ಪುಟಗಳು

ಬುಧವಾರ, ಜೂನ್ 20, 2012

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ...!

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ...!
ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್॥
ಸ್ತ್ರೀಯರಿಗೆ ಗೌರವ ಕೊಡುವ, ಪೂಜ್ಯ ಭಾವದಿಂದ ನೋಡುವ ಈ ದೇಶದಲ್ಲಿ ಆ ಸಾಧ್ವಿಶಿರೋಮಣಿಯನ್ನು ಅದೆಷ್ಟು ಹೀನಾಯವಾಗಿ ನಡೆಸಿಕೊಂಡರು!
ಹೌದು, ಒಂದಲ್ಲ ಬರೋಬ್ಬರಿ ಮೂರು ಬಾರಿ ಬ್ರೈನ್ ಮ್ಯಾಪಿಂಗ್!
ತಲೆಕೆಳಕಾಗಿ ನೇತಾಡಿಸಿ ಚಿತ್ರಹಿಂಸೆ!
ಕಾರಣ ಹಿಂದೂ ಭಯೋತ್ಪಾದನೆ ಎಂಬ ಪೊಳ್ಳು, ಸುಳ್ಳು ನೆವ, ಕಟ್ಟುಕಥೆ॥ಆ ಧೂರ್ತ ಎಟಿಸ್ ಅಧಿಕಾರಿ ಹೇಮಂತ ಕರ್ಕರೆಗೆ ಮುಂದೆಹೋರಾಡದೆ ಪರಮವೀರ ಚಕ್ರ!
ನಾಲ್ಕು ವರುಷಗಳ ಹಿಂದೆ ಮಾರಿದ ಬೈಕ್ ಮಾರಿದವನದಾಗುತ್ತದೆಯೇ ಅಥವಾ ಅದರ ಸಮೀಪ ಬಾಂಬ್ ಸ್ಫೋಟವಾದರೆ ಆ ವ್ಯಕ್ತಿ ಅಥವಾ ಬೈಕ್ ಯಜಮಾನ ಕಾರಣನೇ?
RDX ಹೊಂದಿಲ್ಲದಿದ್ದರೂ ವೃಥಾ ಆರೋಪಿಸಿ ಹದಿನೇಳು ಬಾರಿ ಶೌರ್ಯ ಪ್ರಶಸ್ತಿ ವಿಜೇತ ಕರ್ನಲ್ ನನ್ನು (ಲೆ॥ ಕ॥ ಪುರೋಹಿತ್ ) ಕೈ ಬೆರಳು ತುಂಡರಿಸಿ ಯಮ ಯಾತನೆ ನೀಡಿದ್ದು ಎಷ್ಟರ ಮಟ್ಟಿಗೆ ಸಮಂಜಸ?
ಕೇವಲ ಪರಿಚಿತರಾದ ಮಾತ್ರಕ್ಕೆ ಅವರೆಲ್ಲಾ ಸಹಭಾಗಿಗಳೇ?
ಅಷ್ಟಕ್ಕೂ ಇಷ್ಟರವರೆಗೂ ಸಾಧಿತವಾಗದ ಆರೋಪವನ್ನೇ ಅಪರಾಧ ಎಂದು ಈ ಸೂಡೋ ಸೆಕ್ಯುಲರಿಷ್ಟರು ಯಾಕೆ ಬೊಬ್ಬಿರಿಯುತ್ತಿದ್ದಾರೆ?
ಒಂದು ವೇಳೆ ಅವರೇ ಆದರೂ ಅದು ನಿದ್ರಿತ ಜನರನ್ನು, ಕಿವುಡು ಸರಕಾರವನ್ನು, ಮತಾಂಧ ಉಗ್ರರನ್ನು ಎಚ್ಚರಿಸಲೇ ಹೊರತು ಯಾರನ್ನೂ ಕೊಲ್ಲಲಿಕ್ಕಾಗಿ ಅಲ್ಲ, ಅಷ್ಟಕ್ಕೂ ಅಲ್ಲಾರೂ ಸತ್ತಿಲ್ಲ!
ದೇಶಪ್ರೇಮಿಗಳಿಗೆ ಚಿತ್ರಹಿಂಸೆ ಕೊಟ್ಟು ಉಗ್ರರಿಗೆ ಬಿರಿಯಾನಿ ತಿನ್ನಿಸುವ ಈ ಸರಕಾರವನ್ನು ಉಳಿಯಗೊಡಬೇಕೆ?
ವಂದೇ ಮಾತರಂ॥

1 ಕಾಮೆಂಟ್‌: