ಪುಟಗಳು

ಬುಧವಾರ, ಜೂನ್ 20, 2012

ಆತ.....

ಆತ,

ದಾಸ್ಯದ ಪೂಜೆಯ ನಿಲ್ಲಿಸಲು ಕಾಳಿಯ ಗರ್ಭಗುಡಿ ಸೇರಿದ।
ಮಿತ್ರರ ಸೇರಿಸಿದ, ಸ್ವರಾಜ್ಯದುಸಿರಿನ ಮೇಳವಾಯಿತು॥

ಭಗೂರಲ್ಲಿ ಪ್ಲೇಗ್ ಮಾರಿಗೆ ಯಮನಾದ।
ವಿದೇಶಿ ವಸ್ತುಗಳ ಉರಿಸಿದ, ಸ್ವದೇಶಿ ಚಿಂತನೆ ಹರಿಸಿದ॥
ಪರಕೀಯ ಮನೋಭಾವ ಅಳಿಸಲು ಅಭಿನವ ಭಾರತ ಕಟ್ಟಿದ।
ಭವಾನಿಯ ಉಳಿಸಲು ಭಾರತಭವನವ ಸೇರಿದ॥

ದೇಶಭಕ್ತರ ಗುರುವಾದ, ಕ್ರಾಂತಿಗೆ ಸೋಪಾನವಾದ।
ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮವೆಂದ॥
ಅರಳಿತು ಮ್ಯಾಝಿನಿಯ ಚರಿತೆ।
ಜನ ಹರಿಸಿತು ಪ್ರೀತಿಯ ಒರತೆ॥

ಮಾತೆಯ ಮಾನ ಕಾಪಾಡಲು ಸಾಗರ ಈಜಿದ।
ಕತ್ತಲ ಕೋಣೆಯ ಕಲ್ಲಿನ ಗೋಡೆಗಳ ಮೇಲೆ ಹತ್ತುಸಾವಿರ ಸಾಲಿನ ಕವನ ಮೂಡಿತು॥

ಭಾಷಾಶುದ್ಧಿ, ವಾಗ್ಗೇಯಕಾರ ಇತಿಹಾಸಕ್ಕೆ ಅಲಂಕಾರ।
ಕವಿಪುಂಗವ, ವ್ಯಾಕರಣ ಶುದ್ಧಿ ನಾಟಕಕಾರ ಇತಿಹಾಸಕಾರ॥

'ಶುದ್ಧಿ' ಹಿಂದುತ್ವ, ಸಾಮಾಜಿಕ ಪರಿವರ್ತಕ।
"ಮೋಪಳಾಕಾಂಡ, ನನ್ನ ಜೀವಾವಧಿಯ ಶಿಕ್ಷೆ,ಕಮಲಾ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ....."
ಹಿಂದೂಮಹಾಸಭಾ, ಪತಿತಪಾವನ ಮೃತ್ಯುಂಜಯ.....
ಜಯಜಯ ಜಯಜಯ ಜಯಜಯ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ