ಪುಟಗಳು

ಸೋಮವಾರ, ಅಕ್ಟೋಬರ್ 15, 2012

ಭಾರತ ದರ್ಶನ-೯


ಚರಿತ್ರೆ ಕಣ್ಣುಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!
ಹಿಂದೂಸ್ಥಾನದ ಹಿರಿಮೆ ಏನು?
೧. ಕಳೆದ ಹತ್ತುಸಾವಿರ ವರ್ಷಗಳ ತಮ್ಮ ಇತಿಹಾಸದಲ್ಲಿ ಹಿಂದೂಗಳು ಯಾವುದೇ ಅನ್ಯದೇಶಗಳನ್ನು ರಾಜನೈತಿಕ ವಿಜಯ ಸಾಧಿಸಿ ತಮ್ಮ ವಸಾಹತುವನ್ನಾಗಿ ಮಾಡಿಕೊಂಡಿಲ್ಲ.

೨. ಸಂಖ್ಯಾನುಕ್ರಮಣಿಕೆಯನ್ನು, ದಶಮಾಂಶ ಪದ್ದತಿಯನ್ನೂ, ಶೂನ್ಯದ ಬಳಕೆಯನ್ನೂ ಜಗತ್ತಿಗೆ ಪರಿಚಯಿಸಿದವರು ಹಿಂದುಗಳು.

೩. "ಪೈ"ನ ಬೆಲೆಯನ್ನು ಕಂಡುಹಿಡಿದವನು ಬೋಧಾಯನ. ಪೈಥಾಗೋರಸ್ ಪ್ರಮೇಯ ಎಂದು ಹೇಳಲಾಗುವ ಪ್ರಮೇಯವನ್ನೂ ಇವನೇ ಕಂಡು ಹಿಡಿದನು.(ಕ್ರಿ.ಪೂ. ೬ನೇ ಶತಮಾನ)

೪. ಬೀಜಗಣಿತ, ತ್ರಿಕೋಣಮಿತಿ, ಕ್ಯಾಲ್ಕುಲಸ್ - ಇವುಗಳು ಪ್ರಪಂಚಕ್ಕೆ ಭಾರತ ನೀಡಿದ ಕೊಡುಗೆಗಳು. 11 ಶತಮಾನದಲ್ಲಿ ಶ್ರೀಧರಾಚಾರ್ಯನು ವರ್ಗ ಸಮೀಕರಣ(quadratic equation)ವನ್ನು ಕಂಡುಹಿಡಿದನು.

೫. ಗ್ರೀಕರು, ರೋಮನ್ನರು ಉಪಯೋಗಿಸಿದ್ದ ಅತೀ ದೊಡ್ಡ ಸಂಖ್ಯೆ ಎಂದರೆ 10ರ ಘಾತ 6. ಆದರೆ ವೇದಕಾಲದಲ್ಲಿ ಹಿಂದೂಗಳು 10ರ ಘಾತ 53(10 to the power 53)ನ್ನು ನಿಶ್ಚಿತ ಹೆಸರಿನೊಡನೆ ಬಳಸುತ್ತಿದ್ದರು. ನಾವು ಈಗಲಾದರೂ ಅಷ್ಟು ದೊಡ್ಡ ಸಂಖ್ಯೆಯನ್ನು ಬಳಸುತ್ತಿಲ್ಲ!

೬. ಕೊಲಂಬಸ್ಗಿಂತ ಮೊದಲೇ ಹಿಂದೂಗಳು ಅಮೇರಿಕಾಕ್ಕೆ ತಲುಪಿದ್ದರು ಎನ್ನುವುದಕ್ಕೆ ಅಜ್ತೀಸರ ದೇವಾಲಯದಲ್ಲಿ ದೊರೆತಿರುವ ಭಾರತೀಯ ಕಲೆಗಳ ನಮೂನೆಗಳು ಸಾಕ್ಷಿ.

೭. ವಾಸ್ಕೋಡಗಾಮನ ಹಡಗನ್ನು ನಾವಿಕನೊಬ್ಬ ಆಫ್ರಿಕಾದಿಂದ ದಕ್ಷಿಣ ಭಾರತಕ್ಕೆ ಕರೆ ತಂದನು. ಭಾರತೀಯ ಹಡಗು ಅವನ ಹಡಗಿಗಿಂತ ಹಲವು ಪಟ್ಟು ದೊಡ್ಡದಿತ್ತು.

೮. ಬೈನರಿ ಸಂಖ್ಯೆಗಳ(0 ಮತ್ತು 1) ಉಲ್ಲೇಖ ಮತ್ತು ಬಳಕೆ ವೇದಕಾಲದಲ್ಲೇ ಇತ್ತು.

೯. ವೇದಗಣಿತ ಎಂಥಾ ಕ್ಲಿಷ್ಟ ಸಮಸ್ಯೆಯನ್ನೂ ಕ್ಷಣಮಾತ್ರದಲ್ಲಿ, ಒಂದೆರಡು ಸಾಲುಗಳಲ್ಲಿ ಪರಿಹರಿಸಬಲ್ಲ ಪ್ರಾಚೀನ ಹಿಂದೂ ಗಣಿತ ಯಂತ್ರ.

೧೦. ಖಗೋಳ ವಿಜ್ಞಾನಿ ಸ್ಮಾರ್ಟಗಿಂತ ಮೊದಲೇ ಭೂಮಿ ಸೂರ್ಯನನ್ನು ಸುತ್ತಲು 365.2587756484 ಎಂದು 5ನೇ ಶತಮಾನದಲ್ಲೇ ಭಾಸ್ಕರಾಚಾರ್ಯ ಲೆಕ್ಕಹಾಕಿದ್ದನು.
-ಇನ್ನೂ ಇದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ