿ ಜೋರಾಗಿ ಬೀಸುತ್ತಿದೆ. ಸ್ಪಷ್ಟ ಹಾಗೂ ನಿರ್ದಿಷ್ಟ ಕ್ರಮ ಕೈಗೊಳ್ಳಲು ಇದು ಸಕಾಲ" ಎಂದು ಹೌಸ್ ಆಫ್ ಕಾಮನ್ಸಿನಲ್ಲಿ ಹೇಳಿಕೆ ನೀಡಿದ. ಹೀಗೆ ನಾವು ಮೆಟ್ಟಿದವರೇ ನಮ್ಮನ್ನು ತಟ್ಟಿ-ಮೆಟ್ಟಿ-ಹೊರಗಟ್ಟುವ ಮೊದಲೇ ಜಾಗ ಖಾಲಿ ಮಾಡುವುದೊಳ್ಳೆಯದು ಎಂಬ ನಿರ್ಧಾರಕ್ಕೆ ಸೂರ್ಯ ಮುಳುಗದ ನಾಡಿನ ನಾಯಕರುಗಳು ಬಂದಿದ್ದರು!

        ಇಷ್ಟೆಲ್ಲಾ ಇತಿಹಾಸದ ಕಟು ವಾಸ್ತವಗಳಿದ್ದರೂ ಇಂದಿಗೂ ಗಾಂಧಿ ಬಂದ ನಂತರ(1914-15) ಸ್ವಾತಂತ್ರ್ಯ ಹೋರಾಟ ಶುರುವಾಯಿತು . ಗಾಂಧಿಯ ನೇತೃತ್ವದ ಹೋರಾಟದಿಂದಾಗಿಯೇ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಈ ಜಗತ್ತಿನ ಬಹು ದೊಡ್ಡ ವರ್ಗ ಭಾವಿಸುತ್ತದೆ. ತಿರುಚಿದ ಭಾರತದ ಪ್ರಾಚೀನ ಇತಿಹಾಸದಂತೆ ಭಾರತದ ಆಧುನಿಕ ಇತಿಹಾಸವೂ ಕುತಂತ್ರದಿಂದಲೇ ಹೆಣೆಯಲ್ಪಟ್ಟಿದೆ. ಅದೇ ನಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಶೇಖರಣೆಗೊಂಡು ಪ್ರತಿಯೊಂದು ಪೀಳಿಗೆ ಅದನ್ನೇ ಉರು ಹೊಡೆದು ಅದೇ ಸತ್ಯವೆಂದು ಭ್ರಮಿಸಿ ಹೊರಳಾಡುತ್ತಿದೆ. ತಾಯಿ ಭಾರತಿಯ ಮೈಗೆ ಹಲವು ಗಾಯಗಳನ್ನು ಮಾಡಿ ರಕ್ತ ಸೋರುವಂತೆ ಮಾಡಿದ ರಾಜಕಾರಣಿಯೊಬ್ಬನನ್ನು ಮಹಾತ್ಮ ಪಟ್ಟಕ್ಕೆ ಏರಿಸಿದ ಇತಿಹಾಸದ ವಿರೂಪದಲ್ಲಿ ಅಸಂಖ್ಯ ಹಿಂದೂಗಳ ಆಕ್ರಂದನ ಮರೆಯಾಗಿ ಹೋಗಿದೆ. ಆಗಸ್ಟ್ ಹದಿನೈದು ಅಂದರೆ ಸಾಕು ಲಕ್ಷಾಂತರ ಭಗಿನಿಯರ ಕರುಳು ಕಿತ್ತು ಬರುವ ಆಕ್ರಂದನ ಕೇಳಿಸುತ್ತದೆ. ತನ್ನ ಕಣ್ಣೆದುರಲ್ಲೇ ಅತ್ಯಾಚಾರಕ್ಕೊಳಗಾದ ತಾಯಿಯ-ಮಗಳ-ಪತ್ನಿಯ-ಸಂಬಂಧಿಯ ಕಂಡು ಅಸಹಾಯಕನಾದ ಹಿಂದೂವಿನ ಮೂಕ ವೇದನೆ ಕಣ್ಣ ಮುಂದೆ ಬರುತ್ತದೆ. ಧರ್ಮದ ಉಳಿವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬಲಿದಾನಿಯ ಭಾವ ಸ್ಪುರಿಸುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ 1857ರ ಸಂಗ್ರಾಮ ಯಶಸ್ವಿಯಾಗುತ್ತಿದ್ದರೆ...? ಸ್ವಾತಂತ್ರ್ಯ ವೀರ ಸಾವರ್ಕರ್ ಅಂಡಮಾನ್ ಕರಿನೀರ ಕತ್ತಲ ಕೂಪದೊಳಗೆ ಬೀಳದಿರುತ್ತಿದ್ದರೆ...? ಸುಭಾಷರು ಕಣ್ಮರೆಯಾಗಿರದಿರುತ್ತಿದ್ದರೆ...? ಭಾರತದ ಇತಿಹಾಸವೇ ಬದಲಾಗುತ್ತಿತ್ತು ಅಲ್ಲವೇ? ಮಹತ್ವದ ಘಟ್ಟದಲ್ಲಿ ಅದ್ವಿತೀಯನಾದ, ಪರಾಕ್ರಮಿಯಾದ, ಧರ್ಮ-ನೀತಿ:ಬ್ರಾಹ್ಮ-ಕ್ಷಾತ್ರ ಭೀರು ನಾಯಕನ ಕೊರತೆ ಭಾರತಕ್ಕೆ ಎಂದೆಂದೂ ಕಾಡುತ್ತಿರುವುದೇಕೆ?

ಬುಧವಾರ, ನವೆಂಬರ್ 23, 2016

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

            ನಮ್ಮ ಚರಿತ್ರೆಯ ಗ್ರಂಥಗಳಲ್ಲಿ ಆಕ್ರಮಣಕಾರರನ್ನೇ ವೈಭವೀಕರಿಸಲಾಗಿದೆ. ನಮ್ಮ ಅರಸರು ಅಸಮರ್ಥರೂ, ಭೋಗಲಾಲಸಿಗಳೂ ಆಗಿದ್ದು ತಮ್ಮ ಸುತ್ತ ನಡೆಯುತ್ತಿದ್ದ ಹುನ್ನಾರವನ್ನು, ಶತ್ರುಗಳ ಆಕ್ರಮಣವನ್ನು ಅಂದಾಜಿಸದೆ, ಶತ್ರುಗಳಿಗೆ ಪ್ರತ್ಯುತ್ತರ ನೀಡಲು ಸಿದ್ಧರಾಗದೆ ಉಪೇಕ್ಷಿಸಿ ತಮ್ಮ ಹಾಗೂ ಪ್ರಜೆಗಳ ವಿನಾಶಕ್ಕೆ ಕಾರಣೀಭೂತರಾದರು ಎನ್ನುವ ಅಭಿಪ್ರಾಯವನ್ನೇ ಸಾಮಾನ್ಯ ಜನತೆಯಲ್ಲಿ ರೂಪಿಸುವ ರೀತಿಯಲ್ಲೇ ನಮ್ಮ ಇತಿಹಾಸದ ಪಠ್ಯಗಳು ಬರೆಯಲ್ಪಟ್ಟಿವೆ. ಆದರೆ ವಾಸ್ತವ ಆ ರೀತಿ ಇತ್ತೇ ಎಂದು ಕೇಳಿದರೆ ಇತಿಹಾಸಕಾರರ ಕುತಂತ್ರಗಳು ಒಂದೊಂದೇ ಬಯಲಾಗುತ್ತವೆ. ಈ ಇತಿಹಾಸಕಾರರು ಆಕ್ರಮಕರ ಮತಾಂಧತೆ, ದಬ್ಬಾಳಿಕೆ, ಮತಾಂತರ, ಲಂಪಟತೆ, ಕ್ರೌರ್ಯ ಹಾಗೂ ಪ್ರಾಯೋಜಿತ ನರಮೇಧವನ್ನು ಮುಚ್ಚಿಡುವುದರ ಜೊತೆಜೊತೆಗೆ ನಮ್ಮ ರಾಜರ ಶೌರ್ಯ, ಪ್ರತಾಪ, ಸಂಘಟಿತ ಪ್ರಯತ್ನಗಳನ್ನೂ ಮುಚ್ಚಿಟ್ಟರು. ತಮ್ಮದೇ ಸ್ವಾರ್ಥ, ಅಧಿಕಾರ ದಾಹ ಹಾಗೂ ಅಂತಃಕಲಹಗಳಲ್ಲಿ ಮುಳುಗಿದ್ದ ಕೆಲ ರಾಜರೂ ಇದ್ದರು. ಅದರ ಜೊತೆಯಲ್ಲೇ ವಿದೇಶಿಯರ ದಾಳಿಯನ್ನು ಧೀರೋದಾತ್ತವಾಗಿ ಎದುರಿಸಿ ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದವರೂ ಅನೇಕರಿದ್ದರು ಎನ್ನುವ ಸತ್ಯ ಮರೆಯಾಯಿತು.

            ಕ್ರಿ.ಶ. ಹತ್ತನೇ ಶತಮಾನದವರೆಗೂ ಕಾಬೂಲಿನವರೆಗೆ ಭಾರತ ಹಿಂದೂಗಳ ಆಳ್ವಿಕೆಗೇ ಒಳಪಟ್ಟಿತ್ತು. ಆಗ ಕಾಬೂಲಿ(ಕುಭ)ನ ರಾಜನಾಗಿದ್ದವನು ಜಯಪಾಲ. ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿದ್ದ ಕಪಿಲ, ಪೂರ್ವ ಪಂಜಾಬುಗಳವರೆಗೆ ಅವನ ರಾಜ್ಯ ಹಬ್ಬಿತ್ತು. ಆಗ ಹರಿ-ರುದ್ರರ ಹೆಸರಿನಿಂದ ನಿರ್ಮಾಣವಾಗಿದ್ದ ಹರ್ತ್(ಪಶ್ಚಿಮ ಅಪ್ಘಾನಿಸ್ಥಾನ), ಗಾಂಧಾರ(ಕಂದಹಾರ್) ಹಾಗೂ ಗಜನಿಗಳನ್ನು ಸೇರಿಸಿದ ಪ್ರಾಂತ್ಯವನ್ನು ಆಳುತ್ತಿದ್ದವ ಸಬಕ್ತಜಿನ್ ಎಂಬ ಮುಸ್ಲಿಮ್ ಗುಲಾಮ ರಾಜ. ಷಾಹಿಗಳ ಗಡಿ ಪ್ರದೇಶಗಳು ಹಾಗೂ ಪರ್ವತ ಶಿಖರಗಳಲ್ಲಿದ್ದ ಕೋಟೆಗಳ ಮೇಲೆ ದಾಳಿ ಮಾಡಿ ಸಬಕ್ತಜಿನ್ ಲೂಟಿಮಾಡತೊಡಗಿದಾಗ ಕಿಡಿಕಿಡಿಯಾದ ಷಾಹಿ ಜಯಪಾಲ ತನ್ನ ಪ್ರಬಲ ಗಜಬಲದೊಂದಿಗೆ ಪ್ರತ್ಯಾಕ್ರಮಣ ಮಾಡಿದ. ಸೋಲು ಖಚಿತಗೊಂಡಾಗ ಸಬಕ್ತಜಿನ್ ಅಧರ್ಮದ ದಾರಿ ಹಿಡಿದ. ಜಯಪಾಲನ ಸೈನ್ಯ ಬೀಡುಬಿಟ್ಟ ಸ್ಥಳ ಪರ್ವತವೊಂದರ ತಪ್ಪಲಾಗಿತ್ತು. ಆ ಪರ್ವತಾಗ್ರದಿಂದ ಸ್ವಚ್ಛ ಶುಭ್ರ ಜಲಧಾರೆಯೊಂದು ಹರಿದು ಬರುತ್ತಿತ್ತು.ಆ ಜಲಧಾರೆಗೆ ಯಾರಾದರೂ ಕಶ್ಮಲಗಳನ್ನು ಹಾಕಿದರೆ ಕೂಡಲೇ ಕತ್ತಲು ಕವಿದು ಸುಂಟರಗಾಳಿ ಬೀಸುವುದು, ಬೆಟ್ಟದ ಬಂಡೆಗಳು ಒಡೆದು ಬೀಳುವುದು, ಧಾರಾಕಾರ ಮಳೆ ಸುರಿಯುವಂತಹ ಅವಘಡಗಳುಂಟಾಗುತ್ತಿದವು. ಇದನ್ನು ಅರಿತ ಸಬಕ್ತಜಿನ್ ಅಶುದ್ಧ ವಸ್ತುಗಳನ್ನು ಆ ನೀರಿನಲ್ಲಿ ಹಾಕಿಸಿದ. ಕೂಡಲೇ ಪ್ರಳಯಕಾಲದಲ್ಲಿ ಉಂಟಾಗುವಂತೆ ಉತ್ಪಾತಗಳು ಉಂಟಾದವು. ಕುಂಭದ್ರೋಣ ಮಳೆ, ಉರುಳಿ ಬರುತ್ತಿರುವ ಬಂಡೆ, ಅಚಾನಕ್ಕಾಗಿ ಭಾರೀ ಶಬ್ಧದಿಂದ ಬೀಳುತ್ತಿರುವ ವೃಕ್ಷಗಳು, ದಟ್ಟವಾಗಿ ಹಬ್ಬಿದ್ದ ಕಪ್ಪು ಧೂಮದಿಂದ ಜಯಪಾಲನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಹಲವು ಸೈನಿಕರು ಸತ್ತು, ತಂದಿದ್ದ ಆಹಾರ ಪದಾರ್ಥಗಳು ನಷ್ಟವಾಗಿ ಯುದ್ಧ ಮುಂದುವರಿಸುವುದು ಅಸಾಧ್ಯವಾದಾಗ ಜಯಪಾಲ ಸಂಧಿಗಾಗಿ ರಾಯಭಾರಿಯನ್ನು ಕಳುಹಿದ. ಐವತ್ತು ಆನೆಗಳು, ಕೆಲವು ಕೋಟೆಗಳನ್ನು ವಶಕ್ಕೊಪ್ಪಿಸುವುದರ ಕರಾರಿನ ಮೇಲೆ ಸಬಕ್ತಜಿನ್ ಸಂಧಿಗೆ ಒಪ್ಪಿಕೊಂಡ. ಒಂದು ಚಿಕ್ಕ ಕೋಟೆಯನ್ನು ಕೊಡಲು ಜಯಪಾಲ ನಿರಾಕರಿಸಿದಾಗ ಸಿಟ್ಟಿಗೆದ್ದ ಸಬಕ್ತಜಿನ್ ಸೈನ್ಯ ತೆಗೆದುಕೊಂಡು ದಂಡೆತ್ತಿ ಬಂದು ಯುದ್ಧದಲ್ಲಿ ಜಯಪಾಲನನ್ನು ಸೋಲಿಸಿ ಲಂಘೂನ್ ನಗರದವರೆಗೆ ಜಯಪಾಲನ ರಾಜ್ಯವನ್ನು ಆಕ್ರಮಿಸಿಕೊಂಡ. ಇದು ಮಹಮ್ಮದೀಯ ಚರಿತ್ರೆಕಾರ ಆಲ್ ಉತ್ಖಿ ತನ್ನ "ತಾರೀಖ್ ಯಾಮಿನಿ"ಯಲ್ಲಿ ಬರೆದ ಕಥೆ!

               ಆದರೆ ಈ ಸೋಲಿನಿಂದ ಜಯಪಾಲನೇನೂ ಹತಾಷನಾಗಲಿಲ್ಲ. ಸಬಕ್ತಜಿನ್'ಗೆ ಶರಣಾಗಲೂ ಇಲ್ಲ. ತನ್ನ ಸೈನ್ಯವನ್ನು ಬಲಪಡಿಸಿದ. ಸುತ್ತಲ ಹಿಂದೂ ರಾಜರು ಅವನ ಸಹಾಯಕ್ಕಾಗಿ ತಮ್ಮ ಸೈನ್ಯವನ್ನು ಕಳುಹಿದರು. ಇಸ್ಲಾಂ ದುರಾಕ್ರಮಣವನ್ನು ತಡೆಯಲು ಹಿಂದೂ ರಾಜರು ಐಕ್ಯಮತ್ಯವನ್ನು, ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿರುವುದು ಈ ರಾಷ್ಟ್ರದ ಹೆಮ್ಮೆಯ ಚರಿತ್ರೆಯಲ್ಲವೇ? ಆದರೆ ನಮ್ಮ ಇತಿಹಾಸಕಾರರಿಗೆ ಒಂದಿಬ್ಬರು ಸ್ವಾರ್ಥಿ ರಾಜರ ಮೋಸವೇ ಚರಿತ್ರೆಯಾಗಿ ಕಂಡಿದುದು ಮಾತ್ರ ವಿಪರ್ಯಾಸ. ಆದರೆ ನಮ್ಮ ಇತಿಹಾಸಕಾರರಿಗೆ ಜಯಪಾಲನಿಗೆ ಹಿಂದೂ ರಾಜರು ಸಹಾಯ ಮಾಡಿರುವ ಬಗ್ಗೆ ಅನುಮಾನವೆದ್ದುಬಿಟ್ಟಿತು. ಶತ್ರುಪಕ್ಷದ ಇತಿಹಾಸಕಾರನೇ(ಫಿರಿಸ್ತಾ) ಬರೆದಿರುವುದು ಸತ್ಯಕ್ಕೆ ದೂರ ಎಂದು ನಿರ್ಧರಿಸಿಬಿಟ್ಟರು. ಸಹಾಯ ಮಾಡಿರುವ ರಾಜರುಗಳು ಬಗ್ಗೆ ಫಿರಿಸ್ತಾ ಕೊಟ್ಟಿರುವ ಅಲ್ಪ ಉಲ್ಲೇಖಗಳಿಂದ ಇದನ್ನು ರುಜುವಾತು ಮಾಡಲು ಸಾಧ್ಯವಿಲ್ಲ, ಸಾಕ್ಷ್ಯಾಧಾರಗಳು ಸಾಕಾಗುವುದಿಲ್ಲ ಎಂದು ಒಂದೇ ಏಟಿಗೆ ಈ ಅಂಶವನ್ನು ತೊಡೆದು ಹಾಕಿಬಿಟ್ಟರು. ಕಟ್ಟುವುದಕ್ಕಿಂತ ಕೆಡಹುವುದು ಸುಲಭವಲ್ಲವೇ! ಆಲ್ ಉತ್ಖಿ ಹೇಳಿದ ಆಲಿಕಲ್ಲು ಸಹಿತದ ಕುಂಭದ್ರೋಣ ಮಳೆಯ, ಪ್ರಕೃತಿ ವೈಪರೀತ್ಯದ ಕಥೆಯನ್ನು ನಂಬಿದವರಿಗೆ ಫಿರಿಸ್ತಾ ಹೇಳಿದ ಓರಗೆಯ ಹಿಂದೂರಾಜರು ಸಹಾಯ ಮಾಡಿದರು ಎನ್ನುವ ಸಾಲುಗಳು ಅನುಮಾನಕ್ಕೆ ಕಾರಣವಾದದ್ದು ಚೋದ್ಯವೇ ಸರಿ. ಸಬಕ್ತಜಿನನ ಮಾಯದಾಟಕ್ಕೆ ಬೆದರಿ ಕಂಗಾಲಾಗಿ ಶರಣು ಬಂದು ಸಂಧಿ ಮಾಡಿಕೊಂಡು ಷರತ್ತುಗಳಿಗೆ ಒಪ್ಪಿದಂತೆ ನಟಿಸಿ ಹಿಂತಿರುಗಿ ಹೋಗಿ ಕೊಟ್ಟ ಮಾತಿಗೆ ತಪ್ಪಿದನೆಂದೂ, ಪರಿಣಾಮ ಕ್ರುದ್ಧನಾದ ಸಬಕ್ತಜಿನ್ ದಂಡೆತ್ತಿ ಬರಲು ಸೋತು ವಿಶಾಲ ಭೂಪ್ರದೇಶವನ್ನು ಕಳೆದುಕೊಂಡನೆಂಬ ಕಥೆಯನ್ನು ಯಾವುದೇ ಅನ್ಯ ಸಾಕ್ಷ್ಯ ಕೇಳದೆ ನಂಬಿದವರಿಗೆ ಹಿಂದೂಗಳು ಒಗ್ಗಟ್ಟಾಗಿ ಹೋರಾಡಿದ ಘಟನೆಗೆ ಮಾತ್ರ ಸಾಕ್ಷ್ಯ ಕಡಿಮೆಯಾಯಿತು. ಶತ್ರು ಪಕ್ಷದ ಇತಿಹಾಸಕಾರ ರಾಜರ ಹೆಸರು ಹೇಳಿದರೆ ಸಾಲದೆ? ಅವನು ಅವರ ವಂಶವೃಕ್ಷವನ್ನೇ ಬರೆಯಬೇಕೇ? ಓರಗೆಯ ಹಿಂದೂ ರಾಜರು ಸಹಾಯ ಮಾಡಿದರೂ, ಧೀರೋದಾತ್ತವಾಗಿ ಸೆಣಸಿದರೂ ಸಬಕ್ತಜಿನನ ಕುತಂತ್ರಗಳೆದುರು ಷಾಹಿ ಜಯಪಾಲನ ಧರ್ಮಯುದ್ಧ ನಡೆಯಲಿಲ್ಲ. ಪೇಷಾವರದವರೆಗಿನ ಭೂಮಿ ಸಬಕ್ತಜಿನನ ವಶವಾಯಿತು. ಜಯಪಾಲ ಪಂಜಾಬಿಗೆ ಸೀಮಿತಗೊಳ್ಳಬೇಕಾಯಿತು.

           ಸಬಕ್ತಜಿನನ ಬಳಿಕ ಬಂದ ಗಜನಿ ಮಹಮ್ಮದ್ ಭಾರತದ ಮೇಲೆ ಸಾಲುಸಾಲು ದಂಡಯಾತ್ರೆಯನ್ನೇ ಕೈಗೊಂಡ. ಹದಿನೇಳು ಸಾವಿರ ಅಶ್ವಾರೋಹಿಗಳೊಡನೆ ಬಂದು ಜಯಪಾಲನನ್ನೂ, ಅವನ ಪುತ್ರ-ಪೌತ್ರರನ್ನು ಸೆರೆಯಲ್ಲಿರಿಸಿದ. ಎರಡೂವರೆ ಲಕ್ಷ ದಿನಾರುಗಳನ್ನು, 25 ಆನೆಗಳನ್ನು ತನಗೊಪ್ಪಿಸಿದರೆ ಜಯಪಾಲನನ್ನು ಬಿಡುಗಡೆ ಮಾಡುವುದಾಗಿ ಷರತ್ತು ಹಾಕಿದಾಗ ಜಯಪಾಲನ ಮಗ ಆನಂದಪಾಲ ಆ ಮೊತ್ತವನ್ನು ಕೊಟ್ಟು ತಂದೆ ಹಾಗೂ ಬಂಧುಗಳನ್ನು ಬಿಡಿಸಿಕೊಂಡ. ಸಾಲು ಸಾಲು ಸೋಲುಗಳಿಂದ ಅವಮಾನಿತನಾದ ಜಯಪಾಲ ಅದನ್ನು ಸಹಿಸಲಾರದೆ ಚಿತೆಯನ್ನು ಸಿದ್ಧಪಡಿಸಿ ತನ್ನ ಕೈಯಿಂದಲೇ ಬೆಂಕಿ ಹಚ್ಚಿಕೊಂಡು ಸಜೀವವಾಗಿ ದಹನವಾದ. ಅವನ ನಂತರ ಪಟ್ಟವೇರಿದ ಆನಂದಪಾಲನಿಗೂ ಗಜನಿಯ ಕೈಯಲ್ಲಿ ಸೋಲುಗಳೇ ಆದವಂತೆ. ಇದು ನಮ್ಮ ಎಲ್ಲಾ ಚರಿತ್ರೆಯ ಗ್ರಂಥಗಳಲ್ಲಿ ಕಂಡುಬರುವ ಆಲ್ ಉತ್ಖಿಯ ಗ್ರಂಥದಿಂದ ಉತ್ಖನನ ಮಾಡಿರುವ ಕಥೆಗಳು. ಇದನ್ನೂ ನಂಬಿ ಬಿಟ್ಟ ಬಗೆಯಂತೂ ವಿಚಿತ್ರ. ಮೊದಲೆರಡು ಬಾರಿ ಸಬಕ್ತಜಿನನ ಎದುರು ಸೋತು ಸೆರೆ ಸಿಕ್ಕು ಷರತ್ತುಗಳಿಗೆ ಬಗ್ಗಿದರೂ ಅವಮಾನವಾಗದ ಜಯಪಾಲನಿಗೆ ಅವನ ಮಗನ ಎದುರುಂಟಾದ ಸೋಲು ಅಪಮಾನಕರವಾಗಿ ಕಂಡಿತೇ? ಆಲ್ ಉತ್ಖಿಯೇ ಹೇಳಿದ ಹಾಗೆ ಮೊದಲು ಕೊಟ್ಟ ಮಾತಿಗೆ ತಪ್ಪಿ ನಡೆದ ವಚನಭೃಷ್ಟನಾಗಿದ್ದ ಪಕ್ಷದಲ್ಲಿ ಇನ್ನೊಮ್ಮೆ ಅಂತಹುದೇ ಪರಿಸ್ಥಿತಿಯಲ್ಲಿ ಅದೇ ರೀತಿಯ ಚಾಣಾಕ್ಷತೆಯನ್ನು ಯಾಕೆ ತೋರಿಸಲಿಲ್ಲ? ಒಂದೋ ಮೊದಲಿನದ್ದು ಸುಳ್ಳಾಗಿರಬೇಕು ಅಥವಾ ಎರಡನೆಯದ್ದು! ಮೊದಲನೆಯದ್ದು ಸುಳ್ಳಾಗಿದ್ದರೆ ಜಯಪಾಲ ಮೊದಲ ಬಾರಿಗೆ ಸೋತದ್ದರ ಮೇಲೂ ಸಂದೇಹ ಬರುತ್ತದಲ್ವೇ? ಎರಡನೆಯ ಬಾರಿ ಸೋತು ಚಿತೆಯೇರುವ ಹೊತ್ತಲ್ಲಿ ಅವನ ಓರಗೆಯ ರಾಜರು ಹೆಚ್ಚೇಕೆ ಅವನ ಸ್ವಂತ ಮಗ ಅಂತಹ ದೇಶ-ಧರ್ಮಕ್ಕಾಗಿ ಹೋರಾಡಿದ ಅಂತಹ ಪರಾಕ್ರಮಶಾಲಿಯನ್ನು ಈ ಕಾರ್ಯದಿಂದ ತಡೆಯಲಿಲ್ಲವೇಕೇ? ಶತ್ರು ಪಕ್ಷದ ಚರಿತ್ರೆಕಾರರ ಕಥೆಗಳನ್ನೆಲ್ಲಾ ಒಪ್ಪಿದವರಿಗೆ ನೈಜದಂತೆ ಮೇಲ್ನೋಟಕ್ಕೆ ಕಾಣುವ ಘಟನೆಗಳನ್ನು ಒಪ್ಪಲು ಕಷ್ಟವಾಗುವುದೇಕೆ?

            ಜಯಪಾಲನ ಮಗ ಆನಂದಪಾಲ ಮಹಾಶೂರನೂ, ವಿದ್ಯಾವಂತನೂ, ಕಲೋಪಾಸಕನೂ ಆಗಿದ್ದ. ಪಾಣಿನಿಯ ಅಷ್ಟಾಧ್ಯಾಯಿಗೆ ಸಮನಾದ "ಶಿಷ್ಯ-ಹಿತ-ವೃತ್ತಿ" ಎನ್ನುವ ವ್ಯಾಕರಣ ಗ್ರಂಥ ರಚಿಸಿದ ಉಗ್ರಭೂತಿಯ ಆಶ್ರಮದಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದ್ದ ಛಲಗಾರನಾತ. ಉಗ್ರಭೂತಿಯ ವ್ಯಾಕರಣ ಗ್ರಂಥವನ್ನು ತನ್ನ ರಾಜ್ಯದಲ್ಲಿ ಪ್ರಚುರಪಡಿಸಿದ ಗುರು ಸೇವಕನೀತ. ಎಲ್ಲಾ ಚರಿತ್ರೆಕಾರರು ಉಲ್ಲೇಖಿಸಿರುವ ಇನ್ನೊಂದು ಅಂಶವೆಂದರೆ ಜಯಪಾಲನ ಪುತ್ರ ಆನಂದಪಾಲನೂ ಗಜನಿಯ ಕೈಯಲ್ಲಿ ಸೋತು ಹೋದ ಎನ್ನುವುದು. ದಿಟವೇ. ಆದರೆ ಸಂಪೂರ್ಣವಲ್ಲ. ಒಂದು ವೇಳೆ ಆನಂದಪಾಲನಿಗೂ ಗಜನಿಯ ಎದುರು ಸಾಲುಸಾಲು ಅಪಜಯಗಳು ಪ್ರಾಪ್ತಿಯಾಗಿದ್ದರೆ ಅದೇ ಆನಂದಪಾಲ ಗಜನಿಗೆ "ನಿನ್ನ ರಾಜ್ಯದ ಮೇಲೆ ತುರ್ಕರು ದಂಡೆತ್ತಿ ಬಂದಿದ್ದಾರೆಂದೂ, ಖುರಾಸಾನ್ ಪ್ರಾಂತ್ಯವನ್ನು ಆಕ್ರಮಿಸಿದ್ದಾರೆಂದೂ ಕೇಳಿದ್ದೇನೆ. ನೀನು ಬಯಸಿದರೆ 5000 ಅಶ್ವದಳ, ಹತ್ತು ಸಾವಿರ ಪದಾತಿ, ಶತಗಜಗಳೊಡನೆ ನಾನೇ ನಿನ್ನ ಸಹಾಯಕ್ಕೆ ಬರುತ್ತೇನೆ. ಇಲ್ಲವೇ ಇದರ ಎರಡರಷ್ಟು ಬಲದೊಡನೆ ಮಗನನ್ನು ಕಳುಹುತ್ತೇನೆ. ನಾನು ಈ ಸಹಾಯ ಮಾಡುವುದು ನಿನ್ನ ಅನುಗ್ರಹಕ್ಕಾಗಿ ಅಲ್ಲ. ನಿನ್ನನ್ನು ಸಂಪೂರ್ಣವಾಗಿ ಸೋಲಿಸಿದ ಗೌರವ ನನಗಲ್ಲದೆ ಬೇರಾರಿಗೂ ದಕ್ಕಕೂಡದು ಎನ್ನುವ ನನ್ನ ಆಶಯಕ್ಕಾಗಿ!" ಎಂದು ಯಾಕೆ ಪತ್ರ ಬರೆಯುತ್ತಿದ್ದ? ಈ ಪತ್ರದ ಉಲ್ಲೇಖವಿರುವುದು ಮಹಮದ್ ಗಜನಿಯ ಆಪ್ತ ಆಲ್-ಬೆರೂನಿಯ ತಾರಿಖ್-ಉಲ್-ಹಿಂದ್'ನಲ್ಲಿ. ಇದರರ್ಥ ಆನಂದಪಾಲ ಹಿಂದೆ ಗಜನಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾನೆ ಎಂದಲ್ಲವೇ? ಈ ವಿಷಯದಲ್ಲಿ ಆಲ್ಬೆರೂನಿ ಸುಳ್ಳು ಹೇಳಲೂ ಆಸ್ಪದವಿಲ್ಲ. ಆ ರೀತಿ ಮಾಡಿದ್ದರೆ ಅವನ ತಲೆ ಉಳಿಯುತ್ತಿರಲಿಲ್ಲ. ಗಜನಿ ಅಷ್ಟು ದಯನೀಯವಾಗಿ ಸೋತು ಹೋತದ್ದು ಯಾವ ಯುದ್ಧದಲ್ಲಿ? ಗಜನಿಯ ಹದಿನೇಳು ದಂಡಯಾತ್ರೆಗಳಲ್ಲಿ ಅದು ಎಷ್ಟನೆಯದ್ದು? ನಮ್ಮ ಚರಿತ್ರೆಕಾರರು ಮುಚ್ಚಿಟ್ಟದ್ದು ಎಂತಹಾ ಭವ್ಯ ಇತಿಹಾಸವನ್ನು! ಮಹಮ್ಮದ್ ತನ್ನ ಪುಟ್ಟ ಸೈನ್ಯದ ಬಲದಿಂದ ಕಾಫಿರರ ಎಂತಹಾ ಬಲಾಢ್ಯ ಸೈನ್ಯವನ್ನಾದರೂ ಅಲ್ಲಾನ ಕೃಪೆಯಿಂದ ಗೆದ್ದನೆಂಬ ಮುಸ್ಲಿಂ ಆಸ್ಥಾನ ಬರಹಗಾರರ ಕಥೆಗಳನ್ನು ಚರಿತ್ರೆಯ ಗ್ರಂಥಗಳಿಗೆ ಯಥಾವತ್ ಭಟ್ಟಿ ಇಳಿಸಿದ ನಮ್ಮ ಸೆಕ್ಯುಲರ್ ಇತಿಹಾಸಕಾರರು ಮಾಡಿದ್ದು ಐತಿಹಾಸಿಕ ದ್ರೋಹವಲ್ಲವೇ?

           ಇದು ನಮ್ಮ ಇತಿಹಾಸಕಾರರ ದ್ರೋಹದ ಕಥೆಯಾಯಿತು. ಈ ಆನಂದಪಾಲನ ಭೋಳೇತನಕ್ಕೆ ಏನು ಹೇಳೋಣ? ತನ್ನ ತಂದೆಯ ಆತ್ಮಾಹುತಿಗೆ ಕಾರಣನೆನ್ನಲಾದ, ಯುದ್ಧದಲ್ಲಿ ಕುತಂತ್ರವನ್ನೇ ಉಪಯೋಗಿಸುತ್ತಿದ್ದ ಮತಾಂಧ ಮದಾಂಧನನ್ನು ಕೈಗೆ ಸಿಕ್ಕಿದರೂ ಕೊಲ್ಲದೇ ಬಿಟ್ಟ ಆನಂದಪಾಲನ ಕ್ರಮ ಹುಚ್ಚುತನವಲ್ಲದೆ ಇನ್ನೇನು? ತಾನೊಬ್ಬನೇ ಗಜನಿಯನ್ನು ಗೆದ್ದೆನೆಂಬ ಗೌರವ ಶಾಶ್ವತವಾಗಿ ಉಳಿಯಬೇಕೆಂಬ ಕಾರಣಕ್ಕೆ ಇನ್ನಾರಾದರೂ ಯುದ್ಧಕ್ಕೆ ಬಂದರೆ ಗಜನಿ ಸೋಲಬಾರದೆನ್ನುವ ಕಾರಣಕ್ಕೆ ಅವನಿಗೆ ಒತ್ತಾಸೆಯಾಗಿ ನಿಲ್ಲುವ ಅವನ ಅಹಂ ಅವನಿಗೇ ಮುಳುವಾಯಿತು. ತನಗೆ ಸಹಾಯ ಮಾಡಬಂದ ಆನಂದಪಾಲನನ್ನು ಗಜನಿ ನಡೆಸಿಕೊಂಡದ್ದಾದರೂ ಹೇಗೆ? ಮುಲ್ತಾನನ್ನು ಆಳುತ್ತಿದ್ದ ದಾವೂದನ ಮೇಲೆ ದಾಳಿ ಮಾಡಲು ನನ್ನ ಸೈನ್ಯವನ್ನು ನಿನ್ನ ರಾಜ್ಯದ ಮೂಲಕ ಕೊಂಡು ಹೋಗಲು ಅನುಮತಿ ಕೊಡು ಎಂದು ಮಹಮ್ಮದ್ ಕೇಳಿದಾಗ ದಾವೂದನೊಂದಿಗೆ ಮೊದಲಿನಿಂದಲೂ ತನಗಿದ್ದ ಸ್ನೇಹ ಸಂಬಂಧದ ಕಾರಣ ಆನಂದಪಾಲ ಅನುಮತಿ ನಿರಾಕರಿಸಿದ. ಒಂದು ವೇಳೆ ಆನಂದಪಾಲ ಹಿಂದೆ ಗೆದ್ದಿಲ್ಲವೆಂದಿದ್ದರೆ ಈ ಅನುಮತಿ ಕೇಳುವ ಪ್ರಸಂಗವೂ ಬರುತ್ತಿರಲಿಲ್ಲ ಅಲ್ಲವೇ? ಕೆರಳಿದ ಗಜನಿ ಸಕಲ ಸೈನ್ಯದೊಂದಿಗೆ ದಂಡೆತ್ತಿ ಬಂದ. ಅಪಾಯವನ್ನು ಗ್ರಹಿಸಿದ ಉಜ್ಜಯಿನಿ, ಗ್ವಾಲಿಯರ್, ಕನೋಜ್, ಕಲಿಂಜರ್, ಅಜ್ಮೀರಗಳ ದೊರೆಗಳು ಆನಂದ ಪಾಲನಿಗೆ ಬೆಂಬಲವಾಗಿ ದೊಡ್ಡ ಪ್ರಮಾಣದ ಸೈನ್ಯವನ್ನು ಕಳುಹಿಕೊಟ್ಟರು. ನಲವತ್ತು ದಿನಗಳ ಕಾಲ ಎರಡೂ ಪಕ್ಷಗಳು ಶಿಬಿರದಲ್ಲೇ ಉಳಿದವು. ಈ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳ ಸ್ತ್ರೀಯರು, ಪುರುಷರು ತಂತಮ್ಮ ಬೆಳ್ಳಿ,ಬಂಗಾರದ ಒಡವೆಗಳನ್ನು ಮಾರಿ, ಆಭರಣಗಳನ್ನು ಕರಗಿಸಿ ಶತ್ರುಗಳನ್ನು ಎದುರಿಸಲು ಯಥಾಶಕ್ತಿ ನಿಧಿಯನ್ನು ಒಟ್ಟುಗೂಡಿಸಿಕೊಟ್ಟರು. ಇಂತಹ ಅಭೂತಪೂರ್ವ ರಾಷ್ಟ್ರಪ್ರೇಮ, ಐಕ್ಯತೆ ವಿಜೃಂಭಿಸಿದ್ದರೂ, ಸ್ವತಃ ಮಹಾಶೂರನಾಗಿದ್ದ ಆನಂದಪಾಲನೇ ಮಹಾ ಸೇನೆಯ ನೇತೃತ್ವ ವಹಿಸಿದ್ದಾಗ್ಯೂ ವಿಧಿ ಬೇರೊಂದು ಬಗೆಯಿತು. ಮಹಮ್ಮದ್ ತ್ವರಿತವಾಗಿ ದಾಳಿ ಮಾಡುವ ತನ್ನ ನುರಿತ ಬಿಲ್ಲುಗಾರರನ್ನು ಒಮ್ಮೆಲೇ ದಾಳಿ ಮಾಡುವಂತೆ ಪ್ರೇರೇಪಿಸಿದ. ಅವರೆಲ್ಲಾ ಕ್ಷಣಾರ್ಧದಲ್ಲಿ ಸತ್ತು ಬಿದ್ದರು. ಹೊತ್ತು ಕಳೆಯುತ್ತಿದ್ದಂತೆ ಮಹಮ್ಮದನ ಕಡೆಯ ಅತಿರಥ ಮಹಾರಥರೆಲ್ಲಾ ನೆಲಕ್ಕೊರಗಿದರು. ಇನ್ನೇನು ಸೋತು ನೆಲಕ್ಕಚ್ಚಿ ತನ್ನ ಪಾಡು ನಾಯಿಪಾಡಾಗುತ್ತದೆ ಎನ್ನುವಾಗ ಮಹಮ್ಮದ ತನ್ನ ಕಡೆಯ ಆಯ್ದ ಸೈನಿಕರಿಗೆ ನೇರವಾಗಿ ಆನಂದಪಾಲ ಕುಳಿತ ಆನೆಯ ಮೇಲೆ ದಾಳಿ ಮಾಡುವಂತೆ ಕಳುಹಿದ. ಶತ್ರು ಸೈನಿಕರ ಈಟಿಗೆ ಆನಂದಪಾಲ ಕುಳಿತಿದ್ದ ಆನೆ ಗಾಯಗೊಂಡು ಓಡಲಾರಂಭಿಸಿದಾಗ ರಾಜನೇ ಪಲಾಯನ ಮಾಡುತ್ತಿದ್ದಾನೆಂದು ಅರಿತ ಅವನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಮೊದಲೇ ಧೂರ್ತನಾಗಿದ್ದ ಗಜನಿ ಈ ಗೊಂದಲದ ಪರಿಸ್ಥಿತಿಯನ್ನು ತನಗೆ ಅನುಕೂಲಕರವಾಗುವಂತೆ ಬಳಸಿ ಯುದ್ಧದಲ್ಲಿ ಜಯಶಾಲಿಯಾದ. ಪರಾಭವಗೊಂಡ ಸೈನ್ಯವನ್ನು ಹಿಂದೂ ರಾಜರಂತೆ ಕ್ಷಮಿಸಿ ಬಿಟ್ಟುಬಿಡದೆ ಅವರ ಬೆನ್ನ ಹಿಂದೆ ಬಿದ್ದು ಬೇಟೆಯಾಡಿ ಇಪ್ಪತ್ತು ಸಾವಿರ ಸೈನಿಕರ ಮಾರಣಹೋಮ ಮಾಡಿದ. ಹೀಗೆ ತಾನು ಸೋಲಿಸಿದೆ ಎಂದು ಗರ್ವಪಟ್ಟ ಶತ್ರುವಿನ ಕೈಯಲ್ಲೇ ಆನಂದಪಾಲ ಸೋಲಲ್ಪಟ್ಟ. ಐವತ್ತು ಗಜ ಹಾಗೂ ಪ್ರತಿವರ್ಷ ಸುಲ್ತಾನನ ಸೇವೆ ಮಾಡಲು ಎರಡು ಸಾವಿರ ಜನರನ್ನು ಸರಬರಾಜು ಮಾಡುವ ಸಂಧಿಯೊಂದಿಗೆ ಸಾಮಂತನಾಗಿಬಿಟ್ಟ. ಮುಂದಿನ ಭಾರತವೀರರು ಈ ಘಟನೆಯಿಂದ ಪಾಠ ಕಲಿಯಬೇಕಿತ್ತು. ಹೀಗೆ ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...ಆದರೆ ಇತಿಹಾಸಕಾರರ ತಿರುಚುವಿಕೆಗೆ ಸಿಲುಕಿ ಮಣ್ಣಾಗಿ ಹೋದ!

             ಈ ಸೋಲಿನ ನಂತರ ಷಾಹಿಗಳು ತಮ್ಮ ರಾಜಧಾನಿಯನ್ನು ನಂದನಕ್ಕೆ ಬದಲಿಸಿಕೊಂಡರಾದರೂ ಗಜನಿಗೆ ಅಡಿಗಡಿಗೆ ತಡೆಯಾಗಿ ನಿಂತರು. ಆನಂದಪಾಲನ ಮಗ ತ್ರೀಲೋಚನಪಾಲ ಕ್ರಿ.ಶ 1013ರಲ್ಲಿ ಕಾಶ್ಮೀರದ ಪ್ರಧಾನಿಯ ಸಹಾಯ ಪಡೆದು ಗಜನಿಯನ್ನು ದಿಟ್ಟವಾಗಿ ಎದುರಿಸಿದ. ಹಲವು ದಿನಗಳವರೆಗೆ ಯುದ್ಧ ನಡೆಯಿತು. ಇಲ್ಲೂ ಮೋಸದಿಂದ ಗಜನಿ ಜಯಶಾಲಿಯಾದ. ಆತನ ಮಗ ಭೀಮಪಾಲ ಲೋಹರ ಅಥವಾ ಲೋಹಕೋಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ವೇಳೆಯಲ್ಲಿ(ಕ್ರಿ.ಶ.1015) ಗಜನಿ ಹರಸಾಹಸ ಪಟ್ಟರು ಆತನ ಕೂದಲು ಕೊಂಕಿಸಲಾಗಲಿಲ್ಲ. ಹೇಗೋ ಬಚಾವಾದ ಗಜನಿ ನಿರಾಶನಾಗಿ ತನ್ನ ಊರು ಸೇರಿಬಿಟ್ಟ. ಷಾಹಿಗಳು ಲೋಹರಾದಿಂದ ಆಚೆಗೆ ಗಜನಿಯನ್ನು ಹೋಗಗೊಡಲೇ ಇಲ್ಲ. ಅತ್ತ ಗಜನಿಗೂ ಅವರನ್ನು ಲೋಹರಾದಿಂದ ನಿರ್ಮೂಲನೆಗೊಳಿಸಲಾಗಲಿಲ್ಲ. ಆದರೆ ಸತತ ಯುದ್ಧಗಳ ಬಳಿಕ 1021ರಲ್ಲಿ ತ್ರಿಲೋಚನಪಾಲ ಹಾಗೂ 1026ರಲ್ಲಿ ಭೀಮಪಾಲನನ್ನು ಕೊಲೆಗೈದ ಗಜನಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಿದ. ವರ್ಷಗಳ ಬಳಿಕ ಆಲ್ಬೆರೂನಿ ಬರೆಯುತ್ತಾನೆ- "ಷಾಹಿಗಳ ರಾಜವಂಶ ಈಗ ನಿರ್ನಾಮವಾಗಿದೆ. ಆದರೆ ತಾವಿದ್ದಷ್ಟು ದಿನ ಪರಮ ವೈಭವದಿಂದ ಪರಾಕ್ರಮದಿಂದ ಬದುಕಿದ ಷಾಹಿಗಳು ಉದಾತ್ತ ಮನೋಭಾವವನ್ನು, ಉದಾತ್ತ ಗುಣಧರ್ಮವನ್ನೂ ಹೊಂದಿದ್ದ ಮಹಾಪುರುಷರಾಗಿದ್ದರು." ಸುಮಾರು ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿದ ಷಾಹಿ ರಾಜವಂಶ ಮಾತೃಭೂಮಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಸಮರ್ಪಿಸಿತು. ಭಾರತೀಯ ಅರಸರು ವಿದೇಶೀ ಆಕ್ರಮಣದ ವಿರುದ್ಧ ಸೆಟೆದು ನಿಲ್ಲಲಿಲ್ಲ ಎಂದು ಹೇಳಿದ ಮೂರ್ಖರಿಗೆ ಇದು ಅರ್ಥವಾದೀತೇ?

ಯಾರು ಮಹಾತ್ಮ? ಭಾಗ-೨೫

ಯಾರು ಮಹಾತ್ಮ?

ಭಾಗ-೨೫

 
                  ಬೇಡುವುದು ಹಾಗೂ ಬ್ರಿಟಿಷರನ್ನು ಸಂತೋಷಗೊಳಿಸುವ ಕ್ರಮದ ಮೂಲಕ ಕಾಂಗ್ರೆಸ್ ಭಿಕ್ಷುಕರ ಪಕ್ಷವಾಗುವ ಮಟ್ಟಕ್ಕೆ ಇಳಿಯುವುದನ್ನು  ತಿಲಕರು ಎಂದೂ ಬಯಸುತ್ತಿರಲಿಲ್ಲ(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ತಿಲಕರ ಬಳಿಕ ಕಾಂಗ್ರೆಸ್ ಬ್ರಿಟಿಷರ ಮುಂದೆ ಮಂಡಿಯೂರಿತು.  1939ರಲ್ಲಿ ಬೋಸ್ ಗಾಂಧಿಯ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಗೆದ್ದರು. "ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಕೂಡಲೇ ಹೋರಾಟ ಕೈಗೆತ್ತಿಕೊಳ್ಳಬೇಕು. ಭಾರತವನ್ನು ತೊರೆಯಲು ಬ್ರಿಟಿಷರಿಗೆ ಅಂತಿಮ ಗಡುವು ನೀಡಬೇಕು" ಎಂದು ಅವರು ಘೋಷಿಸಿದರು. ಅಲ್ಲದೆ ಕೆಲವು ಕಾಂಗ್ರೆಸ್ ನಾಯಕರು ಬ್ರಿಟಿಷ್ ಸಾಮ್ರಾಜ್ಯಶಾಹಿ ಜೊತೆ ಶಾಮೀಲಾಗಿದ್ದಾರೆ ಎಂದೂ ಆಪಾದಿಸಿದರು. ಈ ಮಾತು ಗಾಂಧಿಯನ್ನು ಕುರಿತೇ ಹೇಳಿದುದಾಗಿತ್ತು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ಬ್ರಿಟಿಷರ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಪಕ್ಷ ಸಿದ್ಧವಿತ್ತು. "ಗೌರವಯುತ ಒಪ್ಪಂದ ಸಾಧ್ಯವಾಗುವುದಾದರೆ ಬ್ರಿಟಿಷರ ಜೊತೆ ರಾಜಿಗೆ ನಾವು ಸಿದ್ಧ" ಎನ್ನುವುದು ಗಾಂಧಿಯ ನಿಲುವಾಗಿತ್ತು(ಲೈಫ್ ಹಿಸ್ಟರಿ ಆಫ್ ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ).

               ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಭೂತಪೂರ್ವ ಕಾಣಿಕೆ ನೀಡಿದ ಸಶಸ್ತ್ರ ಹೋರಾಟವನ್ನು ಗಾಂಧಿ ಟೀಕಿಸಿದರು. ಅದನ್ನು ವ್ಯರ್ಥಗೊಳಿಸಲು ತಮ್ಮಿಂದಾದ ಪ್ರಯತ್ನ ಮಾಡಿದರು. "ಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದಕ್ಕಿಂತ ಸಾವಿರ ವರ್ಷವಾದರೂ ಸರಿ, ಅಹಿಂಸಾ ವಿಧಾನದಿಂದ ಸ್ವಾತಂತ್ರ್ಯ ಗಳಿಸುವುದೇ ಮೇಲು" ಎನ್ನುತ್ತಿದ್ದರವರು. ದೇಶೀಯರನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕಿಂತ ತಮ್ಮ ತಥಾಕಥಿತ ಅಹಿಂಸಾ ಸಿದ್ಧಾಂತವೇ ಅವರಿಗೆ ಮುಖ್ಯವಾಯಿತು. ಕ್ರಾಂತಿಕಾರಿಗಳನ್ನು ತಮಗೆ ಸಿಕ್ಕ ವೇದಿಕೆ ಹಾಗೂ ಮಾಧ್ಯಮಗಳ ಮೂಲಕ ಖಂಡಿಸುತ್ತಾ ದೂಷಿಸುತ್ತಿದ್ದರು ಗಾಂಧಿ. ಈ ಕದನ ಕಲಿಗಳಿಗೆ ದೇಶೀಯರ ಹೃದಯದಲ್ಲಿ ಅಗಾಧ ಬೆಂಬಲ ಇದ್ದಾಗ್ಯೂ ಗಾಂಧಿ ಕ್ರಾಂತಿಕಾರಿಗಳಿಗೆ ಪ್ರೇರಣಾ ಸ್ತ್ರೋತರಾದ ಶಿವಾಜಿ, ರಾಣಾ ಪ್ರತಾಪ, ಗುರು ಗೋವಿಂದ ಸಿಂಗರಂತಹ ಮಹಾಪುರುಷರನ್ನು ಟೀಕಿಸಲು ಆರಂಭಿಸಿದರು. ಅವರನ್ನು "ಹಾದಿ ತಪ್ಪಿದ ದೇಶಭಕ್ತರು" ಎಂದೂ ಜರೆದರು. ಸರಕಾರ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸತೊಡಗಿದಾಗ ಪ್ರತಿರೋಧ ಬಿಡಿ, ಕನಿಷ್ಟ ಸಂತಾಪವನ್ನೂ ವ್ಯಕ್ತಪಡಿಸಲಿಲ್ಲ.

               ಕಾಂಗ್ರೆಸ್ಸಿನ ಮಂದಗಾಮಿ ನಡೆಯನ್ನು ಬೋಸ್ ಯಾವಾಗಲೂ ಉದಾಸೀನ ಭಾವ ಎನ್ನುವಂತೆ ಲೇವಡಿ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಕೆಂಡಕಾರುವ ಹೇಳಿಕೆ ನೀಡುತ್ತಿದ್ದ ಅವರನ್ನು ಕಂಡರೆ ಸಹಜವಾಗಿಯೇ "ತನ್ನದೇ ನಡೆಯಬೇಕು" ಎನ್ನುವ ಭಾವದ ಗಾಂಧಿ ಹಾಗೂ ಅವರ ಅನುಯಾಯಿಗಳಿಗೆ ಸದಾ ಇರಿಸುಮುರಿಸು ಉಂಟಾಗುತ್ತಿತ್ತು. ಬೋಸ್ ಗಾಂಧಿ ನೇತೃತ್ವದ ಅಭ್ಯರ್ಥಿಯ ವಿರುದ್ಧ ಭಾರೀ ಅಂತರದಿಂದ ಗೆದ್ದು ಎರಡನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಈ ವಿರಸ ತಾರಕಕ್ಕೇರಿತು. ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು  ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಬೋಸ್ ತಾವಾಗಿ ಹೊರ ಹೋದ ಮೇಲೂ ಗಾಂಧಿಗೆ ಅವರ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಬೋಸ್'ರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸಲಾಯಿತು. ಮೂರು ವರ್ಷಗಳವರೆಗೆ ಅವರು ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೆ ಆಯ್ಕೆಯಾಗುವ ಹಕ್ಕನ್ನು ಕಸಿದುಕೊಳ್ಳಲಾಯಿತು. (ಇಂಡಿಯನ್ ಪೊಲಿಟಿಕಲ್ ಟ್ರಡಿಷನ್ಸ್ - ಎಚ್.ಎಚ್. ದಾಸ್ & ಪಿ.ಎಸ್.ಎನ್. ಪಾತ್ರೋ)(ನೇತಾಜಿ ಸುಭಾಷ್ ಚಂದ್ರ ಬೋಸ್ - ತಾತ್ಸೋ ಹಯಾಶಿದಾ)

               ಗಾಂಧಿಯ ನೇತೃತ್ವದಲ್ಲಿ 1942ರಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿತು. ಆಂದೋಲನಕ್ಕೆ ಚಾಲನೆ ಸಿಗುವ ಮುನ್ನವೇ ಸರ್ಕಾರ ಕಾಂಗ್ರೆಸ್ಸಿನ ಬಹುತೇಕ ನಾಯಕರನ್ನು ಬಂಧಿಸಿತು. ಕಾಂಗ್ರೆಸ್ಸಿನ ಇನ್ನೊಂದು ವರ್ಗ ಭೂಗತವಾಯಿತು. ಗಾಂಧಿಯ ಕಾರ್ಯತಂತ್ರವನ್ನು ಅನುಸರಿಸಿ ಜೈಲಿಗೆ ಹೋಗುವ ಬದಲು ಸಂಪರ್ಕ ಹಾಳುಗೆಡಹುವುದು, ಬೆಂಕಿ ಹಚ್ಚುವುದು, ಲೂಟಿ, ಕೊಲೆಗಳ ಮೂಲಕ ಸರ್ಕಾರಕ್ಕೆ ಗರಿಷ್ಟ ಹಾನಿಯನ್ನುಂಟು ಮಾಡುವುದು ಅವರ ಉದ್ದೇಶವಾಗಿತ್ತು. ಬಿಹಾರ ಹಾಗೂ ಆಸುಪಾಸಿನಲ್ಲಿ ಸುಮಾರು 900 ರೈಲ್ವೇ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಯಿತು. ಅನೇಕ ಸಮಯದವರೆಗೆ ಆಡಳಿತಯಂತ್ರ ಸ್ಥಬ್ಧಗೊಂಡಿತ್ತು. ಇವೆಲ್ಲವೂ ಗಾಂಧಿಯ ಅಹಿಂಸಾ ವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದ್ದವು. ಗಾಂಧಿ ಇವನ್ನು ಸಮರ್ಥಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ವಿರೋಧಿಸಿದರೆ ದೇಶೀಯರ ತಾತ್ಸಾರಕ್ಕೆ, ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತಿತ್ತು. ಸಮರ್ಥಿಸಿದರೆ ಅವರ ಅಹಿಂಸಾವಾದದ ಪೊಳ್ಳುತನ ಬಯಲಾಗುತ್ತಿತ್ತು. ಗಾಂಧಿ 'ಮಾಡು ಇಲ್ಲವೇ ಮಡಿ' ಕರೆ ನೀಡಿದ್ದನ್ನು ಜನ ಹಿಂಸಾತ್ಮಕ್ಕೆ ಹೋರಾಟಕ್ಕೆ ನಡೆದ ಅನುಮತಿ ಎಂದೇ ತಿಳಿದುಕೊಂಡರು. ಹಾಗೂ ಎಲ್ಲಾ ರೀತಿಯ ಹಿಂಸಾ ಚಟುವಟಿಕೆಗೆ ಮುಂದಾದರು. ಹೀಗೆ ಆಂದೋಲನ ಆರಂಭವಾದ ಕೆಲವೇ ವಾರಗಳಲ್ಲಿ ಗಾಂಧಿಯ ಅಹಿಂಸಾ ಸಿದ್ಧಾಂತ ಮಣ್ಣುಗೂಡಿತು. 1943ರಲ್ಲಿ ಲಾರ್ಡ್ ಲಿಲಿನ್ತೋ ಗಾಂಧಿಗೆ ಬರೆದ ಪತ್ರದಲ್ಲಿ "ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧಿಯ ಬೆಂಬಲಿಗರು ನಡೆಸಿದ ಹಿಂಸಾಚಾರಗಳನ್ನು ಒಪ್ಪಿಕೊಳ್ಳುವಂತೆ ಅಥವಾ ನಿರಾಕರಿಸುವಂತೆ" ಸವಾಲು ಹಾಕಿದ. ಆಗ ಗಾಂಧಿ ಬಲವಂತವಾಗಿ ಹಿಂಸೆಯನ್ನು ಖಂಡಿಸಬೇಕಾಯಿತು. ಅಂದರೆ ತಮ್ಮ ಗೊಡ್ಡು ವಿಚಾರಗಳ ಗೆಲುವಿಗಾಗಿ ಸ್ವಾತಂತ್ರ್ಯ ಹೋರಾಟವನ್ನೂ ವಿರೋಧಿಸುವ ನಿಲುವಿಗೂ ಗಾಂಧಿ ಬಂದಿದ್ದರು! ತಮ್ಮದೇ ಅಹಿಂಸಾ ಮಾದರಿಯ ಹೋರಾಟಗಳು ಒಂದರ ಹಿಂದೆ ಒಂದು ವಿಫಲವಾಗುತ್ತಿದ್ದರೂ, ಅಹಿಂಸೆಯ ಹೋರಾಟವೇ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಹಿಂಸಾತ್ಮಕವಾಗಿ ಬದಲಾಗಿದ್ದರೂ ಗಾಂಧಿ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ಪ್ರೋತ್ಸಾಹಿಸಲೇ ಇಲ್ಲ.

                     ಅತ್ತ ಸುಭಾಷ್, ರಾಸ್ ಬಿಹಾರಿ ಬೋಸರಿಂದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗಿನ ನೇತೃತ್ವವನ್ನು ವಹಿಸಿಕೊಂಡು ಐ.ಎನ್.ಎ ಕಟ್ಟಿ ಭಾರತದತ್ತ ದಾಳಿಗೆ ಮುಂದುವರಿಯುತ್ತಿರುವುದನ್ನು ಗಾಂಧಿ ಹಾಗೂ ಅವರ ಶಿಷ್ಯ ನೆಹರೂ ವಿರೋಧಿಸಿದರು. ಸುಭಾಷರು ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಅವರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಉತ್ತರ ಕುಮಾರ ನೆಹರೂ "ನಿಮ್ಮ ಯುದ್ಧಾಪರಾಧಿ ಸುಭಾಷ್ ಬೋಸ್'ಗೆ ರಷ್ಯಾ ಆಶ್ರಯ ನೀಡಿದೆ. ವಿಚಾರಿಸಿಕೊಳ್ಳಿ" ಎಂದು ಪತ್ರವನ್ನೂ ಬರೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತನ್ನದೇ ದೇಶೀಯನನ್ನು ಯುದ್ಧಾಪರಾಧಿ ಎಂದು ಕರೆದು, ಆತನ ವಿರುದ್ಧ ಕತ್ತಿ ಮಸೆದದ್ದು ಮಾತ್ರವಲ್ಲ, ಆತನಿಗೆ ಇಂತಹವರು ಆಶ್ರಯ ಕೊಟ್ಟಿದ್ದಾರೆ, ವಿಚಾರಿಸಿಕೊಳ್ಳಿ ಎಂದಾತ ಈ ದೇಶದ ಮೊದಲ ಪ್ರಧಾನಿಯಾದ! "ಬೋಸ್ ಶೂರತನ ವೈಭವೀಕರಿಸುವ ಪ್ರಚಾರ ಮತ್ತಷ್ಟು ನಡೆದಲ್ಲಿ, ಹೂವಿನ ಗುಚ್ಛ ನೀಡಿದಂತೆ ದೇಶದ ನಾಯಕತ್ವವನ್ನು ಅವರಿಗೆ ನೀಡಲು ದಾರಿ ಮಾಡಿದಂತೆ" ಎಂದು ಗಾಂಧಿಗೆ ಮೌಂಟ್ ಬ್ಯಾಟನ್ ಎಚ್ಚರಿಕೆ ನೀಡಿದ್ದ.(ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ)

                   ಅಲ್ಲಾ, ಮೌಂಟ್ ಬ್ಯಾಟನ್ ಗಾಂಧಿಗೆ ಯಾಕೆ ಎಚ್ಚರಿಕೆ ಕೊಡಬೇಕು? ಮೌಂಟ್ ಬ್ಯಾಟನ್ ಸುಭಾಷರಿಗೂ ಗಾಂಧಿಗೂ ಸಮಾನ ವೈರಿಯಲ್ಲವೇ? ಹಾಗಿದ್ದಲ್ಲಿ ಆತ ಗಾಂಧಿಗೆ ಯಾಕೆ ಈ ರೀತಿ ಎಚ್ಚರಿಕೆ ಕೊಡುತ್ತಾನೆ? ಆತ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದ ಎನ್ನೋಣವೇ? ನಾಯಕರ ಮಧ್ಯೆ ಅದರಲ್ಲೂ ಸುಭಾಷರು ಹಾಗೂ ಗಾಂಧಿಯ ನಡುವೆ ಒಡಕು ತರುವುದರಿಂದ ಆತನಿಗೇನೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಗಾಂಧಿ - ಸುಭಾಷರ ನಡುವಿನ ಒಡಕು ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಅಲ್ಲದೆ ಸುಭಾಷರನ್ನು ಹತ್ತಿಕ್ಕಲು ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರು ಗಾಂಧಿ. ಸುಭಾಷರ ಸ್ವಾತಂತ್ರ್ಯ ಹೋರಾಟಕ್ಕೇ ಇತಿಶ್ರೀ ಹಾಡಲೂ ಗಾಂಧಿ ಪ್ರಯತ್ನಿಸಿದ್ದರು. ಈ ಎಲ್ಲಾ ಬಿಂದುಗಳನ್ನು ರೇಖೆಗಳೊದಿಗೆ ಜೋಡಿಸಿದಾಗ ಅದು ಕೊನೆಗೆ ಹೋಗಿ ನಿಲ್ಲುವುದು ಸ್ವಾರ್ಥ-ಅಧಿಕಾರ ದಾಹ-ಪ್ರಸಿದ್ಧಿಯ ಹುಚ್ಚು ಎನ್ನುವ ಮೂರು ಅಂಶಗಳ ವ್ಯಕ್ತಿತ್ವಕ್ಕೆ! ಅಂದರೆ ಗಾಂಧಿ ಅಧಿಕಾರಕ್ಕೋಸ್ಕರ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರು, ತಮಗೆ ಅಥವಾ ತಮಗೆ ಬೇಕಾದವರಿಗೆ ಅಧಿಕಾರವನ್ನು ಹಸ್ತಾಂತರಿಸಲು ನಾಟಕವಾಡುತ್ತಿದ್ದರು ಎನ್ನುವ ಅರ್ಥ ಇದರಿಂದ ಹೊರಹೊಮ್ಮುತ್ತದಲ್ಲವೇ?


ಗುರುವಾರ, ನವೆಂಬರ್ 17, 2016

ಯಾರು ಮಹಾತ್ಮ? ಭಾಗ- ೨೪

ಯಾರು ಮಹಾತ್ಮ?
ಭಾಗ- ೨೪


          1947 ಕಾಂಗ್ರೆಸ್ 12ರಂದು ಕಾಂಗ್ರೆಸ್ ಧುರೀಣರು ಹರಿದ್ವಾರಕ್ಕೆ ಭೇಟಿ ನೀಡಿದಾಗ ಹಿಂದೂ ನಿರಾಶ್ರಿತರ ದೊಡ್ಡ ಗುಂಪೊಂದು ಎದುರಾಯಿತು. ಮುಸ್ಲಿಮ್ ಲೀಗಿನ ನೇರ ಕಾರ್ಯಾಚರಣೆಯಿಂದ ಮನೆ, ಆಸ್ತಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಅವರಿಗೆ ಸಹಜವಾಗಿಯೇ ಗಾಂಧಿಯ ಮೇಲೆ ಸಿಟ್ಟಿತ್ತು. ಗಾಂಧಿಯನ್ನು ಕಂಡಕೂಡಲೇ ಅವರಿಂದ "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆ ಅವರಿಂದ ಹೊರಹೊಮ್ಮಿತು. ಇದೇ ಪರಿಸ್ಥಿತಿ ಗಾಂಧಿ ಪಂಜಾಬ್-ಸಿಂಧ್ ಪ್ರವಾಸದಲ್ಲಿರುವಾಗಲೂ ಎದುರಾಯಿತು. ಅಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿ ಯಾವುದೇ ಭಾಷಣ ಮಾಡದೆ ಗಾಂಧಿ ದೆಹಲಿಗೆ ವಾಪಸಾಗಬೇಕಾಯಿತು.


             ಆಚಾರ್ಯ ಕೃಪಲಾನಿ 1947ರ ಜೂನ್ 14ರಂದು ನಡೆದ ಎಐಸಿಸಿ ಅಧಿವೇಶನದಲ್ಲಿ ವಿಭಜನೆಯ ಬಗೆಗಿನ ಗಾಂಧಿ ದೃಷ್ಟಿಕೋನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ದೇಶ ವಿಭಜನೆ ಕುರಿತ ಗಾಂಧಿ ನಿಲುವು ಅಪ್ರಾಯೋಗಿಕ. ಕಳೆದ ಮೂವತ್ತು ವರ್ಷಗಳಿಂದ ಗಾಂಧಿಯ ಮೇಲೆ ರಾಜಕೀಯ ನಿಷ್ಠೆ ಹೊಂದಿದ್ದರೂ ಇಂದು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಸಮಸ್ಯೆಗಳನ್ನು ಸಾಮೂಹಿಕ ಆಧಾರದ ಮೇಲೆ ಬಗೆಹರಿಸುವ ದಾರಿ ಗಾಂಧಿಗೆ ತಿಳಿದಿಲ್ಲ. ಅವರು ನಮಗೆ ತೋರಿದ ಅಹಿಂಸೆ, ಅಸಹಕಾರಗಳನ್ನು ಯಾಂತ್ರಿಕವಾಗಿಯಾದರೂ ಅನುಸರಿಸುತ್ತಿದ್ದರು. ಇಂದು ಅವರೇ ಸ್ವತಃ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಪಂಜಾಬಿನ ಹಿಂಸೆಯನ್ನು ಶಮನಗೊಳಿಸಲು ಅವರ ಅಹಿಂಸೆ-ಅಸಹಕಾರಗಳಿಗೆ ಸಾಧ್ಯವಾಗಲಿಲ್ಲ. ಇಡೀ ಭಾರತದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆಯನ್ನು ಸಾಧಿಸುವ ಸಲುವಾಗಿ ತಾವು ಬಿಹಾರದಲ್ಲಿ ಪ್ರಯತ್ನಿಸುವುದಾಗಿ ಗಾಂಧಿ ಹೇಳುತ್ತಾರೆ. ಇದು ಹೇಗೆ ಸಾಧ್ಯ? ಸಾಮಾನ್ಯನಿಗೂ ಗೊತ್ತು ಇದು ಅಪ್ರಾಯೋಗಿಕ ಎಂದು. ಉದ್ದೇಶಿತ ಗುರಿ ಸಾಧಿಸಲು ಗಾಂಧಿಯಲ್ಲಿ ಖಚಿತ ಹೆಜ್ಜೆಗಳೇ ಇಲ್ಲ. ಅವರು ನೀತಿಗಳನ್ನು ರೂಪಿಸುತ್ತಾರೆ. ಆದರೆ ಅವು ಬೇರೆಯವರಿಂದ ಜಾರಿಯಾಗಬೇಕೆಂದು ಬಯಸುತ್ತಾರೆ." "ಹೃದಯದ ಏಕತೆ ಸಾಧಿಸುವ ಮೂಲಕ ವಿಭಜನೆಯ ಪರಿಣಾಮಗಳನ್ನು ತಟಸ್ಥಗೊಳಿಸಿ. ಕೆಲಸಕಾರ್ಯಗಳ ಮುಖಾಂತರ ಎರಡು ದೇಶ ಸಿದ್ಧಾಂತವನ್ನು ಖಂಡಿಸಿ" ಎಂದು ಬಿಟ್ಟಿ ಸಲಹೆ ನೀಡಿದಾಗ ವಿಭಜನೆಯ ಪ್ರಸ್ತಾಪ ವಿರೋಧಿಸಿದ ಜನ ತಿರುಗಿ ಬೀಳದೆ ಇರುತ್ತಾರೆಯೇ? ಮೇಲಿಂದ ಮೇಲೆ ವಿರೋಧ ಎದುರಿಸಿದಾಗ ತಮ್ಮ ದಾರಿ ಸರಿಯಾಗಿಯೇ ಇದೆ ಎಂದು ಗಾಂಧಿ ಭಾವಿಸಿದರು. ಮತ್ತೆ ತಮ್ಮ ದಾರಿಯಲ್ಲೇ ಸಾಗಿದರು(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                 ವಿಭಜನೆಯ ನಿರ್ಣಯವನ್ನು ಕೊನೆಗಾಣಿಸುವವರೆಗೆ ಗಾಂಧಿಯ ಮನೆಯ ಎದುರು ಉಪವಾಸ ಕೂರಲು ಯುವ ಜೋಡಿಯೊಂದು ನಿರ್ಧರಿಸಿತು. ಆಗ ಗಾಂಧಿ "ಇದು ಸರಿಯಾದ ವಿಧಾನವಲ್ಲ. ಭೌತಿಕ ವಿಭಜನೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಪಾಕಿಸ್ತಾನ ರಚನೆಯಾಗದಂತೆ ತಡೆಯುವ ಏಕೈಕ ಮಾರ್ಗವೆಂದರೆ ಹಿಂದೂಗಳು ಮುಸ್ಲಿಮ್ ಸಹೋದರರಿಂದ ಬೇರೆಯಾಗದೇ ಇರುವುದು. ಹಿಂದೂಗಳ ಹೃದಯ ಗಟ್ಟಿಯಾಗಿ ಇದ್ದರೆ ಭೌತಿಕ ವಿಭಜನೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ." ಎಂದು ಸಮಾಧಾನಿಸಲು ಯತ್ನಿಸಿದರು ಗಾಂಧಿ. ಇಲ್ಲಿ ಗಾಂಧಿಯ ಕಪಟತ್ವ ಬೆಳಕಿಗೆ ಬರುತ್ತಿದೆ. ವಿಭಜನೆಯಾದರೆ ನನ್ನ ದೇಹದ ಮೇಲೆ ಎಂದಾತ ಈಗ ಅದು ಕೇವಲ ಭೌತಿಕ ವಿಭಜನೆಯಷ್ಟೇ ಎಮ್ದು ತಿಪ್ಪೆ ಸಾರಿಸುತ್ತಿದ್ದಾರೆ. ಅಲ್ಲದೆ ಆ ವಿಭಜನೆಯಿಂದ ಭಾರತಕ್ಕೇನೂ ಹಾನಿಯಿಲ್ಲ ಎನ್ನುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರೇನೇ ಹಾನಿ ಮಾಡಿದರೂ ಹಿಂದೂಗಳು ಮುಸ್ಲಿಮರ ಜೊತೆಯಾಗಿ ಇರಬೇಕಂತೆ! ಗಾಂಧಿಗೆ ದೇಶಕ್ಕಿಂತ ಹಿಂದೂ-ಮುಸ್ಲಿಮ್ ಏಕತೆಯ ಹುಚ್ಚೇ ತೀವ್ರವಾಗಿತ್ತು ಎನ್ನುವುದರ ದ್ಯೋತಕ ಇದು. ರಾಜತಾಂತ್ರಿಕವಾಗಿ ಕಾರ್ಯ ನಿರ್ವಹಿಸಬೇಕಾದ ಹೊತ್ತಿನಲ್ಲಿ ಎಲ್ಲಾ ಬಿಟ್ಟವರಂತೆ ಮಾತನಾಡುತ್ತಿದ್ದಾರೆ ಗಾಂಧಿ. ಕ್ಷಾತ್ರವನ್ನು ಪ್ರದರ್ಶಿಸಬೇಕಾದ ಸಮಯದಲ್ಲಿ ವೇದಾಂತ ಹೇಳುತ್ತಿದ್ದಾರೆ. ಇದು ಗಾಂಧಿಯ ನಾಯಕತ್ವದ ವೈಫಲ್ಯದ ಲಕ್ಷಣ. ಆ ಯುವ ಜೋಡಿ ತಾವು ತಮ್ಮ ಆತ್ಮಸಾಕ್ಷಿ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ಗಾಂಧಿಯ ಮಂತ್ರವನ್ನೇ ತಿರುಗಿ ಉಪಯೋಗಿಸಿದಾಗ ಗಾಂಧಿಯ ಮುಖ ಪೆಚ್ಚಾಗದೇ ಇದ್ದೀತೇ? (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                ದೇಶ ವಿಭಜನೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದ ಗಾಂಧಿ ವಿಭಜನೆಯನ್ನು ಒಪ್ಪುವ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅಂಗೀಕರಿಸುವಂತೆ ಜನರನ್ನು ಒತ್ತಾಯಪಡಿಸಿದರು. ವಿಭಜನೆಯ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಮರುಮಾತಿಲ್ಲದೆ ಒಪ್ಪಿದ ಗಾಂಧಿ ದೇಶದ ಜನರ ಮತಭೇದವಿಲ್ಲದ ನಿರ್ಧಾರವನ್ನು ಪರಿಗಣಿಸಿ ಧ್ವಜ ಸಮಿತಿ ಶಿಫಾರಸ್ಸು ಮಾಡಿದ ಕೇಸರಿ ಬಣ್ಣದ ಧ್ವಜವನ್ನು ಯಾಕೆ ಒಪ್ಪಲಿಲ್ಲ? ಅಲ್ಲದೆ ಅದನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದೇಕೆ? ಆ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು, ಸಮಿತಿಯ ನಿರ್ಣಯವನ್ನು ತಿರಸ್ಕರಿಸಿದ ಗಾಂಧಿಗೆ ಈಗೇಕೆ ಸಾಧ್ಯವಾಗಲಿಲ್ಲ? ಗಾಂಧಿಗೆ ಕಾಂಗ್ರೆಸ್ಸಿನ ಮೇಲಿನ ಹಿಡಿತ ತಪ್ಪಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಐವತ್ತೈದು ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತು ತಮ್ಮ ನಿರ್ಧಾರವನ್ನು ಸಾಧಿಸಿಕೊಂಡ ಛಲಗಾರನಿಗೆ ದೇಶ ವಿಭಜನೆಯಂತಹ ಜೀವನ್ಮರಣದ ಪ್ರಶ್ನೆಯ ವಿಚಾರ ಬಂದ ತಕ್ಷಣ ಹಿಡಿತ ತಪ್ಪಿ ಹೋಯಿತೇ? ವಿಭಜನೆಯಾದ ಕೂಡಲೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿತ್ತು. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಬಾಕಿ ಹಣ ಕೊಡುವುದಿಲ್ಲ ಎಂದು ಭಾರತ ಸರಕಾರ ದೃಢ ನಿರ್ಧಾರ ತಾಳಿತ್ತು. ಅಂತಹ ಸಮಯದಲ್ಲಿ ಬಾಕಿ 55 ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತರು ಗಾಂಧಿ. ಗಾಂಧಿಯ ಹಠಮಾರಿ ಧೋರಣೆಗೆ ತಲೆಬಾಗಿತು ಸರಕಾರ! ಪಾಕಿಸ್ತಾನಕ್ಕೆ ಸಹಾಯಕವಾಗುವುದಾದರೆ ಮಾತ್ರ ಉಪವಾಸದ ಅಸ್ತ್ರ , ಹಿಂದೂಗಳಿಗೆ, ಹಿಂದೂಸ್ಥಾನದ ಭವಿಷ್ಯಕ್ಕಾಗುವಾಗ ಉಪವಾಸ, ಅಸಹಕಾರದ ಅಸ್ತ್ರಗಳು ಇಲ್ಲ ಎಂದರೆ ಏನರ್ಥ? ಅನುಯಾಯಿಗಳು ನೆನಪಿಸಿದರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲವೇಕೆ? ಕಾಂಗ್ರೆಸ್ ಮೇಲೆ ಹಿಡಿತವಿಲ್ಲವೆಂದಾದರೆ ಜನರನ್ನೇಕೆ ವಿಭಜನೆಗೆ ಒಪ್ಪುವಂತೆ ಒತ್ತಾಯಪಡಿಸಬೇಕಿತ್ತು? ದೇಶದ ಜನತೆ ತಮ್ಮ ಬೆಂಬಲಕ್ಕೆ ನಿಲ್ಲುತ್ತೇವೆಂದು, ಕಾರ್ಯಕರ್ತರನ್ನು ಒದಗಿಸುತ್ತೇವೆಂದು, ಧನ ಸಹಾಯವನ್ನೂ ಮಾಡುತ್ತೇವೆಂದು ಬಗೆಬಗೆಯಲ್ಲಿ ಧೈರ್ಯ ತುಂಬಿದರೂ ಗಾಂಧಿ ನಿಷ್ಕ್ರಿಯರಾದದ್ದೇಕೆ?


                    ಗಾಂಧಿ ಕೇವಲ ನಿಷ್ಕ್ರಿಯರಾದದ್ದು ಮಾತ್ರವಲ್ಲ ಜನರಲ್ಲಿ ಪಾಕಿಸ್ತಾನದ ರಚನೆಯ ಕುರಿತು ಪ್ರಚಾರ ಕಾರ್ಯವನ್ನೂ ಕೈಗೊಂಡರು. ತನಗಿಷ್ಟವಿಲ್ಲದಿದ್ದಾಗ, ತನ್ನಿಂದ ವಿಭಜನೆಯನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಾಗ ಸುಮ್ಮನೆ ಉಳಿಯಬೇಕಿತ್ತು. ಅದು ಬಿಟ್ಟು ವಿಭಜನೆಯನ್ನು ಒಪ್ಪಿಕೊಳ್ಳಿ ಎಂದು ಜನರಿಗೆ ದುಂಬಾಲು ಬಿದ್ದರು ಗಾಂಧಿ. ಅವರ ಈ ನಿಲುವು ಆಶ್ಚರ್ಯ ತರುವಂತಹದ್ದೇನಲ್ಲ. ಅಡಿಗಡಿಗೆ ಮತಾಂಧ ಮುಸ್ಲಿಮರ ಸಹಾಯಕ್ಕೆ ನಿಂತು ಹಿಂದೂಗಳನ್ನೂ, ರಾಷ್ಟ್ರೀಯವಾದಿ ಮುಸಲ್ಮಾನರನ್ನು ಕಡೆಗಣಿಸಿದ ವ್ಯಕ್ತಿಯ ಈ ನಿಲುವು ಅಸಹಜವೂ ಅಲ್ಲ. ಇಡೀ ಭಾರತ ಬೇಕಾದರೆ ಪಾಕಿಸ್ತಾನವಾಗಲಿ ಎಂದು ಹೇಳಿದ್ದ, ಭಾರತದ ಆಳ್ವಿಕೆಯನ್ನು ಹಿಂದೂಗಳಿಗೆ ಮಾರಣಾಂತಕವಾದ ಮುಸ್ಲಿಮ್ ಲೀಗಿಗೆ ವಹಿಸಿ ಜಿನ್ನಾನನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸುವಂತೆ ವೈಸ್ ರಾಯ್ ಮೌಂಟ್ ಬ್ಯಾಟನ್'ಗೆ ಸಲಹೆ ಮಾಡಿದ್ದ ಗಾಂಧಿಗೆ ದೇಶವಿಭಜನೆಯೆಂದರೆ ಮಕ್ಕಳಾಟದಂತೆ ಕಂಡಿದ್ದಿರಬಹುದು. ಹಿಂದೂಗಳನ್ನು ಸಲಾಮ್ ಮಾಡಿ, ಅಲ್ಲಾ ಹೋ ಅಕ್ಬರ್ ಎಂದು ಹೇಳಿ, ಉರ್ದು ಕಲಿಯಿರಿ, ವಂದೇ ಮಾತರಂ, ಶಿವಬಾವನಿ ಹಾಡಬೇಡಿ, ವಿಭಜನೆಯ ಮೂಲ ಬೀಜ ಇಕ್ಬಾಲನ ಕವಿತೆ ಹಾಡಿ ಎಂದ ಗಾಂಧಿಗೆ ಪಾಕಿಸ್ತಾನವೇ ಪ್ರಿಯವಾಗಿದ್ದಿರಬಹುದು. ಖಿಲಾಫತ್ ಚಳುವಳಿಯನ್ನು ಹಿಂದೂಗಳ ಮೇಲೆ ಹೇರಿ, ಕೊಲೆಗಾರ ಮೋಪ್ಲಾಗಳನ್ನು ಸೋದರರೆಂದು ಕರೆದ ವ್ಯಕ್ತಿಗೆ ಮುಸ್ಲಿಂ ಲೀಗ್ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ಏನಾಶ್ಚರ್ಯವಿದೆ? ಕಲ್ಕತ್ತಾದಲ್ಲಿ ಹಿಂದೂಗಳ ನರಮೇಧಕ್ಕೆ ಕಾರಣನಾದ ಸುಹ್ರಾವರ್ದಿಯನ್ನು ತನ್ನ ಪ್ರೀತಿಯ ಸೈನಿಕ ಎಂದ, ಶೃದ್ಧಾನಂದರ ಕೊಲೆಗಾರ ರಶೀದನನ್ನು ಸಹೋದರ ಎಂದ, ಶೌಕತ್, ಮಹಮ್ಮದ್ ಅಲಿಗೆ ಶರಣು ಬಂದ ಗಾಂಧಿಗೆ ಕೋಮುವಾದಿಯಾಗಿ ಬದಲಾದ ಜಿನ್ನಾ ಪ್ರಿಯನಾಗದೆ ಇದ್ದಾನೇ? ಬ್ರಿಟಿಷರ ಒಡೆದು ಆಳುವ ನೀತಿಗೆ ಗಾಂಧಿಯ ದಾರಿ ಸಹಾಯಕವಾಯಿತು. ವಿಚಿತ್ರವೆಂದರೆ ತನ್ನ ಪುಕ್ಕಲುತನ, ತಿಕ್ಕಲುತನ, ಅಸಹಾಯಕತನ, ಗೊಂದಲಗಳಿಂದಾಗಿ ಸಾಲು ಸಾಲು ವೈಫಲ್ಯ ಕಂಡು ಕೊನೆಗೆ ವಿಭಜನೆಯ ಶಿಲ್ಪಿಯಂತೆ ಕೆಲಸ ಮಾಡಿ ಪರೋಕ್ಷವಾಗಿ ಪಾಕಿಸ್ತಾನದ ಜನಕನಾದ ವ್ಯಕ್ತಿಯನ್ನು ರಾಷ್ಟ್ರಪಿತ ಎಂದು ಸತ್ಕರಿಸಿದ ಈ ದೇಶದ ಬೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು?

ಗುರುವಾರ, ನವೆಂಬರ್ 10, 2016

ಯಾರು ಮಹಾತ್ಮ? ಭಾಗ- ೨೩

ಯಾರು ಮಹಾತ್ಮ?
ಭಾಗ- ೨೩


          ವಿಭಜನೆಯ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಹೊತ್ತಲ್ಲೇ ವಿಭಜನೆ ವಿರುದ್ಧ ಹೋರಾಟ ಆರಂಭಿಸುವಂತೆ ಆಗ್ರಹಿಸುವಂತಹ ಅನೇಕ ಪತ್ರಗಳು ಗಾಂಧಿಗೆ ಬರತೊಡಗಿದವು. ಬ್ರಿಟಿಷರು ತಾವು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವಾಗ ಸೃಷ್ಟಿಸಿದ್ದ ಸ್ಥಿತಿಯನ್ನೇ ಈಗ ಮರುಸೃಷ್ಟಿಸಿದ್ದಾರೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ಜಗಳ ನಡೆಸುವಂತೆ ಮಾಡಿ ತಾವು ತೆರಳುತ್ತಿದ್ದಾರೆ. ನೀವು ವಿಭಜನೆ ವಿರುದ್ಧ ಹೋರಾಟವನ್ನು ಪ್ರಾರಂಭಿಸುವುದಾದಲ್ಲಿ ನಾನು ಗೌರವಯುತವಾಗಿ ಒಂದು ಲಕ್ಷ ಶಿಸ್ತುಬದ್ಧ ಕಾರ್ಯಕರ್ತರನ್ನು ಒದಗಿಸಬಲ್ಲೆ. ಅವರು ಅಹಿಂಸೆಯ ದೀಕ್ಷೆ ತೊಟ್ಟವರಲ್ಲದಿದ್ದರೂ ನಿಮ್ಮ ಸೂಚನೆಗಳನ್ನು ತಮ್ಮದೇ ನೀತಿ ಸಂಹಿತೆಯಂತೆ ವಿಶ್ವಾಸದಿಂದ ಪಾಲಿಸುತ್ತಾರೆ ಎನ್ನುವುದು ಒಂದು ಪತ್ರದ ಒಕ್ಕಣೆಯಾಗಿತ್ತು. ಆದರೆ ಇಅದಕ್ಕೆ ಗಾಂಧಿ "ವಿಭಜನೆಯಂದ ನನ್ನಷ್ಟು ದುಃಖಕ್ಕೀಡಾಗುವವರು ಬೇರೆ ಯಾರೂ ಇಲ್ಲ. ಆದರೆ ಇದರ ವಿರುದ್ಧ ಹೋರಾಟ ನಡೆಸುವ ಯಾವುದೇ ಇರಾದೆ ನನಗಿಲ್ಲ. ಕಾಂಗ್ರೆಸ್ ಯಾವಾಗ ವಿಭಜನೆಯನ್ನು ತನಗಿಷ್ಟವಿಲ್ಲದಿದ್ದರೂ ಕಾಂಗ್ರೆಸ್ ಅಂಗೀಕರಿಸಿತೋ ಅಂತಹ ಕಾಂಗ್ರೆಸ್ ವಿರುದ್ಧವೂ ನಾನ್ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಂತಹ ಹೆಜ್ಜೆಯೂ ಕಲ್ಪನಾತೀತ. ಬ್ರಿಟಿಷರು ವಿಭಜನೆಯನ್ನು ಪ್ರೋತ್ಸಾಹಿಸಿಲ್ಲ. ಹಾಗಾಗಿ ಅವರ ವಿರುದ್ಧ ನಿಮ್ಮ ದಾಳಿಯನ್ನೂ ನಾನು ಒಪ್ಪುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಹಾಗಾದರೆ ಗಾಂಧಿಯ ಪ್ರಕಾರ ದೇಶ ವಿಭಜನೆಗೆ ಜವಾಬ್ದಾರರು ಯಾರು? ಇದು ನುಣುಚಿಕೊಳ್ಳುವ ಕುತಂತ್ರ ಬುದ್ಧಿಯಲ್ಲವೇ? ಅತ್ತ ಕಾಂಗ್ರೆಸ್ ಕಾರ್ಯಕಾರಿಣಿಯ ತೀರ್ಮಾನದ ವಿರುದ್ಧವೂ ಹೋರಾಟ ಮಾಡುವುದಿಲ್ಲ. ಇತ್ತ ಬ್ರಿಟಿಷರ ವಿರುದ್ಧವೂ! ಕಾಂಗ್ರೆಸ್ ವಿರುದ್ಧ ಹೋರಾಟ ಕಲ್ಪನಾತೀತ. ಲಕ್ಷಾಂತರ ಜನರ ಬೆಂಬಲವಿದ್ದು, ಅಸಂಖ್ಯ ಪತ್ರಗಳು ಹೋರಾಟ ಕೈಗೊಳ್ಳುವಂತೆ ಗೋಗರೆದಾಗಲೂ ಗಾಂಧಿಗೆ ವಿಭಜನೆ ವಿರುದ್ಧ ಹೋರಾಡುವ ಮನಸ್ಸಿಲ್ಲವೆಂದಾದರೆ ಗಾಂಧಿಗೆ ವಿಭಜನೆಗೆ ಪೂರ್ಣಸಹಮತವಿತ್ತು ಎಂದೇ ಅರ್ಥವಲ್ಲವೇ? ಜನ ಪಾಕಿಸ್ತಾನ ರಚನೆ ವಿರುದ್ಧ ಹೋರಾಡಬೇಕೆಂದು ನೇರವಾಗಿ ಹೇಳಿದ್ದರು. ಗಮನಿಸಿ, ಬಹುಷಃ ಇದೇ ಕಾರಣಕ್ಕಾಗಿ ಗಾಂಧಿ ಮುಸ್ಲಿಮ್ ಲೀಗ್ ಹೆಸರನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಿಲ್ಲ.

        "ಕಾರ್ಯಕಾರಿ ಸಮಿತಿಯ ದೇಶ ವಿಭಜನೆಯ ನಿರ್ಣಯವನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಕೆಡುಕಿನ ಸಲಹೆ ಬರಬಹುದು. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ಇದನ್ನು ಮಾಡುವ ಅಧಿಕಾರವಿದೆ. ಆದರೆ ಅವರ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡಿದೆ ಮತ್ತು ಆ ನಿರ್ಣಯದ ಪರವಾಗಿ ನಿಲ್ಲುವದು ತಮ್ಮ ಕರ್ತವ್ಯ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು" "ನಿರ್ಣಯಕ್ಕೆ ಸಂಬಂಧಿಸಿ ಕಾರ್ಯಕಾರಿ ಸಮಿತಿ ಹೊರತುಪಡಿಸಿ ಇನ್ನೆರಡು ಪಕ್ಷಗಳಿವೆ - ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮ್ ಲೀಗ್. ಆ ಹಂತದಲ್ಲಿ ಎಐಸಿಸಿ ನಿರ್ಣಯವನ್ನು ವಿರೋಧಿಸಿದರೆ ಜಗತ್ತು ಏನೆಂದು ತಿಳಿದುಕೊಳ್ಳುತ್ತದೆ? ಎಲ್ಲಾ ಪಕ್ಷಗಳು ವಿಭಜನೆಯ ಯೋಜನೆಯನ್ನು ಒಪ್ಪಿಕೊಂಡಿವೆ. ಕಾಂಗ್ರೆಸ್ ತನ್ನ ಮಾತಿನಿಂದ ಹಿಂದೆ ಸರಿಯುವುದು ಸೂಕ್ತವಾಗಲಾರದು."(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮ್ ಲೀಗ್ ಹಾಗೂ ಬ್ರಿಟಿಷರು ಒಪ್ಪಿಕೊಂಡ ಮಾತ್ರಕ್ಕೆ ಕಾಂಗ್ರೆಸ್ ಹಾಗೂ ದೇಶದ ಜನತೆ ವಿಭಜನೆಯನ್ನು ಒಪ್ಪಿಕೊಳ್ಳಬೇಕೇ? ಜಗತ್ತಿನಲ್ಲಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎನ್ನುವ ಉದ್ದೇಶಕ್ಕಾಗಿ ಭಾರತವನ್ನು ಹಾಳುಗೆಡವಬೇಕೇ? ಗಾಂಧಿಯನ್ನು ಮಹಾತ್ಮ ಎಂದು ಪೂಜಿಸುವ ಯಾರೂ ಗಾಂಧಿಯ ಇಂತಹ ಕುಟಿಲ ನೀತಿಗಳನ್ನು ತಿಳಿದಿರುವುದಿಲ್ಲ. ತಿಳಿದಿದ್ದರೂ ಹೇಳುವುದಿಲ್ಲ. ಸಾರ್ವಜನಿಕವಾಗಿ ಒಪ್ಪುವುದೂ ಇಲ್ಲ. ಅವಕಾಶವಾದ!

          "ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್ ತಿರಸ್ಕರಿಸಿದರೆ ಆಗ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಮೇಲೆ ಅವಿಶ್ವಾಸ ಸೂಚಿಸುತ್ತದೆ. ಇದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗೂ ಹೊಸನಾಯಕರನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹೊಸ ನಾಯಕ ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಣಯವನ್ನು ವಿರೋಧಿಸುವವರು ಅಂಥ ನಾಯಕಗಣವನ್ನು ಹುಡುಕಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮತ್ತು ಬಹುಮತ ಸದಸ್ಯರು ಇದೇ ದೃಷ್ಟಿಕೋನ ಹೊಂದಿದ್ದರೆ ಎಐಸಿಸಿ ನಿರ್ಣಯವನ್ನು ತಿರಸ್ಕರಿಸಬಹುದು"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಗಾಂಧಿಯ ದೃಷ್ಟಿಯಲ್ಲಿ ಈಗಿರುವ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವೇ? ಅಪ್ರತಿಮ ಕ್ಷತ್ರಿಯರನ್ನು ಕಂಡ ಈ ನಾಡಿನಲ್ಲಿ ನಾಯಕರಿಗೆ ಬರಗಾಲವೇ? ಇದು ಜನರನ್ನು ವಿಭಜನೆಗೆ ಒಪ್ಪಿಸುವ ಕುಟಿಲತೆಯಷ್ಟೇ! ಇಲ್ಲೇ ಒಂದು ಒಳಸುಳಿಯಿದೆ! ಪರೋಕ್ಷವಾಗಿ ತಮ್ಮ ಶಿಷ್ಯ ನೆಹರೂವಿಗಿಂತ ಉತ್ತಮ ನಾಯಕರಿಲ್ಲ ಅಥವಾ ನೆಹರೂಗಲ್ಲದೆ ಬೇರ್ಯಾರಿಗೂ ಅಧಿಕಾರ ಸಿಗಬಾರದು ಎನ್ನುವ ಭಾವವನ್ನು ಗಾಂಧಿ ಪ್ರಕಟಿಸುತ್ತಿದ್ದಾರೆಯೇ? ಮುಂದೆ ನಡೆದ ಎಲ್ಲಾ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.

        "ಭಾರತ ವಿಭಜನೆಯನ್ನು ಅದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು  ಐರ್ಲೆಂಡಿನಲ್ಲಿರುವ ಭಾರತೀಯರು ಬಲವಾಗಿ ವಿರೋಧಿಸುತ್ತಾರೆ. ಬ್ರಿಟಿಷರು ಐರ್ಲೆಂಡನ್ನು ತ್ಯಜಿಸುವಾಗ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದರ ಪರಿಣಾಮವಾಗಿ ಈಗ ಉತ್ತರ ಹಾಗೂ ದಕ್ಷಿಣ ಐರ್ಲೆಂಡಿನ ಜನರು ದೇವಾಲೆರಾ ನೇತೃತ್ವದಲ್ಲಿ ವಿಭಜನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೂ ಇದೇ ಗತಿ. ನಿಮ್ಮ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನ ಪಡೆದಿರುವ ಭಾರತ ವಿಭಜನೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ಆತ್ಮಹತ್ಯೆಗೆಳಸುವುದಿಲ್ಲ ಎಂದು ಇಲ್ಲಿನ ಎಲ್ಲಾ ಹಿಂದೂಗಳು ಹಾಗೂ ಮುಸ್ಲಿಮರು ನಂಬಿದ್ದೇವೆ" ಎನ್ನುವ ವಿಚಾರವುಳ್ಳ ಪತ್ರವೊಂದನ್ನು ಡಬ್ಲಿನ್ನಿನ ಗಾಂಧಿಯ ಸ್ನೇಹಿತರೊಬ್ಬರು ಬರೆದರು. ಪ್ರತಿಕ್ರಿಯೆಯಾಗಿ ಗಾಂಧಿ "ನನ್ನಲ್ಲಿ ಅಸಹಾಯಕ ಭಾವವುಂಟಾಗುತ್ತಿದೆ. ಭಾರತ ಮತ್ತು ಐರ್ಲೆಂಡ್ ಮಧ್ಯೆ ಸಮಾನಾಂತರ ರೇಖೆ ಎಳೆಯಬಹುದೇ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಪ್ಪಂದಕ್ಕೆ ಬಂದಿವೆ. ನೈಜ ಸ್ಥಿತಿ ಹೀಗಿರುವಾಗ ಅದನ್ನೇ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಉತ್ತರಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿ ಮಾತು ಮತ್ತು ಕೃತಿಗೆ ಎಷ್ಟು ಅಜಗಜಾಂತರ. ಅವರ ಬೋಧನೆಗಳಲ್ಲಿ ಬಂದ ಉನ್ನತಾದರ್ಶಗಳ್ಯಾವುವೂ ಕ್ರಿಯೆಯಲ್ಲಿ ಕಾಣಲೇ ಇಲ್ಲ.

         ಗಾಂಧಿ ತಮ್ಮ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಹಾಗಾಗಿ ಕಾರ್ಯಕಾರಿ ಸಮಿತಿಯ ನಿರ್ಣಯದ ವಿರುದ್ಧ ದನಿಯೆತ್ತಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ತಾವು ಸಮಿತಿಯ ನಿರ್ಣಯದ ಬಗ್ಗೆ ಅಭಿಪ್ರಾಯಭೇದ ಹೊಂದಬಹುದು ಎಂದೂ ಹೇಳಿದರು. ಆದರೆ ಮುಂದಿನ ಎಐಸಿಸಿ ಸಭೆಯಲ್ಲೇ ವಿಭಜನೆಯ ಪರವಾಗಿ ನಿಂತರು.  "ಕೆಲವೊಮ್ಮೆ ಮನಸ್ಸಿಗೆ ಹಿಡಿಸದಿದ್ದರೂ ಕೆಲವು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ಹಂತದಲ್ಲಿ ದೇಶದ ಶಾಂತಿ ಮುಖ್ಯ ಎನ್ನುವುದನ್ನು ಸದಸ್ಯರು ಮರೆಯಬಾರದು. ದೇಶದಲ್ಲಿ ಕ್ಷಿಪ್ರ ಕ್ರಾಂತಿ ಅಥವಾ ಉತ್ಕ್ರಾಂತಿಯ ಮಾತಾಡುವವರು ಈ ನಿರ್ಣಯವನ್ನು ಆಚೆಗೆಸೆಯುವ ಮೂಲಕ ಇದನ್ನು ಸ್ಥಾಪಿಸಲು ಶಕ್ತರಿರಬಹುದು. ಆದರೆ ಅವರಿಗೆ ದೇಶದ ಹಾಗೂ ಕಾಂಗ್ರೆಸ್ಸಿನ ಅಧಿಕಾರ ಕೈಗೆ ತೆಗೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ ಎನ್ನುವುದು ಸಂಶಯ. ನನಗೇನಾದರೂ ಶಕ್ತಿಯಿದ್ದಲ್ಲಿ ಏಕಾಕಿಯಾಗಿ ಬಂಡಾಯ ಘೋಷಿಸುತ್ತಿದ್ದೆ. ನಾನು ಕಾರ್ಯಕಾರಿ ಸಮಿತಿಯ ಪರವಾಗಿ ಬೇಡುತ್ತಿಲ್ಲ. ಎಐಸಿಸಿಯು ನಿರ್ಣಯದ ಸಾಧಕಬಾಧಕಗಳನ್ನು ಅಳೆದುನೋಡಬೇಕು. ನಿರ್ಣಯದ ಲಾಭದ ಮನವರಿಕೆಯಾಗದಿದ್ದರೆ ಅದನ್ನು ಒಪ್ಪಬಾರದು. ಇಂತಹ ನಿರ್ಣಯ ದೇಶದಲ್ಲಿ ಗಲಭೆಗೆ ಕಾರಣವಾಗುತ್ತದೆಂದಾದರೆ ಅದನ್ನು ತಿರಸ್ಕರಿಸಬಹುದು. ಆದರೆ ಕಾರ್ಯಕಾರಿ ಸಮಿತಿಯ ಸದಸ್ಯರು 'ಹೆಮ್ಮೆಯ ದಾಖಲೆ ಹೊಂದಿದ, ದೇಶದ ಹಳೆಯ ಮತ್ತು ಅನುಭವಿ ಸೇವಕರು, ಕಾಂಗ್ರೆಸ್ಸಿನ ಬೆನ್ನುಲುಬಾಗಿದ್ದವರು' ಎಂದೂ ಮರೆಯಬಾರದು. ಈ ಹಂತದಲ್ಲಿ ಅವರ ಬದಲು ಬೇರೆಯವರನ್ನು ತರುವುದು ಸಾಧ್ಯವಾಗದಿದ್ದಲ್ಲಿ ಅದು ಅತಿ ಅವಿವೇಕದ ಕೆಲಸವಾಗುತ್ತದೆ. ಯಾವುದನ್ನು ಅಂಗೀಕರಿಸಲಾಗಿದೆಯೋ ಅದು ಉತ್ತಮವೇನಲ್ಲ. ಆದರೆ ಮುಂದೆ ಅದರಿಂದ ಒಳ್ಳೆಯದಾಗಬಹುದು. ಕೆಲವೊಮ್ಮೆ ತಪ್ಪಿನಿಂದಲೂ ಒಳ್ಳೆಯದಾಗುತ್ತದೆ. ತಂದೆಯ ತಪ್ಪಿನಿಂದಾಗಿ ರಾಮ ವನವಾಸಕ್ಕೆ ಹೋದರೂ ರಾವಣನ ಅಂತ್ಯಕ್ಕೆ ಅದು ಕಾರಣವಾಯಿತಲ್ಲವೇ. ಹಾಗೆಯೇ ದೋಷಪೂರಿತ ಯೋಜನೆಯಿಂದ ಒಳ್ಲೆಯದನ್ನು ಹೊರತೆಗೆಯಲು ಎಐಸಿಸಿ ಸಮರ್ಥವಾಗಿದೆ. ಬಂಗಾರವನ್ನು ಕೂಡಾ ಹೊಲಸಿನಿಂದಲೇ ಆಯ್ದು ತೆಗೆಯಲಾಗುತ್ತದೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ವ್ಹಾವ್...ಗಾಂಧಿ ವಿಭಜನೆಯನ್ನು ರಾಮಾಯಣಕ್ಕೆ ಹೋಲಿಸುತ್ತಿದ್ದಾರೆ! ಎಐಸಿಸಿಯನ್ನು ರಾಮನಿಗೆ! ರಾಮ ದೇವಾಂಶ ಸಂಭೂತ. ವಿಭಜನೆಯ ಪರಿಣಾಮವನ್ನು ಒಳ್ಳೆಯ ಕ್ರಿಯೆಯಾಗಿಸಲು ಕಾಂಗ್ರೆಸ್ ಅಥವಾ ಗಾಂಧಿಯೇನು ದೇವರೇ? ಕಾರ್ಯಕಾರಿ ಸಮಿತಿಯ ಸದಸ್ಯರು ಕಾಂಗ್ರೆಸ್ಸಿನ ಬೆನ್ನುಲುಬಾದ ಮಾತ್ರಕ್ಕೆ ಅವರು ಶ್ರೇಷ್ಠರೇ? ಅವರು ಹೇಳಿದ್ದು ವೇದವಾಕ್ಯವೇ? ಅನುಭವಿ ಸೇವಕರಿಂದೇನು ತಪ್ಪು ಘಟಿಸದೇ? ಉತ್ಕ್ರಾಂತಿಯ ಮಾತಾಡುವವರ ಸಾಮರ್ಥ್ಯವನ್ನು ಪ್ರಶ್ನಿಸುವ ಗಾಂಧಿಗೆ ತನ್ನ ಅನುಭವಿ ಸೇವಕರ ಮೇಲೆ ಅಗಾಧ ವಿಶ್ವಾಸ! ವಿಭಜನೆಯನ್ನು ವಿರೋಧಿಸುತ್ತಲೇ ಅದನ್ನು ಸಮರ್ಥಿಸುತ್ತಾ ಜನರ ಮೇಲೆ ಹೇರುವ ಈ ವೃದ್ಧನಿಗೆ ಇಂದಿನ ರಾಜಕಾರಣಿಗಳು ಕಾಲಿಗಡ್ಡಬಿದ್ದರೆ ಆಶ್ಚರ್ಯವೇನಿಲ್ಲ

ಬುಧವಾರ, ನವೆಂಬರ್ 9, 2016

ಯಾರು ಮಹಾತ್ಮ? ಭಾಗ- ೨೨

ಯಾರು ಮಹಾತ್ಮ?

ಭಾಗ- ೨೨

        ಮುಸ್ಲಿಂ ಲೀಗಿನ ವಿಭಜನೆಯ ಬೇಡಿಕೆಗೆ ಗಾಂಧಿ ವಿರೋಧ ವ್ಯಕ್ತಪಡಿಸುತ್ತಾ ತೀವ್ರವಾಗಿ ಪ್ರತಿಕ್ರಿಯಿಸಿದರು. "ಐತಿಹಾಸಿಕವಾಗಿ ವಿಭಜನೆ ಎನ್ನುವುದು ಸುಳ್ಳು ಹಾಗೂ ಸೈದ್ಧಾಂತಿಕವಾಗಿಯೂ ವಿಕಾರವಾದದ್ದು. ದೇವರು ಒಂದಾಗಿ ಸೃಷ್ಟಿಸಿದ ಈ ದೇಶವನ್ನು ವಿಭಜಿಸುವುದು ಮಾನವರಿಂದ ಸಾಧ್ಯವಿಲ್ಲ." "ಒಂದು ವೇಳೆ ಮುಸ್ಲಿಮರು ವಿಭಜನೆಯ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಖಡ್ಗದ ಮೊನೆಯಿಂದ ಬೆದರಿಸಿದರೂ ನಾನು ವಿಭಜನೆಗೆ ಒಪ್ಪಲಾರೆ. ದೇಶವನ್ನು ತುಂಡು ಮಾಡುವ ಮುನ್ನ ಅವರು ನನ್ನ ದೇಹವನ್ನು ತುಂಡುಮಾಡಬೇಕಾಗುತ್ತದೆ. ನಾವೆಲ್ಲರೂ ಇದೇ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ." "ವಿಭಜನೆ ಎನ್ನುವುದು ಮಿಥ್ಯೆ. ನನ್ನ ಇಡೀ ಆತ್ಮ ಈ ಕಲ್ಪನೆ ವಿರುದ್ಧ ಸಿಡಿದೇಳುತ್ತದೆ. ವಿಭಜನೆಗೆ ಒಪ್ಪುವುದೆಂದರೆ ನಾನು ದೇವರನ್ನೇ ನಿರಾಕರಿಸಿದಂತೆ. ಇದನ್ನು ತಡೆಯಲು ಅಹಿಂಸೆಯ ಎಲ್ಲಾ ಮಾರ್ಗಗಳನ್ನೂ ನಾನು ಉಪಯೋಗಿಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ಒಂದು ದೇಶವಾಗಿ ಬಾಳಲು ಶತಮಾನಗಳ ಕಾಲ ಮಾಡಿದ ಕಾರ್ಯವನ್ನು ನಾಶಗೊಳಿಸಿದಂತೆಯೇ" "ಭಾರತವನ್ನು ಎರಡಾಗಿಸುವುದು ಅರಾಜಕ ಸ್ಥಿತಿಗಿಂತ ಹೇಯವಾದುದು. ಭಾರತವನ್ನು ಎರಡು ಶತಮಾನಗಳಿಗಿಂತಲೂ ಅಧಿಕ ಕಾಲವಾಳಿದ ಮೊಘಲರೂ ಸಹ ಮಾಡದ್ದನ್ನು ನೀವು ಮಾಡಲಾಗದು." "ಇದರಲ್ಲಿ ಕಚ್ಚಾಟದ ಮತ್ತಷ್ಟು ಸಾಧ್ಯತೆ ವಿನಾ ಮತ್ತೇನೂ ನನಗೆ ಕಾಣಿಸುತ್ತಿಲ್ಲ." "ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ ಒಂದಿಂಚು ಪಾಕಿಸ್ತಾನಕ್ಕೂ ನಾವು ಒಪ್ಪುವುದಿಲ್ಲ" ಹೀಗೆಲ್ಲಾ ಅಣಿಮುತ್ತು ಉದುರಿಸಿ ಭಾರತದ ವಿಭಜನೆಯನ್ನು ಸ್ಪಷ್ಟ, ಕಟು ಶಬ್ಧಗಳಲ್ಲಿ ವಿರೋಧಿಸಿದ್ದ ಗಾಂಧಿ ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ಬದಲಿಸಿಕೊಂಡದ್ದು ಮಾತ್ರ ವಿಪರ್ಯಾಸ.('ಹರಿಜನ'ದ ವಿವಿಧ ಸಂಚಿಕೆಗಳು; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್)

          ದೇಶವಿಭಜನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದ ಗಾಂಧಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. "ದೇಶ ವಿಭಜನೆ ಕುರಿತು ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯವನ್ನು ಅಂಗೀಕರಿಸಲು ನಾನು ಶಿಫಾರಸು ಮಾಡುತ್ತೇನೆ. ಸಂವಿಧಾನದ ಪ್ರಕಾರ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿದೆ. ಕಾರ್ಯಕಾರಿ ಸಮಿತಿ ಎಐಸಿಸಿ ಪರವಾಗಿ ಪ್ರಾಮಿಸರಿ ನೋಟಿನ ಮೇಲೆ ಸಹಿ ಮಾಡಿದರೂ ಎಐಸಿಸಿ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಾರ್ಯಕಾರಿ ಸಮಿತಿ ಈಗಾಗಲೇ ತೆಗೆದುಕೊಂಡ ನಿರ್ಧಾರವನ್ನು ಎಐಸಿಸಿ ಬದಲಾಯಿಸಲು ಸಾಧ್ಯವಿಲ್ಲ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಅರೇ ಕಾಂಗ್ರೆಸ್ ಏನು ಇಡೀ ಭಾರತವೇ? ಸಂವಿಧಾನವಿದ್ದರೆ ಅದು ಕಾಂಗ್ರೆಸ್ಸಿಗಾಯಿತು. ಆ ಸಂವಿಧಾನವನ್ನು ಇಡೀ ಭಾರತಕ್ಕೇಕೆ ಅನ್ವಯಿಸಬೇಕು? ಕಾರ್ಯಕಾರಿ ಸಮಿತಿ ನೇಮಿಸುವ ಮುನ್ನ ಕಾಂಗ್ರೆಸ್ಸ್ ದೇಶೀಯರ ಅನುಮತಿ ಪಡೆದುಕೊಂಡಿದೆಯೇ? ಕೆಲವೇ ಕೆಲವು ಸಾವಿರ ಸದಸ್ಯರನ್ನೊಳಗೊಂಡ ಪಕ್ಷವೊಂದು ಮೂವತ್ತಮೂರು ಕೋಟಿ ಜನತೆಯ ಭವಿಷ್ಯವನ್ನು ನಿರ್ಧರಿಸಬೇಕೆ? ಅಷ್ಟು ಜನರ ಮಾನ, ಪ್ರಾಣ, ಧನಗಳನ್ನು ಕಾಂಗ್ರೆಸ್ ಮರಳಿಸುತ್ತದೆಯೇ? ಅಷ್ಟು ಜನರ ಭಾವನೆಗೂ ಬೆಲೆ ಕೊಡದ ಪಕ್ಷ ಹೇಳಿದ ಮಾತಿಗೆ ಹೂಂಗುಟ್ಟಿದ ಈ ದೇಶದ ಕ್ಷಾತ್ರವಿಹೀನತೆಯ ಪರಮಾವಧಿಯೇ!

          "ನಾನು ಅಸಹಾಯಕ. ನಾನು ಮುಸ್ಲಿಮ್ ಲೀಗ್ ಅಧ್ಯಕ್ಷನಾಗಿದ್ದರೆ ಪಾಕಿಸ್ತಾನವನ್ನು ಪರದೆ ಮೇಲೆ ಮೂಡಿಸಿ ಅದರ ಸರಿಹೋಲಿಕೆಯಿಲ್ಲದ ಸೌಂದರ್ಯವನ್ನು ಆಕರ್ಷಕಗೊಳಿಸಿ ವರ್ಣಿಸುತ್ತಿದ್ದೆ. ಈವರೆಗಿನ ಬೆಳವಣಿಗೆಯಂತೆ ಭಾರತದ ವಿಭಜನೆ ನಿಶ್ಚಿತ. ಜನರು ಇದರ ಬಗ್ಗೆ ದುಃಖಿಸುವುದು ಬೇಡ. ಪಾಕಿಸ್ತಾನ ರಚನೆಗೆ ಕಾಂಗ್ರೆಸ್ಸಿನ ವಿರೋಧವಿತ್ತು. ನನ್ನದೂ. ಹೀಗಿದ್ದರೂ ವಿಭಜನೆಯ ನಿರ್ಣಯವನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಲು ನಿಮ್ಮ ಮುಂದೆ ನಿಂತಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಆಶ್ವಾಸನೆ ಕೊಟ್ಟು ಏನನ್ನೂ ಮಾಡದೆ ಆಮೇಲೆ ಅದು ಹಾಗೆಯೇ ಆಗಬೇಕು ಬೇರೆ ದಾರಿ ಇಲ್ಲ ಎನ್ನುವ ಇಂದಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಗಾಂಧಿಯದ್ದೇ ಅಂತ ಅನ್ನಿಸುವುದಿಲ್ಲವೇ? ತನ್ನಿಂದಾಗದಿದ್ದ ಮೇಲೆ ಮೊದಲು ಹೇಳಿಕೆ ಯಾಕೆ ಕೊಡಬೇಕಿತ್ತು? ಆಡಿಯೂ ಮಾಡದವ...! ಅದರಲ್ಲೂ ಸಮಜಾಯಿಷಿ ಕೊಡುವಾಗ ಪಾಕಿಸ್ತಾನವನ್ನು ಹೊಗಳುವ ಪರಿ ಕೇಳಿ ಅದರಿಂದಾಗಿಯೇ ಪ್ರಾಣ-ಮಾನ ಕಳಕೊಂಡ ಹಿಂದೂವಿಗೆ ಉರಿಯದಿರುತ್ತದೆಯೇ?

           ಹೇಗೂ ಭಾರತದ ವಿಭಜನೆಯ ವಿರುದ್ಧ ನೀವಿದ್ದೀರಿ. ಹಾಗಾಗಿ ವಿಭಜನೆ ತಪ್ಪಿಸಲು ನೀವೇಕೆ ಆಮರಣಾಂತ ಉಪವಾಸ ಕೂರಬಾರದು ಎನ್ನುವ ಒಕ್ಕಣೆಯುಳ್ಳ ಟೆಲಿಗ್ರಾಂಗಳು, ಪತ್ರಗಳು ಗಾಂಧಿಗೆ ಬರತೊಡಗಿದವು. ಆಗ ಗಾಂಧಿ "ಇಂತಹ ವಿಷಯಗಳನ್ನು ಹಗುರವಾಗಿ ಅಥವಾ ಯಾರದೋ ಸೂಚನೆಯಂತೆ ಅಥವಾ ದುಡುಕಿನ ಅಲ್ಲದೆ ಕೋಪದಿಂದ ತೆಗೆದುಕೊಳ್ಳಬಾರದು. ಕಾಂಗ್ರೆಸ್ ನನ್ನ ದೃಷ್ಟಿಕೋನದ ಜೊತೆ ಭಿನ್ನಾಭಿಪ್ರಾಯ ಹೊಂದಿತ್ತು ಎನ್ನುವ ಕಾರಣಕ್ಕೆ ಉಪವಾಸ ಮಾಡಬೇಕೇ?" ಎಂದು ಪ್ರಶ್ನಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್).  ಭಳಿರೇ ಮುದುಕ! ಅಂದರೆ ಗಾಂಧಿ ಹಗುರವಾದ ವಿಚಾರಗಳಿಗಷ್ಟೇ ಉಪವಾಸ ಕೂರುವವರೇ? ಮುಸ್ಲಿಮರ ಸಣ್ಣ ತೊಂದರೆಯಾದರೂ ಉಪವಾಸ ಕೂರುತ್ತಿದ್ದಾತನಿಗೆ ವಿಭಜನೆಯನ್ನು ವಿರೋಧಿಸಿ ಉಪವಾಸ ಕೂರಬೇಕು ಅನ್ನಿಸಲಿಲ್ಲ. ಜನರು ಹೇಳಿದಾಗಲೂ ಆ ಬಯಕೆ ಮೂಡಲಿಲ್ಲ. ಅಂದರೆ ಹಿಂದೂಗಳಿಗೆ ಅನ್ಯಾಯವಾಗುವ ವಿಚಾರವನ್ನು ವಿರೋಧಿಸಿ ಉಪವಾಸ ಕೂರಲು ಗಾಂಧಿಗೆ ಮನಸ್ಸಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಎಂತಹ ಬೂಟಾಟಿಕೆ! ಅಂದು ಸುಭಾಷರು ತನ್ನ ಅಭ್ಯರ್ಥಿ ಪಟ್ಟಾಭಿಯೆದುರು ಬಹುಮತದಿಂದ ಗೆದ್ದಾಗ ತನಗಿಷ್ಟವಾಗದೆ ಅದು ತನ್ನ ಸೋಲು ಎಂದು ಬಹಿರಂಗವಾಗಿ ಹೇಳಿ ತನ್ನ ಅಭಿಪ್ರಾಯ-ವ್ಯಕ್ತಿ-ಕ್ರಿಯೆಯನ್ನು ಹೇರಹೊರಟ ಗಾಂಧಿಗೆ ಇಂದು ದೇಶ ಇಬ್ಬಾಗವಾಗಲು ಕಾಂಗ್ರೆಸ್ ಕೊಟ್ಟ ಒಪ್ಪಿಗೆ ತನ್ನ ಸೋಲು ಅಂತ ಅನ್ನಿಸಲಿಲ್ಲ. ಈವತ್ತು ಆತ ಕಾಂಗ್ರೆಸ್ ಮೇಲೆ ತನ್ನ ಅಭಿಪ್ರಾಯ ಹೇರಲು ಅನುವಾಗಲಿಲ್ಲ. ಎಂತಹ ಸ್ವಾರ್ಥ! ಗಾಂಧಿಯ ಈ ಇಬ್ಬಂದಿತನವೇ ವಿಭಜನೆಗೆ ಅವರ ಒಪ್ಪಿಗೆಯಿತ್ತು, ಅದಕ್ಕಾಗಿ ಶತಾಯಗತಾಯ ಪ್ರಯತ್ನಿಸಿದರು ಎನ್ನುವ ಅನುಮಾನ ಬರಲು ಕಾರಣ!

           "ಆತುರದಿಂದ ನಾನು ಉಪವಾಸ ಮಾಡುವುದಾದರೆ ಅದಕ್ಕೆ ಕಾರಣಗಳು ಬೇಕಾಗುತ್ತವೆ. ಆಮರಣಾಂತ ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ನನ್ನ ಸುತ್ತಲೂ ಬೆಂಕಿಯ ಧಗೆ ಇರುವುದರಿಂದ ತಾಳ್ಮೆ ಹಾಗೂ ದೃಢಚಿತ್ತದಿಂದ ಇದ್ದು ಸತ್ಯದ ಆತ್ಯಂತಿಕ ಗೆಲುವಿನ ಬಗ್ಗೆ ನನಗಿರುವ ಅಚಲ ನಂಬಿಕೆಯನ್ನು ಸಾಬೀತು ಮಾಡಬೇಕೆಂದು ಮನಗಂಡಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಹಾಗಾದರೆ ಉಪವಾಸ ಮಾಡಲು ದೇಶವಿಭಜನೆ ಕಾರಣ ಆಗುವುದಿಲ್ಲವೆ? ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕು ಎಂದರೆ ಯಾರನ್ನು ತನ್ನ ಶಿಷ್ಯ ನೆಹರೂವನ್ನೋ? ಅಥವಾ ಪ್ರತ್ಯೇಕ ದೇಶ ಕೇಳಿದ ಮುಸ್ಲಿಮರನ್ನೋ? ವಿಭಜನೆಯೆಂಬ ಬೆಂಕಿಯ ಧಗೆ, ಹಿಂದೂಗಳ ಚಿತೆಯ ಉರಿ ಇನ್ನೂ ಇರುವಾಗ ಮಾತ್ರ ಗಾಂಧಿ ತಾಳ್ಮೆ ಮತ್ತು ದೃಢಚಿತ್ತದಿಂದ ಇರಬಲ್ಲರು! ಈ ಸತ್ಯ ಯಾವುದು? ಮುಸ್ಲಿಮರಿಗೆ ಹಾಗೂ ನೆಹರೂವಿಗೆ ಅಧಿಕಾರ ಹಸ್ತಾಂತರಿಸುವುದೇ? ಅದರ ಗೆಲುವೆಂದರೆ ವಿಭಜನೆ ಆಗಬೇಕೆಂಬುದೇ? ಈಗಿನ ಎಡಪಂಥೀಯರ ರೀತಿಯ ಯಾರಿಗೂ(ಅವರಿಗೂ) ಅರ್ಥವಾಗದ ಮಾತುಗಳನ್ನಾಡಿ ಗಾಂಧಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ!

           ದೇಶವನ್ನು ತುಂಡರಿಸುವ ಮೊದಲು ನನ್ನ ದೇಹ ತುಂಡರಿಸಿ ಎನ್ನುವ ಮಾತನ್ನು ನೀವು ಈ ಮೊದಲು ಹೇಳಿದ್ದೀರಲ್ಲವೆ ಎಂದೊಬ್ಬ ಪತ್ರಿಕಾ ಪ್ರತಿನಿಧಿ ನೆನಪಿಸಿದಾಗ "ಈ ಆರೋಪವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಹೇಳಿಕೆ ನೀಡುವಾಗ ಸಾರ್ವಜನಿಕ ಅಭಿಪ್ರಾಯವನ್ನೇ ಧ್ವನಿಸುತ್ತಿದ್ದೇನೆ ಎಂದು ನಂಬಿದ್ದೆ. ಆದರೆ ಸಾರ್ವಜನಿಕ ಅಭಿಪ್ರಾಯವೇ ನನ್ನ ವಿರುದ್ಧವಾಗಿರುವಾಗ ನಾನದನ್ನು ನಿರ್ಬಂಧಿಸಬೇಕೆ?" ಎಂದು ಕೀಟಲೆಯ ಧ್ವನಿಯಲ್ಲಿ ಹೇಳಿದರು. ಅರೇ ಗಾಂಧಿಯ ಸ್ವಂತ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾದದ್ದು ಹೇಗೆ? ಕೋಟ್ಯಾಂತರ ದೇಶೀಯರ ಅಭಿಪ್ರಾಯ ವಿಭಜನೆ ಆಗಬಾರದೆಂದಿರುವಾಗ ಸಾರ್ವಜನಿಕ ಅಭಿಪ್ರಾಯ ಗಾಂಧಿಗೆ ವಿರುದ್ಧವಾಗಿರುವುದು ಹೇಗೆ? ಅಂದರೆ ಗಾಂಧಿಯ ಅಭಿಪ್ರಾಯ ಹಿಂದೆಯೂ ವಿಭಜನೆ ಆಗಬೇಕೆಂಬುದೇ ಆಗಿತ್ತೇ? ಅಲ್ಲಾ ಗಾಂಧಿಯ ದೃಷ್ಟಿಯಲ್ಲಿ ಸಾರ್ವಜನಿಕರೆಂದರೆ ಕಾಂಗ್ರೆಸ್ಸೇ? ಅಥವಾ ಕಾಂಗ್ರೆಸ್ ನೇಮಿಸಿದ ಕಾರ್ಯಕಾರಿ ಸಮಿತಿಯೇ? ಅಥವಾ ಪ್ರತ್ಯೇಕತೆಯ ಬೀಜ ಬಿತ್ತಿದ ಮುಸ್ಲಿಂ ಲೀಗೇ? ಆಗ ವಿಭಜನೆಗೆ ಒಪ್ಪಿದ್ದವರು ಅಧಿಕಾರದಾಹಿ ಕಾಂಗ್ರೆಸ್ಸಿಗರು ಹಾಗೂ ಪ್ರತ್ಯೇಕತವಾದಿ ಮುಸ್ಲಿಮರು ಹಾಗೂ ಗಾಂಧಿ ಮಾತ್ರ! ಹೀಗೆ ಗಾಂಧಿಯ ಈ ಹೇಳಿಕೆಯನ್ನು ಆ ಕಾಲದ ಸನ್ನಿವೇಶದೊಂದಿಗೆ ಸಮೀಕರಿಸಿ ನೋಡಿದಾಗ ಬಹುಸಂಖ್ಯೆಯ ಜನರ ಅಭಿಪ್ರಾಯವನ್ನು ಬದಿಗೆ ತಳ್ಳಿ ತಮ್ಮ ತಮ್ಮ ಸ್ವಾರ್ಥಸಾಧನೆಗೆ ದೇಶವನ್ನು ಛಿದ್ರಗೊಳಿಸಲು ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತನ್ನ ಅನುಯಾಯಿಗಳೊಂದಿಗೆ ತಯಾರಾಗಿದ್ದ ಎಂದೇ ಭಾಸವಾಗುತ್ತದೆ.