ಪುಟಗಳು

ಗುರುವಾರ, ಅಕ್ಟೋಬರ್ 25, 2012

ಹಿಂದೂಮಹಾಸಾಗರ!

                               ಹಿಂದೂಮಹಾಸಾಗರ!

ಒಂದು ಭಾವ.....ಒಂದು ಬಿಂದು.....

ದೇಶ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ಮತಾಂಧ ಹಾಗೂ ಕಮ್ಮಿನಿಷ್ಟ ಉಗ್ರರಿಗೆ ಬಲಿಯಾಗಿ, ತಾಯ ಪಾದಕ್ಕೆ ಕುಸುಮಗಳಾಗಿ ಅರ್ಪಿತವಾದ ಅಸಂಖ್ಯಾತ ಬಿಂದು ಬಿಂದುಗಳಿಗೆ ಅರ್ಪಣೆ....


ಮನದ ಬೇಗುದಿ ಸುಪ್ತ ಜ್ವಾಲೆ
ಹೃದಯ ಮಿಡಿದಿದೆ ಧೈನ್ಯ ಸ್ಥಿತಿಯು
ಕರುಳ ಹಿಂಡುವ ತಾಯ ಶೋಕ
ಕ್ರಾಂತಿಯ ಶಬ್ಧ! ಮಾತಿನ ಮೋಡಿ!

ಎದೆಯ ನಡುಗಿಪ ಸಿಡಿಲ ಠೇಂಕಾರ
ಬೆಳಕ ನಾಚಿಸೋ ಮಿಂಚಿನ ಲಾಸ್ಯ
ಬಲಾಹಕನ ಕಬಂಧ ಹಸ್ತವ ಕಿತ್ತೆಸೆಯೋ ತವಕ
ಕ್ರಾಂತಿಯ ಬಿಂದು! ವರ್ಷಧಾರೆ!

ಅಗ್ನಿಕುಂಡ ಉರಿಯುತಿಹುದು
ಯಜ್ಞ ಧೂಮ ಹಬ್ಬುತಿಹುದು
ಅಗ್ನಿ ಹವಿಸ್ಸ ಬೇಡುತಿಹನು
ಕ್ರಾಂತಿಯ ಕಿಡಿಯು! ಅಗ್ನಿ ಜ್ವಾಲೆ!

ಧರ್ಮ ಸಂಸ್ಕೃತಿ ದೇಶದಾತ್ಮ ತುಳಿಯುತಿರಲು ರಕ್ಕಸ
ದೇಶ ರಕ್ಶಣೆ ಶೃದ್ಧಾ ಕಾರ್ಯ ವಿಮುಖನೇಕೆ ಸೋದರ
ಕುಗ್ಗಲೇತಕೆ ನುಗ್ಗು ಮುಂದಕೆ ಮಾತೃ ರಕ್ಷಣೆ ಪೀಠಿಕೆ
ಗುಂಡಿನ ಮೊರೆತ! ರುಧಿರ ಸಿಂಚನ!

ಜನ್ಮವಾಗಲಿ ಮನೆಮನದೊಳು ಹಿಂದೂ ಕೇಸರ ಶಿವಾಜಿಯ
ಬಂಧು ಭಗಿನಿಯರೆ ಎದ್ದು ನಿಲ್ಲಿರಿ ದೇಶ ನಿಮ್ಮದು ಮರೆತಿರಾ
ಬಿಂದು ಬಿಂದುವು ಬಂದು ಸೇರುತ ಸಿಂಧು ಸುಧೆಯು ಹರಿಯಲಿ
ಕ್ರಾಂತಿಯ ಸಿಂಧು! ಹಿಂದೂ ಮಹಾಸಾಗರ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ